ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂಕಣಗಳು

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

ಎತ್ತಿನಹೊಳೆಯ ವಿಚಾರದಲ್ಲಿ ನಡೆದಂತೆ ಕರಾವಳಿ ಮತ್ತು ಬಯಲುಸೀಮೆಯ ಜನರು ಮತ್ತೊಮ್ಮೆ ಈ ಯೋಜನೆ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ವರದಾ-ಬೇಡ್ತಿ ಯೋಜನೆ ವಿರುದ್ಧ ಅಭಿಯಾನ ಆರಂಭವಾಗಿದೆ. ಆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಪರಿಸರ ಹೋರಾಟಗಾರರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

Raghava Sharma Nidle Column: ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಹಲವು ದಶಕಗಳ ಹೋರಾಟದ ನಂತರ ಸುಪ್ರೀಂ ಕೋರ್ಟ್‌ನಿಂದ ಸಮಾಧಾನಕರ ತೀರ್ಪು ಪಡೆದುಕೊಂಡ ಕರ್ನಾಟಕಕ್ಕೆ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ, ಕೃಷ್ಣಾ ಕಣಿವೆಯಲ್ಲಿ ಆಲಮಟ್ಟಿ ಜಲಾಶಯ ಎತ್ತರ ಏರಿಸುವಿಕೆ, ಮಹದಾಯಿ ನದಿಯಿಂದ ಕಳಸಾ ಮತ್ತು ಬಂಡೂರಿ ನಾಲೆ ಮೂಲಕ ಮಲ ಪ್ರಭಾ ನದಿಯ ನೀರು ಹೆಚ್ಚಿಸುವ ಯೋಜನೆಗಳನ್ನು ಮಾತ್ರ ಇನ್ನೂ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ.

Vishweshwar Bhat Column: ʼಹೇರ್‌ ಆಫ್‌ ದಿ ಡಾಗ್‌ʼ ಅಂದರೇನು ?

Vishweshwar Bhat Column: ʼಹೇರ್‌ ಆಫ್‌ ದಿ ಡಾಗ್‌ʼ ಅಂದರೇನು ?

ಟೋಪಿ ನೆಲಕ್ಕೆ ಬಿದ್ದ ತಕ್ಷಣ ಆಟಗಾರರು ಸ್ಪರ್ಧೆಯನ್ನು ಶುರುಮಾಡಬೇಕಿತ್ತು. ಅಂದರೆ, ಟೋಪಿ ಕೆಳಗೆ ಬಿದ್ದ ಕ್ಷಣದ ಕೆಲಸ ಆರಂಭವಾಗಬೇಕು ಎಂಬ ಅರ್ಥದಿಂದ ಈ ನುಡಿಗಟ್ಟು ಬಳಕೆಗೆ ಬಂದಿತು. ಹಾಗೆ 'Hair of the Dog' ಎಂಬ ನುಡಿಗಟ್ಟು ಇದೆ. ಇದರ ಪೂರ್ಣ ರೂಪ 'Hair of the dog that bit you'.

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ವಾಪಸ್ ಬರುವಾಗ ಹುಡುಗ ಗುರುಗಳನ್ನು ಕೇಳಿದ, “ನಾನು ಒಂದೇ ಒಂದು ಪಟ್ಟಿನಿಂದ ಹೇಗೆ ಗೆದ್ದೆ?" ಗುರುಗಳು ಹೇಳಿದರು- “ಮಗು, ನೀನು ಕಲಿತ ಪಟ್ಟು ಜೂಡೋದ ಅತ್ಯಂತ ಕಷ್ಟಕರವಾದದ್ದು. ಅದರಿಂದ ಪಾರಾಗಲು ಎದುರಾಳಿಗೆ ಇರುವ ಏಕೈಕ ದಾರಿ ಎಂದರೆ, ನಿನ್ನ ಬಲಗೈಯನ್ನು ಹಿಡಿದು ಎಳೆಯುವುದು. ಆದರೆ ನಿನಗೆ ಆ ಕೈಯೇ ಇಲ್ಲವಲ್ಲ!". ಆತನ ದೊಡ್ಡ ದೌರ್ಬಲ್ಯವೇ ಅವನ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಬದಲಾಗಿತ್ತು.

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರ ಗಳ ಪ್ರತಿನಿಧಿಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

G Prathap Kodancha Column: ಮುಕ್ತ ವ್ಯಾಪಾರ ಒಪ್ಪಂದದ ಸುತ್ತಮುತ್ತ

G Prathap Kodancha Column: ಮುಕ್ತ ವ್ಯಾಪಾರ ಒಪ್ಪಂದದ ಸುತ್ತಮುತ್ತ

ಆಂಟೋನಿಯೋ ಕೋಸ್ಟಾ ಅವರಂತೂ, ಮಾತಿನ ನಡುವೆ ಕೋಟಿನ ಒಳಜೇಬಿನಿಂದ ತಮ್ಮ OCI (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ತೋರಿಸಿ, ‘ನಾನು ನಿಮ್ಮವನು, ನಿಮ್ಮ ಮನೆ ಮಗನು!’ ಎಂದಿದ್ದು ಮನಮುಟ್ಟುವಂತಿತ್ತು. ಭಾರತ ಮತ್ತು ಐರೋಪ್ಯ ಒಕ್ಕೂಟ ಮಾಡಿ‌ ಕೊಂಡ ವಾಣಿಜ್ಯ-ವ್ಯವಹಾರಗಳ ಒಪ್ಪಂದಕ್ಕೆ ಉರ್ಸುಲಾ ಲೆಯೆನ್ ಅವರು ‘ಮದರ್ ಆಫ್ ಆಲ್ ಡೀಲ್ಸ್’ ಎಂಬ ಹಣೆಪಟ್ಟಿ ಲಗತ್ತಿಸಿದ್ದು ಭಾರತೀಯರನ್ನು ಹಿರಿಹಿರಿ ಹಿಗ್ಗಿಸಿದೆ.

Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು

Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು

ಕಾಲೇಜುಗಳ ಆಡಳಿತ ಮಂಡಳಿಯು ಪ್ರವೇಶ ಪ್ರಕ್ರಿಯೆ, ಮೌಲ್ಯಮಾಪನ, ಹಾಸ್ಟೆಲ್ ಹಂಚಿಕೆ ಮತ್ತು ಸ್ಕಾಲರ್‌ಶಿಪ್ ನೀಡುವಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿರುವುದಿಲ್ಲ; ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ತನ್ನ ಆವರಣದಲ್ಲಿ ‘ಸಮಾನ ಅವಕಾಶಗಳ ಕೇಂದ್ರ’ವನ್ನು ಸ್ಥಾಪಿಸುವುದು ಕಡ್ಡಾಯವಾಗಿರುತ್ತದೆ. ಈ ಕೇಂದ್ರವು ಹಿಂದುಳಿದ ವರ್ಗಗಳ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಹಿತರಕ್ಷಣೆಯ, ಅವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.

Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

ಭಾರತದಲ್ಲಿ ಬಜೆಟ್‌ಗೆ ಸಿಗುವಷ್ಟು ಮಾನ್ಯತೆ ಇನ್ಯಾವ ದೇಶದಲ್ಲಿಯೂ ಸಿಗುವುದಿಲ್ಲವೇನೋ ಎನಿಸು ವಷ್ಟರ ಮಟ್ಟಿಗೆ ಕುತೂಹಲವಿರುತ್ತದೆ. ಬಜೆಟ್‌ಗಳೆಂದರೆ ಜನರಿಗೆ ಯಾವೆಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಆಯಾ ಆರ್ಥಿಕ ವರ್ಷದಲ್ಲಿ ದೇಶದ ಖಜಾನೆಗೆ ಬರುವ ಆದಾಯವೆಷ್ಟು, ಮಾಡುತ್ತಿರುವ ಖರ್ಚೆಷ್ಟು? ಅನುದಾನ ಹಂಚಿಕೆಗೆ ಮಾಡಿಕೊಂಡಿರುವ ಲೆಕ್ಕಾಚಾರಗಳೇನು? ಎನ್ನುವ ಅಂಶವನ್ನು ದೇಶದ ಮುಂದಿಡುವುದೇ ಆಗಿರುತ್ತದೆ.

Rangaswamy Mookanahalli Column: ಕಾಣದ ಬೆನ್ನಿನ ಬಗ್ಗೆ ಅದೆಷ್ಟು ವರ್ಣನೆಗಳು !

ಕಾಣದ ಬೆನ್ನಿನ ಬಗ್ಗೆ ಅದೆಷ್ಟು ವರ್ಣನೆಗಳು !

ಮನಸ್ಸು ಒಂದು ಕ್ಷಣ ವಿಚಲಿತವಾಯ್ತು. ಅವರನ್ನು ಏಕ ವಚನದಲ್ಲಿ ಮಾತಾಡಿಸುವ ಹಕ್ಕು ಕೊಟ್ಟದ್ದು ಯಾರು? ಅವರ ವೃತ್ತಿ, ಅಷ್ಟೇನೂ ಯಶಸ್ಸು ಕಾಣದ ಅವರ ಬದುಕು! ಆಶ್ಚರ್ಯ ಎನ್ನಿಸುತ್ತೆ. ಆದರೆ ನಮ್ಮ ಸಮಾಜದಲ್ಲಿ ವಿದ್ಯಾವಂತರು, ಬುದ್ಧಿವಂತರು, ಯಶಸ್ವಿಗಳು ಎನ್ನಿಸಿ ಕೊಂಡವರು ನಡೆದುಕೊಳ್ಳುವುದು ಹೀಗೆ.

Naveen Sagar Column: ಅಲೆಕ್ಸ್‌ ಅಂದ್ರೆ ಕೋಟಿ, ಜ್ಯೋತಿರಾಜ ಅಂದ್ರೆ ಕೇವಲ ಕೋತಿ !

ಅಲೆಕ್ಸ್‌ ಅಂದ್ರೆ ಕೋಟಿ, ಜ್ಯೋತಿರಾಜ ಅಂದ್ರೆ ಕೇವಲ ಕೋತಿ !

ಅಲೆಕ್ಸ್ ಸುರಕ್ಷತೆಗೆ ಹಗ್ಗ ಕಟ್ಟಿಕೊಳ್ಳದೇ, ಯಾವುದೇ ಸುರಕ್ಷತೆ ಸಲಕರಣೆ ಧರಿಸದೇ, ಗ್ರಿಪ್ ಇರುವ ಶೂ ಒಂದನ್ನೇ ಹಾಕಿಕೊಂಡು 1667 ಅಡಿ ಎತ್ತರದ ತೈವಾನ್‌ನ ತೈಪೈ 101‌ ಕಟ್ಟಡವನ್ನು ಬರಿಗಾಲಿನಲ್ಲಿ ಏರಿದ. ಅದು ಹವ್ಯಾಸ. ಅದಕ್ಕೆ ನೆಟ್‌ಫ್ಲಿಕ್ಸ್ ಲೈವ್. ಅವನ ಸಾಹಸ ನೋಡುವುದಕ್ಕೆ ಸಾವಿರಾರು ಜನರು ಸೇರಿರ್ತಾರೆ. ಈ ಒಂದೂವರೆ ತಾಸಿನ ಅವನ ಸಾಹಸಕ್ಕೆ ಅವನಿಗೆ ಸಿಕ್ಕಿದ್ದು 4.5 ಕೋಟಿ ರುಪಾಯಿ.

Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

ಪರಿಸರ ಪ್ರೇಮಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಯೋಜನೆ ಯ ಮುಖ್ಯಗುರಿ- ಜೈವಿಕ ವೈವಿಧ್ಯವನ್ನು ಹೆಚ್ಚಿಸುವುದು, ಪ್ರವಾಸೋದ್ಯಮದ ಮೂಲಕ ದೇಶದ ಆರ್ಥಿಕತೆಯನ್ನು ಸುಧಾರಿಸುವುದು, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಹೊಸ ಆವಾಸ ಸ್ಥಾನ ಕಲ್ಪಿಸುವುದು.

Roopa Gururaj Column: ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಶಾಲೆಯ ಚಾವಣಿಯ ಒಂದು ಭಾಗ ಕುಸಿದು ಬಿದ್ದಾಗ, ಹಿಮದ ಹನಿಗಳು ಚೂಪಾದ ಗಾಜಿನ ಚೂರು ಗಳಂತೆ ಮಕ್ಕಳ ಮೈಗೆ ಚುಚ್ಚತೊಡಗಿದವು. ಮಕ್ಕಳು ಗಾಬರಿಯಿಂದ ಕಿರುಚುತ್ತಾ ಹೊರಗೆ ಓಡಲು ಯತ್ನಿಸಿದರು. ಆದರೆ, ಅವರ ಇನ್ನೂ ಚಿಕ್ಕವಯಸಿನ ಶಿಕ್ಷಕಿ ಮಿನಿಗೆ ತಿಳಿದಿತ್ತು- ಈ ಮಾರುತದಲ್ಲಿ ಹೆಜ್ಜೆ ಇಟ್ಟರೆ ಸಾವು ಖಚಿತ ಎಂದು. ಮಿನಿ ಫ್ರೀಮನ್ ಕೇವಲ 19 ವರ್ಷದ ಹುಡುಗಿಯಾಗಿದ್ದರೂ, ಆ ಕ್ಷಣದಲ್ಲಿ ಅಪ್ರತಿಮ ನಾಯಕಿಯಾದಳು.

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

Union Budget 2026-27: ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡಿದೆ.

Union Budget 2026-27: ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

Union Budget 2026-07: ಫಂಡ್‌ ಅಲೋಕೇಶನ್‌ ಬಜೆಟ್‌ ಮಂಡನೆ

ಫಂಡ್‌ ಅಲೋಕೇಶನ್‌ ಬಜೆಟ್‌ ಮಂಡನೆ

ಬಯೋ ಫಾರ್ಮ ವಲಯದಲ್ಲಿ ಮಾತ್ರ ಒಂದಷ್ಟು ಸಂಚಲನ ಉಂಟಾಗಬಹುದು, ಉಳಿದಂತೆ ಇದೊಂದು ಫಂಡ್ ಅಲೋಕೇಷನ್ ಬಜೆಟ್ ಆಗಿದೆ. ಅಂದರೆ ಪ್ರತಿವರ್ಷವೂ ಹಣವನ್ನು ವಲಯಗಳಿಗೆ ಇಷ್ಟಿಷ್ಟು ಎಂದು ಹಂಚುವುದು ವಾಡಿಕೆ. ಅದರ ಜತೆಗೆ ಹೊಸ ಅಂಶಗಳ ಸೇರ್ಪಡೆ ಇದ್ದೇ ಇರುತ್ತದೆ. ಈ ಬಾರಿ ಹಣವನ್ನು ವಲಯವಾರು ಹಂಚಿಕೆ ಮಾಡುವುದಷ್ಟೇ ಬಜೆಟ್ ಉದ್ದೇಶವಾಗಿತ್ತು

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

ಟ್ರೇಲರ್ ನೋಡಿಯೇ ‘ಸಾಕಪ್ಪಾ ಸಾಕು’ ಎನ್ನುವಂತಿರಬಾರದು ಅಲ್ಲವೇ? ಇತ್ತೀಚಿನ ಸಿನಿಮಾಗಳ ಟ್ರೇಲರ್ ನೋಡಿ, ಮುಕ್ಕಾಲು ಭಾಗ ಕತ್ತಲೆ. ಸಿನಿಮಾವೂ ಕತ್ತಲೆಯೇ. ಎಷ್ಟಾದರೂ ಟ್ರೇಲರ್ ಎನ್ನುವುದು ಸಿನಿಮಾದ ಒಂದು ಝಲಕ್ ತಾನೆ? ಇನ್ನುಳಿದ ಬೆಳಕಿನ ಭಾಗದಲ್ಲಿ ಬೆಂಕಿ, ಬಾಂಬು, ಕಾರುಗಳನ್ನು ಸ್ಫೋಟಿಸುವುದು, ಹೆಲಿಕಾಪ್ಟರ್ ಉಡಾಯಿಸುವುದು ಇತ್ಯಾದಿ, ಇತ್ಯಾದಿ.

R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?

R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?

ಕಳೆದ ವಾರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಲುಪಿದ ಸುದ್ದಿ ಅಷ್ಟೇನೂ ಹಿತಕರವಾಗಿರಲಿಲ್ಲ. ಕಾರಣ? ಹೈದರಾಬಾದ್‌ನ ಕಟ್ಟರ್ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಕರ್ನಾಟಕದ ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ. ಅಂದ ಹಾಗೆ, ‘ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಿನ್’ ಪಕ್ಷದ ಸರ್ವೋಚ್ಚ ನಾಯಕರಾದ ಅಸಾದುದ್ದೀನ್ ಓವೈಸಿ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಒಂದು ಕಣ್ಣು ಇದ್ದೇ ಇದೆ.

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

ಕ್ರೈಸ್ತ ಧರ್ಮದ ನಂಬಿಕೆಗಳ ಪ್ರಕಾರ, ಏಸು ಕ್ರಿಸ್ತ ತಮ್ಮ ಶಿಷ್ಯರೊಂದಿಗೆ ನಡೆಸಿದ ಕೊನೆಯ ಔತಣ ಕೂಟದಲ್ಲಿ (The Last Supper) ದ್ರಾಕ್ಷಾರಸ ಕುಡಿಯಲು ಬಳಸಿದ ಕಪ್ ಅಥವಾ ಪಾತ್ರೆ ಯನ್ನು ‘ಹೋಲಿ ಗ್ರೇಲ್’ ಎಂದು ಕರೆಯಲಾಗುತ್ತದೆ. ಮತ್ತೊಂದು ಪ್ರಬಲ ನಂಬಿಕೆಯ ಪ್ರಕಾರ, ಕ್ರಿಸ್ತರನ್ನು ಶಿಲುಬೆಗೇರಿಸಿ ದಾಗ ಅವರ ದೇಹದಿಂದ ಹರಿದ ಪವಿತ್ರ ರಕ್ತವನ್ನು ಸಂಗ್ರಹಿಸಲು ಜೋಸೆಫ್ ಆಫ್ ಅರಿಮತಿಯಾ ಇದೇ ಪಾತ್ರೆಯನ್ನು ಬಳಸಿದ್ದರು ಎನ್ನಲಾಗುತ್ತದೆ. ‌

Prakash Hegde Column: ಮುಕ್ತ ವ್ಯಾಪಾರ ಒಪ್ಪಂದ: ಅವಕಾಶಗಳ ಮಹಾಸೇತು

Prakash Hegde Column: ಮುಕ್ತ ವ್ಯಾಪಾರ ಒಪ್ಪಂದ: ಅವಕಾಶಗಳ ಮಹಾಸೇತು

ಇತ್ತೀಚಿನ ಜಾಗತಿಕ ಭೌಗೋಳಿಕ-ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಯಾಗಿಸುವ ಉದ್ದೇಶದ ಐರೋಪ್ಯ ಒಕ್ಕೂಟ ಮತ್ತು ರಫ್ತು ವಿಸ್ತರಣೆಯ ಅಗತ್ಯದ ಭಾರತ ಈ ಒಪ್ಪಂದವನ್ನು ಪುನಶ್ಚೇತನಗೊಳಿಸಲು ಆಸಕ್ತಿ ತೋರಿದ್ದರಿಂದ ಸಂಬಂಧಿತ ಪ್ರಕ್ರಿಯೆಯು ‘ಫಾಸ್ಟ್ ಟ್ರ್ಯಾಕ್’ನಲ್ಲಿ ಪೂರ್ಣಗೊಂಡಿದೆ.

Hari Paraak Column: ಮೊಸಳೆಯ ಮರಿ: ಹಸುಳೆ ಮೊಸಳೆ, ಕಪ್ಪೆಯ ಮರಿ: ʼಭಾವಿʼ ಕಪ್ಪೆ

ಮೊಸಳೆಯ ಮರಿ: ಹಸುಳೆ ಮೊಸಳೆ, ಕಪ್ಪೆಯ ಮರಿ: ʼಭಾವಿʼ ಕಪ್ಪೆ

ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, “ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್".

Srivathsa Joshi Column: ಫೆಬ್ರವರಿ: ಕಿರಿಯ ತಿಂಗಳ ಹಿರಿಮೆಯ ಕುರಿತೊಂದು ಲಹರಿ

ಫೆಬ್ರವರಿ: ಕಿರಿಯ ತಿಂಗಳ ಹಿರಿಮೆಯ ಕುರಿತೊಂದು ಲಹರಿ

ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ, ಅದನ್ನು ಅಧಿಕವರ್ಷ ಎನ್ನುತ್ತೇವೆ, ಭೂಮಿಯು ಸೂರ್ಯನ ಸುತ್ತ ಸುತ್ತಲಿಕ್ಕೆ 365 ದಿನಗಳಿಗಿಂತ ತುಸು ಹೆಚ್ಚು ಸಮಯ ಬೇಕಾಗುವುದು, ನಾಲ್ಕು ವರ್ಷಗಳಲ್ಲಿ ಆ ಸಮಯವು ಒಂದು ದಿನದಷ್ಟಾಗುವುದು, ಅದೇ ಅಧಿಕ ದಿನ ಫೆಬ್ರವರಿಯ 29ನೆಯ ತಾರೀಕು. ಇಸವಿಯು ನಾಲ್ಕರಿಂದ ನಿಶ್ಶೇಷ ಭಾಗವಾದರೆ ಆ ಇಸವಿ ಅಧಿಕ ವರ್ಷ.

Vinayaka V Bhat Column: ಸಂಗಮದ ಮಾಘಮೇಳದಲ್ಲೊಂದು ಪಲ್ಲಕ್ಕಿ ಪ್ರಹಸನ

ಸಂಗಮದ ಮಾಘಮೇಳದಲ್ಲೊಂದು ಪಲ್ಲಕ್ಕಿ ಪ್ರಹಸನ

“ನಿಮ್ಮ ಪಲ್ಲಕ್ಕಿಯ ಮೆರವಣಿಗೆಯನ್ನು ಅನುಮತಿಸಿದರೆ, ನಿಯಂತ್ರಣ ತಪ್ಪುವ ಸಂದರ್ಭವಿದೆ; ಹಾಗಾಗಿ ಬಹುಜನರ ಹಿತದೃಷ್ಟಿಯಿಂದ ನಾವು ಹಾಗೆ ಮಾಡಲಾರೆವು" ಎನ್ನುತ್ತಾ ಪ್ರಾಧಿಕಾರದ ಅಧಿಕಾರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡು ಪಲ್ಲಕ್ಕಿಯನ್ನು ಅ ತಡೆದು ನಿಲ್ಲಿಸಿದರು. ಪೊಲೀಸ್ ಅಧಿಕಾರಿಗಳ ಮಾತನ್ನು ಧಿಕ್ಕರಿಸಿ, ಅವರ ಶಿಷ್ಯಜನರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ‘ಆಗೇ ಬಢೋ, ಆಗೇ ಬಢೋ’ ಎನ್ನುತ್ತಾ ಮುನ್ನುಗ್ಗುತ್ತಿರುವಾಗ ಪೊಲೀಸರು ಅವರುಗಳನ್ನು ವಶಕ್ಕೆ ಪಡೆದುಕೊಳ್ಳಬೇಕಾ ಯಿತು.

Vishweshwar Bhat Column: ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ಇಸ್ರೇಲಿಗಳು ಕಾಫಿ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಅವರಿಗೆ ಕಾಫಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಭಾವನೆ ಮತ್ತು ಸಂಸ್ಕೃತಿ. 2001ರಲ್ಲಿ ಸ್ಟಾರ್‌ಬಕ್ಸ್ ಬಹಳ ಅದ್ದೂರಿ‌ ಯಾಗಿ ಇಸ್ರೇಲ್ ಮಾರುಕಟ್ಟೆಗೆ ಪ್ರವೇಶಿಸಿತು. ‘ಶಾಲೋಮ್ ಕಾಫಿ ಲಿಮಿಟೆಡ್’ ಎಂಬ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಆರು ಶಾಖೆಗಳನ್ನು ತೆರೆಯಿತು. ಆದರೆ, ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ (2003) ಸುಮಾರು 6 ಮಿಲಿಯನ್ ಡಾಲರ್ ನಷ್ಟ ಅನುಭವಿಸಿ ತನ್ನೆಲ್ಲ ಶಾಖೆ ಗಳನ್ನು ಮುಚ್ಚಿತು.

Loading...