ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

ಭಾರತದಾದ್ಯಂತ ಮೊಬೈಲ್ ಸದ್ದು ಬೀಪ್‌ ಸೌಂಡ್‌ ಮಾಡಿದ ಮೊಬೈಲ್‌ ಫೋನ್‌: ಕೇಂದ್ರ ಸರ್ಕಾರದ ತುರ್ತು ವಿಪತ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷೆ ಯಶಸ್ವಿ

ದೇಶವ್ಯಾಪಿ ಮೊಬೈಲ್ ಅಲರ್ಟ್: ಏನಿದು ‘ಸೆಲ್ ಬ್ರಾಡ್‌ಕಾಸ್ಟ್’?

ಭಾರತ ಸರ್ಕಾರವು ‘ಸೆಲ್ ಬ್ರಾಡ್‌ಕಾಸ್ಟ್’ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಪ್ರಾರಂಭಿಸಿದ್ದು, ದೇಶದಾದ್ಯಂತ ಲಕ್ಷಾಂತರ ಮೊಬೈಲ್‌ಗಳಿಗೆ ʼಅತ್ಯಂತ ತೀವ್ರ ಎಚ್ಚರಿಕೆʼ ಸಂದೇಶ ರವಾನಿಸಲಾಗಿದೆ. ಇದು ಕೇವಲ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಗಾಬರಿಯಾಗಬೇಕಾಗಿಲ್ಲ. ಈ ವ್ಯವಸ್ಥೆಯು ಭೂಕಂಪ, ಸುನಾಮಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Janamejaya Umarji Column: ಬಸವಣ್ಣನವರ ಸಪ್ತಶೀಲ: ಅಸಹಿಷ್ಣುತೆ ಗಣಾಚಾರವೇ ?

ಬಸವಣ್ಣನವರ ಸಪ್ತಶೀಲ: ಅಸಹಿಷ್ಣುತೆ ಗಣಾಚಾರವೇ ?

ಲಿಂಗಾಯತದಲ್ಲಿ ಸೇರಿರುವ ಕೆಲ ಕಮ್ಯುನಿಸ್ಟ್ ಮೂಲಭೂತವಾದಿಗಳು ಅಸಹಿಷ್ಣುತೆಯ ಹರಡುವಿಕೆ ಯನ್ನು ಗಣಾಚಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಈ ಅಸಹಿಷ್ಣುತೆಗೆ ಹಲವು ಉದಾಹರಣೆ ಗಳಿವೆ. ವಚನ ದರ್ಶನ ಪುಸ್ತಕಕ್ಕೆ ವಿರುದ್ಧವಾಗಿ ವಚನ ದರ್ಶನ ಸತ್ಯ-ಮಿಥ್ಯ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ; ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ!

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ

Amruthadhaare Serial: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

ಜಬಲ್ಪುರ ದೋಣಿ ದುರಂತ ನಡೆದು ಎರಡು ದಿನಗಳಾದರೂ ಪತ್ತೆಯಾಗಿಲ್ಲ 6 ಮಂದಿ

ಜಬಲ್ಪುರ ದೋಣಿ ದುರಂತ: 28 ಮಂದಿ ರಕ್ಷಣೆ 6 ಮಂದಿ ನಾಪತ್ತೆ

ಮಧ್ಯಪ್ರದೇಶದ ಜಬಲ್ಪುರದಲ್ಲಿ ನರ್ಮದಾ ನದಿಯ ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ಗುರುವಾರ ಸಂಜೆ ನಡೆದ ದೋಣಿ ದುರಂತದಲ್ಲಿ 28 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಕಳೆದೆರಡು ದಿನಗಳಿಂದ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ನಾಪತ್ತೆಯಾದವರಿಗಾಗಿ ಹುಡುಕಾಡುತ್ತಿವೆ.

ಕಾಳಿಂಗ ಸರ್ಪದ ಜೊತೆ ಹುಚ್ಚಾಟ; ಪ್ರಾಣವನ್ನೇ ಕಳೆದುಕೊಂಡ ಉರಗ ತಜ್ಞ, ಭಯಾನಕ ವಿಡಿಯೊ ವೈರಲ್

ಕಾಳಿಂಗ ಸರ್ಪ ಹಿಡಿಯಲು ಹೋಗಿ ಉರಗ ತಜ್ಞ ಸಾವು

Viral Video: ವಿಷಕಾರಿ ಹಾವಿನ ಜೊತೆ ಹುಚ್ಚಾಟ ಮೆರೆಯುವುದು ಅಷ್ಟು ಸುಲಭದ ಮಾತಲ್ಲ.. ನಾಗರ ಹಾವು, ಕಾಳಿಂಗ ಸರ್ಪ ಹೀಗೆ ವಿಷಕಾರಿ ಹಾವನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ‌. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ಸುರಕ್ಷತಾ ಮಾರ್ಗ ಬಳಸದೇ ಉರಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

"ನಿರಾಶೆಗೊಂಡಿದ್ದಕ್ಕೆ ಕ್ಷಮಿಸಿ"; ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯ ಅವಮಾನಕರ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ತಿರುಗೇಟು

ಅಭಿಮಾನಿಯ ಅವಮಾನಕರ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ತಿರುಗೇಟು

Parthiv Patel: ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಳಸುವವರ ಸಂಖ್ಯೆ 50 ಕೋಟಿಯಷ್ಟಿದ್ದು, ಅವರಲ್ಲಿ ಅರ್ಧ ಕ್ಕರ್ಧ ಮಂದಿ ಅದನ್ನು ಚಟವಾಗಿಸಿಕೊಂಡಿದ್ದಾರೆ. ಅದರಿಂದ ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅನಿಯಂತ್ರಿತವಾಗಿರುವ ಈ ಆನ್‌ಲೈನ್ ಗೇಮಿಂಗ್‌ಗಳಿಂದ ಭಾರತದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 10000 ಕೋಟಿ ರು.ಗಳು ಸ್ಕ್ಯಾಮರ್‌ಗಳ ಪಾಲಾಗುತ್ತಿದೆ!

ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಪ್ರಿಯತಮನಿಗೆ ಹಾರ ಹಾಕಿದ ವಧು: ವಿಡಿಯೊ ವೈರಲ್

ಪ್ರಿಯತಮನಿಗೆ ಹಾರ ಹಾಕಿ ವರನಿಗೆ ಶಾಕ್ ಕೊಟ್ಟ ವಧು: ವಿಡಿಯೊ ಇಲ್ಲಿದೆ!

Viral Video: ಯುವತಿಯೊಬ್ಬಳು ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಮಂಟದ ಕೆಳಗೆ ಓಡೋಡಿ ಬಂದು ಪ್ರಿಯತಮನಿಗೆ ಹಾರ ಹಾಕಿದ ವಿಡಿಯೊ ವೈರಲ್ ಆಗಿದೆ. ಇಂದಿನ ಜಾನಂಗದ ಮದುವೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು ಹಲವಾರು ಆಕ್ರೋಶ ಹೊರಹಾಕಿದ್ದಾರೆ.

Dr.Gayatri Jaiprakash Column: ಅಶಾಂತ ಜಗತ್ತಿಗೆ ಬುದ್ಧನ ಮಧ್ಯಮ ಮಾರ್ಗದ ಬೆಳಕು

ಅಶಾಂತ ಜಗತ್ತಿಗೆ ಬುದ್ಧನ ಮಧ್ಯಮ ಮಾರ್ಗದ ಬೆಳಕು

ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆಯ ನಾಶ, ಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಇವು ಪರಿಸರದ ಬಿಕ್ಕಟ್ಟನ್ನು ತಂದಿವೆ. ಅತಿಯಾದ ಸ್ಪರ್ಧೆ, ಸೋಲಿನ ಭೀತಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವಜನರಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕ ಹೆಚ್ಚುತ್ತಿದೆ. ಈ ಎಲ್ಲ ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಆತ್ಮಹತ್ಯೆಗಳು ಹೆಚ್ಚುತ್ತಿವೆ.

IPL 2026: ಬಲಿಷ್ಠ ಬ್ಯಾಟಿಂಗ್‌ ಪಡೆ ಸನ್‌ರೈಸರ್ಸ್‌ಗೆ ಸವಾವೊಡ್ಡೀತೇ ಕೆಕೆಆರ್‌?

ಸನ್‌ರೈಸರ್ಸ್‌ vs ಕೆಕೆಆರ್‌ ಪಂದ್ಯದ ಪ್ಲೇಯಿಂಗ್‌ 11, ಪಿಚ್‌ ರಿಪೋರ್ಟ್‌

Sunrisers Hyderabad vs Kolkata Knight Riders: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಇತ್ತೀಚಿನ ಋತುಗಳಲ್ಲಿ ಹೆಚ್ಚು ಸಮತೋಲಿತ ಸ್ಥಳವಾಗಿ ವಿಕಸನಗೊಂಡಿದೆ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವ ಹಿಂದಿನ ಖ್ಯಾತಿಯಿಂದ ದೂರ ಸರಿದಿದೆ. ಮೈದಾನವು ಈಗ ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬೌನ್ಸ್ ಮತ್ತು ಉತ್ತಮ ಕ್ಯಾರಿ ನೀಡುತ್ತದೆ.

Gold Price Today On 2nd May 2026: ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ

ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿಂದು ಏರಿಕೆ ಕಂಡು ಬಂದಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 20 ರೂ. ಏರಿಕೆಯಾಗಿ 13,835 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನಕ್ಕೆ 33 ರೂ. ಏರಿಕೆಯಾಗಿ 15,093 ರೂ. ಇದೆ.

Mirley Chandrashekher Column: ಮಂಗಳಮುಖಿಯರ ಬದುಕು ಹಸನಾಗುವುದೆಂತು ?

ಮಂಗಳಮುಖಿಯರ ಬದುಕು ಹಸನಾಗುವುದೆಂತು ?

ಮಂಗಳಮುಖಿಯರು ಹಣ ಗಳಿಕೆಗೆ ಇತ್ತೀಚಿಗೆ ಕಂಡುಕೊಂಡಿರುವ ವಸೂಲಿ ಅಥವಾ ದಂಧೆ ಎನ್ನಲು ಬಹುದು. ಇದೊಂದು ರೀತಿಯ ಹೆಚ್ಚು ಲಾಭ ತರುವ ವೃತ್ತಿಯಾಗಿದೆ, ಇದಕ್ಕೆ ಬಂಡವಾಳ ಹೂಡಿಕೆಯ ಅಗತ್ಯವಿಲ್ಲ. ರಾಜ್ಯದಲ್ಲಿ 10500 ಸಂಖ್ಯೆಗಿಂತ ಹೆಚ್ಚು ತೃತೀಯ ಲಿಂಗಿಗಳು ಇದ್ದಾರೆ. ಮೈಸೂರು ಜಿಲ್ಲೆ ಯಲ್ಲಿ ಸುಮಾರು 400 ರಿಂದ 450 ಸಂಖ್ಯೆ ಮಂಗಳಮುಖಿಯರು ಇದ್ದಾರೆ. ಸರಕಾರವು ಇವರಿಗೆ ಹಲವು ಸೌಲಭ್ಯಗಳನ್ನು ನೀಡಿದ್ದರೂ ನಗರದ ಪಾರ್ಕುಗಳಲ್ಲಿ, ರೈಲು ಗಾಡಿ ಯಲ್ಲಿ, ಸಿಗ್ನಲ್ ವೃತ್ತಗಳಲ್ಲಿ, ಮದುವೆ ಮನೆಗಳಲ್ಲಿ, ಗೃಹಪ್ರವೇಶ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಸಾರ್ವಜನಿಕರನ್ನು ಹಣಕ್ಕಾಗಿ ಸತಾಯಿಸುತ್ತಾರೆ.

ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ನೆರವಾದ ಸಾಕು ಗಿಣಿ!

Viral News: ಅಮೆರಿಕದ ಮಿಚಿಗನ್ ನಲ್ಲಿ ಸಾಕು ಗಿಣಿಯೊಂದು ಅಪರಾಧಿಯನ್ನು ಪತ್ತೆ ಹಚ್ಚಿದ ಘಟನೆಯೊಂದು ನಡೆದಿದೆ. ಮನೆಯ ಯಜಮಾನನ ಕೊಲೆಯನ್ನು ಕಣ್ಣಾರೆ ಕಂಡ ಗಿಳಿಯೂ ಮಾಲೀಕರ ಸಾವಿಗೆ ಸಂಬಂಧಿಸಿದ ವಾಕ್ಯವನ್ನು ಪದೇ ಪದೇ ಹೇಳುವ ಮೂಲಕ ಕೊಲೆಗೆ ಸಾಕ್ಷಿ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅತಿರೇಕದ ಸಂಭ್ರಮಾಚರಣೆ; ಕೈಲ್ ಜೇಮಿಸನ್‌ಗೆ ಡಿಮೆರಿಟ್ ಪಾಯಿಂಟ್

ಅತಿರೇಕದ ಸಂಭ್ರಮಾಚರಣೆ; ಕೈಲ್ ಜೇಮಿಸನ್‌ಗೆ ಒಂದು ಡಿಮೆರಿಟ್ ಪಾಯಿಂಟ್

IPL 2026: ವೈಭವ್ ಸೂರ್ಯವಂಶಿ ಮತ್ತು ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ನಡುವಿನ ನಿರೀಕ್ಷಿತ ಮುಖಾಮುಖಿಯಿಂದಾಗಿ ಈ ಪಂದ್ಯವು ಗಮನಾರ್ಹ ಸಂಚಲನ ಮೂಡಿಸಿತ್ತು. ಆದರೆ, ಜೇಮಿಸನ್ ಕೇವಲ ಎರಡನೇ ಓವರ್‌ನಲ್ಲಿ ಹದಿಹರೆಯದ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು.

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಮಗುವಿನ ತಾಯಿ ಬಲಿ; ಕುಟುಂಬಸ್ಥರ ವಿರುದ್ಧ ದೂರು ದಾಖಲು

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಮಗುವಿನ ತಾಯಿ ಬಲಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದೆ. ಮೃತಳನ್ನು ವಂದನಾ ಎಂದು ಗುರುತಿಸಲಾಗಿದ್ದು, ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬಾತನ ಜೊತೆ ವಂದನಾ ವಿವಾಹವಾಗಿದ್ದರು.

Fact check: ಜಬಲ್ಪುರ ದೋಣಿ ದುರಂತ: ವೈರಲ್ ಆಗಿರುವ ತಾಯಿ, ಮಗುವಿನ ಚಿತ್ರ ನಕಲಿ

ಜಬಲ್ಪುರ ದೋಣಿ ದುರಂತ: ವೈರಲ್ ಚಿತ್ರ ನಿಜವಲ್ಲ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಗುರುವಾರ ಸಂಜೆ ನಡೆದಿರುವ ದೋಣಿ ದುರಂತಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿ, ಮಗುವಿನ ಚಿತ್ರವೊಂದು ಹರಿದಾಡುತ್ತಿದ್ದು, ಇದು ನಕಲಿ ಚಿತ್ರವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ತಂಡವು ಶುಕ್ರವಾರ ನಡೆಸಿದ ಕಾರ್ಯಾಚರಣೆ ವೇಳೆ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗುವನ್ನು ಬಿಗಿಯಾಗಿ ತಬ್ಬಿ ಹಿಡಿದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಕೃತಕ ಬುದ್ದಿ ಮತ್ತೆ ಬಳಸಿ ಚಿತ್ರವನ್ನು ಹರಿಯಬಿಡಲಾಗಿತ್ತು.

Siddharth Anand: ‘ಕಿಂಗ್’ ಚಿತ್ರದ ಫೋಟೋ ಲೀಕ್; ನಿರ್ದೇಶಕ ಗರಂ!

Siddharth Anand: ‘ಕಿಂಗ್’ ಚಿತ್ರದ ಫೋಟೋ ಲೀಕ್; ನಿರ್ದೇಶಕ ಗರಂ!

Siddharth Anand: ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದ ಕಿಂಗ್, ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಅವರೊಂದಿಗೆ ತೆರೆಯ ಮೇಲೆ ಮೊದಲ ಬಾರಿಗೆ ಸಹಯೋಗ ಮಾಡುತ್ತಿದೆ . ‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ-ಮಗಳು ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿರುವುದು ಈ ಚಿತ್ರದ ವಿಶೇಷತೆ.

CSK vs MI: ಇಂದಿನ ಪಂದ್ಯದಲ್ಲಿ ಆಡಲಿದ್ದಾರಾ ಧೋನಿ-ರೋಹಿತ್‌?; ಬಿಗ್‌ ಅಪ್‌ಡೇಟ್‌ ಕೊಟ್ಟ ಕೋಚ್‌

ಇಂದಿನ ಪಂದ್ಯಕ್ಕೆ ಧೋನಿ-ರೋಹಿತ್‌ ಲಭ್ಯ?; ಅಪ್‌ಡೇಟ್‌ ಕೊಟ್ಟ ಕೋಚ್‌

IPL 2026: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಮಾಜಿ ನಾಯಕ ಎಂಎಸ್ ಧೋನಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದು ಉತ್ತಮವಾಗಿದ್ದು, ಶೀಘ್ರದಲ್ಲೇ ಅವರು ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದು, 2026 ರ ಐಪಿಎಲ್‌ನಲ್ಲಿ ಅವರು ಆಡಲು ಇಡೀ ಚೆನ್ನೈ ತಂಡ ಕಾಯುತ್ತಿದೆ ಎಂದು ಹೇಳಿದರು.

ಇಂದಿನಿಂದ ನಾಲ್ಕು ದಿನ ಪೀಣ್ಯ  ಫ್ಲೈಓವರ್ ಬಂದ್‌ ; ಬದಲಿ ಮಾರ್ಗ ಏನು?

ಇಂದಿನ ನಾಲ್ಕು ದಿನ ಪೀಣ್ಯ ಫ್ಲೈಓವರ್ ಬಂದ್‌

ಇಂದಿನಿಂದ ನಾಲ್ಕು ದಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್‌ ಆಗಲಿದೆ. ಮೇ 5ರ ಬೆಳಗ್ಗೆ 5ರಿಂದ ಮೇ 8ರ ಬೆಳಗ್ಗೆ 11ರವರೆಗೆ ಪ್ಲೈಓವರ್​​ ಕ್ಲೋಸ್​​ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ ಫ್ಲೈಓವರ್​ನ 2 ಬದಿಯಲ್ಲಿ ವಾಹನ ಸಂಚಾರಗಳಿಗೆ ನಿರ್ಬಂಧ ವಿಧಿಸಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಬೆಂಗಳೂರು ಟ್ರಾಫಿಕ್​​ ಪೊಲೀಸರು ತಿಳಿಸಿದ್ದಾರೆ.

Nandamuri Balakrishna: ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

Nandamuri Balakrishna: ಜೂನಿಯರ್ ಎನ್ ಟಿ ಆರ್ , ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ನಟಿಸಿರುವ ದೇವರ: ಭಾಗ 1 , 2024 ರಲ್ಲಿ ಬಿಡುಗಡೆಯಾದಾಗ ನೀರಸ ವಿಮರ್ಶೆಗಳನ್ನು ಪಡೆಯಿತು. ಈ ಚಿತ್ರವು ವಿಶ್ವಾದ್ಯಂತ 428 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಜೂನಿಯರ್ ಎನ್ ಟಿ ಆರ್ ಮತ್ತು ನಿರ್ಮಾಪಕ ಸುಧಾಕರ್ ಮಿಕ್ಕಿಲಿನೇನಿ ಅವರ ಇತ್ತೀಚಿನ ಹೇಳಿಕೆಗಳು ಶಿವ ಅವರ ಬಾಲಕೃಷ್ಣ ಅವರ ಹೊಸ ಚಿತ್ರದತ್ತ ಗಮನ ಹರಿಸಿದ್ದರೂ ಸಹ, ಈ ಯೋಜನೆಯನ್ನು ಚರ್ಚೆಯಲ್ಲಿ ಇರಿಸಿಕೊಂಡಿವೆ.

ಬ್ಯಾಟ್‌ನಲ್ಲಿ ಹೊಡೆಯಲು ಬಂದ ಜಡೇಜಾರನ್ನು ತಳ್ಳಿದ ಕುಲ್‌ದೀಪ್‌; ವಿಡಿಯೊ ವೈರಲ್‌

ಮೈದಾನದಲ್ಲೇ ಹೊಡೆದಾಡಿಕೊಂಡರೇ ಜಡೇಜಾ-ಕುಲ್‌ದೀಪ್‌?

Ravindra Jadeja-Kuldeep Yadav: ಡಿಸಿ ತಂಡವು ಐಪಿಎಲ್‌ನಲ್ಲಿ ತನ್ನ ಅತ್ಯುನ್ನತ ಯಶಸ್ವಿ ಚೇಸಿಂಗ್ ಅನ್ನು ಪೂರ್ಣಗೊಳಿಸುವ ಮೂಲಕ ಮೂರು ಪಂದ್ಯಗಳ ಸೋಲಿಗೆ ಅಂತ್ಯ ಹಾಡಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡಿಸಿ ತಂಡವು, ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ಪಾಥುಮ್ ನಿಸ್ಸಂಕಾ ಅವರ ಅರ್ಧಶತಕಗಳ ನೆರವಿನಿಂದ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

Love Insurance Kompany OTT: ‘ಲವ್ ಇನ್ಶೂರೆನ್ಸ್ ಕಂಪನಿ’ ಈ ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

‘ಲವ್ ಇನ್ಶೂರೆನ್ಸ್ ಕಂಪನಿ’ ಈ ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

Love Insurance Kompany OTT: ಈ ಚಿತ್ರವು ಈ ವರ್ಷ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ಈಗ OTT ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ವೈಜ್ಞಾನಿಕ ಕಾಲ್ಪನಿಕ ರೊಮ್ಯಾಂಟಿಕ್‌ ಹಾಸ್ಯ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು; ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ

ತುಮಕೂರಿನಲ್ಲಿ ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು

ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಇತ್ತೀಚೆಗೆ 44 ನವಿಲುಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ H5N1 ಸೋಂಕು ದೃಢಪಟ್ಟಿದೆ. ಏಪ್ರಿಲ್ 16 ರಂದು ಘಟನೆ ಮೊದಲಿಗೆ ವರದಿಯಾಗಿತ್ತು. ತದನಂತರ ಒಂದು ವಾರದ ಅವಧಿಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 44 ನವಿಲುಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದವು.

ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್‌ ಪಟೇಲ್‌

ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್‌

IPL 2026: ಕಳೆದ ವಾರ ದೆಹಲಿಯಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಇಬ್ಬರು ಸೋದರಸಂಬಂಧಿಗಳಾದ ಯಜ್ಞ ಭಾಟಿಯಾ (20) ಮತ್ತು ಅಭವ್ ಭಾಟಿಯಾ (14) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರಿಬ್ಬರೂ ಬೈಕ್‌ ಸವಾರಿ ಮಾಡುತ್ತಿದ್ದಾಗ ಮಧ್ಯ ದೆಹಲಿಯ ಅಶೋಕ ರಸ್ತೆಯಲ್ಲಿ ಹಿಟ್ ಅಂಡ್ ರನ್ ಘಟನೆ ಸಂಭವಿಸಿತ್ತು.

Loading...