ಧಾರವಾಡ : ಧಾರವಾಡ ಶಹರ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಅವರು ಭಾನುವಾರ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ಧಾರವಾಡ ನಗರದ ಮಾರುಕಟ್ಟೆ, ಬಸ್ನಿಲ್ದಾಣ, ಹೊಟೇಲ್ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು. ಮಾರುಕಟ್ಟೆ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ವ್ಯಾಪಾರ ನಿರತ ಮಹಿಳೆಯರಿಗೆ, ಖರೀದಿದಾರರಿಗೆ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ತರಕಾರಿ ಸಂತೆಗಾಗಿ ಆಗಮಿಸಿದ್ದ ಜನರಿಗೆ ಎಸಿಪಿ ಅನುಷಾ ಅವರು ಸ್ವತ: ಮಾಸ್ಕ್ಗಳನ್ನು ತೊಡಿಸಿ, ಅತ್ಮೀಯತೆ ಯಿಂದ ಮಾತನಾಡಿಸಿ […]