ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರೈಂ

Murder Case: ಮನೆಗೆಲಸದವನಿಂದ ಪೈಶಾಚಿಕ ಕೃತ್ಯ, ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ತಾನೂ ಸತ್ತ!

ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ಮನೆಗೆಲಸದಾತ ಆತ್ಮಹತ್ಯೆ

ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನು ಅತ್ಯಾಚಾರವೆಸಗಿ, ಬಳಿಕ ನೇಣು ಬಿಗಿದುಕೊಂಡು ಆರೋಪಿ ದೇವರಾಜು (50) ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜು ಮನೆಗೆಲಸ ಮಾಡುತ್ತಿದ್ದ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಕೃತ್ಯದ ಬಗೆಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಅಶ್ಲೀಲ ವಿಡಿಯೊ ನೋಡುತ್ತ ಅಪ್ರಾಪ್ತ ವಯಸ್ಸಿನ ಪುತ್ರಿ ಮೇಲೆ 4 ವರ್ಷ ಅತ್ಯಾಚಾರ ಎಸಗಿದ ಕಾಮುಕ ತಂದೆ; ದೇಶವೇ ತಲೆತಗ್ಗಿಸುವ ಘಟನೆ ಬೆಳಕಿಗೆ ಬಂದಿದ್ದೇಗೆ?

ಅಪ್ರಾಪ್ತ ವಯಸ್ಸಿನ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆ

Physical Abuse: ಗುಜರಾತ್‌ನಲ್ಲಿ ಕಾಮುಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯ ಮೇಲೆ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ. ನಿರಂತರ ದೌರ್ಜನ್ಯದಿಂದ ಬೇಸತ್ತ ಆಕೆ ಮನೆಯಿಂತ ತಪ್ಪಿಸಿಕೊಳ್ಳುವ ಮೂಲಕ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗಿದೆ.

ಲಂಚ ಪ್ರಕರಣ; ಬಂಧನದ ವೇಳೆ ರಂಪಾಟ ಮಾಡಿದ್ದ ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಸ್ಪೆಂಡ್‌

ಲಂಚ ಸ್ವೀಕರಿಸಿ ಬಂಧನವಾಗಿದ್ದ ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಸ್ಪೆಂಡ್‌

Police Inspector Govindaraju suspended: ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಬಂಧನದ ವೇಳೆ ಪೊಲೀಸ್‌ ಅಧಿಕಾರಿ ಕೂಗಾಡಿ ರಂಪಾಟ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

CJ Roy Death Case: ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಕಾನ್ಫಿಡೆಂಟ್ ಗ್ರೂಪ್‌ ಚೇರ್ಮನ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಉನ್ನತಮಟ್ಟದ ತನಿಖೆ ನಡೆಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದರ ಬೆನ್ನಲ್ಲೇ ಕೇಸ್‌ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ.

ಉದ್ಯಮಿ ಸಿ.ಜೆ. ರಾಯ್ ಕಚೇರಿಯಲ್ಲಿ ಡೈರಿ ಪತ್ತೆ; ಹಲವು ಪ್ರಮುಖರ ಹೆಸರು ಉಲ್ಲೇಖ!

ಉದ್ಯಮಿ ಸಿ.ಜೆ. ರಾಯ್ ಕಚೇರಿಯಲ್ಲಿ ಡೈರಿ ಪತ್ತೆ; ಪ್ರಮುಖರ ಹೆಸರು ಉಲ್ಲೇಖ!

CJ Roy Death Case: ಉದ್ಯಮಿ ಸಿ.ಜೆ.ರಾಯ್‌ ಅವರ ಬೆಂಗಳೂರಿನ ಕಚೇರಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳು ಹೆಸರು ಉಲ್ಲೇಖಿಸಲಾಗಿದೆ. ಡೈರಿಯನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.

CJ Roy Death: ಸಿಜೆ ರಾಯ್‌ ಅಂತಿಮ ಕ್ಷಣದಲ್ಲಿ ಯಾರ ಜತೆ ಮಾತಾಡಿದ್ರು? ಪತ್ತೆಗೆ ಮೊಬೈಲ್‌ ಸಿಐಡಿ ಸೈಬರ್ ಸೆಲ್‌ಗೆ

ಸಿಜೆ ರಾಯ್‌ ಅಂತಿಮ ಕ್ಷಣದ ರಹಸ್ಯ ಪತ್ತೆಗೆ ಮೊಬೈಲ್‌ ಸೈಬರ್ ಸೆಲ್‌ಗೆ ರವಾನೆ

ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಕಚೇರಿಯಲ್ಲಿದ್ದ ರಾಯ್ ಅವರ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್ ಹಾಗೂ ರಾಜಕಾರಣಿಗಳ ಹೆಸರುಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕಾಗಿ ಬರೆದಿದ್ದಾರೆ? ಬರೀ ಈವೆಂಟ್ ವಿಚಾರಕ್ಕಾ? ಅಥವಾ ಬೇರೆ ವಿಷಯಾ ಇದೆಯಾ? ಎಂದು ಪೊಲೀಸರು ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ.

ಭಾರತದ ಮೇಲೆ ನಿಗಾ ಇಟ್ಟಿರುವ ಪಾಕಿಸ್ತಾನ? ಸಾಂಬಾದಲ್ಲಿ ಮತ್ತೊಂದು ಶಂಕಿತ ಡ್ರೋನ್ ಪತ್ತೆ

ಕಾಶ್ಮೀರದಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ

ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಇದರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೂ ಮುನ್ನ ಜನವರಿ 15 ರಂದು ಸಾಂಬಾದ ಐಬಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿತ್ತು. ಕೂಡಲೇ ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು ಮತ್ತು ಭದ್ರತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Sabarimala gold theft: ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಹಾಗೂ ಮುಂಭಾಗದ ದ್ವಾರಪಾಲಕ ಶಿಲ್ಪಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4 ಕಿಲೋಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ಉನ್ನಿಕೃಷ್ಣನ್ ಮೊದಲ ಆರೋಪಿಯಾಗಿದ್ದು, ಆತನ ಬೆಂಗಳೂರಿನ ಆಸ್ತಿಗಳ ಮೇಲೂ ಇಡಿ ದಾಳಿ ನಡೆದಿದೆ.

Labourers death: ಶೆಡ್‌ನಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರು ನಿಗೂಢ ರೀತಿಯಲ್ಲಿ ಸಾವು

ಶೆಡ್‌ನಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರು ನಿಗೂಢ ರೀತಿಯಲ್ಲಿ ಸಾವು

ಕೋಕಾಕೋಲಾ ವೇರ್ ಹೌಸ್‌ನಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಶೆಡ್ ಕಿಟಕಿ ಬಾಗಿಲು ಕ್ಲೋಸ್ ಮಾಡಿ ಅಡುಗೆ ಮಾಡಿದ್ದರು. ತಡರಾತ್ರಿ ಉಸಿರುಗಟ್ಟಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿ.ಜೆ. ರಾಯ್‌ ಸಾವಿಗೆ ಕೇರಳದ ಆ ಐಟಿ ಅಧಿಕಾರಿಯೇ ಹೊಣೆ: ಸಹೋದರ ಬಾಬು ಸಿ.ಜೋಸೆಫ್ ಆರೋಪ

ಸಿ.ಜೆ. ರಾಯ್‌ ಸಾವಿಗೆ ಕೇರಳದ ಆ ಐಟಿ ಅಧಿಕಾರಿಯೇ ಹೊಣೆ: ಸಹೋದರ

ನನಗೆ ಗೊತ್ತಿರುವಂತೆ 3 ದಿನಗಳಿಂದ ಐಟಿ ಅಧಿಕಾರಿಗಳು, ಸಿಜೆ ರಾಯ್‌ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಕೇರಳ ಐಟಿ ಅಧಿಕಾರಿಯೊಬ್ಬರು ಒತ್ತಡ ಹೇರಿದ್ದಾರೆ. ನನ್ನ ಸಹೋದರನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ.

17 ಕೋಟಿ ಆಸ್ತಿ ಹೊಂದಿದ್ದ ಟೈಪಿಸ್ಟ್ ಮನೆ ಮೇಲೆ ವಿಜಿಲೆನ್ಸ್ ತಂಡ ದಾಳಿ

ಟೈಪಿಸ್ಟ್ ಮನೆ ಮೇಲೆ ವಿಜಿಲೆನ್ಸ್ ತಂಡ ದಾಳಿ

ಬಿಹಾರ ಮತ್ತು ಜಾರ್ಖಂಡ್‌ನಲ್ಲಿ 17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಉತ್ತರ ಪ್ರದೇಶದ ಟೈಪಿಸ್ಟ್ ಮನೆ, ಕಚೇರಿ ಮೇಲೆ ವಿಜಿಲೆನ್ಸ್ ತಂಡ ದಾಳಿ ನಡೆಸಿದೆ. ವಿಜಿಲೆನ್ಸ್ ಇಲಾಖೆಯು 24 ಸದಸ್ಯರ ಮೂರು ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ತೋಟದ ಮನೆಗಳು ಮತ್ತು ಪ್ಲಾಟ್‌ಗಳು ಸೇರಿದಂತೆ 33 ಆಸ್ತಿ ನೋಂದಣಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಕಿಂಗ್‌ಗೆ ಹೋಗುತ್ತಿದ್ದ ಬಾಣಂತಿ ಮೇಲೆ ಸಾಕು ನಾಯಿ ದಾಳಿ!

ಬೆಂಗಳೂರಿನ ಟೆಕ್ಕಿ ಮೇಲೆ ನಾಯಿ ದಾಳಿ

ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯ ಮೇಲೆ ನೆರೆ ಮನೆಯವರ ಸಾಕು ನಾಯಿಯೊಂದು ದಾಳಿ ನಡೆಸಿರುವ ಘಟನೆ ಜನವರಿ 26ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಮಹಿಳೆ ವಾಕಿಂಗ್ ಗೆ ಹೋಗುತ್ತಿದ್ದಾಗ ಮಹಿಳೆ ಮೇಲೆ ನಾಯಿ ದಾಳಿ ನಡೆಸಿದ್ದು, ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

CJ Roy Death: ಐಟಿ ದಾಳಿಗೆ ಹೆದರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಆತ್ಮಹತ್ಯೆ

Bengaluru News: ಬೆಂಗಳೂರಿನ ಉದ್ಯಮಿ ಸಿ.ಜೆ.ರಾಯ್‌ ಅವರ ನಿವಾಸದ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಐಟಿ ದಾಳಿಯಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ, Video Viral

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ!

ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹಣ ಹೂಡಿಕೆಗೆ ಸಂಬಂಧಿಸಿ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು 5 ಲಕ್ಷ ನೀಡುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷ ಮೊದಲೇ ಪಡೆದಿದ್ದ ಪೊಲೀಸ್‌ ಅಧಿಕಾರಿ, ಉಳಿದ 4 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆಯಲಾಗಿದೆ.

ದೆಹಲಿ ಪೊಲೀಸ್‌ ಕಮಾಂಡೋ ಹತ್ಯೆ ಕೇಸ್‌; ಕೊಲೆಗೂ ಮುನ್ನ ವಿಡಿಯೋ ಮಾಡಿದ್ದ ಪಾಪಿ ಪತಿ

ಗರ್ಭಿಣಿ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಿದ ಪತಿ

ದೆಹಲಿಯ ಪೊಲೀಸ್ ಇಲಾಖೆಯ SWAT ಟೀಮ್‌ನಲ್ಲಿ ಕಮಾಂಡೊ ಆಗಿದ್ದ 27 ವರ್ಷದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ಪತಿಯೇ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ, ಆರೋಪಿ ಅಂಕುರ್ ಚೌಧರಿ ಡಂಬ್ಬೆಲ್‌ನಿಂದ ಹಲ್ಲೆ ಆರಂಭಿಸಿದ್ದು, ನಂತರ ಫೋನ್ ಕಿತ್ತುಕೊಂಡು “ಈ ಮಾತನ್ನು ರೆಕಾರ್ಡ್ ಮಾಡಿಕೊ, ಪೊಲೀಸರಿಗೆ ಸಾಕ್ಷಿಯಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ” ಎಂದು ಹೇಳಿದ್ದ ಎನ್ನಲಾಗಿದೆ.

ವಿಜಯನಗರದಲ್ಲಿ ಶಾಕಿಂಗ್‌ ಘಟನೆ; ತಂದೆ, ತಾಯಿ, ತಂಗಿಯನ್ನು ಭೀಕರವಾಗಿ ಕೊಲೆಗೈದ ಯುವಕ

ವಿಜಯನಗರದಲ್ಲಿ ತಂದೆ, ತಾಯಿ, ತಂಗಿಯನ್ನು ಕೊಲೆಗೈದ ಯುವಕ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಕುಟುಂಬದ ಮೂವರನ್ನೂ ಕೊಲೆ ಮಾಡಿದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ. ಬಳಿಕ ಆತನೇ ತಿಲಕನಗರ ಠಾಣೆಗೆ ತೆರಳಿ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ, ಮೂವರನ್ನು ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೂವರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚಿಸಿದ ಕಿಲೇಡಿ; ಗಂಡಂದಿರಿಂದ ದೂರು

ಮೂವರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚಿಸಿದ ಕಿಲೇಡಿ

Doddaballapur News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತಾಲೂಕಿನ ಅಣಬೆ ಗ್ರಾಮದ ಮಹಿಳೆಯೊಬ್ಬಳು ಮೂವರ ಜತೆ ಮದುವೆಯಾಗಿ, ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

Assault Case: ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ; ವಧುವಿನ ಹಳೆ ಲವರ್‌ ಕೃತ್ಯ?

ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ‌, ಹಲ್ಲೆ

6 ತಿಂಗಳ ಹಿಂದೆ ನಯನ ಎನ್ನುವ ಯುವತಿಯೊಂದಿಗೆ ರವೀಶನ ಮದುವೆ ನಿಶ್ಚಯವಾಗಿತ್ತು. ಅದರಂತೆ ನಿನ್ನೆ (ಜನವರಿ 29) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಹೀಗಾಗಿ ವರ ರವೀಶ್, ಕುಣಗಳ್ಳಿ ಗ್ರಾಮದಿಂದ ಕಾರಿನಲ್ಲಿ ಹೋಗುವ ವೇಳೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಅಡ್ಡಹಾಕಿ ಹಲ್ಲೆ ಮಾಡಿದ್ದಾರೆ.

ಇದೇನ ಸಂಸ್ಕೃತಿ? ಇದೇನ ಸಭ್ಯತೆ? ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಪಾನಮತ್ತ ಬಿಜೆಪಿ ಮುಖಂಡ

ಬಿಜೆಪಿ ಮುಖಂಡನಿಂದ ಮಹಿಳೆಯ ಮೇಲೆ ಹಲ್ಲೆ

Viral Video: ಬಿಜೆಪಿ ನಾಯಕನೊಬ್ಬ 25 ವರ್ಷದ ಮಹಿಳೆ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಮಧ್ಯ ಪ್ರದೇಶದ ಸತ್ನಾದಲ್ಲಿ ನಡೆದಿದೆ. ಆರೋಪಿಯನ್ನು ನಾಗೋಡ್‌ ಮಂಡಲ್‌ನ ಬಿಜೆಪಿ ಮುಖಂಡ ಪುಲ್ಕಿತ್‌ ಟಂಡನ್‌ ಎಂದು ಗುರುತಿಸಲಾಗಿದೆ. ಗೋಡೌನ್‌ನಲ್ಲಿ ಮದ್ಯ ಸೇವಿಸಿದ್ದನ್ನು ನೋಡಿದ್ದರಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇಂಜೆಕ್ಷನ್, ಇನ್‌ಸ್ಟಾಗ್ರಾಂ ಪೋಸ್ಟ್, ವೈರಲ್ ವಿಡಿಯೊ: ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು

ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು

Sadhvi Prem Baisa Dies Mysteriously: ರಾಜಸ್ಥಾನದ ಖ್ಯಾತ ಧಾರ್ಮಿಕ ಪ್ರವಚನಕಾರ್ತಿ ಸಾಧ್ವಿ ಪ್ರೇಮ್ ಬೈಸಾ ನಿಗೂಢವಾಗಿ ಮೃತಪಟ್ಟಿದ್ದಾರೆ. ಇಂಜೆಕ್ಷನ್ ನೀಡಿದ ಬಳಿಕ ಅವರು ಪ್ರಜ್ಞೆ ತಪ್ಪಿದ್ದಾರೆ. ಅದಕ್ಕೂ ಮುನ್ನ ಮಾಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಹಾಗೂ ಹಿಂದಿನ ವೈರಲ್ ವಿಡಿಯೊ, ಇದೀಗ ಭಾರಿ ಅನುಮಾನಕ್ಕೆ ಕಾರಣವಾಗಿದೆ.

ವರದಕ್ಷಿಣೆಗಾಗಿ ಡಂಬಲ್ಸ್‌ನಿಂದ ಹಲ್ಲೆ ಮಾಡಿ ಪೊಲೀಸ್ ಅಧಿಕಾರಿಯ ಹತ್ಯೆ; ಪತಿ, ಅತ್ತೆ-ಮಾವನಿಂದಲೇ ಕ್ರೂರ ಕೃತ್ಯ

ವರದಕ್ಷಿಣೆಗಾಗಿ ಡಂಬಲ್ಸ್‌ನಿಂದ ಪೊಲೀಸ್ ಅಧಿಕಾರಿಯ ಹತ್ಯೆ

Crime News: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಪತಿಯೇ ಡಂಬಲ್ಸ್‌ನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.

ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ;  21 ಮಂದಿ ಸಜೀವ ದಹನ, 28 ನಾಪತ್ತೆ

ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ; 21 ಮಂದಿ ಸಜೀವ ದಹನ, 28 ನಾಪತ್ತೆ

ಜನವರಿ 26 ರಂದು ಕೋಲ್ಕತ್ತಾ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಕ್ಕೆ ಏರಿದ್ದು, ಸುಟ್ಟುಹೋದ ಕಟ್ಟಡಗಳಿಂದ ಇನ್ನೂ 13 ಶವಗಳು ಪತ್ತೆಯಾಗಿವೆ, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ದೌರ್ಜನ್ಯ ವಿರೋಧಿಸಿದ ಮಹಿಳೆ ಸೇರಿ ಒಂದೇ ಕುಟುಂಬದ ಮೂವರ ಹತ್ಯೆ; ಚೆನ್ನೈಯಲ್ಲಿ ಬಿಹಾರ ಮೂಲದ ಕಾರ್ಮಿಕ, ಪತ್ನಿ, ಮಗುವಿನ ಧಾರುಣ ಅಂತ್ಯ

ಬಿಹಾರ ಮೂಲದ ವಲಸೆ ಕುಟುಂಬವೊಂದರ ಬರ್ಬರ ಹತ್ಯೆ

Crime News: ಬಿಹಾರ ಮೂಲದ ವಲಸೆ ಕುಟುಂಬವೊಂದನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಘಟನೆಯಲ್ಲಿ ಪತಿ, ಪತ್ನಿ ಹಾಗೂ ಎರಡು ವರ್ಷದ ಹಸುಳೆಯನ್ನೂ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಹತ್ಯೆ ಪ್ರಕರಣವು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೃತರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Robbery Case: ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

20 ದಿನದ ಹಿಂದೆ ನೇಪಾಳಿ ಮೂಲದವರು ಎನ್ನಲಾದ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೆಲಸಕ್ಕೆ ಎಂದು ಸೇರಿಸಿಕೊಳ್ಳಲಾಗಿತ್ತು. ಆಧಾರ್‌ ಕಾರ್ಡ್‌ ಕೇಳಿದಾಗ ಹಳೆ ಮನೆಯಲ್ಲಿದೆ. ಕೊಡುತ್ತೇವೆ ಎಂದು ನಂಬಿಸಿದ್ದರು. 20 ದಿನದಲ್ಲಿ ಮನೆಯವರ ನಂಬಿಕೆ ಗಳಿಸಿದ್ದ ಈ ಖತರ್ನಾಕ್ ದಂಪತಿ, ಲಾಕರ್​ಗಳನ್ನು ಒಡೆದು ಕೋಟ್ಯಂತರ ಮೌಲ್ವದ ಸೊತ್ತು ದೋಚಿ ಪರಾರಿಯಾಗಿದ್ದಾರೆ.

Loading...