ಶಿವಮೊಗ್ಗ : ಕಲುಷಿತಗೊಂಡ ಕೆರೆಯ ನೀರಿನಿಂದಾಗಿ, ಸೊರಬಾ ತಾಲೂಕಿನ ಉಳವಿ-ದೂಗೂರು ಕೆರೆಯಲ್ಲಿ ಮೀನುಗಳ ಮಾರಣಹೋಮವೇ ನಡೆದಿದೆ. ಹೊಸಬಾಳೆ ರಸ್ತೆಯಲ್ಲಿರುವಂತ ಶುಂಠಿ ಕ್ಲೀನಿಂಗ್ ಯಂತ್ರದಿಂದ ಕಲುಷಿತ ನೀರು ಕೆರೆಗೆ ಹರಿದು, ಕಲುಷಿತಗೊಂಡ ಪರಿಣಾಮ, ಮೀನುಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ಶುಂಠಿ ಕ್ಲೀನಿಂಗ್ ನೀರು ಕೆರೆಗೆ ಹರಿಯುತ್ತಿದ್ದು, ಕಲುಷಿತ ನೀರು ಕೆರೆಗೆ ಹರಿದ ಪರಿಣಾಮ, ಕೆರೆಯ ನೀರಿನ ಬಣ್ಣ ಸಹ ಕಪ್ಪಿಟ್ಟಿದೆ. ಕಲುಷಿತಗೊಂಡ ನೀರಿನಿಂದಾಗಿ ಕೆರೆಯಲ್ಲಿದ್ದಂತ ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಸ್ಥಳಕ್ಕೆ ಆಗಮಿಸಿರುವಂತ ಗ್ರಾಮ ಪಂಚಾಯ್ತಿ ಪಿಡಿಓ, ಅರಣ್ಯ ಇಲಾಖೆ ಅಧಿಕಾರಿಗಳು, […]