ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಅಂಕಣಗಳು
Hari Paraak Column: ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

“ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿ ದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂ ಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು

Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಮಿಲಿಟರಿ ಸೇವೆಯ ನಂತರ ಸ್ವಯಂನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಮೀಸೆಮಾವ ಅವಿವಾಹಿತರಾಗಿದ್ದು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸು ತ್ತಿದ್ದರು. ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಕಥಾನಾಯಕ ಶ್ರಮಜೀವಿ ಯನ್ನು ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿಕೊಂಡ ಮಾತೃಹೃದಯಿ ಅವರು.

Vinayak V Bhat Column: ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ೆಂಕಟೇಶ್ ಕುಮಾರ್ ಒಬ್ಬರು. ತಮ್ಮ ಸಾಂಪ್ರದಾಯಿಕ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನ ವಾಗಲು ಬಿಡದೆ ಪರಿಶುದ್ಧವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

Srivathsa Joshi Column: ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿ ಗಣಪತಿಯನ್ನು ಆರಾ‌ಧಿಸುತ್ತಿದ್ದರು. ಆದ್ದರಿಂದಲೇ ಮುತ್ತುಸ್ವಾಮಿ ದೀಕ್ಷಿತರು ಗಣಪತಿ ಯನ್ನು ‘ಕುಂಭಸಂಭವ ಮುನಿಯಿಂದ ಪೂಜಿಸಲ್ಪಟ್ಟವನು’ ಎಂದು ಸ್ತುತಿಸಿದ್ದಾರೆ. ಅಗಸ್ತ್ಯರ ಗಣೇಶಭಕ್ತಿ ಎಷ್ಟಿತ್ತೆಂದರೆ ರಾಮಾಯಣದಲ್ಲಿ ವನವಾಸ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಒಂದೆರಡು ದಿನ ಅಗಸ್ತ್ಯರ ಆಶ್ರಮದಲ್ಲಿ ತಂಗಿದ್ದಾಗ ರಾಮನಿಗೂ ಗಣೇಶಾರಾಧನೆಯ ಮಹತ್ತವನ್ನು ಅಗಸ್ತ್ಯರು ತಿಳಿಸಿದ್ದರು. ಅದೇ ರೀತಿ ‘ಆದಿತ್ಯಹೃದಯಮ್’ ಸ್ತೋತ್ರವನ್ನೂ ಅಗಸ್ತ್ಯರೇ ರಚಿಸಿ ಶ್ರೀರಾಮನಿಗೆ ಬೋಧನೆ ಮಾಡಿದರು.

Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಜಪಾನಿಯರು ಪರಿಪೂರ್ಣವಾದಿಗಳೂ ಹೌದು, ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷ ಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

Roopa Gururaj Column: ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು

ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು

ಆಕೆ ಛೀ ಛೀ ಇಷ್ಟು ಗಲೀಜಾದ ನಿನ್ನ ಕರುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ ಎಂದು ನಿರಾಕರಿಸಿದಳು. ಅಸಹಾಯಕವಾದ ಹಸುವಿಗೆ ಕೋಪ ಬಂದಿತು. ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿನ್ನ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ ಅದಕ್ಕೆ ನಿನಗೆ ಇಷ್ಟು ಅಹಂಕಾರ. ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ

Ravi Kaangala Column: ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

12ನೇ ಶತಮಾನದ ಪ್ರಸಿದ್ಧ ವಚನಕಾರ್ತಿಯಾಗಿದ್ದ ಅಕ್ಕಮಹಾದೇವಿ ಕ್ರಿ.ಶ. 1160ರಲ್ಲಿ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ಶರಣ ದಂಪತಿಗಳಾದ ನಿರ್ಮಲಶೆಟ್ಟಿ ಹಾಗೂ ಸುಮತಿ ಅವರ ಮಗಳಾಗಿ ಜನಿಸಿದರು. ಭಗವಂತ ಮತ್ತು ಭಕ್ತಿಯಲ್ಲಿ ಲೀನರಾದ ಅಕ್ಕಮಹಾದೇವಿ, ಶರಣಸತಿ-ಲಿಂಗಪತಿ ತತ್ವಕ್ಕೆ ಒಳಗಾಗಿ ಸಾಂಪ್ರದಾಯಿಕ ಬದುಕನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಬದುಕನ್ನು ಆಯ್ಕೆ ಮಾಡಿ ಕೊಂಡು ಕೇಶಾಂಬರೆಯಾದರು.

Dr Sadhanashree Column: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅಕ್ಕಿಯೇ ಪ್ರಧಾನವಾದ ದ್ರವ್ಯ. ಎಲ್ಲರ ಮನೆ ಯಲ್ಲೂ ಅಕ್ಕಿಯ ಬಳಕೆ ಸರ್ವೇಸಾಮಾನ್ಯ. ಆದರೆ ಈ ಅಕ್ಕಿಯ ಬಗ್ಗೆ ನಮಗೆಷ್ಟು ಗೊತ್ತು? ಯಾವ ರೀತಿ ಬಳಸಿದರೆ ಯಾವ ಪರಿಣಾಮವಾಗುತ್ತದೆ ಎಂಬ ಅರಿವಿದೆಯೇ? ನಮಗೆ ಈ ಜ್ಞಾನ ವಿಲ್ಲದ ಕಾರಣವೇ ಅಕ್ಕಿಯ ಮೇಲೆ ಬರುವ ಅಪವಾದಗಳಿಗೆ ನಾವು ತಲೆ ಬಾಗಿ ಅಕ್ಕಿಯನ್ನು ನಮ್ಮ ದಿನನಿತ್ಯದ ಆಹಾರ ದಿಂದ ವರ್ಜಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವುದು.

Naveen Sagar Column: ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿಗೆ ಅಗ್ನಿಪರೀಕ್ಷೆ !

ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿಗೆ ಅಗ್ನಿಪರೀಕ್ಷೆ !

ವಿರೋಧಿಗಳ ಬಾಯಿ ಮುಚ್ಚಿಸೋಕೆ ಧೋನಿ ಏನು ಮಾಡಬೇಕು? ಧೋನಿ ಅಭಿಮಾನಿಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ನನಗೂ ಒಂದಷ್ಟು ಅಸಮಾಧಾನ ಇದೆ. ಚೆನ್ನೈ ತಂಡದಲ್ಲಿ ಗೆಲ್ಲಲೇಬೇಕೆಂಬ ಕಿಚ್ಚು ಯಾವ ಆಟಗಾರನಲ್ಲೂ ಕಾಣ್ತಾ ಇಲ್ಲ. ‘ಪವರ್ ಪ್ಲೇ’ಗಳಲ್ಲಿ ಮಿಕ್ಕ ತಂಡಗಳು ಹತ್ತರ ಸರಾಸರಿ ಯಲ್ಲಿ ಚಚ್ಚುತ್ತಾ ಇದ್ದರೆ, ಚೆನ್ನೈ ಅ ಅರ್ಧಪಂದ್ಯವನ್ನು ಸೋಲ್ತಾ ಇದೆ.

Mohan Vishwa Column: ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಬ್ರಿಟಿಷರ ಕಾಲದಿಂದಲೂ ಮುಸ್ಲಿಮರನ್ನು ಓಲೈಸುವ ಕೆಲಸವು ವಕ್ಫ್ ಕಾಯಿದೆಯ ಮೂಲಕ ನಡೆದು ಕೊಂಡು ಬಂದಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ಗಳು ಅಂದಾಜು 8,94,509 ಆಸ್ತಿ ಗಳನ್ನು ಹೊಂದಿವೆ. 2013ರಲ್ಲಿ ಅಂದಾಜು 18 ಲಕ್ಷ ಎಕರೆಯಷ್ಟಿದ್ದ ವಕ್ಫ್ ಆಸ್ತಿ, 2025ರ ಹೊತ್ತಿಗೆ 37 ಲಕ್ಷ ಎಕರೆಯಷ್ಟಾಗಿತ್ತು.

Vishweshwar Bhat Column: ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಅವನ್ನು ಕೇವಲ ಸಾಕುಪ್ರಾಣಿಯಾಗಷ್ಟೇ ಅಲ್ಲ, ಸಂಪತ್ತು, ಧೈರ್ಯ ಮತ್ತು ರಕ್ಷಣೆಗಳ ಸಂಕೇತ ಗಳಾಗಿ ಕೂಡ ಪರಿಗಣಿಸಲಾಗುತ್ತದೆ. ಜಪಾನಿನ ಶಿಂಟೋ ಮತ್ತು ಬೌದ್ಧ ಧರ್ಮಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ. ಅಲ್ಲಿನ ಪುರಾಣಗಳಲ್ಲಿ ಬೆಕ್ಕುಗಳನ್ನು ಶಕ್ತಿಶಾಲಿ ಮತ್ತು ಅತೀಂದ್ರಿಯ ಪ್ರಾಣಿಯಂತೆ ಚಿತ್ರಿಸ ಲಾಗಿದೆ. ಕೆಲವೊಂದು ಕಥೆಗಳಲ್ಲಿ ಅವನ್ನು ಶಕ್ತಿಶಾಲಿ ದೇವತೆಗಳಂತೆ ಬಿಂಬಿಸಲಾಗಿದೆ.

Roopa Gururaj column: ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ರಾಮನೇ ನಾಯಿಯನ್ನು ‘ಯಾಕೆ ಇಂತಹ ಶಿಕ್ಷೆ ಕೊಡಲು ಹೇಳಿದೆ’ ಎಂದು ಕೇಳಿದನು. ನಾಯಿ ವಿವ ರಿಸಿತು, “ನನ್ನ ಹಿಂದಿನ ಜನ್ಮದಲ್ಲಿ, ನಾನು ಅದೇ ಮಠದ ಮುಖ್ಯನಾಗಿದ್ದೆ. ನಾನು ಮೊದಮೊದಲು ನಿಷ್ಠೆಯಿಂದ ನನ್ನ ಕೆಲಸ ಮಾಡುತ್ತಿದ್ದೆ. ನನ್ನ ಕೈಲಾದಷ್ಟು ಸೇವೆಯನ್ನೂ ಮಾಡುತ್ತಿದ್ದೆ. ಆದರೆ ದಿನ ಕಳೆದಂತೆ, ನನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರ ಹತ್ತಿದವು.

Prakash Shesharaghavachar Column: 'ವಕ್ಫ್ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

'ವಕ್ಫ್‌ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯವಾಗಿತ್ತು.

Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ಬಯಲುಸೀಮೆ ಮತ್ತು ಬೆಂಗಳೂರು ಸುತ್ತಮುತ್ತ ಚಕ್ಕೋತ ಎನ್ನುವುದು ಸಾಮಾನ್ಯ. ಮಲೆನಾಡಿ ನಲ್ಲಿ ಸಿಹಿ ಕಂಚಿ, ಹುಳಿ ಕಂಚಿ ಎನ್ನುವರು; ಅದರಲ್ಲೂ ಎರಡು ತಳಿಗಳಿವೆ! ಅದರ ಜತೆಯಲ್ಲೇ, ಕರಾವಳಿ, ಮಲೆನಾಡು, ಬಯಲುಸೀಮೆ ಎಲ್ಲವನ್ನೂ ಸೇರಿಸಿಕೊಂಡರೆ, ಚಕ್ಕೋತ ಮತ್ತು ಅದರ ಬಂಧುಗಳು ಎನ್ನಬಹುದಾದ ದುಡ್ಲಿ ಕಾಯಿ, ಹೆರಳೆ ಕಾಯಿ, ಗಜ ನಿಂಬೆ, ನಿಂಬೆ, ಕಾಡು ಕಿತ್ತಳೆ, ಕೊಡಗಿನ ಕಿತ್ತಳೆ, ಕಿನೋ.. ಹೀಗೆ ಹಲವು ಹಣ್ಣುಗಳು ಎಲ್ಲೆಡೆ ಹರಡಿವೆ!

‌Keshav Prasad B Column: ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?

ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?

ಪ್ರಪಂಚದ ಅತಿ ದೊಡ್ಡ ಸಾಲಗಾರ ಅಮೆರಿಕ. ಹೀಗಿದ್ದರೂ ಅದು ಅತ್ಯಂತ ಶ್ರೀಮಂತ ದೇಶವೂ ಆಗಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುತ್ತೀರಾ? ಒಂದಷ್ಟು ವಿವರಗಳನ್ನು ನೋಡೋಣ. ಹಲವಾರು ಕಾರಣ ಗಳಿಂದಾಗಿ ಅಮೆರಿಕ ತನ್ನ ಜಿಡಿಪಿಗಿಂತ ಹೆಚ್ಚು ಸಾಲವನ್ನು ಹೊಂದಿದ್ದರೂ, ಜಗತ್ತಿನ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ

Shishir Hegde Column: ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ

ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ

ಅಗಾಧ ನೆನಪಿನ ಶಕ್ತಿ ಕೋಳಿಯ ಇನ್ನೊಂದು ವಿಶೇಷ. ನೂರಕ್ಕಿಂತ ಜಾಸ್ತಿ ಮುಖಗಳನ್ನು ನೆನಪಿಟ್ಟು ಕೊಳ್ಳಬಲ್ಲವು ಎಂದೆನಲ್ಲ. ಅಷ್ಟೇ ಅಲ್ಲ, ಒಮ್ಮೆ ಕೋಳಿಯನ್ನು ನೀವು ಹೆದರಿಸಿದರೆಂದು ಕೊಳ್ಳಿ, ನಿಮ್ಮ ಮುಖ ಮತ್ತು ಆ ಘಟನೆಯನ್ನು ವರ್ಷಗಳ ಕಾಲ ಅವು ನೆನಪಿಟ್ಟುಕೊಳ್ಳಬಲ್ಲವು. ಕೋಳಿಗಳಲ್ಲಿ ಕರುಣಾರಸ ಜಾಸ್ತಿ. ಅವು ತನ್ನ ಸುತ್ತಲಿನ ಜೀವಿಗಳಿಗೆ ಗಾಯವಾದಾಗ ಅದಕ್ಕೆ ಸ್ಪಂದಿಸಬಲ್ಲವು.

Vishweshwar Bhat Column: ಚೌಕಾಕಾರದ ಕಲ್ಲಂಗಡಿಗಳು

ಚೌಕಾಕಾರದ ಕಲ್ಲಂಗಡಿಗಳು

ಜಪಾನಿನಲ್ಲಿ ಅದು ಒಂದು ವಿಶಿಷ್ಟ ಆಕರ್ಷಣೆ. ಈ ವಿಶಿಷ್ಟ ಹಣ್ಣುಗಳು ಜಪಾನಿನ ಕೃಷಿ ತಂತ್ರಜ್ಞಾನ, ನಾವೀನ್ಯ ಮತ್ತು ಸೌಂದರ್ಯದ ಪ್ರತಿಬಿಂಬವಾಗಿವೆ. 1970ರ ದಶಕದಲ್ಲಿ ಜಪಾನಿನ ಜೆನ್ಸೇಕಿ ಟೋಜು ಎಂಬ ಕೃಷಿ ತಜ್ಞ ಚೌಕಾಕಾರದ ಕಲ್ಲಂಗಡಿಗಳ ಆವಿಷ್ಕಾರ ಮಾಡಿದ. ಆತ ಕಾಗಾವಾ ಪ್ರಾಂತದಲ್ಲಿರುವ ಕೃಷಿ ಕಾಲೇಜಿನಲ್ಲಿ ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ

Roopa Gururaj Column: ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು

ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು

ಆತ ತಾನಿದ್ದ ಊರು ಬಿಟ್ಟು ತನ್ನ ಹಿರಿಯ ಮಗನ ಮನೆಯಲ್ಲಿ ಬಂದು ನೆಲೆಸಿದ. ಅವನಿಗೆ ಯಾವ ತೊಂದರೆಯೂ ಆಗದಂತೆ ಮಗ ಸೊಸೆ ಚೆನ್ನಾಗಿ ನೋಡಿಕೊಳ್ಳು ತ್ತಿದ್ದರು. ಒಂದು ಸಲ ಮೂರು ಮಕ್ಕಳೂ ಒಟ್ಟಿಗೆ ಸೇರಿದಾಗ, ಒಬ್ಬ ಮಗ, ಅಪ್ಪಾ ನೀನು ಕಟ್ಟಿಸಿದ ಮನೆ, ಖಾಲಿಯಾಗಿ ಹಾಗೇ ಇದೆ. ಅದನ್ನು ಖಾಲಿಯಾಗಿ ಹಾಗೆಯೇ ಬಿಟ್ಟರೆ, ಅದು ಹಾಳಾಗಿ ಹೋಗು ತ್ತದೆ, ಅದರ ಬದಲು ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗಬಹುದು ಎಂದರು.

Gururaj Gantihole Column: ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ

ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ

ಮಂಗಳೂರು-ಉಡುಪಿ ಪ್ರದೇಶದ ಮೊದಲ ಸಂಸದ ಶ್ರೀನಿವಾಸ ಮಲ್ಯ ಆಧುನಿಕ ದಕ್ಷಿಣ ಕನ್ನಡ ಕ್ಷೇತ್ರದ ಅಭಿವೃದ್ಧಿಯ ಹರಿಕಾರ. ಇಂದಿನ ಮಂಗಳೂರು ನಗರವು ಒಂದು ನಿಶ್ಚಿತ ರೂಪು ತಳೆಯ ಬೇಕಿದ್ದರೆ ಅದಕ್ಕೆ ಅವರ ಕೊಡುಗೆಯೇ ಪ್ರಮುಖ ಕಾರಣ. ತಮ್ಮ 45 ವರ್ಷಗಳ ಸಾರ್ವಜನಿಕ ಜೀವನ ದಲ್ಲಿ ಒಬ್ಬ ಜನಪ್ರತಿನಿಽಯಾಗಿ ಹೇಗಿರಬೇಕೆಂಬುದಕ್ಕೆ ಇವರು ಆದರ್ಶಪ್ರಾಯರೂ ಹೌದು ಮತ್ತು ಮಾನದಂಡವೂ ಹೌದು!

Harish Kera Column: ಮಾವೋವಾದಿಗಳ ಮಾವಿನ ಭ್ರಾಂತಿಯ ಕತೆ

ಮಾವೋವಾದಿಗಳ ಮಾವಿನ ಭ್ರಾಂತಿಯ ಕತೆ

ಚೇರ್ಮನ್ ಮಾವೋನ ಆರಾಧನೆಯ ಮಾಧ್ಯಮವಾಗಿತ್ತು. ಇದಕ್ಕೆ ಎರಡು ವರ್ಷಗಳ ಹಿನ್ನೆಲೆಯೂ ಇತ್ತು. 1966ರಲ್ಲಿ ಮಾವೋ, ರೆಡ್ ಗಾರ್ಡ್ಸ್ ಎಂಬ ಕೆಂಪಂಗಿ ದಳವನ್ನು ಹುಟ್ಟುಹಾಕಿ ‘ಪ್ರತಿಗಾಮಿ’ ಅಧಿಕಾರಿಗಳ ಹಾಗೂ ಜನತೆಯ ವಿರುದ್ಧ ದಂಗೆ ಏಳಲು ಕರೆ ನೀಡಿದ್ದ. ಬೂರ್ಜ್ವಾ ಅಂಶಗಳು, ಸಾಂಪ್ರ ದಾಯಿಕ ಆಲೋಚನೆ ಹಾಗೂ ಜೀವನ ವಿಧಾನಗಳನ್ನು ಶುದ್ಧೀಕರಿಸುಭಿವುದು ಅಂದರೆ ನಾಶ ಮಾಡು ವುದು ಅದರ ಗುರಿಯಾಗಿತ್ತು

Dr Vijay Darda Column: ಚಿಕನ್ಸ್‌ ನೆಕ್‌ ಮೇಲೆ ಚೀನಾ ಹೊಸ ಸಂಚು !

ಚಿಕನ್ಸ್‌ ನೆಕ್‌ ಮೇಲೆ ಚೀನಾ ಹೊಸ ಸಂಚು !

1971ರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಚಿಕನ್ಸ್ ನೆಕ್ ಪ್ರದೇಶದ ವಾಯುನೆಲೆಗಳು ಮಹತ್ವದ ಪಾತ್ರ ನಿಭಾಯಿಸಿದ್ದವು. ಆದ್ದರಿಂದ ಭಾರತದ ಈ ಶಕ್ತಿಯನ್ನು ದುರ್ಬಲಗೊಳಿಸಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸುತ್ತಿವೆ. ಮೊಹಮ್ಮದ್ ಯೂನಸ್ ಅವರನ್ನೂ ಜೊತೆಗೆ ಸೇರಿಸಿಕೊಂಡರೆ ತಮ್ಮ ಕೈ ಇನ್ನಷ್ಟು ಬಲವಾಗುತ್ತದೆ ಎಂಬುದು ಈ ದೇಶಗಳ ಲೆಕ್ಕಾಚಾರ. ಹೀಗಾಗಿ ಅವರಲ್ಲೊಬ್ಬ ಸ್ನೇಹಿತ ಪಾಕ್ ಮತ್ತು ಚೀನಾಕ್ಕೆ ಕಾಣಿಸಿದ್ದಾನೆ. ಯೂನಸ್‌ಗೂ ಅಧಿಕಾರದಲ್ಲಿ ಮುಂದುವರೆಯಬೇಕು ಅಂತಾದರೆ ಭಾರತದ ಇಬ್ಬರು ಶತ್ರುಗಳ ಬೆಂಬಲ ಬೇಕು.

Vishweshwar Bhat Column: ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಪ್ರತಿ ದೇವಾಲಯದ ಹಿಂದೆ ಧಾರ್ಮಿಕ ಕಾರಣಗಳೇನೇ ಇರಲಿ, ಅದನ್ನು ಕಟ್ಟಿದ ಕತೆಯೇ ರೋಚಕ. ಯಾವುದೋ ಒಂದು ಬೋಳುಗುಡ್ಡದ ಮೇಲೆ ರಾತ್ರೋರಾತ್ರಿ ಒಂದು ಕಲ್ಲನ್ನು ನೆಟ್ಟರೆ ಸಾಕು, ಅದು ಬೆಳಗಾಗುವ ಹೊತ್ತಿಗೆ ಒಂದು ಪುಣ್ಯಕ್ಷೇತ್ರವಾಗಿರುತ್ತದೆ. ಅದರ ಸುತ್ತಮುತ್ತ ನೂರಾರು ಕತೆಗಳು ಹುಟ್ಟಿ ಕೊಳ್ಳುತ್ತವೆ.

Vishweshwar Bhat Column: ಹೈಕುಗಳು: ಜಪಾನಿನ ಕೊಡುಗೆ

ಹೈಕುಗಳು: ಜಪಾನಿನ ಕೊಡುಗೆ

ಹೈಕು ಬರವಣಿಗೆಯನ್ನು ಪ್ರಖ್ಯಾತಿಗೆ ತಂದವರು ಮತ್ಸುಒ ಬಾಶೋ ಎಂಬ ಪ್ರಸಿದ್ಧ ಕವಿ. ಅವರು ಆ ದಿನಗಳಲ್ಲಿ ತನ್ನ ಹೈಕುಗಳ ಮೂಲಕ ಜಪಾನಿನ ಕಾವ್ಯವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಹೈಕುಗಳಲ್ಲಿ ಪ್ರಕೃತಿ, ಬೌದ್ಧತತ್ವಗಳು ಹಾಗೂ ಮಾನವೀಯ ಅನುಭವಗಳ ಗಂಭೀರತೆಯಿದೆ.

Roopa Gururaj Column: ಮನುಷ್ಯನ ತಲೆ ಬುರುಡೆಗಿರುವ ಬೆಲೆ

ಮನುಷ್ಯನ ತಲೆ ಬುರುಡೆಗಿರುವ ಬೆಲೆ

ಸತ್ತ ಮೇಲೆ ಬೆಲೆ ಇರುವುದು ನಾವು ಮಾಡುವ ಸತ್ಕಾರ್ಯಗಳಿಗೆ, ನಮ್ಮ ಶರೀರಕ್ಕಲ್ಲ. ಹಾಗಿದ್ದಾಗ ಬದುಕಿದ್ದಾಗ ಮತ್ತೊಬ್ಬರಿಗೆ ತಲೆಬಾಗಿಸುವುದರಿಂದ, ಕೈ ಮುಗಿಯುವು ದರಿಂದ, ಅಪ್ಪಿ ಪ್ರೀತಿ ಹಂಚುವು ದರಿಂದ ನಾವು ಎಂದಿಗೂ ಚಿಕ್ಕವರಾಗುವುದಿಲ್ಲ. ಅಹಂಕಾರ ಬಿಟ್ಟಾಗ ಮಾತ್ರ ನಾವು ಮನುಷ್ಯರಾಗಿ ಬದುಕಲು ಅರ್ಹತೆ ಹೊಂದುತ್ತೇವೆ