Hari Paraak Column: ಬಾಲಿವುಡ್ ಖಾನ್ ಗಳ ʼಕಿವಿʼಮಾತು: ʼಕಾನ್ʼ ಕೀ ಬಾತ್
ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗಲ್ಲಾಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟ ದಲ್ಲಿದ್ದ ಈ ಚಿತ್ರಮಂದಿರಗಳು ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಗಳು ಹೇಗೋ ಬಚಾವಾ ಗಲು ಹಲವು ಇನ್ನೋ ವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ. ಆದ್ರೆ ಸಿಂಗಲ್ ಸ್ಕ್ರೀನ್ಗಳ ಕತೆ ಹಾಗಿಲ್ಲ.
-
ತುಂಟರಗಾಳಿ
ಸಿನಿಗನ್ನಡ
ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚೋದು ಹೊಸ ಸುದ್ದಿ ಏನಲ್ಲ. ಕರೋನಾ ನಂತರ ಶುರು ಆದ ಈ ಸಮಸ್ಯೆ ಈಗ ಇನ್ನಷ್ಟು ಉಲ್ಬಣವಾಗುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಇರೋ ತಮಿಳುನಾಡಿನಲ್ಲೂ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುತ್ತಿವೆಯಂತೆ. ನಮ್ಮಲ್ಲಿಯೂ ಇನ್ನೇನು ಹಲವು ಚಿತ್ರಮಂದಿರಗಳು ಕೌಂಟರ್ ಕ್ಲೋಸ್ ಮಾಡುವ ಮಾತನ್ನಾಡುತ್ತಿವೆ.
ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗಲ್ಲಾಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟ ದಲ್ಲಿದ್ದ ಈ ಚಿತ್ರಮಂದಿರಗಳು ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಗಳು ಹೇಗೋ ಬಚಾವಾ ಗಲು ಹಲವು ಇನ್ನೋವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ. ಆದ್ರೆ ಸಿಂಗಲ್ ಸ್ಕ್ರೀನ್ಗಳ ಕತೆ ಹಾಗಿಲ್ಲ.
ಹಾಗಾಗಿ ಜನ ಒಂದು ಕಡೆ ಮಿಂಗಲ್ ಆಗೋಕೆ ಸಾಧ್ಯ ಇಲ್ಲ ಎನ್ನುವಂಥ ಕರೋನಾ ಟೈಮ್ ಸಿಂಗಲ್ ಥಿಯೇಟರ್ಗಳು ವಿರಹ ವೇದನೆಯಿಂದ ನರಳುವ ಸಿಂಗಲ್ ಗಳಂತೆ ಆಗಿದ್ದವು. ಈಗಂತೂ ಅವುಗಳ ಕಷ್ಟ ಗಗನಕ್ಕೇರಿದೆ. ಹಲವು ಚಿತ್ರಮಂದಿರಗಳ ಮಾಲೀಕರು ತಮ್ಮ ಲೈಸೆನ್ಸ್ ರಿನ್ಯೂ ಮಾಡೋಕೆ ಅರ್ಜಿಯನ್ನೂ ಹಾಕಿಲ್ಲವಂತೆ.
ಇಷ್ಟು ದಿನ ತಮ್ಮ ಮರ್ಜಿ ಎನ್ನುವಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದ ಚಿತ್ರಮಂದಿರಗಳ ಮಾಲೀಕರು ಕರೋನಾ ಕಾಲದಲ್ಲಿ ಸರಕಾರದ ‘ಫಿಫ್ಟಿ ಫಿಫ್ಟಿ’ ನೀತಿಯಿಂದಾಗಿ ಮೊದಲ ಲಾಕ್ ಡೌನ್ನ ಒಂದಿಷ್ಟು ಕಂಗೆಟ್ಟಿದ್ದರು. ಈಗ ಫಿಫ್ಟಿ ಫಿಫ್ಟಿ ಇರಲಿ, ಚಿತ್ರಮಂದಿರಗಳಲ್ಲಿ ‘ಶೋ’ಗಳೇ ಇಲ್ಲದೆ ಅವರ ಪರಿಸ್ಥಿತಿ ಇನ್ನಷ್ಟು ‘ಶೋ’ಚನೀಯವಾಗಿದೆ. ಅಡ್ವಾ ಬುಕ್ಕಿಂಗ್ ಮಾಡಿಕೊಂಡು ಸೀಟುಗಳನ್ನ ಬ್ಲಾಕ್ ಮಾಡಿಕೊಳ್ಳುತ್ತಿದ್ದ, ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದ ಚಿತ್ರಮಂದಿರಗಳೇ ಈಗ ಬ್ಲಾಕ್ ಆಗುವ ಭಯದಲ್ಲಿವೆ.
ಇದನ್ನೂ ಓದಿ: Hari Paraak Column: ಬಿಜೆಪಿಗರಿಗೆ ಡಿಕೆಶಿನ ಸಿಎಂ ಮಾಡೋ ʼತಿಂಡಿʼ
ಹಾಗಾಗಿ ‘ಚಿತ್ರಮಂದಿರ ತುಂಬಿದೆ’ ಎಂಬ ಬೋರ್ಡ್ ನೋಡಬೇಕಾಗಿದ್ದ ಹಲವು ಕಡೆ ಇನ್ನು ಮುಂದೆ ‘ಚಿತ್ರಮಂದಿರ ಮುಚ್ಚಿದೆ’ ಎಂಬ ಬೋರ್ಡ್ ತಗಲಾಕಿದರೆ ಅಚ್ಚರಿಯಿಲ್ಲ.
ಲೂಸ್ ಟಾಕ್- ದರ್ಶನ್ ತೂಗುದೀಪ
ಏನ್ ದರ್ಶನ್ ಅವರೇ, ನಿಮ್ಮ ಬ್ಯಾಕ್ ಸಮಸ್ಯೆ ಹೇಗಿದೆ?
- ಅಯ್ಯೋ ‘ಬ್ಯಾಕ್-ಟು- ಬ್ಯಾಕ್’ ಸಮಸ್ಯೆಗಳನ್ನು ನೋಡಿ ನೋಡಿ, ಈ ಬ್ಯಾಕ್ ಸಮಸ್ಯೆ ಕಾಮನ್ ಆಗೋಗಿದೆ ಬಿಡಿ.
ನಿಜ ಬಿಡಿ. ಮತ್ತೆ ನೀವು ಜೈಲಿಗೆ ಕಮ್ಬ್ಯಾಕ್ ಮಾಡಿದ ಅನುಭವ ಹೇಗಿದೆ?
- ನನ್ ‘ಬಾಡಿಗೆ’ ಸಮಸ್ಯೆ ಆಗಿದೆ ಅಂತ ಆಸ್ಪತ್ರೆ ಅನ್ನೋ ‘ಬಾಡಿಗೆ’ ಗೂಡಿಗೆ ಹೋಗಿದ್ದೆ. ಮತ್ತೆ, ವಾಪಸ್ ಬರ್ಲೇಬೇಕಲ್ಲ.
ಅದ್ಸರಿ. ಆದ್ರೆ, ನೀವು ಬೆನ್ನುನೋವು ಅಂತ ಸುಮ್ನೆ ನಾಟಕ ಮಾಡ್ತಾ ಇದ್ದೀರಾ ಅಂತ ಹೇಳ್ತಾರೆ ನಿಜಾನಾ?
- ಅದ್ಯಾಕ್ರೀ, ಬೆನ್ನು ನೋವು ಯಾರಿಗೆ ಬೇಕಾದರೂ ಬರಬಹುದು, ‘ಬೆನ್’ ಸ್ಟೋಕ್ಸ್ ಗೂ ಬರುತ್ತೆ.
ಸರಿ, ಮಧ್ಯೆ ಸ್ವಲ್ಪ ದಿನ ಆಸ್ಪತ್ರೆಗೆ ಹೋಗಿದ್ರಲ್ಲ. ಆಸ್ಪತ್ರೆ ಜೀವನ ಹೇಗಿತ್ತು? ಡಾಕ್ಟ್ರು
ಏನಂದ್ರು?
- ಜೈಲ್ ಥರ ಇಲ್ಲೂ, ನಂಗೆ ಅದ್ ಬೇಕು, ಇದ್ ಬೇಕು ಅಂತ ಡಿಮ್ಯಾಂಡ್ ಮಾಡಂಗಿಲ್ಲ, ನಾವ್ ಕೊಟ್ಟಿದ್ ತಗೊಂಡು ಸುಮ್ನೆ ಇರ್ಬೇಕು ಅಂದ್ರು.
ನೀವು ಆಸ್ಪತ್ರೆಗೆ ಬರೋ ಬದಲು, ಬಿಗ್ ಬಾಸ್ಗೆ ಹೋಗಿದ್ದಿದ್ರೆ ನೂರು ದಿನ ಆರಾಮಾಗಿ ಇರಬಹುದಿತ್ತಲ್ಲ?
- ಅಯ್ಯೋ ಸುಮ್ನೆ ಇರ್ರಿ, ಆ ಬಿಗ್ ಬಾಸ್ಗಿಂತ ಈ ಜೈಲೇ ಎಷ್ಟೋ ವಾಸಿ, ಅಲ್ಲಿ ಸುದೀಪ್ ಬೇರೆ ಇರ್ತಾನೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ. ಆದ್ರೆ ಜತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬು ಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾ ಯಿಸಿ ‘ಪ್ಲೇಬಾಯ್’ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು. ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡು ಹಿಡಿದು ಆರ್ಡರ್ ಮಾಡುತ್ತಿದ್ದ.
ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೇಟರ್ನ ಕರೆದು, ಡ್ರಿಂಕ್ಸ್ ಹೇಳಿದ. “ಸೈಡ್ ಡಿಶ್ ಏನು ಕೊಡ್ಲಿ?" ಅಂತ ಅವನು ಕೇಳಿದಾಗ, ಖೇಮು, “ನೀವು ತಯಾರಿಸಿದ ಡಿಶ್ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ" ಅಂದ. ವೇಟರ್ಗೆ ಆಶ್ಚರ್ಯ ಆದ್ರೂ, ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ. ಖೇಮು ಅದನ್ನು ಮೂಸಿ ನೋಡಿ, “ಸರಿ ಈ ಚೈನೀಸ್ ಶೆಜ್ವಾನ್ ಫ್ರೈಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ" ಅಂದ.
ವೇಟರ್ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ “ಸ್ಪೂನ್ ತಗೊಂಡ್ ಬಾ" ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೇಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, “ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್ಸ್ಟಿಕ್ಗೆ ಒರೆಸಿಕೊಡು" ಅಂದ.
ಹೆಂಡತಿ “ಯಾಕೆ?" ಅಂದ್ಳು. “ಸುಮ್ನೆ ಹೇಳಿದಷ್ಟು ಮಾಡು" ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ “ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ ಕೆಲ್ಸ ಮಾಡ್ತಾ ಇದ್ದಾಳಾ?"
ಲೈನ್ ಮ್ಯಾನ್
ಬಾಲಿವುಡ್ ಖಾನ್ಗಳು ಇನ್ನೊಬ್ಬರಿಗೆ ಹೇಳೋ ‘ಕಿವಿ’ಮಾತನ್ನ ಏನಂತಾರೆ?
- ‘ಕಾನ್’ ಕೀ ಬಾತ್
ನಮ್ಮವರಿಗೆ ಸಚಿವ ಸ್ಥಾನ ಕೊಡದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ: ಸ್ವಾಮೀಜಿ
- ಇವ್ರದ್ದೇನು ‘ಮುತ್ತಿಗೆ ಮಠ’ನಾ?
ಇಂದಿನ ಸರಕಾರಗಳಲ್ಲಿ ಮಿನಿಸ್ಟರ್ ಆಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
- ಅವ್ರ್ ‘ಯಾವ್ ಜನ’ ಅನ್ನೋದೂ ಮುಖ್ಯ ಆಗುತ್ತೆ.
ನಗರದ ಹೊರವಲಯದಲ್ಲಿ ಸೈಟ್ ತಗೊಂಡೋರು ಆಗಾಗ ಹೋಗಿ ನೋಡ್ಕಂಡ್ ಬರೋದು
- ಸೈಟ್ ಸೀಯಿಂಗ್
ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು
- ಸಂ‘ಪುಟಕ್ಕಿಟ್ಟ ಚಿನ್ನ’
ಕುಡುಕರ ಕಷ್ಟ
- ಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ, ‘ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆ ಮಾತಾಡ್ತಿದ್ದಾನೆ’ ಅಂತಾರೆ. ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ‘ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ’ ಅಂತಾರೆ.
ಎಣ್ಣೆರೇಟ್ ಜಾಸ್ತಿ ಆದ ಮೇಲೆ ದೇಶದ ಪ್ರಜೆಗಳು ಕುಡಿಯೋ ಅಭ್ಯಾಸ ಕಡಿಮೆ ಮಾಡೋದು ಹೇಗೆ ?
- ಏನಿಲ್ಲ, ಬೇಜಾರಾದಾಗೆಲ್ಲ ಕುಡೀಯೋದ್ ಬಿಟ್ಟು, ಬರೀ ಖುಷಿ ಆದಾಗ್ ಮಾತ್ರ ಕುಡಿಯೋ ಅಭ್ಯಾಸ ಮಾಡಿಕೊಂಡ್ರೆ ಸಾಕು.
ಫೇಕ್ ಫೇಸ್ಬುಕ್ ಅಕೌಂಟಿಂದ ಮೆಸೆಂಜರ್ಗೆ ಬಂದು, ‘ಫೋನ್ ಪೇ, ಗೂಗಲ್ ಪೇ ಇದ್ಯಾ?’ ಅಂತ ಕೇಳಿದ್ರೆ ಏನ್ ಮಾಡಬೇಕು?.
- ‘ಇದೆ, ಬರೀ ಇನ್ಕಮಿಂಗ್ ಅಷ್ಟೇ, ಔಟ್ಗೋಯಿಂಗ್ ಇಲ್ಲ’ ಅನ್ಬೇಕು
ಇನ್ನೊಬ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?
- ಒಂದ್ ‘ಟೀ’ ಸ್ಪೂನ್ ‘ಕಾಫಿ’ಪುಡಿ ಹಾಕಿ
ರಾಜಕೀಯ ರಹಸ್ಯ
- ‘ಎಕ್ಸ್’ ಸಿಎಂಗಳಾದ ಮೇಲೂ ಅವರಿಗೆ ‘ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ’ ಅಂತ ಕೇಳಲ್ಲ.