ಚಿಕ್ಕನಾಯಕನಹಳ್ಳಿ : ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯು ಸಾಕಷ್ಟು ಲಭ್ಯವಿದ್ದು, ಸರಕಾರದಿಂದ ಹೆಚ್ಚಿನದಾಗಿ ಕೋವಿಡ್ ಲಸಿಕೆ ದೊರೆಯುತ್ತಿದೆ. ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ನಿತ್ಯವೂ 5000 ಕೋವಿಡ್ ಟೆಸ್ಟ್’ಗಳ ಗುರಿಯನ್ನು ಹೊಂದಲಾಗಿದೆ ಎಂದು ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ತಾಲ್ಲೂಕು ಕಚೇರಿಯಲ್ಲಿ ಕೆ.ಬಿ.ಕ್ರಾಸ್ನ ಮ್ಯಾಪ್ ಗಾರ್ಮೆಂಟ್ಸ್ ಉಚಿತವಾಗಿ ನೀಡಿದ ಪಿಪಿಇ ಕಿಟ್ ಮತ್ತು ಸರ್ಜಿಕಲ್ ಮಾಸ್ಕ ಗಳನ್ನು ಸ್ವೀಕರಿಸಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರ ಮಾಡಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ದಿನಕ್ಕೆ ಕನಿಷ್ಠ 5000 ಜನರ ಕೋವಿಡ್ ಪರೀಕ್ಷೆ […]