ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನ ಹತ್ಯೆ, ಮರ್ತೋರ್ವ ಗಾಯ!

ಕುಲ್ಗಾಂನಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನ ಹತ್ಯೆ, ಮತ್ತೋರ್ವ ಗಾಯ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ವಲಸೆ ಕಾರ್ಮಿಕ ಮೃತಪಟ್ಟಿದ್ದು, ಮತೋರ್ವ ಗಾಯಗೊಂಡಿದ್ದಾರೆ. ಶುಕ್ರವಾರ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕೆಲ್ಲಂ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ದಂಧೆಯ ಕಿಂಗ್‌ಪಿನ್!

ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ದಂಧೆಯ ಕಿಂಗ್‌ಪಿನ್

Tumkur News: ಪೊಲೀಸ್ ಸಿಬ್ಬಂದಿಯ ಪುತ್ರ ಗ್ಯಾಂಗ್ ಕಟ್ಟಿಕೊಂಡು ದುಬಾರಿ 'ಹೈಡ್ರೋ ಗಾಂಜಾ' ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣ ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ನೂತನ 'ಕ್ಯೂಆರ್ ಕೋಡ್' ತಂತ್ರಜ್ಞಾನದ ರಹಸ್ಯ ಕಾರ್ಯಾಚರಣೆಯಿಂದ ಈ ಕರಾಳ ದಂಧೆ ಬಯಲಾಗಿದೆ.

Kundapur Murder: ಕುಂದಾಪುರದ ನಡುರಸ್ತೆಯಲ್ಲೇ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ!

ಕುಂದಾಪುರದ ನಡುರಸ್ತೆಯಲ್ಲೇ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ!

ಉಡುಪಿ ಜಿಲ್ಲೆಯ ಕುಂದಾಪುರ ನಗರದ ಹೋಲಿ ರೋಸರಿ ಚರ್ಚ್‌ ಎದುರು ವ್ಯಕ್ತಿಯೊಬ್ಬನ ಕೊಲೆ ನಡೆದಿದೆ. ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿದ್ದ ಮನಸ್ತಾಪ ಕಾರಣವೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ಅವರು ಎಂದಿಗೂ ಬದಲಾಗಲ್ಲ"; ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದು ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ

Crime News: ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮದುವೆಯಾದ ಎಂಟು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಹಲವು ತಿಂಗಳುಗಳಿಂದ ತನ್ನ ಪತಿ, ನಾದಿನಿ, ಅತ್ತೆ-ಮಾವ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸಮೀಪ ಯುವಕನ ಶವ ಪತ್ತೆ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಶಂಕೆ

ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸಮೀಪ ಯುವಕನ ಶವ ಪತ್ತೆ

Chikkaballapur News: ಚಿಕ್ಕಬಳ್ಳಾಪುರ ನಗರದ ರೈಲು ನಿಲ್ದಾಣದ ಸಮೀಪ ಯುವಕನೊಬ್ಬನ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

"ನನ್ನ ತಂದೆಯನ್ನು ಎಳೆದು ಹೊಡೆದರು"; ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪೊಲೀಸರ ಮೇಲಿನ ಹಲ್ಲೆ ಬಗ್ಗೆ ಕುಟುಂಬ ಹೇಳಿದ್ದೇನು?

ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ; ಕುಟುಂಬಗಳ ಆಕ್ರೋಶ

Jantar Mantar Protest: ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯ ವೇಳೆ ಕರ್ತವ್ಯದಲ್ಲಿದ್ದ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಅವರ ಕುಟುಂಬದ ಸದಸ್ಯರು ತಮ್ಮ ನೋವು ಹಂಚಿಕೊಂಡಿದ್ದು, ಪೊಲೀಸರ ಮೇಲಿನ ಹಲ್ಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟೀಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: 32 ಮಂದಿ ಸಾವು

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ

ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿ ಗುರುವಾರ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದ ಸುಮಾರು 32 ಮಂದಿ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಭೂಗತದಲ್ಲಿ ಸಿಲುಕಿಕೊಂಡಿದ್ದಾರೆ. ಮೀಥೇನ್ ಅನಿಲದ ಶೇಖರಣೆಯಿಂದ ಸ್ಫೋಟ ಉಂಟಾಗಿದೆ ಎಂದು ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೋಚ್ ತಿಳಿಸಿದ್ದಾರೆ.

ಹಾಸನದಲ್ಲಿ ಘೋರ ಘಟನೆ; ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಮಗು ಸಾವು

ಹಾಸನದಲ್ಲಿ ಘೋರ ಘಟನೆ; ಬಕೆಟ್‌ಗೆ ಬಿದ್ದು 8 ತಿಂಗಳ ಮಗು ಸಾವು

ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ಘಟನೆ ನಡೆದಿದೆ. ತಾಯಿ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಹೋದ ಕಂದಮ್ಮ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಊಟ ಬಡಿಸುವುದು ವಿಳಂಬವಾಯಿತು ಎಂದು ಅತ್ತಿಗೆಯ ತಲೆಯನ್ನೇ ಕಡಿದ ಮೈದುನ!

ಬಿಹಾರದಲ್ಲಿ ಕ್ಲುಲಕ ಕಾರಣಕ್ಕೆ ಅತ್ತಿಗೆಯ ತಲೆಯನ್ನೇ ಕಡಿದ ಮೈದುನ!

ಮಹಿಳೆಯೊಬ್ಬರನ್ನು ಆಕೆಯ ಮೈದುನನೇ ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಂದ ಘಟನೆಯೊಂದು ನಡೆದಿದೆ. ಪಾರ್ಸಾ ಬಿಘಾ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೇವಲ ಊಟ ಬಡಿಸುವುದು ತಡವಾಯಿತು ಎನ್ನುವ ಕಾರಣಕ್ಕೆ 25 ವರ್ಷದ ಮಹಿಳೆಯನ್ನು ಆಕೆಯ ಮೈದುನ ಕೊಡಲಿಯಿಂದಲೇ ತಲೆ ಕಡಿದಿದ್ದಾನೆ..

ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ; ಐದು ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದೇಗೆ?

ಬೆಂಗಳೂರಿನಲ್ಲಿ ಪತ್ನಿ ಹತ್ಯೆ: ಬಿಹಾರಕ್ಕೆ ಪರಾರಿಯಾದ ಪತಿ

ಬೆಂಗಳೂರಿನ ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಹಾರ ಮೂಲದ ಮಹಿಳೆ ರೀಮಾ ಕುಮಾರಿಯನ್ನು ಪತಿ ಧೀರಜ್ ಕುಮಾರ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಲೆ ಮಾಡಿದ ಬಳಿಕ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯೊಳಗೆ ಬಿಟ್ಟು ಆರೋಪಿಯು ಪರಾರಿಯಾಗಿದ್ದಾನೆ. ಸುಮಾರು ಐದು ದಿನಗಳ ಬಳಿಕ ಮನೆಯಿಂದ ಬರುತ್ತಿದ್ದ ತೀವ್ರ ದುರ್ವಾಸನೆ ಗಮನಿಸಿದ ಸಹೋದ್ಯೋಗಿ ಮತ್ತು ನೆರೆಹೊರೆಯವರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆಯುತ್ತಿದ್ದಂತೆ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ.

Tumkur News: ಜ್ಯುವೆಲರಿ ಶಾಪ್‌ನಲ್ಲಿ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ಕಳ್ಳತನ; ಕದ್ದಿದ್ದು ಮನುಷ್ಯನಲ್ಲ, ಇಲಿಯೇ ಕಳ್ಳ!

ಜ್ಯುವೆಲರಿ ಶಾಪ್‌ನಲ್ಲಿ ಚಿನ್ನಾಭರಣ ಕಳ್ಳತನ; ಕದ್ದಿದ್ದು ಮನುಷ್ಯನಲ್ಲ!

ತುಮಕೂರು ನಗರದ ಕಾಲ್‌ಟೆಕ್ಸ್ ವೃತ್ತದ ಬಳಿ ಇರುವ ‘ವಿಶ್ವಾಸ್‌ ಜ್ಯುವೆಲರಿ ಶಾಪ್‌ʼ ನಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಅಂಗಡಿಯಲ್ಲಿದ್ದ 50 ಗ್ರಾಂ ಗೂ ಅಧಿಕ ತೂಕದ, ಅಂದರೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಸರಗಳು ಹಾಗೂ ಉಂಗುರಗಳು ನಾಪತ್ತೆಯಾಗಿದ್ದವು. ಆದರೆ ಇದರ ಹಿಂದೆ ಯಾವುದೇ ಮಾನವ ಕಳ್ಳನ ಕೈವಾಡವಿಲ್ಲ, ಬದಲಿಗೆ ಕಳ್ಳತನ ಮಾಡಿದ್ದು ಪುಟ್ಟ ಇಲಿ ಎಂಬುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿದೆ.

ಶಾಲೆಯಲ್ಲಿಯೇ  ಸಹಪಾಠಿಯ ಕುತ್ತಿಗೆ ಹಿಸುಕಿದ ವಿದ್ಯಾರ್ಥಿ; ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕ ದುರ್ಮರಣ

ಶಾಲೆಯಲ್ಲಿ ಸಹಪಾಠಿಯ ಕುತ್ತಿಗೆ ಹಿಸುಕಿದ ವಿದ್ಯಾರ್ಥಿ: ಬಾಲಕ ಸಾವು

boy dies: ಜುಲೈ 23 ರಂದು ಚಾರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪಹದ್‌ಪುರ ಸುಧ್ವರ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಊಟದ ವಿರಾಮದ ಸಮಯದಲ್ಲಿ ಸಹಪಾಠಿಯೊಬ್ಬ 10 ವರ್ಷದ ವಿದ್ಯಾರ್ಥಿಯ ಕತ್ತು ಹಿಸುಕಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

ಟಿಎಂಸಿ ಮಾಜಿ ನಾಯಕನ ಸಹಚರ ಬಸ್ ಚಾಲಕನ ಮನೆ ಮೇಲೆ ದಾಳಿ: 5.5 ಕೋಟಿ ರೂ. ನಗದು, 15 ಕೆಜಿ ಚಿನ್ನ ವಶ

ಬಸ್ ಚಾಲಕನ ಮನೆ ಮೇಲೆ ದಾಳಿ: ಅಪಾರ ನಗದು, ಚಿನ್ನ ವಶ

ಪಶ್ಚಿಮ ಬಂಗಾಳದ ಬಸ್ ಚಾಲಕ, ಟಿಎಂಸಿ ಮಾಜಿ ನಾಯಕನ ಸಹಚರ ಮನೆ ಮೇಲೆ ಪೊಲೀಸರು ದಾಳಿ ದಾಳಿ ನಡೆಸಿದ್ದು, ಕೋಟ್ಯಾಂತರ ರೂಪಾಯಿ ನಗದು ಸೇರಿದಂತೆ ಅಪಾರ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದಿದ್ದರೆ. ತೃಣಮೂಲ ಕಾಂಗ್ರೆಸ್ ನ ಮಾಜಿ ನಾಯಕ, ಕಲ್ಲು ವ್ಯಾಪಾರಿ ಅನುಬ್ರತಾ ಮೊಂಡಲ್ ಅವರ ಆಪ್ತ ಸಹಚರ ಮಿನಾರ್ ಮಂಡಲ್ ಎಂಬಾತನ ಮನೆ ಮೇಲೆ ಮಂಗಳವಾರ ತಡರಾತ್ರಿ ದಾಳಿ ನಡೆಸಲಾಗಿದೆ.

ವರ್ತೂರು ಕ್ರಿಕೆಟ್ ಗ್ರೌಂಡ್‌ನಲ್ಲಿ ರುಂಡ ಪತ್ತೆ ಕೇಸ್‌ಗೆ ಟ್ವಿಸ್ಟ್;‌ ಅಸಲಿ ಸತ್ಯ ಪೊಲೀಸರ ತನಿಖೆಯಲ್ಲಿ ಬಯಲು!

ವರ್ತೂರು ಕ್ರಿಕೆಟ್ ಗ್ರೌಂಡ್‌ನಲ್ಲಿ ಸಿಕ್ಕ ರುಂಡ ಯಾರದ್ದು?

Human head found: ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಗ್ರೌಂಡ್‌ನಲ್ಲಿ ವ್ಯಕ್ತಿಯೊಬ್ಬರ ತಲೆ ಬುರುಡೆ ಪತ್ತೆ ಆಗಿತ್ತು. ವ್ಯಕ್ತಿಯ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿ ಕ್ರಿಕೆಟ್ ಗ್ರೌಂಡ್‌ನಲ್ಲಿಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಇದೀಗ ಘಟನೆಯ ಅಸಲಿ ಸತ್ಯ ಪೊಲೀಸ್‌ ತನಿಖೆಯಲ್ಲಿ ರಿವೀಲ್‌ ಆಗಿದೆ.

ವಿದ್ಯುತ್ ಅಪಘಾತ: ಪಂಜಾಬ್ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಸಾವು

ವಿದ್ಯುತ್ ಅಪಘಾತದಿಂದ ವಿದ್ಯಾರ್ಥಿನಿ ಸಾವು

ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬಳು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಪಂಜಾಬ್ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದ ಹರಿಯಾಣ ಮೂಲದ ಜ್ಯೋತಿ ಅವರು ಹಾಸ್ಟೆಲ್‌ನಿಂದ ವಿವಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕ್ಲೀನ್ ಚಿಟ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕ್ಲೀನ್ ಚಿಟ್

ಕಲ್ಲಿದ್ದಲು ನಿಕ್ಷೇಪ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ಅವರ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ಆದೇಶವನ್ನು ರದ್ದುಗೊಳಿಸಿದೆ. 2024ರಲ್ಲಿ ನಿಧನರಾಗಿರುವ ಮನಮೋಹನ್ ಸಿಂಗ್ ಅವರ ವಿರುದ್ಧ ತನಿಖೆ ನಡೆಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಹೇಳಿದೆ.

ಅಯೋಧ್ಯೆ ಬಳಿಕ ಈಗ ಮಧುರೈ: ಮೀನಾಕ್ಷಿ ದೇವಸ್ಥಾನ ಭೂಮಿ ಅಕ್ರಮ ಮಾರಾಟ; 60 ಕೋಟಿ ರುಪಾಯಿ ವಂಚನೆ, 19 ಮಂದಿ ವಿರುದ್ಧ ಎಫ್‌ಐಆರ್

ಅಯೋಧ್ಯೆ ಬಳಿಕ ಮಧುರೈ ದೇವಾಲಯದಲ್ಲಿ ವಂಚನೆ ಪ್ರಕರಣ ಬೆಳಕಿಗೆ

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಇದೀಗ ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ದೇವಾಲಯಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಇದರಿಂದ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ. ಈ ಕುರಿತು 19 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಒಂದು ಕೋಟಿ ರುಪಾಯಿ ಬಹುಮಾನವಿದ್ದ, ದೇಶದ ಕೊನೆಯ ಸಕ್ರಿಯ ಮಾವೋವಾದಿ ಮಿಸಿರ್ ಬೆಸ್ರ ಅರೆಸ್ಟ್

ದೇಶದ ಕೊನೆಯ ನಕ್ಸಲ್ ನಾಯಕನ ಬಂಧನ

ದೇಶದ ಕೊನೆಯ ನಕ್ಸಲ್ ನಾಯಕ ಮಿಸಿರ್ ಬೆಸ್ರಾನನ್ನು ಜಾರ್ಖಂಡ್‌ನಲ್ಲಿ ನಾಲ್ವರು ಸಹಚರರೊಂದಿಗೆ ಬಂಧಿಸಲಾಗಿದೆ. 1 ಕೋಟಿ ರೂಪಾಯಿ ಬಹುಮಾನ ಹೊಂದಿದ್ದ ಮಿಸಿರ್ ಬೆಸ್ರಾ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕರಲ್ಲಿ ಒಬ್ಬನಾಗಿದ್ದನು. ಈತನ ಬಂಧನ ದೇಶದ ಭದ್ರತಾ ಪಡೆಗಳಿಗೆ ದೊರೆತಿರುವ ಅತಿದೊಡ್ಡ ಗೆಲುವಾಗಿದೆ.

ಮಹಿಳೆ ಜೊತೆ ಪೊಲೀಸ್‌ ಕಾನ್ಸ್‌ಟೆಬಲ್‌ ಅಸಭ್ಯ ವರ್ತನೆ ಆರೋಪ; ಹಿಗ್ಗಾಮುಗ್ಗ ಥಳಿತ

ಮಹಿಳೆ ಜೊತೆ ಪೊಲೀಸ್‌ ಕಾನ್ಸ್‌ಟೆಬಲ್‌ ಅಸಭ್ಯ ವರ್ತನೆ ಆರೋಪ

ಮಹಿಳೆಯರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಹೆಡ್‌ ಕಾನ್ಸ್‌ಟೆಬಲ್‌ ಹಿಗ್ಗಾಮುಗ್ಗ ಥಳಿಸಿದ ಘಟನೆ ಗಂಗಮ್ಮನ ಗುಡಿ ಸರ್ಕಲ್ ಬಳಿ ನಡೆದಿದೆ. ಸಂಜಯ್ ನಗರ ಠಾಣೆಯ ಹೆಡ್‌ ಕಾನ್ಸ್‌ಟೆಬಲ್‌ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆದಿದೆ. ಜಾಲಹಳ್ಳಿಗೆ ತೆರಳಲು ಅವರು ಬಸ್‌ ಹತ್ತಿದ್ದರು.

ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಳುತ್ತಿದ್ದ ಮಗುವನ್ನು ಕೊಂದ ಪಾಪಿ ತಾಯಿ

ಮಥುರಾದಲ್ಲಿ 3 ವರ್ಷದ ಮಗನ ಹತ್ಯೆಗೈದ ತಾಯಿ

Crime News: ಉತ್ತರ ಪ್ರದೇಶದ ಮಥುರಾದಲ್ಲಿ 32 ವರ್ಷದ ಮಹಿಳೆಯೊಬ್ಬಳು ಫೋನ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದ ವೇಳೆ ಮಗು ಅಳುತ್ತಿದ್ದ ಕಾರಣ ಕತ್ತು ಹಿಸುಕಿ ಕೊಂದಿದ್ದಾಳೆ. ಪತಿಯ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

Nandigiridhama police crack grape theft case: ದ್ರಾಕ್ಷಿ ಕಳವು ಪ್ರಕರಣ ಭೇದಿಸಿದ ನಂದಿಗಿರಿಧಾಮ ಪೊಲೀಸರು: ಐವರು ಆರೋಪಿಗಳ ಬಂಧನ; 2.48 ಲಕ್ಷ ನಗದು ವಶ

ಐವರು ಆರೋಪಿಗಳ ಬಂಧನ; 2.48 ಲಕ್ಷ ನಗದು ವಶ

ಜು.14ರ ರಾತ್ರಿ ಕೊಳವನಹಳ್ಳಿ ಗ್ರಾಮದ ಬಸವರಾಜು ಎಸ್.ಪಿ. ಅವರ ತೋಟದಲ್ಲಿ ಸುಮಾರು ಎರಡು ಟನ್ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಬಸವರಾಜು ಅವರು ದೂರು ನೀಡಿದ್ದು, ಜು.15ರಂದು ತಾಲೂಕು ಕೃಷಿಕ ಸಮಾಜದ ವತಿಯಿಂದಲೂ ಪ್ರಕರಣ ವನ್ನು ಶೀಘ್ರ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ಬೈಕ್ ಸವಾರನನ್ನು ಅರ್ಧ ಕಿ.ಮೀ. ದೂರ ಎಳೆದೊಯ್ದ ಉಬರ್ ಚಾಲಕ

Viral News: ಚಾಲಕ ನಿದ್ದೆಗೆ ಜಾರಿದ್ದರಿಂದ ಅತಿವೇಗವಾಗಿ ಬಂದ ಉಬರ್ ಕಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಸವಾರನನ್ನು ಕಾರಿನ ಚಕ್ರಗಳ ಅಡಿಯಲ್ಲಿ ಅರ್ಧ ಕಿ‌..ಮೀ.ವರೆಗೆ ಎಳೆದೊಯ್ದಿದ್ದಾನೆ‌. ಪೊಲೀಸರ ಪ್ರಕಾರ ಚಾಲಕ ನಿದ್ರಿಸಿದ್ದರಿಂದ ವಾಹನದ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ‌. ಆರೋಪಿಯನ್ನು ಆದಿಲ್ ತಸ್ಲಿಮ್ ಅನ್ಸಾರಿ ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

Bengaluru News: ಯುವತಿಗೆ 'ನಿನ್‌ ರೇಟ್ ಎಷ್ಟುʼ ಎಂದು ಕೇಳಿ ಕಿರುಕುಳ ಕೊಟ್ಟಿದ್ದ ಕಾಮುಕ ಅರೆಸ್ಟ್‌

ಯುವತಿಗೆ 'ನಿನ್‌ ರೇಟ್ ಎಷ್ಟುʼ ಎಂದು ಕೇಳಿದ್ದ ಕಾಮುಕ ಅರೆಸ್ಟ್‌

​ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ, ವ್ಯಕ್ತಿಯೊಬ್ಬ "ರೇಟ್ ಎಷ್ಟು?" ಎಂದು ಕೇಳಿ ಕಿರುಕುಳ ನೀಡಿದ್ದ. ವ್ಯಕ್ತಿಯ ಈ ವಿಕೃತ ವರ್ತನೆಯಿಂದ ಆಕ್ರೋಶಗೊಂಡಿದ್ದ ಯುವತಿ, ತಕ್ಷಣ ತನ್ನ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿದ್ದಳು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಮನಬಂದಂತೆ ಥಳಿಸಿದ ಪತಿ: ವಿಡಿಯೊ ವೈರಲ್

ಆಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಪತಿ

Viral Video: ಪತಿ-ಪತ್ನಿ ನಡುವಿನ ಸಣ್ಣ ಪುಟ್ಟ ಜಗಳಗಳು ಬೀದಿಗೆ ಬರುವಂತ ಘಟನೆಗಳು ವರದಿಯಾಗುತ್ತಿವೆ. ವೈಯಕ್ತಿಕ ವಿಚಾರ, ಆಕ್ರಮ ಸಂಬಂಧ, ಹಣಕಾಸಿನ ಸಮಸ್ಯೆ ಹೀಗೆ ನಾನಾ ಕಾರಣಕ್ಕಾಗಿ ಜಗಳ ಉಂಟಾಗಿ ದಾಂಪತ್ಯ ಜೀವನ ಕೊನೆಗೊಂಡ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪತಿಯ ಆಕ್ರಮ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯ ಮೇಲೆ ಆಕೆಯ ಗಂಡನೇ ಮನ ಬಂದಂತೆ ಥಳಿಸಿದ್ದಾನೆ‌. ಈ ಹಲ್ಲೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Loading...