Thursday, 23rd March 2023

ಹಿಜಾಬ್‌ ಸುಖಾಂತ್ಯ: ಪಟ್ಟು ಸಡಿಲಿಸಿದ 46 ವಿದ್ಯಾರ್ಥಿನಿಯರು

ಪುತ್ತೂರು: ಹಿಜಾಬ್‌ ವಿವಾದದ ಮಧ್ಯೆಯೇ ಗುರುವಾರ ರಾಜ್ಯಾದ್ಯಂತ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಕಾಲೇಜುಗಳು ಆರಂಭವಾಗಿದ್ದು, ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಸುಖಾಂತ್ಯಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಸುಖಾಂತ್ಯವಾಗಿದ್ದು, ಕೊನೆಗೂ ಪಟ್ಟು ಸಡಿಲಿಸಿದ 46 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ.

ಇಂದಿನಿಂದ ರಾಜ್ಯಾದ್ಯಂತ ಪಿಯು ಕಾಲೇಜುಗಳು ಆರಂಭವಾಗಿದ್ದು, ಪದವಿಪೂರ್ವ ಕಾಲೇಜುಗಳಿಗೂ ಸಮವಸ್ತ್ರ ಕಡ್ಡಾಯ ಗೊಳಿಸಲಾಗಿದೆ. ಹಿಜಾಬ್‌ ಧರಿಸಿ ಬಂದರೆ ತರಗತಿಗಳಿಗೆ ಅನುಮತಿ ಇಲ್ಲ. ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್‌ ಆದೇಶ ಪಾಲಿ ಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

error: Content is protected !!