ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ತಾಜಾ ಸುದ್ದಿ
IPL 2025: ಏಕವಚನದಲ್ಲಿ ಕಿತ್ತಾಡಿಕೊಂಡ ಆಸೀಸ್‌ ಆಟಗಾರರು

ಏಕವಚನದಲ್ಲಿ ಕಿತ್ತಾಡಿಕೊಂಡ ಆಸೀಸ್‌ ಆಟಗಾರರು; ಇಲ್ಲಿದೆ ವಿಡಿಯೊ

ಶನಿವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೈದರಾಬಾದ್‌ ತಂಡ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಬ್ಯಾಟಿಂಗ್‌ ಪ್ರದರ್ಶಿಸಿ 6 ವಿಕೆಟಿಗೆ 245 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಸುಂಟರಗಾಳಿಯಂಥ ಬ್ಯಾಟಿಂಗ್‌ ನಡೆಸಿ 18.3 ಒವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

Tahawwur Rana: ಕಸ್ಟಡಿಯಲ್ಲಿರುವ ತಹವ್ವೂರ್ ರಾಣಾ ಕುರಾನ್‌ ಸೇರಿ ಬೇಡಿಕೆ ಇಟ್ಟ ಮೂರು ವಸ್ತುಗಳು ಯಾವುದು?

ತಹವ್ವೂರ್ ರಾಣಾ ಬೇಡಿಕೆ ಇಟ್ಟ ಮೂರು ವಸ್ತುಗಳಾದರೂ ಯಾವುದು?

26/11ರ ಮುಂಬೈ ದಾಳಿಯ ಸಂಚುಕೋರ ತಹವ್ವೂರ್‌ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ಎನ್‌ಐಎ ರಾಣಾನನ್ನು ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿತು.ತಹವ್ವೂರ್ ರಾಣಾನನ್ನು ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯೊಳಗೆ ಅತ್ಯಂತ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದೆ.

Gold Price Today: ಚಿನ್ನದ ದರದಲ್ಲಿ  ಮತ್ತೆ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today: ಇಂದು ಚಿನ್ನದ ದರದಲ್ಲಿ ಯಥಾಸ್ಥಿತಿ ಕಂಡುಬಂದಿದ್ದು, 22 ಕ್ಯಾರಟ್‌ನ 8 ಗ್ರಾಂ ಚಿನ್ನ 70,160 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,700 ರೂ. ಮತ್ತು 100 ಗ್ರಾಂಗೆ 8,77,000 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 76,536 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 95,670 ರೂ. ಮತ್ತು 100 ಗ್ರಾಂಗೆ 9,56,700 ರೂ. ಪಾವತಿಸಬೇಕಾಗುತ್ತದೆ.

Two-ball rule in ODIs: ಏಕದಿನ ಕ್ರಿಕೆಟ್‌ನಲ್ಲಿ ಎರಡು ಚೆಂಡುಗಳ ನಿಯಮ ರದ್ದು!

ಏಕದಿನ ಕ್ರಿಕೆಟ್‌ನಲ್ಲಿ ಎರಡು ಚೆಂಡುಗಳ ನಿಯಮ ರದ್ದು!

ಪ್ರಸಕ್ತ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ 19 ವಯೋಮಿತಿ ಪುರುಷರ ವಿಶ್ವಕಪ್ ಅನ್ನು ಟಿ20 ಕ್ರಿಕೆಟ್ ಪ್ರಕಾರಕ್ಕೆ ಬದಲಾಯಿಸಲು ಕೂಡ ಐಸಿಸಿ ಚಿಂತನೆ ನಡೆಸಿದೆ. ಆದರೆ ಇದು ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಗಿದ ಬಳಿಕ ಅಂದರೆ 2028ರ ನಂತರವಷ್ಟೇ ಜಾರಿಗೆ ಬರುವ ನಿರೀಕ್ಷೆ ಇದೆ.

MP Violence: ಹನುಮಾನ್ ಜಯಂತಿ ಮೆರವಣಿಗೆ ವೇಳೆ ಘರ್ಷಣೆ ; ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ಹನುಮಾನ್ ಜಯಂತಿ ಮೆರವಣಿಗೆ ವೇಳೆ ಘರ್ಷಣೆ

ಮಧ್ಯಪ್ರದೇಶದ ಗುನಾದಲ್ಲಿ ಶನಿವಾರ ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಜೆ 7.30 ರ ಸುಮಾರಿಗೆ ಸಂಭವಿಸಿದ್ದು, ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತ್ವರಿತವಾಗಿ ಕಾರ್ಯಪ್ರವೃತ್ತರಾದರು

Fire accident: ಭಾರೀ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಶೆಡ್ ಸುಟ್ಟು ಭಸ್ಮ

40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಶೆಡ್ ಸುಟ್ಟು ಭಸ್ಮ

Fire accident:ಬೆಂಗಳೂರಿನ ವೀರಣ್ಣಪಾಳ್ಯದಲ್ಲಿರುವ ಕಾರ್ಮಿಕರ ಶೆಡ್ ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, 40 ಕ್ಕೂ ಹೆಚ್ಚು ಶೆಡ್ ಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RCB vs RR: ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ದಾಖಲೆ ಹೇಗಿದೆ?

ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ದಾಖಲೆ ಹೇಗಿದೆ?

ಸಾಮಾನ್ಯವಾಗಿ ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಲ್ಲಿ ಹಗಲು ವೇಳೆ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಆದರೆ ಕೋವಿಡ್‌ ಕಾರಣದಿಂದ 2021ರಿಂದ ಮೊದಲ್ಗೊಂಡು 2023ರ ತನಕ ಸೀಮಿತ ತಾಣಗಳಲ್ಲಿ ಐಪಿಎಲ್‌ ಪಂದ್ಯಗಳು ನಡೆದುದರಿಂದ ಈ ಸಂಪ್ರದಾಯವನ್ನು ಪಾಲಿಸಲಾಗಲಿಲ್ಲ. 2023ರಲ್ಲಿ ಮತ್ತೆ ಬೆಂಗಳೂರು ಪಂದ್ಯದಲ್ಲೇ ಹಸಿರು ಉಡುಗೆ ಧರಿಸಿ ಆಡಿತು. ಕಳೆದ ಬಾರಿ ತವರಿನಾಚೆಯ ಪಂದ್ಯದಲ್ಲಿ ಆಡಿತ್ತು. ಈ ಬಾರಿಯೂ ತವರಿನಾಚೆ ಆಡುತ್ತಿದೆ.

Calcutta High Court:  ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ; ಬಂಗಾಳ ವಕ್ಫ್ ಹಿಂಸಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಮಾತು

ಬಂಗಾಳ ವಕ್ಫ್ ಹಿಂಸಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಹೇಳಿದ್ದೇನು?

ಪಶ್ಚಿಮ ಬಂಗಾಳದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಕತ್ತಾ ಹೈಕೋರ್ಟ್, ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕಿದೆ

Bengaluru Karaga 2025: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಮೆರವಣಿಗೆಯ ಝಲಕ್‌ ಹೇಗಿತ್ತು ಗೊತ್ತಾ? ಫೋಟೋಗಳು ಇಲ್ಲಿವೆ

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಮೆರವಣಿಗೆ

Bengaluru Karaga 2025: ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದು, ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಕರಗ ಮೆರವಣಿಗೆ ಹೊರಟಿತು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು.

Hari Paraak Column: ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

“ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿ ದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂ ಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು

IPL 2025: ಶತಕದ ಬಳಿಕ ಅಭಿಷೇಕ್‌ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?

ಶತಕದ ಬಳಿಕ ಅಭಿಷೇಕ್‌ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?

Abhishek Sharma: ಈ ಋತುವಿನಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ ಪಂಜಾಬ್‌ ವಿರುದ್ಧ ಸಿಕ್ಸರ್‌, ಬೌಂಡರಿಗಳ ಮಳೆಗರೆದು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು. 40 ಎಸೆತಗಳಿಂದ ಶತಕ ಪೂರೈಸಿದರು. ಓಟ್ಟು 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್‌ ಬಾರಿಸಿದರು.

Missile Strikes:  ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ ರಷ್ಯಾ

ಉಕ್ರೇನ್ ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್ ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ "ಉದ್ದೇಶಪೂರ್ವಕವಾಗಿ" ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಉಕ್ರೇನ್‌ ರಾಯಭಾರ ಕಚೇರಿ ಆರೋಪಿಸಿದೆ.

Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಮಿಲಿಟರಿ ಸೇವೆಯ ನಂತರ ಸ್ವಯಂನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಮೀಸೆಮಾವ ಅವಿವಾಹಿತರಾಗಿದ್ದು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸು ತ್ತಿದ್ದರು. ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಕಥಾನಾಯಕ ಶ್ರಮಜೀವಿ ಯನ್ನು ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿಕೊಂಡ ಮಾತೃಹೃದಯಿ ಅವರು.

RCB vs RR: ಇಂದು ರಾಜಸ್ಥಾನ್‌-ಆರ್‌ಸಿಬಿ ಮುಖಾಮುಖಿ

ಜೋಫ್ರಾ ಆರ್ಚರ್‌ ಭೀತಿಯಲ್ಲಿ ಇಂದು ಆರ್‌ಸಿಬಿ ಕಣಕ್ಕೆ

IPL 2025: ಆರ್‌ಸಿಬಿ ಬ್ಯಾಟಿಂಗ್‌ ಲೈನ್‌ ಅಪ್‌ ಉತ್ತಮವಾಗಿದೆ. ಸಾಲ್ಟ್‌ ಪವರ್‌ ಪ್ಲೇ ತನಕ ಕ್ರೀಸ್‌ ಕಾಯ್ದುಕೊಂಡರೆ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ. ಕೆಲ ಕ್ರಮಾಂಕದಲ್ಲಿ ಟಿಮ್‌ ಡೇವಿಡ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದಾರೆ. ವೇಗಿಗಳಾದ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಈ ಋತುವಿನಲ್ಲಿ ಉತ್ತಮವಾಗಿ ಬೌಲ್‌ ಮಾಡಿದ್ದಾರೆ.

Vinayak V Bhat Column: ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ೆಂಕಟೇಶ್ ಕುಮಾರ್ ಒಬ್ಬರು. ತಮ್ಮ ಸಾಂಪ್ರದಾಯಿಕ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನ ವಾಗಲು ಬಿಡದೆ ಪರಿಶುದ್ಧವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

Karnataka Rain: ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33°C ಮತ್ತು 22°C ಇರುವ ಸಾಧ್ಯತೆ ಇದೆ.

Vastu Tips: ಬಾಗಿಲ ಹಿಂದೆ ಬಟ್ಟೆ ತೂಗು ಹಾಕುವುದು ಒಳ್ಳೆಯದೇ ?

ಮನೆಯ ವಾಸ್ತು ದೋಷಕ್ಕೆ ಕಾರಣವಾಗುವ ಈ ಒಂದು ತಪ್ಪು ಮಾಡದಿರಿ

Vastu Shastra: ಮನೆಯಲ್ಲಿ ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಸಣ್ಣ ವಿಷಯಗಳಲ್ಲಿ ಏನಿದೆ ಎಂದುಕೊಳ್ಳುತ್ತೇವೆ. ಆದರೆ ಈ ಸಣ್ಣಪುಟ್ಟ ಸಂಗತಿಗಳೇ ಕೆಲವೊಮ್ಮೆ ಮನೆಯಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

Vitamin E: ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ? ಹೇಗೆ ದೊರೆಯುತ್ತದೆ?

ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ?

ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನು ಹೇಳುವಾಗಲೆಲ್ಲ ವಿಟಮಿನ್‌ ಇ ಅಂಶ ದೇಹಕ್ಕೆ ಬೇಕು ಎನ್ನುವುದು ಸಾಮಾನ್ಯ. ಆದರೆ ಉಳಿದೆಲ್ಲ ಜೀವಸತ್ವಗಳ ಬಗ್ಗೆ, ಅಂದರೆ ಎ, ಬಿ, ಸಿ, ಡಿ ವಿಟಮಿನ್‌ಗಳ ಬಗ್ಗೆ ಮಾತಾಡಿದಷ್ಟು ಇ ಜೀವಸತ್ವದ ಬಗ್ಗೆ ನಾವು ಗಮನ ನೀಡುವುದಿಲ್ಲ. ಹಾಗಾಗಿ ಇದರ ಮಹತ್ವ ನಮಗೆ ಸರಿಯಾಗಿ ಅರ್ಥವಾಗದೇ ಹೋಗಿರಬಹುದು.

Abhishek Sharma: ಎಬಿಡಿ ವಿಲಿಯರ್ಸ್‌ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಎಬಿಡಿ ವಿಲಿಯರ್ಸ್‌ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2025: ಚೇಸಿಂಗ್‌ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌, ಪಂಜಾಬ್‌ ಬೌಲರ್‌ಗಳ ಮೇಲೆರಗಿ ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಯನ್ನು ಸುರಿಸಿದರು. ಮುಟ್ಟಿದೆಲ್ಲ ಚಿನ್ನ ಎಂಬಂತೆ ಉಭಯ ಆಟಗಾರರು ಬಾರಿಸಿದ ಚೆಂಡು ಸರಾಗವಾಗಿ ಬೌಂಡರಿ ಲೈನ್‌ ದಾಟುತ್ತಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ 171 ರನ್‌ ಕಲೆ ಹಾಕಿತು.

Hair Care: ಪ್ರಸವದ ನಂತರ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ಹೆರಿಗೆ ನಂತರದ ಕೂದಲಿನ ಆರೈಕೆ ಏನು?

Hair Care After Delivery: ನವಜಾತ ಶಿಶುಗಳ ಅಮ್ಮಂದಿರಿಗೆ ಇರುವಂಥ ಹಲವು ಸವಾಲುಗಳ ಪೈಕಿ ಕೂದಲು ಉದುರುವುದೂ ಒಂದು. ಇದಕ್ಕಾಗಿ ಎಷ್ಟೋ ಮಂದಿ ಬಾಣಂತಿಯರು ಬಯೋಟಿನ್‌ ಪೂರಕಗಳ ಮೊರೆ ಹೋಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಕೂದಲಿನ ಆರೈಕೆಯಲ್ಲಿ ಬಯೋಟಿನ್‌ ಮಹತ್ವದ ಪಾತ್ರ ವಹಿಸುತ್ತದೆ. ಕೂದಲಿನ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ

IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್‌

ಅಗ್ರಸ್ಥಾನ ಕಳೆದುಕೊಂಡ ಗುಜರಾತ್‌ ಟೈಟಾನ್ಸ್‌

IPL 2025: ನಾಲ್ಕು ಗೆಲುವಿನೊಂದಿಗೆ ಟೂರ್ನಿಯ ಅಜೇಯ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಗ್ರಸ್ಥಾನಿಯಾಗಿದೆ. ಗುಜರಾತ್‌ ಮಣಿಸಿದ ಲಕ್ನೋ ಮೂರನೇ ಸ್ಥಾನಕ್ಕೇರಿದೆ. ಕೋಲ್ಕತಾ ನೈಟ್‌ ರೈಡರ್ಸ್‌ ನಾಲ್ಕನೇ, ಆರ್‌ಸಿಬಿ 5 ನೇ ಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಸ್ಥಾನಿಯಾಗಿದ್ದರೆ, ಮುಂಬೈ ಇಂಡಿಯನ್ಸ್‌ 9ನೇ ಸ್ಥಾನದಲ್ಲಿದೆ.

Srivathsa Joshi Column: ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿ ಗಣಪತಿಯನ್ನು ಆರಾ‌ಧಿಸುತ್ತಿದ್ದರು. ಆದ್ದರಿಂದಲೇ ಮುತ್ತುಸ್ವಾಮಿ ದೀಕ್ಷಿತರು ಗಣಪತಿ ಯನ್ನು ‘ಕುಂಭಸಂಭವ ಮುನಿಯಿಂದ ಪೂಜಿಸಲ್ಪಟ್ಟವನು’ ಎಂದು ಸ್ತುತಿಸಿದ್ದಾರೆ. ಅಗಸ್ತ್ಯರ ಗಣೇಶಭಕ್ತಿ ಎಷ್ಟಿತ್ತೆಂದರೆ ರಾಮಾಯಣದಲ್ಲಿ ವನವಾಸ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಒಂದೆರಡು ದಿನ ಅಗಸ್ತ್ಯರ ಆಶ್ರಮದಲ್ಲಿ ತಂಗಿದ್ದಾಗ ರಾಮನಿಗೂ ಗಣೇಶಾರಾಧನೆಯ ಮಹತ್ತವನ್ನು ಅಗಸ್ತ್ಯರು ತಿಳಿಸಿದ್ದರು. ಅದೇ ರೀತಿ ‘ಆದಿತ್ಯಹೃದಯಮ್’ ಸ್ತೋತ್ರವನ್ನೂ ಅಗಸ್ತ್ಯರೇ ರಚಿಸಿ ಶ್ರೀರಾಮನಿಗೆ ಬೋಧನೆ ಮಾಡಿದರು.

Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಜಪಾನಿಯರು ಪರಿಪೂರ್ಣವಾದಿಗಳೂ ಹೌದು, ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷ ಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

SRH vs PBKS: ಅಭಿಷೇಕ್‌ ಶರ್ಮಾರ ಶತಕದ ಆಸರೆಯಿಂದ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌!

ಪಂಜಾಬ್‌ ವಿರುದ್ಧ ದಾಖಲೆಯ ಮೊತ್ತವನ್ನು ಚೇಸ್‌ ಮಾಡಿ ಗೆದ್ದ ಹೈದರಾಬಾದ್‌!

SRH vs PBKS Match Highlights: ಅಭಿಷೇಕ್ ಶರ್ಮಾ ದಾಖಲೆಯ ಶತಕದ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟ್‌ ಮಾಡಿ 245 ರನ್ ಕಲೆ ಹಾಕಿತ್ತು. ಬಳಿಕ 246 ರನ್‌ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆದ್ದ ಬೀಗಿತು.