ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

Yogesh Gowda murder: ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು ಏಪ್ರಿಲ್‌ 15ರಂದು

ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು ಏಪ್ರಿಲ್‌ 15ರಂದು

2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್‌ ಗೌಡ ಜಿಲ್ಲಾ ಪಂಚಾಯತ್‌ ಚುನಾವಣೆ ಗೆದ್ದಿದ್ದರಿಂದ ಹೈಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್‌ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು.

Chikkamagaluru: ಬೆಂಗಳೂರಿನಲ್ಲಿ ಮಗ, ದುಬೈನಲ್ಲಿ ಮಗಳು; ಪತಿಯ ಕೊಳೆತ ಶವದೊಂದಿಗೆ 10 ದಿನ ಕಳೆದ ಪತ್ನಿ

ಬೆಂಗಳೂರು, ದುಬೈಯಲ್ಲಿ ಮಗ, ಮಗಳು; ಪತಿಯ ಕೊಳೆತ ಶವದೊಂದಿಗೆ 10 ದಿನ ಪತ್ನಿ!

77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆ ಎಂಬ ಅರಿವೇ ಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ.

Kalaburagi Murder Case: ಕೇಳಿದ್ದೆಲ್ಲ ಕೊಡಿಸಿದರೂ 57ರ ಶಿಕ್ಷಕಿಯನ್ನು ಸುಟ್ಟು ಹಾಕಿದ್ದೇಕೆ 27 ವರ್ಷದ ಪಾಗಲ್‌ ಪ್ರೇಮಿ?

ಕೇಳಿದ್ದೆಲ್ಲ ಕೊಡಿಸಿದರೂ 57ರ ಶಿಕ್ಷಕಿಯ ಸುಟ್ಟು ಹಾಕಿದ 27 ವರ್ಷದ ಪ್ರೇಮಿ!

27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, 57ರ ಪ್ರಾಯದ ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.

Chinthamani News: ರಾಜೀವ್‌ ನಗರದಲ್ಲಿ ಮಧ್ಯರಾತ್ರಿ ಮಾರಕಾಯುಧಧಾರಿ ಕಳ್ಳರ ಅಟ್ಟಹಾಸ: ಭೀತಿಯ ನೆರಳಿನಲ್ಲಿ ಬಡಾವಣೆಯ ನಿವಾಸಿಗಳು

ರಾಜೀವ್‌ ನಗರದಲ್ಲಿ ಮಧ್ಯರಾತ್ರಿ ಕಳ್ಳರ ಅಟ್ಟಹಾಸ

ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿರುವ ಕಳ್ಳರ ಗುಂಪು ಇಡೀ ಬಡಾವಣೆಯನ್ನು ಭಯದ ಕೂಪಕ್ಕೆ ದೂಡಿದೆ. ಪ್ರಸ್ತುತ ಈ ಕಳ್ಳರು ಮಧ್ಯರಾತ್ರಿ ಮಾರಕಾಯುಧಗಳನ್ನು ಹಿಡಿದು ಬೀದಿಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸಿವೆ.

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಮಹೇಂದ್ರ ರೆಡ್ಡಿ ಫೋನ್ ಪೇಯಲ್ಲಿ ಪ್ರೇಯಸಿಗೆ ಮಾಡಿದ್ದ ಮೆಸೇಜ್‌ ರಿಟ್ರೀವ್‌

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಪತಿಯ ಮತ್ತೊಂದು ಮುಖ ಬಯಲು

ಭಾರೀ ಸಂಚಲನ ಮೂಡಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲಾಗಿದೆ. ಸದ್ಯ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್​ನಿಂದ ಬಯಲಾಗಿದೆ. ಪತಿಯೇ ಪತ್ನಿಯನ್ನು ಕೊಂದು ನಾಟಕವಾಡಿದ್ದು ಇದೀಗ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ.

ಶಾಲೆಯಲ್ಲಿ 5 ವರ್ಷದ ಬಾಲಕನ ಭೀಕರ ಹತ್ಯೆ; ಮಗುವಿನ ಮೇಲೆ ನಡೆದಿದ್ಯಾ ಲೈಂಗಿಕ ದೌರ್ಜನ್ಯ? ಪ್ರಾಂಶುಪಾಲ ಅರೆಸ್ಟ್

ಶಾಲೆಯಲ್ಲಿ 5 ವರ್ಷದ ಬಾಲಕನ ಭೀಕರ ಹತ್ಯೆ

Crime News: ಬಿಹಾರದ ರಾಜಧಾನಿ ಪಟನಾದಿಂದ ಸುಮಾರು 50 ಕಿ. ಮೀ ದೂರದಲ್ಲಿರುವ ಜೆಹಾನಾಬಾದ್‌ನಲ್ಲಿರುವ ಗುರುಕುಲಕ್ಕೆ 5 ವರ್ಷದ ಬಾಲಕನನ್ನು ಆತನ ಕುಟುಂಬವು ಅಧ್ಯಯನಕ್ಕೆ ಕಳುಹಿಸಿತ್ತು. ಇದೀಗ ಆ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಮರೆಯಾದ ಮಾನವೀಯತೆ: ವಂದೇ ಭಾರತ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕನ ಮೇಲೆ ಕ್ಯಾಟರಿಂಗ್ ಸಿಬ್ಬಂದಿಯಿಂದ ಹಲ್ಲೆ

ವಂದೇ ಭಾರತ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕನ ಮೇಲೆ ಹಲ್ಲೆ

Viral Video: ರೈಲಿನಲ್ಲಿ ಕ್ಯಾಟರಿಂಗ್ ಸಿಬ್ಬಂದಿ ವಿಶೇಷಚೇತನ ಪ್ರಯಾಣಿಕನನ್ನು ತಳ್ಳಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೀರತ್ ಮತ್ತು ವಾರಣಾಸಿ ನಡುವೆ ಚಲಿಸುವ ರೈಲು ಸ್ವಲ್ಪ ಸಮಯದವರೆಗೆ ನಿಲ್ಲುವ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Bagalakote news: ಬಾಗಲಕೋಟೆ: ಪ್ರೇಮಿ ಜತೆ ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ

ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ

ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಜಗಳವೇ ಕಾರಣವಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Girl Missing: ಮುಳ್ಳಯ್ಯನಗಿರಿಯಲ್ಲಿ ನಾಪತ್ತೆಯಾದ ಹುಡುಗಿಗಾಗಿ ಡ್ರೋನ್‌ ಹುಡುಕಾಟ

ಮುಳ್ಳಯ್ಯನಗಿರಿಯಲ್ಲಿ ನಾಪತ್ತೆಯಾದ ಹುಡುಗಿಗಾಗಿ ಡ್ರೋನ್‌ ಹುಡುಕಾಟ

ಇಂದು ಬೆಳಗ್ಗೆ ಮತ್ತೆ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ. ಬಾಲಕಿ ನಾಪತ್ತೆಯಾದ ಸ್ಥಳದಿಂದ ಹೋಗಿರಬಹುದಾದ ಮಾರ್ಗದ ಅಂದಾಜಿನಲ್ಲಿ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ತಂಡಗಳಾಗಿ ಬಾಲಕಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

Woman missing: ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಯುವತಿ ನಾಪತ್ತೆ

ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಯುವತಿ ನಾಪತ್ತೆ

ನಾಪತ್ತೆಯಾದ ಯುವತಿ ನಂದನ, ಕೇರಳದ ಪಾಲಕ್ಕಾಡ್ ಮೂಲದವರು. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಕೇರಳದಿಂದ ಬಂದಿದ್ದ 40 ಜನ ಪ್ರವಾಸಿಗರ ತಂಡ ಹಾಗೂ ಕುಟುಂಬದೊಂದಿಗೆ ನಂದನ ಅವರು ಚಿಕ್ಕಮಗಳೂರಿಗೆ ಬಂದಿದ್ದರು. ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಇವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

3 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌; ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಮಹಿಳೆಗೆ ಹಣ ನೀಡದ ಕಾರಣ ಸುಳ್ಳು ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಇಬ್ಬರು ಮಕ್ಕಳ ತಾಯಿ

18 ವರ್ಷದ ಯುವತಿಯನ್ನು ವಿವಾಹವಾದ 2 ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯೊಬ್ಬಳು 18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಸಾಮಾಜಿಕ ನಿಯಮಗಳನ್ನು ಮುರಿದು ವಿವಾಹದ ಇಬ್ಬರು ಕೂಡ ಇದೀಗ ರಕ್ಷಣೆಗಾಗಿ ಆಡಳಿತದ ಮೊರೆ ಹೋಗಿದ್ದಾರೆ. ಏಪ್ರಿಲ್ 4ರಂದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ವಿಂಧ್ಯಾಚಲ ದೇವಸ್ಥಾನದಲ್ಲಿ ಹಾಗೂ ಏಪ್ರಿಲ್ 6ರಂದು ರಾಮರೇಖಾ ಘಾಟ್‌ನಲ್ಲಿರುವ ಹಳೆಯ ಮದುವೆ ಮಂಟಪದಲ್ಲಿ ಅವರು ಸಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸಿ ವಿವಾಹವಾದರು.

ಕಿಡ್ನ್ಯಾಪ್‌ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ

ಕಿಡ್ನ್ಯಾಪ್‌ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ

Uttar Pradesh News: ಕಾರು ಅಪಘಾತವೊಂದು ಅಪಹರಣ ಪ್ರಕರಣವನ್ನು ಬಯಲಿಗೆಳೆದ ಪ್ರಕರಣ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಪಹರಣಕಾರರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ವಿಶೇಷ ಎಂದರೆ ಅಪಹರಣಕ್ಕೊಳಗಾದ ಮೂವರು ಪಾರಾಗಿದ್ದಾರೆ. ಭಾನುವಾರ (ಏಪ್ರಿಲ್‌ 5) ರಾತ್ರಿ ಈ ಘಟನೆ ನಡೆದಿದೆ.

ಶಾರ್ಟ್‌ಕಟ್ ರೂಟ್‌ನಿಂದ ಭಾರಿ ದುರಂತ: ಬಾವಿಯೊಳಗೆ ಕಾರು ಬಿದ್ದು 9 ಮಂದಿ ಜಲ ಸಮಾಧಿ

ಬಾವಿಯೊಳಗೆ ಕಾರು ಬಿದ್ದು 9 ಮಂದಿ ದುರ್ಮರಣ

Car falls into a well: ಶಾರ್ಟ್ ಕಟ್ ರೂಟ್‌ನಲ್ಲಿ ಹೋಗಿ ಕುಟುಂಬವೊಂದು ದುರ್ಮರಣಕ್ಕೀಡಾದ ಮನಕಲುಕುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ. ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಮೃತಪಟ್ಟಿದ್ದಾರೆ. ಶಾರ್ಟ್‌ಕಟ್ ಮೂಲಕ ತೆರಳಿದ್ದೇ ಈ ದುರಂತಕ್ಕೆ ಕಾರಣ.

Dharwad News: ಬೇಕಂತಲೇ ಯುವತಿಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ; ಧಾರವಾಡದಲ್ಲಿ‌ ಮುಸ್ಲಿಂ ಜಿಮ್ ಟ್ರೈನರ್‌ ಅರೆಸ್ಟ್

ಯುವತಿಯರಿಗೆ ಬ್ಯಾಡ್‌ ಟಚ್‌ ಮಾಡುತ್ತಿದ್ದ ಮುಸ್ಲಿಂ ಜಿಮ್ ಟ್ರೈನರ್‌ ಅರೆಸ್ಟ್

Dharwad gym trainer Arrest: ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಸಾಬಿರ್, ಜಿಮ್‌ನಲ್ಲಿ ಮಹಿಳೆಯರ ಶೌಚಾಲಯಕ್ಕೆ ಹೋಗಿ ಬರುವುದು, ಟ್ರೈನಿಂಗ್ ವೇಳೆ ಬೇಕಂತಲೇ ಮೈ ಕೈ ಮುಟ್ಟಿ ಅನುಚಿತ ವರ್ತನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಒಂದೋ ಗಂಡನಿಗೆ ಕಿಡ್ನಿ ದಾನ ಮಾಡು, ಇಲ್ಲ 30 ಲಕ್ಷ ರೂ. ಹೊಂದಿಸು; ಮಹಿಳೆಗೆ ಅತ್ತೆ-ಮಾವನ ವರದಕ್ಷಿಣೆ ಡಿಮ್ಯಾಂಡ್

ಗಂಡನಿಗೆ ಕಿಡ್ನಿ ದಾನ ಮಾಡುವಂತೆ ಮಹಿಳೆಗೆ ಪತಿ ಮನೆಯಲ್ಲಿ ಕಿರುಕುಳ

Dowry case: ಕಿಡ್ನಿ ದಾನ ಮಾಡಿ ಅಥವಾ 30 ಲಕ್ಷ ರೂಪಾಯಿ ತನ್ನಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಕಾನ್ಪುರದ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ-ಮಾವನ ವಿರುದ್ಧ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಹೊರಿಸಿದ್ದಾರೆ. ಕಾನ್ಪುರದ ಚಕೇರಿ ಪೊಲೀಸರು ವರದಕ್ಷಿಣೆ ಕಿರುಕುಳ, ವಂಚನೆ ಮತ್ತು ಕ್ರೌರ್ಯ ಪ್ರಕರಣ ದಾಖಲಿಸಿದ್ದಾರೆ.

ಕೇರಳಂ ವಿಧಾನಸಭಾ ಚುನಾವಣೆಗೆ ದಿನಗಣನೆ: ಕಚೇರಿ ಮುಂದೆ ನಡೆದ ಸಿಪಿಐ ಬೆಂಬಲಿಗ ರೈತನ ಆತ್ಮಹತ್ಯೆ ಎಲ್‌ಡಿಎಫ್‌ಗೆ ಹಿನ್ನಡೆಯಾಗುತ್ತಾ?

ಕೇರಳದಲ್ಲಿ ಸಿಪಿಐ ಬೆಂಬಲಿಗ ರೈತ ಆತ್ಮಹತ್ಯೆ

ಸಿಪಿಐ ಬೆಂಬಲಿಗ ರೈತರೊಬ್ಬರು ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕಂನ ಥಲಯಾಝಂನಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗದ ಚುನಾವಣಾ ಸಮಿತಿ ಕಚೇರಿ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಚೆಲ್ಲಾಪ್ಪನ್ ಪುಲಿಕ್ಕಸೇರಿ ಎಂದು ಗುರುತಿಸಲಾಗಿದೆ. ಸಿಪಿಐ ಜಿಲ್ಲಾ ನಾಯಕರು ತಮ್ಮ ಜೀವನೋಪಾಯವನ್ನು ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ.

Chikkamagaluru News: ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್‌ ಆತ್ಮಹತ್ಯೆ

ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್‌ ಆತ್ಮಹತ್ಯೆ

NR Pura Nurse Death Case: ಶಿವಮೊಗ್ಗದ ಪ್ರತಿಷ್ಠಿತ 'ನಾರಾಯಣ ಹೃದಯಾಲಯ' ಆಸ್ಪತ್ರೆಯ ನರ್ಸ್ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿ ಮುತ್ತಿನಕೊಪ್ಪದ ಮನೆಗೆ ಮರಳಿದ್ದ ಅವರು, ಮುಡುಬ ಸಮೀಪದ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Muda Case: ಮುಡಾ ಪ್ರಕರಣ; ಬಿ ರಿಪೋರ್ಟ್​ ಅಂಗೀಕಾರ ಪ್ರಶ್ನಿಸಿ ಹೈಕೋರ್ಟ್​ಗೆ ಇಡಿ ಅರ್ಜಿ

ಮುಡಾ ಪ್ರಕರಣ; ಬಿ ರಿಪೋರ್ಟ್​ ಅಂಗೀಕಾರ ಪ್ರಶ್ನಿಸಿ ಇಡಿ ಅರ್ಜಿ

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಮತ್ತಿತರರು ಆರೋಪ ಎದುರಿಸುತ್ತಿದ್ದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಅಂಗೀಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯವು (ಇಡಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Basava Jaya Mruthyunjaya Swamiji: ಲೈಂಗಿಕ ದೌರ್ಜನ್ಯ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಲೈಂಗಿಕ ದೌರ್ಜನ್ಯ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಬೆಂಗಳೂರಿನ ತ್ಯಾಗರಾಜನಗರ ನಿವಾಸಿಯಾಗಿರುವ ಮಹಿಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸ್ವಾಮೀಜಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳು ಸಾವು

ಮಣಿಪುರದಲ್ಲಿ ಬಾಂಬ್ ದಾಳಿಯಿಂದ ಇಬ್ಬರು ಮಕ್ಕಳು ಸಾವು

ಶಂಕಿತ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟಂತೆ ಮಣಿಪುರದ ಬಿಷ್ಣುಪುರದಲ್ಲಿ ನಡೆದಿದೆ. ಮೊಯಿರಾಂಗ್ ಟ್ರೋಂಗ್ಲಾಬಿಯಲ್ಲಿರುವ ನಿವಾಸದ ಮೇಲೆ ಶಂಕಿತ ಉಗ್ರರು ಮಂಗಳವಾರ ಬೆಳಗಿನ ಜಾವಾ ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಕ್ಕಳಿಬ್ಬರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ರೆಡಿಮೇಡ್‌ ದೋಸೆ ಹಿಟ್ಟು ತಿಂದು ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಚಿಂತಾಜನಕ!

ರೆಡಿಮೇಡ್ ದೋಸೆ ಹಿಟ್ಟಿನಿಂದ ಇಬ್ಬರು ಮಕ್ಕಳು ಸಾವು!

ಗುಜರಾತ್‌ನ ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದಂಪತಿಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಹಾರ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದೆ.

Murder Case: ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಸುನೀಲ್‌ಗೆ ತಿಳಿದು ಮನೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಸುನೀಲ್‌ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದ ಬಸುದೇವ್.

Assault Case: ಮಠದಿಂದ ಎಳೆದೊಯ್ದು ದಲಿತ ಸ್ವಾಮೀಜಿ ಮೇಲೆ ಮಾರಕ ಹಲ್ಲೆ; ಆರೋಪ ಏನು?

ಮಠದಿಂದ ಎಳೆದೊಯ್ದು ದಲಿತ ಸ್ವಾಮೀಜಿ ಮೇಲೆ ಮಾರಕ ಹಲ್ಲೆ; ಆರೋಪ ಏನು?

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ಸಮುದಾಯದವರಾದ ಬಾಲಕೃಷ್ಣ ಸ್ವಾಮೀಜಿಯ ಬಟ್ಟೆಯೇ ಹರಿದು ಹೋಗುವಂತೆ ದುರುಳರು ಹಲ್ಲೆ ನಡೆಸಿದ್ದಾರೆ. ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಎನ್ನುವವರ ಕಡೆಯವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ.

Loading...