Thursday, 28th March 2024

ಜನತೆಯ ಜತೆ ಕೆಲಸ ಮಾಡುವಂತ ಖಾತೆ ಕೊಟ್ಟಿದ್ದರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ ಬೇಸರ

ಬೆಂಗಳೂರು : ಜನರ ಜೊತೆಗೆ ಕೆಲಸ ಮಾಡುವಂತ ಖಾತೆಯನ್ನು ನೀಡಿದ್ದರೇ ಖುಷಿ ಇರುತ್ತಿತ್ತು. ಆದ್ರೇ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಇದಕ್ಕೂ ನನಗೂ ಸಂಬಂಧವೇ ಇಲ್ಲ. ಜನತೆಯ ಜೊತೆಗೆ ಕೆಲಸ ಮಾಡುವಂತ ಖಾತೆ ಕೊಟ್ಟಿದ್ದರೆ ಖುಷಿಯಾಗು ತ್ತಿತ್ತು ಎಂಬುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಖಾತೆ ಮರು ಹಂಚಿಕೆಯ ನಂತ್ರ ಸಚಿವ ಜೆಸಿ ಮಾಧುಸ್ವಾಮಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರ ಇದೆ. ರಾಜೀನಾಮೆಗೆ ನಿರ್ಧಾರ ಮಾಡಿಲ್ಲ. ಸಣ್ಣ ನೀರಾವರಿ ಖಾತೆಯಲ್ಲೇ ಖುಷಿ ಇತ್ತು. ವೈದ್ಯಕೀಯ ಶಿಕ್ಷಣ ಸಚಿವ ಖಾತೆಗೂ ನನಗೂ ಸಂಬಂಧವೇ ಇಲ್ಲ. ಜನರ ಜೊತೆಗೆ ಕೆಲಸ ಮಾಡುವಂತ ಖಾತೆ ನಿರೀಕ್ಷಿಸಿದ್ದೆ ಎಂಬುದಾಗಿ ತಿಳಿಸಿದ್ದಾರೆ.

ನಾನು ಗ್ರಾಮೀಣ ಭಾಗದಿಂದ ಬಂದವನು. ಜನರ ಜೊತೆಗೆ ಇರುವ ಖಾತೆ ಸಿಕ್ಕಿದ್ದರೆ ಖುಷಿ. ನನಗೂ ವೈದ್ಯಕೀಯ ಶಿಕ್ಷ ಖಾತೆಗೂ ಸಂಬಂಧವೇ ಇಲ್ಲ. ಖಾತೆ ಬದಲಾವಣೆ ಮಾಡಿದಕ್ಕೆ ಬೇಸರವಿದೆ. ಅದನ್ನು ಹೊರತಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ನಿರ್ಧಾರವನ್ನು ತಾವು ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!