Thursday, 28th March 2024

ಅಕ್ಷರ ಇರುವ ಕಡೆ ಅಹಿತಕರ ಘಟನೆಗಳು ಕಡಿಮೆ

ಗಡಿ ಭಾಗದ ಬೀದರ ಜಿಯಲ್ಲಿ ಪತ್ರಿಕೆ ಓದುಗರ ಸಂಖ್ಯೆ ೭೫,೦೦೦ಕ್ಕೂ ಅಧಿಕವಿರುವುದು ಹೆಮ್ಮೆಯ ವಿಷಯ: ವಿಶ್ವೇಶ್ವರ

ಬೀದರ: ಅಕ್ಷರ ಇರುವ ಕಡೆ ಅಹಿತಕರ ಘಟನೆಗಳು ಕಡಿಮೆ. ಈ ಕಾರಣಕ್ಕಾಗಿ ಪುಸ್ತಕಗಳ ಓದು ಅವಶ್ಯಕ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಟ ರಮೇಶ್ ಅರವಿಂದ, ಪತ್ರಕರ್ತರಾದ ವಿಶೇಶ್ವರ ಭಟ್, ಜೋಗಿ, ಗಣೇಶ ಕಾಸರಗೋಡು, ಲೇಖಕ ಕು.ವೀರಭದ್ರಪ್ಪ, ರಂಗಸ್ವಾಮಿ ಮೂಕನಹಳ್ಳಿ ಸೇರಿದಂತೆ ಅನೇಕ ಸಾಹಿತಿಗಳ ಹತ್ತು ಪುಸ್ತಕಗಳ ಮರು ಬಿಡುಗಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಅಕ್ಷರ ದಿಂದ ಕುಗ್ರಾಮವೊಂದು ಸರ್ವತೋಮುಖ ಅಭಿವೃದ್ಧಿ ಕಂಡ ನಿದರ್ಶನ ನೀಡಿದರು.

ಲೇಖಕನ ಹತ್ತು ಹಲವಾರು ವರ್ಷಗಳ ಪರಿಶ್ರಮ ಕೃತಿ ಯನ್ನು ಆವರಿಸಿರುತ್ತದೆ. ಹಾಗಾಗಿ ಪುಸ್ತಕಗಳಿಗೆ ಮಹತ್ವ ಹೆಚ್ಚು ಎಂದರು. ಬೀದರನಲ್ಲಿ ೧೯೯೯ ರಲ್ಲಿ ೨೦೦ ಪತ್ರಿಕೆಗಳ ಪ್ರಸರಣ ಇತ್ತು. ಪ್ರಸ್ತುತ ಬೀದರ ಜಿಲ್ಲೆಗೆ ಬರುವ ಪತ್ರಿಕೆಗಳ ಸಂಖ್ಯೆ ೭೫ ಸಾವಿರಕ್ಕೂ
ಅಧಿಕ. ನಿಜಕ್ಕೂ ಇದು ಹೆಮ್ಮೆಯ ವಿಷಯ.

ವಿಜಯ ಕರ್ನಾಟಕ ಪತ್ರಿಕೆಯನ್ನು ಆರಂಭ ಮಾಡುವ ಸಂದರ್ಭದಲ್ಲಿ ಬಳ್ಳಾರಿ ಮತ್ತು ಹುಬ್ಬಳಿಯ ಹೊಕ್ರಂಡಿಗೆ ತೆರಳಿದ್ದೆ. ಅಲ್ಲಿನ ಜನರು ಇಲ್ಲಿ ಪತ್ರಿಕೆಯನ್ನು ಯಾರೂ ಓದುವುದಿಲ್ಲ ಎಂದರು. ನಾನು ಆ ಊರಿಗೆ ಮೊದಲ ಬಾರಿಗೆ ೫ ಪತ್ರಿಕೆಗಳನ್ನು ಕಳುಹಿಸಿದೆ. ಅದೇ ರೀತಿ ಮರುದಿನ ೧೦ ಪತ್ರಿಕೆಗಳನ್ನು ಕಳುಹಿಸಿದೆ. ಹೀಗೆ ಪತ್ರಿಕೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಬಂದಿತು. ಇದಕ್ಕೆ ಕಾರಣ ಆ ಒಂದು ಊರಿನಲ್ಲಿ ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು ಎಂದರು.

ಜಗತ್ತಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ವಸ್ತುವೆಂದರೆ ಪತ್ರಿಕೆ. ಪತ್ರಿಕೆ ಓದುವ ಮೂಲಕ ಇಡೀ ಜಗತ್ತಿನ ವಿಷಯ ವನ್ನು ತಿಳಿದುಕೊಳ್ಳಬಹುದು. ಎಲ್ಲ ಸಾಹಿತಿಗಳು ಅವರ ಅನುಭವವೆಲ್ಲವನ್ನೂ ಪುಸ್ತಕದಲ್ಲಿ ಧಾರೆ ಎರೆಯುವುದು ಎಲ್ಲರೂ ಅವರ ಅನುಭವಗಳನ್ನು ಅರಿತುಕೊಳ್ಳಲಿ ಎನ್ನುವ ಕಾರಣಕ್ಕೆ. ಪುಸ್ತಕ ಓದಿನಿಂದ ಹೆಚ್ಚಾಗುತ್ತದೆ, ಎಲ್ಲರೂ ಓದುವುದನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರಜನೀಶ ವಾಲಿ,
ಕನ್ನಡ ಸಾಹಿತ್ಯ ಪರಿಷ್ಯತ್ತಿನ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಜಿ ನೌಕರರ ಸಂಘದ ಅಧ್ಯಕ್ಷರಾದ ರಾಜೇಂದ್ರ ಗಂದಗೆ ಮತ್ತಿತ ರರು ಉಪಸ್ಥಿತರಿದ್ದರು.

ಬೀದರನಲ್ಲಿ ಪ್ರಸಿದ್ಧ ಲೇಖಕರ ಹತ್ತು ಪುಸ್ತಕಗಳನ್ನು ಮರುಬಿಡುಗಡೆ ಮಾಡಲಾಯಿತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಪತ್ರಕರ್ತರಾದ ಜೋಗಿ, ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್ ಮತ್ತಿತರರು ಇದ್ದರು.

***

ಮೊಟ್ಟ ಮೊದಲ ಕಾಲ್‌ಸೆಂಟರ್ ವೀರಲೋಕ ಬುಕ್ ಪ್ರೈ.ಲಿಯ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಪುಸ್ತಕಗಳು ಒಳ್ಳೆಯ ಗೆಳೆಯ. ಕನ್ನಡದ ಪುಸ್ತಗಳಿಗಾಗಿ ಮೊಟ್ಟ ಮೊದಲು ಕಾಲ್ ಸೆಂಟರ್ ಆರಂಭಿಸಲಾಗಿದೆ. ಕಾಲ್ ಸೆಂಟರ್‌ ನಲ್ಲಿರುವವರು ಪ್ರತಿದಿನ ಕಾಲ್ ಮಾಡಿ ನೀವು ಕನ್ನಡವನ್ನು ಓದುತ್ತಿರಾ ಎಂದು ಪ್ರಶ್ನಿಸುತ್ತಾರೆ. ನಿಮಗೆ ಬೇಕಾದ ಯಾವುದೇ ಕನ್ನಡ ಪುಸ್ತಕಗಳ ಮಾಹಿತಿ ಬೇಕಾದಲ್ಲಿ ಹಲೋ ವೀರಲೋಕ 7022122121ಮೊಬೈಲ್ ಸಂಖ್ಯೆೆಗೆ ಕರೆ ಮಾಡಬಹುದು
ಎಂದು ತಿಳಿಸಿದರು.

error: Content is protected !!