ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

Lucky Number:  ಅತಿ ಹೆಚ್ಚಿನ ದರಕ್ಕೆ ಮಾರಾಟವಾದ ನಂಬರ್ ಪ್ಲೇಟ್; ನಿಮ್ಗೂ ಇತರ ಫ್ಯಾನ್ಸಿ ನಂಬರ್ ಬೇಕಿದ್ದರೆ ಹೀಗೆ ಮಾಡಿ

ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಬೇಕಿದ್ದರೆ ಹೀಗೆ ಮಾಡಿ

ಹರಿಯಾಣದ ರೋಡ್‌ಟ್ರಾನ್‌ನಲ್ಲಿ ನಡೆದ ಇತ್ತೀಚಿನ ಆನ್‌ಲೈನ್ ಹರಾಜು ಭಾರೀ ಸದ್ದು ಮಾಡುತ್ತಿದ್ದು, ‘HR88B8888’ ಎಂಬ ಫ್ಯಾನ್ಸಿ ನಂಬರ್‌ಪ್ಲೇಟ್‌ಗೆ ನಡೆದ ಬಿರುಸಿನ ಪೈಪೋಟಿ ನಡೆದು 1.17 ಕೋಟಿಗೆ ಮಾರಾಟಾವಾಗಿದೆ. ದೇಶದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎಂಬ ಬಿರುದನ್ನು ಪಡೆದುಕೊಂಡಿದ್ದು, ಈ ಮೊದಲು ಕೇರಳದ ‘KL 07 DG 0007’ ಎಂಬ ನಂಬರ್ ₹46 ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದ್ದರೂ,ಇದೀಗ ಹರಿಯಾಣದ ಈ ನಂಬರ್ ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದೆ. ನಿಮ್ಗೂ ಇದೇ ರೀತಿಯ ಫ್ಯಾನ್ಸಿ ನಂಬರ್ ಬೇಕಿದ್ದರೆ ಈ ರೀತಿ ಮಾಡಿ.

Bigg Boss Kannada 12: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಧನುಷ್‌! ʻಟಾಸ್ಕ್‌ ಮಾಸ್ಟರ್‌ʼ ಅಂತ ಬಿರುದು ಕೊಟ್ಟ ಫ್ಯಾನ್ಸ್‌

ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಧನುಷ್‌!

Dhanush: ಧನುಷ್‌ ಪರ ತ್ರಿವಿಕ್ರಮ್‌ ಆಟ ಆಡಿದರೆ, ಅಭಿಷೇಕ್‌ ಜೊತೆಗೆ ಚೈತ್ರಾ ಕುಂದಾಪುರ, ರಘು ಜೊತೆಗೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್‌, ಸೂರಜ್‌ ಜೊತೆಗೆ ಉಗ್ರಂ ಮಂಜು ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಧನುಷ್‌ ವಿನ್‌ ಆಗಿದ್ದಾರೆ. ಈ ವಾರ ಬಿಗ್‌ ಬಾಸ್‌ ʻಬಿಬಿ ಪ್ಯಾಲೇಸ್‌ʼ ಆಗಿತ್ತು. ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್‌ ಹಾಗೂ ಚೈತ್ರಾ ಕುಂದಾಪುರ ದೊಡ್ಮನೆಗೆ ಎಂಟ್ರಿ ನೀಡಿದ್ದರು. ಅತಿಥಿಗಳಿಗೆ ಒಳ್ಳೆಯ ಆತಿಥ್ಯ ಕೊಟ್ಟು ಯಾರು ಹೆಚ್ಚು ಟಿಪ್ಸ್‌ ಪಡೆಯುತ್ತಾರೋ ಅವರು ಕ್ಯಾಪ್ಟನ್ಸಿ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂದಾಗಿತ್ತು.

Shrikanth Chaukimath Column: ಜಮಾದಾರ ಅವರ ಅವಮಾನವೇ ವಾದವಲ್ಲ; ವಿಮರ್ಶೆಗೆ ಮಿತಿ ಇದೆ

ಜಮಾದಾರ ಅವರ ಅವಮಾನವೇ ವಾದವಲ್ಲ; ವಿಮರ್ಶೆಗೆ ಮಿತಿ ಇದೆ

ಜಾಮದಾರ ಅವರ ನಿಲುವಿನಲ್ಲಿ ನನಗೆ ಕಾಣಿಸಿಕೊಂಡಿರುವ ಗಂಭೀರ ಪ್ರಶ್ನೆ ಏನೆಂದರೆ, ಅವರು ಇತರ ರನ್ನು ಸ್ವೇಚ್ಛೆಯಿಂದ ಟೀಕಿಸುವ ಸ್ವಾತಂತ್ರ್ಯ ತಮಗಿದೆ ಎಂದು ನಂಬುತ್ತಾರೆ, ಅಲ್ಲದೆ ಅವರನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ಬೇರೆ ಯಾರಿಗೂ ಇಲ್ಲವೆಂಬ ಜಾಯಮಾನವನ್ನು ಪ್ರದರ್ಶಿಸು ತ್ತಾರೆ.

IND vs SA: ರಾಂಚಿಯಲ್ಲಿ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್‌

ಮೊದಲ ಏಕದಿನಕ್ಕೆ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್‌

ಭಾರತ 2027 ರ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ನಡೆಸುತ್ತಿದೆ, ಮತ್ತು ರೋಹಿತ್ ಮತ್ತು ವಿರಾಟ್ ಪ್ರತಿ ಬಾರಿ ಏಕದಿನ ಸರಣಿಯನ್ನು ಆಡುವಾಗಲೂ ಅವರು ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ ಎಂಬುದನ್ನು ನೆನಪಿಸುತ್ತದೆ. ಸರಣಿಯ ಮೂರು ಪಂದ್ಯಗಳಲ್ಲಿ ಮೊದಲನೆಯದನ್ನು ರಾಂಚಿ ಆಯೋಜಿಸಲಿದೆ.

Gold Robbery Case: ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಪಿಎಸ್‌ಐಗಳು ಸೇವೆಯಿಂದ ವಜಾ

ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಪಿಎಸ್‌ಐಗಳು ಸೇವೆಯಿಂದ ವಜಾ

Davanagere Robbery Case: A1 ಆರೋಪಿ ಪಿಎಸ್ಐ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯ ಪ್ರೋಬೇಷನರಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಗೆ ಅದೇಶದಲ್ಲಿದ್ದ ಪಿಎಸ್ಐ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

MS Dhoni: ರಾಂಚಿಯಲ್ಲಿ ಧೋನಿ-ಕೊಹ್ಲಿ ಕಾರ್‌ ರೈಡ್‌; ವಿಡಿಯೊ ವೈರಲ್‌

ಕೊಹ್ಲಿಯನ್ನು ಕಾರಿನಲ್ಲಿ ಸುತ್ತಾಡಿಸಿದ ಗೆಳೆಯ ಧೋನಿ; ಇಲ್ಲಿದೆ ವಿಡಿಯೊ

MS Dhoni and Virat Kohli: ಧೋನಿಯ ತವರೂರಿನಲ್ಲಿ ಭಾರತ ಆಡುವಾಗಲೆಲ್ಲಾ ನಡೆಯುವ ಈ ಸಾಂಪ್ರದಾಯಿಕ ಭೇಟಿಯು, ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ವೈಟ್-ಬಾಲ್ ಸವಾಲಿನ ಮೊದಲು ಶಾಂತ, ಲವಲವಿಕೆಯ ವಾತಾವರಣವನ್ನು ಸೃಷ್ಟಿಸಿತು. ಈ ಹಿಂದೆಯೂ ರಾಂಚಿಯಲ್ಲಿ ಭಾರತ ಪಂದ್ಯ ಆಡುವಾಗ ಧೋನಿ ತಂಡವನ್ನು ಭೇಟಿ ಮಾಡುತ್ತಿದ್ದರು.

Vishwavani Editorial: ತಾನು ಕಳ್ಳ, ಪರರನ್ನು ನಂಬ!

Vishwavani Editorial: ತಾನು ಕಳ್ಳ, ಪರರನ್ನು ನಂಬ!

ತನ್ನ ಪ್ರಜೆಗಳಿಗೆ ಮೂರು ಹೊತ್ತಿನ ಊಟವನ್ನು ಹೊಂದಿಸಿ ಕೊಡಲಾಗದಷ್ಟರ ಮಟ್ಟಿಗಿನ ಆರ್ಥಿಕ ಕುಸಿತವನ್ನು ಕಂಡಿರುವ ಪಾಕಿಸ್ತಾನಕ್ಕೆ, ಭಾರತವನ್ನು ಗುರಿಯಾಗಿಸಿ ವಿನಾ ಕಾರಣ ಕೂರಂಬು ಬಿಡುವು ದಕ್ಕೆ ಇನ್ನಿಲ್ಲದ ಶಕ್ತಿ ಒದಗಿ ಬಿಡುವುದು ವಿಶ್ವದ ಎಷ್ಟನೇ ಅದ್ಭುತವೋ?! ಹುಚ್ಚಾಟಕ್ಕೂ ಒಂದು ಮಿತಿಯಿದೆ.

Bigg Boss Kannada 12:  ನನಗೆ ಪುನರ್ ಜನ್ಮ ಕೊಟ್ಟಿದ್ದೇ ಬಿಗ್‌ ಬಾಸ್‌! ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಪುನರ್ ಜನ್ಮ ಕೊಟ್ಟಿದ್ದೇ ಬಿಗ್‌ ಬಾಸ್‌! ಕಣ್ಣೀರಿಟ್ಟ ಚೈತ್ರಾ ಕುಂದಾಪುರ

Chaitra Kundapura: ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಪ್ಯಾಲೇಸ್ ಎಂಬುದಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡುವ ಸೇವಕರನ್ನಾಗಿ ಮಾಡಲಾಗಿದೆ. ಬಿಗ್‌ ಬಾಸ್‌ ಮನೆಗೆ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು , ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ಸ್ಪರ್ಧಿಗಳೊಂದಿಗೆ ಆಟವಾಡಿ, ಮನರಂಜಿಸಿದ್ದಾರೆ. ಇದೀಗ ಅವರ ಕೊನೆಯ ದಿನ. ಹೀಗಾಗಿ ಬಿಗ್‌ ಬಾಸ್‌ ಕುರಿತು ಮಾತನಾಡಿ ತುಂಬಾ ಭಾವುಕರಾಗಿದ್ದಾರೆ ಮಾಜಿ ಸ್ಪರ್ಧಿಗಳು.

Shashidhara Halady Column: ಸರಕಾರಿ ಶಾಲೆಯ ಹಾದಿಯಲ್ಲಿ ಕಲ್ಲುಮುಳ್ಳುಗಳು !

ಸರಕಾರಿ ಶಾಲೆಯ ಹಾದಿಯಲ್ಲಿ ಕಲ್ಲುಮುಳ್ಳುಗಳು !

ಐದನೆಯ ತರಗತಿಯಿಂದ ಏಳನೆಯ ತರಗತಿಯ ತನಕ ನಾನು ಓದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ. ದೂರದ ನಡಿಗೆ ದಾರಿ. ದಟ್ಟ ಕಾಡಿನ ಪಕ್ಕದಲ್ಲಿದ್ದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿ’ ಇದು ಇದ್ದುದು, ಪಡುಹಾಲಾಡಿಯಲ್ಲಿ. ಆ ಶಾಲೆಗೆ ಹೋಗಲು ಮೂರು ದಾರಿಗಳಿದ್ದವು; ಎಲ್ಲವೂ ಕಠಿಣವೇ.

DK Shivakumar: ದಿಡೀರ್‌ ಮುಂಬಯಿಯಲ್ಲಿ ಡಿಕೆ ಶಿವಕುಮಾರ್‌; ದಿಲ್ಲಿ ಭೇಟಿ ಇಲ್ಲ

ದಿಡೀರ್‌ ಮುಂಬಯಿಯಲ್ಲಿ ಡಿಕೆ ಶಿವಕುಮಾರ್‌; ದಿಲ್ಲಿ ಭೇಟಿ ಇಲ್ಲ

ದೆಹಲಿ ಪ್ರವಾಸ ಇಲ್ಲ ಎಂದರೂ, ಡಿಕೆ ಶಿವಕುಮಾರ್‌ (DK Shivakumar) ಗುರುವಾರ ಸಂಜೆ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಿದರು. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಅದರಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಸಂಜೆ ಹೋಗಿ ರಾತ್ರಿಯೇ ವಾಪಸ್ ಬೆಂಗಳೂರಿಗೆ ಮರಳಲಿದ್ದೇನೆ ಎಂದು ಮಾಹಿತಿ ನೀಡಿದರು. ಈ ದಿಢೀರ್ ಮುಂಬೈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ನಾವೆಲ್ಲರೂ ವಾಟ್ಸ್ ಆಪ್ ಬಳಸುತ್ತೇವೆ. ಅದರಲ್ಲಿ ನಾವು ಕಳುಹಿಸಿದ ಸಂದೇಶ ಹೊರ ಹೋದರೆ ಒಂದು ಟಿಕ್ ಮಾರ್ಕ್ (ಸರಿ ಗುರುತು). ಅವರಿಗೆ ತಲುಪಿದರೆ ಎರಡು ಟಿಕ್ ಮಾರ್ಕ್ ಮತ್ತು ಅದನ್ನು ಅವರು ಓದಿದರೆ ಆ ಎರಡು ಟಿಕ್ ಮಾರ್ಕ್ ನೀಲಿ ಬಣ್ಣಕ್ಕೆ ತಿರುಗುತ್ತವೆ ಅಲ್ಲವೇ? ನೀವೇನೋ ಒಂದು ಸಂದೇಶ ಕಳುಹಿಸಿರುತ್ತೀರಿ, ಅತ್ತ ಕಡೆ ಆ ವ್ಯಕ್ತಿ ಆ ಸಂದೇಶವನ್ನು ಓದಿದ್ದು ನೀಲಿ ಗುರುತಿ ನಿಂದ ತಿಳಿಯುತ್ತದೆ. ಆದರೆ ಓದಿಯೂ ಉತ್ತರಿಸದಿದ್ದರೆ? ಆ ಕ್ಷಣದಲ್ಲಿ ನಮ್ಮ ಯೋಚನೆಗಳು ಶುರುವಾಗುತ್ತವೆ

Chanakya Nit: ಜೀವನವನ್ನೇ ಹಾಳು ಮಾಡುತ್ತದೆ ನಿಮ್ಮ ಹೆಂಡತಿಯಲ್ಲಿರುವ ಈ ಗುಣಗಳು

ಜೀವನವನ್ನೇ ಹಾಳು ಮಾಡುತ್ತದೆ ನಿಮ್ಮ ಹೆಂಡತಿಯಲ್ಲಿರುವ ಈ ಗುಣಗಳು!

ಚಾಣಕ್ಯ ನೀತಿ ನಮ್ಮ ಜೀವನವನ್ನು ನಡೆಸಲು ಸರಿಯಾದ ಮಾರ್ಗವನ್ನು ಹೇಳುತ್ತದೆ. ನಮ್ಮ ಜೀವನದಲ್ಲಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು? ಎಂಬುದರ ಉತ್ತಮ ವಿವರಣೆಯು ಚಾಣಕ್ಯ ನೀತಿಯಲ್ಲಿ ಕಂಡುಬರುತ್ತದೆ. ಚಾಣಕ್ಯ ಪ್ರಸ್ತಾಪಿಸಿದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ, ಇದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.

Bigg Boss Kannada 12: ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗಲೇ ಚಿಗುರಿತ್ತು ಪ್ರೀತಿ!  ಲವ್ ಸ್ಟೋರಿ ಬಿಚ್ಚಿಟ್ಟ ಉಗ್ರಂ ಮಂಜು

ಬಿಗ್‌ ಬಾಸ್‌ ಮನೆಯಲ್ಲಿ ಲವ್ ಸ್ಟೋರಿ ಬಿಚ್ಚಿಟ್ಟ ಉಗ್ರಂ ಮಂಜು

Ugram Manju: ಕಳೆದ ಸೀಸನ್‌ನಲ್ಲಿ ಸುದೀಪ್‌ ಅವರು ಮಂಜು ಅವರ ತಂದೆ ತಾಯಿಯೊಂದಿಗೆ ಉಗ್ರಂ ಮಂಜು ಅವರ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ವಿಡಿಯೋ ಪ್ಲೇ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಬಿಗ್‌ ಬಾಸ್‌ ಉಗ್ರಂ ಮಂಜು ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಉಗ್ರಂ ಮಂಜು - ಸಂಧ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು. ಅತೀ ಶೀಘ್ರದಲ್ಲೇ ಉಗ್ರಂ ಮಂಜು - ಸಂಧ್ಯಾ ಅವರ ವಿವಾಹ ಮಹೋತ್ಸವ ನಡೆಯಲಿದೆ.

PM Narendra Modi: ಇಂದು ಗೋಕರ್ಣ ಪರ್ತಗಾಳಿ ಮಠಕ್ಕೂ ನಮೋ ಆಗಮನ, 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಅನಾವರಣ

ಇಂದು ಗೋಕರ್ಣ ಪರ್ತಗಾಳಿ ಮಠಕ್ಕೂ ನಮೋ, ಶ್ರೀರಾಮ ಮೂರ್ತಿ ಅನಾವರಣ

PM Narendra Modi: 77 ಅಡಿಯ ಶ್ರೀರಾಮನ ಬೃಹತ್ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಅನಾವರಣ ಮಾಡಲಿದ್ದಾರೆ. ಗೋವಾ ರಾಜ್ಯದ ಕಾಣಕೋಣದಲ್ಲಿ‌ರುವ ಪುಣ್ಯ ಕ್ಷೇತ್ರ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅತ್ಯಂತ ಪೂಜ್ಯವಾದ (Gokarn Parthagali Math) ಈ ಮಠಕ್ಕೆ 550 ವರ್ಷಗಳ ಇತಿಹಾಸವಿದೆ.

Keshava Prasad B Column: ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !

ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !

ಹೊಸ ಕಾರ್ಮಿಕ ನೀತಿ ಸಂಹಿತೆ ನಿರೀಕ್ಷೆಯಂತೆ ಸಂಚಲನ ಮೂಡಿಸಿದೆ. ಟ್ಯಾಕ್ಸಿ ಕ್ಯಾಬ್ ಚಾಲಕರು, ಡೆಲಿವರಿ ಬಾಯ್ಸ್ ಮತ್ತು ದಿನಗೂಲಿ ಕಾರ್ಮಿಕರಿಗೆ ಅದು ಸಿಹಿ ಸುದ್ದಿ ನೀಡಿದೆ. ಜತೆಗೆ ಕೆಲವು ಬಗೆಯ ಆತಂಕ, ಗೊಂದಲಗಳನ್ನೂ ಸೃಷ್ಟಿಸಿದೆ. ಹೀಗಿದ್ದರೂ ಇದು ಹಲವು ಆಯಾಮಗಳಿಂದ ಕಾರ್ಮಿಕ ಸ್ನೇಹಿಯಾಗಿದೆ ಎನ್ನಲು ಕಾರಣಗಳೂ ಇವೆ. ‌

PM Narendra Modi: ಇಂದು ಉಡುಪಿಗೆ ಮೋದಿ 40 ನಿಮಿಷ ಮೊದಲೇ ಆಗಮನ, ಅರ್ಧ ಗಂಟೆ ರೋಡ್‌ ಶೋ

ಇಂದು ಉಡುಪಿಗೆ ಮೋದಿ 40 ನಿಮಿಷ ಮೊದಲೇ ಆಗಮನ, ಅರ್ಧ ಗಂಟೆ ರೋಡ್‌ ಶೋ

PM Modi in Udupi: ಬೆಳಗ್ಗೆ 11 ಗಂಟೆಯಿಂದ 11.30ರವರೆಗೆ ರೋಡ್ ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಬನ್ನಂಜೆಯಿಂದ ಕಲ್ಸಂಕ ತನಕ ಕಾರಿನಲ್ಲಿ ಜನರತ್ತ ಕೈ ಬೀಸುತ್ತಾ ಮೋದಿ ರೋಡ್ ಶೋ ನಡೆಸಲಿದ್ದಾರೆ. ಆ ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಉಡುಪಿಯಿಂದ ಪ್ರಧಾನಿ ಮೋದಿ ತೆರಳಲಿದ್ದಾರೆ.

Vishweshwar Bhat Column: ಓವರ್‌ ಹೆಡ್‌ ಕ್ಯಾಬಿನ್

Vishweshwar Bhat Column: ಓವರ್‌ ಹೆಡ್‌ ಕ್ಯಾಬಿನ್

ಓವರ್‌ಹೆಡ್ ಕ್ಯಾಬಿನ್‌ಗಳನ್ನು ವಿನ್ಯಾಸಗೊಳಿಸುವಾಗ ಎಂಜಿನಿಯರ್‌ಗಳು ಮೂರು ಪ್ರಮುಖ ಅಂಶ ಗಳಿಗೆ ಆದ್ಯತೆ ನೀಡುತ್ತಾರೆ: ಬಲ, ಲಘುತ್ವ ಮತ್ತು ಸುಲಭ ಬಳಕೆ. ಕ್ಯಾಬಿನ್ ಬಿನ್‌ಗಳು ಒಂದು ಸರಳ ಪೆಟ್ಟಿಗೆಯಂತಿದ್ದರೂ, ಅವುಗಳ ರಚನೆ ಸಂಕೀರ್ಣವಾಗಿದೆ. ಬಿನ್‌ಗಳನ್ನು ಸಾಮಾನ್ಯವಾಗಿ ಹಗುರವಾದ ಮತ್ತು ಅತ್ಯಂತ ಬಲವಾದ ಸಂಯೋಜಿತ ವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತದೆ.

Vastu Tips: ವಾಸ್ತು ಶಾಸ್ತ್ರ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ ಧನ, ಸಂಪತ್ತು ಹಾಳಾಗುತ್ತೆ

ಈ ವಸ್ತುಗಳನ್ನು ದಾನ ಮಾಡಿದರೆ ಅದೃಷ್ಟ ದೂರಾಗುತ್ತದೆ

ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು, ವ್ರತಗಳು ಮತ್ತು ಉಪವಾಸಗಳಿಗೆ ಹೇಗೆ ಮಹತ್ವ ಇದೆಯೋ ದಾನಕ್ಕೂ ಅಷ್ಟೇ ಮಹತ್ವವಿದೆ. ಆದರೆ ವಾಸ್ತು ಶಾಸ್ತ್ರ ಪ್ರಕಾರ ಕೆಲ ವಸ್ತುಗಳನ್ನು ದಾನ ಮಾಡುವುದು ಅಶುಭ ಎಂದು ಪರಿಗಣಿಸಲಾಗಿದೆ. ಆಹಾರ, ಪೊರಕೆ ಇತ್ಯಾದಿ ವಸ್ತುಗಳನ್ನು ದಾನ ಮಾಡುವುದು ಶ್ರೇಯಸ್ಕರವಲ್ಲ. ಇಂತಹ ವಸ್ತುಗಳನ್ನು ದಾನ ಮಾಡಿದರೆ ಆರ್ಥಿಕ ಹಾನಿ, ಆರೋಗ್ಯ ಸಮಸ್ಯೆಗಳು, ಮನೆಯಲ್ಲಿನ ಕಲಹ–ದುಃಖ ಮತ್ತು ನಕಾರಾತ್ಮಕ ಪರಿಣಾಮ ಸಂಭವಿಸಬಹುದು.

Health Tips: ತೂಕ ಇಳಿಯಬೇಕೆ? ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸಿ

ಶುಂಠಿ ಟೀ ಕುಡಿದರೆ ಏನೆಲ್ಲ ಪ್ರಯೋಜನ ಇದೆ ಗೊತ್ತೆ?

ತೂಕ ಇಳಿಕೆಯಿಂದ ಹಿಡಿದು ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಶುಂಠಿ ಟೀ ಸಹಕಾರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಚಹಾ ಕಾಫಿ, ಟೀ ಕುಡಿಯುವ ಬದಲು ಈ ಶುಂಠಿ ಚಹಾ ಕುಡಿಯುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

Karnataka Weather: ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ; ಹೆಚ್ಚಾಯ್ತು ಉಷ್ಣಾಂಶ

ರಾಜ್ಯಾದ್ಯಂತ ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ

ಕರ್ನಾಟಕ ಹವಾಮಾನ ವರದಿ: ಶುಕ್ರವಾರ ರಾಜ್ಯಾದ್ಯಂತ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಇನ್ನು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Astro Tips: ಶುಕ್ರವಾರ ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುವಳು!

ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಶುಕ್ರವಾರ ಹೀಗೆ ಮಾಡಿ

ಶುಕ್ರವಾರದಂದು, ಈ ವಸ್ತುಗಳನ್ನು ಅರ್ಪಿಸಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು. ಈ ಕೆಲವೊಂದು ಕ್ರಮಗಳೊಂದಿಗೆ ಲಕ್ಷ್ಮೀಯನ್ನು ಆರಾಧಿಸುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ನೆರವೇರುತ್ತದೆ. ನೀವು ಲಕ್ಷ್ಮಿ ದೇವಿಯಿಂದ ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದವನ್ನು ಬಯಸಿದರೆ ತಪ್ಪದೇ ಶುಕ್ರವಾರದಂದು ಈ ವಸ್ತುಗಳನ್ನು ಅರ್ಪಿಸಬೇಕು. ಅವುಗಳು ಯಾವುವು ಗೊತ್ತೇ..?

Horoscope Today November 28th: ರಾಹುವಿನಿಂದ ಈ ರಾಶಿಗೆ ಅದೃಷ್ಟ ಜೊತೆಗೆ ಉದ್ಯೋಗದಲ್ಲಿ ಬಡ್ತಿ

ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿತ್ಯ ಭವಿಷ್ಯ ನವೆಂಬರ್‌ 28, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರದ ನವೆಂಬರ್ 28ನೇ ತಾರೀಖಿನ ಶುಕ್ರ ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ರಾಜ್ಯ ಹಜ್ ಸಮಿತಿ ನಿಯಮಾವಳಿ-2025 ಜಾರಿಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಹಜ್ ಸಮಿತಿ ನಿಯಮಾವಳಿ-2025 ಜಾರಿಗೆ ಸಚಿವ ಸಂಪುಟ ಅನುಮೋದನೆ

Cabinet Meeting: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ (ನವೆಂಬರ್‌ 27) ಸಚಿವ ಸಂಪುಟ ಸಭೆ ನಡೆಯಿತು. ಕರ್ನಾಟಕ ರಾಜ್ಯ ಹಜ್ ಸಮಿತಿ ನಿಯಮಾವಳಿ 2025 ಅನ್ನು ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿ ಭೇಟಿಯಾದ ಟಿ20 ವಿಶ್ವಕಪ್ ಗೆದ್ದ ಮಹಿಳಾ ಅಂಧರ ಕ್ರಿಕೆಟ್ ತಂಡ

ಟಿ20 ವಿಶ್ವಕಪ್ ಗೆದ್ದ ಮಹಿಳಾ ಅಂಧರ ತಂಡಕ್ಕೆ ಸಿಹಿ ತಿನ್ನಿಸಿದ ಮೋದಿ

PM Modi: ‘ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯರಾಗಿ ಉಳಿದಿರುವುದು ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

Loading...