Sunday, 29th September 2024

ಕಟಕ್‌ನಲ್ಲಿ ಅಭಿಯನವ ಹಾಲಶ್ರೀ ಬಂಧನ…!

ಬೆಂಗಳೂರು: ಐದು ಕೋಟಿ ವಂಚನೆಗೆ ಸಂಬಂಧಪಟ್ಟಂತೆ ತಲೆ ಮರೆಸಿಕೊಂಡಿದ್ದ ಅಭಿಯನವ ಹಾಲಶ್ರೀಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧನ ಮಾಡಿದ್ದಾರೆ ಎನ್ನಲಾಗಿದೆ.

ಚಲಿಸುತ್ತಿದ್ದ ರೈಲಿನಲ್ಲಿ ಅವರನ್ನು ಬಂಧನ ಮಾಡಲಾಗಿದ್ದು, ಅವರನ್ನು ಸದ್ಯ ಅಲ್ಲಿಂದ ಪೊಲೀಸರು ಕರೆ ತರುತ್ತಿದ್ದು, ಮಂಗಳವಾರ ರಾತ್ರಿ ಬೆಂಗಳೂರಿಗೆ ಬರುವ ಸಾಧ್ಯತೆ ಇದೇ ಎನ್ನಲಾಗಿದೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿ ಬಂಧನಕ್ಕೊಳಗಾಗಿರುವ ಚೈತ್ರಾ ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀಯಾಗಿದ್ದಾರೆ. ಇದೇ ವೇಳೆ, ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರವಾಗಿ ಮಂಗಳವಾರ ಸಿಸಿಬಿ (CCB) ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎ1 ಆರೋಪಿ ಚೈತ್ರಾ ಮೌನಕ್ಕೆ ಜಾರಿದ್ದು, ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎನ್ನಲಾಗಿದೆ.