Wednesday, 24th April 2024

ಒಂದೇ ದಿನ ಜೆಡಿಎಸ್’ನ 100 ಕಾರ್ಯಕರ್ತರಿಂದ ರಾಜೀನಾಮೆ

ತುಮಕೂರು: ಗುಬ್ಬಿಯ ಜೆಡಿಎಸ್ ಶಾಸಕ ಎಸ್. ಆರ್.ಶ್ರೀನಿವಾಸ್ ಮತ್ತು ಪಕ್ಷದ ವರಿಷ್ಠರ ನಡುವಿನ ಜಟಾಪಟಿ ಮುಂದುವರೆ ದಿದೆ. ಈ ನಡುವೆ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರು ಒಂದೇ ದಿನ ರಾಜೀನಾಮೆ ನೀಡಿದ್ದಾರೆ.

ಪಕ್ಷದಿಂದ ಎಸ್. ಆರ್. ಶ್ರೀನಿವಾಸ್‌ಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾರ್ಯ ಕರ್ತರು ಸಾಮೂಹಿಕ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದವರಲ್ಲಿ ಬಿದರೆ ಗ್ರಾಮ ಕಾರ್ಯಕರ್ತರೇ ಅಧಿಕವಾಗಿದ್ದಾರೆ.

ರಾಜೀನಾಮೆ ನೀಡಿರುವ ಕಾರ್ಯಕರ್ತರು ‘ವಾಸಣ್ಣ ಅಭಿಮಾನಿ ಬಳಗ’ ಸೇರುತ್ತಿದ್ದಾರೆ. ಗುಬ್ಬಿಯಲ್ಲಿ 50 ಸಾವಿರಕ್ಕೂ ಅಧಿಕ ಪಕ್ಷದ ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ ಎಂದು ಶಂಕಿಸ ಲಾಗಿದೆ.

ಎಸ್. ಆರ್. ಶ್ರೀನಿವಾಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸಣ್ಣದಾಗಿ ಆರಂಭವಾದ ಅಸಮಾ ಧಾನ ಬಳಿಕ ದೊಡ್ಡದಾಯಿತು. ಗುಬ್ಬಿ ಕ್ಷೇತ್ರದಲ್ಲಿ ಎಸ್. ಆರ್. ಶ್ರೀನಿವಾಸ್ ಬದಲು ಬೇರೆ ಅಭ್ಯರ್ಥಿ ಕಣಕ್ಕಿಳಿಸುವ ಮಟ್ಟಿಗೆ ಅಸಮಾಧಾನ ಬೆಳೆದುನಿಂತಿದೆ.

error: Content is protected !!