ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

ಹೊಸ ಕಾರು ಖರೀದಿಸುವ ಮುನ್ನ ಯೋಜನೆ ಹೇಗಿರಬೇಕು? ಈ ಬಗ್ಗೆ ಹಣಕಾಸು ತಜ್ಞರ ಕಿವಿ ಮಾತೇನು?

ಕಾರು ಖರೀದಿಗೆ ಯೋಜನೆ ಹೇಗಿರಬೇಕು?

ಕಾರ್‌ ಖರೀದಿಸಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಕಾರ್‌ ಇವತ್ತು ಐಷಾರಾಮಿ ವಸ್ತುವಾಗಿ ಉಳಿದಿಲ್ಲ. ಇದು ದಿನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಮಾಧ್ಯಮ ವರ್ಗದ ಜನರು ಕಾರ್‌ ಖರೀದಿ ಮಾಡಬೇಕಾದರೆ ಯಾವ ರೀತಿಯ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದರ ಕುರಿತು ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ ನೀಡಿರುವ ಮಾಹಿತಿ ಇಲ್ಲಿದೆ.

ದಕ್ಷಿಣ ಕೊರಿಯಾದ ಪ್ರಿಯತಮನನ್ನು ಕೊಂದ ಮಣಿಪುರದ ಮಹಿಳೆ; ಲೀವ್‌ ಇನ್‌ ರಿಲೇಷನ್‌ಶಿಪ್‌ ದುರಂತ ಅಂತ್ಯ ಕಂಡಿದ್ದು ಹೇಗೆ?

ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಕೊಂದ ಮಣಿಪುರದ ಮಹಿಳೆ

ದಕ್ಷಿಣ ಕೊರಿಯಾ ಮೂಲದ ಸಂಗಾತಿಯನ್ನು ಮಣಿಪುರದ ಮಹಿಳೆ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಈ ಜೋಡಿ ಕೆಲವು ಸಮಯಗಳಿಂದ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿತ್ತು. ಮೃತನನ್ನು ದಕ್ಷಿಣ ಕೊರಿಯಾದ ಡಕ್‌ ಹೀ ಯುಹ್‌ ಎಂದು ಗುರುತಿಸಲಾಗಿದೆ.

ಮದುವೆ ಹಾಲ್‌ನಲ್ಲಿ ಸಂಬಂಧಿಕರ ಎದುರೇ ಸರ್‌ಪಂಚ್‌ ಮೇಲೆ ಗುಂಡಿನ ದಾಳಿ; ಪಂಜಾಬ್‌ನಲ್ಲಿ ಜನಪ್ರತಿನಿಧಿಯ ಭೀಕರ ಹತ್ಯೆ

ಮದುವೆ ಹಾಲ್‌ನಲ್ಲಿ ಸರ್‌ಪಂಚ್‌ ಮೇಲೆ ಗುಂಡಿನ ದಾಳಿ

ಜನಪ್ರತಿನಿಧಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮದುವೆ ಹಾಲ್‌ನಲ್ಲಿ ಎಲ್ಲರೆದುರೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮೃತರನ್ನು ಆಡಳಿತರೂಢ ಆಮ್‌ ಆದ್ಮಿ ಪಾರ್ಟಿಯ ಸರ್‌ಪಂಚ್‌ (ಗ್ರಾಮ ಪಂಚಾಯತ್‌ ಅಧ್ಯಕ್ಷ) ಜರ್ನೈಲ್‌ ಸಿಂಗ್‌ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳಿಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕುಡಿದು ವಾಹನ ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದ ಆಟೋರಿಕ್ಷಾ ಚಾಲಕ; ಸತ್ತ ಹಾವು ಹಿಡಿದು ಪೊಲೀಸರಿಗೆ ಬೆದರಿಕೆ, ವಿಡಿಯೊ ವೈರಲ್

ಸತ್ತ ಹಾವು ಹಿಡಿದುಕೊಂಡು ಸಂಚಾರಿ ಪೊಲೀಸರಿಗೆ ಬೆದರಿಕೆ

ಕುಡಿದು ವಾಹನ ಚಲಾಯಿಸುತ್ತಿದ್ದ ಆಟೋರಿಕ್ಷಾ ಚಾಲಕನೊಬ್ಬನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ವಶಕ್ಕೆ ಪಡೆಯುತ್ತಿದ್ಧಂತೆ ಆತ ಸತ್ತ ಹಾವನ್ನು ಹಿಡಿದುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೊ ವೈರಲ್‌ ಆಗಿದೆ.

ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣ; ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?

ದೆಹಲಿ ಸ್ಫೋಟ: ಉಗ್ರರು ಪಾಕ್‌ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿದ್ದು ಹೇಗೆ?

Delhi Red Fort Blast Case: ದೆಹಲಿಯ ಕೆಂಪುಕೋಟೆ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಉಗ್ರರು ಘೋಸ್ಟ್ ಸಿಮ್ ಕಾರ್ಡ್‌ ಮತ್ತು ಎನ್‌ಕ್ರಿಪ್ಟೆಡ್ ಅಪ್ಲಿಕೇಷನ್‌ ಬಳಸಿಕೊಂಡು ಪ್ಲಾನ್ ಮಾಡಿದ್ದರು ಎನ್ನುವುದು ಇದೀಗ ಬಯಲಾಗಿದೆ.

2036ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಪೂರ್ಣ ಶಕ್ತಿಯೊಂದಿಗೆ ತಯಾರಿ ನಡೆಸುತ್ತಿದೆ; ಪ್ರಧಾನಿ ಮೋದಿ

2036ರ ಒಲಿಂಪಿಕ್ಸ್ ಆಯೋಜಿಸಲು ಸಜ್ಜು; ಪ್ರಧಾನಿ ಮೋದಿ

2036 Olympics: ಕಳೆದ ದಶಕದಲ್ಲಿ, FIFA U-17 ವಿಶ್ವಕಪ್, ಹಾಕಿ ವಿಶ್ವಕಪ್ ಮತ್ತು ಪ್ರಮುಖ ಚೆಸ್ ಈವೆಂಟ್‌ಗಳಂತಹ 20 ಕ್ಕೂ ಹೆಚ್ಚು ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಲವಾರು ನಗರಗಳಲ್ಲಿ ಆಯೋಜಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳು ಕಿರುಕುಳ ನೀಡುವುದನ್ನು ತಡೆದ ಯುವಕನ ಹತ್ಯೆ

ಮಹಿಳೆಗೆ ಕಿರುಕುಳ ನೀಡುವುದನ್ನು ತಡೆದಿದ್ದಕ್ಕೆ ಯುವಕನ ಕೊಲೆ

Crime News: ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದವರನ್ನು ತಡೆಯಲು ಮುಂದಾದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ವೆನೆಜುವೆಲಾ ಜತೆ ನಾವಿದ್ದೇವೆ; ಅಮೆರಿಕದ ವಿರುದ್ಧ ನಿಂತ ಭಾರತ

ವೆನೆಜುವೆಲಾ ಮೇಲಿನ ದಾಳಿಗೆ ಭಾರತ ಕಳವಳ

ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಭಾರತ ಇದಕ್ಕೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ ಸೇನಾ ಪಡೆಗಳು ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು.

Federal Bank Recruitment 2026: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್‌; ಫೆಡರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ

ಫೆಡರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ

Job Guide: ಕೇರಳ ಮೂಲದ ಖಾಸಗಿ ಬ್ಯಾಂಕ್‌ ಫೆಡರಲ್‌ ಬ್ಯಾಂಕ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಆಫೀಸ್‌ ಅಸಿಸ್ಟಂಟ್‌ ಹುದ್ದೆ ಇದ್ದು, ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಜನವರಿ 8.

ವಿಮಾನ ಪ್ರಯಾಣಿಕರೇ ಗಮನಿಸಿ; ಫ್ಲೈಟ್‌ನಲ್ಲಿ ಇನ್ಮುಂದೆ ಪವರ್ ಬ್ಯಾಂಕ್ ಮೂಲಕ ಮೊಬೈಲ್‌ ಚಾರ್ಜ್‌ ಮಾಡುವಂತಿಲ್ಲ; ಹೊಸ ಸುರಕ್ಷತಾ ನಿಯಮದಲ್ಲಿ ಏನಿದೆ?

ವಿಮಾನದಲ್ಲಿ ಪವರ್‌ ಬ್ಯಾಂಕ್ ಬಳಕೆ ನಿಷೇಧ

Power banks ban on flights: ವಿಮಾನ ಪ್ರಯಾಣಿಕರ ಸುರಕ್ಷತೆಗಾಗಿ ಪವರ್ ಬ್ಯಾಂಕ್ ಬಳಕೆ ಕುರಿತ ನಿಯಮಗಳನ್ನು ಡಿಜಿಸಿಎ ಕಠಿಣಗೊಳಿಸಿದೆ. ಲಿಥಿಯಂ ಬ್ಯಾಟರಿ ಸಂಬಂಧಿತ ಬೆಂಕಿ ಅಪಾಯಗಳ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಬಳಸುವುದು ಹಾಗೂ ಚಾರ್ಜ್ ಮಾಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಹೊಸ ಸುರಕ್ಷತಾ ನಿಯಮಗಳ ವಿವರಗಳು ಇಲ್ಲಿವೆ.

ವಂದೇ ಭಾರತ್ ಸ್ಲೀಪರ್ ಟ್ರೈನ್‌ ಹೇಗಿದೆ? ಇದರೊಳಗೆ ಏನೆಲ್ಲ ಇದೆ? ವಿಡಿಯೊ ನೋಡಿ

ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನೊಳಗೆ ಏನೇನಿದೆ?

Vande Bharat Sleeper Train: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ರೈಲಿನ ಒಳಾಂಗಣ ವಿಶೇಷವಾಗಿದ್ದು, ಆರಾಮದಾಯಕ ಪ್ರಯಾಣಕ್ಕಾಗಿ ತಾಂತ್ರಿಕ ಸೌಲಭ್ಯಗಳು ಮತ್ತುಅನೇಕ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸದ್ಯ ರೈಲನ್ನು ಪರಿಚಯಿಸುವ ವಿಡಿಯೊ ಹೊರಬಿದ್ದಿದೆ.

2026ರ ಗಣರಾಜ್ಯೋತ್ಸವ ಪರೇಡ್ ನೀವೂ ವೀಕ್ಷಿಸಬೇಕೆ? ಹೀಗೆ ಟಿಕೆಟ್ ಬುಕ್‌ ಮಾಡಿ

ಗಣರಾಜ್ಯೋತ್ಸವ ಪರೇಡ್ 2026ರ ಟಿಕೆಟ್ ಬುಕ್ಕಿಂಗ್ ನಾಳೆ ಆರಂಭ

Republic Day 2026: ದೇಶದ ಸಂಸ್ಕೃತಿ, ಶಕ್ತಿ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸುವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವಿದೆ. 2026ರ ಗಣರಾಜ್ಯೋತ್ಸವ ಮೆರವಣಿಗೆ ವೀಕ್ಷಿಸಲು ಬಯಸುವವರು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ ಮೂಲಕ ಅಥವಾ ನಿಗದಿತ ಕೌಂಟರ್ ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಟಿಕೆಟ್ ಗಳ ಮಾರಾಟ ಪ್ರಕ್ರಿಯೆ ಜನವರಿ 5ರಿಂದ ಆರಂಭವಾಗಲಿದೆ.

ತಿಂಗಳ ಖರ್ಚು ಈಗ 1 ಲಕ್ಷ ರುಪಾಯಿಯಾದರೆ 20 ವರ್ಷಗಳ ಬಳಿಕ ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕಾಚಾರ

20 ವರ್ಷಗಳ ಬಳಿಕ ತಿಂಗಳ ಖರ್ಚಿಗೆ ಎಷ್ಟು ಹಣ ಬೇಕು?

ದಿನೇ ದಿನೆ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯ ನಡುವೆ ಇದೇ ಜೀವನ ಶೈಲಿಯನ್ನು ಮುಂದಿನ 20 ವರ್ಷಗಳ ಬಳಿಕ ಉಳಿಸಿಕೊಳ್ಳಲು ಸಾಧ್ಯವೇ? ಈ ಒಂದು ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಲೇಬೇಕು. ಯಾಕೆಂದರೆ ಈಗ ತಿಂಗಳಿಗೆ 1 ಲಕ್ಷ ರುಪಾಯಿ ಖರ್ಚು ಮಾಡುವಿರಾದರೆ ಮುಂದಿನ 20 ವರ್ಷಗಳ ಬಳಿಕ ತಿಂಗಳಿಗೆ ಖರ್ಚಿಗೆ ಎಷ್ಟು ಹಣ ಬೇಕಾಗುತ್ತೆ ಎಂಬುದನ್ನು ಯೋಚಿಸಿದ್ದೀರಾ? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ.

ನಿಮ್ಮ ದೂರನ್ನು ಯಾರೂ ಸ್ವೀಕರಿಸುತ್ತಿಲ್ಲವೇ? ಹಾಗಾದರೆ ನೇರವಾಗಿ ಪ್ರಧಾನಿಗೆ ಕಂಪ್ಲೆಂಟ್‌ ನೀಡಿ!

ನಿಮ್ಮ ದೂರನ್ನು ಪ್ರಧಾನಿಗೆ ಕಳುಹಿಸಲು ಬಯಸುವಿರಾ? ಇಲ್ಲಿದೆ ಮಾಹಿತಿ

ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲವೇ? ಸರ್ಕಾರಿ ಕಚೇರಿಗಳಲ್ಲಿ ತಿರುಗಿ ತಿರುಗಿ ಬೇಸತ್ತಿದ್ದೀರಾ? ಅಧಿಕಾರಿಗಳು, ಸ್ಥಳೀಯ ಆಡಳಿತ ಅಥವಾ ಜನಪ್ರತಿನಿಧಿಗಳಿಂದ ಪರಿಹಾರ ಸಿಗದ ಸ್ಥಿತಿಯಲ್ಲಿದ್ದೀರಾ? ಹಾಗಿದ್ದರೆ, ನೀವು ನೇರವಾಗಿ ಪ್ರಧಾನಮಂತ್ರಿ ಅವರಿಗೆ ನಿಮ್ಮ ದೂರು ಸಲ್ಲಿಸುವ ಅವಕಾಶ ಇದೆ. ಸಾಮಾನ್ಯವಾಗಿ ಪ್ರತಿಯೊಂದು ಸಮಸ್ಯೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಇಲಾಖೆಗಳು ಹಾಗೂ ಪ್ರಕ್ರಿಯೆಗಳು ಇರುತ್ತವೆ.

Tiruvannamalai Horror: ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್‌ ಇನ್‌ ಜೋಡಿಯ ಕೊಲೆ; ಹತ್ಯೆಯ ಹಿಂದಿನ ಕಾಣದ ಕೈ ಯಾರದ್ದು?

ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್‌ ಇನ್‌ ಜೋಡಿಯ ಕೊಲೆ

ತಮ್ಮ ಸಂಗಾತಿಗಳಿಂದ ದೂರವಾಗಿ ಲೀವ್‌ ಇನ್‌ ಸಂಬಂಧದಲ್ಲಿದ್ದ ಜೋಡಿಯನ್ನು ಗರಾಮಸ್ಥರು ಗುಡಿಸಲು ಸಮೇತ ಸುಟ್ಟು ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೃತರನ್ನು 53 ವರ್ಷದ ಕೃಷಿಕ ಪಿ. ಶಕ್ತಿವೇಲು ಮತ್ತು ಆತನ ಸಂಗಾತಿ, ಪಕ್ಕಿರಿಪಾಲಯಂ ನಿವಾಸಿ 40 ವರ್ಷದ ಎಸ್‌. ಅಮೃತಂ ಎಂದು ಗುರುತಿಸಲಾಗಿದೆ.

ಬೈಕ್ ಡಿಕ್ಕಿಯಾಗಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ದಂಪತಿಗೆ ಗಾಯ

ರಸ್ತೆ ದಾಟುತ್ತಿದ್ದ ಬಹುಭಾಷಾ ನಟ, ಪತ್ನಿಗೆ ಬೈಕ್ ಡಿಕ್ಕಿ

ರಸ್ತೆ ಅಪಘಾತದಲ್ಲಿ ಬಹುಭಾಷಾ ನಟ ಮತ್ತು ಪತ್ನಿ ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಗುವಾಹಟಿಯ ಮೃಗಾಲಯ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಬರುವಾ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೈಲು ನಿಲ್ದಾಣದಲ್ಲಿ ಒಂದೇ ಒಂದು ಕಸದ ತುಂಡಿಲ್ಲ; ಇದು ಇರೋದು ವಿದೇಶದಲ್ಲಲ್ಲ, ನಮ್ಮ ಭಾರತದಲ್ಲೇ!

ಈ ರೈಲು ನಿಲ್ದಾಣದಲ್ಲಿ ಕಸವೇ ಇಲ್ಲ ಎಂದರೆ ನಂಬುತ್ತೀರಾ?

Clean Station: ಭಾರತದ ರೈಲ್ವೆ ನಿಲ್ದಾಣ ಸಾಮಾನ್ಯವಾಗಿ ಗದ್ದಲ ಮತ್ತು ಕಸದಿಂದ ತುಂಬಿರುತ್ತದೆ. ಆದರೆ ಕೇರಳದ ಒಂದು ನಿಲ್ದಾಣವು ಅದರ ವಿಶಿಷ್ಟ ಸ್ವಚ್ಛತೆ ಮತ್ತು ಶಾಂತ ವಾತಾವರಣದಿಂದ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ರೈಲು ನಿಲ್ದಾಣದ ನಿರ್ವಹಣೆ, ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿಯ ಬಗ್ಗೆ ಗಮನ ಸೆಳೆದಿದೆ.

ವಿಬಿ ಜಿ ರಾಮ್‌ ಜಿ ಕಾಯ್ದೆಗೆ ತೀವ್ರ ವಿರೋಧ; ಜನವರಿ 8ರಿಂದ ಮನರೇಗಾ ಬಚಾವೋ ಅಭಿಯಾನ ಘೋಷಿಸಿದ ಕಾಂಗ್ರೆಸ್

ದೇಶಾದ್ಯಂತ ಮತ್ತೊಂದು ಚಳುವಳಿ ಘೋಷಿಸಿದ ಕಾಂಗ್ರೆಸ್

MNREGA Bachao Abhiyan: ವಿಬಿ ಜಿ ರಾಮ್‌ ಜಿ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಜನವರಿ 8ರಿಂದ ಮನರೇಗಾ ಬಚಾವೋ ಅಭಿಯಾನವನ್ನು ದೇಶಾದ್ಯಂತ ಆರಂಭಿಸುವುದಾಗಿ ಘೋಷಿಸಿದೆ. ಈ ಕಾಯ್ದೆ ಗ್ರಾಮೀಣ ನಾಗರಿಕರ ಉದ್ಯೋಗ ಹಕ್ಕನ್ನು ದುರ್ಬಲಗೊಳಿಸುತ್ತದೆ ಮತ್ತು ಮನರೇಗಾ ಕಾಯ್ದೆಯನ್ನು ಹಾಳು ಮಾಡುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

12 ವರ್ಷದ ಪುತ್ರನನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಪಾಲಕರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರ

ಪುತ್ರನಿಗಿದ್ದ ದುರಾಭ್ಯಾಸದಿಂದ ನೊಂದ ಪೋಷಕರು ಮಾಡಿದ್ದೇನು?

ಕಳ್ಳತನದ ಚಟಕ್ಕೆ ಬೇಸತ್ತು ಪಾಲಕರು 12 ವರ್ಷದ ಮಗನನ್ನು ಸರಪಳಿಯಿಂದ ಕಟ್ಟಿ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರದ ಅಂಜ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ದಿನಗೂಲಿ ಕಾರ್ಮಿಕರಾಗಿರುವ ಪೋಷಕರು ಕೆಲಸಕ್ಕೆ ಹೋಗುವ ಮುನ್ನ ಬಾಲಕನನ್ನು ಮನೆಯಲ್ಲೇ ಸರಪಳಿಯಿಂದ ಕಟ್ಟಿಹಾಕುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಧ್ಯ ಪ್ರವೇಶಿಸಿ ಬಾಲಕನನ್ನು ರಕ್ಷಿಸಿದೆ. 3–4 ತಿಂಗಳಿಂದ ಬಾಲಕನನ್ನು ಪ್ರತಿದಿನ ಕಟ್ಟಿ ಹಾಕಲಾಗುತ್ತಿದ್ದು, ಇದರಿಂದ ಅವನ ಕಾಲುಗಳಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮತ್ತೊಂದು ಹೃದಯ ವಿದ್ರಾವಕ ಘಟನೆ: 6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; ಟೆರೇಸ್‌ನಿಂದ ಎಸೆದು ಕೊಲೆ

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳಿಗೆ ಗುಂಡೇಟು

ಎಷ್ಟೇ ಬಲವಾದ ಕಾನೂನು ತಂದರೂ ಹೆಣ್ಮಕ್ಕಳ ಮೇಲಿನ ಅತ್ಯಾಚಾರದಂತಹ ಘಟನೆ ನಡೆಯುತ್ತಲೇ ಇದೆ. ಇದೀಗ ಉತ್ತರ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ಟೆರೇಸ್‍ನಿಂದ ಕೆಳಗೆ ಎಸೆದು ಹತ್ಯೆ ಮಾಡಲಾಗಿದೆ.

Star Fashion 2026: ಯುವಕರನ್ನು ಸೆಳೆದ ಹೃತಿಕ್ ರೋಷನ್‌ ಲೇಯರ್ಡ್ ಕುರ್ತಾ

ಯುವಕರನ್ನು ಸೆಳೆದ ಹೃತಿಕ್ ರೋಷನ್‌ ಲೇಯರ್ಡ್ ಕುರ್ತಾ

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ತನ್ನ ಸೋದರ ಸಂಬಂಧಿ ಮದುವೆಯಲ್ಲಿ ಧರಿಸಿದ್ದ, ಲೈಟ್‌ ಶೇಡ್‌ನ ಲೇಯರ್ಡ್ ಕುರ್ತಾ ಇದೀಗ ಟ್ರೆಂಡಿಯಾಗಿದ್ದು, ಯುವಕರನ್ನು ಸೆಳೆದಿದೆ. ಈ ಕುರ್ತಾ ಸ್ಪೆಷಾಲಿಟಿ ಏನು? ಈ ಕುರಿತ ವಿವರ ಇಲ್ಲಿದೆ.

ಬಿಜೆಪಿ ಸ್ವತಂತ್ರವಾಗಿ ಕೆಲಸ ಮಾಡುತ್ತದೆ, ಆರ್‌ಎಸ್‌ಎಸ್‍ನ ರಿಮೋಟ್ ಕಂಟ್ರೋಲ್‌ನಿಂದಲ್ಲ; ಮೋಹನ್ ಭಾಗವತ್

ಬಿಜೆಪಿಯನ್ನು ಆರ್‌ಎಸ್‍ಎಸ್ ನಿಯಂತ್ರಿಸುತ್ತಿಲ್ಲ: ಮೋಹನ್ ಭಾಗವತ್

BJP Works Independently: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಮಾತನಾಡಿ, ಬಿಜೆಪಿ, ವಿಎಚ್‍ಪಿ ಮತ್ತು ವಿದ್ಯಾ ಭಾರತಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಂಘದ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ರಾತ್ರಿ ಆಕಾಶವನ್ನು ಬೆಳಗಿಸಲಿದೆ ವೂಲ್ಫ್ ಸೂಪರ್‌ಮೂನ್; ಹಾಗೆಂದರೇನು? ಇಲ್ಲಿದೆ ಮಾಹಿತಿ

ಶನಿವಾರ ರಾತ್ರಿ ಆಕಾಶವನ್ನು ಬೆಳಗಿಸಲಿದೆ ವೂಲ್ಫ್ ಸೂಪರ್‌ಮೂನ್

Wolf Supermoon: ಶನಿವಾರ ರಾತ್ರಿ ಆಕಾಶವನ್ನು ವೂಲ್ಫ್ ಸೂಪರ್‌ಮೂನ್ ಬೆಳಗಲಿದೆ. ಇದು ಸಾಮಾನ್ಯ ಪೂರ್ಣಚಂದ್ರಕ್ಕಿಂತ ಸ್ವಲ್ಪ ದೊಡ್ಡದು ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಲಿದೆ. ಜನವರಿಯ ಈ ವಿಶೇಷ ಚಂದ್ರನ ಬೆಳಕು ಮತ್ತು ಅದರ ವೈಶಿಷ್ಟ್ಯಗಳ ಕುರಿತು ಇಲ್ಲಿದೆ ಪ್ರಮುಖ ಮಾಹಿತಿ.

ಮೋದಿ ಸರ್ಕಾರವನ್ನು ಕಿತ್ತೊಗೆಯಲು ಬಾಂಗ್ಲಾದೇಶ ಮಾದರಿಯ ಪ್ರತಿಭಟನೆ ಅಗತ್ಯ: ನಾಲಗೆ ಹರಿಯಬಿಟ್ಟ ವಿರೋಧ ಪಕ್ಷದ ನಾಯಕ ಅಭಯ್ ಸಿಂಗ್

ವಿರುದ್ಧ ನಾಲಗೆ ಹರಿಬಿಟ್ಟ ವಿರೋಧ ಪಕ್ಷದ ನಾಯಕ

Abhay Singh Chautala: ಮೋದಿ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು ಬಾಂಗ್ಲಾದೇಶ ಮಾದರಿಯ ಪ್ರತಿಭಟನೆ ಅಗತ್ಯವೆಂದು ಐಎನ್‌ಎಲ್‌ಡಿ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲಾ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಂತೆ ಭಾರತದಲ್ಲೂ ನಡೆಯಬೇಕೆಂದು ಅವರು ಹೇಳಿದ್ದಾರೆ.

Loading...