Thursday, 25th April 2024

ಟಾಲಿವುಡ್‌ಗೆ ರಿಷಭ್‌ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲ ಎಲ್ಲಾ ಭಾಷಿಕರು ಕಾಂತಾರವನ್ನು ಮೆಚ್ಚಿ ಅಪ್ಪಿಕೊಂಡಿದ್ದಾರೆ.

ಕಾಂತಾರವನ್ನು ರಿಷಬ್ ಕನ್ನಡದಲ್ಲಿಯೇ ರಿಲೀಸ್ ಮಾಡಿದರು. ಕನ್ನಡದಲ್ಲಿಯೇ ಕಾಂತಾರ ಎಲ್ಲರಿಗೂ ತಲುಪಬೇಕು ಎಂಬ ಮಹಾದಾಸೆ ರಿಷಬ್ ಗಿತ್ತು. ಕಾಂತಾರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತು. ಈ ಯಶಸ್ಸು ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಿತು.

ಹಾಗಾಗಿ ತೆಲುಗು ಹಾಗೂ ಹಿಂದಿಯಲ್ಲಿಯೂ ತೆರೆಕಂಡ ಕಾಂತಾರ ಭರ್ಜರಿ ಕಲೆಕ್ಷನ್ ಕೂಡ ಮಾಡಿತು. ತೆಲುಗಿನಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಕಾಂತಾರದಿಂದ ಅವರಿಗೆ ಭರ್ಜರಿ ಲಾಭವಾಗಿದೆ. ಈ ಖುಷಿಯಲ್ಲಿರುವ ಅಲ್ಲು ಅರವಿಂದ್ ಈಗ ತಮ್ಮ ಗೀತಾ ಆರ್ಟ್ಸ್ ಬ್ಯಾನರ್ ನಲ್ಲಿ ಚಿತ್ರವನ್ನು ನಿರ್ದೇಶಿಸುವಂತೆ ರಿಷಬ್ ಅವರನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ರಿಷಬ್ ಕೂಡ ಒಪ್ಪಿ ಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಅಲ್ಲು ಅರವಿಂದ್ ಹಂಚಿಕೊಂಡಿದ್ದಾರೆ.

ಗೀತಾ ಆರ್ಟ್ಸ್ ಮೂಲಕ ನಿರ್ಮಾಣವಾಗಲಿರುವ ಚಿತ್ರದಲ್ಲಿ ರಿಷಬ್ ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ತಿಂಗಳಿನಲ್ಲಿ ತೆಲುಗಿನ ಚಿತ್ರ ಸೆಟ್ಟೇರಲಿದೆ. ಆಸ್ಕರ್ ಗೆ ಕಾಂತಾರ: ಕಾಂತಾರ ಕ್ರೇಜ್ ಯಾವ ಮಟ್ಟಕ್ಕಿದೆ ಎಂದರೆ ಪ್ರೇಕ್ಷಕರು ಇಷ್ಟಪಟ್ಟು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ಕಣ್ತುಂಬಿಕೊಂಡು ಸಂತಸಪಡುತ್ತಿದ್ದಾರೆ. ಸಿನಿಮಾ ನೋಡಿದ ಸಿನಿಪ್ರಿಯರು ಕಾಂತಾರಕ್ಕೆ ಆಸ್ಕರ್ ಖಚಿತ ಎನ್ನುತ್ತಿದ್ದಾರೆ. ಕಾಂತಾರ ಆಸ್ಕರ್ ಸುತ್ತಿಗೆ ಹೋಗಲೇಬೇಕು ಎಂಬ ನಿಟ್ಟಿನಲ್ಲಿ ಟ್ವಿಟ್ಟರ್ ಅಭಿಯಾನವನ್ಜು ಆರಂಭಿಸಿದ್ದಾರೆ.

error: Content is protected !!