ಶಿರಸಿ: ಉತ್ತರಕನ್ನಡದ ಮೀನು ಮಾರುಕಟ್ಟೆ ಮುಂಭಾಗ ದುಷ್ಕರ್ಮಿಗಳು ಮೀನು ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿದ್ದಾರೆ. ಇದನ್ನು ಕಂಡು ರೊಚ್ಚಿಗೆದ್ದ ಮೀನುಗಾರರು ಭಟ್ಕಳದ ಹಳೇ ಬಸ್ ಸ್ಟ್ಯಾಂಡ್ ಮೀನು ಮಾರುಕಟ್ಟೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಭಟ್ಕಳ ನಗರ ಭಾಗದ ಹಳೇ ಬಸ್ ಸ್ಟ್ಯಾಂಡ್ ನಲ್ಲಿ ಹಿಂದಿನಿಂದಲೂ ಮೀನುಗಾರರು ಮೀನು ಮಾರಾಟ ಮಾಡುತ್ತಿದ್ದರು. ಆದರೆ, ಭಟ್ಕಳ ಪುರಸಭೆ ಇತರೆಡೆ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ ಅಲ್ಲಿಗೆ ಮೀನುಗಾರರನ್ನು ಸ್ಥಳಾಂತರಿಸುವಂತೆ ಸೂಚಿಸಿತ್ತು. ಈ ನಡುವೆ ಮಾರುಕಟ್ಟೆಯ ಗುತ್ತಿಗೆಯನ್ನು ಯಾರೂ ಪಡೆಯದ ಕಾರಣ ಅಲ್ಲೂ ವ್ಯವಸ್ಥೆ ಅಸಮರ್ಪಕವಾಗಿತ್ತು. ಆದರೆ, ಮೀನುಗಾರರು […]