ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

Health Tips: ತ್ವಚೆಯ ಸೌಂದರ್ಯ ಹೆಚ್ಚಿಸಬೇಕೇ? ಅಕ್ಕಿ ತೊಳೆದ ನೀರು ಕುಡಿಯಿರಿ!

ಆರೋಗ್ಯಕರ ಚರ್ಮಕ್ಕಾಗಿ ಅಕ್ಕಿ ತೊಳೆದ ನೀರು ಕುಡಿಯಿರಿ!

ಇತ್ತೀಚೆಗೆ ಬಹಳ ಟ್ರೆಂಡ್ ಆಗಿರುವುದು ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು... ಅಕ್ಕಿಯನ್ನು ನೆನೆಸಿ ಅಥವಾ ಕುದಿಸಿದ ನಂತರ ಉಳಿದಿರುವ ಈ ದ್ರವವು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳ ವಿಶಿಷ್ಟ ಮಿಶ್ರಣವನ್ನು ಹೊಂದಿರುತ್ತದೆ. ಇದನ್ನು ಕೇವಲ ಮುಖಕ್ಕೆ ಹಚ್ಚುವುದು ಮಾತ್ರವಲ್ಲದೆ ಕುಡಿಯುವುದರಿಂದಲೂ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಬಹುದು.

Health Tips: ನಿಮ್ಮ ಡಯಟ್‌ನಿಂದ ಈ ಆಹಾರಗಳನ್ನು ದೂರವಿಡಿ

ಡಯಟ್‌ನಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

Diet Plan: ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ಡಯಟ್ ಮಾತ್ರವಲ್ಲ ಅದಕ್ಕೆ ಸೂಕ್ತವಾದ ಆಹಾರ ಕ್ರಮವನ್ನು ಪಾಲನೆ ಮಾಡುವುದು ಕೂಡ ಮುಖ್ಯ. ಕೆಲವು ಆಹಾರಗಳು ಹೊರ ನೋಟಕ್ಕೆ ಉತ್ತಮ ಎನಿಸಿಕೊಂಡರೂ ಎಲ್ಲರ ದೇಹಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಕೆಲವು ಅಭ್ಯಾಸಗಳನ್ನು ನಾವು ತ್ಯಜಿಸಬೇಕಾಗುತ್ತದೆ. ಅವೇನು ಎನ್ನುವ ವಿವರ ಇಲ್ಲಿದೆ.

ಬೆಲ್ಲ, ತಾಳೆ ಎಣ್ಣೆ ಬಗ್ಗೆ ತಪ್ಪು ಕಲ್ಪನೆ ಬೇಡ: ವಿಶ್ಲೇಷಣೆ

ಬೆಲ್ಲ, ತಾಳೆ ಎಣ್ಣೆ ಬಗ್ಗೆ ತಪ್ಪು ಕಲ್ಪನೆ ಬೇಡ: ವಿಶ್ಲೇಷಣೆ

ಇದು ಈಗ ಸುಲಭವಾಗಿ ಗುರುತಿಸಬಹುದಾದ ಒಂದು ಮಾದರಿಯಾಗಿದೆ. ಶತಮಾನಗಳಿಂದ ಜನರಿಗೆ ಆಹಾರ, ಬಟ್ಟೆ ಅಥವಾ ಇತರ ಅಗತ್ಯಗಳನ್ನು ಪೂರೈಸುತ್ತಿದ್ದ ಒಂದು ನೈಸರ್ಗಿಕ ಉತ್ಪನ್ನವನ್ನು ಏಕಾಏಕಿ ಸಮಸ್ಯೆಯಾಗಿ ತೋರಿಸಲಾಗುತ್ತದೆ. ನಂತರ ಅದರ ಬದಲಿಗೆ ಕಾರ್ಖಾನೆಯಲ್ಲಿ ತಯಾರಾದ ಹೊಸ ಉತ್ಪನ್ನವನ್ನು ಹೆಚ್ಚು ಸುರಕ್ಷಿತ, ಹೆಚ್ಚು ನೈತಿಕ ಮತ್ತು ಹೆಚ್ಚು ಆಧುನಿಕ ಎಂದು ಪ್ರಚಾರ ಮಾಡಲಾಗುತ್ತದೆ.

ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಕಪ್ಪು ಬಣ್ಣದ ಆಹಾರಗಳು ತೂಕ ಇಳಿಕೆಗೆ ರಾಮಬಾಣ!

Health Tips: ತೂಕ ಇಳಿಸುವ ಉದ್ದೇಶವಿದ್ದವರಿಗೆ ಕಪ್ಪು ಬಣ್ಣ ಹೇಗೆ ಅನುಕೂಲ ಎಂಬುದು ತಿಳಿದಿದ್ದರೆ ಅನುಕೂಲ. ಅಂದರೆ ಕಪ್ಪು ಬಟ್ಟೆ ಹಾಕಿದರೆ ತೂಕ ಇಳಿಯುತ್ತದೆಂದೋ ಅಥವಾ ಕಪ್ಪು ಹರಳು ಧರಿಸಿ ದರೆ ತೆಳ್ಳಗಾಗುವರೆಂದೋ ಭ್ರಮಿಸಬೇಕಿಲ್ಲ. ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಆಹಾರಗಳ ಬಗ್ಗೆ. ಹೌದು, ವಿಚಿತ್ರ ಎನಿಸಿದರೂ, ಕಪ್ಪು ಬಣ್ಣದ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಾಂದ್ರವಾಗಿದ್ದು, ಕೊಬ್ಬು ಕತ್ತರಿಸುವಲ್ಲಿ ನೆರವಾಗುತ್ತವೆ. ಇಲ್ಲಿದೆ ವಿವರಗಳು.

ತೂಕ ಇಳಿಯುತ್ತಿಲ್ಲವೇ? ನೀವು ಮಾಡುತ್ತಿರುವ ಈ 7 ಡಯಟ್ ತಪ್ಪುಗಳೇ ಕಾರಣವಾಗಿರಬಹುದು!

ತೂಕ ಇಳಿಯುತ್ತಿಲ್ಲವೇ? ಈ 7 ತಪ್ಪುಗಳೇ ಕಾರಣ

Diet Mistakes: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಫಲಿತಾಂಶ ಸಿಗುತ್ತಿಲ್ಲವೇ? ಅತಿಯಾಗಿ ಕ್ಯಾಲೊರಿ ಕಡಿಮೆ ಮಾಡುವುದು, ಊಟ ಬಿಟ್ಟು ಬಿಡುವುದು, ಪ್ರೊಟೀನ್ ಕೊರತೆ, ಒತ್ತಡದಿಂದ ಹೆಚ್ಚು ತಿನ್ನುವುದು ಸೇರಿ 7 ಸಾಮಾನ್ಯ ಡಯಟ್ ತಪ್ಪುಗಳು ತೂಕ ಇಳಿಕೆಗೆ ಅಡ್ಡಿಯಾಗಬಹುದು. ಆರೋಗ್ಯಪೂರ್ಣ ಜೀವನಶೈಲಿ ಮತ್ತು ಸಮತೋಲನಿತ ಆಹಾರವೇ ದೀರ್ಘಕಾಲಿಕ ತೂಕ ನಿಯಂತ್ರಣದ ಗುಟ್ಟು ಎಂದು ತಜ್ಞರು ಹೇಳುತ್ತಾರೆ.

ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಯಾವ ರೋಗಕ್ಕೆ ಅಹ್ವಾನ? ಈ ಬಗ್ಗೆ ತಜ್ಞರು ಹೇಳೋದೇನು? Video

ಸಿ-ಸೆಕ್ಷನ್ ಹೆರಿಗೆಯಿಂದ ಬರುವ ಅಪಾಯಗಳೇನು?

ಯಾವುದೇ ಕಾರಣಕ್ಕೂ ಸಿ-ಸೆಕ್ಷನ್ ಹೆರಿಗೆಯನ್ನು ಆಯ್ಕೆ ಅಥವಾ ಶಾರ್ಟ್ ಕಟ್ ಆಗಿ ಮಾಡಿಕೊಳ್ಳಬೇಡಿ. ಇದರಿಂದ ಮುಂದೆ ಸಾಕಷ್ಟು ತೊಂದರೆಗಳು ಎದರಾಗಬಹುದು ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ವಿವರಿಸಿರುವುದು ಹೀಗೆ..

ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗಲು ವೈಜ್ಞಾನಿಕ ಕಾರಣವೇನು?

ಇತ್ತೀಚೆಗೆ ದಂಪತಿ ಮಧ್ಯೆ ಜಗಳ ಗೆಚ್ಚಾಗಲು ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ದಂಪತಿ ನಡುವೆ ಜಗಳ, ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವೇನು? ಈ ಕುರಿತು ವಿಜ್ಞಾನ ಏನು ಹೇಳುತ್ತದೆ? ಎಂಬುದನ್ನು ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ ವಿಶ್ವವಾಣಿ ಹೆಲ್ತ್ ಯುಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

Health Tips: ದಿನವೂ ಓಟ್ಸ್ ಸೇವಿಸುತ್ತಿದ್ದೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು

ಓಟ್ಸ್ ಸೇವಿಸುವಾಗ ಈ ಬಗ್ಗೆ ಎಚ್ಚರ ವಹಿಸಿ

Oats: ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ಹಲವರು ಓಟ್ಸ್ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು ಹೃದಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಅಂಶ ಇದರಲ್ಲಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಪೋಷಕಾಂಶಗಳ ಗಣಿಯಾಗಿದ್ದರೂ, ಅದನ್ನು ತಯಾರಿಸುವಾಗ ಮಾಡುವ ಸಣ್ಣ ತಪ್ಪುಗಳು ದೇಹಕ್ಕೆ ತೊಂದರೆಯನ್ನು ಉಂಟು ಮಾಡುತ್ತವೆ ಎಂದು ಎಚ್ಚರಿಸುತ್ತಾರೆ ವೈದ್ಯರು. ಹಾಗಾದರೆ ಯಾವ ರೀತಿ ಓಟ್ಸ್‌ ಸೇವಿಸಬೇಕು? ಎನ್ನುವ ನಿಮ್ಮ ಪ್ರಸ್ನೆಗೆ ಇಲ್ಲಿದೆ ಉತ್ತರ.

ಬೆಲ್ಲ, ಸಕ್ಕರೆ ಸೇವಿಸದೇ ಇದ್ದರೂ ಮಧುಮೇಹ ಕಂಟ್ರೋಲ್‌ಗೆ ಸಿಗ್ತಿಲ್ವ? ಏನಂತಾರೆ ತಜ್ಞರು? Video

ಆಹಾರದ ಬಗ್ಗೆ ಮಧುಮೇಹಿಗಳಿಗೆ ಇರಲಿ ಎಚ್ಚರಿಕೆ

ಬೆಲ್ಲ, ಸಕ್ಕರೆ ಸೇವನೆ ನಿಲ್ಲಿಸಿದ್ದರೂ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಕಾರಣವೇನು?, ಆಹಾರ ಸೇವನೆಯಲ್ಲಿ ಮಧುಮೇಹಿಗಳು ಮಾಡುವ ತಪ್ಪೇನು? ಮಧುಮೇಹಿಗಳು ಆಹಾರ ಸೇವಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಯಾವುದು ? ಈ ಕುರಿತು ಆಹಾರ ತಜ್ಞರಾದ ಡಾ. ಅನಿತಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

Dr Sadhanashree Column: ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ಚಿಕಿತ್ಸಾಲಯದಲ್ಲಿ ಇಂತಹ ಸಂಭಾಷಣೆಗಳು ಹೊಸದೇನಲ್ಲ. ಆರೋಗ್ಯದ ಬಗ್ಗೆ ನಾವು ನಂಬಿ ಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ಅರ್ಧಸತ್ಯಗಳಾಗಿರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣ ಭ್ರಮೆಗಳಾಗಿರುತ್ತವೆ. ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ನೋಡಿದ್ದು, ಅಥವಾ ವರ್ಷಗಳಿಂದ ಮನೆಯಲ್ಲಿ ಕೇಳಿಕೊಂಡು ಬಂದದ್ದು- ಇವೆಲ್ಲ ಸೇರಿ ನಮ್ಮ ಆರೋಗ್ಯದ ಕುರಿತ ಅನೇಕ ನಂಬಿಕೆಗಳನ್ನು ರೂಪಿಸಿವೆ.

Fitness Tips: ದೇಹ ಫಿಟ್‌ ಆಗಿರಲು ದಿನಕ್ಕೆ 10,000 ಹೆಜ್ಜೆ ನಡೆದರೆ ಸಾಕೆ? ತಜ್ಞರ ಮಾತಿಗೆ ಕಿವಿ ಕೊಡಿ

ದಿನಕ್ಕೆ 10,000 ಹೆಜ್ಜೆ ನಡೆಯುವುದು ತೂಕ ಇಳಿಕೆಗೆ ಸಹಕಾರಿಯೆ?

Walking 10,000 Steps: ನಡಿಗೆ ಹೃದಯದ ಆರೋಗ್ಯವನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಪರಿಣಾಮಕಾರಿ ವ್ಯಾಯಾಮ ಎನಿಸಿಕೊಂಡಿದೆ.‌ ಅದರಲ್ಲೂ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ನಿಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಹಾಗಾದರೆ ಕೇವಲ 10,000 ಹೆಜ್ಜೆ ನಡೆಯುವುದರಿಂದಲೇ ದೇಹವನ್ನು ಮತ್ತೆ ಫಿಟ್ ಆಗಿಡಬಹುದೆ?

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತಾಡ್ತಾರೆ? ಏನಂತಾರೆ ತಜ್ಞರು? Video

ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆಯೇ?

ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ವ್ಯತ್ಯಾಸಗಳು ಇವೆಯೇ ? ಅವುಗಳ ಬೆಳವಣಿಗೆಯ ವಿವಿಧ ಹಂತಗಳು ಯಾವುದು, ಯಾವ ಸಮಸ್ಯೆಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಕುರಿತು ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವುದು ಆರೋಗ್ಯಕರವೇ?

ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಏನು ಲಾಭ?

ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ದೇಹದಿಂದ ಮಾಯವಾಗುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ತರಕಾರಿ ಹಾಗೂ ಹಣ್ಣುಗಳ ಸೇವನೆ ಅಗತ್ಯವಾಗಿ ಬೇಕು. ಇನ್ನು ರಸ್ತೆ ಬದಿಯಲ್ಲಿ ಸಿಗುವ ಒಂದು ಗ್ಲಾಸ್ ತಣ್ಣನೆಯ ಕಬ್ಬಿನ ಹಾಲಂತು ಬಾಯಾರಿಕೆ ಮಾತ್ರವಲ್ಲ ನಮ್ಮ ದಣಿವನ್ನು ಕೂಡ ನಿವಾರಣೆ ಮಾಡುತ್ತದೆ. ದೇಹವನ್ನು ತಂಪಾಗಿಸುವ ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ.. ಹಾಗಿದ್ರೆ ಕಬ್ಬಿನ ಹಾಲು ದೇಹಕ್ಕೆ ಹಿತವೇ?

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

Varipulse Platform: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅದರಲ್ಲೂ ವಿಶೇಷವಾಗಿ 'ಏಟ್ರಿಯಲ್ ಫಿಬ್ರಿಲೇಷನ್' ಸಮಸ್ಯೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ 'ಜಾನ್ಸನ್ & ಜಾನ್ಸನ್' ಸಂಸ್ಥೆಯು ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Control Belly Fat: ಊಟದ ನಂತರ ನಡಿಗೆ ಅಗತ್ಯವೇ? ತಜ್ಞರು ಹೇಳೋದೇನು?

ಊಟದ ನಂತರದ ನಡಿಗೆ ತೂಕ ಇಳಿಕೆಗೆ ಕಾರಣವಾಗುತ್ತಾ?

Fitness Tips: ಬದಲಾದ ಜೀವನ ಶೈಲಿ ಮತ್ತು ಕಳಪೆ ಆಹಾರವು ಇಂದು ತೂಕ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲೂ ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಇದನ್ನು ಕರಗಿಸಲು ಅನೇಕರು ಜಿಮ್, ಡಯಟ್ ಎಂದು ಪರದಾಡುತ್ತಲೇ ಇರುತ್ತಾರೆ. ಯಾಕೆಂದರೆ ಹೊಟ್ಟೆಯ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಊಟದ ನಂತರ ಹತ್ತು ನಿಮಿಷದವರೆಗೆ ನಡೆಯುವ ಮೂಲಕ ಬೊಜ್ಜನ್ನು ಕರಗಿಸಬಹುದು ಎಂದು ಸಲಹೆ ನೀಡಿದ್ದಾರೆ.

ಮಧುಮೇಹಿಗಳಿಗೆ ಕಾಡುವ ಚರ್ಮದ ತೊಂದರೆಗಳಿಗೆ ಇದೆ ಪರಿಹಾರ Video

ಮಧುಮೇಹಿಗಳಲ್ಲಿ ಒಣ ಚರ್ಮಕ್ಕೆ ಕಾರಣವೇನು?

ಮಧುಮೇಹಿಗಳಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಇದನ್ನು ನಿವಾರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ ಡಾ. ಸುಮನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಧುಮೇಹಿಗಳಲ್ಲಿ ಕಾಡುವ ಚರ್ಮದ ತೊಂದರೆ ಮತ್ತು ಅದಕ್ಕೆ ಪರಿಹಾರ ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

ಅಜೀರ್ಣ, ಅಸಿಡಿಟಿ ಹಾಗು ಗ್ಯಾಸ್ ಟ್ರಬಲ್ ಸಮಸ್ಯೆಗೆ ಆಯುರ್ವೇದದ ಪರಿಹಾರ

ಅಜೀರ್ಣ, ಅಸಿಡಿಟಿ ಹಾಗು ಗ್ಯಾಸ್ ಟ್ರಬಲ್ ಸಮಸ್ಯೆಗೆ ಆಯುರ್ವೇದದ ಪರಿಹಾರ

ಆಹಾರ ಸೇವನೆಯ ನಂತರ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿ, ಸಶಬ್ದವಾಗಿ ತೇಗು ಬರುವುದು, ಕೆಳಮುಖವಾಗಿ ಅಪಾನ ವಾಯು ಹೊರಹೋಗುವುದು, ಹೊಟ್ಟೆಯಲ್ಲಿ ಗುಡು ಗುಡು ಶಬ್ದ ಇವು ಗ್ಯಾಸ್ ಟ್ರಬಲ್ ನ ಲಕ್ಷಣಗಳು. ಅತಿಯಾದ ಕಾಳುಗಳ ಸೇವನೆ, ಆಲೂಗೆಡ್ಡೆ ಯಂತಹ ತರಕಾರಿಗಳನ್ನು ವರ್ಜಿಸುವುದು. ಸ್ವಲ್ಪ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಅರ್ಧ ಬತ್ತಿಸಿ ಸೋಸಿ ಈ ನೀರನ್ನು ಸಣ್ಣ ಲೋಟದಲ್ಲಿ ಆಗಾಗ ಕುಡಿಯುವುದರಿಂದ ಗ್ಯಾಸ್ ಉತ್ಪತ್ತಿ ಕಡಿಮೆಯಾಗುತ್ತದೆ.

ಜೀರಿಗೆ ನೀರು ಅಥವಾ ಮೆಂತ್ಯ ನೀರು: ಬೊಜ್ಜು ಕರಗಿಸಲು ಯಾವುದು ಉತ್ತಮ?

ಜೀರಾ ಅಥವಾ ಮೆಂತ್ಯ ನೀರು: ಯಾವ ಪಾನೀಯ ಹೊಟ್ಟೆಯ ಕೊಬ್ಬನ್ನು ಸುಡುತ್ತದೆ?

Health Tips: ಹೊಟ್ಟೆಯ ಬೊಜ್ಜು ಅನ್ನೋದು ಹೆಚ್ಚಿನವರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಇದನ್ನು ಪರಿಹರಿಸಲು ಯುವಕ- ಯುವತಿಯರು ನಾನಾ ರೀತಿಯ ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಜಿಮ್ ,ವರ್ಕೌಟ್ ಎಂದು ದಿನನಿತ್ಯ ಹೋರಾಡಿದರೂ ಬೊಜ್ಜು ನಿವಾರಣೆಯಾಗುತ್ತಿಲ್ಲ.ಆದರೆ ಇಷ್ಟೆಲ್ಲ ಕಷ್ಟ ಪಡುವ ಬದಲು ನೈಸರ್ಗಿಕ ಮನೆ ಮದ್ದುಗಳನ್ನು ಬಳಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು. ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಅಥವಾ ಜೀರಿಗೆ ನೀರು ಕುಡಿಯ‌ ಬಹುದು‌. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ

Rapid Weight Loss: ಧಿಡೀರ್ ತೂಕ ಇಳಿಕೆಯಿಂದ ದೇಹಕ್ಕೇನು ಸಮಸ್ಯೆ?

ಧಿಡೀರ್‌ ತೂಕ ಇಳಿಕೆ ಮಾರಕವೇ?

Fitness Tips: ಎಷ್ಟೋ ಬಾರಿ ಜಾಹೀರಾತುಗಳು ಹೇಳುವುದಿದೆ-ಒಂದು ತಿಂಗಳಲ್ಲಿ ಫ್ರೆಂಚ್‌ ಕಲಿಯುವ, ಒಂದು ವಾರದಲ್ಲಿ ಬೆಳ್ಳಗಾಗುವ,ಒಂದು ವಾರದಲ್ಲಿ 5ಕೆ.ಜಿ. ತೂಕ ಕಡಿಮೆ ಮಾಡುವಂಥ ಏನೇನೋ ಆಮಿಷಗಳನ್ನು ಒಡ್ಡಿವುದಿದೆ. ಇಂಥ ಯಾವುದಾದರೂ ಕೆಲಸ ಸರಿಯಾಗುವುದಕ್ಕೆ ಸಾಧ್ಯವೇ ಎಂಬು ದನ್ನು ನಾವು ಮೊದಲು ಯೋಚಿಸಬೇಕು. ಒಂದೇ ವಾರದಲ್ಲಿ ನಾಲ್ಕಾರು ಕೆ.ಜಿ. ತೂಕ ಇಳಿಸುವುದೆಂದರೆ ಮಕ್ಕಳಾಟವೇ? ಅಥವಾ ನಿಜಕ್ಕೂ ಅದನ್ನು ಮಾಡಬಹುದೇ?

ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ನಟ ಉಪೇಂದ್ರ ಅವರ ತಾಯಿಗೆ ಯಶಸ್ವಿ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

ನಟ ಉಪೇಂದ್ರ ತಾಯಿಗೆ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

81 ವರ್ಷದ ಅನಸೂಯ ಅವರು ಹಲವು ವರ್ಷಗಳಿಂದ ತೀವ್ರವಾದ ಅಸ್ಥಿಸಂಧಿವಾತ (Osteoarthritis) ಸಮಸ್ಯೆಯಿಂದ ಎರಡೂ ಮೊಣಕಾಲುಗಳಲ್ಲಿ ತೀವ್ರ ನೋವು ಹಾಗೂ ಚಲನ ಶೀಲತೆಯಲ್ಲಿ ಮಿತಿಯನ್ನು ಅನುಭವಿಸುತ್ತಿದ್ದರು. ಕ್ರಮೇಣ ಹೆಚ್ಚುತ್ತಿದ್ದ ಈ ಸಮಸ್ಯೆ ಅವರ ದೈನಂದಿನ ಚಟುವಟಿಕೆಗಳು ಹಾಗೂ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿತ್ತು.

World Digestive Health Day: ಜೀರ್ಣಾಂಗಗಳ ಆರೋಗ್ಯಕ್ಕೆ ಇಲ್ಲಿವೆ ಸರಳ ಸೂತ್ರ

ಜೀರ್ಣಾಂಗದ ಆರೋಗ್ಯ ಕಾಳಜಿ ಹೇಗೆ?

Health Tips: ಸರ್ವರೋಗಕ್ಕೂ ಹೊಟ್ಟೆಯೇ ಮೂಲವೆಂಬುದು ಪ್ರಾಚೀನ ತಿಳುವಳಿಕೆ. ಇದಕ್ಕೆ ಪೂರಕವಾಗಿ ಮೇ ತಿಂಗಳ 29ರಂದು ವಿಶ್ವ ಜೀರ್ಣಾಂಗದ ಆರೋಗ್ಯ ದಿನ ಆಚರಿಸಲಾಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗವಂಥ ಅಭ್ಯಾಸಗಳು ಮತ್ತು ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಪಚನಾಂಗಗಳ ಕಾರ್ಯವೈಖರಿಯ ಬಗ್ಗೆ ಅರಿವು ಹೆಚ್ಚಿಸುವುದು ಈ ದಿನದ ಉದ್ದೇಶ. ನಿತ್ಯದ ಆಹಾರಗಳು, ಕುಡಿಯುವ ನೀರು ಸಹ ದೈನಂದಿನ ಬದುಕಿನ ಸ್ವಾಸ್ಥ್ಯ ವೃದ್ಧಿಸುವಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ದಿನದಂದು ಸಾರಲಾಗುತ್ತಿದೆ.

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ? ಸೀಬೆಕಾಯಿ ತಿನ್ನಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ? ಸೀಬೆಕಾಯಿ ತಿನ್ನಿ

Guava benefits: ಸೀಬೆಕಾಯಿಯಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆಯಿದೆ.

ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಲಾಗಿದ್ದ ವೃದ್ಧರಿಗೆ ಬೆಂಗಳೂರಿನಲ್ಲಿ ಯಶಸ್ವಿ ಶ್ವಾಸಕೋಶದ ಕ್ಯಾನ್ಸರ್ ರೊಬೊಟಿಕ್ ಚಿಕಿತ್ಸೆ

ವೃದ್ಧರಿಗೆ ಯಶಸ್ವಿ ಶ್ವಾಸಕೋಶದ ಕ್ಯಾನ್ಸರ್ ರೊಬೊಟಿಕ್ ಚಿಕಿತ್ಸೆ

ನಾಲ್ವರು ಮಕ್ಕಳ ತಂದೆಯಾಗಿರುವ ರೋಗಿಯು ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾದಾಗ ಸತತ ಉಸಿರಾಟದ ತೊಂದರೆ ಮತ್ತು ಕುಸಿಯುತ್ತಿರುವ ಆರೋಗ್ಯದಿಂದ ಸಂಕಷ್ಟ ಅನುಭವಿಸುತ್ತಿದ್ದರು. ಆದಾಗ್ಯೂ, ಅವರ ಗಂಭೀರ ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ದುರ್ಬಲ ಶ್ಚಾಸಕೋಶದ ರಿಸರ್ವ್ ಮತ್ತು ಮಧುಮೇಹವು ಸಾಂಪ್ರದಾಯಿಕ ತೆರೆದ ಎದೆಯ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಕಠಿಣವಾಗಿಸಿತ್ತು

World No Tobacco Day: ತಂಬಾಕಿನ ಚಟದಿಂದ ಮುಕ್ತಿ ಬೇಕೇ? ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ

ತಂಬಾಕಿನ ಚಟದಿಂದ ಮುಕ್ತಿ ಪಡೆಯಲು ಆಯುರ್ವೇದದಲ್ಲಿದೆ ಪರಿಹಾರ

ಧೂಮಪಾನ ಅಥವಾ ತಂಬಾಕು ಚಟಕ್ಕೆ ಅಂಟಿಕೊಂಡಿದ್ದರೆ ಅದರಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಹೆಚ್ಚಿನವರು ಇದರಲ್ಲಿ ಪ್ರಯತ್ನಿಸಿ ಸೋಲುತ್ತಾರೆ. ಇದಕ್ಕೆ ಕಾರಣ ಪ್ರಯತ್ನದ ಕೊರತೆಯಲ್ಲ. ದೇಹದ ಬೆಂಬಲ ದೊರೆಯದೇ ಇರುವುದು. ಆದರೆ ಆಯುರ್ವೇದವು ಅತ್ಯಂತ ಸುಲಭ ವಿಧಾನಗಳ ಮೂಲಕ ತಂಬಾಕಿನ ಚಟದಿಂದ ಮುಕ್ತಿ ದೊರಕಿಸಿಕೊಡುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Loading...