Wednesday, 24th April 2024

ಕಾಣೆಯಾಗಿದ್ದ ಏಳು ವಿದ್ಯಾರ್ಥಿಗಳ ಪೈಕಿ ಮೂವರು ಪತ್ತೆ

ಬೆಂಗಳೂರು: ಯಶವಂತಪುರ ಉಪವಿಭಾಗದಿಂದ ಕಾಣೆಯಾಗಿದ್ದ ಏಳು ವಿದ್ಯಾರ್ಥಿಗಳ ಪೈಕಿ ಮೂವರು ಪತ್ತೆ ಯಾಗಿದ್ದು, ಉಳಿದ ನಾಲ್ವರಿಗಾಗಿ ಪೊಲೀಸರ ಶೋಧ ಮುಂದುವರೆದಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಜಿಬಿ ಲೇಔಟ್‍ನ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನ ಮೂರನೆ ವರ್ಷದ ಬಿಸಿಎ ವಿದ್ಯಾರ್ಥಿನಿ ಅಮೃತ ವರ್ಷಿಣಿ (21), ರಾಯನ್ ಸಿದ್ಧಾರ್ಥ್ (12), ಚಿಂತನ್ (12) ಮತ್ತು ಭೂಮಿ (12) ಪೋಷಕರಿಗೆ ತಿಳಿಸದೆ ನಿಗೂಢವಾಗಿ ನಾಪತ್ತೆಯಾಗಿದ್ದರು.

ಈ ನಾಲ್ವರ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಒಂದು ತಂಡ ಮೈಸೂರು, ಮತ್ತೊಂದು ತಂಡ ಹುಬ್ಬಳ್ಳಿ, ಇನ್ನೊಂದು ತಂಡ ಮಂಗಳೂರು ಹೀಗೆ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ನಾಲ್ವರು ಮನೆಯಿಂದ ಹೋಗಬೇಕಾದರೆ ಚಪ್ಪಲಿ, ಟೂತ್‍ಬ್ರಷ್, ಟೂತ್‍ಪೇಸ್ಟ್, ನೀರಿನ ಬಾಟಲ್, ಹಣ, ಇನ್ನಿತರ ವಸ್ತುಗಳ ಜತೆ ಕ್ರೀಡಾ ಸಾಮಗ್ರಿ ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ.

ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದಲ್ಲಿ ಒಂದು ತಂಡ ಸಿಸಿ ಕ್ಯಾಮೆರಾ ಪರಿಶೀಲಿಸಿರುವುದಲ್ಲದೆ ಈ ಮಾರ್ಗದ ಸಿಸಿ ಕ್ಯಾಮೆರಾಗಳಲ್ಲಿ ಮಕ್ಕಳ ಚಲನ-ವಲನ ಸೆರೆಯಾಗಿರುವುದನ್ನು ಪರಿಶೀಲನೆ ನಡೆಸಿದೆ.

 

Leave a Reply

Your email address will not be published. Required fields are marked *

error: Content is protected !!