ಯಾದಗಿರಿ: ಯಾದಗಿರಿ ಬಸ್ ಘಟಕದಿಂದ ಬೆಳಿಗ್ಗೆ ಹೈದರಾಬಾದ್ ಗೆ ಒಂದು ಬಸ್ ಕಾರ್ಯಾಚರಣೆ ಆರಂಭಿಸಿತು. ಚಾಲಕ, ನಿರ್ವಾಹಕ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ನಂತರ ಅಧಿಕಾರಿಗಳು ಅವರನ್ನು ಹೈದರಾಬಾದ್ ಬಸ್ ಕಾರ್ಯಾ ಚರಣೆ ಮಾಡಲು ತಿಳಿಸಿದರು. ‘ಸೋಮವಾರ ಸರ್ಕಾರಿ ನೌಕರರು ಸೇರಿದಂತೆ, ಇನ್ನಿತರರಿಗೆ ತೊಂದರೆಯಾಗಬಾರದು ಎಂದು ಚಾಲಕ, ನಿರ್ವಾಹಕರಿಗೆ ಕರೆ ಮಾಡಿ ಕರೆಸುತ್ತಿದ್ದೇವೆ. 11 ಗಂಟೆಗೆಲ್ಲ ಬರುವ ನಿರೀಕ್ಷೆ ಇದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ಈಗಾಗಲೇ, ನಮ್ಮ ಹಲವು ಬೇಡಿಕೆಗಳನ್ನು ಪೂರೈಸಲು ಸರ್ಕಾರ […]