Saturday, 2nd December 2023

ಪ್ರಕರಣ 20 ಸಾವಿರ ದಾಟಿದರೆ ಲಾಕ್‌ಡೌನ್: ಮುಂಬೈ ಮೇಯರ್

ಮುಂಬೈ:ಮುಂಬೈನಲ್ಲಿ ದೈನಂದಿನ ಕರೋನಾ ಪ್ರಕರಣಗಳ ಸಂಖ್ಯೆ 20,000 ಗಡಿ ದಾಟಿದರೆ, ನಗರದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಪೆಡ್ನೇಕರ್, ಸಾರ್ವಜನಿಕ ಬಸ್‌ಗಳು ಮತ್ತು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ನಾಗರಿಕರು ಟ್ರಿಪಲ್ ಲೇಯರ್ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

ಲಸಿಕೆ ಹಾಕಿಸಿಕೊಳ್ಳಲು ಮತ್ತು ಎಲ್ಲಾ ಕೋವಿಡ್-19 ಸಂಬಂಧಿತ ನಿಯಮಗಳನ್ನು ಅನುಸರಿಸುವಂತೆ ಅವರು ಅವರಿಗೆ ಮನವಿ ಮಾಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಂದೆರಡು ದಿನಗಳಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಬಹುದು ಎಂದು ತಿಳಿಸಿದ್ದಾರೆ.

ಗೋವಾದಿಂದ ಕ್ರೂಸ್ ಹಡಗಿನ ಮೂಲಕ ಹಿಂದಿರುಗುವ ಪ್ರತಿಯೊಬ್ಬರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುವುದು ಮತ್ತು ಪಾಸಿಟಿವ್ ಬರುವ ನಾಗರಿಕರನ್ನು ಬಿಎಂಸಿ ಕೇಂದ್ರಗಳಲ್ಲಿ ಅಥವಾ ಅವರು ಪಾವತಿಸಲು ಸಿದ್ಧರಿದ್ದರೆ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದ್ದಾರೆ.

error: Content is protected !!