ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಶಂಕೆ: ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದು ಕೊಂದ ಗ್ರಾಮಸ್ಥರು

ಅಕ್ರಮ ಸಂಬಂಧ ಶಂಕೆ: ಯುವಕನನ್ನು ಮರಕ್ಕೆ ಕಟ್ಟಿ ಬರ್ಬರವಾಗಿ ಹತ್ಯೆ

ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ 25 ವರ್ಷದ ಯುವಕನನ್ನು ಕುಟುಂಬಸ್ಥರು ಮರಕ್ಕೆ ಕಟ್ಟಿ ಕ್ರೂರವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಡ್ರಗ್‌ ಓವರ್‌ಡೋಸ್‌; ಮ್ಯೂಸಿಕ್‌ ಕಾನ್ಸರ್ಟ್‌ ವೇಳೆ ಇಬ್ಬರು ಎಂಬಿಎ ವಿದ್ಯಾರ್ಥಿಗಳ ಸಾವು: ಮಾದಕ ದ್ರವ್ಯ ವ್ಯಸನದ ಬಗ್ಗೆ ಹೆಚ್ಚುತ್ತಿದೆ ಆತಂಕ

ಡ್ರಗ್ಸ್ ಸೇವನೆ: ಎಂಬಿಎ ವಿದ್ಯಾರ್ಥಿಗಳಿಬ್ಬರು ಸಾವು

ಮಾದಕ ದ್ರವ್ಯ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ಮೂವರು ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿದ್ದರೆ ಎನ್ನಲಾಗಿದೆ. ಈ ಮೂವರು ಕೂಡ ಎಂಬಿಎ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ನೋಯ್ಡಾ ಪ್ರತಿಭಟನೆ: ಹಿಂದಿನ ದಿನ ರಾತ್ರಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ನಡೆದಿತ್ತು ಪ್ಲ್ಯಾನಿಂಗ್

ನೋಯ್ಡಾ ಹಿಂಸಾತ್ಮಕ ಪ್ರತಿಭಟನೆಗೆ ಹಿಂದಿನ ದಿನ ರಾತ್ರಿ ನಡೆದಿತ್ತು ಯೋಜನೆ

labour wages: ಹರಿಯಾಣ, ಉತ್ತರ ಪ್ರದೇಶ ಸರ್ಕಾರದ ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸೋಮವಾರ ನೋಯ್ಡಾದಲ್ಲಿ ಪ್ರಾರಂಭವಾದ ಹಿಂಸಾತ್ಮಕ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗಾಗಿ ವಾಟ್ಸಾಪ್ ಗುಂಪುಗಳಲ್ಲಿ ರಾತ್ರೋರಾತ್ರಿ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ವಾಟ್ಸಾಪ್ ಗುಂಪುಗಳಲ್ಲಿ ಪ್ರಚೋದನಕಾರಿ ವಿಷಯ ಮತ್ತು ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರದಲ್ಲಿ ಹೀನ ಕೃತ್ಯ; ನೋಡಕ್ಕೆ ತನ್ನಂತೆ ಕಾಣಲ್ಲ ಎಂದು 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ!

ನೋಡಕ್ಕೆ ತನ್ನಂತೆ ಕಾಣಲ್ಲ ಎಂದು ಮಗನನ್ನು ಕೊಂದ ಪಾಪಿ ತಂದೆ!

ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಕ್ರೂರ ಕೃತ್ಯ ಎಸಗಿದ್ದಾನೆ. ತನ್ನ ಮಗ ನೋಡಲು ತನ್ನಂತೆ ಇಲ್ಲ ಎಂದು ಕೃಷ್ಣಾ ನದಿಗೆ ತಳ್ಳಿ ಕೊಂದಿದ್ದಾನೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಪೊಲೀಸರು ಬಂಧಿಸಿದ್ದಾರೆ.

ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿʼʼ; ಮದುವೆ ಮುಗಿಯುತ್ತಿದ್ದಂತೆಯೇ ಪತಿ ಬಳಿ ಭರ್ಜರಿ ಡಿಮ್ಯಾಂಡ್‌ ಇಟ್ಟ ಪತ್ನಿ

ಮದುವೆಯ ಮೊದಲ ರಾತ್ರಿಯೇ ಹಣಕ್ಕೆ ಬೇಡಿಕೆಯಿಟ್ಟ ವಧು

Bride demands money: ವಧುವೊಬ್ಬಳು ತಮ್ಮ ಮದುವೆಯ ಮೊದಲ ರಾತ್ರಿ ಗಂಡನಿಗೆ ವಿಚಿತ್ರ ಬೇಡಿಕೆಯಿಟ್ಟಿದ್ದಾಳೆ. ಮುಖಕ್ಕೆ ಹಾಕಿರುವ ಮುಸುಕು ತೆಗೆಯಬೇಕೆಂದರೆ 90 ಲಕ್ಷ ರುಪಾಯಿ ಕೊಡಬೇಕೆಂದು ಆಗ್ರಹಿಸಿದ್ದಾಳೆ ಎಂದು ಆರೋಪಿಲಾಗಿದೆ. ಪತಿ 90 ಲಕ್ಷ ರುಪಾಯಿ ನೀಡುವವರೆಗೂ ಆತನೊಂದಿಗೆ ದೈಹಿಕ ಸಂಬಂಧ ಹೊಂದಲು ಪತ್ನಿ ನಿರಾಕರಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನಲ್ಲಿ ಘೋರ ಘಟನೆ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!

ಬೆಂಗಳೂರಿನಲ್ಲಿ 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!

Bengaluru News: ಬೆಂಗಳೂರು ನಗರದ ವೈಟ್‌ಫೀಲ್ಡ್ ಬಳಿಯ ಇಮ್ಮಡಿ ಹಳ್ಳಿಯ ಮನೆಯಲ್ಲಿ ದುರ್ಘಟನೆ ನಡೆದಿದೆ. ಮಗಳ ಉಸಿರುಗಟ್ಟಿಸಿ ಕೊಂದ ಬಳಿಕ, ತಾಯಿ ಕೂಡ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನೋಯ್ಡಾ ಕಾರ್ಮಿಕರ ಪ್ರತಿಭಟನೆ: ಹೋರಾಟದ ಹಿಂದೆ ಪಾಕಿಸ್ತಾನದ ನಂಟು?

ನೋಯ್ಡಾ ಹಿಂಸಾತ್ಮಕ ಪ್ರತಿಭಟನೆ ಹಿಂದೆ ಪಾಕಿಸ್ತಾನದ ನಂಟು

ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕಾಗಿ ಆರಂಭವಾದ ಕಾರ್ಮಿಕರ ಪ್ರತಿಭಟನೆ ಹಿಂಸೆಗೆ ತಿರುಗಿ 300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜಭರ್ ಪ್ರತಿಭಟನೆ ಹಿಂದೆ ಪಾಕಿಸ್ತಾನದ ನಂಟಿನ ಶಂಕೆಯನ್ನು ವ್ಯಕ್ತಪಡಿಸಿದ್ದು, ಘಟನೆಯ ಹಿಂದೆ ಪಿತೂರಿ ಇರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ.

Murder case: ಪತಿಯ ಬಿಟ್ಟು ಪ್ರಿಯಕರನೊಂದಿಗೆ ಓಡಿಹೋದ ಯುವತಿಯ ಕೊಂದು ಸುಟ್ಟುಹಾಕಿದ ಕುಟುಂಬಸ್ಥರು

ಪತಿಯ ಬಿಟ್ಟು ಪ್ರಿಯಕರನೊಂದಿಗೆ ಓಡಿಹೋದವಳ ಕೊಂದು ಸುಟ್ಟುಹಾಕಿದ ಕುಟುಂಬಸ್ಥರು

ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಆಕೆಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 13ರಂದು ಆಕೆಯನ್ನು ಕೊಲೆ ಮಾಡಿದ ಕುಟುಂಬಸ್ಥರು, ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Rohini Sindhuri: ಕೈಚೀಲ ಖರೀದಿ ಅಕ್ರಮ; ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

ಕೈಚೀಲ ಖರೀದಿ ಅಕ್ರಮ; ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸುಪ್ರೀಂ ತಡೆ

Rohini Sindhuri: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್​ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 7.65 ಕೋಟಿ ನಷ್ಟ ಉಂಟಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಗಂಡನ ಬಿಟ್ಟು ಪ್ರಿಯಕರನ ಜತೆ ಮಹಿಳೆ ಎಸ್ಕೇಪ್‌; ಆಸ್ಪತ್ರೆಗೆ ಹೋಗ್ತೀನಿ ಅಂತ ಹೇಳಿ ಹೋಗಿ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಳು! Video

ಗಂಡನ ಬಿಟ್ಟು ಪ್ರಿಯಕರನಿಂದ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡ ಮಹಿಳೆ!

ಸಿನಿಮೀಯ ಶೈಲಿಯಲ್ಲಿ ನಡೆದಿರುವ ಮಹಿಳೆ ಮತ್ತು ಪ್ರಿಯಕರನ ಮದುವೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಗಂಡನಿಗೆ ಹೇಳಿ ಹೋಗಿದ್ದ ಮಹಿಳೆ ಲವರ್‌ ಜತೆ ಎಸ್ಕೇಪ್‌ ಆಗಿದ್ದಾಳೆ. ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮಹಿಳೆಗೆ ಪ್ರಿಯಕರ ತಾಳಿ ಕಟ್ಟಿ, ಕಾಲುಂಗರ ತೊಡಿಸಿದ್ದಾನೆ.

ರೀಲ್ಸ್ ಕ್ರೇಜ್‌ಗೆ ಯುವತಿ ಬಲಿ: ಬೈಕ್ ರೈಡ್‌ ಮಾಡುತ್ತಲೇ ವಿಡಿಯೊ ಚಿತ್ರೀಕರಿಸುವ ದುಸ್ಸಾಹಸಕ್ಕೆ ಮುಂದಾದ ವೇಳೆ ಡಿವೈಡರ್‌ಗೆ ಡಿಕ್ಕಿ

ರೀಲ್ಸ್ ಎಡವಟ್ಟಿನಿಂದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವತಿ ಸಾವು

Viral Video: ಚಲಿಸುವ ವಾಹನಗಳ ಮುಂದೆ, ರೈಲ್ವೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡಿ ಯುವಜನತೆ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಸದ್ಯ ಈ ದೃಶ್ಯದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ‌.

ಪತ್ನಿಯನ್ನು ಕೊಂದು ಶವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ; 4 ವರ್ಷದ ಮಗನಿಂದ ಬಯಲಾಯ್ತು ಭಯಾನಕ ಸತ್ಯ

ಪತ್ನಿಯನ್ನು ಕೊಂದು ಶವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ

Crime News: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಬಗ್ಗೆ ಇದ್ದ ಅನುಮಾನದಿಂದ ಜಗಳವಾಡಿದ ನಂತರ ಆಕೆಯನ್ನು ಕೊಂದು, ನಂತರ ಆಕೆಯ ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿರುವ ಘಟನೆ ಒಡಿಶಾದ ನಬರಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಪತಿಯನ್ನು ಸುಬಾಸ್ ಗೊಂಡ್ ಎಂದು ಗುರುತಿಸಲಾಗಿದ್ದು, ಮನೈ ಗೊಂಡ್‌ ಮೃತ ದುರ್ದೈವಿ.

ಭೀಕರ ಅಪಘಾತ: ಸಿಮೆಂಟ್ ಮಿಕ್ಸರ್‌ಗೆ ಡಿಕ್ಕಿ ಹೊಡೆದ ವ್ಯಾನ್; 11 ಮಂದಿ ದುರ್ಮರಣ

ಸಿಮೆಂಟ್ ಮಿಕ್ಸರ್‌ಗೆ ವ್ಯಾನ್ ಡಿಕ್ಕಿ; 11 ಮಂದಿ ದುರ್ಮರಣ

accident: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 11 ಜನರು ದುರ್ಮರಣಕ್ಕೀಡಾಗಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸಿಮೆಂಟ್ ಮಿಕ್ಸರ್‌ಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಅಪಘಾತದಿಂದ ಸ್ಥಳೀಯರು ಭಯಭೀತರಾಗಿ ಗಾಯಾಳುಗಳನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದರು.

ಟಿಸಿಎಸ್ ಕಂಪನಿಯಲ್ಲಿ ಬೆಳಕಿಗೆ ಬಂತು ಮತಾಂತರ ದಂಧೆ! ಟೀಂ ಲೀಡ್‌ ಸೇರಿ 6 ಜನರ ಬಂಧನ

ಟಿಸಿಎಸ್ ಕಂಪನಿಯಲ್ಲಿ ಬೆಳಕಿಗೆ ಬಂತು ಮತಾಂತರ ದಂಧೆ!

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ಹಲವಾರು ಮಹಿಳಾ ಉದ್ಯೋಗಿಗಳು ತಮ್ಮ ತಂಡದ ನಾಯಕರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ನಂತರ ಭಾರಿ ವಿವಾದ ಭುಗಿಲೆದ್ದಿದೆ.

ಮಗಳ ಮೃತದೇಹದೊಂದಿಗೆ ದಿನ ಕಳೆದ ತಂದೆ; ವಾಸನೆ ಹೊರಬರದಿರಲು ಪರ್‌ಫ್ಯೂಮ್‌ ಸ್ಪ್ರೇ: ಕೊನೆಗೆ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಮಗಳ ಸಾವನ್ನು ಮರೆ ಮಾಡಿದ ತಂದೆ

Crime News: ಪ್ರಿಯಾಂಕಾ ಎಂಬ ಮಹಿಳೆಯು ತನ್ನ ತಂದೆ ಉದಯ್ ಭಾನ್ ಬಿಸ್ವಾಸ್ ಜತೆ ವಾಸಿಸುತ್ತಿದ್ದರು. ಆದರೆ ಅವರು ವಾಸವಿದ್ದ ಮನೆಗೆ ಸುಮಾರು ನಾಲ್ಕು ತಿಂಗಳಿನಿಂದ ಬೀಗ ಹಾಕಲಾಗಿತ್ತು. ಆ ಅವಧಿಯಲ್ಲಿ ತಂದೆ ಮತ್ತು ಮಗಳು ಇಬ್ಬರೂ ನಾಪತ್ತೆಯಾಗಿದ್ದರು. ಇದೀಗ ಮನೆಯಲ್ಲಿ ಮಹಿಳೆಯ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ.

Koppala News: ಕೊಪ್ಪಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆ, ಕೊಲೆ ಶಂಕೆ

ಕೊಪ್ಪಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕರಿಬ್ಬರ ಶವ ಪತ್ತೆ, ಕೊಲೆ ಶಂಕೆ

ರುದ್ರೇಶ್ ಗಂಗಾವತಿ (23) ಹಾಗೂ ರವಿರಾಮಣ್ಣ ತಟ್ಟಿ (22) ಮೃತ ದುರ್ದೈವಿಗಳು. ಇಬ್ಬರು ಯುವಕರನ್ನು ಬೇರೆಡೆ ಕೊಂದು ಕಾಲುವೆಗೆ ತಂದು ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ. ಇಬ್ಬರ ವೈಯಕ್ತಿಕ ದ್ವೇಷ ಹೊಂದಿದ್ದವರು, ಇವರು ಕೊನೆಯ ಬಾರಿಗೆ ಕಾಣಿಸಿಕೊಂಡ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ಇತ್ಯಾದಿ ಪರಿಶೀಲಿಸಲಾಗುತ್ತಿದೆ.

Kidnap case: ಯುವಕನನ್ನು ಅಪಹರಿಸಿ ಯುವತಿ ವೇಷ ಹಾಕಿಸಿ ಲೈಂಗಿಕ ಸೇವೆಗೆ ಬಳಕೆ, ಲಿಂಗ ಬದಲಾವಣೆಗೆ ಒತ್ತಡ

ಯುವಕನ ಅಪಹರಿಸಿ ಯುವತಿ ವೇಷ ಹಾಕಿಸಿ ಲೈಂಗಿಕ ಸೇವೆಗೆ ಬಳಕೆ, ಬ್ಲ್ಯಾಕ್‌ಮೇಲ್

ಯುವಕ ಅನಿಲ್‌ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ.

Love Jihad: ಗಾಂಜಾ ಗಿರಾಕಿಯ ಲವ್‌ ಜಿಹಾದ್‌; ಮೊಬೈಲ್‌ನಲ್ಲಿ ಯುವತಿಯರ 7000ಕ್ಕೂ ಹೆಚ್ಚು ಫೋಟೋ! ಅಂತಾರಾಷ್ಟ್ರೀಯ ಮಟ್ಕಾ ಬುಕ್ಕಿಗಳ ಲಿಂಕ್!

ಗಾಂಜಾ ಗಿರಾಕಿಯ ಲವ್‌ ಜಿಹಾದ್‌; ಅಂತಾರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್!

ಹಿಂದೂ ಸಂಘಟನೆಗಳ ಕಾರ್ಯಕರ್ತರು ಯುವಕನ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಫೋನ್‌ನಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್‌ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಗೊತ್ತಾಗಿದೆ.

Blackmail: 42ರ ಆಂಟಿಯಿಂದ 28ರ ಜಿಮ್ ಟ್ರೈನರ್‌ಗೆ ಗಾಳ, ಬ್ಲಾಕ್‌ಮೇಲ್‌, ಯುವಕ ಆತ್ಮಹತ್ಯೆ

42ರ ಆಂಟಿಯಿಂದ 28ರ ಜಿಮ್ ಟ್ರೈನರ್‌ಗೆ ಬ್ಲಾ‌‌ಕ್‌ಮೇಲ್‌, ಯುವಕ ಆತ್ಮಹತ್ಯೆ

ವಿವಾಹಿತ ಮಹಿಳೆಯ ಜೊತೆ ಸಂಬಂಧ ಹಾಗೂ ಆಕೆಯ ಬ್ಲ್ಯಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಾವಿಗೂ ಮುನ್ನ ಮಹಿಳೆಗೆ ದಿಲೀಪ್ ಕರೆ ಮಾಡಿದ್ದಾನೆ. ಮಹಿಳೆಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

Dharwad Murder Case: ಧಾರವಾಡ ಯುವ ಕಾಂಗ್ರೆಸ್ ನಾಯಕ ಹತ್ಯೆ ಕೇಸ್‌; 8 ಆರೋಪಿಗಳ ಬಂಧನ

ಧಾರವಾಡ ಯುವ ಕಾಂಗ್ರೆಸ್ ನಾಯಕ ಹತ್ಯೆ ಕೇಸ್‌; 8 ಆರೋಪಿಗಳ ಬಂಧನ

ಧಾರವಾಡದ ಹಾಸ್ಮಿ ನಗರದ ನಿವಾಸದಲ್ಲಿ ಕಾಂಗ್ರೆಸ್‌ ಯುವ ಮುಖಂಡ ಫೈರೋಜ್ ಮೇಲೆ ಮಾರಕಾಸ್ತ್ರಗಳೊಂದಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಒಟ್ಟು 9 ಆರೋಪಿಗಳ ಪೈಕಿ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ.

ಲಷ್ಕರ್-ಎ-ತೈಬಾ  ಜೊತೆ ನಂಟು: ಹರಿಯಾಣ, ರಾಜಸ್ಥಾನದ ಹಲವರ ಬಂಧನ

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಲವರ ಬಂಧನ

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹರಿಯಾಣ ಮತ್ತು ರಾಜಸ್ಥಾನದ ಹಲವಾರು ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ನಕಲಿ ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್‌ಗಳನ್ನು ಮಾಡಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ

ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ

Kerala student self-harming: ಕೇರಳದ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟ (ಆತ್ಮಹತ್ಯೆ ಮಾಡಿದ) ನಂತರ ಪೊಲೀಸರು ಅಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯನ್ನು ತಿರುವನಂತಪುರಂನ ಪುದುಕುಲಂಗರದ ಉಳಮಲಕ್ಕಲ್ ಮೂಲದ ನಿತಿನ್ ರಾಜ್ ಆರ್‌ಎಲ್ (22) ಎಂದು ಗುರುತಿಸಲಾಗಿದೆ.

Actor Harish Death: ಕೊಡಗಿನಲ್ಲಿ ಭೀಕರ ಅಪಘಾತ; ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಚಿತ್ರನಟ ಹರೀಶ್‌ ಸಾವು

ಕೊಡಗಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಚಿತ್ರನಟ ಹರೀಶ್‌ ಸಾವು

Sandalwood News: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ನಡೆದ ಅಪಘಾತದಲ್ಲಿ ಚಲನಚಿತ್ರ ನಟ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Harassment: ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದು ದೈಹಿಕ ಸಂಬಂಧದ ಆಸೆಗೆ ಬಿದ್ದು ಮಹಿಳೆಗೆ ಮೊಬೈಲ್‌ ಸಂದೇಶದ ಮೂಲಕ ಕಿರುಕುಳ ನೀಡಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ.

Loading...