Wednesday, 24th April 2024

ಬಜರಂಗದಳ ಸಹ ಸಂಚಾಲಕ ಹಲ್ಲೆ ಯತ್ನ: ಜ.10ರಂದು ಸಾಗರ ಬಂದ್

ಶಿವಮೊಗ್ಗ: ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನೀಲ್ ಎಂಬವರ ಮೇಲೆ ದುಷ್ಕರ್ಮಿಯೊಬ್ಬ ತಲ್ವಾರ್‌ನಿಂದ ಹಲ್ಲೆಗೆ ಯತ್ನಿಸಿದ್ದು, ಕೂದಲೆಳೆ ಅಂತರದಿಂದ ಬಚಾ ವಾಗಿದ್ದಾರೆ. ಈ ಹಲ್ಲೆ ಯತ್ನ ಖಂಡಿಸಿ ಸಾಗರ ನಗರದಲ್ಲಿ ಬಂದ್ ಮಾಡಲು ಹಿಂದೂ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ.

ಜನವರಿ 10ರಂದು ಸಾಗರ ಪಟ್ಟಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಬಜರಂಗದಳ ನಗರ ಸಹ ಸಂಚಾಲಕ ಸುನಿಲ್ ಸೋಮವಾರ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ನಗರದ ಬಿ.ಹೆಚ್.ರಸ್ತೆ ಆಭರಣ ಶೋ ರೂಂ ಬಳಿ ಬರುತ್ತಿದ್ದಂತೆ ಈ ಘಟನೆ ಸಂಭವಿಸಿದೆ.

ಸುನಿಲ್ ಬರುವ ಮುಂಚೆಯೇ ಅಲ್ಲಿ ಬಂದು ನಿಂತಿದ್ದ ಸಮೀರ್ ಎಂಬಾತ ಮಾರಕಾಸ್ತ್ರ ದಿಂದ ಬೀಸಿದ್ದಾನೆ. ಘಟನೆಯಲ್ಲಿ ಯಾವುದೇ ಅಪಾಯಗಳು ಪ್ರಣಾಪಾಯಗಳು ಸಂಭವಿ ಸಿಲ್ಲ.

 
Read E-Paper click here

error: Content is protected !!