ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

ನೆಲಮಂಗಲ ಬಳಿ ಭೀಕರ ಅಪಘಾತ;  KSRTC ಬಸ್​​ಗೆ ಗುದ್ದಿದ ಕಾರು,  ಐವರು ಸ್ಥಳದಲ್ಲಿಯೇ ಸಾವು

KSRTC ಬಸ್​​ಗೆ ಗುದ್ದಿದ ಕಾರು, ಐವರು ಸ್ಥಳದಲ್ಲಿಯೇ ಸಾವು

ಮಹಾ ಶಿವರಾತ್ರಿಯಂದೇ ಘೋರ ಘಟನೆ ನಡೆದಿದ್ದು, ನೆಲಮಂಗಲ ಜಿಂದಾಲ್ ಬಳಿ KSRTC ಬಸ್​​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದೊಡ್ಡಬಳ್ಳಾಪುರದ ಹರ್ಷಿತ್, ನಿಖಿತ್ ಸೇರಿ ಇತರರು ಮೃತ ದುರ್ದೈವಿಗಳಾಗಿದ್ದಾರೆ.

Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Rajinikanth: ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ; ಹಾಲಿನ ಅಭಿಷೇಕ ಮಾಡಿದ ಅಭಿಮಾನಿ

ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ ಮಾಡಿದ ಫ್ಯಾನ್‌!

shivaratri: ಮಹಾಶಿವರಾತ್ರಿಗೂ ಮುನ್ನ, ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಯೊಬ್ಬರು ನಟನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಅಭಿಮಾನಿಯೊಬ್ಬರು ಸೂಪರ್‌ಸ್ಟಾರ್ ಪೋಸ್ಟರ್‌ಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಲಾಗಿದ್ದು, ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

Srivathsa Joshi Column: ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ... ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಸುವರದರಂತೆ ಕಾಣುವನು ಎಂದಿದ್ದಾರೆ ನಿಜಗುಣ ಶಿವಯೋಗಿಗಳು. ಭಗವಂತನು ಭಕ್ತರ ಮನೋಭಾವ ಮತ್ತು ಭಕ್ತಿಯ ತೀವ್ರತೆಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಸಾಕ್ಷಾತ್ಕಾರವಾಗುತ್ತಾನೆ.

Rakshit Shetty: ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌!

‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌!

Pramod shetty: ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ರಕ್ಷಿತ್ ಶೆಟ್ಟಿ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಿರಿಕ್ ಪಾರ್ಟಿ, ಚಾರ್ಲಿ ಹಾಗೂ ಸಪ್ತಸಾಗರದಾಚೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಬಳಿಕ ಅವರ ಅಭಿನಯದ ಯಾವ ಸಿನಿಮಾ ಕೂಡ ಬಂದಿಲ್ಲ.

ಶಿವರಾತ್ರಿ ವಿಶೇಷ: ಮಹಾದೇವನಿಗೆ ಪ್ರಿಯವಾದ ತಂಬಿಟ್ಟು ಮಾಡುವ ಸುಲಭ ವಿಧಾನ

ಶಿವರಾತ್ರಿ ನೈವೇದ್ಯ: ಸಾಂಪ್ರದಾಯಿಕ ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ

Maha Shivaratri: ಮಹಾ ಶಿವರಾತ್ರಿಯಂದು ಮಹಾದೇವನಿಗೆ ಪ್ರಿಯವಾದ ತಂಬಿಟ್ಟು ನೈವೇದ್ಯವನ್ನು ಭಕ್ತರು ವಿಶೇಷವಾಗಿ ತಯಾರಿಸುತ್ತಾರೆ. ಅಕ್ಕಿ, ಬೆಲ್ಲ, ಎಳ್ಳು, ಹುರಿಗಡಲೆ, ಕಡಲೆಬೀಜ ಮೊದಲಾದ ಪದಾರ್ಥಗಳಿಂದ ಈ ಸಾಂಪ್ರದಾಯಿಕ ಸಿಹಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸರಿಯಾದ ವಿಧಾನದಲ್ಲಿ ತಯಾರಿಸಿದ ತಂಬಿಟ್ಟು ಶಿವನ ಪೂಜೆಯಲ್ಲಿ ಪ್ರಮುಖ ನೈವೇದ್ಯ ಎನಿಸಿಕೊಂಡಿದೆ.

Vinayaka V Bhat Column: ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಅಂದಿನ ಸಭೆಯ ಪ್ರಸ್ತುತತೆಯನ್ನು ಗಮನದಲ್ಲಿಟ್ಟು, ತನ್ನನ್ನು ಯಾತಕ್ಕೆ ಕರೆಸಿದ್ದಾರೆ ಎನ್ನುವು ದನ್ನು ಮರೆಯದೇ ಹಾಗೂ ಸಮಯ ಸಂದರ್ಭಗಳನ್ನು ಪರಾಂಬರಿಸಿ, ಇನ್ನೂ ಸ್ವಲ್ಪ ಹೊತ್ತು ಇವರು ಮಾತನಾಡಬಹುದಿತ್ತು ಎನ್ನುವ ಭಾವ ಪ್ರೇಕ್ಷಕರಲ್ಲಿರುವಾಗಲೇ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿ ಮುಗಿಸುವವನೇ ನಿಜವಾದ ಭಾಷಣಕಾರ ಎನ್ನಬಹುದು.

ಮಹಾಶಿವರಾತ್ರಿ ವ್ರತ: ಉಪವಾಸ, ಜಾಗರಣೆಯ ಮೂಲಕ ಶಿವಕೃಪೆ ಪಡೆಯುವ ಪರ್ವ ಕಾಲ

ಮಹಾಶಿವರಾತ್ರಿ ಉಪವಾಸ ಮಹತ್ವ

Maha Shivaratri: ಮಹಾಶಿವರಾತ್ರಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಆಧ್ಯಾತ್ಮಿಕ ಪರ್ವ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಈ ಹಬ್ಬವು ಉಪವಾಸ, ಜಾಗರಣೆ ಮತ್ತು ಶಿವಪೂಜೆಯ ಮೂಲಕ ಮನಸ್ಸಿನ ಶುದ್ಧೀಕರಣಕ್ಕೆ ದಾರಿ ತೋರಿಸುತ್ತದೆ. ಶಿವ–ಪಾರ್ವತಿ ವಿವಾಹ ಹಾಗೂ ಹಾಲಾಹಲ ವಿಷಪಾನದ ಪೌರಾಣಿಕ ಹಿನ್ನೆಲೆಯೊಂದಿಗೆ, ಭಕ್ತರು ನಾಲ್ಕು ಯಾಮಗಳ ಪೂಜೆಯಲ್ಲಿ ಭಾಗವಹಿಸಿ ಶಿವನ ಕೃಪೆ ಪಡೆಯುತ್ತಾರೆ.

Maha Shivaratri: ಮಹಾದೇವನ ಜನನದ ಹಿಂದೆ ಇರುವ ಪೌರಾಣಿಕ ಹಿನ್ನೆಲೆ ಏನು?

ಶಿವ ಅವತಾರ ಹೇಗಾಯ್ತು? ಪುರಾಣದ ಕಥೆ ಇಲ್ಲಿದೆ

ಮಹಾ ಶಿವರಾತ್ರಿಯನ್ನು ಹಿಂದೂ ಧರ್ಮದಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶಿವನು ಸ್ವಯಂಭೂ ಆಗಿದ್ದು, ವಿಷ್ಣು ಪುರಾಣದಲ್ಲಿ ಅವನ ಉದ್ಭವದ ಕುರಿತು ಹಲವು ಕಥೆಗಳು ಉಲ್ಲೇಖವಾಗಿವೆ. ಬ್ರಹ್ಮನ ತಪಸ್ಸಿನ ಫಲವಾಗಿ ಶಿವನು ಶಿಶು ರೂಪದಲ್ಲಿ ಕಾಣಿಸಿಕೊಂಡನು ಎನ್ನುವ ಕಥೆಯೂ ಇದೆ. ಶಿವನು ರುದ್ರ, ಶರ್ವ, ಭವ, ಉಗ್ರ, ಭೀಮ, ಪಶುಪತಿ, ಇಶಾನ್ ಮತ್ತು ಮಹಾದೇವ ಎಂಬ ಅಷ್ಟನಾಮಗಳಿಂದ ಪ್ರಸಿದ್ಧ. ಈ ಪೌರಾಣಿಕ ಕಥೆ ಶಿವನ ಮಹಿಮೆ ಮತ್ತು ದಿವ್ಯತ್ವವನ್ನು ವಿವರಿಸುತ್ತದೆ.

ನಿತ್ಯ ಭವಿಷ್ಯ ಫೆಬ್ರವರಿ 15: ಮಹಾ ಶಿವರಾತ್ರಿಯಂದು ಈ ರಾಶಿಯವರಿಗೆ ಶುಭ ಯೋಗ

ಈ ರಾಶಿಯವರಿಗೆ ಇಂದು ಶಿವನ ಕೃಪೆಯಿಂದ ಅದೃಷ್ಟ

Horoscope Today February 15th 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಶರದೃತು ಮಘೆ ಮಾಸೆ, ಕೃಷ್ಣೆ ಪಕ್ಷ, ತ್ರಯೋದಶಿ ತಿಥಿ, ಉತ್ತರಾಷಡ ನಕ್ಷತ್ರದ ಫೆಬ್ರವರಿ 15ನೇ ತಾರೀಖಿನ ಈ ದಿನ ಮಹಾಶಿವರಾತ್ರಿ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Vishweshwar Bhat Column: ಸಣ್ಣ ದೇಹ, ಅಗಾಧ ವೇಗ: ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

ಹಮ್ಮಿಂಗ್ ಬರ್ಡ್‌ಗಳು ಸಾಮಾನ್ಯವಾಗಿ ಕೇವಲ ಎಂಟರಿಂದ ಇಪ್ಪತ್ತು ಗ್ರಾಮ್ ತೂಕ ವಿರುತ್ತವೆ. ಅಂದರೆ, ನಮ್ಮ ಕೈಯಲ್ಲಿರುವ ಹತ್ತು ರುಪಾಯಿ ನಾಣ್ಯಕ್ಕಿಂತಲೂ ಇವು ಹಗುರ! ಆದರೆ, ಈ ಪುಟ್ಟ ದೇಹದೊಳಗೆ ಒಬ್ಬ ದೀರ್ಘಾವಧಿ ಓಟಗಾರನಿಗೆ ಇರಬೇಕಾದ ಸರ್ವ ಸಾಮರ್ಥ್ಯವೂ ಅಡಗಿದೆ. ಇವುಗಳ ಹೃದಯ ಬಡಿತ ಮತ್ತು ಶಕ್ತಿಯ ವ್ಯಯದ ಪ್ರಮಾಣವು ಭೂಮಿಯ ಮೇಲಿನ ಯಾವುದೇ ಪ್ರಾಣಿಗಿಂತಲೂ ಹೆಚ್ಚು.

Chikkaballapur News: ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ: ಜಿಲ್ಲಾಧಿಕಾರಿ ಜಿ ಪ್ರಭು

ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ

2025-26ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ 7392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಛೆ ಪಟ್ಟಿರುತ್ತಾರೆ. ಅದರಂತೆ 6 ತಾಲೂಕಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ.

ಬ್ರಾಹ್ಮಣರ ಕುರಿತು ಅವಹೇಳನಕಾರಿ ಹೇಳಿಕೆ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು ದಾಖಲು

ಬ್ರಾಹ್ಮಣರ ಅವಹೇಳನ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು

ಹೊನ್ನಾವರ ತಾಲೂಕು ಮೊಳ್ಕೊಡದ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರು, ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಕೆಟ್ಟ ಉದ್ದೇಶದಿಂದ ಹಲವು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಸಾಗರ ಘಟಕ ದೂರು ಸಲ್ಲಿಸಿದೆ.

ಹ್ಯಾಟ್ರಿಕ್‌ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ; ಐರ್ಲೆಂಡ್‌, ಇಂಗ್ಲೆಂಡ್‌ಗೂ ಗೆಲುವಿನ ಸಿಹಿ

ಹ್ಯಾಟ್ರಿಕ್‌ ಗೆಲುವು; ದಕ್ಷಿಣ ಆಫ್ರಿಕಾದ ಸೂಪರ್‌-8 ಪ್ರವೇಶ ಬಹುತೇಕ ಖಚಿತ

T20 World Cup: ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದ ಇಂಗ್ಲೆಂಡ್‌ ಸದ್ಯ 'ಸಿ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿದೆ. ಇನ್ನೊಂದು ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಸೂಪರ್‌-8 ಹಂತಕ್ಕೆ ಪ್ರವೇಶ ಪಡೆಯಲಿದೆ. ಇಂಗ್ಲೆಂಡ್‌ ಪರ ಚೇಸಿಂಗ್‌ ವೇಳೆ ಟಾಮ್ ಬ್ಯಾಂಟನ್ ತಂಡಕ್ಕೆ ನೆರವಾದರು. 41 ಎಸೆತ ಎದುರಿಸಿದ ಅವರು 3 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ ಅಜೇಯ 63ರನ್‌ ಗಳಿಸಿದರು.

ವ್ಯಾಲೆಂಟೈನ್ಸ್ ಡೇಯಂದು ಜೈಲಿನಿಂದಲೇ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಐಷಾರಾಮಿ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌ ಚಂದ್ರಶೇಖರ್‌

ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌

Sukesh Chandrashekhar: ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಪ್ರೇಯಸಿ, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಫೆಬ್ರವರಿ 14ರಂದು ಐಷಾರಾಮಿ ಹೆಲಿಕಾಫ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ʼಬೇಬಿ ಬೊಮ್ಮ ಜಾಕ್ವೆಲ್‌ʼ ಎಂದು ಕರೆದು ಭಾವನಾತ್ಮಕ ಪತ್ರ ಬರೆದಿದ್ದಾರೆ.

ಭೀಮಣ್ಣ ಖಂಡ್ರೆ ಕನಸು ನನಸಾಗಿಸಲು ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಮಂಜೂರು: ಡಿ.ಕೆ. ಶಿವಕುಮಾರ್ ಭರವಸೆ

ಹಾಸ್ಟೆಲ್ ನಿರ್ಮಾಣ ಮಾಡಲು ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಕೆಶಿ

DK Shivakumar: ಇತ್ತೀಚೆಗೆ ಈಶ್ವರ್ ಖಂಡ್ರೆ ಅವರು ನನ್ನನ್ನು ಭೇಟಿ ಮಾಡಿ, ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಬಡ ಮಕ್ಕಳು, ಹೊರಗಡೆಯಿಂದ ಬಂದ ಮಕ್ಕಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಜಾಗ ಒದಗಿಸಿಕೊಡಬೇಕು ಎಂದು ತಿಳಿಸಿದರು. ಈ ಕೆಲಸವನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿಕೊಡುತ್ತೇವೆ ಎಂದು ಈ ಭವ್ಯ ಸಭೆಯಲ್ಲಿ ತಿಳಿಸಲು ಬಯಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಿಜವಾದ ಪ್ರೇಮಿಗಳ ಉಡುಗೊರೆ: ಉತ್ತಮ ಆರೋಗ್ಯದಲ್ಲಿ ಭವಿಷ್ಯ

ನಿಜವಾದ ಪ್ರೇಮಿಗಳ ಉಡುಗೊರೆ: ಉತ್ತಮ ಆರೋಗ್ಯದಲ್ಲಿ ಭವಿಷ್ಯ

ದಂಪತಿಗಳು ತಮ್ಮ ಭವಿಷ್ಯವನ್ನು ಯೋಜಿಸುವ ಸಮಯವನ್ನು ಹೂಡಿಕೆ ಮಾಡುತ್ತಾರೆ, ಅಂದರೆ ವೃತ್ತಿ ಬೆಳವಣಿಗೆ, ಆರ್ಥಿಕ ಸ್ಥಿರತೆ, ಪ್ರಯಾಣದ ಗುರಿಗಳು ಮತ್ತು ಬಹುಶಃ ಕುಟುಂಬ ವನ್ನು ಪ್ರಾರಂಭಿಸುವುದು. ಆದಾಗ್ಯೂ, ಈ ಎಲ್ಲಾ ಆಕಾಂಕ್ಷೆಗಳನ್ನು ಬೆಂಬಲಿಸುವ ಅಡಿಪಾಯ, ಉತ್ತಮ ಆರೋಗ್ಯವನ್ನು ಸಕ್ರಿಯವಾಗಿ ರಕ್ಷಿಸುವ ಬದಲು ಹೆಚ್ಚಾಗಿ ಊಹಿಸಲಾಗುತ್ತದೆ.

IND vs PAK; ಭಾರತ-ಪಾಕ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ಆಡುವ ಬಳಗ

ಸ್ಪಿನ್‌ ಪಿಚ್‌ನಲ್ಲಿ ಭಾರತ-ಪಾಕ್‌ ಟಿ20 ಹೈವೋಲ್ಟೇಜ್‌ ಪಂದ್ಯ

colombo pitch report: ಶುಕ್ರವಾರ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವೆ ನಡೆದ ಪಂದ್ಯಕ್ಕೆ ಬಳಸಲಾದ ಒಣ ಪಿಚ್ ಅನ್ನೇ ಈ ಪಂದ್ಯಕ್ಕೂ ಬಳಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗಬಹುದು. ಇದೇ ಪಿಚ್‌ನಲ್ಲಿ ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಕೇವಲ 169 ರನ್ ರಕ್ಷಿಸಿಕೊಂಡು ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ಫೆ.14 ರಿಂದ ಮಾರ್ಚ್ 1ರವರೆಗೆ ಕಮ್ಮನಹಳ್ಳಿಯಲ್ಲಿ `ಜೋಯಾಲುಕ್ಕಾಸ್ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

ಫೆ.14 ರಿಂದ `ಜೋಯಾಲುಕ್ಕಾಸ್ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

ದೈನಂದಿನ ಧಾರಣೆಗೆ ಸೊಗಸಾದ ವಧುವಿನ ಅಗತ್ಯಗಳನ್ನು ಪೂರೈಸುವ ಸಮಕಾಲೀನ ವಿನ್ಯಾಸ ಗಳಿಗೆ ಸೊಗಸಾದ ವಿಸ್ತೃತ ಶ್ರೇಣಿಯನ್ನು ಹೊಂದಿರುವ ಈ ಪ್ರದರ್ಶನವು ಕಾಲಾತೀತ ಕರಕುಶಲತೆ ಮತ್ತು ಆಧುನಿಕ ಸಂವೇದನೆಗಳನ್ನು ಒಟ್ಟುಗೂಡಿಸುತ್ತದೆ. ಪ್ರತಿಯೊಂದು ಸೃಷ್ಟಿ ಯು ಅಪೂರ್ವ ವಿವರ ಮತ್ತು ವಿನ್ಯಾಸದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಇದು ಆಭರಣ ಪ್ರದರ್ಶನದ ಸಮಯದಲ್ಲಿ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

Chardham Yatra: ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌; ಯಾವೆಲ್ಲಾ ಸ್ಥಳ ನೋಡಬಹುದು? ಇಲ್ಲಿದೆ ಮಾಹಿತಿ

ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌

Chardham Yatra: ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಬೆಂಗಳೂರಿನ ಅಡಿಗಾಸ್‌ ಯಾತ್ರಾ ಸಂಸ್ಥೆಯು ಇದೀಗ ಚಾರ್ ಧಾಮ್ ಯಾತ್ರೆ ಹಮ್ಮಿಕೊಂಡಿದೆ. ಈ ಟೂರ್‌ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಕುರಿತ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಬೆಂಗಳೂರಿನಲ್ಲಿ“ಟೂರಿಸಮ್ ಮಲೇಷ್ಯಾ ಸೇಲ್ಸ್ ಮಿಷನ್ 2026” ಯಶಸ್ವಿ ಕಾರ್ಯಕ್ರಮ

ಮಲೇಷ್ಯಾ 2026 ರಲ್ಲಿ ಭಾರತದಿಂದ 2.1 ಮಿಲಿಯನ್ ಪ್ರವಾಸಿಗರ ಆಗಮನದ ಗುರಿ

ಮಲೇಷ್ಯಾದ ಪ್ರಮುಖ ಮೂಲ ಮಾರುಕಟ್ಟೆಗಳಲ್ಲಿ ಭಾರತ ಒಂದು ಭಾಗವಾಗಿದೆ. 2025 ರಲ್ಲಿ 1,565,194 ಪ್ರವಾಸಿಗರ ಆಗಮಿಸಿದ್ದು, 2024 ರಲ್ಲಿ 1,365,387 ಕ್ಕೆ ಹೋಲಿಸಿದರೆ, ಇದು ಶೇ.14.6% ರಷ್ಟು ಹೆಚ್ಚಳವಾಗಿದೆ. ʼವಿಸಿಟ್ ಮಲೇಷ್ಯಾ ವರ್ಷ 2026 (VMY2026)ʼ ಗೆ ಅನುಗುಣವಾಗಿ, ಮಲೇಷ್ಯಾ ಪ್ರವಾಸೋದ್ಯಮವು ಭಾರತದಿಂದ 2.1 ಮಿಲಿಯನ್ ಪ್ರವಾಸಿಗ ಆಗಮನವನ್ನು ನಿರೀಕ್ಷಿಸುತ್ತಿದೆ.

ಪಾಕಿಸ್ತಾನಿ ಮಿಲಿಟರಿ ಗೀತೆಗೆ ಮಹಾರಾಷ್ಟ್ರದ ಉರ್ದು ಶಾಲಾ ವಿದ್ಯಾರ್ಥಿಗಳಿಂದ ಡ್ಯಾನ್ಸ್‌!

ಪಾಕಿಸ್ತಾನಿ ಮಿಲಿಟರಿ ಗೀತೆಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು

Students Dance to Pakistani Military Song: ಉರ್ದು ಶಾಲೆಯೊಂದರಲ್ಲಿ ಪಾಕಿಸ್ತಾನಿ ಮಿಲಿಟರಿ ಗೀತೆಗೆ ವಿದ್ಯಾರ್ಥಿಗಳು ಡಾನ್ಸ್ ಮಾಡಿದ ಕಳವಳಕಾರಿ ಘಟನೆ ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ನಡೆದಿದೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉಮರ್ಖೇಡ್ ಪಟ್ಟಣದ ಅಬ್ದುಲ್ ಗಫೂರ್ ಶಾ ಮುನ್ಸಿಪಲ್ ಉರ್ದು ಶಾಲೆ ಸಂಖ್ಯೆ 2ರ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಂಆರ್‌ಐ ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಸಾವು

ಎಂಆರ್‌ಐ ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಸಾವು

ಎಂಆರ್‌ಐ ಸ್ಕ್ಯಾನ್‌ ಮಾಡುವಾಗ 6 ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ನಡೆದಿದೆ. ಅವಧಿ ಮೀರಿದ ಔಷಧವನ್ನು ಓವರ್‌ ಡೋಸ್‌ ನೀಡಿದ್ದೇ ಅವಘಡಕ್ಕೆ ಕಾರಣ ಎನ್ನುವ ದೂರು ಕೇಳಿ ಬಂದಿದ್ದು, ತನಿಖೆ ಆರಂಭವಾಗಿದೆ.

ಕರ್ನಾಟಕಕ್ಕೆ ಬಂಪರ್ ಕೊಡುಗೆ; ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಅಸ್ತು

ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಅಸ್ತು

Pralhad Joshi: ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡುವ ಮೂಲಕ ರಾಜ್ಯ ಪ್ರವಾಸೋದ್ಯಮಕ್ಕೆ ಮಹತ್ತರ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಶನಿವಾರ, ಈ ಯೋಜನೆಗೆ ಅಸ್ತು ಎಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

Loading...