ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

Shidlaghatta Crime: ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ

ತಾಲೂಕಿನ ಜಂಗಮಕೋಟೆ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 250ಕ್ಕೂ ಅಧಿಕ ಗೋಧಿ ಚೀಲಗಳನ್ನು ತುಂಬಿದ್ದ ಕ್ಯಾಂಟರ್ ವಾಹನವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Bengaluru Metro: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಬೆಂಗಳೂರಿನ ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಅರ್ಥ್ ಪಿಟ್ ಕಾಮಗಾರಿ ನಡೆಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದುರ್ಘಟನೆಗೆ ನಿಖರವಾದ ಕಾರಣವೇನು ಮತ್ತು ಸುರಕ್ಷತಾ ಕ್ರಮಗಳಲ್ಲಿ ಏನಾದರೂ ಲೋಪಗಳಿದ್ದವೇ ಎಂಬುದರ ಬಗ್ಗೆ ತಿಳಿಯಲು ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ.

ಅನುಕಂಪದ ಸರ್ಕಾರಿ ಉದ್ಯೋಗ ಪಡೆಯಲು ನೀಚ ಕೆಲಸ; ಸುಪಾರಿ ಕೊಟ್ಟು ಅಪ್ಪನನ್ನೇ ಕೊಲ್ಲಿಸಿದ ಪಾಪಿ ಪುತ್ರ

ತಂದೆಯ ಸರ್ಕಾರಿ ಉದ್ಯೋಗ ಪಡೆಯಲು ಪುತ್ರ ಮಾಡಿದ ನೀಚ ಕೆಲಸ

Crime News: ಸರ್ಕಾರಿ ಕೆಲಸದ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ. ಜೂನ್ 19 ರ ರಾತ್ರಿ ನಡೆದ ತುಳೇಶ್ವರ ನೋನಿಯಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಸುಪಾರಿ ಕಿಲ್ಲರ್ಸ್‌ಗಳನ್ನು ಬಂಧಿಸಲಾಗಿದೆ ಎಂದು ಧನ್ಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮೊಹಮ್ಮದ್ ಯಾಕೂಬ್ ತಿಳಿಸಿದ್ದಾರೆ.

ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ? ಕೇತನ್‌ ತಂದೆ ಹೇಳಿದ್ದೇನು?

ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ?

ಲೋಹಗಡ್ ಕೋಟೆಯಿಂದ ತಳ್ಳಲ್ಪಟ್ಟು ಮೃತಪಟ್ಟಿದ್ದ ಉದ್ಯಮಿ ಕೇತನ್‌ ಅವರ ತಂದೆ ಇದೀಗ ಕೊಲೆ ಹಿಂದಿನ ಉದ್ದೇಶದ ಕುರಿತು ಆಘಾತಕಾರಿ ಹೇಳಿಕೆಯೊಂದೊನ್ನು ನೀಡಿದ್ದಾರೆ. ತಮ್ಮ ಮಗನ ಕೂದಲಿನ ಮೇಲೆ ಸಣ್ಣ ಪ್ಯಾಚ್ ಧರಿಸಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ವಿಶಾಲ್ ಅಗರ್ವಾಲ್ ಆರೋಪಿಸಿದ್ದಾರೆ.

Bengaluru triple murder: ಕೆ.ಆರ್‌. ಪುರ ತ್ರಿವಳಿ ಕೊಲೆ ಕೇಸ್‌; ಶ್ವೇತಾ ಪ್ರಿಯಕರ ಕೆನೆತ್‌ ಪುದುಚೇರಿಯಲ್ಲಿ ಅರೆಸ್ಟ್‌

ಕೆ.ಆರ್‌. ಪುರ ತ್ರಿವಳಿ ಕೊಲೆ ಕೇಸ್‌; ಶ್ವೇತಾ ಪ್ರಿಯಕರ ಕೆನೆತ್‌ ಅರೆಸ್ಟ್‌

ಬೆಂಗಳೂರು ತ್ರಿವಳಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿ ಶ್ವೇತಾ ಪೊಲೀಸರ ವಶದಲ್ಲಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈಕೆಯ ಪ್ರಿಯಕರ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಆತನನ್ನು ಪುದುಚೇರಿಯಲ್ಲಿ ಬಂಧಿಸಲಾಗಿದೆ.

ಪತಿಯನ್ನು ಕೊಂದು ಗೆಳೆಯನ ಸಹಾಯದಿಂದ ಮೃತದೇಹ ವಿಲೇವಾರಿ; ಒಡಿಶಾದಲ್ಲಿ ಆಘಾತಕಾರಿ ಘಟನೆ

ಪತಿಯನ್ನು ಕೊಂದು ಗೆಳೆಯನ ಸಹಾಯದಿಂದ ಮೃತದೇಹ ವಿಲೇವಾರಿ

Wife Kills Husband: ಪತಿ-ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯನ್ನು ಕೊಂದ ಪತ್ನಿ, ನಂತರ ತನ್ನ ಗೆಳೆಯನ ಸಹಾಯದಿಂದ ಶವವನ್ನು ವಿಲೇವಾರಿ ಮಾಡಲು ಯತ್ನಿಸಿರುವ ಘಟನೆ ಒಡಿಶಾದ ಜಾರ್ಸುಗುಡ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿ ಮೃತದೇಹವನ್ನು ಹತ್ತಿರದ ಹೊಲದಲ್ಲಿ ಎಸೆಯಲಾಗಿತ್ತು.

ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ₹7 ಕೋಟಿ ದುರ್ಬಳಕೆ ಆರೋಪ, 8 ಮಂದಿ ಬಂಧನ

ರಾಮಮಂದಿರ ದೇಣಿಗೆ ಹಗರಣ: 8 ಮಂದಿ ಅರೆಸ್ಟ್

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದೇಣಿಗೆ ಹಣ ದುರ್ಬಳಕೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ

ತ್ರಿವಳಿ ಕೊಲೆ ಪ್ರಕರಣ: ತಾಯಿ  ಹತ್ಯೆಗೆ ಸಂಚು, ಅನಿರೀಕ್ಷಿತವಾಗಿ ಬಂದ ತಂದೆ, ತಂಗಿಯ ಕಥೆಯನ್ನೂ ಮುಗಿಸಿದಳು

ತ್ರಿವಳಿ ಕೊಲೆ ಅವಳ ಯೋಜನೆ ಆಗಿರಲಿಲ್ಲ

ಆಸ್ತಿ ವಿವಾದದ ಕಾರಣದಿಂದ ಮಗಳೊಬ್ಬಳು ತಾಯಿಯನ್ನು ಕೊಂದಿದ್ದು ಶವ ವಿಲೇವಾರಿ ಮಾಡುವಾಗ ಅನಿರೀಕ್ಷಿತವಾಗಿ ಬಂದ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾಳೆ. ಇದಕ್ಕೆ ಆಕೆಯ ಗೆಳೆಯ ಸಹಕರಿಸಿದ್ದಾನೆ. ತಂದೆ, ತಂಗಿಯನ್ನು ಕೊಲೆ ಮಾಡುವ ಯೋಜನೆ ಅವಳು ಹಾಕಿಕೊಂಡಿರಲಿಲ್ಲ. ಆದರೆ ಎಲ್ಲವೂ ಅನಿರೀಕ್ಷಿತವಾಗಿ ನಡೆದಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

"ನನ್ನ ಮಗಳು ತಪ್ಪು ಮಾಡಿದ್ದರೆ ಅದೇ ಕೋಟೆಯಿಂದ ಆಕೆಯನ್ನು ತಳ್ಳಿ ಬಿಡಿ"; ಕಣ್ಣೀರು ಹಾಕಿದ ಆರೋಪಿ ಸಿಯಾ ತಂದೆ

ಕಣ್ಣೀರು ಹಾಕಿದ ಆರೋಪಿ ಸಿಯಾ ತಂದೆ; ಹೇಳಿದ್ದೇನು?

Pune Muder Case: ಉದ್ಯಮಿ ಕೇತನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರು ಸಿಯಾ ಗೋಯಲ್‌ (Siya Goyal) ಹಾಗೂ ಚೇತನ್‌ ಚೌಧರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಆರೋಪಿಗಳು ಕೊಲೆ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ

ಕೊಲೆ, ಸುಲಿಗೆಯಲ್ಲಿ ಭಾಗಿ: ಮಾಲ್ಡಾದ ಬೀದಿ ಬೀದಿಯಲ್ಲಿ ಟಿಎಂಸಿ ಮಾಜಿ ನಾಯಕನ ಮೆರವಣಿಗೆ

ಹಲವು ಅಪರಾಧದಲ್ಲಿ ಭಾಗಿ: ಟಿಎಂಸಿ ಮಾಜಿ ನಾಯಕನ ಮೆರವಣಿಗೆ

ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತೃಣ ಮೂಲ ಕಾಂಗ್ರೆಸ್ ನ ಮಾಜಿ ನಾಯಕನನ್ನು ಪಶ್ಚಿಮ ಬಂಗಾಳ ಪೊಲೀಸರು ಮೆರವಣಿಗೆ ನಡೆಸಿರುವ ಘಟನೆ ನಡೆದಿದೆ. ಮಾಲ್ಡಾದ ಕಾಲಿಯಾಚಕ್‌ನಲ್ಲಿಬಂಧನಕ್ಕೆ ಒಳಗಾದ ಟಿಎಂಸಿ ಅಂಚಲ್‌ನ ಮಾಜಿ ಅಧ್ಯಕ್ಷ ಬಕುಲ್ ಶೇಖ್ ಕಂಡರೆ ಭಯ ಪಡುತ್ತಿದ್ದ ಜನರನ್ನು ಭಯ ಮುಕ್ತಗೊಳಿಸಲು ಪೊಲೀಸರು ಈ ರೀತಿ ಮೆರವಣಿಗೆ ನಡೆಸಿದರು.

ಕಾರ್ತಿಕೇಯ ಸಿಂಗ್ ಮಾನನಷ್ಟ ಮೊಕದ್ದಮೆ: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿಷಾದ

ಮಾನನಷ್ಟ ಮೊಕದ್ದಮೆಗೆ ರಾಹುಲ್ ಗಾಂಧಿ ವಿಷಾದ

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಹೇಳಿಕೆಗೆ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಷಾದ ವ್ಯಕ್ತಪಡಿಸಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸಮನ್ಸ್ ಮತ್ತು ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಮನವಿ ಮಾಡಿದರು.

ಪುಣೆ ಉದ್ಯಮಿ ಕೊಲೆ ಕೇಸ್‌; ಸಿಕ್ಕಿಬಿದ್ದ ಬಳಿಕ ಮೂಡಿತಾ ಬಿರುಕು? ಸಿಯಾ - ಚೇತನ್‌ ಪರಸ್ಪರ ಆರೋಪ

ಪುಣೆ ಉದ್ಯಮಿ ಕೊಲೆ ಕೇಸ್‌; ಸಿಕ್ಕಿಬಿದ್ದ ಬಳಿಕ ಮೂಡಿತಾ ಬಿರುಕು?

ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳಾದ ಕೇತನ್ ಅವರ ನಿಶ್ಚಿತಾರ್ಥ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಈಗ ಪರಸ್ಪರ ಅಪರಾಧಕ್ಕೆ ದೂಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಆರೋಪಿಗಳು ವಿಚಾರಣೆಯ ಸಮಯದಲ್ಲಿ ತಮ್ಮದೇ ಆದ ಪಾತ್ರಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಹೆಸರಲ್ಲಿ ಅನಧಿಕೃತ ವೆಬ್‌ಸೈಟ್‌: ಕರ್ನಾಟಕ ಸೇರಿ ದೇಶಾದ್ಯಂತ 80 ಕಡೆಗಳಲ್ಲಿ ಸಿಬಿಐ ದಾಳಿ, ಇಬ್ಬರ ಬಂಧನ

ಕರ್ನಾಟಕ, ದೆಹಲಿ ಸೇರಿದಂತೆ 16 ರಾಜ್ಯಗಳಲ್ಲಿ ಸಿಬಿಐ ದಾಳಿ

ಕರ್ನಾಟಕ, ತಮಿಳುನಾಡು, ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿಬಿಐ ದಾಳಿ ನಡೆಸಲಾಗಿದೆ. ಡಿಜಿಟಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 16 ರಾಜ್ಯಗಳ 80 ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಒಟ್ಟು 60 ಸಿಬಿಐ ತಂಡಗಳು ಈ ದಾಳಿಯಲ್ಲಿ ಭಾಗಿಯಾಗಿವೆ.

ಪುಣೆ ಉದ್ಯಮಿ ಹತ್ಯೆ ಪ್ರಕರಣ: ನನ್ನ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರೋಪಿ ಚೇತನ್ ತಂದೆ

'ನನ್ನ ಮಗ ನಿರಪರಾಧಿ': ಚೇತನ್ ಚೌಧರಿ ತಂದೆ!

ಪುಣೆ ಲೋಹಗಢ ಕೋಟೆ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಚೇತನ್ ಚೌಧರಿ ನಿರಪರಾಧಿ ಎಂದು ಆತನ ತಂದೆ ಬಾಬುಲಾಲ್ ಚೌಧರಿ ಹೇಳಿದ್ದಾರೆ. ಸಹ ಆರೋಪಿ ಸಿಯಾ ಗೋಯಲ್ ತನ್ನನ್ನು ರಕ್ಷಿಸಿಕೊಳ್ಳಲು ತಮ್ಮ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಈ ನಡುವೆ, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಇಬ್ಬರ ವಿರುದ್ಧ ಪೂರ್ವನಿಯೋಜಿತ ಸಂಚಿನ ಆರೋಪ ಮಾಡಿದ್ದಾರೆ.

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ!

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ

ನಟಿ ಕೃಷಿ ತಾಪಂಡ ಅವರ ಆರ್‌ ಆರ್‌ ನಗರದಲ್ಲಿರುವ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಟಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ವೈಶಾಕ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿದ್ದ ವೈಶಾಕ್‌ ನಾನಿನ್ನು ಬದುಕುವುದಿಲ್ಲ, ಸಾಯುತ್ತೇನೆ ಎಂದು ಹೇಳಿದ್ದರು.

ಬಗೆದಷ್ಟು ಬಯಲಾಗುತ್ತಿದೆ ಪುಣೆ ಉದ್ಯಮಿ ಕೊಲೆ ಕೇಸ್‌; ಕೊಲ್ಲುವ ವಿಧಾನವನ್ನು ಆನ್‌ಲೈನ್‌ನಲ್ಲಿ ಹುಡುಕಿದ್ದ ಹಂತಕರು!

ಪುಣೆ ಉದ್ಯಮಿ ಸಾವು; ಕೊಲೆ ಕುರಿತು ಆನ್‌ಲೈನ್‌ನಲ್ಲಿ ಹುಡುಕಿದ್ದ ಹಂತಕರು

ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬಿದ್ದಿದ್ದು, ಜೂನ್ 18 ರಂದು ಲೋಹಗಡ್ ಕೋಟೆಯಲ್ಲಿ ಕೇತನ್‌ ಅಗರ್ವಾಲ್‌ ಅವರನ್ನು ಕೊಲ್ಲುವ ಮೊದಲು ಸಿಯಾ ಗೋಯಲ್ ಮತ್ತು ಆಕೆಯ ಗೆಳೆಯ ಚೇತನ್ ಚೌಧರಿ ಅವರನ್ನು ಕೊಲ್ಲಲು ಆನ್‌ಲೈನ್‌ನಲ್ಲಿ ಮಾರ್ಗಗಳನ್ನು ಹುಡುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Surathkal News: ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿಯಾಗಿಸಿದ ಯುವಕ; ಡೆತ್‌ನೋಟ್‌ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಗರ್ಭಿಣಿಯಾಗಿಸಿ ವಂಚಿಸಿದ ಯುವಕ; ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಡೆತ್‌ನೋಟ್‌ನಲ್ಲಿ, ನಾನು ತಪ್ಪು ಮಾಡಿದ್ದೇನೆ. ಅಮ್ಮಾ, ನನ್ನ ತಪ್ಪನ್ನು ಮನ್ನಿಸಿ ಅಮ್ಮ. ಇನ್ನು ಬದುಕಲು ಸಾಧ್ಯವಿಲ್ಲ. ನನಗೆ ಮೋಸ ಮಾಡಿ ಅವನು ಆರಾಮಾಗಿದ್ದಾನೆ. ನನ್ನ ರೀತಿ ಯಾರದ್ದೂ ಜೀವನ ಹಾಳಾಗಬಾರದು ಎಂದು ಬಾಲಕಿ ಬರೆದಿದ್ದಾಳೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಕೇಸ್‌ ದಾಖಲಾಗಿದೆ.

ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು

ಲೋಹಗಢ ಸಾವು ಪ್ರಕರಣ: ಸಹೋದರಿಯ ಅನುಮಾನದಿಂದ ಬಯಲಾಯ್ತು ಸಂಚು

Ketan Agarwal Murder: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್‌ ಸಾವನ್ನು ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಸಹೋದರಿಯ ಅನುಮಾನದಿಂದ ಮರು ತನಿಖೆ ನಡೆದಿದ್ದು, ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಪೂರ್ವಯೋಜಿತವಾಗಿ ಕೊಲೆ ನಡೆಸಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದೆ.

ಆಗ ರಾಜ ರಘುವಂಶಿ ಈಗ ಕೇತನ್‌ ಅಗರ್ವಾಲ್‌: ಪ್ರವಾಸಿ ತಾಣದಲ್ಲಿ ಸಂಗಾತಿಯಿಂದಲೇ ಕೊಲೆಯಾದ ನತದೃಷ್ಟರು

ರಾಜ ರಘುವಂಶಿ ಹತ್ಯೆ ನೆನಪಿಸಿದ ಕೇತನ್‌ ಕೊಲೆ ಪ್ರಕರಣ

Pune Man Murder Case: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆಯಲ್ಲಿ ಜೂ. 18ರಂದು ನಡೆದ ಯುವ ಉದ್ಯಮಿ 26 ವರ್ಷದ ಕೇತನ್‌ ವಿಶಾಲ್‌ ಅಗರ್ವಾಲ್‌ನ ಕೊಲೆ ಪ್ರಕರಣ ಸದ್ಯ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಕಳೆದ ವರ್ಷದ ರಾಜ ರಘುವಂಶಿ ಹತ್ಯೆಯನ್ನು ಇದು ನೆನಪಿಸಿದೆ.

Cauvery River Tragedy: ಫೋಟೊ ತೆಗೆಸಿಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಜಲಸಮಾಧಿ

ಫೋಟೊ ತೆಗೆಸಿಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಬುಧವಾರ ಸಂಜೆ ದುರ್ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ ಇಳಿದು ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ನೀರಿನ ಸೆಳೆತ ಹೆಚ್ಚಾಗಿ, ಒಬ್ಬರ ರಕ್ಷಣೆಗೆ ಮತ್ತೊಬ್ಬರು ಮುಂದಾದ ಪರಿಣಾಮ ಐವರು ನೀರಿನಲ್ಲಿ ಮುಳುಗಿ ದುರಂತ ಸಂಭವಿಸಿದೆ.

Pune Man Murder Case: ಕೇತನ್‌ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ; ಮರ್ಡರ್‌ ಪ್ಲ್ಯಾನ್‌ ತಯಾರಾಗಿದ್ದೇ ಇಲ್ಲಿ

ಕೆಫೆಯಲ್ಲಿ ಪ್ರಿಯಕರನನ್ನು ಭೇಟಿಯಾಗಿ ಭಾವಿ ಪತಿಯ ಕೊಲೆ ಸಂಚು ರೂಪಿಸಿದ ಸಿಯಾ

Siya Goyal: ಮಹಾರಾಷ್ಟ್ರದಲ್ಲಿ ನಡೆದ ಯುವ ಉದ್ಯಮಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 26 ವರ್ಷದ ಯುವ ಉದ್ಯಮಿ ಕೇತನ್‌ ವಿಶಾಲ್‌ ಅಗರ್ವಾಲ್‌ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್‌ ತನ್ನ ಪ್ರಿಯಕರ ಚೇತನ್‌ ಜತೆ ಸೇರಿ ಕೊಲೆ ಮಾಡಿದ್ದು, ಇವರಿಬ್ಬರ ಸಂಚಿನ ವಿವರ ಇದೀಗ ಬೆಳಕಿವೆ ಬಂದಿದೆ.

Tumkur Murder Case: 30 ಲಕ್ಷ ರೂ. ವಿಮೆ ಹಣದ ಆಸೆಗಾಗಿ ತಮ್ಮನನ್ನೇ ಕೊಂದ ಪಾಪಿ ಅಣ್ಣ!

30 ಲಕ್ಷ ರೂ. ವಿಮೆ ಹಣದ ಆಸೆಗಾಗಿ ತಮ್ಮನನ್ನೇ ಕೊಂದ ಪಾಪಿ ಅಣ್ಣ!

ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಮೇಶ್‌ ಎಂಬಾತನ ಕೊಲೆ ನಡೆದಿತ್ತು. ಮೊದಲಿಗೆ ಅಪಘಾತದಲ್ಲಿ ನನ್ನ ಸಹೋದರ ಮೃತಪಟ್ಟಿದ್ದಾನೆ ಎಂದು ಅಣ್ಣ ದೂರು ನೀಡಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

"ತಾಯಿ ನನ್ನನ್ನು ಕಂಟ್ರೋಲ್‌ ಮಾಡುತ್ತಿದ್ದಳು"; ಕುಟುಂಬಸ್ಥರ ಕೊಲೆ ಬಗ್ಗೆ ಹಂತಕಿ ಶ್ವೇತಾ ಹೇಳಿದ್ದೇನು?

ಕುಟುಂಬಸ್ಥರ ಕೊಲೆ ಬಗ್ಗೆ ಹಂತಕಿ ಶ್ವೇತಾ ಹೇಳಿದ್ದೇನು?

ಕೆ.ಆರ್. ಪುರಂನ ಶೀಗೆಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ತಮಿಳುನಾಡಿನ ಪುದುಚೆರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಆಕೆ ಕೊಲೆ ಬಗ್ಗೆ ಹಲವು ಹೇಳಿಕೆಯನ್ನು ನೀಡಿದ್ದಾಳೆ. ಕೊಲೆಯ ನಂತರ ಶ್ವೇತಾ ಮತ್ತು ಆಕೆಯ ಬಾಯ್‌ಫ್ರೆಂಡ್ ಕೆನತ್ ಪ್ರತ್ಯೇಕವಾಗಿ ಹೋಗಿದ್ದರು.

ಉರಿ ಬಿಸಿಲಿನಲ್ಲಿಯೂ ಹೂಡಿ, ಹೆಡ್‌ ಫೋನ್‌;  ಪುಣೆ ಉದ್ಯಮಿ ಹತ್ಯೆ ಬಯಲು ಮಾಡಿದ ಆ ರಹಸ್ಯವೇನು?

ಪುಣೆ ಉದ್ಯಮಿ ಹತ್ಯೆ ಬಯಲು ಮಾಡಿದ ಆ ರಹಸ್ಯವೇನು?

ಭಾವಿ ಪತ್ನಿ ತನ್ನ ಪ್ರಿಯಕರ ಜೊತೆ ಸೇರಿ ಉದ್ಯಮಿ ಹತ್ಯೆ ಮಾಡಿರುವ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ಎದುರು ಒಂದೊಂದೇ ಸತ್ಯ ಬಯಲಾಗುತ್ತಿದೆ. ಪುಣೆಯ ಐತಿಹಾಸಿಕ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್‌ ಅವರನ್ನು ಸಿಯಾ ಹಾಗೂ ಚೇತನ್‌ ಚೌಧರಿ ಕೊಲೆ ಮಾಡಿದ್ದಾರೆ. ಅದಕ್ಕೂ ಮುನ್ನ ಸಿಯಾ ಹಾಗೂ ಕೇತನ್‌ ಕೋಟೆ ಹತ್ತುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿತ್ತು.

Loading...