ಕೋಲಾರ: ಕರೋನಾ ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ, ರೈಲ್ವೆ ಇಲಾಖೆ ಕಿಸಾನ್ ರೈಲು ಸೇವೆ ಆರಂಭಿಸುವ ಮೂಲಕ ನೆರವು ನೀಡಿದೆ. ಲಾಕ್ಡೌನ್ ಹಿನ್ನಲೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರೈತರಿಗೆ ನೆರವಾ ಗಲು, ರಾಜ್ಯದಲ್ಲೇ ಮೊದಲ ಬಾರಿಗೆ ಕಿಸಾನ್ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ದೆಹಲಿಗೆ ಮಾವು ರಫ್ತು ಮಾಡಲು ರಾಜ್ಯದ ಮೊದಲ ಕಿಸಾನ್ ರೈಲು ವ್ಯವಸ್ಥೆ ಯನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ. ಕೋಲಾರ ಜಿಲ್ಲೆಯ ಗಡಿಯಲ್ಲಿನ ಚಿಂತಾಮಣಿ ತಾಲೂಕಿನ ದೊಡ್ಡನತ್ತ ಗ್ರಾಮದ […]