ದೇಶವ್ಯಾಪಿ ಮೊಬೈಲ್ ಅಲರ್ಟ್: ಏನಿದು ‘ಸೆಲ್ ಬ್ರಾಡ್ಕಾಸ್ಟ್’?
ಭಾರತ ಸರ್ಕಾರವು ‘ಸೆಲ್ ಬ್ರಾಡ್ಕಾಸ್ಟ್’ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಪ್ರಾರಂಭಿಸಿದ್ದು, ದೇಶದಾದ್ಯಂತ ಲಕ್ಷಾಂತರ ಮೊಬೈಲ್ಗಳಿಗೆ ʼಅತ್ಯಂತ ತೀವ್ರ ಎಚ್ಚರಿಕೆʼ ಸಂದೇಶ ರವಾನಿಸಲಾಗಿದೆ. ಇದು ಕೇವಲ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಗಾಬರಿಯಾಗಬೇಕಾಗಿಲ್ಲ. ಈ ವ್ಯವಸ್ಥೆಯು ಭೂಕಂಪ, ಸುನಾಮಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.