ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಂಪಾದಕೀಯ
Vishwavani Editorial: ತಂದೆ-ತಾಯಿ ಕಡೆಗಣನೆ ಕಳವಳಕಾರಿ

ತಂದೆ-ತಾಯಿ ಕಡೆಗಣನೆ ಕಳವಳಕಾರಿ

ತಾಯಿ- ತಂದೆಯನ್ನು ಅನಾಥರನ್ನಾಗಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂಬ ಉದ್ದೇಶದಿಂದ ಹಿರಿಯ ನಾಗರಿಕ ರನ್ನು ಆರೈಕೆ ಮಾಡದೆ ನಿರ್ಲಕ್ಷಿಸುವ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ರದ್ದುಗೊಳಿಸಲು ಅವಕಾಶ ಕಲ್ಪಿ ಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದು ಸ್ವಾಗತಾರ್ಹ ನಡೆ

Vishwavani Editorial: ಜಗದ ಜನರ ‘ಮನ್ ಕೀ ಬಾತ್’

ಜಗದ ಜನರ ‘ಮನ್ ಕೀ ಬಾತ್’

ವಿಶ್ವಸಂಸ್ಥೆಗೆ ಅದರದ್ದೇ ಆದ ಸ್ಥಾಪಿತ ಆಶಯಗಳಿವೆ. ಅಂದರೆ, ತನ್ನ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದದ ವಾತಾವರಣ ರೂಪುಗೊಳ್ಳಲು ಒತ್ತಾಸೆ ನೀಡುವುದು, ರಾಜಕೀ ಯ-ಸಾಮಾಜಿಕ-ಸಾಂಸ್ಕೃತಿಕ-ಮಾನವೀಯ ನೆಲೆಗಟ್ಟಿನ ಸಮಸ್ಯೆಗಳನ್ನು ಸಹಕಾರ ತತ್ವದ ಆಧಾ ರದ ಮೇಲೆ ಬಗೆಹರಿಸಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಯನ್ನು ಹತ್ತಿಕ್ಕುವುದು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಸೇರಿವೆ.

Vishwavani Editorial: ಇಸ್ರೊ ಸಾಧನೆ ಮುಂದುವರಿಯಲಿ

ಇಸ್ರೊ ಸಾಧನೆ ಮುಂದುವರಿಯಲಿ

2008ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಯೋಜನೆಯ ಸಂದರ್ಭದಲ್ಲಿ ಚಂದ್ರ ನಲ್ಲಿರುವ ರಾಸಾಯನಿಕ, ಖನಿಜಶಾಸೀಯ ಹಾಗೂ ಭೌಗೋಳಿಕ ಛಾಯಾ ನಕ್ಷೆಗಳನ್ನು ಭೂಮಿಗೆ ಹೊತ್ತು ತರಲಾಗಿತ್ತು. 2019ರಲ್ಲಿ ನಡೆದಿದ್ದ ಚಂದ್ರಯಾನ-2 ಯೋಜನೆಯು ಶೇ.98ರಷ್ಟು ಯಶಸ್ವಿ ಯಾದರೂ, ಅಂತಿಮ ಘಟ್ಟದಲ್ಲಿ ಶೇ.2ರಷ್ಟು ವಿಫಲಗೊಂಡಿತ್ತು

Vishwavani Editorial: ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ

ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ

ನೈಜೀರಿಯಾ, ಕಾಂಬೋಡಿಯಾ, ಥಾಯ್ಲೆಂಡ್, ಬರ್ಮಾ, ಅಪಘಾನಿಸ್ತಾನ ಮುಂತಾದ ದೇಶ ಗಳಿಂದ ಮಾದಕ ವಸ್ತು ಹರಿದು ಬರುತ್ತಲೇ ಇದೆ. ಗೃಹ ಇಲಾಖೆ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮಾದಕ ದ್ರವ್ಯ ಜಾಲದ ವಿರುದ್ಧ ವಿಶೇಷ ಕಾರ‍್ಯಾಚರಣೆ ಹಮ್ಮಿಕೊಳ್ಳಲಾಗಿದೆ.

Vishwavani Editorial: ಸಾಧನೆ ನಿರಂತರವಾಗಿರಲಿ

ಸಾಧನೆ ನಿರಂತರವಾಗಿರಲಿ

ಇದು ದಶಕಗಳ ಹಿಂದಿನ ಮಾತು. ತಾನು ನಿರ್ಮಿಸಿದ ಉಪಗ್ರಹವನ್ನು ಅದರ ಉಡಾವಣಾ ತಾಣದೆಡೆಗೆ ಒಯ್ಯುವುದಕ್ಕೂ ಮುನ್ನ, ಕಾಂತೀಯತೆ-ನಿರೋಧಕ ವೇದಿಕೆಯಂಥ ಉಪಕರಣದ ಅಲಭ್ಯತೆಯಿಂದಾಗಿ ಮರದ ಎತ್ತಿನ ಗಾಡಿಯ ಮೇಲೆ ಉಪಗ್ರಹವನ್ನು ಇರಿಸಿ ಕಾರ್ಯಸಾಧಿಸಿ ಕೊಳ್ಳಬೇಕಾದಂಥ ದುರ್ಭರ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು ಇಸ್ರೋ

Vishwavani Editorial: ಬಹುಭಾಷೆ ಇರಲಿ, ತ್ರಿಭಾಷೆಯಲ್ಲ

ಬಹುಭಾಷೆ ಇರಲಿ, ತ್ರಿಭಾಷೆಯಲ್ಲ

ತಮಿಳುನಾಡು, ಪಶ್ಚಿಮಬಂಗಾಳ ಮತ್ತು ಕೇರಳ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಈ ನೀತಿಗೆ ಸಹಮತ ವ್ಯಕ್ತಪಡಿ ಸಿವೆ. ಆದರೆ ಹಿಂದಿ ಭಾಷಿಕ ರಾಜ್ಯಗಳು ಹಿಂದಿ ಮತ್ತು ಇಂಗ್ಲಿಷ್ ಹೊರತು ಪಡಿಸಿ ದಕ್ಷಿಣದ ಯಾವುದೇ ಭಾಷೆ ಕಲಿಸಲು ತಮ್ಮ ಶೈಕ್ಷಣಿಕ ನೀತಿ ಯಲ್ಲಿ ಅವಕಾಶ ನೀಡಿಲ್ಲ ಎನ್ನುವುದು ಗಮನಾರ್ಹ

Vishwavani Editorial: ಸ್ಮಗ್ಲಿಂಗ್: ಕಡಿವಾಣ ಅಗತ್ಯ

ಸ್ಮಗ್ಲಿಂಗ್: ಕಡಿವಾಣ ಅಗತ್ಯ

ಪ್ರತಿ ಕೆ.ಜಿ. ಚಿನ್ನದಿಂದ ಅವರು ಗರಿಷ್ಠ 4 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಅಧಿಕಾರಿಗಳ ಬೆಂಬಲವಿಲ್ಲದೆ ಈ ನಟಿ ನಿರಂತರ ಒಂದು ವರ್ಷದಿಂದ ಈ ದಂಧೆ ಮುಂದುವರಿಸಿಕೊಂಡು ಬರಲು ಸಾಧ್ಯವಿಲ್ಲ ಎನ್ನು ವುದು ಯಾರೂ ಊಹಿಸಬಹುದಾದ ಸಂಗತಿ. ರನ್ಯಾ ಅವರು ಹಿರಿಯ ಪೊಲೀಸ್ ಅಧಿಕಾರಿ ಕೆ. ರಾಮ ಚಂದ್ರ ರಾವ್ ಅವರ ಮಲಮಗಳು

Vishwavani Editorial: ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ಇಂಥ ಮಾಹಿತಿಗಳು ತಮ್ಮ ಅವಗಾಹನೆಗೆ ಬಂದಾಗಲೆಲ್ಲ, ಸಂಬಂಧಿತ ತನಿಖಾ ಕಾರ್ಯವು ನಿಷ್ಪಕ್ಷಪಾತವಾಗಿ ನಡೆಯುವುದರ ಕುರಿತು ಸಾರ್ವ ಜನಿಕರು ಅನುಮಾನವನ್ನು ವ್ಯಕ್ತ ಪಡಿಸು ವುದಿದೆ; ಕಾರಣ ಇಂಥ ಘಟಾನುಘಟಿಗಳು ತಮ್ಮ ಕಬಂಧಬಾಹುವನ್ನು ಚಾಚಿ ವಾಮಮಾರ್ಗ ದಲ್ಲಿ ಪ್ರಭಾವ ಬೀರುವ ಮೂಲಕ ತನಿಖೆಯ ದಿಕ್ಕು ತಪ್ಪಿಸಬಹುದು ಎಂಬ ಗ್ರಹಿಕೆ.

Vishwavani Editorial: ಬಿಸಿಲಿನ ಧಗೆ; ಇರಲಿ ಎಚ್ಚರ

ಬಿಸಿಲಿನ ಧಗೆ; ಇರಲಿ ಎಚ್ಚರ

ಬಿಸಿಲಿನ ಪ್ರಖರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರು ತ್ತಿದೆ. ಆದ್ದರಿಂದ ಬಿಸಿಲಿನ ಧಗೆ ಹೆಚ್ಚಾಗಿರುವ ಸಮಯದಲ್ಲಿ ಹೊರಾಂಗಣ ಕೆಲಸಗಳನ್ನು ಮಾಡಬಾರದು. ದೇಹದ ತಾಪಮಾನ ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು

Vishwavani Editorial: ಇತಿಮಿತಿಯ ನಡುವಿನ ರಾಜ್ಯ ಬಜೆಟ್

ಇತಿಮಿತಿಯ ನಡುವಿನ ರಾಜ್ಯ ಬಜೆಟ್

1995ರಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದಾಗ ಅದರ ಗಾತ್ರವು ಕೇವಲ 12 ಸಾವಿರ ಕೋಟಿ ರು. ಇತ್ತು. ಕಳೆದ ವರ್ಷ ಸಾಲ 1,05,246 ಕೋಟಿ ರು. ಆಗಿದ್ದು, ಈ ವರ್ಷ 1,16,000 ಕೋಟಿ ರು. ಸಾಲವಷ್ಟೇ ಏರಿರುವುದು ಎಂಬುದು ಗಮನಾರ್ಹ ವಿಷಯ. ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆಯ ಪ್ರಕಾರ ಒಂದು ರಾಜ್ಯದ ಬಜೆಟ್ ಜಿಎಸ್‌ಡಿಪಿಯ ಶೇ. 25ರೊಳಗೆ ಸಾಲದ ಪ್ರಮಾಣ ಇರಬೇಕು, ಈ ಬಜೆಟ್‌ನಲ್ಲಿ ಶೇ.24.91 ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ತಮ್ಮ ಸಮರ್ಥನೆಯನ್ನೂ ಮಾಡಿದ್ದಾರೆ

Vishwavani Editorial: ದರ ಏರಿಕೆಯೊಂದೇ ಪರಿಹಾರವಲ್ಲ

ದರ ಏರಿಕೆಯೊಂದೇ ಪರಿಹಾರವಲ್ಲ

ಬಜೆಟ್ ಮಂಡನೆಗೆ ಮುನ್ನವೇ ರಾಜ್ಯದಲ್ಲಿ ಬೆಲೆ ಏರಿಕೆ ಜಮಾನಾ ಆರಂಭ ವಾಗಿದೆ. ರಾಜ್ಯ ಸರಕಾರ 2023ರ ಜುಲೈನಲ್ಲಿ ಹಾಲಿನ ದರವನ್ನು 3 ರು.ಗಳಷ್ಟು ಹೆಚ್ಚಿಸಿತ್ತು. 2024ರ ಜೂನ್‌ ನಲ್ಲಿ ಈ ದರವನ್ನು ಮತ್ತೆ 2 ರು. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಏರಿಕೆ ಅನಿವಾರ‍್ಯ ಎಂದು ಕೆಎಂಎಫ್ ಹೇಳಿಕೊಂಡಿದೆ

Vishwavani Editorial: ಕಲಬೆರಕೆ ಆಹಾರಕ್ಕೆ ಬೇಕಿದೆ ಕಡಿವಾಣ

ಕಲಬೆರಕೆ ಆಹಾರಕ್ಕೆ ಬೇಕಿದೆ ಕಡಿವಾಣ

ಹೋಟೆಲ್, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆ ಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರಕಾರ‌ಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ

Vishwavani Editorial: ವಿಷವೃಕ್ಷದ ಬೇರನ್ನು ಕತ್ತರಿಸಬೇಕಿದೆ

ವಿಷವೃಕ್ಷದ ಬೇರನ್ನು ಕತ್ತರಿಸಬೇಕಿದೆ

ಕೆಲ ವರ್ಷಗಳ ಹಿಂದೆ, ಮುಂಬೈನ ವಿವಿಧ ನೆಲೆಗಳ ಮೇಲೆ ನಡೆದ ಭಯೋತ್ಪಾದಕರ ಭೀಕರ ದಾಳಿಯನ್ನು ಈಗಲೂ ಮರೆಯಲಾಗದು. ಆ ವೇಳೆ ಸಿಕ್ಕಿಬಿದ್ದಿದ್ದ ಕಸಬ್ ಎಂಬ ಉಗ್ರ ಕೂಡ ಇದೇ ವಯಸ್ಸಿನ ಆಸುಪಾಸಿನವನು. ಭಾರತ-ವಿರೋಧಿ ಭಾವನೆಗಳನ್ನು ಇಂಥವರ ತಲೆಯಲ್ಲಿ ಎಷ್ಟು ವ್ಯವಸ್ಥಿತವಾಗಿ ತುಂಬಲಾಗುತ್ತಿದೆ

Vishwavani Editorial: ಮೊದಲು ಸರಕಾರಿ ಆಸ್ತಿ ಜಪ್ತಿ ಆಗಲಿ

ಮೊದಲು ಸರಕಾರಿ ಆಸ್ತಿ ಜಪ್ತಿ ಆಗಲಿ

ನರಲ್ಲಿ ಇರುವ ಕನಿಷ್ಠ ನೈತಿಕತೆ, ಆದರ್ಶಗಳು ಸರಕಾರದ ಬಳಿ ಇಲ್ಲ ಎನ್ನುವುದು ಸದ್ಯದ ವಾಸ್ತವ. ಹಣಕಾಸಿನ ಅಡಚಣೆಯಿಂದಲೋ, ಮರೆವಿನಿಂದಲೋ ಒಂದು ತಿಂಗಳ ನೀರಿನ ಬಿಲ್, ವಿದ್ಯುತ್ ಬಿಲ್ ಕಟ್ಟಲು ತಡ ಮಾಡುವ ಜನಸಾಮಾನ್ಯರ ಮೇಲೆ ದಂಡ ಹೇರುವ ಸರಕಾರ, ಸ್ವತ: ಹಲವು ವರ್ಷಗಳಿಂದ ಕೋಟಿ ಗಟ್ಟಲೆ ಮೊತ್ತದ ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿತೆರಿಗೆ ಉಳಿಸಿಕೊಂಡಿರುವುದು ಬಯ ಲಾಗಿದೆ.

Vishwavani Editorial: ರಚನಾತ್ಮಕ ಚರ್ಚೆಗೆ ಅವಕಾಶ ಸಿಗಲಿ

ರಚನಾತ್ಮಕ ಚರ್ಚೆಗೆ ಅವಕಾಶ ಸಿಗಲಿ

2025ನೇ ಸಾಲಿನ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯ ಪಾಲ ಥಾವರ್‌ಚಂದ್ ಗೆಹ್ಲೋಥ್ ‘ಸಾಂಪ್ರದಾಯಿಕ’ ಭಾಷಣ ಮಾಡಲಿದ್ದಾರೆ. ಬಳಿಕ ಅಗಲಿದ ನಾಯಕರಿಗೆ ಸಂತಾಪ ಸೂಚಿಸುವುದರೊಂದಿಗೆ ಅಂದಿನ ಅಧಿವೇಶನ ಮುಕ್ತಾಯ ವಾಗಲಿದೆ. ಮಂಗಳವಾರದಿಂದ ಸದನ ಆಡಳಿತ-ಪ್ರತಿಪಕ್ಷ ಶಾಸಕರ ನಡುವೆ ವಾಕ್ಸಮರಕ್ಕೆ ವೇದಿಕೆ ಯಾಗುವ ಸಾಧ್ಯತೆಯಿದೆ.

Vishwavani Editorial: ನಕಲಿ ಅಂಕಪಟ್ಟಿಗಳಿಗೆ ಕಡಿವಾಣ ಬೀಳಲಿ

ನಕಲಿ ಅಂಕಪಟ್ಟಿಗಳಿಗೆ ಕಡಿವಾಣ ಬೀಳಲಿ

ಕಳೆದ ವಾರವಷ್ಟೇ ಬೆಂಗಳೂರು ಸಿಸಿಬಿ ಪೊಲೀಸರು ಸರಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂಬ ಸಂಸ್ಥೆ ತೆರೆದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನಕಲಿ ಅಂಕಪಟ್ಟಿ‌ಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿ ಮೂವರನ್ನು ಬಂಧಿಸಿದ್ದರು

Vishwavani Editorial: ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!

ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!

ಒಂದೊಮ್ಮೆ ಕೇಜ್ರಿವಾಲರು ಹೀಗೊಮ್ಮೆ ಯೋಜಿಸಿರುವುದು ನಿಜವೇ ಆಗಿದ್ದಲ್ಲಿ, ಅದಕ್ಕಿಂತ ನಗೆಪಾಟಲಿನ ಸಂಗತಿ ಮತ್ತೊಂದಿಲ್ಲ ಎನ್ನಲಡ್ಡಿಯಿಲ್ಲ. ಒಂದು ರಾಜ್ಯದ ವಿಧಾನಸಭಾ ಚುನಾ ವಣೆಯಲ್ಲಿ ಸೋತವರು ಮತ್ತೊಂದು ರಾಜ್ಯದ ವತಿಯಿಂದ ಇನ್ನೊಂದು ಪ್ರಜಾಪ್ರತಿನಿಧಿ ಸಭೆಗೆ ಸ್ಪರ್ಧಿಸಬಾರದು ಎಂದೇನಿಲ್ಲ

Vishwavani Editorial: ಪುಸ್ತಕ ಮೇಳ: ಸ್ಪೀಕರ್ ನಡೆ ಶ್ಲಾಘನೀಯ

ಪುಸ್ತಕ ಮೇಳ: ಸ್ಪೀಕರ್ ನಡೆ ಶ್ಲಾಘನೀಯ

ಕರ್ನಾಟಕದಲ್ಲಿ 60 ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳಿವೆ. ಆದರೆ ಪುಸ್ತಕ ಮಾರಾಟ ಮಳಿಗೆಗಳು ಜಿಲ್ಲೆಗೆ ಒಂದರಂತೆಯೂ ಇಲ್ಲ. ರಾಜ್ಯದಲ್ಲಿ ಹುಡುಕಾಡಿದರೆ 15 ರಿಂದ 20 ನಗರ ಗಳನ್ನು ಬಿಟ್ಟರೆ, ಉಳಿದ ನಗರಗಳಲ್ಲಿ ಪುಸ್ತಕ ಮಾರಾಟ ಮಳಿಗೆಗಳು ಕಾಣಿಸದಿರುವುದು ವಿಷಾ ದದ ಸಂಗತಿ.

Vishwavani Editorial: ಇನ್ನೂ ತೀರಿಲ್ಲವೇ ರಕ್ತದಾಹ?

ಇನ್ನೂ ತೀರಿಲ್ಲವೇ ರಕ್ತದಾಹ?

ರಷ್ಯಾ ಅಧ್ಯಕ್ಷ ಪುಟಿನ್ ಅವರು ಈ ಕುಂಟುನೆಪವಿಟ್ಟುಕೊಂಡು ಉಕ್ರೇನ್‌ ನ ಮೇಲೆ ಶುರುಹಚ್ಚಿ ಕೊಂಡ ಯುದ್ಧಕ್ಕೆ ಮೊನ್ನೆಗೆ 3 ವರ್ಷಗಳು ತುಂಬಿವೆ. ಇಷ್ಟಾಗಿಯೂ ಯುದ್ಧವನ್ನು ನಿಲ್ಲಿಸಲು ಉಭಯ ದೇಶಗಳೂ ಮನಸ್ಸು ಮಾಡದಿರುವುದು ವಿಷಾದನೀಯ. ಈ ಸುದೀರ್ಘ ಸಂಘರ್ಷ ದಲ್ಲಿ ಉಕ್ರೇನ್ ದೇಶದ ಐದನೇ ಒಂದರಷ್ಟು ಭಾಗವನ್ನು ರಷ್ಯಾ ತನ್ನ ತೆಕ್ಕೆಗೆ ತೆಗೆದುಕೊಂಡಿರು ವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡೂ ಬಣ ಗಳಲ್ಲಿ ಆಗಿರುವ ಗಣನೀಯ ಪ್ರಮಾ ಣದ ಸಾವು-ನೋವುಗಳು ಯುದ್ಧದ ಭೀಕರತೆಯನ್ನು ಸಾರಿ ಹೇಳುವಂತಿವೆ

Vishwavani Editorial: ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ

ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ

ಇಲ್ಲಿನ ನಡೆದ ಘಟನೆ ವೈಯಕ್ತಿಕ ಸ್ವರೂಪದ್ದಾಗಿದ್ದು, ಕಂಡಕ್ಟರ್ ಬಳಿ ಅನುಚಿತ ವರ್ತನೆ ತೋರಿದ ಮಹಿಳಾ ಪ್ರಯಾಣಿಕರೊಬ್ಬರು ತನ್ನ ರಕ್ಷಣೆಗೆ ಭಾಷಾ ದ್ವೇಷವನ್ನು ಗುರಾಣಿ ಯಾಗಿ ಬಳಸಿರುವುದು ಸ್ಪಷ್ಟ. ದೂರು ನೀಡಿದ ನಿರ್ವಾಹಕನ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲಿ ಸಿರುವುದು ಮಹಿಳೆಯ ದುರುದ್ದೇಶಕ್ಕೆ ಸಾಕ್ಷಿಯಾಗಿದೆ

Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪಾಳಯಗಳಲ್ಲಿ ಒಂದೊಂದು ತೆರನಾಗಿ ‘ಹೊಯ್-ಕೈ’ ನಡೆ ಯುತ್ತಿದ್ದರೆ, ಇತ್ತೀಚೆಗೆ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟ ಶುರುವಾಗಿದೆ. ಪಂಚಾಯತ್‌ ರಾಜ್ ವಿವಿ ತಿದ್ದುಪಡಿ ವಿಧೇಯಕ ಸೇರಿದಂತೆ ಸರಕಾರವು ಕಳಿಸಿದ್ದ ಮೂರು ವಿಧೇಯಕಗಳಿಗೆ ರಾಜ್ಯ ಪಾಲರು ಸಹಿ ಹಾಕದೆ ವಾಪಸ್ ಕಳಿಸಿರುವುದೇ ಈ ಬೆಳವಣಿಗೆಗೆ ಕಾರಣ.

Vishwavani Editorial: ಬಡಿದಾಡಲು ಜನರು ಚುನಾಯಿಸಿಲ್ಲ

Vishwavani Editorial: ಬಡಿದಾಡಲು ಜನರು ಚುನಾಯಿಸಿಲ್ಲ

ಬಣ ಬಡಿದಾಟದಲ್ಲಿ ವ್ಯಸ್ತರಾಗಲು ಜನರು ತಮ್ಮನ್ನು ಚುನಾಯಿಸಿಲ್ಲ ಎಂಬ ಸತ್ಯವನ್ನು ರಾಜ್ಯ ಬಿಜೆಪಿಗರು ಇನ್ನಾದರೂ ಅರಿಯಲಿ. ಒಂದು ಕಾಲಕ್ಕೆ ‘ಶಿಸ್ತಿನ ಪಕ್ಷ’ ಎಂದು ಕರೆಸಿಕೊಳ್ಳು ತ್ತಿದ್ದ ಬಿಜೆಪಿಯ ಒಡನಾಡಿಗಳು ಹೀಗೆ ಅಶಿಸ್ತಿಗೆ ಒಡ್ಡಿಕೊಳ್ಳುವುದು ತರವಲ್ಲ.

Vishwavani Editorial: ಕಾಡ್ಗಿಚ್ಚಿನ ಬಗ್ಗೆ ನಿರ್ಲಕ್ಷ್ಯ ಸಲ್ಲ

ಕಾಡ್ಗಿಚ್ಚಿನ ಬಗ್ಗೆ ನಿರ್ಲಕ್ಷ್ಯ ಸಲ್ಲ

ಕಾಫಿನಾಡು ಚಿಕ್ಕಮಗಳೂರು ಪಶ್ಚಿಮಘಟ್ಟದ ಅಮೂಲ್ಯ ವನಸಿರಿ ಹೊಂದಿರುವ ಪ್ರದೇಶ. ಇಲ್ಲಿ ಕಾಫಿ ತೋಟಗಳೂ ಅರಣ್ಯದ ನಡುವೆಯೇ ಇದೆ. ಆದರೆ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಕೇವಲ ಒಂದು ಅಗ್ನಿಶಾಮಕ ವಾಹನವಿದೆ. ಇನ್ನೊಂದು ವಾಹನ ಇದ್ದರೂ 15 ವರ್ಷ ದಾಟಿರುವ ಕಾರಣ ಆರ್.ಸಿ ರದ್ದಾಗಿದೆ ಎಂಂದು ಹೇಳಲಾಗಿದೆ

Vishwavani Editorial: ಖಾತಾ ಗೊಂದಲಕ್ಕೆ ತೆರೆ ಬೀಳಲಿ

ಖಾತಾ ಗೊಂದಲಕ್ಕೆ ತೆರೆ ಬೀಳಲಿ

ಒಂದು ವೇಳೆ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿ ತಂದರೆ ಸರಕಾರದ ಆದಾಯ ಹೆಚ್ಚುತ್ತದೆ. ಅನಧಿಕೃತ ಕಟ್ಟಡಗಳಿಂದ ಎದುರಾಗುವ ನಾಗರಿಕ ಸಮಸ್ಯೆಗಳಿಗೆ ತೆರೆಬೀಳಲಿದೆ. ಜತೆಗೆ ಹೊಸ ಬಡಾವಣೆ ಮತ್ತು ಕಟ್ಟಡಗಳ ಸಂಖ್ಯೆ ಅಂದಾಜು ಸಿಕ್ಕಿದರೆ ಅವುಗಳಿಗೆ ನೀರು, ವಿದ್ಯುತ್, ಒಳ ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಯೋಜನೆ ರೂಪಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಸರಕಾರದ ಸಮಜಾಯಿಶಿ.