Friday, 1st December 2023

ಸಚಿವರಿಗೆ ಖಾತೆ ಹಂಚಿಕೆ, ಕೆಲವರದ್ದು ಅದಲು-ಬದಲು…ವಿವರ ಇಂತಿದೆ…

ಬೆಂಗಳೂರು : ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹಾಲಿ ಸಚಿವರ ಖಾತೆಗಳ ಅದಲು-ಬದಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯ ಫೈನಲ್ ಪಟ್ಟಿಗೆ ರಾಜ್ಯ ಪಾಲರು ಅಂಕಿತ ಹಾಕಿದ್ದಾರೆ.

ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ನೂತನ ಸಚಿವರ ಖಾತೆಗಳು, ಹಾಲಿ ಸಚಿವರ ಖಾತೆಗಳ ಅದಲು – ಬದಲು ಸಂಪೂರ್ಣ ಪಟ್ಟಿ ಇಂತಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ – ಡಿಪಿಎಆರ್, ಕ್ಯಾಬಿನೆಟ್ ಅಫೈರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಎನರ್ಜಿ, ಗುಪ್ತಚರ, ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್, ಇನ್ಫಾಸ್ಟ್ರಕ್ಚರ್ ಡೆವೆಲ್ಮೆಂಟ್

ಉಮೇಶ್ ಕತ್ತಿ – ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ಖಾತೆ

ಎಸ್ ಅಂಗಾರ – ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಖಾತೆ

ಬಸವರಾಜ್ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಖಾತೆ

ಜೆಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಖಾತೆ

ಸಿಸಿ ಪಾಟೀಲ್ – ಸಣ್ಣ ಕೈಗಾರಿಕಾ ಖಾತೆ, ವಾರ್ತಾ ಮತ್ತು ಸಂಪರ್ಕ ಖಾತೆ

ಅರವಿಂದ ಲಿಂಬಾವಳಿ – ಅರಣ್ಯ ಖಾತೆ

ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ ಖಾತೆ

ಎಂ.ಟಿ.ಬಿ.ನಾಗರಾಜ್ – ಅಬಕಾರಿ ಖಾತೆ

ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಹಿಂದುಳಿದ ವರ್ಗಗಳ ಖಾತೆ

ಡಾ.ಕೆ.ಸುಧಾಕರ್ – ಆರೋಗ್ಯ ಖಾತೆ

ಆನಂದ್ ಸಿಂಗ್ – ಪ್ರವಾಸೋದ್ಯಮ

ಸಿಪಿ ಯೋಗೀಶ್ವರ್ – ಸಣ್ಣ ನೀರಾವರಿ ಖಾತೆ

ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಸಚಿವರ ಖಾತೆ

ಶಿವರಾಂ ಹೆಬ್ಬಾರ್ – ಕಾರ್ಮಿಕ ಖಾತೆ

ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ ಸಚಿವರ ಖಾತೆ

ಕೆ ಗೋಪಾಲಯ್ಯ – ತೋಟಗಾರಿಕಾ ಖಾತೆ, ಸಕ್ಕರೆ ಖಾತೆ

ಕೆಸಿ ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಢಾ ಸಬಲೀಕರಣ ಖಾತೆ

Leave a Reply

Your email address will not be published. Required fields are marked *

error: Content is protected !!