ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Leena Joshi Column: ಬಂಗಾರ ಖರೀದಿಗಿಂತ, ಭಾರತವೇ ಬಂಗಾರವಾಗಲಿ

Leena Joshi Column: ಬಂಗಾರ ಖರೀದಿಗಿಂತ, ಭಾರತವೇ ಬಂಗಾರವಾಗಲಿ

ಇತ್ತೀಚಿನ ಐಎಂಎಫ್ ವರದಿಯ ಪ್ರಕಾರ, ಭಾರತವು ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಮತ್ತೆ 6ನೇ ಸ್ಥಾನಕ್ಕೆ ಕುಸಿದಿದೆ ಎಂಬ ಸುದ್ದಿ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೆಲವೇ ವರ್ಷಗಳ ಹಿಂದೆ ಭಾರತವು ಯುನೈಟೆಡ್ ಕಿಂಗ್‌ಡಮ್ ಮತ್ತು ಜಪಾನ್ ದೇಶಗಳನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿ ದಾಗ, ಭಾರತ ಶೀಘ್ರದ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ‌ಯಾಗಲಿದೆ ಎಂಬ ವಿಶ್ವಾಸ ಹೆಚ್ಚಿತ್ತು.

‌Prakash Shesharaghavachar Column: ಕೇಸರಿಮಯವಾಯಿತು ಪಶ್ಚಿಮ ಬಂಗಾಳ

ಕೇಸರಿಮಯವಾಯಿತು ಪಶ್ಚಿಮ ಬಂಗಾಳ

2016ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಅದರ ಬಲ 77ಕ್ಕೇರಿತು. 2026ರಲ್ಲಿ 207 ಸೀಟುಗಳನ್ನು ಗೆಲ್ಲುವ ಮೂಲಕ ಬಂಗಾಳವು ಕೇಸರಿಕರಣವಾಯಿತು. ಬಿಜೆಪಿ ಈ ಎತ್ತರಕ್ಕೆ ಬೆಳೆಯಲು ಅತ್ಯಂತ ಕಠಿಣ ಹಾದಿಯನ್ನು ತುಳಿದಿದೆ. ತೃಣಮೂಲ ಗೂಂಡಾಗಳ ರಾಜಕೀಯ ಹಿಂಸಾಚಾರದಲ್ಲಿ ಕಳೆದ ಹದಿನೈದು ವರ್ಷದಲ್ಲಿ 321 ಕಾರ್ಯಕರ್ತರು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ.

Ravi Sajangadde Column: 'ನೀಟ್‌' ಆಗಿ ಪರೀಕ್ಷೆ ನಡೆಸುವುದೂ ಸತ್ವ ಪರೀಕ್ಷೆಯೇ !

'ನೀಟ್‌' ಆಗಿ ಪರೀಕ್ಷೆ ನಡೆಸುವುದೂ ಸತ್ವ ಪರೀಕ್ಷೆಯೇ !

ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಒಂದಾದ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ವ್ಯವಸ್ಥೆಯ ಲೋಪ ಮತ್ತು ಕೆಲವರ ಹಿಡಿತದಲ್ಲಿ ಇಡೀ ವ್ಯವಸ್ಥೆ ಸಿಲುಕಿ ನಲುಗುತ್ತಿರುವುದಕ್ಕೆ ಜ್ವಲಂತ ಸಾಕ್ಷಿ ಮತ್ತು ಉದಾಹರಣೆ. ಒಟ್ಟಾರೆ ಈ ಇಡೀ ಘಟನೆ ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯ ಕರಾಳ ಮತ್ತು ಕಳಪೆ ಮುಖ-ಗುಣಮಟ್ಟವನ್ನು ಬಯಲು ಮಾಡಿದೆ.‌

Mohan Vishwa Column: ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವ ಸಮಯದಲ್ಲಿ ಆದೇಶವನ್ನು ಪ್ರಕಟಿಸು ವುದು ಸಂವಿಧಾನ ಬಾಹಿರ ಕೆಲಸ. ಹಿಜಾಬ್ ಜೊತೆಗೆ ಜನಿವಾರ, ರುದ್ರಾಕ್ಷಿ ಮತ್ತು ಶಿವದಾರವನ್ನು ಧರಿಸಬಹುದೆಂಬುದನ್ನು ಆದೇಶದಲ್ಲಿ ಹೇಳಿದೆ. ವಿಚಿತ್ರವೆಂದರೆ ಜನಿವಾರ, ಶಿವದಾರವನ್ನು ಹಿಜಾಬ್‌ ನೊಂದಿಗೆ ತಾಳೆ ಮಾಡುವುದು ದೊಡ್ಡ ತಪ್ಪು. ಜನಿವಾರ ಮತ್ತು ಶಿವದಾರವನ್ನು ದಿನದ 24 ಗಂಟೆ ಧರಿಸಲೇ ಬೇಕು.

Vishweshwar Bhat Column: ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ

Vishweshwar Bhat Column: ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ

ಫಿಲಿಪೈನ್ಸ್ ದೇಶವನ್ನು ಜಗತ್ತಿನ ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ (Text Messaging Capital of the World) ಎಂದು ಕರೆಯುವುದು ಕೇವಲ ಉತ್ಪ್ರೇಕ್ಷೆಯಲ್ಲ, ಅದು ಅಂಕಿಅಂಶಗಳಿಂದ ಸಾಬೀತಾದ ಸತ್ಯ. ಸುಮಾರು ಏಳು ಸಾವಿರಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಈ ದೇಶದಲ್ಲಿ, ಜನರು ಪರಸ್ಪರ ಸಂಪರ್ಕ ಸಾಧಿಸಲು ಕಂಡುಕೊಂಡ ಅತ್ಯಂತ ಸುಲಭ ಮತ್ತು ಅಗ್ಗದ ಮಾರ್ಗವೆಂದರೆ ಅದು ಎಸ್‌ಎಂಎಸ್ (SMS).

Roopa Gururaj Column: ಅಂಧಕಾರದ ನಡುವೆ ಜ್ಞಾನದ ಹಸಿವು: ದ್ರೌಪದಿ ಮುರ್ಮು

ಅಂಧಕಾರದ ನಡುವೆ ಜ್ಞಾನದ ಹಸಿವು: ದ್ರೌಪದಿ ಮುರ್ಮು

ಒಂದು ಪುಟ್ಟ ಮಗುವಿನ ಅತಿ ದೊಡ್ಡ ಕನಸು ಏನಾಗಿರಬಹುದು? ಆಟಿಕೆಗಳು? ಬಣ್ಣ-ಬಣ್ಣದ ಬಟ್ಟೆಗಳು? ಅಥವಾ ಐಷಾರಾಮಿ ಜೀವನ? ಆದರೆ, ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಒಂದು ಪುಟ್ಟ ಹಳ್ಳಿಯ ಆ ಹೆಣ್ಣು ಮಗುವಿನ ಕನಸು ಮಾತ್ರ ಅತ್ಯಂತ ಸರಳವಾಗಿತ್ತು. ಆದರೆ, ಅಷ್ಟೇ ದುಬಾರಿ ಯಾಗಿತ್ತು. ಆಕೆಯ ಕನಸು ಕೇವಲ ಒಂದು ತರಗತಿಯ ಒಳಗೆ ಕುಳಿತು ಪಾಠ ಕೇಳುವು ದಾಗಿತ್ತು.

K V Chandramouli Column: ಇತಿಹಾಸ ಯಾರ ಸ್ವತ್ತು? ರೇವಣ್ಣಸಿದ್ಧರ ವಿವಾದದ ಸುತ್ತ

ಇತಿಹಾಸ ಯಾರ ಸ್ವತ್ತು? ರೇವಣ್ಣಸಿದ್ಧರ ವಿವಾದದ ಸುತ್ತ

ಲೇಖಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕಾದ ಸಂಗತಿಯೆಂದರೆ, ಅವರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿದ್ದರೂ ಸಹ ಕರ್ನಾಟಕದ ಧಾರ್ಮಿಕ ವಿಚಾರಗಳು, ವಚನ ಪರಂಪರೆ, ವೀರಶೈವ-ಹಾಲುಮತ ಸಂವಾದಗಳು ಹಾಗೂ ಐತಿಹಾಸಿಕ ಚರ್ಚೆಗಳ ಕುರಿತು ಅಪಾರ ಆಸಕ್ತಿ, ಕಾಳಜಿ ಮತ್ತು ಬೌದ್ಧಿಕ ತೊಡಗಿಸಿಕೊಳ್ಳುವಿಕೆಯನ್ನು ಉಳಿಸಿ ಕೊಂಡಿದ್ದಾರೆ.

Shashidhara Halady Column: ಕನ್ನಡ ಓದುಗರ ಅಭಿರುಚಿ ಮತ್ತು ಗ್ರಂಥಾಲಯ ಖರೀದಿ

ಕನ್ನಡ ಓದುಗರ ಅಭಿರುಚಿ ಮತ್ತು ಗ್ರಂಥಾಲಯ ಖರೀದಿ

‘ತೇಜಸ್ವಿ, ಭೈರಪ್ಪ, ಕಾರಂತ ಇಂತಹವರ ಪುಸ್ತಕಗಳನ್ನು ಹೊರತುಪಡಿಸಿದರೆ, ಕನ್ನಡ ಪುಸ್ತಕ ಮಾರಾಟಗಾರರು ತಮ್ಮ ವೃತ್ತಿಯನ್ನು ಮುಂದುವರಿಸಲು ಅನುಕೂಲವಾಗುವಂತೆ ಮಾರಾಟ ವಾಗುವ ಕನ್ನಡ ಪುಸ್ತಕಗಳು ಯಾವುವು?’ ಎಂದು ಕೇಳಿದೆ. ಒಂದರ ಹಿಂದೆ ಒಂದರಂತೆ ಕೇಳಿದ ನನ್ನ ಕೆದಕುವ ಪ್ರಶ್ನೆಗಳು ಅವರ ತಾಳ್ಮೆಯನ್ನೇ ಪರೀಕ್ಷಿಸಿರಬೇಕು.

Shishir Hegde Column: ಸ್ಪರ್ಧೆ ಮುಗಿದ ಮೇಲೆ ನಮಗೆ ಅಲ್ಲೊಬ್ಬ ಸಿಗುತ್ತಾನೆ

ಸ್ಪರ್ಧೆ ಮುಗಿದ ಮೇಲೆ ನಮಗೆ ಅಲ್ಲೊಬ್ಬ ಸಿಗುತ್ತಾನೆ

ಹುಡುಗ ಮೈಕಲ್ ಫೆಲ್ಪ್ಸ್‌ಗೆ ಸ್ವಿಮ್ಮಿಂಗ್ ಪೂಲ್ ಹುಚ್ಚು ಹಿಡಿದುಹೋಯಿತು. ಮಕ್ಕಳಿಗೆ ಸಹಜ ವಾಗಿ ನೀರಿನ ಆಟ, ಈಜಾಟ ಖುಷಿ. ಇವನೋ ವಿಚಿತ್ರ. ಹುಚ್ಚು ಎಷ್ಟೆಂದರೆ ಇವನ ವಾರಿಗೆಯವ ರೆಲ್ಲ ಯಾವ ಹವ್ಯಾಸ ಇಷ್ಟವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಮಲಗಿದ್ದರೆ, ಫೆಲ್ಪ್ಸ್ ಬೆಳಿಗ್ಗೆ ಐದು ಗಂಟೆಗೆ ಹೋಗಿ ತಣ್ಣನೆಯ ಈಜುಕೊಳದೊಳಗೆ ಹಾರುತ್ತಿದ್ದ. ಅವನ ಕೋಚ್ - ಗುರುವಿಗೆ ಇವನಲ್ಲಿನ ಅಸಾಮಾನ್ಯ ಸಾಮರ್ಥ್ಯ ತಿಳಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

Keshava Prasad B Column: ಇಂಧನ ಭದ್ರತೆಗೆ ಭಾರತದ ದಿಟ್ಟ ಸಾಹಸಗಳ ಬಲ್ಲಿರಾ ?!

ಇಂಧನ ಭದ್ರತೆಗೆ ಭಾರತದ ದಿಟ್ಟ ಸಾಹಸಗಳ ಬಲ್ಲಿರಾ ?!

ಭಾರತದಲ್ಲಿ 2026ರ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ 8.3 ಪರ್ಸೆಂಟ್‌ಗೆ ಏರಿಕೆಯಾಗಿದೆ. ಕಚ್ಚಾ ತೈಲ ದರ ಏರಿಕೆಯೇ ಇದಕ್ಕೆ ಪ್ರಮುಖ ಕಾರಣ. ಉತ್ಪಾದನೆಯ ವೆಚ್ಚ ದಿನೇದಿನೇ ಜಾಸ್ತಿಯಾಗು ತ್ತಿದೆ. ಲಾಜಿಸ್ಟಿಕ್ಸ್ ದುಬಾರಿಯಾಗುತ್ತಿದೆ. ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಬ್ರೆಂಟ್ ಕಚ್ಚಾ ತೈಲ ದರ 70‌ ಡಾಲರ್‌ನಿಂದ 105 ಡಾಲರ್‌ಗೆ ಜಿಗಿದಿದೆ.

Vishweshwar Bhat Column: ಪಂಡಾ ಎಕ್ಸ್‌ಪ್ರೆಸ್ ಎಂದರೇನು ?

Vishweshwar Bhat Column: ಪಂಡಾ ಎಕ್ಸ್‌ಪ್ರೆಸ್ ಎಂದರೇನು ?

ಪಂಡಾ ಎಕ್ಸ್‌ಪ್ರೆಸ್ ಎಂಬುದು ಇಂದು ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಅಮೇರಿಕನ್-ಚೈನೀಸ್ ಪಾಕಪದ್ಧತಿಯ ದೈತ್ಯ ಸಂಸ್ಥೆ. ಈ ಸಂಸ್ಥೆಯ ಬೆಳವಣಿಗೆಯ ಕಥೆಯು ಕೇವಲ ಒಂದು ರೆಸ್ಟೋರೆಂಟ್‌ನ ಯಶಸ್ಸಿನ ಕಥೆಯಲ್ಲ. ಅದು ಪರಿಶ್ರಮ, ನಾವೀನ್ಯ ಮತ್ತು ಸಂಸ್ಕೃತಿಗಳ ಸಮ್ಮಿಲನದ ಅದ್ಭುತ ಪಯಣವಾಗಿದೆ.

Roopa Gururaj Column: ಸಾವನ್ನು ನಗುತ್ತಲೇ ಗೆದ್ದ ಅಪ್ರತಿಮ ವೀರ: ಸ್ಯಾಮ್‌ ಮಾಣಿಕ್‌ʼಶಾ

ಸಾವನ್ನು ನಗುತ್ತಲೇ ಗೆದ್ದ ಅಪ್ರತಿಮ ವೀರ: ಸ್ಯಾಮ್‌ ಮಾಣಿಕ್‌ʼಶಾ

ಒಂಬತ್ತು ಗುಂಡುಗಳು ಅವರ ಹೊಟ್ಟೆ, ಶ್ವಾಸಕೋಶ ಮತ್ತು ಯಕೃತ್ತನ್ನು ಛಿದ್ರ ಗೊಳಿಸಿದ್ದವು. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಸ್ಯಾಮ್ ಅವರನ್ನು ನೋಡಿ, ಜತೆಗಿದ್ದವರು ಅವರು ಬದುಕುವುದು ಅಸಾಧ್ಯವೆಂದೇ ಭಾವಿಸಿದ್ದರು. ಅವರ ಅದಮ್ಯ ಶೌರ್ಯವನ್ನು ಕಣ್ಣಾರೆ ಕಂಡಿದ್ದ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಡೇವಿಡ್ ಕೋವನ್ ಓಡಿ ಬಂದು ಸ್ಯಾಮ್ ಅವರ ಸ್ಥಿತಿಯನ್ನು ಕಂಡರು.

Hosmane Muttu Column: ಹತಾಶೆಯ ಸ್ಕ್ರೀನ್‌ನಿಂದ ಹಸನಾದ ಬದುಕಿನತ್ತ..!

Hosmane Muttu Column: ಹತಾಶೆಯ ಸ್ಕ್ರೀನ್‌ನಿಂದ ಹಸನಾದ ಬದುಕಿನತ್ತ..!

ಮೊಬೈಲ್ ಪರದೆಯ ನೀಲಿ ಬೆಳಕು ನಿದ್ರೆಯ ಚಕ್ರವನ್ನು ಅಸ್ತವ್ಯಸ್ತಗೊಳಿಸಿ ನಿದ್ರಾಹೀನತೆಗೆ ಕಾರಣ ವಾಗುತ್ತದೆ. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತು ಸ್ಕ್ರೋಲ್ ಮಾಡುವುದರಿಂದ ಕಣ್ಣಿನ ತೊಂದರೆ, ತಲೆನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳಬಹುದು. ಇದು ಕೆಲಸದ ಉತ್ಪಾದಕತೆಯನ್ನು ಕುಂಠಿತಗೊಳಿಸುವುದಲ್ಲದೆ, ಕುಟುಂಬ ಸದಸ್ಯರ ನಡುವಿನ ಭಾವನಾತ್ಮಕ ಸಂಬಂಧಗಳನ್ನು ದೂರ ಮಾಡುತ್ತಿದೆ.

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

ಇತ್ತೀಚಿನ ಸಂಶೋಧನೆಗಳು ಕಳಲೆಗಳಲ್ಲಿ ಇರುವ ಪೌಷ್ಟಿಕಾಂಶಗಳ ಬಗ್ಗೆ ಹೊಸ ಬೆಳಕು ಚೆಲ್ಲಿವೆ. ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಾಂಶ, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಹಲವು ಖನಿಜಾಂಶಗಳನ್ನು ಹೊಂದಿರುವ ಕಳಲೆಗಳು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Prof G N Upadhya Column: ಲೋಕಹಿತಕ್ಕಾಗಿ ಈ ಬದುಕು !

Prof G N Upadhya Column: ಲೋಕಹಿತಕ್ಕಾಗಿ ಈ ಬದುಕು !

ಸುಯೋಗಾಶ್ರಯ ಕೇವಲ ವೃದ್ಧಾಶ್ರಮವಲ್ಲ, ಅದು ಬರೇ ಅನಾಥಾಶ್ರಮವೂ ಅಲ್ಲ. ಅದೊಂದು ಹಿರಿಯ ಜೀವಿಗಳ ನೆಮ್ಮದಿಯ ತಾಣ ಅಂತ ಹೇಳಿದರೆ ಅತ್ಯುಕ್ತಿಯಾಗದು. ನೊಂದವರ, ಬೆಂದವರ, ದಿಕ್ಕಿಲ್ಲದ, ಗತಿಗೋತ್ರ ಇಲ್ಲದ ಜೀವಿಗಳಿಗೆ ಆಶ್ರಯ ನೀಡಿ ನೆಮ್ಮದಿಯ ತಾಣವೊಂದನ್ನು ಸ್ಥಾಪಿಸಿ ಕಳೆದ ಹದಿನೈದು ವರ್ಷಗಳಿಂದ ಅದಕ್ಕಾಗಿ ಅಹರ್ನಿಶಿ ದುಡಿಯುತ್ತ ಬಂದವರು ಲತಿಕಾ ಆಯಿ.

Dr Vijay Darda Column: ಅಮಿತ್‌ ಶಾ ಹೆಣೆದ ರಣವ್ಯೂಹ, ಮಂಡಿಯೂರಿದ ದೀದಿ !

ಅಮಿತ್‌ ಶಾ ಹೆಣೆದ ರಣವ್ಯೂಹ, ಮಂಡಿಯೂರಿದ ದೀದಿ !

ಒಂದೆಡೆ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಿರ್ಭೀತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಟೊಂಕ ಕಟ್ಟಿತ್ತು. ಇನ್ನೊಂದೆಡೆ ಅಮಿತ್ ಶಾ ಅವರು ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ, ಯಾವುದೇ ರಾಜಕೀಯ ಪಕ್ಷದಿಂದ ಬೆದರಿಕೆ ಬಂದರೂ ಕೆಚ್ಚೆದೆಯಿಂದ ಎದುರಿಸಿ ಎಂದು ಹುರಿದುಂಬಿಸಿದ್ದರು.

Roopa Gururaj Column: ತುಳಸೀದಾಸರ ಹನುಮಾನ್ ಚಾಲೀಸಾದ ಉಗಮದ ಕಥೆ

ತುಳಸೀದಾಸರ ಹನುಮಾನ್ ಚಾಲೀಸಾದ ಉಗಮದ ಕಥೆ

ಪುರಾಣಗಳ ಪ್ರಕಾರ, ತುಳಸೀದಾಸರು ಚಾಲೀಸಾವನ್ನು ಪೂರ್ಣಗೊಳಿಸಿದಾಗ ಒಂದು ಅದ್ಭುತ ನಡೆಯಿತು. ಹಠಾತ್ತನೆ ಸಾವಿರಾರು ಮಂಗಗಳ ಸೈನ್ಯವು ಅಕ್ಬರನ ಅರಮನೆ ಮತ್ತು ಜೈಲನ್ನು ಮುತ್ತಿಗೆ ಹಾಕಿದವು. ಮಂಗಗಳು ಎಲ್ಲೆಡೆ ನಾಶ ಮಾಡಲು ಶುರುಮಾಡಿದವು, ಸೈನಿಕರಿಗೆ ಅವು ಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ತುಳಸೀದಾಸರ ಭಕ್ತಿಯ ಶಕ್ತಿ ಎಂದು ಅರಿತ ಅಕ್ಬರನು ತಕ್ಷಣ ಜೈಲಿಗೆ ಧಾವಿಸಿ, ಅವರ ಕ್ಷಮೆ ಕೇಳಿ ಅವರನ್ನು ಬಿಡುಗಡೆ ಮಾಡಿದನು.

Harish Kera Column: ಭಯವಾಗುತ್ತದೆ ಎಂಬ ಬರಹಗಾರರಿಗೆ ಎರಡು ಮಾತು

ಭಯವಾಗುತ್ತದೆ ಎಂಬ ಬರಹಗಾರರಿಗೆ ಎರಡು ಮಾತು

ಒಂದು ಬರಹ ಬರೆಯುವುದು, ಮೇಜು ತಯಾರಿಸುವಷ್ಟೇ ಕಷ್ಟ. ಎರಡರಲ್ಲೂ ನಾವು ನಿಜವಾದ ವಸ್ತುಗಳ ಜೊತೆ ಕೆಲಸ ಮಾಡುತ್ತೇವೆ. ಮರ ಎಷ್ಟು ಗಟ್ಟಿಯೋ, ಜೀವನವೂ ಅಷ್ಟೇ ಗಟ್ಟಿ. ಎರಡರಲ್ಲೂ ತಂತ್ರಗಳು, ಕೌಶಲ್ಯಗಳು ಬೇಕಾಗುತ್ತವೆ. ನಿಜ ಹೇಳುವುದಾದರೆ ಇದರಲ್ಲಿ ಮ್ಯಾಜಿಕ್ ತುಂಬಾ ಕಡಿಮೆ.

Gururaj Gantihole Column: ಪಶ್ಚಿಮ ಬಂಗಾಳದಲ್ಲಿ ಪುಟಿದೆದ್ದ ಪ್ರಚಂಡಶಕ್ತಿ ಭಾರತೀಯ ಜನತಾ ಪಕ್ಷ !

ಪಶ್ಚಿಮ ಬಂಗಾಳದಲ್ಲಿ ಪುಟಿದೆದ್ದ ಪ್ರಚಂಡಶಕ್ತಿ ಭಾರತೀಯ ಜನತಾ ಪಕ್ಷ !

ಸ್ವಾತಂತ್ರ್ಯಾನಂತರ ಇಲ್ಲಿ ಕಮ್ಯುನಿಸ್ಟ್ ಚಳವಳಿ ಬಲವಾಗಿ ಬೆಳೆಯಿತು. ಸುಮಾರು 34 ವರ್ಷ ಗಳ ಕಾಲ ಕಮ್ಯುನಿ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿ) ನೇತೃತ್ವದ ಎಡಪಂಥೀಯ ಸರಕಾರ ಅಧಿಕಾರದಲ್ಲಿತ್ತು. ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ರಾಜ್ಯದ ರಾಜಕೀಯದ ಕೇಂದ್ರಬಿಂದುವಾಯಿತು. ಈ ಹಿನ್ನೆಲೆಯ ಬಿಜೆಪಿ ಬಂಗಾಳ‌ ದಲ್ಲಿ ಬೆಳೆಯುವುದು ಅನೇಕರಿಗೆ ಅಸಾಧ್ಯವೆನಿಸಿತ್ತು.

Vishweshwar Bhat Column: ರಸ್ತೆಗಿಂತ ಆಕಾಶವೇ ಸುರಕ್ಷಿತ: ಗಗನಯಾನದ ಅಸಲಿ ಮುಖ

ರಸ್ತೆಗಿಂತ ಆಕಾಶವೇ ಸುರಕ್ಷಿತ: ಗಗನಯಾನದ ಅಸಲಿ ಮುಖ

ಬಸ್ಸು ಕಂದಕಕ್ಕೆ ಬಿದ್ದರೆ, ಯಾರೂ ಬಸ್ ಹತ್ತದೇ ಇರುವುದಿಲ್ಲ. ರೈಲು ದುರಂತವಾದರೆ, ರೈಲಿನಲ್ಲಿ ಹೋಗಲು ಭಯಪಡುವುದಿಲ್ಲ. ಹಾಗೆ ಕಾರು ಅಪಘಾತ ಸುದ್ದಿ ಓದಿದವರು ಆರಾಮಾಗಿ ಕಾರು ಓಡಿಸಿಕೊಂಡು ಹೋಗುತ್ತಾರೆ. ಆದರೆ ಈ ಮಾತು ವಿಮಾನ ದುರಂತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಯಾವ ವಿಮಾನಯಾನ ಸಂಸ್ಥೆಯೂ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ.

Vishweshwar Bhat Column: ಲಕ್ಷ್ಮಣ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ?

Vishweshwar Bhat Column: ಲಕ್ಷ್ಮಣ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ?

ತಮ್ಮ ವೃತ್ತಿಜೀವನದ ಉತ್ತರಾರ್ಧದಲ್ಲಿ ಅವರು ರಾಜಕಾರಣಿಗಳ ವ್ಯಂಗ್ಯಚಿತ್ರ ಗಳನ್ನು ಬಿಡಿಸುವ ಬಗ್ಗೆ ಒಂದು ವಿಶಿಷ್ಟ ಮತ್ತು ತುಸು ಬೇಸರದ ಮಾತನ್ನಾಡಿದ್ದರು. ‘ರಾಜಕಾರಣಿಗಳು ತಾವೇ ಸ್ವತಃ ಕಾರ್ಟೂನ್‌ಗಳಂತೆ ವರ್ತಿಸಲು ಶುರುಮಾಡಿದ ಮೇಲೆ, ನಾನು ಅವರ ವ್ಯಂಗ್ಯಚಿತ್ರ ಬಿಡಿಸುವುದನ್ನು ನಿಲ್ಲಿಸಿದೆ’ ಎಂಬುದು ಅವರ ಮಾರ್ಮಿಕ ನುಡಿಯಾಗಿತ್ತು.

ಮತಪತ್ರದ ಚುನಾವಣೆ: ಬೇಕು ಚಿಂತನೆ

ಮತಪತ್ರದ ಚುನಾವಣೆ: ಬೇಕು ಚಿಂತನೆ

ಪ್ರತಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತವರು ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗುವುದು ಸಹಜ. ಆದರೆ, ಮರು ಎಣಿಕೆಯ ಸಂದರ್ಭದಲ್ಲಿ ಇವಿಎಂ ಯಂತ್ರದಲ್ಲಿನ ಅಂಕಿ-ಅಂಶಗಳು ಬದಲಾಗುವ ಸಂಭವ ಬಹಳ ಕಡಿಮೆ ಇರುತ್ತದೆ. ಆದರೆ, ಚುನಾವಣಾ ಕೆಲಸಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ‘ಪೋಸ್ಟಲ್ ಬ್ಯಾಲೆಟ್’ ಅಥವಾ ಅಂಚೆ ಮತ ಪತ್ರಗಳ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತಿವೆ.

S R Ramaswamy Column: ಜಯದೇವ ನಮಗೆ ಕಲಿಯುವುದನ್ನು ಕಲಿಸಿಕೊಟ್ಟರು

ಜಯದೇವ ನಮಗೆ ಕಲಿಯುವುದನ್ನು ಕಲಿಸಿಕೊಟ್ಟರು

ದೊಡ್ಡ ಪ್ರಮಾಣದ, ದೇಸೀತಳಿಗಳ ಐನೂರು ಗೋವುಗಳು ಇರುವ ದೊಡ್ಡ ಗೋಶಾಲೆ, ಪ್ರತಿಭಾವಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ಮೂಲದ ವಿದ್ಯಾರ್ಥಿ ಗಳಿಗೆ ನಿಃಶುಲ್ಕ ಶಿಕ್ಷಣ ಕೊಡುತ್ತಿರುವ ‘ತಪಸ್’ ಪ್ರಕಲ್ಪ, ರಾಜ್ಯದ ಅನನ್ಯ ಎನ್ನಿಸಿಕೊಂಡಿರುವ ರಕ್ತನಿಧಿ, ‘ತಲಸ್ಸೇಮಿಯಾ’ ಮಕ್ಕಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರ - ಹೀಗೆ ಎಲ್ಲಾ ಮುಖಗಳಲ್ಲಿ ಪರಿಷತ್ತಿನ ಚಟುವಟಿಕೆಗಳು ವಿಸ್ತರಿಸುತ್ತಿರುವುದು ತಿಳಿದೇ ಇದೆ.

Lokesh Kayarga Column: ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಬೆಟ್ಟ ಗುಡ್ಡಗಳನ್ನು ಏರಿಳಿದು, ಕಾಡುಮೇಡುಗಳನ್ನು ಸುತ್ತಿ, ನದಿ, ತೊರೆಗಳಲ್ಲಿ ಮಿಂದು ಪಾವನರಾಗುವ ಕ್ರಿಯೆ ಕೇವಲ ಭಕ್ತಿ ಮತ್ತು ನಂಬಿಕೆಗೆ ಸೀಮಿತವಾದುದಲ್ಲ. ಅದು ದೇಹ ಮತ್ತು ಮನಸ್ಸಿಗೆ ಮುದ ನೀಡುವ, ಮಾನಸಿಕ, ದೈಹಿಕ ಒತ್ತಡಗಳನ್ನು ಇಳಿಸಿಕೊಳ್ಳುವ, ಪರಸ್ಪರ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವ, ಮಾಡಿರುವ ತಪ್ಪುಗಳಿಗೆ ಮರುಗುವ, ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ಕಾಪಿಡುವ ಮಾರ್ಗವೂ ಹೌದು. ಆದರೆ ಇದಕ್ಕೆ ಸಾಕ್ಷಿಯಾಗುವ ಯಾವುದೇ ದೇಗುಲದ ಪರಿಸರವು ಪ್ರಕೃತಿದತ್ತವಾದ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮಾಲ್‌ಗಳಿಗೂ, ಯಾತ್ರಾ ಸ್ಥಳಗಳಿಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ.

Loading...