ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

Nepal Gen Z Protest: ಜೆನ್‌ ಝಿ ಪ್ರತಿಭಟನೆಗೆ ಮಣಿದು ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ಹೇರಿದ ನಿಷೇಧದ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ ನೀಡಿದ್ದಾರೆ.

ಯುವರಾಜ್-ಸೂರ್ಯ ಔಟ್‌! ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್‌ ಪ್ಲೇಯಿಂಗ್‌ XI ಆರಿಸಿದ ಬ್ರೆಟ್‌ ಲೀ!

ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್‌ ಪ್ಲೇಯಿಂಗ್‌ XI ಕಟ್ಟಿದ ಬ್ರೆಟ್‌ ಲೀ!

ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀಗ್‌ ಅವರು ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಆರಿಸಿದ್ದು, ಭಾರತದಿಂದ ಐವರು ಸ್ಟಾರ್‌ ಆಟಗಾರರಿಗೆ ಅವಕಾಶವನ್ನು ನೀಡಿದ್ದಾರೆ. ಆದರೆ, ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಸಿಕ್ಸರ್‌ ಸರದಾರ ಯುವರಾಜ್‌ ಸಿಂಗ್‌ ಅವರನ್ನು ಕೈ ಬಿಡು ಮೂಲಕ ವೇಗದ ಬೌಲಿಂಗ್‌ ದಿಗ್ಗಜ ಅಚ್ಚರಿ ಮೂಡಿಸಿದ್ದಾರೆ.

Viral News: ಹನಿಮೂನ್‌ಗೆ ಹೋಗಿದ್ದ ಭಾರತೀಯ ದಂಪತಿ ಮೇಲೆ ಚೀನಾ ವ್ಯಕ್ತಿಯಿಂದ ಮನಸೋಇಚ್ಛೆ ಹಲ್ಲೆ

ಭಾರತೀಯ ದಂಪತಿ ಮೇಲೆ ಚೀನಾ ವ್ಯಕ್ತಿಯಿಂದ ಮನಸೋಇಚ್ಛೆ ಹಲ್ಲೆ

ಸ್ವಿಟ್ಜರ್‌ಲ್ಯಾಂಡ್‌ನ ಹೋಟೆಲ್‌ನಲ್ಲಿ ಚೀನಾದ ವ್ಯಕ್ತಿಯೊಬ್ಬ ಭಾರತೀಯ ಮೂಲದ ಮಹಿಳೆಗೆ ಬರ್ಬರವಾಗಿ ಥಳಿಸಿದ ಘಟನೆ ನಡೆದಿದೆ. ಮಹಿಳೆಯನ್ನು ನಿಕತಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಪತಿ ಕರಣ್‌ ಜೊತೆ ಹನಿಮೂನ್‌ಗೆ ತೆರಳಿದ್ದಳು. ಚೀನೀ ಕುಟುಂಬವೊಂದು ನಡೆಸುತ್ತಿರುವ ಹೋಟೆಲ್, ಈ ಆರೋಪಗಳನ್ನು ನಿರಾಕರಿಸಿದೆ.

Eye Makeup 2025: ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

Eye Makeup 2025: ಕಂಗಳ ಅಂದವನ್ನು ಹೆಚ್ಚಿಸುವ ಐ ಶ್ಯಾಡೋಗಳನ್ನು ಹಚ್ಚುವ ಮುನ್ನ ಪ್ರಮುಖ 5 ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

Maddur stone-pelting: ಮದ್ದೂರು ಗಲಭೆ ಪ್ರಕರಣ; ತಪ್ಪೆಸೆಗಿದವರ ವಿರುದ್ಧ ಜಾತಿ ಧರ್ಮ ಪರಿಗಣಿಸದೇ ಕ್ರಮ ಎಂದ ಸಿಎಂ

ಮದ್ದೂರು ಗಲಭೆ; ತಪ್ಪೆಸೆಗಿದವರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

CM Siddaramaiah: ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ, ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Spoorthi Vani Column: ರಾಮನ ಭೇಟಿಯಾದ ಶಬರಿಯ ಆನಂದ ಕಲ್ಪಿಸಿಕೊಳ್ಳಿ; ಶಬರಿ ಭಕ್ತಿಯ ನಿಜವಾದ ಸಂದೇಶವಿದು

ರಾಮನ ಮೇಲಿರುವ ಶಬರಿಯ ಭಕ್ತಿಯೇ ನಿಜವಾದ ಭಕ್ತಿ

ಶಬರಿಯು ರಾಮನಿಗೋಸ್ಕರ ಅರವತ್ತೆರಡು ವರ್ಷಗಳ ಸುದೀರ್ಘ ಕಾಲ ಕಾದಳು! ಅವಳಿಗೆ ರಾಮನ ಮೇಲೆ ಅಷ್ಟೊಂದು ಭಕ್ತಿಯಿತ್ತು ಮತ್ತು ಅವಳು ಅವನಿಗಾಗಿ ತನ್ನ ಬಾಳನ್ನೇ ಮುಡಿಪಾಗಿಟ್ಟಳು. ರಾಮನಿಂದ ದೂರವಾಗಿರುವುದು ಅವಳು ಅವನಿಗಾಗಿ ರಕ್ಷಿಸಿಕೊಂಡು ಬಂದಂಥ ಭಕ್ತಿಯನ್ನು ಹೆಚ್ಚಿಸಿತು.

Shivam Lohakare: ನೀರಜ್‌ ಚೋಪ್ರಾ ದಾಖಲೆ ಮುರಿದ 20 ವರ್ಷದ ಶಿವಂ ಲೋಹಕರೆ

ದಾಖಲೆ ಮುರಿದ ಶಿವಂ ಲೋಹಕರೆಗೆ ಅಭಿನಂದನೆ ಸಲ್ಲಿಸಿದ ನೀರಜ್‌

ಈ ತಿಂಗಳ ಕೊನೆಯಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಫೈನಲ್‌ನ ಹೈ ಪ್ರೊಫೈಲ್ ಮರುಪಂದ್ಯಕ್ಕೆ ಸಜ್ಜಾಗಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಚೋಪ್ರಾ ಸೆಪ್ಟೆಂಬರ್ 13-21 ರ ಪ್ರದರ್ಶನದಲ್ಲಿ 19 ಸದಸ್ಯರ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದರೆ.

ಆಸೀಸ್‌ ವಿರುದ್ಧದ ಏಕದಿನ ಅಭ್ಯಾಸ ಪಂದ್ಯಕ್ಕೆ ರೋಹಿತ್‌ ನಾಯಕ?

ಭಾರತ 'ಎ' ಏಕದಿನ ತಂಡಕ್ಕೆ ರೋಹಿತ್‌ ನಾಯಕ

ಸರಣಿಗೆ ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು. ಅವರು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ರೆಡ್-ಬಾಲ್ ತಂಡವನ್ನು ಮುನ್ನಡೆಸಲಿರುವ ಶ್ರೇಯಸ್ ಅಯ್ಯರ್ ಕೂಡ ವೈಟ್-ಬಾಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್, ದೇವದತ್ತ ಪಡಿಕ್ಕಲ್ ಮತ್ತು ಆಯುಷ್ ಬಡೋನಿ ಅವಕಾಶ ಪಡೆಯಬಹುದು.

Actor Darshan: ನನಗೆ ವಿಷ ಕೊಡಿ, ಬದುಕಲು ಆಗುತ್ತಿಲ್ಲ; ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ ದಾಸ

ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ ದಾಸ

ವಿಚಾರಣೆ ವೇಳೆ ನಟ ದರ್ಶನ್‌ ನ್ಯಾಯಾಧೀಶರ ಎದುರು ಭಾವುಕರಾಗಿದ್ದಾರೆ. ನನಗೆ ವಿಷ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ನನ್ನದೊಂದು ಮನವಿ ಇದೆ ಸ್ವಲ್ಪ ಪಾಯಿಸನ್ ಬೇಕು. ನನಗೆ ಕೋರ್ಟ್‌ ವತಿಯಿಂದ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Asia Cup T20: ಟಿ20 ಮಾದರಿಯ ಏಷ್ಯಾಕಪ್‌ ದಾಖಲೆಗಳ ಪಟ್ಟಿ ಇಲ್ಲಿದೆ

Asia Cup 2025: ಟಿ20 ಮಾದರಿಯ ಏಷ್ಯಾಕಪ್‌ ದಾಖಲೆಗಳ ಪಟ್ಟಿ ಇಲ್ಲಿದೆ

2022 ರಲ್ಲಿ ಪಾಕಿಸ್ತಾನ ವಿರುದ್ಧ ಹಾಂಗ್ ಕಾಂಗ್ ತಂಡ 38 ರನ್‌ಗಳಿಗೆ ಆಲೌಟ್ ಆದದ್ದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತ. ಪಾಕಿಸ್ತಾನ 155 ರನ್‌ಗಳ ಬೃಹತ್ ಗೆಲುವು ಸಾಧಿಸಿದಾಗ ಹಾಂಗ್ ಕಾಂಗ್ ತಂಡದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿಯ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ.

Bagalkot News: ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ  ವಿದ್ಯಾರ್ಥಿ!

ಶಾಲೆಯಲ್ಲಿ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

Bagalkot News: ತೀವ್ರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ಗುಡ್ಡೆಯನ್ನೇ ವೈದ್ಯರು ತೆಗೆದಿದ್ದಾರೆ. ಪೆನ್ ವಾಪಸ್‌ ಕೇಳುವ ವಿಚಾರದಲ್ಲಿ ಮಕ್ಕಳಿಬ್ಬರ ನಡುವೆ ಗಲಾಟೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Pawan Kalyan: ಧರ್ಮಸ್ಥಳ ಪರ ನಿಂತ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌; ಸೆ.11ಕ್ಕೆ ಭೇಟಿ

ಸೆ.11ಕ್ಕೆ ಧರ್ಮಸ್ಥಳಕ್ಕೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಭೇಟಿ

Dharmasthala Case: ಸೆಪ್ಟೆಂಬರ್ 11 ಗುರುವಾರ ಸಂಜೆ 5 ಗಂಟೆಗೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ದೇವರಿಗೆ ವಿಶೇಷ ಸೇವೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ ಎನ್ನಲಾಗಿದೆ.

Vishwavani Editorial: ಕಾನೂನು ಎಲ್ಲರಿಗೂ ಒಂದೇ

Vishwavani Editorial: ಕಾನೂನು ಎಲ್ಲರಿಗೂ ಒಂದೇ

ಪ್ರಭಾವಿಗಳೆಂಬ ಕಾರಣಕ್ಕೆ ಕಾನೂನಿನ ಕಬಂಧಬಾಹುಗಳಿಂದ ಇವರು ತಪ್ಪಿಸಿಕೊಳ್ಳಬಹುದು ಎಂಬ ಆಕ್ರೋಶ-ಅಸಮಾಧಾನಭರಿತ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದ್ದುಂಟು. ಆದರೀಗ ಲಭ್ಯವಾಗಿ ರುವ ಮಾಹಿತಿಯ ಪ್ರಕಾರ ಈ ಉದ್ಯಮಿಗಳಿಬ್ಬರ ಗಡಿಪಾರಿಗೆ ಸಮ್ಮತಿ ಸಿಕ್ಕಿರುವುದರಿಂದ ಹಿಂದೆ ಹೀಗೆ ಅನುಮಾನಿಸಿದ್ದವರಿಗೆ ಸಮಾಧಾನವಾಗಿದೆ.

Actor Darshan: ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ; ಹಾಸಿಗೆ, ದಿಂಬು ನೀಡಲು ಅನುಮತಿ

ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ಹೇಳಿ, ನಟನ ಸ್ಥಳಾಂತರಕ್ಕೆ ಕೋರ್ಟ್ ನಿರಾಕರಿಸಿದೆ. ಹೀಗಾಗಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

Bhagya Lakshmi Serial: ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ ಮಾಡಲು ಮುಂದಾದ ಆದೀ: ತಾಂಡವ್​ಗೆ ಶಾಕ್

ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ: ತಾಂಡವ್​ಗೆ ಶಾಕ್

25 ಲಕ್ಷ ಹಣವನ್ನು ಭಾಗ್ಯ ಆದೀ ನಡೆಸುತ್ತಿರುವ ಚಾರಿಟಿಗೆ ಕೊಡಲು ನಿರ್ಧರಿಸಿದ್ದಾಳೆ. ಆದರೆ, ಆದೀಗೆ ನನಗೆ ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಏನು ಕೊಟ್ಟಿಲ್ಲವಲ್ಲ ಎಂಬ ಕೊರಗು ಕಾಣುತ್ತಿದೆ. ಇದಕ್ಕಾಗಿ ಆಫೀಸ್ನಲ್ಲಿ ಆಕೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾನೆ.

Rangaswamy Mookanahalli Column: ಈ ತಾಕತ್ತನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ !

ಈ ತಾಕತ್ತನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ !

ಒಂದು ದೇಶ, ಭಾಷೆಯ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸುವ ತಾಕತ್ತು ಅದಕ್ಕಿದೆ. ಇದನ್ನ ಸರಿದಾರಿಯಲ್ಲಿ ಬಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗೆ ಭಾರತೀಯ ಚಿತ್ರಗಳನ್ನ ಸ್ಪ್ಯಾನಿಷ್ ಸಬ್‌ಟೈಟ್ಲ್‌ಗಳಲ್ಲಿ ನೋಡಿದ ತೊಮಿ, ಒಂದಲ್ಲ ಎರಡು ಬಾರಿ ಭಾರತಕ್ಕೆ ಭೇಟಿ ಕೊಟ್ಟ. ನಾವೆಲ್ಲಾ ಇಲ್ಲಿನ ವ್ಯವಸ್ಥೆಯನ್ನು ಹಳಿದುಕೊಂಡು ತಿರುಗಾಡುತ್ತಿದ್ದರೆ, ಅವನ ಕಣ್ಣಿಗೆ ಇದು ಸ್ವರ್ಗವಾಗಿ ಕಂಡಿತ್ತು.

Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಕೆ ಶ್ರೀಕಾಂತ್‌!

ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಶ್ರೀಕಾಂತ್‌!

K Srikkanth Picks India's Playing XI: ಯುಎಇ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಆಯ್ಕೆ ಮಾಡಿದ್ದಾರೆ. ಆದರೆ, ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಕೈ ಬಿಟ್ಟಿದ್ದಾರೆ.

Vice President Election: ಉಪರಾಷ್ಟ್ರಪತಿ ಚುನಾವಣೆಯ ಮತದಾನ ಪ್ರಾರಂಭ; ಗೆಲ್ಲುವವರು ಯಾರು?

ಉಪರಾಷ್ಟ್ರಪತಿ ಚುನಾವಣೆಯ ಮತದಾನ ಪ್ರಾರಂಭ

ಜಗದೀಪ್ ಧನ್‌ಕರ್‌ ರಾಜೀನಾಮೆ ಬಳಿಕ ತೆರವಿದ್ದ ಉಪರಾಷ್ಟ್ರಪತಿ ಹುದ್ದೆಗೆ ಇಂದು (ಸೆ.9 ರಂದು) ಚುನಾವಣೆ ನಡೆಯಲಿದೆ. ಪರಾಷ್ಟ್ರಪತಿ ಚುನಾವಣೆಗೆ ಇಂದು ಸಂಸತ್ ಭವನದಲ್ಲಿ ಮತದಾನ ನಡೆಯಲಿದೆ. ಎನ್​ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿ ಒಕ್ಕೂಟದ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ಸ್ಪರ್ಧೆ ಇದೆ.

Murder Attempt: ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆ ಯತ್ನದಿಂದ ಪಾರಾದ ಗಂಡ

ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆಯಿಂದ ಪಾರಾದ ಗಂಡ

Vijayapura Crime: ಪರಾರಿಯಾಗಿರುವ ಸುನಂದಾ ಪ್ರಿಯಕರ ಸಿದ್ಧಪ್ಪ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಗಂಡನ ಹತ್ಯೆಗೆ ಸುನಂದಾ ಮಾಡಿದ್ದ ಪ್ಲ್ಯಾನ್ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭೀರಪ್ಪನ ಹತ್ಯೆಗೆ ಸ್ಕೆಚ್‌ ಹಾಕಿದ್ದೇ ಸ್ವತಃ ಪತ್ನಿ ಸುನಂದಾ. ಆಕೆಯೇ ಹತ್ಯೆಗೆ ದಿನ ಹಾಗೂ ಟೈಂ ಫಿಕ್ಸ್‌ ಮಾಡಿದ್ದಳು ಎಂದಿದ್ದಾನೆ.

ಇಂದಿನಿಂದ ಏಷ್ಯಾಕಪ್‌ ಟಿ20; ಅಫ್ಘಾನಿಸ್ತಾನಕ್ಕೆ ಹಾಂಕಾಂಗ್‌ ಸವಾಲು

ಏಷ್ಯಾಕಪ್‌ ಟಿ20: ಭಾರತಕ್ಕೆ 9ನೇ ಟ್ರೋಫಿ ಗುರಿ

ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಲಂಕಾದ ಸನತ್‌ ಜಯಸೂರ್ಯ(1,220) ಹೆಸರಿನಲ್ಲಿದೆ. ಅತಿ ಹೆಚ್ಚು ವಿಕೆಟ್‌ ಉರುಳಿಸಿದವರು ಲಸಿತ್ ಮಾಲಿಂಗ(33). ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ಹಿರಿಮೆ ವಿರಾಟ್‌ ಕೊಹ್ಲಿ ಅವರದು(183). ಅತ್ಯುತ್ತಮ ಬೌಲಿಂಗ್‌ ಫಿಗರ್‌ ಅಜಂತ ಮೆಂಡಿಸ್‌ ಅವರದಾಗಿದೆ(13ಕ್ಕೆ ವಿಕೆಟ್‌).

France politics: ಫ್ರಾನ್ಸ್‌ ಸರಕಾರ ಪತನ, ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಬೇರೂ

ಫ್ರಾನ್ಸ್‌ ಸರಕಾರ ಪತನ, ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಬೇರೂ

ಇದರೊಂದಿಗೆ ಫ್ರಾನ್ಸ್ ಕೇವಲ 12 ತಿಂಗಳಲ್ಲಿ ನಾಲ್ಕನೇ ಪ್ರಧಾನಿಯನ್ನು ಪಡೆಯುವ ಸಾಧ್ಯತೆಯಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ನೇಮಕಗೊಂಡಿದ್ದ ಬೇರೂ ಅವಿಶ್ವಾಸ ನಿರ್ಣಯದಲ್ಲಿ 364-194 ಮತಗಳ ಪ್ರಚಂಡ ಬಹುಮತದೊಂದಿಗೆ ಸೋತರು.

Divya Uruduga-Aravind KP: ಮದುವೆ ಬಗ್ಗೆ ಕೇಳಬೇಡಿ ಎಂದ ಉರುಡುಗ: ಏನಾಯಿತು ಅರವಿಂದ್-ದಿವ್ಯಾ ಮಧ್ಯೆ?

ಮದುವೆ ಬಗ್ಗೆ ಕೇಳಬೇಡಿ ಎಂದ ಉರುಡುಗ

ಪ್ರತಿಬಾರಿ ದಿವ್ಯಾ ಉರುಡುಗ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಇದೀಗ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ದಿವ್ಯಾ ಮುಂದೆ ಕೇಳಲಾಗಿದೆ. ಇದಕ್ಕೆ ಅವರು ಉತ್ತರ ಮದುವೆ ಬಗ್ಗೆ ಕೇಳಬೇಡಿ ಎಂದಾಗಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿವ್ಯಾ ಬಳಿ ಈ ಪ್ರಶ್ನೆ ಕೇಳಿದಾಗ ಅವರು ಈರೀತಿ ಉತ್ತರಿಸಿದ್ದಾರೆ.

BBK 12: ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ: ಬಿಗ್ ಬಾಸ್​ಗೆ ಎಂಟ್ರಿ..?

ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ

ರೋಚಕ ಘಟ್ಟ ತಲುಪಿರುವ ದೃಷ್ಟಿಬೊಟ್ಟು ಧಾರಾವಾಹಿಯಿಂದ ವಿಜಯ್‌ ಸೂರ್ಯ ಹೊರಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್‌ ಹಬ್ಬಿದೆ. ಅತ್ತ ಬಿಗ್ ಬಾಸ್ 12 ಇನ್ನೇನು ಶುರುವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ.

Gruhalakshmi scheme: 2.13 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಕಡಿತ, ಸಿಎಂ ಖಡಕ್‌ ಸೂಚನೆ

2.13 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಕಡಿತ, ಸಿಎಂ ಖಡಕ್‌ ಸೂಚನೆ

CM Siddaramaiah: ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ.‌ ಈವರೆಗೆ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದು ಬಂದಿದೆ.

Loading...