<?xml version="1.0" encoding="utf-8"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:dc="http://purl.org/dc/elements/1.1/" xmlns:slash="http://purl.org/rss/1.0/modules/slash/" xmlns:sy="http://purl.org/rss/1.0/modules/syndication/" xmlns:wfw="http://wellformedweb.org/CommentAPI/"><channel><title>Vishwavani News - Latest Kannada News</title><link>https://vishwavani.news</link><description>Latest news and updates from Vishwavani News</description><atom:link href="https://vishwavani.news/feed/" rel="self"/><language>kn-IN</language><lastBuildDate>Tue, 14 Jul 2026 17:52:12 +0000</lastBuildDate><copyright>https://vishwavani.news/</copyright><generator>https://vishwavani.news/</generator><atom:link href="https://vishwavani.news/feed/" rel="self" type="application/rss+xml"/><item><title>IND vs ENG: ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಆಟಕ್ಕೆ ಮಣಿದ ಇಂಗ್ಲೆಂಡ್‌, ಭಾರತ ಶುಭಾರಂಭ!</title><link>https://vishwavani.news/sports/cricket/all-round-axar-patel-guides-india-to-comfortable-win-over-england-in-1st-odi-83758.html</link><guid>https://vishwavani.news/sports/cricket/all-round-axar-patel-guides-india-to-comfortable-win-over-england-in-1st-odi-83758.html</guid><pubDate>Tue, 14 Jul 2026 17:52:12 +0000</pubDate><description>&lt;![CDATA[IND vs ENG 1st ODI Match Highlights: ಅಕ್ಷರ್‌ ಪಟೇಲ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ಭಾರತ ತಂಡ, ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದು ಶುಭಾರಂಭ ಮಾಡಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/IND_vs_ENG_1st_ODI_QJICJiO.original.jpg" class="attachment-large size-large wp-post-image" alt="IND vs ENG: ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಆಟಕ್ಕೆ ಮಣಿದ ಇಂಗ್ಲೆಂಡ್‌, ಭಾರತ ಶುಭಾರಂಭ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="6ow8n"&gt;&lt;b&gt;ಬರ್ಮಿಂಗ್‌ಹ್ಯಾಮ್‌:&lt;/b&gt; ಅಕ್ಷರ್‌ ಪಟೇಲ್‌ (Axar Patel) ಅವರ ಆಲ್‌ರೌಂಡರ್‌ ಆಟದ ಬಲದಿಂದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್‌ ಎದುರು 6 ವಿಕೆಟ್‌ಗಳ ಗೆಲವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆಯುವ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ ಶುಭಾರಂಭ ಮಾಡಿದೆ. ಬೌಲಿಂಗ್‌ನಲ್ಲಿ 4 ವಿಕೆಟ್‌ ಹಾಗೂ ಬ್ಯಾಟಿಂಗ್‌ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ ಭಾರತದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.&lt;/p&gt;&lt;p data-block-key="3nj6h"&gt;ಮಂಗಳವಾರ ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 259 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 48 ರನ್‌ ಇರುವಾಗಲೇ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿ ನಿರಾಶೆ ಮೂಡಿದಸಿದರು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ನಾಯಕ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌, 103 ಎಸೆತಗಳಲ್ಲಿ 101 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.&lt;/p&gt;&lt;p data-block-key="94mgq"&gt;&lt;a href="/sports/cricket/eng-vs-ind-another-injury-scare-for-india-gurnoor-brar-taken-off-in-1st-odi-83752.html"&gt;&lt;b&gt;IND vs ENG: ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ? ಮೈದಾನದಿಂದ ಹೊರ ನಡೆದ ಗುರ್ನೂರ್‌ ಬ್ರಾರ್‌!&lt;/b&gt;&lt;/a&gt;&lt;/p&gt;&lt;h3 data-block-key="6kfju"&gt;&lt;b&gt;ಶುಭಮನ್‌ ಗಿಲ್‌ ಅರ್ಧಶತಕ&lt;/b&gt;&lt;/h3&gt;&lt;p data-block-key="1b4p9"&gt;ನಾಯಕನಾಗಿ ಜವಾಬ್ದಾರಿಯುತ ಬ್ಯಾಟ್‌ ಮಾಡಿದ ಶುಭಮನ್‌ ಗಿಲ್‌ 75 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 80 ರನ್‌ ಗಳಿಸಿ ಶತಕದಂಚಿನಲ್ಲಿದ್ದರು. ಆದರೆ, ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಬ್ಯಾಟಿಂಗ್‌ ಮುಂದುವರಿಸದೆ ರಿಟೈರ್‌ ಹರ್ಟ್‌ ಆದರು. ಈ ವೇಳೆ 53 ಎಸೆತಗಳಲ್ಲಿ 35 ರನ್‌ ಭರವಸೆ ಮೂಡಿಸಿದ್ದ ಉಪ ನಾಯಕ ಶ್ರೇಯಸ್‌, 27ನೇ ಓವರ್‌ನಲ್ಲಿ ರನ್‌ಔಟ್‌ ಆದರು. ಬಳಿಕ ಕೆಎಲ್‌ ರಾಹುಲ್‌ ಕೇವಲ ಒಂದು ರನ್‌ ಗಳಿಸಿ ಔಟ್‌ ಆದರು.&lt;/p&gt;&lt;p data-block-key="e92r1"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Job completely done in style ✅&lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt; cruise to a 6️⃣-wicket victory to take a 1-0 lead in the ODI series &lt;br&gt;&lt;br&gt;Scorecard ▶️ &lt;a href="https://t.co/2sg194tpxH"&gt;https://t.co/2sg194tpxH&lt;/a&gt; &lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt; | &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; &lt;a href="https://t.co/PnUDkcVLyr"&gt;pic.twitter.com/PnUDkcVLyr&lt;/a&gt;&lt;/p&gt;&amp;mdash; BCCI (@BCCI) &lt;a href="https://x.com/BCCI/status/2077088382480699608?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="4n1ul"&gt;&lt;/p&gt;&lt;h3 data-block-key="532vn"&gt;&lt;b&gt;ಭಾರತವನ್ನು ಗೆಲ್ಲಿಸಿದ ಅಕ್ಷರ್‌-ವಾಷಿಂಗ್ಟನ್‌ ಜೊತೆಯಾಟ&lt;/b&gt;&lt;/h3&gt;&lt;p data-block-key="8olns"&gt;ಐದನೇ ವಿಕೆಟ್‌ಗೆ ಜೊತೆಯಾದ ಸ್ಪಿನ್‌ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್‌ ಸುಂದರ್‌ ಹಾಗೂ ಅಕ್ಷರ್‌ ಪಟೇಲ್‌ 102 ರನ್‌ಗಳ ಅಜೇಯ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಮಯಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ ಅಕ್ಷರ್‌, 52ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 57 ರನ್‌ ಗಳಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡಿದ್ದ ವಾಷಿಂಗ್ಟನ್‌ ಸುಂದರ್‌ 63 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 52 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಭಾರತ 45.2 ಓವರ್‌ಗಳಿಗೆ 262 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು.&lt;/p&gt;&lt;p data-block-key="abcsf"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Shubman Gill picks up from where he left off last year at Edgbaston.&lt;br&gt;&lt;br&gt;Brings up a fine half-century off 51 deliveries.&lt;br&gt;&lt;br&gt;His 19th in ODIs &lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt; &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; | &lt;a href="https://x.com/ShubmanGill?ref_src=twsrc%5Etfw"&gt;@ShubmanGill&lt;/a&gt; &lt;a href="https://t.co/flUjvXWb5T"&gt;pic.twitter.com/flUjvXWb5T&lt;/a&gt;&lt;/p&gt;&amp;mdash; BCCI (@BCCI) &lt;a href="https://x.com/BCCI/status/2077057393372852711?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="74sji"&gt;&lt;/p&gt;&lt;h3 data-block-key="f2boj"&gt;&lt;b&gt;258 ರನ್‌ಗಳಿಗೆ ಇಂಗ್ಲೆಂಡ್‌ ಆಲ್‌ಔಟ್‌&lt;/b&gt;&lt;/h3&gt;&lt;p data-block-key="7s3ab"&gt;ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿದ್ದ ಇಂಗ್ಲೆಂಡ್‌ ತಂಡದ ದೊಡ್ಡ ಮೊತ್ತ ಕಲೆ ಹಾಕುವ ಯೋಜನೆಯನ್ನು ಭಾರತೀಯ ಬೌಲರ್‌ಗಳು ಭಗ್ನಗೊಳಿಸಿದರು. ಆದರೂ ಜೋ ರೂಟ್‌ ಹಾಗೂ ಲಿಯಾಮ್‌ ಡಾಸನ್‌ ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಆತಿಥೇಯ ಇಂಗ್ಲೆಂಡ್‌ ತಂಡ, 47.5 ಓವರ್‌ಗಳಿಗೆ 258 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಟೀಮ್‌ ಇಂಡಿಯಾಗೆ 259 ರನ್‌ಗಳ ಗುರಿಯನ್ನು ನೀಡಿತು.&lt;/p&gt;&lt;p data-block-key="bmuu5"&gt;&lt;a href="/sports/cricket/ind-vs-eng-jos-buttler-becomes-second-england-player-with-200-odi-caps-83720.html"&gt;&lt;b&gt;IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!&lt;/b&gt;&lt;/a&gt;&lt;/p&gt;&lt;p data-block-key="ba4u0"&gt;ಇಂಗ್ಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ಬೆನ್‌ ಡಕೆಟ್‌ ಹಾಗೂ ಜೇಕಬ್‌ ಬೆಥೆಲ್‌ ಅವರು ಮೊದಲನೇ ವಿಕೆಟ್‌ಗೆ 61 ರನ್‌ ಗಳಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟರು. ಇದೇ ಮೊದಲ ಬಾರಿ 50 ಓವರ್‌ಗಳ ಸ್ವರೂಪದಲ್ಲಿ ಇನಿಂಗ್ಸ್‌ ಆರಂಭಿಸಿದ ಬೆಥೆಲ್‌ (14) ಹಾಗೂ 45 ಎಸೆತಗಳಲ್ಲಿ 43 ರನ್‌ ಗಳಿಸಿ ಉತ್ತಮ ಆರಂಭ ಪಡೆದದ್ದ ಬೆನ್‌ ಡಕೆಟ್‌ ಅವರನ್ನು 13ನೇ ಓವರ್‌ನಲ್ಲಿ ಗುರ್ನೂರ್‌ ಬ್ರಾರ್‌ ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನರವು ನೀಡಿದರು. 14ನೇ ಓವರ್‌ನಲ್ಲಿ ನಾಯಕ ಹ್ಯಾರಿ ಬ್ರೂಕ್‌ ಅವರನ್ನು ಜಸ್‌ಪ್ರೀತ್‌ ಬುಮ್ರಾ ಔಟ್‌ ಮಾಡಿದರು. ಈ ವೇಳೆ ಆಂಗ್ಲರು 64 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡರು.&lt;/p&gt;&lt;p data-block-key="a3ksa"&gt;ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಜೋಸ್‌ ಬಟ್ಲರ್‌ ಹಾಗೂ ಸ್ಯಾಮ್‌ ಕರನ್‌ ಅವರನ್ನು ಔಟ್‌ ಮಾಡುವಲ್ಲಿ ಕನ್ನಡಿಗ ಪ್ರಸಿಧ್‌ ಕೃಷ್ಣ ಯಶಸ್ವಿಯಾದರು. 20 ರನ್‌ ಗಳಿಸಿ ಭರವಸೆ ಮೂಡಿಸಿದರೂ ವಿಲ್‌ ಜ್ಯಾಕ್ಸ್‌ ಅವರನ್ನು ಶಿವಂ ದುಬೇ ಔಟ್‌ ಮಾಡಿದರು.&lt;/p&gt;&lt;p data-block-key="cb7ii"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Innings Break!&lt;br&gt;&lt;br&gt;A fine display of bowling by &lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt; as England is all out for 258 runs in 47.5 overs.&lt;br&gt;&lt;br&gt;Scorecard - &lt;a href="https://t.co/Hven15ywKn"&gt;https://t.co/Hven15ywKn&lt;/a&gt; &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; &lt;a href="https://t.co/OsiaHJXVVs"&gt;pic.twitter.com/OsiaHJXVVs&lt;/a&gt;&lt;/p&gt;&amp;mdash; BCCI (@BCCI) &lt;a href="https://x.com/BCCI/status/2077028338510475576?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="36r32"&gt;&lt;/p&gt;&lt;h3 data-block-key="93f72"&gt;&lt;b&gt;ಜೋ ರೂಟ್‌- ಲಿಯಾಮ್‌ ಡಾಸನ್‌ ಜುಗಲ್‌ಬಂದಿ&lt;/b&gt;&lt;/h3&gt;&lt;p data-block-key="cdoni"&gt;ಮೂರನೇ ಕ್ರಮಂಕದಲ್ಲಿ ಕ್ರೀಸ್‌ಗೆ ಬಂದ ಜೋ ರೂಟ್‌ ಒಂದು ತುದಿಯಲ್ಲಿ ಗಟ್ಟಿಯಾಗಿ ಆಡುತ್ತಿದ್ದರೂ ಮತ್ತೊಂದು ತುದಿಯಲ್ಲಿ ಯಾರೂ ಜಾಸ್ತಿ ಹೊತ್ತು ಸಾಥ್‌ ನೀಡಲಿಲ್ಲ. ಆದರೆ, ಅವರಿಗೆ 7ನೇ ವಿಕೆಟ್‌ಗೆ ಜೊತೆಯಾದ ಲಿಯಾಮ್‌ ಡಾಸನ್‌ ಅವರು 83 ಎಸೆತಗಳಲ್ಲಿ 68 ರನ್‌ಗಳನ್ನು ದಾಖಲಿಸಿದರು. ಈ ಇಬ್ಬರೂ 121 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು. ಕೊನೆಯವರೆಗೂ ಬ್ಯಾಟ್‌ ಮಾಡಿ ಅಜೇಯರಾಗಿ ಉಳಿದ ಜೋ ರೂಟ್‌, 76 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 76 ರನ್‌ಗಳಿಸಿದರು.&lt;/p&gt;&lt;p data-block-key="9pk0l"&gt;ಭಾರತ ತಂಡದ ಪರ ಅಕ್ಷರ್‌ ಪಟೇಲ್‌ 4 ವಿಕೆಟ್‌ ಪಡೆದರೆ, ಗುರ್ನೂರ್‌ ಬ್ರಾರ್‌ ಹಾಗೂ ಪ್ರಸಿಧ್‌ ಕೃಷ್ಣ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ</title><link>https://vishwavani.news/karnataka/dakshina-kannada/mbbs-student-ends-life-by-jumping-from-an-apartment-in-mangalore-83757.html</link><guid>https://vishwavani.news/karnataka/dakshina-kannada/mbbs-student-ends-life-by-jumping-from-an-apartment-in-mangalore-83757.html</guid><pubDate>Tue, 14 Jul 2026 17:51:17 +0000</pubDate><description>&lt;![CDATA[Mangaluru News: ಮಂಗಳೂರು ನಗರದ ಹೊರವಲಯದ ಸುರತ್ಕಲ್ ಬಳಿ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಕೆಳಗೆ ಜಿಗಿದು ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ದಕ್ಷಿಣ ಕನ್ನಡ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/suicide.original.jpg" class="attachment-large size-large wp-post-image" alt="ಮಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ozqi4"&gt;&lt;b&gt;ಮಂಗಳೂರು:&lt;/b&gt; ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ಸುರತ್ಕಲ್ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಮಹಾಲಕ್ಷ್ಮೀ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಸುರತ್ಕಲ್‌ನ ಮುಕ್ಕದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಳು.&lt;/p&gt;&lt;p data-block-key="e238l"&gt;ಮಹಾಲಕ್ಷ್ಮೀ ಮುಕ್ಕದ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ತನ್ನ ಸ್ನೇಹಿತೆಯ ಜೊತೆ ವಾಸವಾಗಿದ್ದಳು. ಇಂದು ಮುಂಜಾನೆ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಕೆಳಗೆ ಜಿಗಿದು ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮಹಡಿಯಿಂದ ಹಾರಿದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.&lt;/p&gt;&lt;p data-block-key="6denm"&gt;ವಿದ್ಯಾರ್ಥಿನಿ ಮಹಾಲಕ್ಷ್ಮೀ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="upzm0"&gt;&lt;b&gt;ಡಿವೈಡರ್‌ಗೆ ಖಾಸಗಿ ಬಸ್ ಡಿಕ್ಕಿ; ಚಾಲಕ, ಓರ್ವ ಪ್ರಯಾಣಿಕ ಸಾವು&lt;/b&gt;&lt;/p&gt;&lt;p data-block-key="4jhm2"&gt;&lt;b&gt;ಚಿತ್ರದುರ್ಗ:&lt;/b&gt; ಡಿವೈಡರ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p data-block-key="c7igm"&gt;&lt;/p&gt;&lt;p data-block-key="9u8hd"&gt;ಘಟನೆಯಲ್ಲಿ ಖಾಸಗಿ ಬಸ್ ಚಾಲಕ ಮಹ್ಮದ್ ಹಾಗೂ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ</title><link>https://vishwavani.news/byline-stories/flood-threat-along-the-krishna-riverbanks-83756.html</link><guid>https://vishwavani.news/byline-stories/flood-threat-along-the-krishna-riverbanks-83756.html</guid><pubDate>Tue, 14 Jul 2026 17:35:28 +0000</pubDate><description>&lt;![CDATA[ಪ್ರತಿ ವರ್ಷ ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದ ಕಹಿ ಅನುಭವ ದಿಂದ ಎಚ್ಚೆತ್ತುಕೊಂಡಿರುವ ಕೃಷ್ಣಾ ತೀರದ ರೈತರು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಮ್ಮ ನೀರಾವರಿ ಪಂಪ್‌ಸೆಟ್‌ಗಳು ಹಾಗೂ ವಿದ್ಯುತ್ ಮೋಟಾರ್‌ ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬಾಗಲಕೋಟೆ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಬೈಲೈನ್‌ ಸ್ಟೋರೀಸ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Screenshot_7_ok1.original.jpg" class="attachment-large size-large wp-post-image" alt="ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="5kh6m"&gt;&lt;b&gt;ಹನಮಂತ ಆರ್. ಭೂಷಣ್ಣವರ&lt;/b&gt;&lt;/p&gt;&lt;p data-block-key="frp9v"&gt;&lt;b&gt;ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಆತಂಕ&lt;/b&gt;&lt;/p&gt;&lt;p data-block-key="9a0e"&gt;&lt;b&gt;ಪಂಪ್‌ಸೆಟ್ ಸ್ಥಳಾಂತರಕ್ಕೆ ರೈತರ ಧಾವಂತ&lt;/b&gt;&lt;/p&gt;&lt;p data-block-key="9ce3p"&gt;&lt;b&gt;ಜಮಖಂಡಿ:&lt;/b&gt; ಮಹಾರಾಷ್ಟ್ರದ ಕೋಯ್ನಾ, ರಾಧಾ ನಗರಿ ಹಾಗೂ ವಾರಣಾ ಜಲಾಶಯಗಳ ಜಲಾ ನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪನದಿಗಳಾದ ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಒಳಹರಿವು ತೀವ್ರಗೊಂಡಿದ್ದು, ನದಿಪಾತ್ರದ ತಗ್ಗು ಪ್ರದೇಶದ ಕೃಷಿ ಭೂಮಿಗಳಿಗೆ ನೀರು ನುಗ್ಗಲು ಆರಂಭಿಸಿದೆ.&lt;/p&gt;&lt;p data-block-key="as0ba"&gt;ಪ್ರತಿ ವರ್ಷ ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದ ಕಹಿ ಅನುಭವ ದಿಂದ ಎಚ್ಚೆತ್ತುಕೊಂಡಿರುವ ಕೃಷ್ಣಾ ತೀರದ ರೈತರು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಮ್ಮ ನೀರಾವರಿ ಪಂಪ್‌ಸೆಟ್‌ಗಳು ಹಾಗೂ ವಿದ್ಯುತ್ ಮೋಟಾರ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.&lt;/p&gt;&lt;p data-block-key="94g3r"&gt;ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ಗಡಿ ಭಾಗದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾ ನದಿಯ ಅಂಚಿನಲ್ಲಿ ರುವ ನೂರಾರು ಪಂಪ್‌ಸೆಟ್ ಗಳನ್ನು ತರಾತುರಿಯಲ್ಲಿ ತೆರವುಗೊಳಿಸುತ್ತಿರುವ ದೃಶ್ಯಗಳು ನದಿ ತೀರದುದ್ದಕ್ಕೂ ಕಂಡುಬರುತ್ತಿವೆ.&lt;/p&gt;&lt;p data-block-key="ph0h"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/byline-stories/congress-fears-attack-in-baghalkot-74100.html"&gt;Bagalkot Byelection: ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ&lt;/a&gt;&lt;/p&gt;&lt;p data-block-key="9vrf6"&gt;ಮಳೆಯ ಆರ್ಭಟ ಇದೇ ರೀತಿ ಮುಂದುವರಿದರೆ ಕೃಷ್ಣಾ ತೀರದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಳಹಂತದ ಸೇತುವೆಗಳು ಜಲಾವೃತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೂರು ದಿನಗಳ ಮಳೆಗೆ ನದಿಗೆ ಮರುಜೀವ: ಕೇವಲ ಎರಡು-ಮೂರು ದಿನಗಳ ಅವಧಿಯಲ್ಲಿ ಜಲಾನಯನ ಪ್ರದೇಶ ದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ನದಿಯು ಮರುಜೀವ ಪಡೆದಿದೆ. ಒಣಗಿದ್ದ ನದಿಪಾತ್ರ ಈಗ ನೀರಿನಿಂದ ತುಂಬಿ ಹರಿಯುತ್ತಿದ್ದು, ಈ ದೃಶ್ಯ ರೈತರಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ ಎಂದು ರೈತ ಮುತ್ತಪ್ಪ ಕುಂಬಾರ ಹರ್ಷ ವ್ಯಕ್ತಪಡಿಸಿದರು.&lt;/p&gt;&lt;p data-block-key="3lf8v"&gt;&lt;b&gt;ಮೂರು ತಿಂಗಳು ಬತ್ತಿದ್ದ ಕೃಷ್ಣೆ&lt;/b&gt;&lt;/p&gt;&lt;p data-block-key="9uf2f"&gt;ಕಳೆದ ಮೂರು ತಿಂಗಳಿಂದ ಕೃಷ್ಣಾ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿತ್ತು. ನದಿಪಾತ್ರದಲ್ಲಿ ನೀರಿಗಿಂತ ಮರಳು ಮತ್ತು ಕಲ್ಲುಗಳೇ ಹೆಚ್ಚಾಗಿ ಕಾಣಿಸುತ್ತಿದ್ದವು. ಮಳೆ ಕೊರತೆಯಿಂದ ಬಿತ್ತನೆ ಕಾರ್ಯವೂ ನಡೆಯದೆ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಜಮೀನುಗಳು ಬಿರುಕು ಬಿಟ್ಟಿದ್ದರೆ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ಕೊರತೆಯ ಭೀತಿಯೂ ಎದುರಾಗಿತ್ತು.&lt;/p&gt;&lt;p data-block-key="4ae9j"&gt;&lt;b&gt;ರೈತರ ಬದುಕಿಗೆ ಹೊಸ ಚೈತನ್ಯ&lt;/b&gt;&lt;/p&gt;&lt;p data-block-key="ammnv"&gt;ಪ್ರಕೃತಿಯ ಈ ಬದಲಾವಣೆ ರೈತರಿಗೆ ಕೇವಲ ನೀರನ್ನು ಮಾತ್ರವಲ್ಲ, ಬದುಕಿಗೆ ಹೊಸ ಚೈತನ್ಯ ವನ್ನೂ ನೀಡಿದೆ. ಕೃಷ್ಣಾ ನದಿ ಹೀಗೆ ತುಂಬಿ ಹರಿಯುತ್ತಿದ್ದು, ಈ ವರ್ಷ ಕೃಷಿಕರಿಗೆ ಸಮೃದ್ಧಿ ತರಲಿ ಎಂದು ತುಬಚಿ ಶಿವಲಿಂಗೇಶ್ವರ ಮಠ ಹಾಗೂ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿಗಳು ಆಶಿಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಹುಲಿಕಲ್ ಘಾಟ್‌ನಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್‌ ಜಾರಕಿಹೊಳಿ</title><link>https://vishwavani.news/politics/minister-satish-jarkiholi-inspects-the-ongoing-works-at-hulikal-ghat-83749.html</link><guid>https://vishwavani.news/politics/minister-satish-jarkiholi-inspects-the-ongoing-works-at-hulikal-ghat-83749.html</guid><pubDate>Tue, 14 Jul 2026 17:27:44 +0000</pubDate><description>&lt;![CDATA[Satish Jarkiholi: ಹುಲಿಕಲ್ ಘಾಟ್ ಪ್ರದೇಶಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ಅಲ್ಲಿ ಪ್ರಗತಿಯಲ್ಲಿರುವ ರಿಟೇನಿಂಗ್ ವಾಲ್ (ರಕ್ಷಣಾ ಗೋಡೆ) ನಿರ್ಮಾಣ ಹಾಗೂ ಇತರೆ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ಪರಿಶೀಲನೆ ನಡೆಸಿದರು.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಶಿವಮೊಗ್ಗ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Satish_Jarkiholi_xT3sz2V.original.jpg" class="attachment-large size-large wp-post-image" alt="ಹುಲಿಕಲ್ ಘಾಟ್‌ನಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್‌ ಜಾರಕಿಹೊಳಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="mbbpt"&gt;&lt;b&gt;ಶಿವಮೊಗ್ಗ, ಜು, 14:&lt;/b&gt; ಹುಲಿಕಲ್ ಘಾಟ್‌ನಲ್ಲಿ 5.35 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇವುಗಳನ್ನು ತ್ವರಿತ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ‌ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ತಿಳಿಸಿದರು. ಹುಲಿಕಲ್ ಘಾಟ್ ಪ್ರದೇಶಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ಅಲ್ಲಿ ಪ್ರಗತಿಯಲ್ಲಿರುವ ರಿಟೇನಿಂಗ್ ವಾಲ್ (ರಕ್ಷಣಾ ಗೋಡೆ) ನಿರ್ಮಾಣ ಹಾಗೂ ಇತರೆ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ಪರಿಶೀಲನೆ ನಡೆಸಿ, ಮಾತನಾಡಿದರು.&lt;/p&gt;&lt;p data-block-key="eovc5"&gt;ಘಾಟಿಯಲ್ಲಿ ಭಾರೀ ಪ್ರಮಾಣದ ವಾಹನ ಬಿಟ್ಟು ಬೇರೆ ಲಘು ವಾಹನಗಳ ಪ್ರಯಾಣಕ್ಕೆ ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ಇಲಾಖೆಯಡಿ ಸ್ಥಗಿತಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚಿಸಿದ್ದೇನೆ. ಶಿವಮೊಗ್ಗದ ತುಂಗಾ ಸೇತುವೆ ನಿರ್ಮಾಣಕ್ಕೆ ರೂ. 50 ಕೋಟಿ ಮಂಜೂರಾಗಿದ್ದು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಸದರಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.&lt;/p&gt;&lt;p data-block-key="bsosj"&gt;ಮಳೆಗಾಲದ ಹಿನ್ನೆಲೆಯಲ್ಲಿ ಘಾಟ್ ಪ್ರದೇಶದಲ್ಲಿ ಭೂಕುಸಿತವಾಗದಂತೆ ತಡೆಯಲು ಮತ್ತು ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.&lt;/p&gt;&lt;p data-block-key="44h0"&gt;ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಅಲ್ಲಿದ್ದ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಘಾಟ್ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದರಿಂದ, ರಿಟೇನಿಂಗ್ ವಾಲ್ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು ಎಂದು ಸೂಚನೆ ನೀಡಿದರು.&lt;/p&gt;&lt;p data-block-key="f0rkf"&gt;ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಣಿಸುವಂತಹ ಸೂಚಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.&lt;/p&gt;&lt;p data-block-key="an1oe"&gt;ಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆ ನಮಗೆ ಅತ್ಯಂತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಮತ್ತು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಇದೇ ವೇಳೆ ಸಚಿವರು ಬಾಳೆಬರೆ ಫಾಲ್ಸ್‌ಗೆ ಭೇಟಿ ನೀಡಿ ವೀಕ್ಷಿಸಿದರು.&lt;/p&gt;&lt;h3 data-block-key="u7j6"&gt;&lt;b&gt;ಹೊಸನಗರ ಶಾಲೆಗೆ ಸಚಿವ ಸತೀಶ್ ಜಾರಕಿಹೂಳಿ ದಿಢೀರ್ ಭೇಟಿ&lt;/b&gt;&lt;/h3&gt;&lt;p data-block-key="b1ecc"&gt;ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಹೊಸನಗರ ಮಾರ್ಗದಲ್ಲಿ ಹುಲಿಕಲ್ ಘಾಟ್ ಕಾಮಗಾರಿ ವೀಕ್ಷಣೆಗೆ ಹೊರಡುತ್ತಿದ್ದ ವೇಳೆಯಲ್ಲಿ ಮಾರ್ಗಮಧ್ಯದಲ್ಲಿ ದಿಢೀರ್ ಶಾಲೆಗೆ ಭೇಟಿ ನೀಡಿದರು.&lt;/p&gt;&lt;p data-block-key="884ko"&gt;&lt;a href="/politics/establishment-of-the-countrys-first-government-sponsored-ai-university-in-bengaluru-says-cm-dk-shivakumar-83716.html"&gt;&lt;b&gt;AI University in Bengaluru: ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಘೋಷಣೆ&lt;/b&gt;&lt;/a&gt;&lt;/p&gt;&lt;p data-block-key="4kc2t"&gt;ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದರು. ಈ ವೇಳೆ ಮುಖ್ಯ ಶಿಕ್ಷಕರು ಶಾಲೆ ಮಕ್ಕಳ ಕ್ರೀಡಾ ಸಾಧನೆ ಬಗ್ಗೆ ವಿವರಿಸಿದಾಗ, ಸಚಿವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದಿಂದ ಬೃಹತ್ ಮಟ್ಟದಲ್ಲಿ ಭಾರತ್ ಜೋಡೋ ಕ್ರೀಡಾ ಕೂಟ ಆಯೋಜನೆ ಮಾಡಲಾಗುತ್ತಿದ್ದು, ಈ ಕ್ರೀಡಾಕೂಟದ ಸದುಪಯೋಗವನ್ನು ಕ್ರೀಡೆಯಲ್ಲಿ ಸಾಧನೆ ಮಾಡಿರುವ ನಿಮ್ಮ ಶಾಲೆಯ ಮಕ್ಕಳಿಗೆ ಪಡೆದುಕೊಳ್ಳುವಂತೆ ತಿಳಿಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishwavani Impact: ‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ: ಮಾಗಣಗೇರಿ ಗ್ರಾಮದ ಟ್ರಾನ್ಸ್ ಫಾರ್ಮರ್ ದುರಸ್ತಿ</title><link>https://vishwavani.news/vishwavani-varadi-parinama/gescom-acts-on-vishwavani-report-transformer-in-maganageri-village-repaired-83755.html</link><guid>https://vishwavani.news/vishwavani-varadi-parinama/gescom-acts-on-vishwavani-report-transformer-in-maganageri-village-repaired-83755.html</guid><pubDate>Tue, 14 Jul 2026 17:23:46 +0000</pubDate><description>&lt;![CDATA[ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಕಲಬುರಗಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ವಿಶ್ವವಾಣಿ ವರದಿ ಪರಿಣಾಮ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Screenshot_6_ok1.original.jpg" class="attachment-large size-large wp-post-image" alt="Vishwavani Impact: ‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ: ಮಾಗಣಗೇರಿ ಗ್ರಾಮದ ಟ್ರಾನ್ಸ್ ಫಾರ್ಮರ್ ದುರಸ್ತಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="jzz2j"&gt;&lt;b&gt;ಯಡ್ರಾಮಿ:&lt;/b&gt; ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕೆಟ್ಟುಹೋಗಿದ್ದ ಮುಖ್ಯ ಟ್ರಾನ್ಸ್ ಫಾರ್ಮರ್(ಟಿಸಿ) ಅನ್ನು ಜೆಸ್ಕಾಂ ಅಧಿಕಾರಿಗಳು ಸೋಮವಾರ ಯಶಸ್ವಿಯಾಗಿ ದುರಸ್ತಿಗೊಳಿಸಿ, ವಿದ್ಯುತ್ ಸಂಪರ್ಕ ಪುನಸ್ಥಾಪಿಸಿದ್ದಾರೆ. ಈ ಮೂಲಕ ‘ವಿಶ್ವವಾಣಿ’ ಪತ್ರಿಕೆಯ ವರದಿ ಭಾರಿ ಇಂಪ್ಯಾಕ್ಟ್ ಸೃಷ್ಟಿಸಿದೆ.&lt;/p&gt;&lt;p data-block-key="djp97"&gt;ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.&lt;/p&gt;&lt;p data-block-key="1t8bd"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/vishwavani-varadi-parinama/pdo-suspension-action-taken-for-water-supply-82191.html"&gt;Vishwavani Impact: ಪಿಡಿಒ ಅಮಾನತು: ನೀರು ಪೂರೈಕೆಗೆ ಕ್ರಮ&lt;/a&gt;&lt;/p&gt;&lt;p data-block-key="2217l"&gt;ಕ್ಷಣಮಾತ್ರದಲ್ಲಿ ಎಚ್ಚೆತ್ತ ಅಧಿಕಾರಿಗಳು: ‘ವಿಶ್ವವಾಣಿ’ ವರದಿಯ ಗಂಭೀರತೆಯನ್ನು ಅರಿತ ಜೆಸ್ಕಾಂ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Screenshot_5 ok" class="img-fluid" height="720" src="https://cdn.vishwavani.news/media/images/Screenshot_5_ok_gN7Kcl7.max-1280x720.format-webp.webp" width="837"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="9i83e"&gt;ಮಂಗಳವಾರ ಬೆಳಗ್ಗೆಯೇ ಸ್ಥಳಕ್ಕೆ ತಾಂತ್ರಿಕ ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ರವಾನಿಸಿ, ಕೆಟ್ಟು ನಿಂತಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಸಮರೋಪಾದಿಯಲ್ಲಿ ರಿಪೇರಿ ಮಾಡಿಸಿದರು. ಜೆಸ್ಕಾಂ ಅಧಿಕಾರಿಗಳ ಈ ಕ್ಷಿಪ್ರ ಕ್ರಮದಿಂದಾಗಿ ಹಲವು ದಿನಗಳಿಂದ ಕತ್ತಲಲ್ಲಿದ್ದ ಮಾಗಣಗೇರಿ ಗ್ರಾಮಕ್ಕೆ ಕೊನೆಗೂ ಬೆಳಕು ಬಂದಂತಾಗಿದ್ದು, ಕುಡಿಯುವ ನೀರು ಹಾಗೂ ಬೆಳೆಗಳಿಗೆ ಜೀವದಾನ ಸಿಕ್ಕಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಎತ್ತಿ ಹಿಡಿದು ತಮಗೆ ನ್ಯಾಯ ಕೊಡಿಸಿದ ‘ವಿಶ್ವವಾಣಿ’ ಪತ್ರಿಕೆಗೆ ಮಾಗಣಗೇರಿ ಗ್ರಾಮಸ್ಥರು ಹಾಗೂ ರೈತರು ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʼʼಇಂಗ್ಲಿಷ್ ವರ್ಣಮಾಲೆ ಗೊತ್ತೆ?ʼʼ: ಸಾರ್ವಜನಿಕ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಕೇರಳಂ ಮಾಜಿ ಸಚಿವ ಜಲೀಲ್; ಪ್ರಕರಣ ದಾಖಲು</title><link>https://vishwavani.news/national/kt-jaleel-child-rights-panel-student-humiliation-kerala-83753.html</link><guid>https://vishwavani.news/national/kt-jaleel-child-rights-panel-student-humiliation-kerala-83753.html</guid><pubDate>Tue, 14 Jul 2026 17:18:22 +0000</pubDate><description>&lt;![CDATA[KT Jaleel: ಪಾಲಕ್ಕಾಡಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಆರೋಪದಡಿ ಕೇರಳಂನ ಮಾಜಿ ಸಚಿವ ಕೆ.ಟಿ. ಜಲೀಲ್ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಪ್ರಕರಣ ದಾಖಲಿಸಿದೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಜಲೀಲ್, ತಾವು ಶಿಕ್ಷಕರಂತೆ ಮಾತನಾಡಿದ್ದು, ಅವಮಾನಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಜತೆಗೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಹೇಳಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000588888.original.jpg" class="attachment-large size-large wp-post-image" alt="ʼʼಇಂಗ್ಲಿಷ್ ವರ್ಣಮಾಲೆ ಗೊತ್ತೆ?ʼʼ: ಸಾರ್ವಜನಿಕ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಕೇರಳಂ ಮಾಜಿ ಸಚಿವ ಜಲೀಲ್; ಪ್ರಕರಣ ದಾಖಲು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="8t7x2"&gt;&lt;b&gt;ತಿರುವನಂತಪುರಂ, ಜು. 14: &lt;/b&gt;ಕೇರಳಂನ ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಸಿಪಿಐ(ಎಂ) ನಾಯಕ ಕೆ.ಟಿ. ಜಲೀಲ್ (KT Jaleel) ವಿರುದ್ಧ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ+ ಪಡೆದ ವಿದ್ಯಾರ್ಥಿಗಳಿಗೆ ಪಾಲಕ್ಕಾಡಿನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜಲೀಲ್ ಮಾತನಾಡುವ ವೇಳೆ, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ "ನಿಮಗೆ ಇಂಗ್ಲಿಷ್ ವರ್ಣಮಾಲೆ ಗೊತ್ತೇ?" ಎಂದು ಪ್ರಶ್ನಿಸಿದ್ದರು. ಅಲ್ಲದೆ, ಹಿಂದಿಯಲ್ಲಿ ವಿಳಾಸ ಬರೆಯುವಾಗ ತಪ್ಪು ಮಾಡಿದ ವಿದ್ಯಾರ್ಥಿಯನ್ನು ವೇದಿಕೆಗೆ ಕರೆದು ಕಿವಿ ಹಿಂಡಿರುವ ದೃಶ್ಯಗಳು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗಿದ್ದವು. ಈ ದೃಶ್ಯಾವಳಿಗಳ ಆಧಾರದ ಮೇಲೆ ಮಕ್ಕಳ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.&lt;/p&gt;&lt;p data-block-key="col2s"&gt;ಈ ಕುರಿತು ಪ್ರತಿಕ್ರಿಯಿಸಿದ ಜಲೀಲ್, ತಾವು ರಾಜಕೀಯಕ್ಕೆ ಸೇರುವ ಮೊದಲು ಶಿಕ್ಷಕರಾಗಿದ್ದೆ ಮತ್ತು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ರೀತಿಯಲ್ಲಿಯೇ ಮಾತನಾಡಿದ್ದೇನೆ ಎಂದು ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. &lt;/p&gt;&lt;h3 data-block-key="c76em"&gt;&lt;b&gt;ಮಾಜಿ ಸಚಿವನಿಂದ ವಿದ್ಯಾರ್ಥಿಗಳಿಗೆ ಅವಮಾನ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="ml" dir="ltr"&gt;അനുമോദന ചടങ്ങിനിടെ വിദ്യാർത്ഥികളെ സ്റ്റേജിൽ വിളിച്ചു വരുത്തി അപമാനിച്ച മുൻ മന്ത്രി കെ ടി ജലീൽ പരസ്യമായി മാപ്പു പറയണം&lt;br&gt;: എബിവിപി&lt;a href="https://x.com/hashtag/ABVPKeralam?src=hash&amp;amp;ref_src=twsrc%5Etfw"&gt;#ABVPKeralam&lt;/a&gt; &lt;a href="https://t.co/eIYOsVzRWq"&gt;pic.twitter.com/eIYOsVzRWq&lt;/a&gt;&lt;/p&gt;&amp;mdash; ABVP KERALAM (@KeralaABVP) &lt;a href="https://x.com/KeralaABVP/status/2076686457054585018?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2femk"&gt;&lt;/p&gt;&lt;p data-block-key="d1eah"&gt;ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪಠ್ಯೇತರ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅದನ್ನೇ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೆ ಎಂದು ಹೇಳಿದ್ದಾರೆ.&lt;br/&gt;ವಿದ್ಯಾರ್ಥಿಯ ಕಿವಿ ಹಿಡಿದಿದ್ದು ಕೇವಲ ತಮಾಷೆಗಾಗಿ ಮಾತ್ರ, ಅವನಿಗೆ ಯಾವುದೇ ನೋವುಂಟು ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.&lt;/p&gt;&lt;p data-block-key="elktb"&gt;&lt;a href="/viral/employee-responds-angrily-to-manager-asking-her-to-log-in-on-his-day-leave-83635.html"&gt;&lt;b&gt;ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ&lt;/b&gt;&lt;/a&gt;&lt;/p&gt;&lt;p data-block-key="cg1aa"&gt;ʼʼವಿಡಿಯೊದಲ್ಲಿಯೇ ವಿದ್ಯಾರ್ಥಿ ನಗುತ್ತಿರುವುದು ಕಾಣುತ್ತದೆ. ಆದರೂ ನನ್ನ ಮಾತು ಅಥವಾ ವರ್ತನೆಯಿಂದ ಯಾರಿಗಾದರೂ ಅವಮಾನವಾಗಿದ್ದರೆ ಕ್ಷಮೆ ಕೇಳಲು ಸಿದ್ಧʼʼ ಎಂದು ಜಲೀಲ್ ತಿಳಿಸಿದ್ದಾರೆ.&lt;/p&gt;&lt;p data-block-key="df66d"&gt;ಇನ್ನೊಂದೆಡೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ವಿದ್ಯಾರ್ಥಿ ಸಂಘಟನೆ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (MSF) ಜಲೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಸಾರ್ವಜನಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳನ್ನು ಮುಜುಗರಕ್ಕೀಡು ಮಾಡುವುದು ಮತ್ತು ಅವಮಾನಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಟೀಕಿಸಿದೆ.&lt;/p&gt;&lt;p data-block-key="1lbpq"&gt;ಪ್ರಸ್ತುತ ಪ್ರಕರಣದ ಕುರಿತು ಮಕ್ಕಳ ಹಕ್ಕುಗಳ ಆಯೋಗ ತನಿಖೆ ನಡೆಸುತ್ತಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಕೇರಳಂನಲ್ಲಿ ಶಿಕ್ಷಣ, ಮಕ್ಕಳ ಹಕ್ಕುಗಳು ಹಾಗೂ ಸಾರ್ವಜನಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳುವ ರೀತಿಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bidadi Township: ನಾನು ಮಂಡಲಹಳ್ಳಿಗೆ ಹೋಗುತ್ತೇನೆ, ತಾಕತ್ತಿದ್ರೆ ನನ್ನ ವಿರುದ್ಧ ಎಫ್ಐಆರ್ ಮಾಡಿ: ಎಚ್‌.ಡಿ. ಕುಮಾರಸ್ವಾಮಿ ಸವಾಲು</title><link>https://vishwavani.news/karnataka/ramanagara/union-minister-hd-kumaraswamy-respond-about-bidadi-township-issue-83744.html</link><guid>https://vishwavani.news/karnataka/ramanagara/union-minister-hd-kumaraswamy-respond-about-bidadi-township-issue-83744.html</guid><pubDate>Tue, 14 Jul 2026 17:15:33 +0000</pubDate><description>&lt;![CDATA[HD Kumaraswamy: ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸರ್ವೆಗೆ ಬಂದಿದ್ದಾರೆ. ಮುಖ್ಯಮಂತ್ರಿಗೆ ಇಷ್ಟೊಂದು ಹಠ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್‌ಗಳನ್ನು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ ಎಂದು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ರಾಮನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/HD_Kumaraswamy_and_DK_Shivakumar.original.jpg" class="attachment-large size-large wp-post-image" alt="Bidadi Township: ನಾನು ಮಂಡಲಹಳ್ಳಿಗೆ ಹೋಗುತ್ತೇನೆ, ತಾಕತ್ತಿದ್ರೆ ನನ್ನ ವಿರುದ್ಧ ಎಫ್ಐಆರ್ ಮಾಡಿ: ಎಚ್‌.ಡಿ. ಕುಮಾರಸ್ವಾಮಿ ಸವಾಲು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="j1obu"&gt;&lt;b&gt;ನವದೆಹಲಿ, ಜು.14:&lt;/b&gt; ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ಮಾಡಿರುವ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ &lt;a href="/karnataka/bengaluru-urban/mango-prices-drop-hd-kumaraswamy-writes-to-the-union-agriculture-minister-to-help-farmers-81321.html"&gt;&lt;b&gt;ಎಚ್‍.ಡಿ. ಕುಮಾರಸ್ವಾಮಿ&lt;/b&gt;&lt;/a&gt; (HD Kumaraswamy), ನಾಡಿದ್ದು ಆ ಗ್ರಾಮಕ್ಕೆ ನಾನು ಹೋಗುತ್ತೇನೆ, ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ಮಾಡಿ ಎಂದು ಸವಾಲು ಹಾಕಿದ್ದಾರೆ. ನವದೆಹಲಿಯಲ್ಲಿ ಸೋಮವಾರ ತುರ್ತು ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ಅವರು, ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇಲೆ ವಿನಾಕಾರಣ ರೈತರ ಮೇಲೆ ಎಫ್ಐಆರ್ ಹಾಕಿದ್ದಾರೆ. ಅಕ್ರಮವಾಗಿ ಜಮೀನಿಗೆ ಬಂದು ಸರ್ವೆ ಮಾಡಲು ಬಂದರೆ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.&lt;/p&gt;&lt;p data-block-key="8pklt"&gt;ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸರ್ವೆಗೆ ಬಂದಿದ್ದಾರೆ. ಮುಖ್ಯಮಂತ್ರಿಗೆ ಇಷ್ಟೊಂದು ಹಠ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್‌ಗಳನ್ನು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ. ನಾನೇ ಚಿತಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಪಾಪ.. ನನ್ನ ಹೆಸರು ಏಕೆ ಬಿಟ್ಟರೋ ಗೊತ್ತಿಲ್ಲ. ನನ್ನನ್ನೇ ಎ1 ಎಂದು ಹಾಕಿಕೊಳ್ಳಿ. ನಿಮಗೆ ಧೈರ್ಯ ಇದ್ದರೆ ಮಾಡಿ ಎಂದು ಅವರು ಸವಾಲು ಹಾಕಿದರು.&lt;/p&gt;&lt;p data-block-key="c8u68"&gt;ನಿಮ್ಮ ಭಂಡತನವನ್ನು ಮತ್ತು ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರೈತರಿಂದ ಇಷ್ಟೆಲ್ಲಾ ತೀವ್ರ ವಿರೋಧ ಇದ್ದರೂ ಕೂಡ ಅತ್ಯಂತ ಫಲವತ್ತಾದ ಭೂಮಿಯನ್ನು ಕೊಳ್ಳೆ ಹೊಡೆಯಲು ಸರ್ಕಾರ ಹೊರಟಿರುವುದು ಏಕೆ ಎಂಬುದು ಕೂಡ ಜನರಿಗೆ ಅರ್ಥವಾಗುತ್ತಿದೆ ಎಂದು ಕಿಡಿಕಾರಿದರು.&lt;/p&gt;&lt;p data-block-key="b0let"&gt;ಊರಿನಲ್ಲಿ ಇಲ್ಲದವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ದೆಹಲಿಗೆ ಬಂದಿದ್ದವರ ಮೇಲೆಯೂ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ. ಇಂತಹ ಬೆದರಿಕೆ ಮತ್ತು ಕೇಸುಗಳಿಗೆ ಹೆದುರುವ ಪ್ರಶ್ನೆ ಇಲ್ಲ. ರೈತರೇ ಶಾಂತಿಯುವಾಗಿ ನಿಮ್ಮ ಪ್ರತಿಭಟನೆ ಮುಂದುವರೆಸಿ. ನ್ಯಾಯಾಲಯದ ಮುಂದೆ ಹೋರಾಟ ಮಾಡೋಣ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಸಚಿವರು ರೈತರನ್ನು ಉದ್ದೇಶಿಸಿ ಹೇಳಿದರು.&lt;/p&gt;&lt;p data-block-key="d35vb"&gt;ಮುರಳಿ ಎನ್ನುವ ಇನ್ಸ್‌ಪೆಕ್ಟರ್ ಒಬ್ಬರ ಕಡೆಯಿಂದ ದೂರು ಪಡೆದುಕೊಂಡಿದ್ದಾರೆ. ಇವರ ದೂರಿನ ಮೇಲೆ ಹಾಕಿರುವ ಎಫ್ಐಆರ್‌ನಲ್ಲಿ ಯಾರು ಹೆಸರನ್ನು ಉಲ್ಲೇಖ ಮಾಡಿಲ್ಲ. ಇದರಲ್ಲಿ ಎ1 ಆರೋಪಿ ಸಾಮಾನ್ಯ ವ್ಯಕ್ತಿ ಎಂದು ಬರೆಯಲಾಗಿದೆ. ಇನ್ನೊಬ್ಬ ಚಾಲಕ ವೃತ್ತಿ ಮಾಡುವ ಮೊಹಮ್ಮದ್ ಸಮೀರ್ ಎನ್ನುವವನ ಕಡೆಯಿಂದ ಒಂದು ದೂರು ಕೊಡಿಸಿದ್ದಾರೆ. ಈ ವ್ಯಕ್ತಿ ವಾಸ ಇರುವುದು ರಾಮನಗರದಲ್ಲಿ. ಮಂಡಹಳ್ಳಿಗೂ ಈತನಿಗೂ ಯಾವುದೇ ಸಂಬಂಧ ಇಲ್ಲ. ಈತ 11 ಜನರ ಮೇಲೆ ದೂರು ನೀಡಿದ್ದಾನೆ. ಈತನ ದೂರನ್ನು ನೋಡಿದರೆ ದುರುದ್ದೇಶಪೂರ್ವಕವಾಗಿ ಪೂರ್ವ ನಿಯೋಜಿತವಾಗಿ ಯಾರ ಯಾರ ಮೇಲೆ ದೂರು ಕೊಡಬೇಕು ಎಂದು ಮಾಡಿ ಕಂಪ್ಲೇಂಟ್ ಬರೆಸಿದ ಹಾಗಿದೆ ಎಂದು ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. &lt;/p&gt;&lt;p data-block-key="6ndqn"&gt;ದೂರು ಕೊಟ್ಟ ಇನ್ಸ್‌ಪೆಕ್ಟರ್ ದಿನವೂ ಅಲ್ಲಿರುವ ವ್ಯಕ್ತಿ. 500 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ದಿನವೂ ನೋಡುತ್ತಿರುವ ಅಧಿಕಾರಿ. ಕೊನೆ ಪಕ್ಷ ಈ ಅಧಿಕಾರಿ ನೂರು ದಿನವಾದರೂ ಅಲ್ಲಿ ಕರ್ತವ್ಯ ನಿರ್ವಹಿಸಿರಬಹುದು. ರಾಮನಗರದಲ್ಲಿರುವ ಈ ಚಾಲಕ ನೆನ್ನೆ ಅಷ್ಟೇ ಇಲ್ಲಿಗೆ ಬಂದವನು, ಈತನ ಕೈಯಲ್ಲಿ 11 ಜನರ ವಿರುದ್ಧ ಹೆಸರುಗಳು, ವಿಳಾಸಗಳ ಸಮೇತ ದೂರು ಬರೆಸಿಕೊಂಡಿದ್ದಾರೆ. ಆ 11 ಜನರ ಹೆಸರುಗಳು ಈತನಿಗೆ ಹೇಗೆ ಗೊತ್ತು? ಅದರಲ್ಲೂ ಮಹಿಳೆಯರ ಹೆಸರುಗಳು ಮತ್ತು ಅವರ ವಿಳಾಸಗಳು ಅವನಿಗೆ ಹೇಗೆ ಗೊತ್ತು? ನನಗೆ ಬಂದ ಮಾಹಿತಿ ಪ್ರಕಾರ ಈ ಚಾಲಕನ ದೂರಿನ ಆಧಾರದ ಆಗಿರುವ ಎಫ್ಐಆರ್‌ನಲ್ಲಿ ಎ1 ಆರೋಪಿಯಾಗಿರುವ ಪ್ರಕಾಶ ಎನ್ನುವ ವ್ಯಕ್ತಿ 500 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ. ಮೊದಲಿಂದಲೂ ಈ ಯೋಜನೆಯನ್ನು ವಿರೋಧಿಸಿಕೊಂಡು ಬಂದಿದ್ದ. ಘಟನೆ ನಡೆದ ಸಂದರ್ಭದಲ್ಲಿ ಈತ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತಿದ್ದ. ಹೀಗಿದ್ದ ಮೇಲೆ ಯಾವ ಆಧಾರದ ಮೇಲೆ ಈತನನ್ನು ಎ1 ಮಾಡಿದರು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.&lt;/p&gt;&lt;p data-block-key="3eh59"&gt;ಕಾರು ಓಡಿಸಿಕೊಂಡು ಬಂದಿದ್ದ ಈ ಚಾಲಕನಿಗೆ ರೈತರು ಜೀವ ಬೆದರಿಕೆ ಏಕೆ ಒಡ್ಡುತ್ತಾರೆ? ಅವನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಅಗತ್ಯ ಜನರಿಗೆ ಏಕೆ ಇರುತ್ತದೆ? ಪೊಲೀಸರ ಪರವಾಗಿ ಮತ್ತು ಸರ್ವೆಯರಗಳ ಪರವಾಗಿ ದೂರು ಕೊಡಲಿಕ್ಕೆ ಇವನು ಯಾರು? ಇವನಿಗೆ ತೊಂದರೆಯಾಗಿದ್ದರೆ ಅಷ್ಟೇ ಇವನು ದೂರು ಕೊಡಲು ಅವಕಾಶ ಇರುತ್ತದೆ. ಅಧಿಕಾರಿಗಳ ಉಸಾಬರಿ ಇವನಿಗೆ ಯಾಕೆ? ಅಗತ್ಯವಿದ್ದರೆ ಅಧಿಕಾರಿಗಳೇ ದೂರು ಕೊಡುತ್ತಾರೆ, ಅಲ್ಲವೇ? ವಿಚಿತ್ರವೆಂದರೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಕಾರು ಚಾಲಕನ ದೂರುಗಳ ಒಕ್ಕಣಿ ಹೆಚ್ಚು ಕಮ್ಮಿ ಒಂದೇ ರೀತಿಯಲ್ಲಿದೆ. ಕಾಪಿ ಪೇಸ್ಟ್ ಮಾಡಿದ್ದಾರೆ. ಅಲ್ಲಿಗೆ ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ರೈತರನ್ನು ಸಂಕಷ್ಟಕ್ಕೆ ದೂಡಬೇಕು ಎನ್ನುವ ಷಡ್ಯಂತರವನ್ನು ಸರ್ಕಾರವೇ ನಡೆಸಿದೆ ಎಂದಾಯಿತು ಎಂದು ಕೇಂದ್ರ ಸಚಿವರು ದೂರಿದರು.&lt;/p&gt;&lt;p data-block-key="94jnn"&gt;ದೆಹಲಿಯಿಂದ ರಾಜ್ಯಕ್ಕೆ ಬಂದ ಮೇಲೆ ನಾನು ಮಂಡಹಳ್ಳಿಗೆ ಭೇಟಿ ಕೊಡುತ್ತೇನೆ. ನಾಡಿದ್ದು ಗುರುವಾರ ಬೆಳಗ್ಗೆ ಅಲ್ಲಿಗೆ ಹೋಗುತ್ತಿದ್ದೇನೆ. ಏನು ಮಾಡುತ್ತಿರೋ ಮಾಡಿ, ರೈತರ ಪರ ನಾನು ನಿರ್ಭಯವಾಗಿ ನಿಲ್ಲುತ್ತೇನೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.‌&lt;/p&gt;&lt;p data-block-key="8uooi"&gt;&lt;a href="/karnataka/bengaluru-urban/protest-outside-vidhana-soudha-if-land-acquisition-for-bidadi-township-is-not-dropped-hd-deve-gowda-writes-to-cm-dk-shivakumar-83701.html"&gt;&lt;b&gt;"ಬಿಡಿದ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಕೈಬಿಡದಿದ್ದರೆ ವಿಧಾನಸೌಧದ ಎದುರು ಧರಣಿ"; CM ಡಿಕೆ ಶಿವಕುಮಾರ್‌ಗೆ ಪತ್ರ ಬರೆದ H.D ದೇವೇಗೌಡ&lt;/b&gt;&lt;/a&gt;&lt;/p&gt;&lt;p data-block-key="br1q"&gt;ಸರ್ವೆ ಮಾಡಲು ಬಂದ ಅಧಿಕಾರಿಗಳು ರಕ್ಷಣೆ ಕೊಡಿ ಎಂದು ಕೇಳಿದರು. ಅದಕ್ಕಾಗಿ ಅವರಿಗೆ ರಕ್ಷಣೆ ನೀಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಹಾಗಿದ್ದರೆ ಮಂಡಹಳ್ಳಿ ಗ್ರಾಮದಲ್ಲಿ ಭೂಮಿ ಕೊಡುತ್ತೇವೆ ಎಂದವರು ಎಷ್ಟು ಜನ? ಕೊಡುವುದಿಲ್ಲ ಎಂದು ಹೇಳಿದವರು ಎಷ್ಟು ಜನ? ಯಾರ ಯಾರ ಜಮೀನು ಎಷ್ಟೆಷ್ಟಿದೆ? ಊರಿನಲ್ಲಿ ಒಟ್ಟಾರೆ ಎಷ್ಟು ಭೂಮಿ ಇದೆ ಎಂಬ ಮಾಹಿತಿಯನ್ನು ಹೊರಗೆ ಇಡಿ. ಏನಾದ್ರೂ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ? ಇದಕ್ಕೆ ಪೊಲೀಸ್ ಇಲಾಖೆ ಉತ್ತರ ಕೊಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದರು. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌</title><link>https://vishwavani.news/aarama/simple-science-for-weight-loss-83754.html</link><guid>https://vishwavani.news/aarama/simple-science-for-weight-loss-83754.html</guid><pubDate>Tue, 14 Jul 2026 17:07:54 +0000</pubDate><description>&lt;![CDATA[ಒಂದು ಕಾಲವಿತ್ತು ನೆನಪಿದೆಯಾ? ನಮ್ಮ ಅಜ್ಜಿ-ತಾತಂದಿರೆ ಯಾರಾದರೂ ಸ್ವಲ್ಪ ದಪ್ಪಗಿದ್ದರೆ, ಅಬ್ಬಾ, ಎಷ್ಟು ಲಕ್ಷಣವಾಗಿದ್ದಾರೆ ಅಂತ ಖುಷಿ ಪಡ್ತಿದ್ರು. ಇವತ್ತು ಕಾಲ ಬದಲಾಗಿದೆ. ಇವತ್ತು ದಪ್ಪಗಿರೋದು ಬರೀ ಅಂದದ ಮ್ಯಾಟರ್ ಅಲ್ಲ, ಅದು ನಮಗೆ ಗೊತ್ತಿಲ್ಲದೇ ನಮ್ಮ ದೇಹದೊಳಗೆ ಬಂದು ಕೂರೋ ಹತ್ತಾರು ಕಾಯಿಲೆಗಳಿಗೆ ನಾವೇ ರೆಡ್ ಕಾರ್ಪೆಟ್ ಹಾಕಿದ ಹಾಗೆ. ವಿಶ್ವ ಆರೋಗ್ಯ ಸಂಸ್ಥೆ ಹೇಳೋ ಪ್ರಕಾರ, ಇಡೀ ಪ್ರಪಂಚದಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚು ಜನ ತೂಕದ ಸಮಸ್ಯೆಯಿಂದ ಬಳಲು ತ್ತಿದ್ದಾರೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಆರೋಗ್ಯ]]&gt;</category><category>&lt;![CDATA[ಅಂಕಣಗಳು]]&gt;</category><category>&lt;![CDATA[Aarama]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Screenshot_2_ok_QUJa26T.original.jpg" class="attachment-large size-large wp-post-image" alt="ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="d39yl"&gt;&lt;b&gt;ಶಾರದಾ ವಗರನಾಳ&lt;/b&gt;&lt;/p&gt;&lt;p data-block-key="75g5n"&gt;&lt;b&gt;ತೂಕ ಇಳಿಸೋಕೆ ಪ್ರಪಂಚದಲ್ಲಿ ಇರೋ ಒಂದೇ ಒಂದು ರಿಯಲ್ ಸೈನ್ಸ್ ಇಲ್ಲಿದೆ&lt;/b&gt;&lt;/p&gt;&lt;p data-block-key="dun6f"&gt;ಒಂದು ಕಾಲವಿತ್ತು ನೆನಪಿದೆಯಾ? ನಮ್ಮ ಅಜ್ಜಿ-ತಾತಂದಿರೆ ಯಾರಾದರೂ ಸ್ವಲ್ಪ ದಪ್ಪಗಿದ್ದರೆ, ಅಬ್ಬಾ, ಎಷ್ಟು ಲಕ್ಷಣವಾಗಿದ್ದಾರೆ ಅಂತ ಖುಷಿ ಪಡ್ತಿದ್ರು. ಇವತ್ತು ಕಾಲ ಬದಲಾಗಿದೆ. ಇವತ್ತು ದಪ್ಪಗಿರೋದು ಬರೀ ಅಂದದ ಮ್ಯಾಟರ್ ಅಲ್ಲ, ಅದು ನಮಗೆ ಗೊತ್ತಿಲ್ಲದೇ ನಮ್ಮ ದೇಹದೊಳಗೆ ಬಂದು ಕೂರೋ ಹತ್ತಾರು ಕಾಯಿಲೆಗಳಿಗೆ ನಾವೇ ರೆಡ್ ಕಾರ್ಪೆಟ್ ಹಾಕಿದ ಹಾಗೆ. ವಿಶ್ವ ಆರೋಗ್ಯ ಸಂಸ್ಥೆ ಹೇಳೋ ಪ್ರಕಾರ, ಇಡೀ ಪ್ರಪಂಚದಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚು ಜನ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.&lt;/p&gt;&lt;p data-block-key="5otgb"&gt;ಇದಕ್ಕೆ ಪರಿಹಾರ ಇಲ್ವಾ? ಖಂಡಿತ ಇದೆ. ಆದ್ರೆ ಅದಕ್ಕಿಂತ ಮುಂಚೆ, ನಮ್ಮ ದೇಹ ಸದ್ಯಕ್ಕೆ ಯಾವ ಪೊಸಿಷನ್ನಲ್ಲಿದೆ? ನನ್ನ ಎತ್ತರಕ್ಕೆ ತಕ್ಕ ತೂಕ ನನಗಿದೆಯಾ? ಅನ್ನೋ ಬೇಸಿಕ್ ವಿಷಯ ನಮಗೆ ಗೊತ್ತಿರಬೇಕು. ಅದನ್ನೇ ನಾವು ಬಿಎಂಐ ಅಂತ ಕರೆಯೋದು. ಬಿಎಂಐ ಅಂದ್ರೆ ಬಾಡಿ ಮಾಸ್ ಇಂಡೆಕ್ಸ್. ನಿಮ್ಮ ಹೈಟ್‌ಗೆ ತಕ್ಕ ಹಾಗೆ ನಿಮ್ಮ ವೇಟ್ ಕರೆಕ್ಟ್ ಆಗಿ ಇದೆಯಾ ಇಲ್ವಾ ಅಂತ ಅಳೆಯೋ ಒಂದು ಸ್ಕೋರ್. ನಿಮ್ಮ ಸ್ಕೋರ್ ಎಷ್ಟು ಅಂತ ನೀವೇ ನೋಡ್ಕೊಳ್ಳಿ. 18.5ಕ್ಕಿಂತ ಕಡಿಮೆ ಇದ್ರೆ ನೀವು ತುಂಬಾ ಲೀನ್ ಇದ್ದೀರಾ, ಸ್ವಲ್ಪ ಚೆನ್ನಾಗಿ ಊಟ ಮಾಡ್ಬೇಕು. 18.5ರಿಂದ 24.9 ಒಳಗಡೆ ಇದ್ರೆ ನೀವು ಪರ್ಫೆಕ್ಟ್ ಇದ್ದೀರಾ! ಹೆಲ್ದೀ ತೂಕ ನಿಮ್ಮದು. 25.0ರಿಂದ 29.9 ತಲುಪಿದ್ರೆ ಇಲ್ಲಿಂದಲೇ ನೋಡಿ ಅಲಾರಾಂ ಬಾರಿಸೋಕೆ ಶುರುವಾಗೋದು.&lt;/p&gt;&lt;p data-block-key="5pa3l"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/aarama/earthen-amavasya-of-earthen-children-83699.html"&gt;Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ&lt;/a&gt;&lt;/p&gt;&lt;p data-block-key="8da84"&gt;ಇದು ಅಧಿಕ ತೂಕ. 30.0ಕ್ಕಿಂತ ಜಾಸ್ತಿ ಆದ್ರೆ ರೆಡ್ ಸಿಗ್ನಲ್! ಡೇಂಜರ್ ಝೋನ್. ಬೊಜ್ಜು ಅಂತ ಅರ್ಥ. ಆದ್ರೆ ಬಿಎಂಐ ಬರೀ ನಿಮ್ಮ ತೂಕವನ್ನು ಮಾತ್ರ ತೋರ್ಸುತ್ತೆ. ಆದ್ರೆ ದೇಹದಲ್ಲಿ ಕೊಬ್ಬು ಎಷ್ಟಿದೆ, ಗಟ್ಟಿಮುಟ್ಟಾದ ಸ್ನಾಯು ಎಷ್ಟಿದೆ ಅಂತಾ ತಿಳಿಯುವುದಕ್ಕೆ ಆಗುವುದಿಲ್ಲ. ಅದಕ್ಕೇ ಹೆಲ್ತ್ ಕೋಚ್‌ಗಳು ಸೂಪರ್ ಫಾರ್ಮುಲಾ ಬಳಸ್ತೀವಿ, ಅದೇ WHR (Waist-to-Hip Ratio). ಒಂದು ಇಂಚು ಟೇಪ್ ತಗೊಂಡು ನಿಮ್ಮ ಸೊಂಟದ ಅಳತೆ ನೋಡಿ, ಆಮೇಲೆ ನಿಮ್ಮ ಹಿಪ್ಸ್ ಅಳತೆ ತಗೊಳ್ಳಿ. ಸೊಂಟದ ಅಳತೆಯಿಂದ ಹಿಪ್ಸ್ ಅಳತೆಯನ್ನು ಭಾಗಿಸಿ.&lt;/p&gt;&lt;p data-block-key="3eihp"&gt;&lt;b&gt;ಬರುವ ಸಂಖ್ಯೆ:&lt;/b&gt; ಗಂಡಸರಲ್ಲಿ 0.90ಕ್ಕಿಂತ ಕಮ್ಮಿ ಇರಬೇಕು. ಹೆಂಗಸರಲ್ಲಿ 0.85ಕ್ಕಿಂತ ಕಮ್ಮಿ ಇರಬೇಕು. ಇದಕ್ಕಿಂತ ಜಾಸ್ತಿ ಬಂತಾ? ನಿಮ್ಮ ಹೊಟ್ಟೆ ಹತ್ತಿರ ಕೊಬ್ಬು ಜಾಸ್ತಿ ಸೇರಿದೆ, ಹಾರ್ಟ್ ಪ್ರಾಬ್ಲಮ್ಸ ಬರೋ ರಿಸ್ಕ್ ಸ್ವಲ್ಪ ಹೆಚ್ಚಿದೆ ಅಂತಾ ಅರ್ಥ. ತೂಕ ಇಳಿಸೋ ಸೈನ್ಸ್ ಯಾವುದು? ನಮ್ಮ ದೇಹ ದಿನವಿಡೀ ಉಸಿರಾಡೋಕೆ, ರಕ್ತ ಚಲನೆಗೆ, ಓಡಾಡೋಕೆ ಬಳಸೋ ಶಕ್ತಿಯನ್ನೇ ಮೆಟಬಾಲಿಸಂ ಅಂತಾರೆ. ನಾವು ತಿನ್ನೋ ಪ್ರತಿಯೊಂದು ತುತ್ತು ಆಹಾರದಿಂದಲೂ ದೇಹಕ್ಕೆ ಕ್ಯಾಲೊರಿಗಳು ಅಂದ್ರೆ ಇಂಧನ ಸಿಗುತ್ತೆ.&lt;/p&gt;&lt;p data-block-key="feo76"&gt;ಕ್ಯಾಲೊರಿ ಡೆಫಿಸಿಟ್‌ಗೆ ಸಣ್ಣ ಉದಾಹರಣೆ. ನಿಮ್ಮ ದೇಹಕ್ಕೆ ದಿನಪೂರ್ತಿ ಕೆಲಸ ಮಾಡೋಕೆ 2000 ಕ್ಯಾಲೊರಿ ಬೇಕು ಅಂದುಕೊಳ್ಳಿ. ಆದ್ರೆ ನೀವು ಡಯಟ್ ಮಾಡ್ತೀನಿ ಅಂತ ಬರೀ 1500 ಕ್ಯಾಲೊರಿ ಅಷ್ಟೇ ತಿಂದ್ರಿ. ಆಗ ದೇಹಕ್ಕೆ 500 ಕ್ಯಾಲೊರಿ ಶಾರ್ಟೇಜ್ ಆಯ್ತಲ್ವಾ? ಆವಾಗ ನಮ್ಮ ಸ್ಮಾರ್ಟ್ ಬಾಡಿ ಏನು ಮಾಡುತ್ತೆ ಗೊತ್ತಾ? ನಿಮ್ಮ ಹೊಟ್ಟೆ, ಸೊಂಟದ ಸುತ್ತ ವರ್ಷಗಳಿಂದ ಸ್ಟೋರ್ ಆಗಿ ಕೂತಿರೋ ಹಳೆಯ ಕೊಬ್ಬನ್ನು ಕರಗಿಸಿ, ಅದನ್ನೇ ಶಕ್ತಿಯಾಗಿ ಬಳಸಿಕೊಳ್ಳುತ್ತೆ. ತೂಕ ಇಳಿಸೋಕೆ ಪ್ರಪಂಚದಲ್ಲಿ ಇರೋ ಒಂದೇ ಒಂದು ರಿಯಲ್ ಸೈನ್ಸ್ ಅಂದ್ರೆ ಇದೇ. ನಮ್ಮ ಜನ ಡಯಟ್ ಅಂದ ತಕ್ಷಣ ಊಟ ಬಿಟ್ಟು, ಹಸಿವಿನಿಂದ ಇರ್ತಾರೆ. ಆ ತಪ್ಪು ಮಾಡಬೇಡಿ. ಡಯಟ್ ಅಂದ್ರೆ ಹಸಿವಿನಿಂದ ಇರೋದು ಅಲ್ಲ. ಸರಿಯಾದ ಊಟವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನೋದು.‌&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Screenshot_3 ok" class="img-fluid" height="720" src="https://cdn.vishwavani.news/media/images/Screenshot_3_ok_HkR3MMA.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="4n2no"&gt;ನಮ್ಮ ದಿನದ ತಟ್ಟೆಯಲ್ಲಿ ಈ 3 ಮ್ಯಾಕ್ರೋಗಳು ಇರಲೇಬೇಕು-&lt;/p&gt;&lt;p data-block-key="6bu1s"&gt;&lt;b&gt;ಪ್ರೊಟೀನ್:&lt;/b&gt; ಮನೆ ಕಟ್ಟೋಕೆ ಇಟ್ಟಿಗೆ ಎಷ್ಟು ಮುಖ್ಯವೋ, ನಮ್ಮ ಸ್ನಾಯುಗಳು ಗಟ್ಟಿಯಾಗೋಕೆ ಪ್ರೊಟೀನ್ ಅಷ್ಟೇ ಮುಖ್ಯ. ಇದು ಜೀರ್ಣ ಆಗೋಕೆ ಟೈಮ್ ತಗೊಳೋ ದ್ರಿಂದ, ಪದೇ ಪದೆ ಅದನ್ನ ತಿನ್ನೋಣ, ಇದನ್ನ ತಿನ್ನೋಣ ಅನ್ನೋ ಬೇಡದ ಕ್ರೇವಿಂಗ್ ಗಳನ್ನು ಕಂಟ್ರೋಲ್ ಮಾಡುತ್ತೆ. ವೆಜ್ ತಿನ್ನೋರಿಗೆ ಬೇಳೆಕಾಳುಗಳು, ಮೊಳಕೆಕಾಳು, ಪನ್ನೀರ್, ಸೋಯಾ ಚಂಕ್ಸ್ ಸೂಕ್ತ. ನಾನ್‌ವೆಜ್ ಪ್ರಿಯರಿಗೆ ಮೊಟ್ಟೆಯ ಬಿಳಿ ಭಾಗ, ಚಿಕನ್ ಬ್ರೆ ಮತ್ತು ಮೀನು.&lt;/p&gt;&lt;p data-block-key="9eh44"&gt;&lt;b&gt;ಕಾರ್ಬೋಹೈಡ್ರೇಟ್ಸ್:&lt;/b&gt; ಕಾರ್ಬ್ಸ್ ನಮಗೆ ತಕ್ಷಣ ಎನರ್ಜಿ ಕೊಡುತ್ತೆ. ಆದ್ರೆ ಇದರಲ್ಲಿ ಎರಡು ರೀತಿಯ ಕಾರ್ಬ್ಸ್ ಇವೆ. ಕಾಂಪ್ಲೆಕ್ಸ್ ಕಾ‌ರ್ಬ್ಸ್ ಇವುಗಳಲ್ಲಿ ನಾರಿನಂಶ ಜಾಸ್ತಿ. ನಿಧಾನವಾಗಿ ಎನರ್ಜಿ ಕೊಡುತ್ತವೆ. (ಉದಾಹರಣೆಗೆ ರಾಗಿ ರೊಟ್ಟಿ, ಜೋಳದ ಮುದ್ದೆ, ಬ್ರೌನ್ ರೈಸ್, ಗೋಧಿ, ಓಟ್ಸ್). ಸಿಂಪಲ್ ಕಾ‌ರ್ಬ್ಸ್ ತಿಂದ ತಕ್ಷಣ ಶುಗರ್ ಲೆವೆಲ್ ಮತ್ತು ಇನ್ಸುಲಿನ್ ಹಾರ್ಮೋನ್ ಜಾಸ್ತಿ ಮಾಡಿ, ಬೊಜ್ಜನ್ನು ಹೆಚ್ಚಿಸುತ್ತವೆ. (ಉದಾಹರಣೆಗೆ ಮೈದಾ ಪರೋಟ, ವೈಟ್ ಶುಗರ್, ಬೇಕರಿ ಪಪ್ಸ್, ಐಸ್ಕ್ರೀಮ, ಸಾಫ್ಟ್ ಡ್ರಿಂಕ್ಸ್). ‌&lt;/p&gt;&lt;p data-block-key="u9ku"&gt;&lt;b&gt;ಹೆಲ್ದೀ ಫ್ರುಟ್ಸ್:&lt;/b&gt; ಅಯ್ಯೋ ಕೊಬ್ಬಾ? ತುಪ್ಪ, ಡ್ರೈ ಪ್ರೂಟ್ಸ್ ನಾ ಮುಟ್ಟೋದೇ ಇಲ್ಲ ಅನ್ನ ಬೇಡಿ. ನಮ್ಮ ದೇಹದ ಹಾರ್ಮೋನ್‌ಗಳು ಬ್ಯಾಲೆನ್ಸ್ ಇರಬೇಕಂದ್ರೆ ಮತ್ತು ಮೆದುಳು ಚುರುಕಾಗಬೇಕಂದ್ರೆ ಒಳ್ಳೆಯ ಕೊಬ್ಬು ಬೇಕೇ ಬೇಕು. ಶೇಂಗಾ ಎಣ್ಣೆ, ಆಲಿವ್ ಆಯಿಲ್, ಮನೆಯಲ್ಲಿ ತಯಾರಿಸಿದ ದೇಸಿ ತುಪ್ಪ, ವಾಲ್ನಟ್ಟ್ಸ್ ಬಳಸಿ. ಆದ್ರೆ ಬೇಕರಿ ಬಿಸ್ಕೆಟ್, ಕರಿದ ತಿಂಡಿಗಳಲ್ಲಿರೋ ‘&lt;b&gt;ಟ್ರಾನ್ಸ್ ಫ್ಯಾಟ್’‌ ಗಳನ್ನು&lt;/b&gt; ದೂರವಿಡಿ.&lt;/p&gt;&lt;p data-block-key="5evf0"&gt;&lt;b&gt;ಫೈಬರ್ (ನಾರಿನಂಶ):&lt;/b&gt; ಇದು ನಿಮ್ಮ ಮಲ ಬದ್ಧತೆಯನ್ನು ದೂರ ಮಾಡಿ, ಜೀರ್ಣಕ್ರಿಯೆ ಯನ್ನು ಚೆನ್ನಾಗಿರಿಸುತ್ತದೆ. ಹಸಿರು ತರಕಾರಿ ಗಳು, ಸೌತೆಕಾಯಿ, ಕ್ಯಾರೆಟ್, ಸೇಬು, ಪೇರಲೆ ಹಣ್ಣುಗಳನ್ನು ಧಾರಾಳವಾಗಿ ತಿನ್ನಿ. ಠಿವೆಜ್ ಮತ್ತು ನಾನ್‌ವೆಜ್ ನೀವು ಪಕ್ಕಾ ವೆಜಿಟೇರಿಯನ್ ಆಗಿದ್ರೆ, ನಿಮ್ಮ ಪ್ರೊಟೀನ್ ಮಿಸ್ ಆಗದ ಹಾಗೆ ದಿನದ ಊಟದಲ್ಲಿ ಸ್ವಲ್ಪ ಕಾಳುಗಳು ಅಥವಾ ಪನ್ನೀರ್ ಇರೋ ಹಾಗೆ ಪ್ಲಾನ್ ಮಾಡಿಕೊಳ್ಳಿ.&lt;/p&gt;&lt;p data-block-key="5pun0"&gt;ಇನ್ನು ನಾನ್-ವೆಜಿಟೇರಿಯನ್ ಆಗಿದ್ರೆ ಎಣ್ಣೆಯಲ್ಲಿ ಕರಿದ ಕಬಾಬ್, ಹೆವಿ ಮಸಾಲೆ ಇರೋ ಬಿರಿಯಾನಿ ತಿನ್ನೋ ಬದಲು, ಲೈಟ್ ಆಗಿ ಗ್ರಿಲ್ಡ್ ಮಾಡಿದ ಚಿಕನ್ ಅಥವಾ ಬೇಯಿಸಿದ ಮೊಟ್ಟೆ ತಿನ್ನೋದನ್ನು ರೂಢಿ ಮಾಡಿಕೊಳ್ಳಿ. ಆರೋಗ್ಯವಾಗಿರೋದು ಅಂದ್ರೆ ಕಷ್ಟಪಟ್ಟು ಉಪವಾಸ ಇರುವುದಲ್ಲ, ಬದಲಿಗೆ ದಿನವೂ ಇಷ್ಟಪಟ್ಟು ನಮ್ಮ ತಟ್ಟೆಗೆ ಒಳ್ಳೆಯ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು. ಇವತ್ತೇ ನಿಮ್ಮ ಬಿಎಂಐ ಎಷ್ಟಿದೆ ಅಂತ ಒಮ್ಮೆ ಲೆಕ್ಕ ಹಾಕಿ ಪರಿಶೀಲಿಸಿ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಜುಗರ; ಟಿವಿಕೆ ಮುಖಂಡನ ವಿರುದ್ಧ ಕೇಳಿಬಂತು ಲೈಂಗಿಕ ಕಿರುಕುಳ ಆರೋಪ</title><link>https://vishwavani.news/crime/tvk-functionary-harassment-kidnap-attempt-karur-83751.html</link><guid>https://vishwavani.news/crime/tvk-functionary-harassment-kidnap-attempt-karur-83751.html</guid><pubDate>Tue, 14 Jul 2026 16:57:59 +0000</pubDate><description>&lt;![CDATA[Tamilaga Vettri Kazhagam: ತಮಿಳುನಾಡಿನ ಕರೂರ್ ಜಿಲ್ಲೆಯ ಟಿವಿಕೆ ಪಕ್ಷದ ಮುಖಂಡ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. 25 ವರ್ಷದ ವಿವಾಹಿತ ಮಹಿಳೆ ದೂರು ನೀಡಿ, ಮೂರು ತಿಂಗಳಿನಿಂದ ನಿರಂತರ ದೌರ್ಜನ್ಯ ಎಸಗಿದ್ದಲ್ಲೆ ಅಪಹರಿಸಲು ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000588836.original.jpg" class="attachment-large size-large wp-post-image" alt="ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಜುಗರ; ಟಿವಿಕೆ ಮುಖಂಡನ ವಿರುದ್ಧ ಕೇಳಿಬಂತು ಲೈಂಗಿಕ ಕಿರುಕುಳ ಆರೋಪ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="y57b5"&gt;&lt;b&gt;ಚೆನ್ನೈ, ಜು. 14:&lt;/b&gt; ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತ್ತಲೈ ಪ್ರದೇಶದಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖಂಡನ ವಿರುದ್ಧ ವಿವಾಹಿತ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಹಾಗೂ ಅಪಹರಣ ಯತ್ನದ ಆರೋಪ ಮಾಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 25 ವರ್ಷದ ಮಹಿಳೆ ನೀಡಿದ ದೂರಿನ ಪ್ರಕಾರ, ಕೃಷ್ಣರಾಯಪುರಂ ಪೂರ್ವ ಘಟಕದ ಕಾರ್ಯದರ್ಶಿ ರಮೇಶ್ ಕಳೆದ ಮೂರು ತಿಂಗಳಿನಿಂದ ತಾನು ಕೆಲಸ ಮಾಡುತ್ತಿದ್ದ ಮೆಡಿಕಲ್ ಅಂಗಡಿಯ ಬಳಿ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ. ಅಶ್ಲೀಲ ಮಾತುಗಳು, ಸನ್ನೆಗಳು ಮಾಡುತ್ತಿದ್ದಲ್ಲದೆ ಮನೆಗೆ ತೆರಳುವಾಗ ಹಿಂಬಾಲಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p data-block-key="bt3fj"&gt;ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದ ಬಳಿಕ ಎರಡು ತಿಂಗಳಿಂದ ಮಹಿಳೆಯ ಪತಿ ಪ್ರತಿದಿನ ಕೆಲಸಕ್ಕೆ ಕರೆದುಕೊಂಡು ಹೋಗಿ ಮರಳಿ ಮನೆಗೆ ಕರೆತರುತ್ತಿದ್ದರು. ಘಟನೆಯ ದಿನ ಮಹಿಳೆಯ ಪತಿಗೆ ಬರಲು ಸಾಧ್ಯವಾಗದ ಕಾರಣ ಆಕೆಯ ತಂಗಿ ಕರೆತರಲು ಬಂದಿದ್ದರು. ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರಮೇಶ್ ರಸ್ತೆಯಲ್ಲೇ ಮಹಿಳೆಯನ್ನು ತಡೆದು ಅಪಹರಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p data-block-key="4ct8i"&gt;ತಕ್ಷಣ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿದ ಬಳಿಕ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸೇರಿ ರಮೇಶ್‌ಗೆ ಥಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ರಮೇಶ್‌ನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.&lt;/p&gt;&lt;p data-block-key="8k1dj"&gt;&lt;a href="/crime/bengaluru-crime-news-husband-killed-wife-and-took-his-life-by-hanging-76112.html"&gt;&lt;b&gt;ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ&lt;/b&gt;&lt;/a&gt;&lt;/p&gt;&lt;p data-block-key="ac2et"&gt;ಮಹಿಳೆಯ ಕುಟುಂಬದವರು, ಟಿವಿಕೆ ಮುಖಂಡನನ್ನು ರಕ್ಷಿಸಲು ಪೊಲೀಸರು ಪ್ರಕರಣವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಪೊಲೀಸರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ರಮೇಶ್ ಕುಳಿತ್ತಲೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ತನಿಖೆಯ ವರದಿ ಆಧರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p data-block-key="7c64b"&gt;ಇದೇ ವೇಳೆ, ಡಿಎಂಕೆ ಸಂಸದೆ ಕನಿಮೊಳಿ ಈ ಪ್ರಕರಣವನ್ನು ಉಲ್ಲೇಖಿಸಿ ತಮಿಳುನಾಡಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆ ಎತ್ತಿದ್ದು, ಮಹಿಳೆಯ ದೂರಿನ ನಂತರವೂ ತಕ್ಷಣ ಕ್ರಮ ಕೈಗೊಳ್ಳದಿರುವುದನ್ನು ಟೀಕಿಸಿ, ಆರೋಪಿಯ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ? ಮೈದಾನದಿಂದ ಹೊರ ನಡೆದ ಗುರ್ನೂರ್‌ ಬ್ರಾರ್‌!</title><link>https://vishwavani.news/sports/cricket/eng-vs-ind-another-injury-scare-for-india-gurnoor-brar-taken-off-in-1st-odi-83752.html</link><guid>https://vishwavani.news/sports/cricket/eng-vs-ind-another-injury-scare-for-india-gurnoor-brar-taken-off-in-1st-odi-83752.html</guid><pubDate>Tue, 14 Jul 2026 16:37:32 +0000</pubDate><description>&lt;![CDATA[ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿಯೇ ಭಾರತ ತಂಡ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದ್ದ ಮೊದಲನೇ ಪಂದ್ಯದಲ್ಲಿ ಬೌಲ್‌ ಮಾಡುವ ವೇಲೆ ಗುರ್ನೂರ್‌ ಬ್ರಾರ್‌ ಗಾಯಕ್ಕೆ ತುತ್ತಾಗಿ ಓವರ್‌ ಮುಗಿಸದೆ ಡ್ರೆಸ್ಸಿಂಗ್‌ ರೂಂಗೆ ಮರಳಿದರು. ಅವರ ಗಾಯದ ಸ್ವರೂಪ ಹೇಗಿದೆ ಎಂದು ಇನ್ನು ಮಾಹಿತಿ ಇಲ್ಲ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gurnoor_Brar_aGmfGPi.original.jpg" class="attachment-large size-large wp-post-image" alt="IND vs ENG: ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ? ಮೈದಾನದಿಂದ ಹೊರ ನಡೆದ ಗುರ್ನೂರ್‌ ಬ್ರಾರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="i5hys"&gt;&lt;b&gt;ಬರ್ಮಿಂಗ್‌ಹ್ಯಾಮ್‌:&lt;/b&gt; ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಮೊದಲನೇ ಏಕದಿನ ಪಂದ್ಯ (IND vs ENG) ನಡೆಯುತ್ತಿರುವ ಸಂದರ್ಭದಲ್ಲಿಯೇ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಯುವ ವೇಗದ ಬೌಲರ್‌ ಗುರ್ನೂರ್‌ ಬ್ರಾರ್‌ (Gurnoor Brar) ಅವರು ಬೌಲಿಂಗ್‌ ವೇಳೆ ಗಾಯಕ್ಕೆ ತುತ್ತಾಗಿ ತಮ್ಮ ಓವರ್‌ ಅನ್ನು ಮುಗಿಸಲು ಸಾಧ್ಯವಾಗದೆ ಮೈದಾನವನ್ನು ತೊರೆದಿದ್ದಾರೆ. ತದ ನಂತರ ಇವರು ಮೈದಾನಕ್ಕೆ ಮರಳಲಿಲ್ಲ. ಅವರ ಗಾಯದ ಸ್ವರೂಪ ಹೇಗೆಂದು ಇನ್ನೂ ಬಹಿರಂಗವಾಗಿಲ್ಲ. ಒಂದು ವೇಳೆ ಅವರ ಗಾಯ ಗಂಭೀರವಾಗಿದ್ದರೆ, ಅವರು ಏಕದಿನ ಸರಣಿಯಿಂದ ಹೊರಬೀಳುವ ಸಾಧ್ಯತೆ ಇದೆ.&lt;/p&gt;&lt;p data-block-key="f1tcm"&gt;ಇಂಗ್ಲೆಂಡ್ ನೆಲದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಗುರ್ನೂರ್, ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ ಇನಿಂಗ್ಸ್‌ನ ಅಂತಿಮ ಹಂತದಲ್ಲಿ ಅವರಿಗೆ ಗಾಯದ ಆತಂಕ ಎದುರಾಯಿತು. ತಮ್ಮ ಕೊನೆಯ ಓವರ್ ಎಸೆಯಲು ಸಜ್ಜಾಗಿದ್ದ ವೇಳೆ, 48ನೇ ಓವರ್‌ನಲ್ಲಿ ರನ್‌ಅಪ್‌ನ ಕೊನೆಯಲ್ಲಿ ಗುರ್ನೂರ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತು. ಕೂಡಲೇ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಸನ್ನೆ ಮಾಡಿ, ತಮಗೆ ದೈಹಿಕ ತೊಂದರೆಯಾಗಿರುವುದನ್ನು ತಂಡದ ಸಿಬ್ಬಂದಿಗೆ ತಿಳಿಸಿದರು.&lt;/p&gt;&lt;p data-block-key="b0baq"&gt;&lt;a href="/sports/cricket/jasprit-bumrah-become-1st-indian-player-to-pick-150-wickets-in-odis-200-in-tests-and-100-in-t20is-83725.html"&gt;&lt;b&gt;IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್‌ ಬುಮ್ರಾ!&lt;/b&gt;&lt;/a&gt;&lt;/p&gt;&lt;p data-block-key="bd35q"&gt;ಗುರ್ನೂರ್ ಗಾಯಗೊಂಡ ತಕ್ಷಣ ಭಾರತೀಯ ತಂಡದ ಫಿಸಿಯೊ ಮೈದಾನಕ್ಕೆ ಧಾವಿಸಿ, ಅವರ ಕಾಲನ್ನು ಹಾಗೂ ಹ್ಯಾಮ್‌ಸ್ಟ್ರಿಂಗ್ ಭಾಗವನ್ನು ಹಲವು ನಿಮಿಷಗಳ ಕಾಲ ಪರಿಶೀಲಿಸಿ ಸ್ಟ್ರೆಚ್ ಮಾಡಿದರು. ಆದರೂ ಗುರ್ನೂರ್‌ ಆಟವನ್ನು ಮುಂದುವರಿಸಲು ಸಾಧ್ಯವಾಗದೆ, ಅವರು ಮೈದಾನ ತೊರೆಯಬೇಕಾಯಿತು. ಅವರ ಓವರ್‌ನ ಇನ್ನುಳಿದ ಎಸೆತಗಳನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಪೂರ್ಣಗೊಳಿಸಿದರು. ಗುರ್ನೂರ್ ಅವರ ಗಾಯದ ಬಗ್ಗೆ ಭಾರತ ತಂಡದಿಂದ ತಕ್ಷಣ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.&lt;/p&gt;&lt;p data-block-key="8m6p9"&gt;ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡು ಮೈದಾನ ತೊರೆದಿರುವುದು ಭಾರತ ತಂಡದ ಆಡಳಿತ ಮಂಡಳಿಯ ಆತಂಕವನ್ನು ಹೆಚ್ಚಿಸಿದೆ. ಕಳೆದ ಕೆಲವು ವಾರಗಳಲ್ಲಿ ತಂಡವು ಹಲವು ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಗುರ್ನೂರ್ ಅವರ ಸ್ಥಿತಿಯೂ ಚಿಂತೆಗೆ ಕಾರಣವಾಗಿದೆ. ವೇಗದ ಬೌಲರ್ ಹರ್ಷಿತ್ ರಾಣಾ ಅವರು ಟಿ20 ಸರಣಿಯ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾದ ಪರಿಣಾಮ ಇಂಗ್ಲೆಂಡ್ ಪ್ರವಾಸದ ಇನ್ನುಳಿದ ಪಂದ್ಯಗಳಿಂದ ಈಗಾಗಲೇ ಹೊರಬಿದ್ದಿದ್ದಾರೆ. ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಕಾರಣದಿಂದ ತಂಡಕ್ಕೆ ಲಭ್ಯರಿಲ್ಲ.&lt;/p&gt;&lt;p data-block-key="2dkcf"&gt;&lt;a href="/sports/cricket/ryan-ten-doeschate-set-to-resign-after-england-odi-series-informs-bcci-of-decision-report-83740.html"&gt;&lt;b&gt;IND vs ENG: ಭಾರತ ತಂಡದ ಸಹಾಯಕ ಕೋಚ್‌ ಹುದ್ದೆ ತೊರೆಯಲಿರುವ ರಯಾನ್‌ ಟೆನ್‌ ಡಶ್ಕಾಟೆ?&lt;/b&gt;&lt;/a&gt;&lt;/p&gt;&lt;p data-block-key="8n43a"&gt;ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತ ತಂಡದ ಹಲವು ಆಟಗಾರರು ಗಾಯಗಳಿಂದ ದೀರ್ಘಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಿಸಿದ್ದರು. ಇದೇ ಕಾರಣದಿಂದ ಗುರ್ನೂರ್ ಅವರ ಫಿಟ್ನೆಸ್‌ ಮೇಲೂ ತಂಡದ ಆಡಳಿತ ಮಂಡಳಿ ವಿಶೇಷ ನಿಗಾ ವಹಿಸಿದೆ. ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಎರಡು ಏಕದಿನ ಪಂದ್ಯಗಳಿಗೆ ಮುನ್ನ ಗುರ್ನೂರ್ ಅವರ ಗಾಯದ ಸ್ಥಿತಿ ಮತ್ತು ಚೇತರಿಕೆಯ ಬಗ್ಗೆ ಭಾರತೀಯ ತಂಡ ನಿಕಟವಾಗಿ ಗಮನಹರಿಸುವ ಸಾಧ್ಯತೆಯಿದೆ.&lt;/p&gt;&lt;p data-block-key="9oqd9"&gt;ಈ ಪಂದ್ಯದಲ್ಲಿ ಶಿಸ್ತುಬದ್ದ ಬೌಲಿಂಗ್‌ ದಾಳಿ ನಡೆಸಿದ ಗುರ್ನೂರ್‌ ಬ್ರಾರ್‌ ಅವರು  9 ಓವರ್‌ಗಳಿಗೆ 61 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನ ಸೆಳೆದರು. ಆ ಮೂಲಕ ಇಂಗ್ಲೆಂಡ್‌ ತಂಡ 258 ರನ್‌ಗಳಿಗೆ ಆಲ್‌ಔಟ್‌ ಮಾಡಲು ಭಾರತಕ್ಕೆ ನೆರವು ನೀಡಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್‌; ಬಿ. ದಯಾನಂದ್ ಸೇರಿ ಮೂವರು ಐಪಿಎಸ್‌ ಅಧಿಕಾರಿಗಳಿಗೆ ಕ್ಲೀನ್‌ಚಿಟ್</title><link>https://vishwavani.news/karnataka/bengaluru-urban/b-dayanand-and-three-other-ips-officers-were-acquitted-in-the-chinnaswamy-stadium-stampede-case-83743.html</link><guid>https://vishwavani.news/karnataka/bengaluru-urban/b-dayanand-and-three-other-ips-officers-were-acquitted-in-the-chinnaswamy-stadium-stampede-case-83743.html</guid><pubDate>Tue, 14 Jul 2026 16:19:08 +0000</pubDate><description>&lt;![CDATA[2025ರ ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭಾರಿ ಅಪಘಾತದ ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಲೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತ ಬಿ. ದಯಾನಂದ್ ಸೇರಿ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಅವರು ಆರೋಪಮುಕ್ತರಾಗಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/B._Dayananda_.original.jpg" class="attachment-large size-large wp-post-image" alt="ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್‌; ಬಿ. ದಯಾನಂದ್ ಸೇರಿ ಮೂವರು ಐಪಿಎಸ್‌ ಅಧಿಕಾರಿಗಳಿಗೆ ಕ್ಲೀನ್‌ಚಿಟ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="h9fmb"&gt;&lt;b&gt;ಬೆಂಗಳೂರು:&lt;/b&gt; ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್‌ (B. Dayanand), ವಿಕಾಸ್ ಕುಮಾರ್, ಶೇಖ‌ರ್ ಎಚ್. ತೆಕ್ಕಣ್ಣನವ‌ರ್ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದ್ದು, ಇವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.&lt;/p&gt;&lt;p data-block-key="bhdlp"&gt;2025ರ ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭಾರಿ ಅಪಘಾತದ ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಲೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ. ದಯಾನಂದ್ ಸೇರಿ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.&lt;/p&gt;&lt;p data-block-key="3lfbj"&gt;ಅಮಾನತಿನ ಬಳಿಕ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆ ಮುಂದುವರಿದಿತ್ತು. ಈ ಪ್ರಕ್ರಿಯೆಯ ಭಾಗವಾಗಿ ಹಿರಿಯ ಅಧಿಕಾರಿ ಬಿ. ದಯಾನಂದ್ ಅವರು ತಮ್ಮ ಪರವಾಗಿ ಲಿಖಿತ ಪ್ರತಿರಕ್ಷಣಾ ಹೇಳಿಕೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಈ ಹೇಳಿಕೆ ಹಾಗೂ ಸಂಬಂಧಪಟ್ಟ ಆಡಳಿತ ಇಲಾಖೆಯು ನೀಡಿದ ಕಾನೂನಾತ್ಮಕ ಅಭಿಪ್ರಾಯಗಳನ್ನು ಸರ್ಕಾರ ಜಂಟಿಯಾಗಿ ಕೂಲಂಕಷವಾಗಿ ಪರಿಶೀಲಿಸಿದೆ. ಅಧಿಕಾರಿಯ ವಿರುದ್ಧ ಹೊರಿಸಲಾದ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದಿರುವುದನ್ನು ಮನಗಂಡು, ಕೊನೆಗೆ ಎಲ್ಲಾ ಆರೋಪಗಳನ್ನು ಕೈಬಿಡಲು ತೀರ್ಮಾನಿಸಿದೆ.&lt;/p&gt;&lt;p data-block-key="a71p0"&gt;&lt;a href="/karnataka/bengaluru-urban/police-officer-arrested-for-attempting-to-assault-wife-and-uncle-in-bangalore-83712.html"&gt;ಪಿಎಸ್‌ಐಗೆ ಪರಸ್ತ್ರೀ ವ್ಯಾಮೋಹ; ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆ ನಡೆಸಿದ ಪೊಲೀಸ್‌ ಅಧಿಕಾರಿ ಅರೆಸ್ಟ್‌&lt;/a&gt;&lt;/p&gt;&lt;p data-block-key="2bmbl"&gt;ಈ ಕುರಿತು ರಾಜ್ಯ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ. ಬಿ. ದಯಾನಂದ್ ಅವರನ್ನು ಇಲಾಖಾ ವಿಚಾರಣೆಯ ಎಲ್ಲಾ ಆಯಾಮಗಳಿಂದಲೂ ದೋಷಮುಕ್ತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ದಯಾನಂದ್ ಅವರಿಗೆ ಮುಂದಿನ ಪ್ರಮುಖ ಹುದ್ದೆಗಳ ನಿಯೋಜನೆಗೆ ಇದ್ದ ಆಡಳಿತಾತ್ಮಕ ಅಡ್ಡಿಗಳು ದೂರವಾಗಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಹೆತ್ತವರಿಗಾಗಿ 18 ವರ್ಷಗಳ ಅಮೆರಿಕ ಜೀವನ ತೊರೆದು ಬೆಂಗಳೂರಿಗೆ ಮರಳಿದ ಮೆಟಾ ಉದ್ಯೋಗಿ; ಭಾವನಾತ್ಮಕ ಪೋಸ್ಟ್ ವೈರಲ್</title><link>https://vishwavani.news/viral/meta-employee-leaves-us-and-returns-to-india-after-18-years-83713.html</link><guid>https://vishwavani.news/viral/meta-employee-leaves-us-and-returns-to-india-after-18-years-83713.html</guid><pubDate>Tue, 14 Jul 2026 16:05:25 +0000</pubDate><description>&lt;![CDATA[Viral News: ಅಮೆರಿಕದಲ್ಲಿ 18 ವರ್ಷಗಳ ಕಾಲ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ವೃತ್ತಿ ಜೀವನ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಯಾವುದೇ ಒತ್ತಡದಿಂದ ಕೆಲಸ ತೊರೆದಿಲ್ಲ, ಬದಲಾಗಿ ವೈಯಕ್ತಿಕ ವಿಚಾರದಿಂದ ಅಮೆರಿಕ ತೊರೆದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಶೇರ್ ಮಾಡಿಕೊಂಡಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru__news_4.original.jpg" class="attachment-large size-large wp-post-image" alt="ಹೆತ್ತವರಿಗಾಗಿ 18 ವರ್ಷಗಳ ಅಮೆರಿಕ ಜೀವನ ತೊರೆದು ಬೆಂಗಳೂರಿಗೆ ಮರಳಿದ ಮೆಟಾ ಉದ್ಯೋಗಿ; ಭಾವನಾತ್ಮಕ ಪೋಸ್ಟ್ ವೈರಲ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="sg6uy"&gt;&lt;b&gt;ನವದೆಹಲಿ, ಜು. 14:&lt;/b&gt; ಉದ್ಯೋಗ ಅನ್ನೋದು ಜೀವನದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ. ಕೆಲವರು ತಮ್ಮ ಆಯ್ಕೆಯ ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಇಲ್ಲಿನ ನಗರ ಜೀವನ ಶೈಲಿ, ಕಂಪನಿಯ ಪ್ಯಾಕೇಜ್, ವೈಯಕ್ತಿಕ ಯಶಸ್ಸು ಹೀಗೆ ನಾನಾ ಕಾರಣದಿಂದ ವಿದೇಶದಲ್ಲೇ ಉದ್ಯೋಗ ಮಾಡಲು ಬಯಸುವವರು ಅನೇಕರು ಇದ್ದಾರೆ. ಅದೇ ರೀತಿ ಅಮೆರಿಕದಲ್ಲಿ 18 ವರ್ಷಗಳ ಕಾಲ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ವೃತ್ತಿ ಜೀವನ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಯಾವುದೇ ಒತ್ತಡದಿಂದ ಕೆಲಸ ತೊರೆದಿಲ್ಲ, ಬದಲಾಗಿ ವೈಯಕ್ತಿಕ ವಿಚಾರದಿಂದ ಅಮೆರಿಕ ತೊರೆದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಶೇರ್ &lt;a href="/viral/owner-risked-his-life-to-save-car-amid-floods-watch-video-83169.html"&gt;(&lt;b&gt;Viral News)&lt;/b&gt;&lt;/a&gt;&lt;b&gt; &lt;/b&gt;ಮಾಡಿಕೊಂಡಿದ್ದಾರೆ.&lt;/p&gt;&lt;p data-block-key="86fq5"&gt;ಮೆಟಾ ಕಂಪನಿಯ ಎಂಜಿನಿಯರಿಂಗ್ ವಿಭಾಗದ ಹಿರಿಯ ನಾಯಕ ಬಾಲಾಜಿ ಗುರುರಾಜನ್ ಅಮೆರಿಕದಲ್ಲಿದ್ದ ಉದ್ಯೋಗವನ್ನು ತ್ಯಜಿಸಿ ಬೆಂಗಳೂರು ವಾಪಸ್‌ ಬಂದಿದ್ದಾರೆ. ಅವರ ಭಾವನಾತ್ಮಕ ಲಿಂಕ್ಡ್‌ಇನ್ ಪೋಸ್ಟ್ ಆನ್‌ಲೈನ್‌ನಲ್ಲಿ ಎಲ್ಲರ ಹೃದಯ ಗೆದ್ದಿದೆ. ಗುರುರಾಜನ್, ತಮ್ಮ ಮಕ್ಕಳು ಕುಟುಂಬದ ಜತೆ ಬೆರೆಯಲು ಹಾಗೂ ತಮ್ಮ ಪೋಷಕರೊಂದಿಗೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="62rh"&gt;ಒಂದು ತಿಂಗಳ ಹಿಂದೆ, ʼʼನನ್ನ ಕುಟುಂಬ ಮತ್ತು ನಾನು ಅಮೆರಿಕದಲ್ಲಿ 18 ವರ್ಷಗಳನ್ನು ಕಳೆದು ಈಗ ಬ್ಯಾಗದ ಪ್ಯಾಕ್ ಮಾಡಿ ಬೆಂಗಳೂರಿಗೆ ತೆರಳಿದೆವು. ವಯಸ್ಸಾದ ಪೋಷಕರು, ಬೆಳೆಯುತ್ತಿರುವ ಮಕ್ಕಳ ದೃಷ್ಟಿಯಿಂದ ಕುಟುಂಬಕ್ಕೆ  ಹತ್ತಿರವಾಗಲು ಬಯಸಿದ್ದೇವೆ‌ʼʼ ಎಂದು ಬರೆದಿದ್ದಾರೆ. ತಮ್ಮ ಪೋಸ್ಟ್ ಜತೆಗೆ ಅವರು ವಿಮಾನ ನಿಲ್ದಾಣದಲ್ಲಿ ತೆಗೆದಿರುವ ಫೋಟೊ ಹಂಚಿಕೊಂಡಿದ್ದಾರೆ. ಅವರ ಕುಟುಂಬವು ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದಂತೆ ಸೂಟ್‌ಕೇಸ್ ಟ್ರಾಲಿಯನ್ನು ತೋರಿಸಲಾಗಿದೆ.&lt;/p&gt;&lt;p data-block-key="1jbt"&gt;&lt;a href="/viral/minor-girl-cries-in-video-after-being-harassed-by-neighbors-young-man-83146.html"&gt;&lt;b&gt;ನೆರೆಮನೆಯ ಯುವಕನಿಂದನೇ ಕಿರುಕುಳ; ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ&lt;/b&gt;&lt;/a&gt;&lt;/p&gt;&lt;p data-block-key="fp27i"&gt;ವಯಸ್ಸಾಗುತ್ತಿರುವ ಪೋಷಕರ ಜತೆ ಸಮಯ ಕಳೆಯಲು ಮತ್ತು ತಮ್ಮ ಮಕ್ಕಳಿಗೆ ಭಾರತದ ಕುಟುಂಬದ ಒಡನಾಟ ಸಿಗುವಂತೆ ಮಾಡಲು ಅಮೆರಿಕದ ಜೀವನವನ್ನು ತೊರೆದು ತಾಯ್ನಾಡಿಗೆ ಮರಳಿದ್ದಾರೆ. ಇವರು ಮೆಟಾ ಮಾತ್ರವಲ್ಲದೆ, ಮೈಕ್ರೋಸಾಫ್ಟ್ ಮತ್ತು ಲಿಂಕ್ಡ್‌ಇನ್‌ನಂತಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.&lt;/p&gt;&lt;p data-block-key="75t1u"&gt;ಗುರುರಾಜನ್ ಭಾರತವು ದೇಶಗಳನ್ನು ಬದಲಾಯಿಸುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ ಎಂದು ಹೇಳಿದರು. ಮನೆ, ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ದಿನನಿತ್ಯದ ಎಲ್ಲ ಕೆಲಸಗಳು ಇಲ್ಲಿ ಮಹತ್ವದಾಗಿದೆ ಎಂದರು. ಇವರ ಪೋಸ್ಟ್‌ಗೆ ಸಾವಿರಾರು ಜನ ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕದಲ್ಲಿದ್ದ ಅನೇಕ ಭಾರತೀಯ ಉದ್ಯೋಗಿಗಳು ತಮಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿದ್ದನ್ನು ವಿವರಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Karnataka Drought: ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಮನವಿ</title><link>https://vishwavani.news/karnataka/bengaluru-urban/cm-dk-shivakumar-writes-to-prime-minister-modi-seeking-aid-due-to-drought-like-conditions-in-karnataka-83750.html</link><guid>https://vishwavani.news/karnataka/bengaluru-urban/cm-dk-shivakumar-writes-to-prime-minister-modi-seeking-aid-due-to-drought-like-conditions-in-karnataka-83750.html</guid><pubDate>Tue, 14 Jul 2026 15:36:45 +0000</pubDate><description>&lt;![CDATA[ಜುಲೈ 11ರ ಹೊತ್ತಿಗೆ ಕರ್ನಾಟಕದ ಒಟ್ಟು 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ತೀವ್ರ ಮಳೆ ಕೊರತೆ ಅನುಭವಿಸಿವೆ. 240 ತಾಲೂಕುಗಳ ಪೈಕಿ 141 ತಾಲೂಕುಗಳು ಮಳೆಯ ಅಭಾವ ಎದುರಿಸುತ್ತಿವೆ. ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ನೆರವು ನೀಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮನವಿ ಮಾಡಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_and_PM_Modi.original.jpg" class="attachment-large size-large wp-post-image" alt="Karnataka Drought: ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಮನವಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4wibi"&gt;ಬೆಂಗಳೂರು, ಜು.14: "ಎಲ್ ನೀನೋ ಪರಿಣಾಮದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಶೇ. 30ರಷ್ಟು (ಜು.11ರ ಮಾಹಿತಿ) ಮಳೆ ಕೊರತೆಯಾಗಿದ್ದು, ರಾಜ್ಯದಲ್ಲಿನ ಬರ ಪರಿಸ್ಥಿತಿ (Karnataka Drought) ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ನಿಯೋಜಿಸಬೇಕು" ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ (PM  Narendra Modi) ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿನ ಮಳೆ ಕೊರತೆ ಕುರಿತಂತೆ ಶಿವಕುಮಾರ್ ಅವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಪರಿಸ್ಥಿತಿ ವಿವರಿಸಿದ್ದಾರೆ.&lt;/p&gt;&lt;p data-block-key="1eg1l"&gt;"ಕೇಂದ್ರ ಸರ್ಕಾರ ನಿಯೋಜಿತ ತಂಡದ ಭೇಟಿಯೂ ಉದ್ಭವಿಸುತ್ತಿರುವ ಬರ ಪರಿಸ್ಥಿತಿಯ ತೀವ್ರತೆಯನ್ನು ಪ್ರತ್ಯಕ್ಷವಾಗಿ ಮೌಲ್ಯಮಾಪನ ಮಾಡಲು ಸಹಕಾರಿಯಾಗುತ್ತದೆ. ಈ ಕಷ್ಟದ ಅವಧಿಯಲ್ಲಿ ಭಾರತ ಸರ್ಕಾರವು ತಮ್ಮೊಂದಿಗಿದೆ ಎಂಬ ಭರವಸೆಯನ್ನು ರೈತ ಸಮುದಾಯಕ್ಕೆ ನೀಡುತ್ತದೆ. ಭಾರತ ಸರ್ಕಾರದಿಂದ ಆರಂಭಿಕ ಮೌಲ್ಯಮಾಪನ ಮತ್ತು ಸಮಯೋಚಿತ ಬೆಂಬಲವು, ವಿಕೋಪಕ್ಕೆ ತಿರುಗುತ್ತಿರುವ ಬರ ಪರಿಸ್ಥಿತಿಯ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಜ್ಯ ಸರ್ಕಾರವು ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ" ಎಂದು ವಿವರಿಸಿದ್ದಾರೆ.&lt;/p&gt;&lt;h3 data-block-key="fj9t0"&gt;&lt;b&gt;ಕೃಷಿ ಉತ್ಪಾದನೆ ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿದೆ:&lt;/b&gt;&lt;/h3&gt;&lt;p data-block-key="b8bh2"&gt;ಕರ್ನಾಟಕವು ತನ್ನ ಸ್ವಾಭಾವಿಕ ಕೃಷಿ-ಹವಾಮಾನ ಮತ್ತು ಜಲವಿಜ್ಞಾನದ ಗುಣಲಕ್ಷಣಗಳಿಂದಾಗಿ ದೇಶದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು 10 ವಿಭಿನ್ನ ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77 ರಷ್ಟು ಭಾಗವು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯವು ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿ ಹೊಂದಿದ್ದು, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಕಾರಣದಿಂದಾಗಿ ಇಲ್ಲಿನ ಕೃಷಿ ಉತ್ಪಾದನೆಯು ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿದೆ" ಎಂದು ಹೇಳಿದ್ದಾರೆ. &lt;/p&gt;&lt;p data-block-key="ctgnv"&gt;"ರಾಜ್ಯದ ವಾರ್ಷಿಕ ಮಳೆಯಲ್ಲಿ 74% ಮಳೆಯು ನೈಋತ್ಯ ಮುಂಗಾರು ಅವಧಿಯಲ್ಲೇ ಲಭ್ಯವಾಗುವುದರಿಂದ, ಮಳೆಯ ವ್ಯತ್ಯಾಸ, ಸುದೀರ್ಘ ಒಣ ಹವೆ ಮತ್ತು ಮರುಕಳಿಸುವ ಬರಗಾಲದ ಪರಿಸ್ಥಿತಿಗಳಿಗೆ ಕರ್ನಾಟಕವು ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಕೃಷಿ, ಕುಡಿಯುವ ನೀರಿನ ಲಭ್ಯತೆ, ಜೀವನೋಪಾಯ ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ತಿಳಿಸಿದ್ದಾರೆ.&lt;/p&gt;&lt;h3 data-block-key="5p00a"&gt;&lt;b&gt;18 ಜಿಲ್ಲೆ, 141 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ&lt;/b&gt;&lt;/h3&gt;&lt;p data-block-key="9uro6"&gt;"ಎಲ್ ನಿನೋ ಕಾರಣದಿಂದಾಗಿ 2026 ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ತಿಳಿಸಿತ್ತು. ಇದಕ್ಕೆ ಅನುಗುಣವಾಗಿ, ರಾಜ್ಯದಲ್ಲಿ ಮಳೆಯ ಕೊರತೆಯು ಗಮನಾರ್ಹವಾಗಿ ಕಂಡುಬಂದಿದೆ. 11 ಜುಲೈ 2026 ರ ಮಾಹಿತಿಯಂತೆ, ಕರ್ನಾಟಕದಲ್ಲಿ ವಾಡಿಕೆ ಮಳೆಯಾದ 292 ಮಿಮೀ ಗೆ ಪ್ರತಿಯಾಗಿ ಕೇವಲ 203 ಮಿಮೀ ಮಳೆಯಾಗಿದೆ. ಇದು 'ಕೊರತೆ ಮಳೆ'ಯ ವರ್ಗಕ್ಕೆ ಸೇರುತ್ತದೆ. 22 ಜೂನ್ 2026 ರ ವೇಳೆಗೆ ಮುಂಗಾರು ರಾಜ್ಯ ವ್ಯಾಪಿಸಿತ್ತಾದರೂ 11 ಜುಲೈ 2026 ರ ಹೊತ್ತಿಗೆ, ಒಟ್ಟು 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ತೀವ್ರ ಕೊರತೆ ಎದುರಿಸಿವೆ. ತಾಲ್ಲೂಕು ಮಟ್ಟದಲ್ಲಿ ನೋಡುವುದಾದರೆ, 240 ತಾಲ್ಲೂಕುಗಳಲ್ಲಿ 141 ತಾಲ್ಲೂಕುಗಳು ಕೊರತೆಯಿಂದ ತೀವ್ರ ಕೊರತೆಯ ಮಳೆಯ ವಿಭಾಗದಲ್ಲಿ ದಾಖಲಾಗಿದ್ದು, ಮಳೆ ಕೊರತೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿರುವುದನ್ನು ಇದು ಸೂಚಿಸುತ್ತದೆ" ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="1qvbv"&gt;"ರಾಜ್ಯದ ನಾಲ್ಕು ಹವಾಮಾನ ವಲಯಗಳ ಪೈಕಿ, ಕಾವೇರಿ, ತುಂಗಾ ಮತ್ತು ಭದ್ರಾ ನದಿ ವ್ಯವಸ್ಥೆಗಳ ಪ್ರಮುಖ ಜಲಾನಯನ ಪ್ರದೇಶವಾಗಿರುವ ಮಲೆನಾಡು ಪ್ರದೇಶವು ಅತ್ಯಧಿಕ ಅಂದರೆ 34% ಮಳೆ ಕೊರತೆಯನ್ನು ದಾಖಲಿಸಿದೆ. ಇದರ ಬೆನ್ನಲ್ಲೇ ಕರಾವಳಿ ಪ್ರದೇಶ (ಶೇ. -30), ಉತ್ತರ ಒಳನಾಡು ಕರ್ನಾಟಕ (ಶೇ. -24) ಮತ್ತು ದಕ್ಷಿಣ ಒಳನಾಡು ಕರ್ನಾಟಕ (ಶೇ. -18) ಮುಂಗಾರು ಕೊರತೆಯನ್ನು ಎದುರಿಸುತ್ತಿವೆ. ಜುಲೈ 2026 ರ ಮೊದಲ ವಾರದ ಹೊತ್ತಿಗೆ, ಮುಂಗಾರು ಬಿತ್ತನೆಯು ಕೇವಲ 28.36 ಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸಿದೆ. ಇದು ಈ ಹಂಗಾಮಿನ ಗುರಿಯಾದ 84.10 ಲಕ್ಷ ಹೆಕ್ಟೇರ್‌ ಪೈಕಿ 34% ರಷ್ಟು ಮಾತ್ರ. ಇದು ಕೃಷಿ ಕಾರ್ಯಾಚರಣೆಗಳ ಮೇಲೆ ಮಳೆ ಕೊರತೆಯು ಬೀರುತ್ತಿರುವ ಹೆಚ್ಚುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ವಿವರಿಸಿದ್ದಾರೆ.&lt;/p&gt;&lt;p data-block-key="bftf7"&gt;"ರಾಜ್ಯದಲ್ಲಿನ ಪ್ರಸ್ತುತ ಜಲವಿಜ್ಞಾನದ (Hydrological) ಪರಿಸ್ಥಿತಿಯು ಕೂಡ ತೀವ್ರ ಕಳವಳಕ್ಕೆ ಕಾರಣವಾಗಿದೆ. ರಾಜ್ಯದ ಪ್ರಮುಖ ನದಿ ಪಾತ್ರಗಳ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಉಂಟಾಗಿರುವ ಗಣನೀಯ ಮಳೆ ಕೊರತೆಯು ವಿಶೇಷವಾಗಿ ಚಿಂತಾಜನಕವಾಗಿದೆ. ಏಕೆಂದರೆ ಇದು ಮುಂಬರುವ ತಿಂಗಳುಗಳಲ್ಲಿ ಜಲಾಶಯಗಳ ಒಳಹರಿವು, ನೀರಾವರಿ, ಕುಡಿಯುವ ನೀರಿನ ಭದ್ರತೆ ಮತ್ತು ಜಲವಿದ್ಯುತ್ ಉತ್ಪಾದನೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. 10 ಜುಲೈ 2026 ರ ಮಾಹಿತಿಯಂತೆ, ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿನ ಒಟ್ಟು ಸಂಗ್ರಹಣೆಯು ಕೇವಲ 303 ಟಿಎಂಸಿ ಆಗಿದ್ದು, ಇದು ಒಟ್ಟು ಒಟ್ಟಾರೆ ಸಂಗ್ರಹಣಾ ಸಾಮರ್ಥ್ಯವಾದ 895.65 ಟಿಎಂಸಿಯ ಕೇವಲ ಶೇಕಡಾ 34 ರಷ್ಟಾಗಿದೆ" ಎಂದು ಹೇಳಿದ್ದಾರೆ.&lt;/p&gt;&lt;h3 data-block-key="ddsjs"&gt;&lt;b&gt;ಬೇಳೆಕಾಳು ಉತ್ಪಾದನೆ ಹಾಗೂ ಬೆಲೆಗಳ ಮೇಲೆ ಪರಿಣಾಮ:&lt;/b&gt;&lt;/h3&gt;&lt;p data-block-key="dt1el"&gt;ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದಿರುವುದು ಮತ್ತು ನಿರಂತರವಾಗಿ ಮಳೆಯ ಖಾತರಿ ಇಲ್ಲದಿರುವುದರಿಂದ, ರೈತರು ಮತ್ತಷ್ಟು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದು ತೀವ್ರ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯು ರಾಷ್ಟ್ರೀಯ ಮಟ್ಟದಲ್ಲೂ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ಕರ್ನಾಟಕವು ಭಾರತದಲ್ಲಿ ಬೇಳೆಕಾಳುಗಳನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ.ಪ್ರಸ್ತುತ ಬರಗಾಲದ ಪರಿಸ್ಥಿತಿಯಿಂದಾಗಿ ಉತ್ಪಾದನೆಯಲ್ಲಿ ಯಾವುದೇ ಗಮನಾರ್ಹ ಕುಸಿತ ಉಂಟಾದರೂ, ಅದು ರಾಷ್ಟ್ರೀಯ ಮಟ್ಟದಲ್ಲಿ ಬೇಳೆಕಾಳುಗಳ, ವಿಶೇಷವಾಗಿ ತೊಗರಿ ಬೇಳೆಯ ಲಭ್ಯತೆ ಮತ್ತು ಬೆಲೆಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ" ಎಂದು ಹೇಳಿದ್ದಾರೆ.&lt;/p&gt;&lt;p data-block-key="5sek7"&gt;&lt;a href="/karnataka/haveri/farmers-in-haveri-district-are-worried-due-to-lack-of-monsoon-rains-83736.html"&gt;Haveri Rain Deficit: ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು&lt;/a&gt;&lt;/p&gt;&lt;p data-block-key="eprps"&gt;"ರಾಜ್ಯ ಸರ್ಕಾರವು ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಎಲ್ಲಾ ಸಂಭಾವ್ಯ ಕ್ರಮಗಳನ್ನು ಪೂರ್ವಭಾವಿಯಾಗಿ ಕೈಗೊಂಡಿದೆ. ಕೃಷಿ ತಜ್ಞರೊಂದಿಗೆ ಸಮಾಲೋಚಿಸಿ ಬೆಳೆ ಸಲಹೆಗಳು ಮತ್ತು ಜಿಲ್ಲಾವಾರು ತುರ್ತು ಯೋಜನೆಗಳನ್ನು ಹೊರಡಿಸಲಾಗಿದೆ ಮತ್ತು ಸೂಕ್ತ ಬರ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಇದಲ್ಲದೆ, ನೀರಿನ ಲಭ್ಯತೆಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಸಂರಕ್ಷಿಸಲು ರಾಜ್ಯ ಸರ್ಕಾರವು ಅತ್ಯುನ್ನತ ಆದ್ಯತೆ ನೀಡುವ ನೀತಿ ನಿರ್ಧಾರವನ್ನು ಕೈಗೊಂಡಿದೆ" ಎಂದು ತಿಳಿಸಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: ಪುಟ್ಟ ಅಭಿಮಾನಿಯ ಜೊತೆ ಪಾಪ್‌ಕಾರ್ನ್‌ ಸವಿದು ನೆಟ್ಟಿಗರ ಹೃದಯ ಗೆದ್ದ ಎಂಎಸ್‌ ಧೋನಿ!</title><link>https://vishwavani.news/sports/cricket/ms-dhoni-enjoys-popcorn-with-a-kid-during-1st-odi-in-birmingham-watch-83748.html</link><guid>https://vishwavani.news/sports/cricket/ms-dhoni-enjoys-popcorn-with-a-kid-during-1st-odi-in-birmingham-watch-83748.html</guid><pubDate>Tue, 14 Jul 2026 15:33:13 +0000</pubDate><description>&lt;![CDATA[ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿರುವುದು ಗಮನ ಸೆಳೆಯಿತು. ಇದೇ ವೇಳೆ, ಧೋನಿ ತಮ್ಮ ಪುಟ್ಟ ಅಭಿಮಾನಿಯೊಂದಿಗೆ ಪಾಪ್‌ಕಾರ್ನ್ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/MS_Dhoni_xjoYeF9.original.jpg" class="attachment-large size-large wp-post-image" alt="IND vs ENG: ಪುಟ್ಟ ಅಭಿಮಾನಿಯ ಜೊತೆ ಪಾಪ್‌ಕಾರ್ನ್‌ ಸವಿದು ನೆಟ್ಟಿಗರ ಹೃದಯ ಗೆದ್ದ ಎಂಎಸ್‌ ಧೋನಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3ujkw"&gt;&lt;b&gt;ಬರ್ಮಿಂಗ್‌ಹ್ಯಾಮ್‌: &lt;/b&gt;ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಭಾರತ ತಂಡದ ಟಿ20ಐ ಸರಣಿಯ ಪಂದ್ಯವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಎಂಎಸ್‌ಡಿ, ಇದೀ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿಯೂ ತಮ್ಮ ತಂಡವನ್ನು ಬೆಂಬಲಿಸಲು ಬಂದಿದ್ದಾರೆ. ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದ ಧೋನಿ, ತಮ್ಮ ಪಕ್ಕ ಕುಳಿತಿದ್ದ ಪುಟ್ಟ ಅಭಿಮಾನಿಯ ಜೊತೆಗೆ ಪಾಪ್‌ಕಾರ್ನ್‌ ಸವಿಯುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.&lt;/p&gt;&lt;p data-block-key="f081g"&gt;ಎಂಎಸ್‌ ಧೋನಿ ಪುಟ್ಟ ಅಭಿಮಾನಿಯ ಜತೆಗೆ ಪಾಪ್‌ಕಾರ್ನ್‌ ಸವಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊದಲ್ಲಿ ಧೋನಿ ಲೈವ್ ರೇಡಿಯೊ ಕಾಮೆಂಟ್ರಿಯನ್ನು ಆಲಿಸಲು ಕಿವಿಯಲ್ಲಿ ರೇಡಿಯೊ ಇಯರ್‌ವಿಗ್ಸ್ ಧರಿಸಿರುವುದು ಕಾಣಿಸುತ್ತದೆ.&lt;/p&gt;&lt;p data-block-key="7s90t"&gt;ವೈರಲ್ ಆಗಿರುವ ಈ ವಿಡಿಯೊದಲ್ಲಿನ ಅತ್ಯಂತ ಮನಮೋಹಕ ಕ್ಷಣವೆಂದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಧೋನಿ ಅವರ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಅಭಿಮಾನಿ, ಮಾಜಿ ನಾಯಕನಿಗೆ ಪಾಪ್‌ಕಾರ್ನ್ ನೀಡಿದ ದೃಶ್ಯ. ಭಾರತೀಯ ತಂಡದ ಕ್ಯಾಪ್ ಹಾಗೂ ಸ್ಪೇನ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ಜೆರ್ಸಿ ಧರಿಸಿದ್ದ ಆ ಮಗು ಮುಗ್ಧವಾಗಿ ಧೋನಿ ಅವರೊಂದಿಗೆ ಮಾತನಾಡುತ್ತಾ, ತನ್ನ ಕೈಯಲ್ಲಿದ್ದ ಪಾಪ್‌ಕಾರ್ನ್ ಅನ್ನು ಅವರಿಗೆ ನೀಡಿತು.&lt;/p&gt;&lt;p data-block-key="bi7up"&gt;&lt;a href="/sports/cricket/jasprit-bumrah-become-1st-indian-player-to-pick-150-wickets-in-odis-200-in-tests-and-100-in-t20is-83725.html"&gt;&lt;b&gt;IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್‌ ಬುಮ್ರಾ!&lt;/b&gt;&lt;/a&gt;&lt;/p&gt;&lt;p data-block-key="8r7rp"&gt;ಆ ಪುಟ್ಟ ಅಭಿಮಾನಿಯ ಪ್ರೀತಿಯ ಕಾಣಿಕೆಯನ್ನು ಧೋನಿ ಕೂಡ ನಗುತ್ತಲೇ ಸ್ವೀಕರಿಸಿದರು. ಮಗುವಿನ ಮನಸ್ಸಿಗೆ ಸಂತೋಷವಾಗಲೆಂದು ಅವರು ಪಾಪ್‌ಕಾರ್ನ್ ತಿಂದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p data-block-key="aropl"&gt;ಈ ವೈರಲ್ ವಿಡಿಯೊದಲ್ಲಿ ಹೆಚ್ಚು ಗಮನ ಸೆಳೆದಿರುವುದು ಆ ಪುಟ್ಟ ಅಭಿಮಾನಿಯ ಮುಗ್ಧ ಮತ್ತು ನಿರಾಳ ವರ್ತನೆ. ಧೋನಿ ಅವರ ಪಕ್ಕದಲ್ಲೇ ಕುಳಿತಿದ್ದರೂ, ತನ್ನ ಪಕ್ಕದಲ್ಲಿ ವಿಶ್ವ ಕ್ರಿಕೆಟ್‌ನ ದಿಗ್ಗಜ ಸೂಪರ್‌ಸ್ಟಾರ್ ಕುಳಿತಿದ್ದಾರೆ ಎಂಬ ಅರಿವೇ ಇಲ್ಲದಂತೆ ಮಗು ಸಹಜವಾಗಿ ವರ್ತಿಸುತ್ತಿರುವುದು ಎಲ್ಲರ ಮನಗೆದ್ದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಗುವಿನ ಮುಗ್ಧತೆಯ ಜೊತೆಗೆ ಎಂಎಸ್ ಧೋನಿ ಅವರ ಸರಳ, ಸೌಮ್ಯ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣವನ್ನು ನೆಟ್ಟಿಗರು ಮನಸಾರೆ ಪ್ರಶಂಸಿಸುತ್ತಿದ್ದಾರೆ.&lt;/p&gt;&lt;p data-block-key="dtl9h"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Safe to say, this kid has the best &amp;#39;guess who I sat next to&amp;#39; story ever. &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; 1st ODI  Streaming LIVE on JioHotstar! &lt;a href="https://t.co/xsm27mbXsE"&gt;pic.twitter.com/xsm27mbXsE&lt;/a&gt;&lt;/p&gt;&amp;mdash; Star Sports (@StarSportsIndia) &lt;a href="https://x.com/StarSportsIndia/status/2077018403450355726?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="copi7"&gt;&lt;/p&gt;&lt;h3 data-block-key="570qt"&gt;&lt;b&gt;2020ರಲ್ಲಿಯೂ ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ&lt;/b&gt;&lt;/h3&gt;&lt;p data-block-key="bcj9v"&gt;ಎಂಎಸ್‌ ಧೋನಿ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಇದಾದ ಬಳಿಕ ಅವರು 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಅವರು 2026ರ ಐಪಿಎಲ್‌ ಟೂರ್ನಿಯಲ್ಲಿ ಆಡಬೇಕಾಗಿತ್ತು. ಆದರೆ, ಗಾಯದ ಕಾರಣ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಎಂಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ, 2007ರ ಐಸಿಸಿ ಟಿ20 ವಿಶ್ವಕಪ್‌, 2011ರ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಜಯಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಆಟಿಕೆ ಕಾರಿನ ಜತೆ ಮಗುವಿನಂತೆ ಆಟವಾಡಿದ ತಮಿಳುನಾಡು ಸಿಎಂ ವಿಜಯ್; ವೈರಲ್ ವಿಡಿಯೊ ಇಲ್ಲಿದೆ</title><link>https://vishwavani.news/viral/tamil-nadu-cm-vijay-gets-excited-after-seeing-a-toy-car-watch-the-video-83737.html</link><guid>https://vishwavani.news/viral/tamil-nadu-cm-vijay-gets-excited-after-seeing-a-toy-car-watch-the-video-83737.html</guid><pubDate>Tue, 14 Jul 2026 15:32:17 +0000</pubDate><description>&lt;![CDATA[Viral Video: ರಾಜಕೀಯಕ್ಕೆ ಹೆಜ್ಜೆ ಇಟ್ಟು ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡ ನಟ ವಿಜಯ್ ಮುಖ್ಯಮಂತ್ರಿಯಾಗಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರ ಮುಗ್ಧ ಕ್ಷಣವೊಂದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ‌. ಖ್ಯಾತ ರಾಜಕಾರಣಿಯಾದರೂ ಆಟಿಕೆ ಕಾರ್‌ ನೋಡಿ ಖುಷಿಪಟ್ಟಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/CM_Vijay_FJKjSzd.original.jpg" class="attachment-large size-large wp-post-image" alt="ಆಟಿಕೆ ಕಾರಿನ ಜತೆ ಮಗುವಿನಂತೆ ಆಟವಾಡಿದ ತಮಿಳುನಾಡು ಸಿಎಂ ವಿಜಯ್; ವೈರಲ್ ವಿಡಿಯೊ ಇಲ್ಲಿದೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="p0cs6"&gt;&lt;b&gt;​ತಮಿಳುನಾಡು, ಜು. 14:&lt;/b&gt; ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಹೆಜ್ಜೆ ಇಟ್ಟು ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡ ನಟ ವಿಜಯ್ &lt;a href="/movies/tamil-nadu-cm-vijay-visits-kollur-mookambika-devi-temple-80801.html"&gt;&lt;b&gt;(Tamil Nadu CM Vijay)&lt;/b&gt;&lt;/a&gt; ಮುಖ್ಯಮಂತ್ರಿಯಾಗಿ ಬ್ಯುಸಿ ಇದ್ದಾರೆ. ಅದರಲ್ಲೂ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರ ಮುಗ್ಧ ಕ್ಷಣದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್&lt;a href="/viral/microsoft-employee-expresses-frustration-saying-his-decision-to-leave-was-wrong-83623.html"&gt; &lt;b&gt;(Viral Video)&lt;/b&gt;&lt;/a&gt; ಆಗುತ್ತಿದೆ‌. ಖ್ಯಾತ ರಾಜಕಾರಣಿಯಾದರೂ ಆಟಿಕೆ ಕಾರ್‌ ನೋಡಿ ಮಕ್ಕಳಂತೆ ಖುಷಿ ಪಟ್ಟಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p data-block-key="cn20j"&gt;ಚೆನ್ನೈಯಲ್ಲಿ ಇತ್ತೀಚೆಗೆ ಬ್ಯುಸಿನೆಸ್‌ ಮೀಟಿಂಗ್ ಆಯೋಜಿಸಲಾಗಿತ್ತು. ವಿಯೆಟ್ನಾಂ ಎಲೆಕ್ಟ್ರಿಕ್ ವಾಹನ ತಯಾರಕ ಕಂಪೆನಿ ವಿನ್‌ಫಾಸ್ಟ್‌ನ ಅಧಿಕಾರಿಗಳು ವಿಜಯ್ ಅವರನ್ನು ಭೇಟಿ ಮಾಡಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯ ಕೊನೆಯಲ್ಲಿ ಕಂಪನಿಯು ವಿಜಯ್‌ಗೆ ಕಾಣಿಕೆಯಾಗಿ ಎಲೆಕ್ಟ್ರಿಕ್ ಕಾರಿನ ಮಾದರಿ ಟಾಯ್ ಕಾರ್ ಉಡುಗೊರೆಯಾಗಿ ನೀಡಿತು. ಇದನ್ನು ವಿಜಯ್‌ ಸಂಭ್ರಮದಿಂದ ಸ್ವೀಕರಿಸಿದರು.&lt;/p&gt;&lt;h3 data-block-key="f9uig"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="et" dir="ltr"&gt;Car vechinu vilaiyaditu irukaaru da jolly ahh&lt;a href="https://x.com/hashtag/CMJosephVijay%E2%80%8C?src=hash&amp;amp;ref_src=twsrc%5Etfw"&gt;#CMJosephVijay‌&lt;/a&gt; &lt;a href="https://t.co/f7LDt9bmGm"&gt;pic.twitter.com/f7LDt9bmGm&lt;/a&gt;&lt;/p&gt;&amp;mdash; Pavithra (@P_avithra_) &lt;a href="https://x.com/P_avithra_/status/2076623147475111973?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="bc341"&gt;ವಿನ್‌ಫಾಸ್ಟ್‌ ಕಂಪನಿ ತಮ್ಮ ಜಾಗತಿಕ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಎಸ್‌ಯುವಿ 'ವಿನ್‌ಫಾಸ್ಟ್ ವಿಎಫ್ 8' ಕಾರಿನ ಸಣ್ಣ ಮಾದರಿಯನ್ನು ಉಡುಗೊರೆಯಾಗಿ ವಿಜಯ್‌ಗೆ ನೀಡಿದೆ. ಈ ಆಟಿಕೆಯನ್ನು ವಿಜಯ್ ಅಲ್ಲೇ ಸಣ್ಣ ಮಕ್ಕಳಂತೆ ಕೂತೂಹಲದಿಂದ ನೋಡಿ ಮುದ್ದಾದ ನಗು ಬೀರಿದ್ದಾರೆ. ತನ್ನ ಮೇಜಿನ ಬಳಿ ಕುಳಿತಿದ್ದ ವಿಜಯ್ ಆ ಪುಟ್ಟ ಕಾರನ್ನು ಆಸಕ್ತಿಯಿಂದ ನೋಡಿ ಅದರ ಬಾಗಿಲು ಎಚ್ಚರಿಕೆಯಿಂದ ತೆರೆದು, ಕ್ಯಾಬಿನ್ ಒಳಗೆ ನೋಟ ಬೀರಿದ್ದಾರೆ. ಬಳಿಕ ಆ ಟಾಯ್‌ ಕಾರನ್ನು ಎಚ್ಚರಿಕೆಯಿಂದ ಎತ್ತಿಟ್ಟರು.&lt;/p&gt;&lt;p data-block-key="90ac8"&gt;&lt;a href="/viral/employee-responds-angrily-to-manager-asking-her-to-log-in-on-his-day-leave-83635.html"&gt;&lt;b&gt;ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಉದ್ಯೋಗಿ&lt;/b&gt;&lt;/a&gt;&lt;/p&gt;&lt;p data-block-key="128li"&gt;ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, "ಜಸ್ಟ್ ಮೆನ್ ಥಿಂಗ್ಸ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು "ಅತ್ಯಂತ ಮುಗ್ಧ ಕ್ಷಣ" ಎಂದು ಹೇಳಿದ್ದಾರೆ. ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ವಿಜಯ್ ಕೊನೆಯ ಸಿನಿಮಾ ʼಜನನಾಯಗನ್ʼ ಜುಲೈ ಕೊನೆಯ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Readers Colony: ಮೋಡ ಬಿತ್ತನೆ ಮಾಡಿ</title><link>https://vishwavani.news/odugara-oni/carry-out-cloud-seeding-83747.html</link><guid>https://vishwavani.news/odugara-oni/carry-out-cloud-seeding-83747.html</guid><pubDate>Tue, 14 Jul 2026 15:31:26 +0000</pubDate><description>&lt;![CDATA[ಮುಂಗಾರು ಮಳೆಯು ಆರಂಭದಲ್ಲಿ ಸಂತೋಷದಿಂದ ಪ್ರಾರಂಭವಾಗಿ ರೈತರ ಮೊಗದಲ್ಲಿ ನಗುವನ್ನು ತರಿಸಿತ್ತು. ಮಳೆಯನ್ನೆ ನಂಬಿದ ರೈತರು ಹತ್ತಿ ತೊಗರಿ ಮೆಕ್ಕೆಜೋಳದಂತಹ ಮುಂಗಾರು ಬೀತ್ತನೆಯ ಬೀಜವನ್ನು ಭೂಮಿತಾಯಿಯ ಮಡಿಲಿಗೆ ಹಾಕಿ ಖುಷಿಯಿಂದ ಹೊಲಗಳಲ್ಲಿ ಕೆಲಸ ಮಾಡತೊಡಗಿ ದ್ದರು. ರೈತರ ಮುಖದಲ್ಲಿನ ಖುಷಿ ಮಳೆರಾಯ ಬಹಳ ದಿನ ಇರಗೊಡಲಿಲ್ಲ]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಓದುಗರ ಓಣಿ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Reader.original.jpg" class="attachment-large size-large wp-post-image" alt="Readers Colony: ಮೋಡ ಬಿತ್ತನೆ ಮಾಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="79gsg"&gt;&lt;b&gt;ಓದುಗರ ಓಣಿ&lt;/b&gt;&lt;/p&gt;&lt;p data-block-key="98oqq"&gt;ಮುಂಗಾರು ಮಳೆಯು ಆರಂಭದಲ್ಲಿ ಸಂತೋಷದಿಂದ ಪ್ರಾರಂಭವಾಗಿ ರೈತರ ಮೊಗದಲ್ಲಿ ನಗು ವನ್ನು ತರಿಸಿತ್ತು. ಮಳೆಯನ್ನೆ ನಂಬಿದ ರೈತರು ಹತ್ತಿ ತೊಗರಿ ಮೆಕ್ಕೆಜೋಳದಂತಹ ಮುಂಗಾರು ಬೀತ್ತನೆಯ ಬೀಜವನ್ನು ಭೂಮಿತಾಯಿಯ ಮಡಿಲಿಗೆ ಹಾಕಿ ಖುಷಿಯಿಂದ ಹೊಲಗಳಲ್ಲಿ ಕೆಲಸ ಮಾಡತೊಡಗಿದ್ದರು. ರೈತರ ಮುಖದಲ್ಲಿನ ಖುಷಿ ಮಳೆರಾಯ ಬಹಳ ದಿನ ಇರಗೊಡಲಿಲ್ಲ. ದಿನ ಕಳೆದಂತೆ ಭೂಮಿಯ ತೇವಾಂಶ ಕಡಿಮೆಯಾಗುತ್ತಾ ಹೋಗಿ ಬೆಳೆಗಳು ಒಣಗಿ ನಿಂತಿವೆ. ಮೋಡಗಳು ಬರುತ್ತವೆ ಮಾಯವಾಗುತ್ತಿವೆ. ಬೆಳೆಗಳು ಒಣಗುತ್ತಿರುವುದು ನೋಡಿ ರೈತರ ಮುಖದ ಮೇಲಿನ ಕಳೆ ಬತ್ತಿ ಹೋಗಿದೆ. ರೈತರು ಮಳೆಯನ್ನೇ ನಂಬಿ ಸಾಲಶೂಲ ಮಾಡಿ ಭೂಮಿಗೆ ಬೀಜ ಹಾಕಿದ್ದಾರೆ. ಮಳೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ ಮುಂದಾಗಿ ಬೆಳೆಗಳನ್ನು ರಕ್ಷಣೆ ಮಾಡಬೇಕು. &lt;/p&gt;&lt;p data-block-key="400l1"&gt;&lt;b&gt;- ವಿಠಲ&lt;/b&gt; &lt;b&gt;ಆರ್. ಯಂಕಂಚಿ, ಬಮ್ಮನಜೋಗಿ&lt;/b&gt; &lt;/p&gt;&lt;p data-block-key="bb2st"&gt;&lt;b&gt;ಒಲ್ಲದ&lt;/b&gt; &lt;b&gt;ಮದುವೆಗೆ&lt;/b&gt; &lt;b&gt;ವಿಘ್ನ&lt;/b&gt; &lt;/p&gt;&lt;p data-block-key="bq2md"&gt;ಹಲವು ಇದೊಂದು ಕನ್ನಡದ ಹಳೆಯ ಗಾದೆ. ಬೃಹತ್ ಬೆಂಗಳೂರು ಪ್ರಾಧಿಕಾರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೆ ಹೋಗುತ್ತಿರುವ ಪರಿಯನ್ನು ನೊಡಿದಾಗ ಈ ಗಾದೆ ಬೇಡವೆಂದರೂ ನೆನಪಾಗುತ್ತದೆ. ಬೃಹತ್ ಬೆಂಗಳೂರು ಪ್ರಾಧಿಕಾರದಲ್ಲಿ ಜನಪ್ರತಿನಿಧಿಗಳ ಅಡಳಿತ ಮುಗಿದು ಸುಮಾರು ಐದು ವರ್ಷಗಳಾಗುತ್ತಿದ್ದು, ಇನ್ನೂ ಯಾವಾಗ ಚುನಾವಣೆ ನಡೆಯುತ್ತದೆ ಎನ್ನುವ ಬಗೆಗೆ ನಿಖರವಾದ ಮಾಹಿತಿ ಕಾಣುತ್ತಿಲ್ಲ. ಈ ಚುನಾವಣೆ ಎಷ್ಟು ಬಾರಿ ಮುಂದೆ ಹೋಗಿದೆ ಎನ್ನುವ ಲೆಕ್ಕವನ್ನು ಜನತೆ ಮರೆತಿದ್ದಾರೆ. ವಿಪಕ್ಷದಲ್ಲಿದ್ದಾಗ ಕೂಡಲೇ ಚುನಾವಣೆ ನಡೆಸಿ ಎಂದು ಕೂಗಾಡು ವವರು, ಅಡಳಿತ ಪಕ್ಷಕ್ಕೆ ಬಂದಾಗ ಜಾಣ ಮೌನ ವಹಿಸುತ್ತಾರೆ ಅಥವಾ ಚುನಾವಣೆ ಮುಂದೆ ಹೋಗುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು ಸದ್ಯ ಭವಿಷ್ಯದಲ್ಲಿ ಅಂತ್ಯ ಕಾಣಬಹುದೇ ಎನ್ನುವ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. &lt;/p&gt;&lt;p data-block-key="ekeah"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/aarama/earthen-amavasya-of-earthen-children-83699.html"&gt;Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ&lt;/a&gt;&lt;/p&gt;&lt;p data-block-key="c3ehv"&gt;&lt;b&gt;- ರಮಾನಂದ ಎಸ್, ಬೆಂಗಳೂರು &lt;/b&gt;&lt;/p&gt;&lt;p data-block-key="6ulu4"&gt;&lt;b&gt;ಬಡಪಾಯಿ ಮೇಲೆ ಪಾಶುಪತಾಸ್ತ್ರ ! &lt;/b&gt;&lt;/p&gt;&lt;p data-block-key="er4hn"&gt;ನೂತನ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮಾ ಧರಿಸಿ ಮಾರುವೇಷದಲ್ಲಿ ತಮ್ಮ ಇಲಾಖೆಗೆ ಸೇರಿದ ಬೆಂಗಳೂರು ನಗರ ಸಾರಿಗೆ ಬಸ್ ಏರಿ 12 ರೂ. ಟಿಕೆಟ್ಟಿಗೆ ರೂ.100ರ ನೋಟು ಕೊಟ್ಟು ಚಿಲ್ಲರೆ ಇಲ್ಲದ ಕಾರಣ ತಮ್ಮನ್ನು ಬಸ್ಸಿಂದ ಇಳಿಸಿದ ಕಂಡಕ್ಟರನಿಗೆ ಅಮಾನತು ಭಾಗ್ಯ ನೀಡಿzರೆ! ಬಿಟ್ಟಿ ಟಿಆರ್‌ಪಿ ಗಳಿಸಬಹುದೆಂಬ ಆಶಯ ಅವರದಾಗಿತ್ತೇನೋ? ಎಲ್ಲ ಪ್ರಯಾಣಿಕರಿಗೆ ಯುಪಿಐ ಮೂಲಕ ಹಣ ನೀಡಲು ಕಂಡಕ್ಟರ್ ಹೇಳಬೇಕಂತೆ. ಹಳ್ಳಿಗರು, ವೃದ್ಧರು, ಆ ಬಗ್ಗೆ ಅರಿವಿಲ್ಲದವರು ಏನು ಮಾಡಬೇಕು? ಬಸ್‌ಗಳಲ್ಲಿ ಫಲಕಗಳಿರುತ್ತವೆ. ವೃದ್ಧರಿಗೆ, ಅಂಗವಿಕಲರಿಗೆ ಸೀಟು ನೀಡಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಅದರಂತೆ ‘ದಯವಿಟ್ಟು ಚಿಲ್ಲರೆಯನ್ನೇ ಕೊಟ್ಟು ಸಹಕರಿಸಿ’ ಕೂಡಾ! ಆದರೆ ಪ್ರಯಾಣಿಕರು 100, 500ರ ನೋಟುಗಳನ್ನೇ ತಂದರೆ ಆ ಬಡಪಾಯಿ ನಿರ್ವಾಹಕ ಎಲ್ಲಿಂದ ಚಿಲ್ಲರೆ ಜೋಡಿಸುವುದು? ಹಾಗೂ ಹೀಗೂ ಮನೆಯಿಂದ ಕೊಂಚ ಚಿಲ್ಲರೆ ಹಿಡಿದುಕೊಂಡು ಬಂದರೆ ದಾರಿಯಲ್ಲಿ ಚೆಕಿಂಗ್ ಬರುವ ಇನ್‌ಸ್ಪೆಕ್ಟರ್, ಆ ಹಣ ಟಿಕೆಟ್ ಕೊಡದೇ ಕದ್ದ ಹಣ ಎಂದು ಕೇಸ್ ಹಾಕುವ ಪ್ರಮೇಯ ಬೇರೆ! &lt;/p&gt;&lt;p data-block-key="7te4s"&gt;ಶಕ್ತಿ ಯೋಜನೆ ಜಾರಿಯ ಬಳಿಕ ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಸ್ಸುಗಳಲ್ಲಿ ಬೆದರಿದ ಹುಯಂಥ ನಿರ್ವಾಹಕ ಸೀಟುಗಳ ಮೇಲೆ ಏರಿ, ಹಾರಿ, ಬಿದ್ದು ಟಿಕೆಟ್ ವಿತರಿಸಿ ಏದುಸಿರು ಬಿಡುತ್ತ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾನೆ. &lt;/p&gt;&lt;p data-block-key="5n5g3"&gt;ಮಾನ್ಯ ಸಚಿವರೇ, ಬಡಪಾಯಿ ಡ್ರೈವರ್, ಕಂಡಕ್ಟರುಗಳ ಮೇಲೆ ಪಾಶುಪತಾಸ ಹೂಡುವ ಬದಲು ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಿ. ದಾರಿಯಲ್ಲಿಯೇ ಕೆಟ್ಟು ನಿಲ್ಲುವ, ಪ್ರಯಾಣಿಕರ ಮೊಬೈಲ್ ಬೆಳಕಿನಲ್ಲಿ ಮುಂದೆ ಸಾಗುವ ಬಸ್ಸುಗಳನ್ನು ಗುಜರಿಗೆ ಹಾಕಿ ಹೊಸ ಬಸ್ಸುಗಳನ್ನು ಬಿಡಿ. ಗಬ್ಬು ನಾರುವ, 10 ರೂ. ಪೀಕುವ ಮೂತ್ರಾಲಯಗಳ ಬದಲಿಗೆ ಉಚಿತ, ಸ್ವಚ್ಛ ಶೌಚಾಲಯ ಒದಗಿಸಿ. ಉದ್ಯೋಗಿಗಳಿಗೆ ಸಕಾಲಕ್ಕೆ ಪ್ರತಿ ತಿಂಗಳ ವೇತನ, ಹಿಂಬಾಕಿ, ಆರೋಗ್ಯವಿವೆ ಒದಗಿಸಿ. ಡಿಪೋದಿಂದ ಬಸ್ ಹೊರಡುವ ಮುನ್ನ ಪ್ರತಿ ನಿರ್ವಾಹಕರಿಗೆ ಚಿಲ್ಲರೆ ಒದಗಿಸಿ. &lt;/p&gt;&lt;p data-block-key="cmnce"&gt;&lt;b&gt;- ಕೆ. ಶ್ರೀನಿವಾಸ&lt;/b&gt;&lt;/p&gt;&lt;p data-block-key="flo6r"&gt;&lt;b&gt;ಪುಸ್ತಕ ಓದುವ ಸಂಸ್ಕ ತಿ ಬೆಳೆಸಿ &lt;/b&gt;&lt;/p&gt;&lt;p data-block-key="cqu4h"&gt;ಓದುವ ಹವ್ಯಾಸ ಕ್ಷೀಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪುಸ್ತಕ ಸಂಸ್ಕ ತಿಯ ರಾಯಭಾರಿಗಳಂತೆ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಶಹರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಓದುಗರು ತಮ್ಮ ಓದಿನ ಹಸಿವೆಯನ್ನು ಗ್ರಂಥಾಲಯಗಳ ಮೂಲಕ ತೀರಿಸಿಕೊಳ್ಳು ತ್ತಿದ್ದಾರೆ. ಆದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2022ರಿಂದ ಇಂದಿನವರೆಗೆ ಪುಸ್ತಕಗಳನ್ನು ಖರೀದಿಸಿಲ್ಲ. ಇದರಿಂದ ಲೇಖಕರು- ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸ ಪುಸ್ತಕಗಳು ಸೇರ್ಪಡೆಗೊಳ್ಳದೆ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿಲ್ಲ. ನಾಗರಿಕರು ಗ್ರಂಥಾಲಯ ಸೆಸ್ ಕೊಡುತ್ತಿದ್ದಾರೆ. ಪುಸ್ತಕ ಓದುವ ಹವ್ಯಾಸ ಉತ್ತೇಜಿಸಿದರೆ ಸುಸಂಸ್ಕ ತ ಸಮಾಜ ನಿರ್ಮಾಣ ವಾಗುತ್ತದೆ. ಸರಕಾರ ನೆಪ ಹೇಳದೆ ಏಕಗವಾಕ್ಷಿ ಯೋಜನೆ ಮೂಲಕ ಪುಸ್ತಕ ಖರೀದಿ ಮಾಡಬೇಕು. &lt;/p&gt;&lt;p data-block-key="ajo8t"&gt;&lt;b&gt;- ಉದಯ ಮ. ಯಂಡಿಗೇರಿ, ಧಾರವಾಡ ರಾವ್, ಹರಪನಹಳ್ಳಿ &lt;/b&gt;&lt;/p&gt;&lt;p data-block-key="4iu7g"&gt;&lt;b&gt;ಪಾರ್ಕಿಂಗ್ ನಿಯಮ ಪಾಲಿಸಿ&lt;/b&gt; &lt;/p&gt;&lt;p data-block-key="cse14"&gt;ರಾಜಧಾನಿಯಲ್ಲಿ ನಿಂತ ನಿಂತ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿ. ನಿತ್ಯ ಬಳಕೆಯ ವಾಹನಗಳು ಈ ಕಾರ್ಯಚರಣೆಯ ವ್ಯಾಪ್ತಿಯಲ್ಲಿ ಈಗ ಇಲ್ಲ ಎಂದು ಹೇಳಲಾಗಿದೆ. ಮನೆಗಳನ್ನು ನಿರ್ಮಿಸುವಾಗಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸ ಬೇಕೆಂಬ ಕಾನೂನು ಹಲವು ವರ್ಷಗಳಿಂದ ಇದ್ದರೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲವೆಂದು ಸಚಿವ ಕೃಷ್ಣೇಗೌಡರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಏಪ್ರಿಲ್ 2021ರಲ್ಲಿ ರಾಮಚಂದ್ರ ರೆಡ್ಡಿ ವರ್ಸಸ್ ಕಮಿಷನರ್ ಆಫ್ ಪೊಲೀಸ್, ಬೆಂಗಳೂರು ಪ್ರಕರಣದಲ್ಲಿ ನೀಡಿದ ಸ್ಪಷ್ಟ ಆದೇಶವನ್ನೂ ಸಹ ಸಚಿವರು ಗಮನಿಸಬೇಕು. ಪಾರ್ಕಿಂಗ್ ಸೌಲಭ್ಯ ಕಡ್ಡಾಯ ಗೊಳಿಸಿ ರೂಪಿಸಿದ ನಿಯಮಗಳು 2021ಕ್ಕೆ ಆರೇಳು ವರ್ಷಗಳ ಮುಂಚೆಯೇ ಜಾರಿಗೆ ಬಂದಿರಬೇಕು. ಆದ್ದರಿಂದ, ಅಂದಿನಿಂದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಮನೆಗಳನ್ನು ಗುರ್ತಿಸಿ ಅಂತಹ ಮನೆಗಳ ಮಾಲಿಕರ ವಿರುದ್ಧ ಶಿಕ್ಷೆಯ ರೂಪದ ದಂಡವನ್ನು ವಿಧಿಸಲು ಮತ್ತು ನಿಯಮದ ಉಲ್ಲಂಘನೆಯನ್ನು ನಿರ್ಲಕ್ಷಿಸಿ ಕರ್ತವ್ಯ ಲೋಪವೆಸಗಿದ ಅಂದಿನ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಈಗಲಾದರೂ ಕ್ರಮ ಕೈಗೊಳ್ಳಲು ಕಾನೂನಿನ ತೊಡಕುಗಳಿವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಮತ್ತು ಈಗ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ತಕ್ಷಣವೇ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ ಕ್ರಮ ಜರುಗಿಸ ಬೇಕು. ಬೆಂಗಳೂರಿನ ಯಾವುದೇ ಬಡಾವಣೆಗೆ ಹೋದರೂ ಅಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುವುದನ್ನು ಕಾಣಬಹುದು. ಇವು ನಿತ್ಯ ಬಳಕೆಯವೇ ಇರಬಹುದು. ಆದಾಗ್ಯೂ, ಎಡೆಯೂ ಜನರು ರಸ್ತೆಗೆ ಇಳಿಯುವ ಅನಿವಾರ್ಯತೆ ಉದ್ಭವಿಸಿದೆ. ನಗರದ ಜನಸಂಖ್ಯೆಗೆ ಸವಾಲೆಸೆ ಯುವ ರೀತಿಯಲ್ಲಿ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಒಂದು ಕಡೆ ಕಟ್ಟುನಿಟ್ಟಿನ ನಿಯಮಗಳು ಹಾಗೂ ನ್ಯಾಯಾಲಯದ ಸ್ಪಷ್ಟ ಆದೇಶ, ಇನ್ನೊಂದು ಕಡೆ ಈ ಎರಡನ್ನೂ ಕಡೆಗಣಿಸಿರುವ ವ್ಯವಸ್ಥೆ. ಇಂತಹ ಅವ್ಯವಸ್ಥೆಯಲ್ಲಿ ನಗರ ಬದುಕಬೇಕಾಗಿದೆ! &lt;/p&gt;&lt;p data-block-key="bv010"&gt;&lt;b&gt;- ಸಾಮಗ ದತ್ತಾತ್ರಿ, ಬೆಂಗಳೂರು&lt;/b&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Indian biopics: ತೆರೆಗೆ ಬರಲಿವೆ ಸಾಲು ಸಾಲು ಬಯೋಪಿಕ್ ಸಿನಿಮಾಗಳು; ಯಾವುದೆಲ್ಲ?</title><link>https://vishwavani.news/movies/shraddha-kapoor-eetha-to-siddhant-chaturvedi-v-shantaram-real-stories-come-to-reel-world-83746.html</link><guid>https://vishwavani.news/movies/shraddha-kapoor-eetha-to-siddhant-chaturvedi-v-shantaram-real-stories-come-to-reel-world-83746.html</guid><pubDate>Tue, 14 Jul 2026 15:14:59 +0000</pubDate><description>&lt;![CDATA[Indian biopics: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಅವರ ಮೊದಲ ಲುಕ್‌ ಸದ್ದು ಮಾಡುತ್ತಿದ್ದಂತೆ, ಆರ್ ಮಾಧವನ್ (R Madhavan), ಶ್ರದ್ಧಾ ಕಪೂರ್, ಧನುಷ್ ಮತ್ತು ಇನ್ನೂ ಹೆಚ್ಚಿನವರು  ಬಯೋಪಿಕ್‌ವನ್ನು (Biopic) ತೆರೆಗೆ ತರಲು ಸಜ್ಜಾಗುತ್ತಿದ್ದಾರೆ.  ಇವುಗಳಲ್ಲದೆ, ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪ್ರಸಿದ್ಧ ನಟರಾದ ಪರ್ವೀನ್ ಬಾಬಿ, ಮಧುಬಾಲಾ ಮತ್ತು ಮೀನಾ ಕುಮಾರಿ ಅವರ ಜೀವನ ಚರಿತ್ರೆಯ ಕುರಿತಾದ ಚಲನಚಿತ್ರಗಳನ್ನು ಸಹ ಘೋಷಿಸಲಾಗಿದೆ. ಆದಾಗ್ಯೂ, ಪಾತ್ರವರ್ಗ, ನಿರ್ಮಾಣ ವಿವರಗಳು ಮತ್ತು ಬಿಡುಗಡೆ ದಿನಾಂಕಗಳ ಕುರಿತು ಹೆಚ್ಚಿನ ಅಪ್‌ಡೇಟ್‌ಗಳು ಇನ್ನೂ ನಿರೀಕ್ಷೆಯಲ್ಲಿವೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Shraddha_Kapoor__Eetha_to_Siddhant_Chaturvedi__.original.jpg" class="attachment-large size-large wp-post-image" alt="Indian biopics: ತೆರೆಗೆ ಬರಲಿವೆ ಸಾಲು ಸಾಲು ಬಯೋಪಿಕ್ ಸಿನಿಮಾಗಳು; ಯಾವುದೆಲ್ಲ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="gq3s6"&gt;ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಅವರ ಮೊದಲ ಲುಕ್‌ ಸದ್ದು ಮಾಡುತ್ತಿದ್ದಂತೆ, ಆರ್ ಮಾಧವನ್ (R Madhavan), ಶ್ರದ್ಧಾ ಕಪೂರ್, ಧನುಷ್ ಮತ್ತು ಇನ್ನೂ ಹೆಚ್ಚಿನವರು ಬಯೋಪಿಕ್‌ವನ್ನು (Biopic) ತೆರೆಗೆ ತರಲು ಸಜ್ಜಾಗುತ್ತಿದ್ದಾರೆ.&lt;/p&gt;&lt;h3 data-block-key="b6mca"&gt;&lt;b&gt;ಜಿಡಿಎನ್&lt;/b&gt;&lt;/h3&gt;&lt;p data-block-key="d72of"&gt;"ಭಾರತದ ಎಡಿಸನ್" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪ್ರಸಿದ್ಧ ಭಾರತೀಯ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಆರ್. ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;p data-block-key="dviep"&gt;ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶಿಸಿದ ಈ ಸಿನಿಮಾ ವಿಜ್ಞಾನ, ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಮಹತ್ವದ ಕೊಡುಗೆ ಇರಲಿದೆ.&lt;/p&gt;&lt;p data-block-key="don4o"&gt;ಈ ಚಿತ್ರದಲ್ಲಿ ಜಯರಾಮ್, ಸತ್ಯರಾಜ್, ಪ್ರಿಯಾಮಣಿ ಮತ್ತು ದುಷಾರ ವಿಜಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.&lt;/p&gt;&lt;h3 data-block-key="80pcf"&gt;&lt;b&gt;ಇಟಾ&lt;/b&gt;&lt;/h3&gt;&lt;p data-block-key="7cp7c"&gt;ಎರಡು ವರ್ಷಗಳ ವಿರಾಮದ ನಂತರ ದೊಡ್ಡ ಪರದೆಗೆ ಮರಳುತ್ತಿರುವ ಶ್ರದ್ಧಾ ಕಪೂರ್, ಪ್ರಸಿದ್ಧ ಮರಾಠಿ ಜಾನಪದ ಕಲಾವಿದೆ ವಿಠಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ ಈ ಚಿತ್ರವು ಇದು ಆಗಸ್ಟ್ 28 ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ.&lt;/p&gt;&lt;p data-block-key="2cpi3"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/DJ7EItMCcy5/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DJ7EItMCcy5/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DJ7EItMCcy5/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Dhanush (@dhanushkraja)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2ujvk"&gt;&lt;/p&gt;&lt;p data-block-key="86gbn"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/jr-ntr-entering-politics-actor-clarifies-upcoming-event-83735.html"&gt;Jr NTR: ಜ್ಯೂ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ? ನಟ ಕೊಟ್ಟ ಕ್ಲಾರಿಟಿ ಇದು&lt;/a&gt;&lt;/p&gt;&lt;h3 data-block-key="4lmsl"&gt;&lt;b&gt;Prahaar: The Ujjawal Nikam Story&lt;/b&gt;&lt;/h3&gt;&lt;p data-block-key="c8nue"&gt;ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು, ಭಾರತದ ಖ್ಯಾತ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ಪ್ರಯಾಣ ಕುರಿತು ಇದೆ. ಅವಿನಾಶ್ ಅರುಣ್ ನಿರ್ದೇಶಿಸಿದ ಈ ಜೀವನಚರಿತ್ರೆಯ ನಾಟಕದಲ್ಲಿ ವಾಮಿಕಾ ಗಬ್ಬಿ, ಜೈದೀಪ್ ಅಹ್ಲಾವತ್ ಮತ್ತು ಸಿಕಂದರ್ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;&lt;h3 data-block-key="3gf13"&gt;&lt;b&gt;Kalam: The Missile Man of India&lt;/b&gt;&lt;/h3&gt;&lt;p data-block-key="eb0fo"&gt;ಭಾರತದ ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯ ಕುರಿತಾದ ಒಂದು ಜೀವನ ಚರಿತ್ರೆ ನಿರ್ಮಾಣ ಹಂತದಲ್ಲಿದೆ, ಇದರಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಓಂ ರಾವತ್ ನಿರ್ದೇಶಕರ ಟೋಪಿ ಧರಿಸಿದ್ದಾರೆ. ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ನಿಂದ ಸ್ಫೂರ್ತಿ ಪಡೆದಿದೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;&lt;h3 data-block-key="67dkv"&gt;&lt;b&gt;ಮಾ ವಂದೇ&lt;/b&gt;&lt;/h3&gt;&lt;p data-block-key="vs9q"&gt;ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಪ್ರಯಾಣವನ್ನು ವಿವರಿಸುವ ಈ ಕ್ರಾಂತಿ ಕುಮಾರ್ ಸಿಎಚ್ ನಿರ್ದೇಶಿಸಿದ ಈ ಚಿತ್ರದಲ್ಲಿ ಉನ್ನಿ ಮುಕುಂದನ್ ಪ್ರಮುಖ ಪಾತ್ರದಲ್ಲಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ&lt;/p&gt;&lt;h3 data-block-key="ba5ps"&gt;&lt;b&gt;ವಿ ಶಾಂತಾರಾಮ್&lt;/b&gt;&lt;/h3&gt;&lt;p data-block-key="eiv1n"&gt;ಸಿದ್ಧಾಂತ್ ಚತುರ್ವೇದಿ ನಾಯಕನಾಗಿ ನಟಿಸಿರುವ ಈ ಚಿತ್ರವು ಭಾರತೀಯ ಚಿತ್ರರಂಗದ ಪ್ರವರ್ತಕರಲ್ಲಿ ಒಬ್ಬರಾದ ಪೌರಾಣಿಕ ಚಲನಚಿತ್ರ ನಿರ್ಮಾಪಕ ಶಾಂತಾರಾಮ್ ರಾಜಾರಾಮ್ ವಾಂಕುದ್ರೆ ಅವರ ಪ್ರಯಾಣವನ್ನು ವಿವರಿಸುತ್ತದೆ. ಅಭಿಜೀತ್ ಶಿರೀಶ್ ದೇಶಪಾಂಡೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;h3 data-block-key="dalt7"&gt;&lt;b&gt;ರಾಕೇಶ್ ಮಾರಿಯಾ ಜೀವನಚರಿತ್ರೆ&lt;/b&gt;&lt;/h3&gt;&lt;p data-block-key="3mra8"&gt;ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂದಿನ ಇನ್ನೂ ಹೆಸರಿಡದ ಯೋಜನೆಯು ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರ ಜೀವನವನ್ನು ಆಧರಿಸಿದೆ. ಇದರಲ್ಲಿ ಜಾನ್ ಅಬ್ರಹಾಂ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;&lt;p data-block-key="12c3n"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/C4umoktRZGV/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/C4umoktRZGV/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/C4umoktRZGV/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Dhanush (@dhanushkraja)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="c06q0"&gt;&lt;/p&gt;&lt;h3 data-block-key="fa6p2"&gt;&lt;b&gt;ಇಳಯರಾಜ&lt;/b&gt;&lt;/h3&gt;&lt;p data-block-key="2s2q3"&gt;ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಸಸ ಬಿಡುಗಡೆ ದಿನಾಂಕವನ್ನು ಇನ್ನೂ ದೃಢಪಡಿಸಲಾಗಿಲ್ಲ.&lt;/p&gt;&lt;p data-block-key="74a7r"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/after-tabaahi-musician-vishal-mishra-begins-work-on-fourth-song-83730.html"&gt;Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?&lt;/a&gt;&lt;/p&gt;&lt;p data-block-key="alu7m"&gt;ಇವುಗಳಲ್ಲದೆ, ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪ್ರಸಿದ್ಧ ನಟರಾದ ಪರ್ವೀನ್ ಬಾಬಿ, ಮಧುಬಾಲಾ ಮತ್ತು ಮೀನಾ ಕುಮಾರಿ ಅವರ ಜೀವನ ಚರಿತ್ರೆಯ ಕುರಿತಾದ ಚಲನಚಿತ್ರಗಳನ್ನು ಸಹ ಘೋಷಿಸಲಾಗಿದೆ. ಆದಾಗ್ಯೂ, ಪಾತ್ರವರ್ಗ, ನಿರ್ಮಾಣ ವಿವರಗಳು ಮತ್ತು ಬಿಡುಗಡೆ ದಿನಾಂಕಗಳ ಕುರಿತು ಹೆಚ್ಚಿನ ನವೀಕರಣಗಳು ಇನ್ನೂ ನಿರೀಕ್ಷೆಯಲ್ಲಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಸದಂತೆ ತಡೆದಿದ್ದು ಪ್ರಧಾನಿ ನರೇಂದ್ರ ಮೋದಿ: ಮಹತ್ವದ ಮಾಹಿತಿ ಹಂಚಿಕೊಂಡ ಪೋಲೆಂಡ್‌</title><link>https://vishwavani.news/foreign/pm-narendra-modi-stopped-putin-from-nuking-ukraine-in-2022-83745.html</link><guid>https://vishwavani.news/foreign/pm-narendra-modi-stopped-putin-from-nuking-ukraine-in-2022-83745.html</guid><pubDate>Tue, 14 Jul 2026 15:06:52 +0000</pubDate><description>&lt;![CDATA[Russia-Ukraine War: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿರುವುದು ಮತ್ತೊಮ್ಮೆ ಸಾಬೀತಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಕುರಿತು ಮಾತನಾಡಿರುವ ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ಮೋದಿ ಮನವೊಲಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vladimir_Putin_and_Pm_Modi.original.jpg" class="attachment-large size-large wp-post-image" alt="ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಸದಂತೆ ತಡೆದಿದ್ದು ಪ್ರಧಾನಿ ನರೇಂದ್ರ ಮೋದಿ: ಮಹತ್ವದ ಮಾಹಿತಿ ಹಂಚಿಕೊಂಡ ಪೋಲೆಂಡ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ehq8h"&gt;&lt;b&gt;ದೆಹಲಿ, ಜು. 14:&lt;/b&gt; ಹಿಂದಿನಿಂದಲೂ ಭಾರತ ಹಿಂಸೆ, ಯುದ್ಧವನ್ನು ವಿರೋಧಿಸುತ್ತಲೇ ಬರುತ್ತಿದೆ. ಯಾವುದೇ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಬೇಕೆಂದು ಯಾವಾಗಲೂ ಪ್ರತಿಪಾದಿಸುತ್ತಿದೆ. ರಷ್ಯಾ-ಉಕ್ರೇನ್‌, ಅಮೆರಿಕ-ಇಸ್ರೇಲ್‌-ಇರಾನ್‌ ಯುದ್ಧವನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಸಲಹೆ ನೀಡುತ್ತಲೇ ಬಂದಿದೆ. ಇದೀಗ ಪೋಲೆಂಡ್‌ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ. 2022ರಲ್ಲಿ ರಷ್ಯಾವು ಉಕ್ರೇನ್‌ ವಿರುದ್ಧ ಅಣ್ವಸ್ತ್ರ ಬಳಸಲು ಮುಂದಾದಾಗ ಭಾರತ ತಡೆದಿತ್ತು ಎಂದು ಪೋಲೆಂಡ್ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ (Wladyslaw Teofil Bartoszewski) ತಿಳಿಸಿದ್ದಾರೆ.&lt;/p&gt;&lt;p data-block-key="d2co3"&gt;ರಷ್ಯಾ-ಉಕ್ರೇನ್ ಯುದ್ಧವು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆದ ಭಾರತದ ನಿಲುವನ್ನು ಪೋಲೆಂಡ್ ಶ್ಲಾಘಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಹಳ ಗೌರವಿಸುವ ಕೆಲವೇ ಕಲವು ವಿಶ್ವ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದು ಹೇಳಿದ್ದಾರೆ.&lt;/p&gt;&lt;h3 data-block-key="alr8m"&gt;&lt;b&gt;ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಅವರ ಹೇಳಿಕೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | Delhi: On the Russia-Ukraine conflict, Secretary of State of the Polish Minister of Foreign Affairs, Władysław Teofil Bartoszewski, says, &amp;quot;Prime Minister Narendra Modi is a very well-known world statesman, who is very respected, and India has a long-standing relationship… &lt;a href="https://t.co/R38wQurE9u"&gt;pic.twitter.com/R38wQurE9u&lt;/a&gt;&lt;/p&gt;&amp;mdash; ANI (@ANI) &lt;a href="https://x.com/ANI/status/2076976843757162681?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;h3 data-block-key="5o6o6"&gt;&lt;b&gt;ಪ್ರಧಾನಿ ಮೋದಿ ಪಾತ್ರ&lt;/b&gt;&lt;/h3&gt;&lt;p data-block-key="5t80r"&gt;2022ರ ಅಂತ್ಯದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ʼʼರಷ್ಯಾ-ಉಕ್ರೇನ್‌ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ವ್ಲಾಡಿಮಿರ್ ಪುಟಿನ್ ಮನವೊಲಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರುʼʼ ಎಂದು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿದ ಬಾರ್ಟೋಸ್ಜೆವ್ಸ್ಕಿ, ʼʼರಷ್ಯಾದೊಂದಿಗಿನ ಭಾರತದ ದಶಕಗಳಷ್ಟು ಹಳೆಯ ಸಂಬಂಧವು ಶಾಂತಿಗಾಗಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆʼʼ ಎಂದಿದ್ದಾರೆ.&lt;/p&gt;&lt;p data-block-key="903r9"&gt;&lt;a href="/national/assam-tea-bhagavad-gita-silver-horse-gifts-presented-by-prime-minister-modi-to-russian-president-putin-62755.html"&gt;&lt;b&gt;ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ&lt;/b&gt;&lt;/a&gt;&lt;/p&gt;&lt;p data-block-key="9o8cd"&gt;ʼʼಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಸಿದ್ಧ ರಾಜಕಾರಣಿ. ಅವರು ಬಹಳ ಗೌರವಾನ್ವಿತರು. ಭಾರತವು ರಷ್ಯಾದ ಒಕ್ಕೂಟದೊಂದಿಗೆ ಮತ್ತು ಅದಕ್ಕೂ ಮೊದಲು, ಅಲಿಪ್ತ ರಾಷ್ಟ್ರವಾಗಿ ಸೋವಿಯತ್ ಒಕ್ಕೂಟದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಅವರ ಮಾತಿಗೆ ಗೌರವ ಕೊಡುತ್ತಾರೆʼʼ ಎಂದು ವಿವರಿಸಿದ್ದಾರೆ.&lt;/p&gt;&lt;p data-block-key="7q89j"&gt;ರಷ್ಯಾ ಜತೆಗಿನ ಸಂವಹನ ಹೆಚ್ಚು ಕಷ್ಟವಾಗಿರುವ ಸಮಯದಲ್ಲಿ ಅಧ್ಯಕ್ಷರ ಮೇಲೆ ಪ್ರಭಾವ ಬೀರುವ ಕೆಲವೇ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಭಾರತದ ಜತೆಗೆ ರಷ್ಯಾ ಚೀನಾದ ಮಾತನ್ನೂ ಆಲಿಸುತ್ತದೆ ಎಂದು ತಿಳಿಸಿದ್ದಾರೆ. "ಪ್ರಧಾನಿ ಮೋದಿ ಅವರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಪುಟಿನ್‌ ಮೇಲೆ ಪ್ರಭಾವ ಬೀರುವ ನಾಯಕರುʼʼ ಎಂದು ಬಾರ್ಟೋಸ್ಜೆವ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p data-block-key="4s304"&gt;&lt;a href="/national/pm-speaks-to-trump-underscores-need-to-enhance-trade-amid-tariff-tensions-63296.html"&gt;&lt;b&gt;ಪುಟಿನ್‌ ಭಾರತ ಭೇಟಿ ಬೆನ್ನಲ್ಲೇ ಮೋದಿಗೆ ಕರೆ ಮಾಡಿದ ಟ್ರಂಪ್‌! ಆಗಿದ್ದೇನು?&lt;/b&gt;&lt;/a&gt;&lt;/p&gt;&lt;h3 data-block-key="fsv88"&gt;&lt;b&gt;ಭಾರತದ ಬಗ್ಗೆ ಮೆಚ್ಚುಗೆ ಸೂಚಿಸಿದ ಪುಟಿನ್‌&lt;/b&gt;&lt;/h3&gt;&lt;p data-block-key="2nuff"&gt;ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಪುಟಿನ್ ಮೆಚ್ಚುಗೆ ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. "ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದ ಮೇಲೆ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಮಾರಕ ಎಂದು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ" ಎಂದು ಪುಟಿನ್ ತಿಳಿಸಿದ್ದರು. "ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಮುಖ್ಯವೆಂದು ಭಾವಿಸುವ ಎಲ್ಲ ದೇಶಗಳೊಂದಿಗೆ ತನ್ನ ಸಂಬಂಧವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸಂತಸ ತಂದಿದೆ" ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="49kq"&gt;&lt;a href="https://vishwavani.news/foreign/"&gt;&lt;b&gt;ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;&lt;p data-block-key="aetb6"&gt;&lt;a href="https://www.pravasiprapancha.com/"&gt;&lt;b&gt;ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Almatti Dam : ಕುಡಿಯುವ ನೀರಿಗೆ ಮಾತ್ರ ಆದ್ಯತೆ: ಜಲಾಶಯಗಳು ಆರ್.ಸಿ. ವ್ಯಾಪ್ತಿಗೆ</title><link>https://vishwavani.news/karnataka/bagalkot/priority-for-drinking-water-only-reservoirs-brought-under-rc-jurisdiction-83742.html</link><guid>https://vishwavani.news/karnataka/bagalkot/priority-for-drinking-water-only-reservoirs-brought-under-rc-jurisdiction-83742.html</guid><pubDate>Tue, 14 Jul 2026 14:41:28 +0000</pubDate><description>&lt;![CDATA[ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಕೃಷ್ಣಾ ನದಿಯನ್ನೇ ಅವಲಂಬಿಸಿದೆ. ಕಲಬುರಗಿ ನಗರದ ಸರಡಗಿ ಬ್ಯಾರೇಜ್ ಸೇರಿದಂತೆ ಇಂಡಿ, ಸಿಂದಗಿ, ತಾಳಿಕೋಟೆ ಭಾಗಗಳಿಗೆ ನಾರಾಯಣಪುರ ಜಲಾಶಯದಿಂದ ಸುಮಾರು 150 ಕಿ.ಮೀ. ದೂರದವರೆಗೆ ನೀರು ಹರಿಸ ಬೇಕಾಗುತ್ತದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬಾಗಲಕೋಟೆ]]&gt;</category><category>&lt;![CDATA[ವಿಜಯಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/WhatsApp_Image_2026-07-14_at_8.04.33_PM_ok.original.jpg" class="attachment-large size-large wp-post-image" alt="Almatti Dam : ಕುಡಿಯುವ ನೀರಿಗೆ ಮಾತ್ರ ಆದ್ಯತೆ: ಜಲಾಶಯಗಳು ಆರ್.ಸಿ. ವ್ಯಾಪ್ತಿಗೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="0jlvg"&gt;&lt;b&gt;ಆಲಮಟ್ಟಿ:&lt;/b&gt; ರಾಜ್ಯದ ಬರ ಪರಿಸ್ಥಿತಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಯ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಸದ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು, ನೀರಾವರಿಗೆ ನೀರು ಬಳಸದೇ ಇರಲು ನಿರ್ಧರಿಸಲಾಗಿದೆ.&lt;/p&gt;&lt;p data-block-key="bhcgi"&gt;ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೃಷ್ಣಾ ಜಲಾನಯನ ಪ್ರದೇಶದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ನೀರಾವರಿ ನಿಗಮಗಳು, ವಿದ್ಯುತ್ ಪ್ರಸರಣ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.&lt;/p&gt;&lt;p data-block-key="eo7n9"&gt;ಸಭೆಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ನೀರಿನ ಲಭ್ಯತೆ, 2027ರ ಜೂನ್‌ ವರೆಗೆ ಕುಡಿಯುವ ನೀರಿನ ಅವಶ್ಯಕತೆ, ಕಾಲುವೆಗಳಿಗೆ ನೀರು ಹರಿಸುವಿಕೆ ಹಾಗೂ ನೀರಾವರಿಗೆ ನೀರು ಬಿಡುಗಡೆ ಕುರಿತು ಸುದೀರ್ಘ ಚರ್ಚೆ ನಡೆಯಿತು.&lt;/p&gt;&lt;p data-block-key="5b49n"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/vijayapura/kp-mohana-raja-given-additional-powers-as-commissioner-of-rehabilitation-department-53781.html"&gt;Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ&lt;/a&gt;&lt;/p&gt;&lt;p data-block-key="dv6t0"&gt;ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಕೃಷ್ಣಾ ನದಿಯನ್ನೇ ಅವಲಂಬಿಸಿದೆ. ಕಲಬುರಗಿ ನಗರದ ಸರಡಗಿ ಬ್ಯಾರೇಜ್ ಸೇರಿದಂತೆ ಇಂಡಿ, ಸಿಂದಗಿ, ತಾಳಿಕೋಟೆ ಭಾಗಗಳಿಗೆ ನಾರಾಯಣಪುರ ಜಲಾಶಯದಿಂದ ಸುಮಾರು 150 ಕಿ.ಮೀ. ದೂರದವರೆಗೆ ನೀರು ಹರಿಸ ಬೇಕಾಗುತ್ತದೆ.&lt;/p&gt;&lt;p data-block-key="l9ud"&gt;ವರ್ಷಪೂರ್ತಿ ಕುಡಿಯುವ ನೀರಿಗೆ ಸುಮಾರು 2 ಟಿಎಂಸಿ ಅಡಿ ನೀರು ಅಗತ್ಯವಿದ್ದರೂ, ನೀರಾವರಿ ನೀರು ಬಿಡದ ಪರಿಸ್ಥಿತಿಯಲ್ಲಿ ಆ ಭಾಗಗಳಿಗೆ ನೀರು ತಲುಪಿಸಲು ಕನಿಷ್ಠ 5 ಟಿಎಂಸಿ ಅಡಿ ನೀರು ಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕೆರೆಗಳ ಭರ್ತಿಗೂ ಬೇಡಿಕೆಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ನೀರು ಅಗತ್ಯವಾಗುತ್ತದೆ ಎಂಬ ವಿಷಯ ಚರ್ಚೆಯಾಯಿತು ಎನ್ನಲಾಗಿದೆ.&lt;/p&gt;&lt;p data-block-key="dgsfj"&gt;ಸಭೆಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರು, ನಂತರ ರಾಯಚೂರು, ಕೂಡಗಿ, ಯರಮರಸ್ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನೀರು ಹಾಗೂ ಕುಡಿಯುವ ನೀರು ಪೂರೈಕೆಯಾಗುವ ಕೆರೆಗಳ ಭರ್ತಿಗೆ ಆದ್ಯತೆ ನೀಡಲು ಗೌರವ ಗುಪ್ತಾ ಸೂಚನೆ ನೀಡಿದರು.&lt;/p&gt;&lt;p data-block-key="99rmp"&gt;&lt;b&gt;ಒಳಹರಿವು ಬಹುತೇಕ ಸ್ಥಗಿತ;&lt;/b&gt; ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ಸಂಜೆ ವೇಳೆಗೆ ಕೇವಲ 423 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಐದು ದಿನಗಳ ಹಿಂದೆ ಇದ್ದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಈಗ ಬಹುತೇಕ ಸ್ಥಗಿತಗೊಂಡಿದೆ. ಜಲಾಶಯದಲ್ಲಿ 517.37 ಮೀಟರ್ ಎತ್ತರ ದಲ್ಲಿ 89 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.&lt;/p&gt;&lt;p data-block-key="80dbo"&gt;ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳ ಸ್ಥಿತಿ ಸುಧಾರಿಸಿದ ನಂತರ ಮಾತ್ರ ಒಂದು ಬೆಳೆಗೆ ನೀರಾವರಿ ನೀರು ಬಿಡುವ ಕುರಿತು ಮರುಪರಿಶೀಲನೆ ನಡೆಸಲಾಗುವುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.&lt;/p&gt;&lt;p data-block-key="rkfv"&gt;&lt;b&gt;ಪ್ರಾದೇಶಿಕ ಆಯುಕ್ತರ ಅಧೀನದಲ್ಲೇ ಜಲಾಶಯಗಳು:&lt;/b&gt; 2014ರ ಸರ್ಕಾರದ ಆದೇಶದಂತೆ ಬೇಸಿಗೆ ಹಾಗೂ ಮಳೆಯ ಕೊರತೆಯ ಸಂದರ್ಭದಲ್ಲಿ ಜಲಾಶಯಗಳ ನೀರಿನ ನಿರ್ವಹಣೆಯನ್ನು ಸಂಬಂಧಿ ಸಿದ ಪ್ರಾದೇಶಿಕ ಆಯುಕ್ತರ ಸುಪರ್ದಿಗೆ ವಹಿಸಲಾಗುತ್ತದೆ. ಅದರಂತೆ ಏಪ್ರಿಲ್‌ನಿಂದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಬೆಳಗಾವಿ ಪ್ರಾದೇಶಿಕ ಆಯುಕ್ತರ ಮತ್ತು ನಾರಾಯಣಪುರ ಜಲಾಶಯ ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧೀನದಲ್ಲಿದ್ದು, ಇದೇ ವ್ಯವಸ್ಥೆ ಮುಂದುವರಿಯ ಲಿದೆ.&lt;/p&gt;&lt;p data-block-key="9dbt0"&gt;ಕುಡಿಯುವ ನೀರಿನ ಅಗತ್ಯ ಕುರಿತು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ, ಅವರ ಅನುಮತಿ ಮೇರೆಗೆ ಮಾತ್ರ ಸಂಬಂಧಿತ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಗೌರವ ಗುಪ್ತಾ ಸ್ಪಷ್ಟ ನಿರ್ದೇಶನ ನೀಡಿದರು.&lt;/p&gt;&lt;p data-block-key="doqui"&gt;ಜುಲೈ 3ರಂದು ರಾಜ್ಯ ಸಚಿವ ಸಂಪುಟ ಕೈಗೊಂಡ ತೀರ್ಮಾನದಂತೆ, ಈ ವರ್ಷ ಮೊದಲ ಆದ್ಯತೆ ಕುಡಿಯುವ ನೀರಿಗೆ ನೀಡಲಾಗಿದ್ದು, ಎಲ್-ನಿನೋ ಪರಿಣಾಮದಿಂದ ಮಳೆ ದುರ್ಬಲವಾಗಿರುವ ಕಾರಣ ನೀರಾವರಿಗೆ ನೀರು ಬಳಸಲು ಅವಕಾಶವಿಲ್ಲ. ಪ್ರತಿ ವರ್ಷ ಕಾಲುವೆಗಳಿಗೆ ನೀರು ಹರಿಸ ಲಾಗುತ್ತಿದ್ದು, ಈ ಒಂದು ವರ್ಷ ರೈತರು ಸಹಕರಿಸಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು.&lt;/p&gt;&lt;p data-block-key="6timt"&gt;ಸಭೆಯಲ್ಲಿ ಕೆಬಿಜೆಎನ್‌ಎಲ್, ಕೆಎನ್ ಎನ್ ಎಲ್, ವಿವಿಧ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತೀತರರು ಇದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Haveri Rain Deficit: ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು</title><link>https://vishwavani.news/karnataka/haveri/farmers-in-haveri-district-are-worried-due-to-lack-of-monsoon-rains-83736.html</link><guid>https://vishwavani.news/karnataka/haveri/farmers-in-haveri-district-are-worried-due-to-lack-of-monsoon-rains-83736.html</guid><pubDate>Tue, 14 Jul 2026 14:38:05 +0000</pubDate><description>&lt;![CDATA[Haveri News: ಕಳೆದ ಐದು ದಿನಗಳಿಂದ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾದ್ಯಂತ ತೀವ್ರ ಬಿಸಿಲು ಆವರಿಸಿದ್ದು, ಬಂಪರ್ ಬೆಳೆ ಕನಸು ಕಂಡಿದ್ದ ಸಾವಿರಾರು ರೈತರಲ್ಲಿ ಆತಂಕ ಮನೆಮಾಡಿದೆ. ಕೆಲವೇ ದಿನಗಳ ಹಿಂದೆ ಧಾರಾಕಾರ ಮಳೆಯಿಂದ ಹಸಿರು ಹೊದಿಕೆ ಹೊದ್ದಿದ್ದ ಜಿಲ್ಲೆಯ ಕೃಷಿ ಭೂಮಿ ಈಗ ಮತ್ತೆ ಬಿರು ಬಿಸಿಲಿನ ಹೊಡೆತಕ್ಕೆ ತತ್ತರಿಸಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಹಾವೇರಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಜಿಲ್ಲೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Haveri_News_SOygvqB.original.jpg" class="attachment-large size-large wp-post-image" alt="Haveri Rain Deficit: ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="xouo5"&gt;&lt;b&gt;| ಪರಶುರಾಮ ಎಸ್.ಡಿ, ಹಾವೇರಿ&lt;/b&gt;&lt;/p&gt;&lt;p data-block-key="bfqa9"&gt;ಕೆಲವೇ ದಿನಗಳ ಹಿಂದೆ ಧಾರಾಕಾರ ಮಳೆಯಿಂದ ಹಸಿರು ಹೊದಿಕೆ ಹೊದ್ದಿದ್ದ ಹಾವೇರಿ ಜಿಲ್ಲೆಯ (Haveri News) ಕೃಷಿ ಭೂಮಿ ಈಗ ಮತ್ತೆ ಬಿರು ಬಿಸಿಲಿನ ಹೊಡೆತಕ್ಕೆ ತತ್ತರಿಸಿದೆ. ಕಳೆದ ಐದು ದಿನಗಳಿಂದ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತೀವ್ರ ಬಿಸಿಲು ಆವರಿಸಿದ್ದು, ಬಂಪರ್ ಬೆಳೆ ಕನಸು ಕಂಡಿದ್ದ ಸಾವಿರಾರು ರೈತರಲ್ಲಿ ಆತಂಕ ಮನೆಮಾಡಿದೆ.&lt;/p&gt;&lt;p data-block-key="6k5j0"&gt;ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದ ರೈತರು ಜೋಳ, ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳನ್ನು ಭರವಸೆಯಿಂದ ಬಿತ್ತನೆ ಮಾಡಿದ್ದರು. ಉತ್ತಮ ಇಳುವರಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಗೊಬ್ಬರ, ಬೀಜ, ಔಷಧಿ ಹಾಗೂ ಕೃಷಿ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರು. ಆದರೆ ಇದೀಗ ಮಳೆ ಕೈಕೊಟ್ಟು ಬಿರು ಬಿಸಿಲು ಹೆಚ್ಚಾಗಿರುವುದರಿಂದ ಮೊಳಕೆಯೊಡೆದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿವೆ.&lt;/p&gt;&lt;p data-block-key="9659f"&gt;ಬಿಸಿಲಿನ ತೀವ್ರತೆಗೆ ಮಣ್ಣಿನ ತೇವಾಂಶ ವೇಗವಾಗಿ ಕಡಿಮೆಯಾಗುತ್ತಿದ್ದು, ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಬೆಳೆಗಳು ಜೀವ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ದಿನದಿಂದ ದಿನಕ್ಕೆ ಹೊಲಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ರೈತರ ಆತಂಕವೂ ಹೆಚ್ಚುತ್ತಿದೆ.&lt;/p&gt;&lt;p data-block-key="e6m5d"&gt;ಹವಾಮಾನ ವೈಪರೀತ್ಯದಿಂದ ಕೃಷಿ ಸಂಪೂರ್ಣ ಅನಿಶ್ಚಿತತೆಯತ್ತ ಸಾಗುತ್ತಿದೆ. ಕೆಲ ದಿನಗಳ ಹಿಂದೆ ಅತಿವೃಷ್ಟಿಯ ಭೀತಿ ಎದುರಿಸಿದ್ದ ರೈತರು ಈಗ ಅನಾವೃಷ್ಟಿಯ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಒಂದೆಡೆ ಹೆಚ್ಚುತ್ತಿರುವ ಕೃಷಿ ವೆಚ್ಚ, ಮತ್ತೊಂದೆಡೆ ಮಳೆಯ ಅನಿಶ್ಚಿತತೆ ರೈತನ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.&lt;/p&gt;&lt;p data-block-key="aarvb"&gt;ಕೃಷಿ ತಜ್ಞರ ಪ್ರಕಾರ, ಮುಂದಿನ ಕೆಲವೇ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಆರಂಭಿಕ ಹಂತದಲ್ಲಿರುವ ಬೆಳೆಗಳಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಇಳುವರಿ ಕುಸಿತವಾಗುವುದರ ಜತೆಗೆ ರೈತರಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.&lt;/p&gt;&lt;p data-block-key="e6ab2"&gt;ಸರ್ಕಾರ ಹಾಗೂ ಕೃಷಿ ಇಲಾಖೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಬೇಕು, ಅಗತ್ಯ ಸಲಹೆ ಹಾಗೂ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹವಾಮಾನ ಇಲಾಖೆ ಕೂಡ ನಿಖರ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ನೆರವಾಗಬೇಕೆಂಬ ಒತ್ತಾಯ ಕೇಳಿಬರುತ್ತಿದೆ.&lt;/p&gt;&lt;p data-block-key="uepu"&gt;&lt;a href="/weather/moderate-rainfall-in-several-areas-including-the-coast-meteorological-department-issues-warning-83669.html"&gt;&lt;b&gt;ಕರಾವಳಿ ಸೇರಿ ಹಲವೆಡೆ ಸಾಧಾರಣ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ&lt;/b&gt;&lt;/a&gt;&lt;/p&gt;&lt;p data-block-key="9n0hh"&gt;ʼಮಳೆ ಬಂದಾಗ ಭರವಸೆಯಿಂದ ಬಿತ್ತನೆ ಮಾಡಿದ್ದೇವೆ. ಈಗ ಐದು ದಿನಗಳಿಂದ ಮಳೆ ಇಲ್ಲ. ಬಿಸಿಲಿನ ತಾಪಕ್ಕೆ ಬೆಳೆ ಒಣಗುತ್ತಿದೆ. ಇನ್ನೆರಡು ದಿನಗಳಲ್ಲಾದರೂ ಮಳೆಯಾಗದಿದ್ದರೆ ಮಾಡಿದ ಹೂಡಿಕೆಯೆಲ್ಲ ವ್ಯರ್ಥವಾಗುತ್ತದೆʼ ಎಂದು ಜಿಲ್ಲೆಯ ಹಲವಾರು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮುಂಬಯಿ ಮೂಲದ ಮದರಸಾ ವಿದ್ಯಾರ್ಥಿಗಳಿಂದ ಮಾರಕಾಸ್ತ್ರಗಳೊಂದಿಗೆ ಆಸೀಡ್ ನಿಂದ 15 ಜನರ ಮೇಲೆ ದಾಳಿ</title><link>https://vishwavani.news/karnataka/bengaluru-urban/mumbai-based-madrasa-students-attack-15-people-with-acid-and-lethal-weapons-83741.html</link><guid>https://vishwavani.news/karnataka/bengaluru-urban/mumbai-based-madrasa-students-attack-15-people-with-acid-and-lethal-weapons-83741.html</guid><pubDate>Tue, 14 Jul 2026 14:32:00 +0000</pubDate><description>&lt;![CDATA[ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಥಣಿಸಂದ್ರ ಗ್ರಾಮದ 5.19 ಎಕರೆ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿರುವ ಕುರಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸದರಿ ಜಮೀನಿಗೆ ಸಂಬಂಧಿಸಿದಂತೆ ಮಸೀಹ  ಅಹಮ್ಮದ್ ಪರವಾಗಿ ಇಂಜೆಕ್ಷನ್ ಆದೇಶ ಇದೇ ಜು.28 ರವರೆಗೆ ಚಾಲ್ತಿಯಲ್ಲಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/attack_2.original.jpg" class="attachment-large size-large wp-post-image" alt="ಮುಂಬಯಿ ಮೂಲದ ಮದರಸಾ ವಿದ್ಯಾರ್ಥಿಗಳಿಂದ ಮಾರಕಾಸ್ತ್ರಗಳೊಂದಿಗೆ ಆಸೀಡ್ ನಿಂದ 15 ಜನರ ಮೇಲೆ ದಾಳಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wu6td"&gt;&lt;b&gt;ಬೆಂಗಳೂರು:&lt;/b&gt; ಥಣಿಸಂದ್ರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಆವರಣದಲ್ಲಿ ಮುಂಬಯಿ ಮೂಲದ ಮದರಸಾಗೆ ಸೇರಿದ 50 ರಿಂದ 60ಕ್ಕೂ ಅಧಿಕ ಪುಂಡ ವಿದ್ಯಾರ್ಥಿಗಳು ಒಳಗೊಂಡಂತೆ ಹಲವು ಮಂದಿ ನಿನ್ನೆ ಸಂಜೆ ಏಕಾಏಕಿ ಮಹಿಳೆಯರು, ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆಸಿಡ್ ಎರಚಿ 15 ಮಂದಿಯ ಮೇಲೆ ದಾಳಿ ಮಾಡಿ ವಿಕೃತ ವಾಗಿ ಪುಂಡಾಟ ಮೆರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಆಗಮಿಸಿದ್ದ ಕೊತ್ತನೂರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದು, ಶಾಲಾ ಆವರಣ ರಣಾಂಗಣವಾಗಿ ಮಾರ್ಪಟ್ಟಿತ್ತು.&lt;/p&gt;&lt;p data-block-key="1alaa"&gt;ಶಾಂತಿ ಭಂಗವುಂಟು ಮಾಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ 12 ಪುಂಡರ ವಿರುದ್ಧ ಸ್ವತಃ ಕೊತ್ತನೂರು ಠಾಣೆಯ ಎಎಸ್ಐ ಸತೀಶ್ ಕುಮಾರ್ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.&lt;/p&gt;&lt;p data-block-key="7vulu"&gt;ಸಾದ್ ಇಲಿಯಾಸ್, ಮೊಹಮ್ಮದ್ ಶೋಯೆಬ್, ಮೊಹಮ್ಮದ್ ಅಲಿ, ಅಬ್ದುಲ್ ಮತೀನ್, ಸೂಪಿ ಯಾನ್ ಸಾಬಿರ್, ವಸೀಂ ಅಹಮ್ಮದ್, ಅಬ್ದುಲ್ ಸಮೀರ್, ನೂರ್ ಆಲಮ್, ಪೈರೋಜ್ ಖಾನ್, ಮೊಹಮ್ಮದ್ ಅಖೈರ್ ಹಾಗೂ ಮಹಿಳೆಯರಾದ ಮುಸ್ತಾರಿ. ಅಸ್ನಾತಾಜ್ ಇತರೆ ಮಹಿಳೆ ಮತ್ತು ಪರುಷರು ಹಾಗೂ ಮದರಸಾ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;p data-block-key="4pvdh"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/bengaluru-urban/bengalurus-hikal-technologies-launches-construction-of-a-massive-aerospace-defence-unit-in-hosur-82957.html"&gt;Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'&lt;/a&gt;&lt;/p&gt;&lt;p data-block-key="ep4ea"&gt;ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಥಣಿಸಂದ್ರ ಗ್ರಾಮದ 5.19 ಎಕರೆ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿರುವ ಕುರಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸದರಿ ಜಮೀನಿಗೆ ಸಂಬಂಧಿಸಿದಂತೆ ಮಸೀಹ ಅಹಮ್ಮದ್ ಪರವಾಗಿ ಇಂಜೆಕ್ಷನ್ ಆದೇಶ ಇದೇ ಜು.28 ರವರೆಗೆ ಚಾಲ್ತಿಯಲ್ಲಿದೆ. ಆದರೆ ದಿ ಅಲ್ ಜಾಮೀಯಾ ಮೊಹಮ್ಮ ದಿಯಾ ಎಜುಕೇಷನ್ ಸೊಸೈಟಿ ಯ ಸಿ.ಇ.ಓ ಆದ ಖಾಲೀದ್ ಮುಷ್ರಫ್ ಮತ್ತು ಅವರ ಸಹೋದರ ಅಬ್ದುಲ್ ರಕೀಬ್ ಮತ್ತು ಆಡಳಿತ ಸಿಬ್ಬಂದಿ ಮತ್ತು ಮದರಸಾ ವಿದ್ಯಾರ್ಥಿಗಳ ಜೊತೆ ಅಕ್ರಮ ಕೂಟ ಸೇರಿಕೊಂಡು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಪಾಯಕಾರಿ ಆಯುಧಗಳಾದ ರಾಡ್, ಸುತ್ತಿಗೆ (ಹ್ಯಾಮರ್), ಗ್ಲಾಸ್ ಪೀಸ್ ಗಳು, ಕಲ್ಲುಗಳನ್ನು ತೆಗೆದುಕೊಂಡು ಬಂದು ಮಸೀಹ ಅಹಮ್ಮದ್ ಸಂಬಂಧಿಕರು ಮತ್ತು ಅವರ ಕೆಲಗಾರರಿಗೆ ಮನ ಬಂದಂತೆ ಬೈದು, ಕೊಲೆ ಬೆದರಿಕೆ ಹಾಕಿ, ತಾವುಗಳ ತಂದಿರುವ ಅಪಾಯಕಾರಿ ವಸ್ತುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೂರು ದಾಖಲಿಸಿದ್ದಾರೆ.&lt;/p&gt;&lt;p data-block-key="1120u"&gt;ಇವರನ್ನು ತಡೆಯಲು ಹೋದರೆ ನಮ್ಮನ್ನು ತಳ್ಳಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಮತ್ತು ನ್ಯಾಯಾ ಲಯದ ಆದೇಶ ಉಲ್ಲಂಘಿಸಿ ಮನ ಬಂದಂತೆ ಅಲ್ಲಿಯೇ ಇದ್ದ ಗ್ಲಾಸ್ ಚೂರು ಗಳಿಂದ, ಕಲ್ಲುಗಳಿಂದ ಮತ್ತು ತಾವು ತಂದಿರುವ ಆಯುಧಗಳಿಂದ ಮಸೀಹ ಅಹಮ್ಮದ್ ಕಡೆಯವರ ಮೇಲೆ ಹಲ್ಲೆ ಮಾಡಿದ್ದಾರೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="attack 1" class="img-fluid" height="708" src="https://cdn.vishwavani.news/media/images/attack_1.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="4vr8s"&gt;ಪೊಲೀಸರು ಅವರ ಪರವಾಗಿದ್ದು, ನಿಮ್ಮನ್ನು ನಂಬಿದರೆ ನಮ್ಮ ಶಾಲೆಯ ಸ್ವತ್ತು ಅವರ ಪಾಲಾಗು ತ್ತದೆ. ಅವರನ್ನು ಯಾವುದೇ ಕಾರಣಕ್ಕೆ ಇಲ್ಲಿ ಇರಲು ಬಿಡುವುದಿಲ್ಲ ಅವರೆಲ್ಲರನ್ನು ಹೊಡೆದು ಇಲ್ಲಿಂದ ಹೊರ ಓಡಿಸಬೇಕೆಂದು ಏಕಾಏಕಿ ತಾವು ತಂದಿರುವ ಕಲ್ಲು ರಾಡ್, ಸುತ್ತಿಗೆ, ಒಡೆದಿರುವ ಗ್ಲಾಸಿನ ಪೀಸ್ ಗಳಿಂದ ಅವರೆಲ್ಲರಿಗೂ ಹೊಡೆದು ರಕ್ತಗಾಯ ಮಾಡಿದ್ದಾರೆ. ಅದನ್ನು ತಡೆಯಲು ಮುಂದಾದ ಕರ್ತವ್ಯ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.&lt;/p&gt;&lt;p data-block-key="766ue"&gt;ನಮ್ಮ ಸಮವಸ್ತ್ರದ ನೇಮ್ ಪ್ಲೇಟ್, ಬಟನ್ ಕಿತ್ತು ಹೋಗಿದ್ದು, ಅವರೆಲ್ಲರೂ ಕಾನೂನಿನ ವಿರುದ್ಧ ವಾಗಿ ನಡೆದುಕೊಂಡಿದ್ದಾರೆ. ನಂತರ ಇವರೆಲ್ಲರೂ ಸೇರಿಕೊಂಡು ಹಿಂದೆ ಇರುವ ಎರಡು ಬಾಗಿಲು ಗಳನ್ನು ಮುರಿದು ಹಾಕಿದ್ದಾರೆ. ನಮ್ಮ ಸಿಬ್ಬಂದಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ದಿ ಅಲ್ ಜಾಮೀಯಾ ಮೊಹಮ್ಮದಿಯಾ ಎಜುಕೇಷನ್ ಸೊಸೈಟಿ ಆಡಳಿತಾಧಿಕಾರಿಗಳು ಜಮೀನು ವ್ಯಾಜ್ಯದ ಗಲಾಟೆಗೆ ಮದರಸಾ ಮಕ್ಕಳನ್ನು ಬಳಸಿಕೊಂಡಿದ್ದಾರೆ.&lt;/p&gt;&lt;p data-block-key="c9i3j"&gt;ಸದರಿ ಮದರಸಾದ ಸಿಬ್ಬಂದಿ ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಈ ಜಮೀನಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಇವರಿಗೆ ಶಾಂತಿ ಭಂಗ ಮಾಡಬಾರಂದೆಂದು ಠಾಣೆಯಲ್ಲಿ ಪಿ.ಎ.ಆರ್ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಮಯ ದಲ್ಲಿ ವಿಡಿಯೋ ಸಹ ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: ಭಾರತ ತಂಡದ ಸಹಾಯಕ ಕೋಚ್‌ ಹುದ್ದೆ ತೊರೆಯಲಿರುವ ರಯಾನ್‌ ಟೆನ್‌ ಡಶ್ಕಾಟೆ?</title><link>https://vishwavani.news/sports/cricket/ryan-ten-doeschate-set-to-resign-after-england-odi-series-informs-bcci-of-decision-report-83740.html</link><guid>https://vishwavani.news/sports/cricket/ryan-ten-doeschate-set-to-resign-after-england-odi-series-informs-bcci-of-decision-report-83740.html</guid><pubDate>Tue, 14 Jul 2026 14:28:40 +0000</pubDate><description>&lt;![CDATA[ಭಾರತ ತಂಡದ ಸಹಾಯಕ ಕೋಚ್‌ ಹುದ್ದೆಯನ್ನು ತೊರೆಯಲು ರಯಾನ್‌ ಟೆನ್‌ ಡಶ್ಕಾಟೆ ನಿರ್ಧರಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಬಳಿಕ ಅವರು ಈ ಬಗ್ಗೆ ಬಿಸಿಸಿಐಗೆ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದೀಗ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು  ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ryan_Ten_Doeschate.original.jpg" class="attachment-large size-large wp-post-image" alt="IND vs ENG: ಭಾರತ ತಂಡದ ಸಹಾಯಕ ಕೋಚ್‌ ಹುದ್ದೆ ತೊರೆಯಲಿರುವ ರಯಾನ್‌ ಟೆನ್‌ ಡಶ್ಕಾಟೆ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="egyo3"&gt;&lt;b&gt;ಬರ್ಮಿಂಗ್‌ಹ್ಯಾಮ್‌&lt;/b&gt;: ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೊದಲನೇ ಏಕದಿನ ಪಂದ್ಯಕ್ಕೂ (IND vs ENG) ಮುನ್ನ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಟೀಮ್‌ ಇಂಡಿಯಾ ಸಹಾಯಕ ಕೋಚ್‌ ರಯಾನ್‌ ಟೆನ್‌ ಡಶ್ಕಾಟೆ (Ryan Ten Doeschate) ಅವರು ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಅವರು ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ಅವರು ಭಾರತ ತಂಡದಿಂದ ನಿರ್ಗಮಿಸುವ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (BCCI) ತಿಳಿಸಿದ್ದಾರೆಂದು ಕೂಡ ಮೂಲಗಳು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.&lt;/p&gt;&lt;p data-block-key="85mqs"&gt;ಟೆನ್ ಡಶ್ಕಾಟೆ ಅವರು ಭಾರತ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗಕ್ಕೆ ಸೇರಿ ಎರಡು ವರ್ಷಗಳು ಕಳೆದಿವೆ. ಬಿಸಿಸಿಐ ಜೊತೆಗಿನ ಅವರ ಆರಂಭಿಕ ಒಪ್ಪಂದದ ಅವಧಿಯೂ ಮುಕ್ತಾಯಗೊಂಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅವರ ಅವಧಿ ಜುಲೈ 12ರಿಂದ 14ರ ನಡುವಿನ ಅವಧಿಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. ಆದರೆ ಇಬ್ಬರೂ ಒಪ್ಪಿಕೊಂಡರೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಮುಗಿದ ಬಳಿಕ ಅವರು ತಮ್ಮ ಜವಾಬ್ದಾರಿಯಿಂದ ಅಧಿಕೃತವಾಗಿ ದೂರ ಸರಿಯುವ ನಿರೀಕ್ಷೆಯಿದೆ.&lt;/p&gt;&lt;p data-block-key="abkjp"&gt;&lt;a href="/sports/cricket/virat-kohli-gautam-gambhir-avoid-interaction-during-nets-ahead-of-first-odi-83717.html"&gt;&lt;b&gt;IND vs ENG: ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ನಡುವೆ ಮುನಿಸು? ವಿಡಿಯೊ ವೈರಲ್‌&lt;/b&gt;&lt;/a&gt;&lt;/p&gt;&lt;p data-block-key="si8a"&gt;ಕ್ರಿಕ್‌ಬಜ್ ವರದಿ ಪ್ರಕಾರ, ಟೆನ್ ಡಶ್ಕಾಟೆ ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವರು ಬಯಸಿದ್ದಾರೆ ಎನ್ನಲಾಗಿದೆ. ಕಡಿಮೆ ಪ್ರಯಾಣ ಹಾಗೂ ಹೆಚ್ಚು ಒತ್ತಡವಿಲ್ಲದ ವೇಳಾಪಟ್ಟಿ ಇರುವ ಜವಾಬ್ದಾರಿಯನ್ನು ಅವರು ಹುಡುಕುತ್ತಿದ್ದಾರೆ ಎಂದು ವರದಿ ತಿಳಿಸಿದೆ.&lt;/p&gt;&lt;h3 data-block-key="etsk2"&gt;&lt;b&gt;ಗಂಭೀರ್‌ ಕೈಯಲ್ಲಿದೆ ಡಶ್ಕಾಟೆ ಅವರ ಭವಿಷ್ಯ&lt;/b&gt;&lt;/h3&gt;&lt;p data-block-key="5g1o1"&gt;ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ವೇಳೆ, ಸಹಾಯಕ ಕೋಚ್ ಹುದ್ದೆಗೆ ಟೆನ್ ಡಶ್ಕಾಟೆ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದ್ದರು. ವರದಿಗಳ ಪ್ರಕಾರ, ಟೆನ್ ಡಶ್ಕಾಟೆ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಅಧಿಕಾರ ಗಂಭೀರ್ ಅವರಿಗೆ ಇದೆ. ಆದರೆ ಅವರು ಅಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಕೂಡ ಹೇಳಲಾಗುತ್ತಿದೆ.&lt;/p&gt;&lt;p data-block-key="13rh7"&gt;&lt;a href="/sports/cricket/ind-vs-eng-jos-buttler-becomes-second-england-player-with-200-odi-caps-83720.html"&gt;&lt;b&gt;IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!&lt;/b&gt;&lt;/a&gt;&lt;/p&gt;&lt;h3 data-block-key="9t7cl"&gt;&lt;b&gt;ಗೌತಮ್‌ ಗಂಭೀರ್‌ಗೆ ಎಂಎಸ್‌ಕೆ ಪ್ರಸಾದ್‌ ಬೆಂಬಲ&lt;/b&gt;&lt;/h3&gt;&lt;p data-block-key="ejg4h"&gt;ಮತ್ತೊಂದೆಡೆ, ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್, ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಲ್ಲಿ ಗೌತಮ್ ಗಂಭೀರ್ ಅವರಿಗೆ ಅತ್ಯುತ್ತಮ ತಂಡ ಲಭ್ಯವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p data-block-key="bq4h2"&gt;ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರೆ, ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಟಿ20 ಮಾದರಿಯಲ್ಲಿ ವಿಶ್ರಾಂತಿ ನೀಡಲಾಗಿತ್ತು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಐರ್ಲೆಂಡ್ ವಿರುದ್ಧದ ಸರಣಿಯನ್ನು 0-2 ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 0-4 ಅಂತರದಿಂದ ಕಳೆದುಕೊಂಡಿತ್ತು.&lt;/p&gt;&lt;p data-block-key="6d5n7"&gt;"ತಂಡ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ಅದರ ಸಂಪೂರ್ಣ ಹೊಣೆಯನ್ನು ಮುಖ್ಯ ಕೋಚ್ ಮೇಲೆಯೇ ಹೊರಿಸುವುದು ಸರಿಯಲ್ಲ. ಗಂಭೀರ್ ಆಟಗಾರರಿಗೆ ಪ್ರೇರಣೆ ನೀಡಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ, ನಾವು ಟೂರ್ನಿಗಳು ಅಥವಾ ವಿಶ್ವಕಪ್ ಗೆದ್ದಿದ್ದೇವೆ ಎಂದರೆ ಅದಕ್ಕೆ ಗಂಭೀರ್ ಒಬ್ಬರೇ ಕಾರಣ ಎಂದೂ ಹೇಳಲಾಗದು. ಒಂದು ತಂಡದ ಯಶಸ್ಸು ಅಥವಾ ವೈಫಲ್ಯ ಹಲವು ಅಂಶಗಳ ಒಟ್ಟಾರೆ ಫಲಿತಾಂಶವಾಗಿರುತ್ತದೆ. ಆದ್ದರಿಂದ ಈಗಲೇ ಗೌತಮ್ ಗಂಭೀರ್ ಅವರನ್ನು ಟೀಕಿಸಿ ತಳ್ಳಿಹಾಕುವುದು ತುಂಬಾ ಆತುರದ ನಿರ್ಧಾರವಾಗುತ್ತದೆ," ಎಂದು ಎಂಎಸ್‌ಕೆ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>FIFA World Cup 2026: ಬೆಂಗಳೂರಿನ ಫುಟ್‌ಬಾಲ್ ಅಭಿಮಾನಿಗಳಿಗೆ ಸಿಹಿಸುದ್ದಿ; ಮಧ್ಯರಾತ್ರಿ 3.30ವರೆಗೆ ಹೋಟೆಲ್‌, ರೆಸ್ಟೋರೆಂಟ್‌ ತೆರೆಯಲು ಅನುಮತಿ</title><link>https://vishwavani.news/karnataka/bengaluru-urban/on-fifa-knockout-match-days-hotels-and-restaurants-in-bangalore-are-allowed-to-stay-open-until-330-am-83739.html</link><guid>https://vishwavani.news/karnataka/bengaluru-urban/on-fifa-knockout-match-days-hotels-and-restaurants-in-bangalore-are-allowed-to-stay-open-until-330-am-83739.html</guid><pubDate>Tue, 14 Jul 2026 14:09:33 +0000</pubDate><description>&lt;![CDATA[ಫಿಫಾ ವಿಶ್ವಕಪ್ 2026 ಫುಟ್‌ಬಾಲ್ ಟೂರ್ನಿಯು ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್ ಹಾಗೂ ಫೈನಲ್‌ನ ಮೂರೂ ಪ್ರಮುಖ ಪಂದ್ಯಗಳ ದಿನಗಳಂದು ಬೆಳಗಿನ ಜಾವ 3 ಗಂಟೆಯವರೆಗೆ ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/_FIFA_World_Cup_2026.original.jpg" class="attachment-large size-large wp-post-image" alt="FIFA World Cup 2026: ಬೆಂಗಳೂರಿನ ಫುಟ್‌ಬಾಲ್ ಅಭಿಮಾನಿಗಳಿಗೆ ಸಿಹಿಸುದ್ದಿ; ಮಧ್ಯರಾತ್ರಿ 3.30ವರೆಗೆ ಹೋಟೆಲ್‌, ರೆಸ್ಟೋರೆಂಟ್‌ ತೆರೆಯಲು ಅನುಮತಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ka9k2"&gt;&lt;b&gt;ಬೆಂಗಳೂರು:&lt;/b&gt; ಫುಟ್‌ಬಾಲ್ ಪ್ರೇಮಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಫಿಫಾ ವಿಶ್ವಕಪ್‌-2026ರ (FIFA World Cup 2026) ಟೂರ್ನಿಯ ಮಹತ್ವದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುವ ದಿನಗಳಂದು ಬೆಂಗಳೂರು ನಗರ ವ್ಯಾಪ್ತಿಯ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿ 3:30ರವರೆಗೂ ತೆರೆಯಲು ಅನುಮತಿ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.&lt;/p&gt;&lt;p data-block-key="iuki"&gt;ಪೊಲೀಸ್ ಕಮಿಷನರ್ ಅವರ ಆದೇಶದ ಪ್ರಕಾರ, ಮುಂಬರುವ ಜುಲೈ 14, ಜುಲೈ 15 ಹಾಗೂ ಜುಲೈ 19ರ ದಿನಗಳಂದು ಬೆಂಗಳೂರಿನ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಮಧ್ಯರಾತ್ರಿ 3:30ರ ವರೆಗೂ ಮುಕ್ತವಾಗಿರಲಿವೆ. ಈ ಮೂಲಕ ತಡರಾತ್ರಿ ಪಂದ್ಯ ವೀಕ್ಷಿಸುವ ಕ್ರೀಡಾ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ನೆಚ್ಚಿನ ಆಹಾರವನ್ನು ಸವಿಯಲು ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ.&lt;/p&gt;&lt;p data-block-key="blnje"&gt;ಪ್ರಸ್ತುತ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯು ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್ ಹಾಗೂ ಫೈನಲ್‌ನ ಮೂರೂ ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ಅಂದರೆ ಬೆಳಗಿನ ಜಾವ 12:30ಕ್ಕೆ ಆರಂಭವಾಗಲಿವೆ. ಪಂದ್ಯಗಳು ತಡರಾತ್ರಿ ಆರಂಭವಾಗುವುದರಿಂದ ಫುಟ್‌ಬಾಲ್‌ ಅಭಿಮಾನಿಗಳು ನಗರದ ವಿವಿಧೆಡೆ ದೊಡ್ಡ ಪರದೆಗಳ ಮುಂದೆ ಹಾಗೂ ಹೋಟೆಲ್‌ಗಳಲ್ಲಿ ಒಟ್ಟಿಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಅನುಕೂಲಕ್ಕಾಗಿ ಆ ದಿನಗಳಲ್ಲಿ ಬೆಳಗಿನ ಜಾವ 3 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಬೇಕೆಂದು ‘ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ’ (NRAI) ದೇಶದ ಪ್ರಮುಖ ನಗರಗಳ ಪೊಲೀಸ್ ಇಲಾಖೆಗಳಿಗೆ ವಿಶೇಷ ಮನವಿ ಸಲ್ಲಿಸಿತ್ತು.&lt;/p&gt;&lt;p data-block-key="9d97q"&gt;&lt;a href="/sports/other-sports/one-mistake-could-decide-it-oliver-kahn-breaks-down-the-fifa-world-cup-2026-semi-finals-83613.html"&gt;FIFA 2026: ಸ್ಪೇನ್‌ vs ಫ್ರಾನ್ಸ್‌ ನಡುವೆ ಸೆಮಿಫೈನಲ್ ಗೆಲ್ಲುವ ತಂಡವನ್ನು ಆರಿಸಿದ ಆಲಿಯರ್‌ ಕಾನ್‌!&lt;/a&gt;&lt;/p&gt;&lt;p data-block-key="3kcnf"&gt;ರೆಸ್ಟೋರೆಂಟ್ ಅಸೋಸಿಯೇಷನ್ ಸಲ್ಲಿಸಿದ್ದ ಈ ಮನವಿಯನ್ನು ಸಕಾರಾತ್ಮಕವಾಗಿ ಪುರಸ್ಕರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಕ್ರೀಡಾ ಅಭಿಮಾನಿಗಳ ಹಿತದೃಷ್ಟಿಯಿಂದ ನಿಗದಿಗಿಂತ ಅರ್ಧ ಗಂಟೆ ಹೆಚ್ಚುವರಿಯಾಗಿ ಅಂದರೆ ಬೆಳಗಿನ ಜಾವ 3.30ರ ವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆ ಒದಗಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಹೈಕಲ್ ಟೆಕ್ನಾಲಜೀಸ್‌ಗೆ ಬವೇರಿಯಾ ಉಪ ಸಚಿವರ ಭೇಟಿ: ಭಾರತ–ಜರ್ಮನಿ ಏರೋಸ್ಪೇಸ್ ಸಹಕಾರಕ್ಕೆ ಮತ್ತಷ್ಟು ಬಲ</title><link>https://vishwavani.news/karnataka/bengaluru-urban/bavaria-deputy-minister-visits-hical-technologies-further-boost-to-india-germany-aerospace-cooperation0-83738.html</link><guid>https://vishwavani.news/karnataka/bengaluru-urban/bavaria-deputy-minister-visits-hical-technologies-further-boost-to-india-germany-aerospace-cooperation0-83738.html</guid><pubDate>Tue, 14 Jul 2026 13:54:13 +0000</pubDate><description>&lt;![CDATA[ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೈಕಲ್‌ನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಉಪ ಸಚಿವರು, ಉತ್ಪಾದನಾ ಶ್ರೇಷ್ಠತೆ, ತಾಂತ್ರಿಕ ನವೀನತೆ ಹಾಗೂ ಭಾರತ ಮತ್ತು ಬವೇರಿಯಾದ ಕೈಗಾರಿಕಾ ವಲಯಗಳ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳ ಕುರಿತು ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1414.original.jpg" class="attachment-large size-large wp-post-image" alt="ಹೈಕಲ್ ಟೆಕ್ನಾಲಜೀಸ್‌ಗೆ ಬವೇರಿಯಾ ಉಪ ಸಚಿವರ ಭೇಟಿ: ಭಾರತ–ಜರ್ಮನಿ ಏರೋಸ್ಪೇಸ್ ಸಹಕಾರಕ್ಕೆ ಮತ್ತಷ್ಟು ಬಲ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="dpbsa"&gt;&lt;b&gt;ಬೆಂಗಳೂರು:&lt;/b&gt; ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉನ್ನತ ನಿಖರತೆಯ ಎಲೆಕ್ಟ್ರೋ-ಮೆಕ್ಯಾನಿಕಲ್ ಉತ್ಪನ್ನಗಳನ್ನು ತಯಾರಿಸುವ ಬೆಂಗಳೂರಿನ ಹೈಕಲ್ ಟೆಕ್ನಾಲ ಜೀಸ್ ಸಂಸ್ಥೆಗೆ ಇಂದು ಬವೇರಿಯಾ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಸಚಿವಾಲಯದ ಉಪ ಸಚಿವ ಟೋಬಿಯಾಸ್ ಗೊಟ್‌ ಹಾರ್ಟ್ ಭೇಟಿ ನೀಡಿದರು.&lt;/p&gt;&lt;p data-block-key="e77ab"&gt;ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೈಕಲ್‌ನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಉಪ ಸಚಿವರು, ಉತ್ಪಾದನಾ ಶ್ರೇಷ್ಠತೆ, ತಾಂತ್ರಿಕ ನವೀನತೆ ಹಾಗೂ ಭಾರತ ಮತ್ತು ಬವೇರಿಯಾ ದ ಕೈಗಾರಿಕಾ ವಲಯಗಳ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳ ಕುರಿತು ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.&lt;/p&gt;&lt;p data-block-key="6eonf"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/bengaluru-urban/bengalurus-hikal-technologies-launches-construction-of-a-massive-aerospace-defence-unit-in-hosur-82957.html"&gt;Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'&lt;/a&gt;&lt;/p&gt;&lt;p data-block-key="dt8q0"&gt;ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, 2025–26ನೇ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ರಫ್ತು ದಾಖಲೆಯ ₹38,424 ಕೋಟಿಗೆ ತಲುಪಿದೆ. ಉನ್ನತ ನಿಖರತೆಯ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೈಕಲ್ ತನ್ನ ತಾಂತ್ರಿಕ ಸಾಮರ್ಥ್ಯ ಹಾಗೂ ದೀರ್ಘಾವಧಿಯ ಬೆಳವಣಿಗೆ ದೃಷ್ಟಿಕೋನವನ್ನು ಜರ್ಮನಿಯ ಹಿರಿಯ ನೀತಿ ನಿರ್ಧಾರಕರಿಗೆ ಪರಿಚಯಿಸುವ ಅವಕಾಶ ಈ ಭೇಟಿಯಿಂದ ದೊರೆಯಿತು.&lt;/p&gt;&lt;p data-block-key="bevvh"&gt;ಈ ಭೇಟಿ 2026ರ ಏಪ್ರಿಲ್‌ನಲ್ಲಿ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಭಾರತ–ಜರ್ಮನಿ ರಕ್ಷಣಾ ಕೈಗಾರಿಕಾ ದುಂಡುಮೇಜಿನ ಸಭೆಯ ಮುಂದುವರಿದ ಭಾಗವಾಗಿದೆ. ಆ ಸಭೆಯಲ್ಲಿ ಹೈಕಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಭಾಗವಹಿಸಿದ್ದು, ಜರ್ಮನಿಯ ಕೈಗಾರಿಕೆ ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಿದ ಭಾರತದ ಆಯ್ದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸಂಸ್ಥೆಗಳಲ್ಲಿ ಹೈಕಲ್ ಕೂಡ ಒಂದಾಗಿತ್ತು.&lt;/p&gt;&lt;p data-block-key="83klr"&gt;ಭೇಟಿಯ ವೇಳೆ ಉಪ ಸಚಿವ ಟೋಬಿಯಾಸ್ ಗೊಟ್‌ಹಾರ್ಟ್ ಅವರು ಹೈಕಲ್‌ನ ಉತ್ಪಾದನಾ ಘಟಕ, ವಿನ್ಯಾಸ ಕೇಂದ್ರ ಹಾಗೂ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ, ಎಂಜಿನಿಯರಿಂಗ್ ಪರಿಣತಿ ಮತ್ತು ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದಲ್ಲಿನ ತಾಂತ್ರಿಕ ನವೀನತೆಗಳನ್ನು ಸಮೀಪದಿಂದಲೇ ಅವಲೋಕಿಸಿ ದರು.&lt;/p&gt;&lt;p data-block-key="1rteh"&gt;ಈ ಸಂದರ್ಭದಲ್ಲಿ ಮಾತನಾಡಿದ ಬವೇರಿಯಾ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಸಚಿವಾಲಯದ ಉಪ ಸಚಿವ ಟೋಬಿಯಾಸ್ ಗೊಟ್‌ಹಾರ್ಟ್, “ಬೆಂಗಳೂರಿನ ಹೈಕಲ್ ಟೆಕ್ನಾಲಜೀಸ್‌ಗೆ ಭೇಟಿ ನೀಡಿ ಸಂಸ್ಥೆಯ ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ, ವಿನ್ಯಾಸ ಪರಿಣತಿ ಹಾಗೂ ಸಂಶೋಧನಾ ಶ್ರೇಷ್ಠತೆಯನ್ನು ನೇರವಾಗಿ ನೋಡುವ ಅವಕಾಶ ದೊರೆತಿರುವುದು ಸಂತಸದ ಸಂಗತಿ.&lt;/p&gt;&lt;p data-block-key="b3mbv"&gt;ಬವೇರಿಯಾ ಮತ್ತು ಭಾರತವು ಪರಸ್ಪರ ನಂಬಿಕೆ, ನವೀನತೆ ಹಾಗೂ ಮುಕ್ತ ಸಹಕಾರದ ಆಧಾರದ ಮೇಲೆ ದೀರ್ಘಕಾಲದ ಬಾಂಧವ್ಯ ಹೊಂದಿವೆ. ಬಾಹ್ಯಾಕಾಶ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳು ಈಗ ಹೆಚ್ಚು ಕಾರ್ಯತಂತ್ರದ ಮಹತ್ವ ಪಡೆದಿರುವ ಹಿನ್ನೆಲೆ ಯಲ್ಲಿ, ಎರಡೂ ದೇಶಗಳ ಕೈಗಾರಿಕೆಗಳ ನಡುವೆ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು, ಸ್ಥಿರ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ವ್ಯಾಪಾರದ ಮನೋಭಾವದೊಂದಿಗೆ ಹೊಸ ಸಹಭಾಗಿತ್ವಗಳನ್ನು ರೂಪಿಸಲು ಉತ್ತಮ ಅವಕಾಶಗಳಿವೆ,” ಎಂದು ಹೇಳಿದರು.&lt;/p&gt;&lt;p data-block-key="dehme"&gt;ಹೈಕಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಮಾತನಾಡಿ, “ಗೌರವಾನ್ವಿತ ಉಪ ಸಚಿವರನ್ನು ನಮ್ಮ ಘಟಕದಲ್ಲಿ ಆತಿಥ್ಯ ವಹಿಸಿರುವುದು ಹೈಕಲ್‌ಗೆ ಮಾತ್ರವಲ್ಲ, ಭಾರತದ ಏರೋಸ್ಪೇಸ್ ಉತ್ಪಾದನಾ ವಲಯಕ್ಕೂ ಹೆಮ್ಮೆಯ ಕ್ಷಣವಾಗಿದೆ. ಈ ವರ್ಷದ ಆರಂಭದಲ್ಲಿ ಮ್ಯೂನಿಕ್‌ನಲ್ಲಿ ನಡೆದ ಭಾರತ–ಜರ್ಮನಿ ರಕ್ಷಣಾ ಕೈಗಾರಿಕಾ ದುಂಡುಮೇಜಿನ ಸಭೆಯಲ್ಲಿ ಉಭಯ ದೇಶಗಳ ಹಿರಿಯ ಕೈಗಾರಿಕಾ ಹಾಗೂ ಸರ್ಕಾರಿ ಪ್ರತಿನಿಧಿಗಳೊಂದಿಗೆ ಭಾಗವಹಿಸುವ ಅವಕಾಶ ನನಗೆ ದೊರಕಿತ್ತು.&lt;/p&gt;&lt;p data-block-key="aoh44"&gt;ಇಂದು ಶ್ರೀ ಟೋಬಿಯಾಸ್ ಗೊಟ್‌ಹಾರ್ಟ್ ಅವರ ಭೇಟಿ ಆ ಸಂವಾದವನ್ನು ನಮ್ಮ ಉತ್ಪಾದನಾ ಘಟಕದ ಮಟ್ಟಕ್ಕೆ ತಂದಿದೆ. ಭಾರತದ ಏರೋಸ್ಪೇಸ್ ಕ್ಷೇತ್ರದ ವಿಶ್ವಾಸಾರ್ಹತೆ ಪ್ರತಿಯೊಂದು ಗುಣಮಟ್ಟದ ಘಟಕ, ಪ್ರತಿಯೊಂದು ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ಪ್ರತಿಯೊಂದು ವಿಶ್ವಾಸಾರ್ಹ ಸಹಭಾಗಿತ್ವದ ಮೂಲಕ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನಮ್ಮದು. ಬವೇರಿಯಾ ಸೇರಿದಂತೆ ಜಾಗತಿಕ ಮೂಲ ಉಪಕರಣ ತಯಾರಕರಿಗೆ (ಒಇಎಂ) ದೀರ್ಘಾವಧಿಗೆ ವಿಶ್ವಾಸಾರ್ಹ ಪೂರೈಕೆದಾರರಾಗಿರುವ ಬದ್ಧತೆ ನಮ್ಮದಾಗಿದೆ,” ಎಂದು ಹೇಳಿದರು.&lt;/p&gt;&lt;p data-block-key="2nvqg"&gt;&lt;b&gt;ಹೈಕಲ್ ಟೆಕ್ನಾಲಜೀಸ್ ಕುರಿತು:&lt;/b&gt; ಬೆಂಗಳೂರು ಮೂಲದ ಹೈಕಲ್ ಟೆಕ್ನಾಲಜೀಸ್ ಸಂಸ್ಥೆ ಯು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉನ್ನತ ನಿಖರತೆಯ ಎಲೆಕ್ಟ್ರೋ-ಮೆಕ್ಯಾನಿಕಲ್ ವ್ಯವಸ್ಥೆಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಜಾಗತಿಕ ಮಟ್ಟದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಮೂಲ ಉಪಕರಣ ತಯಾರಕರಿಗೆ ವಿಶ್ವಾಸಾರ್ಹ ಪೂರೈಕೆ ದಾರವಾಗಿರುವ ಹೈಕಲ್, ವಿಶ್ವದರ್ಜೆಯ ಎಂಜಿನಿಯರಿಂಗ್ ಸಾಮರ್ಥ್ಯ, ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ವಿಶೇಷ ಆದ್ಯತೆ ನೀಡುತ್ತದೆ. ಭಾರತದ ಬೆಳೆಯುತ್ತಿರುವ ಏರೋಸ್ಪೇಸ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸ್ಥೆಯು, ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯ ಸಾಕಾರಕ್ಕೂ ತನ್ನ ಕೊಡುಗೆ ನೀಡುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 6 ನಾಗರಿಕರ ಸಾವು</title><link>https://vishwavani.news/foreign/pok-protests-pakistan-firing-6-civilians-killed-83731.html</link><guid>https://vishwavani.news/foreign/pok-protests-pakistan-firing-6-civilians-killed-83731.html</guid><pubDate>Tue, 14 Jul 2026 13:37:42 +0000</pubDate><description>&lt;![CDATA[Pakistan-occupied Kashmir: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, 6 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕದ ವೈಟ್ ಹೌಸ್ ಎದುರು ಪಿಒಕೆ ಮೂಲದ ಜನರು ಪ್ರತಿಭಟನೆ ನಡೆಸಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000588540.original.jpg" class="attachment-large size-large wp-post-image" alt="ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 6 ನಾಗರಿಕರ ಸಾವು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="z4d59"&gt;&lt;b&gt;ಇಸ್ಲಾಮಾಬಾದ್, ಜು. 14:&lt;/b&gt; ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ &lt;a href="/foreign/pok-on-boil-again-gen-z-takes-to-streets-against-pakistan-government-59950.html"&gt;&lt;b&gt;(PoK)&lt;/b&gt;&lt;/a&gt; ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ರಾವಲಕೋಟ್‌ನ (Rawalakot) ನ್ಯೂ ಬಸ್ ಟರ್ಮಿನಲ್ ಸಮೀಪ ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಸಂಭವಿಸಿದ ಘರ್ಷಣೆಯಲ್ಲಿ 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಜಾಹಿದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಹಾಗೂ ವಾಜಿದ್ ಹಯಾತ್ ಸೇರಿ ಹಲವರು ಸೇರಿದ್ದಾರೆ. ಈ ಘಟನೆ ಬಳಿಕ ಇಸ್ಲಾಮಾಬಾದ್ ವಿರುದ್ಧ ಸ್ಥಳೀಯರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.&lt;/p&gt;&lt;p data-block-key="4juvd"&gt;ಘರ್ಷಣೆಗೆ ಒಂದು ದಿನ ಮುನ್ನ ಅಮೆರಿಕದ ವಾಷಿಂಗ್ಟನ್‌ನ ವೈಟ್ ಹೌಸ್ ಎದುರು ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಸುಮಾರು 100ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು. ಮಹಿಳೆಯರು, ಮಕ್ಕಳು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ಪಾಕಿಸ್ತಾನ ಸೇನೆಯನ್ನು ನಾಗರಿಕ ಪ್ರದೇಶಗಳಿಂದ ಹಿಂತೆಗೆದುಕೊಳ್ಳುವಂತೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.&lt;/p&gt;&lt;h3 data-block-key="cp0u"&gt;&lt;b&gt;ಪಿಒಕೆ ಸಂಘರ್ಷದ ಬಗ್ಗೆ ಭಾರತದ ಪ್ರತಿಕ್ರಿಯೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | MEA spokesperson Randhir Jaiswal says, the ongoing protests in Pakistan-occupied Jammu and Kashmir are a direct consequence of Pakistan’s decades-long systemic exploitation, denial of fundamental rights, and administrative oppression in areas under its illegal and… &lt;a href="https://t.co/7MiAlpYCCz"&gt;pic.twitter.com/7MiAlpYCCz&lt;/a&gt;&lt;/p&gt;&amp;mdash; All India Radio News (@airnewsalerts) &lt;a href="https://x.com/airnewsalerts/status/2076986493810389435?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3rsn4"&gt;&lt;/p&gt;&lt;p data-block-key="2qic8"&gt;ಪ್ರದೇಶದಲ್ಲಿ ದೀರ್ಘಕಾಲದಿಂದ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದು, ಸುಮಾರು 40 ಲಕ್ಷ ಜನರು ಹೊರಜಗತ್ತಿನ ಸಂಪರ್ಕದಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ ಮಾನವೀಯ ನೆರವು ತಲುಪಿಸಲು ಪೂಂಚ್ ಮತ್ತು ಡೋಡಾ ಮಾರ್ಗವಾಗಿ ನಿಯಂತ್ರಣ ರೇಖೆ (LoC) ತೆರೆಯಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3 data-block-key="f8hkf"&gt;&lt;b&gt;ಆರ್ಥಿಕ ಮತ್ತು ಆರೋಗ್ಯ ಪರಿಸ್ಥಿತಿ ಗಂಭೀರ&lt;/b&gt;&lt;/h3&gt;&lt;p data-block-key="blfqo"&gt;2025ರಲ್ಲಿ ಪ್ರಕಟವಾದ Nature ಅಧ್ಯಯನದ ಪ್ರಕಾರ, PoKಯಲ್ಲಿ ಸುಮಾರು 66% ಜನರು ಕೃಷಿ ಮತ್ತು ಪಶು ಸಂಗೋಪನೆ ಮೇಲೆ ಅವಲಂಬಿತರಾಗಿದ್ದು, 57%ಕ್ಕೂ ಹೆಚ್ಚು ಕುಟುಂಬಗಳು ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ. ಸುಮಾರು 29% ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದು ಪಾಕಿಸ್ತಾನದ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.&lt;/p&gt;&lt;p data-block-key="fjpoi"&gt;ಪಾಕಿಸ್ತಾನದ ಸ್ವಯಂಪ್ರೇರಿತ ರಾಷ್ಟ್ರೀಯ ಪರಿಶೀಲನಾ ವರದಿ (Voluntary National Review Report) ಪ್ರಕಾರ, ಐದು ವರ್ಷದೊಳಗಿನ ಮಕ್ಕಳಲ್ಲಿ 39% ಬೆಳವಣಿಗೆ ಕುಂಠಿತವಾಗಿದೆ. ತಾಯಂದಿರ ಮರಣ ಪ್ರಮಾಣವೂ ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 104 ಆಗಿದೆ.&lt;/p&gt;&lt;p data-block-key="evj9i"&gt;&lt;a href="/national/1963-pakistan-china-agreement-illegal-indian-army-chief-rejects-beijings-claim-over-shaksgam-valley-66464.html"&gt;&lt;b&gt;1963ರ ಪಾಕ್‌-ಚೀನಾ ಒಪ್ಪಂದ ಕಾನೂನುಬಾಹಿರ; ಚೀನಾ ಹಕ್ಕು ತಿರಸ್ಕರಿಸಿದ ಸೇನಾ ಮುಖ್ಯಸ್ಥ&lt;/b&gt;&lt;/a&gt;&lt;/p&gt;&lt;h3 data-block-key="6nbq8"&gt;&lt;b&gt;ಪಾಕಿಸ್ತಾನ ವಿರುದ್ಧ ಭಾರತದ ವಾಗ್ದಾಳಿ&lt;/b&gt;&lt;/h3&gt;&lt;p data-block-key="8qn20"&gt;ಈ ಬೆಳವಣಿಗೆ ಕುರಿತು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಪಾಕಿಸ್ತಾನದ ದಶಕಗಳ ಶೋಷಣೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಆಡಳಿತಾತ್ಮಕ ದಮನದ ಪರಿಣಾಮ ಎಂದು ಆರೋಪಿಸಿದರು.&lt;/p&gt;&lt;p data-block-key="a9bbl"&gt;ಪಾಕಿಸ್ತಾನ ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಮಹಿಳೆಯರು ಮತ್ತು ಮಕ್ಕಳ ಮೇಲೂ ಪೊಲೀಸ್ ದೌರ್ಜನ್ಯ, ಆಹಾರ ಹಾಗೂ ಔಷಧಿ ಪೂರೈಕೆ ತಡೆ, ಇಂಟರ್‌ನೆಟ್ ಸ್ಥಗಿತ ಮತ್ತು ನಿರಾಯುಧ ನಾಗರಿಕರ ಮೇಲೆ ಮಾರಕ ಬಲ ಪ್ರಯೋಗ ನಡೆಸುತ್ತಿದೆ ಎಂದು ಅವರು ಟೀಕಿಸಿದರು.&lt;/p&gt;&lt;p data-block-key="2g9rn"&gt;ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಸಮುದಾಯ ಹೊಣೆಗಾರನನ್ನಾಗಿ ಮಾಡಬೇಕು ಎಂದು ಆಗ್ರಹಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Jr NTR: ಜ್ಯೂ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ? ನಟ ಕೊಟ್ಟ ಕ್ಲಾರಿಟಿ ಇದು</title><link>https://vishwavani.news/movies/jr-ntr-entering-politics-actor-clarifies-upcoming-event-83735.html</link><guid>https://vishwavani.news/movies/jr-ntr-entering-politics-actor-clarifies-upcoming-event-83735.html</guid><pubDate>Tue, 14 Jul 2026 13:33:30 +0000</pubDate><description>&lt;![CDATA[Jr NTR: ಜ್ಯೂ. ಎನ್‌ಟಿಆರ್  ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ  ಭಾರೀ ಚರ್ಚೆ ನಡೀತಿತ್ತು ಈ ಬಗ್ಗೆ ಇದೀಗ ಸ್ವತಃ ಎನ್‌ಟಿಆರ್ ಕಾರ್ಯಾಲಯದಿಂದಲೇ ಅಧಿಕೃತವಾಗಿ ಪ್ರೆಸ್‌ನೋಟ್ (Press Note) ಬಂದಿದ್ದು ಎಲ್ಲಾ ವದಂತಿಗೆ ತೆರೆ ಎಳೆಯಲಾಗಿದೆ.ಜೂನಿಯರ್ ಎನ್ಟಿಆರ್ ಈ ಹಿಂದೆ ಟಿಡಿಪಿ ಪರ ಪ್ರಚಾರ ಮಾಡಿದ್ದರೂ, ಚುನಾವಣೆಗೆ ನಿಲ್ಲುವ ಅಥವಾ ಪಕ್ಷ ಸೇರುವ ಬಗ್ಗೆ ಎಂದಿಗೂ ಆಸಕ್ತಿ ತೋರಿಸಿಲ್ಲ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Jr_NTR_following_in_his_grandfather_footsteps_a.original.jpg" class="attachment-large size-large wp-post-image" alt="Jr NTR: ಜ್ಯೂ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ? ನಟ ಕೊಟ್ಟ ಕ್ಲಾರಿಟಿ ಇದು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ob8nv"&gt;ತೆಲುಗು ನಟ &lt;a href="/movies/jr-ntr-lost-15-kgs-in-4-months-for-dragon-says-director-78760.html"&gt;ಜ್ಯೂ. ಎನ್‌ಟಿಆರ್ &lt;/a&gt;(Jr NTR) ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಚರ್ಚೆ ನಡೀತಿತ್ತು ಈ ಬಗ್ಗೆ ಇದೀಗ ಸ್ವತಃ ಎನ್‌ಟಿಆರ್ ಕಾರ್ಯಾಲಯದಿಂದಲೇ ಅಧಿಕೃತವಾಗಿ ಪ್ರೆಸ್‌ನೋಟ್ (Press Note) ಬಂದಿದ್ದು ಎಲ್ಲಾ ವದಂತಿಗೆ ತೆರೆ ಎಳೆಯಲಾಗಿದೆ.&lt;/p&gt;&lt;h3 data-block-key="2jsq7"&gt;&lt;b&gt;ಸಂಘಕ್ಕೂ ಸಂಬಂಧ ಇಲ್ಲ&lt;/b&gt;&lt;/h3&gt;&lt;p data-block-key="95mke"&gt;'ಉರು-ವಾಡ' ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಜುಲೈ 18ರಂದು ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿಗಾಗಿ ನಡೆಸುತ್ತಿರುವ ಕಾರ್ಯಕ್ರಮ ಇದು ಎನ್ನುವಂತೆ ಚರ್ಚೆ ನಡೆದಿತ್ತು. ಅಭಿಮಾನಿಗಳು ಇದು ನಿಜ ಎಂದೇ ಭಾವಿಸಿದ್ದರು. ಆದರೆ ಅದೆಲ್ಲಾ ಸುಳ್ಳು ನಮಗೂ RAW NTR ಸಂಘಕ್ಕೂ ಸಂಬಂಧ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p data-block-key="d8ah2"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/a-solution-must-be-found-for-the-bhoomika-suffering-malli-has-arrived-83687.html"&gt;Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ&lt;/a&gt;&lt;/p&gt;&lt;p data-block-key="86kvd"&gt;ಕೆಲವು ಸ್ಥಳಗಳಲ್ಲಿ "ಸಿಎಂ ಎನ್‌ಟಿಆರ್" ಎಂದು ಬರೆಯುವ ಬ್ಯಾನರ್‌ಗಳನ್ನು ಸಹ ಹಾಕಲಾಗಿತ್ತು. ಇದರೊಂದಿಗೆ, ತಾರಕ್ ಅಭಿಮಾನಿಗಳು ಎನ್‌ಟಿಆರ್‌ ನಿಜವಾಗಿಯೂ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ನಂಬಲು ಪ್ರಾರಂಭಿಸಿದರು.&lt;/p&gt;&lt;p data-block-key="b5khb"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;An official statement from Mr NTR’s office. &lt;a href="https://t.co/TrOLo0N3S4"&gt;pic.twitter.com/TrOLo0N3S4&lt;/a&gt;&lt;/p&gt;&amp;mdash; Vamsi Kaka (@vamsikaka) &lt;a href="https://x.com/vamsikaka/status/2076940234718425183?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="95ie4"&gt;&lt;/p&gt;&lt;p data-block-key="6d0gv"&gt; ತಾರಕ್ ಪರವಾಗಿ ಮಾತನಾಡುವ ಅಥವಾ ಅವರನ್ನು ಪ್ರತಿನಿಧಿಸುವ ಅಧಿಕಾರದ ಹಕ್ಕು ಆ ಸಂಸ್ಥೆಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಎನ್ಟಿಆರ್ ಹೆಸರನ್ನು ಬಳಸಿಕೊಂಡು ಮಾಡುವ ಯಾವುದೇ ಪ್ರಚಾರವನ್ನು ಜನರು ನಂಬಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎನ್‌ಟಿಆರ್ ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ಸೇವಾ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಾತ್ರ ಘೋಷಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. &lt;/p&gt;&lt;p data-block-key="1efhq"&gt;ಮಾಧ್ಯಮಗಳು ಮತ್ತು ಸಾರ್ವಜನಿಕರು ಇಂತಹ ಪರಿಶೀಲಿಸದ ಮಾಹಿತಿಯಿಂದ ಮೋಸ ಹೋಗಬಾರದು ಎಂದು ಸ್ಪಷ್ಟಪಡಿಸಿದೆ. 2009 ರ ಚುನಾವಣಾ ಪ್ರಚಾರದ ನಂತರ, ಎನ್ಟಿಆರ್ ರಾಜಕೀಯದಿಂದ ದೂರ ಉಳಿದು ಚಲನಚಿತ್ರಗಳ ಮೇಲೆ ಮಾತ್ರ ಗಮನಹರಿಸುತ್ತಿದ್ದಾರೆ ಎಂದು  ವರದಿ ಆಗಿದೆ.&lt;/p&gt;&lt;p data-block-key="6co1o"&gt;ಜೂನಿಯರ್ ಎನ್ಟಿಆರ್ ಈ ಹಿಂದೆ ಟಿಡಿಪಿ ಪರ ಪ್ರಚಾರ ಮಾಡಿದ್ದರೂ, ಚುನಾವಣೆಗೆ ನಿಲ್ಲುವ ಅಥವಾ ಪಕ್ಷ ಸೇರುವ ಬಗ್ಗೆ ಎಂದಿಗೂ ಆಸಕ್ತಿ ತೋರಿಸಿಲ್ಲ. &lt;/p&gt;&lt;p data-block-key="d7f2a"&gt;ರಾಜಕೀಯ ಪ್ರವೇಶದ ವದಂತಿಗಳ ಹೊರತಾಗಿಯೂ, ಜೂನಿಯರ್ ಎನ್ಟಿಆರ್ ಪ್ರಸ್ತುತ ಒಂದರ ನಂತರ ಒಂದರಂತೆ ಪ್ಯಾನ್-ಇಂಡಿಯಾ ಯೋಜನೆಗಳಲ್ಲಿ ನಿರತರಾಗಿದ್ದಾರೆ.  ಕೊನೆಯದಾಗಿ ಕೊರಟಾಲ ಶಿವ ಅವರ ದೇವರ: ಭಾಗ 1 ಮತ್ತು ಅಯಾನ್ ಮುಖರ್ಜಿ ಅವರ ವಾರ್ 2 ನಲ್ಲಿ ಕಾಣಿಸಿಕೊಂಡ ಅವರು ಪ್ರಸ್ತುತ ಪ್ರಶಾಂತ್ ನೀಲ್ ಅವರ ಡ್ರ್ಯಾಗನ್ ಚಿತ್ರೀಕರಣದಲ್ಲಿದ್ದಾರೆ.  &lt;/p&gt;&lt;p data-block-key="eci83"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/after-tabaahi-musician-vishal-mishra-begins-work-on-fourth-song-83730.html"&gt;Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?&lt;/a&gt;&lt;/p&gt;&lt;p data-block-key="fehri"&gt;ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮುರುಗನ್ ಭಗವಾನ್ ಆಧಾರಿತ ಗಾಡ್ ಆಫ್ ವಾರ್ ಎಂಬ ವದಂತಿಯ ಚಿತ್ರವನ್ನು ಸಹ ಹೊಂದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>20 ವರ್ಷಗಳ ನಂತರ ಕೋಲ್ಕತಾಕ್ಕೆ ಮರಳಲು ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರಿನ್ ಸಿದ್ಧತೆ</title><link>https://vishwavani.news/national/bangladesh-author-taslima-nasrin-set-to-return-to-kolkata-after-20-years-83723.html</link><guid>https://vishwavani.news/national/bangladesh-author-taslima-nasrin-set-to-return-to-kolkata-after-20-years-83723.html</guid><pubDate>Tue, 14 Jul 2026 13:18:39 +0000</pubDate><description>&lt;![CDATA[Taslima Nasrin: ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಸುಮಾರು ಎರಡು ದಶಕಗಳ ನಂತರ ಪಶ್ಚಿಮ ಬಂಗಾಳದ ಕೋಲ್ಕತಾಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಅವರನ್ನು ಸೆಕ್ಯುಲರ್ ಮಿಷನ್ ಮತ್ತು ಮಾನವ ಹಕ್ಕುಗಳು ಹಾಗೂ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಷ್ಠಾನ ಆಹ್ವಾನಿಸಿದೆ. ಕೋಲ್ಕತಾ ತನ್ನ ಹೃದಯಕ್ಕೆ ಹತ್ತಿರವಾದ ನಗರ ಎಂದು ನಸ್ರಿನ್ ಹಲವು ಬಾರಿ ಹೇಳಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Taslima_Nasrin_.original.jpg" class="attachment-large size-large wp-post-image" alt="20 ವರ್ಷಗಳ ನಂತರ ಕೋಲ್ಕತಾಕ್ಕೆ ಮರಳಲು ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರಿನ್ ಸಿದ್ಧತೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ps3fi"&gt;&lt;b&gt;ಕೋಲ್ಕತಾ, ಜು. 14:&lt;/b&gt; ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ (Taslima Nasrin) ಸುಮಾರು ಎರಡು ದಶಕಗಳ ನಂತರ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ &lt;a href="https://vishwavani.news/national/136-year-old-mosque-relocation-kolkata-airport-expansion-81095.html"&gt;&lt;b&gt;(Kolkata)&lt;/b&gt;&lt;/a&gt; ಮರಳಲಿದ್ದಾರೆ. ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ಮೂಲಭೂತವಾದಿ ವಿರೋಧಿ ಕವಿಗಳು ಮತ್ತು ಬರಹಗಾರರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದ್ದಾರೆ.&lt;/p&gt;&lt;p data-block-key="dq0og"&gt;ಈ ಬಾರಿ ಅವರನ್ನು ಸೆಕ್ಯುಲರ್ ಮಿಷನ್ ಮತ್ತು ಮಾನವ ಹಕ್ಕುಗಳು ಹಾಗೂ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಷ್ಠಾನ ಆಹ್ವಾನಿಸಿದೆ. ಮೂಲಭೂತವಾದದ ವಿರುದ್ಧ ಅವರ ದೀರ್ಘಕಾಲದ ನಿಲುವು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದನೆಯನ್ನು ಗುರುತಿಸಿ ಈ ಆಹ್ವಾನ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.&lt;/p&gt;&lt;h3 data-block-key="cv6df"&gt;&lt;b&gt;ಆಗಸ್ಟ್‌ 1ರಂದು ಕೋಲ್ಕತಾಕ್ಕೆ ಲೇಖಕಿ ತಸ್ಲಿಮಾ ನಸ್ರಿನ್ ಭೇಟಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; कोलकाता: पश्चिम बंगाल सरकार में मंत्री अग्निमित्रा पॉल ने तस्लीमा नसरीन के पश्चिम बंगाल दौरे पर कहा, &amp;quot;पिछली सरकार के समय में उन्हें आने का मौका नहीं दिया गया, यह नहीं बोलेंगे बल्कि उनको सुरक्षा नहीं दी गई। उनका उपयोग किया गया और विपक्षी लोग इतना मुसलमान को लेकर बात करते… &lt;a href="https://t.co/8mLn9CkTGB"&gt;pic.twitter.com/8mLn9CkTGB&lt;/a&gt;&lt;/p&gt;&amp;mdash; ANI_HindiNews (@AHindinews) &lt;a href="https://x.com/AHindinews/status/2077015416426352669?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="5v0vr"&gt;ಅವರ ಪ್ರಸ್ತಾವಿತ ಭೇಟಿ ನಗರದೊಂದಿಗೆ ಅವರು ಹೊಂದಿರುವ ದೀರ್ಘ ನಂಟಿನ ಹಿನ್ನೆಲೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. 2007ರಲ್ಲಿ ಎಡರಂಗ ಸರ್ಕಾರದ ಅವಧಿಯಲ್ಲಿ ನಸ್ರೀನ್ ಅವರ ಬರವಣಿಗೆಗಳ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಿದ ನಂತರ ಅವರು ಕೋಲ್ಕತಾ ತೊರೆದಿದ್ದರು. ಅಂದಿನಿಂದ ಭದ್ರತಾ ಕಾರಣಗಳಿಂದ ಅವರು ಕೋಲ್ಕತಾಗೆ ಭೇಟಿ ನೀಡಿರಲಿಲ್ಲ.&lt;/p&gt;&lt;p data-block-key="5jaa2"&gt;&lt;a href="https://vishwavani.news/national/entrance-to-mosque-inside-kolkata-airport-close-no-mass-prayers-allowed-says-suvendu-adhikari-83607.html"&gt;&lt;b&gt;ಕೋಲ್ಕತಾ ವಿಮಾನ ನಿಲ್ದಾಣದೊಳಗಿನ ಮಸೀದಿ ಪ್ರವೇಶ ಸ್ಥಗಿತ, ಸಾಮೂಹಿಕ ಪ್ರಾರ್ಥನೆಗೆ ಇಲ್ಲ ಅವಕಾಶ&lt;/b&gt;&lt;/a&gt;&lt;/p&gt;&lt;p data-block-key="d5mcf"&gt;ಕೋಲ್ಕತಾ ಹೃದಯಕ್ಕೆ ಹತ್ತಿರವಾದ ನಗರ ಎಂದು ನಸ್ರಿನ್ ಹಲವು ಬಾರಿ ಹೇಳಿದ್ದಾರೆ. ಆದರೆ ಧಾರ್ಮಿಕ ಮೂಲಭೂತವಾದಿ ಗುಂಪುಗಳ ವಿರೋಧ ಮತ್ತು ಪದೇ ಪದೆ ಬರುವ ಬೆದರಿಕೆಗಳು ಅವರನ್ನು ಸುಮಾರು 20 ವರ್ಷಗಳ ಕಾಲ ನಗರದಿಂದ ದೂರವಿಟ್ಟಿತು.&lt;/p&gt;&lt;p data-block-key="dt1ke"&gt;ಮಹಿಳಾ ಹಕ್ಕುಗಳು, ಜಾತ್ಯತೀತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನೇರ, ನಿಷ್ಠುರ ನಿಲುವುಗಳಿಗೆ ಹೆಸರುವಾಸಿಯಾದ ನಸ್ರೀನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಮತ್ತು ವಿವಾದ ಎರಡನ್ನೂ ಗಳಿಸಿದ್ದಾರೆ. ಇಸ್ಲಾಂ ಧರ್ಮದ ಸಂಪ್ರದಾಯವಾದಿ ವ್ಯಾಖ್ಯಾನಗಳ ಬಗ್ಗೆ ಅವರ ಟೀಕೆಯು ಈ ಹಿಂದೆ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ಹಾಗೆಯೇ ಅವರನ್ನು ಗಡಿಪಾರು ಮಾಡಬೇಕಾಯಿತು.&lt;/p&gt;&lt;h3 data-block-key="1lreb"&gt;&lt;b&gt;1994ರಲ್ಲಿ ಗಡಿಪಾರು&lt;/b&gt;&lt;/h3&gt;&lt;p data-block-key="e5l2s"&gt;1994ರಲ್ಲಿ ಬಾಂಗ್ಲಾದೇಶವನ್ನು ತೊರೆದ ನಂತರ ನಸ್ರೀನ್ ಮೂರು ದಶಕಗಳಿಂದ ದೇಶಭ್ರಷ್ಟರಾಗಿದ್ದಾರೆ. ಅವರ ಬರವಣಿಗೆಗಳ ವಿರುದ್ಧ ಮುಸ್ಲಿಂ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಯುರೋಪಿನಲ್ಲಿ ಹಲವು ವರ್ಷಗಳನ್ನು ಕಳೆದ ನಂತರ, ಅವರು ಅಂತಿಮವಾಗಿ ಭಾರತಕ್ಕೆ ಮರಳಿದರು. 2004 ಮತ್ತು 2007ರ ನಡುವೆ ಕೋಲ್ಕತಾದಲ್ಲಿ ವಾಸಿಸುತ್ತಿದ್ದರು. ನಂತರ ಮೂಲಭೂತವಾದಿ ಗುಂಪುಗಳ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಅವರು ಬಲವಂತವಾಗಿ ಕೋಲ್ಕತಾ ತೊರೆಯಬೇಕಾಗಿ ಬಂತು. ಆ ಅವಧಿಯಲ್ಲಿ ಅವರ ಪುಸ್ತಕ ʼದ್ವಿಖಂಡಿತೋʼವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಯಿತು.&lt;/p&gt;&lt;p data-block-key="7mklj"&gt;ನಂತರ ಅವರು ಜೈಪುರದಲ್ಲಿ ಸ್ವಲ್ಪ ಕಾಲ ಉಳಿದು 2011ರಲ್ಲಿ ದೀರ್ಘಾವಧಿಯ ನಿವಾಸ ಪರವಾನಗಿಯ ಮೇಲೆ ದೆಹಲಿಯಲ್ಲಿ ನೆಲೆಸಿದರು. ಅಂದಿನಿಂದ ಇದನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತಿದೆ. ನಸ್ರಿನ್ ಸ್ವೀಡಿಷ್ ಪೌರತ್ವವನ್ನು ಹೊಂದಿದ್ದಾರೆ.&lt;/p&gt;&lt;p data-block-key="7hp9k"&gt;2024ರ ಸೆಪ್ಟೆಂಬರ್‌ನಲ್ಲಿ ನಸ್ರಿನ್ ಭಾರತದಲ್ಲಿ ತನ್ನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>HD Deve Gowda: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ವರಿಷ್ಠರಿಗೆ ಡಿಕೆಶಿ ಆಮಿಷ; ಎಚ್‌.ಡಿ. ದೇವೇಗೌಡ ಗಂಭೀರ ಆರೋಪ</title><link>https://vishwavani.news/karnataka/bengaluru-urban/former-prime-minister-hd-deve-gowda-makes-serious-allegations-against-cm-dk-shivakumar-83734.html</link><guid>https://vishwavani.news/karnataka/bengaluru-urban/former-prime-minister-hd-deve-gowda-makes-serious-allegations-against-cm-dk-shivakumar-83734.html</guid><pubDate>Tue, 14 Jul 2026 13:15:31 +0000</pubDate><description>&lt;![CDATA[ಹೈಕಮಾಂಡ್‌ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಇಲ್ಲದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_and_HD_Devegowda.original.jpg" class="attachment-large size-large wp-post-image" alt="HD Deve Gowda: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ವರಿಷ್ಠರಿಗೆ ಡಿಕೆಶಿ ಆಮಿಷ; ಎಚ್‌.ಡಿ. ದೇವೇಗೌಡ ಗಂಭೀರ ಆರೋಪ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="6b5km"&gt;&lt;b&gt;ಬೆಂಗಳೂರು, ಜುಲೈ 14:&lt;/b&gt; ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಹೈಕಮಾಂಡ್‌ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆಯನ್ನು (Bidadi Township) ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (H.D. Deve Gowda) ಗಂಭೀರ ಆರೋಪ ಮಾಡಿದರು.&lt;/p&gt;&lt;p data-block-key="b1eop"&gt;ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಅವರು ಮಾತನಾಡಿದರು. ಈ ಟೌನ್‌ಶಿಪ್‌ಗೆ ಭೂಮಿ ಕೊಡಲು ರೈತರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಡರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಹೈಕಮಾಂಡ್‌ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಈ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಒಂದು ವೇಳೆ ಯೋಜನೆಯನ್ನು ನೀವು ಕೈ ಬಿಡದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿಗಳು ನೇರ ಎಚ್ಚರಿಕೆ ನೀಡಿದರು.&lt;/p&gt;&lt;p data-block-key="19nd"&gt;ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾವ ಅಧಿಕಾರಿ ಕೂಡ ಸರ್ವೆ ಮಾಡುತ್ತೇವೆ ಎಂದು ಬಿಡದಿಗೆ ಹೋಗಲಿಲ್ಲ. ಹೊಸ ಮುಖ್ಯಮಂತ್ರಿ ಬಂದು ಒಂದು ತಿಂಗಳು ಕೂಡ ಆಗಲಿಲ್ಲ, ಆಗಲೇ ಅಧಿಕಾರಿಗಳನ್ನು ಬಿಟ್ಟು ಸರ್ವೆ ಮಾಡಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಯಾವ ಕಾರಣದಿಂದ ನೀವು ಈ ಯೋಜನೆಗೆ ಕೈ ಹಾಕಿದ್ದೀರ ಎಂಬುದು ನನಗೆ ಗೊತ್ತಿದೆ ಎಂದು ದೇವೇಗೌಡರು ಸಿಡಿಮಿಡಿಯಾದರು.&lt;/p&gt;&lt;p data-block-key="78atk"&gt;&lt;a href="/karnataka/bengaluru-urban/protest-outside-vidhana-soudha-if-land-acquisition-for-bidadi-township-is-not-dropped-hd-deve-gowda-writes-to-cm-dk-shivakumar-83701.html"&gt;"ಬಿಡಿದ ಟೌನ್‌ಶಿಪ್‌ ಕೈಬಿಡದಿದ್ದರೆ ವಿಧಾನಸೌಧದ ಎದುರು ಧರಣಿ"; CM ಡಿಕೆ ಶಿವಕುಮಾರ್‌ಗೆ ಪತ್ರ ಬರೆದ H.D ದೇವೇಗೌಡ&lt;/a&gt;&lt;/p&gt;&lt;p data-block-key="a85h9"&gt;ಸಿದ್ದರಾಮಯ್ಯ ಅವರನ್ನು ಇಳಿಸಲು ದೊಡ್ಡ ಪ್ಲಾನ್ ಮಾಡಿದರು. ಅದಕ್ಕಾಗಿ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ನಾನಾ ಆಮಿಷಗಳನ್ನು ಒಡ್ಡಲಾಯಿತು. ಆ ಆಮಿಷಗಳನ್ನು ಪೂರೈಸಲು ಬಡರೈತರ ಭೂಮಿಗೆ ಕೈ ಹಾಕಿದ್ದೀರಿ. ಚುನಾವಣಾ ಫಂಡ್ ಬಗ್ಗೆ ಕೂಡ ಹೈಕಮಾಂಡ್'ಗೆ ಡಿ.ಕೆ. ಶಿವಕುಮಾರ್ ಆಶ್ವಾಸನೆ ಕೊಟ್ಟಿದ್ದಾರೆ. ಇದೆಲ್ಲವನ್ನು ಸರಿದೂಗಿಸಿಕೊಳ್ಳಲು ಬಿಡದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹಾಲಿ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದರು.&lt;/p&gt;&lt;p data-block-key="avfon"&gt;ಬಿಡದಿಯ ಒಂದು ಗ್ರಾಮದಲ್ಲಿ ಜಂಟಿ ಸರ್ವೆ ಮಾಡಲು ಹೋದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತುರ್ತು ಮಾಧ್ಯಮಗೋಷ್ಠಿ ಕರೆದಿದ್ದೇನೆ. ಮಂಡಹಳ್ಳಿ ಎನ್ನುವ ಆ ಹಳ್ಳಿಯಲ್ಲಿ ಶೇಕಡ 40ರಷ್ಟು ಜನ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಅಂತಹವರು ಜಮೀನು ಕೊಡಲು ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಅನೇಕರು ಹಳ್ಳಿಯಲ್ಲಿ ನೆಲೆಸಿಲ್ಲ. ಅಷ್ಟೂ ಜನರಿಗೆ ಸೇರಿ ಇರುವ ಭೂಮಿ ಕೇವಲ 17 ಎಕರೆ ಮಾತ್ರ. 500 ಎಕರೆ ಇರುವ ಜಾಗದ ರೈತರು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಅಲ್ಲಿ ಗಲಾಟೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.&lt;/p&gt;&lt;p data-block-key="9i3vk"&gt;ತಮ್ಮ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಬಂದರೆ ಯಾರಿಗೆ ಆದರೂ ಕೋಪ ಬರುವುದು ಸಹಜ. ಅದರಂತೆಯೇ ರೈತರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಅವರು ಕಂದಾಯ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿಗೆ ಹೋದೆವು ಎಂದು ಹೇಳುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾರಾದರೂ ಬೆಂಬಲ ಕೊಡುತ್ತಾರೆ. ಆದರೆ ಇಲ್ಲಿ ಸರ್ಕಾರವೇ ಕಾನೂನನ್ನು ಮೀರಿ ವರ್ತಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕೊಟ್ಟಿರುವ ದೂರಿನ ಆಧಾರದ ಮೇಲೆ ಪೊಲೀಸರು ರೈತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಹೇಳಿದಂತೆ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಹೇಳಿದ್ದಾರೆ. ಇಷ್ಟು ಸಾಲದು ಎಂಬಂತೆ ಐಜಿ ಅವರು ಕೂಡ ಹೋಗಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಹೆಣ್ಣುಮಕ್ಕಳು ಕೂಡ ತಮಗಾಗಿರುವ ನೋವು ಹೇಳಿಕೊಂಡಿದ್ದಾರೆ. ರೈತರು ಬದುಕಬೇಕಲ್ಲವೇ? ಇವತ್ತು ಐಜಿ, ಪೊಲೀಸ್ ವರಿಷ್ಟಾಧಿಕಾರಿ ಎಲ್ಲರೂ ರೈತರ ಮಕ್ಕಳೇ ಅಲ್ಲವೇ ಎಂದು ಮಾಜಿ ಪ್ರಧಾನಿಗಳು ಹೇಳಿದರು.&lt;/p&gt;&lt;p data-block-key="42m70"&gt;ಭೂಮಿ ಕೊಡಲ್ಲ ಎಂದು ಹೇಳಿದ ಮೇಲೆಯೂ ಸರ್ವೆ ಮಾಡಲು ಬಂದಿದ್ದನ್ನು ಏನೆಂದು ಕರೆಯಬೇಕು? ಅತಿಕ್ರಮಣ ಮಾಡಲು ಬಂದರೆ ಸುಮ್ಮನಿರು ಸಾಧ್ಯವೇ? ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಮೇಲೆ ಎಫ್ ಐಆರ್ ಹಾಕಿದರೆ ಅವರ ಬದುಕು ಹೇಗೆ ನಡೆಯುತ್ತದೆ? ಸರ್ಕಾರ ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;h3 data-block-key="bhn3i"&gt;&lt;b&gt;ನನ್ನ ಪತ್ರಕ್ಕೆ ಸಿಎಂ ಕಚೇರಿ ಹಿಂಬರಹವನ್ನೇ ನೀಡಿಲ್ಲ:&lt;/b&gt;&lt;/h3&gt;&lt;p data-block-key="a8duc"&gt;ಈ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಕಳೆದ ಜೂನ್ 25ರಂದು ಪತ್ರ ಬರೆದಿದ್ದೇನೆ. ಇವತ್ತು ಜುಲೈ 14. ಹೆಚ್ಚು ಕಮ್ಮಿ 20 ದಿನ ಆಗಿದೆ. ಅವರಿಗೆ ಪತ್ರ ತಲುಪಿರುತ್ತದೆ ಎಂದು ಭಾವಿಸಿದ್ದೇನೆ. ಆದರೂ ಅವರಿಗೆ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಈವರೆಗೆ ಹಿಂಬರಹವನ್ನು ಕೊಟ್ಟಿಲ್ಲ. ನಾನು ಒಬ್ಬ ರೈತರ ಮಗ. ಈಗ ನನಗೆ ಯಾವ ಅಧಿಕಾರ ಇಲ್ಲ. ರೈತನ ಮಗನಾಗಿ ನಾನು ಪತ್ರ ಬರೆದಿದ್ದೇನೆ. ಅದಕ್ಕೆ ಒಂದು ಹಿಂಬರಹ ಕೊಡುವ ಸೌಜನ್ಯ ಮುಖ್ಯಮಂತ್ರಿಗಳ ಕಚೇರಿಗೆ ಇಲ್ಲದಾಗಿದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p data-block-key="4ev0o"&gt;ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಈಗಲೂ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ, ಧರಣಿ ಕೂರುವ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ. ರೈತರ ಮೇಲೆ ಹಾಕಿರುವ ಎಫ್'ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ವಿನಂತಿಸುತ್ತೇನೆ. ನೀವು ಕೂಡ ರೈತರ ಮಕ್ಕಳೇ ಅಲ್ಲವೇ? ರೈತರ ಕಷ್ಟ ನೋವು ಅರ್ಥ ಮಾಡಿಕೊಳ್ಳುವ ಶಕ್ತಿ ‌ಇದೆ. ಸದ್ಯಕ್ಕೆ ಏನೋ ಸರ್ವೆ ನಿಲ್ಲಿಸಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಬಿಡದಿ ಉಪನಗರ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಧರಣಿ ಕೂರುವ ನನ್ನ ನಿರ್ಧಾರ ಅಚಲ ಎಂದು ದೇವೇಗೌಡರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.&lt;/p&gt;&lt;h3 data-block-key="h5bv"&gt;&lt;b&gt;ಮುಖ್ಯಮಂತ್ರಿಗೆ 11 ಪುಟಗಳ ಪತ್ರ ಬರೆದಿದ್ದೇನೆ:&lt;/b&gt;&lt;/h3&gt;&lt;p data-block-key="fh3g5"&gt;ಬಿಡದಿ ರೈತರ ಪರವಾಗಿ ನಾನು ದನಿ ಎತ್ತಿದ್ದೇನೆ. ಮುಖ್ಯಮಂತ್ರಿಗೆ 11 ಪುಟಗಳ ಪತ್ರವನ್ನು ಬರೆದಿದ್ದೇನೆ. ಎಲ್ಲಾ ಮಾಹಿತಿಯನ್ನು ಮತ್ತು ನನ್ನ ಕಳವಳವನ್ನು ಅವರ ಗಮನಕ್ಕೆ ತಂದಿದ್ದೇನೆ. ಶಿವಕುಮಾರ್ ಅವರು ಕೂಡ ರೈತನ ಮಗನೇ. ಅವರು ರೈತರ ಕುರಿತ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕು. ಕುಮಾರಸ್ವಾಮಿ ಅವರು ಹಿಂದೆ ಬಿಡದಿ ಟೌನ್ಶಿಪ್ ಯೋಜನೆ ಮಾಡಲು ಹೊರಟಾಗ ಇವರದೇ ಕಾಂಗ್ರೆಸ್ ಪಕ್ಷ ವಿರೋಧ ಮಾಡಿದ್ದು. ಸತ್ಯಶೋಧನಾ ಸಮಿತಿ ಕೂಡ ಮಾಡಿದ್ದರು. ರೈತರು ಕೂಡ ಆ ಯೋಜನೆ ಬೇಡವೆಂದು ಪಟ್ಟು ಹಿಡಿದರು. ಈ ಕಾರಣಕ್ಕಾಗಿ ಅಂದು ಕುಮಾರಸ್ವಾಮಿ ಅವರು ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟರು ಎಂಬುದನ್ನು ಈ ಸರ್ಕಾರ ಮರೆಯಬಾರದು. ಡಿಕೆ ಶಿವಕುಮಾರ್ ಅವರು ಸತ್ಯವನ್ನು ಮುಚ್ಚಿಟ್ಟು ಕುಮಾರಸ್ವಾಮಿ ಮಾಡಿದರು, ಅದನ್ನು ನಾನು ಮುಂದುವರಿಸುತ್ತಿದ್ದೇನೆ ಎಂದು ಸುಳ್ಳಿ ಹೇಳುತ್ತಿದ್ದಾರೆ. ಅಂದು ಪ್ರತಿಪಕ್ಷದಲ್ಲಿದ್ದು ನೀವೇ ವಿರೋಧಿಸಿ ಇವತ್ತು ಟೌನ್ ಶಿಪ್ ಯೋಜನೆಗೆ ಬಿಡದಿ ರೈತರ ಭೂಮಿಯ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದ್ದೀರಿ. ಇದು ಯಾವ ಸೀಮೆಯ ನ್ಯಾಯ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p data-block-key="94lm"&gt;ಕುಮಾರಸ್ವಾಮಿ ಅವರು ಆ ಯೋಜನೆ ಕೈಬಿಟ್ಟ ಮೇಲೆ ವೃಷಭಾವತಿ ನೀರು ಬಳಸಿ ಜಾನುವಾರುಗಳಿಗೆ ಮೇವು ಬೆಳೆಯುವ ಹಾಗೆ ಮಾಡಿದರು. ಇವತ್ತು ಆ ಭಾಗದಲ್ಲಿ ತೋಟಗಾರಿಕೆ, ಹೈನುಗಾರಿಕೆ ಸಮೃದ್ಧವಾಗಿದೆ. ರೈತರು ಎರಡು ಕೈಗಳಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಪತ್ರದಲ್ಲಿ ಇದೆಲ್ಲವನ್ನು ಸಂಪೂರ್ಣವಾಗಿ ಬರೆದಿದ್ದೇನೆ. ಸಣ್ಣ ಹಿಡುವಳಿದಾರರು; ಅಂದರೆ 1 ಗುಂಟೆಯಿಂದ 5 ಗುಂಟೆ ಜಾಗ ಇರುವವರು 2,555 ರೈತರು ಇದ್ದಾರೆ. 10-20 ಗುಂಟೆ ಹೊಂದಿರುವ ರೈತರು 1,653 ಮಂದಿ ಇದ್ದಾರೆ. 20ರಿಂದ 40 ಗುಂಟೆ ಜಮೀನು ಇರುವವರು 2,257 ರೈತರು ಇದ್ದಾರೆ. 1ರಿಂದ 2 ಎಕರೆ ಹೊಂದಿರುವ 1,342 ರೈತರು ಇದ್ದಾರೆ. ಇಂತಹ ಸಣ್ಣ, ಅತಿಸಣ್ಣ ರೈತರ ಭೂಮಿ ಕಿತ್ತುಕೊಂಡು ಅವರನ್ನು ಎಲ್ಲಿಗೆ ಕಳಿಸುತ್ತೀರಿ ಎಂದು ಅವರು ಪ್ರಶ್ನಿಸಿರು.&lt;/p&gt;&lt;p data-block-key="7onnb"&gt;ಬೆಂಗಳೂರನ್ನು 5 ಭಾಗ ಮಾಡಿ ಗ್ರೇಟರ್ ಬೆಂಗಳೂರು ಮಾಡಿದಾಗಲು ನಾನು ವಿರೋಧ ಮಾಡಲಿಲ್ಲ. ರೈತರಿಗೆ ನಿವೇಶನಗಳ ಕೊರತೆ ಇದ್ದರೆ ಅದಕ್ಕೆ ಪೂರಕವಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಇರುವ ನಿವೇಶನಗಳನ್ನು ನೀಡಿ. ಸಚಿವ ಸತೀಶ್ ಜಾರಕಿಹೊಳಿ ಹೇಳುವಂತೆ 20,000 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಅವೆಲ್ಲವೂ ಮಾರಾಟವಾಗಿದೆ ಖಾಲಿ ಬಿದ್ದಿವೆ. ಖರೀದಿ ಮಾಡುವವರೇ ಇಲ್ಲ. ಹಾಗಿದ್ದ ಮೇಲೆ ಬಿಡದಿ ಯೋಜನೆ ಬೇಕಾ? ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದರು. ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿ ಹಲವರು ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳು ಬೇಡಿಕೆ ಇಲ್ಲದೆ ಹಾಗೆಯೇ ಬಿದ್ದಿವೆ. ಇದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಬೇರೆ ಕಡೆ ಬೇಕಾದಷ್ಟು ಒಣ ಜಮೀನು ಇದ್ದರೂ ಬಿಡದಿ ಭೂಮಿ ಮೇಲೆ ಯಾಕೆ ಕಣ್ಣು ಎಂದು ದೇವೇಗೌಡರು ತೀಕ್ಷ್ಣವಾಗಿ ಪ್ರಶ್ನಿಸಿದರು.&lt;/p&gt;&lt;p data-block-key="7tfi0"&gt;ರಾಮನಗರಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ ಇಂದಿನ ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಪ್ರಧಾನಿಗಳು; 30 ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಅವರು ರಾಮನಗರಕ್ಕೆ ಬಂದು ನೆಲೆಸಿದ್ದಾರೆ. ನೆನ್ನೆ ಮೊನ್ನೆ ಬಂದು ಹೋರಾಟ ಮಾಡುತ್ತಿಲ್ಲ. ಮುಖ್ಯಮಂತ್ರಿಗೆ ನೇರವಾಗಿ ಹೇಳುತ್ತೇನೆ, ದಯವಿಟ್ಟು ಬಡವರ ಭೂಮಿಯನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದರು.&lt;/p&gt;&lt;p data-block-key="10tfl"&gt;ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಒಬ್ಬರು ಅಲ್ಲಿಗೆ ಹೋಗಿದ್ದಾರೆ. ಅವರು ಯೋಜನೆ ಮಾಡಬಾರದು ಅಂತ ಹೇಳಿದ್ದಾರೆ. ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮುಂದುವರಿಸಬಾರದು. ಸರ್ಕಾರದ ತೀರ್ಮಾನವನ್ನು ನೋಡಿಕೊಂಡು ನಾನು ಮುಂದಿನ ಹೆಜ್ಜೆ ಇಡುತ್ತೇನೆ ಎಂದು ದೇವೇಗೌಡರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.&lt;/p&gt;&lt;p data-block-key="9iavp"&gt;&lt;a href="/karnataka/bengaluru-urban/dk-awaiting-the-high-commands-call-83673.html"&gt;ಹೈಕಮಾಂಡ್‌ ಕರೆಗೆ ಕಾಯುತ್ತಿರುವ ಡಿಕೆ&lt;/a&gt;&lt;/p&gt;&lt;p data-block-key="6qvcp"&gt;ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಎ.ಮಂಜುನಾಥ್ ಹಾಗೂ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಿವಾದದ ನಡುವೆ ಭೋಜಶಾಲಾ ದೇವಾಲಯದ ಸಮೀಪ ನಮಾಜ್‌ಗೆ ಸುಪ್ರೀಂ ಕೋರ್ಟ್ ಅನುಮತಿ</title><link>https://vishwavani.news/national/supreme-court-allows-prayers-near-bhojshala-temple-amid-controversy-83732.html</link><guid>https://vishwavani.news/national/supreme-court-allows-prayers-near-bhojshala-temple-amid-controversy-83732.html</guid><pubDate>Tue, 14 Jul 2026 12:56:40 +0000</pubDate><description>&lt;![CDATA[ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ದೇವಾಲಯದಲ್ಲಿ ಶುಕ್ರವಾರದ ನಮಾಜ್‌ಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಭೋಜಶಾಲಾ ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ದೇವಾಲಯವೆಂದು ಘೋಷಿಸುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ತಡೆಹಿಡಿಯಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಮೇಲ್ಮನವಿ ಅರ್ಜಿಯನ್ನು ಆಲಿಸಲು ಕೂಡ ಒಪ್ಪಿಕೊಂಡಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/bhosha.original.jpg" class="attachment-large size-large wp-post-image" alt="ವಿವಾದದ ನಡುವೆ ಭೋಜಶಾಲಾ ದೇವಾಲಯದ ಸಮೀಪ ನಮಾಜ್‌ಗೆ ಸುಪ್ರೀಂ ಕೋರ್ಟ್ ಅನುಮತಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ghvpk"&gt;&lt;b&gt;ನವದೆಹಲಿ:&lt;/b&gt; ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ( Dhar district) ಭೋಜಶಾಲಾ ಕಮಲ್ ಮೌಲಾ ಮಸೀದಿ (&lt;a href="/crime/madhya-pradesh-man-kills-wife-sleeps-with-body-for-2-days-74311.html"&gt;Bhojshala Kamal Maula mosque&lt;/a&gt;) ಸಂಕೀರ್ಣ ಸರಸ್ವತಿ ದೇವಿಗೆ (saraswati devi temple) ಮೀಸಲಾಗಿರುವ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhya Pradesh high court) ನೀಡಿದ್ದ ತೀರ್ಪನ್ನು ತಡೆ ಹಿಡಿಯಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ (Supreme Court) ಭೋಜಶಾಲಾ ದೇವಾಲಯದ ವಿವಾದಿತ (Bhojshala temple dispute) ಸ್ಥಳದ ಬಳಿ ಶುಕ್ರವಾರ ನಮಾಜ್‌ (namaz) ಮಾಡಲು ಮುಸ್ಲಿಂ ಸಮುದಾಯಕ್ಕೆ ಅನುಮತಿಯನ್ನು ನೀಡಿದೆ.&lt;/p&gt;&lt;p data-block-key="fmv0a"&gt;ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಮುಸ್ಲಿಂ ಸಮುದಾಯ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಮುಸ್ಲಿಮರು ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ.&lt;/p&gt;&lt;p data-block-key="5m9lt"&gt;&lt;a href="/national/bhojshala-temple-dispute-supreme-court-agrees-to-listen-to-muslim-community-83619.html"&gt;&lt;b&gt;ಭೋಜಶಾಲಾ ದೇವಾಲಯ ವಿವಾದ: ಮುಸ್ಲಿಂ ಸಮುದಾಯದ ವಾದ ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ&lt;/b&gt;&lt;/a&gt;&lt;/p&gt;&lt;p data-block-key="d1lm6"&gt;ಇದು ಅತ್ಯಂತ ಸೂಕ್ಷ್ಮ ವಿಷಯ. ಸ್ಥಳದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟು ಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯಾವುದೇ ಆದೇಶವನ್ನು ನಾವು ಹೊರಡಿಸಬಾರದು. ಹೀಗಾಗಿ ವಿಷಯದ ಕುರಿತು ಸಂಪೂರ್ಣ ವಿಚಾರಣೆ ನಡೆಯುವವರೆಗೆ ಸ್ಥಳದಲ್ಲಿ ನಮಾಜ್ ಗೆ ಅನುಮತಿ ನೀಡಲಾಗುತ್ತಿದೆ. ಮೂರು ವಾರಗಳಲ್ಲಿ ಅಂತಿಮ ವಿಚಾರಣೆಗೆ ದಿನ ನಿಗದಿಪಡಿಸಲಾಗುವುದು ಎಂದು ಪೀಠ ತಿಳಿಸಿದೆ.&lt;/p&gt;&lt;p data-block-key="cd2pc"&gt;ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಸ್ಮಾರಕದಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳನ್ನು ಮಾಡುವಂತಿಲ್ಲ ಎಂದು ಹೇಳಿರುವ ನ್ಯಾಯಪೀಠವು, ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಮುಖಂಡರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿತ್ತು.&lt;/p&gt;&lt;p data-block-key="545ru"&gt;ಭೋಜಶಾಲಾ ಕಮಲ್ ಮೌಲಾ ಮಸೀದಿಗೆ ಸಂಬಂಧಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ದಶಕದ ಹಿಂದೆ ನೀಡಿದ್ದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿತ್ತು. ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಯಾಯಿತು. ಹೀಗಾಗಿ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;&lt;p data-block-key="3jta3"&gt;&lt;b&gt;ಏನು ಈ ವಿವಾದ ?&lt;/b&gt;&lt;/p&gt;&lt;p data-block-key="ppso"&gt;ಭೋಜಶಾಲಾ ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯ ಎಂದು ಹಿಂದೂಗಳು ಸಮರ್ಥಿಸಿಕೊಂಡಿದ್ದು, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎನ್ನುತ್ತಿದ್ದಾರೆ. ಇದರಿಂದ ಇಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ.&lt;/p&gt;&lt;p data-block-key="4618v"&gt;ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನೀಡಿದ ವರದಿ ಆಧಾರದಲ್ಲಿ ಕಳೆದ ಮೇ 15ರಂದು ಮಧ್ಯಪ್ರದೇಶ ಹೈಕೋರ್ಟ್ ಆ ಸ್ಥಳವು ದೇವಾಲಯವಾಗಿದೆ ಎಂದು ಹೇಳಿ 2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಈ ಆದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ವಿಭಿನ್ನ ದಿನಗಳಲ್ಲಿ ಆ ಸ್ಥಳದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.&lt;/p&gt;&lt;p data-block-key="9neg"&gt;&lt;a href="/national/no-need-to-fear-a-hindu-nation-yoga-guru-baba-ramdevs-remark-sparks-major-controversy-83608.html"&gt;&lt;b&gt;“ಹಿಂದೂ ರಾಷ್ಟ್ರದ ಕಲ್ಪನೆಗೆ ಭಯಪಡುವ ಅಗತ್ಯವಿಲ್ಲ”: ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಬಾಬಾ ರಾಮ್‌ದೇವ್&lt;/b&gt;&lt;/a&gt;&lt;/p&gt;&lt;p data-block-key="8atr3"&gt;ಸಾಹಿತ್ಯ ಮತ್ತು ಪುರಾತತ್ತ್ವ ಶಾಸ್ತ್ರದ ಉಲ್ಲೇಖಗಳನ್ನು ಪರಿಗಣಿಸಿ ಈ ಸ್ಥಳ ದೇವಾಲಯವಾಗಿದ್ದು, ಸಂಸ್ಕೃತ ಕಲಿಕೆಯ ಕೇಂದ್ರವಾಗಿತ್ತು ಎಂದು ಹೇಳಿದ್ದ ಹೈಕೋರ್ಟ್, ಇಲ್ಲಿಂದ ಮಸೀದಿ ತೆರವುಗೊಳಿಸಿ ಬೇರೆಡೆ ನಿರ್ಮಾಣ ಮಾಡಲು ಸ್ಥಳವನ್ನು ಮಂಜೂರು ಮಾಡಲು ಅವಕಾಶ ನೀಡಿತ್ತು. ಇದನ್ನು ಕೂಡ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?</title><link>https://vishwavani.news/movies/after-tabaahi-musician-vishal-mishra-begins-work-on-fourth-song-83730.html</link><guid>https://vishwavani.news/movies/after-tabaahi-musician-vishal-mishra-begins-work-on-fourth-song-83730.html</guid><pubDate>Tue, 14 Jul 2026 12:46:56 +0000</pubDate><description>&lt;![CDATA[Toxic Movie: ಇತ್ತೀಚೆಗೆ  'ತಬಾಹಿ'ಸಾಂಗ್‌ ರಿಲೀಸ್‌ ಆಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ  ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ. ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/After_Tabaahi_musician_Vishal_Mishra_begins_wor.original.jpg" class="attachment-large size-large wp-post-image" alt="Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="udzz3"&gt;ಯಶ್ (Actor yash) ಮುಂಬರುವ ಗ್ಯಾಂಗ್‌ಸ್ಟಾರ್ ಆಕ್ಷನ್ ಡ್ರಾಮಾ '&lt;a href="/movies/yash-kiara-advani-nayanthara-starrer-toxic-movie-tabaahi-song-released-83137.html"&gt;ಟಾಕ್ಸಿಕ್&lt;/a&gt;' (Toxic Movie) ಚಿತ್ರವು ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇತ್ತೀಚೆಗೆ  'ತಬಾಹಿ'ಸಾಂಗ್‌ ರಿಲೀಸ್‌ ಆಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ (Vishal Mishra) ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ.&lt;/p&gt;&lt;h3 data-block-key="e7eh6"&gt;&lt;b&gt;ಯಾವ ಸಾಂಗ್?&lt;/b&gt;&lt;/h3&gt;&lt;p data-block-key="p3r0"&gt;ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಒಂದು ಸಾಂಗ್ ಜೊತೆಗೆ ಹಿನ್ನೆಲೆ ಸಂಗೀತ ಜವಾಬ್ದಾರಿಯನ್ನು ರವಿ ಬಸ್ರೂರು ವಹಿಸಿಕೊಂಡಿದ್ದಾರೆ. &lt;/p&gt;&lt;p data-block-key="41ek"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/shruti-haasan-performs-grihapravesh-puja-as-she-moves-into-her-new-home-in-chennai-83686.html"&gt;Shruti Haasan: ಹೊಸ ಮನೆ ಗೃಹಪ್ರವೇಶ ಮಾಡಿದ ಶ್ರುತಿ ಹಾಸನ್! ಇಲ್ಲಿವೆ ಫೋಟೋಸ್‌&lt;/a&gt;&lt;/p&gt;&lt;p data-block-key="felg7"&gt;'ತಬಾಹಿ' ಸೇರಿ 4 ಹಾಡುಗಳನ್ನು ವಿಶಾಲ್ ಮಿಶ್ರಾ ಕಟ್ಟಿಕೊಡುತ್ತಿದ್ದಾರೆ. ಮತ್ತೊಂದು ಹಾಡಿಗೆ ಅವರೊಟ್ಟಿಗೆ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಕೈ ಜೋಡಿಸಿದ್ದಾರೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ.&lt;/p&gt;&lt;p data-block-key="a6g7r"&gt;ವಿಶಾಲ್ ಮಿಶ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಾಕ್ಸಿಕ್ ಚಿತ್ರದ ನಾಲ್ಕನೇ ಹಾಡಿನ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ವಿಶಾಲ್ ಮಿಶ್ರಾ ಪ್ರಸ್ತುತ ಸಂಗೀತ ಕಾರ್ಯಕ್ರಮಕ್ಕಾಗಿ ಕ್ಯಾಲಿಫೋರ್ನಿಯಾದಲ್ಲಿದ್ದಾರೆ.  "Toxic - PBS 4" ಎಂದು ಬರೆದುಕೊಂಡಿದ್ದಾರೆ. ಅಂದರೆ ಚಿತ್ರದ 4ನೇ ಹಾಡಿನ ಕೆಲಸ ನಡೆಯುತ್ತಿದೆ ಎಂದು ಸುಳಿವು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.&lt;/p&gt;&lt;p data-block-key="a465j"&gt;ವಿಶಾಲ್ ಮಿಶ್ರಾ ಜೊತೆಗೆ, ಚಿತ್ರವು ಪ್ರತಿಭಾನ್ವಿತ ತಂಡವನ್ನು ಹೊಂದಿದ್ದು, ರವಿ ಬಸ್ರೂರ್ , ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರು ಧ್ವನಿಪಥವನ್ನು ಸಂಯೋಜಿಸುತ್ತಿದ್ದಾರೆ . 'ಟಾಕ್ಸಿಕ್' 'ಲೇಡೀಸ್ &amp;amp; ಲೇಡೀಸ್' ಟೀಸರ್ ಹಾಡಿನ ಮೊದಲು, ತಯಾರಕರು 'ಲೇಡೀಸ್ &amp;amp; ಲೇಡೀಸ್' ಎಂಬ ಟೀಸರ್ ಅನ್ನು ಬಿಡುಗಡೆ ಮಾಡಿದರು.&lt;/p&gt;&lt;p data-block-key="6kgtf"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Cooking  in hollywood  &lt;a href="https://t.co/M4zPLrGceM"&gt;pic.twitter.com/M4zPLrGceM&lt;/a&gt;&lt;/p&gt;&amp;mdash; Vishal Mishra (@VishalMMishra) &lt;a href="https://x.com/VishalMMishra/status/2076850558997352620?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="bid6f"&gt;&lt;/p&gt;&lt;p data-block-key="7f055"&gt;'ತಬಾಹಿ' ಚಿತ್ರದ ವೀಡಿಯೋ ಸಾಂಗ್ ಬಿಡುಗಡೆ ಬೆನ್ನಲ್ಲೇ ಯಶ್ ಜೊತೆ ವಾಟ್ಸಪ್ ಕಾಲ್‌ನಲ್ಲಿ ಚರ್ಚೆ ನಡೆಸಿರುವ ಬಗ್ಗೆ ವಿಶಾಲ್ ಮಿಶ್ರಾ ಹಂಚಿಕೊಂಡಿದ್ದರು.ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಅಮಿತ್ ತಿವಾರಿ ಸೇರಿದಂತೆ ಹಲವು ವಿದೇಶಿ ನಟ, ನಟಿಯರು ಸಹ ನಟಿಸಿದ್ದಾರೆ.&lt;/p&gt;&lt;p data-block-key="eka24"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/a-solution-must-be-found-for-the-bhoomika-suffering-malli-has-arrived-83687.html"&gt;Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ&lt;/a&gt;&lt;/p&gt;&lt;p data-block-key="7dpdd"&gt; ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಚಿತ್ರೀಕರಿಸಲಾಗಿದ್ದು, ವಿವಿಧ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>11 ಲಕ್ಷ ರುಪಾಯಿ ಗಳಿಸುವ ಯುವತಿಗೆ 1 ಕೋಟಿ ರುಪಾಯಿ ಸಂಬಳದ ವರನೇ ಬೇಕಂತೆ: ಕುಟುಂಬದ ನಿರೀಕ್ಷೆ ಕೇಳಿ ಕ್ಲೈಂಟ್ ಕೈಬಿಟ್ಟ ಬ್ರೋಕರ್ ಹೇಳಿದ್ದೇನು?</title><link>https://vishwavani.news/viral/broker-goes-to-find-a-groom-for-brahmin-girl-shocked-by-familys-expectations-83729.html</link><guid>https://vishwavani.news/viral/broker-goes-to-find-a-groom-for-brahmin-girl-shocked-by-familys-expectations-83729.html</guid><pubDate>Tue, 14 Jul 2026 12:42:46 +0000</pubDate><description>&lt;![CDATA[Viral Video: ತಮ್ಮ ಮಕ್ಕಳಿಗೆ ಇದೇ ರೀತಿಯ ಹುಡುಗ ಅಥವಾ ಹುಡುಗಿ ಸಿಗಬೇಕು ಅನ್ನುವ ನಿರೀಕ್ಷೆಗಳು ಪೋಷಕರಿಗೆ ಇರುತ್ತದೆ. ಇದೀಗ ಇದೇ ವಿಚಾರವಾಗಿ ಮ್ಯಾಚ್‌ಮೇಕರ್ ಒಂದ್ರಿಲಾ ಕಪೂರ್ ಪೋಸ್ಟ್ ಶೇರ್ ಮಾಡಿದ್ದು, ಬ್ರಾಹ್ಮಣ ಯುವತಿಯ ಕುಟುಂಬಸ್ಥರ ನಿರೀಕ್ಷೆಗಳನ್ನು ಕೇಳಿ ಆ ಕ್ಲೈಂಟ್ ಅನ್ನೇ ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/delhi_video_83.original.jpg" class="attachment-large size-large wp-post-image" alt="11 ಲಕ್ಷ ರುಪಾಯಿ ಗಳಿಸುವ ಯುವತಿಗೆ 1 ಕೋಟಿ ರುಪಾಯಿ ಸಂಬಳದ ವರನೇ ಬೇಕಂತೆ: ಕುಟುಂಬದ ನಿರೀಕ್ಷೆ ಕೇಳಿ ಕ್ಲೈಂಟ್ ಕೈಬಿಟ್ಟ ಬ್ರೋಕರ್ ಹೇಳಿದ್ದೇನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="kpoh3"&gt;&lt;b&gt;ನವದೆಹಲಿ, ಜು. 14:&lt;/b&gt; ಇತ್ತೀಚೆಗೆ ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ವಧು- ವರರನ್ನು ಹುಡುಕುವುದೇ ಪೋಷಕರಿಗೆ ದೊಡ್ಡ ತಲೆನೋವು. ಅದರಲ್ಲೂ ತಮ್ಮ ಮಕ್ಕಳಿಗೆ ಇದೇ ರೀತಿಯ ಹುಡುಗ ಅಥವಾ ಹುಡುಗಿ ಸಿಗಬೇಕು ಅನ್ನುವ ನಿರೀಕ್ಷೆ ಅವರಿಗಿರುತ್ತದೆ. ಇದೀಗ ಇದೇ ವಿಚಾರವಾಗಿ ಮ್ಯಾಚ್‌ಮೇಕರ್ ಒಂದ್ರಿಲಾ ಕಪೂರ್ ಎನ್ನುವವರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.  ಬ್ರಾಹ್ಮಣ ಯುವತಿಯ ಕುಟುಂಬಸ್ಥರ ನಿರೀಕ್ಷೆಗಳನ್ನು ಕೇಳಿ ಆ ಕ್ಲೈಂಟ್ ಅನ್ನೇ ಕೈಬಿಟ್ಟಿದ್ದಾಗಿ &lt;a href="/viral/microsoft-employee-expresses-frustration-saying-his-decision-to-leave-was-wrong-83623.html"&gt;&lt;b&gt;(Viral News)&lt;/b&gt;&lt;/a&gt; ಅವರು ತಿಳಿಸಿದ್ದಾರೆ.&lt;/p&gt;&lt;p data-block-key="6ebvi"&gt;ಆಧುನಿಕ ಯುಗದಲ್ಲಿ ಮದುವೆಯ ವಿಚಾರದಲ್ಲಿ ಪೋಷಕರ ನಿರೀಕ್ಷೆ ಹೆಚ್ಚಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ​11 ಲಕ್ಷ ರುಪಾಯಿ ವಾರ್ಷಿಕ ಆದಾಯವಿರುವ 28 ವರ್ಷದ ಬಂಗಾಳಿ ಬ್ರಾಹ್ಮಣ ಯುವತಿಯ ಕುಟುಂಬಸ್ಥರು ತಮ್ಮ ಮಗಳಿಗೆ 1 ಕೋಟಿ ರುಪಾಯಿಗಿಂತ ಹೆಚ್ಚು ವೇತನ ಇರುವ ಬಂಗಾಳಿ ಬ್ರಾಹ್ಮಣ ವರನೇ ಬೇಕು ಎಂದು ತಲೆ ತಿಂದಿರುವ ಬಗ್ಗೆ ವಿವರಿಸಿದ್ದಾರೆ.&lt;/p&gt;&lt;h3 data-block-key="5to2p"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/Dau1vDyoGO9/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/Dau1vDyoGO9/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/Dau1vDyoGO9/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Oendrila Kapoor | MatchMaker and Dating Coach (@oendrila.kapoor)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="c8ks8"&gt;ಕಪೂರ್ ಅವರ ಪ್ರಕಾರ, ಯುವತಿಯ ಕುಟುಂಬವು ಪ್ರತಿಯೊಂದು ಪ್ರೊಫೈಲ್ ತಿರಸ್ಕರಿಸಿತ್ತು. ಅಂತಿಮವಾಗಿ ವಾರ್ಷಿಕ 1 ಕೋಟಿ ರುಪಾಯಿಗಿಂತ ಹೆಚ್ಚು ಹಣ ಸಂಪಾದಿಸುವ ಬಂಗಾಳಿ ಬ್ರಾಹ್ಮಣ ವರ ಅವರಿಗೆ ಬೇಕು ಎನ್ನುವುದು ತಿಳಿಯಿತು ಎಂದು ​ವೃತ್ತಿಪರ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್ ನಡೆಸುವ ಒಂದ್ರಿಲಾ ಕಪೂರ್ ವಿಡಿಯೊದಲ್ಲಿ ತಿಳಿಸಿದ್ದಾರೆ.&lt;/p&gt;&lt;p data-block-key="d9mg3"&gt;&lt;a href="/viral/employee-responds-angrily-to-manager-asking-her-to-log-in-on-his-day-leave-83635.html"&gt;&lt;b&gt; ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಉದ್ಯೋಗಿ&lt;/b&gt;&lt;/a&gt;&lt;/p&gt;&lt;p data-block-key="4s97b"&gt;ವಧುವಿನ ಮನೆಯವರು ಆರಂಭದಲ್ಲಿ ಒಳ್ಳೆಯ ಕುಟುಂಬದ, ಉತ್ತಮ ಉದ್ಯೋಗ ಹೊಂದಿದ ವಿದ್ಯಾವಂತ ಹುಡುಗ ಸಾಕು ಎಂದು ತಿಳಿಸಿತ್ತು. ಇದರ ಆಧಾರದ ಮೇಲೆ ಕಪೂರ್ ಅವರ ತಂಡವು ಯುವತಿಯ ವಯಸ್ಸಿನ ಆಧಾರದ ಮೇರೆಗೆ ಗೌರವಾನ್ವಿತ ಕುಟುಂಬಗಳಿಗೆ ಸೇರಿದ, ಹಲವು ಯುವಕರ ಪ್ರೊಫೈಲ್ ಕಳುಹಿಸಿದೆ. ಆದರೆ ಯಾವುದೇ ಸ್ಪಷ್ಟ ಕಾರಣ ನೀಡದೆ ಯುವತಿಯ ಕುಟುಂಬ ಎಲ್ಲವನ್ನೂ ತಿರಸ್ಕರಿಸಿತು.&lt;/p&gt;&lt;p data-block-key="9q4r0"&gt;ಕಪೂರ್ ಅವರ ತಂಡವು ಕೊನೆಗೆ ಯುವತಿ ಕುಟುಂಬದ ಬೇಡಿಕೆ ಏನು ಎಂಬುದನ್ನು ವಿಚಾರಿಸಿದೆ. ಅವರ ಬೇಡಿಕೆ ಕೇಳಿ ಅಚ್ಚರಿಗೆ ಒಳಗಾಗಿದೆ. ಆ ಕುಟುಂಬ ಆಯ್ಕೆ ಮಾಡಿದ ಪ್ರತಿಯೊಬ್ಬ ಯುವಕನ ಸಂಬಳ ಒಂದು ಕೋಟಿ ರುಪಾಯಿಗೂ ಅಧಿಕವಾಗಿತ್ತು. ಕೊನೆಗೆ ಕಪೂರ್ ತಂಡವು ಆ 1 ಕೋಟಿ ರುಪಾಯಿ ಗಳಿಸುವ ಹುಡುಗರನ್ನು ಸಂಪರ್ಕಿಸಿದಾಗ ಯಾರೊಬ್ಬರೂ ಈ ಯುವತಿಯನ್ನು ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದಾಗಿ ಒಂದ್ರಿಲಾ ಕಪೂರ್ ಆ ಕ್ಲೈಂಟ್ ಕೈಬಿಟ್ಟರು. ​ಅಷ್ಟೊಂದು ದೊಡ್ಡ ಮೊತ್ತ ಗಳಿಸುವ ಪುರುಷರು ಕುರುಡರಲ್ಲ. ಅವರಿಗೆ ಯುವತಿಯರ ಅತಿಯಾದ ನಿರೀಕ್ಷೆ ಅರ್ಥವಾಗುತ್ತವೆ ಎಂದು ವಿಡಿಯೊದಲ್ಲೇ ಕಿಡಿಕಾರಿದ್ದಾರೆ.&lt;/p&gt;&lt;p data-block-key="bamcn"&gt;ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಇಂದಿನ ಯುವತಿಯರು ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಹಣವಷ್ಟೇ ಮುಖ್ಯ ಎಂದು ಕಿಡಿಕಾರಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>JioHome: ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್</title><link>https://vishwavani.news/commerce/jio-home-tv-pack-launched-1000-plus-live-tv-channels-for-just-rs-400-per-month-83727.html</link><guid>https://vishwavani.news/commerce/jio-home-tv-pack-launched-1000-plus-live-tv-channels-for-just-rs-400-per-month-83727.html</guid><pubDate>Tue, 14 Jul 2026 12:38:36 +0000</pubDate><description>&lt;![CDATA[Reliance Jio: ರಿಲಯನ್ಸ್ ಜಿಯೋ, ಇಂದು ಜಿಯೋ ಹೋಮ್ ಟಿವಿ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಇದು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಗ್ರಾಹಕರಿಗೆ ತಿಂಗಳಿಗೆ ಕೇವಲ 400 ರೂ.ಗಳಿಗೆ (ಎಲ್ಲವನ್ನೂ ಒಳಗೊಂಡಂತೆ) ನೀಡುತ್ತದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Reliance_Jio_UzPY6HB.original.jpg" class="attachment-large size-large wp-post-image" alt="JioHome: ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="76ip7"&gt;&lt;b&gt;ಬೆಂಗಳೂರು, ಜು.14:&lt;/b&gt; ರಿಲಯನ್ಸ್ ಜಿಯೋ (Reliance Jio), ಇಂದು ಜಿಯೋ ಹೋಮ್ ಟಿವಿ ಪ್ಯಾಕ್ (Jio Home TV Pack) ಅನ್ನು ಬಿಡುಗಡೆ ಮಾಡಿದೆ. ಇದು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಗ್ರಾಹಕರಿಗೆ ತಿಂಗಳಿಗೆ ಕೇವಲ 400 ರೂ. ಗಳಿಗೆ (ಎಲ್ಲವನ್ನೂ ಒಳಗೊಂಡಂತೆ) ನೀಡುತ್ತದೆ. ಇದು ಪ್ರೀಮಿಯಂ ಟೆಲಿವಿಷನ್ ಮನರಂಜನೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಆನಂದಿಸುವಂತೆ ಮಾಡುತ್ತದೆ.&lt;/p&gt;&lt;p data-block-key="2bnc"&gt;ಹೊಸ ಪ್ಯಾಕ್, ಗ್ರಾಹಕರ ಆದ್ಯತೆಯ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಕ್ರೀಡೆಗಳು, ಸುದ್ದಿ, ಮಕ್ಕಳು, ಸಂಗೀತ ಮತ್ತು ಪ್ರಾದೇಶಿಕ ವಿಷಯ ಸೇರಿದಂತೆ ಎಲ್ಲಾ ಪ್ರಮುಖ ಪ್ರಸಾರಕರು ಮತ್ತು ಪ್ರಕಾರಗಳಲ್ಲಿ ಲೈವ್ ಟಿವಿ ಚಾನಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ವಿಶೇಷ ಸ್ವಾಗತ ಕೊಡುಗೆಯಾಗಿ, ಜಿಯೋ ಹೋಮ್ ಟಿವಿ ಪ್ಯಾಕ್‌ಗೆ ಚಂದಾದಾರರಾಗಿರುವ ಗ್ರಾಹಕರು ಮೊದಲ ತಿಂಗಳಿಗೆ 12 ಪ್ರೀಮಿಯಂ ಒಟಿಟಿ ಚಂದಾದಾರಿಕೆಗಳ ಜತೆಗೆ 30 ಎಂಬಿಪಿಎಸ್ ಉಚಿತ ಅನಿಯಮಿತ ವೈ-ಫೈ ಪಡೆಯಲಿದ್ದಾರೆ.&lt;/p&gt;&lt;p data-block-key="7lpj0"&gt;ಈ ಪ್ಯಾಕ್ 6 ತಿಂಗಳ ಫಸ್ಟ್ ರೀಚಾರ್ಜ್ (ಎಫ್ಆರ್‌ಸಿ) ಮೂಲಕ ಲಭ್ಯವಿದೆ. ಇದರ ಬೆಲೆ ₹2,400 (ಜಿಎಸ್‌ಟಿ ಸೇರಿದಂತೆ), ಗ್ರಾಹಕರಿಗೆ ಸರಳ ಮತ್ತು ಕೈಗೆಟುಕುವ ಪಾವತಿ ಆಯ್ಕೆಯನ್ನು ನೀಡುತ್ತದೆ. ಅನುಕೂಲವನ್ನು ಹೆಚ್ಚಿಸುತ್ತಾ, ಜಿಯೋ ₹0 ಅಳವಡಿಕೆ ಶುಲ್ಕಗಳು ಮತ್ತು ₹0 ಭದ್ರತಾ ಠೇವಣಿಯೊಂದಿಗೆ ಮುಂಗಡ ವೆಚ್ಚವನ್ನು ತೆಗೆದುಹಾಕುತ್ತಿದೆ.&lt;/p&gt;&lt;p data-block-key="58val"&gt;ಜಿಯೋ ಹೋಮ್ ಟಿವಿ ಪ್ಯಾಕ್ ನೊಂದಿಗೆ, ರಿಲಯನ್ಸ್ ಜಿಯೋ ಭಾರತದಾದ್ಯಂತದ ಕುಟುಂಬಗಳಿಗೆ ವಿಶ್ವದರ್ಜೆಯ ಡಿಜಿಟಲ್ ಮನರಂಜನೆ ಮತ್ತು ಮೌಲ್ಯ-ಚಾಲಿತ ಕೊಡುಗೆಗಳನ್ನು ತಲುಪಿಸುವ ಬದ್ಧತೆಯನ್ನು ಬಲಪಡಿಸುತ್ತಿದೆ. ಹೊಸ ಪ್ಯಾಕ್, ಲೈವ್ ಟೆಲಿವಿಷನ್, ಹೈಸ್ಪೀಡ್ ಕನೆಕ್ಟಿವಿಟಿ ಮತ್ತು ಪ್ರೀಮಿಯಂ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಒಂದು ಸಮಗ್ರ ಪರಿಹಾರವಾಗಿ ಸಂಯೋಜಿಸುತ್ತದೆ. ಇದು ಗ್ರಾಹಕರಿಗೆ ಸಾಟಿಯಿಲ್ಲದ ಮನೆ ಮನರಂಜನಾ ಅನುಭವವನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ‌&lt;/p&gt;&lt;p data-block-key="1viie"&gt;&lt;a href="/commerce/bengaluru-news-international-jawa-yezdi-day-celebrated-in-bengaluru-83599.html"&gt;&lt;b&gt;ಬೆಂಗಳೂರಿನಲ್ಲಿ ಮೇಳೈಸಿದ 'ವಿಂಟೇಜ್' ವೈಭವ; ಹಳೆಯ ನೆನಪುಗಳನ್ನು ಮರುಕಳಿಸಿದ ಜಾವಾ-ಯೆಜ್ಡಿ ದಿನಾಚರಣೆ&lt;/b&gt;&lt;/a&gt;&lt;/p&gt;&lt;p data-block-key="dpeek"&gt;ಕಳೆದ ವಾರವಷ್ಟೇ ಕಂಪನಿಯು ಕೇವಲ 55 ರೂ.ಗೆ 1000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಸ್ ವೀಕ್ಷಿಸುವ ಮೊಬೈಲ್ ಪ್ಯಾಕ್ ಬಿಡುಗಡೆ ಮಾಡಿತ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Monsoon Fashion 2026: ಮಾನ್ಸೂನ್‌ಗೆ ಕಾಲಿಟ್ಟ ಕೇಬಲ್‌ ನಿಟ್‌ ಸ್ವೆಟರ್‌ಗಳು</title><link>https://vishwavani.news/fashion/monsoon-fashion-2026-cable-knit-sweaters-arrive-for-the-monsoon-season-83726.html</link><guid>https://vishwavani.news/fashion/monsoon-fashion-2026-cable-knit-sweaters-arrive-for-the-monsoon-season-83726.html</guid><pubDate>Tue, 14 Jul 2026 12:30:51 +0000</pubDate><description>&lt;![CDATA[ಮಾನ್ಸೂನ್‌ನ ಚಳಿ-ಗಾಳಿಗೆ ಧರಿಸಿದಾಗ ಆಕರ್ಷಕವಾಗಿ ಕಾಣಿಸುವಂತಹ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಲೈಟ್‌ ಕಲರ್‌ನವು ಟ್ರೆಂಡಿಯಾಗಿವೆ. ಇದ್ಯಾವ ಬಗೆಯ ಸ್ವೆಟರ್‌? ಸ್ಟೈಲಿಂಗ್‌ ಹೇಗೆ? ಡ್ರೆಸ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Monsoon_Fashion_2026_K7JDJR3.original.jpg" class="attachment-large size-large wp-post-image" alt="Monsoon Fashion 2026: ಮಾನ್ಸೂನ್‌ಗೆ ಕಾಲಿಟ್ಟ ಕೇಬಲ್‌ ನಿಟ್‌ ಸ್ವೆಟರ್‌ಗಳು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="s52u0"&gt;&lt;b&gt;-ಶೀಲಾ ಸಿ. ಶೆಟ್ಟಿ, ಬೆಂಗಳೂರು&lt;/b&gt;&lt;/p&gt;&lt;p data-block-key="6rea6"&gt;ತಿಳಿಯಾದ ವೈಬ್ರೆಂಟ್‌ ಬಣ್ಣದ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ನ (Monsoon Fashion 2026) ಚಳಿ-ಗಾಳಿಗೆ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವಂತಹ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ ವೈಬ್ರೆಂಟ್‌ ಲುಕ್‌ ನೀಡುವಂತಹ ಲೈಟ್‌ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.&lt;/p&gt;&lt;h3 data-block-key="drfv4"&gt;&lt;b&gt;ಟ್ರೆಂಡಿಯಾಗಿರುವ ಕೇಬಲ್‌ ನಿಟ್‌ ಸ್ವೆಟರ್ಸ್‌&lt;/b&gt;&lt;/h3&gt;&lt;p data-block-key="cr3ec"&gt;ಬಬ್ಬಲ್‌ ಗಮ್‌ ಪಿಂಕ್‌, ನಿಯಾನ್‌, ಯೆಲ್ಲೋ, ಕರೆಂಟ್‌ ಬ್ಲ್ಯೂ ಸೇರಿದಂತೆ ನಾನಾ ಕಲರ್‌ನ ಕೇಬಲ್‌ ನಿಟ್‌ ಸ್ವೆಟರ್‌ಗಳು ಈ ಸೀಸನ್‌ನಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಕ್ರಾಪ್‌ ಸ್ವೆಟರ್ಸ್‌ ಹಾಗೂ ಲಾಂಗ್‌ ಸ್ವೆಟರ್‌ಗಳು ಚಾಲ್ತಿಯಲ್ಲಿವೆ. ಟೀನೇಜ್‌ ಹುಡುಗಿಯರನ್ನು ಮಾತ್ರವಲ್ಲ, ಉದ್ಯೋಗಸ್ಥ ಮಹಿಳೆಯರನ್ನು ಸವಾರಿ ಮಾಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚಾ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Cable knit sweaters" class="img-fluid" height="720" src="https://cdn.vishwavani.news/media/images/Cable_knit_sweaters.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="92t1d"&gt;&lt;/p&gt;&lt;h3 data-block-key="cn3ui"&gt;&lt;b&gt;ಏನಿದು ಕೇಬಲ್‌ ನಿಟ್‌ ಸ್ವೆಟರ್ಸ್‌&lt;/b&gt;&lt;/h3&gt;&lt;p data-block-key="2caij"&gt;ಜಡೆಯಂತೆ ಹೆಣೆದ ಇಲ್ಲವೇ ಸುರಳಿಯಂತೆ ಸುತ್ತಿಕೊಂಡಂತಿರುವ ಅಥವಾ ಹಗ್ಗದ ಡಿಸೈನ್‌ನಂತೆ ಕಾಣಿಸುವ ಹಾಗೂ ಡಿಸೈನ್‌ ಹೊಂದಿರುವ ಉಲ್ಲನ್‌ ಸ್ವೆಟರ್‌ಗಳನ್ನು ಕೇಬಲ್‌ ನಿಟ್‌ ಸ್ವೆಟರ್‌ ಎನ್ನಲಾಗುತ್ತದೆ.&lt;/p&gt;&lt;p data-block-key="4s8qt"&gt;ವರ್ಟಿಕಲ್‌ ಡಿಸೈನ್‌ ಹೊಂದಿರುವ ಇವು ಆಯಾ ಸ್ವೆಟರ್‌ನ ವಿನ್ಯಾಸ ಹಾಗೂ ಸ್ಟಿಚ್ಚಿಂಗ್‌ ಆಧಾರದ ಮೇಲೆ ಆಕಾರ ಹೊಂದಿರುತ್ತವೆ ಎನ್ನುತ್ತಾರೆ ನಿಟ್‌ ಸ್ವೆಟರ್‌ ಡಿಸೈನರ್‌ ಜ್ಯಾನೆಟ್‌.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="knit sweaters" class="img-fluid" height="720" src="https://cdn.vishwavani.news/media/images/knit_sweaters.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="aipgh"&gt;&lt;/p&gt;&lt;h3 data-block-key="bv4f9"&gt;&lt;b&gt;ಡ್ರೆಸ್‌ಗಳೊಂದಿಗೆ ಮಿಕ್ಸ್‌ -ಮ್ಯಾಚ್‌&lt;/b&gt;&lt;/h3&gt;&lt;p data-block-key="96nf0"&gt;ಲೈಟ್‌ವೈಟ್‌ ಆಗಿರುವ ಕಾರಣ ಇವನ್ನು ಯಾವುದೇ ಡ್ರೆಸ್‌ಗಳೊಂದಿಗೂ ಮಿಕ್ಸ್‌ ಮ್ಯಾಚ್‌ ಮಾಡಬಹುದು. ಆದರೆ, ಸ್ಟೈಲಿಂಗ್‌ ಬಗ್ಗೆ ತಿಳಿದಿರಬೇಕು. ಉದಾಹರಣೆಗೆ., ಜೀನ್ಸ್‌ ಪ್ಯಾಂಟ್‌ ಮೇಲೆ ಸಿಂಪಲ್‌ ಸ್ಲಿವ್‌ಲೆಸ್‌ ಟಾಪ್‌ಗಳೊಂದಿಗೆ ಧರಿಸಬಹುದು. ಸ್ಕರ್ಟ್‌ಗಳೊಂದಿಗೂ ಮ್ಯಾಚ್‌ ಮಾಡಬಹುದು.&lt;/p&gt;&lt;p data-block-key="dtoj5"&gt;&lt;a href="/photo-gallery/monsoon-fashion-tips-2026-6-simple-ideas-for-jacket-lovers-in-monsoon-83610.html"&gt;&lt;b&gt;Monsoon Fashion Tips 2026: ಮಾನ್ಸೂನ್‌ನಲ್ಲಿ ಜಾಕೆಟ್ ಪ್ರಿಯರಿಗೆ 6 ಸಿಂಪಲ್ ಐಡಿಯಾ&lt;/b&gt;&lt;/a&gt;&lt;/p&gt;&lt;h3 data-block-key="fj63q"&gt;&lt;b&gt;ಕೇಬಲ್‌ ನಿಟ್‌ ಸ್ವೆಟರ್‌ ಆಯ್ಕೆ ಹೀಗಿರಲಿ&lt;/b&gt;&lt;/h3&gt;&lt;ul&gt;&lt;li data-block-key="d6fth"&gt;ಆದಷ್ಟೂ ಲೈಟ್‌ವೈಟಾಗಿರುವ ನಿಟ್‌ ಸ್ವೆಟರ್‌ ಆಯ್ಕೆ ಮಾಡಿ.&lt;/li&gt;&lt;li data-block-key="7cbr7"&gt;ಬ್ರಿಥಬಲ್‌ ಸ್ವೆಟರ್‌ ಆಯ್ಕೆ ಮಾಡುವುದು ಉತ್ತಮ.&lt;/li&gt;&lt;li data-block-key="fqa3g"&gt;ಟ್ರೆಂಡಿಯಾಗಿರುವ ಕಲರ್‌ಗಳ ಸ್ವೆಟರ್‌ ಸೆಲೆಕ್ಟ್‌ ಮಾಡಿ ಧರಿಸಿ.&lt;/li&gt;&lt;li data-block-key="7rn6v"&gt;ಸಿಂಪಲ್‌ ಲುಕ್‌ಗಾಗಿ ಜೀನ್ಸ್‌ ಪ್ಯಾಂಟ್‌ ಜತೆ ಧರಿಸಬಹುದು.&lt;/li&gt;&lt;/ul&gt;&lt;p data-block-key="ae7hd"&gt;&lt;b&gt;(ಲೇಖಕಿ: ಫ್ಯಾಷನ್‌ ಪತ್ರಕರ್ತೆ)&lt;/b&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತದಲ್ಲಿ ಅಡಗಿದ್ದ ಅಮೆರಿಕ ಪ್ರಜೆ ನೇಪಾಳಕ್ಕೆ ಪರಾರಿಯಾಗುವಾಗ ಅರೆಸ್ಟ್‌; ಯೋಧ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಈತನ ಉದ್ದೇಶ ಏನಾಗಿತ್ತು?</title><link>https://vishwavani.news/national/us-ex-navy-man-arrested-india-nepal-border-83706.html</link><guid>https://vishwavani.news/national/us-ex-navy-man-arrested-india-nepal-border-83706.html</guid><pubDate>Tue, 14 Jul 2026 12:23:41 +0000</pubDate><description>&lt;![CDATA[American Detained: ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಯೋಧ ಎಂದು ಹೇಳಿಕೊಂಡಿರುವ ಜೋರ್ಡನ್ ಬ್ರೌನ್‌ನನ್ನು ಉತ್ತರ ಪ್ರದೇಶದ ಸೋನೌಲಿ ಭಾರತ–ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಮಾನ್ಯ ದಾಖಲೆಗಳಿಲ್ಲದೆ ನೇಪಾಳ ಪ್ರವೇಶಿಸಲು ಯತ್ನಿಸಿದ ವೇಳೆ ಗಡಿ ಭದ್ರತಾ ಪಡೆ ತಡೆದಿದೆ. ಆತನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/American_detained.original.png" class="attachment-large size-large wp-post-image" alt="ಭಾರತದಲ್ಲಿ ಅಡಗಿದ್ದ ಅಮೆರಿಕ ಪ್ರಜೆ ನೇಪಾಳಕ್ಕೆ ಪರಾರಿಯಾಗುವಾಗ ಅರೆಸ್ಟ್‌; ಯೋಧ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಈತನ ಉದ್ದೇಶ ಏನಾಗಿತ್ತು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l2jgo"&gt;&lt;b&gt;ಲಖನೌ, ಜು. 14:&lt;/b&gt; ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಯೋಧ ಎಂದು ಹೇಳಿಕೊಂಡಿರುವ ಜೋರ್ಡನ್ ಬ್ರೌನ್ (Jordan Brown) ಎಂಬಾತನನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಭಾರತ–ನೇಪಾಳ ಗಡಿಯ ಸೋನೌಲಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (Sashastra Seema Bal - SSB) ಸಿಬ್ಬಂದಿ ಬಂಧಿಸಿದ್ದಾರೆ. ಯಾವುದೇ ಮಾನ್ಯ ಪ್ರಯಾಣದ ದಾಖಲೆಗಳಿಲ್ಲದೆ ನೇಪಾಳ ಪ್ರವೇಶಿಸಲು ಯತ್ನಿಸಿದ್ದ ಆರೋಪದ ಮೇಲೆ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.&lt;/p&gt;&lt;p data-block-key="317ml"&gt;ಗಡಿ ಭದ್ರತಾ ಪಡೆ ಸಿಬ್ಬಂದಿ ನಿಯಮಿತ ಗಸ್ತು ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಬ್ರೌನ್‌ನನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲು ಮುಂದಾದರು. ಈ ವೇಳೆ ಆತ ಸ್ಥಳದಿಂದ ಓಡಿಹೋಗಲು ಯತ್ನಿಸಿದರೂ ಸಿಬ್ಬಂದಿ ಬೆನ್ನಟ್ಟಿ ಬಂಧಿಸಿದರು. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.&lt;/p&gt;&lt;h3 data-block-key="9jhri"&gt;&lt;b&gt;ಅಮೆರಿಕ ಪ್ರಜೆಯ ಬಂಧನ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;*MAHARAJGANJ BREAKING NEWS*&lt;br&gt;&lt;br&gt; *US NATIONAL, REPORTEDLY A US NAVY AND SPECIAL FORCES SOLDIER , WAS ARRESTED NEAR THE INDO-NEPAL BORDER* &lt;br&gt;&lt;br&gt;US CITIZEN ARRESTED AT THE INDIA-NEPAL BORDER; CASE REGISTERED FOR ILLEGAL ENTRY INTO INDIA.&lt;br&gt;&lt;br&gt;INTERROGATION REVEALED THAT HIS PASSPORT WAS LOST… &lt;a href="https://t.co/1owJfX5Dlp"&gt;pic.twitter.com/1owJfX5Dlp&lt;/a&gt;&lt;/p&gt;&amp;mdash; MajorSammerToor (@MajorSammerToor) &lt;a href="https://x.com/MajorSammerToor/status/2076608200074293748?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2g5ub"&gt;ತಪಾಸಣೆ ವೇಳೆ ಆತನ ಬಳಿ 31,460 ರುಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಆದರೆ ಪಾಸ್‌ಪೋರ್ಟ್, ವೀಸಾ ಸೇರಿ ಭಾರತದಲ್ಲಿ ವಾಸಿಸಲು ಅಥವಾ ನೇಪಾಳಕ್ಕೆ ತೆರಳಲು ಅಗತ್ಯವಿರುವ ಯಾವುದೇ ಮಾನ್ಯ ದಾಖಲೆಗಳು ದೊರೆತಿಲ್ಲ.&lt;/p&gt;&lt;p data-block-key="53p3b"&gt;ವಿಚಾರಣೆ ವೇಳೆ ಬ್ರೌನ್ ತಾನು ಅಮೆರಿಕದ ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದು, ಸುಮಾರು ಆರು ವರ್ಷಗಳ ಕಾಲ ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯಲ್ಲಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ವಿಶ್ವದ ಸುಮಾರು 70 ದೇಶಗಳಿಗೆ ಭೇಟಿ ನೀಡಿರುವುದಾಗಿಯೂ ಹೇಳಿದ್ದಾನೆ. ಆದರೆ ಆತ ನೀಡಿರುವ ಗುರುತು, ಭಾರತ ಪ್ರವೇಶದ ಮಾರ್ಗ ಹಾಗೂ ಪ್ರವಾಸದ ಉದ್ದೇಶದ ಬಗ್ಗೆ ಹಲವು ಪರಸ್ಪರ ವಿರುದ್ಧ ಹೇಳಿಕೆಗಳು ದಾಖಲಾಗಿವೆ.&lt;/p&gt;&lt;p data-block-key="crntn"&gt;&lt;a href="/crime/i-have-no-regrets-i-will-kill-again-convict-in-double-murder-case-makes-shocking-statement-in-court-83697.html"&gt;&lt;b&gt;3 ಕೊಲೆ ಮಾಡಿದ ಅಪರಾಧಿಯಿಂದ ಕೋರ್ಟ್ ಮುಂದೆಯೇ ಶಾಕಿಂಗ್ ಹೇಳಿಕೆ&lt;/b&gt;&lt;/a&gt;&lt;/p&gt;&lt;p data-block-key="57rg2"&gt;ಪೊಲೀಸರ ಮಾಹಿತಿ ಪ್ರಕಾರ, ಬ್ರೌನ್ ಥೈಲ್ಯಾಂಡ್‌ಗೆ ತೆರಳಿದ್ದ ವೇಳೆ ತನ್ನ ಪಾಸ್‌ಪೋರ್ಟ್ ಕಳೆದುಕೊಂಡಿದ್ದು, ಅಲ್ಲಿಂದ ಶ್ರೀಲಂಕಾ ಮೂಲಕ 2025ರ ನವೆಂಬರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದಾನಂತೆ. ನಂತರ ಗೋವಾದಲ್ಲಿ ವಾಸವಿದ್ದು, ಅಲ್ಲಿಂದ ಬೆಂಗಳೂರು, ಲಖನೌ, ಗೋರಖ್‌ಪುರ ಮಾರ್ಗವಾಗಿ ಸೋನೌಲಿಗೆ ತಲುಪಿದ್ದಾನೆ ಎಂದು ತಿಳಿಸಿದ್ದಾನೆ.&lt;/p&gt;&lt;p data-block-key="dgpbu"&gt;ಇನ್ನೊಂದು ಹೇಳಿಕೆಯಲ್ಲಿ, ಗೋವಾದಲ್ಲಿ ಪರಿಚಯವಾದ ನಾಜ್ ಎಂಬ ನೇಪಾಳದ ವ್ಯಕ್ತಿಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಹೇಳಿದ್ದಾನೆ. ತನ್ನ ಪಾಸ್‌ಪೋರ್ಟ್ ಬೆಂಗಳೂರಿನಲ್ಲಿರುವ ಪರಿಚಯಸ್ಥನ ಬಳಿ ಇದೆ ಎಂದು ಹೇಳಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.&lt;/p&gt;&lt;p data-block-key="84cv1"&gt;ಇದಲ್ಲದೆ, ಉತ್ತರಾಖಂಡ ಮೂಲದ ಮಹಿಳೆಯನ್ನು ವಿವಾಹವಾಗಿರುವುದಾಗಿ ಹಾಗೂ ಆಕೆ ಯೋಗ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಎಲ್ಲ ಮಾಹಿತಿಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.&lt;/p&gt;&lt;p data-block-key="7o8tr"&gt;ಸದ್ಯ ಜೋರ್ಡನ್ ಬ್ರೌನ್ ವಿರುದ್ಧ ವಲಸೆ ಮತ್ತು ವಿದೇಶಿಯರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ನಿಜವಾದ ಗುರುತು, ಭಾರತ ಪ್ರವೇಶದ ಮಾರ್ಗ ಹಾಗೂ ಉದ್ದೇಶದ ಕುರಿತು ವಿವಿಧ ಭದ್ರತಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ. ಈ ಕುರಿತು ಅಮೆರಿಕದ ರಾಯಭಾರ ಕಚೇರಿಗೂ ಮಾಹಿತಿ ನೀಡಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 4 ವರ್ಷದ ಮಗು; ಆರೋಗ್ಯ ಸ್ಥಿತಿ ಗಂಭೀರ! Video</title><link>https://vishwavani.news/karnataka/chikkaballapur/4-year-old-child-fell-from-the-first-floor-while-playing-in-chikkaballapur-83728.html</link><guid>https://vishwavani.news/karnataka/chikkaballapur/4-year-old-child-fell-from-the-first-floor-while-playing-in-chikkaballapur-83728.html</guid><pubDate>Tue, 14 Jul 2026 12:06:37 +0000</pubDate><description>&lt;![CDATA[Chikkaballapur News: ಚಿಕ್ಕಬಳ್ಳಾಪುರದ ಬಟ್ಟೆ ಅಂಗಡಿಯಲ್ಲಿ ದುರ್ಘಟನೆ ನಡೆದಿದೆ. ಮೊದಲ ಮಹಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಆಯತಪ್ಪಿ ಕೆಳಗೆ ಬಿದ್ದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಬಟ್ಟೆ ಖರೀದಿಸಲು ಪೋಷಕರೊಂದಿಗೆ ಅಂಗಡಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/_child_fell_from_the_first_floor.original.jpg" class="attachment-large size-large wp-post-image" alt="ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 4 ವರ್ಷದ ಮಗು; ಆರೋಗ್ಯ ಸ್ಥಿತಿ ಗಂಭೀರ! Video" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4lh6m"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನ ಬಟ್ಟೆ ಅಂಗಡಿಯಲ್ಲಿ ದುರ್ಘಟನೆಯೊಂದು ನಡೆದಿದೆ. ಮೊದಲ ಮಹಡಿಯಲ್ಲಿ ಆಟವಾಡುತ್ತಾ ಗ್ರಿಲ್ ಹತ್ತಿದ್ದ 4 ವರ್ಷದ ಮಗು (child), ಆಯತಪ್ಪಿ ಕೆಳಗೆ ಬಿದ್ದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.&lt;/p&gt;&lt;p data-block-key="3eefl"&gt;ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ-ಮಧು ದಂಪತಿಯ ಪುತ್ರಿ ಗಗನ ಸಿಂಧು ಗಾಯಾಳು ಬಾಲಕಿ. ಬಟ್ಟೆ ಖರೀದಿಸಲು ಪೋಷಕರೊಂದಿಗೆ ಅಂಗಡಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.&lt;/p&gt;&lt;p data-block-key="flrn5"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe src="https://www.facebook.com/plugins/video.php?height=314&amp;href=https%3A%2F%2Fwww.facebook.com%2Freel%2F1417453133553494%2F&amp;show_text=false&amp;width=560&amp;t=0" width="560" height="314" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"&gt;&lt;/iframe&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="aucnp"&gt;&lt;/p&gt;&lt;p data-block-key="3hr9t"&gt;ಪೋಷಕರು ಬಟ್ಟೆ ಖರೀದಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಮಗು ಅಂಗಡಿಯ ಗ್ರಿಲ್ ಬಳಿ ಆಟವಾಡುತ್ತಿತ್ತು. ಈ ವೇಳೆ ಒಂದೆರಡು ಬಾರಿ ತಾಯಿ ಮಗುವನ್ನು ಒಳಗೆ ಕರೆದುಕೊಂಡು ಹೋಗಿದ್ದರು. ಆದರೂ ಮತ್ತೆ ಗ್ರಿಲ್ ಬಳಿ ಬಂದಿದ್ದ ಬಾಲಕಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;h3 data-block-key="04yo1"&gt;&lt;b&gt;ನ್ಯಾಯಾಲಯದೊಳಗೆ ಮಾಟಮಂತ್ರ ಮಾಡಿದ್ದ ಮಹಿಳೆಯ ಬಂಧನ&lt;/b&gt;&lt;/h3&gt;&lt;p data-block-key="dvfg8"&gt;&lt;/p&gt;&lt;img alt="Black Magic Ritual Inside Courtroom" class="richtext-image full-width" height="450" src="https://cdn.vishwavani.news/media/images/Black_Magic_Ritual_Inside_Courtroom.width-800.jpg" width="800"&gt;&lt;p data-block-key="f1t5f"&gt;&lt;/p&gt;&lt;p data-block-key="ddk7n"&gt;ಚಿಕ್ಕಬಳ್ಳಾಪುರ, ಜು.14: 65 ವರ್ಷದ ಮಹಿಳೆಯೊಬ್ಬರು ಕೋರ್ಟ್ ಒಳಗೆ ಮಾಟಮಂತ್ರ (Blackmagic) ಆಚರಣೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ. ನಾಗರಿಕ (Civil) ಪ್ರಕರಣದ ತೀರ್ಪಿನ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಹಿಳೆ ಈ ದುಷ್ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಆರೋಪಿ ಮಹಿಳೆಯನ್ನು ಚಿಕ್ಕಬಳ್ಳಾಪುರ ಪಟ್ಟಣದ ವಲಸಣ್ಣ ಬೀದಿ ನಿವಾಸಿ ಮಂಜುಳಾ ಎಂದು ಗುರುತಿಸಲಾಗಿದೆ.&lt;/p&gt;&lt;p data-block-key="78g0f"&gt;ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿದ ಆರೋಪಿಯು 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (JMFC) ಅವರ ಪೀಠದ ಮೇಲೆ ಪೂಜಿಸಿದ ಬಿಳಿ ಸಾಸಿವೆ ಬೀಜಗಳನ್ನು ಎರಚಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p data-block-key="eke2t"&gt;ನ್ಯಾಯಾಲಯದ ಒಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಆಕೆಯ ದುಷ್ಕೃತ್ಯ ಸೆರೆಯಾದ ಬಳಿಕ ಈ ಅಸಾಮಾನ್ಯ ಘಟನೆ ಬೆಳಕಿಗೆ ಬಂದಿತು. ನಂತರ ನ್ಯಾಯಾಲಯದ ಅಧಿಕಾರಿಗಳು ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು.&lt;/p&gt;&lt;p data-block-key="f44sb"&gt;ಮುಖ್ಯ ಆಡಳಿತಾಧಿಕಾರಿ ನೇತ್ರಾ ಅವರು ನೀಡಿದ ದೂರಿನ ಆಧಾರದ ಮೇಲೆ, ಚಿಕ್ಕಬಳ್ಳಾಪುರ ಪಟ್ಟಣ ಪೊಲೀಸರು ಮಂಜುಳಾ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮಾಟಮಂತ್ರಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆ, 2017ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;p data-block-key="asju2"&gt;&lt;a href="/karnataka/kalaburagi/three-prisoners-escape-from-kalaburagi-jail-security-lapse-in-the-home-ministers-home-district-83685.html"&gt;Kalaburagi Breaking: ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ಪರಾರಿ: ಗೃಹ ಸಚಿವರ ತವರಿನಲ್ಲೇ ಭದ್ರತಾ ವೈಫಲ್ಯ?&lt;/a&gt;&lt;/p&gt;&lt;p data-block-key="8et5p"&gt;ಬಂಧನಕ್ಕೆ ಎರಡು ದಿನಗಳ ಮೊದಲು ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಈ ಧಾರ್ಮಿಕ ಆಚರಣೆಯನ್ನು ನಡೆಸಿದ್ದು, ಅದು ತಾನು ಭಾಗಿಯಾಗಿದ್ದಾಳೆ ಎನ್ನಲಾದ ಸಿವಿಲ್ ವಿವಾದದಲ್ಲಿ ನ್ಯಾಯಾಂಗ ವಿಚಾರಣೆಯನ್ನು ತಿರುಚಬಹುದು ಎಂಬ ನಂಬಿಕೆಯಿಂದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಬಂಧನದ ನಂತರ ಮಂಜುಳಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪ್ರಧಾನಿ ಅಂಗಳಕ್ಕೆ ತಲುಪಿದ ಭಾವಿ ಪತ್ನಿಯಿಂದಲೇ ಕೊಲೆಯಾದ ಕೇತನ್‌ ಅಗರ್ವಾಲ್‌ ಪ್ರಕರಣ; ನ್ಯಾಯಕ್ಕಾಗಿ ಮೋದಿಗೆ ಭಾವನಾತ್ಮಕ ಪತ್ರ ಬರೆದ ತಾಯಿ</title><link>https://vishwavani.news/national/dont-let-ketan-agarwal-become-just-another-case-file-mothers-appeal-to-pm-modi-83714.html</link><guid>https://vishwavani.news/national/dont-let-ketan-agarwal-become-just-another-case-file-mothers-appeal-to-pm-modi-83714.html</guid><pubDate>Tue, 14 Jul 2026 12:05:15 +0000</pubDate><description>&lt;![CDATA[Ketan Agarwal Case: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ಪತ್ರ ಬರೆದ ಕೇತನ್ ಅಗರ್ವಾಲ್ ಅವರ ತಾಯಿ ರಾಖಿ ಅಗರ್ವಾಲ್ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ತಮ್ಮ ಮಗನನ್ನು ಕ್ರೂರವಾಗಿ ಹತ್ಯೆಗೈದಿರುವ ಬಗ್ಗೆ ತಿಳಿಸಿದ ರಾಖಿ ಅಗರ್ವಾಲ್, ಕೇತನ್ ಸಾವಿನೊಂದಿಗೆ ಪ್ರಪಂಚವನ್ನೇ ಕಳೆದುಕೊಂಡಿದ್ದಾಗಿ ನೀವು ತೋಡಿಕೊಂಡಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ketan_Agarwal_Murder_Case_2.original.jpg" class="attachment-large size-large wp-post-image" alt="ಪ್ರಧಾನಿ ಅಂಗಳಕ್ಕೆ ತಲುಪಿದ ಭಾವಿ ಪತ್ನಿಯಿಂದಲೇ ಕೊಲೆಯಾದ ಕೇತನ್‌ ಅಗರ್ವಾಲ್‌ ಪ್ರಕರಣ; ನ್ಯಾಯಕ್ಕಾಗಿ ಮೋದಿಗೆ ಭಾವನಾತ್ಮಕ ಪತ್ರ ಬರೆದ ತಾಯಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9he88"&gt;&lt;b&gt;ಮುಂಬೈ, ಜು. 14:&lt;/b&gt; ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಣೆ ಉದ್ಯಮಿ ಕೇತನ್ ಅಗರ್ವಾಲ್ &lt;a href="https://vishwavani.news/national/grandfather-dies-17-days-after-ketan-agarwals-murder-in-pune-82849.html"&gt;(&lt;b&gt;Ketan Agarwal Murder Case)&lt;/b&gt;&lt;/a&gt;&lt;b&gt; &lt;/b&gt;ಕೊಲೆ ಪ್ರಕರಣ ಇದೀಗ ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೆ ತಲುಪಿದೆ.&lt;b&gt;  &lt;/b&gt;ಕೇತನ್‌&lt;b&gt; &lt;/b&gt;ಅವರ ತಾಯಿ ರಾಖಿ ಅಗರ್ವಾಲ್ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ (PM Narendra Modi) ಭಾವನಾತ್ಮಕ ಪತ್ರ ಬರೆದಿದ್ದು, ಮಗನ ಪ್ರಕರಣವು ಮತ್ತೊಂದು ಪ್ರಕರಣದ ಕಡತವಾಗಿ ಉಳಿಸದಂತೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.&lt;/p&gt;&lt;p data-block-key="fknsf"&gt;ಜುಲೈ 13ರಂದು ಪ್ರಧಾನಿ ಮೋದಿ ಅವರಿಗೆ ಇಮೇಲ್ ಮಾಡಿದ ಅವರು, ಒಬ್ಬ ತಾಯಿಯಾಗಿ ತಮ್ಮ ಮಗನ ಬಗ್ಗೆ ಕಂಡ ಕನಸುಗಳನ್ನು ತೆರೆದಿಟ್ಟಿದ್ದಾರೆ. ಮಗುವನ್ನು ದಹನ ಮಾಡುವ ನೋವನ್ನು ರಾಖಿ ಅಗರ್ವಾಲ್ ವಿವರಿಸಿದ್ದಾರೆ.&lt;/p&gt;&lt;p data-block-key="3b5cd"&gt;“ಪ್ರತಿಯೊಬ್ಬ ತಾಯಿಯಂತೆ, ಕೇತನ್ ನಮ್ಮೊಂದಿಗೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳುವುದನ್ನು, ಮದುವೆಯಾಗುವುದನ್ನು ಮತ್ತು ಬೆಳೆಯುವುದನ್ನು ನೋಡಬೇಕೆಂದು ನಾನು ಕನಸು ಕಂಡಿದ್ದೆ. ಬದಲಾಗಿ, ನನ್ನ ಮಗುವಿನ ಅಂತ್ಯಕ್ರಿಯೆಯನ್ನು ನಾನು ಮಾಡಬೇಕಾಯಿತು. ಒಬ್ಬ ತಾಯಿಗೆ, ಇದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ” ಎಂದು ದುಃಖಿತರಾಗಿ ಬರೆದಿದ್ದಾರೆ.&lt;/p&gt;&lt;p data-block-key="bfaco"&gt;&lt;a href="https://vishwavani.news/crime/siya-and-chetan-were-already-married-before-plotting-ketan-agarwals-murder-secret-marriage-revealed-through-whatsapp-chats-83026.html"&gt;&lt;b&gt;ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸುವ ಮೊದಲೇ ಮದುವೆಯಾಗಿದ್ದರಾ ಸಿಯಾ-ಚೇತನ್?&lt;/b&gt;&lt;/a&gt;&lt;/p&gt;&lt;p data-block-key="a9i9l"&gt;ತಮ್ಮ ಮಗನ ಕ್ರೂರ ಹತ್ಯೆಯ ಬಗ್ಗೆ ತಿಳಿಸಿದ ರಾಖಿ ಅಗರ್ವಾಲ್, ಕೇತನ್ ಸಾವಿನೊಂದಿಗೆ  ಪ್ರಪಂಚವನ್ನೇ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. “ನಮ್ಮ ಮನೆಯ ಪ್ರತಿಯೊಂದು ಮೂಲೆಯೂ ನನಗೆ ಅವನನ್ನು ನೆನಪಿಸುತ್ತದೆ. ಅವನ ಕೋಣೆ, ಅವನ ಬಟ್ಟೆಗಳು, ಅವನ ಫೋಟೊಗಳು ಮತ್ತು ಅವನ ನಗುವನ್ನು ಬದಲಿಸಿದ ಮೌನವು ಅವನು ಎಂದಿಗೂ ಹಿಂತಿರುಗುವುದಿಲ್ಲ ಎನ್ನುವುದನ್ನು ಪ್ರತಿದಿನ ನೆನಪಿಸುತ್ತದೆ” ಎಂದು ಭಾವುಕರಾಗಿದ್ದಾರೆ.&lt;/p&gt;&lt;h3 data-block-key="2826k"&gt;&lt;b&gt;ಆಘಾತದ ಮೇಲೆ ಆಘಾತ&lt;/b&gt;&lt;/h3&gt;&lt;p data-block-key="1mufp"&gt;ಅಗರ್ವಾಲ್ ಕುಟುಂಬಕ್ಕೆ ತಿಂಗಳ ಅಂತರದಲ್ಲಿ ಎರಡೆರಡು ಆಘಾತ ಎದುರಾಗಿದೆ. ಮೊಮ್ಮಗನ ಮರಣದ ನಂತರ ಅಸ್ವಸ್ಥರಾಗಿದ್ದ ಕೇತನ್ ಅವರ ತಾತ ದೇವಿಚಂದ್ ಅಗರ್ವಾಲ್ ಮೊಮ್ಮಗನ ಹತ್ಯೆಯ 20 ದಿನಗಳ ನಂತರ ಹೃದಯಾಘಾತದಿಂದ ನಿಧನರಾದರು. ಅವರು ಕೇತನ್‌ನನ್ನು ತುಂಬಾ ಹಚ್ಚಿಕೊಂಡಿದ್ದರು. ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಅವರಿಗೆ ಸಹಿಸಲು ಸಾದ್ಯವಾಗಲಿಲ್ಲ ಎಂದು ರಾಖಿ ತಿಳಿಸಿದ್ದಾರೆ. &lt;/p&gt;&lt;p data-block-key="2p7bn"&gt;ತಾನೊಬ್ಬ ಕೇವಲ ಒಬ್ಬ ತಾಯಿ, ನ್ಯಾಯವನ್ನು ಕೇಳುತ್ತಿರುವುದಾಗಿ ಹೇಳಿದ್ದಾರೆ. ಸಹಾನುಭೂತಿ ಅಥವಾ ಯಾವುದೇ ವಿಶೇಷ ಉಪಕಾರವನ್ನು ಬಯಸುತ್ತಿಲ್ಲ ಎಂದೂ ಉಲ್ಲೇಖಿಸಿದ್ದಾರೆ. ತಮ್ಮ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆದಿದ್ದಾರೆ. “ದಯವಿಟ್ಟು ಕೇತನ್ ಕೇವಲ ಮತ್ತೊಂದು ಪ್ರಕರಣವಾಗಲು ಬಿಡಬೇಡಿ. ಅವನು ಯಾರೊಬ್ಬರ ಮಗ, ಯಾರೊಬ್ಬರ ಮೊಮ್ಮಗ, ಯಾರೊಬ್ಬರ ಸಹೋದರ, ಆದರೆ ಅವನು ನನ್ನ ಪ್ರಪಂಚ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.&lt;/p&gt;&lt;p data-block-key="6il9c"&gt;ಕಳೆದ ವಾರ ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ತ್ವರಿತ ತನಿಖೆ ಮತ್ತು ಶೀಘ್ರ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಆಗ್ರಹಿಸಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್‌ ಬುಮ್ರಾ!</title><link>https://vishwavani.news/sports/cricket/jasprit-bumrah-become-1st-indian-player-to-pick-150-wickets-in-odis-200-in-tests-and-100-in-t20is-83725.html</link><guid>https://vishwavani.news/sports/cricket/jasprit-bumrah-become-1st-indian-player-to-pick-150-wickets-in-odis-200-in-tests-and-100-in-t20is-83725.html</guid><pubDate>Tue, 14 Jul 2026 11:49:53 +0000</pubDate><description>&lt;![CDATA[ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲನೇ ಏಕದಿನ ಪಂದ್ಯದಲ್ಲಿ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ನೂತನ ದಾಖಲೆಯನ್ನು ಬರೆದಿದ್ದಾರೆ. ಅವರು ಒಡಿಐನಲ್ಲಿ 150 ವಿಕೆಟ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಕಬಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Jasprit_Bumrah_sACB0QP.original.jpg" class="attachment-large size-large wp-post-image" alt="IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್‌ ಬುಮ್ರಾ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="95f9n"&gt;&lt;b&gt;ಬರ್ಮಿಂಗ್‌ಹ್ಯಾಮ್‌:&lt;/b&gt; ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಮಂಗಳವಾರ ಇಲ್ಲಿ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ (IND vs ENG) ಹ್ಯಾರಿ ಬ್ರೂಕ್‌ ಅವರನ್ನು ಔಟ್‌ ಮಾಡುವ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳು, 200 ಟೆಸ್ಟ್‌ ವಿಕೆಟ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.&lt;/p&gt;&lt;p data-block-key="5ud75"&gt;ಹ್ಯಾರಿ ಬ್ರೂಕ್‌ ಅವರ ಈ ವಿಕೆಟ್ ಹಲವು ಕಾರಣಗಳಿಂದ ವಿಶೇಷ ಮಹತ್ವ ಪಡೆದಿದೆ. ಇದು ಇಂಗ್ಲೆಂಡ್ ನೆಲದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ 31ನೇ ವಿಕೆಟ್ ಆಗಿದ್ದು, ಇಂಗ್ಲೆಂಡ್‌ನಲ್ಲಿ 30ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಐತಿಹಾಸಿಕ ಸಾಧನೆಗೆ ಅವರು ಪಾತ್ರರಾಗಿದ್ದಾರೆ. ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ಈ ಮೈಲಿಗಲ್ಲು ತಲುಪಿದ್ದು, ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.&lt;/p&gt;&lt;p data-block-key="2f2hh"&gt;&lt;a href="/sports/cricket/ind-vs-eng-jos-buttler-becomes-second-england-player-with-200-odi-caps-83720.html"&gt;&lt;b&gt;IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!&lt;/b&gt;&lt;/a&gt;&lt;/p&gt;&lt;h3 data-block-key="56qpf"&gt;&lt;b&gt;ವೇಗವಾಗಿ 150 ವಿಕೆಟ್‌ ಕಿತ್ತ ಎರಡನೇ ವೇಗಿ ಬುಮ್ರಾ&lt;/b&gt;&lt;/h3&gt;&lt;p data-block-key="3qgtv"&gt;ಜಸ್‌ಪ್ರೀತ್ ಬುಮ್ರಾ ಮತ್ತೊಂದು ಮಹತ್ವದ ಸಾಧನೆಗೂ ಪಾತ್ರರಾಗಿದ್ದಾರೆ. ಕೇವಲ 90 ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ಗಳ ಮೈಲಿಗಲ್ಲು ತಲುಪುವ ಮೂಲಕ, ಈ ಸಾಧನೆ ಮಾಡಿದ ಭಾರತದ ಎರಡನೇ ಅತಿ ವೇಗದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್‌ ಶಮಿ ಅವರು 80 ಪಂದ್ಯಗಳಿಂದ ಈ ದಾಖಲೆ ಬರೆದಿದ್ದರು.&lt;/p&gt;&lt;p data-block-key="esd88"&gt;ಬುಮ್ರಾ ಈ ಪಂದ್ಯಕ್ಕೆ 121 ಟಿ20 ಅಂತಾರಾಷ್ಟ್ರೀಯ ವಿಕೆಟ್‌ಗಳು ಹಾಗೂ 234 ಟೆಸ್ಟ್ ವಿಕೆಟ್‌ಗಳೊಂದಿಗೆ ಕಣಕ್ಕಿಳಿದಿದ್ದರು. ಮೊದಲ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಆತಿಥೇಯ ತಂಡದ ನಾಯಕ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಮಹತ್ವದ ಮೈಲಿಗಲ್ಲು ತಲುಪಿದರು.&lt;/p&gt;&lt;p data-block-key="asf7v"&gt;&lt;a href="/sports/cricket/virat-kohli-gautam-gambhir-avoid-interaction-during-nets-ahead-of-first-odi-83717.html"&gt;&lt;b&gt;IND vs ENG: ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ನಡುವೆ ಮುನಿಸು? ವಿಡಿಯೊ ವೈರಲ್‌&lt;/b&gt;&lt;/a&gt;&lt;/p&gt;&lt;p data-block-key="3phl6"&gt;ವಿಶ್ವ ಕ್ರಿಕೆಟ್‌ನಲ್ಲಿ ಈ ಮೂರು ಮಾದರಿಗಳಲ್ಲೂ (ಟಿ20ಐ, ಏಕದಿನ ಹಾಗೂ ಟೆಸ್ಟ್) ಮಹತ್ವದ ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಇನ್ನಿಬ್ಬರು ಆಟಗಾರರು ಮಾತ್ರ ಇದ್ದಾರೆ. ನ್ಯೂಜಿಲೆಂಡ್‌ನ ಟಿಮ್ ಸೌಥಿ (ಟಿ20ಐನಲ್ಲಿ 164, ಏಕದಿನದಲ್ಲಿ 221 ಹಾಗೂ ಟೆಸ್ಟ್‌ನಲ್ಲಿ 391 ವಿಕೆಟ್‌ಗಳು) ಮತ್ತು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ (ಟಿ20ಐನಲ್ಲಿ 149, ಏಕದಿನಕ್ರಿಕೆಟ್‌ನಲ್ಲಿ 317 ಹಾಗೂ ಟೆಸ್ಟ್‌ನಲ್ಲಿ 246 ವಿಕೆಟ್‌ಗಳು) ಈ ಸಾಧನೆ ಮಾಡಿದವರಾಗಿದ್ದಾರೆ.&lt;/p&gt;&lt;p data-block-key="crlvb"&gt;ಅಹಮದಾಬಾದ್‌ನಲ್ಲಿ ನಡೆದದ್ದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಬಳಿಕ ಬುಮ್ರಾ ಯಾವುದೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈ ಮಾದರಿಯಲ್ಲಿ ಭಾರತ ತಂಡಕ್ಕೆ ಅವರ ಅನುಪಸ್ಥಿತಿ ದೊಡ್ಡ ಕೊರತೆಯಾಗಿತ್ತು. ಆದರೆ ಆಟಗಾರರ ಕೆಲಸದ ಒತ್ತಡ ನಿರ್ವಹಣೆಯ ಭಾಗವಾಗಿ ಅವರನ್ನು ಏಕದಿನ ಕ್ರಿಕೆಟ್‌ನಿಂದ ದೂರ ಇರಿಸುವ ಅನಿವಾರ್ಯತೆ ಎದುರಾಗಿತ್ತು.&lt;/p&gt;&lt;p data-block-key="34i2h"&gt;&lt;a href="/sports/cricket/ʻrcb-coach-andy-flower-will-not-leave-ipl-to-join-england-test-teamʼ-says-dinesh-karthik-83710.html"&gt;&lt;b&gt;ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!&lt;/b&gt;&lt;/a&gt;&lt;/p&gt;&lt;p data-block-key="i7m5"&gt;ಇದೀಗ ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಗೆ ಕೇವಲ 15 ತಿಂಗಳುಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಭಾರತ ತಂಡ ಬುಮ್ರಾ ಅವರನ್ನು ಮತ್ತೆ ಏಕದಿನ ಕ್ರಿಕೆಟ್‌ಗೆ ಕರೆತರುತ್ತಿದೆ. ಎಜ್‌ಬಾಸ್ಟನ್‌ನಲ್ಲಿ ಅವರು ನೀಡಿದ ಬೌಲಿಂಗ್ ಪ್ರದರ್ಶನ, ಹಲವು ವರ್ಷಗಳ ಬಳಿಕ ಆಡುತ್ತಿರುವ ಮಾದರಿಯಲ್ಲೂ ತಕ್ಷಣವೇ ಪ್ರಭಾವ ಬೀರುವ ಅವರ ಅಸಾಧಾರಣ ಕೌಶಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಹಲ್ಗಾಮ್ ದಾಳಿಯ ಮಾಸ್ಟರ್‌ ಮೈಂಡ್‌, ಭಯೋತ್ಪಾದಕ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್</title><link>https://vishwavani.news/national/pahalgam-terror-attack-case-nia-seeks-non-bailable-warrant-against-hafiz-saeed-in-chargesheet-83719.html</link><guid>https://vishwavani.news/national/pahalgam-terror-attack-case-nia-seeks-non-bailable-warrant-against-hafiz-saeed-in-chargesheet-83719.html</guid><pubDate>Tue, 14 Jul 2026 11:48:03 +0000</pubDate><description>&lt;![CDATA[Pahalgam Terror Attack: ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ವಿಶೇಷ ಎನ್ಐಎ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆರೋಪಪಟ್ಟಿ ಸಲ್ಲಿಸಿದ ನಂತರ ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Hafiz_Saeed_6lAmOee.original.jpg" class="attachment-large size-large wp-post-image" alt="ಪಹಲ್ಗಾಮ್ ದಾಳಿಯ ಮಾಸ್ಟರ್‌ ಮೈಂಡ್‌, ಭಯೋತ್ಪಾದಕ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="put06"&gt;&lt;b&gt;ನವದೆಹಲಿ, ಜು. 14:&lt;/b&gt; ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಗೆ &lt;a href="https://vishwavani.news/national/operation-sindoor-first-anniversary-india-reveals-destruction-of-9-terror-camps-11-airbases-and-13-pakistani-war-aircraft-77514.html"&gt;&lt;b&gt;(Pahalgam Terror Attack Case)&lt;/b&gt;&lt;/a&gt; ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ (Hafiz Saeed) ವಿರುದ್ಧ ವಿಶೇಷ ಎನ್ಐಎ (NIA) ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ಪ್ರಕರಣದಲ್ಲಿ ಸಯೀದ್ ವಿರುದ್ಧ ಭಯೋತ್ಪಾದನಾ ನಿಗ್ರಹ ಸಂಸ್ಥೆ ಪೂರಕ ಆರೋಪಪಟ್ಟಿ ಸಲ್ಲಿಸಿದ ಎರಡು ದಿನಗಳ ನಂತರ, ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ. ಭಾರತ ಮತ್ತು ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಸಯೀದ್, 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದೂ ಪರಿಗಣಿಸಲ್ಪಟ್ಟಿದ್ದಾನೆ.&lt;/p&gt;&lt;p data-block-key="8dp43"&gt;ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಪೂರಕ ಆರೋಪ ಪಟ್ಟಿಯಲ್ಲಿ, 76 ವರ್ಷದ ಸಯೀದ್‌ನನ್ನು ನಿಷೇಧಿತ ಲಷ್ಕರ್-ಎ-ತೊಯ್ಬಾ ಮತ್ತು ಅದರ ಪ್ರಾಕ್ಸಿ ಫ್ರಂಟ್ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಮುಖ್ಯಸ್ಥನೆಂದು ಹೆಸರಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ1967ರ ಬಹು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p data-block-key="62lsk"&gt;&lt;a href="https://vishwavani.news/national/pahalgam-terror-attack-case-nia-names-lashkar-chief-hafiz-saeed-as-an-accused-82965.html"&gt;&lt;b&gt;ಪಹಲ್ಗಾಮ್ ದಾಳಿ: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆರೋಪಿ ಎಂದ ಎನ್ಐಎ&lt;/b&gt;&lt;/a&gt;&lt;/p&gt;&lt;h3 data-block-key="24mui"&gt;&lt;b&gt;ಎನ್ಐಎ ನ್ಯಾಯಾಲಯ ಹೇಳಿದ್ದೇನು?&lt;/b&gt;&lt;/h3&gt;&lt;p data-block-key="9o4uq"&gt;ನ್ಯಾಯಾಲಯದ ಆದೇಶದ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ನಿವಾಸಿ ಮತ್ತು ತಲೆಮರೆಸಿಕೊಂಡಿರುವ ಭಯೋತ್ಪಾದಕ ಎಂದು ವಿವರಿಸಲಾದ ಸಯೀದ್ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿಯಾಗಿದ್ದು, ಬಂಧನದಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಈ ವಿಷಯದಲ್ಲಿ ಮುಂದಿನ ವಿಚಾರಣೆಯನ್ನು ಪ್ರಾರಂಭಿಸಲು ಮತ್ತು ತನಿಖೆಯ ಸಮಯದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಆತನ ವಿರುದ್ಧ ದಿನಾಂಕದ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಸಂಸ್ಥೆ ಕೋರಿದೆ.&lt;/p&gt;&lt;p data-block-key="cpggo"&gt;ನ್ಯಾಯಯುತ, ಸಂಪೂರ್ಣ ಮತ್ತು ಪರಿಣಾಮಕಾರಿ ತನಿಖೆಗಾಗಿ ಸಯೀದ್‌ನ ಬಂಧನ ಮತ್ತು ಕಸ್ಟಡಿ ವಿಚಾರಣೆ ಅಗತ್ಯ. ಹೀಗಾಗಿ ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದ್ದು, ಕಾನೂನಿನ ಪ್ರಕಾರ ಮರಣ ದಂಡನೆಗಾಗಿ ಅದನ್ನು ಜಮ್ಮುವಿನ ಎನ್ಐಎ ಉಪ ಮಹಾನಿರ್ದೇಶಕ (ಡಿಐಜಿ) ಅವರಿಗೆ ಕಳುಹಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p data-block-key="cqj5h"&gt;2025ರ ಏಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇತ್ತೀಚಿನ ನ್ಯಾಯಾಲಯದ ಆದೇಶವು ಆ ದಾಳಿಯ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Star Fashion 2026: ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌</title><link>https://vishwavani.news/photo-gallery/star-fashion-2026-actress-kajal-aggarwal-appeared-in-an-ivory-coloured-farshi-salwar-suit-83722.html</link><guid>https://vishwavani.news/photo-gallery/star-fashion-2026-actress-kajal-aggarwal-appeared-in-an-ivory-coloured-farshi-salwar-suit-83722.html</guid><pubDate>Tue, 14 Jul 2026 11:43:41 +0000</pubDate><description>&lt;![CDATA[ಬಾಲಿವುಡ್‌ ಸಿನಿಮಾ ಇವೆಂಟ್‌ವೊಂದರಲ್ಲಿ ಕಾಜಲ್‌ ಅಗರ್ವಾಲ್‌, ಗ್ರ್ಯಾಂಡ್‌ ಲುಕ್‌ ನೀಡುವ ಫಾರ್ಶಿ ಸಲ್ವಾರ್‌ ಕೋ ಆರ್ಡ್‌ ಸೂಟ್‌ ಧರಿಸಿದ್ದು, ಈ ಸಲ್ವಾರ್‌ ಸೂಟ್‌ ಈಗಾಗಲೇ ಸಲ್ವಾರ್‌ ಪ್ರಿಯರನ್ನು ಆಕರ್ಷಿಸಿದ್ದು, ಬೇಡಿಕೆ ಹೆಚ್ಚಿಸಿಕೊಂಡಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆ ಏನು? ಇಲ್ಲಿದೆ ಡಿಟೇಲ್ಸ್‌.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Star_Fashion_2026_UITSxte.original.jpg" class="attachment-large size-large wp-post-image" alt="Star Fashion 2026: ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>ಸಿಜೆಪಿ ಪ್ರತಿಭಟನೆ: 18 ದಿನಗಳ ಉಪವಾಸದಲ್ಲಿ 8.2 ಕೆಜಿ ತೂಕ ಕಳೆದುಕೊಂಡ ಸೋನಮ್ ವಾಂಗ್‌ಚುಕ್</title><link>https://vishwavani.news/national/cjp-protest-sonam-wangchuk-loses-82-kgs-in-18-days-of-fasting-83724.html</link><guid>https://vishwavani.news/national/cjp-protest-sonam-wangchuk-loses-82-kgs-in-18-days-of-fasting-83724.html</guid><pubDate>Tue, 14 Jul 2026 11:38:32 +0000</pubDate><description>&lt;![CDATA[ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)  ಪ್ರಾರಂಭಿಸಿದ ಪ್ರತಿಭಟನೆಗೆ ಬೆಂಬಲ ನೀಡಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 18 ದಿನಗಳನ್ನು ಪೂರೈಸಿದೆ. ಉಪವಾಸ ಆರಂಭಿಸಿದ ಬಳಿಕ ಅವರ ದೇಹ ತೂಕ 8.2 ಕೆಜಿ ಇಳಿಕೆಯಾಗಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/wangsc.original.jpg" class="attachment-large size-large wp-post-image" alt="ಸಿಜೆಪಿ ಪ್ರತಿಭಟನೆ: 18 ದಿನಗಳ ಉಪವಾಸದಲ್ಲಿ 8.2 ಕೆಜಿ ತೂಕ ಕಳೆದುಕೊಂಡ ಸೋನಮ್ ವಾಂಗ್‌ಚುಕ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="d4197"&gt;&lt;b&gt;ನವದೆಹಲಿ:&lt;/b&gt; ಕಳೆದ 18 ದಿನಗಳಿಂದ ದೆಹಲಿಯ (Delhi) ಜಂತರ್ ಮಂತರ್‌ನಲ್ಲಿ (Jantar Mantar) ಉಪವಾಸ ಸತ್ಯಾಗ್ರಹ (Hunger Strike) ನಡೆಸುತ್ತಿರುವ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ (Sonam Wangchuk ) ಅವರು ಸುಮಾರು 8.2 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಉಪವಾಸ ಸತ್ಯಾಗ್ರಹದ ಪರಿಣಾಮ ಅವರ ಆರೋಗ್ಯದ ಮೇಲಾಗುತ್ತಿದೆ ಎಂದು ಸೋಮವಾರ ಪ್ರತಿಭಟನಾಕಾರರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ (Cockroach Janta Party)ದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. &lt;/p&gt;&lt;p data-block-key="11dfv"&gt;ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿರುವ ಪ್ರತಿಭಟನಾಕಾರರು, ವಾಂಗ್‌ಚುಕ್ ಅವರು ಸುಮಾರು 8.25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟ 70 ಮಿ.ಗ್ರಾಂ. ಗಿಂತ ಕಡಿಮೆಯಾಗಿದೆ. ಪದೇ ಪದೇ ಅವರಿಗೆ ತಲೆತಿರುಗುವಿಕೆ, ಸ್ನಾಯು ಸೆಳೆತ, ದೌರ್ಬಲ್ಯ ಕಾಣಿಸುತ್ತಿದೆ ಅವರ ಪಕ್ಕೆಲುಬು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ 18 ದಿನಗಳಿಂದ ಅವರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರವು ಮಾತನಾಡಲು ಯಾರನ್ನೂ ಕೂಡ ಕಳುಹಿಸಿಲ್ಲ ಎಂದು ಹೇಳಿದರು.&lt;/p&gt;&lt;p data-block-key="b5u8g"&gt;&lt;b&gt; &lt;/b&gt;&lt;a href="/viral/villagers-carry-pregnant-woman-to-hospital-in-makeshift-sling-due-to-lack-of-road-in-maharashtra-video-goes-viral-83718.html"&gt;&lt;b&gt;21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು&lt;/b&gt;&lt;/a&gt;&lt;/p&gt;&lt;p data-block-key="41avc"&gt;ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಮ್ ವಾಂಗ್‌ಚುಕ್, ನನ್ನ ದೇಹ ದುರ್ಬಲವಾಗಿರಬಹುದು. ಆದರೆ ನಾನು ಒಳಗಿನಿಂದ ತುಂಬಾ ಬಲಶಾಲಿಯಾಗಿದ್ದೇನೆ ಎಂದು ತಿಳಿಸಿದರು.  &lt;/p&gt;&lt;p data-block-key="efelb"&gt;ಭಾರತದಲ್ಲಿ ಶೈಕ್ಷಣಿಕ ಸುಧಾರಣೆಗಳಿಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯನ್ನು ಆರಂಭಿಸಿತ್ತು. ಸಿಜೆಪಿ ಪ್ರಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಆದರೆ ಪ್ರಧಾನ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. &lt;/p&gt;&lt;p data-block-key="cfcd1"&gt;ವಾಂಗ್‌ಚುಕ್ ಅವರು ಉಪವಾಸ ಕೈ ಬಿಡುವಂತೆ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಹಲವಾರು ನಾಯಕರು ಒತ್ತಾಯಿಸಿದ್ದಾರೆ. ವಾಂಗ್‌ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕನಿಮೋಳಿ, ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಹೇಳಿದ್ದರು. &lt;/p&gt;&lt;p data-block-key="86dcj"&gt;ಈ ಕುರಿತು ಎಕ್ಸ್ ನಲ್ಲಿ ಬರೆದಿದ್ದ ಅವರು, ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳವಾಗಿದೆ. ಅವರ ಉಪವಾಸವು ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅವರ ಆಳವಾದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಬಿಜೆಪಿ ಸರ್ಕಾರವು ಈ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಬೇಕು. ದೇಶಕ್ಕೆ ವಾಂಗ್‌ಚುಕ್‌ ಅವರಂತಹ ಧ್ವನಿಗಳು ಬೇಕಾಗಿವೆ. ನ್ಯಾಯಕ್ಕಾಗಿ ಹೋರಾಟವು ಅಚಲವಾದ ದೃಢಸಂಕಲ್ಪದೊಂದಿಗೆ ಮುಂದುವರಿಯಬೇಕು. ಅದಕ್ಕಾಗಿ ಅವರ ಆರೋಗ್ಯದ ಬಲಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. &lt;/p&gt;&lt;p data-block-key="104q1"&gt;&lt;a href="/foreign/sheikh-hasina-will-be-jailed-if-she-returns-bangladesh-minister-issues-warning-83711.html"&gt;&lt;b&gt;ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ&lt;/b&gt;&lt;/a&gt;&lt;/p&gt;&lt;p data-block-key="bho1e"&gt;ಸಿಜೆಪಿ ವತಿಯಿಂದ ಜುಲೈ 20 ರಂದು ಸಂಸತ್ತಿಗೆ ಮೆರವಣಿಗೆ ನಡೆಯಲಿದ್ದು, ಇದನ್ನು ಉದ್ಭವ್ ಠಾಕ್ರೆ ಬೆಂಬಲಿಸಿದ್ದಾರೆ, ದೇಶದ ಯುವಕರ ಭವಿಷ್ಯಕ್ಕಾಗಿ ಮೆರವಣಿಗೆಯನ್ನು ಬೆಂಬಲಿಸುವಂತೆ ರಾಹುಲ್ ಗಾಂಧಿ ಸೇರಿದಂತೆ ಇತರ ಪಕ್ಷಗಳ ರಾಜಕೀಯ ನಾಯಕರಿಗೆ ಅವರು ಮನವಿ ಮಾಡಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು</title><link>https://vishwavani.news/viral/villagers-carry-pregnant-woman-to-hospital-in-makeshift-sling-due-to-lack-of-road-in-maharashtra-video-goes-viral-83718.html</link><guid>https://vishwavani.news/viral/villagers-carry-pregnant-woman-to-hospital-in-makeshift-sling-due-to-lack-of-road-in-maharashtra-video-goes-viral-83718.html</guid><pubDate>Tue, 14 Jul 2026 11:23:29 +0000</pubDate><description>&lt;![CDATA[Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳ್ಳಿಯೊಂದು ಮೂಲ ಸೌಕರ್ಯದಿಂದ ವಂಚಿತವಾಗಿದೆ. ವಾಹನಗಳು ಚಲಿಸಲು ಅಗತ್ಯವಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದೆ, ಗರ್ಭಿಣಿಯನ್ನು ತಾತ್ಕಾಲಿಕ ಬಟ್ಟೆಯ ಜೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಮನಕಲಕುವ ಘಟನೆ ನಡೆದಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pregnant_Woman_Carried_in_Makeshift_Sling_1.original.jpg" class="attachment-large size-large wp-post-image" alt="21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ok2md"&gt;&lt;b&gt;ಮುಂಬೈ, ಜು. 14:&lt;/b&gt; ದೇಶದ ವಾಣಿಜ್ಯ ನಗರಿಯಾಗಿ ಮುಂಬೈ (Mumbai) ಬೆಳೆಯುತ್ತಿದ್ದರೆ, ಅಲ್ಲಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳ್ಳಿಯೊಂದು ಈಗಲೂ ಕನಿಷ್ಠ ಮೂಲಸೌಕರ್ಯದಿಂದ ವಂಚಿತವಾಗಿದೆ. ವಾಹನಗಳು ಚಲಿಸಲು ಅನುಕೂಲವಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದೆ, ಗರ್ಭಿಣಿಯನ್ನು ತಾತ್ಕಾಲಿಕ ಬಟ್ಟೆಯ ಜೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಮನಕಲಕುವ ಘಟನೆ ನಡೆದಿದೆ. ಈ ಘಟನೆ ರಾಯಗಢ ಜಿಲ್ಲೆಯ ಖಲಾಪುರ ತಾಲೂಕಿನ ಉಂಬರಾನೆ ವಾಡಿಯಲ್ಲಿ ನಡೆದಿದೆ. ಈ ಗ್ರಾಮ ಮುಂಬೈಯಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿದೆ. ಇದು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿರುವ ಖಲಾಪುರ ಟೋಲ್ ಪ್ಲಾಜಾದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿದೆ ಎನ್ನುವುದೇ ಅಚ್ಚರಿಯ ಸಂಗತಿ.&lt;/p&gt;&lt;p data-block-key="cjk4l"&gt;ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ &lt;a href="https://vishwavani.news/viral/thief-tried-to-snatch-phone-on-moving-train-what-did-the-passengers-do-83536.html"&gt;&lt;b&gt;(viral video)&lt;/b&gt;&lt;/a&gt; ಆಗಿದೆ. ಗರ್ಭಿಣಿಯನ್ನು ಸುರಕ್ಷಿತವಾಗಿ ಕರೆದೊಯ್ಯುವಾಗ ಗ್ರಾಮಸ್ಥರು ಜಾರು ಬಂಡೆಗಳು, ಗುಡ್ಡ-ಬೆಟ್ಟಗಳಿಂದ ಆವೃತವಾದ ಭೂ ಪ್ರದೇಶ ಮತ್ತು ಉಕ್ಕಿ ಹರಿಯುವ ಹೊಳೆಗಳಲ್ಲಿ ಕಷ್ಟಪಡುತ್ತಿರುವುದನ್ನು ಈ ವಿಡಿಯೊ ಸೆರೆ ಹಿಡಿದಿದೆ. ಹೀಗೆ ಕಷ್ಟಪಟ್ಟು ಗರ್ಭಿಣಿಯನ್ನು ಸುರಕ್ಷಿತವಾಗಿ ಚೌಕ್ ಆಸ್ಪತ್ರೆಗೆ ದಾಖಲಿಸಲಾಯಿತು.&lt;/p&gt;&lt;h3 data-block-key="vcga"&gt;&lt;b&gt;ಇಲ್ಲಿದೆ ವಿಡಿಯೊ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt; ,  :        |&lt;br&gt;&lt;br&gt;India talks of becoming a global superpower and governments showcase digital development, but the ground reality in parts of Raigad tells a different story. In Khalapur’s… &lt;a href="https://t.co/Kdm8mADvXS"&gt;pic.twitter.com/Kdm8mADvXS&lt;/a&gt;&lt;/p&gt;&amp;mdash; MUMBAI NEWS (@Mumbaikhabar9) &lt;a href="https://x.com/Mumbaikhabar9/status/2076884658063811043?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="btqp0"&gt;ಅನಂತ ಪಾರ್ಧಿ ಎಂಬವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಗ್ರಾಮಸ್ಥರು ಅವರನ್ನು ಚೌಕ್ ಆಸ್ಪತ್ರೆಗೆ ಕಠಿಣ ಕಾಡಿನ ಹಾದಿಯ ಮೂಲಕ ಕರೆದೊಯ್ದರು. ಬುಡಕಟ್ಟು ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ, ನಿವಾಸಿಗಳು ಬೆಡ್‌ಶೀಟ್ ಅನ್ನು ಜೋಲಿಯಂತೆ ಮಾಡಿ ಆ ಮೂಲಕ ಗರ್ಭಿಣಿಯನ್ನು ಕರೆದೊಯ್ದರು. ಆಸ್ಪತ್ರೆಗೆ ತಲುಪಲು ಬಂಡೆಗಳಿಂದ ಕೂಡಿದ ಪ್ರದೇಶ ಮತ್ತು ಹೊಳೆಗಳ ಮೂಲಕ ಹಲವು ಕಿಲೋ ಮೀಟರ್ ಕ್ರಮಿಸಬೇಕಾಯ್ತು.&lt;/p&gt;&lt;p data-block-key="f4g9l"&gt;&lt;a href="https://vishwavani.news/viral/a-sick-woman-died-due-to-road-problems-video-viral-82985.html"&gt;&lt;b&gt;ರಸ್ತೆ ಇಲ್ಲದೆ ಮಂಚದ ಮೇಲೆ ಮಲಗಿಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು!&lt;/b&gt;&lt;/a&gt;&lt;/p&gt;&lt;p data-block-key="94u27"&gt;ಉಂಬರಣೆ ವಾಡಿ ನಾಲ್ಕು ಬುಡಕಟ್ಟು ವಸಾಹತುಗಳಲ್ಲಿ ಒಂದಾಗಿದ್ದು, ಅವುಗಳಲ್ಲಿ ಪಿರ್ಕಡ್ವಾಡಿ ಮತ್ತು ಅರ್ಕಸ್ವಾಡಿ ಸೇರಿವೆ. ಇವು ರಸ್ತೆಗಳು ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಈಗಲೂ ಎದುರಿಸುತ್ತಿವೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಚೌಕ್‌ಗೆ ಗ್ರಾಮವನ್ನು ಸಂಪರ್ಕಿಸುವ ಕಿರಿದಾದ ಪಾದಚಾರಿ ಮಾರ್ಗವು ಕೊಚ್ಚಿಹೋಗಿದ್ದು, ಇದು ಇಲ್ಲಿನವರ ಬದಕನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.&lt;/p&gt;&lt;p data-block-key="c6vt0"&gt;ವಿಪರ್ಯಾಸವೆಂದರೆ, ಈ ದೂರದ ಹಳ್ಳಿಗಳು ನವಿ ಮುಂಬೈಗೆ ಕುಡಿಯುವ ನೀರನ್ನು ಪೂರೈಸುವ ಮೋರ್ಬೆ ಅಣೆಕಟ್ಟಿನ ಬಳಿಯಲ್ಲೇ ಇವೆ. ಭಾರತದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಗೆ ತಾಗಿಕೊಂಡಿವೆ.&lt;/p&gt;&lt;p data-block-key="rbu5"&gt;ಈ ಘಟನೆಯು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ದೇಶದ ಅತ್ಯಂತ ಆಧುನಿಕ ಎಕ್ಸ್‌ಪ್ರೆಸ್‌ ವೇಯ ಒಂದರಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿಯಲ್ಲಿ ಮೂಲಭೂತ ಸಂಪರ್ಕವೇ ಇಲ್ಲದಿರುವುದನ್ನು ಮನಗಂಡು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯ ಕೆಲವೇ ಕಿಲೋ ಮೀಟರ್ ದೂರದಲ್ಲಿ ವಾಸಿಸುವ ನಿವಾಸಿಗಳು ಸರಿಯಾದ ರಸ್ತೆ ಇಲ್ಲದ ಕಾರಣ ರೋಗಿಗಳನ್ನು ಕಾಲ್ನಡಿಗೆಯಲ್ಲಿ ಸಾಗಿಸುವ ಪರಿಸ್ಥಿತಿ ಬಂದೊದಗಿರುವುದು ನಿಜಕ್ಕೂ ವಿಪರ್ಯಾಸ ಎಂದು ನೆಟ್ಟಿಗರು ಬೇಸರ ವ್ಯಕ್ರಪಡಿಸಿದ್ದಾರೆ.&lt;/p&gt;&lt;p data-block-key="feb78"&gt;ಮಳೆಗಾಲದಲ್ಲಿ ಕಾಡುಗಳು ಮತ್ತು ಹೊಳೆಗಳ ಮೂಲಕ ರೋಗಿಗಳನ್ನು ಸಾಗಿಸುವ ಗ್ರಾಮಸ್ಥರು ತಮ್ಮ ಜೀವವನ್ನೇ ಪಣಕ್ಕೀಡಬೇಕಾದ ಸ್ಥಿತಿ ಇದೆ. ರಸ್ತೆ, ವಿದ್ಯುತ್ ಮತ್ತು ಇತರ ಮೂಲಭೂತ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Mohan Bhagwat: ಬಾಗಲಕೋಟೆಯ ಕಲಾದಗಿಗೆ ಮೋಹನ್ ಭಾಗವತ್ ಭೇಟಿ; ಯುವ ಕಾರ್ಯಕರ್ತನ ಮನೆಯಲ್ಲಿ ಚಹಾ ಸೇವನೆ</title><link>https://vishwavani.news/karnataka/bagalkot/rss-chief-mohan-bhagwat-visits-bagalkots-kaladgi-83721.html</link><guid>https://vishwavani.news/karnataka/bagalkot/rss-chief-mohan-bhagwat-visits-bagalkots-kaladgi-83721.html</guid><pubDate>Tue, 14 Jul 2026 11:17:22 +0000</pubDate><description>&lt;![CDATA[RSS chief Mohan Bhagwat: ಭಾಗಲಕೋಟೆಯ ಆರ್‌ಎಸ್‌ಎಸ್‌ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ನಿವಾಸಕ್ಕೆ ಮೋಹನ್ ಭಾಗವತ್ ಅವರು ಭೇಟಿ ನೀಡಿದ್ದರು. ಝಡ್ ಪ್ಲಸ್ ಭದ್ರತೆ ಹೊಂದಿರುವ ಮೋಹನ್ ಭಾಗವತ್ ಅವರು ಕಲಾದಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬಾಗಲಕೋಟೆ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/_RSS_chief_Mohan_Bhagwat.original.jpg" class="attachment-large size-large wp-post-image" alt="Mohan Bhagwat: ಬಾಗಲಕೋಟೆಯ ಕಲಾದಗಿಗೆ ಮೋಹನ್ ಭಾಗವತ್ ಭೇಟಿ; ಯುವ ಕಾರ್ಯಕರ್ತನ ಮನೆಯಲ್ಲಿ ಚಹಾ ಸೇವನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3zbt0"&gt;&lt;b&gt;ಬಾಗಲಕೋಟೆ:&lt;/b&gt; ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಅವರು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಗಡಿಭಾಗದ ಬೆಳಗಾವಿಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಾರ್ಗಮಧ್ಯೆ ಅವರು ಕಲಾದಗಿಯ ಸಂಘದ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ಮನೆಗೆ ಭೇಟಿ ನೀಡಿದ್ದರು.&lt;/p&gt;&lt;p data-block-key="fcecb"&gt;ದೇಶದ ಅತ್ಯುನ್ನತ ಝಡ್ ಪ್ಲಸ್ ಭದ್ರತೆ ಹೊಂದಿರುವ ಮೋಹನ್ ಭಾಗವತ್ ಅವರು ಕಲಾದಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ ಅವರು, ನೇರವಾಗಿ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ನಿವಾಸಕ್ಕೆ ತೆರಳಿದರು.&lt;/p&gt;&lt;p data-block-key="14ktt"&gt;ಡಾ. ಪ್ರವೀಣ್ ಭಜಂತ್ರಿ ಅವರ ಮನೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಕಳೆದ ಮೋಹನ್‌ ಭಾಗವತ್‌ ಪ್ರವೀಣ್ ಅವರ ಕುಟುಂಬ ಸದಸ್ಯರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿ, ಚಹಾ ಸೇವಿಸಿದರು. ಸಂಘದ ಪರಮೋಚ್ಛ ನಾಯಕರೇ ತಮ್ಮ ಮನೆಗೆ ಭೇಟಿ ನೀಡಿದ್ದರಿಂದ ಭಜಂತ್ರಿ ಕುಟುಂಬದಲ್ಲಿ ಹರ್ಷ ವ್ಯಕ್ತವಾಗಿದೆ.&lt;/p&gt;&lt;p data-block-key="ehek9"&gt;&lt;a href="/karnataka/bengaluru-urban/protest-outside-vidhana-soudha-if-land-acquisition-for-bidadi-township-is-not-dropped-hd-deve-gowda-writes-to-cm-dk-shivakumar-83701.html"&gt;"ಬಿಡಿದ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಕೈಬಿಡದಿದ್ದರೆ ವಿಧಾನಸೌಧದ ಎದುರು ಧರಣಿ"; CMಗೆ ಪತ್ರ ಬರೆದ H.D ದೇವೇಗೌಡ&lt;/a&gt;&lt;/p&gt;&lt;p data-block-key="dr76a"&gt;ಕಲಾದಗಿಯಲ್ಲಿ ಕೆಲಕಾಲ ಕಳೆದ ಬಳಿಕ ಮೋಹನ್ ಭಾಗವತ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ವಿಜಯಪುರ ಜಿಲ್ಲೆಗೆ ಪ್ರಯಾಣ ಬೆಳೆಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!</title><link>https://vishwavani.news/sports/cricket/ind-vs-eng-jos-buttler-becomes-second-england-player-with-200-odi-caps-83720.html</link><guid>https://vishwavani.news/sports/cricket/ind-vs-eng-jos-buttler-becomes-second-england-player-with-200-odi-caps-83720.html</guid><pubDate>Tue, 14 Jul 2026 11:16:29 +0000</pubDate><description>&lt;![CDATA[ಭಾರತ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಇಂಗ್ಲೆಂಡ್‌ನ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯವು ಅವರ ವೃತ್ತಿಜೀವನದ 200ನೇ ಏಕದಿನ ಪಂದ್ಯವಾಗಿದೆ. ಗವಇದರೊಂದಿಗೆ, ಇಂಗ್ಲೆಂಡ್ ಪರ 200 ಏಕದಿನ ಪಂದ್ಯಗಳನ್ನು ಆಡಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Jos_Buttler_4K3cfEF.original.jpg" class="attachment-large size-large wp-post-image" alt="IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="14yed"&gt;&lt;b&gt;ಬರ್ಮಿಂಗ್‌ಹ್ಯಾಮ್‌:&lt;/b&gt; ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಮೊದಲ ಪಂದ್ಯ ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್‌ನ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್(Jos Buttler) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯ ಬಟ್ಲರ್ ಅವರ ವೃತ್ತಿಜೀವನದ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಇದರೊಂದಿಗೆ, ಇಂಗ್ಲೆಂಡ್ ಪರ 200 ಏಕದಿನ ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.&lt;/p&gt;&lt;p data-block-key="bovkh"&gt;ಬಟ್ಲರ್ ಅವರ 200ನೇ ಏಕದಿನ ಪಂದ್ಯ ಜುಲೈ 14 ಎಂಬ ಐತಿಹಾಸಿಕ ದಿನಾಂಕದಂದೇ ಬಂದಿರುವುದು ವಿಶೇಷ. ಇಂದಿನಿಂದ ನಿಖರವಾಗಿ ಏಳು ವರ್ಷಗಳ ಹಿಂದೆ, 2019ರ ಜುಲೈ 14ರಂದು ಇಂಗ್ಲೆಂಡ್ ತಂಡ ಲಾರ್ಡ್ಸ್ ಮೈದಾನದಲ್ಲಿ ತನ್ನ ಇತಿಹಾಸದ ಮೊದಲ ಐಸಿಸಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.&lt;/p&gt;&lt;p data-block-key="3tk3r"&gt;ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ವಿವಾದಾತ್ಮಕ ಫೈನಲ್ ಪಂದ್ಯಗಳಲ್ಲಿ ಒಂದಾಗಿದ್ದ ಆ ಪಂದ್ಯದಲ್ಲಿ ಸೂಪರ್ ಓವರ್ ಕೂಡ ಟೈ ಆದ ಬಳಿಕ ಬೌಂಡರಿ ಕೌಂಟ್ ನಿಯಮದ ಆಧಾರದ ಮೇಲೆ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಆ ಐತಿಹಾಸಿಕ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಲ್ಲಿ ಜೋಸ್ ಬಟ್ಲರ್ ಕೂಡ ಒಬ್ಬರಾಗಿದ್ದರು.&lt;/p&gt;&lt;p data-block-key="2djif"&gt;&lt;a href="/sports/cricket/ʻrcb-coach-andy-flower-will-not-leave-ipl-to-join-england-test-teamʼ-says-dinesh-karthik-83710.html"&gt;&lt;b&gt;ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!&lt;/b&gt;&lt;/a&gt;&lt;/p&gt;&lt;h3 data-block-key="au83d"&gt;&lt;b&gt;ಇಯಾನ್ ಮಾರ್ಗನ್ ಬಳಿಕ ಎರಡನೇ ಆಟಗಾರ ಬಟ್ಲರ್&lt;/b&gt;&lt;/h3&gt;&lt;p data-block-key="eq6qp"&gt;ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಇದುವರೆಗೆ ಮಾಜಿ ನಾಯಕ ಇಯಾನ್ ಮಾರ್ಗನ್ ಅವರಿಗೆ ಮಾತ್ರ ಸೇರಿತ್ತು. ಮಾರ್ಗನ್ ಇಂಗ್ಲೆಂಡ್ ಪರ ಗರಿಷ್ಠ 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜೋಸ್ ಬಟ್ಲರ್ 200 ಪಂದ್ಯಗಳ ಮೈಲಿಗಲ್ಲು ತಲುಪಿ, ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.&lt;/p&gt;&lt;p data-block-key="dmec6"&gt;ಈ ಪಟ್ಟಿಯಲ್ಲಿ ಮಾಜಿ ಆಲ್‌ರೌಂಡರ್ ಪಾಲ್ ಕಾಲಿಂಗ್‌ವುಡ್ ಮೂರನೇ ಸ್ಥಾನದಲ್ಲಿದ್ದು, ಅವರು ಇಂಗ್ಲೆಂಡ್ ಪರ 197 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 200 ಪಂದ್ಯಗಳೊಂದಿಗೆ ಬಟ್ಲರ್ ಇದೀಗ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.&lt;/p&gt;&lt;p data-block-key="7j37m"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Jos Buttler on Virat Kohli:&lt;br&gt;&lt;br&gt; &amp;quot;Virat Kohli is the most recognisable cricketer in the world. I don&amp;#39;t think words can do justice to his stature in the game or to his incredible records. We always look forward to the challenge of playing against the best players like him.&amp;quot; …&lt;/p&gt;&amp;mdash; Manoj Tiwari (@ManojTiwariIND) &lt;a href="https://x.com/ManojTiwariIND/status/2076962036114932068?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="dtcmf"&gt;&lt;/p&gt;&lt;h3 data-block-key="1j82c"&gt;&lt;b&gt;2012ರಲ್ಲಿ ಏಕದಿನ ಕ್ರಿಕೆಟ್‌ಗೆ ಬಟ್ಲರ್‌ ಪದಾರ್ಪಣೆ&lt;/b&gt;&lt;/h3&gt;&lt;p data-block-key="5ul6m"&gt;ಜೋಸ್ ಬಟ್ಲರ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು 2012ರ ಫೆಬ್ರವರಿ 21ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭಿಸಿದ್ದರು. ಕಳೆದ 14 ವರ್ಷಗಳ ಸುದೀರ್ಘ ಅವಧಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿ ಮತ್ತು ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಬಟ್ಲರ್ ಪ್ರಮುಖ ಪಾತ್ರ ವಹಿಸಿದ್ದಾರೆ.&lt;/p&gt;&lt;p data-block-key="ddauk"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;200 ODIs: A remarkable achievement&lt;br&gt;&lt;br&gt;Jos Buttler becomes only the second England player after Eoin Morgan to reach the landmark. &lt;a href="https://x.com/hashtag/Cricket?src=hash&amp;amp;ref_src=twsrc%5Etfw"&gt;#Cricket&lt;/a&gt; &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; &lt;a href="https://x.com/hashtag/Sportskeeda?src=hash&amp;amp;ref_src=twsrc%5Etfw"&gt;#Sportskeeda&lt;/a&gt; &lt;a href="https://t.co/ruPaT6hUvt"&gt;pic.twitter.com/ruPaT6hUvt&lt;/a&gt;&lt;/p&gt;&amp;mdash; Sportskeeda (@Sportskeeda) &lt;a href="https://x.com/Sportskeeda/status/2076985005344223314?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="f23qh"&gt;&lt;/p&gt;&lt;p data-block-key="3920c"&gt;ಭಾರತ ವಿರುದ್ಧದ ಈ ಮೊದಲ ಏಕದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು. ಇತ್ತೀಚೆಗೆ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ಪ್ರಮುಖ ಆಟಗಾರರನ್ನೇ ಒಳಗೊಂಡ ತಂಡದ ಸಂಯೋಜನೆಯ ಮೇಲೆ ಇಂಗ್ಲೆಂಡ್ ಮತ್ತೊಮ್ಮೆ ವಿಶ್ವಾಸ ಇಟ್ಟಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Viral Video: ಆಗ್ರಾದಲ್ಲಿ ಫ್ರಿಜ್‌ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು</title><link>https://vishwavani.news/viral/agra-house-fridge-ice-formation-shivalinga-83715.html</link><guid>https://vishwavani.news/viral/agra-house-fridge-ice-formation-shivalinga-83715.html</guid><pubDate>Tue, 14 Jul 2026 10:48:21 +0000</pubDate><description>&lt;![CDATA[Shivling-Like Ice Formation: ಉತ್ತರ ಪ್ರದೇಶದ ಆಗ್ರಾದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ ಆಕಾರ ಮೂಡಿದ್ದು, ಸ್ಥಳೀಯರು ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Shivling.original.png" class="attachment-large size-large wp-post-image" alt="Viral Video: ಆಗ್ರಾದಲ್ಲಿ ಫ್ರಿಜ್‌ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="xz5sj"&gt;&lt;b&gt;ಲಖನೌ, ಜು. 14:&lt;/b&gt; ಉತ್ತರ ಪ್ರದೇಶದ (Uttar Pradesh) ಆಗ್ರಾದ ಖೇರಿಯಾ ಮೋಡ್‌ನ (Kheria Mod) ನಾಗ್ಲಾ ಭುಜಾ ಪ್ರದೇಶದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ (Shivalinga) ಆಕಾರ ಮೂಡಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ನೆರೆಹೊರೆಯವರು ಆಗಮಿಸಿ, ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.&lt;/p&gt;&lt;p data-block-key="cqtpg"&gt;ಮನೆಯ ಫ್ರಿಜ್‌ನ ಫ್ರೀಜರ್ ವಿಭಾಗದಲ್ಲಿ ಸಹಜವಾಗಿ ರೂಪುಗೊಂಡಿರುವ ಹಿಮದ ರಚನೆ ಶಿವಲಿಂಗವನ್ನು ಹೋಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಮನೆಯವರು ಮೊದಲು ಆಶ್ಚರ್ಯ ವ್ಯಕ್ತಪಡಿಸಿದ್ದು, ಬಳಿಕ ಈ ವಿಷಯ ಸುತ್ತಮುತ್ತಲಿನ ನಿವಾಸಿಗಳಿಗೆ ತಿಳಿದಿದೆ. ಸುದ್ದಿ ಹರಡುತ್ತಿದ್ದಂತೆಯೇ ಭಕ್ತರು ಮನೆಗೆ ಆಗಮಿಸಿ ಜಲಾಭಿಷೇಕ ನೆರವೇರಿಸಿ, ಹೂವು ಹಾಗೂ ನಾಣ್ಯಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಸ್ಥಳದಲ್ಲಿ "ಹರ ಹರ ಮಹಾದೇವ" ಎಂಬ ಘೋಷಣೆಗಳು ಮೊಳಗಿದವು.&lt;/p&gt;&lt;h3 data-block-key="7mr39"&gt;&lt;b&gt;ವೈರಲ್‌ ವಿಡಿಯೊ ಇಲ್ಲಿದೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;उत्तर प्रदेश : आगरा में एक घर में फ्रिज के अंदर &amp;quot;शिवलिंग&amp;quot; जैसी आकृति बन गई है। लोग इसे अमरनाथ के पवित्र हिमलिंग जैसी आकृति से जोड़ रहे हैं। पूजा–पाठ शुरू हो गई है। चढ़ावा आना शुरू हो गया है।&lt;a href="https://x.com/madanmohansoni?ref_src=twsrc%5Etfw"&gt;@madanmohansoni&lt;/a&gt; &lt;a href="https://t.co/Kn31ko8tXQ"&gt;pic.twitter.com/Kn31ko8tXQ&lt;/a&gt;&lt;/p&gt;&amp;mdash; Sachin Gupta (@Sachingupta) &lt;a href="https://x.com/Sachingupta/status/2076676508941422661?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="dvs0q"&gt;ಈ ಘಟನೆಯ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು ಜಮ್ಮು-ಕಾಶ್ಮೀರದ ಅಮರನಾಥ ಗುಹೆಯಲ್ಲಿ ಸಹಜವಾಗಿ ರೂಪುಗೊಳ್ಳುವ ಹಿಮ ಶಿವಲಿಂಗಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಕೆಲವರು ಇದನ್ನು ದೈವಿಕ ಪವಾಡ ಎಂದು ನಂಬಿದರೆ, ಇನ್ನೂ ಕೆಲವರು ಇದು ಫ್ರೀಜರ್‌ನಲ್ಲಿನ ತಾಪಮಾನ ಮತ್ತು ತೇವಾಂಶದ ಪರಿಣಾಮವಾಗಿ ಸಹಜವಾಗಿ ರೂಪುಗೊಂಡ ಹಿಮದ ಆಕಾರವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="6hods"&gt;ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದು, ಕುಟುಂಬ ಸಮೇತರಾಗಿ ಭೇಟಿ ನೀಡಿದವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ತಿಳಿದು ದೂರದ ಪ್ರದೇಶಗಳಿಂದಲೂ ಕೆಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.&lt;/p&gt;&lt;p data-block-key="ciu3m"&gt;&lt;a href="/viral/employee-responds-angrily-to-manager-asking-her-to-log-in-on-his-day-leave-83635.html"&gt;&lt;b&gt;ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ&lt;/b&gt;&lt;/a&gt;&lt;/p&gt;&lt;h3 data-block-key="29j34"&gt;&lt;b&gt;ಅಮರನಾಥ ಹಿಮ ಶಿವಲಿಂಗ ಕರಗುತ್ತಿದೆ&lt;/b&gt;&lt;/h3&gt;&lt;p data-block-key="amnv1"&gt;ಇದರ ನಡುವೆ ಜಮ್ಮು-ಕಾಶ್ಮೀರದ ಅಮರನಾಥ ಗುಹೆಯಲ್ಲಿ ಸಹಜವಾಗಿ ರೂಪುಗೊಳ್ಳುವ ಹಿಮ ಶಿವಲಿಂಗ ಈ ಬಾರಿ ವೇಗವಾಗಿ ಕರಗುತ್ತಿದೆ. 57 ದಿನಗಳ ಅಮರನಾಥ ಯಾತ್ರೆ ಪೂರ್ಣಗೊಳ್ಳುವ ಮುನ್ನವೇ ಹಿಮ ಶಿವಲಿಂಗದ ಶೇ. 90ಕ್ಕೂ ಹೆಚ್ಚು ಭಾಗ ಕರಗಿರುವುದಾಗಿ ವರದಿಗಳು ತಿಳಿಸಿವೆ.&lt;/p&gt;&lt;p data-block-key="bc3ns"&gt;ತಜ್ಞರ ಪ್ರಕಾರ, ಹಿಮಾಲಯ ಪ್ರದೇಶದಲ್ಲಿ ತಾಪಮಾನ ಏರಿಕೆಯಾಗುತ್ತಿರುವುದು ಹಾಗೂ ಹವಾಮಾನ ಬದಲಾವಣೆಯ ಪರಿಣಾಮದಿಂದ ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮ ಉಳಿಯಲು ಅಗತ್ಯವಾದಷ್ಟು ಕಡಿಮೆ ತಾಪಮಾನ ಈ ಬಾರಿ ನಿರಂತರವಾಗಿ ದಾಖಲಾಗಿಲ್ಲ ಎನ್ನಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs ENG: ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ನಡುವೆ ಮುನಿಸು? ವಿಡಿಯೊ ವೈರಲ್‌</title><link>https://vishwavani.news/sports/cricket/virat-kohli-gautam-gambhir-avoid-interaction-during-nets-ahead-of-first-odi-83717.html</link><guid>https://vishwavani.news/sports/cricket/virat-kohli-gautam-gambhir-avoid-interaction-during-nets-ahead-of-first-odi-83717.html</guid><pubDate>Tue, 14 Jul 2026 10:44:17 +0000</pubDate><description>&lt;![CDATA[ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಕ್ಯಾಂಪ್‌ನಲ್ಲಿ ಒಂದು ಅಚ್ಚರಿಯ ಸಂಗತಿ ಕಂಡುಬಂದಿದೆ. ಮೊದಲನೇ ಪಂದ್ಯದ ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿ ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನಡುವಣ ಬಾಂಧವ್ಯದ ಬಗ್ಗೆ ಅನುಮಾನಗಳು ಮೂಡಿಂ ಬಂದಿವೆ. ಈ ಸಂಬಂಧ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Virat_Kohl-Gauta_Gambhir.original.jpg" class="attachment-large size-large wp-post-image" alt="IND vs ENG: ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ನಡುವೆ ಮುನಿಸು? ವಿಡಿಯೊ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="t0nkj"&gt;&lt;b&gt;ಬರ್ಮಿಂಗ್‌ಹ್ಯಾಮ್‌: &lt;/b&gt;ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಣ ಮೊದಲನೇ ಏಕದಿನ ಪ೦ದ್ಯದ ನಿಮಿತ್ತ ಅಭ್ಯಾಸದ ವೇಳೆ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ನಡುವೆ ಯಾವುದೇ ಸಂಭಾಷಣೆ ನಡೆಯಲಿಲ್ಲ.  ಅಭ್ಯಾಸದ ಯಾವುದೇ ಹಂತದಲ್ಲಿಯೂ  ಕೊಹ್ಲಿ ಹಾಗೂ ಗಂಭೀರ್‌ ಮಾತನಾಡಿದ ದೃಶ್ಯಗಳು ಎಲ್ಲಿಯೂ ಕಾಣಲೇ ಇಲ್ಲ. ಇದರಿಂದಾಗಿ ಕೊಹ್ಲಿ ಹಾಗೂ ಗಂಭೀರ್‌ ನಡುವೆ ಸಂಗತಿಗಳು ಉತ್ತಮವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದರೆ, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಬಹುತೇಕ ಸಮಯ ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಅವರು ಮಾತ್ರ ಹಿರಿಯ ಬ್ಯಾಟ್ಸ್‌ಮನ್‌ ಬಳಿ ಸಂಭಾಷಣೆ ನಡೆಸುತ್ತಿದ್ದರು. &lt;/p&gt;&lt;p data-block-key="9l6q9"&gt;ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಹಾಗೂ ಕೆಎಲ್‌ ರಾಹುಲ್‌ ಅವರ ಜತೆ ಮಾತ್ರ ಗೌತಮ್‌ ಗಂಭೀರ್‌ ಮಾತನಾಡುತ್ತಿರುವುದು ಕಂಡುಬಂತು. ವರದಿಗಳ ಪ್ರಕಾರ, ವಿರಾಟ್‌ ಕೊಹ್ಲಿ ಅವರು ನೇರವಾಗಿ‌ ಗಂಭೀರ್ ಜೊತೆ ಎಲ್ಲಿಯೂ ಮಾತನಾಡಲಿಲ್ಲ. ಕೊಹ್ಲಿ ಹಾಗೂ ಗಂಭೀರ್‌ ಇಬ್ಬರೂ ದೆಹಲಿ ಆಟಗಾರರಾಗಿದ್ದು, ದೇಶಿ ಕ್ರಿಕೆಟ್‌ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೊತೆಯಾಗಿ ಆಡಿದ್ದಾರೆ. &lt;/p&gt;&lt;p data-block-key="3q3u6"&gt;ಆದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಬಂದಾಗ ಈ ಇಬ್ಬರು ಬದ್ಧ ವೈರಿಗಳು ಎಂಬುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಆರ್‌ಸಿಬಿ vs ಕೆಕೆಆರ್‌ ಮತ್ತು ಆರ್‌ಸಿಬಿ vs ಎಲ್‌ಎಸ್‌ಜಿ ತಂಡಗಳ ನಡುವಣ ಪಂದ್ಯಗಳ ಸಮಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಇದಕ್ಕೆ ಸಂಬಧಿಸಿದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು.&lt;/p&gt;&lt;p data-block-key="d24bl"&gt;&lt;a href="/sports/cricket/ʻrcb-coach-andy-flower-will-not-leave-ipl-to-join-england-test-teamʼ-says-dinesh-karthik-83710.html"&gt;&lt;b&gt;ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!&lt;/b&gt;&lt;/a&gt;&lt;/p&gt;&lt;p data-block-key="87jtk"&gt;ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. 2026ರ ಐಪಿಎಲ್ ಫೈನಲ್‌ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಗೊಂಡಿದ್ದ ಕಾರಣ, ಅವರು ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು.&lt;/p&gt;&lt;p data-block-key="9652b"&gt;ಫೈನಲ್ ಪಂದ್ಯದ ಮಧ್ಯದಲ್ಲೇ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರೂ ನೋವನ್ನು ಲೆಕ್ಕಿಸದೇ ಬ್ಯಾಟಿಂಗ್ ಮುಂದುವರಿಸಿದ್ದ ಕೊಹ್ಲಿ ಅಜೇಯ 75 ರನ್‌ಗಳ ಅಮೋಘ ಇನಿಂಗ್ಸ್ ಆಡಿ ಆರ್‌ಸಿಬಿಗೆ ಸತತ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.&lt;/p&gt;&lt;p data-block-key="bmbnr"&gt;ಇನ್ನೊಂದೆಡೆ, ಇದೇ ಪ್ರವಾಸದ ಟಿ20ಐ ಸರಣಿಯಲ್ಲಿ ಭಾರತವನ್ನು 4-0 ಅಂತರದಿಂದ ವೈಟ್‌ವಾಶ್ ಮಾಡಿರುವ ಇಂಗ್ಲೆಂಡ್ ತಂಡ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದು, ಅದೇ ಲಯವನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.&lt;/p&gt;&lt;p data-block-key="88s3q"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt; NO CONVERSATION BETWEEN VIRAT KOHLI &amp;amp; GAUTAM GAMBHIR? &lt;br&gt;&lt;br&gt;- From Rohit Sharma to Gill, the coach had conversations with everyone except Virat Kohli.[ Ankan Kar]&lt;a href="https://t.co/zXlO2DSVsB"&gt;pic.twitter.com/zXlO2DSVsB&lt;/a&gt;&lt;/p&gt;&amp;mdash; Sam (@cricsam02) &lt;a href="https://x.com/cricsam02/status/2076878709316002133?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9k2ne"&gt;&lt;/p&gt;&lt;p data-block-key="2fuh6"&gt;ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಖಾತೆಯೊಂದು ಹಂಚಿಕೊಂಡಿರುವ ವಿಡಿಯೊದಲ್ಲಿ ಎಜ್‌ಬಾಸ್ಟನ್‌ನ ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಯಾವುದೇ ಮಾತುಕತೆ ಅಥವಾ ಪರಸ್ಪರ ಸಂವಹನ ಕಂಡುಬರದಿರುವುದು ಗಮನ ಸೆಳೆದಿದೆ. ಈ ದೃಶ್ಯ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಊಹಾಪೋಹಗಳಿಗೆ ಮತ್ತೆ ಜೀವ ತುಂಬಿದೆ. ಆದರೆ ಈ ಕುರಿತು ಕೊಹ್ಲಿ ಅಥವಾ ಗಂಭೀರ್ ಯಾರೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.&lt;/p&gt;&lt;p data-block-key="e2kk1"&gt;ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಇದೀಗ ಭಾರತ ಪರ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಅವರು ಮೈದಾನಕ್ಕಿಳಿಯುವ ಪ್ರತಿಯೊಂದು ಪಂದ್ಯವೂ ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದ ತೀವ್ರ ಗಮನ ಸೆಳೆಯುತ್ತಿದೆ.&lt;/p&gt;&lt;p data-block-key="513bb"&gt;&lt;a href="/sports/england-wins-the-toss-and-opts-to-bat-first-83708.html"&gt;&lt;b&gt;ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌&lt;/b&gt;&lt;/a&gt;&lt;/p&gt;&lt;p data-block-key="bqocq"&gt;ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ನೆಟ್ಸ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಶುಭ್‌ಮನ್ ಗಿಲ್ ಸುದೀರ್ಘವಾಗಿ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಈ ಕುರಿತು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ತಮ್ಮ ಮಾತುಕತೆ 2027ರ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ತಂಡದ ಸಂಯೋಜನೆ ರೂಪಿಸುವ ವಿಚಾರ ಎಂದು ತಿಳಿಸಿದರು.&lt;/p&gt;&lt;p data-block-key="2reah"&gt;"ನಾವು ತಂಡದ ಸಂಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೆವು. ಯಾವ ರೀತಿಯ ತಂಡದ ಸಂಯೋಜನೆ ನಮಗೆ ಅತ್ಯುತ್ತಮವಾಗಿರುತ್ತದೆ? ಈಗ ತಂಡದಲ್ಲಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ನಮಗೆ ನೆರವಾಗಬಲ್ಲ ಆಟಗಾರರು ಯಾರು? ಯಾವ ಬೌಲರ್‌ಗಳು, ಯಾವ ಆಲ್‌ರೌಂಡರ್‌ಗಳು ಮತ್ತು ಯಾವ ಸ್ಪಿನ್ನರ್‌ಗಳು ತಂಡಕ್ಕೆ ಸೂಕ್ತರಾಗಬಹುದು? ಇಂತಹ ಎಲ್ಲ ವಿಷಯಗಳ ಬಗ್ಗೆ ನಾವು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ," ಎಂದು ಶುಭ್‌ಮನ್ ಗಿಲ್ ಹೇಳಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ</title><link>https://vishwavani.news/foreign/sheikh-hasina-will-be-jailed-if-she-returns-bangladesh-minister-issues-warning-83711.html</link><guid>https://vishwavani.news/foreign/sheikh-hasina-will-be-jailed-if-she-returns-bangladesh-minister-issues-warning-83711.html</guid><pubDate>Tue, 14 Jul 2026 10:38:14 +0000</pubDate><description>&lt;![CDATA[Sheikh Hasina: ಪದಚ್ಯುತ ಪ್ರಧಾನಿ ಮತ್ತು ನಿಷೇಧಿಸಲ್ಪಟ್ಟ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಈ ವರ್ಷದ ಅಂತ್ಯದ ವೇಳೆಗೆ ಬಾಂಗ್ಲಾದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ದೇಶಕ್ಕೆ ಮರಳಿದರೆ ಜೈಲಿಗೆ ಕಳುಹಿಸುವುದಾಗಿ ಅಲ್ಲಿನ ರಾಜ್ಯ ಸಚಿವೆಯೊಬ್ಬರು ಎಚ್ಚರಿಕೆ ನೀಡಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Sheikh_Hasina_4JXjAFU.original.jpg" class="attachment-large size-large wp-post-image" alt="ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x5i1p"&gt;&lt;b&gt;ಢಾಕಾ, ಜು. 14:&lt;/b&gt; ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ &lt;a href="https://vishwavani.news/foreign/ousted-former-prime-minister-sheikh-hasina-warns-against-anti-india-rhetoric-in-bangladesh-64330.html"&gt;&lt;b&gt;(Sheikh Hasina)&lt;/b&gt;&lt;/a&gt;&lt;b&gt; &lt;/b&gt;ದೇಶಕ್ಕೆ ಮರಳಿದರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅಲ್ಲಿನ ರಾಜ್ಯ ಸಚಿವೆ ಶಮಾ ಒಬೇದ್‌ ಇಸ್ಲಾಂ ಎಚ್ಚರಿಸಿದ್ದಾರೆ. ಪದಚ್ಯುತ ಪ್ರಧಾನಿ ಮತ್ತು ನಿಷೇಧಿಸಲ್ಪಟ್ಟ ಅವಾಮಿ ಲೀಗ್ ನಾಯಕಿ ಶೇಖ್‌ ಹಸೀನಾ ಈ ವರ್ಷದ ಅಂತ್ಯದ ವೇಳೆಗೆ ಬಾಂಗ್ಲಾದೇಶಕ್ಕೆ ಹಿಂತಿರುಗುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ಅಡಚಣೆ ಮತ್ತು ಪ್ರತಿಯೊಂದು ಪಿತೂರಿಯನ್ನು ನಿವಾರಿಸಿಕೊಂಡು, ಈ ವರ್ಷ ನಾನು ನನ್ನ ದೇಶಕ್ಕೆ ಹಿಂತಿರುಗುತ್ತೇನೆ” ಎಂದು ಕಳೆದ ತಿಂಗಳಷ್ಟೇ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಶೇಖ್‌ ಹಸೀನಾ ತಿಳಿಸಿದ್ದರು. &lt;/p&gt;&lt;p data-block-key="2v1jb"&gt;2024ರ ಆಗಸ್ಟ್ 5ರಂದು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರ ಸರ್ಕಾರ ಉರುಳಿತು. ಈ ಮೂಲಕ ಅವರ 20 ವರ್ಷಗಳ ಪ್ರಧಾನಿ ಆಡಳಿತವು ಕೊನೆಗೊಂಡಿತು. ಜನಾಕ್ರೋಶ ವ್ಯಕ್ತವಾಗುತ್ತಿದ್ಧಂತೆ ಹಸೀನಾ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿ ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ವಾಸವಾಗಿದ್ದಾರೆ. ಇದೀಗ ಅವರು ತಮ್ಮ ದೇಶಕ್ಕೆ ಹಿಂತಿರುಗಲು ಮುಂದಾಗಿದ್ದರೆ, ಸಚಿವೆಯೊಬ್ಬರು ಜೈಲು ಶಿಕ್ಷೆಯ ಬೆದರಿಕೆ ಹಾಕಿದ್ದಾರೆ.&lt;/p&gt;&lt;p data-block-key="20lgk"&gt;“ಹಸೀನಾ ಶರಣಾದರೆ, ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅವರು ಜೈಲಿಗೆ ಹೋಗಬೇಕಾಗುತ್ತದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೇದ್ ಇಸ್ಲಾಂ ಹೇಳಿದ್ದಾರೆ. “ಶೇಖ್ ಹಸೀನಾ ಶರಣಾದಾಗ, ಅವರು ಮೊದಲು ಜೈಲಿಗೆ ಹೋಗಬೇಕಾಗುತ್ತದೆ. ಶಿಕ್ಷೆಗೊಳಗಾದ ವ್ಯಕ್ತಿಯ ಹೇಳಿಕೆಗಳನ್ನು ಸರ್ಕಾರ ಪರಿಗಣಿಸುವುದಿಲ್ಲ” ಎಂದು ಶಮಾ ತಿಳಿಸಿದ್ದಾರೆ.&lt;/p&gt;&lt;p data-block-key="fejmp"&gt;&lt;a href="https://vishwavani.news/foreign/sheikh-hasina-return-bangladesh-despite-death-sentence-83363.html"&gt;&lt;b&gt;ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶೇಖ್ ಹಸೀನಾ&lt;/b&gt;&lt;/a&gt;&lt;/p&gt;&lt;p data-block-key="ald5s"&gt;2025ರ ನವೆಂಬರ್ 17ರಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳ ಪ್ರಕರಣದಲ್ಲಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿತು. ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆ ಮೇಲೆ ಮಾರಣಾಂತಿಕ ಕ್ರಮ ತೆಗೆದುಕೊಳ್ಳುವ ಆದೇಶ ಸೇರಿ ಮೂರು ಆರೋಪಗಳ ಮೇಲೆ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತು.&lt;/p&gt;&lt;p data-block-key="48ue2"&gt;ಹಸೀನಾ ಮತ್ತು ಅವರ ಸಹಾಯಕ, ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಪರಾರಿಯಾಗಿರುವ ಅಪರಾಧಿಗಳೆಂದು ಘೋಷಿಸಿ, ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಯಿತು. ಆದರೆ ಹಸೀನಾ ಈ ತೀರ್ಪನ್ನು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ರಾಜಕೀಯ ಪ್ರೇರಿತ ಪ್ರಕ್ರಿಯೆಯ ಭಾಗ ಎಂದು ಕರೆದಿದ್ದಾರೆ.&lt;/p&gt;&lt;p data-block-key="agr3d"&gt;“ನಾನು ನನ್ನ ದೇಶಕ್ಕೆ ಹಿಂದಿರುಗಿದ ನಂತರ ಅವರು ನನ್ನನ್ನು ಬಂಧಿಸಬಹುದು, ಕೊಲ್ಲಬಹುದು. ಆದರೂ, ನಾನು ಹೋಗಲೇಬೇಕು” ಎಂದು ಸಂದರ್ಶನವೊಂದರಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ 78 ವರ್ಷದ ಪುತ್ರಿ ಹಸೀನಾ ಅವರು ಹೇಳಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>AI University in Bengaluru: ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಘೋಷಣೆ</title><link>https://vishwavani.news/politics/establishment-of-the-countrys-first-government-sponsored-ai-university-in-bengaluru-says-cm-dk-shivakumar-83716.html</link><guid>https://vishwavani.news/politics/establishment-of-the-countrys-first-government-sponsored-ai-university-in-bengaluru-says-cm-dk-shivakumar-83716.html</guid><pubDate>Tue, 14 Jul 2026 10:26:06 +0000</pubDate><description>&lt;![CDATA[Google I/O Connect India 2026: ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದಾರೆ. ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Google_IO_Connect_India_2026_.original.jpg" class="attachment-large size-large wp-post-image" alt="AI University in Bengaluru: ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಘೋಷಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="fg8x5"&gt;&lt;b&gt;ಬೆಂಗಳೂರು, ಜು. 14:&lt;/b&gt; ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ (AI University in Bengaluru) ಆರಂಭಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ (Google I/O Connect India 2026 ) ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.&lt;/p&gt;&lt;p data-block-key="1q4cv"&gt;"ಕರ್ನಾಟಕವನ್ನು 'ಎಐ-ನೇಟಿವ್' ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸುವುದು. ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು" ಎಂದು ಹೇಳಿದರು.&lt;/p&gt;&lt;p data-block-key="9t36g"&gt;"ಎಐ-ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ-ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು" ಎಂದು ತಿಳಿಸಿದರು.&lt;/p&gt;&lt;p data-block-key="ced2u"&gt;&lt;/p&gt;&lt;img alt="Google IO Connect India 2026  (2)" class="richtext-image full-width" height="450" src="https://cdn.vishwavani.news/media/images/Google_IO_Connect_India_2026__2.width-800.jpg" width="800"&gt;&lt;p data-block-key="3o0oc"&gt;&lt;/p&gt;&lt;h3 data-block-key="arooj"&gt;&lt;b&gt;ತಂತ್ರಜ್ಞಾನ ಬೆಂಗಳೂರಿನ ದೈನಂದಿನ ಭಾಗ&lt;/b&gt;&lt;/h3&gt;&lt;p data-block-key="27ec3"&gt;"ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸಲು ನಾನು ಅತ್ಯಂತ ಹೆಮ್ಮೆಪಡುತ್ತೇನೆ. ಇಂತಹ ಒಂದು ಕಾರ್ಯಕ್ರಮವು ಇಷ್ಟು ಸಹಜವಾಗಿ ಮೂಡಿಬರಲು ವಿಶ್ವದಲ್ಲೇ ಕೆಲವೇ ಕೆಲವು ಸ್ಥಳಗಳಿವೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ" ಎಂದರು.&lt;/p&gt;&lt;p data-block-key="1q5em"&gt;"ಪ್ರತಿ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ. ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು (AI) ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ. ನಾನು ಹೋದಲ್ಲೆಲ್ಲಾ ಜನರು ಕೇವಲ ಮತ್ತೊಂದು ತಂತ್ರಜ್ಞಾನವಾಗಿ ಮಾತ್ರವಲ್ಲದೆ, ಬಹುಶಃ ನಮ್ಮ ಪೀಳಿಗೆಯನ್ನು ವ್ಯಾಖ್ಯಾನಿಸುವ ಪ್ರಮುಖ ಶಕ್ತಿಯಾಗಿ AI ಬಗ್ಗೆ ಮಾತನಾಡುತ್ತಾರೆ" ಎಂದರು.&lt;/p&gt;&lt;p data-block-key="39n9p"&gt;&lt;/p&gt;&lt;img alt="Google IO Connect India 2026  (3)" class="richtext-image full-width" height="450" src="https://cdn.vishwavani.news/media/images/Google_IO_Connect_India_2026__3.width-800.jpg" width="800"&gt;&lt;p data-block-key="d99p7"&gt;&lt;/p&gt;&lt;p data-block-key="9obmo"&gt;"ಕರ್ನಾಟಕದ ಮುಖ್ಯಮಂತ್ರಿಯಾಗಿ, ನಾನು ನಿಮ್ಮ ಮುಂದೆ ಅಪಾರ ಹೆಮ್ಮೆಯಿಂದ ನಿಂತಿದ್ದೇನೆ. ಏಕೆಂದರೆ ಅಂತಹ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿರುವ ಪ್ರಮುಖ ಸ್ಥಳಗಳಲ್ಲಿ ನಮ್ಮ ಸ್ವಂತ ರಾಜ್ಯವೂ ಒಂದಾಗಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನವು ಕೇವಲ ಕಚೇರಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಇದು ಕಾಫಿ ಶಾಪ್‌ಗಳ ಸಂಭಾಷಣೆಗಳಲ್ಲಿ, ನಮ್ಮ ತರಗತಿ ಕೋಣೆಗಳಲ್ಲಿ ಮತ್ತು ಸಂಶೋಧನಾ ಪ್ರಯೋಗಾಲಯಗಳಲ್ಲಿ ಪ್ರಾರಂಭವಾಗುತ್ತದೆ. ಮುಂದೆ ಅದು ಒಂದು ನವೋದ್ಯಮವಾಗಿ ರೂಪುಗೊಳ್ಳುತ್ತದೆ. ಕೆಲವು ಬಾರಿ ಯುನಿಕಾರ್ನ್ (ಪ್ರತಿಷ್ಠಿತ ಕಂಪನಿ) ಆಗುತ್ತದೆ ಮತ್ತು ಅಪರೂಪಕ್ಕೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತದೆ. ಇದು ಬೆಂಗಳೂರಿನ ಮನೋಭಾವ ಮತ್ತು ಇದು ಕರ್ನಾಟಕದ ಚೈತನ್ಯ" ಎಂದು ಬಣ್ಣಿಸಿದರು.&lt;/p&gt;&lt;p data-block-key="avl6r"&gt;"ಒಂದು ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು ಆಲೋಚನೆಯನ್ನೇ ನಿಮ್ಮ ಜೀವನವಾಗಿಸಿಕೊಳ್ಳಿ" ಎಂದು ಸ್ವಾಮಿ ವಿವೇಕಾನಂದರು ನಮಗೆ ಸಂದೇಶವನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಆ ಆಲೋಚನೆ ಅತ್ಯಂತ ಸ್ಪಷ್ಟವಾಗಿದೆ. ಇಂದು ನಮ್ಮ ರಾಜ್ಯವು ಭಾರತದ ಸಾಫ್ಟ್‌ವೇರ್ ರಫ್ತಿನ 40% ರಷ್ಟು ಕೊಡುಗೆ ನೀಡುತ್ತಿದೆ. ಬೆಂಗಳೂರು 17,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ, ಇದು ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ಇಂಜಿನಿಯರಿಂಗ್ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ಆರಿಸಿಕೊಂಡಿವೆ" ಎಂದು ವಿವರಿಸಿದರು.&lt;/p&gt;&lt;h3 data-block-key="cthcc"&gt;&lt;b&gt;ಗೂಗಲ್ ಅತ್ಯದ್ಭುತ ಪಾಲುದಾರ:&lt;/b&gt;&lt;/h3&gt;&lt;p data-block-key="4t0ad"&gt;ಆ ಪ್ರಯಾಣದಲ್ಲಿ ಗೂಗಲ್ ಅತ್ಯದ್ಭುತ ಪಾಲುದಾರನಾಗಿದೆ. ಕಳೆದ ಎರಡು ದಶಕಗಳಿಂದ, ಗೂಗಲ್ ಬೆಂಗಳೂರನ್ನು ಕೇವಲ ಒಂದು ಕಚೇರಿಯ ಸ್ಥಳವಾಗಿ ಮಾತ್ರವಲ್ಲದೆ, ಇಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತೆಗಾಗಿ ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ.&lt;/p&gt;&lt;p data-block-key="7fvho"&gt;&lt;/p&gt;&lt;img alt="Google IO Connect India 2026  (4)" class="richtext-image full-width" height="450" src="https://cdn.vishwavani.news/media/images/Google_IO_Connect_India_2026__4.width-800.jpg" width="800"&gt;&lt;p data-block-key="5qhj4"&gt;&lt;/p&gt;&lt;p data-block-key="7fbsk"&gt;"ಭಾರತದಲ್ಲಿ ಗೂಗಲ್ 18 ಸಾವಿರ ಸಿಬ್ಬಂದಿ ಹೊಂದಿದ್ದು, ಅದರಲ್ಲಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ಗೂಗಲ್ ನ ಸಿಬ್ಬಂದಿಯ 2/3 ಪ್ರಮಾಣ ಬೆಂಗಳೂರಿನಲ್ಲಿದೆ. ಇದು ನಮ್ಮ ನಗರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಮ್ಮ ಜೊತೆಗೆ ಇಷ್ಟು ಉತ್ತಮ ಸಂಬಂಧ ಹೊಂದಿರುವ ಗೂಗಲ್ ನಾಯಕರು, ನೀತಿ ರೂಪಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.&lt;/p&gt;&lt;p data-block-key="e2ekd"&gt;"ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೋಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಎಐ ತಂತ್ರಜ್ಞಾನ ಮೂಲಕ ನಮ್ಮ ನಗರದ ಸಂಚಾರ ಸಮಸ್ಯೆಗಳನ್ನು ನಿವಾರಿಸೋಣ. 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ನಾವು ಪರಿಹಾರ ಹುಡುಕುತ್ತಿದ್ದೇವೆ" ಎಂದು ಭರವಸೆ ನೀಡಿದರು.&lt;/p&gt;&lt;p data-block-key="bd0cb"&gt;&lt;a href="/karnataka/bengaluru-urban/government-orders-the-establishment-of-10000-bharat-jodo-yuva-sangha-in-karnataka-83660.html"&gt;ರಾಜ್ಯಾದ್ಯಂತ 10 ಸಾವಿರ ʻಭಾರತ್ ಜೋಡೋ ಯುವ ಸಂಘಗಳʼ ಸ್ಥಾಪನೆಗೆ ಸರ್ಕಾರ ಆದೇಶ; ಏನಿದರ ಉದ್ದೇಶ?&lt;/a&gt;&lt;/p&gt;&lt;p data-block-key="5422q"&gt;"ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕರ್ನಾಟಕ ಹಾಗೂ ದೇಶದ ಪ್ರಗತಿಗೆ ಶ್ರಮಿಸೋಣ. ಕರ್ನಾಟಕ ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ" ಎಂದು ಕರೆ ನೀಡಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಿಎಸ್‌ಐಗೆ ಪರಸ್ತ್ರೀ ವ್ಯಾಮೋಹ; ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆ ನಡೆಸಿದ ಪೊಲೀಸ್‌ ಅಧಿಕಾರಿ ಅರೆಸ್ಟ್‌</title><link>https://vishwavani.news/karnataka/bengaluru-urban/police-officer-arrested-for-attempting-to-assault-wife-and-uncle-in-bangalore-83712.html</link><guid>https://vishwavani.news/karnataka/bengaluru-urban/police-officer-arrested-for-attempting-to-assault-wife-and-uncle-in-bangalore-83712.html</guid><pubDate>Tue, 14 Jul 2026 10:08:41 +0000</pubDate><description>&lt;![CDATA[ಪತ್ನಿ ಮತ್ತು ಮಾವನ ಮೇಲೆಯೇ ಹಲ್ಲೆ ನಡೆಸಿರುವ ಪಿಎಸ್‌ಐ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Police_officer_arrest.original.jpg" class="attachment-large size-large wp-post-image" alt="ಪಿಎಸ್‌ಐಗೆ ಪರಸ್ತ್ರೀ ವ್ಯಾಮೋಹ; ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆ ನಡೆಸಿದ ಪೊಲೀಸ್‌ ಅಧಿಕಾರಿ ಅರೆಸ್ಟ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="fdh98"&gt;&lt;b&gt;ಬೆಂಗಳೂರು:&lt;/b&gt; ಉದ್ಯಮಿಯೊಬ್ಬರಿಗೆ 50 ಲಕ್ಷ ರೂ. ಬೇಡಿಕೆಯಿಟ್ಟು ಲೋಕಾಯುಕ್ತ ಟ್ರ‍್ಯಾಪ್‌ಗೆ ಒಳಗಾಗಿ ಸಸ್ಪೆಂಡ್ ಆಗಿದ್ದ ಪಿಎಸ್‌ಐ ವಿರುದ್ಧ ಇದೀಗ ಪತ್ನಿ ಮತ್ತು ಮಾವನ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿಗೆ ಪಿಎಸ್‌ಐ ಬೈರಪ್ಪ ಪತ್ನಿ ದೂರು ನೀಡಲು ಮುಂದಾಗಿದ್ದಾರೆ.&lt;/p&gt;&lt;p data-block-key="ahr9k"&gt;ಐದು ವರ್ಷದ ಹಿಂದೆ ಪಿಎಸ್‌ಐ ಬೈರಪ್ಪ ಜತೆ ಸಂತ್ರಸ್ತೆಯ ವಿವಾಹವಾಗಿತ್ತು. ಆರಂಭದಲ್ಲಿ ಮೂರು ವರ್ಷ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಇವರಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಅದಾದ ಬಳಿಕ ಮನೆಗೆ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದ. ಇದರ ಬಗ್ಗೆ ಪತ್ನಿ ಕುಟುಂಬಸ್ಥರಿಗೆ ತಿಳಿಸಿದ್ದರು. ಅಂದಿನಿಂದ ಕುಡಿದು ಬಂದು ಪತ್ನಿ ಜೊತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ನಾನು ಮದುವೆ ಆಗಿದ್ದೇ ನೀನು ಹಣ ತರ್ತಿಯಾ ಅಂತ. ನಿಮ್ಮ ಅಪ್ಪನ ಮನೆಯಿಂದ 50 ಲಕ್ಷ ರೂ. ಹಣ ತಂದುಕೊಡು. ಇಲ್ಲದಿದ್ದರೆ ನೀನು ಬೇಡ ಎಂದು ನಿತ್ಯ ಕಿರುಕುಳ ನೀಡಿ, ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.&lt;/p&gt;&lt;p data-block-key="9mu7j"&gt;ಇನ್ನು ಹೆಣ್ಣು ಮಗು ಹುಟ್ಟಿದ ಬಳಿಕ ಸುಖಾಸುಮ್ಮನೆ ಅನುಮಾನ ಪಟ್ಟು ನಿತ್ಯ ಕಿರುಕುಳ ನೀಡುತ್ತಿದ್ದ. ಗಲಾಟೆಯಾದಾಗ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಹೆಂಡತಿ-ಮಗುವನ್ನು ಬಿಟ್ಟು ಓಡಿಹೋಗುತ್ತಿದ್ದ. ಇದೀಗ ಗಲಾಟೆಯಾದ ಬಳಿಕ ಹೆಂಡತಿ ತಂದೆ ಮನೆಗೆ ಬಂದಿದ್ದಾರೆ.&lt;/p&gt;&lt;p data-block-key="f7fji"&gt;ಜುಲೈ 12ರಂದು ಮನೆಯಲ್ಲಿ ಗಲಾಟೆ ನಡೆದಾಗ ಬುದ್ಧಿ ಹೇಳಲು ಬಂದ ಮಾವನ ಮೇಲೆಯೇ ಮಚ್ಚು ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದ. ಈ ಸಂಬಂಧ ಪತ್ನಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು, ಪಿಎಸ್‌ಐ ಬೈರಪ್ಪನನ್ನು ಬಂಧಿಸಿದ್ದಾರೆ.&lt;/p&gt;&lt;p data-block-key="5apmh"&gt;ಆರಂಭದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಿದ್ದಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕ್ರೌರ್ಯ ಮೆರೆದ ಭೈರಪ್ಪ ವಿರುದ್ಧ ಕೆಂಗೇರಿ ಪೊಲೀಸರು ಅತ್ಯಂತ ಕಠಿಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನೇಪಾಳದಲ್ಲಿ ಮತ್ತೆ ಸಿಡಿದೆದ್ದ ಜೆನ್‌ ಝೀಗಳು; ತಾವೇ ಆಯ್ಕೆ ಮಾಡಿದ ಪ್ರಧಾನಿ ಬಾಲೇಂದ್ರ ಶಾ ವಿರುದ್ಧ ಬೀದಿಗಿಳಿದು ಹೋರಾಟ</title><link>https://vishwavani.news/foreign/gen-z-returns-to-the-streets-to-protest-against-nepals-prime-minister-just-months-after-his-election-83707.html</link><guid>https://vishwavani.news/foreign/gen-z-returns-to-the-streets-to-protest-against-nepals-prime-minister-just-months-after-his-election-83707.html</guid><pubDate>Tue, 14 Jul 2026 10:04:33 +0000</pubDate><description>&lt;![CDATA[Gen Z Returns to the Streets: ನೇಪಾಳದ ಪ್ರಧಾನಿ ಬಾಲೇಂದ್ರ ಶಾ ನೇತೃತ್ವದ ಸರ್ಕಾರದ ವಿರುದ್ಧ ಯುವ ಜನತೆ ಮತ್ತೆ ಪ್ರತಿಭಟನೆ ನಡೆಸುತ್ತಿದೆ. ದೇಶದ ಬಹುಪಾಲು ಯುವ ಜನರು ಮತ್ತೆ ಕಾಠ್ಮಂಡು ಬೀದಿಗಿಳಿದಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gen_Z_Returns_to_the_Streets.original.jpg" class="attachment-large size-large wp-post-image" alt="ನೇಪಾಳದಲ್ಲಿ ಮತ್ತೆ ಸಿಡಿದೆದ್ದ ಜೆನ್‌ ಝೀಗಳು; ತಾವೇ ಆಯ್ಕೆ ಮಾಡಿದ ಪ್ರಧಾನಿ ಬಾಲೇಂದ್ರ ಶಾ ವಿರುದ್ಧ ಬೀದಿಗಿಳಿದು ಹೋರಾಟ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="du34c"&gt;&lt;b&gt;ಕಾಠ್ಮಂಡು, ಜು. 14:&lt;/b&gt; ಕಳೆದ ವಾರ ನೇಪಾಳದ ರಾಜಧಾನಿ ಕಾಠ್ಮಂಡು (Kathmandu) ಪೊಲೀಸರು ಬೈಕ್‌ನ ಟೈರ್ ಲಾಕ್ ಮಾಡಿದ ನಂತರ 25 ವರ್ಷದ ರೈಡ್-ಶೇರಿಂಗ್ ಚಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಪ್ರಧಾನಿ ಬಾಲೇಂದ್ರ (ಬಾಲೆನ್) ಶಾ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಮತ್ತೆ ಕಾರಣವಾಗಿದೆ. ಘಟನೆಯನ್ನು ವಿರೋಧಿಸಿ ದೇಶದ ಬಹುಪಾಲು ಜೆನ್‌ ಝೀ ಪ್ರತಿಭಟನಾಕಾರರು ಮತ್ತೆ ಕಾಠ್ಮಂಡು ಬೀದಿಗಳಿದಿದ್ದಾರೆ &lt;a href="https://vishwavani.news/foreign/nepal-gen-z-protest-how-did-it-bring-about-change-in-nepal-54882.html"&gt;&lt;b&gt;(Gen Z Protest in Nepal)&lt;/b&gt;&lt;/a&gt;. ಈ ಘಟನೆಯ ಬಗ್ಗೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದಾರೆ. ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಇನ್ನೂ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಅಸಮಾಧಾನ ಹೆಚ್ಚುತ್ತಿದೆ.&lt;/p&gt;&lt;p data-block-key="dj89p"&gt;ಕಾಠ್ಮಂಡು ಬೀದಿಯಲ್ಲಿ ರೈಡ್-ಶೇರಿಂಗ್ ಚಾಲಕ ಗಣೇಶ್ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಪೊಲೀಸರು ಹಠಾತ್ತನೆ ಆಗಮಿಸಿ ಆತನ ಬೈಕ್‌ನ ಟೈರ್‌ಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಗಣೇಶ್ ತನ್ನ ದೇಹದ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಸುಟ್ಟ ಗಾಯಗಳಿಂದ ಬಳಲಿದ್ದ ಅವರು ಮೃತಪಟ್ಟರು. ಈ ಘಟನೆ ಸರ್ಕಾರ ಮತ್ತು ಆಡಳಿತದ ವಿರುದ್ಧ ಬಹುಕಾಲದಿಂದ ಕುದಿಯುತ್ತಿದ್ದ ಜನರ ಆಕ್ರೋಶವನ್ನು ಮತ್ತೆ ತಾರಕಕ್ಕೇರಿಸಿದೆ.&lt;/p&gt;&lt;h3 data-block-key="25ojc"&gt;&lt;b&gt;ವೈರಲ್‌ ವಿಡಿಯೊ ಇಲ್ಲಿದೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Now GenZ of Nepal are protesting against their PM Balen Shah, who became PM using the same GenZ protest a few months ago...&lt;br&gt;&lt;br&gt;Some morons want a same GenZ &amp;quot;revolution&amp;quot; in India...  &lt;a href="https://t.co/AyA6vo3mbX"&gt;pic.twitter.com/AyA6vo3mbX&lt;/a&gt;&lt;/p&gt;&amp;mdash; Mr Sinha (@Mrsinha) &lt;a href="https://x.com/Mrsinha/status/2076909090052403498?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="b8sdo"&gt;ಕಾಠ್ಮಂಡು ಸರ್ಕಾರಿ ಕಚೇರಿ ಸಿಂಗ್‌ದರ್ಬಾರ್ ಸಚಿವಾಲಯದ ಹೊರಗೆ ನೂರಾರು ಜನರು ಬೀದಿಗಿಳಿದರು. 'ಬಡವರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಿ', 'ಮಾನವ ಹಕ್ಕುಗಳನ್ನು ಗೌರವಿಸಿ' ಮುಂತಾದ ಘೋಷಣೆ ಮೊಳಗಿದವು. ಪ್ರತಿಭಟನಾಕಾರರ ಅಕ್ರಮ ಬಂಧನ ನಿಲ್ಲಿಸುವಂತೆ ಮತ್ತು ಬಾಲೆನ್ ಶಾ ವಲಸಿಗರಿಗೆ ಆಶ್ರಯ ನೀಡಬೇಕೆಂದು ಆಡಳಿತವನ್ನು ಪ್ರತಿಭಟನಾಕಾರರು ಆಗ್ರಹಿಸಿದವು.&lt;/p&gt;&lt;p data-block-key="2nlhj"&gt;&lt;a href="https://vishwavani.news/foreign/nepal-pm-border-dispute-with-india-will-be-resolved-through-diplomacy-79676.html"&gt;&lt;b&gt;ಭಾರತದೊಂದಿಗಿನ ಗಡಿ ಸಮಸ್ಯೆ ರಾಜತಾಂತ್ರಿಕತೆಯ ಮೂಲಕ ಪರಿಹರಿಸಲಾಗುವುದು: ನೇಪಾಳ ಪ್ರಧಾನಿ&lt;/b&gt;&lt;/a&gt;&lt;/p&gt;&lt;p data-block-key="5h2of"&gt;2022ರಲ್ಲಿ ಬಾಲೇಂದ್ರ ಶಾ ಮೇಯರ್ ಆಗಿ ಆಯ್ಕೆಯಾದಾಗಿನಿಂದ ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಪೊಲೀಸರ ಆಕ್ರಮಣಕಾರಿ ನಿಲುವು ತೀವ್ರಗೊಂಡಿದೆ. ಮೇಯರ್ ಆಗಿ ಶಾ ನಗರ ನಿರ್ವಹಣೆಗೆ, ವಿಶೇಷವಾಗಿ ಪಾದಚಾರಿ ಮಾರ್ಗಗಳು ಮತ್ತು ಅನೌಪಚಾರಿಕ ಬೀದಿ ಮಾರುಕಟ್ಟೆಗಳ ತೆರವು ಸೇರಿ ನಗರ ನಿರ್ವಹಣೆಯಲ್ಲಿ ಕಠಿಣ ನಿಲುವು ಅನುಸರಿಸಿದ್ದಾರೆ. ಜತೆಗೆ ನದಿತೀರದಲ್ಲಿರುವ ಅತಿಕ್ರಮಣದ ಗುಡಿಸಲು ತೆರವುಗೊಳಿಸುವುದು ಕೂಡ ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು.&lt;/p&gt;&lt;p data-block-key="3na6f"&gt;ಈ ಅತಿಕ್ರಮಣ ವಿರೋಧಿ ಅಭಿಯಾನಗಳು ಹಲವರು ಅಸಮಾಧಾ ಮೂಡಿಸಿದ್ದವು. ಹೀಗೆ ವರ್ಷಗಳಿಂದ ಮಡುಗಟ್ಟಿದ್ದ ರೋಷ ಇದೀಗ ಪ್ರತಿಭಟನೆಯ ರೂಪದಲ್ಲಿ ಸಿಡಿದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!</title><link>https://vishwavani.news/sports/cricket/%CA%BBrcb-coach-andy-flower-will-not-leave-ipl-to-join-england-test-team%CA%BC-says-dinesh-karthik-83710.html</link><guid>https://vishwavani.news/sports/cricket/%CA%BBrcb-coach-andy-flower-will-not-leave-ipl-to-join-england-test-team%CA%BC-says-dinesh-karthik-83710.html</guid><pubDate>Tue, 14 Jul 2026 09:50:43 +0000</pubDate><description>&lt;![CDATA[ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಹೆಡ್‌ ಕೋಚ್‌ ಆಗುವ ಸಂಭಾವ್ಯ ವ್ಯಕ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಡ್‌ ಕೋಚ್‌ ಆಂಡಿ ಫ್ಲವರ್‌ ಕೂಡ ಒಬ್ಬರು. ಆದರೆ, ಆರ್‌ಸಿಬಿ ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Dinesh_Karthik_w72yd62.original.jpg" class="attachment-large size-large wp-post-image" alt="ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vw53w"&gt;&lt;b&gt;ನವದೆಹಲಿ:&lt;/b&gt; ಇಂಗ್ಲೆಂಡ್‌ ಟೆಸ್ಟ್‌ ತಂಡದ ಹೆಡ್‌ ಕೋಚ್‌ ಹುದ್ದೆ ಸದ್ಯ ಖಾಲಿ ಇದೆ ಹಾಗೂ ಈ ಹುದ್ದೆಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಅಕಾಡೆಮಿ ಸೂಕ್ತ ವ್ಯಕ್ತಿಯನ್ನು ನೇಮಿಸಲು ಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಹಲವು ಮಾಜಿ ಕ್ರಿಕೆಟಿಗರು ಈ ರೇಸ್‌ನಲ್ಲಿದ್ದಾರೆ. ಇದರ ಜೊತೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಡ್‌ ಕೋಚ್‌ ಹಾಗೂ ಜಿಂಬಾಬ್ವೆ ದಿಗ್ಗಜ ಆಂಡಿ ಫ್ಲವರ್‌ (Andy Flower) ಕೂಡ ಇದ್ದಾರೆ. ನಾಸೆರ್‌ ಹುಸೇನ್‌ ಅವರು ಕೂಡ, ಆಂಡಿ ಫ್ಲವರ್‌ಗೆ ಈ ಹುದ್ದೆಯನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದರಂತೆ ಆರ್‌ಸಿಬಿಯನ್ನು ಎರಡು ಬಾರಿ ಚಾಂಪಿಯನ್ಸ್‌ ಮಾಡಿರುವ ಆಂಡಿ ಫ್ಲವರ್‌ ಇದೀಗ ಬೆಂಗಳೂರು ಫ್ರಾಂಚೈಸಿಯನ್ನು ತೊರೆಯುತ್ತಾರಾ? ಅಥವಾ ಆರ್‌ಸಿಬಿ ತಂಡದಲ್ಲಿಯೇ ಮುಂದುವರಿಯುತ್ತಾರಾ ಎಂಬ ಬಗ್ಗೆ ಅಭಿಮಾನಿಗಳಿಗೆ ಗೊಂದಲವಾಗಿದೆ. ಈ ಬಗ್ಗೆ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p data-block-key="4stnp"&gt;ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಆಂಡಿ ಫ್ಲವರ್‌ ಅವರು ಹೆಡ್‌ ಕೋಚ್‌ ಆಗುವ ಸಾಧ್ಯತೆ ತೀರಾ ವಿರಳ ಎಂದು ಹೇಳಿದ ಭಾರತದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಎರಡು ಬಾರಿ ಚಾಂಪಿಯನ್ಸ್‌ ಆರ್‌ಸಿಬಿ ತಂಡವನ್ನು ಫ್ಲವರ್‌ ತೊರೆಯುವ ಸಂಭವ ಬರುವುದೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p data-block-key="b780r"&gt;"ಈ ವಿಚಾರದ ಬಗ್ಗೆ ನಾವು ಗಂಭೀರವಾಗಿ ಹೇಳುವುದಾದರೆ, ಆ ಜವಾಬ್ದಾರಿಗೆ ಅವರು ಅತ್ಯುತ್ತಮ ಅಭ್ಯರ್ಥಿಯಾಗಲಿದ್ದಾರೆ ಎಂದು ನಾನು ನಂಬುತ್ತೇನೆ," ಎಂದು ದಿನೇಶ್ ಕಾರ್ತಿಕ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.&lt;/p&gt;&lt;p data-block-key="7ofrp"&gt;&lt;a href="/sports/cricket/nasser-hussain-backs-rcb-coach-andy-flower-to-replace-mccullum-as-englands-head-coach-role-83649.html"&gt;&lt;b&gt;ಇಂಗ್ಲೆಂಡ್‌ಗೆ ಕರೆತರಲು ಆರ್‌ಸಿಬಿ ಹೆಡ್‌ ಕೋಚ್‌ ಆಂಡಿ ಫ್ಲವರ್‌ ಮೇಲೆ ಕಣ್ಣಾಕಿದ ನಾಸೆರ್‌ ಹುಸೇನ್‌!&lt;/b&gt;&lt;/a&gt;&lt;/p&gt;&lt;p data-block-key="78utv"&gt;"ಖಂಡಿತವಾಗಿಯೂ ಅವರ ಹೆಸರನ್ನು ಈ ಹುದ್ದೆಗೆ ಪರಿಗಣಿಸಬೇಕು. ಆದರೆ ಇಂಗ್ಲೆಂಡ್ ತಂಡದ ಈಗಿನ ಪರಿಸ್ಥಿತಿ ಹಾಗೂ ಅವರ ಈಗಾಗಲೇ ತುಂಬಾ ಬ್ಯುಸಿ ವೇಳಾಪಟ್ಟಿಯನ್ನು ಗಮನಿಸಿದರೆ, ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಈ ಹುದ್ದೆಯನ್ನು ಸ್ವೀಕರಿಸಿದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.&lt;/p&gt;&lt;p data-block-key="3s2dg"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Andy Flower to England? DK drops a big hint!&lt;br&gt;Dinesh Karthik says while Flower is a top candidate for England&amp;#39;s Test coach role, his long-term commitment and packed schedule with RCB make it highly unlikely. Availability remains the biggest hurdle! &lt;a href="https://x.com/hashtag/RCB?src=hash&amp;amp;ref_src=twsrc%5Etfw"&gt;#RCB&lt;/a&gt; &lt;a href="https://x.com/hashtag/Cricket?src=hash&amp;amp;ref_src=twsrc%5Etfw"&gt;#Cricket&lt;/a&gt; &lt;a href="https://x.com/hashtag/dineshkarthik?src=hash&amp;amp;ref_src=twsrc%5Etfw"&gt;#dineshkarthik&lt;/a&gt; &lt;a href="https://t.co/e5Ojyz91nH"&gt;pic.twitter.com/e5Ojyz91nH&lt;/a&gt;&lt;/p&gt;&amp;mdash; Cricket Updates (@arman7590) &lt;a href="https://x.com/arman7590/status/2076646520028606639?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="d1nbn"&gt;&lt;/p&gt;&lt;p data-block-key="buici"&gt;ಇತ್ತೀಚಿನ ವರ್ಷಗಳಲ್ಲಿ ಆಂಡಿ ಫ್ಲವರ್ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಮುಖ್ಯವಾಗಿ ಫ್ರಾಂಚೈಸಿ ಕ್ರಿಕೆಟ್‌ಗೆ ಮೀಸಲಿಟ್ಟಿರುವುದನ್ನು ಉಲ್ಲೇಖಿಸಿದ ದಿನೇಶ್ ಕಾರ್ತಿಕ್, ಅವರ ಈಗಿನ ಬದ್ಧತೆಗಳಿಗೆ ಹೊಂದಿಕೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ವ್ಯವಸ್ಥೆ ಅವಕಾಶ ಕಲ್ಪಿಸುವುದು ವಾಸ್ತವಿಕವಾಗಿ ಸಾಧ್ಯವೇ ಎಂಬ ಪ್ರಶ್ನೆ ಎತ್ತಿದರು. ವಿಶೇಷವಾಗಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಗಳು ಕೆಲವೊಮ್ಮೆ ಒಂದಕ್ಕೊಂದು ಹೊಂದಿಕೆಯಾಗುವ ಹಿನ್ನೆಲೆಯಲ್ಲಿ ಇದು ಸವಾಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.&lt;/p&gt;&lt;p data-block-key="5croo"&gt;&lt;a href="/sports/brendon-mccullum-steps-down-as-england-test-coach-83545.html"&gt;&lt;b&gt;ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬ್ರೆಂಡನ್ ಮೆಕಲಮ್&lt;/b&gt;&lt;/a&gt;&lt;/p&gt;&lt;p data-block-key="b6l2a"&gt;"ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಐಪಿಎಲ್‌ಗೆ ಆದ್ಯತೆ ನೀಡಲು ಹಾಗೂ ಅದರ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಸಿದ್ಧವಾಗಿದೆ ಎಂಬ ಲೇಖನವೊಂದನ್ನು ನಾನು ಓದಿದ್ದೆ. ಆದರೆ ಈಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ನೋಡಿದರೆ ಅದು ಅಷ್ಟು ಸುಲಭದ ವಿಷಯವಲ್ಲ. ಜೇಕಬ್ ಬೆಥೆಲ್ ಮೊದಲ ಟೆಸ್ಟ್‌ಗೆ ಲಭ್ಯವಾಗದಿದ್ದಾಗ ಅಥವಾ ಜೋಫ್ರಾ ಆರ್ಚರ್ ತಂಡದಲ್ಲಿರದಿದ್ದಾಗ ಸಾಕಷ್ಟು ಚರ್ಚೆ ನಡೆಯಿತು. 'ಏಕೆ? ಪ್ರಮುಖ ಆಟಗಾರ ತಂಡದಲ್ಲಿಲ್ಲವೇ?' ಎಂಬ ಪ್ರಶ್ನೆಗಳನ್ನು ಅನೇಕರು ಎತ್ತಿದ್ದರು," ಎಂದು ಕಾರ್ತಿಕ್ ಹೇಳಿದ್ದಾರೆ.&lt;/p&gt;&lt;h3 data-block-key="ccpj9"&gt;&lt;b&gt;ಆರ್‌ಸಿಬಿ ತಂಡವನ್ನು ಆಂಡಿ ಫ್ಲವರ್‌ ಏಕೆ ತೊರೆಯಬೇಕು?&lt;/b&gt;&lt;/h3&gt;&lt;p data-block-key="31jjs"&gt;"ಆಂಡಿ ಫ್ಲವರ್ ಈಗಾಗಲೇ ಆರ್‌ಸಿಬಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಅವರು ಕೆಲವು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗದೇ ಇರಬಹುದು. ಆಶಸ್ ಸರಣಿಯಂತಹ ಮಹತ್ವದ ಟೂರ್ನಿಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳಿಗೆ ಮುಖ್ಯ ಕೋಚ್ ತಂಡದೊಂದಿಗೆ ಇಲ್ಲದಿದ್ದರೆ, ಅದನ್ನು ಇಂಗ್ಲೆಂಡ್ ಒಪ್ಪಿಕೊಳ್ಳುತ್ತದೆಯೇ?" ಎಂದು ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ.&lt;/p&gt;&lt;p data-block-key="f86i"&gt;"ಮುಂದಿನ ವರ್ಷದ ಮೇ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಪಂದ್ಯವಿದೆ ಎಂದು ಕೇಳಿದ್ದೇನೆ. ಅದೇ ಸಮಯದಲ್ಲಿ ಆಂಡಿ ಫ್ಲವರ್ ಆರ್‌ಸಿಬಿಯೊಂದಿಗೆ ಐಪಿಎಲ್‌ನಲ್ಲಿ ನಿರತರಾಗಿದ್ದರೆ, ಅದು ಕೂಡ ಇಂಗ್ಲೆಂಡ್‌ಗೆ ಒಂದು ದೊಡ್ಡ ಸವಾಲಾಗಬಹುದು," ಎಂದು ಆರ್‌ಸಿಬಿ ಮೆಂಟರ್‌ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಿಎಫ್ ಬಡ್ಡಿ ಮೊತ್ತ ಖಾತೆಗೆ ಜಮೆಯಾಗಿದೆಯೇ? ಪರಿಶೀಲಿಸುವುದು ಎಲ್ಲಿ, ಹೇಗೆ?</title><link>https://vishwavani.news/commerce/pf-interest-amount-been-credited-to-the-account-where-and-how-to-check-83709.html</link><guid>https://vishwavani.news/commerce/pf-interest-amount-been-credited-to-the-account-where-and-how-to-check-83709.html</guid><pubDate>Tue, 14 Jul 2026 09:47:52 +0000</pubDate><description>&lt;![CDATA[ಭವಿಷ್ಯ ನಿಧಿ ಖಾತೆ ಹೊಂದಿರುವ ಎಲ್ಲರಿಗೂ ಜುಲೈ 15ರೊಳಗೆ ಪಿಎಫ್ ಮೊತ್ತದ ಬಡ್ಡಿಯನ್ನು ಪಾವತಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಎಷ್ಟು ಬಡ್ಡಿ ಮೊತ್ತ ಪಾವತಿಯಾಗಿದೆ, ಇದನ್ನು ಪರಿಶೀಲಿಸುವುದು ಹೇಗೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/pfg.original.jpg" class="attachment-large size-large wp-post-image" alt="ಪಿಎಫ್ ಬಡ್ಡಿ ಮೊತ್ತ ಖಾತೆಗೆ ಜಮೆಯಾಗಿದೆಯೇ? ಪರಿಶೀಲಿಸುವುದು ಎಲ್ಲಿ, ಹೇಗೆ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hrpgy"&gt;&lt;b&gt;ಬೆಂಗಳೂರು:&lt;/b&gt; ದೇಶಾದ್ಯಂತ ಇರುವ ಸುಮಾರು 34 ಕೋಟಿ ಜನರ ಭವಿಷ್ಯ ನಿಧಿ ಖಾತೆಗೆ ಬಡ್ಡಿ ಮೊತ್ತವನ್ನು ಜುಲೈ 15ರೊಳಗೆ ಜಮೆ ಮಾಡಲಾಗುವುದು. ಹೀಗಾಗಿ ಆ ಬಳಿಕ ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳು ಬಡ್ಡಿ ಮೊತ್ತ ತಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಈ ಕುರಿತು 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಮಾಹಿತಿ ನೀಡಿದ  ಕೇಶವ್ ಪ್ರಸಾದ್ ಅವರು ಈ ಬಾರಿ ಒಟ್ಟು 1.44  ಕೋಟಿ ರೂಪಾಯಿಗೂ ಅಧಿಕ ಪಿಎಫ್ ಬಡ್ಡಿ ಮೊತ್ತವು 34 ಕೋಟಿ ಜನರ ಖಾತೆಗೆ ಜಮೆಯಾಗಲಿದೆ. ೨೦೨೬ರ ಹೊಸ ನಿಯಮದ ಅನ್ವಯ ಒಟ್ಟು ಪಿಎಫ್ ನಿಧಿಯ ಶೇ. 75ರಷ್ಟನ್ನು ಉದ್ಯೋಗಿಗಳು ನೇರವಾಗಿ ಯುಪಿಐ ಮೂಲಕ ಪಡೆಯಬಹುದಾಗಿದೆ. ದೇಶಾದ್ಯಂತ ಇರುವ 9 ಕೋಟಿ ಪಿಎಫ್ ಖಾತೆಗಳು ಮಾತ್ರ ಚಾಲ್ತಿಯಲ್ಲಿದೆ. ಉಳಿದ ಸದಸ್ಯರು ಯುಎಎನ್ ಆಧಾರಿತ ಖಾತೆಗಳಿಗೆ ಜೋಡಿಸುವಂತೆ ಸೂಚಿಸಿದೆ. ಅಲ್ಲದೇ ಜುಲೈ 15ರ ಬಳಿಕ ಪಿಎಫ್ ನ ಅಧಿಕೃತ ವೆಬ್ ಸೈಟ್ ಅಥವಾ ಉಮಂಗ್ ಆಪ್ ಮೂಲಕವೂ ಪಿಎಫ್ ಖಾತೆಗೆ ಜಮೆ ಆಗಿರುವ ಬಡ್ಡಿ ಮೊತ್ತವನ್ನು ಪರಿಶೀಲಿಸಬಹುದಾಗಿದೆ ಎಂದು ಅವರು ಹೇಳಿದರು. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌</title><link>https://vishwavani.news/sports/england-wins-the-toss-and-opts-to-bat-first-83708.html</link><guid>https://vishwavani.news/sports/england-wins-the-toss-and-opts-to-bat-first-83708.html</guid><pubDate>Tue, 14 Jul 2026 09:41:55 +0000</pubDate><description>&lt;![CDATA[ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿರುವ ಪಿಚ್ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮನಾದ ಸ್ಪರ್ಧೆಯನ್ನು ಒದಗಿಸುತ್ತದೆ. ಮೇಲ್ಮೈಯಿಂದ ಬೌನ್ಸ್ ಮತ್ತು ಕ್ಯಾರಿ ಸ್ಥಿರವಾಗಿರುತ್ತದೆ, ಇದು ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಸಣ್ಣ ನೇರ ಬೌಂಡರಿಗಳು ದೊಡ್ಡ ಸ್ಕೋರಿಂಗ್‌ಗೆ ಅವಕಾಶ ನೀಡುತ್ತವೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/England_vs_India_1st_ODI.original.jpg" class="attachment-large size-large wp-post-image" alt="ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="03r0q"&gt;&lt;b&gt;ಬರ್ಮಿಂಗ್‌ಹ್ಯಾಮ್‌, ಜು.14:&lt;/b&gt; ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಕೈಗೊಂಡಿದೆ. ಪಂದ್ಯಕ್ಕೂ ಮುನ್ನ ದಿನವೇ ಇಂಗ್ಲೆಂಡ್‌ ತನ್ನ ಆಡುವ ಬಳಗ ಪ್ರಟಿಸಿದ್ದ ಕಾರಣ ಭಾರತದ ಪ್ಲೇಯಿಂಗ್‌ ಇಲೆವೆನ್‌ ಬಗ್ಗೆ ಮಾತ್ರ ಕುತೂಹಲವಿತ್ತು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಮತ್ತು ರಾಹುಲ್‌ ಮತ್ತೆ ತಂಡಕ್ಕೆ ಮರಳಿದರು.&lt;/p&gt;&lt;p data-block-key="aif3n"&gt;ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿರುವ ಪಿಚ್ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮನಾದ ಸ್ಪರ್ಧೆಯನ್ನು ಒದಗಿಸುತ್ತದೆ. ಮೇಲ್ಮೈಯಿಂದ ಬೌನ್ಸ್ ಮತ್ತು ಕ್ಯಾರಿ ಸ್ಥಿರವಾಗಿರುತ್ತದೆ, ಇದು ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಸಣ್ಣ ನೇರ ಬೌಂಡರಿಗಳು ದೊಡ್ಡ ಸ್ಕೋರಿಂಗ್‌ಗೆ ಅವಕಾಶ ನೀಡುತ್ತವೆ.&lt;/p&gt;&lt;p data-block-key="es8b8"&gt;ಕೊಹ್ಲಿ ಮತ್ತು ರೋಹಿತ್ ಜೊತೆಗೆ ದೇಶದ ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ನಾಯಕ ಶುಭಮನ್ ಗಿಲ್, ವಿಕೆಟ್‌ ಕೀಪರ್–ಬ್ಯಾಟರ್ ಕೆ.ಎಲ್‌.ರಾಹುಲ್ ಅವರೂ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಇದು ಸಹಜವಾಗಿಯೇ ತಂಡವನ್ನು ಬಲಿಷ್ಠಗೊಳಿಸಿದೆ. ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿ ವಿದಾಯ ಹೇಳಲು ಬಯಸಿರುವ ಈ ದಿಗ್ಗಜ ಆಟಗಾರರ ಪಾಲಿಗೆ ಪ್ರತಿಯೊಂದು ಸರಣಿಯೂ ಸತ್ವಪರೀಕ್ಷೆ.&lt;/p&gt;&lt;p data-block-key="3mh40"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;A look at &lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt;&amp;#39;s Playing XI &lt;br&gt;&lt;br&gt;Updates ▶️ &lt;a href="https://t.co/2sg194tpxH"&gt;https://t.co/2sg194tpxH&lt;/a&gt; &lt;a href="https://x.com/hashtag/ENGvIND?src=hash&amp;amp;ref_src=twsrc%5Etfw"&gt;#ENGvIND&lt;/a&gt; &lt;a href="https://t.co/J6HYlKXV1l"&gt;pic.twitter.com/J6HYlKXV1l&lt;/a&gt;&lt;/p&gt;&amp;mdash; BCCI (@BCCI) &lt;a href="https://x.com/BCCI/status/2076966192334647481?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;h3 data-block-key="do09k"&gt;&lt;b&gt;ಭಾರತ ಆಡುವ ಬಳಗ&lt;/b&gt;&lt;/h3&gt;&lt;p data-block-key="f7r8q"&gt;ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.&lt;/p&gt;&lt;p data-block-key="1jl3q"&gt;&lt;a href="/sports/icc-targets-2030-qualification-pathway-for-afghan-refugee-womens-team-83704.html"&gt;ಆಫ್ಘಾನ್ ನಿರಾಶ್ರಿತರ ಮಹಿಳಾ ಕ್ರಿಕೆಟ್‌ ತಂಡಕ್ಕೆ ಐಸಿಸಿಯಿಂದ ಶುಭ ಸುದ್ದಿ&lt;/a&gt;&lt;/p&gt;&lt;h3 data-block-key="3m8pi"&gt;ಇಂಗ್ಲೆಂಡ್‌ ಆಡುವ ಬಳಗ&lt;/h3&gt;&lt;p data-block-key="c74c3"&gt;ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಮತ್ತು ಆದಿಲ್ ರಶೀದ್.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಏನಾಗ್ತಿದೆ ದೇಶದಲ್ಲಿ? ಮಹಿಳೆಗೆ ಚುಡಾಯಿಸಿದ್ದನ್ನು ವಿರೋಧಿಸಿದ ಕುಟುಂಬವನ್ನು 15 ಕಿಲೋ ಮೀಟರ್‌ ಬೆನ್ನಟ್ಟಿ ಹಲ್ಲೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌</title><link>https://vishwavani.news/viral/tourist-woman-harassed-the-family-that-objected-was-attacked-by-the-miscreants-83703.html</link><guid>https://vishwavani.news/viral/tourist-woman-harassed-the-family-that-objected-was-attacked-by-the-miscreants-83703.html</guid><pubDate>Tue, 14 Jul 2026 09:41:47 +0000</pubDate><description>&lt;![CDATA[Viral Video: ಮಹಾರಾಷ್ಟ್ರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಜಲಪಾತ ವೀಕ್ಷಿಸಲು ಬಂದಿದ್ದ ಮಹಿಳೆಗೆ ಕೆಲವು ಯುವಕರು ಚುಡಾಯಿಸಿದ್ದಾರೆ. ಆದರೆ ಇದನ್ನು ಪ್ರಶ್ನಿಸಿದವರನ್ನು ಸುಮಾರು 15 ಕಿ.ಮೀ. ಬೆನ್ನಟ್ಟಿ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ‌. ಈ ಘಟನೆಯ ದೃಶ್ಯ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Maharashtra_news_14.original.jpg" class="attachment-large size-large wp-post-image" alt="ಏನಾಗ್ತಿದೆ ದೇಶದಲ್ಲಿ? ಮಹಿಳೆಗೆ ಚುಡಾಯಿಸಿದ್ದನ್ನು ವಿರೋಧಿಸಿದ ಕುಟುಂಬವನ್ನು 15 ಕಿಲೋ ಮೀಟರ್‌ ಬೆನ್ನಟ್ಟಿ ಹಲ್ಲೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="djxbl"&gt;&lt;b&gt;ಮುಂಬೈ, ಜು. 14&lt;/b&gt;: ಇತ್ತೀಚೆಗೆ ಮಹಿಳೆಯರ ಮೇಲಿನ ಕಿರುಕುಳ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಜಲಪಾತ ವೀಕ್ಷಿಸಲು ಪ್ರವಾಸ ಬಂದಿದ್ದ ಮಹಿಳೆಯನ್ನು ಕೆಲವು ಯುವಕರು ಚುಡಾಯಿಸಿದ್ದಾರೆ. ಬಳಿಕ ಇದನ್ನು ಪ್ರಶ್ನಿಸಿದ ಕುಟುಂಬವೊಂದರ ಕಾರನ್ನು ಸುಮಾರು 15 ಕಿಲೋ ಮೀಟರ್‌ನಷ್ಟು ಹಿಂಬಾಲಿಸಿ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ‌. ಕಾರನ್ನು ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಈ ಘಟನೆಯ ದೃಶ್ಯ ವೈರಲ್ &lt;a href="/viral/owner-risked-his-life-to-save-car-amid-floods-watch-video-83169.html"&gt;&lt;b&gt;(Viral News)&lt;/b&gt;&lt;/a&gt; ಆಗಿದ್ದು, ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.&lt;/p&gt;&lt;p data-block-key="d5njc"&gt;ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾವಲಿ ಅಣೆಕಟ್ಟು ಮತ್ತು ಜಲಪಾತ ವೀಕ್ಷಿಸಲು ಪ್ರವಾಸಿಗರು ಕುಟುಂಬ ಸಮೇತ ಆಗಮಿಸಿದ್ದರು. ಈ ಕುಟುಂಬದ ಮಹಿಳೆಯೊಬ್ಬರಿಗೆ ಯುವಕರ ಗುಂಪು ಅಸಹ್ಯವಾಗಿ ಚುಡಾಯಿಸಿದ್ದಾರೆ. ಇದನ್ನು ಕುಟುಂಬಸ್ಥರು ಪ್ರಶ್ನಿಸಿದ್ದು, ಮೊದಲು ಮಾತಿನ ಚಕಮಕಿ ನಡೆದು ನಂತರ ಇದು ದೈಹಿಕ ಹಲ್ಲೆಗೂ ಕಾರಣವಾಯ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಪ್ರವಾಸಿಗರ ಕಾರನ್ನು ಸುಮಾರು 15 ಕಿಲೋ ಮೀಟರ್‌ವರೆಗೆ ಬೆನ್ನಟ್ಟಿ ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿದ್ದಾರೆ.&lt;/p&gt;&lt;h3 data-block-key="4rnbj"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="mr" dir="ltr"&gt;&lt;a href="https://x.com/hashtag/Nashik?src=hash&amp;amp;ref_src=twsrc%5Etfw"&gt;#Nashik&lt;/a&gt;: इगतपुरीच्या भावली धबधब्यावर पर्यटक कुटुंबावर जीवघेणा हल्ला आणि महिलेचा विनयभंग; ७ अज्ञात संशयितांवर गुन्हा दाखल.&lt;br&gt;&lt;br&gt;बंदी उठवल्यानंतर अवघ्या दोन दिवसांतच ही गंभीर घटना घडल्याने खळबळ उडाली आहे. वाद झाल्यानंतर संशयितांनी पाठलाग करून मुंबई-आग्रा राष्ट्रीय महामार्गावर कुटुंबाला… &lt;a href="https://t.co/Q56sAJqwcU"&gt;pic.twitter.com/Q56sAJqwcU&lt;/a&gt;&lt;/p&gt;&amp;mdash; DD Sahyadri News | सह्याद्री बातम्या (@ddsahyadrinews) &lt;a href="https://x.com/ddsahyadrinews/status/2076859905710202904?ref_src=twsrc%5Etfw"&gt;July 14, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1qkck"&gt;ಪೊಲೀಸರ ಪ್ರಕಾರ, ಈ ದುಷ್ಕರ್ಮಿಗಳ ಗುಂಪು ಪ್ರವಾಸಿ ಮಹಿಳೆಯೊಬ್ಬರ ಬಳಿ ಬಂದು ಶಿಳ್ಳೆ ಹೊಡೆದು ಕಿರುಕುಳ ನೀಡಿದೆ. ಇದನ್ನು ಮಹಿಳೆಯ ಸಂಬಂಧಿಕರು ಪ್ರಶ್ನಿಸಿದ್ದು, ಈ ವಾಗ್ವಾದ ದೈಹಿಕ ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ಧಂತೆ ಪ್ರವಾಸಿಗರು ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ದುಷ್ಕರ್ಮಿಗಳು ಬಿಳಿ ಬಲೆನೊ ಕಾರ್‌ ಮತ್ತು ಬೈಕ್ ಮೂಲಕ ಹೆದ್ದಾರಿಯಲ್ಲಿ ಸುಮಾರು 15 ಕಿಲೋ ಮೀಟರ್ ಬೆನ್ನಟ್ಟಿದ್ದಾರೆ.&lt;/p&gt;&lt;p data-block-key="9ok18"&gt;&lt;a href="/viral/77-year-old-mother-takes-care-of-hundreds-of-monkeys-81864.html"&gt;&lt;b&gt;ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ&lt;/b&gt;&lt;/a&gt;&lt;/p&gt;&lt;p data-block-key="2fnr6"&gt;ಬೆನ್ನಟ್ಟುವ ಸಮಯದಲ್ಲಿ ದುಷ್ಕರ್ಮಿಗಳು ಪ್ರವಾಸಿಗರ ಕಾರಿನ ಮೇಲೆ ಕಬ್ಬಿಣದ ರಾಡ್‌ಗಳನ್ನು ಎಸೆದು ಕಿಟಕಿ ಗಾಜುಗಳು ಒಡೆದು ಅಪಾರ ಹಾನಿಯನ್ನುಂಟು ಮಾಡಿದವು. ಸಂತ್ರಸ್ತರು ನೀಡಿದ ವಿಡಿಯೊ ಪುರಾವೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಇದುವರೆಗೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;p data-block-key="ca23p"&gt;ಈ ಪೈಕಿ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. ಬಂಧಿತರಲ್ಲಿ ಇಗತ್ಪುರಿ, ನಂದಗಾಂವ್ ಸಾದೋ ಮತ್ತು ಮಾಣಿಕ್ ಖಾಂಬ್ ಭಾಗದ ಯುವಕರು ಸೇರಿದ್ದಾರೆ. ಇವರಲ್ಲಿ ಪ್ರಮುಖ ಆರೋಪಿ ಭೋಯಿರ್ ವಿರುದ್ಧ ಈಗಾಗಲೇ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಅಡಿಯಲ್ಲಿ ದೂರು ದಾಖಲಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮೃತ ನವಿಲಿಗೆ ತ್ರಿವರ್ಣ ಧ್ವಜ ಹೊದಿಸಿ ಅಂತ್ಯ ಸಂಸ್ಕಾರ ನಡೆಸಿದ ಪೊಲೀಸರು: ಹೃದಯಸ್ಪರ್ಶಿ ವಿಡಿಯೊ ವೈರಲ್‌</title><link>https://vishwavani.news/viral/police-draped-the-peacock-with-the-tricolor-flag-and-gave-it-a-respectful-funeral-83691.html</link><guid>https://vishwavani.news/viral/police-draped-the-peacock-with-the-tricolor-flag-and-gave-it-a-respectful-funeral-83691.html</guid><pubDate>Tue, 14 Jul 2026 09:38:20 +0000</pubDate><description>&lt;![CDATA[Viral Video: ಉತ್ತರ ದೆಹಲಿಯ ನರೇಲಾದ ಉದ್ಯಾನವನದಲ್ಲಿ ನವಿಲೊಂದು ಮೃತಪಟ್ಟಿದ್ದು ದೆಹಲಿ ಪೊಲೀಸ್ ಸಿಬ್ಬಂದಿಗಳು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿಗೆ ಗೌರವಯುತ ವಿದಾಯ ಸಲ್ಲಿಸಿದ ದೃಶ್ಯವೊಂದು ಕಂಡು ಬಂದಿದೆ.​ ಈ ಘಟನೆಯು ನರೇಲಾದ ಶಿವಾಜಿ ಮಾರ್ಕೆಟ್‌ನಲ್ಲಿರುವ ಎಂಸಿಡಿಯ ಅಗ್ರಸೇನ್ ಪಾರ್ಕ್‌ನಲ್ಲಿ  ನಡೆದಿದ್ದು ನವಿಲು ಸತ್ತು ಬಿದ್ದಿದ್ದು ಬೀದಿನಾಯಿಗಳು ಅದರ ಮೃತ ದೇಹವನ್ನು ಕಚ್ಚಿ ಗಾಯಗೊಳಿಸುತ್ತಿದ್ದವು...ಬಳಿಕ ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಗೌರವ ಯುತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/delhi_video_82.original.jpg" class="attachment-large size-large wp-post-image" alt="ಮೃತ ನವಿಲಿಗೆ ತ್ರಿವರ್ಣ ಧ್ವಜ ಹೊದಿಸಿ ಅಂತ್ಯ ಸಂಸ್ಕಾರ ನಡೆಸಿದ ಪೊಲೀಸರು: ಹೃದಯಸ್ಪರ್ಶಿ ವಿಡಿಯೊ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="yh615"&gt;&lt;b&gt;ನವದೆಹಲಿ,ಜು.14:&lt;/b&gt; ಭಾರತದ ರಾಷ್ಟ್ರ ಧ್ವಜ, ರಾಷ್ಟ್ರ ಪ್ರಾಣಿ- ಪಕ್ಷಿಯನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಇದೀಗ ಉತ್ತರ ದೆಹಲಿಯ ನರೇಲಾದ ಉದ್ಯಾನವನದಲ್ಲಿ ನವಿಲೊಂದು ಮೃತ ಪಟ್ಟಿದ್ದು ದೆಹಲಿ ಪೊಲೀಸ್ ಸಿಬ್ಬಂದಿಗಳು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿಗೆ ಗೌರವಯುತ ವಿದಾಯ ಸಲ್ಲಿಸಿದ ದೃಶ್ಯವೊಂದು&lt;a href="/viral/blinkits-free-ambulance-helps-in-emergency-situations-netizens-praise-it-83062.html"&gt;&lt;b&gt; (Viral News)&lt;/b&gt;&lt;/a&gt;&lt;b&gt; &lt;/b&gt;ಕಂಡು ಬಂದಿದೆ.​ ಈ ಘಟನೆಯು ನರೇಲಾದ ಶಿವಾಜಿ ಮಾರ್ಕೆಟ್‌ ನಲ್ಲಿರುವ ಎಂಸಿಡಿಯ ಅಗ್ರಸೇನ್ ಪಾರ್ಕ್‌ನಲ್ಲಿ ನಡೆದಿದ್ದು ನವಿಲು ಸತ್ತು ಬಿದ್ದಿದ್ದು ಬೀದಿ ನಾಯಿಗಳು ಅದರ ಮೃತದೇಹವನ್ನು ಕಚ್ಚಿ ಗಾಯಗೊಳಿಸುತ್ತಿದ್ದವು. ಬಳಿಕ ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.&lt;/p&gt;&lt;p data-block-key="qcgp"&gt;ಸ್ಥಳೀಯ ನಿವಾಸಿಗಳು ಇಬ್ಬರು ಪಾರ್ಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ 10:30 ರ ಸುಮಾರಿಗೆ ಉದ್ಯಾನವನದಲ್ಲಿ ನಡೆದಾಡುತ್ತಿದ್ದಾಗ ಪೊದೆಗಳಲ್ಲಿ ಬೀದಿ ನಾಯಿಗಳು ಸುತ್ತು ವರಿದ್ದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ, ಪೊದೆಯಲ್ಲಿ ಕಾಲುಗಳು ಸಿಲುಕಿಕೊಂಡು ನವಿಲು ಸತ್ತು ಬಿದ್ದಿರುವುದು ಕಂಡುಬಂದಿದೆ. ನವಿಲು ಪೊದೆಯಲ್ಲಿ ಸಿಲುಕಿ ನಾಯಿಗಳ ದಾಳಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. &lt;/p&gt;&lt;p data-block-key="1n44f"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Sensitive and compassionate face of Delhi Police &lt;a href="https://x.com/CPDelhi?ref_src=twsrc%5Etfw"&gt;@CPDelhi&lt;/a&gt;&lt;br&gt;&lt;br&gt;The unwavering commitment of the &lt;a href="https://x.com/DelhiPolice?ref_src=twsrc%5Etfw"&gt;@DelhiPolice&lt;/a&gt; to protecting not only people but also the nation’s natural heritage was powerfully reflected in an extraordinary act of compassion in the capital. Displaying remarkable… &lt;a href="https://t.co/bQU3Myjux2"&gt;pic.twitter.com/bQU3Myjux2&lt;/a&gt;&lt;/p&gt;&amp;mdash; SATENDER TRIPATHI (@satender_tri) &lt;a href="https://x.com/satender_tri/status/2076636543859728793?ref_src=twsrc%5Etfw"&gt;July 13, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1kn2n"&gt;ಬಳಿಕ ನವಿಲನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನರೇಲಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರ ಮಲಿಕ್ ನೇತೃತ್ವದ ಪಿಸಿಆರ್ (PCR) ತಂಡ ಸ್ಥಳಕ್ಕೆ ಆಗಮಿಸಿದ್ದು ನವಿಲಿನ ಮೃತದೇಹವನ್ನು ನಾಯಿಗಳಿಂದ ರಕ್ಷಿಸಿ, ಅತ್ಯಂತ ಗೌರವಯುತ ವಾಗಿ ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ.&lt;/p&gt;&lt;p data-block-key="8po84"&gt;&lt;a href="/viral/rob-phone-worth-rs-1-lakh-from-man-who-pretended-to-be-injured-and-helped-him-82967.html"&gt;&lt;b&gt;Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು&lt;/b&gt;&lt;/a&gt;&lt;/p&gt;&lt;p data-block-key="lj7v"&gt;ಸ್ಥಳೀಯ ನಿವಾಸಿಗಳು ಮತ್ತು ಕಲ್ಯಾಣ ಸಂಘ ಸದಸ್ಯರ ಸಹಾಯದಿಂದ, ಉದ್ಯಾನವನದೊಳಗೆ ಒಂದು ಗುಂಡಿಯನ್ನು ಅಗೆದು, ಅಲ್ಲಿ ನವಿಲನ್ನು ಗೌರವಯುತವಾಗಿ ಸಮಾಧಿ ಮಾಡಲಾಯಿತು. ಇದೀಗ ನವಿಲಿಗೆ ಪೊಲೀಸರು ಮತ್ತು ಸ್ಥಳೀಯರು ಒಟ್ಟಾಗಿ ಅಂತಿಮ ಸಂಸ್ಕಾರ ನೆರವೇರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p data-block-key="17vkk"&gt;ಈ ಹೃದಯಸ್ಪರ್ಶಿ ದೃಶ್ಯ ಪ್ರಶಂಸೆಗೆ ಪಾತ್ರವಾಗಿದ್ದು, ವನ್ಯಜೀವಿಗಳ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಮತ್ತು ಭಾರತದ ರಾಷ್ಟ್ರೀಯ ಪಕ್ಷಿಯಾದ ವನ್ಯಜೀವಿಗಳಿಗೆ ಗೌರವಯುತ ವಿದಾಯ ನೀಡಿದ್ದಕ್ಕಾಗಿ ದೆಹಲಿ ಪೊಲೀಸರನ್ನು ಅನೇಕರು ಶ್ಲಾಘಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ಕಾರ್ ಇಲ್ಲ, ಫ್ಲಾಟ್ ಇಲ್ಲ, 25,000 ಸಂಬಳ": ವಧುವನ್ನು ಹುಡುಕಲು ವಿಶಿಷ್ಟ ಬ್ಯಾನರ್ ಹಾಕಿದ ಯುವಕ!</title><link>https://vishwavani.news/viral/young-man-puts-up-a-banner-in-the-middle-of-the-road-in-search-of-a-bride-83698.html</link><guid>https://vishwavani.news/viral/young-man-puts-up-a-banner-in-the-middle-of-the-road-in-search-of-a-bride-83698.html</guid><pubDate>Tue, 14 Jul 2026 09:30:08 +0000</pubDate><description>&lt;![CDATA[Viral Video: ಇಂದು ವಧು-ವರರ ಹುಡುಕಾಟ ದೊಡ್ಡ ಸವಾಲಾಗಿದ್ದು ತಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಆದರೆ ಇಲ್ಲೊಬ್ಬ ಯುವಕ ತನಗೆ ಬೇಕಾದ ಸೂಕ್ತ ಹುಡುಗಿಯನ್ನು ಹುಡುಕಲು ರಸ್ತೆ ಮಧ್ಯೆ ದೊಡ್ಡದಾದ ಬ್ಯಾನರ್ ವೊಂದನ್ನು ಹಾಕಿದ್ದಾನೆ. ಪುಣೆಯ 30 ವರ್ಷದ ಯುವಕ ಪಿಂಪಲ್ ಸೌದಾಗರ್‌ನ ಜನನಿಬಿಡ ಜಂಕ್ಷನ್‌ನಲ್ಲಿ ದೊಡ್ಡ ಬ್ಯಾನರ್ ಅನ್ನು ಅಳವಡಿಸಿದ್ದು ಇದರಲ್ಲಿ ತನ್ನ ವಿವರಗಳನ್ನು ಅತ್ಯಂತ ಪ್ರಾಮಾಣಿಕವಾಗಿ ತಿಳಿಸಿದ್ದಾನೆ. ಸದ್ಯ ಈ ಬೃಹತ್ ಬಿಲ್‌ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ..]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pune_video.original.jpg" class="attachment-large size-large wp-post-image" alt=""ಕಾರ್ ಇಲ್ಲ, ಫ್ಲಾಟ್ ಇಲ್ಲ, 25,000 ಸಂಬಳ": ವಧುವನ್ನು ಹುಡುಕಲು ವಿಶಿಷ್ಟ ಬ್ಯಾನರ್ ಹಾಕಿದ ಯುವಕ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wkv6v"&gt;&lt;b&gt;ಪುಣೆ,ಜು.14&lt;/b&gt;: ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್&lt;a href="/viral/microsoft-employee-expresses-frustration-saying-his-decision-to-leave-was-wrong-83623.html"&gt; (Viral News)&lt;/a&gt; ಆಗುತ್ತವೆ. ಅದರಲ್ಲೂ ಇಂದು ವಧು-ವರರ ಹುಡುಕಾಟ ದೊಡ್ಡ ಸವಾಲಾಗಿದ್ದು ತಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ.. ಆದರೆ ಇಲ್ಲೊಬ್ಬ ಯುವಕ ತನಗೆ ಬೇಕಾದ ಸೂಕ್ತ ಹುಡುಗಿಯನ್ನು ಹುಡುಕಲು ರಸ್ತೆ ಮಧ್ಯೆ ದೊಡ್ಡದಾದ ಬ್ಯಾನರ್ವೊಂದನ್ನು ಹಾಕಿದ್ದಾನೆ. ಪುಣೆಯ 30 ವರ್ಷದ ಯುವಕ ಪಿಂಪಲ್ ಸೌದಾಗರ್‌ನ ಜನನಿಬಿಡ ಜಂಕ್ಷನ್‌ನಲ್ಲಿ ದೊಡ್ಡ ಬ್ಯಾನರ್ ಅನ್ನು ಅಳವಡಿಸಿದ್ದು ಇದರಲ್ಲಿ ತನ್ನ ವಿವರಗಳನ್ನು ಅತ್ಯಂತ ಪ್ರಾಮಾಣಿಕವಾಗಿ ತಿಳಿಸಿದ್ದಾನೆ. ಸದ್ಯ ಈ ಬೃಹತ್ ಬಿಲ್‌ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;p data-block-key="ct0k0"&gt;ತಮ್ಮ ಜೀವನ ಸಂಗಾತಿಯನ್ನು ಹುಡುಕುವ ನಿಟ್ಟಿನಲ್ಲಿ ಪುಣೆಯ 30 ವರ್ಷದ ಯುವಕ ಈ ಪ್ಲಾನ್ ಮಾಡಿದ್ದಾನೆ‌. ಇದು ಯಾವುದೇ ಮ್ಯಾಟ್ರಿಮೋನಿಯಲ್, ಸಂಸ್ಥೆಯ ಜಾಹೀರಾತು ಅಲ್ಲ, ಬದಲಾಗಿ ರಾಘವ್ ವಿಶ್ವಾಸರಾವ್ ಶಿಂದೆ ಎಂಬ ಯುವಕನೇ ಈ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್‌ನಲ್ಲಿ ಪ್ರದರ್ಶಿಸಲಾದ ಮಾಹಿತಿಯ ಪ್ರಕಾರ, ಶಿಂಧೆ ಅವರಿಗೆ 30 ವರ್ಷ ವಯಸ್ಸಾಗಿದ್ದು, ಮಾಸಿಕ 25,000 ರೂ. ಸಂಬಳ ಪಡೆಯುತ್ತಿದ್ದಾರೆ. ಕಾರು, ಫ್ಲಾಟ್ ಅಥವಾ ಕೃಷಿ ಭೂಮಿ ಯಾವುದು ಹೊಂದಿಲ್ಲ ಎಂದು ಬರೆದಿದ್ದಾರೆ. ''ನಿಮಗೆ ಯಾರಾದರೂ ಇಂತಹ ಸೂಕ್ತ ವಧು ತಿಳಿದಿದ್ದರೆ ದಯವಿಟ್ಟು ತಿಳಿಸಿ" ಎಂದು ಬರೆಯಲಾಗಿದೆ.&lt;/p&gt;&lt;p data-block-key="bv61u"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/Dasqqfmss6_/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/Dasqqfmss6_/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/Dasqqfmss6_/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Vedanti.Rakesh (@life.with_vedanti.rakesh)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9ofkl"&gt;ಸಾಮಾನ್ಯವಾಗಿ ಇಂದು ಹೆಣ್ಣು ಮಕ್ಕಳು ಶ್ರೀಮಂತ ಯುವಕರನ್ನೇ ಮದುವೆ ಮಾಡಿಕೊಳ್ಳಲು ಇಚ್ಚಿಸುತ್ತಾರೆ.‌ಆದರೆ ಇಲ್ಲಿ ಯುವಕ ಪ್ರಮಾಣಿಕವಾಗಿ ತನ್ನ ಮಾಹಿತಿ ಹಂಚಿಕೊಂಡದ್ದಕ್ಕಾಗಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅನೇಕ ಬಳಕೆದಾರರು ತಮ್ಮ ಅವಿವಾಹಿತ ಸ್ನೇಹಿತರನ್ನು ಟ್ಯಾಗ್ ಮಾಡಿ ಮದುವೆ ಪ್ರಸ್ತಾಪದ ಬಗ್ಗೆ ತಮಾಷೆ ಮಾಡುತ್ತಿದ್ದಾರೆ&lt;/p&gt;&lt;p data-block-key="887n0"&gt;&lt;a href="/viral/life-is-expensive-in-switzerland-even-with-a-salary-of-one-lakh-what-did-the-couple-say-in-the-video-82195.html"&gt;&lt;b&gt;Viral Video: ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ&lt;/b&gt;&lt;/a&gt;&lt;/p&gt;&lt;p data-block-key="co7ab"&gt;ಈ ವೈರಲ್ ಕ್ಲಿಪ್ ಗೆ ಹಾಸ್ಯಮಯ ಕಾಮೆಂಟ್‌ಗಳು ಬಂದಿವೆ. ಆದರೆ ಈ ಯುವಕ ತನ್ನ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಮರೆತಿದ್ದಾನೆ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು "ಸ್ವಂತ ಕಾರು, ಫ್ಲಾಟ್ ಇಲ್ಲ ನಿಜ,ಆದರೆ ಇಷ್ಟು ದೊಡ್ಡ ಬ್ಯಾನರ್ ಹಾಕಲು ತನ್ನ ಒಂದು ತಿಂಗಳ ಸಂಬಳವನ್ನೇ ಖರ್ಚು ಮಾಡಿರಬೇಕು,ಸೂಕ್ತ ವಧು ಸಿಗಲಿ'' ಎಂದು ಕಾಲೆಳೆದಿದ್ದಾರೆ. ಆದರೆ ಇದು ನಿಜವಾದ ಮದುವೆ ಪ್ರಸ್ತಾಪವೋ ಅಥವಾ ಪ್ರಚಾರದ ಗಿಮಿಕ್ ಎಂಬ ಸಂಶಯವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bidadi Township: ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ</title><link>https://vishwavani.news/karnataka/kalaburagi/dont-worry-about-township-focus-on-the-development-of-north-karnataka-says-by-vijayendra-83705.html</link><guid>https://vishwavani.news/karnataka/kalaburagi/dont-worry-about-township-focus-on-the-development-of-north-karnataka-says-by-vijayendra-83705.html</guid><pubDate>Tue, 14 Jul 2026 09:23:40 +0000</pubDate><description>&lt;![CDATA[BY Vijayendra: ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಕಲಬುರಗಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/BY_Vijayendra_and_DK_Shivakumar.original.jpg" class="attachment-large size-large wp-post-image" alt="Bidadi Township: ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="f1hy9"&gt;&lt;b&gt;ಕಲಬುರಗಿ, ಜು.14:&lt;/b&gt; ಬಿಡದಿಯ ರೈತರನ್ನು ಬೀದಿಗೆ ತಂದು ಜಮೀನು ಕಸಿದುಕೊಳ್ಳುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳು ಇದ್ದಲ್ಲಿ ಆ ಭ್ರಮೆಯಿಂದ ಹೊರಕ್ಕೆ ಬರಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ &lt;a href="/politics/coordinated-work-to-remove-the-state-congress-government-says-bjp-state-president-by-vijayendra-83355.html"&gt;&lt;b&gt;ಬಿ.ವೈ. ವಿಜಯೇಂದ್ರ&lt;/b&gt;&lt;/a&gt; (BY Vijayendra) ಆಗ್ರಹಿಸಿದ್ದಾರೆ. ಕಲಬುರಗಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಆಗ್ರಹಿಸಿದರು.&lt;/p&gt;&lt;h3 data-block-key="f0f6"&gt;&lt;b&gt;ರೈತರ ಜಮೀನು ಕಸಿದುಕೊಂಡು ಟೌನ್‍ಶಿಪ್ ಮಾಡಲು ಸಾಧ್ಯವಿಲ್ಲ&lt;/b&gt;&lt;/h3&gt;&lt;p data-block-key="28dr3"&gt;ಇಲ್ಲಿ ಬಂದು ಫೋಟೊ ಹೊಡೆಸಿಕೊಂಡು ಶಿವಪೂಜೆ ಮಾಡಿದ್ದು, ಆ ಕಪಟ ನಾಟಕವನ್ನು ಬದಿಗಿಟ್ಟು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಬಗ್ಗೆ ತಲೆ ಕೆಡಿಸಿಕೊಳ್ಳಿ. ರೈತರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ರೈತರ ವಿಚಾರ ಆದ್ಯತೆ ಆಗಬೇಕೇ ವಿನಾ, ಟೌನ್‍ಶಿಪ್‍ಗಳಲ್ಲ. ಟೌನ್‍ಶಿಪ್ ಅಗತ್ಯವೇ? ಖಂಡಿತ ಅಗತ್ಯವಿದೆ. ಆದರೆ, ರೈತರ ಜಮೀನು ಕಸಿದುಕೊಂಡು ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ನಿಜವಾಗಿಯೂ ನಿಮಗೆ ಅಭಿವೃದ್ಧಿಯ ಕಾಳಜಿ ಇದ್ದರೆ, ಬೆಂಗಳೂರಿನ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂಬ ಭ್ರಮೆಯಿಂದ ಕಾಂಗ್ರೆಸ್ ಸರ್ಕಾರ ಹೊರಕ್ಕೆ ಬರಲಿ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಒತ್ತಾಯಿಸಿದರು.&lt;/p&gt;&lt;p data-block-key="8u1na"&gt;ಬಿಡದಿ ಟೌನ್‍ಶಿಪ್ ಜತೆಗೆ ಕನಕಪುರದಲ್ಲಿ ವಿಮಾನನಿಲ್ದಾಣ ಮಾಡಲು ಹೊರಟಿದ್ದಾರಲ್ಲವೇ? ಇವೆರಡೂ ಒಟ್ಟೊಟ್ಟಿಗೆ ಸೇರಿಕೊಂಡಿದೆ. ಡಿ.ಕೆ. ಶಿವಕುಮಾರ್ ಅವರ ಸಾವಿರಾರು ಎಕರೆ ಜಮೀನು ಅಲ್ಲಿದೆ ಎಂದು ಜನಸಾಮಾನ್ಯರೂ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಆಸಕ್ತಿ ಇರಬೇಕೇ ವಿನಾ, ರಿಯಲ್ ಎಸ್ಟೇಟ್ ಬಗ್ಗೆ ಅಲ್ಲ. ರಿಯಲ್ ಎಸ್ಟೇಟ್ ವಿಷಯ ಮರೆತು ರೈತರ ಬಗ್ಗೆ ಆಲೋಚಿಸಿದರೆ ಬಿಡದಿಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ಟೀಕಿಸಿದರು.&lt;/p&gt;&lt;p data-block-key="b3738"&gt;ಮುಖ್ಯಮಂತ್ರಿಗಳ ಆದ್ಯತೆ ಏನೆಂದು ಇದರಲ್ಲೇ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಬಿಡದಿ ಟೌನ್‍ಶಿಪ್, ಕನಕಪುರದಲ್ಲಿ ವಿಮಾನ ನಿಲ್ದಾಣದ ನೆನಪಾಗಿದೆ. ಇದರ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.&lt;/p&gt;&lt;h3 data-block-key="aqu61"&gt;&lt;b&gt;ಸಿಎಂ ಆದ್ಯತೆಯನ್ನು ಸ್ಪಷ್ಟಪಡಿಸಲಿ&lt;/b&gt;&lt;/h3&gt;&lt;p data-block-key="5rr1j"&gt;ಮುಖ್ಯಮಂತ್ರಿಗಳು ತಮ್ಮ ಆದ್ಯತೆ ರಿಯಲ್ ಎಸ್ಟೇಟೋ ಅಥವಾ ರೈತರೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಟೌನ್‍ಶಿಪ್ ಆಗಬೇಕು, ಬೆಂಗಳೂರು ಅಭಿವೃದ್ಧಿ ಆಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕೆಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ರೈತರ ಮೇಲೆ ದಬ್ಬಾಳಿಕೆ ಮಾಡಿ ಆಗಬಾರದು. ಶೇ.70 ರೈತರು ಜಮೀನು ನೀಡುವ ಪ್ರದೇಶದಲ್ಲಿ ಅಲ್ಲಿ ಭೂಸ್ವಾಧೀನ ಮಾಡಬೇಕು. ದಬ್ಬಾಳಿಕೆ ಮಾಡಿ, ಗೂಂಡಾಗಳನ್ನು ಬಿಟ್ಟು ರೈತರನ್ನು ಬೆದರಿಸುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು. ಇದನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ನಾವು ರೈತರ ಪರವಾಗಿ ಇರುತ್ತೇವೆ ಎಂದರು.‌&lt;/p&gt;&lt;p data-block-key="djptn"&gt;&lt;a href="/politics/union-minister-pralhad-joshi-slams-state-congress-government-about-bidadi-township-issue-83646.html"&gt;&lt;b&gt;ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ&lt;/b&gt;&lt;/a&gt;&lt;/p&gt;&lt;p data-block-key="9vvdk"&gt;ಕಲಬುರಗಿಯ ಕೇಂದ್ರ ಕಾರಾಗೃಹದಿಂದ 3 ಕೈದಿಗಳು ತಪ್ಪಿಸಿಕೊಂಡ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಸದ್ಯ ಅಮೆರಿಕ- ಇರಾನ್ ನಡುವಿನ ಯುದ್ಧದ ವಿಚಾರದಲ್ಲಿ ಬ್ಯುಸಿ ಇದ್ದಾರೆ. ಆದಷ್ಟು ಬೇಗ ಅದನ್ನು ಇತ್ಯರ್ಥ ಮಾಡಿ ತಮ್ಮ ಜಿಲ್ಲೆಯ- ತಮ್ಮ ಇಲಾಖೆ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಆಫ್ಘಾನ್ ನಿರಾಶ್ರಿತರ ಮಹಿಳಾ ಕ್ರಿಕೆಟ್‌ ತಂಡಕ್ಕೆ ಐಸಿಸಿಯಿಂದ ಶುಭ ಸುದ್ದಿ</title><link>https://vishwavani.news/sports/icc-targets-2030-qualification-pathway-for-afghan-refugee-womens-team-83704.html</link><guid>https://vishwavani.news/sports/icc-targets-2030-qualification-pathway-for-afghan-refugee-womens-team-83704.html</guid><pubDate>Tue, 14 Jul 2026 08:43:10 +0000</pubDate><description>&lt;![CDATA[Afghan refugee women's team: ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮಹಿಳಾ ಶಿಕ್ಷಣ ಮತ್ತು ಕ್ರೀಡೆಯ ಮೇಲಿನ ಆಡಳಿತದ ನಿರ್ಬಂಧಗಳು ದೇಶದಲ್ಲಿ ಮಹಿಳಾ ಕ್ರಿಕೆಟ್ ಪರಿಣಾಮಕಾರಿಯಾಗಿ ನಾಶಮಾಡಿದವು. ತಾಲಿಬಾನಿಗಳಿಗೆ ಹೆದರಿ ಹಲವು ಆಟಗಾರ್ತಿಯರು ಪಲಾಯನ ಮಾಡಿದರು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Afghan_refugee_womens_team.original.jpg" class="attachment-large size-large wp-post-image" alt="ಆಫ್ಘಾನ್ ನಿರಾಶ್ರಿತರ ಮಹಿಳಾ ಕ್ರಿಕೆಟ್‌ ತಂಡಕ್ಕೆ ಐಸಿಸಿಯಿಂದ ಶುಭ ಸುದ್ದಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="f3q0y"&gt;ದುಬೈ, ಜು.14: ಅಫ್ಘಾನಿಸ್ತಾನ ನಿರಾಶ್ರಿತ ಮಹಿಳಾ ಕ್ರಿಕೆಟಿಗರ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಇಡಲು ಐಸಿಸಿ ಬದ್ಧವಾಗಿದೆ. 2030 ರ ವೇಳೆಗೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅರ್ಹತಾ ಹಾದಿಯನ್ನು ಪ್ರವೇಶಿಸುವ ಗುರಿಯನ್ನು ತಂಡಕ್ಕೆ ನಿಗದಿಪಡಿಸಲಾಗಿದೆ.&lt;/p&gt;&lt;p data-block-key="60c6"&gt;ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಅನುಮೋದಿಸಲಾಯಿತು, ಅಲ್ಲಿ ಮಂಡಳಿಯು ತಂಡಕ್ಕೆ ದೀರ್ಘಾವಧಿಯ ಮಾರ್ಗಸೂಚಿಯನ್ನು ಮೇಲ್ವಿಚಾರಣೆ ಮಾಡಲು ತನ್ನ ವಿಶೇಷ ಕಾರ್ಯಪಡೆಯನ್ನು ಪುನರ್ರಚಿಸಿತು. ಐಸಿಸಿ ಅರ್ಹತಾ ಪಂದ್ಯಗಳಲ್ಲಿ ತಂಡದ ಸಂಭಾವ್ಯ ಭಾಗವಹಿಸುವಿಕೆಗಾಗಿ ಐಸಿಸಿ ಮೊದಲ ಬಾರಿಗೆ ಸಮಯವನ್ನು ವಿವರಿಸಿದೆ, ಆದಾಗ್ಯೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ACB) ಬೆಂಬಲವಿಲ್ಲದ ಕಾರಣ ಅವರು ಅಫ್ಘಾನಿಸ್ತಾನವಾಗಿ ಸ್ಪರ್ಧಿಸುವುದಿಲ್ಲ.&lt;/p&gt;&lt;p data-block-key="1jgl"&gt;ವಿಸ್ತೃತ ಕಾರ್ಯಪಡೆಯಲ್ಲಿ ಈಗ ಐಸಿಸಿ ಸ್ವತಂತ್ರ ನಿರ್ದೇಶಕಿ ರೋಸ್ ರಿವಾಜ್ ಮತ್ತು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯೆ ಸಾರಾ ಕೀನ್, ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಸಿಬಿ ಪ್ರತಿನಿಧಿಗಳು ಇದ್ದಾರೆ. ಇದು ಮುಂದಿನ ಐದು ವರ್ಷಗಳಲ್ಲಿ ತಂಡದ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಕ್ರಿಕೆಟ್ ಕಡೆಗೆ ಅದರ ಪ್ರಗತಿಯನ್ನು ನೋಡಿಕೊಳ್ಳುತ್ತದೆ.&lt;/p&gt;&lt;p data-block-key="dcoh1"&gt;ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮಹಿಳಾ ಶಿಕ್ಷಣ ಮತ್ತು ಕ್ರೀಡೆಯ ಮೇಲಿನ ಆಡಳಿತದ ನಿರ್ಬಂಧಗಳು ದೇಶದಲ್ಲಿ ಮಹಿಳಾ ಕ್ರಿಕೆಟ್ ಪರಿಣಾಮಕಾರಿಯಾಗಿ ನಾಶಮಾಡಿದವು. ತಾಲಿಬಾನಿಗಳಿಗೆ ಹೆದರಿ ಹಲವು ಆಟಗಾರ್ತಿಯರು ಪಲಾಯನ ಮಾಡಿದರು. ಅನೇಕರು ಅಂತಿಮವಾಗಿ ಆಸ್ಟ್ರೇಲಿಯಾದಲ್ಲಿ ಆಶ್ರಯ ಪಡೆದರು, ಆದರೆ ಇತರರು ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ನೆಲೆಸಿದ್ದಾರೆ.&lt;/p&gt;&lt;p data-block-key="2hk35"&gt;&lt;a href="/sports/france-vs-spain-mbappe-and-yamal-headline-world-cup-semi-final-showdown-83696.html"&gt;ಫಿಫಾ ವಿಶ್ವಕಪ್‌: ಫ್ರಾನ್ಸ್‌ vs ಸ್ಪೇನ್‌ ಜಿದ್ದಾಜಿದ್ದಿನ ಸೆಮಿಫೈನಲ್‌ ಪಂದ್ಯಕ್ಕೆ ಕ್ಷಣಗಣನೆ&lt;/a&gt;&lt;/p&gt;&lt;p data-block-key="217jj"&gt;"ರಚನಾತ್ಮಕ ತರಬೇತಿ, ಅರ್ಥಪೂರ್ಣ ಸ್ಪರ್ಧಾತ್ಮಕ ಅವಕಾಶಗಳು ಮತ್ತು ಸೂಕ್ತವಾದ ಉನ್ನತ-ಕಾರ್ಯಕ್ಷಮತೆಯ ಮಾರ್ಗಗಳ ಮೂಲಕ ಅಫಘಾನ್ ನಿರಾಶ್ರಿತ ಮಹಿಳಾ ಕ್ರಿಕೆಟಿಗರ ನಿರಂತರ ಅಭಿವೃದ್ಧಿಯನ್ನು ಬೆಂಬಲಿಸುವ ಸ್ಪಷ್ಟ ಮತ್ತು ಸುಸ್ಥಿರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಕಾರ್ಯಪಡೆಗೆ ವಹಿಸಲಾಗಿದೆ" ಎಂದು ರಿವಾಜ್ ಹೇಳಿದರು.&lt;/p&gt;&lt;p data-block-key="ena3k"&gt;ಅಫಘಾನ್ ಮಹಿಳಾ ಕ್ರಿಕೆಟ್‌ನ ಪುನರುಜ್ಜೀವನದಲ್ಲಿ ಇಂಗ್ಲೆಂಡ್ ಪ್ರಮುಖ ಮಿತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಳೆದ ವರ್ಷದಲ್ಲಿ, ಇಸಿಬಿ ಪ್ರವಾಸಗಳು ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಲು ಸಹಾಯ ಮಾಡಿದೆ, ಇದರಿಂದಾಗಿ ಆಟಗಾರರು ಮತ್ತೆ ಒಂದಾಗಲು ಮತ್ತು ಒಟ್ಟಿಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ. ಭಾರತ ಮತ್ತು ಇಂಗ್ಲೆಂಡ್‌ಗೆ ಪ್ರವಾಸಗಳು ಅಂತರರಾಷ್ಟ್ರೀಯ ಕ್ರಿಕೆಟ್ ತಲುಪುವಲ್ಲಿ ಉಳಿದಿದೆ ಎಂಬ ಆಟಗಾರ್ತಿಯರ ನಂಬಿಕೆಯನ್ನು ಬಲಪಡಿಸಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>''ವಿಷಾದವಿಲ್ಲ ನಾನು ಮತ್ತೆ ಕೊಲ್ಲುತ್ತೇನೆ'': 3 ಕೊಲೆ ಮಾಡಿದ ಅಪರಾಧಿಯಿಂದ ಕೋರ್ಟ್ ಮುಂದೆಯೇ ಶಾಕಿಂಗ್ ಹೇಳಿಕೆ</title><link>https://vishwavani.news/crime/i-have-no-regrets-i-will-kill-again-convict-in-double-murder-case-makes-shocking-statement-in-court-83697.html</link><guid>https://vishwavani.news/crime/i-have-no-regrets-i-will-kill-again-convict-in-double-murder-case-makes-shocking-statement-in-court-83697.html</guid><pubDate>Tue, 14 Jul 2026 08:36:37 +0000</pubDate><description>&lt;![CDATA[Crime News: ಜೋಡಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ 58 ವರ್ಷದ ವ್ಯಕ್ತಿಯೊಬ್ಬ, “ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರಾದರೂ ತನ್ನ ದಾರಿಗೆ ಅಡ್ಡ ಬಂದರೆ ಮತ್ತೆ ಹತ್ಯೆ ಮಾಡುತ್ತೇನೆ” ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Crime_News_15.original.jpg" class="attachment-large size-large wp-post-image" alt="''ವಿಷಾದವಿಲ್ಲ ನಾನು ಮತ್ತೆ ಕೊಲ್ಲುತ್ತೇನೆ'': 3 ಕೊಲೆ ಮಾಡಿದ ಅಪರಾಧಿಯಿಂದ ಕೋರ್ಟ್ ಮುಂದೆಯೇ ಶಾಕಿಂಗ್ ಹೇಳಿಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="lwxom"&gt;&lt;b&gt;ತಿರುವನಂತಪುರಂ, ಜು. 14:&lt;/b&gt; ಜೋಡಿ ಕೊಲೆ ಪ್ರಕರಣದಲ್ಲಿ ಕೇರಳಂ ನ್ಯಾಯಾಲಯದಿಂದ (Keralam Court) ತಪ್ಪಿತಸ್ಥ ಎಂದು ಸಾಬೀತಾಗಿ ಶಿಕ್ಷೆಗೆ ಗುರಿಯಾದ 58 ವರ್ಷದ ವ್ಯಕ್ತಿಯೊಬ್ಬ, “ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರಾದರೂ ತನ್ನ ದಾರಿಗೆ ಅಡ್ಡ ಬಂದರೆ ಮತ್ತೆ ಹತ್ಯೆ ಮಾಡುತ್ತೇನೆ” ಎಂದು ಕೋರ್ಟ್‌ನಲ್ಲಿ ತಿಳಿಸಿದ್ದಾನೆ. 2025ರ  ಜನವರಿ ನೆರೆಯವರಾದ ಸುಧಾಕರನ್ ಮತ್ತು ಅವರ ತಾಯಿ ಲಕ್ಷ್ಮೀ ಅವರನ್ನು ಕೊಲೆ ಮಾಡಿದ್ದಕ್ಕಾಗಿ ನ್ಯಾಯಾಲಯವು ದೋಷಿ ಎಂದು ನಿರ್ಣಯಿಸುವ ಮೊದಲೇ, ಅಪರಾಧಿ ಚೆಂತಾಮರ ಪಾಲಕ್ಕಾಡ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಹೇಳಿಕೆಗಳನ್ನು ನೀಡಿದ್ದ &lt;a href="https://vishwavani.news/crime/chhattisgarh-4-boys-kill-watchman-escape-from-juvenile-home-83663.html"&gt;&lt;b&gt;(Crime News)&lt;/b&gt;&lt;/a&gt;.&lt;/p&gt;&lt;p data-block-key="bmtsk"&gt;2019ರಲ್ಲಿ ಪೋತುಂಡಿಯಲ್ಲಿ ಸುಧಾಕರನ್ ಅವರ ಪತ್ನಿ ಸಜಿತಾ ಅವರನ್ನು ಕೊಲೆ ಮಾಡಿದ್ದಕ್ಕಾಗಿ ನ್ಯಾಯಾಲಯವು ಚೆಂತಾಮರನನ್ನು ದೋಷಿ ಎಂದು ಘೋಷಿಸಿತ್ತು. ಕೊಲೆ ಮಾಡಿದ್ದಕ್ಕಾಗಿ ಚೆಂತಾಮರನಿಗೆ ಯಾವುದೇ ನೈತಿಕ ಅಪರಾಧ ಪ್ರಜ್ಞೆ ಇಲ್ಲ ಮತ್ತು ಅವನು ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದಾನೆ ಎಂದು ಸಾರ್ವಜನಿಕ ಅಭಿಯೋಜಕ ಎಂ. ಜೆ. ವಿಜಯಕುಮಾರ್ ಹೇಳಿದರು.&lt;/p&gt;&lt;p data-block-key="d2ge7"&gt;ಚೆಂತಮಾರ “ಹೌದು, ನನಗೆ ಯಾವುದೇ ವಿಷಾದವಿಲ್ಲ. ನಾನು ಗಾಂಧಿವಾದಿಯಲ್ಲ. ಯಾರಾದರೂ ನನ್ನ ದಾರಿಗೆ ಬಂದರೆ ನಾನು ಅವರನ್ನು ಕೊಲ್ಲುತ್ತೇನೆ” ಎಂದು ಹೇಳಿಕೆ ನೀಡಿದ್ದ. ಶಿಕ್ಷೆಯ ಪ್ರಮಾಣದ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದ್ದರೂ, ಆತ ನ್ಯಾಯಾಲಯದಲ್ಲಿ ತನ್ನನ್ನು ಗಲ್ಲಿಗೇರಿಸುವಂತೆ ತಿಳಿಸಿದ್ದಾನೆ ಎಂದು ವಕೀಲರು ಹೇಳಿದ್ದಾರೆ.&lt;/p&gt;&lt;p data-block-key="s5hk"&gt;&lt;a href="https://vishwavani.news/crime/husband-dies-after-wife-allegedly-hits-him-on-the-head-with-mobile-phone-in-odisha-83629.html"&gt;&lt;b&gt;ದುರಂತ ಅಂತ್ಯ ಕಂಡ ಕೌಟುಂಬಿಕ ಕಲಹ: ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಹೊಡೆದು ಕೊಂದ ಪತ್ನಿ&lt;/b&gt;&lt;/a&gt;&lt;/p&gt;&lt;p data-block-key="7miv0"&gt;ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಚೆಂತಮಾರನನ್ನು ತಪ್ಪಿತಸ್ಥನೆಂದು ಘೋಷಿಸಿತು. ಈ ಪ್ರಕರಣದ ಎಲ್ಲ ಅಂಶಗಳನ್ನು ನ್ಯಾಯಾಲಯ ಸಮಗ್ರವಾಗಿ ಪರಿಶೀಲಿಸಿ ಈ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದ ಸಾಂದರ್ಭಿಕ ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು, ವೈದ್ಯಕೀಯ ಹಾಗೂ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳು ಆರೋಪಿಯ ವಿರುದ್ಧ ಪ್ರಮುಖವಾಗಿ ಕೆಲಸ ಮಾಡಿವೆ. ವೈಜ್ಞಾನಿಕ ರೀತಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕ ಅಭಿಯೋಜಕ ವಿಜಯಕುಮಾರ್ ಹೇಳಿದ್ದಾರೆ.&lt;/p&gt;&lt;p data-block-key="278io"&gt;“ನಾವು ಜುಲೈ 15ರಂದು ಖಂಡಿತವಾಗಿಯೂ ಮರಣದಂಡನೆಗೆ ಮೇಲ್ಮನವಿ ಸಲ್ಲಿಸುತ್ತೇವೆ. ನ್ಯಾಯಾಲಯವು ನಮ್ಮ ನಿಲುವನ್ನು ಒಪ್ಪುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.&lt;/p&gt;&lt;p data-block-key="31o15"&gt;2019ರ ಕೊಲೆ ಪ್ರಕರಣದಲ್ಲಿ ಚೆಂತಮಾರ ಜಾಮೀನಿನ ಮೇಲೆ ಹೊರಬಂದು 2025ರ  ಜನವರಿ 27ರಂದು ನೆನ್ಮಾರ ಬಳಿಯ ಪೋತುಂಡಿಯಲ್ಲಿರುವ ಸುಧಾಕರನ್ ಮನೆಗೆ ನುಗ್ಗಿ ಅವರನ್ನು ಮತ್ತು ಅವರ ತಾಯಿ ಲಕ್ಷ್ಮೀ ಅವರನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ. ಅಲ್ಲದೆ ಪೋತುಂಡಿಯಲ್ಲಿರುವ ತನ್ನ ಮನೆಯಲ್ಲಿಯೇ ಉಳಿದು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದ. ಸುಧಾಕರನ್ ಕುಟುಂಬಕ್ಕೆ ಬೆದರಿಕೆ ಇದ್ದರೂ, ಆ ಪ್ರದೇಶದಲ್ಲಿ ಆರೋಪಿಯ ಉಪಸ್ಥಿತಿಯನ್ನು ಪತ್ತೆಹಚ್ಚದ ಮತ್ತು ಹತ್ಯೆಯನ್ನು ತಡೆಯದ ಕಾರಣಕ್ಕಾಗಿ ಪೊಲೀಸರ ವಿರುದ್ಧವೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.&lt;/p&gt;&lt;p data-block-key="boa5d"&gt;ಚೆಂತಮಾರ  ಹಲವು ವರ್ಷಗಳಿಂದ ಸುಧಾಕರನ್ ಮತ್ತು ಅವರ ಕುಟುಂಬದ ವಿರುದ್ಧ ದ್ವೇಷ ಹೊಂದಿದ್ದ. ಸ್ಥಳೀಯ ಜ್ಯೋತಿಷಿಯೊಬ್ಬರು ಆತನ ಪತ್ನಿ ತೊರೆಯಲು ಈ ಕುಟುಂಬವೇ ಕಾರಣ ಎಂದು ಹೇಳಿದ ನಂತರ ದ್ವೇಷ ದ್ವಿಗುಣಗೊಂಡಿತು. ವೈಯಕ್ತಿಕ ದ್ವೇಷದಿಂದ ಚೆಂತಮಾರ 2019ರ ಆಗಸ್ಟ್‌ನಲ್ಲಿ ಸಜಿತಾ ಅವರ ಪತಿ ಮತ್ತು ಮಕ್ಕಳು ಹೊರಗೆ ಹೋದಾಗ ಅವರ ಮನೆಗೆ ನುಗ್ಗಿ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ.&lt;/p&gt;&lt;p data-block-key="7j2dl"&gt;2019ರ ಪ್ರಕರಣದಲ್ಲಿ ಚೆಂತಮಾರಗೆ ವಿಚಾರಣಾ ನ್ಯಾಯಾಲಯವು ಎರಡು ವರ್ಷಗಳ ಜೀವಾವಧಿ ಶಿಕ್ಷೆ ಮತ್ತು 3.25 ಲಕ್ಷ ರುಪಾಯಿ ದಂಡ ವಿಧಿಸಿತ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಿಶ್ವಸಂಸ್ಥೆ ಮುಖ್ಯಸ್ಥರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್; ಭದ್ರತಾ ಮಂಡಳಿ ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕ ಅಭಿಯಾನಕ್ಕೂ ಮುನ್ನ ಮಹತ್ವದ ಸಭೆ</title><link>https://vishwavani.news/national/minister-s-jaishankar-meets-un-chief-important-meeting-ahead-of-formal-campaign-for-non-permanent-seat-in-security-council-83702.html</link><guid>https://vishwavani.news/national/minister-s-jaishankar-meets-un-chief-important-meeting-ahead-of-formal-campaign-for-non-permanent-seat-in-security-council-83702.html</guid><pubDate>Tue, 14 Jul 2026 08:25:36 +0000</pubDate><description>&lt;![CDATA[2028-29ರ ಶಾಶ್ವತವಲ್ಲದ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಭಾರತ ಔಪಚಾರಿಕವಾಗಿ ಅಭಿಯಾನ ಪ್ರಾರಂಭಿಸಿದ ಬೆನ್ನಲ್ಲೇ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಜೈಶಂಕರ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಮಧ್ಯಪ್ರಾಚ್ಯ, ಉಕ್ರೇನ್ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಿದರು.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/jaish.original.jpg" class="attachment-large size-large wp-post-image" alt="ವಿಶ್ವಸಂಸ್ಥೆ ಮುಖ್ಯಸ್ಥರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್; ಭದ್ರತಾ ಮಂಡಳಿ ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕ ಅಭಿಯಾನಕ್ಕೂ ಮುನ್ನ ಮಹತ್ವದ ಸಭೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vckqn"&gt;&lt;b&gt;ನ್ಯೂಯಾರ್ಕ್:&lt;/b&gt; ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (External Affairs Minister S. Jaishankar) ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (United Nations Secretary-General Antonio Guterres) ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರಿಬ್ಬರೂ ಪಶ್ಚಿಮ ಏಷ್ಯಾ, ಉಕ್ರೇನ್ ಮತ್ತು ಸುಡಾನ್‌ನಲ್ಲಿನ ಸಂಘರ್ಷಗಳು ಸೇರಿದಂತೆ ಪ್ರಮುಖ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. 2028-2029ರ ಅವಧಿಗೆ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (United Nations Security Council) ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕವಾಗಿ ತನ್ನ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ನಡುವೆ ಇವರಿಬ್ಬರ ಭೇಟಿಯಾಗಿದೆ.&lt;/p&gt;&lt;p data-block-key="8pccj"&gt;ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೂ ಮುಂಚಿತವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆಯಲು ನವದೆಹಲಿಯ ಅಭಿಯಾನವನ್ನು ಪ್ರಾರಂಭಿಸಿದೆ. ಇದಕ್ಕಾಗಿ ಮೊದಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಮೊದಲು ಭಾರತದ ಪರವಾಗಿ ಎಸ್. ಜೈಶಂಕರ್ ಪಾಲ್ಗೊಂಡರು.&lt;/p&gt;&lt;p data-block-key="28bkc"&gt;&lt;a href="/national/ipho-2026-indias-historic-golden-sweep-83614.html"&gt;&lt;b&gt;ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳ ಅಮೋಘ ಸಾಧನೆ; ಫಿಸಿಕ್ಸ್‌ ಒಲಿಂಪಿಯಾಡ್‌ನಲ್ಲಿ ಐವರಿಗೆ ಗೋಲ್ಡ್ ಮೆಡಲ್‌&lt;/b&gt;&lt;/a&gt;&lt;/p&gt;&lt;p data-block-key="cv6jk"&gt;ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜೈಶಂಕರ್, ನ್ಯೂಯಾರ್ಕ್‌ನಲ್ಲಿ ಯುಎನ್ ನ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ಪಶ್ಚಿಮ ಏಷ್ಯಾ, ಉಕ್ರೇನ್ ಮತ್ತು ಸುಡಾನ್ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು. ಭಾರತ ಮತ್ತು ಯುಎನ್ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.&lt;/p&gt;&lt;p data-block-key="36gpt"&gt;ಇದಕ್ಕೂ ಮೊದಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಜೈಶಂಕರ್ ಅವರು ಶಾಂತಿ - ಮಾನದಂಡಗಳು, ನಂಬಿಕೆ ಮತ್ತು ಸಮಗ್ರತೆಯ ಮೂಲಕ ಸಮಗ್ರ ಪ್ರಗತಿಯನ್ನು ಭದ್ರಪಡಿಸಿಕೊಳ್ಳುವ ಆರು ಅಂಶಗಳ ದೃಷ್ಟಿಕೋನದೊಂದಿಗೆ ಭದ್ರತಾ ಮಂಡಳಿಗೆ ಭಾರತದ ಉಮೇದುವಾರಿಕೆಯನ್ನು ಔಪಚಾರಿಕವಾಗಿ ಸಲ್ಲಿಸಿದರು.&lt;/p&gt;&lt;p data-block-key="d3d11"&gt;ಭಾರತವು ಭದ್ರತಾ ಮಂಡಳಿಯಲ್ಲಿ ಜಾಗತಿಕ ದಕ್ಷಿಣದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ ಅವರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸುವ, ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡುವ ದೇಶದ ದಾಖಲೆಯನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.&lt;/p&gt;&lt;p data-block-key="clmcc"&gt;ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ಭಾರತ ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾದ ಶಾಂತಿಪಾಲನಾ ನಿಯಮವನ್ನು ರಚಿಸುವ, ಕೃತಕ ಬುದ್ಧಿಮತ್ತೆಗೆ ಮಾನವ ಕೇಂದ್ರಿತ ವಿಧಾನವನ್ನು ಉತ್ತೇಜಿಸುವ, ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಮುಕ್ತ ಮತ್ತು ನಿಯಮ ಆಧಾರಿತ ಕಡಲ ಕ್ರಮವನ್ನು ಬೆಂಬಲಿಸವ ಹಾಗೂ ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಪ್ರಯತ್ನಗಳನ್ನು ತೀವ್ರಗೊಳಿಸುವ ಅಂಶಗಳು ಕೂಡ ಇದರಲ್ಲಿ ಸೇರಿವೆ ಎಂದರು.&lt;/p&gt;&lt;p data-block-key="euebb"&gt;&lt;a href="/national/indigo-aircraft-engineer-arrested-by-anti-narcotics-task-force-with-heroin-83626.html"&gt;&lt;b&gt;ANTF: ಹೆರಾಯಿನ್‌ ಸಮೇತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಂಡಿಗೋ ಎಂಜಿನಿಯರ್‌&lt;/b&gt;&lt;/a&gt;&lt;/p&gt;&lt;p data-block-key="f7b1n"&gt;ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ದೀರ್ಘಕಾಲದಿಂದ ಬೇಡಿಕೆ ಸಲ್ಲಿಸುತ್ತಿರುವ ಭಾರತ 2028-2029 ಅವಧಿಗೆ ಏಷ್ಯಾ-ಪೆಸಿಫಿಕ್ ಶಾಶ್ವತವಲ್ಲದ ಸ್ಥಾನಕ್ಕಾಗಿ ಮುಂದಿನ ವರ್ಷದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಸ್ಪರ್ಧಿಸಲಿದೆ. ಆಯ್ಕೆಯಾದರೆ 15 ಸದಸ್ಯರ ಮಂಡಳಿಯ ಚುನಾಯಿತ ಸದಸ್ಯರಾಗಿ ದೇಶವು ಒಂಬತ್ತನೇ ಅವಧಿಗೆ ಸ್ಥಾನ ಪಡೆಯಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ಬಿಡಿದ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಕೈಬಿಡದಿದ್ದರೆ ವಿಧಾನಸೌಧದ ಎದುರು ಧರಣಿ"; CM ಡಿಕೆ ಶಿವಕುಮಾರ್‌ಗೆ ಪತ್ರ ಬರೆದ H.D ದೇವೇಗೌಡ</title><link>https://vishwavani.news/karnataka/bengaluru-urban/protest-outside-vidhana-soudha-if-land-acquisition-for-bidadi-township-is-not-dropped-hd-deve-gowda-writes-to-cm-dk-shivakumar-83701.html</link><guid>https://vishwavani.news/karnataka/bengaluru-urban/protest-outside-vidhana-soudha-if-land-acquisition-for-bidadi-township-is-not-dropped-hd-deve-gowda-writes-to-cm-dk-shivakumar-83701.html</guid><pubDate>Tue, 14 Jul 2026 08:13:42 +0000</pubDate><description>&lt;![CDATA[ಬಿಡದಿ ಬಳಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್‌ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಕ್ಕೆ, ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಸುದೀರ್ಘ 11 ಪುಟಗಳ ಪತ್ರವನ್ನು ಬರೆದಿದ್ದಾರೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/HD_Deve_Gowda_1_qU8vJjy.original.jpg" class="attachment-large size-large wp-post-image" alt=""ಬಿಡಿದ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಕೈಬಿಡದಿದ್ದರೆ ವಿಧಾನಸೌಧದ ಎದುರು ಧರಣಿ"; CM ಡಿಕೆ ಶಿವಕುಮಾರ್‌ಗೆ ಪತ್ರ ಬರೆದ H.D ದೇವೇಗೌಡ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vwinr"&gt;&lt;b&gt;ಬೆಂಗಳೂರು:&lt;/b&gt; ಬಿಡದಿ ಬಳಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್‌&lt;b&gt; (Bidadi Township)  &lt;/b&gt;ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಕ್ಕೆ, ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರ&lt;b&gt; (H.D. Deve Gowda) &lt;/b&gt;ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಸುದೀರ್ಘ 11 ಪುಟಗಳ ಪತ್ರವನ್ನು ಬರೆದಿದ್ದಾರೆ. "ಟೌನ್‌ಶಿಪ್‌ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರ ಭೂಮಿಯನ್ನು ಕೈಬಿಡಬೇಕು" ಎಂದು ದೇವೇಗೌಡ ಒತ್ತಾಯಿಸಿದರು. &lt;/p&gt;&lt;p data-block-key="cjkf0"&gt;ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್‌ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಸರ್ವೆ ಪ್ರಾರಂಭಿಸುವ ಹಂತದಲ್ಲಿರುವುದರಿಂದ ಮಾಜಿ ಪ್ರಧಾನಿ ಈ ಪತ್ರವನ್ನು ಬರೆದಿದ್ದಾರೆ. &lt;/p&gt;&lt;p data-block-key="3n2h0"&gt;'ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಸರ್ಕಾರ ಈಗಾಗಲೇ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದು, ಬೆಂಗಳೂರಿಗೆ ಹೊಂದಿಕೊಂಡಿರುವ ಕಾರಣಕ್ಕೆ ಈ ಭಾಗದಲ್ಲಿ ಹಲವಾರು ಖಾಸಗಿ ಉದ್ದಿಮೆಗಳು ಸ್ಥಾಪನೆಯಾಗಿವೆ. ಇಂತಹ ಸ್ಥಿತಿಯಲ್ಲಿಮತ್ತಷ್ಟು ಟೌನ್‌ಶಿಪ್‌ ಯೋಜನೆಗಾಗಿ ಕೃಷಿ ಸಾಗುವಳಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವುದು ಬೇಡ'' ಎಂದು ಎಚ್‌ಡಿ ದೇವೇಗೌಡ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.&lt;/p&gt;&lt;p data-block-key="4bfpd"&gt;ಮುಂದುವರೆದು, ರೈತರ ಜೀವನಕ್ಕೆ ಉಪ-ಕಸಬು ಆಗಿರುವ ಹೈನುಗಾರಿಕೆ, ರೇಷ್ಮೆ ಬೆಳೆಗಳನ್ನು ತಮ್ಮ ಜೀವನ ನಿರ್ವಹಣೆಗೆ ಆಶ್ರಯಿಸಿಕೊಂಡಿದ್ದಾರೆ. ಈ ಭೂಸ್ವಾಧೀನದಿಂದ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಳಾಗಿ ಬೀದಿಪಾಲಾಗುತ್ತಾರೆ. ಒಂದು ಸಾವಿರ ಎಕರೆ ಅಂಗಳವುಳ್ಳ ಮತ್ತು ಹಲವು ದಶಕಗಳಿಂದ ನೀರಾವರಿಗೆ ಆಶ್ರಯವಾಗಿದ್ದ ಭೈರಮಂಗಳ ಕೆರೆಯು ಇಂದು ವೃಷಭಾವತಿ ಕಣಿವೆಯಿಂದ ಬರುವ ತ್ಯಾಜ್ಯದ ನೀರು ಮತ್ತು ಕೈಗಾರಿಕ ಮಾಲಿನ್ಯ ನೀರಿನಿಂದ ತುಂಬಿ ಕೆರೆ ಅಂಗಳ ನೊರೆ ಮತ್ತು ಕಳೆಯಿಂದ ಅವೃತವಾಗಿದೆ. ಇದರಿಂದ ಸುತ್ತು-ಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ನಾಗರೀಕರು ಮತ್ತು ಜಾನುವಾರುಗಳ ಮೇಲೆ ಪರಿಸರ ಮಾಲಿನ್ಯ, ಕಲುಷಿತ ನೀರಿನ ವಾಸನೆಯಿಂದ ತೀವ್ರತರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ.&lt;/p&gt;&lt;p data-block-key="bq359"&gt;ಅಲ್ಲದೇ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಂದಾಜು ರೂ.300 ಕೋಟಿ ವೆಚ್ಚದಲ್ಲಿ ಈ ಕೆರೆಯನ್ನು ಪುನರ್ ಜೀವನಗೊಳಿಸಲು ಕೈಗೊಂಡಿರುವ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಭೈರಮಂಗಲ ಕೆರೆಯ ಪಕ್ಕದಲ್ಲಿ ಸಮಗ್ರ ಉಪನಗರ ಯೋಜನೆಯನ್ನು ಕೈಗೊಂಡು ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ ತರುವುದು ಸಾರ್ವಜನಿಕ ದೃಷ್ಟಿಯಲ್ಲಿ ಒಳ್ಳೆಯದಲ್ಲ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. &lt;/p&gt;&lt;p data-block-key="ltud"&gt;&lt;a href="/politics/union-minister-pralhad-joshi-slams-state-congress-government-about-bidadi-township-issue-83646.html"&gt;&lt;b&gt;ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ&lt;/b&gt;&lt;/a&gt;&lt;/p&gt;&lt;p data-block-key="3b3ts"&gt;ರಾಜ್ಯ ಸರ್ಕಾರಕ್ಕೆ ಬಿಡದಿ ಟೌನ್‌ಶಿಪ್ ನಿರ್ಮಾಣ ಪ್ರಸ್ತಾವನೆ ಹೊಸದೇನಲ್ಲ. ಈ ಹಿಂದೆ ಅಂದರೆ 2006-08 ಅವಧಿಯಲ್ಲಿ  ಹೆಚ್.ಡಿ.ಕುಮಾರಸ್ವಾಮಿರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರು ನಗರದ ಮೇಲಿನ ಒತ್ತಡ ನಿರ್ವಹಣೆ ಮಾಡುವ ದೂರದೃಷ್ಟಿಯಿಂದ ಮತ್ತು ನಗರ ಮಟ್ಟದಲ್ಲಿ ಹಾದು ಹೋಗುವ ವಾಹನಗಳ ಸಾಂದ್ರತೆಯನ್ನು ತಪ್ಪಿಸಲು ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಐದು ಉಪನಗರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು.&lt;/p&gt;&lt;p data-block-key="4spn3"&gt;(1) ನಂದಗುಡಿ - ಹೊಸಕೋಟೆ ತಾಲ್ಲೂಕು&lt;/p&gt;&lt;p data-block-key="2tcms"&gt;(2) ಕಸಬಾ- ರಾಮನಗರ ತಾಲ್ಲೂಕು&lt;/p&gt;&lt;p data-block-key="3ndeg"&gt;(2) ಬಿಡದಿ - ರಾಮನಗರ ತಾಲ್ಲೂಕು&lt;/p&gt;&lt;p data-block-key="5d32j"&gt;(4) ಸೋಲೂರು - ರಾಮನಗರ ತಾಲ್ಲೂಕು&lt;/p&gt;&lt;p data-block-key="7ga0p"&gt;(5) ಸಾತನೂರು - ಕನಕಪುರ ತಾಲ್ಲೂಕು&lt;/p&gt;&lt;p data-block-key="41p3q"&gt;ತದನಂತರ, ಬಿಡದಿ ಟೌನ್‌ಶಿಪ್ ಅನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಂಡು ನವದೆಹಲಿಯ ಡಿಎಲ್‌ಎಫ್ ಸಂಸ್ಥೆಯಿಂದ 9684 ಎಕರೆ ಜಮೀನಿನಲ್ಲಿ ಉಪನಗರ ನಿರ್ಮಿಸಲು ನಿರ್ಧರಿಸಲಾಯಿತು. ಆದರೆ, ರೈತರ ವಿರೋಧ ಮತ್ತು ಇಂತಹ ಬೃಹತ್ ಗಾತ್ರದ ಯೋಜನೆಯಿಂದ ಸ್ಥಳೀಯವಾಗಿ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಿ, ಈ ಯೋಜನೆಯನ್ನು ಕೈಬಿಡಲಾಯಿತು. &lt;/p&gt;&lt;p data-block-key="14mqk"&gt;2008-100  ಬಿ.ಎಸ್.ಯಡಿಯೂರಪ್ಪನವರು 2009ನೇ ಇಸವಿಯಲ್ಲಿ ಡಿಎಲ್‌ಎಫ್ ಸಂಸ್ಥೆ ಠೇವಣ ಇಟ್ಟಿದ್ದ ರೂ. 400 ಕೋಟಿ ಹಣವನ್ನು ಬಿಎಂಆರ್‌ಡಿಎ ಸಂಸ್ಥೆ ಮುಖೇನ ಬಡ್ಡಿ ಸಮೇತ ವಾಪಸ್ಸು ಮಾಡಿ ಈ ಯೋಜನೆಯನ್ನು ತದನಂತರ, ಕೈಬಿಡಲಾಗಿದೆ.  2006-2008 ಹಿರಿಯ ಮುಖಂಡರಾದ ಅವಧಿಯಲ್ಲಿ ಶ್ರೀ.ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್ ನಿರ್ಮಾಣದ ತೀರ್ಮಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶ ಹೆಚ್.ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವೇ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ವರದಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. &lt;/p&gt;&lt;p data-block-key="85uur"&gt;&lt;a href="/ankanagalu/the-stubborn-insistence-on-the-bidadi-township-why-not-elsewhere-83211.html"&gt;&lt;b&gt;Gururaj Gantihole Column: ಬಿಡದಿ ಟೌನ್ʼಶಿಪ್‌ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?&lt;/b&gt;&lt;/a&gt;&lt;/p&gt;&lt;p data-block-key="9sq0"&gt;ಈ ಮೇಲಿನ ಎಲ್ಲಾ ಕಾರಣಗಳಿಂದ ಮತ್ತು ಸ್ಪಷ್ಟ ಪಡಿಸಿದ ಅಂಶಗಳಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪ-ನಗರ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇನೆ.  ಒಂದು ವೇಳೆ ರಾಜ್ಯ ಸರ್ಕಾರ ನನ್ನ ಈ ಮನವಿಯನ್ನು ತಿರಸ್ಕರಿಸಿದರೆ. ಈಗಾಗಲೇ ನಿರಂತರ ಹೋರಾಟ ಮತ್ತು ಧರಣಯಲ್ಲಿ ಇರುವ ರೈತರನ್ನು ಬೆಂಬಲಿಸಿ, ನಮ್ಮ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ.&lt;/p&gt;&lt;p data-block-key="cpjjh"&gt;ಮುಂದುವರೆದು, ನನ್ನ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕೆ ಶ್ರಮಿಸುತ್ತಿದ್ದೇನೆ ಹಾಗೂ ಅಧಿಕಾರ ತ್ಯಾಗ ಮಾಡಿದ್ದೇನೆ. ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ, ಹಾಗೂ ನನ್ನ ಈ ಕೂಗಿಗೆ ಮನಕೊಡದೆ ಇದ್ದರೆ, ವಿಧಾನಸೌಧದ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ ನಡೆಸುತ್ತೇನೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item></channel></rss>