ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

MLC Naseer Ahmed: ಸಾವಿರಾರು ಕೋಟಿ ಸಾಲದ ಹಿನ್ನೆಲೆ ಕಾಂಗ್ರೆಸ್ ನಾಯಕ ನಸೀರ್ ಅಹ್ಮದ್ 'ದಿವಾಳಿ'; ಎಂಎಲ್‌ಸಿ  ಸ್ಥಾನಕ್ಕೆ ಕುತ್ತು!

ಕಾಂಗ್ರೆಸ್ ನಾಯಕ ನಸೀರ್ ಅಹ್ಮದ್ ʼದಿವಾಳಿʼ; ಎಂಎಲ್‌ಸಿ ಸ್ಥಾನಕ್ಕೆ ಕುತ್ತು!

ಬೆಂಗಳೂರಿನಲ್ಲಿರುವ ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು ಪಡೆದಿದ್ದ 1,454 ಕೋಟಿಗೂ ಅಧಿಕ ಮೊತ್ತದ ಬಾಕಿ ಸಾಲದ ವಸೂಲಾತಿಗಾಗಿ ಕಳೆದ 2019ರಿಂದಲೇ ಈ ಕಾನೂನು ಪ್ರಕ್ರಿಯೆ ನಡೆದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳ ಒಕ್ಕೂಟ 2019ರಿಂದಲೇ ಕಾನೂನು ಪ್ರಕ್ರಿಯೆ ನಡೆಸಿತ್ತು.

ಮಾವಿನ ಹಣ್ಣು ತಿಂದು ಇಬ್ಬರು ಸಹೋದರಿಯರು ಸಾವು; ಕುಟುಂಬಸ್ಥರು ಅಸ್ವಸ್ಥ

ಮಾವಿನ ಹಣ್ಣು ತಿಂದು ಇಬ್ಬರು ಸಹೋದರಿಯರು ಸಾವು

ಮಾವಿನ ಹಣ್ಣನ್ನು ತಿಂದ ಬಳಿಕ ಸಹೋದರಿಯರಿಬ್ಬರು ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ ನಡೆದಿದೆ. ಮನೆಯಲ್ಲಿ ಊಟದ ಬಳಿಕ ಮಾವಿನ ಹಣ್ಣು ತಿಂದ ಇಬ್ಬರು ಸಹೋದರಿಯರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋಟ್ಯಂತರ ರುಪಾಯಿ ನಗದು, ಮದ್ಯದ ಬಾಟಲಿ, ಕಾಂಡೋ, ಬೆಡ್‌ರೂಮ್: ಇದು ಯಾವುದೇ ಲಾಡ್ಜ್‌ ಅಲ್ಲ; ಪಶ್ಚಿಮ ಬಂಗಾಳದ ಶಾಲೆಯಲ್ಲಿ ಕಂಡುಬಂದ ದೃಶ್ಯ!

ಶಾಲೆಯಲ್ಲಿ ಕೋಟಿ ರುಪಾಯಿ ನಗದು, ಮದ್ಯದ ಬಾಟಲಿ

ಪಶ್ಚಿಮ ಬಂಗಾಳದ ಕಾಂಚ್ರಾಪಾರಾದ ಖಾಸಗಿ ಶಾಲೆಯೊಂದರಿಂದ ಪೊಲೀಸರು 1.77 ಕೋಟಿ ರುಪಾಯಿ ನಗದು, ಮದ್ಯದ ಬಾಟಲಿಗಳು ಹಾಗೂ ಬೆಡ್‌ರೂಮ್ ಮಾದರಿಯ ಕೋಣೆಯನ್ನು ಪತ್ತೆ ಹಚ್ಚಿದ್ದಾರೆ. ಹಣಕಾಸು ಅಕ್ರಮದ ದೂರಿನ ಆಧಾರದ ಮೇಲೆ ನಡೆದ ದಾಳಿಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಪ್ರಕರಣ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.

ನಿವೃತಿಯ ಅಂಚಿನಲ್ಲಿರುವ ವಿಶೇಷ ಚೇತನ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ವಿಶೇಷ ಚೇತನ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ವಿಶೇಷ ಚೇತನ ಶಿಕ್ಷಕನೊಬ್ಬ ಶಾಲಾ ಕ್ಯಾಂಪಸ್ ನಲ್ಲಿ ಸುಮಾರು ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಜರಾತ್ ನ ಉಪ್ಲೆಟಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪ್ರಕರಣದ ಆರೋಪಿ ಶಿಕ್ಷಕ ದೇವಾನಂದ್ ಬೇರಾ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಪುರದಲ್ಲಿ ಉದ್ವಿಗ್ನತೆ;  ಅಪಹರಿಸಿ 3 ತಿಂಗಳ ನಂತರ ಪತ್ತೆಯಾಯ್ತು 6 ನಾಗಾ ಒತ್ತೆಯಾಳುಗಳ ಮೃತದೇಹ!

6 ನಾಗಾ ಒತ್ತೆಯಾಳುಗಳ ಮೃತದೇಹಗಳು ಪತ್ತೆ

Six Naga Hostages Found Dead: ಮಣಿಪುರ ಪೊಲೀಸ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 450 ಸಿಬ್ಬಂದಿ, ಸ್ನಿಫರ್ ಡಾಗ್ಸ್ ಮತ್ತು ಫೋರೆನ್ಸಿಕ್ ತಜ್ಞ ತಂಡಗಳ ಸಹಾಯದಿಂದ ಸುಮಾರು 24 ಗಂಟೆಗಳ ಕಾಲ ನಿರಂತರ ಶೋಧ ಕಾರ್ಯಾಚರಣೆಯ ನಂತರ, ಆರು ಜನರ ಮೃತದೇಹಗಳನ್ನು ಇಂದು (ಜೂ.11) ಮಧ್ಯಾಹ್ನ ವಶಪಡಿಸಿಕೊಳ್ಳಲಾಗಿದೆ.

Bengaluru theft case: ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ರೂ. ಕಳ್ಳತನ; ನೇಪಾಳ ಮೂಲದ ಚಾಲಾಕಿ ದಂಪತಿ ಅರೆಸ್ಟ್

ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ಕಳ್ಳತನ; ದಂಪತಿ ಅರೆಸ್ಟ್

ಬೆಂಗಳೂರಿನ ಅಮೃತಹಳ್ಳಿಯ ಅರ್ಕಾವತಿ ಲೇಔಟ್‌ನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ನಗದು ಕಳ್ಳತನವಾಗಿತ್ತು. ಮನೆಕೆಲಸಕ್ಕೆ ಸೇರಿದವರೇ ಕೃತ್ಯ ಎಸಗಿದ್ದು, ಪರಾರಿಯಾಗಲು ಯತ್ನಿಸುತ್ತಿದ್ದ ನೇಪಾಳ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು ವಶಕ್ಕೆ ಪಡೆಯಲಾಗಿದೆ.

ಎಂಜಿನಿಯರ್ ಅಲ್ಲ ಕುಬೇರ! ಎಸಿಬಿ ದಾಳಿಯಲ್ಲಿ 18 ಕೋಟಿ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಎಂಜಿನಿಯರ್ ಆಸ್ತಿ 18 ಕೋಟಿ ರುಪಾಯಿ!

Illegal Assets Case: ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಎಂಜಿನಿಯರ್-ಇನ್-ಚೀಫ್ ಮೋಹನ್ ನಾಯಕ್ ಜರುಪ್ಲಾ ಅವರನ್ನು ತೆಲಂಗಾಣ ಎಸಿಬಿ ಬಂಧಿಸಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ದಾಳಿಯ ಸಮಯದಲ್ಲಿ, ತನಿಖಾಧಿಕಾರಿಗಳು ಹೆಚ್ಚಿನ ಸಂಖ್ಯೆಯ ಸ್ಥಿರ ಮತ್ತು ಚರ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.

ಬಾಲಕ ಸಿಗರೇಟ್ ಸೇದಿದ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್; 120 ಗ್ರಾಂ ಚಿನ್ನ ವಸೂಲಿ ಮಾಡಿದ ಖದೀಮರು!

ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ವಸೂಲಿ!

Koppal Blackmail Case: ತಾನು ಸಿಗರೇಟ್‌ ಸೇದುವ ವಿಚಾರ ಮನೆಯಲ್ಲಿ ತಿಳಿದರೆ ತಂದೆ ಹೊಡೆಯುತ್ತಾರೆ ಎಂಬ ಭಯದಿಂದ ಕಂಗಾಲಾದ ಬಾಲಕ, ಆರೋಪಿಗಳ ಬ್ಲ್ಯಾಕ್‌ಮೇಲ್‌ಗೆ ಹೆದರಿ, ಚಿನ್ನಾಭರಣಗಳನ್ನು ಕೊಟ್ಟಿದ್ದಾನೆ. ಮನೆಯಲ್ಲಿ ಚಿನ್ನದ ಒಡವೆಗಳು ನಾಪತ್ತೆ ಆಗಿರೋದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Nippani News: ನಿಪ್ಪಾಣಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ; ಮಾರಕಾಸ್ತ್ರ ವಶಕ್ಕೆ

ನಿಪ್ಪಾಣಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ

Nippani News: ನಿಪ್ಪಾಣಿ ನಗರದ ವಿವಿಧ ಭಾಗಗಳಲ್ಲಿರುವ ರೌಡಿಶೀಟರ್‌ಗಳ ವಿರುದ್ಧ ನಿಪ್ಪಾಣಿ ಪೊಲೀಸರು ಬುಧವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ, 10 ರಿಂದ 15 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

Bidar News: ಹೆಡ್‌ ಮಾಸ್ಟರ್‌ ಕಿರುಕುಳ ಆರೋಪ; ಶಾಲೆಯ 4ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನಲ್ಲಿ ಶಾಲೆಯ 4ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನ ಪ್ರತಾಪ್ ನಗರದ ಬಳಿ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕಿರುಕುಳ ನೀಡಿದ್ದಾರೆ ಎಂದು 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂಂಚ್‌ನಲ್ಲಿ ಗಡಿ ದಾಟಿ ಬಂದ ಪಿಒಕೆಯ ಅಪ್ರಾಪ್ತನ ಬಂಧನ

ಭಾರತದ ಗಡಿ ದಾಟಿ ಬಂದ ಪಿಒಕೆಯ ಅಪ್ರಾಪ್ತ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಪ್ರಾಪ್ತನೊಬ್ಬ ಪೂಂಚ್‌ನಲ್ಲಿ ಭಾರತದ ಗಡಿಯಲ್ಲಿ ಒಳನುಸುಳಿ ಬಂದಿದ್ದು, ಆತನನ್ನು ಸೂಕ್ಷ್ಮ ಗಡಿ ವಲಯದಲ್ಲಿ ಭದ್ರತಾ ಪಡೆಗಳು ಬಂಧಿಸಿದೆ. ಅಪ್ರಾಪ್ತ ಯುವಕನನ್ನು ಪಿಒಕೆಯ ಟೆಟ್ರಿನೋಟ್ ನಿವಾಸಿ ಮೊಹಮ್ಮದ್ ಶರೀಫ್ ಅವರ ಮಗ ಜಾವಿದ್ ಅಲಿ ಎಂದು ಗುರುತಿಸಲಾಗಿದೆ. ಗಡಿ ದಾಟಿ ಬಂದ ಕಾರಣವನ್ನು ತಿಳಿಯಲು ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ವಿಧಾನಸೌಧದ ಬಳಿ ಆತ್ಮಹತ್ಯೆಗೆ ಯತ್ನಿಸಿದ ರೈತ

ರೈತನೊಬ್ಬ ಮಂಗಳವಾರ ಮಧ್ಯಾಹ್ನ ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಹಳಿಯೂರು ಗ್ರಾಮದ ವಿಶು ಕುಮಾರ್ ಎಂಬುವವರು ವಿಧಾನಸೌಧ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Bike Accident: ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಬಾಲಕ ದಾರುಣ ಸಾವು.!

ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಬಾಲಕ ದಾರುಣ ಸಾವು.!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಅರವಿಂದ್ (17) ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಪೇರೆಸಂದ್ರದಿಂದ ಸ್ವಗ್ರಾಮ ಸಾದಲಿಯತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Road Accident: ಅವಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಪ್ರಕಾಶ್ ಸಾವು

ಕಾರು ಬೈಕ್ ಢಿಕ್ಕಿ: ಬಿಲ್ ಕಲೆಕ್ಟರ್ ಆಗಿದ್ದ ಪ್ರಕಾಶ್ ಸಾವು

ಆವಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಪ್ರಕಾಶ್ ಮಧ್ಯಾಹ್ನ ಊಟದ ಸಮಯ ದಲ್ಲಿ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದ ವೇಳೆ ಹರಿಹರಪುರ ಗ್ರಾಮದ ಗೇಟ್ ಸಮೀಪ ಎದುರುಗಡೆ ಯಿಂದ ಬಂದ ಹಾಸನ ಮೂಲದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿಗೂ ಭಾರೀ ಹಾನಿಯಾಗಿದೆ ಎನ್ನಲಾಗಿದೆ.

Bengaluru Digital Arrest: ಬೆಂಗಳೂರಿನ ವೃದ್ಧೆಗೆ ಡಿಜಿಟಲ್‌ ಅರೆಸ್ಟ್; 98.40 ಲಕ್ಷ ದೋಚಿದ ಸೈಬರ್ ವಂಚಕರು!

ವೃದ್ಧೆಗೆ ಡಿಜಿಟಲ್‌ ಅರೆಸ್ಟ್; 98.40 ಲಕ್ಷ ದೋಚಿದ ಸೈಬರ್ ವಂಚಕರು!

ದೆಹಲಿಯ ಪೊಲೀಸ್ ಅಧಿಕಾರಿ ಎಂದು ವೃದ್ಧೆಗೆ ಕರೆ ಮಾಡಿದ ಸೈಬರ್ ಖದೀಮ,‌ ನಿಮ್ಮ ಖಾತೆಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವಂಚಿಸಿದ್ದಾನೆ. ವೃದ್ಧೆಯಿಂದ ಹಂತ ಹಂತವಾಗಿ 98.40 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿ ಆತ್ಮಹತ್ಯೆ ಯತ್ನ : 8 ನಿಮಿಷಗಳಲ್ಲಿ ಯುವಕನ ಜೀವ ಉಳಿಸಿದ ಪೊಲೀಸರು

ಇನ್‌ಸ್ಟಾಗ್ರಾಂ ಅಲರ್ಟ್‌ನಿಂದ ಉಳಿದ ಯುವಕನ ಜೀವ..!

ಮೀರತ್‌ನ 25 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಅನುಮಾನಾಸ್ಪದ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಮೆಟಾ ನೀಡಿದ ಆತ್ಮಹತ್ಯೆ ಎಚ್ಚರಿಕೆಯ ಆಧಾರದ ಮೇಲೆ ಪೊಲೀಸರು ಕೇವಲ 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಆತನ ಜೀವ ಉಳಿಸಿದ್ದಾರೆ. ಪ್ರೇಮ ಸಂಬಂಧ ಮುರಿದ ಕಾರಣ ಖಿನ್ನತೆಗೆ ಒಳಗಾಗಿದ್ದ ಯುವಕನಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡಲಾಗಿದೆ.

Mangaluru Honey Trap Case: ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ 2.77 ಕೋಟಿ ವಸೂಲಿ; ಮಂಗಳೂರಿನಲ್ಲಿ ಕಾಂಗ್ರೆಸ್‌ ಮುಖಂಡ ಸೇರಿ ಇಬ್ಬರು ಅರೆಸ್ಟ್‌

ಉದ್ಯಮಿಗೆ ಹನಿಟ್ರ್ಯಾಪ್; ಕಾಂಗ್ರೆಸ್‌ ಮುಖಂಡ ಸೇರಿ ಇಬ್ಬರು ಅರೆಸ್ಟ್‌

ಅಶ್ಲೀಲ ಫೋಟೊ-ವಿಡಿಯೊಗಳನ್ನು ಪತ್ನಿಗೆ ತೋರಿಸುವುದಾಗಿ ಉದ್ಯಮಿಗೆ ಬ್ಲ್ಯಾಕ್​ ಮೇಲ್ ​ ಮಾಡಿದ್ದ ಆರೋಪಿಗಳು, ಸೂಸೈಡ್​ ಕಥೆ ಕಟ್ಟಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವರದಕ್ಷಿಣೆ, ಮೆಹರ್ ಮೊತ್ತಕ್ಕಾಗಿ ಜಗಳ; ಹೃದಯಾಘಾತದಿಂದ ವಧುವಿನ ತಂದೆ ಸಾವು, ಸೂತಕವಾಗಿ ಬದಲಾದ ಮದುವೆ ಸಂಭ್ರಮ

ವಧುವಿನ ತಂದೆ ಸಾವು; ಸೂತಕವಾಗಿ ಬದಲಾಯಿತು ಮದುವೆ ಸಂಭ್ರಮ

ಅವರೆಲ್ಲರೂ ವಿವಾಹದ ಸಂಭ್ರಮದಲ್ಲಿದ್ದರು. ಇನ್ನು ಕ್ಷಣ ಮಾತ್ರದಲ್ಲಿ ಎಲ್ಲಾ ವಿಧಿ ವಿಧಾನಗಳು ನಡೆದು ಹೋಗಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ವರದಕ್ಷಿಣೆ, ಮೆಹೆರ್ ಮೊತ್ತಕ್ಕಾಗಿ ನಡೆದ ಜಗಳದಿಂದ ಮದುವೆಯೇ ನಿಂತು ಹೋಯಿತು. ವಧುವಿನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿವಾಹದ ಸಂಭ್ರಮಕ್ಕೆ ಕ್ಷಣ ಮಾತ್ರದಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಘಟನೆ ಉತ್ತರಾಖಂಡದ ಖತಿಮಾ ಪಟ್ಟಣದ ಇಸ್ಲಾಂನಗರದಲ್ಲಿ ನಡೆದಿದೆ.

ಮೇಲ್ಜಾತಿಯ ಬಾಲಕಿಯೊಂದಿಗೆ ಸ್ನೇಹ; ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಪಾಪಿಗಳು!

ಜಾತಿ ದ್ವೇಷಕ್ಕೆ ಮತ್ತೊಂದು ಬಲಿ; 18 ವರ್ಷದ ದಲಿತ ಯುವಕನ ಕೊಲೆ

ಉತ್ತರಾಖಂಡದ ತೆಹ್ರಿ ಗಢ್ವಾಲ್ ಜಿಲ್ಲೆಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಹೊಂದಿದ್ದ ಕಾರಣಕ್ಕೆ 18 ವರ್ಷದ ದಲಿತ ಯುವಕ ಕೇತನ್ ಲಾಲ್‌ನನ್ನು ಥಳಿಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಆತನ ಸ್ನೇಹಿತ ದಿವಾಕರ್ ದಿಮ್ರಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Davanagere News: ದಾವಣಗೆರೆಯಲ್ಲಿ ನೀಚ ಕೃತ್ಯ; ಪತಿಯೊಂದಿಗೆ ಜಗಳವಾಡಿ ತವರಿಗೆ ಹೋಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

ಪತಿಯೊಂದಿಗೆ ಜಗಳವಾಡಿ ಹೋಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಂದಿ ಬೇಟೆಗೆ ತೆರಳಿದ್ದ ಯುವಕರು, ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯನ್ನು ಗಮನಿಸಿ, ಸುಸ್ತಾಗಿದಿಯಾ ಕೂಲ್ ಡ್ರಿಂಕ್ಸ್ ಕುಡಿ ಅಕ್ಕ ಎಂದು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಬಟ್ಟೆ ವ್ಯಾಪಾರದಲ್ಲಿ ನಷ್ಟ; ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು

ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು

ಮಂಡ್ಯದ ನೆಹರು ನಗರದಲ್ಲಿ ಘಟನೆ ನಡೆದಿದೆ. ವ್ಯಾಪಾರದಲ್ಲಿ ನಷ್ಟದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಪಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿವಾಹಪೂರ್ವ ಒಪ್ಪಂದದ ಲೈಂಗಿಕ ಸಂಬಂಧ  ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ: ಸುಪ್ರೀಂ ಕೋರ್ಟ್

ವಿವಾಹಪೂರ್ವ ಸಂಬಂಧ ವ್ಯಕ್ತಿತ್ವ ನಿರ್ಧರಿಸುವುದಿಲ್ಲ: ಸುಪ್ರೀಂ ಕೋರ್ಟ್

ವಿವಾಹ ಪೂರ್ವದಲ್ಲಿ ಅವಿವಾಹಿತ ವಯಸ್ಕರ ನಡುವೆ ನಡೆಯಬಹುದಾದ ಒಪ್ಪಿಗೆಯ ಲೈಂಗಿಕ ಸಂಬಂಧವು ಅವರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾಲ ಸಾಕಷ್ಟು ಬದಲಾಗಿದೆ. ಯಾವುದೋ ಕಾರಣಕ್ಕೆ ಅವರಿಬ್ಬರಿಗೆ ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ವಂಚನೆ ಎನ್ನುವುದು ಸರಿಯಲ್ಲ ಎಂದು ನ್ಯಾಯಾಯಲಯ ಹೇಳಿದೆ.

ನಿನ್ನನ್ನು ಮುಗಿಸುವ ಸಮಯ ಬಂದಿದೆ”: ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ಉಡುಪಿ ವ್ಯಕ್ತಿಯ ಬಂಧನ

ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ಉಡುಪಿ ವ್ಯಕ್ತಿಯ ಬಂಧನ

Man Arrested for Threatening Home Minister: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿ ಫೇಸ್‌ಬುಕ್ ಕಾಮೆಂಟ್ ಹಾಕಿದ್ದ 48 ವರ್ಷದ ವ್ಯಕ್ತಿಯೊಬ್ಬನನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ನಿಟ್ಟೆ ಗ್ರಾಮದ ನಿವಾಸಿಯೊಬ್ಬರು ಈ ಪೋಸ್ಟ್ ಅನ್ನು ಗಮನಿಸಿ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

Self Harming in Bus: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ತಾಲ್ಲೂಕಿನ ಹಾಲಗಾನಹಳ್ಳಿ ಗ್ರಾಮದ ನಿವಾಸಿಯಾಗಿರುವ ನಿರ್ಮಲಾ ದೇವನಹಳ್ಳಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿದ ಚಿಕ್ಕಬಳ್ಳಾಪುರಕ್ಕೆ ತೆರಳುವ ಬಸ್ ಹತ್ತಿದ್ದರು. ಬಸ್‌ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ನಿರ್ವಾಹಕ ನಿಗೆ ವಿಷಯ ತಿಲಿಸಿದ್ದಾರೆ. ಈ ವೇಳೆ 48 ಮಂದಿ ಪ್ರಯಾಣಿಕರಿದ್ದ ಬಸ್ ಸಮೇತ ಚಾಲಕ ಹಾಗೂ ನಿರ್ವಾಹಕ ಖಾಸಗಿ ಆಸ್ಪತ್ರೆಗೆ ತೆರಳಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

Loading...