ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಅಂಕಣಗಳು
Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

“ಅಬಾಧಿತ ಜ್ಞಾನದ ಹರಿವು, ಜೀವನಾನುಭವ, ಆಮೋದ, ಖುಷಿ, ಹಿಗ್ಗು, ನಲಿವು, ವಿವಿಧ ಪ್ರಾಂತ್ಯ ಗಳ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಸವಿದು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳುವಿಕೆ ಮತ್ತು ಅಲ್ಲಿನ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ ಇವೆಲ್ಲ ಒಂದೇ ಗುಕ್ಕಿಗೆ ದಕ್ಕಬೇಕೆಂದರೆ, ‘ಪ್ರಯಾಣ-ಪ್ರವಾಸ-ಪರ್ಯಟನೆ-ಯಾತ್ರೆ-ದೇಶ ಸಂಚಾರ’ ಎಂದೆಲ್ಲಾ ಕರೆಯಲ್ಪಡುವ ‘ಊರು ಸುತ್ತೋ ಕಸುಬು’ ಬೆಸ್ಟು ಕಣ್ರೀ!"

Vishwavani Special: ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ದಯಾನಂದ ಅವರು ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣ ಇಡುವ ಪ್ರಯತ್ನ ಮಾಡ ಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆ ಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್‌ಗೆ ಸಕಲವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು.

Dr J N Jagannath Column: ರೆಪೋ ದರದ ಸುತ್ತಮುತ್ತ

ರೆಪೋ ದರದ ಸುತ್ತಮುತ್ತ

ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ‘ಮಾನಿಟರಿ ಪಾಲಿಸಿ ಕಮಿಟಿ’ಯ (ಎಂಪಿಸಿ) ಸಭೆಯು ಮೊನ್ನೆ ಜೂನ್ 6ರಂದು ನಡೆಯಿತು. ಈ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ ನಷ್ಟು ಇಳಿಸುವ ನಿರೀಕ್ಷೆಯಿತ್ತು. ಆದರೆ ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 50 ಬೇಸಿಸ್ ಪಾಯಿಂಟ್ ಇಳಿಸಿರುವುದಾಗಿ ಸಭೆಯ ನಂತರ ತಿಳಿಸಿದ್ದಾರೆ.

Dr Ammasandra Suresh Column: ಹೇಮಾವತಿ ಹೋರಾಟದ ಹಿಂದಿನ ಆತಂಕಗಳು

ಹೇಮಾವತಿ ಹೋರಾಟದ ಹಿಂದಿನ ಆತಂಕಗಳು

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಹೇಮಾವತಿ ನಾಲೆಯ ಮೂಲಕ ನೀರು ತೆಗೆದು ಕೊಂಡು ಹೋಗುವುದಕ್ಕೆ ಜಿಯ ಉಳಿದ ತಾಲೂಕುಗಳಿಂದ ವಿರೋಧ ವ್ಯಕ್ತವಾಗಿಲ್ಲ. ವಿರೋಧವಿರುವುದು, ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಠಾನಕ್ಕೆ ತಂದು ನಾಲೆಯ ಬದಲಾಗಿ ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಗೆ ಮಾತ್ರ. ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಯನ್ನು ಕೈಬಿಟ್ಟು, ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ಆಧುನೀಕರಣ ಮಾಡಿ ರುವ ನಾಲೆಯ ಮೂಲಕ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

Kiran Upadhyay Column: ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ಭೌತಿಕವಾದ ಸೇತುವೆ ಕಣ್ಣಿಗೆ ಕಾಣಿಸುತ್ತದೆ, ಭಾವನೆಯ ಸೇತುವೆ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಸೇತುವೆ ಸ್ಥಳಗಳನ್ನು ಜೋಡಿಸಿದರೆ ಕಾಣದಿದ್ದದ್ದು ಮನಸ್ಸನ್ನು, ಭಾವನೆಯನ್ನು ಬೆಸೆಯುತ್ತದೆ. ಗೋಚರಿಸುವ ಸೇತುವೆ ಸ್ಥಿರವಾಗಿದ್ದರೆ ಭೂಮಿಯೊಂದಿಗೆ ಬಂಧ, ಅಗೋಚರ ಸೇತು ಗಟ್ಟಿಯಾಗಿದ್ದರೆ ಭಾವದೊಂದಿಗೆ ಬಂಧನ ಬಲಿಷ್ಠವಾಗಿರುತ್ತದೆ.

Prakash Shesharaghavachar Column: ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ

ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ

ಮೋದಿಯವರ 11 ವರ್ಷದ ಆಡಳಿತವು ಗಣನೀಯ ಸಾಧನೆಯನ್ನು ಮಾಡಿದೆ. ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅನುಮೋದಿಸಿ ಇತಿಹಾಸ ನಿರ್ಮಿಸಲಾಗಿದೆ. ಸಾಮಾಜಿಕವಾಗಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀ ಕರಣದ ಯೋಜನೆಗಳ ಜಾರಿಯು ಅವರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಸಫಲವಾಗಿದೆ.

R T Vittalmurthy Column: ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಮಂತ್ರಿ ಮಂಡಲದಿಂದ ಯಾರನ್ನಾದರೂ ಕೈ ಬಿಡಲು ಭ್ರಷ್ಟಾಚಾರವೇ ಮಾನದಂಡವಾಗುವುದಾದರೆ ಟಾಪ್ ಲೆವೆಲ್ಲಿನಿಂದಲೇ ಇದನ್ನು ಜಾರಿ ಮಾಡಬೇಕು. ಸಣ್ಣ ಪುಟ್ಟ ಮೀನುಗಳನ್ನು ಬಲಿ ಪಡೆಯುವು ದರಲ್ಲಿ ಅರ್ಥವೇ ಇಲ್ಲ. ಸಂಪುಟ ಪುನರ್ರಚಿಸುವಾಗ ಅದಕ್ಷತೆಯನ್ನು ಮಾನದಂಡ ವಾಗಿಟ್ಟುಕೊಂಡರೆ 6 ರಿಂದ 8 ಮಂದಿಯನ್ನು ಸಚಿವ ಸಂಪುಟದಿಂದ ಕೈ ಬಿಡಬಹುದು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

Vishweshwar Bhat Column: ಲೇಪಿಸ್‌ ಲಜುಲಿ

ಲೇಪಿಸ್‌ ಲಜುಲಿ

ಕರಾಚಿಯಲ್ಲಿರುವ ದಂತ ವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋ ಅವರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲ್ಫಿಕರ್ -ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು.

Chandrashekher Hegde Badami Column: ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.

Narayana Yaji Column: ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳು ತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಈರುಳ್ಳಿ ಬೆಲೆ ಏಕಾ ಏಕಿ ಕುಸಿತ ಕಂಡಿತ್ತು. ಇದರಿಂಂದ ಬೇಸತ್ತ ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿ ಮನಿ ಶರಣಪ್ಪ 3 ಎಕರೆಯಲ್ಲಿ ಬೆಳೆದ ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕುರಿ ಮೇಯಿಸಿ ನಾಶಪಡಿಸಿದ್ದಾರೆ.

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ರಾಜ್ಯ ಸರಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆಯೇ ಹೊರತು, ಪ್ರಕರಣ ಸಂಬಂಧ ಕೈಗೊಳ್ಳಬಹುದಾಗಿದ್ದ ತನಿಖೆಯ ಸ್ವರೂಪವನ್ನೇ ಪ್ರಶ್ನಿಸಿದಿರುವುದು ಪ್ರತಿಪಕ್ಷಗಳ ನಾಯಕರ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

Srivathsa Joshi Column: ಚಿತ್ರಕಾವ್ಯವೆಂಬ ಭಾಷಾ ಚಮತ್ಕಾರ ಇಂಗ್ಲಿಷ್‌ ನಲ್ಲೂ ಇದೆ !

ಚಿತ್ರಕಾವ್ಯವೆಂಬ ಭಾಷಾ ಚಮತ್ಕಾರ ಇಂಗ್ಲಿಷ್‌ ನಲ್ಲೂ ಇದೆ !

ಬೌದ್ಧಿಕ ಚಮತ್ಕಾರ, ಶಾಬ್ದಿಕ ಕ್ರೀಡೆ, ವಿದ್ವತ್ ವಿನೋದ ಇದರ ಮುಖ್ಯ ಉದ್ದೇಶಗಳು. ಸಂಸ್ಕೃತ ದಲ್ಲಂತೂ ಊಹಿಸಲಸದಳ ಸಾಧ್ಯತೆಗಳು ಚಿತ್ರಕಾವ್ಯದಲ್ಲಿ ಅರಳಿದ್ದಿವೆ. ವರ್ಣಚಿತ್ರ (ಸ್ವರ-ವ್ಯಂಜನ ಗಳಿಗೆ ಸಂಬಂಧಿಸಿದ), ಗತಿಚಿತ್ರ (ಅಕ್ಷರಗಳ ನಡೆ), ಭಾಷಾ ಚಿತ್ರ (ಎರಡು ಅಥವಾ ಹೆಚ್ಚು ಭಾಷೆಗಳ ಸಂಕರ), ಗರ್ಭ ಚಿತ್ರ (ಒಂದರೊಳಗೊಂದು ಹುದುಗಿದ), ಗೂಢ ಚಿತ್ರ (ಸಮಸ್ಯಾಪೂರಣ, ಒಗಟು, ಮುಂಡಿಗೆ ಇತ್ಯಾದಿ), ಮತ್ತು ಬಂಧ ಚಿತ್ರ (ಪದ್ಯದ ಮೂಲಕ ಆಕಾರ ರಚನೆ) ಎಂದು ಚಿತ್ರಕಾವ್ಯದ ಉಪಪ್ರಭೇದಗಳಿವೆ.

Hari Paraak Column: ಕರೋನಾ ಪ್ಯಾರ್‌ ಹೈ !

ಕರೋನಾ ಪ್ಯಾರ್‌ ಹೈ !

ಅತ್ತ ಸಿಎಂ ಸಿದ್ರಾಮಯ್ಯರನ್ನು ನೋಡಿದ್ರೆ ಸತ್ತವರಿಗೆ ‘ರೆಸ್ಟ್ ಇನ್ ಪೀಸ್’ ಎಂದು ಹೇಳಿ ಸುಮ್ಮನಾಗದೆ, ಸಿಕ್ಕ ಸಿಕ್ಕವರನ್ನ ‘ಅರೆ’ ಮಾಡುತ್ತಿದ್ದಾರೆ. ಸಸ್ಪೆಂಡ್ ಮಾಡುತ್ತಿದ್ದಾರೆ. ಕಾಲ್ತುಳಿತ ಆಗಿದ್ದು ಯಾರ ತಪ್ಪು ಅಂತ ಪ್ರಶ್ನೆ ಬಂದ್ರೆ, ನೀರಲ್ಲಿ ಆಳ ಗೊತ್ತಿಲ್ಲದೆ ಈಜೋಕೆ ಹೋಗಿ ಮುಳುಗಿ ಸತ್ತವರಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ.

Yagati Raghu Naadig Column: ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

“ಪತ್ತೇದಾರಿ ಕಥೆಯ ತಿರುವು ನೀಡಿದ ‘ಹಿತವಾದ ಆಘಾತ’ವನ್ನು ಅನುಭವಿಸಲೆಂದು ನಾನು ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ಕಾರು ನಿಂತಿತು ಎಂದು ಭಾವಿಸಿದ್ದೆ; ಆದರೆ ಇಲ್ಲಿ ನೋಡಿದರೆ ಅದು ‘ನಾನು ಹಾಕಿದ’ ಬ್ರೇಕ್ ಅಲ್ಲ, ‘ಮೇಲಿನವ ಹಾಕಿಸಿದ’ ಬ್ರೇಕ್ ಅಂತ ಈಗ ಗೊತ್ತಾಯ್ತು" ಎಂದು ಚಾಲಕ ತನಗಾದ ಬೆರಗನ್ನು ಅವಧೂತರಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡ.

Vinayak V Bhat Column: ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ಒಳ್ಳೆಯ ಅನುಭವಿ ಚಾಲಕನಾತ. ಆದರೆ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ. ಡ್ರೈವರು ಗಳೇ ಹಾಗೆ, ಒಂದೋ ಮಾತೇ ಆಡುವುದಿಲ್ಲ, ಇಲ್ಲದಿದ್ದರೆ ಮಾತು ನಿಲ್ಲಿಸುವುದೇ ಇಲ್ಲ. ಈತ ಸ್ವಲ್ಪ ವಾಚಾಳಿ ಎಂತಲೇ ಹೇಳಬಹುದಾದಷ್ಟು ಮಾತುಗಾರನಾಗಿದ್ದ. ಅವನ ಮಾತು ನಿಧಾನಕ್ಕೆ ತಮಿಳು ನಾಡು-ಕರ್ನಾಟಕ, ಕನ್ನಡ-ತಮಿಳು ಎನ್ನುವಲ್ಲಿಗೆ ಹೊರಳಿತು.

Vishweshwar Bhat Column:  ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?

ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?

ಕಾವ್ಯದ ಬಗ್ಗೆ ನನ್ನಲ್ಲಿ ಯಾವ ಹೊಸ ಥಿಯರಿ-ಪ್ರಮೇಯವೂ ಇಲ್ಲ. ಇಂಥ ಕಾವ್ಯವೇ ಸರಿ, ಇಂಥದು ತಪ್ಪು ಎಂದು ನಾನು ಹೇಳಲಾರೆ. ನಾನು ಹೇಳಿ ಕೇಳಿ ಮಾಸ್ತರ. ಮಾಸ್ತರ ಆದವನು ಇದು ಹೀಗೆ, ಇದು ಹಾಗೆ ಎಂದು ವಿವರಿಸುತ್ತಾನೆಯೇ ಹೊರತು ಇದು ಮೇಲು, ಇದು ಕೀಳು ಎಂದು ತೂಗಲು ಹೊರಡುವು ದಿಲ್ಲ. ನವ್ಯಕಾವ್ಯದ ಬಗ್ಗೆ ನನ್ನ ದೃಷ್ಟಿಯೂ ಇದೇ. ಯಾವ ಕಾವ್ಯವೇ ಆಗಲಿ, ಕಾವ್ಯವಾಗಿದ್ದರೆ ಸರಿ ಎನ್ನುತ್ತೇನೆ.

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಧಾರವಾಡ ಜಿಲ್ಲೆ ಪರಿಸ್ಥಿತಿ. ಒಂದೊಳ್ಳೆ ಮನೆ ಖರೀದಿ ಮಾಡಬೇಕು ಎನ್ನುವ ಕನಸು ಕಂಡಿದ್ದ ಜನರಿಗೆ ಇದೀಗ ಕೆಐಎಡಿಬಿ ಅಧಿಕಾರಿಗಳು, ಮೂಲಭೂತ ಸೌಲಭ್ಯವನ್ನು ಕೊಡದೇ ಸತಾಯಿಸುತ್ತಿದ್ದು, ಹರಾಜಿನಲ್ಲಿ ಮನೆ ಖರೀದಿ ಮಾಡಿರುವ ಜನರಿಗೆ ವಾಸಿಸುವ ಮುಂಚೆ ಯೋಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಪ್ರಶಸ್ತಿ ಘೋಷಣೆಯಾಗುವವರೆಗೂ ದೀಪಾಭಾಸ್ತಿಯ ಬಗ್ಗೆ ತಿಳಿದಿದ್ದವರು ಕಡಿಮೆ. ಬಹುತೇಕರಿಗೆ ಆಕೆ ಮಡಿಕೇರಿ ಮೂಲದವರು ಎಂದೇ ಗೊತ್ತಿರಲಿಲ್ಲ. ದೀಪಾ ಭಾಸ್ತಿ ಎಂಬ 42 ವರ್ಷದ ಲೇಖಕಿ ಪಾಲಿಗೆ ತವರಿನ ಮಡಿಕೇರಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಾನುಮುಷ್ತಾಕ್ ಅವರ 6 ಕಥಾ ಸಂಕಲನಗಳಿಂದ 12 ಕತೆಗಳನ್ನು ಆರಿಸಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

ಭಾರತೀಯ ರೈಲ್ವೆಯ ಅತಿ ವೇಗದ ರೈಲು ‘ವಂದೇ ಭಾರತ್’ ಜಮ್ಮು-ಕಾಶ್ಮೀರವನ್ನು ದೇಶದ ಹಲವು ಪ್ರಮುಖ ನಗರಗಳ ಜತೆಗೆ ಜೋಡಿಸುತ್ತಿದೆ. ಭಾರತದ ಪದತಳದ ನಗರಿ ತಮಿಳುನಾಡಿನ ಕನ್ಯಾಕುಮಾರಿ ಯಿಂದ ಕಾಶ್ಮೀರದ ಶ್ರೀನಗರಕ್ಕೆ ನೇರ ರೈಲು ಸಂಪರ್ಕ ಈಗ ಸಾಧ್ಯವಾಗಿದೆ. ಶುಕ್ರವಾರ ಜಮ್ಮು-ಕಾಶ್ಮೀರದ ಕತ್ರಾ ರೈಲು ನಿಲ್ದಾಣದಿಂದ ಶ್ರೀನಗರಕ್ಕೆ ಮೊದಲ ಸಂಚಾರ ನಡೆಸಿದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

Ajakkala Girish Bhat Column:  ಪಂಪ: ಮನುಷ್ಯ ಜಾತಿಯೊಂದೇ ? ಅಥವಾ ಅಸ್ಪ್ರಶ್ಯತೆಯೋ ಇದೆಯೇ ?

ಪಂಪ: ಮನುಷ್ಯ ಜಾತಿಯೊಂದೇ ? ಅಥವಾ ಅಸ್ಪ್ರಶ್ಯತೆಯೋ ಇದೆಯೇ ?

ಜಾತಿಭೇದ ನಿರಾಕರಣೆಯ ಆಶಯವುಳ್ಳ ಅದೇ ಹೆಸರಿನ ನಾಟಕವನ್ನೂ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ಧ್ಯೇಯವಾಕ್ಯವಾಗಿ ಬಳಸಿಕೊಳ್ಳುತ್ತದೆ. ಆ ಸಾಲನ್ನು ಸಂದರ್ಭದಿಂದ ಪ್ರತ್ಯೇಕಿಸಿ ಅದನ್ನೊಂದು ಧ್ಯೇಯವಾಕ್ಯವಾಗಿ ಇಟ್ಟುಕೊಂಡರೆ ತಪ್ಪೇನಿಲ್ಲ. ಆದರ್ಶವಾಕ್ಯವೇ ಹೌದು ಅದು. ಆದರೆ, ಪಂಪನು ಮನುಷ್ಯ ಸಮಾನತೆಯನ್ನು ಸಾರಲು ಈ ವಾಕ್ಯವನ್ನು ಹೇಳಿದನೇ? ಸ್ಪಷ್ಟ ಉತ್ತರ ‘ಇಲ್ಲ’ ಎನ್ನುವುದೇ.

Dr Sadhanashree Column: ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಭಾರತದಲ್ಲಿ ಸುಮಾರು 12 ಪ್ರತಿಶತ ಜನರ ಶತ್ರು ಈ ಅಶ್ಮರೀ! ಈ ಶತ್ರುವು ಸಹಿಸಲಾಗದ ನೋವು ಮತ್ತು ದುಃಖವನ್ನು ನೀಡುತ್ತದೆ. ನೋಡನೋಡುತ್ತಾ ಇದು ಇಷ್ಟು ಹೆಚ್ಚಾಗಲು ಕಾರಣ ಏನು ಗೊತ್ತೇ? ಬನ್ನಿ, ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಕೆಲವು ಪ್ರಮುಖ ಕಾರಣಗಳನ್ನು ತಿಳಿದು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡೋಣ.

Naveen Sagar Column: ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಯಾವುದೂ ಶಾಶ್ವತವಲ್ಲ ಅನ್ನೋದು ಕಳೆದ ಮೂರು ದಿನಗಳಲ್ಲಿ ಮೂರು ರೀತಿಯಲ್ಲಿ ನಿರೂಪಿತ ವಾಗಿಹೋಯ್ತು. ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದ ಆರ್ ಸಿಬಿ ತಂಡದ ಖುಷಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶೋಕವಾಗಿ ಬದಲಾಯ್ತು. ಆರ್‌ಸಿಬಿ ಇನ್ನೂ ಹತ್ತು ಕಪ್ ಗೆದನ್ನು ನೋಡುವಷ್ಟು ಆಯಸ್ಸಿದೆ ಎಂದುಕೊಂಡಿದ್ದ ಹನ್ನೊಂದು ಮಂದಿ, ಕೆಲವೇ ಗಂಟೆಗಳ ಹಿಂದೆ, ತಾವು ಸಾಯ ಬಹುದು ಎಂಬ ಸುಳುಹೂ ಇಲ್ಲದವರು ಇವತ್ತಿಗೆ ಪಂಚಭೂತಗಳಲ್ಲಿ ಲೀನ.

Mohan Vishwa Column: ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು 7 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು, ಪಾಕಿಸ್ತಾನ ಮತ್ತು ಚೀನಾದ ವಿಷಯದಲ್ಲಿ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ. ಚೀನಾ ಎಂಬ ನಯವಂಚಕ ರಾಷ್ಟ್ರವನ್ನು ದೊಡ್ಡ ಶಕ್ತಿಯೆಂದು ದೇಶದೆದುರು ಬಿಂಬಿಸಿದ್ದು ಕಾಂಗ್ರೆಸ್ ಪಕ್ಷವೇ.