ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vitla Pindi Mahotsav: ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ, ಲೀಲೋತ್ಸವ ಸಂಭ್ರಮ; ಬಗೆ ಬಗೆಯ ವೇಷ, ಹುಲಿ ಕುಣಿತದ ವೈಭವಕ್ಕೆ ಮಾರುಹೋದ ಭಕ್ತರು

ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನೆರವೇರಿದೆ. ಉಡುಪಿ ಮಠದಲ್ಲಿ ಸೆಪ್ಟೆಂಬರ್‌ 14ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿದರೆ, ಸೆಪ್ಟೆಂಬರ್‌ 15ರಂದು ಅದ್ಧೂರಿಯಾಗಿ ವಿಟ್ಲಪಿಂಡಿ ಆಚರಿಸಲಾಯಿತು. ಈ ವೇಳೆ ಹುಲಿ ಕುಣಿತ, ವಿವಿಧ ವೇಷಗಳು ನೆರೆದವರ ಮೈರೋಮಾಂಚನಗೊಳಿಸಿತು. ಹೇಗಿತ್ತು ಕೃಷ್ಣನೂರಿನಲ್ಲಿ ಈ ಬಾರಿಯ ಅಷ್ಟಮಿ ವೈಭವ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

1/9

ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆ ಉಡುಪಿ ಕೃಷ್ಣ ಮಠದ ಮುಂಭಾಗ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಿತು.

2/9

ಭಾನುವಾರ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಮಕ್ಕಳೊಂದಿಗೆ ಕೆಲಹೊತ್ತು ಬೆರೆತರು.

3/9

ನೆರೆದ ಭಕ್ತರಿಗೆ ಮಠದಲ್ಲಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಕೃಷ್ಣ ಮಠದ ಸುತ್ತಮುತ್ತ ಮಾಡಲಾದ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. ಸೇವಂತಿಗೆ, ಮಲ್ಲಿಗೆ , ಚೆಂಡು ಹೂ, ಕನಕಾಂಬರ, ತುಳಸಿ ಬಳಸಿ ಅಲಂಕಾರ ಮಾಡಲಾಗಿತ್ತು.

4/9

ಮಠದ ಆವರಣದಲ್ಲಿ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಸಾಹಸ ಪ್ರದರ್ಶನ ರೋಮಾಂಚನಗೊಳಿಸಿತು.

5/9

ಕೃಷ್ಣ ಜಪದೊಂದಿಗೆ, ಭಕ್ತರ ಉದ್ಘೋಷದೊಂದಿಗೆ ಸಾಗಿದ ರಥಯಾತ್ರೆಯನ್ನು ಹಲವರು ಕಣ್ತುಂಬಿಕೊಂಡರು.

6/9

ಇನ್ನು ಉಡುಪಿ ನಗರದ ತುಂಬ ಹುಲಿ, ಯಕ್ಷಗಾನ ವೇಷಧಾರಿಗಳು ಕಂಡು ಬಂದರು. ಹಲವರು ಈ ವೇಷಗಳ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

7/9

ಹುಲಿ ವೇಷಧಾರಿಗಳನ್ನು ಭೇಟಿ ಮಾಡಿ ಸ್ಮಾಮೀಜಿಗಳು ಆಶೀರ್ವದಿಸಿದರು.

8/9

ಅಂಗಡಿ ಮುಗ್ಗಟ್ಟು, ಮನೆಗಳ ಎದುರು, ರಸ್ತೆಗಳಲ್ಲಿ ಬಣ್ಣ ಬಣ್ಣದ ವೇಷಧಾರಿಗಳು ಕಂಡುಬಂದರು. ದ್ವಿಚಕ್ರ ವಾಹನ, ತೆರೆದ ಜೀಪು, ಕಾರುಗಳಲ್ಲಿ ಸಂಚರಿಸಿ ಜನರನ್ನು ರಂಜಿಸಿದರು. ಆ ಮೂಲಕ ಹಬ್ಬಕ್ಕೆ ಇನ್ನಷ್ಟು ಕಳೆ ತುಂಬಿದರು.

9/9

ಇನ್ನು ರಥಬೀದಿ ಪರಿಸರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸರ ಸರ್ಪಗಾವಲು ಕಂಡುಬಂತು. ಗೇಟ್‌ಗಳಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಲಾಗಿತ್ತು. ರಾಜ್ಯ, ದೇಶದ ವಿವಿಧೆಡೆಗಳಿಂದ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.