ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ಪ್ರವಾಸಿ ಸ್ಥಳದಲ್ಲಿ ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ಕಾಮುಕ: ವಿಡಿಯೊ ವೈರಲ್

ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಯುವಕ

Viral News: ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಾರ್ವಜನಿಕವಾಗಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದು, ಇದರ ಸಿಸಿಟಿವಿ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಪ್ರೇಯಸಿಯರ ಐಫೋನ್ ಆಸೆಗೆ ಖದೀಮರಾದ ಅಪ್ರಾಪ್ತ ಬಾಲಕರು; 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ ಕಳವು!

ಪ್ರೇಯಸಿಯರಿಗೆ ಐಫೋನ್ ಕೊಡಲು 6.5 ಲಕ್ಷ ರು. ಮೌಲ್ಯದ ಟ್ಯಾಪ್ ಕಳವು

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಪ್ರೇಯಸಿಯರಿಗೆ ಐಫೋನ್ ಉಡುಗೊರೆ ನೀಡುವ ಉದ್ದೇಶದಿಂದ 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ಗಳು ಮತ್ತು ಸ್ಯಾನಿಟರಿ ವಸ್ತುಗಳನ್ನು ಕಳವು ಮಾಡಿದ್ದಾರೆ. ಬಳಿಕ ಕಳವು ಮಾಡಿದ ವಸ್ತುಗಳನ್ನು ಕೇವಲ 20 ಸಾವಿರ ರುಪಾಯಿಗೆ ಕಬ್ಬಿಣದ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಪೊಲೀಸರು ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಸ್ತೆ ಕಾಮಗಾರಿ ಸ್ಥಳದಲ್ಲಿ ಮಲಗಿದ ಕಾರ್ಮಿಕ ಮಣ್ಣಿನ ರಾಶಿಗೆ ಸಿಲುಕಿ ಸಾವು; ಕೈ ಹೊರ ಬಂದಿದ್ದರಿಂದ ಬಯಲಾಯ್ತು ಘಟನೆ

ಡಿವೈಡರ್ ಮೇಲೆ ಮಲಗಿದ್ದ ಕಾರ್ಮಿಕನ ದಾರುಣ ಅಂತ್ಯ

ಉತ್ತರ ಪ್ರದೇಶ ಗೋರಖ್‌ಪುರದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಮಿಂತು ಮೃತಪಟ್ಟಿದ್ದಾರೆ. ಡಿವೈಡರ್ ಸಮತಟ್ಟು ಮಾಡುವ ವೇಳೆ ಮಣ್ಣಿನಿಂದ ಕೈ ಹೊರಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಡಂಪರ್‌ಗಳಿಂದ ಮಣ್ಣು ಸುರಿದಾಗ ಆತ ಮಣ್ಣಿನಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಡೆಪ್ಯುಟಿ ಕಲೆಕ್ಟರ್! ಮಧ್ಯ ಪ್ರದೇಶದಲ್ಲಿ ಅಮಾನುಷ ಘಟನೆ

ಲೈಂಗಿಕ ದೌರ್ಜನ್ಯ ಎಸಗಿದ ಡೆಪ್ಯುಟಿ ಕಲೆಕ್ಟರ್ ಅರೆಸ್ಟ್‌

Physical Abuse: ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಆರೋಪದಡಿ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಅರವಿಂದ್ ಮಹೋರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿದ್ದು, ಬಳಿಕ ಮದುವೆಗೆ ನಿರಾಕರಿಸಿ ಬೆದರಿಕೆ ಹಾಕಿದ್ದಾರೆ ಎಂದು 32 ವರ್ಷದ ಮಹಿಳೆ ದೂರಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮಹೋರ್ ಅವರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.

ಕಚೇರಿಯಲ್ಲೇ ಮಾಜಿ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಗ್ನ ಪ್ರೇಮಿ;  ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

ಮಾಜಿ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಗ್ನ ಪ್ರೇಮಿ

Crime News: ಯುವತಿಯೊಬ್ಬಳನ್ನು ಆಕೆಯ ಮಾಜಿ ಗೆಳೆಯ ಮತ್ತು ಸಹೋದ್ಯೋಗಿ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಪಟಿಯಾಲ ನಿವಾಸಿ 30 ವರ್ಷದ ಡಿಂಪಲ್ ಎಂದು ಗುರುತಿಸಲಾಗಿದೆ. ಯುವತಿಯನ್ನು ಕೊಂದು, ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸುಟ್ಟು ಕರಕಲಾದ ಮನೆಗಳು, ಕುಕಿ ಸಮುದಾಯದ ಮೂವರು ಸಾವು

ಮಣಿಪುರದಲ್ಲಿ ಹಿಂಸಾಚಾರಕ್ಕೆ ಮೂವರು ಬಲಿ

ಕೆಲವು ಸಮಯದಿಂದ ತಣ್ಣಗಿದ್ದ ಮಣಿಪುರದಲ್ಲಿ ಶುಕ್ರವಾರ ಮುಂಜಾನೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಮೂವರು ಸಾವನ್ನಪ್ಪಿದರೆ. ಕುಕಿ ಸಮುದಾಯದ ಮನೆಗಳ ಮೇಲೆ ದಾಳಿಯಾಗಿದ್ದು, ಇದು ಈಗ ಭದ್ರತೆಯ ಕಳವಳವನ್ನು ಹುಟ್ಟು ಹಾಕಿದೆ. ಇದರ ಸಂಪೂರ್ಣ ತನಿಖೆಗೆ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ (KIM) ಆಗ್ರಹಿಸಿದೆ.

ಮೀನಿನ ಹೆಸರಿನಲ್ಲಿ ಗೋಮಾಂಸ ಅಕ್ರಮ ಮಾರಾಟ: ಉತ್ತರ ಪ್ರದೇಶದಲ್ಲಿ 1.68 ಕೋಟಿ ರುಪಾಯಿ ಮೌಲ್ಯದ ಕಸಾಯಿಖಾನೆಗೆ ಬೀಗ

ಅಕ್ರಮ ಮಾಂಸ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮ

Crime News: ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಉತ್ತರ ಪ್ರದೇಶದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗತ್ತಿದೆ. ಇದರ ಭಾಗವಾಗಿ ಸುಮಾರು 1.68 ಕೋಟಿ ರುಪಾಯಿ ಮೌಲ್ಯದ ಮಾಂಸ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಗೋಮಾಂಸ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ, ಮಾಂಸ ಸಂಸ್ಕರಣಾ ಘಟಕದ ಮಾಲಕ ಅತೀಕ್ ಅಹ್ಮದ್ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

ಆಪರೇಷನ್ ಡೆಲ್ಟಾ ಹಂಟ್: ಗುಜರಾತ್‌ನಲ್ಲಿ  362 ಅಕ್ರಮ ಬಾಂಗ್ಲಾದೇಶಿಗರ ಬಂಧನ

362 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಗುಜರಾತ್ ರಾಜ್ಯಾದ್ಯಂತ ನಡೆದ ಆಪರೇಷನ್ ಡೆಲ್ಟಾ ಹಂಟ್ ಅಡಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ 362 ಬಾಂಗ್ಲಾದೇಶಿಗರನ್ನು ಪೊಲೀಸರು ಬಂಧಿಸಿದರು. 782ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಪ್ರಜೆಗಳು ಅನುಮತಿಯಿಲ್ಲದೆ ಗುಜರಾತ್‌ಗೆ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಆಸ್ತಿ ಕಲಹಕ್ಕೆ ಕುಟುಂಬವೇ ನಾಶ: ಪೋಷಕರು, ಸೋದರಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಕೊನೆಗೆ ಸ್ನೇಹಿತನಿಂದಲೇ ಕೊಲೆ

ಆಸ್ತಿ ಕಲಹಕ್ಕೆ ಕುಟುಂಬವೇ ನಾಶ

Crime News: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊನೆಗೆ ಆತನ ಸಹಚರ ಮತ್ತು ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಹೊಟೆಲ್‌ ದುರಂತ; ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ಸ್ಥಳದಿಂದ ಎಸ್ಕೇಪ್‌ ಆದ ಮಾಲೀಕ!

ದೆಹಲಿ ಬೆಂಕಿ ದುರಂತ; ಹೊಟೆಲ್‌ ಮಾಲೀಕನ ಬಂಧನ

ಬುಧವಾರ ಭೀಕರ ಬೆಂಕಿ ಅವಘಡದಲ್ಲಿ 21 ಜನರು ಸಾವನ್ನಪ್ಪಿದ ಫ್ಲೋರಿಶ್ ಸ್ಟೇ ಬೆಡ್-ಅಂಡ್-ಬ್ರೇಕ್‌ಫಾಸ್ಟ್‌ನ ಮಾಲೀಕ ಲವ್‌ಕೇಶ್ ಬಜಾಜ್ ಅವರನ್ನು ಬಂಧಿಸಲಾಗಿದೆ. ಡರಾತ್ರಿ ವಿಚಾರಣೆಯ ಸಮಯದಲ್ಲಿ, ಐದು ಅಂತಸ್ತಿನ ಕಟ್ಟಡವನ್ನು ಆವರಿಸಿದ್ದ ಬೆಂಕಿಯಿಂದ ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸ್ಥಳದಿಂದ ಪರಾರಿಯಾಗಿದ್ದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ.

ಸುಲಿಗೆ ಬೆದರಿಕೆ: ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ತೃಣಮೂಲ ಕಾಂಗ್ರೆಸ್ ನಾಯಕನ ಬಂಧನ

ಮುಂದುವರಿದ ತೃಣಮೂಲ ಕೌನ್ಸಿಲರ್ ಗಳ ಬಂಧನ

ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಕೇಳಿ ಬರುತ್ತಿರುವ ಆರೋಪ, ಪ್ರತ್ಯಾರೋಪಗಳ ಮಧ್ಯೆ ಇದೀಗ ಸುಲಿಗೆ, ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೌನ್ಸಿಲರ್ ಒಬ್ಬನನ್ನು ಬಂಧಿಸಲಾಗಿದೆ. 2025ರಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಾರ್ಡ್ ಸಂಖ್ಯೆ 42ರ ಕೌನ್ಸಿಲರ್ ಮಹೇಶ್ ಕುಮಾರ್ ಶರ್ಮಾ ಅವರನ್ನು ಬುರ್ರಬಜಾರ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದೆಹಲಿ ಬಳಿಕ ಬಿಹಾರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ದುರಂತ: ನಾಲ್ವರು  ಸಾವು

ದೆಹಲಿ ಬಳಿಕ ಬಿಹಾರದಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ದೆಹಲಿಯ ಮಾಳವಿಯ ನಗರದ ರೆಸ್ಟೋರೆಂಟ್ ನಲ್ಲಿ ಬೆಂಕಿ ದುರಂತ ಸಂಭವಿಸಿ 21 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಬಿಹಾರದ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ಮುಜಫರ್‌ಪುರ ಜಿಲ್ಲೆಯ ಪ್ರಸಾದ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

ದೇಶದ ಇತಿಹಾಸದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತಗಳಿವು

ದೇಶದಲ್ಲಿ ನಡೆದ ಭೀಕರ ಅಗ್ನಿ ದುರಂತಗಳು

ದೇಶವು ಇತಿಹಾಸದಲ್ಲೇ ಅತ್ಯಂತ ಭೀಕರ ಅಗ್ನಿ ಅವಘಡಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ಮುಖ್ಯ ಕಾರಣ ನಿರ್ಲಕ್ಷ್ಯ, ಅಗ್ನಿಶಾಮಕ ನಿರ್ವಹಣೆಗೆ ಸಂಬಂಧಿಸಿದ ಸರಿಯಾದ ನಿಯಮ ಮತ್ತು ನಿಬಂಧನೆಗಳ ಕೊರತೆಯಾಗಿದೆ. ದೆಹಲಿಯ ಮಾಳವೀಯ ನಗರದ ರೆಸ್ಟೋರೆಂಟ್‌ವೊಂದರ ನೆಲಮಾಳಿಗೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 20 ಮಂದಿ ಸಾವನ್ನಪ್ಪಿದ್ದರು. ದೆಹಲಿಗೂ ಮೊದಲು ದೇಶದ ವಿವಿಧ ಇದೇ ರೀತಿಯ ಅಗ್ನಿ ಅವಘಡಗಳು ಸಂಭವಿಸಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ದುರಂತಗಳ ಚಿತ್ರಣ ಇಲ್ಲಿದೆ.

ಕೋಲ್ಕತ್ತಾದ ಪ್ರತಿಷ್ಠಿತ ಕಾಲೇಜಿನಲ್ಲಿ 1 ಕೋಟಿ ರುಪಾಯಿಗೂ ಅಧಿಕ ನಗದು ಪತ್ತೆ; ಬಯಲಾಯ್ತು ‘ರಹಸ್ಯ ಕೊಠಡಿ’, ಸಿಕ್ಕಿತು ಗನ್!

ಬಂಗಾಳದ ಕಾಲೇಜು ಕ್ಯಾಂಪಸ್‌ನಲ್ಲಿ ಸಿಕ್ಕಿತು ನಿಗೂಢ ಖಜಾನೆ

ಪಶ್ಚಿಮ ಬಂಗಾಳದ ಕೋಲ್ಕತ್ತಾ ಸುರೇಂದ್ರನಾಥ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಾಚರಣೆ ವೇಳೆ ಗೆದ್ದಲು ತಿಂದ 1 ಕೋಟಿ ರುಪಾಯಿಗೂ ಅಧಿಕ ನಗದು ಎರಡು ಸೂಟ್‌ಕೇಸ್‌ಗಳಲ್ಲಿ ಪತ್ತೆಯಾಗಿದೆ. ಮರುದಿನ ಕಾಲೇಜಿನ ಮೇಲ್ಛಾವಣಿ ಬಳಿ ಎಸಿ, ಹಾಸಿಗೆ ಮತ್ತು ಆಧುನಿಕ ಶೌಚಾಲಯ ಹೊಂದಿದ್ದ ರಹಸ್ಯ ಕೊಠಡಿ ಪತ್ತೆಯಾಗಿದೆ. ಅಲ್ಲದೆ ಒಂದು ಗನ್ ಕೂಡ ಸಿಕ್ಕಿರುವುದಾಗಿ ವರದಿಯಾಗಿದೆ. ಹಣದ ಮೂಲ ಹಾಗೂ ಕೊಠಡಿಯ ಬಳಕೆ ಬಗ್ಗೆ ತನಿಖೆ ನಡೆಯುತ್ತಿದೆ.

ಮುಂಬೈ ಬ್ಲಾಸ್ಟ್ ಗೆ ಪ್ಲ್ಯಾನ್: ಪಾಕಿಸ್ತಾನ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಬಂಧನ

ಪಾಕಿಸ್ತಾನ ಭಯೋತ್ಪಾದಕರೊಂದಿಗೆ ಸಂಪರ್ಕ: ಶಂಕಿತನ ಬಂಧನ

ದಾವೂದ್ ಇಬ್ರಾಹಿಂನ ಸಿಂಡಿಕೇಟ್ ಮತ್ತು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಜೊತೆ ಸಂಪರ್ಕ ಹೊಂದಿದ್ದ ಶಂಕಿತನೊಬ್ಬನನ್ನು ಮುಂಬೈಯಲ್ಲಿ ಬಂಧಿಸಲಾಗಿದೆ. ಮಹಾರಾಷ್ಟ್ರದಾದ್ಯಂತ ನಡೆದ ಮೂರು ದಿನಗಳ ತೀವ್ರ ಶೋಧ ಮತ್ತು ಬಹು ನಗರ ದಾಳಿಗಳ ಕಾರ್ಯಾಚರಣೆ ಬಳಿಕ ಈ ಬಂಧನ ನಡೆದಿದೆ.

‘ʼ600-700 ಮಂದಿಯಿಂದ ಅತ್ಯಾಚಾರ’ʼ: ಬ್ರಿಟನ್ ಸಂಸತ್ತಿನಲ್ಲಿ ಸಂತ್ರಸ್ತೆಯರ ಆಘಾತಕಾರಿ ಸಾಕ್ಷ್ಯ ಬಹಿರಂಗ

ಗ್ರೂಮಿಂಗ್ ಗ್ಯಾಂಗ್ ಕರಾಳ ಮುಖ ಬಯಲು

ಬ್ರಿಟನ್ ಸಂಸದ ರುಪರ್ಟ್ ಲೋವ್ ಅವರು ಸಂಸತ್ತಿನಲ್ಲಿ ಗ್ರೂಮಿಂಗ್ ಗ್ಯಾಂಗ್ ಪ್ರಕರಣದ ಸಂತ್ರಸ್ತೆಯರ ಆಘಾತಕಾರಿ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ಸಂತ್ರಸ್ತೆ ಮೂರು ವರ್ಷಗಳಲ್ಲಿ 600-700 ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಹೇಳಿದ್ದಾಳೆ. ಈ ಪ್ರಕರಣಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಸಂಸ್ಥೆಗಳ ವೈಫಲ್ಯದ ಕುರಿತು ಮತ್ತೆ ಗಂಭೀರ ಚರ್ಚೆಗೆ ಕಾರಣವಾಗಿವೆ.

ಪತಿಗೆ ಕರೆ ಮಾಡಿದ ಕೆಲ ಹೊತ್ತಲ್ಲೇ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ನಿಯ ಮೃತದೇಹ ಪತ್ತೆ; ತೆರೆದ ಬೀರು, 1 ತಟ್ಟೆ ಸಿಹಿತಿಂಡಿ, 2 ಲೋಟ ನೀರು ಕೊಲೆ ರಹಸ್ಯ ಬಿಚ್ಚಿಡುತ್ತ?

ಕುತ್ತಿಗೆ ಸೀಳಿ, ಕಿವಿ ಕತ್ತರಿಸಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

Crime News: 60 ವರ್ಷದ ಮಹಿಳೆಯೊಬ್ಬರ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಹಳೆಯ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಆಧ್ಯಾತ್ಮಿಕ ಗುರುವಿನ ಮುಖವಾಡ ಧರಿಸಿ ಐಐಟಿ ಪದವೀಧರನಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್‌; ಹೊರಬಂತು ಮತ್ತೊಂದು ಕಾಮಕಾಂಡ

ನಕಲಿ ಗುರು ವೇಷದಲ್ಲಿದ್ದ ಐಐಟಿ ಪದವೀಧರನ ಬಂಧನ

Physical Assult: ಐಐಟಿ ಪದವೀಧರನೊಬ್ಬ ಮಹಿಳೆಯರನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಸೆಳೆದು, ಲೈಂಗಿಕ ಶೋಷಣೆ ನಡೆಸಿ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಆದಿಕರ್ತ ನಾರಾಯಣ ದಾಸ್ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಗುರುವಾಗಿ ಗುರುತಿಸಿಕೊಂಡ ಆತ ಯುಟ್ಯೂಬ್ ಮೂಲಕ ಅಪಾರ ಅನುಯಾಯಿಗಳನ್ನು ಸಂಪಾದಿಸಿದ್ದ ಎನ್ನಲಾಗಿದೆ.

ಗರ್ಭಿಣಿಯ ಹೊಟ್ಟೆ ಸೀಳಿ ವೈದ್ಯ ನಾಪತ್ತೆ; ಮಹಿಳೆ ಸಾವು, ಪವಾಡ ಸದೃಶವಾಗಿ ಬದುಕುಳಿದ ಮಗು

ಗರ್ಭಿಣಿಯ ಹೊಟ್ಟೆ ಕತ್ತರಿಸಿ ವೈದ್ಯ ಪರಾರಿ

Crime News: ಅಕ್ರಮವಾಗಿ ನಿರ್ವಹಿಸಲ್ಪಡುತ್ತಿದ್ದ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಗರ್ಭಿಣಿ ಆಶಾ ಕಾರ್ಯಕರ್ತೆ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಸ್ಟಾಫ್ ನರ್ಸ್ ಮತ್ತು ಒಬ್ಬ ದಾದಿಯನ್ನು ಬಂಧಿಸಲಾಗಿದೆ.

Belagavi News: ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್‌

ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್‌

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್‌ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಹತ್ಯೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನುಬಿದ್ದ ಪೊಲೀಸರು, ಪಿಸ್ತೂಲ್ ತಯಾರಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಲ್ನೋಟಕ್ಕೆ ಪುಸ್ತಕ ಮಾರಾಟ; ಹಿಂಬಾಗಿಲಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿ: ಬೆಳಗಾವಿ, ಉತ್ತರ ಕನ್ನಡದ 13 ಶಂಕಿತರ ಬಂಧನ

ಅಕ್ರಮ ಶಸ್ತ್ರಾಸ್ತ್ರ ತಯಾರಿ: 13 ಮಂದಿಯ ಬಂಧನ

ಅಕ್ರಮ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಆರೋಪದಲ್ಲಿ ಕರ್ನಾಟಕ ಪೊಲೀಸರು ಪುಸ್ತಕ ಮಾರಾಟಗಾರನೊಬ್ಬ ಸೇರಿದಂತೆ ಒಟ್ಟು 13 ಶಂಕಿತರನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಂದೂಕು ಸರಬರಾಜು ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದೂವರೆ ವರ್ಷದ ಕಂದಮ್ಮನನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ತಾಯಿ, ಪ್ರೇಮಿ

ಒಂದೂವರೆ ವರ್ಷದ ಕಂದಮ್ಮನನ್ನು ಚಿತ್ರಹಿಂಸೆ ನೀಡಿ ಕೊಲೆ!

ಕೇರಳದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಒಂದೂವರೆ ವರ್ಷದ ಅರ್ಷಿದ್ ಎಂಬ ಪುಟ್ಟ ಮಗುವನ್ನು ಮಲ ತಂದೆಯೇ ಕೊಲೆ ಮಾಡಿದ್ದಾನೆ. ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24 ವರ್ಷ) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31 ವರ್ಷ) ಎಂಬುವವರನ್ನು ನೆಡುಮಂಗಾಡ್ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ  ಮಹಿಳೆಗೆ ಆನ್‌ಲೈನ್ ನಲ್ಲಿ 23 ಲಕ್ಷ ರೂ  ವಂಚನೆ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಆನ್‌ಲೈನ್‌ನಲ್ಲಿ ಲಕ್ಷ ರೂ ವಂಚನೆ

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ, ತಮಗೆ ಆನ್ ಲೈನ್‌ನಲ್ಲಿ 23 ಲಕ್ಷ ವಂಚನೆ ಮಾಡಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆ ವೈವಾಹಿಕ ವೇದಿಕೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದರಿಂದ ಸ್ಕಾಟ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವ ಡಾ. ವಿಹಾನ್ ಮಿಶ್ರಾ ಹೆಸರಿನ ವ್ಯಕ್ತಿ ಸಂಪರ್ಕಿಸಿದ್ದಾರೆ.

80 ವರ್ಷದ ವೃದ್ಧೆ ಮೇಲೆ ಅತ್ಯಾಚಾರಗೈದ 28 ವರ್ಷದ ಕಾಮಾಂಧ

ಉತ್ತರ ಪ್ರದೇಶದಲ್ಲಿ ವೃದ್ದೆ ಮೇಲೆ ಅತ್ಯಾಚಾರ

ಶಾರೀರಿಕ, ಮಾನಸಿಕವಾಗಿ ದುರ್ಬಲಳು, ಆಕೆಯ ಪಾಲಿಗೆ ಇನ್ನು ಉಳಿದಿರುವುದು ಕೆಲವೇ ದಿನಗಳು, ತನ್ನ ಅಜ್ಜಿ, ತಾಯಿಗೆ ಸಮಾನಳಾದವಳು ಎಂಬುದನ್ನು ಕೂಡ ನೋಡದ ಕಾಮಾಂಧನೊಬ್ಬ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Loading...