ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರಂಜಿತ್​ ಎಚ್​ ಅಶ್ವತ್ಥ್

columnist

[email protected]

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ

ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ

ಕೃಷ್ಣ, ತುಂಗಾ ಭದ್ರ ನದಿಗಳಿಗೆ ಹೋಲಿಸಿದರೆ ಕಾವೇರಿ ಹರಿವಿನ ಪ್ರಮಾಣದಲ್ಲಿ ಸಣ್ಣದೆನಿಸಿದರೂ ವಿವಾದದ ವಿಷಯದಲ್ಲಿ ಬಹುದೊಡ್ಡ ಕಿಡಿಯನ್ನೇ ಹೊತ್ತಿಸುತ್ತದೆ. ಶತಮಾನಗಳ ಇತಿಹಾಸವಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಹೋರಾಟ ಗಳು ನಡೆದು ಅಂತಿಮ ತೀರ್ಪು ಪ್ರಕಟವಾದರೂ, ಆಗಾಗ್ಗೆ ವಿವಾದ ಭುಗಿಲೇಳುವುದಕ್ಕೆ ಪ್ರಮುಖ ಕಾರಣ ಮಳೆ ಕೊರತೆ

Ranjith H Ashwath Column: ಜೆನ್ ಝೀ ಜಿರಳೆಗಳ ಲಘುವಾಗಿ ಪರಿಗಣಿಸಿದ ಕೈ-ಕಮಲ!

ಜೆನ್ ಝೀ ಜಿರಳೆಗಳ ಲಘುವಾಗಿ ಪರಿಗಣಿಸಿದ ಕೈ-ಕಮಲ!

ಯುವಕರು 2013ರಿಂದಲೂ ನರೇಂದ್ರ ಮೋದಿ ಅವರೊಂದಿಗೆ ನಿಂತಿದ್ದರು. ರಾಹುಲ್ ಗಾಂಧಿ ಎಂಬ ‘ಯೂಥ್ ಫೇಸ್’ ಅನ್ನು ಕಾಂಗ್ರೆಸ್ ತೋರಿಸಿದರೂ, ನರೇಂದ್ರ ಮೋದಿ ಹಾಗೂ ಬಿಜೆಪಿ ಯೊಂದಿಗೆ ಶೇ.20ರಿಂದ 22ರಷ್ಟಿರುವ ಯುವ ಮತದಾರರು ನಿಂತಿದ್ದರು. ಆ ಕಾರಣಕ್ಕೆ, ಮೂರನೇ ಅವಧಿಗೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಆದರೆ ಜಿರಳೆ ಪಕ್ಷದ ವಿಷಯದಲ್ಲಿ ಬಿಜೆಪಿ ತೋರಿದ ಉದಾಸೀನ, ನೀಟ್ ಪೇಪರ್ ಲೀಕ್ ವಿಷಯದಲ್ಲಿ ಶುರುವಾದ ಪ್ರತಿಭಟನೆಯ ವಿಷಯದಲ್ಲಿನ ನಿರ್ಲಕ್ಷ್ಯ ಬಿಜೆಪಿಗೆ ಬಹುದೊಡ್ಡ ಹೊಡೆತ ಕೊಟ್ಟಿದ್ದು ಸುಳ್ಳಲ್ಲ

Ranjith H Ashwath Column: ‘ನೀಟಾ’ಗಿ ನಡೆಯಲಿಲ್ಲವೇ ಜಿರಳೆ ಹೋರಾಟ?

‘ನೀಟಾ’ಗಿ ನಡೆಯಲಿಲ್ಲವೇ ಜಿರಳೆ ಹೋರಾಟ?

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಇತಿಹಾಸದಲ್ಲಿ ನಿತ್ಯ ಹತ್ತು ಹಲವು ಹೋರಾಟಗಳು ನಡೆಯು‌ತ್ತವೆ. ಆದರೆ ಕೆಲವೇ ಕೆಲವು ಹೋರಾಟಗಳು ಇಡೀ ದೇಶದ ಗಮನ ಸೆಳೆಯುತ್ತವೆ. ಅಂತಹ ಹೋರಾಟದ ಸಾಲಿಗೆ ಸದ್ಯ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಪಕ್ಷ ನಡೆಸುತ್ತಿರುವ ಹೋರಾಟ ಹಾಗೂ ಸೋನಂ ವಾಂಗ್‌ಚುಕ್ ಅವರ ಸತ್ಯಾಗ್ರಹ ಸೇರಿದೆ.

ನಾಡಗೀತೆಯ ಜೈನರುದ್ಯಾನಕ್ಕೆ ಬೌದ್ಧರು, ಮುಂದೆ ಇನ್ನಾರು?

ನಾಡಗೀತೆಯ ಜೈನರುದ್ಯಾನಕ್ಕೆ ಬೌದ್ಧರು, ಮುಂದೆ ಇನ್ನಾರು?

ಕುವೆಂಪು ಅವರ ಜನ್ಮಶತಮಾನೋತ್ಸವದ ಸಮಯದಲ್ಲಿ (2004)ರಲ್ಲಿ ಕೊಳಲು ಕವನ ಸಂಕಲನ ದ ಈ ಪದ್ಯವನ್ನು ನಾಡಗೀತೆಯನ್ನಾಗಿ ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕೂ ಮುಂಚೆ ಯೇ ಈ ಗೀತೆಯನ್ನು ಶಾಲೆ ಗಳಲ್ಲಿ ಹಾಡಲಾಗುತ್ತಿತ್ತು. 2004ರ ನಂತರ ಅಂದರೆ ಕಳೆದ 22 ವರ್ಷ ಗಳಲ್ಲಿ ಮೂರು ಬಾರಿ ಸಾಹಿತ್ಯಕ್ಕೆ ಪರಿಷ್ಕರಣೆ ಮಾಡಲಾಗಿದೆ.

Ranjith H Ashwath Column: ಜೇಡರ ಬಲೆಯಂತಿರುವ ನದಿ ಜೋಡಣೆ ಆಲೋಚನೆ

ಜೇಡರ ಬಲೆಯಂತಿರುವ ನದಿ ಜೋಡಣೆ ಆಲೋಚನೆ

ಕುಮಾರಸ್ವಾಮಿ ಅವರು ಈ ರೀತಿ ಟೀಕಿಸುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಒಂದೆಡೆ ಯಾದರೆ, ನದಿ ಜೋಡಣೆಯಿಂದ ಆಗಬಹುದಾದ ಸಾಧಕ-ಬಾಧಕ, ಸದ್ಯ ಈ ಯೋಜನೆ ಯಾವ ಹಂತ ದಲ್ಲಿದೆ? ಈ ಹಿಂದೆ ನದಿ ಜೋಡಣೆಯ ವಿಷಯ ಬಂದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ, ನೀರಾವರಿ ತಜ್ಞರು ಕೇಂದ್ರದ ಲೆಕ್ಕಾಚಾರಗಳಿಗೆ ವಿರೋಧಿಸಿದ್ದೇಕೆ? ಗೋದಾವರಿ ನದಿ ಜೋಡಣೆಯ ಗೊಂದಲದ ನಡುವೆ ವರದಾ-ಬೇಡ್ತಿ ನದಿ ಜೋಡಣೆ ತಳಕು ಹಾಕಿಕೊಂಡಿರುವುದೇಕೆ ಎನ್ನುವುದನ್ನು ಗಮನಿಸಬೇಕು.

Ranjith H Ashwath Column: ಶುದ್ಧ ಮತಪಟ್ಟಿ ಸಿದ್ದಪಡಿಸಿದರೆ ತಪ್ಪೇನು ?

Ranjith H Ashwath Column: ಶುದ್ಧ ಮತಪಟ್ಟಿ ಸಿದ್ದಪಡಿಸಿದರೆ ತಪ್ಪೇನು ?

ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಎನ್ನುವುದು ಚುನಾವಣಾ ಆಯೋಗದಿಂದ ಆಗುವ ಕಾರ್ಯ. ಇಂತಿಷ್ಟೇ ವರ್ಷಗಳಿಗೊಮ್ಮೆ ಈ ಪ್ರಕ್ರಿಯೆ ನಡೆಸಬೇಕು ಎನ್ನುವ ಸಾಂವಿಧಾನಿಕ ನಿಯಮವಿಲ್ಲ ದಾದರೂ, ಚುನಾವಣಾ ಆಯೋಗಕ್ಕೆ ‘ಅಗತ್ಯ’ವೆನಿಸಿದಾಗ ಎಸ್‌ಐಆರ್ ಮಾಡಲು ಅವಕಾಶವಿದೆ. ಈ ಹಿಂದೆ 2003ರಲ್ಲಿ ಸಮಗ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡಿತ್ತು. ಆದರೆ ಪ್ರತಿ ವರ್ಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡುತ್ತದೆ

Ranjith H Ashwath Column: ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?

ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?

ಕರ್ನಾಟಕದಲ್ಲಿ ಪಂಚಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಬಿಜೆಪಿ ಹಾಗೂ ಇತರೆ ಪಕ್ಷಗಳು ಇದೀಗ ಅದೇ ಮಾರ್ಗದಲ್ಲಿ ಸಾಗಿದೆ ಎನ್ನುವುದು ಬೇರೆ. ಭವಿಷ್ಯದಲ್ಲಿ ಈ ಗ್ಯಾರಂಟಿ ಘೋಷಣೆಗಳಿಲ್ಲದೇ ಚುನಾವಣೆ ನಡೆಸೋದು ಹೇಗೆ ಎನ್ನುವ ಸ್ಥಿತಿಗೆ ದೇಶ ಬಂದು ನಿಂತಿದೆ.

Ranjith H Ashwath Column: ಪರಿಷತ್ತಿನ ಫಲಿತಾಂಶ, ಗೆದ್ದರೂ ನಲುಗಿದ್ದ ಕಮಲ ಪಡೆ !

ಪರಿಷತ್ತಿನ ಫಲಿತಾಂಶ, ಗೆದ್ದರೂ ನಲುಗಿದ್ದ ಕಮಲ ಪಡೆ !

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ವಿಧಾನಪರಿಷತ್ ಐದನೇ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ತನ್ನ ಆಪ್ತ ವಿನಯ್ ಕಾರ್ತಿಕ್‌ನನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೈಗೆತ್ತಿಕೊಂಡರು. ಡಿಕೆಗೆ ಸವಾಲು ಹಾಕುವ ರೀತಿ ಜೆಡಿಎಸ್ ಸಹ ಸಂಖ್ಯಾ ಬಲದ ಕೊರತೆಯ ಹೊರತಾಗಿಯೂ ‘ಮ್ಯಾಜಿಕ್’ ನಿರೀಕ್ಷೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು

Ranjith H Ashwath Column: ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ದಶಕಗಳ ಕಾಲ ಡಿಎಂಕೆ-ಎಐಎಡಿಎಂಕೆಯ ಹೊರತಾಗಿ ಮೂರನೇ ಶಕ್ತಿಯೇ ತಮಿಳುನಾಡಿನಲ್ಲಿ ಎಂದು ಹೇಳಲಾಗಿತ್ತು. ಈಗಲೂ ತಮಿಳುನಾಡಿನಲ್ಲಿ ಬಿಜೆಪಿ, ಕಾಂಗ್ರೆಸ್‌ನ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ. ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚೆಂದರೆ 15 ಸ್ಥಾನ ಬರಬಹುದು ಎಂದು ಬಹುತೇಕ ಸಮೀಕ್ಷೆಗಳು ಷರ ಬರೆದಿದ್ದವು.

Ranjith H Ashwath Column: ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಉಪಮುಖ್ಯಮಂತ್ರಿಯಾದ ಬಳಿಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸಿ, ಡಿ.ಕೆ.ಶಿವಕುಮಾರ್ ಇದರಲ್ಲಿ ಪೂರ್ಣ ಯಶಸ್ಸು ಪಡೆಯದಿದ್ದರೂ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕೆಲ ಭದ್ರಕೋಟೆಗಳನ್ನು ಬೇಧಿಸು ವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಇದು ಕಾಂಗ್ರೆಸ್ ಯಶಸ್ಸು ಎನಿಸಿದರೂ, ಬಿಜೆಪಿ-ಜೆಡಿಎಸ್ ಮೈತ್ರಿಯೊಳಗಿದ್ದ ಒಳ ರಾಜಕೀಯದಿಂದ ಮತಗಳು ಚದುರಿ ಕಾಂಗ್ರೆಸ್‌ಗೆ ಲಾಭವಾಯಿತು ಎನ್ನುವ ದನ್ನು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದು ಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Ranjith H Ashwath Column: ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ರಾಜೀನಾಮೆ ಬಳಿಕವೂ, ಸಹಿ ಸಂಗ್ರಹ, ಪ್ರತಿಭಟನೆ, ಪತ್ರ ಚಳವಳಿಗೆ ಅವಕಾಶ ನೀಡದೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಡಿ.ಕೆ. ಶಿವಕುಮಾರ್ ಹೆಸರನ್ನು ತಾವೇ ಪ್ರಸ್ತಾಪಿಸುವ ಮೂಲಕ, ಯಾವುದೇ ರೀತಿಯ ವಿರೋಧಕ್ಕೆ ಅವಕಾಶ ನೀಡದೇ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕಂತೂ ಸುಸೂತ್ರವಾಗಿ ಮುಗಿಸಿ ಕೊಟ್ಟಿದ್ದಾರೆ.

Ranjith H Ashwath Column: ಲೈಕ್ಸ್-ಕಾಮೆಂಟ್‌ ಬಿಟ್ಟು, ಬೂತ್‌ ಸಂಘಟಿಸಿ: ಕಮಲ ಪಾಠ

ಲೈಕ್ಸ್-ಕಾಮೆಂಟ್‌ ಬಿಟ್ಟು, ಬೂತ್‌ ಸಂಘಟಿಸಿ: ಕಮಲ ಪಾಠ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸುದೀರ್ಘ ಅವಧಿಗೆ ಅಸ್ತಿತ್ವದಲ್ಲಿರ ಬೇಕೆಂದರೆ ಆ ಪಕ್ಷದ ದೂರದೃಷ್ಟಿಯ ಆಲೋಚನೆಗಳು ಪ್ರಮುಖವಾಗುತ್ತದೆ. ದೂರದೃಷ್ಟಿಯ ಜತೆಜತೆ ತಮ್ಮ ಪಕ್ಷದ ಕೇಡರ್‌ಗಳನ್ನು ಭದ್ರಪಡಿಸಿಕೊಂಡಾಗ ಮಾತ್ರ ಸೋಲು-ಗೆಲುವಿನಾ ಚೆಯ ಬಲವನ್ನು ಪಕ್ಷಗಳು ಹೊಂದುತ್ತವೆ.

Ranjith H Ashwath Column: ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?

ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ವಿರೋಧಾಭಾಸದ ಹೊರತಾಗಿಯೂ, ಇಡೀ ಬಿಜೆಪಿಯನ್ನು ಒಂದು ವೇದಿಕೆಯಲ್ಲಿ ತರುವ ಶಕ್ತಿ ಉಳಿದಿರುವುದು ಯಡಿಯೂರಪ್ಪ ಎನ್ನುವ ಹೆಸರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ. ರಾಜ್ಯ ಬಿಜೆಪಿಯ ಈ ನಾಡಿಮಿಡಿತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಹೆಸರಿನಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಿ ಕೇವಲ ಪಕ್ಷದ ನಾಯಕರನ್ನು ಮಾತ್ರವಲ್ಲದೇ, ಸರ್ವ ಜಾತಿಗಳ ಮಠಾಧೀಶರು, ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದರು.

Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?

ಕೈ ಮೌನದಾಟದ ಹಿಂದಿನ ಗುಟ್ಟೇನು ?

ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿ ದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.

Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !

Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !

ಫಲಿತಾಂಶ ಹೆಚ್ಚಾಗಿರುವಷ್ಟೇ ಪ್ರಮಾಣದಲ್ಲಿ ಪಿಯುಸಿ ಪ್ರವೇಶವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ಸರಕಾರ ಸಿಲುಕಿದೆ. ಹಾಗೆಂದು, ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆ ಏರಿಸುವುದಕ್ಕೆ ಉಪನ್ಯಾಸಕರ ಕೊರತೆ ಸಹಜವಾಗಿಯೇ ಕಾಡುತ್ತದೆ. ಈಗಲೇ ಅನೇಕ ಕಾಲೇಜು ಗಳು ಅತಿಥಿ ಉಪನ್ಯಾಸಕರ ಮೇಲೆ ನಡೆಯುತ್ತಿದೆ.

Ranjith H Ashwath Column: ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆ ಏರಬೇಕು ಎನ್ನುವುದು ಬಿಜೆಪಿ ಯ ಗುರಿಯಾಗಿದೆ. ತಮಿಳುನಾಡಿನಲ್ಲಿ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅರಿವು ಬಿಜೆಪಿಗ ರಿಗೂ ಇದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿರುವ ಶೇ.50ರಷ್ಟು ಮಹಿಳಾ ಮತದಾರರನ್ನು ಗಮನ ದಲ್ಲಿರಿಸಿಕೊಂಡೇ ಈ ವಿಧೇಯಕ ‘ತಂತ್ರ’ ಹೆಣೆದರೇ ಎನ್ನುವ ಅನುಮಾನಗಳು ಶುರುವಾಗಿದೆ.

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

ಯಾವುದೇ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು, ಚುನಾವಣಾ ಪ್ರಚಾರದಲ್ಲಿ ಯಾರು ಭಾಗವಹಿಸಬೇಕು ಎನ್ನುವುದೂ ಸಹ ಬಹುತೇಕ ಸಮಯದಲ್ಲಿ ಇದೇ ಜಾತಿ-ಧರ್ಮದ ಮೇಲೆ ತೀರ್ಮಾನ ವಾಗುತ್ತದೆ. ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಉಪಚುನಾವಣೆಯ ವಿಷಯದಲ್ಲಿಯೂ ಇದೇ ಜಾತಿ-ಧರ್ಮದ ವಿಷಯದಲ್ಲಿ ಶುರುವಾದ ಗದ್ದಲ, ಇದೀಗ ಆಡಳಿತಾ ರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆ ಯಾಗಿ ಉರಿಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ಅನುಕಂಪದ ಅಲೆ ಎರಡೂ ಸೇರಿದರೆ ಗೆಲ್ಲುವುದು ಬಹುದೊಡ್ಡ ಸವಾಲೇನಲ್ಲ ಎನ್ನುವುದು ರಾಜಕೀಯದ ಮೊದಲ ಮೆಟ್ಟಿಲು ಇಡುತ್ತಿರುವವರಿಗೂ ಗೊತ್ತಿರುವ ವಿಷಯ. ಆದರೆ ಎರಡೂ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ ಬಳಿಕ ನಡೆದ ಆಂತರಿಕ ಸಂಘರ್ಷ, ಮತದಾನ ಹತ್ತಿರವಾಗುತ್ತಿದ್ದಂತೆ ಬರುತ್ತಿರುವ ‘ಗುಪ್ತ’ ಮಾಹಿತಿಗಳು ಪಕ್ಷದ ನಾಯಕರನ್ನು ಗೊಂದಲ ಹಾಗೂ ಆತಂಕಕ್ಕೆ ಸಿಲುಕಿಸಿವೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕರ್ನಾಟಕ ದಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ತೃತೀಯ ಭಾಷೆಯ ಅಂಕವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪರಿಗಣಿಸುವ ಬದಲು ಗ್ರೇಡಿಂಗ್ ಕೊಟ್ಟು ಕೈತೊಳೆದುಕೊಳ್ಳುವುದಾಗಿ ಇಲಾಖೆ ಹೇಳಿದೆ.

Ranjith H Ashwath Column: ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

ಅಂದಿನ ಅನಿವಾರ್ಯತೆ ಹಾಗೂ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಮೈತ್ರಿಯು ಸದ್ಯ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ದಕ್ಷಿಣ ಭಾರತ ದಲ್ಲಿ ಬಿಜೆಪಿ ನೆಚ್ಚಿಕೊಳ್ಳಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದರೂ, ಈವರೆಗೆ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದಕ್ಕಿಂತ ಮೈತ್ರಿ, ಆಪರೇಷನ್ ಕಮಲದ ಮೂಲಕ ‘ಮ್ಯಾಜಿಕ್ ನಂಬರ್’ ದಾಟಿರುವುದು ವಾಸ್ತವ.

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜ ವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

Ranjith H Ashwath Column: ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ಅಧಿಕಾರಕ್ಕೆ ಬರುವ ಬಹುತೇಕ ಸರಕಾರಗಳು ಶಿಕ್ಷಣಕ್ಕೆ ಒತ್ತು ನೀಡುವ ಮಾತುಗಳನ್ನು ಆಡು ತ್ತವೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ, ಬೋಧಕ ಸಿಬ್ಬಂದಿಯ ನೇಮಕ, ಮೂಲಸೌಕರ್ಯ ಮಾಡುವುದಾಗಿ ಘೋಷಿಸುತ್ತವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ವರ್ಷ ಒಂದಿಲ್ಲೊಂದು ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸುತ್ತವೆ.

Ranjith H Ashwath Column: ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಪ್ರಮುಖ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಉದ್ಯೋಗ ಸೃಷ್ಟಿಗೆ ಸರಕಾರದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತಾ ಬಂದಿವೆ.

Loading...