ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪಾದಕೀಯ

Vishwavani Editorial: ಇದು ಸ್ವರ್ಣ ಕಾಲವಲ್ಲ

Vishwavani Editorial: ಇದು ಸ್ವರ್ಣ ಕಾಲವಲ್ಲ

ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೆ ನಿಲ್ಲುವುದು ಪ್ರಜೆಗಳ ಕರ್ತವ್ಯ. ಆದರೆ ಸರ್ಕಾರದ ದಿಡೀರ್ ಕ್ರಮಗಳು ಪ್ರಜೆಗಳಲ್ಲಿ ಆತಂಕ ಮೂಡಿಸುತ್ತವೆ. ಯುದ್ಧದಿಂದ ಇಂಥ ಪರಿಣಾಮ ಆಗಲಿದೆ ಎಂದು ಗೊತ್ತಿದ್ದರೂ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸದೆ ಹೋದದ್ದು ಖಂಡಿತವಾಗಿಯೂ ಪ್ರಮಾದ.

Vishwavani Editorial: ಹಿಜಾಬ್ ಜೇನುಗೂಡಿಗೆ ಕಲ್ಲು

Vishwavani Editorial: ಹಿಜಾಬ್ ಜೇನುಗೂಡಿಗೆ ಕಲ್ಲು

ಸರಕಾರ ಬದಲಾದಂತೆ ಪಠ್ಯವೂ ಬದಲಾಗುವುದನ್ನು ನೋಡುತ್ತ ಬಂದಿದ್ದೇವೆ. ಈಗ ವಸ್ತ್ರ ಸಂಹಿತೆಯೂ ಬದಲಾಗುವ ಚಾಳಿ ಆರಂಭವಾಗಿದೆ. ಇದು ಒಳ್ಳೆಯ ರೂಢಿಯಲ್ಲ. ಮುಂದೆ ಇನ್ನೊಂದು ಸರಕಾರ ಬಂದರೆ, ಈ ಆದೇಶವನ್ನು ಮತ್ತೆ ಬದಲಾಯಿಸಿದರೆ ಪ್ರಶ್ನಿಸುವಂತಿಲ್ಲ. ಇದರ ನಡುವೆ ಗೊಂದಲದಿಂದ ನಲುಗುವವರು ವಿದ್ಯಾರ್ಥಿಗಳು ಎಂಬುದನ್ನು ಮರೆಯ ಕೂಡದು.

Vishwavani Editorial: ನೀಟ್ ಪತ್ರಿಕೆ ಸೋರಿಕೆ ಅಕ್ಷಮ್ಯ

Vishwavani Editorial: ನೀಟ್ ಪತ್ರಿಕೆ ಸೋರಿಕೆ ಅಕ್ಷಮ್ಯ

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಹೊಸದಲ್ಲವಾದರೂ, ಪ್ರತಿಸಲ ವೂ ಇದರ ಬಲಿಪಶುವಾಗುವ ವಿದ್ಯಾರ್ಥಿಗಳ ಕಷ್ಟ ಹೊಸದು. ವರ್ಷವಿಡೀ ಪರಿಶ್ರಮಪಟ್ಟು ಓದಿ, ಕೋಚಿಂಗ್ ಪಡೆದು, ಅದಕ್ಕಾಗಿ ಸಾಕಷ್ಟು ದೊಡ್ಡ ಮೊತ್ತದ ಹಣ ವಿನಿಯೋಗಿಸಿ ಪರೀಕ್ಷೆ ಬರೆದಿರುತ್ತಾರೆ.

Vishwavani Editorial: ಮಿತವ್ಯಯದ ಮಾತು ಸಕಾಲಿಕ

Vishwavani Editorial: ಮಿತವ್ಯಯದ ಮಾತು ಸಕಾಲಿಕ

ಪೆಟ್ರೋಲ್, ಡೀಸೆಲ್ ಉಪಯೋಗ ಕಡಿಮೆ ಮಾಡಿ. ರಾಷ್ಟ್ರೀಯ ಹಿತಾಸಕ್ತಿಗಾಗಿ ಕೋವಿಡ್ ಕಾಲದ ಕ್ರಮಗಳನ್ನು ಪುನರುಜ್ಜೀವನಗೊಳಿಸಬೇಕು. ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಂ ಮಾಡಿ. ವಿದೇಶಿ ವಿನಿಮಯ ಮೀಸಲು ಉಳಿಸಲು, ವಿದೇಶಗಳಲ್ಲಿ ರಜೆ ಕಳೆಯುವುದನ್ನು ಮತ್ತು ವಿದೇಶಿ ವಿವಾಹಗಳನ್ನು ತಪ್ಪಿಸಿ.

ಹೂವಿನ ಹಾಸಲ್ಲ ವಿಜಯ್ ಹಾದಿ

ಹೂವಿನ ಹಾಸಲ್ಲ ವಿಜಯ್ ಹಾದಿ

ವಿಜಯ್ ಮುಂದೆ ಇರುವ ಇನ್ನೊಂದು ಸಂಕಷ್ಟದ ಸಂಗತಿ ಎಂದರೆ ಕೊಟ್ಟ ಭರವಸೆ ಗಳನ್ನು ಈಡೇರಿಸುವ ಅನಿವಾರ್ಯತೆ. ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಪವನ್ ಚಿನ್ನ ಹಾಗೂ ರೇಶ್ಮೆ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನದುಂಗುರ ಹಾಗೂ ಕಿಟ್. ‌

Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು

Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು

ಕುಟುಂಬ ಕಲಹಗಳು, ದಾಂಪತ್ಯ ಸಮಸ್ಯೆಗಳು, ಪ್ರೇಮಭಂಗ ಇದಕ್ಕೆ ಪ್ರಮುಖ ಕಾರಣಗಳು. ಹಣಕಾಸಿನ ಸಮಸ್ಯೆಗಳು, ಸಾಲದ ಬಾಧೆ, ಷೇರು ಮಾರುಕಟ್ಟೆ ನಷ್ಟ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಜನರನ್ನು ಒತ್ತಡಕ್ಕೆ ತಳ್ಳುತ್ತಿದೆ. ಕೆಲಸದ ಒತ್ತಡ, ಒಂಟಿತನ, ಸ್ನೇಹ ಸಂಬಂಧಗಳ ಕೊರತೆ ಮತ್ತು ಓದಿನ ಒತ್ತಡ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ.

Vishwavani Editorial: ಹಾದಿಬೀದಿಗೆ ಬಂದ ದೀದಿ ರಂಪ

Vishwavani Editorial: ಹಾದಿಬೀದಿಗೆ ಬಂದ ದೀದಿ ರಂಪ

ದಶಕಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಹರಡಿದ್ದ ಕಮ್ಯುನಿಸ್ಟ್ ಪಕ್ಷಗಳ ಹಿಂಸಾತ್ಮಕ ಆಡಳಿತ ವನ್ನು ಹೋರಾಟದಿಂದ ಮಣಿಸಿ ಗಾದಿ ಏರಿದವರು ದೀದಿ. ಅಂದು ಮಾವೋವಾದಿ ಪಕ್ಷಗಳನ್ನು ತ್ಯಜಿಸಿ ತೃಣಮೂಲ ಸೇರಿದವರೇ ಇಂದು ಬಿಜೆಪಿ ವಿರುದ್ಧ ಹಿಂಸೆಯಲ್ಲಿ ತೊಡಗಿದ್ದಾರೆ. ಅದಕ್ಕೆ ದೀದಿ ಕುಮ್ಮಕ್ಕು ನೀಡುತ್ತಿದ್ದಾರೆ. ವಾಸ್ತವ ಅರ್ಥ ಮಾಡಿಕೊಂಡು, ಹಿಂದೆ ಸರಿದು, ಹೊಸ ಶಾಸಕಾಂಗ ವ್ಯವಸ್ಥೆಗೆ ಹಾದಿ ಮಾಡಿಕೊಡುವಲ್ಲಿ ಎಲ್ಲರ ಹಿತವಿದೆ.

Vishwavani Editorial: ನೀರಾಟ ನರಳಾಟವಾಗದಿರಲಿ

Vishwavani Editorial: ನೀರಾಟ ನರಳಾಟವಾಗದಿರಲಿ

ಮಕ್ಕಳು ತರಗತಿಗಳಿಂದ ಮುಕ್ತರಾಗಿ ನೀರಿನಲ್ಲಿ ಆಟವಾಡಲು ಬಯಸುವುದು ಸಹಜ. ಹಿರಿಯರು ಸಹಿತ ಮಕ್ಕಳೊಂದಿಗೆ ನೀರಿನ ತಾಣಗಳ ಕಡೆಗೆ ಪ್ರವಾಸ ಹೋಗುವುದು ಸಾಮಾನ್ಯ. ಇಂಥ ಹೊತ್ತಿ ನಲ್ಲಿ ತಂಪು ಬಯಸುವ ಎಲ್ಲರನ್ನೂ ನೀರು ಸೆಳೆಯುತ್ತದೆ. ಆದರೆ ಸ್ಥಳೀಯ ನೀರಿನ ಆಳ ಅಥವಾ ರಭಸದ ಅರಿವಿಲ್ಲದೆ ಹಲವರು ದುರಂತ ಮರಣ ಕಾಣುತ್ತಾರೆ.

Vishwavani Editorial: ಭರವಸೆಗಳ ಕಾಮನಬಿಲ್ಲಿನ ಡೊಂಕು

Vishwavani Editorial: ಭರವಸೆಗಳ ಕಾಮನಬಿಲ್ಲಿನ ಡೊಂಕು

ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಸವರಿನ್ ಚಿನ್ನ ಹಾಗೂ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನ ದುಂಗುರ ಹಾಗೂ ಕಿಟ್. ನಿರುದ್ಯೋಗಿ ಪದವಿಧರರಿಗೆ ಮಾಸಿಕ 4000 ರೂ., ಕೃಷಿ ಸಾಲ ಮನ್ನಾ, ಮಹಿಳೆಯರಿಗೆ ಉಚಿತ ಪ್ರಯಾಣ, 200 ಯುನಿಟ್ ವಿದ್ಯುತ್ ಉಚಿತ ಇತ್ಯಾದಿ ಇತ್ಯಾದಿ ಕಾಮನ ಬಿಲ್ಲನ್ನು ತೋರಿಸಿದ್ದಾರೆ.

Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ

Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ

ಜನಸಂಘದ ಮೂಲಪುರುಷರಾದ ಶ್ಯಾಮಪ್ರಸಾದ ಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಅಧಿಕಾರ ಕ್ಕೇರಿದೆ. ಮೂರು ಅವಧಿಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಮೊದಲ ಅವಧಿಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೂ ನಂತರದ ಎರಡು ಅವಧಿಗಳಲ್ಲಿ ಅದನ್ನು ಪೂರ್ತಿ ಕೈಬಿಟ್ಟು ಪಕ್ಷದ ಕಾರ‍್ಯಕರ್ತರ ಗೂಂಡಾಗಿರಿ, ಒಕ್ಕೂಟ ಸರ್ಕಾರದ ಜೊತೆಗೆ ನಿರಂತರ ಸಂಘರ್ಷಗಳಲ್ಲಿ ತೊಡಗಿಕೊಂಡು, ಮತಎಣಿಕೆ- ಮತದಾರರ ಯಾದಿ ತಿದ್ದುಪಡಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನೂ ಧಿಕ್ಕರಿಸುವ ಉದ್ಧಟತನ ತೋರಿದರು.

ಎಲ್‌ಪಿಜಿ ಮೇಲಿನ ತೆರಿಗೆ ಕಡಿತವಾಗಲಿ

ಎಲ್‌ಪಿಜಿ ಮೇಲಿನ ತೆರಿಗೆ ಕಡಿತವಾಗಲಿ

ಆದಾಯದಲ್ಲಿ ಸ್ಥಿರತೆ ಇಲ್ಲದ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಹೊಡೆತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟರೆ ಬೇರೆ ಆಯ್ಕೆ ಇರದು. ಇದರಿಂದ ಟೀ, ಕಾಫಿ, ಇಡ್ಲಿ, ದೋಸೆ ಸೇರಿದಂತೆ ಶ್ರೀ ಸಾಮಾನ್ಯರ ನಿತ್ಯದ ತಿಂಡಿ, ತಿನಿಸುಗಳ ಬೆಲೆಗಳು ಏರಿಕೆಯಾಗಲಿವೆ. ಇದು ವಿಶೇಷವಾಗಿ ನಗರದ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಹೊರೆಯಾಗಲಿದೆ. ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಅನಿಲ ಮತ್ತು ಕಚ್ಚಾ ತೈಲದ ದರ ಏರಿಕೆಯಾಗಿದೆ ನಿಜ.

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಳಸುವವರ ಸಂಖ್ಯೆ 50 ಕೋಟಿಯಷ್ಟಿದ್ದು, ಅವರಲ್ಲಿ ಅರ್ಧ ಕ್ಕರ್ಧ ಮಂದಿ ಅದನ್ನು ಚಟವಾಗಿಸಿಕೊಂಡಿದ್ದಾರೆ. ಅದರಿಂದ ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅನಿಯಂತ್ರಿತವಾಗಿರುವ ಈ ಆನ್‌ಲೈನ್ ಗೇಮಿಂಗ್‌ಗಳಿಂದ ಭಾರತದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 10000 ಕೋಟಿ ರು.ಗಳು ಸ್ಕ್ಯಾಮರ್‌ಗಳ ಪಾಲಾಗುತ್ತಿದೆ!

‘ಕಾಯಕ’ ಜೀವಿಗಳ ಕಷ್ಟ ತಪ್ಪಲಿ

‘ಕಾಯಕ’ ಜೀವಿಗಳ ಕಷ್ಟ ತಪ್ಪಲಿ

ಇಂದು ಸರಕಾರಿ ಇಲಾಖೆಗಳಿಂದ ಹಿಡಿದು ಖಾಸಗಿ ವಲಯದವರೆಗೆ ‘ಗುತ್ತಿಗೆ ಆಧಾರಿತ ನೇಮ ಕಾತಿ’ ಎಂಬ ಪಿಡುಗು ವ್ಯಾಪಿಸಿದೆ. ಕಾಯಂ ನೌಕರರಿಗಿಂತ ಹಂಗಾಮಿ ನೌಕರರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಆತಂಕಕಾರಿ. ಇವರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ, ಪಿಂಚಣಿ ಯಿಲ್ಲ, ಕನಿಷ್ಠ ವಿಮೆಯ ಸೌಲಭ್ಯವೂ ಇಲ್ಲ.

ಭ್ರೂಣ ಹತ್ಯೆ ದಂಧೆಗೆ ಕಡಿವಾಣವಿಲ್ಲವೇ?

ಭ್ರೂಣ ಹತ್ಯೆ ದಂಧೆಗೆ ಕಡಿವಾಣವಿಲ್ಲವೇ?

ಭ್ರೂಣ ಹತ್ಯೆ ಕೇವಲ ಕಾನೂನಿನ ಸಮಸ್ಯೆಯಲ್ಲ, ಇದೊಂದು ಗಂಭೀರ ಸಾಮಾಜಿಕ ಪಿಡುಗು. ಹೆಣ್ಣು ಮಗುವನ್ನು ಹೊರೆ ಎಂದು ಭಾವಿಸುವ ಮನಸ್ಥಿತಿ ಇಂದಿಗೂ ಸಮಾಜದಲ್ಲಿ ಜೀವಂತ ವಾಗಿರುವುದು ವಿಷಾದನೀಯ. ಸರಕಾರಿ ಕಾರ್ಯಕ್ರಮಗಳು ಕೇವಲ ಘೋಷಣೆಗಳಿಗೆ ಸೀಮಿತ ವಾಗದೆ, ಕೆಳಹಂತದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗ ಬೇಕಿದೆ.

Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ

Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ

ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ವ್ಯಯಿಸಿದರೂ ನಿರ್ವಹಣೆಯ ಕೊರತೆಯಿಂದ ಯೋಜನೆ ವಿಫಲವಾದ ಉದಾಹರಣೆ ಕಣ್ಣ ಮುಂದಿದೆ. ಹೀಗಾಗಿ ಎಷ್ಟು ಗಿಡ ನೆಟ್ಟೆವು ಎನ್ನುವು ದಕ್ಕಿಂತ ಎಷ್ಟು ಗಿಡಗಳನ್ನು ಉಳಿಸಿದೆವು ಎಂಬುದು ಯೋಜನೆಯ ಯಶಸ್ಸಿನ ಮಾನದಂಡ ವಾಗಬೇಕು.

ಪಾರದರ್ಶಕ ರಾಜಕಾರಣಕ್ಕೆ ಪೂರಕ

ಪಾರದರ್ಶಕ ರಾಜಕಾರಣಕ್ಕೆ ಪೂರಕ

ಹೊಸ ನಿಯಮದಂತೆ, ಅಭ್ಯರ್ಥಿಗಳು ಕೇವಲ ತಮ್ಮ ವಿವರಗಳನ್ನಷ್ಟೇ ಅಲ್ಲದೆ, ತಮ್ಮ ಸಂಗಾತಿ (ಪತಿ ಅಥವಾ ಪತ್ನಿ) ಮತ್ತು ಅವಲಂಬಿತರ ಆರ್ಥಿಕ ಸ್ಥಿತಿಗತಿಗಳನ್ನು ಬಹಿರಂಗಪಡಿಸುವುದು ಕಡ್ಡಾಯ ವಾಗಿದೆ. ಆದಾಯ ತೆರಿಗೆ ಪಾವತಿಯ ವಿವರಗಳು ಮತ್ತು ಪಾನ್ ಸಂಖ್ಯೆಯನ್ನು ಒದಗಿಸ ಬೇಕಿರುವುದು ಆರ್ಥಿಕ ಶಿಸ್ತನ್ನು ಅಪೇಕ್ಷಿಸುತ್ತದೆ. ಈ ಹಿಂದೆ ಆರ್ಥಿಕ ವಿವರಗಳನ್ನು ಅರೆಬರೆಯಾಗಿ ನೀಡುವ ಅಥವಾ ಮರೆಮಾಚುವ ಪ್ರವೃತ್ತಿ ಇತ್ತು.

Vishwavani Editorial: ಗುಣಮಟ್ಟಕ್ಕೆ ಕುತ್ತು ತರದಿರಲಿ ಫಲಿತಾಂಶ

Vishwavani Editorial: ಗುಣಮಟ್ಟಕ್ಕೆ ಕುತ್ತು ತರದಿರಲಿ ಫಲಿತಾಂಶ

ಪ್ರಾಥಮಿಕ ಶಿಕ್ಷಣ ಸಚಿವರು ಇದೊಂದು ಸಾಧನೆ ಎಂಬಂತೆ ಬಿಂಬಿಸಿದರೂ ಇದರ ಹಿಂದಿರುವ ವಾಸ್ತವ ಆತಂಕಕಾರಿಯಾಗಿದೆ. ಹಿಂದಿ ಪರೀಕ್ಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರಕಾರದ ದಿಢೀರ್ ಆದೇಶ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ಈ ಗೊಂದಲದ ನಡುವೆಯೇ ಹೈಕೋರ್ಟ್ ಆದೇಶದಂತೆ ಹಿಂದಿಯನ್ನೂ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಸರಕಾರದ ಯೋಜನೆಯಂತೆ ಫಲಿತಾಂಶದ ಪ್ರಮಾಣವೂ ಹೆಚ್ಚಳವಾಗಿದೆ.

Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ

Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ

ತೃತೀಯ ಭಾಷೆಯ ಅಂಕಗಳನ್ನು ಅಂಕಪಟ್ಟಿಗೆ ಸೇರಿಸುವುದಿಲ್ಲ, ಅದಕ್ಕೆ ಬರೀ ಗ್ರೇಡ್ ನೀಡಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ರಾಜ್ಯದಲ್ಲಿ ಶೇ.70 ವಿದ್ಯಾರ್ಥಿಗಳ ತೃತೀಯ ಭಾಷೆ ಹಿಂದಿಯೇ. ಉಳಿದಂತೆ ನಗರಪ್ರದೇಶಗಳಲ್ಲಿ ಕನ್ನಡವೂ ಆಗುತ್ತದೆ. ಕೆಲವೇ ಕೆಲವು ಕಡೆ ಇತರೆ ಭಾಷೆಗಳೂ ತೃತೀಯ ಭಾಷೆ ಆಗಬಹುದು.

Vishwavani Editorial: ಸಂತ್ರಸ್ತರ ಕಣ್ಣೀರಿಗೆ ಸಿಕ್ಕ ಮನ್ನಣೆ

Vishwavani Editorial: ಸಂತ್ರಸ್ತರ ಕಣ್ಣೀರಿಗೆ ಸಿಕ್ಕ ಮನ್ನಣೆ

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ನೀಡಿದ ಮನವಿ ಮತ್ತು ನಿರಂತರ ಪ್ರತಿಭಟನೆಗಳ ಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸುತ್ತಿರುವುದು ಸ್ವಾಗತಾರ್ಹ. ಇದು ಕೇವಲ ಉದ್ಯೋಗವಲ್ಲ, ಬದಲಿಗೆ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಂತ್ರಸ್ತರಿಗೆ ನೀಡುತ್ತಿರುವ ಸಾಂತ್ವನವಾಗಿದೆ.

Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ

Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ

ಅಂತೂ ಇಂತೂ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ನೆಲಕಚ್ಚಿದೆ. ಒಂದು ಅತ್ಯುತ್ತಮವಾದ ಮಸೂದೆಯು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿ, ರಾಜಕೀಯ ಜಿದ್ದಾಜಿದ್ದಿ ಯಿಂದಾಗಿ ಅಂಗೀಕಾರಗೊಳ್ಳದೇ ಹೋಗಿದ್ದು ವಿಪರ್ಯಾಸ. ಇದರಿಂದ ಸಿಟ್ಟಿಗೆದ್ದಿರುವ ಬಿಜೆಪಿ ನಾಯಕರು ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಸಿಬಿಐ ಸತತವಾಗಿ ವಿಚಾರಣೆ ನಡೆಸಿ ಕೊಲೆ ಪ್ರಕರಣದಲ್ಲಿ, ಆಡಳಿತ ಪಕ್ಷದ ನಾಯಕನಿಗೆ ಶಿಕ್ಷೆ ಕೊಡಿಸಲು ಯಶಸ್ವಿಯಾಗಿದೆ. ಇದು ಜನಪ್ರತಿನಿಧಿ ನ್ಯಾಯಾಲಯದ ತೀರ್ಪು. ಇದನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಕುಲಕರ್ಣಿ ಹೋಗುವುದು ಖಚಿತ. ಅಲ್ಲಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಈ ಹಿನ್ನೆಲೆಯನ್ನೆಲ್ಲ ಬದಿಗಿಟ್ಟು ಪ್ರಕರಣವನ್ನೇ ನೋಡುವುದಾದರೆ, ನ್ಯಾಯದ ಮುಷ್ಟಿಯಿಂದ ಎಂತಹ ಪ್ರಬಲರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇಲ್ಲಿ ಸಾಬೀತಾಗಿದೆ.

Vishwavani Editorial: ಮಹಿಳಾ ಮೀಸಲು: ಮಹತ್ವದ ಹೆಜ್ಜೆ

Vishwavani Editorial: ಮಹಿಳಾ ಮೀಸಲು: ಮಹತ್ವದ ಹೆಜ್ಜೆ

ಪ್ರಸ್ತುತ ಲೋಕಸಭೆಯಲ್ಲಿ 543 ಸಂಸದರ ಪೈಕಿ ಕೇವಲ 74 ಮಹಿಳಾ ಸಂಸದರು ಇದ್ದಾರೆ. ಒಟ್ಟು ಸದಸ್ಯ ರಲ್ಲಿ ಇದು ಸುಮಾರು ಶೇ.13.6 ಮಾತ್ರ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದರೂ, ಸಂಸತ್ತಿ ನಲ್ಲಿ ಅವರ ಪಾಲು ಶೇ.15 ದಾಟಿಲ್ಲ. ಇನ್ನು ದೇಶದ ಎಲ್ಲ ವಿಧಾನಸಭೆಗಳ ಸರಾಸರಿ ಮಹಿಳಾ ಪ್ರತಿನಿಧಿತ್ವ ಸುಮಾರು ಶೇ.9 ಮಾತ್ರ ಇದೆ. ಕೆಲವು ರಾಜ್ಯಗಳಲ್ಲಿ ಇದು ಶೇ.10ಕ್ಕಿಂತ ಕಡಿಮೆ, ಕೆಲವೆಡೆ ಶೇ.20ರಷ್ಟು ತಲುಪಿಲ್ಲ.

Vishwavani Editorial: ಸಿದ್ದರಾಮಯ್ಯ ನಡೆ ಮಾದರಿ

Vishwavani Editorial: ಸಿದ್ದರಾಮಯ್ಯ ನಡೆ ಮಾದರಿ

ಕಾಂಗ್ರೆಸ್‌ನ ಬಹುಪಾಲು ನಾಯಕರಿಗಿಂತ ದೊಡ್ಡ ಮಟ್ಟದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ. ಕೇಂದ್ರ ಸರಕಾರವನ್ನು ಸಿದ್ದರಾಮಯ್ಯ ಅವರು ಟೀಕಿಸಿದಾಗಲೆಲ್ಲ, ಕೇಂದ್ರದೊಂದಿಗೆ ಸಮನ್ವಯ ಇರದೇ ಹೋದರೆ, ದಿನ ಬೆಳಗಾದರೇ ಪ್ರಧಾನಿಗಳನ್ನು ಟೀಕಿಸಿದರೆ ರಾಜ್ಯದ ಅಭಿವೃದ್ಧಿಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಬಿಜೆಪಿಗರು ಎತ್ತುತ್ತಿದ್ದರು.

ಹಠ ಬಿಡದಿದ್ದರೆ ಶಾಂತಿ ಹೇಗೆ ಸಾಧ್ಯ?

ಹಠ ಬಿಡದಿದ್ದರೆ ಶಾಂತಿ ಹೇಗೆ ಸಾಧ್ಯ?

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಯುದ್ಧ ಬೇಡ ಎನ್ನುವ ರಾಷ್ಟ್ರಗಳ ಸಮಕ್ಷಮದಲ್ಲಿ ಇರಾನ್-ಅಮೆರಿಕ ದೇಶಗಳ ಷರತ್ತುಗಳನ್ನು ಮಾತುಕತೆಗೆ ಬರುವ ಅನ್ಯರಾಷ್ಟ್ರಗಳ ಪ್ರತಿನಿಧಿಗಳ ಸಮಿತಿಯಿಂದ ಪರಿಷ್ಕರಿಸಿ, ಅಮೆರಿಕ - ಇರಾನ್ ಎರಡೂ ದೇಶಗಳಿಗೆ ಸಮ್ಮತವಾಗುವಂಥ ಷರತ್ತುಗಳನ್ನು ರೂಪಿಸಿ, ಇಬ್ಬರನ್ನೂ ಓಲೈಸಿ ಒಪ್ಪಿಸುವುದೇ ಸೂಕ್ತವಾದ ಮಾರ್ಗ.

Loading...