ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಕಣಗಳು

Ravi Sajangadde Column: ರುಪಾಯಿ ಮೌಲ್ಯ ಕುಸಿತವನ್ನು ನಿಭಾಯಿಸಬೇಕಿದೆ

ರುಪಾಯಿ ಮೌಲ್ಯ ಕುಸಿತವನ್ನು ನಿಭಾಯಿಸಬೇಕಿದೆ

ಕಳೆದ 6 ದಶಕಗಳಿಂದ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಲೇ ಬಂದಿದೆ. ಕಳೆದೊಂದು ವಾರದಿಂದ ತುಸು ಹೆಚ್ಚೇ ಕುಸಿದು, ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠದರ ಎನ್ನಬಹುದಾದ 91.38ಕ್ಕೆ ಕುಸಿದು, ನಂತರ ಒಂದಿಷ್ಟು ಚೇತರಿಕೆ ಕಂಡು, ಈಗ 90.50ರ ಆಸುಪಾಸಿನಲ್ಲಿದೆ. ಈ ವಿಚಾರವು ಒಂದಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ.

Cherkady Sachhidanand Shetty Column: ರುಪಾಯಿ ಅಪಮೌಲ್ಯ ಮತ್ತು ಜಾಗತಿಕ ನೀತಿಗಳು

ರುಪಾಯಿ ಅಪಮೌಲ್ಯ ಮತ್ತು ಜಾಗತಿಕ ನೀತಿಗಳು

ದೇಶದ ಜಿಡಿಪಿ ಬೆಳವಣಿಗೆ ಭರ್ಜರಿಯಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಜಿಎಸ್‌ಟಿ ಸಂಗ್ರಹ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ಆಂತರಿಕ ಉತ್ಪನ್ನ ಬೆಳವಣಿಗೆಯ ಯಶೋಗಾಥೆ ಮುಂದುವರಿದಿದೆ. ರುಪಾಯಿ ಕುಸಿತವನ್ನು ಆರ್ಥಿಕ ದೃಷ್ಟಿ ಯಿಂದ ನೋಡಿದರಷ್ಟೇ, ಡಾಲರ್ ಎದುರು ರುಪಾಯಿ ಕುಸಿತದ ಅಸಲಿ ಕಾರಣ ಗಳನ್ನು ಕಂಡು ಕೊಳ್ಳಲು ಸಾಧ್ಯ. ಆದರೆ ರುಪಾಯಿ ಮೌಲ್ಯ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ನೋಡ ನೋಡುತ್ತಲೇ ರುಪಾಯಿ ಮೌಲ್ಯ ಕುಸಿದು 91ರ ಗಡಿ ದಾಟಿ ಚಂಚಲತೆ ಯನ್ನು ಪ್ರದರ್ಶಿಸುತ್ತಿದೆ.

Dr Sadhanashree Column: ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಆಯುರ್ವೇದವು ಸ್ವಾಸ್ಥ್ಯವನ್ನು ಕೇವಲ ರೋಗವಿಲ್ಲದ ಸ್ಥಿತಿಯಾಗಿ ಅಷ್ಟೇ ಕಾಣದೆ, ಕಾಲಕ್ಕೆ ಹೊಂದಿ ಕೊಂಡ ಜೀವನಶೈಲಿಯ ಫಲವಾಗಿ ನೋಡುತ್ತದೆ. ದಿನಚರ್ಯೆ ಮತ್ತು ಋತುಚರ್ಯೆಯಂತೆ ರಾತ್ರಿ ಚರ್ಯೆ ಕೂಡ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಜೀವನಶೈಲಿಯಲ್ಲಿ ತಡರಾತ್ರಿ ಊಟ, ನಿದ್ರಾಭಂಗ, ಮೊಬೈಲ-ಟಿವಿ-ಲ್ಯಾಪ್‌ಟಾಪ್ ಬಳಕೆ, ಅಸ್ಥಿರ ಮನಸ್ಥಿತಿ ಇವೆಲ್ಲವೂ ರಾತ್ರಿ ಚರ್ಯೆಯ ಸಹಜ ಕ್ರಮವನ್ನು ಭಂಗಗೊಳಿಸುತ್ತಿವೆ.

Prakash Shesharagavachar Column: ಮುಂದುವರಿದಿರುವ ಸರಣಿ ಅಚ್ಚರಿಯ ಆಯ್ಕೆಗಳು

ಮುಂದುವರಿದಿರುವ ಸರಣಿ ಅಚ್ಚರಿಯ ಆಯ್ಕೆಗಳು

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ವಿಷಯವು ಅನೇಕ ದಿನಗಳಿಂದ ಕುತೂಹಲವನ್ನು ಕೆರಳಿಸಿದೆ. ಯಾರೂ ಊಹಿಸಿರದ ನಬೀನ್ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಕಾರ್ಯಕರ್ತರನ್ನೊಳಗೊಂಡಂತೆ ರಾಜಕೀಯ ವಿಶ್ಲೇಷಕರಿಗೂ ಮತ್ತು ಮಾಧ್ಯಮದವರಿಗೂ ಬಹು ದೊಡ್ಡ ಅಚ್ಚರಿಯಾಗಿದೆ. 2014ರ ನಂತರ ಮೋದಿಯವರ ಸಾರಥ್ಯದಲ್ಲಿ ಈ ರೀತಿಯ ಊಹೆಗೂ ನಿಲುಕದ ನೇಮಕಾತಿಗಳು ಹಾಗೂ ಪ್ರಮುಖ ನಿರ್ಧಾರಗಳು ಹೊಮ್ಮುವುದು ಸಾಮಾನ್ಯವಾಗಿದೆ. ಇದಕ್ಕೆ Out of the Box ತಂತ್ರ ಗಾರಿಕೆಯೆನ್ನುತ್ತಾರೆ.

Mohan Vishwa Column: ನಟೋರಿಯಸ್‌ ಡ್ರಗ್ಸ್‌ ಪ್ರದೇಶ: ಗೋಲ್ಡನ್‌ ಕ್ರೆಸೆಂಟ್

ನಟೋರಿಯಸ್‌ ಡ್ರಗ್ಸ್‌ ಪ್ರದೇಶ: ಗೋಲ್ಡನ್‌ ಕ್ರೆಸೆಂಟ್

ಏಷ್ಯಾದ ಅತ್ಯಂತ ಹಳೆಯ ಮಾದಕವಸ್ತು ಪ್ರದೇಶವಾಗಿರುವ ಗೋಲ್ಡನ್ ಕ್ರೆಸೆಂಟ್ ಅನ್ನು ‘ಮಾದಕ‌ ವಸ್ತುಗಳ ರೇಷ್ಮೆ ಮಾರ್ಗ’ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಪರ್ವತ ಶ್ರೇಣಿಗಳನ್ನು ಕಾಣಬಹುದಾಗಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆಯು ಈ ಪ್ರದೇಶದಲ್ಲಿ 1980ರ ದಶಕದಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿತ್ತು ಮತ್ತು ದೊಡ್ಡ ಪ್ರಮಾಣದ ಅಫೀಮಿನ ಅಕ್ರಮ ಉತ್ಪಾದನೆಗೆ ಕಾರಣವಾಗಿತ್ತು.

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

1990ರ ದಶಕದ ಆರಂಭದಲ್ಲಿ, ವಾಯುಯಾನ ಕ್ಷೇತ್ರವು ಒಂದು ದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿತ್ತು. ಆ ಸಮಯದಲ್ಲಿ ಬೋಯಿಂಗ್ ಕಂಪನಿಯ ಬಳಿ ಬೃಹತ್ ಗಾತ್ರದ 747 ಜಂಬೋ ಜೆಟ್ ಮತ್ತು ಚಿಕ್ಕದಾದ 767 ವಿಮಾನಗಳಿದ್ದವು. ಆದರೆ ಇವೆರಡರ ನಡುವೆ ಒಂದು ಮಧ್ಯಮ ಗಾತ್ರದ, ಆದರೆ ದೀರ್ಘದೂರ ಹಾರಬಲ್ಲ ವಿಮಾನದ ಅಗತ್ಯವಿತ್ತು. ಈ ಕೊರತೆಯನ್ನು ನೀಗಿಸಲು ಬೋಯಿಂಗ್ 777 ಅನ್ನು ವಿನ್ಯಾಸಗೊಳಿಸಲಾಯಿತು.

Roopa Gururaj Column: ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಕ್ಷಮಾಗುಣ

Roopa Gururaj Column: ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಕ್ಷಮಾಗುಣ

ನಮ್ಮ ಸ್ನೇಹ, ಸಂಸಾರ ವಲಯಗಳಲ್ಲಿ ಕೂಡ ಇಂಥ ಅನೇಕರು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವರ ಯಾವುದೋ ಒಂದು ಗುಣ ನಮಗೆ ನಿರಂತರವಾಗಿ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಆದರೆ ಅದರ ಆಚೆ ಅವರಲ್ಲಿ ಒಳ್ಳೆಯ ಗುಣಗಳನ್ನು ಕೂಡ ಹುಡುಕುವ ಪ್ರಯತ್ನ ಮಾಡಿದಾಗ ಅವರು ಬದಲಾಗದಿದ್ದರೂ, ನಾವು ಬದಲಾಗಿರುತ್ತೇವೆ.

Narada Sanchara: ಸಹೋದರಿಯೇ ಮಿಂಚಿಂಗು!

Narada Sanchara: ಸಹೋದರಿಯೇ ಮಿಂಚಿಂಗು!

ಓರ್ವ ಸಂಸದೀಯ ಪಟುವಾಗಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಸೋದರ ರಾಹುಲ್ ಗಾಂಧಿ ಯವರಿಗಿಂತ ಹೆಚ್ಚು ಮಿಂಚುತ್ತಾರೆ ಅನ್ನೋದು ಜನಸಾಮಾನ್ಯರ ಗ್ರಹಿಕೆ ಮಾತ್ರವಲ್ಲ, ಇದು ಕಾಂಗ್ರೆಸ್‌ ನಲ್ಲಿ ಬಹುತೇಕರು ಒಳಗೊಳಗೇ ಮಾಡುವ ಗುಸುಗುಸು ಕೂಡ ಹೌದು. ಯಾವುದಾದರೊಂದು ವಿಷಯದ ಕುರಿತು ಸದನದಲ್ಲಿ ಮಾತನಾಡುವಾಗ, ಅದಕ್ಕೆ ಆಧಾರವಾಗಿ ಮಾಡಿಕೊಂಡಿರುವ ಒಂದಿಷ್ಟು ಟಿಪ್ಪಣಿಗಳನ್ನು ಜತೆಗಿಟ್ಟುಕೊಂಡೇ ಹಿಂದಿಯಲ್ಲಿ ಅದನ್ನು ಹರವಿಡುವ ಪ್ರಿಯಾಂಕಾ ಅವರ ಶೈಲಿಯು ಪ್ರೇಕ್ಷಕ-ವೀಕ್ಷಕ ಗಣದ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬೇಕು.

Janamejaya Umarji Column: ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

ಹೊಸ ಯೋಜನೆಯ ಹೆಸರಿನಲ್ಲಿ ಎರಡು ಮಹತ್ವದ ಶಬ್ದಗಳು ಸೇರಿಕೊಂಡಿವೆ. ಒಂದು ‘ವಿಕಸಿತ ಭಾರತ’, ಇನ್ನೊಂದು ‘ರಾಮ’. ವಿಕಸಿತ ಭಾರತ ಗಾಂಧಿಯ ಆಶಯವಲ್ಲವೇ? ಪ್ರಭು ಶ್ರೀರಾಮನು ಗಾಂಧಿ ಯವರ ಆರಾಧ್ಯ ದೈವವಲ್ಲವೇ? ಗಾಂಧಿಯವರ ಕನಸು ರಾಮರಾಜ್ಯವಾಗಿರಲಿಲ್ಲವೇ? ಹೆಸರನ್ನು ಮೀರಿ ಇಂಥ ವಿಷಯಗಳು ಚರ್ಚೆಯಾಗಬೇಕಾಗಿವೆ.

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

ಮಳೆ ಕಡಿಮೆಯಾದರೂ ಹರಿಯುತ್ತಲೇ ಇರುವ ಈ ನೀರು ಸ್ಫಟಿಕ ಶುದ್ಧ. ಕ್ರಮೇಣ ಮಳೆ ಕಡಿಮೆ ಯಾಗುತ್ತದೆ; ಎರಡನೆಯ ಬೆಳೆಗಾಗಿ ಗದ್ದೆಗಳನ್ನು ಹಸನು ಮಾಡುವ ಸಮಯ. ಚಳಿಗಾಲದ ಆರಂಭ ದಲ್ಲಿ ಹೀಗೆ ಗದ್ದೆಯನ್ನು ಉಳುಮೆ ಮಾಡಿ, ಬೀಜ ಬಿತ್ತಿದಾಗ, ಅದೆಲ್ಲಿಂದಲೋ ಬರುವ ‘ವಾಂಟರ್ಕ’ ಗಳು ಗದ್ದೆ ಮತ್ತು ಅಗೇಡಿಯನ್ನು ಉಳುಮೆ ಮಾಡುವುದುಂಟು!

Shishir Hegde Column: ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ಕುಡಿದದ್ದು ಹೊಟ್ಟೆಯಿಂದ ರಕ್ತ ಸೇರಿ ಮಿದುಳನ್ನು ತಲುಪುತ್ತದೆ. ಮಿದುಳಿನಲ್ಲಿ ಇರೋದು ನ್ಯೂರಾನ್- ನರಕೋಶಗಳು. ಸರಾಸರಿ 86 ಸಾವಿರ ಕೋಟಿ ನರಕೋಶಗಳು. ಅವುಗಳು ಒಂದಕ್ಕಿನ್ನೊಂದು ಸಂವಹಿಸು ತ್ತಿದ್ದರೆ, ವ್ಯವಹರಿಸುತ್ತಿದ್ದರೆ ಮಾತ್ರ ನಮ್ಮ ಇಡೀ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಗಳು ತಾಳ-ಮೇಳ ಹೊಂದಿ, ಸರಿಯಾಗಿ ಕೆಲಸ ಮಾಡಲು ಸಾಧ್ಯ.

ಕೌಶಲ್ಯ ಅಭಿವೃದ್ದಿ ನಿಗಮವೇ ನಿರುದ್ಯೋಗಿ

ಕೌಶಲ್ಯ ಅಭಿವೃದ್ದಿ ನಿಗಮವೇ ನಿರುದ್ಯೋಗಿ

ನಿಗಮದಲ್ಲಿ 375ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದು ಇವರೀಗ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಕಾರಣ ನಿಗಮದಲ್ಲಿ ಈಗ ಕೌಶಲ್ಯ ಅಭಿವೃದ್ಧಿಗೆ ಕಾರ್ಯಕ್ರಮಗಳೂ ಇಲ್ಲ. ಕ್ರಿಯಾ ಯೋಜನೆಯೂ ಇಲ್ಲ. ಹೀಗಾಗಿ ಕೌಶಲ್ಯ ಮತ್ತು ತರಬೇತಿ ಕೆಲಸಗಳನ್ನೇ ಮಾಡದ ನೂರಾರು ಅಧಿಕಾರಿಗಳಿಗೆ ನಿಗಮ ಸುಮಾರು 60 ಕೋಟಿ ರೂ.ವರೆಗೂ ವೇತನ ಪಾವತಿ ಮಾಡುತ್ತಾ ಅಧಿಕಾರ ಸಿಬ್ಬಂದಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದೆ !

‌Keshava Prasad B Column: ರುಪಾಯಿ ಮತ್ತಷ್ಟು ಬಿದ್ದರೂ, ಆತಂಕವೇ ಬೇಡ! ಏಕೆ ಗೊತ್ತೇ ?!

ರುಪಾಯಿ ಮತ್ತಷ್ಟು ಬಿದ್ದರೂ, ಆತಂಕವೇ ಬೇಡ! ಏಕೆ ಗೊತ್ತೇ ?!

ಮೊದಲನೆಯದಾಗಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯ ಮೌಲ್ಯ ಇಳಿಕೆಯಾಗುವು ದನ್ನು ರುಪಾಯಿ ಕುಸಿತ ಎನ್ನುತ್ತಾರೆ. ಮುಖ್ಯವಾಗಿ ಡಾಲರ್ ಎದುರು ಅದರ ಮೌಲ್ಯ ಇಳಿಕೆ ಯಾಗುವುದನ್ನು ಪರಿಗಣಿಸುತ್ತಾರೆ. ರುಪಾಯಿ ಈಗ 91ಕ್ಕೆ ಕುಸಿದಿದೆ ಎಂದರೆ ಅದರ ಅರ್ಥ ಡಾಲರ್ ಎದುರು ರುಪಾಯಿ ಮೌಲ್ಯ 91ಕ್ಕೆ ಇಳಿದಿದೆ. 1 ಡಾಲರ್ ಪಡೆಯಲು 91 ರುಪಾಯಿ ಕೊಡಬೇಕು ಎಂದರ್ಥ.

Vishweshwar Bhat Column: ರೆಕ್ಕೆಗಳಲ್ಲೇಕೆ ಇಂಧನ ?

Vishweshwar Bhat Column: ರೆಕ್ಕೆಗಳಲ್ಲೇಕೆ ಇಂಧನ ?

ಒಂದು ವೇಳೆ ಇಂಧನವನ್ನು ವಿಮಾನದ ಹೊಟ್ಟೆಯಲ್ಲಿ ( Fuselage ) ತುಂಬಿದ್ದರೆ, ರೆಕ್ಕೆಗಳು ತೂಕ ವಿಲ್ಲದೆ ಹಗುರವಾಗಿರುತ್ತಿದ್ದವು ಮತ್ತು ಲಿಫ್ಟ್ ಬಲದಿಂದಾಗಿ ಅತಿಯಾಗಿ ಮೇಲಕ್ಕೆ ಬಾಗುತ್ತಿದ್ದವು. ಆದರೆ ರೆಕ್ಕೆಗಳಲ್ಲಿ ಟನ್‌ಗಟ್ಟಲೆ ಇಂಧನವನ್ನು ತುಂಬುವುದರಿಂದ, ಆ ಇಂಧನದ ಭಾರವು ರೆಕ್ಕೆ‌ ಗಳನ್ನು ಕೆಳಕ್ಕೆ ಎಳೆಯುತ್ತದೆ. ಇದು ಲಿಫ್ಟ್ ಬಲವನ್ನು ಸರಿದೂಗಿಸಿ, ರೆಕ್ಕೆಗಳು ಅತಿಯಾಗಿ ಬಾಗ ದಂತೆ ಮತ್ತು ವಿಂಗ್ ರೂಟ್ ಮುರಿಯದಂತೆ ತಡೆಯುತ್ತದೆ.

Roopa Gururaj Column: ಸಮರ್ಪಣಾ ಭಾವ ಇದ್ದಾಗ, ಸಿಗುವ ಭಗವಂತನ ಸಾನಿಧ್ಯ

Roopa Gururaj Column: ಸಮರ್ಪಣಾ ಭಾವ ಇದ್ದಾಗ, ಸಿಗುವ ಭಗವಂತನ ಸಾನಿಧ್ಯ

ಅವಳು ಮೃದುವಾಗಿ ನಗುತ್ತಾ ಹೇಳಿದಳು, “ಮಗನೇ ತಾಯಿಯನ್ನು ನೋಡಿಕೊಳ್ಳುವಾಗ ತಾಯಿಗೆ ಇನ್ನೇನು ಬೇಕು? ನನ್ನ ಗೋಪಾಲನೇ ತನ್ನ ಕೈಯಿಂದಲೇ ನನಗೆ ಆಹಾರ ಕೊಟ್ಟನು". ಕೆಲವರು ನಕ್ಕರು, ಅವಳ ಮಾತುಗಳನ್ನು ಭ್ರಮೆ ಎಂದು ಭಾವಿಸಿದರು. ಆದರೆ ಕೆಲವು ಭಕ್ತರು ಮಾತ್ರ ಭಗವಂತನು ನಿಜವಾಗಿಯೂ ತನ್ನ ಪ್ರೀತಿಯನ್ನು ಸ್ಪಷ್ಟವಾಗಿ ತೋರಿಸಿದ್ದಾನೆಂದು ಅರಿತು ಕೊಂಡರು.

ಜಿಪಂ, ತಾಪಂನಲ್ಲಿ ಅಧಿಕಾರಿಗಳದೇ ದರ್ಬಾರ್

ಜಿಪಂ, ತಾಪಂನಲ್ಲಿ ಅಧಿಕಾರಿಗಳದೇ ದರ್ಬಾರ್

ಜನಪ್ರತಿನಿಧಿಗಳಿಲ್ಲದೆ ವಿಳಂಬವಾಗುತ್ತಿರುವ ಪ್ರಮುಖ ಕಾರ್ಯಗಳು ಕ್ರಿಯಾಯೋಜನೆ ಸಿದ್ಧಪಡಿಸುವಲ್ಲಿ ವಿಳಂಬ:ಪಂಚಾ ಯತ್ನ ಪ್ರತಿ ವರ್ಷದ ಅನುದಾನವನ್ನು ಯಾವ ಕೆಲಸಕ್ಕೆ ಬಳಸಬೇಕು ಎಂಬುದನ್ನು "ಗ್ರಾಮ ಸಭೆ" ಮತ್ತು "ಸಾಮಾನ್ಯ ಸಭೆ"ಗಳಲ್ಲಿ ಚರ್ಚಿಸಿ ನಿರ್ಧರಿಸ ಲಾಗುತ್ತದೆ. ಜನಪ್ರತಿನಿಧಿಗಳಿಲ್ಲದಿದ್ದಾಗ, ಜನರ ಆದ್ಯತೆಗಳಿಗಿಂತ ಅಧಿಕಾರಿಗಳ ವಿವೇಚನೆಗೆ ಅನುಗುಣವಾಗಿ ಯೋಜನೆಗಳು ಸಿದ್ಧವಾಗುತ್ತವೆ.

Dr Vijay Darda Column: ಗಾಂಧೀಜಿಯ 3 ಮಂಗಗಳ ರೀತಿ ಗೋವಾದ ಆಡಳಿತ !

ಗಾಂಧೀಜಿಯ 3 ಮಂಗಗಳ ರೀತಿ ಗೋವಾದ ಆಡಳಿತ !

ಅಗ್ನಿ ದುರಂತದ ಬಗ್ಗೆ ವಿವರವಾಗಿ ಚರ್ಚಿಸುವುದಕ್ಕೂ ಮೊದಲು ಇನ್ನೊಂದು ವಿಷಯ ವನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ಹಸಿರು ನ್ಯಾಯಾಧೀಕರಣ ಎಂಬ ನ್ಯಾಯಾಂಗ ವ್ಯವಸ್ಥೆ ಯೊಂದಿದೆ. ಅದಕ್ಕೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥ ರಾಗಿರು ತ್ತಾರೆ.

Harish Kera Column: ಚಿಂತನೆಯನ್ನು ಟ್ರಿಮ್‌ ಮಾಡುವ ರೇಜರ್‌ʼಗಳು

Harish Kera Column: ಚಿಂತನೆಯನ್ನು ಟ್ರಿಮ್‌ ಮಾಡುವ ರೇಜರ್‌ʼಗಳು

ನಾವು ಸನ್ನಿವೇಶವನ್ನು ನೋಡುವ ಬಗೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೆ- ಬದುಕು ಹೆಚ್ಚು ಹಿತಕರ ಆಗಿರುತ್ತೆ ಅಂತ ಹಿಂದಿನ ಕೆಲವು ಫಿಲಾಸಫರ್‌ಗಳು ಹೇಳಿದ್ದಾರೆ. ಮುಖ ದಲ್ಲಿರುವ ಗಡ್ಡವನ್ನು ರೇಜರ್ʼ ನಿಂದ ಹೆರೆದು ತೆಗೆದರೆ ಮುಖ ಹೊಳೆಯುತ್ತದೆ. ಅನಗತ್ಯ ಗಡ್ಡ ಮೀಸೆಗಳನ್ನು ತೆಗೆದು ಹಾಕುವುದೂ ಬದುಕಿನ ಅನಗತ್ಯ ಸಂಗತಿಗಳನ್ನು ಅಳಿಸಿ ಹಾಕುವುದೂ ಒಂದೇ ಎಂಬ ಫಿಲಾಸಫಿಯೊಂದಿಗೆ ಈ ಚಿಂತಕರು ನೀಡಿರುವ ಕೆಲವು ಸೂತ್ರಗಳನ್ನು ‘ಫಿಲಾಸಫಿಕಲ್ ರೇಜರ್ಸ್’ ಎಂದು ಕರೆದಿದ್ದಾರೆ.

Gururaj Gantihole Column: ಚುನಾವಣೆ: ಮತಗಟ್ಟೆ ವಶದಿಂದ ಎಸ್‌ʼಐಆರ್‌ʼವರೆಗೆ !

ಚುನಾವಣೆ: ಮತಗಟ್ಟೆ ವಶದಿಂದ ಎಸ್‌ʼಐಆರ್‌ʼವರೆಗೆ !

1990ರಲ್ಲಿ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶೇಷನ್, ಭಾರತದ ಚುನಾವಣಾ ವ್ಯವಸ್ಥೆಯ ಇತಿಹಾಸವನ್ನು ಎರಡು ಯುಗಗಳಿಗೆ ವಿಭಜಿಸಿದಂತೆಯೇ ಸುಧಾರಣೆಗಳನ್ನು ಜಾರಿಗೊಳಿಸಿದರು. ನಕಲಿ ಮತದಾನ, ಹಣ-ಮದ್ಯದ ಪ್ರಭಾವ, ಜಾತಿ-ಮತ ಪ್ರಚೋದನೆ, ಅಶಿಸ್ತಿನ ರ‍್ಯಾಲಿಗಳು, ಅನಿಯಂತ್ರಿತ ಖರ್ಚುಗಳನ್ನು ಶೇಷನ್ ಅವರು ಪ್ರಶ್ನಿಸದೇ ಬಿಡುತ್ತಿರಲಿಲ್ಲ, ಲೆಕ್ಕ ಕೇಳಲಾಗುತ್ತಿತ್ತು, ಕಠಿಣಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು.

Vishweshwar Bhat Column: ತನ್ನ ಕೃತಿಯನ್ನು ಟೀಕಿಸಿದ್ದಕ್ಕಾಗಿ ಆತ ವಿಮರ್ಶಕನ ಮುಖಕ್ಕೆ ಉಗಿದಿದ್ದ !

ತನ್ನ ಕೃತಿಯನ್ನು ಟೀಕಿಸಿದ್ದಕ್ಕಾಗಿ ಆತ ವಿಮರ್ಶಕನ ಮುಖಕ್ಕೆ ಉಗಿದಿದ್ದ !

ಸಾಹಿತ್ಯವಲಯದಲ್ಲಿ ಸಾಮಾನ್ಯವಾಗಿ ವಿವಾದ ಕಿಡಿ ಹೊತ್ತಿಕೊಳ್ಳುವುದು ವಿಮರ್ಶಕ ರಿಂದ. ಯಾವ ಸಾಹಿತಿಯೂ ವಿಮರ್ಶಕರನ್ನು ಇಷ್ಟಪಡುವುದಿಲ್ಲ. ಅದರಲ್ಲೂ ತಮ್ಮನ್ನು ಟೀಕಿಸುವ ವಿಮರ್ಶಕರನ್ನಂತೂ ಇಷ್ಟಪಡುವ, ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ, 2002 ಮತ್ತು 2004ರ ಅವಧಿಯಲ್ಲಿ ಅಮೆರಿಕದ ಸಾಹಿತ್ಯ ವಲಯದಲ್ಲಿ ನಡೆದ ಒಂದು ಘಟನೆ ಇಡೀ ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತ್ತು.

‌Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಮತ್ತು ಮೈಕ್ರೋಪೋನ್

‌Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಮತ್ತು ಮೈಕ್ರೋಪೋನ್

ವಿಮಾನದ ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾದಾಗ ಅಥವಾ ಹೊಗೆ ಆವರಿಸಿದಾಗ, ಪೈಲಟ್‌ ಗಳು ತಕ್ಷಣವೇ ‘ಕ್ವಿಕ್ ಡಾನಿಂಗ್ ಮಾಸ್ಕ್’ ಧರಿಸುತ್ತಾರೆ. ಇದನ್ನು ಧರಿಸಿದ ತಕ್ಷಣ, ಅವರು ಬಳಸುತ್ತಿದ್ದ ಸಾಮಾನ್ಯ ಹೆಡ್ಸೆಟ್ ಮೈಕ್ರೊಫೋನ್ ನಿಷ್ಕ್ರಿಯವಾಗುತ್ತದೆ ಮತ್ತು ಮಾಸ್ಕ್ ಒಳಗಿರುವ ವಿಶೇಷ ಮೈಕ್ರೊಫೋನ್ ಕೆಲಸ ಮಾಡಲು ಶುರು ಮಾಡುತ್ತದೆ.

Roopa Gururaj Column: ಗಜೇಂದ್ರ ಮೋಕ್ಷದ ಕಥೆ

Roopa Gururaj Column: ಗಜೇಂದ್ರ ಮೋಕ್ಷದ ಕಥೆ

ಭಗವಂತನ ಪ್ರಕಾಶಮಾನವಾದ ರೂಪವನ್ನು ಕಂಡು, ಗಜೇಂದ್ರನ ಕಣ್ಣುಗಳು ಆನಂದ ಮತ್ತು ಭಕ್ತಿಭಾವದಿಂದ ತುಂಬಿ ಬಂದವು. ನೋಡನೋಡುತ್ತಿದ್ದಂತೆ ವಿಷ್ಣುವಿನ ಚಕ್ರದಿಂದ ಮೊಸಳೆ ಹತವಾಯಿತು. ಹಿಂದಿನ ಜನ್ಮದಲ್ಲಿ ಋಷಿಯನ್ನು ಹಾಸ್ಯ ಮಾಡಿದ ಕಾರಣ ಶಪಿಸಲ್ಪಟ್ಟು ಮೊಸಳೆಯಾಗಿ ಜನಿಸಿದ್ದ ಗಂಧರ್ವನಾದ ಹುಹು ಭಗವಂತನಿಗೆ ವಂದನೆ ಸಲ್ಲಿಸಿ, ಕೃತಜ್ಞತೆ ಯನ್ನು ವ್ಯಕ್ತಪಡಿಸಿ ಸ್ವರ್ಗಲೋಕಕ್ಕೆ ಏರಿದನು.

ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬೇಕಿದೆ ಅಗ್ನಿಶಾಮಕ ದಳ

ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬೇಕಿದೆ ಅಗ್ನಿಶಾಮಕ ದಳ

ಡಿಸೆಂಬರ್, ಜನವರಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೆಲವೊಮ್ಮೆ-- ಒಂದು ದಿನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಗೋಕರ್ಣಕ್ಕೆ ಪೊಲೀಸ್ ಠಾಣೆ ಯಿದ್ದು, ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳಿದ್ದಾರೆ. ಹಾಗೇ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಾಗಿ ಇಲ್ಲಿಯೂ ಕೂಡ ಅಗ್ನಿಶಾಮಕ ದಳ ಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ.

Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತು ಕೊಂಡರು.

Loading...