Wednesday, 24th April 2024

4 ನಾಮಪತ್ರಗಳು ಕ್ರಮಬದ್ಧ: ಜಿಲ್ಲಾಧಿಕಾರಿ ಜೆ.ಮಂಜುನಾಥ್

Bangalore DC J Manjunath

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಬಯಸಿ ಒಟ್ಟು 4 ಜನ ಅಭ್ಯರ್ಥಿಗಳು 7 ನಾಮಪತ್ರಗಳನ್ನು ಸಲ್ಲಿಸಿದ್ದು, ಇವುಗಳ ಪರಿಶೀಲನೆ 24 ರಂದು ನಡೆಯಿತು. ಇವುಗಳಲ್ಲಿ 4 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿ ಕಾರಿ ಹಾಗೂ ಚುನಾವಣಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದ್ದಾರೆ.

ಕ್ರಮಬದ್ಧ ನಾಮಪತ್ರಗಳ ವಿವರ: 

ಹೆಚ್ ಎಸ್ ಗೋಪಿನಾಥ್- ಭಾರತೀಯ ಜನತಾ ಪಕ್ಷ, ಯುಸುಫ್ ಶರೀಫ್ – ಕಾಂಗ್ರೆಸ್ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದೊಡ್ಡಯ್ಯ ಎಂ. ಮತ್ತು ಜಿ.ಎಂ. ಶೀನಪ್ಪ ಇವರುಗಳ ನಾಮಪತ್ರಗಳು ಸ್ವೀಕೃತಗೊಂಡಿವೆ. ನಾಮಪತ್ರ ಹಿಂಪಡೆಯಲು ನ.26 ಕೊನೆಯ ದಿನವಾಗಿದೆ ಎಂದು ಚುನಾವಣಾಧಿ ಕಾರಿಗಳು ತಿಳಿಸಿದ್ದಾರೆ.covid

error: Content is protected !!