ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಎಡವಟ್ಟನಿಗೆ ಎದುರೇಟು

Vishwavani Editorial: ಎಡವಟ್ಟನಿಗೆ ಎದುರೇಟು

ಅತೀವ ಕುಶಲಿಗಳಾಗಿರುವ ವಿದೇಶಿ ಉದ್ಯೋಗಾರ್ಥಿಗಳನ್ನು ಅಮೆರಿಕಕ್ಕೆ ಕರೆಸಿಕೊಂಡು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಎಚ್-1ಬಿ ವೀಸಾದ ವಾರ್ಷಿಕ ಶುಲ್ಕದ ಪ್ರಮಾಣವನ್ನು 1 ಲಕ್ಷ ಡಾಲರ್‌ಗೆ ಏರಿಸಿದಾಗ, ವಿಶ್ವದ ವಿವಿಧೆಡೆ ಮತ್ತೊಮ್ಮೆ ಟ್ರಂಪ್ ವಿರುದ್ಧದ ಹುಯಿಲು ಕೇಳಿಬಂತು ಮತ್ತು ಅದು ಸಹಜವೂ ಆಗಿತ್ತು.

Vishwavani Editorial: ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ

Vishwavani Editorial: ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ

ವಿಶ್ವದ ವಿವಿಧೆಡೆ ಸುನಾಮಿ/ಚಂಡಮಾರುತ, ಭೂಕಂಪದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿ ದಾಗ, ಭಾರತವು ಮುಂದೆ ನಿಂತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿ ಕೊಂಡಿದ್ದಿದೆ. ಇದು ಬಹುತೇಕ ದೇಶಗಳಿಗೆ ಗೊತ್ತಿರುವ ಸಂಗತಿಯೇ. ಇಷ್ಟಾಗಿಯೂ, ‘ವಿಶ್ವದ ದೊಡ್ಡಣ್ಣ’ ಅಮೆರಿಕ ಕಳೆದ ಕೆಲ ತಿಂಗಳಿಂದ ಭಾರತದ ಮೇಲೆ ‘ಸುಂಕ ಸಮರ’ದ ಹೆಸರಲ್ಲಿ ಕೆಂಗಣ್ಣು ಬೀರಿಕೊಂಡೇ ಬಂದಿದೆ. ಈ ಸಾಲಿಗೆ ಈಗ ಮೆಕ್ಸಿಕೊ ಕೂಡ ಸೇರಿರುವುದು ಹಲವರ ಹುಬ್ಬೇರಿಸಿದೆ

Vishwavani Editorial: ಬದಲಾವಣೆ ಜಗದ ನಿಯಮ

Vishwavani Editorial: ಬದಲಾವಣೆ ಜಗದ ನಿಯಮ

ಪ್ರಸ್ತುತ ಚಾಲ್ತಿಯಲ್ಲಿರುವ ‘ಕೃತಕ ಬುದ್ಧಿಮತ್ತೆ’ (ಎಐ) ಮತ್ತು ಅದರ ಅನ್ವಯಿಕ ಕ್ಷೇತ್ರಗಳಿಗೂ ಇದು ಒಪ್ಪುವಂಥ ಮಾತು. ‘ಎಐ’ ಎಂಬ ಸಾಧ್ಯತೆ ಹತ್ತು ಹಲವು ಕ್ಷೇತ್ರಗಳಿಗೆ ದಾಳಿಯಿಡುತ್ತಿರುವುದರಿಂದ, ಉದ್ಯೋಗ ಕ್ಷೇತ್ರದಲ್ಲಿ ಇನ್ನು ಮುಂದೆ ಮಾನವ ಸಂಪನ್ಮೂಲದ ಅಗತ್ಯವೇ ಇರುವುದಿಲ್ಲ ಎಂಬುದು ಸುಮಾರು ಒಂದು ವರ್ಷದ ಹಿಂದೆ ಕೇಳಿಬರುತ್ತಿದ್ದ ಮಾತಾಗಿತ್ತು.

ಸಂಕಟಗಳಿಗೆ ಯಾರು ಹೊಣೆ?

ಸಂಕಟಗಳಿಗೆ ಯಾರು ಹೊಣೆ?

ದೇಶದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.67 ಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಡಿ.೫ ರಿಂದ ದಿಢೀರನೆ ವಿಮಾನಯಾನಗಳನ್ನು ರದ್ದು ಮಾಡಿದ್ದು, ಇಡೀ ದೇಶದಲ್ಲಿ ಗೊಂದಲಕ್ಕೆ ಕಾರಣ ವಾಗಿದೆ. ಕೇಂದ್ರ ಸರಕಾರ ಬಹಳ ಮುಂಚಿತವಾಗಿಯೇ ಮಾಹಿತಿ ನೀಡಿ ದೇಶದ ವಿಮಾನ ಯಾನ ಸಂಸ್ಥೆಗಳ ಪೈಲಟ್‌ಗಳೂ ಸೇರಿ ಎಲ್ಲ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ನೀಡಬೇಕೆಂಬ ನಿಯಮ ಜಾರಿ ಮಾಡಿತ್ತು

Vishwavani Editorial: ಹಣ ಮಾಡುವ ದಂಧೆಯಾಗದಿರಲಿ

Vishwavani Editorial: ಹಣ ಮಾಡುವ ದಂಧೆಯಾಗದಿರಲಿ

ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಸುಖಾ ಸುಮ್ಮನೆ ಕೈಗೊಳ್ಳುವಂತಿಲ್ಲ ಎಂಬುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಸಹಜ ಹೆರಿಗೆಯಲ್ಲಿ ಅಡಚಣೆ ತಲೆದೋರಬಹುದು ಎನಿಸಿದರೆ, ಗರ್ಭಿಣಿಯಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದರೆ, ಅವಳಿ ಗರ್ಭಧಾರಣೆಯಾಗಿದ್ದರೆ ಹೀಗೆ ಸಿಸೇರಿಯನ್ ಆಯ್ಕೆಗೆ ಒಂದಿಷ್ಟು ಕಾರಣಗಳಿವೆ. ವೈದ್ಯಕೀಯವಾಗಿ ಅಗತ್ಯವಿದ್ದಾಗಷ್ಟೇ ಸಿಸೇರಿಯನ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.

Vishwavani Editorial: ತೂತುಕೊಡಕ್ಕೆ ನೀರು ತುಂಬಿದರೆ...

Vishwavani Editorial: ತೂತುಕೊಡಕ್ಕೆ ನೀರು ತುಂಬಿದರೆ...

‘ಜನಕಲ್ಯಾಣ ಮತ್ತು ಬಡತನ ನಿರ್ಮೂಲನೆಗೆಂದು ಸರಕಾರದ ವತಿಯಿಂದ ಖರ್ಚಾಗುವ ಪ್ರತಿ ೧ ರುಪಾಯಿ ಯೋಜನಾ ಮೊತ್ತವು, ಉದ್ದೇಶಿತ ಫಲಾನುಭವಿಗೆ ತಲುಪುವ ಹೊತ್ತಿಗೆ ೧೫ ಪೈಸೆಗೆ ಇಳಿದಿರು ತ್ತದೆ’ ಎಂಬಂರ್ಥದ ಮಾತನ್ನಾಡಿದ್ದರು ಭಾರತದ ಮಾಜಿ ಪ್ರಧಾನಿಯೊಬ್ಬರು. ಇದು ಸ್ವಾತಂತ್ರ್ಯಾ ನಂತರದ ಕಾಲಘಟ್ಟದಿಂದಲೂ ನಮ್ಮ ದೇಶದಲ್ಲಿ ‘ಪರಂಪರೆ’ಯಂತೆ ನಡೆದುಕೊಂಡು ಬಂದಿರುವ ‘ಸೋರಿಕೆ’ಯ ಪರಿಪಾಠವೇ!

Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ

Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ

ನಾಲ್ಕು ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಆಗಮಿಸು ತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ನಾಳೆ (ಡಿಸೆಂಬರ್ ೫) ನಡೆಯಲಿದೆ. ಹಿಂದಿನ ಶೃಂಗಸಭೆಗಳಿಗಿಂತ ಈ ಬಾರಿಯ ಈ ಭೇಟಿಯು ಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದೆ.

Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...

Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...

ಕಾಡ್ಗಿಚ್ಚು, ಚಂಡಮಾರುತ/ಸುನಾಮಿ, ಕುಂಭದ್ರೋಣ ಮಳೆ, ಮಹಾಪ್ರವಾಹ, ಗುಡ್ಡಗಳ ಕುಸಿತ ಮುಂತಾದ ಪ್ರಕೃತಿ ವಿಕೋಪಗಳನ್ನು ಹುಲುಮಾನವರು ತಡೆಯುವುದಕ್ಕಂತೂ ಸಾಧ್ಯವಿಲ್ಲ; ಆದರೆ ಅವು ಘಟಿಸುವುದಕ್ಕೆ ಮನುಷ್ಯರ ಒಂದಿಷ್ಟು ತಪ್ಪುಹೆಜ್ಜೆಗಳೂ ಕಾರಣವಾಗಿದ್ದರೆ, ಅಂಥ ತಪ್ಪು ಗಳನ್ನು ತಿದ್ದಿಕೊಳ್ಳುವುದಕ್ಕೆ ಇನ್ನಾದರೂ ನಾವು ಕಟಿಬದ್ಧರಾಗಬೇಕಿದೆ.

Vishwavani Editorial: ಆತಂಕಗಳು ಅಂತ್ಯವಾಗಲಿ

Vishwavani Editorial: ಆತಂಕಗಳು ಅಂತ್ಯವಾಗಲಿ

ವನ್ಯಜೀವಿಗಳು ಆಹಾರವನ್ನೋ ಸಂಗಾತಿಯನ್ನೋ ಅರಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದಕ್ಕೆ ಹಾದುಹೋಗಲು ಬಳಸುವಂಥ ನೆಲೆಗಳಿಗೆ ಕೂಡ ಮನುಷ್ಯರ ಅತಿಕ್ರಮಣವಾದರೆ, ಅವು ಕೆರಳುವು ದರಲ್ಲಿ ಸಂದೇಹವೇ ಇಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳ ಘೋಷಣೆ/ಅನುಷ್ಠಾನಕ್ಕೂ ಮುನ್ನ ಪರಿಸರ ಪ್ರೇಮಿಗಳ, ಪ್ರಾಣಿಗಳ ಹಿತರಕ್ಷಕರ ಅಭಿಪ್ರಾಯವನ್ನು ಪಡೆಯ ದಿರುವುದೂ ಇದಕ್ಕೊಂದು ಕಾರಣವಿರಬಹುದು.

Vishwavani Editorial: ತಾನು ಕಳ್ಳ, ಪರರನ್ನು ನಂಬ!

Vishwavani Editorial: ತಾನು ಕಳ್ಳ, ಪರರನ್ನು ನಂಬ!

ತನ್ನ ಪ್ರಜೆಗಳಿಗೆ ಮೂರು ಹೊತ್ತಿನ ಊಟವನ್ನು ಹೊಂದಿಸಿ ಕೊಡಲಾಗದಷ್ಟರ ಮಟ್ಟಿಗಿನ ಆರ್ಥಿಕ ಕುಸಿತವನ್ನು ಕಂಡಿರುವ ಪಾಕಿಸ್ತಾನಕ್ಕೆ, ಭಾರತವನ್ನು ಗುರಿಯಾಗಿಸಿ ವಿನಾ ಕಾರಣ ಕೂರಂಬು ಬಿಡುವು ದಕ್ಕೆ ಇನ್ನಿಲ್ಲದ ಶಕ್ತಿ ಒದಗಿ ಬಿಡುವುದು ವಿಶ್ವದ ಎಷ್ಟನೇ ಅದ್ಭುತವೋ?! ಹುಚ್ಚಾಟಕ್ಕೂ ಒಂದು ಮಿತಿಯಿದೆ.

Vishwavani Editorial: ಸಾಂಕೇತಿಕ ಅಭಿವ್ಯಕ್ತಿಯಾಗಲಿ

Vishwavani Editorial: ಸಾಂಕೇತಿಕ ಅಭಿವ್ಯಕ್ತಿಯಾಗಲಿ

ಭಾರತವು ಇಂಥ ಉತ್ತಮಿಕೆಗಳ ನೆಲೆವೀಡು ಎಂಬುದು ವಿವಿಧ ರಾಷ್ಟ್ರಗಳಿಗೆ ಗೊತ್ತಿರು ವಂಥದ್ದೇ; ಜಗತ್ತನ್ನು ಕೋವಿಡ್ ಪಿಡುಗು ಅಮರಿಕೊಂಡಾಗ ಯಾವ ಭೇದ-ಭಾವವನ್ನೂ ಮಾಡದೆ ಹಲವು ದೇಶಗಳಿಗೆ ಲಸಿಕೆಯನ್ನು ಒದಗಿಸುವ ಔದಾರ್ಯ ತೋರಿದ ಭಾರತವು, ವಿಶ್ವದ ಯಾವುದೇ ಮೂಲೆಯಲ್ಲಿ ಭೂಕಂಪ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಸಂಕಷ್ಟದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಿದೆ.

Vishwavani Editorial: ಜೀವಾಮೃತವೇ ವಿಷವಾದರೆ...

Vishwavani Editorial: ಜೀವಾಮೃತವೇ ವಿಷವಾದರೆ...

ಬಿಹಾರ ರಾಜ್ಯದ ಆರು ಜಿಲ್ಲೆಗಳಲ್ಲಿನ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹಾಲಿನಲ್ಲಿನ ಯುರೇನಿಯಂ ಅಂಶ ಹೆಚ್ಚಾದಲ್ಲಿ ಶಿಶುಗಳನ್ನು ಅದು ಬಾಧಿಸುವುದರ ಜತೆಗೆ ದೇಹದ ತೂಕವನ್ನೂ ತಗ್ಗಿಸುತ್ತದೆ. ಯುರೇನಿಯಂ ಅಂಶವು ಮೂತ್ರಪಿಂಡದ ಹಾನಿ, ನರದೌರ್ಬಲ್ಯ, ಅರಿವಿನ ವಿಳಂಬಕ್ಕೂ ಕಾರಣವಾಗಬಹು ದಾಗಿದೆ, ಕ್ಯಾನ್ಸರ್ ಅಮರಿಕೊಳ್ಳುವ ಅಪಾಯವನ್ನೂ ಹೆಚ್ಚಿಸಬಲ್ಲದಾಗಿದೆ ಎಂಬುದು ಬಲ್ಲವರ ಅಭಿಮತ.

Vishwavani Editorial: ಬಯಲಾದ ಸ್ಫೋಟಕ ಸತ್ಯ

Vishwavani Editorial: ಬಯಲಾದ ಸ್ಫೋಟಕ ಸತ್ಯ

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕೆಲ ದಿನಗಳ ಹಿಂದೆ ಸಂಭವಿಸಿದ ಕಾರು ಬಾಂಬ್ ಸ್ಫೋಟ ಪ್ರಕರಣದಿಂದಾಗಿ ದಿಗಿಲುಗೊಂಡವರು ಒಬ್ಬಿಬ್ಬರಲ್ಲ. ಈ ಪ್ರಕರಣ ವನ್ನು ಭೇದಿಸಲು ಮುಂದಾಗಿರುವ ತನಿಖಾಧಿಕಾರಿಗಳ ಸಮ್ಮುಖದಲ್ಲಿ, ಆರೋಪಿಗಳಲ್ಲಿ ಒಬ್ಬನಾದ ಡಾ.ಮುಜಮ್ಮಿಲ್ ಶಕೀಲ್, ತಾನು ಆರೂವರೆ ಲಕ್ಷ ರುಪಾಯಿ ಪಾವತಿಸಿ ಎಕೆ-47 ಬಂದೂಕು ಖರೀದಿಸಿದ್ದನ್ನು ಒಪ್ಪಿಕೊಂಡಿದ್ದಾನೆ.

Vishwavani Editorial: ಯುದ್ಧ ಸನ್ನದ್ಧತೆಗೆ ಸಿಕ್ಕ ಬಲ

Vishwavani Editorial: ಯುದ್ಧ ಸನ್ನದ್ಧತೆಗೆ ಸಿಕ್ಕ ಬಲ

ಒಟ್ಟಿನಲ್ಲಿ, ಭಾರತದ ರಕ್ಷಣಾ ಕೋಠಿಯೊಳಗೆ ತುಂಬಿಕೊಳ್ಳಲು ವೈವಿಧ್ಯ ಮಯ ಶಸ್ತ್ರಾಸ್ತ್ರಗಳು ಸನ್ನದ್ಧವಾಗಿವೆ ಎಂದಾಯಿತು. ಇದು ಅರ್ಥವಾಗಬೇಕಿರುವುದು ‘ಮಗ್ಗುಲುಮುಳ್ಳು’ ರಾಷ್ಟ್ರ ಎಂದೇ ಕರೆಯಲ್ಪಡುವ ಪಾಕಿಸ್ತಾನಕ್ಕೆ. ಬೆಂಕಿ ಕಡ್ಡಿ ಗೀರಿ ಓಡಿ ಹೋಗುವ ಚಿತ್ತಸ್ಥಿತಿಯ ಮತ್ತು ಉತ್ತರ ಕುಮಾರನ ಪೌರುಷದ ಪಾಕಿಸ್ತಾನವು, ಭಾರತವನ್ನು ಸುಖಾಸುಮ್ಮನೆ ಕೆಣಕದೆ ತನ್ನ ಪ್ರಜೆಗಳ ಹಿತರಕ್ಷಣೆ ಯಲ್ಲಿ ಇನ್ನಾದರೂ ತೊಡಗಲಿ ಎಂಬುದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ.

Vishwavani Editorial: ಕಟ್ಟುನಿಟ್ಟಿನ ಸುರಕ್ಷತೆ ಅಗತ್ಯ

Vishwavani Editorial: ಕಟ್ಟುನಿಟ್ಟಿನ ಸುರಕ್ಷತೆ ಅಗತ್ಯ

ಎಟಿಎಂ ವಾಹನದ ಚಲನವಲನದ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯ ಎಸಗಿರುವುದು ಸ್ಪಷ್ಟ. ಈ ಹಿಂದೆ ಮಂಗಳೂರಿನ ಉಳ್ಳಾಲ ಮತ್ತು ವಿಜಯಪುರದ ಚಡಚಣ ಮತ್ತು ಮನಗೂಳಿ ಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಉತ್ತರ ಭಾರತ ಮೂಲದ ದರೋಡೆ ಕೋರರು ಭಾಗಿಯಾಗಿದ್ದರು.

Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ

Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ

ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಎಷ್ಟೇ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳನ್ನು ನೀಡುತ್ತಿದ್ದರೂ, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಇತ್ಯಾದಿಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಹೀಗೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಹತ್ತತ್ತಿರ 32 ಕೋಟಿ ರುಪಾಯಿಗಳನ್ನು ಕಳೆದುಕೊಂಡಿರುವುದು ಇತ್ತೀಚಿನ ಉದಾಹರಣೆ.

Vishwavani Editorial: ಬೀಗಿದವ ಬಾಗಲೇಬೇಕು...

Vishwavani Editorial: ಬೀಗಿದವ ಬಾಗಲೇಬೇಕು...

ಪರದೇಶಗಳಿಂದ ಬರುವ ಉತ್ಪನ್ನಗಳ ಮೇಲೆ ಅತಿರೇಕದ ಸುಂಕವನ್ನು ವಿಧಿಸುವ ತಮ್ಮ ನಡೆಗೆ ಅಮೆರಿಕದ ಪ್ರಜೆಗಳಿಂದಲೇ ಆಕ್ರೋಶ- ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೆಜ್ಜೆಯಿಂದ ಹಿಂದೆ ಸರಿದಿದ್ದಾರೆ ಎಂಬುದು. ರಾಷ್ಟ್ರವೊಂದರ ಪ್ರಜೆಗಳ ಇಚ್ಛಾಶಕ್ತಿ ಬಲವಾಗಿ ದ್ದರೆ, ಅದರ ನಾಯಕನೂ ಮಣಿಯಲೇ ಬೇಕಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.

Vishwavani Editorial: ಆತ್ಮಾವಲೋಕನಕ್ಕೆ ಇದು ಸಕಾಲ

Vishwavani Editorial: ಆತ್ಮಾವಲೋಕನಕ್ಕೆ ಇದು ಸಕಾಲ

ಒಂದು ಕಾಲಕ್ಕೆ ‘ಚುನಾವಣಾ ತಂತ್ರಗಾರ’ ಎಂಬ ಹಣೆಪಟ್ಟಿಯನ್ನು ನೇತು ಹಾಕಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರಂತೂ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ; ಕಾರಣ ಅವರು ಹುಟ್ಟು ಹಾಕಿದ್ದ ‘ಜನ ಸುರಾಜ್ ಪಕ್ಷ’ಕ್ಕೆ ಬಿಹಾರದಲ್ಲಿ ಬೋಣಿ ಆಗಿಲ್ಲ. ಈ ಚುನಾವಣೆಯಲ್ಲಿ ತಂತಮ್ಮ ಪಕ್ಷಗಳು ಸೋತು, ಎನ್‌ಡಿಎ ಪಾಳಯವು ಗೆದ್ದಿರುವುದಕ್ಕೆ ಈ ಇಬ್ಬರು ನಾಯಕರು ತಮ್ಮದೇ ಆದ ಕಾರಣಗಳನ್ನು ಹೇಳಬಹುದು

Vishwavani Editorial: ಮತಾಂಧ ಶಕ್ತಿಗಳ ದಮನ ಅಗತ್ಯ

Vishwavani Editorial: ಮತಾಂಧ ಶಕ್ತಿಗಳ ದಮನ ಅಗತ್ಯ

ಫರಿದಾ ಬಾದ್‌ನ ಅಲ್ ಫಲಾಹ್ ವಿವಿಯಲ್ಲಿ ಭವಿಷ್ಯದ ವೈದ್ಯ ವಿದ್ಯಾರ್ಥಿಗಳನ್ನು ರೂಪಿಸ ಬೇಕಾದ ಪ್ರೊಫೆಸರ್‌ಗಳು ತಮ್ಮ ವೃತ್ತಿಗೆ ಸಂಪೂರ್ಣವಾಗಿ ವಿರುದ್ಧವಾದ ‘ಜೀವ ತೆಗೆಯುವ’ ಕೆಲಸಕ್ಕೆ ಸಂಚು ರೂಪಿಸಿದ್ದು ಕಳವಳಕಾರಿ ಸಂಗತಿ. ಶಿಕ್ಷಣವು ಭಯೋತ್ಪಾದನೆಯ ವಿರುದ್ಧದ ಖಾತರಿ ಅಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

Vishwavani Editorial: ದುರುಳರ ಹೆಡೆಮುರಿ ಕಟ್ಟಿ

Vishwavani Editorial: ದುರುಳರ ಹೆಡೆಮುರಿ ಕಟ್ಟಿ

ಉಗ್ರರಿಗೆ ಕಾಲಾನು ಕಾಲಕ್ಕೆ ಭಾರತವು ಬಿಸಿ ಮುಟ್ಟಿಸುತ್ತಿದ್ದರೂ ಅವರು ಪಾಠ ಕಲಿಯುತ್ತಿಲ್ಲ, ಜತೆಗೆ ದುರುಳದೇಶ ಪಾಕಿಸ್ತಾನದ ಚಿತಾವಣೆಯೂ ಅವರ ಬೆನ್ನಿಗಿರುವುದನ್ನು ಮರೆಯು ವಂತಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯ ಭಾರತವನ್ನು ಮತ್ತೆ ಮತ್ತೆ ಕೆಣಕುತ್ತಿರುವ ಪಾಕಿಸ್ತಾನದ ಸಂಚು ಇದಾಗಿರುವ ಸಾಧ್ಯತೆಯಿದೆ.

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಿರುವ ನಡುವೆಯೇ, ಮುಸ್ಲಿಂ ಬಾಹುಳ್ಯದ ಅಲ್ಲಿನ ಮುರ್ಷಿದಾಬಾದ್ ಜಿಲ್ಲೆಯಲ್ಲಿ 150 ಕಚ್ಚಾ ಬಾಂಬ್ ಗಳು ಪತ್ತೆಯಾಗಿರುವುದು ವರದಿ ಯಾಗಿದೆ.

Vishwavani Editorial: ದಂಡಂ ದಶಗುಣಂ ಭವೇತ್...

Vishwavani Editorial: ದಂಡಂ ದಶಗುಣಂ ಭವೇತ್...

ನಾಟಕೀಯವಾಗಿ ಶಾಂತಿಮಂತ್ರ ಜಪಿಸುತ್ತಲೇ ಬಗಲಲ್ಲಿನ ದೊಣ್ಣೆಯನ್ನು ಆಗಾಗ ಸವರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪರೋಕ್ಷವಾಗಿ ನೀಡುತ್ತಿರುವ ಕುಮ್ಮಕ್ಕು ಕೂಡ ಪಾಕಿಸ್ತಾನದ ಈ ಠೇಂಕಾರಕ್ಕೆ ಮತ್ತು ಕಿತಾಪತಿಗೆ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ಟಿನಲ್ಲಿ, ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ, ಅಷ್ಟೇ!

Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

ರೈತರ ಈ ಚಳವಳಿಯು ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷ ಗಳಲ್ಲಿ ಒಂದಾಗಿ ಬೆಳೆದಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಹಾಲಿ-ಮಾಜಿ ಸಚಿವರು, ಶಾಸಕ ರದ್ದೇ ಇವೆ. ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಒಡೆತನದಲ್ಲೇ ಸಕ್ಕರೆ ಕಾರ್ಖಾನೆಗಳು ಇದ್ದು, ಅವರು ಕೂಡ ಈವರೆಗೂ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಆಲಿಸಿಲ್ಲ

Vishwavani Editorial: ಕಟ್ಟೆಚ್ಚರದ ಅಗತ್ಯವಿದೆ

Vishwavani Editorial: ಕಟ್ಟೆಚ್ಚರದ ಅಗತ್ಯವಿದೆ

ಒಂದೆಡೆ ಟ್ರಂಪ್‌ರಂಥ ಭೂರಾಜಕೀಯದ ‘ತುಘಲಕ್’ಗಳು, ಮತ್ತೊಂದೆಡೆ ಭಯೋತ್ಪಾದಕರಂಥ ವಿಕ್ಷಿಪ್ತ ಶಕ್ತಿಗಳು- ಹೀಗೆ ಉಭಯ ತೆರನಾದ ಕಿರಿಕಿರಿಗಳನ್ನು ಭಾರತ ನಿಭಾಯಿಸಬೇಕಾಗಿ ಬಂದಿದೆ. ದೇಶದ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿರುವವರೂ ಸಮರ್ಥರೇ ಆಗಿರುವುದರಿಂದ ಇದು ನೆರವೇರುತ್ತದೆ ಎಂಬುದು ಭಾರತೀಯರ ವಿಶ್ವಾಸ.

Loading...