ಗಡಿ ಭಾಗದಲ್ಲಿ ನಡೆದ ರಹಸ್ಯ ಸಭೆ
ಕಾಂಗ್ರೆಸ್ ಕೆಲ ನಾಯಕರೂ ಭಾಗಿ
ವಿನಾಯಕ ಮಠಪತಿ ಬೆಳಗಾವಿ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಳಗಾವಿಯ ರಾಜಕೀಯ ರಂಗೇರಿದೆ. ‘ಹಿಂದೂ’ ಪದದ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿರುವ ಸತೀಶ್ ಜಾರಕಿಹೊಳಿ ಮಣ್ಣು ಮುಕ್ಕಿಸಲು ಮಠವೊಂದರಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಪ್ರತಿಷ್ಠೆ ಹೊಂದಿರುವ ಜಾರಕಿಹೊಳಿ ಮನೆ ತನದ ಮಾಸ್ಟರ್ ಮೈಂಡ್ ಸತೀಶ್ ಸೋಲಿಸಲು, ಗಡಿಯ ಪ್ರತಿಷ್ಠಿತ ಮಠದಲ್ಲಿ ಬಿಜೆಪಿ ಹಾಗೂ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರ ಗುಪ್ತ ಸಭೆ ನಡೆದಿದೆ. ಬರುವ ಚುನಾವಣೆಯಲ್ಲಿ ಸಾಹುಕಾರ್ ಸೋಲಿಸುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕಮಲ ಅಧಿಪತ್ಯ ಸಾಧಿಸುವ ಸ್ಕೆಚ್ ಹಾಕಿದೆ.
ಕೆಲ ದಿನಗಳ ಹಿಂದಷ್ಟೇ ಹಿಂದೂ ಶಬ್ದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶ್ಯಾ ದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಲ್ಲದೆ, ಅಸಂಖ್ಯಾತ ಜನರ ಟೀಕೆಗೆ ಗುರಿಯಾದ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ಗಡಿ ಭಾಗದ ಮಠ ವೊಂದರಲ್ಲಿ ರಹಸ್ಯ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪ್ರಮುಖವಾಗಿ ಸಚಿವೆ ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಲಕ್ಷ್ಮಣ ಸವದಿ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ನ ಕೆಲವರು ಭಾಗವಹಿಸಿ ದ್ದರು ಎನ್ನಲಾಗಿದೆ.
ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಪ್ರತಿಷ್ಠಿತ ಮಠವೊಂದರಲ್ಲಿ ನಡೆದ ಗುಪ್ತ ಸಭೆಯಲ್ಲಿ ಬೆಳಗಾವಿ ಜಿಲ್ಲೆ ಯ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ಪ್ರಮುಖ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆದ ಈ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವ ಮಾತುಕತೆ ನಡೆದಿದೆ ಎಂದು ಖಚಿತ ಮೂಲಗಳು ತಿಳಿಸಿವೆ. ಈ ಸಭೆ ಮುಂಬರುವ ಚುನಾವಣೆಯಲ್ಲಿ ಇದು ಯಾವೆಲ್ಲ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.
*
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎನ್ನುವ ಗಟ್ಟಿ ತೀರ್ಮಾನಕ್ಕೆ ಸಂಘ ಪರಿವಾರ ಬಂದಿದೆ. ಇದಕ್ಕಾಗಿ ಆ ಸ್ವಾಮೀಜಿಗೆ ಆರ್ಎಸ್ಎಸ್ನಿಂದ ಮಹತ್ವದ ಸಂದೇಶ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಸತೀಶ್ ಸೋಲಿಸಲು ವೇದಿಕೆ ಸಿದ್ದಪಡಿಸಿದೆ.
ಈಗಾಗಲೇ ಮಾನವ ಬಂದುತ್ವ ವೇದಿಕೆ ಕಟ್ಟಿಕೊಂಡು ಮೌಢ್ಯದ ವಿರುದ್ಧ ಅನೇಕ ಕಾರ್ಯಕ್ರಮ ಮಾಡುತ್ತಿರುವ ಸತೀಶ್
ಅವರು ಕೆಲವು ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ ಎಂಬ ಉದ್ದೇಶ ಹಾಗೂ ಹಿಂದೂ ಧರ್ಮದ ವಿರುದ್ಧವಾದ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ನಿರ್ಧಾರಕ್ಕೆ ಬಂದಿದೆ.
*
ಕತ್ತಿ ಕನಸು ನನಸಿಗೆ ಹೋರಾಟ
ಆಹಾರ ಸಚಿವರಾಗಿದ್ದ ದಿ. ಉಮೇಶ್ ಕತ್ತಿ ಅವರು ಈ ಹಿಂದೆ ‘ನಾನು ಸೋತರೂ ಯಮಕನಮರಡಿಯಲ್ಲಿ ಬಿಜೆಪಿಯನ್ನು ಗೆಲ್ಲಿಸುವೆ’ ಎಂದಿದ್ದರು. ನಿಧನರಾಗುವ ಕೆಲವು ತಿಂಗಳ ಮುಂಚೆಯೇ ಮಹತ್ವದ ಪ್ರಮಾಣ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿ ನನ್ನ ಹುಕ್ಕೇರಿ ಕ್ಷೇತ್ರದಲ್ಲಿ ಸೋತರು ಪರವಾಗಿಲ್ಲ, ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸುವುದು ನಿಶ್ಚಿತ ಎಂದಿದ್ದರು. ಆಗಿನಿಂದಲೇ ಸತೀಶ್ ಜಾರಕಿಹೊಳಿ ವಿರುದ್ಧ ಈ ಬಾರಿ ಹೋರಾಡಲು ಬಿಜೆಪಿ ಕತ್ತಿ ಅಸ್ತ್ರ ಪ್ರಯೋಗಿಸಿತ್ತು. ಆದರೆ ದಿ. ಉಮೇಶ್ ಕತ್ತಿ ಅವರ ಅಕಾಲಿಕ ನಿಧನದ ನಂತರ ನೇರವಾಗಿ ಜಿಯ ಕೆಲವು ನಾಯಕರು ಆ
ಕೆಲಸ ಪೂರ್ತಿ ಮಾಡಲು ಸಭೆ ನಡೆಸುತ್ತಿದ್ದಾರೆ.
ಹಿಡಿತಕ್ಕೆ ಬಿಜೆಪಿ ಕಸರತ್ತು
ಸಾಮಾನ್ಯವಾಗಿ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಹೊಂದಿದವರು ಅನಾಯಾಸವಾಗಿ ರಾಜ್ಯ ರಾಜಕಾರಣದಲ್ಲಿ
ಪ್ರಭುತ್ವ ಸಾಧಿಸಬಹುದು ಎಂಬ ಲೆಕ್ಕಾಚಾರ ಇದೆ. ಈ ಹಿನ್ನಲೆಯಲ್ಲಿ ಗಡಿ ಜಿಯಲ್ಲಿ ಹದಿನೆಂಟು ವಿಧಾನಸಭಾ ಕ್ಷೇತ್ರ ಹೊಂದಿ ರುವ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿಗೆ ನೇರ ಎದುರಾಳಿ ಸತೀಶ್ ಜಾರಕಿಹೊಳಿ ಮಾತ್ರ. ಇವರನ್ನು ರಾಜಕೀಯವಾಗಿ ಕಟ್ಟಿ ಹಾಕಿದರೆ ಸುಲಭವಾಗಿ ಜಿಲ್ಲೆಯಲ್ಲಿ ಬಿಜೆಪಿ ಜಯಗಳಿಸಲು ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಪ್ರಮುಖ ನಾಯಕರಿದ್ದಾರೆ.