ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

Vishwavani Editorial: ಮಳೆ ಕೊರತೆ ಎದುರಿಸೋಣ

Vishwavani Editorial: ಮಳೆ ಕೊರತೆ ಎದುರಿಸೋಣ

ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾ ಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿ ದ್ದಾರೆ.

Vinay Shirahattimath Column: ವೈಯಕ್ತಿಕ ನಿಂದನೆಯಾಚೆಗಿರಲಿ ವಚನ ಸಾಹಿತ್ಯದ ಸತ್ಯಶೋಧ

ವೈಯಕ್ತಿಕ ನಿಂದನೆಯಾಚೆಗಿರಲಿ ವಚನ ಸಾಹಿತ್ಯದ ಸತ್ಯಶೋಧ

ಶರಣ ರವಿ ಹಂಜ್ ಅವರ ಲೇಖನಕ್ಕೆ ಪ್ರತಿಕ್ರಿಯಿಸುವ ಮುನ್ನ, ವಿಷಯದ ಗಾಂಭೀರ್ಯ ಕಾಯ್ದು ಕೊಳ್ಳುವ ಸಲುವಾಗಿ ಇಡೀ ಚರ್ಚೆಯನ್ನು ಒಂದು ಸ್ಪಷ್ಟವಾದ ಚೌಕಟ್ಟಿನೊಳಗೆ ತರುವುದು ಅತ್ಯಗತ್ಯ ವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸಮಸ್ಯೆಯನ್ನು ನಾವು ಮೊದಲು ಸ್ಪಷ್ಟವಾಗಿ ವ್ಯಾಖ್ಯಾನಿಸಿಕೊಳ್ಳ ಬೇಕಿದೆ.

Geetha Wadeyar: ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ

ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ

Geetha Wadeyar: ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳಿಂದ ಪವನ್ ಒಡೆಯರ್ ಜೊತೆಯಲ್ಲಿ ಬೆಂಗಳೂರು ನಲ್ಲೇ ತಾಯಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಂದು ಕುಣಿಗಲ್ ನಲ್ಲಿ (Kunigal) ಅಂತ್ಯ ಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

Vastu Tips: ಅಡುಗೆಮನೆಯ ಈ 5 ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹೆಚ್ಚಲಿದೆ ಸುಖ-ಸಮೃದ್ಧಿ

ಧನಾತ್ಮಕ ಶಕ್ತಿಗೆ ಕಿಚನ್‌ನಲ್ಲಿ ಈ ಬದಲಾವಣೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯು ಮನೆಯ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಅಡುಗೆಮನೆಯ ಸರಿಯಾದ ದಿಕ್ಕು, ಸ್ವಚ್ಛತೆ, ಗಾಳಿಯ ಹರಿವು ಹಾಗೂ ಬಣ್ಣಗಳ ಆಯ್ಕೆಯು ಕುಟುಂಬದ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಈ 5 ಸರಳ ವಾಸ್ತು ಸಲಹೆಗಳು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

Astro Tips: ಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸುವುದಕ್ಕೂ ಇದೆ ನಿಯಮ; ಯಾವ ದೇವರಿಗೆ ಹೇಗೆ ಸಮರ್ಪಿಸಬೇಕು?; ಇಲ್ಲಿದೆ ಮಾಹಿತಿ

ದೇವರಿಗೆ ತೆಂಗಿನಕಾಯಿ ಅರ್ಪಿಸುವ ಮುನ್ನ ಈ ವಿಷಯ ತಿಳಿಯಿರಿ

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಶ್ರೀಫಲವೆಂದು ಪರಿಗಣಿಸಲಾಗುತ್ತದೆ. ಪೂಜೆ, ವ್ರತ ಹಾಗೂ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಗೆ ವಿಶೇಷ ಸ್ಥಾನವಿದ್ದು, ವಿವಿಧ ದೇವತೆಗಳಿಗೆ ವಿಭಿನ್ನ ರೀತಿಯಲ್ಲಿ ಅರ್ಪಿಸುವ ಸಂಪ್ರದಾಯವಿದೆ. ತೆಂಗಿನಕಾಯಿಯ ಧಾರ್ಮಿಕ ಮಹತ್ವ ಹಾಗೂ ಅದನ್ನು ಅರ್ಪಿಸುವ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.

Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

Sanvi Sudeep: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಈಗಾಗಲೇ ಗಾಯಕಿಯಾಗಿ ಚಿತ್ರಂಗ ಪ್ರವೇಶಿಸಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಗಣೇಶನ ಟ್ಯಾಟೂ ಹಾಕಿಸಿಕೊಂರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಎಂಬಪ್ಪೆ ಅವಳಿ ಗೋಲು; ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ 3-1 ಅಂತರದ ಗೆಲುವು

ಎಂಬಪ್ಪೆ ಅವಳಿ ಗೋಲು; ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ 3-1 ಅಂತರದ ಗೆಲುವು

FIFA World Cup 2026: ಎಂಬಪ್ಪೆ ಅವರ ಎರಡು ಗೋಲುಗಳು ಫ್ರಾನ್ಸ್ ಪರ 58 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಲು ಸಹಾಯ ಮಾಡಿತು ಮತ್ತು ವಿಶ್ವಕಪ್‌ನಲ್ಲಿ ಒಟ್ಟಾರೆ 14 ಗೋಲುಗಳನ್ನು ಗಳಿಸಿದರು. ಈ ಮೂಲಕ ಅವರು ಟೂರ್ನಮೆಂಟ್‌ನ ಸ್ಕೋರಿಂಗ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಫ್ರೆಂಚ್ ದಿಗ್ಗಜ ಜಸ್ಟ್ ಫಾಂಟೈನ್ ಅವರನ್ನು ಹಿಂದಿಕ್ಕಿ ಜರ್ಮನಿಯ ದಂತಕಥೆ ಗೆರ್ಡ್ ಮುಲ್ಲರ್ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ಮಿರೋಸ್ಲಾವ್ ಕ್ಲೋಸ್ ಮಾತ್ರ ಅವರಿಗಿಂತ ಮುಂದಿದ್ದಾರೆ.

Lokesh Kayarga Column: ಮನೆಯೇ ಮೊದಲ ಕ್ರೌರ್ಯದ ತಾಣ ಆಗದಿರಲಿ !

Lokesh Kayarga Column: ಮನೆಯೇ ಮೊದಲ ಕ್ರೌರ್ಯದ ತಾಣ ಆಗದಿರಲಿ !

ಹೆತ್ತ ಮಗುವನ್ನು ಸಲಹಬೇಕಾದ ತಾಯಿ ಕಾಮಲಾಲಸೆಯಲ್ಲಿ ಮಗುವನ್ನೇ ಕತ್ತು ಹಿಸುಕಿ ಸಾಯಿಸು ತ್ತಿದ್ದಾಳೆ. ಮಕ್ಕಳಿಗಾಗಿಯೇ ತಮ್ಮ ಇಡೀ ಬದುಕನ್ನು ಸವೆಸಿದ ಹೆತ್ತವರನ್ನು, ಪುಡಿ ಆಸ್ತಿಗಾಗಿ ಮಗ/ಮಗಳು ಸಂಚು ಹೂಡಿ ಸಾಯಿಸುತ್ತಿದ್ದಾರೆ. ಈ ಕ್ರೌರ್ಯ, ಈ ಸಂವೇದನಾಶೂನ್ಯತೆ ಕೇವಲ ಬಿಡಿ ಅಪರಾಧಗಳಲ್ಲ; ಬದಲಿಗೆ ನಮ್ಮ ಸಮಾಜದ ಸ್ವಾಸ್ಥ್ಯ ಕೆಟ್ಟಿರುವುದಕ್ಕೆ, ಸಾಂಸ್ಕೃತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.

ಫೋನ್‌ಗೂ ಸಿಕ್ತಿಲ್ಲ, ಸಂಸದರು ಮಾತುಕತೆಗೂ ಬರ್ತಿಲ್ಲ; ಉದ್ಧವ್‌ ಠಾಕ್ರೆ ಶಿವಸೇನೆಯಲ್ಲಿ ಬಿರುಕು?

ಉದ್ಧವ್‌ ಠಾಕ್ರೆ ಶಿವಸೇನೆಯಲ್ಲಿ ಬಿರುಕು?

ಉದ್ಧವ್‌ ಠಾಕ್ರೆ ನೇತೃತ್ವದ (Shiv Sena) ಶಿವಸೇನೆ (ಯುಬಿಟಿ) ಬಣದಲ್ಲಿ ಬಿರುಕು ಮೂಡಿದೆ. ಪಕ್ಷದ ಕೆಲವು ಲೋಕಸಭಾ ಸಂಸದರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಅವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ಮೂಲಗಳು ತಿಳಿಸಿವೆ.

ಹೊರ್ಮುಜ್ ಜಲಸಂಧಿಯಲ್ಲಿ 'ಟೋಲ್' ಇಲ್ಲ, ಕೇವಲ 'ಸೇವಾ ಶುಲ್ಕ': ಇರಾನ್ ಹೇಳಿಕೆಯ ಹಿಂದಿನ ಮರ್ಮವೇನು?

ಹೊರ್ಮುಜ್‌ನಲ್ಲಿ ಶುಲ್ಕ ವಿಧಿಸಲು ಇರಾನ್ ಸಿದ್ಧತೆ

Strait Of Hormuz: ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಭದ್ರತೆ ಹಾಗೂ ಇತರ ಕಡಲ ಸೇವೆಗಳ ಹೆಸರಿನಲ್ಲಿ ಶುಲ್ಕ ವಿಧಿಸುವುದಾಗಿ ಇರಾನ್ ಸೂಚಿಸಿದೆ. ಇದು ಟೋಲ್ ಅಲ್ಲ, ಸೇವೆಗಳಿಗೆ ನೀಡುವ ಶುಲ್ಕ ಎಂದು ಇರಾನ್ ಸ್ಪಷ್ಟಪಡಿಸಿದರೂ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಹೊರ್ಮುಜ್‌ನಂತಹ ನೈಸರ್ಗಿಕ ಜಲಮಾರ್ಗದಲ್ಲಿ ಸಂಚಾರಕ್ಕೆ ಶುಲ್ಕ ವಿಧಿಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Roopa Gururaj Column: ಹರಿಭಕ್ತಿಸಾರ: ಅಹಂಕಾರದ ಭಂಗ ಮತ್ತು ನಿಜವಾದ ಜ್ಞಾನ

ಹರಿಭಕ್ತಿಸಾರ: ಅಹಂಕಾರದ ಭಂಗ ಮತ್ತು ನಿಜವಾದ ಜ್ಞಾನ

ನಮ್ಮ ಬದುಕಿನಲ್ಲಿ ಸಿಗುವ ಸುಖದ ಪಾತ್ರೆ ನೀನೇ, ಹಾಗೆಯೇ ನಮ್ಮ ಪಾಪಕರ್ಮಗಳಿಂದ ಬರುವ ದುಃಖದ ಬೆಂಕಿಯೂ ನೀನೇ ಆಗಿದ್ದೀಯೆ. ಅಂದರೆ, ನಮ್ಮ ಬದುಕಿನ ಪ್ರತಿಯೊಂದು ಘಟನೆಯೂ ನಿನ್ನ ಇಚ್ಛೆಯಂತೆಯೇ ನಡೆಯುತ್ತದೆ. ಸರ್ವೋತ್ತಮನಾದ ಎಲೈ ದೇವನೇ, ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಸುಟ್ಟು, ನಿನ್ನ ಶರಣಾಗತನಾದ ನನ್ನನ್ನು ಮತ್ತು ಈ ಜಗತ್ತನ್ನು ಕಾಯ ಕರುಣಿಸು ಪ್ರಭು!

ಮಳೆಗಾಲದಲ್ಲಿ ಮಕ್ಕಳ ಕ್ಷೇಮ ಕಾಯುವುದು ಹೇಗೆ?

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

Health Tips; ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹೇಳಲು ಬಾರದ, ಹೇಳಿದ್ದು ತಿಳಿಯದ ಮಕ್ಕಳ ಅನಾರೋಗ್ಯವೆಂದರೆ ಮನೆಯ ಹಿರಿಯರಿಗೆ ತಲೆಬಿಸಿ.

ರಾಜ್ಯದಲ್ಲಿ ಮುಂಗಾರು ದುರ್ಬಲ; ಹಲವು ಜಿಲ್ಲೆಗಳಲ್ಲಿ ಮಳೆ ಕುಂಠಿತ

ರಾಜ್ಯದಲ್ಲಿ ಮುಂಗಾರು ದುರ್ಬಲ; ಹಲವು ಜಿಲ್ಲೆಗಳಲ್ಲಿ ಮಳೆ ಕುಂಠಿತ

ಜೂನ್‌ ಎರಡನೇ ವಾರದಲ್ಲಿಯೂ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ಹಲವೆಡೆ ನಿರೀಕ್ಷೆಯಂತೆ ಮುಂಗಾರು ಮಳೆ ಆಗದ ಕಾರಣ ರೈತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಹವಾಮಾನ ಇಲಾಖೆ 17-06-2026 ರಿಂದ 22-06-2026 ರವರೆಗೆ ಕರ್ನಾಟಕದಲ್ಲಿ ಮಳೆಯ ಪ್ರಮಾಣ ನಿಧಾನವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

Vishweshwar Bhat Column: ನಾಯಿಗಳಿಗೆ ಟೈಮ್‌ ತಿಳಿಯುತ್ತದಾ ?

Vishweshwar Bhat Column: ನಾಯಿಗಳಿಗೆ ಟೈಮ್‌ ತಿಳಿಯುತ್ತದಾ ?

ನಾಯಿಗಳಿಗೆ ನಮ್ಮಂತೆ ‘ನಿಮಿಷ’ ಅಥವಾ ‘ಗಂಟೆ’ ಎಂಬ ಗಣಿತದ ಲೆಕ್ಕಾಚಾರ ಗೊತ್ತಿಲ್ಲ. ಆದರೆ ಅವು ಪರಿಸರದಲ್ಲಿ ಆಗುವ ಬದಲಾವಣೆಗಳು, ತಮ್ಮ ದೇಹದ ಅಗತ್ಯಗಳು ಮತ್ತು ಮುಖ್ಯವಾಗಿ ವಾಸನೆಯ ಏರಿಳಿತಗಳನ್ನು ಬಳಸಿಕೊಂಡು ಸಮಯವನ್ನು ಅತ್ಯಂತ ನಿಖರವಾಗಿ ಗ್ರಹಿಸುತ್ತವೆ. ನಿಮ್ಮ ನಾಯಿ ನೀವು ಬರುವ ಸಮಯಕ್ಕೆ ಸರಿಯಾಗಿ ಬಾಗಿಲಲ್ಲಿ ನಿಂತಿದ್ದರೆ, ಅದಕ್ಕೆ ನಿಮ್ಮ ಮೇಲಿರುವ ಪ್ರೀತಿ ಮತ್ತು ಅದರ ಅದ್ಭುತ ಮೂಗಿನ ಶಕ್ತಿಯೇ ಕಾರಣ.

Raghava Sharma Nidle Column: ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಸೋದರಳಿಯನ ಅಕ್ರಮ ಕೃತ್ಯ, ಅವ್ಯವಹಾರಗಳನ್ನು ನೋಡಿಯೂ ಜಾಣಕುರುಡು ಪ್ರದರ್ಶಿಸು ತ್ತಿದ್ದ ಮಮತಾ ತಾನೊಬ್ಬ ಮಹಾನ್ ಜನನಾಯಕಿ ಎಂಬಂತೆ ಪೋಸು ಕೊಡುತ್ತಿದ್ದರು. ಆದರೆ, ಮೇ 4ರಂದು ಮಮತಾ ದೀದಿಯ ದರ್ಪ, ಅಹಂಕಾರವನ್ನು ಜನರೇ ಕೊನೆಗೊಳಿಸಿದರು. ದೆಹಲಿ ಯಲ್ಲಿರುವ ಇಂಡಿ ಮೈತ್ರಿಕೂಟದವರ ಮನೆಗಳಿಗೆ ಎಡತಾಕುತ್ತಾ ನಮ್ಮ ಟಿಎಂಸಿಯನ್ನು ರಕ್ಷಿಸಿ ಎಂದು ಮನವಿ ಮಾಡುವ ಸ್ಥಿತಿ ಈ ಮಮತಾರದ್ದು.

ದಿನ ಭವಿಷ್ಯ, ಜೂನ್ 17, 2026: ಈ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಪ್ರಾಪ್ತಿಯಾಗುವ ದಿನ!

ಈ ರಾಶಿಯವರಿಗೆ ಆರ್ಥಿಕ ವ್ಯವಹಾರದಲ್ಲಿ ಇಂದು ಲಾಭ

Horoscope Today June 17th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪುನರ್ವಸು ನಕ್ಷತ್ರದ, ಜೂನ್ 17ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಏಳನೇ ಅಭ್ಯರ್ಥಿಯ ಗೆಲುವಿಗೆ ಕೈ -ತೆನೆ ತೆರೆಮರೆ ಲೆಕ್ಕಾಚಾರ: ಮೇಲ್ಮನೆ ಮೇಲಾಟ

ಮೇಲ್ಮನೆ ಮೇಲಾಟ

ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾ ಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ನಡುವೆ ಸ್ಪರ್ಧೆ ಏರ್ಪಟ್ಟಿದೆ.

ನಿರ್ಮಾಣ ಹಂತದ ಗುಂಡಿಗೆ ಬಿದ್ದು ಒಂದುವರೆ ವರ್ಷದ ಹಸುಗೂಸು ಸಾವು

ನಿರ್ಮಾಣ ಹಂತದ ಗುಂಡಿಗೆ ಬಿದ್ದು ಒಂದುವರೆ ವರ್ಷದ ಹಸುಗೂಸು ಸಾವು

ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿಯನ್ನು ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ಅದರಲ್ಲಿ ಸಾಕಷ್ಟು ನೀರು ತುಂಬಿಕೊಂಡಿತ್ತು. ಆದರೆ ಅಪಾಯಕಾರಿ ಗುಂಡಿಯ ಸುತ್ತ ಯಾವುದೇ ಸುರಕ್ಷತಾ ಬೇಲಿ, ಎಚ್ಚರಿಕೆ ಫಲಕ ಅಥವಾ ರಕ್ಷಣಾ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ವೇಳೆ ಮಗು ಪಲ್ಲವಿ ಆ ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ

ರೌಡಿಶೀಟರುಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಿದ ಗೌರಿಬಿದನೂರು ಪೊಲೀಸರು

ರೌಡಿಶೀಟರುಗಳ ಪರೇಡ್, ಎಚ್ಚರಿಕೆ ನೀಡಿದ ಗೌರಿಬಿದನೂರು ಪೊಲೀಸರು

ಪ್ರತಿಯೊಬ್ಬ ರೌಡಿಶೀಟರ್ʼನನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ, ನಿಮ್ಮ ಪ್ರತಿಯೊಂದು ಮೂಮೆಂಟ್ ನಮಗೆ ತಿಳಿಯುತ್ತಿರುತ್ತದೆ, ನಾನು ಸುಧಾರಣೆಯಾಗಿದ್ದೇನೆ, ಯಾವುದೇ ತಪ್ಪು ಮಾಡು ತ್ತಿಲ್ಲ ಎಂದು ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಂಡರೆ ಸಾಲದು,ನೀವು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕುತ್ತಿದ್ದೀರಾ ಇಲ್ಲವೇ ಎಂಬುದನ್ನು ಗಮನಿಸಿ ನಡವಳಿಕೆಯ ಪ್ರಮಾಣಪತ್ರ ನೀಡಲು ನಾವಿದ್ದೇವೆ.

Chinthamani News: ಕೈವಾರದಲ್ಲಿ ಆರಾಧನೆ ಪ್ರಯುಕ್ತ ಹೋಮ

ಕೈವಾರದಲ್ಲಿ ಆರಾಧನೆ ಪ್ರಯುಕ್ತ ಹೋಮ

ಆರಾಧನಾ ಮಹೋತ್ಸವದ ಹಿಂದಿನ ದಿನದಂದು ವಿಶೇಷ ಹೋಮ ನಡೆಸಿಕೊಂಡು ಬರುವುದು ಸಂಪ್ರದಾಯವಾಗಿದೆ. ಅರ್ಚಕ ವೃಂದದವರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸಿಕೊಟ್ಟರು. ಕಲಶಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಪಂಚಾಕ್ಷರೀ ಹೋಮದೊಂದಿಗೆ ಗಣಪತಿ, ರಾಮತಾರಕ ಹೋಮಗಳನ್ನು ನೆರವೇರಿಸಲಾಯಿತು. ಈ ಹೋಮದಲ್ಲಿ ನೂರಾರು ಸಾಧು-ಸಂತ ಭಕ್ತರು ಭಾಗವಹಿಸಿದ್ದರು. ಪೂರ್ಣಾಹುತಿಯನ್ನು ಸಮರ್ಪಿಸಲಾಯಿತು.

ಸೂರ್ಯವಂಶಿ-ಹಲಂಬಗೆ ನಡುವೆ ಜಗಳ: ಆಟಗಾರರಿಗೆ ದಂಡ ವಿಧಿಸಿದ ಮ್ಯಾಚ್‌ ರೆಫರಿ!

ಸೂರ್ಯವಂಶಿ-ಹಲಂಬಗೆ ನಡುವೆ ಜಗಳ: ಆಟಗಾರರಿಗೆ ದಂಡ!

ತ್ರಿಕೋನ ಸರಣಿಯ ಪಂದ್ಯದ ವೇಳೆ ಭಾರತ ಎ ತಂಡದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಶ್ರೀಲಂಕಾ ಎ ತಂಡದ ಆಟಗಾರ ವಿಶೇನ್ ಹಲಂಬಗೆ ಅವರೊಂದಿಗೆ ಘರ್ಷಣೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಪಂದ್ಯದ ರೆಫರಿ ಆಟಗಾರರ ವಿರುದ್ಧ ಕ್ರಮ ಕೈಗೊಂಡರು.

ದೆಹಲಿಯಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಉಗ್ರ ಜಾಲ ಪತ್ತೆ: 7 ಮಂದಿ ಬಂಧನ

ಐಎಸ್‌ಐ ಬೆಂಬಲಿತ ಉಗ್ರ ಜಾಲ ಭೇದಿಸಿದ ದೆಹಲಿ ಪೊಲೀಸರು

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರ ಹಾಗೂ ಅಪರಾಧ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಜಾಲವು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಭಾರತಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದು, ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿತ್ತು. ಬಂಧಿತರಿಂದ ಶಸ್ತ್ರಾಸ್ತ್ರಗಳು, ಕಾರತೂಸುಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು; ತಮಿಳು ನಿರ್ಮಾಪಕನ ಜತೆ ʼನವಗ್ರಹʼ ನಟಿ ಕಲ್ಯಾಣ?

ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು

Sharmiela Mandre: ʼಕಣ್‌ ಕಣ್ಣ ಸಲಿಗೆʼ ಎಂದಿದ್ದ ಕನ್ನಡದ ಸ್ಟಾರ್‌ ನಟಿ ಶರ್ಮಿಳಾ ಮಾಂಡ್ರೆ ಇದೀಗ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನುವ ಮಾತು ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ತಮಿಳು ನಿರ್ಮಾಪಕ ಸುಧನ್‌ ಸುದರ್ಶನ್‌ ಅವರೊಂದಿಗೆ ಶರ್ಮಿಳಾ ಸಪ್ತಪದಿ ತಿಳಿಯಲಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ.

ENG vs NZ: ನ್ಯೂಜಿಲೆಂಡ್‌ ತಂಡದಲ್ಲಿ ಕೇನ್‌ ವಿಲಿಯಮ್ಸನ್‌ ಸ್ಥಾನವನ್ನು ತುಂಬಿದ ಹೆನ್ರಿ ನಿಕೋಲ್ಸ್‌!

‌ENG vs NZ: ನ್ಯೂಜಿಲೆಂಡ್‌ ಟೆಸ್ಟ್‌ ತಂಡಕ್ಕೆ ಸೇರಿದ ಹೆನ್ರಿ ನಿಕೋಲ್ಸ್!

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಇನ್ನುಳಿದ ಭಾಗಕ್ಕೆ ಕೇನ್‌ ವಿಲಿಯಮ್ಸನ್‌ ಅವರ ಸ್ಥಾನಕ್ಕೆ ಹೆನ್ರಿ ನಿಕೋಲ್ಸ್‌ ನ್ಯೂಜಿಲೆಂಡ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಲಿಯಮ್ಸನ್‌ ಅವರು ಮೊದಲನೇ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹಾಗಾಗಿ ನಿಕೋಲ್ಸ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬಹುದು.

Loading...