ವ್ರತ ಮುಗಿದರೂ ಲಕ್ಷ್ಮೀ ಉಳಿಯಲಿ
ಅಷ್ಟಲಕ್ಷ್ಮಿಯನ್ನು ಕೇವಲ ಪೂಜಿಸುವ ಎಂಟು ರೂಪಗಳೆಂದು ನೋಡದೆ, ನಮ್ಮ ಬದುಕು ನಿಜವಾಗಿ ಸಮೃದ್ಧವಾಗಲು ಅಗತ್ಯವಿರುವ ಎಂಟು ಆಯಾಮಗಳೆಂದು ನೋಡಿದರೆ, ಅದರೊಳಗೆ ಆರೋಗ್ಯದ ಒಂದು ಅದ್ಭುತ ಸಂದೇಶ ಕಾಣಿಸುತ್ತದೆ. ಮೊದಲನೆಯದು ಧನಲಕ್ಷ್ಮಿ. ಸಂಪತ್ತು ಜೀವನಕ್ಕೆ ಅಗತ್ಯ. ಆದರೆ ಸಂಪತ್ತಿನ ಅರ್ಥ ಕೇವಲ ಹಣವಲ್ಲ. ನಮ್ಮ ಬದುಕಿಗೆ ಅಗತ್ಯವಾದ ಸಂಪನ್ಮೂಲಗಳು, ಸುರಕ್ಷತೆ, ಜೀವನವನ್ನು ಸುಗಮವಾಗಿ ನಡೆಸುವ ಸಾಮರ್ಥ್ಯ ಇವೆಲ್ಲವೂ ಧನದ ಭಾಗ