ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರೈಂ

Murder Case: ಬಿಜೆಪಿ ಲೀಡರ್‌ ಹತ್ಯೆ, ವಿಷಯ ತಿಳಿದು ಆರೋಪಿಯ ತಂದೆ ಆತ್ಮಹತ್ಯೆ

ಬಿಜೆಪಿ ಲೀಡರ್‌ ಹತ್ಯೆ, ವಿಷಯ ತಿಳಿದು ಆರೋಪಿಯ ತಂದೆ ಆತ್ಮಹತ್ಯೆ

Madhya Pradesh: ಕಟ್ನಿ ಬಿಜೆಪಿ ಪಿಚಡಾ ಮೋರ್ಚಾ ಮಂಡಲ ಅಧ್ಯಕ್ಷೆ 38 ವರ್ಷದ ನೀಲು (ನೀಲೇಶ್) ರಜಕ್, ಕೈಮೋರ್ ಪಟ್ಟಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ತಲೆ ಮತ್ತು ಎದೆಗೆ ಗುಂಡು ಹಾರಿಸಿದ್ದಾರೆ.

Assault Case: ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ, ಶಿಕ್ಷಕಿಯ ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ

ಚಿಕ್ಕಮಗಳೂರಿನಲ್ಲಿ ಶಿಕ್ಷಕಿಯ ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ

Chikkamagaluru: ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಗ್ನಗೊಳಿಸಿರುವ ಆರೋಪ ಕೇಳಿಬಂದಿದೆ.

Theft Case: ದುಬೈಯಲ್ಲಿ ಚಿನ್ನದ ನೆಕ್ಲೆಸ್ ಕದ್ದ ಯುರೋಪಿಯನ್ ಮಹಿಳೆಗೆ 3.5 ಲಕ್ಷ ರೂ. ದಂಡ

ದುಬೈಗೆ ಬಂದ ಯುರೋಪ್ ಮಹಿಳೆ ಮಾಡಿದ್ದೇನು ಗೊತ್ತಾ?

ದುಬೈಗೆ ಬಂದಿದ್ದ ಯುರೋಪ್ ಮಹಿಳೆಯೋಬ್ಬಳು ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಗೆ ದಂಡ ವಿಧಿಸಿದ್ದು, ಭಾವನಾತ್ಮಕ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ.

Zubair Hangargekar: ಅಲ್-ಖೈದಾ ಜತೆ ಸಂಪರ್ಕ ಆರೋಪ: ಪುಣೆ ಟೆಕ್ಕಿಯ ಬಂಧನ

ಅಲ್-ಖೈದಾ ಜತೆ ಸಂಪರ್ಕ; ಓರ್ವನ ಬಂಧನ

Al Qaeda: ಅಲ್-ಖೈದಾ ಜತೆ ನಂಟು ಹೊಂದಿದ್ದ ಪುಣೆ ಮೂಲದ ವ್ಯಕ್ತಿಯನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನವೆಂಬರ್ 4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Gold smuggling: ಒಳಉಡುಪಿನಲ್ಲಿ ಚಿನ್ನ ಅಡಗಿಸಿಟ್ಟಿದ್ದ ಮಹಿಳೆ; ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?

ಒಳಉಡುಪಿನಲ್ಲಿ ಚಿನ್ನ ಅಕ್ರಮ ಸಾಗಾಟ: ಮಹಿಳೆ ಬಂಧನ

ಒಳಉಡುಪುಗಳಲ್ಲಿ ಸುಮಾರು ಒಂದು ಕೆ.ಜಿ. ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಹಿಳೆ ತನ್ನ ಒಳ ಉಡುಪುಗಳಲ್ಲಿ 1 ಕೆಜಿ ಚಿನ್ನವನ್ನು ಅಡಗಿಸಿಟ್ಟು ಮ್ಯಾನ್ಮಾರ್‌ನಿಂದ ಭಾರತಕ್ಕೆ ಚಿನ್ನವನ್ನು ಸಾಗಿಸುತ್ತಿದ್ದಳು. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಬಾಟಲ್ ಮುಚ್ಚಳದಲ್ಲಿ 170 ಗ್ರಾಂ ಚಿನ್ನವನ್ನು ದುಬೈನಿಂದ ಭಾರತಕ್ಕೆ ಸಾಗಿಸುತ್ತಿದ್ದು, ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ; ಆರೋಪಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಕೆನಡಾದಲ್ಲಿ ಭಾರತ ಮೂಲದ ಯುವತಿ ಹತ್ಯೆ

Indian killed in Canada: ಕೆನಡಾದಲ್ಲಿ ಭಾರತೀಯ ಮೂಲದ ಅಮನ್‌ಪ್ರೀತ್ ಸೈನಿ ಎಂಬ ಯುವತಿಯ ಹತ್ಯೆ ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಬ್ರಾಂಪ್ಟನ್ ನಿವಾಸಿ ಮನ್‌ಪ್ರೀತ್ ಸಿಂಗ್ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಆರೋಪಿ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Viral News: ಅಜೀರ್ಣವೆಂದು ENO ಕುಡಿಯೋ ಅಭ್ಯಾಸ ಇದ್ಯಾ? ಹಾಗಿದ್ರೆ ಎಚ್ಚರ... ಎಚ್ಚರ!

ಅಜೀರ್ಣವೆಂದು ENO ಕುಡಿಯೋ ಅಭ್ಯಾಸ ಇದ್ಯಾ? ಹಾಗಿದ್ರೆ ಎಚ್ಚರ!

Fake ENO packets seized: ಕೋಲ್‍ಗೇಟ್ ಟೂತ್‌ಪೇಸ್ಟ್ ನಂತರ, ಇದೀಗ ನಕಲಿ ENO ದಂಧೆ ಬೆಳಕಿಗೆ ಬಂದಿದೆ. ಉತ್ತರ ದೆಹಲಿಯ (Delhi) ಇಬ್ರಾಹಿಂಪುರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಅಕ್ರಮವನ್ನು ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಸ್ಥಳದಲ್ಲಿ ಬಂಧಿಸಲಾಗಿದೆ.

Crime News: ಚರಂಡಿಯಲ್ಲಿ ಪತ್ತೆಯಾಯ್ತು ಇನ್ಶೂರೆನ್ಸ್ ಏಜೆಂಟ್ ಶವ; ಬ್ಲ್ಯಾಕ್‌ಮೇಲ್‌ ಕಾರಣಕ್ಕೆ ನಡೀತಾ ಬರ್ಬರ ಕೊಲೆ?

ಚರಂಡಿಯಲ್ಲಿ ಇನ್ಶೂರೆನ್ಸ್​ ಏಜೆಂಟ್ ಶವ ಪತ್ತೆ

Insurance Agent Found Dead: ಬೆದರಿಕೆ ಹಾಕಿದ ಎಂಬ ಕಾರಣಕ್ಕೆ ಯುವತಿಯೊಬ್ಬಳು ಇನ್ಶೂರೆನ್ಸ್ ಏಜೆಂಟ್‌ ಅನ್ನು ಕೊಲೆ ಮಾಡಿದ್ದಾಳೆ. ಈ ದುರ್ಘಟನೆ ಫರೀದಾಬಾದ್‌ನಲ್ಲಿ ನಡೆದಿದ್ದು, ಹತ್ಯೆ ಮಾಡಿ ಶವವನ್ನು ಚರಂಡಿಗೆ ಎಸೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ಪ್ರಕಾರ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣದಿಂದ ಚಂದರ್‌ರನ್ನು ಕೊಲೆ ಮಾಡಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಚರಂಡಿಯಲ್ಲಿ ಶವ ಪತ್ತೆಯಾಗಿದೆ.

Tipu Sultan's Palace: ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

Nandi Hills: ಅರಮನೆ ಮೇಲೆ ಇಂಗ್ಲಿಷ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿದ್ದು, ಹೆಸರಿನ ನಡುವೆ ಪ್ರೀತಿಯ ಸಂಕೇತವನ್ನೂ ಬರೆಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬರಹದ ಮೇಲೆ ಬಣ್ಣ ಬಳಿದಿದ್ದಾರೆ. ಈ ಕೃತ್ಯದ ಬಗ್ಗೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದು, ಪಾರಂಪರಿಕ ಸ್ಮಾರಕದ ಮೇಲೆ ಗ್ಯಾಂಗ್‌ಸ್ಟರ್‌ ಹೆಸರು ಬರೆದು ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Lawrence Bishnoi Gang: ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊರ್ವ ಸದಸ್ಯನ ಅರೆಸ್ಟ್‌

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನ ಬಂಧನ

Bishnoi gang member arrested: ಭಾರತದಿಂದ ಪರಾರಿಯಾಗಿದ್ದ ಭಯೋತ್ಪಾದಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿ ಯುಎಸ್- ಕೆನಡಾ ಗಡಿ ಬಳಿ ಸೋಮವಾರ ಬಂಧಿಸಿದೆ.

Acid Attack: ಆಸಿಡ್‌ ದಾಳಿ ಕೇಸ್‌ಗೆ ಭಾರೀ ಟ್ವಿಸ್ಟ್‌; ಅಪ್ಪನನ್ನು ರಕ್ಷಿಸಲು ನವರಂಗಿ ನಾಟಕವಾಡಿದ್ಲಾ ಮಗಳು?

ಆಸಿಡ್‌ ದಾಳಿ ಕೇಸ್‌; ಯುವತಿಯ ತಂದೆ ಮೇಲೆ ಬಿತ್ತು ಕೇಸ್‌

ವಿದ್ಯಾರ್ಥಿಯ ಮೇಲೆ ಆಸಿಡ್‌ ಎರೆಚಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಒಂದು ಸಿಕ್ಕಿದೆ. ಪರಿಚಯಸ್ಥ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದ. ಹಲವು ಬಾರಿ ಆತನಿಗೆ ವಾರ್ನಿಂಗ್‌ ಮಾಡಲಾಗಿತ್ತು. ಆತ ತನ್ನಿಬ್ಬರ ಸ್ನೇಹಿತರಿಬ್ಬರನ್ನು ಕರೆದುಕೊಂಡು ಬಂದು ತನ್ನ ಮೇಲೆ ಆಸಿಡ್‌ ದಾಳಿ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಳು.

Murder Case: ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸಂಬಂಧಿಕನ ಥಳಿಸಿ ಕೊಲೆ

ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸಂಬಂಧಿಕನ ಥಳಿಸಿ ಕೊಲೆ

Bengaluru Crime News: ಉಳ್ಳಾಲ ಉಪನಗರದ ಬಳಿ ಹೆಣವಾಗಿ ಬಿದ್ದಿರುವ ಯುವಕನನ್ನು 36 ವರ್ಷದ ಅವಿನಾಶ್​ ಎಂದು ಪೊಲೀಸರು ಗುರುತಿಸಿದ್ದಾರೆ. ಸಂಬಂಧಿಕನಾದ ಕಾರ್ತಿಕ್​ ಮನೆಗೆ ಹೋಗಿದ್ದ ಅವಿನಾಶ್​ ಕುಡಿದು ಗಲಾಟೆ ಮಾಡಿದ್ದ. ಕಾರ್ತಿಕ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.

Harassment: ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

Bengaluru: ದಿನಸಿ ತಂದ ಡೆಲಿವರಿ ಏಜೆಂಟ್, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಬ್ರೆಜಿಲ್ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ.

Crime News: ಅಬ್ಬಾ...ಇದೆಂಥಾ ಕ್ರೌರ್ಯ! ಬರ್ಬರವಾಗಿ ಹೊಟ್ಟೆಗೆ ಚುಚ್ಚಿ, ಯವಕನ ಬೆರಳುಗಳಿಗೆ ಕತ್ತರಿ

ಬರ್ಬರವಾಗಿ ಹೊಟ್ಟೆಗೆ ಚುಚ್ಚಿ, ಯವಕನ ಬೆರಳುಗಳಿಗೆ ಕತ್ತರಿ!

UP Shocker: ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಉತ್ತರ ಪ್ರದೇಶದ ಕಾನ್ಪೂರ್‌ನಲ್ಲಿ ಈ ದುಷ್ಕೃತ್ಯ ನಡೆದಿದೆ. 22 ವರ್ಷದ ಅಭಿಜಿತ್ ಸಿಂಗ್ ಚಂಡೇಲ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತ ಕಾನ್ಪುರ್ ವಿಶ್ವವಿದ್ಯಾಲಯ(Kanpur University)ದಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾನೆ. ಆತ ವಿದ್ಯಾಭ್ಯಾಸದೊಟ್ಟಿಗೆ ಮೆಡಿಕಲ್ ಸ್ಟೋರ್ ನಲ್ಲಿ ಪಾರ್ಟ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮಾಧ್ಯಮ ವರದಿಗಳ ಪ್ರಕಾರ, ಔಷಧದ ಬೆಲೆ ಕುರಿತು ಅಂಗಡಿ ಮಾಲೀಕನೊಂದಿಗೆ ನಡೆದ ಗಲಾಟೆಯಲ್ಲಿ ಅಭಿಜಿತ್ ತಲೆಗೆ ಹಲ್ಲೆ ಮಾಡಲಾಗಿದೆ.

Physical abuse: ಮಹಿಳೆ ಮೇಲೆ ಅತ್ಯಾಚಾರ ಆರೋಪ; ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು

ಮಹಿಳೆ ಮೇಲೆ ಅತ್ಯಾಚಾರ; ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು

Bengaluru News: ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಇನ್ಸ್‌ಪೆಕ್ಟರ್‌ ಸುನೀಲ್‌ ವಿರುದ್ಧ ಕೆಲವು ದಿನಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಡಿಜಿ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಸುನೀಲ್‌ ಅವರನ್ನು ಅಮಾನತು ಮಾಡಲಾಗಿದೆ.

Self Harming: AI ಮೂಲಕ ಸಹೋದರಿಯ ಅಶ್ಲೀಲ ಫೋಟೋ ತೋರಿಸಿ ಬ್ಲಾಕ್‌ಮೇಲ್‌; ಸಹೋದರ ಆತ್ಮಹತ್ಯೆ

ಸಹೋದರಿಯ ಅಶ್ಲೀಲ ಫೋಟೋ ತೋರಿಸಿ ಬ್ಲಾಕ್‌ಮೇಲ್‌; ಸಹೋದರ ಆತ್ಮಹತ್ಯೆ

ತನ್ನ ಮೂವರು ಸಹೋದರಿಯರ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಅಶ್ಲೀಲ ಚಿತ್ರಗಳನ್ನು ಮುಂದಿಟ್ಟು ವ್ಯಕ್ತಿಯೊಬ್ಬ ಬ್ಲಾಕ್‌ಮೇಲ್‌ ಮಾಡಿದ್ದ ಎಂದು ಆರೋಪಿಸಿ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಫರಿಯಾದಾಬಾದ್‌ನಲ್ಲಿ ನಡೆದಿದೆ.

Crime News: ಸೇನಾಧಿಕಾರಿಯಂತೆ ನಟಿಸಿ ವಂಚನೆ; ಮಾದಕ ದ್ರವ್ಯ ಸೇವಿಸಿ ವೈದ್ಯೆಯನ್ನು ಅತ್ಯಾಚಾರ!

ಸೇನಾಧಿಕಾರಿಯಂತೆ ನಟಿಸಿ ವಂಚನೆ, ವೈದ್ಯೆಯ ಮೇಲೆ ಅತ್ಯಾಚಾರ

Delivery Boy Arrested: ವೈದ್ಯೆಯೊಬ್ಬರಿಗೆ ತಾನು ಸೇನಾಧಿಕಾರಿ ಎಂದು ನಂಬಿಸಿ ವಂಚಿಸಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Murder Case: ಜಮೀನು ವ್ಯಾಜ್ಯ; ಬಡ ರೈತನ ಮೇಲೆ ಹಲ್ಲೆ, ಜೀಪ್‌ ಹರಿಸಿ ಕೊಲೆ ಮಾಡಿದ ಬಿಜೆಪಿ ನಾಯಕ

ಬಡ ರೈತನ ಮೇಲೆ ಹಲ್ಲೆ, ಜೀಪ್‌ ಹರಿಸಿ ಕೊಲೆ ಮಾಡಿದ ಬಿಜೆಪಿ ನಾಯಕ

ರೈತನೊಬ್ಬನ ಕೊಲೆ ಮತ್ತು ಆತನ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾದ ಘಟನೆ ಮಧ್ಯಪ್ರದೇಶದ ಫತೇಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ನಡೆದಿದೆ.

Murder Case: ಯುಪಿಎಸ್‌ಸಿ ಆಕಾಂಕ್ಷಿ ಕೊಲೆಗೆ ಟ್ವಿಸ್ಟ್‌; ಮಾಜಿ ಗೆಳೆಯನ ಜೊತೆಗೂಡಿ ಮುಹೂರ್ತ ಇಟ್ಲು ಐನಾತಿ ಲವರ್‌

ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿ ಕೊಲೆಯಾಗಿದ್ದು ಹೇಗೆ?

ಗಾಂಧಿ ವಿಹಾರ್ ಪ್ರದೇಶದ ಫ್ಲಾಟ್‌ನಲ್ಲಿ 32 ವರ್ಷದ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರ ಸುಟ್ಟ ಶವ ಪತ್ತೆಯಾಗಿತ್ತು. ಈ ಘಟನೆ ದೇಶದಾದ್ಯಂತ ಸಂಚಲವನ್ನು ಮೂಡಿಸಿತ್ತು. ಇದೀಗ ಕೊಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅವರ ಲಿವ್-ಇನ್ ಪಾರ್ಟ್ನರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

Harassment: ಪತಿಯ ಚಿತ್ರಹಿಂಸೆಗೆ ಬೇಸತ್ತು 3ನೇ ಮಹಡಿಯಿಂದ ಜಿಗಿದ ಮಹಿಳೆ

ಪತಿಯ ಚಿತ್ರಹಿಂಸೆಗೆ ಬೇಸತ್ತು 3ನೇ ಮಹಡಿಯಿಂದ ಜಿಗಿದ ಮಹಿಳೆ

Bengaluru: ಮಗುವಾದ ಬಳಿಕ ಸಹ ಪ್ರತಿ ದಿನ ಕುಡಿದು ಬಂದು ಎಲ್ಲಿಯಾದರೂ ಹೋಗಿ ಸಾಯಿ ಎಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದಕ್ಕೆ ಬೇಸತ್ತು ತಾನು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಯ ವಿರುದ್ಧ ಬಾಣವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Physical Assault: ಜನಾಂಗೀಯ ದ್ವೇಷ; ಬ್ರಿಟನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬ್ರಿಟನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರ ಪ್ರಕಾರ, ಮಹಿಳೆಯ ಜನಾಂಗೀಯ ದ್ವೇಷದ ಹಿನ್ನಲೆ ಈ ದೌರ್ಜನ್ಯ ನಡೆಸಲಾಗಿದೆ.

Shoot out: ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

Bengaluru: ಅಪರಿಚಿತರ ಗುಂಡಿನ ದಾಳಿಯಿಂದಾಗಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಕೈ, ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಸಲೀಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kurnool Bus Fire: ಕರ್ನೂಲ್ ದುರಂತ; ಬಸ್ ಚಾಲಕನ ಬಂಧನ

20 ಜನರ ಸಾವಿಗೆ ಕಾರಣನಾದ ಬಸ್ ಚಾಲಕನ ಬಂಧನ

ಆಂಧ್ರ ಪ್ರದೇಶದ ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಬಸ್‌ ಬೆಂಕಿ ದುರಂತಕ್ಕೆ ಕಾರಣನಾದ ಖಾಸಗಿ ಬಸ್‌ನ ಚಾಲಕನನ್ನು ಬಂಧಿಸಲಾಗಿದೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಬದಲು ಭಯಭೀತನಾಗಿ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

Gangster Lakhvinder Kumar: ಬಿಷ್ಣೋಯ್ ಗ್ಯಾಂಗ್ ಜೊತೆ ನಂಟು- ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಅಮೆರಿಕದಿಂದ ಗಡಿಪಾರು

ಲಖ್ವಿಂದರ್ ಕುಮಾರ್ ಅಮೆರಿಕದಿಂದ ಗಡಿಪಾರು

Bishnoi Gang: ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ನನ್ನು ಹರಿಯಾಣ ಪೊಲೀಸರು ನವದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಮೆರಿಕದಿಂದ ಗಡಿಪಾರಾದ ಬಳಿಕ ಆತ ದೆಹಲಿಗೆ ಆಗಮಿಸಿದ್ದನು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಲಖ್ವಿಂದರ್ ಕುಮಾರ್ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

Loading...