ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರೈಂ

Chikkaballapur: ಅಡ್ಡಾದಿಡ್ಡಿ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಬೈಕ್​​ ಸವಾರನಿಗೆ ಚೂರಿಯಿಂದ ಇರಿದ ಲೇಡಿ ಟೆಕ್ಕಿ

ಅಡ್ಡಾದಿಡ್ಡಿ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿದ ಲೇಡಿ ಟೆಕ್ಕಿ

Chikkaballapur news: ಲೇಡಿ ಟೆಕ್ಕಿಯೊಬ್ಬರು ವಿಚಿತ್ರವಾಗಿ, ಆತಂಕಕಾರಿಯಾಗಿ ವರ್ತಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಿದ್ದ ಮಹಿಳೆ, ಹಿಂದೆ ಬರುತ್ತಿದ್ದ ವಾಹನಗಳಿಗೆ ಅಡಚಣೆ ಉಂಟುಮಾಡಿದ್ದರು. ನಂತರ ಇದನ್ನು ಪ್ರಶ್ನಿಸಿದ ಬೈಕ್ ಸವಾರರ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದಿದ್ದಾಳೆ.

ಮಾಜಿ ಗೆಳತಿಗೆ ಬಲವಂತವಾಗಿ ಮುತ್ತಿಡಲು ಯತ್ನ; ನಾಲಗೆ ಕಚ್ಚಿ ಗಾಯಗೊಳಿಸಿದ ಮಹಿಳೆ

ಬಲವಂತವಾಗಿ ಮುತ್ತಿಡಲು ಯತ್ನ; ನಾಲಗೆ ಕಚ್ಚಿ ಗಾಯಗೊಳಿಸಿದ ಮಹಿಳೆ

Woman bites man’s tongue: ತನಗೆ ಬಲವಂತವಾಗಿ ಮುತ್ತಿಡಲು ಯತ್ನಿಸಿದ ವಿವಾಹಿತ ವ್ಯಕ್ತಿಯ ನಾಲಗೆಯನ್ನು ಆತನ ಮಾಜಿ ಪ್ರೇಯಸಿ ಕಚ್ಚಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಹಿಳೆಯು ತನ್ನ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿದ್ದಾಳೆ ಎನ್ನಲಾಗಿದೆ.

ಭಾರತದಲ್ಲಿ ಭಯೋತ್ಪಾದನೆ ಸಂಚು:  ಜೈಶ್‌ನ ವಾಟ್ಸ್‌ಆ್ಯಪ್‌ ಚಾನೆಲ್ ಸ್ಥಗಿತ

ಭಾರತದೊಂದಿಗೆ ಜೈಶ್‌ನ ವಾಟ್ಸಾಪ್ ಚಾನೆಲ್ ಸ್ಥಗಿತ

ವೈಟ್‌ ಕಾಲರ್‌ ಭಯೋತ್ಪಾದನೆಗಾಗಿ ಯುವಕರನ್ನು ಬಳಸಿಕೊಳ್ಳಲು ಜೈಶ್-ಎ-ಮೊಹಮ್ಮದ್ (ಜೆಇಎಂ) ಬಳಸುತ್ತಿದ್ದ ವಾಟ್ಸಾಪ್ ಚಾನೆಲ್ ಅನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ತನ್ನ ಸಂದೇಶಗಳನ್ನು ಹರಡಲು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ನಿರ್ವಹಿಸುತ್ತಿದ್ದ ವಾಟ್ಸಾಪ್ ಚಾನೆಲ್ ಅನ್ನು ಮುಚ್ಚಲಾಗಿದೆ. ಇದು ವೈಟ್ ಕಾಲರ್ ವೃತ್ತಿಪರರನ್ನು ಗುರಿಯಾಗಿಸಿಕೊಂಡು ಸಂದೇಶವನ್ನು ಪ್ರಸಾರ ಮಾಡುತ್ತಿತ್ತು ಎನ್ನಲಾಗಿದೆ.

Delhi Bomb Blast: ದೆಹಲಿ ಸ್ಫೋಟದ ಒಂದೂವರೆ ತಿಂಗಳ ಮುನ್ನ ಹೊಸ ಕಾರು ಖರೀದಿಸಿದ್ದ ಇಬ್ಬರು ಶಂಕಿತರು- ಇಲ್ಲಿದೆ ಫೋಟೋ

ಹೊಸ ಕಾರು ಖರೀದಿಸಿದ್ದ ಇಬ್ಬರು ಶಂಕಿತ ಉಗ್ರರ ಫೋಟೋ ವೈರಲ್‌

Delhi blast case: ದೆಹಲಿ ಸ್ಫೋಟ ಪ್ರಕರಣದ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣ ಇಬ್ಬರು ಶಂಕಿತರು ಸ್ಫೋಟಕ್ಕೆ ಒಂದೂವರೆ ತಿಂಗಳ ಮೊದಲು ಹೊಸ ಕಾರನ್ನು ಖರೀದಿಸಿದ್ದರು. ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್, ಕಾರು ಶೋರೂಂನಲ್ಲಿ ಮಾರುತಿ ಬ್ರೆಝಾ ಖರೀದಿಸುತ್ತಿರುವ ಫೋಟೋವೊಂದು ಹೊರಬಿದ್ದಿದೆ.

Murder Case: ಹಣ ದುಪ್ಪಟ್ಟು ಆಮಿಷಕ್ಕೆ ಬಲಿಯಾದ ಇಂಜಿನಿಯರ್‌, ʼದೃಶ್ಯʼ ಸಿನಿಮಾ ಮಾದರಿಯಲ್ಲಿ ಹತ್ಯೆ!

ಹಣ ದುಪ್ಪಟ್ಟು ಆಮಿಷಕ್ಕೆ ಇಂಜಿನಿಯರ್‌ ಬಲಿ, ʼದೃಶ್ಯʼ ಸಿನಿಮಾದಂತೆ ಹತ್ಯೆ!

Bengaluru crime news: ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ (30) ಕೊಲೆಯಾದ ವ್ಯಕ್ತಿ. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್, ಶ್ರೀನಾಥ್‌ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ 40,00,000 ಪಡೆದುಕೊಂಡು ಪ್ರಭಾಕರ್‌ಗೆ ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್‌ಗೆ ಕೇಳಿದ್ದಾನೆ. ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

Crime News: ಬಿಹಾರ ಎಲೆಕ್ಷನ್‌ ಕುರಿತು ವಾಗ್ವಾದ.... ಕೊಲೆಯಲ್ಲಿ ಅಂತ್ಯ! ಸೋದರಳಿಯನನ್ನೇ ಕೊಂದ ಮಾವಂದಿರು

ಸೋದರಳಿಯನನ್ನೇ ಬರ್ಬರವಾಗಿ ಕೊಲೆಗೈದ ಮಾವಂದಿರು

Bihar election results: ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ನಡೆದ ವಾಗ್ವಾದ ಕುಟುಂಬ ಕಲಹಕ್ಕೆ ತಿರುಗಿ, ಕೊನೆಗೆ ದಾರುಣ ಘಟನೆಯಾಗಿ ಅಂತ್ಯವಾಯಿತು. ರಾಜಕೀಯ ವಿಚಾರದ ಜಗಳದ ನಡುವೆ ಮಾವಂದಿರೇ ತಮ್ಮ ಸೋದರಳಿಯನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Bagapally Crime: ಆಹಾರಕ್ಕೆ ಬೆರೆಸಲು ವಿಷಕಾರಿ ದತ್ತೂರ ಬೀಜದ ಪುಡಿ ನೀಡಿದ್ದ ‘ಮಾಂತ್ರಿಕ’ ಅರೆಸ್ಟ್

ಐಸಿಯು ನಲ್ಲಿ ಮೂವರ ಚೇತರಿಕೆ, ೪ ಜನ ಸಾಮಾನ್ಯ ವಾರ್ಡಿಗೆ ಶಿಫ್ಟ್

ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಒಂದೇ ಕುಟುಂಬದ ೮ ಜನರನ್ನು ಸಾಮೂಹಿಕವಾಗಿ ಕೊಲೆ ಮಾಡುವ ಉದ್ದೇಶದಿಂದ ಪಾಪಿರೆಡ್ಡಿ ಎಂಬಾತ ನೀಡಿದ್ದ ವಿಷವನ್ನು ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಪ್ರವೇಶ ಮಾಡಿದ್ದ ಚೌಡರೆಡ್ಡಿ ಎಂಬಾತ ಆಹಾರ ದಲ್ಲಿ(ಸಾಂಬಾರಿಗೆ) ವಿಷವನ್ನು ಬೆರೆಸಿದ್ದ

Saudi Arabia Bus Accident: ಸೌದಿ ಬಸ್‌ ಅಪಘಾತ; ಕೂದಲೆಳೆ ಅಂತರದಲ್ಲಿ ಪಾರಾದ 8 ಮಂದಿ, ಬದುಕುಳಿದವರ ಕಥೆ ಕೇಳಲೇಬೇಕು

ಸೌದಿ ಬಸ್‌ ಅಪಘಾತ; ಕೂದಲೆಳೆ ಅಂತರದಲ್ಲಿ ಪಾರಾದ 8 ಮಂದಿ

ಸೌದಿ ಅರೇಬಿಯಾದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತಕ್ಕೀಡಾದ ಬಸ್ ನಲ್ಲಿ 54 ಭಾರತೀಯರು ಪ್ರಯಾಣಿಸಬೇಕಿತ್ತು. ಆದರೆ ಇವರಲ್ಲಿ 8 ಮಂದಿ ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿದ್ದರಿಂದ ದುರಂತದಿಂದ ಪಾರಾಗಿದ್ದಾರೆ. ಈ ಬಸ್ ಅಪಘಾತದಲ್ಲಿ 42 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವವಾಗಿ ದಹನವಾಗಿದ್ದಾರೆ.

Physical Assault : ಜೂಜಾಟದಲ್ಲಿ ಪತ್ನಿಯನ್ನೇ ಅಡವಿಟ್ಟು ಸೋತ ಪತಿ ಮಹಾಶಯ; ಮಾವ, ಮೈದುನ ಸೇರಿದಂತೆ 8 ಮಂದಿಯಿಂದ ಅತ್ಯಾಚಾರ

ಪತಿಯ ಜೂಜಾಟದ ಹುಚ್ಚಿಗೆ ಪತ್ನಿ ಮೇಲೆ ಅತ್ಯಾಚಾರವೆಸಗಿದ ದುರುಳರು

Husband Loses Wife in Gambling: ಉತ್ತರ ಪ್ರದೇಶದಲ್ಲಿ ಒಂದು ವಿಚಿತ್ರ ಪ್ರಕರಣದಲ್ಲಿ, ಪತಿಯೊಬ್ಬ ಜೂಜಾಟದಲ್ಲಿ ಪತ್ನಿಯನ್ನು ಅಡವಿಟ್ಟು ಸೋತಿದ್ದಾನೆ. ಇದರಿಂದ ಆಕೆಯ ಮೇಲೆ ಮಾವ, ಮೈದುನ ಹಾಗೂ ಅತ್ತಿಗೆಯ ಪತಿ 8 ಮಂದಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ನಡೆದಿದೆ.

Bengaluru Digital Arrest: ಬೆಂಗಳೂರಿನಲ್ಲಿ ಮತ್ತೊಂದು ಡಿಜಿಟಲ್‌ ಅರೆಸ್ಟ್‌; ಮಹಿಳಾ ಟೆಕ್ಕಿಗೆ ಬರೋಬ್ಬರಿ 31.83 ಕೋಟಿ ರೂ. ವಂಚನೆ!

ಡಿಜಿಟಲ್‌ ಅರೆಸ್ಟ್‌; ಮಹಿಳಾ ಟೆಕ್ಕಿಗೆ ಬರೋಬ್ಬರಿ 31.83 ಕೋಟಿ ರೂ. ವಂಚನೆ!

Cyber Crime in Bengaluru: ನಿಮಗೆ ಬಂದಿರುವ ಕೊರಿಯರ್‌ನಲ್ಲಿ ಮಾದಕ ವಸ್ತುಗಳು ಇವೆ ಎಂದು ಬೆದರಿಸಿ, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿಗೆ ವಂಚನೆ ಎಸಗಲಾಗಿದೆ. ಹಣ ಕಳೆದುಕೊಂಡ ಮಹಿಳೆ ನೀಡಿದ ದೂರಿನ ಅನ್ವರ ಬೆಂಗಳೂರಿನ ಸೈಬರ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Viral Video: ಪ್ರವಾಸಿ ಮಹಿಳೆಗೆ ಖಾಸಗಿ ಅಂಗ ತೋರಿಸಿದ ನೀಚ! ವಿಡಿಯೊ ಇಲ್ಲಿದೆ

ಪ್ರವಾಸಿ ಮಹಿಳೆಗೆ ಲೈಂಗಿಕ ಕಿರುಕುಳ; ಈ ವಿಡಿಯೊ ನೋಡಿ

ಶ್ರೀಲಂಕಾ ಪ್ರವಾಸದ ವೇಳೆ ನ್ಯೂಜಿಲೆಂಡ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. 23 ವರ್ಷದ ಯುವಕನಿಂದ ಪ್ರವಾಸಿ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಈ ಸಂಬಂಧ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಸದ್ಯ ಮಹಿಳೆ ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಪ್ರವಾಸಿಗರ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Bengaluru Crime news: ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

15 ವರ್ಷದ ಬಾಲಕಿಯನ್ನು ಜನ್ಮದಿನದ ಕೇಕ್‌ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್‌ಗೆ ಕರೆದೊಯ್ದು ಅತ್ಯಾಚಾರ (Physical Abuse) ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಕಾಮುಕ ಎಸ್ಕೇಪ್ ಆಗಿದ್ದಾನೆ. 9ನೇ ತರಗತಿ ವಿದ್ಯಾರ್ಥಿನಿ ಹೆತ್ತವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Fake Nandini Ghee: ನಂದಿನಿ ತುಪ್ಪದಲ್ಲಿ ಕಲಬೆರಕೆ: ದೊಡ್ಡ ಜಾಲ ಬಯಲು, ನಾಲ್ವರ ಬಂಧನ

ನಂದಿನಿ ತುಪ್ಪದಲ್ಲಿ ಕಲಬೆರಕೆ: ದೊಡ್ಡ ಜಾಲ ಬಯಲು, ನಾಲ್ವರ ಬಂಧನ

fake nandini products: ನಂದಿನಿ ತುಪ್ಪದಲ್ಲಿ ಕಳಪೆ ಸಾಮಗ್ರಿಗಳನ್ನು ಕಲಬೆರಕೆ ಮಾಡಿ ತಮಿಳುನಾಡಿಗೆ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಒಂದು ಲೀಟರ್ ಮೂಲ ತುಪ್ಪದಿಂದ ಮೂರು ಲೀಟರ್ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು. ಬಂಧಿತ ವ್ಯಕ್ತಿಗಳನ್ನು ಕೆಎಂಎಫ್ ವಿತರಕ ಮಹೇಂದ್ರ, ಅವರ ಮಗ ದೀಪಕ್, ತಮಿಳುನಾಡಿನಿಂದ ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ಮುನಿರಾಜು ಮತ್ತು ಚಾಲಕ ಅಭಿ ಅರಸು ಎಂದು ಗುರುತಿಸಲಾಗಿದೆ.

Ricin Terror Plot: ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳಿಂದ ದಾಳಿ; ಐಸಿಸ್ ಧ್ವಜ  ಪತ್ತೆ

ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳಿಂದ ಮಹತ್ವದ ದಾಖಲೆ ವಶ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಉತ್ತರ ಪ್ರದೇಶದಲ್ಲಿ ದಾಳಿ ನಡೆಸಿದೆ. ಈ ವೇಳೆ ಐಸಿಸ್ ಸಂಬಂಧಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಬಂಧಿತನಾಗಿರುವ ಮೊಹಮ್ಮದ್ ಸುಹೈಲ್ ಖಾನ್ ಮನೆ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ನಾಯಕನ ಪತ್ನಿ ಶವವಾಗಿ ಪತ್ತೆ- ಸಾವಿನ ಹಿಂದೆ ಇದ್ಯಾ ಭಯಾನಕ ಕಹಾನಿ?

ಬಿಜೆಪಿ ನಾಯಕನ ಪತ್ನಿ ನಿಗೂಢ ಸಾವು; ಕೊಲೆ ಶಂಕೆ

ರಾಜಸ್ಥಾನದ ಭರತ್‌ಪುರದಲ್ಲಿ ಬಿಜೆಪಿ ನಾಯಕನೊಬ್ಬನ ಪತ್ನಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ಕುಟುಂಬ ವರದಕ್ಷಿಣೆ ಹಿಂಸಾಚಾರ, ಕೊಲೆ ಮತ್ತು ರಹಸ್ಯ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಿದ್ದಾರೆಂದು ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Koppala News: ಹಣ ಮರಳಿ ಕೊಡುತ್ತೇವೆಂದು ಕರೆಸಿಕೊಂಡು ಹೋಂ ಗಾರ್ಡ್‌ ಮೇಲೆ ನಾಲ್ವರಿಂದ ಅತ್ಯಾಚಾರ

ಹಣ ಮರಳಿ ಕೊಡುತ್ತೇವೆಂದು ಕರೆಸಿ ಹೋಂ ಗಾರ್ಡ್‌ ಮೇಲೆ ನಾಲ್ವರಿಂದ ಅತ್ಯಾಚಾರ

Koppala News: ಸಂತ್ರಸ್ತೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಆರೋಪಿ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದು ಮದ್ಲೂರ ಗ್ರಾಮದ ಬಳಿ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇನ್ನು ಮೂವರು ಸೇರಿಕೊಂಡಿದ್ದಾರೆ. ಅವರು ಮಹಿಳೆಗೆ ಜ್ಯೂಸ್ ಎಂದು ಹೇಳಿ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಕುಷ್ಟಗಿ ಮತ್ತು ಮದ್ಲೂರ ಸೀಮೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Bomb threat: ಎಂ.ಕೆ. ಸ್ಟಾಲಿನ್, ನಟರಾದ ಅಜಿತ್, ಅರವಿಂದ್ ಸ್ವಾಮಿ ಮತ್ತು ಖುಷ್ಬುಗೆ ಬಾಂಬ್‌ ಬೆದರಿಕೆ

ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳಿಗೆ ರಾತ್ರೋರಾತ್ರಿ ಬಾಂಬ್‌ ಬೆದರಿಕೆ

ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳಿಗೆ ಬರುತ್ತಿರುವ ಬಾಂಬ್‌ ಬೆದರಿಕೆ ಕರೆಗಳು ಮುಂದುವರಿದಿದೆ. ನಿನ್ನೆ ತಡ ರಾತ್ರಿ ಕೂಡ ಸಿಎಂ ಸ್ಟ್ಯಾಲಿನ್‌, ನಟರಾದ ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ಖುಷ್ಬು ಅವರ ನಿವಾಸಕ್ಕೆ ಭಾನುವಾರ ರಾತ್ರಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೇ ಪೊಲೀಸರು ಅಲರ್ಟ್‌ ಆಗಿದ್ದಾರೆ.

ತಲಾ 5 ಲಕ್ಷ ರೂ. ಇನಾಮು ಹೊಂದಿದ್ದ ಮೂವರು ನಕ್ಸಲರ ಎನ್‌ಕೌಂಟರ್‌

ಛತ್ತೀಸ್‌ಗಢದಲ್ಲಿ ಮೂವರು ನಕ್ಸಲರ ಎನ್‌ಕೌಂಟರ್‌

ತಲಾ ಐದು ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಮೂವರು ನಕ್ಸಲರನ್ನು ಛತ್ತೀಸ್‌ಗಢದ ಸುಕ್ಮಾದಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ತುಮಲ್‌ಪಾಡ್ ಗ್ರಾಮದ ಬಳಿ ಈ ಎನ್‌ಕೌಂಟರ್ ನಡೆದಿದೆ. ಮೃತ ನಕ್ಸಲರಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳಾದ ಪೊಡ್ಯಂ ಗಂಗಿ ಮತ್ತು ಸೋಡಿ ಗಂಗಿ ಸೇರಿದ್ದಾರೆ.

Delhi Blast: ಉಗ್ರರ ಜೊತೆ ಲಿಂಕ್ ಆರೋಪ- ವಿಚಾರಣೆ ಬಳಿಕ ವೈದ್ಯೆ ರಿಲೀಸ್

ದೆಹಲಿ ಬಾಂಬ್ ಸ್ಫೋಟ: ಹರಿಯಾಣ ವೈದ್ಯೆಯ ಬಿಡುಗಡೆ

ದೆಹಲಿಯ ಕೆಂಪು ಕೋಟೆ ಬಳಿ ಕಳೆದ ಸೋಮವಾರ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಹರಿಯಾಣದ ವೈದ್ಯೆಯನ್ನು ವಿಚಾರಣೆಯ ಬಳಿಕ ಬಿಡುಗಡೆ ಮಾಡಲಾಗಿದೆ. ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳು ಅದನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಿದ್ದಾರೆ ಎನ್ನಲಾಗಿದೆ.

Crime News: ಮದುವೆ ಸಂಭ್ರಮದ ನಡುವೆ ನಡೀತು ಘೋರ ಘಟನೆ! ಭಾವಿ ಪತ್ನಿಯನ್ನು ಕೊಂದು ವರ ಎಸ್ಕೇಪ್

ಭಾವಿ ಪತ್ನಿಯನ್ನು ಕೊಂದು ವರ ಎಸ್ಕೇಪ್!

wedding tragedy: ಮದುವೆ ಸಂಭ್ರಮದ ಮಧ್ಯೆ ಸಂಭವಿಸಿದ ಹೃದಯವಿದ್ರಾವಕ ಘಟನೆ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೀರೆ ಮತ್ತು ಹಣಕ್ಕೆ ಸಂಬಂಧಿಸಿದ ವಿವಾದವು ದೊಡ್ಡ ಜಗಳಕ್ಕೆ ತಿರುಗಿ, ಕೊನೆಗೆ ವಧುವಿನ ಪ್ರಾಣವನ್ನೇ ಕಸಿದುಕೊಂಡಿದೆ. ಘಟನೆ ನಂತರ ವರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಅಪರಿಚಿತರಿಂದ ಗುಂಡಿನ ದಾಳಿ: ಆರ್‌ಎಸ್‌ಎಸ್ ಕಾರ್ಯಕರ್ತನ ಮಗನ ಹತ್ಯೆ

ಆರ್‌ಎಸ್‌ಎಸ್ ಕಾರ್ಯಕರ್ತನ ಮಗನ ಹತ್ಯೆ

ಆರ್‌ಎಸ್‌ಎಸ್ ಕಾರ್ಯಕರ್ತನ ಮಗನನ್ನು ಪಂಜಾಬ್‌ನ ಫಿರೋಜ್‌ಪುರದಲ್ಲಿ ಹತ್ಯೆ ಮಾಡಲಾಗಿದೆ. ಇಬ್ಬರು ಅಪರಿಚಿತರು ದಾಳಿ ನಡೆಸಿ 40 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಮೃತನನ್ನು ನವೀನ್ ಅರೋರಾ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದೆ.

Delhi Blast: ದೆಹಲಿ ಬಾಂಬ್ ಸ್ಫೋಟ: ಆರೋಪಿ ಪಡೆದದ್ದು ಬರೋಬ್ಬರಿ 20 ಲಕ್ಷ ರೂ.

ಅಕ್ರಮವಾಗಿ 20 ಲಕ್ಷ ರೂ. ಪಡೆದಿದ್ದ ದೆಹಲಿ ಸ್ಫೋಟದ ಆರೋಪಿ

ದೆಹಲಿಯ ಕೆಂಪು ಕೋಟೆಯ ಬಳಿ ಕಳೆದ ಸೋಮವಾರ ನಡೆದ ಬಾಂಬ್ ಸ್ಪೋಟಕ್ಕೆ ಕಾರಣವಾದ ಕಾರಿನ ಚಾಲಕ ಇದಕ್ಕಾಗಿ ಅಕ್ರಮವಾಗಿ ಬರೋಬ್ಬರಿ 20 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾನೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಹರಿಯಾಣದ ನುಹ್‌ ಮಾರುಕಟ್ಟೆಯಿಂದ ನಗದು ಪಾವತಿಸಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕ ಸಾಮಗ್ರಿಗಳನ್ನು ಖರೀದಿ ಮಾಡಿದ್ದಾನೆ ಎನ್ನಲಾಗಿದೆ.

Physical Assault: ಪ್ರತಿಷ್ಠಿತ ಇಂಜಿನಿಯರಿಂಗ್  ಕಾಲೇಜಿನ ಉಪನ್ಯಾಸಕನ ಮೇಲೆ ಲೈಂಗಿಕ ಕುರುಳದ ಆರೋಪ; ದೂರು ದಾಖಲು

ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕನ ಮೇಲೆ ಲೈಂಗಿಕ ಕುರುಳದ ಆರೋಪ

Physical Abuse: ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಹೆಚ್ಚು ಮಾರ್ಕ್ಸ್‌ ನೀಡುತ್ತೇನೆ ಎಂಬ ಆಮಿಷವೊಡ್ಡಿದ್ದ. ಆಕೆ ಒಪ್ಪದಿದ್ದಾಗ ಫೋನ್‌ ಮಾಡಿ, ಕೆಟ್ಟದಾಗಿ ಬೈದಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಶಾಲೆಗೆ 10 ನಿಮಿಷ ತಡವಾಗಿ ಬಂದ ಬಾಲಕಿಗೆ ಘೋರ ಶಿಕ್ಷೆ; ನೋವಿನಿಂದ ಒದ್ದಾಡಿ ಪ್ರಾಣಬಿಟ್ಟ ವಿದ್ಯಾರ್ಥಿನಿ: ಮಕ್ಕಳ ದಿನಾಚರಣೆಯಂದೇ ದುರಂತ

ಶಾಲೆಗೆ ತಡವಾಗಿ ಬಂದ ಬಾಲಕಿಗೆ ಶಿಕ್ಷೆ; ಪ್ರಾಣಬಿಟ್ಟ ವಿದ್ಯಾರ್ಥಿನಿ

Maharashtra News: ಕೇವಲ 10 ನಿಮಿಷ ತಡವಾಗಿ ಶಾಲೆಗೆ ಆಗಮಿಸಿದ 12 ವರ್ಷದ ವಿದ್ಯಾರ್ಥಿನಿಗೆ 100 ಬಸ್ಕಿ ಹೊಡೆಯುವ ಕಠಿಣ ನೀಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು 6ನೇ ತರಗತಿಯ ವಿದ್ಯಾರ್ಥಿನಿ ಕಾಜಲ್‌ ಗೊಂಡ ಆಲಿಯಾಸ್‌ ಅಂಶಿಕಾ ಎಂದು ಗುರುತಿಸಲಾಗಿದೆ. ವಸಾಯಿಯ ಶ್ರೀ ಹನುಮಂತ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ.

Loading...