ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

IND vs ENG: ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ಅಗತ್ಯ!

ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಅಗತ್ಯ!

ಎರಡು ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಇದೀಗ ಜುಲೈ 19 ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಹಾಗೂ ಸರಣಿಯ ಪಂದ್ಯದಲ್ಲಿ ಗೆಲ್ಲಲು ಎರಡೂ ತಂಡಗಳು ಎದುರು ನೋಡುತ್ತಿವೆ.

6 ಎಸೆತಗಳಿಗೆ ಆರು ಸಿಕ್ಸರ್​ ಬಾರಿಸಿದ ಮೊದಲ ಆಟಗಾರ ಸರ್ ಗ್ಯಾರಿ ಸೋಬರ್ಸ್

6 ಎಸೆತಗಳಿಗೆ ಆರು ಸಿಕ್ಸರ್​ ಬಾರಿಸಿದ ಮೊದಲ ಆಟಗಾರ ಸೋಬರ್ಸ್

Garfield Sobers passes away: ಆಲ್‌ರೌಂಡರ್ ಆಗಿದ್ದ ಸರ್ ಗ್ಯಾರಿ ಸೋಬರ್ಸ್ ಅವರು 1954 ರಿಂದ 1974 ರವರೆಗೆ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8,032 ರನ್ ಗಳಿಸಿದ್ದಾರೆ ಮತ್ತು 235 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 1958 ರಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 365 ರನ್ ಗಳಿಸಿ, ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ರನ್ ದಾಖಲಿಸಿದ್ದರು.

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌ ಅವರ ಜೀವನಯಾನ, ಮೆಸ್ಸಿಯೊಂದಿಗೆ ವೈರಲ್‌ ಆದ ಬಾಲ್ಯದ ಫೋಟೋ, ಕುಟುಂಬದ ಹಿನ್ನೆಲೆ ಮತ್ತು ವಿಶ್ವ ಫುಟ್ಬಾಲ್‌ನಲ್ಲಿ ಅವರ ವೇಗದ ಬೆಳವಣಿಗೆಯ ಸಂಪೂರ್ಣ ಕಥೆ ಈ ಲೇಖನದಲ್ಲಿದೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ಗೂ ಮುನ್ನ ಮೆಸ್ಸಿ ಮತ್ತು ಯಮಾಲ್‌ ನಡುವಣ ಜಟಾಪಟಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

Chennamma Deve gowda: ಚೆನ್ನಮ್ಮ ಆರೋಗ್ಯ ಸ್ಥಿತಿ ಈಗ ಹೇಗಿದೆ?: ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ ಮಣಿಪಾಲ್‌ ಆಸ್ಪತ್ರೆ

ಚೆನ್ನಮ್ಮ ಆರೋಗ್ಯ ಸ್ಥಿರವಾಗಿದೆ: ಮಣಿಪಾಲ್‌ ಆಸ್ಪತ್ರೆ ವೈದ್ಯರ ಮಾಹಿತಿ

ಉಸಿರಾಟ ಸಮಸ್ಯೆ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಚೆನ್ನಮ್ಮ ಅವರು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರ ನಿಗಾದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಆಸ್ಪತ್ರೆಯು ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದೆ.

89ನೇ ವಯಸ್ಸಿನಲ್ಲಿ ನಿಧನರಾದ ವಿಂಡೀಸ್‌ ದಿಗ್ಗಜ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌!

89ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್!

ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ವೆಸ್ಟ್‌ ಇಂಡೀಸ್‌ ದಿಗ್ಗಜ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಅವರು ತಮ್ಮ 89ನೇ ವಯಸ್ಸಿನಲ್ಲಿ ವಿಧವಶರಾಗಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅವರು ಶ್ರೇಷ್ಠ ಪ್ರದರ್ಶನಗಳನ್ನು ತೋರುವ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ.

ದೇಶಾದ್ಯಂತ 1275 ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೆ ಯೋಜನೆ: ಜೋಶಿ ಮಾಹಿತಿ

ದೇಶಾದ್ಯಂತ 1275 ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೆ ಯೋಜನೆ: ಜೋಶಿ ಮಾಹಿತಿ

Pralhad Joshi: ರಾಜ್ಯದಲ್ಲಿನ ನಾಲ್ಕು ರೈಲು ನಿಲ್ದಾಣಗಳು ಸೇರಿದಂತೆ ದೇಶದ ಒಟ್ಟಾರೆ 75 ಅಮೃತ್ ಭಾರತ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿರುವುದು ಭಾರತದ ವೇಗದ ಬೆಳವಣಿಗೆಗೆ ನಿದರ್ಶನವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಗ್ರಾಹಕರನ್ನು ಆಕರ್ಷಿಸಲು ಡಾರ್ಕ್ ಪ್ಯಾಟರ್ನ್ ಪ್ರದರ್ಶನ; ಸ್ಪೈಸ್ ಜೆಟ್ ಏರ್‌ಲೈನ್ಸ್‌ಗೆ 1 ಲಕ್ಷ ರು. ದಂಡ

ಡಾರ್ಕ್ ಪ್ಯಾಟರ್ನ್; ಸ್ಪೈಸ್ ಜೆಟ್ ಏರ್‌ಲೈನ್ಸ್‌ಗೆ 1 ಲಕ್ಷ ದಂಡ

ವಿಮಾನಯಾನ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ 'ಡಾರ್ಕ್ ಪ್ಯಾಟರ್ನ್ ' ಪ್ರದರ್ಶಿಸಿದ್ದ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರುಪಾಯಿ ದಂಡ ವಿಧಿಸುವ ಮೂಲಕ ಎಚ್ಚರಿಸಿದೆ.

Shidlaghatta News: ಅಧ್ಯಕ್ಷ ಸ್ಥಾನ ನೀಡಿದರೆ ಅಭಿವೃದ್ಧಿಗೆ ಆದ್ಯತೆ: ಜೆಡಿಎಸ್ ಬೆಂಬಲಿತ ಅನಿತಾ

ಅಧ್ಯಕ್ಷ ಸ್ಥಾನ ನೀಡಿದರೆ ಅಭಿವೃದ್ಧಿಗೆ ಆದ್ಯತೆ: ಜೆಡಿಎಸ್ ಬೆಂಬಲಿತ ಅನಿತಾ

ವಯಸ್ಸಿನಲ್ಲಿ ಹಿರಿಯರಾಗಿದ್ದ ಸದಸ್ಯರಿಗೆ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲಾ ಗಿದ್ದು, ಬಳಿಕದ 15 ತಿಂಗಳ ಅವಧಿಗೆ ನನಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಶಾಸಕ ಬಿ.ಎನ್. ರವಿಕುಮಾರ್(MLA B.N.Ravikumar) ಅವರ ಸಮ್ಮುಖದಲ್ಲೇ ಭರವಸೆ ನೀಡಲಾಗಿತ್ತು. ಇದೀಗ ಮೊದಲ ಅವಧಿ ಪೂರ್ಣ ಗೊಂಡಿರುವುದರಿಂದ ನೀಡಿದ ಮಾತಿನಂತೆ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಬೇಕು

ʻಏಕದಿನ ವಿಶ್ವಕಪ್‌ ಗೆಲ್ಲುವ ರೋಹಿತ್ ಶರ್ಮಾರ ಕನಸು ಭಗ್ನʼ: ಭಾರತ ತಂಡದಲ್ಲಿ ನಡೆಯತ್ತಿರುವ ಬೆಳವಣಿಗೆಗಳ ಸಂಪೂರ್ಣ ವಿವರ!

ರೋಹಿತ್‌ ಶರ್ಮಾರ ಏಕದಿನ ವಿಶ್ವಕಪ್‌ ಗೆಲ್ಲುವ ಕನಸು ಭಗ್ನ?

ಭಾರತ ಏಕದಿನ ತಂಡದಲ್ಲಿ ಇದೀಗ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಎರಡು ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರಿಗೆ ಲಾರ್ಡ್ಸ್‌ ಪಂದ್ಯ ನಿಮಗೆ ಕೊನೆ ಎಂದು ಬಿಸಿಸಿಐ ಆಯ್ಕೆದಾರರು ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಈಗಾಗಲೇ ತಿಳಿಸಿದ್ದಾರೆ. ಈ ಬಗ್ಗೆ ರೋಹಿತ್‌ ಶರ್ಮಾ ಅಸಮಾಧಾನವನ್ನು ಹೊರ ಹಾಕಿದ್ದಾರೆಂದು ವರದಿಯಾಗಿದೆ.

"ಕೆಲಸ ಮಾಡಿದ್ದಕ್ಕೆ ಸರಿಯಾದ ಶಿಕ್ಷೆ ಸಿಕ್ಕಿದೆ": ಮ್ಯಾನೇಜರ್‌ ರಜೆಯಲ್ಲಿದ್ದಾಗ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ಕೆಟ್ಟ ಹೆಸರು ಪಡೆದ ಉದ್ಯೋಗಿ!

ಮ್ಯಾನೇಜರ್ ರಜೆ ಇದ್ದಾಗ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಉದ್ಯೋಗಿ

Viral News: ಭಾರತೀಯ ಉದ್ಯೋಗಿಯೊಬ್ಬರು ತನ್ನ ಮಾನ್ಯೇಜರ್ ರಜೆಯಲ್ಲಿದಾಗ ಕಂಪನಿಯ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ತನಗೆ ಶಿಕ್ಷೆಯಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ಇದು ಎಲ್ಲ ಉದ್ಯೋಗದಲ್ಲಿ ನಡೆಯುವ ಮೊದಲನೇ ಸಮಸ್ಯೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಚಾಲಕನ ಜೊತೆ ರಾಜನಂತೆ ಕುಳಿತ ಬೀದಿನಾಯಿ; ವಿಡಿಯೊ ನೋಡಿ

ಸೈಕಲ್ ರಿಕ್ಷಾ ಚಾಲಕ ಹಾಗೂ ಬೀದಿನಾಯಿಯ ಭಾಂದವ್ಯಕ್ಕೆ ನೆಟ್ಟಿಗರು ಫಿದಾ!

Viral Video: ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಯೂ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ಇವರಿಬ್ಬರ ಪ್ರೆಂಡ್ ಶೀಪ್ ಗೆ ಲೈಕ್ ಕಾಮೆಂಟ್ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

Deepika Padukone: 7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

Deepika Padukone: ನಟಿ ದೀಪಿಕಾ, ಶೀಘ್ರದಲ್ಲೇ ಅಲ್ಲು ಅರ್ಜುನ್ ಜೊತೆ ರಾಕಾ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರು ಚಿತ್ರಕ್ಕಾಗಿ ಆಕ್ಷನ್ ಸನ್ನಿವೇಶಗಳನ್ನೂ ಮಾಡಬೇಕಾಗಿದೆ. ಆದರೆ ಏಳು ತಿಂಗಳ ಗರ್ಭಿಣಿ ಹೊರತಾಗಿಯೂ ದೀಪಿಕಾ ಆ್ಯಕ್ಷನ್​ ದೃಶ್ಯಗಳಿಗೆ ಡ್ಯೂಪ್​ ಬಳಸದೇ ಖುದ್ದು ಮಾಡುತ್ತಿದ್ದಾರೆ!ದೀಪಿಕಾ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾ. ವಿ. ನಾಗೇಂದ್ರ ಪ್ರಸಾದ್‌ಗೆ 50ನೇ ಹುಟ್ಟುಹಬ್ಬ; ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ

ʻಕವಿರತ್ನʼ ನಾಗೇಂದ್ರ ಪ್ರಸಾದ್‌ಗೆ 50ರ ಸಂಭ್ರಮ; ಜು.19ಕ್ಕೆ ಮಹಾ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ 3,000ಕ್ಕೂ ಹೆಚ್ಚು ಅದ್ಭುತ ಹಾಡುಗಳನ್ನು ಹೆಣೆದಿರುವ ಜನಪ್ರಿಯ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ ಆಯೋಜಿಸಲಾಗಿದೆ.

ಆರ್‌ಸಿಬಿಯನ್ನು ತೊರೆದು ಇಂಗ್ಲೆಂಡ್‌ ಹೆಡ್‌ ಕೋಚ್‌ ಹುದ್ದೆಗೆ ಸೇರಲ್ಲ ಎಂದ ಆಂಡಿ ಫ್ಲವರ್‌!

ಆರ್‌ಸಿಬಿಯನ್ನು ಬಿಟ್ಟು ಹೋಗಲ್ಲ ಎಂದ ಆಂಡಿ ಫ್ಲವರ್‌!

ಇಂಗ್ಲೆಂಡ್‌ ಟೆಸ್ಟ್‌ ತಂಡದ ಹೆಡ್‌ ಕೋಚ್‌ ಆಗುವ ಅವಕಾಶವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್‌ ಆಂಡಿ ಫ್ಲವರ್‌ ನಿರಾಕರಿಸಿದ್ದಾರೆ. ದಿ ಟೆಲಿಗ್ರಾಫ್‌ ಜೊತೆ ಮಾತನಾಡಿದ ಆರ್‌ಸಿಬಿ ಕೋಚ್‌, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಾವು ಮಾಡುತ್ತಿರುವ ಕೆಲಸದಲ್ಲಿ ಖುಷಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ.

Kanakapura murder: ಪ್ರೇಯಸಿಯನ್ನು ಗುಂಡಿಟ್ಟು ಕೊಂದು ತೋಟದಲ್ಲಿ ಹೂತುಹಾಕಿದ ಯುವಕ!

ಪ್ರೇಯಸಿಯನ್ನು ಕೊಂದು ತೋಟದಲ್ಲಿ ಹೂತುಹಾಕಿದ ಯುವಕ!

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಶಯಗೊಂಡ ಯುವಕ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿದ್ದಾನೆ.

Rakul Preet Singh: ಬಾಲಿವುಡ್‌ನಲ್ಲಿ ಅಸೂಯೆ, ತೆಲುಗು ಚಿತ್ರರಂಗದಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

ಬಾಲಿವುಡ್‌ನಲ್ಲಿ ಅಸೂಯೆ, ಟಾಲಿವುಡ್‌ನಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

Rakul Preet Singh: ರಕುಲ್, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌, ಟಾಲಿವುಡ್‌ ಉದ್ಯಮಗಳಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. ಈ ನೇರ ನುಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

Bengaluru Power Cut: ಗಮನಿಸಿ; ಜುಲೈ 18, 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಜುಲೈ 18, 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru Power Cut: 220/66/11 ಕೆ.ವಿ. ಐ.ಟಿ.ಐ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ-1 ಮತ್ತು 2 ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 18ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ʻಜನ ನಾಯಗನ್‌ʼ ಸಿನಿಮಾಗೆ ರೂ. 1,000, ʻದಿ ಒಡಿಸ್ಸಿʼಗೆ ರೂ. 1,950! ದುಬಾರಿ ಟಿಕೆಟ್‌ ದರದಿಂದಾಗಿ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ಹಗಲು ದರೋಡೆ!

ಅಬ್ಬಬ್ಬಾ! ಬೆಂಗಳೂರಿನಲ್ಲಿ ʻಜನ ನಾಯಗನ್‌ʼ ಟಿಕೆಟ್‌ ರೇಟ್‌ 1,000 ರೂ.!

ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ದುಬಾರಿ ಟಿಕೆಟ್ ದರದಿಂದಾಗಿ ಪ್ರೇಕ್ಷಕರ ರಾಜಾರೋಷ ಸುಲಿಗೆ ನಡೆಯುತ್ತಿದೆ. ತಮಿಳು ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿಂಗಲ್ ಸ್ಕ್ರೀನ್‌ಗಳಲ್ಲೇ ಬರೋಬ್ಬರಿ 1000 ರೂ.ಗೆ ಮಾರಾಟವಾಗುತ್ತಿದ್ದು, ಕೇವಲ 42 ಶೋಗಳಿಂದ 1.90 ಕೋಟಿ ರೂ. ಮುಂಗಡ ಬುಕಿಂಗ್ ಮಾಡಿದೆ. ಇತ್ತ ಹಾಲಿವುಡ್ ಚಿತ್ರ 'ದಿ ಒಡಿಸ್ಸಿ' ಟಿಕೆಟ್ ದರ 1950 ರೂ. ತಲುಪಿದ್ದು, ಸಿನಿಮಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

LPL 2026: ಭಾರತ ಅಂಡರ್‌-19 ತಂಡದ ಮಾಜಿ ಆಟಗಾರ ಮಂಜೀತ್‌ ಕಲ್ರಾ ಶ್ರೀಲಂಕಾದಲ್ಲಿ ಬಂಧನ!

ಲಂಚ ನೀಡಲು ಯತ್ನ; ಭಾರತ ಅಂಡರ್‌-19 ಮಾಜಿ ಆಟಗಾರ ಬಂಧನ!

ಭಾರತದ ಮಾಜಿ ಅಂಡರ್-19 ವಿಶ್ವಕಪ್ ವಿಜೇತ ಆಟಗಾರ ಮಂಜೋತ್ ಕಲ್ರಾ ಅವರನ್ನು ಲಂಕಾ ಪ್ರೀಮಿಯರ್ ಲೀಗ್ ವೇಳೆ ಆಟಗಾರರಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಬಂಧಿಸಲಾಗಿದೆ. ಕಲ್ರಾ ಅವರು ಎಲ್‌ಪಿಎಲ್ ಫ್ರಾಂಚೈಸಿಯಾದ ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ ಎಂದು ವರದಿಯಾಗಿದೆ.

ಸಚಿವ ಸಂಪುಟ ವಿಸ್ತರಣೆ, ಜಿಬಿಎ ಚುನಾವಣೆ ಬಗ್ಗೆ ಅಪ್‌ಡೇಟ್‌ ಕೊಟ್ಟ ಸಿಎಂ ಡಿ.ಕೆ. ಶಿವಕುಮಾರ್

ಸಚಿವ ಸಂಪುಟ ವಿಸ್ತರಣೆ, ಜಿಬಿಎ ಚುನಾವಣೆ ಬಗ್ಗೆ ಅಪ್‌ಡೇಟ್‌ ಕೊಟ್ಟ ಸಿಎಂ

CM DK Shivakumar: ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಶನಿವಾರ ಭೇಟಿ ಮಾಡಲಾಗುವುದು. ವರಿಷ್ಠರ ಮಾರ್ಗದರ್ಶನ ಪಡೆದು ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

"ಸತ್ತರೂ ಭೂತವಾಗಿ ಬಂದು ಕಾಡುತ್ತೇನೆ"; ಜುಲೈ 20ಕ್ಕೆ ಸಂಸತ್ ಚಲೋಗೆ ಸೋನಂ ವಾಂಗ್ಚುಕ್ ಕರೆ

20ನೇ ದಿನಕ್ಕೂ ಮುಂದುವರಿದ ಸೋನಂ ವಾಂಗ್ಚುಕ್ ಉಪವಾಸ

ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಜುಲೈ 20ರವರೆಗೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಅದೇ ದಿನ ನಡೆಯಲಿರುವ 'ಸಂಸತ್ ಚಲೋ' ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಜನತೆಗೆ ಕರೆ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದು, ಆರೋಗ್ಯ ಹದಗೆಟ್ಟಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

Spoorthi Shetty: ಮಿಸ್ ಯೂನಿವರ್ಸ್ ಇಂಡಿಯಾ 2026 ಅಂತಿಮ ಸುತ್ತಿಗೆ ಉಡುಪಿಯ ಸ್ಫೂರ್ತಿ ಶೆಟ್ಟಿ ಅಯ್ಕೆ

ಮಿಸ್ ಯೂನಿವರ್ಸ್ ಇಂಡಿಯಾ ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ

Miss Universe India 2026: ಈ ಹಿಂದೆ ಕರ್ನಾಟಕ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಸುತ್ತು ಪ್ರವೇಶಿಸಲು ವಿಫಲರಾಗಿದ್ದ ಸ್ಫೂರ್ತಿ, ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಿಸ್ ಯೂನಿವರ್ಸ್ ಇಂಡಿಯಾ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 23ರಂದು ನವದೆಹಲಿಯಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಅಂತಿಮ ಸುತ್ತಿನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸುಮಾರು 50 ಸ್ಪರ್ಧಿಗಳೊಂದಿಗೆ ಸ್ಫೂರ್ತಿ ಶೆಟ್ಟಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

Saroja Srishailan: ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ

Shailaja Srishailan: ‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ‘ಮುಕ್ತ’ ಮತ್ತು ‘ಮಾಯಾಮೃಗ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲೂ ಅಭಿನಯಿಸಿ ಕನ್ನಡ ಕಿರುತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಇಂದು ಬೆಂಗಳೂರಿನ ಶ್ರೀರಾಂಪುರದ ವಿದ್ಯುತ್ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ .

ಪಿಎಫ್ ವಿವಾದಗಳ ಇತ್ಯರ್ಥಕ್ಕೆ 'ವಿಶ್ವಾಸ್-2026' ಯೋಜನೆ ಜಾರಿ; ಉದ್ಯೋಗಸ್ಥರಿಗೆ ಏನೆಲ್ಲಾ ಲಾಭ?

ಪಿಎಫ್ ವಿವಾದಗಳ ಇತ್ಯರ್ಥಕ್ಕೆ 'ವಿಶ್ವಾಸ್-2026' ಯೋಜನೆ ಜಾರಿ

EPFO: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ರ ಸೆಕ್ಷನ್ 14ಬಿ ಮತ್ತು ಸಾಮಾಜಿಕ ಭದ್ರತೆ, 2020ರ ಸಂಹಿತೆಯ ಸೆಕ್ಷನ್ 128ರ ಅಡಿಯಲ್ಲಿ ಹದಂಡ ವಿಧಿಸುವುದಕ್ಕೆ ಸಂಬಂಧಿಸಿದ ವಿವಾದಗಳ ಪರಸ್ಪರ ಸೌಹಾರ್ದಯುತ ಇತ್ಯರ್ಥಕ್ಕೆ ಅನುಕೂಲವಾಗುವಂತೆ ಪರಿಹಾರ ಉಪಕ್ರಮವಾದ "ವಿಶ್ವಾಸ್, 2026" ಅನ್ನು ಪ್ರಾರಂಭಿಸಿದೆ.

Loading...