Friday, 19th April 2024

ಪದವೀಧರರ ಒಲವು ನನ್ನ ಕಡೆಗೆ; ಆರ್ ಎಂ ಕುಬೇರಪ್ಪ

ಹುಬ್ಬಳ್ಳಿ: ಹಾವೇರಿ ನಗರದ ನಿಸರ್ಗ ಹಾಲ್ ನಲ್ಲಿ ಸೋಮವಾರ ವಿಧಾನ ಪರಿಷತ್ ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವ ಸಿದ್ದತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಡಾ ಆರ್ ಎಮ್ ಕುಬೇರಪ್ಪನವರು ಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಮೂರ್ನಾಲ್ಕು ಬಾರಿ ಕಾರ್ಯಕ್ರಮ ಸಭೆ ಮಾಡಲಾಗಿದ್ದು, ಪದವೀಧರರ ಒಲವು ನನ್ನ ಕಡೆ ಇದ್ದು ನನ್ನ ಗೆಲುವು ನಿಶ್ಚಿತ ಎಂದರು.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪ್ರಚಾರ ಸಭೆ ಆಯೋಜಿಸಲಾಗುವದು ಎಂದರು. ರಾಜ್ಯ ಸರಕಾರ ಇದೆ 30 ರವರೆಗೆ ಶಾಲೆಗಳ ಶಿಕ್ಷಕರಿಗೆ ರಜೆ ಘೋಷಣೆ ಮಾಡಿರುವದನ್ನು ಸ್ವಾಗತಿಸಿದರು. ಈ ರಜೆಯನ್ನು ಎಲ್ಲ ಕಾಲೇಜುಗಳಿಗೆ ವಿಸ್ತರಿಸಲು ಆಗ್ರಹಿಸಿ ದರು.

ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಎಮ್ ಎಮ್ ಹಿರೇಮಠ್ ಈ ಬಾರಿ ಕುಬೇರಪ್ಪನವರಿಗೆ ಒಂದು ವರ್ಷದ ಹಿಂದೆಯೇ ಟಿಕೆಟ್ ಕೊಡಲಾಗಿದೆ. ಹಾಗಾಗಿ ಅವರ ಗೆಲುವು ನಿಶ್ಚಿತ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರುದ್ರಪ್ಪ ಎಮ್ ಲಮಾಣಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಮ್ ಎಮ್ ಮೈದೂರ್, ಬಿಸ್ಟನಗೌಡ್ರು, ಕುರವತ್ತಿಗೌಡ್ರ್ ಯಲವತ್ತಿ ಯವರು ಸಂಜೀವ ಕುಮಾರ್ ನೀರಲಗಿ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ಹಾಗು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!