ಬೆಂಗಳೂರು: ಕಲ್ಲು ಕ್ವಾರಿಗೆ ಜಿಲೆಟಿನ್ ಕೊಂಡೊಯ್ಯುವಾಗಿ ನಿಯಮ ಪಾಲನೆಯಾಗಿಲ್ಲವಾದ ಕಾರಣ ಶಿವಮೊಗ್ಗದಲ್ಲಿ ಸ್ಪೋಟ ಸಂಭವಿಸಿದೆ. ಇಂತಹ ಸ್ಪೋಟದಲ್ಲಿ ಈವರೆಗೆ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆಯಿಂದ ದುರಂತ ಸಂಭವಿಸಿಲ್ಲ ಎಂಬುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸಿಎಂ ಯಡಿಯೂರಪ್ಪಗೆ ವರದಿ ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿ ಸ್ಪೋಟಕ ಪ್ರಕರಣ ಕುರಿತಂತೆ ಸಿಎಂ ಯಡಿಯೂರಪ್ಪ ಸೂಚನೆಯ ಮೇರೆಗೆ ಸಚಿವ ಮುರುಗೇಶ್ ನಿರಾಣಿ ಪ್ರಾಥಮಿಕ ವರದಿ ಸಲ್ಲಿಸಿದ್ದು, ಗಣಿಗಾರಿಕೆ ನಡೆಸಲು ಜಿಲೆಟಿನ್ ಕಟ್ಟಿಗಳನ್ನು ಕೊಂಡೊಯ್ಯುವಾಗ ಸುರಕ್ಷತಾ ನಿಯಮ ಪಾಲನೆ ಮಾಡಬೇಕಿತ್ತು. ಆದ್ರೇ ಹೀಗೆ ಮಾಡಿಲ್ಲ. ಇದರಿಂದಾಗಿ ಸ್ಪೋಟಕ ಉಂಟಾಗಿದೆ. ಇದರ ಹೊರತಾಗಿ ಯಾವುದೇ ಅಕ್ರಮ ಕಲ್ಲು ಗಣಿಕಾರಿಕೆಯಿಂದ ಸ್ಪೋಟ ಸಂಭವಿಸಿಲ್ಲ ಎಂಬುದಾಗಿ ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.