ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!

ಎದೆ ಬಡಿದುಕೊಂಡು ಗೋಳಾಡಿದ ಮಹಿಳೆಯೇ ಕೊಲೆಗಾತಿ!

Crime News: ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾಗಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರವಾಗಿ ಹತ್ಯೆ ಮಾಡಿದ 16ರ ಅಪ್ರಾಪ್ತ

10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರ ಹತ್ಯೆ

Crime News: 16 ವರ್ಷದ ಬಾಲಕನೊಬ್ಬ ತನ್ನ 10 ವರ್ಷದ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಾಲಾಪರಾಧಿಗಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

ಆಸ್ತಿ ವಿವಾದ: ಸಮಾಜವಾದಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಹಲ್ಲೆ, ವಿಡಿಯೋ ವೈರಲ್!

ಎಸ್‌ಪಿ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಭೀಕರ ಹಲ್ಲೆ!

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾರ್ಗಿ ಪಟೇಲ್ ಅವರ ಮೇಲೆ ಅವರ ನಿವಾಸದಲ್ಲೇ ಹಲ್ಲೆ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ತಿ ಮತ್ತು ವ್ಯಾಪಾರ ಪಾಲುದಾರಿಕೆ ಸಂಬಂಧಿತ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಮಾಜಿ ಬ್ಲಾಕ್ ಪ್ರಮುಖ್ ಪ್ಯಾರೇಲಾಲ್ ಯಾದವ್ ಅವರ ಕುಟುಂಬ ಸದಸ್ಯರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡ ನಾಯಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vijayapur Murder Case: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಜಮೀನು ವಿಚಾರಕ್ಕೆ ಗುಂಡಿಟ್ಟು, ಮಚ್ಚಿನಿಂದ ಕೊಚ್ಚಿ 6 ಮಂದಿಯ ಭೀಕರ ಕೊಲೆ!

ವಿಜಯಪುರದಲ್ಲಿ ಜಮೀನು ವಿಚಾರಕ್ಕೆ 6 ಮಂದಿಯ ಭೀಕರ ಕೊಲೆ!

ವಿಜಯಪುರ ಜಿಲ್ಲೆಯ ಚಡಚಣದ ಗೋವಿಂದಪುರದಲ್ಲಿ ಭೀಕರ ಘಟನೆ ನಡೆದಿದೆ. ಗೊಳಗಿ ಮತ್ತು ನಿರಾಳೆ ಕುಟುಂಬಗಳ ನಡುವೆ ಜಮೀನು ವಿವಾದವಿತ್ತು. ಇದಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಗೊಳಗಿ ಕುಟುಂಬದವರು, ಆರು ಮಂದಿಯನ್ನು ಭೀಕರವಾಗಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಮಗಳ ಕೊಲೆ ಆರೋಪದಲ್ಲಿ ಸಿಲುಕಿದ್ದ ತಂದೆ, ಮಗ ಜೈಲು ಪಾಲು; ಜೀವಂತವಾಗಿ ಮರಳಿ ಬಂದ ಯುವತಿ!

ಸಾವನ್ನಪ್ಪಿದ್ದ ಯುವತಿ ಜೀವಂತವಾಗಿ ವಾಪಸ್!

ಮಧ್ಯಪ್ರದೇಶದ ನಾಪತ್ತೆಯಾಗಿದ್ದ ಯುವತಿ ಶಿವಾನಿ, ಕೊಲೆಯಾಗಿದ್ದಾಳೆ ಎಂದು ಭಾವಿಸಿ ಆಕೆಯ ತಂದೆ ಮತ್ತು ಸಹೋದರರನ್ನು ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ಪತ್ತೆಯಾದ ತಲೆಯಿಲ್ಲದ ಸುಟ್ಟ ಶವವನ್ನು ಯಾವುದೇ ಖಚಿತ ಪುರಾವೆಗಳಿಲ್ಲದೆ ಶಿವಾನಿಯದ್ದೆಂದು ಗುರುತಿಸಲಾಗಿತ್ತು. ಆದರೆ 22 ದಿನಗಳ ಬಳಿಕ ಶಿವಾನಿ ಜೀವಂತವಾಗಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಇದೀಗ ಆ ಶವ ಯಾರದ್ದು ಎಂಬ ಪ್ರಶ್ನೆ ಪೊಲೀಸರ ಮುಂದಿದೆ.

ಐಟಿ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವು

ಸಿಡಿಲು ಬಡಿದು ಬೆಂಗಳೂರು ಟೆಕ್ಕಿ ಸಾವು

ಲಕ್ಷಾಂತರ ರೂಪಾಯಿ ಆದಾಯ ಹೊಂದಿದ್ದ ಕಾರ್ಪೊರೇಟ್ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ ರೋಷನ್ ಬಾಲಕೃಷ್ಣ ಮೃತರು. ಐಟಿ ವಲಯದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ತ್ಯಜಿಸಿ ಕೃಷಿ ವಲಯಕ್ಕೆ ಕಾಲಿಟ್ಟಿದ್ದರು.

ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ

ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು

ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಎಸಿ ಸ್ಪೋಟಗೊಂಡು ಮಾಜಿ ಐಎಎಸ್ ಅಧಿಕಾರಿ ಸಾವನಪ್ಪಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದೆ. ಮಾಜಿ ಐಎಎಸ್ ಅಧಿಕಾರಿ ಮತ್ತು ಭಾರತ ಸ್ಪರ್ಧಾ ಆಯೋಗದ (ಸಿಸಿಐ) ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಮೃತರು.

ಪಾಕಿಸ್ತಾನ ಮೂಲದ ಭಯೋತ್ಪಾದರಿಂದ ಹಲವೆಡೆ ದಾಳಿಗೆ ಸಂಚು: ಉತ್ತರ ಪ್ರದೇಶದಲ್ಲಿ ನಾಲ್ವರ ಬಂಧನ

ವಿವಿಧೆಡೆ ದಾಳಿಗೆ ಸಂಚು: ಉತ್ತರಪ್ರದೇಶದಲ್ಲಿ ನಾಲ್ವರ ಬಂಧನ

ದೇಶದ ವಿವಿಧ ಭಾಗಗಳಲ್ಲಿ ದಾಳಿಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕದ ಕಾರ್ಯನಿರ್ವಹಿಸುತ್ತಿದ್ದ ಈ ನಾಲ್ವರು ಉತ್ತರ ಪ್ರದೇಶ, ದೆಹಲಿ, ಪಂಜಾಬ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು. ಇವರು ಪಾಕಿಸ್ತಾನ ಮೂಲದ ಭಯೋತ್ಪಾದಕರಾದ ​​ಶಹಜಾದ್ ಭಟ್ಟಿ ಮತ್ತು ಅಬಿದ್ ಜಾಟ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ತ್ವಿಶಾ ಶರ್ಮಾ ಸಾವು ಕೇಸ್‌; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ

ತ್ವಿಶಾ ಶರ್ಮಾ ಸಾವು ಕೇಸ್‌; ಸಿಬಿಐನಿಂದ ಅತ್ತೆ ಬಂಧನ

ತ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಆಕೆಯ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ. ಬುಧವಾರ ತಡರಾತ್ರಿ ಮಧ್ಯಪ್ರದೇಶ ಹೈಕೋರ್ಟ್ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿಬಾಲಾ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿತ್ತು.

ಹನಿಟ್ರ್ಯಾಪ್‍ಗೆ ಒಳಗಾಗಿ ಮಿಲಿಟರಿ ಫೋಟೋ ಹಂಚಿಕೊಂಡ ವ್ಯಕ್ತಿ: ಜಮ್ಮು-ಕಾಶ್ಮೀರದಲ್ಲಿ ಆರೋಪಿ ಬಂಧನ

ಮಿಲಿಟರಿ ಫೋಟೋ ಹಂಚಿಕೊಂಡ ಆರೋಪಿಯ ಬಂಧನ

Man shares military photos: ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ 23 ವರ್ಷದ ಯುವಕನನ್ನು ಬಂಧಿಸಲಾಗಿದೆ. ಐಎಸ್ಐ ಆಪರೇಟಿವ್ ಜಮ್ಮು ಪ್ರದೇಶದ ಬಳಿಯ ಸೇನಾ ಬಂಕರ್‌ಗಳು, ರಕ್ಷಣಾ ಸ್ಥಾಪನೆಗಳು ಮತ್ತು ಫ್ಲೈಓವರ್‌ಗಳ ಫೋಟೋಗಳು ಮತ್ತು ವಿಡಿಯೊಗಳನ್ನು ಕಳುಹಿಸಲು ಅವನನ್ನು ಒತ್ತಾಯಿಸಲಾಯಿತು.

CPI Self Harming: ಎಸ್‌ಡಿಆರ್‌ಎಫ್ʼಯ ಸಿಪಿಐ ಶ್ರೀಶೈಲ ಚೌಗಲಾ ನೇಣು ಬಿಗಿದು ಆತ್ಮಹತ್ಯೆ

ಎಸ್‌ಡಿಆರ್‌ಎಫ್ʼಯ ಸಿಪಿಐ ಶ್ರೀಶೈಲ ಚೌಗಲಾ ನೇಣು ಬಿಗಿದು ಆತ್ಮಹತ್ಯೆ

ಚೌಗಲಾ ಅವರು ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದ ವೇಳೆ ಅನುಮಾನಗೊಂಡ ಪತ್ನಿ ತಕ್ಷಣವೇ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮತ್ತೊಂದು ನೀಲಿ ಡ್ರಮ್‌ ಕ್ರೈಂ: ಬೆಳ್ಳಂಬೆಳಗ್ಗೆ ಯುವತಿಯ ಮೃತದೇಹ ಪತ್ತೆ; ಬೆಚ್ಚಿಬಿದ್ದ ಪಂಜಾಬ್‌

ಡ್ರಮ್‌ನಲ್ಲಿ ಯುವತಿಯ ಶವ ಪತ್ತೆ: ಬೆಚ್ಚಿಬಿದ್ದ ಪಂಜಾಬ್‌

Crime News: ಪ್ಲಾಸ್ಟಿಕ್ ಡ್ರಮ್‌ನಲ್ಲಿ ಯುವತಿಯ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಪಟಿಯಾಲಾದ ಅರ್ಬನ್ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ. ಇದು ಕೊಲೆ ಪ್ರಕರಣವಾಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತ ಯುವತಿ 15ರಿಂದ 20 ವರ್ಷ ವಯಸ್ಸಿನವರಾಗಿರಬಹುದು ಎನ್ನಲಾಗಿದೆ. ಆಕೆಯ ಗುರುತು ಇನ್ನೂ ದೃಢಪಟ್ಟಿಲ್ಲ.

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ:  ವಿಡಿಯೊ ಇಲ್ಲಿದೆ

ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ

Attack on ED officials: ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯನ್ನು ಶೋಧಿಸಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಹೈಡ್ರಾಮವೇ ನಡೆದಿದೆ. ಪಿಣರಾಯಿ ಅವರ ಬೆಂಬಲಿಗರು ದಾಳಿ ನಡೆಸಿದ್ದು,ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಜನಸಮೂಹವು ತನಿಖಾ ಸಂಸ್ಥೆಯ ಬಿಳಿ ಎಸ್‌ಯುವಿ ಕಾರನ್ನು ಸುತ್ತುವರೆದು ಅದರ ವಿಂಡ್ ಷೀಲ್ಡ್ ಅನ್ನು ಪುಡಿ ಮಾಡಿದೆ.

ಸೌಭಾಗ್ಯವತಿ ಭವ ಎಂದು ಮೆಹಂದಿಯಲ್ಲಿ ಬರೆಸಿಕೊಂಡವಳು ಮದುವೆಯಾದ ಆರು ತಿಂಗಳಲ್ಲೇ ನೇಣಿಗೆ ಶರಣು: ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ

ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ನೇಣಿಗೆ ಶರಣು

Dowry allegations: ಅದ್ಧೂರಿಯಾಗಿ ಮದುವೆಯಾದ ಕೇವಲ ಆರೇ ತಿಂಗಳಿಗೆ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನವವಿವಾಹಿತೆ ಪತ್ತೆಯಾಗಿದ್ದಾಳೆ. 26 ವರ್ಷದ ಶ್ವೇತಾ ಸಿಂಗ್ ಮೃತ ದುರ್ದೈವಿ. ಉತ್ತರ ಪ್ರದೇಶದ ಲಖನೌದಲ್ಲಿ ಘಟನೆ ನಡೆದಿದೆ. ಇದೊಂದು ಪೂರ್ವ ಯೋಜಿತ ಕೊಲೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಬೊಲೆರೋಗೆ ಲಾರಿ ಡಿಕ್ಕಿಯಾಗಿ ಐವರ ದುರ್ಮರಣ

ಚಿತ್ರದುರ್ಗದಲ್ಲಿ ಬೊಲೆರೋಗೆ ಲಾರಿ ಡಿಕ್ಕಿಯಾಗಿ ಐವರ ದುರ್ಮರಣ

Chitradurga News: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೈರಾಪುರ ಬಳಿ ಭೀಕರ ಅಪಘಾತ ನಡೆದಿದೆ. ಲಾರಿ ಡಿಕ್ಕಿಯಾದ ಪರಿಣಾಮ ಬೊಲೆರೋ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಪುಲ್ವಾಮಾ ದಾಳಿ ಉಗ್ರ ಎಕೆ-47 ಹಿಡಿದ ವಿಡಿಯೋ ವೈರಲ್; ‘ಪ್ರಾಂಶುಪಾಲ’ ಎಂಬ ಪಾಕ್ ವಾದ ನುಚ್ಚುನೂರು!

ಪಿಒಕೆಯಲ್ಲಿ ಐಎಸ್‌ಐ ಬೆಂಬಲದ ಉಗ್ರ ಜಾಲ ಬಹಿರಂಗ..!

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಹಮ್ಜಾ ಬುರ್ಹಾನ್ ಹತ್ಯೆಯಾಗುವ ಕೆಲವೇ ದಿನಗಳ ಮೊದಲು ಎಕೆ-47 ಹಿಡಿದಿರುವ ವಿಡಿಯೋ ಬಹಿರಂಗವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಐಎಸ್‌ಐ ಬೆಂಬಲದೊಂದಿಗೆ ಆತ ಕಾರ್ಯನಿರ್ವಹಿಸುತ್ತಿದ್ದ ಎನ್ನುವ ಆರೋಪಗಳಿಗೆ ಈ ವಿಡಿಯೋ ಮತ್ತಷ್ಟು ಬಲ ನೀಡಿದೆ. ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಹಲವಾರು ಪಾಕಿಸ್ತಾನ ಮೂಲದ ಉಗ್ರ ನಾಯಕರು ಭಾಗವಹಿಸಿದ್ದರೆಂಬ ಸಂಗತಿ ಕೂಡ ಚರ್ಚೆಗೆ ಕಾರಣವಾಗಿದೆ.

ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಮತ್ತೆ ಪರೋಲ್; 2017ರ ಅತ್ಯಾಚಾರ ಶಿಕ್ಷೆಯ ಬಳಿಕ ಇದು 16ನೇ ಬಾರಿ ಬಿಡುಗಡೆ!

ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಮತ್ತೆ 30 ದಿನಗಳ ಪರೋಲ್..!

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ 30 ದಿನಗಳ ಪರೋಲ್ ಮಂಜೂರಾಗಿದೆ. ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಬಿಡುಗಡೆಯಾದ ಅವರು ಸಿರ್ಸಾದ ಡೇರಾ ಪ್ರಧಾನ ಕಚೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚುನಾವಣಾ ಸಮಯದಲ್ಲಿ ಪದೇ ಪದೇ ಪರೋಲ್ ಸಿಗುತ್ತಿರುವುದಕ್ಕೆ ವಿರೋಧ ಪಕ್ಷಗಳು ಹಾಗೂ ಸಿಖ್ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಡ್ರೋನ್‌, ಹೆಲಿಕಾಪ್ಟರ್‌ ಬಳಸಿ ಮೂವರು ಭಯೋತ್ಪಾದಕರಿಗಾಗಿ ರಾಜೌರಿಯಲ್ಲಿ ತೀವ್ರ ಶೋಧ

ಮೂವರು ಭಯೋತ್ಪಾದಕರಿಗಾಗಿ ತೀವ್ರ ಶೋಧ

ಜಮ್ಮು ಮತ್ತು ಕಾಶ್ಮೀರದ ದಟ್ಟವಾದ ಕಾಡಿನಲ್ಲಿ ಸುಮಾರು 56 ಗಂಟೆಗಳ ಕಾಲ ಡ್ರೋನ್‌ ಮತ್ತು ಹೆಲಿಕಾಪ್ಟರ್‌ ಗಳನ್ನು ಬಳಸಿ ಮೂವರು ಭಯೋತ್ಪಾದಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ರೋಮಿಯೋ ಪಡೆಯ ಪಡೆಗಳು, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇರಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಭಯೋತ್ಪಾದಕರು ಮಾತ್ರ ತಪ್ಪಿಸಿಕೊಂಡು ಕುಳಿತಿದ್ದಾರೆ ಎನ್ನಲಾಗಿದೆ.

ಇವನೆಂಥಾ ಅಪ್ಪ?!  ಮಗನನ್ನು ಕೊಂದು ಮೃತದೇಹವನ್ನು ಮನೆಯೊಳಗೆ ಬಚ್ಚಿಟ್ಟ ತಂದೆ

ಮದ್ಯದ ಅಮಲಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ

Lakhimpur Kheri Horror: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಮದ್ಯದ ಅಮಲಿನಲ್ಲಿ ತಂದೆ ಮತ್ತು ಮಗನ ನಡುವೆ ಆರಂಭವಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಂದೆ ದಯಾರಾಮ್ ತನ್ನ 30 ವರ್ಷದ ಮಗ ಮುನೀಶ್‌ನನ್ನು ಮಾರಕಾಸ್ತ್ರದಿಂದ ಹತ್ಯೆ ಮಾಡಿ ಮೃತದೇಹವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಕಲಿ ವಧು, ಅಸಲಿ ವಂಚನೆ! ಸಾಮೂಹಿಕ ವಿವಾಹ ಹಗರಣದಲ್ಲಿ ಮೋಸಹೋದ 42 ಕುಟುಂಬಗಳು

ಸಾಮೂಹಿಕ ವಿವಾಹದ ಹೆಸರಲ್ಲಿ 42 ಕುಟುಂಬಗಳಿಗೆ ಲಕ್ಷಾಂತರ ರುಪಾಯಿ ವಂಚನೆ

ಮಧ್ಯ ಪ್ರದೇಶದ ದೇವಾಸ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸರಿನಲ್ಲಿ 42 ಕುಟುಂಬಗಳಿಗೆ ಭಾರಿ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಗೆ ವಧುಗಳನ್ನು ಒದಗಿಸುವುದಾಗಿ ನಂಬಿಸಿ ಆರೋಪಿಗಳು ಪ್ರತಿ ಕುಟುಂಬದಿಂದ 12,000ರಿಂದ 25,000 ರುಪಾಯಿವರೆಗೆ ಸಂಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳಿಂದ ಯುವತಿಯರ ಫೋಟೊ ಡೌನ್‌ಲೋಡ್‌ ಮಾಡಿ ಅನಾಥಾಶ್ರಮದ ಹುಡುಗಿಯರೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಮದುವೆ ದಿನ ವರರು ಮತ್ತು ಕುಟುಂಬಸ್ಥರು ಮಂಟಪಕ್ಕೆ ಬಂದಾಗ ಯಾವುದೇ ವ್ಯವಸ್ಥೆ, ವಧುಗಳೇ ಕಾಣಿಸದಿದ್ದರಿಂದ ವಂಚನೆ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಬೀದರ್ ಪಶು ವೈದ್ಯಕೀಯ ವಿವಿಯ 45 ಕೋಟಿ ರೂ. ಹಗರಣ; ಮಾಜಿ ಉಪಕುಲಪತಿ ಸೇರಿ 6 ಮಂದಿ ಅರೆಸ್ಟ್‌

ಬೀದರ್ ಪಶು ವಿವಿ ಹಗರಣ; ಮಾಜಿ ಉಪಕುಲಪತಿ ಸೇರಿ 6 ಮಂದಿ ಅರೆಸ್ಟ್‌

Bidar Veterinary University scandal: 2017-18ರ ಅವಧಿಯಲ್ಲಿ ಬೀದರ್‌ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಾಮಗ್ರಿ ಖರೀದಿಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂ.ಗೂ ಅಧಿಕ ಹಣ ದರ್ಬಳಕೆ ಮಾಡಲಾಗಿತ್ತು. ಬಳಿಕ 2021ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಆರು ಮಂದಿ ಆರೋಪಿಗಳ ಬಂಧನವಾಗಿದೆ.

ಪ್ರಿಯಕರ, ಸಹೋದರಿಯೊಂದಿಗೆ ಸೇರಿ ಪತಿಗೆ ಸ್ಕೆಚ್‌;  ಚಿತ್ರಹಿಂಸೆ ಕೊಟ್ಟು ಗಂಡನನ್ನೇ ಕೊಂದ ಪತ್ನಿ

ಪತಿಯನ್ನು ಕ್ರೂರವಾಗಿ, ಚಿತ್ರಹಿಂಸೆ ನೀಡಿ ಕೊಂದ ಪತ್ನಿ

Wife kills husband: ಪತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಲ್ಲದೆ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳೆ, ಆಕೆಯ ಪ್ರಿಯಕರ, ಆಕೆಯ ಸಹೋದರಿ ಹಾಗೂ ಮತ್ತೊಬ್ಬ ಸಹಚರನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಅನೈತಿಕ ಸಂಬಂಧ ಶಂಕೆ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ

ಅನೈತಿಕ ಸಂಬಂಧದ ಅನುಮಾನ: ಪತ್ನಿ ಮಾಡಿದ್ದೇನು ಗೊತ್ತೇ?

ರಾತ್ರಿ ಒಟ್ಟಿಗೆ ಊಟ ಮಾಡಿ ನೆಮ್ಮದಿಯಿಂದ ಮಲಗಿದ್ದ ಪತಿಯ ಖಾಸಗಿ ಅಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿದ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಪತಿಗೆ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿರುವ ಅನುಮಾನದಿಂದ ಪತ್ನಿ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ಪತಿ ಪತ್ನಿಯ ನಡುವೆ ಪದೇ ಪದೇ ಜಗಳಗಳು ಕೂಡ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ: ಆರೋಪಿಗಳಿಂದ ಉತ್ತರ ಪ್ರದೇಶ ವಿಧಾನಸಭೆ ಮೇಲೆ ದಾಳಿಗೆ ಯೋಜನೆ

ಉತ್ತರ ಪ್ರದೇಶ ವಿಧಾನಸಭೆ ಮೇಲೆ ದಾಳಿಗೆ ಯೋಜನೆ

ಕಳೆದ ವರ್ಷ ನವೆಂಬರ್ 10ರಂದು ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ದಾಳಿ ಪ್ರಕರಣದ ಆರೋಪಿಗಳು ಉತ್ತರ ಪ್ರದೇಶದ ವಿಧಾನ ಸಭೆ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಲು ಯೋಜನೆ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

Loading...