ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

WPL 2026: ಜೆಮಿಮಾ ರೊಡ್ರಿಗಸ್‌ ಫಿಫ್ಟಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‌ ಜಯ!

ಮುಂಬೈ ಇಂಡಿಯನ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‌ ಜಯ!

DCW vs MIW Match Highlights: ವಡೋದರಾದ ಬಿಸಿಎ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಮುಂಬೈ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಜೆಮಿಮಾ ರೊಡ್ರಿಗಸ್‌ ಅರ್ಧಶತಕದ ಬಲದಿಂದ 19 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ ಗೆದ್ದು ಬೀಗಿತು.

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ : ನಿಯಮ ಮೀರಿದರೆ 10 ಸಾವಿರ ದಂಡದ ಎಚ್ಚರಿಕೆ

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ

ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಹೊಸ ಜೆಸಿಬಿಗಳ ಬೆಲೆ ಸದ್ಯ 42 ಲಕ್ಷಮುಟ್ಟಿದೆ. ಹಿಂದೆ 18 ಲಕ್ಷಕ್ಕೆ ಜೆಸಿಬಿ ಖರೀದಿ ಮಾಡಬಹುದಾಗಿತ್ತು.ಈ ವರ್ಷ ಏಕಾಏಕಿ ಹೊಸ ಜೆಸಿಬಿಗಳ ಮೇಲೆ 10 ಲಕ್ಷಕ್ಕೆ ಹೆಚ್ಚಳವಾಗಿದೆ. ಆಪರೇಟರ್‌ಗಳ ಸಂಬಳ 10 ಸಾವಿದಿಂದ 20 ಸಾವಿರಕ್ಕೆ ಏರಿಕೆಯಾಗಿದೆ.ಇತ್ತೀಚೆಗೆ ತೈಲಬೆಲೆಯೂ ಹೆಚ್ಚಿದೆ.  ಇವೆಲ್ಲಾ ಮಾನದಂಡಗಳ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ಒಂದು ಗಂಟೆ ಕೆಲಸಕ್ಕೆ 1100 ಬಾಡಿಗೆ,ಟ್ರಾಕ್ಟರ್ ಒಂದು ಬಾಡಿಗೆ ದಿನಕ್ಕೆ-4000, ಟಿಪ್ಪರ್ ಒಂದು ದಿನಕ್ಕೆ 7000 ಬಾಡಿಗೆ ನಿಗದಿ ಮಾಡಲಾಗಿದ್ದು ನಾಗರೀಕರು ಸಹಕರಿಸಬೇಕು

Davos 2026: ಭಾರತದಲ್ಲಿ ಹೂಡಿಕೆಗೆ ವಿವಿಧ ರಾಷ್ಟ್ರ ನಾಯಕರ ಜತೆ ಜೋಶಿ ಮಹತ್ವದ ಚರ್ಚೆ

ಭಾರತದಲ್ಲಿ ಹೂಡಿಕೆಗೆ ವಿವಿಧ ರಾಷ್ಟ್ರ ನಾಯಕರ ಜತೆ ಜೋಶಿ ಮಹತ್ವದ ಚರ್ಚೆ

Pralhad Joshi: ಭಾರತ ಸುಸ್ಥಿರತೆಯನ್ನು ಕೇವಲ ತಾಂತ್ರಿಕ ಬದಲಾವಣೆಯಾಗಿ ನೋಡದೆ ಆರ್ಥಿಕತೆ ಮತ್ತು ಸಮಾಜದ ಕಾರ್ಯತಂತ್ರದ ರೂಪಾಂತರವಾಗಿ ನೋಡುತ್ತದೆ ಮತ್ತು ಬೆಳವಣಿಗೆಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ಕೈಗೆಟುಕುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಮಾರ್ಗವಾಗಿ ದೃಢನಿಶ್ಚಯದಿಂದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

16ನೇ ವಯಸ್ಸಿನಲ್ಲಿ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆ ಬರೆದ ದೀಯಾ ಯಾದವ್‌!

16ನೇ ವಯಸ್ಸಿನಲ್ಲಿ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿದ ದೀಯಾ ಯಾದವ್‌!

Deeya Yadav Creates History: 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ 16ನೇ ವಯಸ್ಸಿನ ದೀಯಾ ಯಾದವ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಡಬ್ಲ್ಯುಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.

ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್‌ ಶಾಸಕಿ ಮನೆಗೆ ನುಗ್ಗಿ ಜೀವ ಬೆದರಿಕೆ!

ಮರಳು ದಂಧೆ ವಿರುದ್ಧ ಸಮರ ಸಾರಿದ ಶಾಸಕಿಗೆ ಜೀವ ಬೆದರಿಕೆ!

ಜೀವ ಬೆದರಿಕೆ ಸಂಬಂಧ ರಾಯಚೂರು ಎಸ್ಪಿ ಅರುಣಾಂಶು ಗಿರಿ ಅವರ ಕಚೇರಿಗೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್‌ ಅವರು ತೆರಳಿ ದೂರು ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಲು ಹೋದರೆ ಯಾರೂ ಇಲ್ಲದ ಸಮಯ ನೋಡಿ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ತಮಗೆ ರಕ್ಷಣೆ ನೀಡಬೇಕು ಎಂದು ಶಾಸಕಿ ಕೋರಿದ್ದಾರೆ.

Bagepally News: ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಜೈಭೀಮ್ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ರವಾನೆ

ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಪ್ರತಿಭಟನೆ

ನಿರಾಶ್ರಿತರಾಗಿರುವ ಇವರು ತುಂಬಾ ಬಡವರು, ಪ.ಜಾತಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬ ದವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸುವ ಕ್ರಮವನ್ನು ಕೈ ಬಿಡಿ ಇಲ್ಲವೇ ಅವರಿಗೆ ಇದೇ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಗೊಳಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗುಡಿಸಲು ತೆರುವುಗೊಳಿಸುವಂತಹ ಕ್ರಮ ಸರಿಯಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

Gauribidanur News: ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ: ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್

ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ

ಇಡೀ ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತದಲ್ಲಿ, ಯುವ ಶಕ್ತಿಯನ್ನೇ ಗುರಿ ಯಾಗಿಸಿ ಕೊಂಡು ಕೆಲ ಬಾಹ್ಯ ದುಷ್ಟ ಶಕ್ತಿಗಳು ನಮ್ಮ ದೇಶದ ಯುವಕರನ್ನು ಷಡ್ಯಂತರದಿಂದ ಮಾದಕವಸ್ತು ಗಳ ಅಮಲಿಗೆ ದೂಡುತ್ತಾ ದೇಶದ ಭವಿಷ್ಯಕ್ಕೆ ಗಂಡಾಂತರ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.

Chimul Election: ಚಿಮುಲ್ ಚುನಾವಣೆ: ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ; ಒಗ್ಗಟ್ಟಿನ ಮಂತ್ರ ಜಪಿಸಿದ ಸಂಸದ ಡಾ.ಕೆ.ಸುಧಾಕರ್

ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ

ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್(MP Dr.K.Sudhakar) ಅವರ ಸಂಬಂಧಿಕರಾದ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವೀ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡ ಲಾಗಿದೆ. ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿ ರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ

Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿ ಯುವಕನಿಂದ ಹುಚ್ಚಾಟ

ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಟ್ರಕ್‌ನಲ್ಲಿ ಬೈಕ್‌ ಓಡಿಸುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಈ ಸಾಹಸ ಮಾಡಿದ್ದಾನೆ.

Amitabh Bachchan: ಅಮಿತಾಭ್‌ ಬಚ್ಚನ್ ಮನೆಯಲ್ಲಿ 'ಗೋಲ್ಡನ್ ಟಾಯ್ಲೆಟ್'!  ವಿಜಯ್ ವರ್ಮಾ ಸೆಲ್ಫಿ ವೈರಲ್‌

ಅಮಿತಾಭ್‌ ಬಚ್ಚನ್ ಮನೆಯಲ್ಲಿ 'ಗೋಲ್ಡನ್ ಟಾಯ್ಲೆಟ್'!

Vijay Varma: ಪ್ರಸಿದ್ಧ ನಟ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವ ಕೆಲವು ಹಿಂದಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ಟ್ರೆಂಡ್‌ಗೆ ಸೇರ್ಪಡೆಗೊಂಡಿದೆ ವಿಜಯ್ ವರ್ಮಾ ಫೋಟೋ. ತಮ್ಮ 2016 ರ ನೆನಪಿನ ಪುಟಗಳಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಂಡರು. ಅವರ ಚಿತ್ರಗಳ ಕ್ಯಾರೋಸೆಲ್‌ನಲ್ಲಿ, ಅಭಿಮಾನಿಗಳ ವ್ಯಾಪಕ ಗಮನ ಸೆಳೆದ ಕ್ಷಣಗಳಲ್ಲಿ ಒಂದು, ಹಿರಿಯ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ಅ ವರ ಮನೆ ಜಲ್ಸಾದಲ್ಲಿ ಅವರ ಸೆಲ್ಫಿ .

Gadag News: ಮೇಲಧಿಕಾರಿಗಳ ಕಿರುಕುಳ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ಕಂದಾಯ ಇಲಾಖೆಯಲ್ಲಿ ಸಮರ್ಪಕವಾಗಿ ನಿರ್ವಹಿಸಿದರೂ ಮೇಲಧಿಕಾರಿಳು ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರುವುದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ನನಗೆ ಅನಾರೋಗ್ಯ ಪೀಡಿತ ತಾಯಿ ಇದ್ದಾರೆ. ನನಗೂ ಆರೋಗ್ಯ ಸಮಸ್ಯೆ ಇರುವುದರಿಂದ ಜೀವನ ಕಷ್ಟವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಸರ್ಕಾರಿ ನೌಕರ ಮನವಿ ಮಾಡಿದ್ದಾರೆ.

ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಡ್ಯಾರಿಲ್‌ ಮಿಚೆಲ್‌ ಬಗ್ಗೆ ಭಾರತಕ್ಕೆ ಮಿಚೆಲ್‌ ಸ್ಯಾಂಟ್ನರ್‌ ಎಚ್ಚರಿಕೆ!

ಡ್ಯಾರಿಲ್‌ ಮಿಚೆಲ್‌ ಬಗ್ಗೆ ಭಾರತಕ್ಕೆ ಸ್ಯಾಂಟ್ನರ್‌ ವಾರ್ನಿಂಗ್‌!

India vs New zealand 1st T20I: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಜನವರಿ 21 ರಂದು ನಡೆಯುವ ಮೊದಲನೇ ಟಿ20ಐ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಕಿವೀಸ್‌ ನಾಯಕ ಮಿಚಲ್‌ ಸ್ಯಾಂಟ್ನರ್‌ ಅವರು ಭಾರತ ತಂಡಕ್ಕೆ ಡ್ಯಾರಿಲ್‌ ಮಿಚೆಲ್‌ ಅವರ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆಯಿಂದ ಕಿರಿಕಿರಿ: ಸಾರ್ವಜನಿಕರ ಆಕ್ರೋಶ

ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ವಾಹನ ನಿಲುಗಡೆಯಿಂದ ಕಿರಿಕಿರಿ

Madhugiri News: ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ವೃದ್ಧರು ಹಾಗೂ ಮಹಿಳೆಯರು ಕಚೇರಿಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Bengaluru civic polls: ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

GBA Election 2026: ಗ್ರೇಟರ್‌ ಬೆಂಗಳೂರಿನ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಮತದಾರರು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದ್ದಾರೆ.

ಯುವತಿಯ ಎದೆ ಭಾಗ ನೋಡಿ ಬಟ್ಟೆ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ 10 ವರ್ಷದ ಬಾಲಕ; ಬೆಂಗಳೂರಿನಲ್ಲಾದ ಮುಜುಗರದ ಸನ್ನಿವೇಶ ವಿವರಿಸಿದ ಸಂತ್ರಸ್ತೆ

ಯುವತಿಯ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದ 10 ವರ್ಷದ ಬಾಲಕ

Viral Video: ಸ್ಲೀವ್‌ಲೆಸ್‌ ಟಾಪ್‌ ಧರಿಸಿದ ಯುವತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ 10ರಿಂದ 13 ವರ್ಷದೊಳಗಿನ ಬಾಲಕರು ಅಶ್ಲೀಲ ಕಮೆಂಟ್‌ ಮಾಡಿರುವ ಘಟನೆ ಬೆಂಗಳೂರಿನ ಆವಲಹ‍ಳ್ಳಿಯಲ್ಲಿ ನಡೆದಿದೆ. ಉತ್ತರ ಭಾರತದ ಯುವತಿ ಈ ಘಟನೆ ವಿವರಿಸಿ ವಿಡಿಯೊ ಮಾಡಿದ್ದಾಳೆ. ಸದ್ಯ ಇದು ವೈರಲ್‌ ಆಗಿದೆ.

IND vs NZ: ಮೊದಲನೇ ಟಿ20ಐ ಪಂದ್ಯದಲ್ಲಿ ಇಶಾನ್‌ ಕಿಶನ್‌ ಚಾನ್ಸ್‌ ಇದೆಯಾ? ಸೂರ್ಯಕುಮಾರ್‌ ಯಾದವ್ ಸ್ಪಷ್ಟನೆ!

IND vs NZ: ಇಶಾನ್‌ ಕಿಶನ್‌ ಆಡಿಸುವ ಬಗ್ಗೆ ಸೂರ್ಯ ಮಹತ್ವದ ಹೇಳಿಕೆ!

ಎರಡೂವರೆ ವರ್ಷಗಳಿಂದ ಭಾರತ ಟಿ20 ತಂಡದಿಂದ ದೂರ ಉಳಿದಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ತಿಲಕ್ ವರ್ಮಾ ಅಲಭ್ಯತೆಯ ನಡುವೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ನಾಯಕ ಸೂರ್ಯಕುಮಾರ್ ಖಚಿತಪಡಿಸಿದ್ದಾರೆ.

Shiva Rajkumar: ಶಿವಣ್ಣನ ತೋಳಿನಲ್ಲಿ ಮಗುವಾದ ಪ್ರೀತಮ್‌! ಹ್ಯಾಟ್ರಿಕ್‌ ಹೀರೋ ಕ್ಯೂಟ್‌ ವಿಡಿಯೋ ವೈರಲ್‌

ಶಿವಣ್ಣನ ತೋಳಿನಲ್ಲಿ ಮಗುವಾದ ಪ್ರೀತಮ್‌! ಕ್ಯೂಟ್‌ ವಿಡಿಯೋ ವೈರಲ್‌

Shivanna: ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್‌ ನವೆಂಬರ್‌ 15ರಂದು ಆರಂಭವಾಯ್ತು. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನ ರಂಜನೆ ನೀಡುತ್ತಲೇ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಗದಗದಿಂದ ಪ್ರೀತಂ ಎಂಬ ಬಾಲಕ ಬಂದಿದ್ದಾನೆ. ಆತನಿಗೆ ಇನ್ನೂ ಏಳುವರ್ಷ. ಆದರೆ, ಅವನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು.

ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್: ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

ಮೈಸೂರು ಸಿಲ್ಕ್ ಸೀರೆಗಾಗಿ ಮುಂಜಾನೆ 4 ಗಂಟೆಗೆ ಕ್ಯೂ ನಿಂತ ಜನ

Viral Video: ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ಮುಂಜಾನೆ 4 ಗಂಟೆಯಿಂದಲೇ ಬೆಂಗಳೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಶೋರೂಂ ಮುಂದೆ ಮುಗಿಬಿದ್ದಿರುವ ವಿಡಿಯೊ ವೈರಲ್‌ ಆಗಿದೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಖರೀದಿಗೆ ಅವಕಾಶವಿದೆ.

Ashwini Gowda: ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

Sudeep: ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ (Winner) ಗಿಲ್ಲಿ ಆಗಿದ್ದಾರೆ. ಬಿಗ್‌ ಬಾಸ್‌ ಶುರು ಆದಾಗಿನಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ,ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಅಶ್ವಿನಿ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. BBK 12ರ ಒಟ್ಟಾರೆ ವೋಟ್​​​ ನಂಬರ್ ಆಚೆ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ. ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಗೌಡ ಅವರು ಸಿದ್ಧವಾಗಿಲ್ಲ. ಗಿಲ್ಲಿ ಬಗ್ಗೆ ಅಸಮಾಧನ ಹೊರ ಹಾಕಿದ್ದಾರೆ.

vs NZ: ಇಶಾನ್‌ ಕಿಶನ್‌ ಇನ್‌, ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

IND vs NZ 1st T20I match Preview: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಮುಗಿಸಿದ್ದು, ಜನವರಿ 21 ರಂದು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸಲಿವೆ. ಮೊದಲನೇ ಪಂದ್ಯ ಬುಧವಾರ ನಾಗ್ಪುರದ ವಿದರ್ಭ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡಯಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಮಾಘ ಮೇಳ 2026: ಮುಳ್ಳಿನ ಹಾಸಿಗೆ ಮೇಲೆ ಮಲಗಿದ ಕಾಂಟೆ ವಾಲೆ ಬಾಬಾ, ಇಲ್ಲಿದೆ ನೋಡಿ ವಿಡಿಯೊ

ಮುಳ್ಳಿನ ಹಾಸಿಗೆ ಮೇಲೆ ಮಲಗಿದ ಕಾಂಟೆ ವಾಲೆ ಬಾಬಾ

Magh Mela 2026: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಾಘ ಮೇಳ 2026ರಲ್ಲಿ ಮುಳ್ಳುಗಳಿಂದ ತುಂಬಿದ ಹಾಸಿಗೆಯ ಮೇಲೆ ಮಲಗಿ ಭಕ್ತರಿಗೆ ದರ್ಶನ ನೀಡುತ್ತಿರುವ ಕಾಂಟೆ ವಾಲೆ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಅನನ್ಯ ಸಾಧನೆ ಹಾಗೂ ದೃಢ ಸಂಕಲ್ಪದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ವಂತ UPI ಕ್ಯೂಆರ್‌ ಕೋಡ್‌ ಬಳಸಿ ಬಿಎಂಟಿಸಿ ಟಿಕೆಟ್‌ ಹಣ ಗುಳುಂ; ಮೂವರು ಕಂಡಕ್ಟರ್‌ಗಳ ಅಮಾನತು

ಬಿಎಂಟಿಸಿ ಟಿಕೆಟ್‌ ಹಣ ದುರ್ಬಳಕೆ; ಮೂವರು ಕಂಡಕ್ಟರ್‌ಗಳ ಅಮಾನತು

BMTC conductor fraud: ಅಮಾನತುಗೊಂಡ ಬಿಎಂಟಿಸಿ ಸಿಬ್ಬಂದಿ ಟಿಕೆಟ್‌ ನೀಡುವ ವೇಳೆ ಸುಮಾರು 1 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಡಿಸೆಂಬರ್ 2025 ರಲ್ಲಿ ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ ಬಿಎಂಟಿಸಿ ತನಿಖಾ ತಂಡವು ಈ ಅಕ್ರಮವನ್ನು ಪತ್ತೆಹಚ್ಚಿದೆ.

ಅನುಪಮ್ ಖೇರ್ ಮಾನವೀಯತೆಗೆ ಫ್ಯಾನ್ಸ್ ಫಿದಾ: ಸೆಲ್ಫಿ ಕೇಳಲು ಬಂದ ಸೆಕ್ಯೂರಿಟಿ ಗಾರ್ಡ್‌ಗೆ ಹೊಸ ಸ್ಮಾರ್ಟ್‌ ಫೋನ್ ಗಿಫ್ಟ್

ಸೆಕ್ಯೂರಿಟಿ ಗಾರ್ಡ್‌ಗೆ ಸ್ಮಾರ್ಟ್‌ ಫೋನ್ ಕೊಡಿಸಿದ ಅನುಪಮ್ ಖೇರ್

ಸೆಲ್ಫಿ ಕೇಳಿದ ಭದ್ರತಾ ಸಿಬ್ಬಂದಿಗೆ ಅನುಪಮ್ ಖೇರ್ ಸ್ಮಾರ್ಟ್‌ ಫೋನ್ ಕೊಡಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಹರಿಯಾಣದ ಗುರುಗ್ರಾಮದ ಸೋಹ್ನಾದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ವಿಡಿಯೊ ಭಾರಿ ವೈರಲ್ ಆಗಿದೆ.

Siddu Moolimani: ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್'  ಟ್ರೈಲರ್‌ ಔಟ್‌! ಒಂದೊಳ್ಳೆ  ಯೂಟ್ಯೂಬರ್‌ ಕತೆ

ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್' ಟ್ರೈಲರ್‌ ಔಟ್‌!

Siddu Moolimani: 'ಲವ್ ಯು ಮುದ್ದು' ಚಿತ್ರದ ನಂತರ ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ 'ಸೀಟ್‌ ಎಡ್ಜ್‌' ತೆರೆಗೆ ಬರಲು ತಯಾರಾಗಿದೆ. ಇದೇ ಜನವರಿ 30ಕ್ಕೆ 'ಸೀಟ್ ಎಡ್ಜ್' ಚಿತ್ರ ತೆರೆಗೆ ಬರಲಿದ್ದು, ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇನ್ನು 'ಸೀಟ್ ಎಡ್ಜ್' ಚಿತ್ರ ವ್ಲಾಗರ್ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಕುರಿತಾದ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದೆ.

Loading...