ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Dr Sadhanashree Column: ವ್ರತ ಮುಗಿದರೂ ಲಕ್ಷ್ಮೀ ಉಳಿಯಲಿ

ವ್ರತ ಮುಗಿದರೂ ಲಕ್ಷ್ಮೀ ಉಳಿಯಲಿ

ಅಷ್ಟಲಕ್ಷ್ಮಿಯನ್ನು ಕೇವಲ ಪೂಜಿಸುವ ಎಂಟು ರೂಪಗಳೆಂದು ನೋಡದೆ, ನಮ್ಮ ಬದುಕು ನಿಜವಾಗಿ ಸಮೃದ್ಧವಾಗಲು ಅಗತ್ಯವಿರುವ ಎಂಟು ಆಯಾಮಗಳೆಂದು ನೋಡಿದರೆ, ಅದರೊಳಗೆ ಆರೋಗ್ಯದ ಒಂದು ಅದ್ಭುತ ಸಂದೇಶ ಕಾಣಿಸುತ್ತದೆ. ಮೊದಲನೆಯದು ಧನಲಕ್ಷ್ಮಿ. ಸಂಪತ್ತು ಜೀವನಕ್ಕೆ ಅಗತ್ಯ. ಆದರೆ ಸಂಪತ್ತಿನ ಅರ್ಥ ಕೇವಲ ಹಣವಲ್ಲ. ನಮ್ಮ ಬದುಕಿಗೆ ಅಗತ್ಯವಾದ ಸಂಪನ್ಮೂಲಗಳು, ಸುರಕ್ಷತೆ, ಜೀವನವನ್ನು ಸುಗಮವಾಗಿ ನಡೆಸುವ ಸಾಮರ್ಥ್ಯ ಇವೆಲ್ಲವೂ ಧನದ ಭಾಗ

ಹೆದ್ದಾರಿಯ ಮೇಲೊಂದು ತುಣುಕು ನಗೆ!

ಹೆದ್ದಾರಿಯ ಮೇಲೊಂದು ತುಣುಕು ನಗೆ!

ನಗು ಕೇವಲ ಸಂತೋಷದ ದ್ಯೋತಕವಲ್ಲ, ಅದು ಜೀವನದ ಮೇಲಿನ ಭರವಸೆ, ಸಕಾರಾತ್ಮಕತೆ ಮತ್ತು ಸೌಹಾರ್ದತೆಯ ಸಂಕೇತ. ಅಳು ಕೂಡ ಅತ್ಯಂತ ಆಳವಾದ ಮತ್ತು ಶಕ್ತಿಯುತವಾದ ಭಾವನೆ. ಬದುಕಿನ ನಾಣ್ಯಕ್ಕೆ ಎರಡು ಮುಖಗಳಿದ್ದಂತೆ! ನಗುವಿಲ್ಲದೆ ಅಳು ಹುಟ್ಟಲಾರದು; ಅಳು ಇಲ್ಲದೆ ನಗು ಹುಟ್ಟಲಾರದು. ಇದೊಂದು ನಗುವಿನ ಕಥೆ ಮತ್ತು ಚರಿತ್ರೆ. ‌

K V Chandramouli Column: ಗಾಂಧಿ ಟು ಅಂಬೇಡ್ಕರ್:‌ ಬದಲಾಗುತ್ತಿದೆ ರಾಜಕೀಯ ಸಂಸ್ಕೃತಿ

ಗಾಂಧಿ ಟು ಅಂಬೇಡ್ಕರ್:‌ ಬದಲಾಗುತ್ತಿದೆ ರಾಜಕೀಯ ಸಂಸ್ಕೃತಿ

ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯ ಭಾಷಣಗಳು ಮತ್ತು ಜನಸಮೂಹಗಳ ಸಜ್ಜುಗೊಳಿಸು ವಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೆ, ಮಹಾತ್ಮ ಗಾಂಧೀಜಿ ಅವರು ದೈನಂದಿನ ರಾಜಕೀಯ ಸಂವಾದದಲ್ಲಿ ಕಡಿಮೆ ಕಾಣಿಸಿಕೊಂಡು, ಹೆಚ್ಚು ಸ್ಮರಣಾರ್ಥ ಸಂದರ್ಭಗಳಿಗೆ ಸೀಮಿತರಾಗುತ್ತಿರುವಂತೆ ಕಾಣುತ್ತಾರೆ. ಇದರರ್ಥ ಗಾಂಧೀಜಿ ಮರೆಯಾಗಿದ್ದಾರೆ ಎಂದಲ್ಲ. ಆದರೆ ಇದು ಒಂದು ಆಳವಾದ ಪ್ರಶ್ನೆಯನ್ನು ಎತ್ತುತ್ತದೆ.

Leena Joshi Column: 1947ರಲ್ಲಿ ಬ್ರಿಟಿಷರು ಸುಟ್ಟ 4 ಟನ್‌ ರಹಸ್ಯ !

1947ರಲ್ಲಿ ಬ್ರಿಟಿಷರು ಸುಟ್ಟ 4 ಟನ್‌ ರಹಸ್ಯ !

ನನ್ನನ್ನು ಬೆಚ್ಚಿಬೀಳಿಸಿದ್ದು, ಕಾರ್‌ಫೀಲ್ಡ್ ಮತ್ತು ಅವರ ಇಲಾಖೆಯ ಬಳಿ ಇದ್ದ ಕೆಲವು ಸೂಕ್ಷ್ಮ ದಾಖಲೆಗಳನ್ನು ನಾಶಪಡಿಸುವ ಕ್ರಮ. ಕೆಲವು ಐತಿಹಾಸಿಕ ಮೂಲಗಳು ಸುಮಾರು ನಾಲ್ಕು ಟನ್ ದಾಖಲೆಗಳು ನಾಶವಾದವು ಎಂದು ಉ‌ಲ್ಲೇಖಿಸುತ್ತವೆ. ನಾಲ್ಕು ಟನ್! ಈ ಸಂಖ್ಯೆಯನ್ನು ಓದಿದಾಗ ಮೊದಲಿಗೆ ಅದು ಕೇವಲ ಒಂದು ಅಂಕಿಯಂತೆ ಕಾಣುತ್ತದೆ. ಆದರೆ ಒಂದು ಕ್ಷಣ ಯೋಚಿಸಿ! ನಾಲ್ಕು ಟನ್ ಕಾಗದದೊಳಗೆ ಎಷ್ಟು ರಾಜರ ಕಥೆಗಳಿರಬಹುದು? ಎಷ್ಟು ಕುಟುಂಬಗಳ ಒಳಜಗಳಗಳಿರ ಬಹುದು? ಎಷ್ಟು ಗುಪ್ತ ಮಾತುಕತೆಗಳಿರಬಹುದು? ಯಾವ ರಾಜಕೀಯ ನಿರ್ಧಾರಗಳ ಹಿನ್ನೆಲೆ ಇರಬಹುದು? ನಾವು ಇಂದು ತಿಳಿದಿರುವ ಭಾರತದ ಇತಿಹಾಸಕ್ಕಿಂತ ಬೇರೆ ಒಂದು ಚಿತ್ರ ಆ ದಾಖಲೆ ಗಳಲ್ಲಿ ಅಡಗಿದ್ದಿರಬಹುದೇ? ತೀನ್ ಮೂರ್ತಿಭವನದಲ್ಲಿ, ನೆಹರು ಆರ್ಕೈವ್‌ನಲ್ಲಿ, 13 ಜೂನ್ 1947ರ ಒಂದು ಪ್ರಮುಖ ದಾಖಲೆಯಿದೆ.

Mohan Vishwa Column: ಕಲ್ಲಿನಲಿ ಅರಳಿದ ಮಹಾಕಾವ್ಯ ಎಲ್ಲೋರಾ

ಕಲ್ಲಿನಲಿ ಅರಳಿದ ಮಹಾಕಾವ್ಯ ಎಲ್ಲೋರಾ

‘ಎರಾ’ ಎಂಬ ಹೆಸರು ಪ್ರಾಚೀನ ‘ಎಲಾಪುರ’ ಎಂಬ ಹೆಸರಿನಿಂದ ರೂಪುಗೊಂಡಿದೆ. ಪ್ರಾಚೀನ ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಮಾರ್ಗಗಳೊಂದಿಗೆ ಈ ಪ್ರದೇಶಕ್ಕೆ ಸಂಪರ್ಕವಿದ್ದುದರಿಂದ ವ್ಯಾಪಾರಿಗಳು, ಯಾತ್ರಿಕರು ಮತ್ತು ಧಾರ್ಮಿಕ ಸಮುದಾಯಗಳ ಸಂಚಾರ ಇಲ್ಲಿ ನಡೆದಿತ್ತು. ಇದೇ ಹಿನ್ನೆಲೆ ಎರಾವನ್ನು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಲು ಸಹಾಯ ಮಾಡಿತು.

T‌uruvekere Prasad Column: ಬಹುಕೃತ ವೇಷಗಳಿಲ್ಲದ ನೇರನಡೆಯ ಜನಸೇವಕ ಬಿ.ಸಿ.ನಾಗೇಶ್

ಬಹುಕೃತ ವೇಷಗಳಿಲ್ಲದ ನೇರನಡೆಯ ಜನಸೇವಕ ಬಿ.ಸಿ.ನಾಗೇಶ್

ಹಲವು ಬಾರಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಾದಾಗಲೋ, ಇಲ್ಲ ಸರಕಾರ, ಪಕ್ಷದ ಹೈಕಮಾಂಡ್ ಉಳಿತಾಯದ ಮಾತಾಡಿದಾಗಲೋ ಸಾಮಾನ್ಯವಾಗಿ ಸಚಿವರು, ಜನಪ್ರತಿನಿಧಿಗಳು ಇಂತಹ ಪೆರೇಡ್ ಶುರು ಹಚ್ಚಿಕೊಳ್ಳುತ್ತಾರೆ. ಜನರ ಮಧ್ಯೆ ಜನಸಾರಿಗೆಯಲ್ಲಿ ಪ್ರಯಾಣಿಸುವ ಸರ್ಕಸ್ ಮಾಡಿ ಒಂದಷ್ಟು ದಿನಗಳ ನಂತರ ಎಲ್ಲಾ ಮರೆತು ಎಸಿ ಕಾರ್ ಹತ್ತುತ್ತಾರೆ. ಆದರೆ ನಾಗೇಶ್ ಯಾರನ್ನೋ ಮೆಚ್ಚಿಸಲು ಇಲ್ಲ ಯಾವುದೋ ಅಗ್ಗದ ಪ್ರಚಾರಕ್ಕಾಗಿ ಹೀಗೆ ನಡೆದುಕೊಂಡವರಲ್ಲ. ಅವರು ಸ್ವಪ್ರೇರಣೆಯಿಂದಲೇ ಹೀಗೆ ಅನುಕರಣೀಯ ಮಾದರಿ ಆದವರು.

Vishweshwar Bhat Column: ದುಜಾ ದೇವಿ ಯಾರು ಗೊತ್ತಾ ?

ದುಜಾ ದೇವಿ ಯಾರು ಗೊತ್ತಾ ?

ಚಂದ್ರಶೇಖರ್ ಮತ್ತು ದುಜಾ ದೇವಿ ವಿವಾಹವು ಆ ಕಾಲದ ಪದ್ಧತಿಯಂತೆ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ವಿವಾಹದ ನಂತರ ದುಜಾ ದೇವಿ, ಚಂದ್ರಶೇಖರ್ ಅವರ ಬಡತನದ, ಸವಾಲು ಗಳಿಂದ ಕೂಡಿದ ಜೀವನಕ್ಕೆ ಯಾವುದೇ ಮುಜುಗರವಿಲ್ಲದೇ ಹೊಂದಿಕೊಂಡರು. ಯುವ ಚಂದ್ರಶೇಖರ್ ಅವರ ರಾಜಕೀಯ ಆಕಾಂಕ್ಷೆಗಳು, ಸಮಾಜವಾದಿ ಅಧ್ಯಯನ ಮತ್ತು ಸಾಮಾಜಿಕ ಹೋರಾಟಗಳಿಗೆ ದುಜಾ ದೇವಿ ಅವರು ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳುವ ಮೂಲಕ ಮೊದಲ ಹೆಜ್ಜೆಯ ಬಲವಾಗಿ ಬೆಂಬಲಕ್ಕೆ ನಿಂತರು.

Roopa Gururaj Column: ಭಾಗವತದ ಉದ್ಧವಗೀತೆ: ಭೂಮಿಯ ಕ್ಷಮಾ ಗುಣ

ಭಾಗವತದ ಉದ್ಧವಗೀತೆ: ಭೂಮಿಯ ಕ್ಷಮಾ ಗುಣ

ಪ್ರಕೃತಿಯ ಯಾವುದೇ ವೈಪರೀತ್ಯ ಪರ್ವತದ ದೃಢತೆಯನ್ನು ಅಡಿ ಸಲಾರವು. ಇದು ಮಾನವನ ಜೀವನಕ್ಕೆ ಅತ್ಯಂತ ಪ್ರಸ್ತುತವಾದ ಸಂದೇಶ. ಮನುಷ್ಯನ ಜೀವನದಲ್ಲಿ ಸುಖ-ದುಃಖಗಳು, ಲಾಭ-ನಷ್ಟಗಳು, ಮಾನ-ಅವಮಾನಗಳು ನಿರಂತರವಾಗಿ ಬರುತ್ತಿರುತ್ತವೆ. ಪರ್ವತದಂತೆ ಮನಸ್ಸನ್ನು ಗಟ್ಟಿ ಗೊಳಿಸಿಕೊಂಡಾಗ ಮಾತ್ರ ಈ ದ್ವಂದ್ವಗಳಿಂದ ಪಾರಾಗಲು ಸಾಧ್ಯ

Roopa Gururaj Column: ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

ಅವಳು ತನ್ನೊಳಗೆ ಚಿಂತಿಸಿದಳು ಕ್ಷಣಿಕವಾದ ಸುಖ, ಹಣ ಮತ್ತು ಜನರ ಮೆಚ್ಚುಗೆಗಾಗಿ ನಾನು ಎಷ್ಟು ನಿಕೃಷ್ಟವಾಗಿ ಇತರರನ್ನು ಅವಲಂಬಿಸಿದ್ದೆ! ನಶ್ವರವಾದ ದೇಹವನ್ನು ಪ್ರೀತಿಸುವ, ಕ್ಷಣಮಾತ್ರದಲ್ಲಿ ಬದಲಾಗುವ ಮನುಷ್ಯರಿಂದ ನಾನು ಶಾಶ್ವತ ಸುಖವನ್ನು ನಿರೀಕ್ಷಿ ಸುತ್ತಿದ್ದೆ. ಆದರೆ ನನ್ನ ಹೃದಯದಲ್ಲೇ ಸದಾ ನೆಲೆಸಿರುವ ಪರಮಾತ್ಮನನ್ನು (ಶ್ರೀಕೃಷ್ಣನನ್ನು) ಮರೆತಿದ್ದೆ.

Vishweshwar Bhat Column: ಹೀಗಿದ್ದರು ಉಷಾ ಭಗತ್

Vishweshwar Bhat Column: ಹೀಗಿದ್ದರು ಉಷಾ ಭಗತ್

ಉಷಾ ಭಗತ್ ಅವರು ನೆಹರು ಕುಟುಂಬದ ಒಡನಾಟಕ್ಕೆ ಬಂದದ್ದು 1950ರ ಆರಂಭದಲ್ಲಿ. ಇಂದಿರಾ ತಮ್ಮ ತಂದೆ ಜವಹರಲಾಲ್ ನೆಹರು ಅಧಿಕೃತ ನಿವಾಸವಾದ ತೀನ್ ಮೂರ್ತಿ ಭವನದಲ್ಲಿ ಗೃಹಕೃತ್ಯ ಮತ್ತು ಆತಿಥ್ಯದ ಜವಾಬ್ದಾರಿಗಳನ್ನು ಹೊತ್ತಿದ್ದರು. ಆ ದಿನಗಳಲ್ಲಿ ಇಂದಿರಾ ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರಿಗೆ ಶಿಕ್ಷಣ ಮತ್ತು ಪಾಲನೆಯಲ್ಲಿ ನೆರವಾಗಲು ಉಷಾ ಭಗತ್ ಮನೆಗೆ ಬಂದರು

Dr Jagadeesh Maane Column: ವಿಶ್ವಕ್ಕಾಗಿ ಸ್ವದೇಶಿ ಉತ್ಪಾದನೆಯೇ ಜಾಗತಿಕ ಭಾರತದ ಹೊಸ ಶಕ್ತಿ !

ವಿಶ್ವಕ್ಕಾಗಿ ಸ್ವದೇಶಿ ಉತ್ಪಾದನೆಯೇ ಜಾಗತಿಕ ಭಾರತದ ಹೊಸ ಶಕ್ತಿ !

ಮಾರಾಟ ಹೆಚ್ಚಾದಂತೆ ದೇಶೀಯ ಮಾರುಕಟ್ಟೆಯ ಜೊತೆಗೆ ರಫ್ತು ಪ್ರಮಾಣವೂ ಹೆಚ್ಚಾಗುತ್ತದೆ. ರಫ್ತು ಹೆಚ್ಚಾದರೆ ವಿದೇಶಿ ವಿನಿಮಯ ಗಳಿಕೆ ಹೆಚ್ಚುವುದರ ಜೊತೆಗೆ ವ್ಯಾಪಾರ ಕೊರತೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಿಂದ ದೇಶದ ಆರ್ಥಿಕತೆಯೂ ಮತ್ತಷ್ಟು ಬಲಗೊಳ್ಳುತ್ತದೆ. ಅದೇ ರೀತಿ ನಾವು ಕೂಡ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ.

Shishir Hegde Column: ನಮ್ಮ ಅಧಿಕಾರಿಗಳ ದರ್ಪ ಕಂಡಾಗ ನೆನಪಾದದ್ದು ಜಡ್ಜ್‌ ಕ್ಯಾಪ್ರಿಯೊ

ನಮ್ಮ ಅಧಿಕಾರಿಗಳ ದರ್ಪ ಕಂಡಾಗ ನೆನಪಾದದ್ದು ಜಡ್ಜ್‌ ಕ್ಯಾಪ್ರಿಯೊ

ಕಪ್ಪು ನಿಲುವಂಗಿ ಆ ಹುದ್ದೆಯ ಘನತೆಯನ್ನು ಸೂಚಿಸುತ್ತದೆ. ನ್ಯಾಯಾಧೀಶರಿಗೆ ಕಾನೂನು ಗೊತ್ತಿರ ಬೇಕು, ಭಯ-ಪಕ್ಷಪಾತವಿಲ್ಲದೆ ಅದನ್ನು ಅನ್ವಯಿಸಬೇಕು, ತಪ್ಪು ಮಾಡಿದವರಿಗೆ ಅಗತ್ಯವಿದ್ದರೆ ಶಿಕ್ಷೆ ವಿಧಿಸಬೇಕು. ಸಮಾಜ ಇದನ್ನು ನಿರೀಕ್ಷಿಸುತ್ತದೆ. ನ್ಯಾಯಾಧೀಶರು ಎಂದರಲ್ಲಿ ಓಡಾಡಿಕೊಂಡು, ಯಾರನ್ನು ಬೇಕಾದರೂ ಭೇಟಿಯಾಗುವಂತೆ ಇಲ್ಲ. ವ್ಯವಸ್ಥೆಯೇ ಅವರನ್ನು ಪ್ರತ್ಯೇಕವಾಗಿಡುತ್ತದೆ. ಹೀಗಿರುವ ಕಾರ್ಯವಿಧಾನ (Procedure) - ಪ್ರತ್ಯೇಕತೆ ಮತ್ತು ರೀತಿ ರಿವಾಜಿನ ಕೆಲಸ, ಬದುಕು ಕೂಡ

Keshava Prasad B Column: ಸಣ್ಣ ಉಳಿತಾಯ ಯೋಜನೆಗಳು ಈಗಲೂ ಏಕೆ ಆಕರ್ಷಕ ?

ಸಣ್ಣ ಉಳಿತಾಯ ಯೋಜನೆಗಳು ಈಗಲೂ ಏಕೆ ಆಕರ್ಷಕ ?

ಸ್ಮಾರ್ಟ್ʼಫೋನ್ ನಮ್ಮ ಕೈಸೇರಿರುವುದು ಬದುಕನ್ನು ಸುಲಭಗೊಳಿಸಿದೆ ನಿಜ. ಆದರೆ ಅದೇ ಸ್ಮಾರ್ಟ್ʼ ಫೋನ್ ಲಭ್ಯವಿರುವ ಕೆಲವು ಟ್ರೇಡಿಂಗ್ ಆಪ್‌ಗಳು ಅನೇಕ ಮಂದಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿದೆ. ಅದರಲ್ಲಿಯೂ ಷೇರುಪೇಟೆಯ ‘ಫ್ಯೂಚರ್ಸ್ ಆಂಡ್ ಆಪ್ಷನ್ಸ್’ (Futures Options & FO) ವಿಭಾಗದ ಹುಚ್ಚು ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದ್ದು, ಮಧ್ಯಮ ವರ್ಗದವರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ.

Shashidhara Halady Column: ಸರಸರ ಹರಿಯುವ ಇದರ ಕುರಿತು ಇರಲಿ ಕಾಳಜಿ !

ಸರಸರ ಹರಿಯುವ ಇದರ ಕುರಿತು ಇರಲಿ ಕಾಳಜಿ !

‘ಹಾವು ಹಾವು’ ಎಂಬ ಗದ್ದಲವೆದ್ದಿತು; ಕಾವಲುಗಾರ ಸಿಬ್ಬಂದಿಯಲ್ಲಿ ಒಬ್ಬರು, ಬಹುಶಃ ಹಾವು ಹಿಡಿದು ಗೊತ್ತಿದ್ದವರೇ ಇರಬೇಕು, ತಕ್ಷಣ ಒಂದು ಉದ್ದನೆಯ ಕೋಲು ಮತ್ತು ಒಂದು ಪ್ಲಾಸ್ಟಿಕ್ ಚೀಲದೊಂದಿಗೆ ಬಂದು, ಆ ಹಾವನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕುವಲ್ಲಿ ಯಶಸ್ವಿಯಾದರು; ಹಾವು ಹಿಡಿಯುವ ಅವರ ಕೌಶಲವನ್ನೇ ನೋಡುತ್ತಾ, ಆ ವಿದ್ಯಮಾನವನ್ನು ಹಲವರು ಮೊಬೈಲ್‌ನಲ್ಲಿ ಸೆರೆಹಿಡಿದಾಗಿತ್ತು!

Harish Kera Column: ಒಂದಕ್ಕೊಂದು ಸಂಬಂಧ ಇಲ್ಲದ 7 ಟಿಪ್ಪಣಿಗಳು

Harish Kera Column: ಒಂದಕ್ಕೊಂದು ಸಂಬಂಧ ಇಲ್ಲದ 7 ಟಿಪ್ಪಣಿಗಳು

ಅಸ್ಪೃಶ್ಯತೆಯ ಕುರಿತ ಸಾಮಾಜಿಕ ವಿಮರ್ಶೆ ಹಾಗೂ ಬಯಲು ಎಂಬ ತಾತ್ವಿಕತೆಯ ಕುರಿತ ಆಧ್ಯಾತ್ಮಿಕ ನೋಟ ಎರಡೂ ಹದಮಿಳಿತವಾಗಿರುವ ಹಾಡು ಅದು. ಮಕ್ಕಳಿಗೆ ಅರ್ಥ ಆಗಿರಲಿಕ್ಕಿಲ್ಲ. ಆದರೆ ಬೀಟ್ ಅವರನ್ನು ಆಕರ್ಷಿಸಿದೆ. ಮುಂದೆಂದಾದರೂ ಹಾಡು ಅರ್ಥವಾದೀತು. ಅಷ್ಟಾದರೆ ಸಾಕು. ಹಳೆಯ ಹಾಡುಗಳು ಹೀಗೆ ಹೊಸದಾಗುವುದು ಅಗತ್ಯ ಅಂತ ಅನಿಸುತ್ತದೆ. ಅದರಲ್ಲಿ ಬಣ್ಣದ ತಗಡಿನ ತುತ್ತೂರಿಯೂ ಇದೆ. ಯುಟ್ಯೂಬ್‌ನಲ್ಲಿದೆ.

Gururaj Gantihole Column: ಖಾಸಗಿ ಡೀಮ್ಡ್‌ ವಿವಿಗಳ ರೀತಿ ರಾಜ್ಯ ವಿವಿಗಳೇಕೆ ಮಿಂಚುತ್ತಿಲ್ಲ ?

ಖಾಸಗಿ ಡೀಮ್ಡ್‌ ವಿವಿಗಳ ರೀತಿ ರಾಜ್ಯ ವಿವಿಗಳೇಕೆ ಮಿಂಚುತ್ತಿಲ್ಲ ?

ಒಂದು ಕಾಲದಲ್ಲಿ ಜ್ಞಾನದ ಸೃಷ್ಟಿ ಮತ್ತು ಹೊಸ ಆವಿಷ್ಕಾರಗಳಿಗೆ ಹೆಸರಾಗಿದ್ದ ಈ ಸಂಸ್ಥೆಗಳು, ಇಂದು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋ ಗಾಲಯಗಳು, ಸುಸಜ್ಜಿತ ಗ್ರಂಥಾಲಯಗಳು ಮತ್ತು ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಇದರಿಂದಾಗಿ ಬಡ ವಿದ್ಯಾರ್ಥಿ ಗಳು ಅತ್ಯುನ್ನತ ಮಟ್ಟದ ಶೈಕ್ಷಣಿಕ ಸ್ಪರ್ಧೆಯಲ್ಲಿ ಹಿಂದುಳಿಯುವಂತಾಗಿದೆ. ಹಳೆಯ ಪಠ್ಯಕ್ರಮಗಳನ್ನೇ ಇಂದಿಗೂ ಬೋಧಿಸುತ್ತಿರುವುದರಿಂದ ಆಧುನಿಕ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ.

Vishweshwar Bhat Column: ಅನ್ನಬ್ರಹ್ಮನ ನಾನಾ ಅವತಾರ: ಎಲ್ಲವೂ ಇನ್ನೆಲ್ಲೋ ಆಹಾರ

ಅನ್ನಬ್ರಹ್ಮನ ನಾನಾ ಅವತಾರ: ಎಲ್ಲವೂ ಇನ್ನೆಲ್ಲೋ ಆಹಾರ

ಒಂದು ಭೌಗೋಳಿಕ ಪ್ರದೇಶದಲ್ಲಿ ಅಸಹ್ಯ ಅಥವಾ ವಿಷಕಾರಿ ಎಂದು ಭಾವಿಸಲಾಗುವ ವಸ್ತುವು ಮತ್ತೊಂದು ಸಂಸ್ಕೃತಿಯಲ್ಲಿ ಅಮೃತ ಸಮಾನವಾದ ಪೌಷ್ಟಿಕ ಭೋಜನ. ಆಹಾರವೆಂಬುದು ಕೇವಲ ರುಚಿಯ ವಿಷಯವಲ್ಲ, ಅದು ಪ್ರಕೃತಿಯೊಂದಿಗೆ ಮನುಷ್ಯನು ನಡೆಸಿದ ಸತತ ಸಂಘರ್ಷ, ಹೊಂದಾಣಿಕೆ ಮತ್ತು ಅನ್ವೇಷಣೆ ಯ ಜೀವಂತ ಫಲಿತಾಂಶ

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

ನಷ್ಟದಲ್ಲಿದ್ದ ನೂರಾರು ಮಳಿಗೆಗಳನ್ನು ಮುಚ್ಚಿ, ಸುಮಾರು 450 ರಿಂದ 500 ಅತ್ಯಂತ ಲಾಭದಾಯಕ ಕೆಫೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದರು. ನಿರ್ವಹಣಾ ವೆಚ್ಚ ಕಡಿಮೆ ಇರುವ ಕಾರ್ಪೊರೇಟ್ ಕಾಫಿ ವೆಂಡಿಂಗ್ ಮೆಷಿನ್‌ಗಳ ಸಂಖ್ಯೆಯನ್ನು 50000ಕ್ಕೂ ಹೆಚ್ಚು ಕಚೇರಿಗಳಿಗೆ ವಿಸ್ತರಿಸಿದರು. ಈ ನಿಖರ ನಿರ್ಧಾರಗಳ ಫಲವಾಗಿ, 2019ರಲ್ಲಿ ರು.7200 ಕೋಟಿಗೂ ಅಧಿಕವಾಗಿದ್ದ ಸಾಲವು, 2021ರ ವೇಳೆಗೆ ರು.1731 ಕೋಟಿಗೆ, ನಂತರ ರು.800 - ರು.1000 ಕೋಟಿಯ ಆಸುಪಾಸಿಗೆ ಇಳಿಯಿತು

Vishweshwar Bhat Column: ಈಕೆ ಇಂದಿರಾ ಕೆನ್ನೆಗೆ ಬಾರಿಸಿದ್ದರು !

Vishweshwar Bhat Column: ಈಕೆ ಇಂದಿರಾ ಕೆನ್ನೆಗೆ ಬಾರಿಸಿದ್ದರು !

ಒಮ್ಮೆ ಇಂದಿರಾ ನಿವಾಸದಲ್ಲಿ ಯಾವುದೋ ವೈಯಕ್ತಿಕ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯದ ಕುರಿತು ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ಪರಸ್ಪರ ನಿಯಂತ್ರಣ ಕಳೆದುಕೊಂಡಾಗ, ತೀವ್ರ ಆಕ್ರೋಶಗೊಂಡ ಗೌಬಾ, ಇಂದಿರಾ ಕೆನ್ನೆಗೆ ಬಾರಿಸಿದರು. ಈ ಆಘಾತಕಾರಿ ಘಟನೆಯು ಅವರ ನಡುವಿನ ಸಂಬಂಧವನ್ನು ಶಾಶ್ವತವಾಗಿ ಕಡಿದುಹಾಕಿತು. ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಬಂದ ಆ ಕ್ಷಣದ ನಂತರ ಇಂದಿರಾ, ಎಲಿಜಬೆತ್ ಜತೆಗಿನ ಎಲ್ಲ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಂಡರು.

ಸಚಿವರಿಗೆ ಚಾಕೊಲೇಟು ಮತ್ತು ಡಿಕೆ ಅಮ್ಮನ ಕೈಯಲ್ಲಿ ಜುಟ್ಟು

ಸಚಿವರಿಗೆ ಚಾಕೊಲೇಟು ಮತ್ತು ಡಿಕೆ ಅಮ್ಮನ ಕೈಯಲ್ಲಿ ಜುಟ್ಟು

ಕರ್ನಾಟಕದಲ್ಲಿ ಹೀಗೆ ಲೇಟೆಸ್ಟ್ ಆಗಿ ಮೂಡಿ ಬಂದ ಚಾಕೋಲೆಟ್ ಎಂದರೆ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಂಚಿದ ಕ್ಯಾಬಿನೆಟ್ ಚಾಕೋಲೆಟ್. ಈ ಚಾಕೋಲೆಟ್ ಒಂದೇ ಅಲ್ಲ. ಇದು ಕಾಲಕಾಲಕ್ಕೆ, ಸಮಯ-ಸಂದರ್ಭಕ್ಕೆ ಬದಲಾಗುತ್ತವೆ. ಅಂದರೆ ಹತ್ತು, ನೂರು ಬಗೆಯ ಚಾಕೋಲೆಟ್ ಗಳಿವೆ. ಹಲವು ಸ್ತರಗಳ (ಗ್ರಾಮ, ಜಿಲ್ಲೆ, ರಾಜ್ಯ, ಲೋಕ) ಚುನಾವಣಾ ಸೀಟುಗಳೆಂಬ ಬಿರ್ಯಾನಿ, ನಿಗಮ-ಮಂಡಳಿಗಳೆಂಬ ಗಂಜಿಕೇಂದ್ರಗಳು, ದುಡ್ಡು ರಾಶಿ ಬೀಳುವ ದೇವಸ್ಥಾನಗಳ ಮೊಕ್ತೇಸರಿಕೆ ಮತ್ತು ಸಮಿತಿ. ಇನ್ನು ಅಸಂಖ್ಯ ಪ್ರಶಸ್ತಿಗಳು, ಪೀಠಗಳು, ಸಿಂಡಿಕೇಟ್ ಇತ್ಯಾದಿ.

Lokesh Kayarga Column: ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !

ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !

ದೇಶದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧ ಜಾರಿಯಾಗಿ ಒಂದೂವರೆ ದಶಕವೇ ಕಳೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2011ರ ಆಗಸ್ಟ್‌ನಲ್ಲಿ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆ 2006ರಡಿ ಹೊರಡಿಸಲಾದ ಆದೇಶದಡಿ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅನ್ನು ಕಚ್ಚಾವಸ್ತುವಾಗಿ ಬಳಸುವಂತಿಲ್ಲ. ಸದ್ಯ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವುದು ವಾರ್ಷಿಕ ನಿಷೇಧ ನವೀಕರಣದ ಆದೇಶವನ್ನೇ ಹೊರತು, ಇದೇ ಮೊದಲ ಬಾರಿಗೆ ನಿಷೇಧ ಹೇರುತ್ತಿರುವುದಲ್ಲ.

Surendra Pai Column: ದಿಮಾಗಿ ನಕ್ಸಲ್:‌ ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು

ದಿಮಾಗಿ ನಕ್ಸಲ್:‌ ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು

ಪ್ರಸ್ತುತ ಸಮಾಜದಲ್ಲಿ ಬಳಕೆಯಾಗುತ್ತಿರುವ ಶಬ್ದಪ್ರಯೋಗಗಳು ಮತ್ತು ರಾಜಕೀಯ ವಾಗ್ದಾಳಿಗಳು ವೈಚಾರಿಕ ಸಂವಾದದ ದಿಕ್ಕನ್ನೇ ಬದಲಿಸುತ್ತಿವೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯ ಪ್ರತಿಯೊಂದು ನಡೆನುಡಿಯಲ್ಲೂ ಕೊಂಕು ಹುಡುಕುವ ಕೆಲಸ ನಡೆಯುತ್ತಲೇ ಇರುತ್ತವೆ. ಇದರ ಸಾಲಿಗೆ ಮೊನ್ನೆ ಬಳಸಿದ ‘ದಿಮಾಗಿ ನಕ್ಸಲ್’ (ಮಾನಸಿಕ ಅಥವಾ ವೈಚಾರಿಕ ನಕ್ಸಲ್) ಎಂಬ ಶಬ್ದಪ್ರಯೋಗವು ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಹೊಸತೇನಲ್ಲ. ‌

Raghava Sharma Nidle Column: ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ

ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ

ಬ್ರಾಹ್ಮಣ, ಒಬಿಸಿ, ದಲಿತ ಸಮುದಾಯಕ್ಕೆ ವಿಶೇಷ ಪ್ರಾಧಾನ್ಯತೆ ಸಿಕ್ಕಿದೆ. ಮಾಜಿ ಕೇಂದ್ರ ಸಚಿವೆ, ಅಮೇಥಿ ಲೋಕಸಭೆ ಕ್ಷೇತ್ರದ ಸ್ಮೃತಿ ಇರಾನಿ ಅವರೂ ಸಂಘಟನೆಗೆ ವಾಪಸಾಗಿದ್ದಾರೆ. ಮೂಲತಃ ದೆಹಲಿಯವ ರಾಗಿದ್ದರೂ, ಉ.ಪ್ರ.ದಲ್ಲಿ ರಾಜಕಾರಣದ ಭಾಗವಾಗಿರುವುದರಿಂದ ಇರಾನಿ ಮರು ಸೇರ್ಪಡೆ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

Roopa Gururaj Column: ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಕೃಷ್ಣನ ಬದುಕು ಹುಟ್ಟಿನಿಂದಲೇ ಸವಾಲುಗಳಿಂದ ಕೂಡಿತ್ತು. ಹುಟ್ಟುವ ಮುನ್ನವೇ ಸೋದರ ಮಾವ ಕಂಸನ ರೂಪದಲ್ಲಿ ಸಾವು ಕಾಯುತ್ತಿತ್ತು. ಕತ್ತಲೆಯ ಸೆರೆಮನೆಯಲ್ಲಿ ಜನಿಸಿ, ಹೆತ್ತ ತಾಯಿ ದೇವಕಿಯ ಮಡಿಲನ್ನು ಜನಿಸಿದ ರಾತ್ರಿಯೇ ತೊರೆದ. ಮುದ್ದಿಸಿ, ಸಾಕಿದ ಯಶೋದೆಗೂ ಆತ ಕೊನೆತನಕ ಉಳಿಯ ಲಿಲ್ಲ.

Loading...