ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶ

ಮಣ್ಣಿನ ಮಡಿಕೆ ಮಾರುವ ಕುಂಬಾರನಿಗೆ 1.2 ಕೋಟಿ ರುಪಾಯಿ ಜಿಎಸ್‌ಟಿ ನೋಟಿಸ್

ಕುಂಬಾರನಿಗೆ ಶಾಕ್ ಕೊಟ್ಟ ಆದಾಯ ತೆರಿಗೆ ಇಲಾಖೆ

ಮಣ್ಣಿನ ಮಡಿಕೆ ಮಾಡಿ ಕೇವಲ 2 ರೂ. ಗೆ ಮಾರಾಟ ಮಾಡುವ ಉತ್ತರಪ್ರದೇಶದ ಕುಂಬಾರನಿಗೆ ಆದಾಯ ತೆರಿಗೆ ಇಲಾಖೆಯು ಶಾಕ್ ಕೊಟ್ಟಿದೆ. ದಿನಕ್ಕೆ ಕನಿಷ್ಠ ಆದಾಯ ಹೊಂದಿರುವ ಕುಂಬಾರನಿಗೆ 1.25 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ ಆತನ ಹೆಸರಿನಲ್ಲಿ ಕಂಪೆನಿ ಇದೆ ಎಂದು ಹೇಳಲಾಗಿದ್ದು, ಇದು ತನಗೆ ಗೊತ್ತೇ ಇಲ್ಲ. ತನ್ನ ಪಾನ್ ಮತ್ತು ಆಧಾರ್ ದುರುಪಯೋಗವಾಗಿದೆ ಎಂದು ಆತ ಆರೋಪಿಸಿದ್ದಾನೆ.

ಆಪರೇಷನ್ ಟ್ರಾಶಿ-I: ಕಿಶ್ತ್ವಾರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಕಿಶ್ತ್ವಾರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭಾನುವಾರ ಬೆಳಗ್ಗೆ ನಡೆಸಿದ ಆಪರೇಷನ್ ಟ್ರಾಶಿ-I ಕಾರ್ಯಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2 ಎಕೆ-47 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಟ್ಟದ ತಪ್ಪಲಿನಲ್ಲಿರುವ ಮಣ್ಣಿನ ಮನೆಯೊಳಗೆ ಭಯೋತ್ಪಾದಕರು ಅಡಗಿಕೊಂಡಿದ್ದು, ಭಾರತೀಯ ಸೇನೆ ಮೇಲೆ ಮೊದಲು ದಾಳಿ ಪ್ರಾರಂಭಿಸಿದರು ಎನ್ನಲಾಗಿದೆ.

Jodhpur Horror: ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು; ವಿವಾಹ ಮಂಟಪ ಏರಬೇಕಾದವರು ಮಸಣಕ್ಕೆ ಹೋಗಿದ್ದೇಕೆ?

ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು

Self Harming: ಮದುವೆಗೆ ಕೆಲವೇ ಗಂಟೆಯ ಮೊದಲು ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ

ಕಳ್ಳರನ್ನು ಓಡಿಸಲು ಎನ್‌ಆರ್‌ಐ ಮಹಿಳೆ ಮಾಡಿದ್ದೇನು ಗೊತ್ತೇ?

ದೋಚಲು ಬಂದ ಕಳ್ಳರನ್ನು ಮಹಿಳೆಯೊಬ್ಬರು ಕತ್ತಿ ಹಿಡಿದು ಓಡಿಸಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ. ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಬಂದಿದ್ದ ಮಹಿಳೆ ಹರ್ಜಿಂದ್ ಕೌರ್ ಅವರ ವಾಹನವನ್ನು ದರೋಡೆಕೋರರು ಮುತ್ತಿಗೆ ಹಾಕಿದ್ದು, ಈ ವೇಳೆ ಧೈರ್ಯ ತೋರಿದ ಮಹಿಳೆ ಕತ್ತಿ ಹಿಡಿದು ಅವರನ್ನು ಓಡಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

AI ಶೃಂಗಸಭೆಯಲ್ಲಿ ಜಗತ್ತು ಭಾರತದ ಅದ್ಭುತ ಸಾಮರ್ಥ್ಯಗಳನ್ನು ಕಂಡಿದೆ; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ಇಂದಿನ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ!

Mann Ki Baat: ಫೆಬ್ರವರಿ 22 ರ ಭಾನುವಾರದಂದು ನಡೆದ ಮನ್ ಕಿ ಬಾತ್‌ನ 131 ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ಅದ್ಭುತ ಸಾಮರ್ಥ್ಯಗಳನ್ನು ಜಗತ್ತು ನೋಡಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಭಾರೀ ಸ್ಫೋಟ ನಡೆಸುವ ಸಂಚು! ಪಾಕ್‌ನ ಐಎಸ್‌ಐ, ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಬಂಧನ

ಪಾಕ್‌ನ ಐಎಸ್‌ಐ, ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಬಂಧನ

ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪುಗಳ ಬೆಂಬಲದೊಂದಿಗೆ ಭಾರತದಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ರೂಪಿಸುತ್ತಿದ್ದ ಶಂಕಿತ ಎಂಟು ಜನರನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಬಂಧಿತ ಶಂಕಿತರಲ್ಲಿ ಬಾಂಗ್ಲಾದೇಶಿ ಪ್ರಜೆಯೂ ಸೇರಿದ್ದಾನೆ.

ಎಐ ಶೃಂಗಸಭೆ 2026 ಮುಕ್ತಾಯ; 'ಎಲ್ಲರಿಗೂ ಎಐ' ಭಾರತದ ದೃಷ್ಟಿಕೋನಕ್ಕೆ 88 ರಾಷ್ಟ್ರಗಳ ಬೆಂಬಲ

ಎಐ ಶೃಂಗಸಭೆ 2026 ಮುಕ್ತಾಯ

ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆ 2026ಕ್ಕೆ ಶನಿವಾರ ತೆರೆ ಎಳೆಯಲಾಗಿದೆ. ಸೋಮವಾರ ಪ್ರಾರಂಭವಾದ ಶೃಂಗಸಭೆಯಲ್ಲಿ ವಿಶ್ವದ ಹಲವಾರು ನಾಯಕರು ಪಾಲ್ಗೊಂಡಿದ್ದರು. ಬಹುತೇಕ ಎಲ್ಲರೂ ಕೂಡ ಕೃತಕ ಬುದ್ದಿ ಮತ್ತೆಯಲ್ಲಿ ಭಾರತದ ದೃಷ್ಟಿಕೋನವನ್ನು ಬೆಂಬಲಿಸಿದ್ದಾರೆ. ಸಾಕಷ್ಟು ಉದ್ಯಮಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ.

ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಭಾರಿ ಪ್ರತಿಭಟನೆ

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ದೆಹಲಿ ಎಐ ಇಂಪ್ಯಾಕ್ಟ್ ಸಮ್ಮಿಟ್‌ಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆಗೆ ವಿರೋಧವಾಗಿ ಬಿಜೆಪಿ ದೇಶಾದ್ಯಂತ ಪ್ರತಿಭಟನೆ ನಡೆಸಿತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬೈಯ ಮುಲುಂಡ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ‌ ನಮ್ಮನ್ನು ದೋಚುತ್ತಿದ್ದರು: ಸುಂಕ ರದ್ದುಗೊಂಡ ನಡುವೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಹೊಗಳಿದ ಟ್ರಂಪ್

ಮೋದಿ ಅಮೆರಿಕವನ್ನು ‘ಸುಲಿಗೆ’ ಮಾಡುತ್ತಿದ್ದರು: ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಸಂಬಂಧ “ಅದ್ಭುತ”ವಾಗಿದೆ ಎಂದರೂ, ಪ್ರಧಾನಿ ನರೇಂದ್ರ ಮೋದಿ ಅಮೆರಿಕವನ್ನು “ಸುಲಿಗೆ ಮಾಡುತ್ತಿದ್ದರು” ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್ ಅವರ ಕಠಿಣ ಸುಂಕಗಳನ್ನು ರದ್ದುಗೊಳಿಸಿದ ನಂತರ ಈ ಹೇಳಿಕೆ ಹೊರಬಂದಿದೆ.

Motivational Story: ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡಿದ್ದರೂ ಛಲ ಬಿಡದೆ ಕಾಲಿನಲ್ಲೇ 10ನೇ ತರಗತಿ ಪರೀಕ್ಷೆ ಬರೆದ ದಿಟ್ಟೆ; ನಿಜವಾದ ಸ್ಫೂರ್ತಿ ಎಂದರೆ ಇದು

ಕಾಲಿನಲ್ಲೇ 10ನೇ ತರಗತಿ ಪರೀಕ್ಷೆ ಬರೆದ ದಿಟ್ಟೆ

ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಲಕ್ಷ್ಮೀ ಕಾಲಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ. ಶಿಕ್ಷಕಿಯಾಗುವುದೇ ನನ್ನ ಗುರಿ ಎಂದು ಆಕೆ ತಿಳಿಸಿದ್ದಾಳೆ. ಸದ್ಯ ಆಕೆ ಪರೀಕ್ಷೆ ಬರೆಯುತ್ತಿರುವ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಪಕ್ಷಿಗಳ ಧ್ವನಿ ಮೌನವಾದರೆ, ಮಾನವನ ಬದುಕು ಮಂಕಾಗುತ್ತದೆ

ಪಕ್ಷಿಗಳ ಸಂತತಿ ನಾಶವಾದರೆ ಮಾನವರ ಬದುಕು ನರಕ

ಪಕ್ಷಿಗಳು ಮತು ಕೀಟಗಳು ನಮ್ಮ ಪರಿಸರದ ಅತಿ ಚಿಕ್ಕ ಆದರೆ ಅತ್ಯಂತ ಮಹತ್ವದ ಅಂಶಗಳು. ಅವುಗಳ ಸಂತತಿ ವೇಗವಾಗಿ ಕಡಿಮೆಯಾಗುತ್ತಿದೆ. ಅವುಗಳ ನಾಶವು ಕೇವಲ ಪಕೃತಿಯ ಸಮಸ್ಯೆಯಲ್ಲ, ಅದು ಮಾನವನ ಬದುಕಿನ ಮೇಲೆಯೇ ನೇರ ಪರಿಣಾಮ ಬೀರುತ್ತದೆ. ಈ ಬಗ್ಗೆ ಪಲ್ಲವಿ ಅವರ ವಿಶೇಷ ಬರಹ ಇಲ್ಲಿದೆ.

ಹಾಡಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ಪರಾರಿ; ಆರೋಪಿಗಾಗಿ ಪೊಲೀಸರಿಂದ ತಲಾಶ್

ಹಾಡಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಗುಂಡಿಕ್ಕಿ ಹತ್ಯೆ

Crime News: ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಪತ್ನಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಶಬ್ಧ ಕೇಳಿ ನೆರೆಹೊರೆಯವರು ಧಾವಿಸಿದಾಗ, ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದ ಮೇಲೆ ಅಮೆರಿಕ ವಿಧಿಸುವ ಸುಂಕ ಎಷ್ಟು?

ಶೇ. 10 ಅಥವಾ 18 ಭಾರತದ ಮೇಲೆ ಯುಎಸ್ ಸುಂಕ ಎಷ್ಟು?

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಈ ನಡುವೆ ಅವರು ಜಾಗತಿಕವಾಗಿ ಎಲ್ಲರಿಗೂ ಶೇ. 10 ಸುಂಕ ಘೋಷಣೆ ಮಾಡಿದ್ದಾರೆ. ಇದು ಭಾರತಕ್ಕೆ ಅನ್ವಯವಾಗುವುದೇ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ; ತೆರಿಗೆ ವಿರುದ್ಧ ಕೋರ್ಟ್‌ನಲ್ಲಿ ವಾದಿಸಿದ ನೀಲ್ ಕತ್ಯಾಲ್ ಯಾರು?

ಟ್ರಂಪ್ ತೆರಿಗೆ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ

Indian-origin American wins: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ವಿವಾದಾತ್ಮಕ ಸುಂಕಗಳ ವಿರುದ್ಧ ನಡೆದ ಪ್ರಮುಖ ಕಾನೂನು ಹೋರಾಟದಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ನೀಲ್ ಕತ್ಯಾಲ್ ಪ್ರಮುಖ ಪಾತ್ರವಹಿಸಿ ಜಯ ಸಾಧಿಸಿದ್ದಾರೆ. ಈ ಐತಿಹಾಸಿಕ ತೀರ್ಪು ಅಧ್ಯಕ್ಷೀಯ ಅಧಿಕಾರಗಳ ಮಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದರ ಜತೆಗೆ, ಸಂವಿಧಾನದ ಮಹತ್ವವನ್ನು ಎತ್ತಿ ತೋರಿಸಿದೆ.

ಫ್ರಿಡ್ಜ್‌, ಡ್ರಮ್‌ ಬಳಿಕ ಇದೀಗ ಬಾವಿಯಲ್ಲಿ ಮೃತದೇಹ ಪತ್ತೆ: ಅಪ್ರಾಪ್ತ ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಕೊಂದು, ಕಲ್ಲು ಕಟ್ಟಿ ನೀರಿಗೆ ತಳ್ಳಿದ ಪ್ರಿಯಕರ

ಅಪ್ರಾಪ್ತ ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಕೊಂದು ಬಾವಿಗೆ ಎಸೆದ ಪ್ರಿಯಕರ

Crime News: ಇತ್ತೀಚಿನ ದಿನಗಳ ಸಂಗಾತಿಯನ್ನು ಕೊಲೆಗೈವ ಪ್ರಕರಣ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಫ್ರಿಡ್ಜ್‌, ನೀಲಿ ಡ್ರಮ್‌ನಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಇದೀಗ ಗುಜರಾತ್‌ನ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಪ್ರಿಯತಮೆಯನ್ನು ಕೊಂದು ಮೃತದೇಹವನ್ನು ಬಾವಿಗೆ ಎಸೆದಿದ್ದಾನೆ.

ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿಗೆ ಇಲ್ಲ ಅವಕಾಶ; ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಗೆ ಮುಂದಾದ ಕೇಂದ್ರ

ಟೋಲ್ ಪ್ಲಾಜಾಗಳಲ್ಲಿ ಇನ್ನು ನಗದು ಪಾವತಿ ಇಲ್ಲ

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಸೇವೆಯಲ್ಲಿ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಬಲಪಡಿಸುವ ಸಲುವಾಗಿ ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗಳನ್ನು ಸ್ಥಗಿತಗೊಳಿಸಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿ ಪರಿವರ್ತಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದರಿಂದಾಗಿ ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆ ಇರುವುದಿಲ್ಲ.

ಮದುವೆ ಭರವಸೆ ನೀಡಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಕೊನೆಗೂ ಇನ್‌ಫ್ಲುಯೆನ್ಸರ್‌ ಪೊಲೀಸ್‌ ಬಲೆಗೆ

ಲೈಂಗಿಕ ದೌರ್ಜನ್ಯ ಆರೋಪ; ಇನ್‌ಫ್ಲುಯೆನ್ಸರ್‌ ಬಂಧನ

Influencer arrested: ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ ನಂತರ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ನನ್ನು ಬಂಧಿಸಲಾಗಿದೆ. ಬಂಧಿತನನ್ನು ತ್ರಿಶೂರ್ ನಿವಾಸಿ ಯದು ಗಿರೀಶ್ (38) ಎಂದು ಗುರುತಿಸಲಾಗಿದೆ.

ದೆಹಲಿಯಲ್ಲಿ ಭಯೋತ್ಪಾದನಾ ದಾಳಿ ಎಚ್ಚರಿಕೆ ಬೆನ್ನಲ್ಲೇ ಪಂಜಾಬ್, ಕಾಶ್ಮೀರದಲ್ಲಿ ಐಇಡಿ ಪತ್ತೆ; ಹೈ ಅಲರ್ಟ್‌

ಪಂಜಾಬ್, ಕಾಶ್ಮೀರದಲ್ಲಿ ಐಇಡಿ ಪತ್ತೆ

Terror Attack: ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯಿಂದ ದೆಹಲಿಯಲ್ಲಿ ಭಯೋತ್ಪಾದನಾ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳ ನಂತರ ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿ‌ಗಳು ಪತ್ತೆಯಾಗಿವೆ. ಪಂಜಾಬ್‌ನ ಅಮೃತಸರದಲ್ಲಿ ರಯ್ಯಾ ಪೊಲೀಸ್ ಪೋಸ್ಟ್ ಸಮೀಪ ಸಂಶಯಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ.

RBI Recruitment: ಬೆಂಗಳೂರು ಸೇರಿ ದೇಶಾದ್ಯಂತ 650 ಅಸಿಸ್ಟಂಟ್‌ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಬಿಐ

ಆರ್‌ಬಿಐಯಲ್ಲಿ ಖಾಲಿ ಇದೆ 650 ಅಸಿಸ್ಟಂಟ್‌ ಹುದ್ದೆ

Job Guide: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಲಿ ಇರುವ ಬರೋಬ್ಬರಿ 650 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಮಾರ್ಚ್‌ 8.

ಆರ್‌ಎಸ್‌ಎಸ್ ಅಧಿಕಾರಕ್ಕಾಗಿ ಶ್ರಮಿಸುತ್ತಿಲ್ಲ, ಹಿಂದೂ ಸಮಾಜವನ್ನು ಒಗ್ಗೂಡಿಸುತ್ತಿದೆ: ಮೋಹನ್ ಭಾಗವತ್

RSS ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ: ಭಾಗವತ್

Mohan Bhagwat: ಆರ್‌ಎಸ್ಎಸ್ ಯಾವುದೇ ನಿರ್ದಿಷ್ಟ ಗುಂಪಿಗೆ ವಿರುದ್ಧವಾಗಿ ಅಥವಾ ಪೈಪೋಟಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಉತ್ತರ ಪ್ರದೇಶದ ಮಾಧವ್ ಕುಂಜ್‌ನಲ್ಲಿ ಮಾತನಾಡಿದ ಅವರು, ಸಾಮಾಜಿಕ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.

ಕೆಂಪು ಕೋಟೆ ಸೇರಿ ದೆಹಲಿಯ ವಿವಿಧೆಡೆ ಸ್ಫೋಟಕ್ಕೆ ಲಷ್ಕರ್ ಸಂಚು

ದೆಹಲಿಯಲ್ಲಿ ಸ್ಫೋಟಕ್ಕೆ ಲಷ್ಕರ್ ಸಂಚು

ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಫೆಬ್ರವರಿ 6ರಂದು ನಡೆದ ಸ್ಫೋಟಕ್ಕೆ ಪ್ರತೀಕಾರವಾಗಿ ದೆಹಲಿಯ ಕೆಂಪು ಕೋಟೆ ಸೇರಿದಂತೆ ನಗರ ಭಾಗಗಳಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೈಬಾ ಸ್ಫೋಟಕ್ಕೆ ಸಂಚು ರೂಪಿಸಿದೆ. ಭಯೋತ್ಪಾದಕ ಸಂಘಟನೆಯು ಸುಧಾರಿತ ಸ್ಫೋಟಕ ಸಾಧನಗಳಿಂದ ದಾಳಿ ನಡೆಸಲು ಸಂಚು ರೂಪಿಸುತ್ತಿರಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಮೀರತ್‌ನಲ್ಲಿ ಸಂಚರಿಸಲಿದೆ ದೇಶದ ಅತೀ ವೇಗದ ಮೆಟ್ರೋ; ಗಂಟೆಗೆ ಬರೋಬ್ಬರಿ 120 ಕಿ.ಮೀ. ಸ್ಪೀಡ್‌

ಮೀರತ್‌ನಲ್ಲಿ ದೇಶದ ಅತೀ ವೇಗದ ಮೆಟ್ರೋಗೆ ಪ್ರದಾನಿ ಮೋದಿ ಚಾಲನೆ

Meerut Metro: ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಫೆಬ್ರವರಿ 22) ಉತ್ತರ ಪ್ರದೇಶದ ಮೀರತ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಶತಾಬ್ದಿ ನಗರದ ನಮೋ ಭಾರತ್ ನಿಲ್ದಾಣದಲ್ಲಿ ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೀರತ್‌ನಲ್ಲಿ ಸುಮಾರು 12,930 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಹಾಗಲಕಾಯಿ ಖಾದ್ಯ ಮಾಡಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ

ಹಾಗಲಕಾಯಿ ಖಾದ್ಯ ಮಾಡಿದ್ದಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ

Crime News: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಷ್ಟವಿಲ್ಲದ ಹಾಗಲಕಾಯಿ ಅಡುಗೆ ಮಾಡಿದ್ದ ಬಗ್ಗೆ ತನ್ನ ತಾಯಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದ. ಕೊನೆಗೆ ಆರೋಪಿಯು ತನ್ನ ತಾಯಿಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

Gold Price Today On 21 February: ಗ್ರಾಹಕರಿಗೆ ಮತ್ತೆ ಶಾಕ್‌ ನೀಡಿದ ಚಿನ್ನ; ಭಾರಿ ಹೆಚ್ಚಳ ಕಂಡ ಬೆಲೆ

ಗ್ರಾಹಕರಿಗೆ ಮತ್ತೆ ಶಾಕ್‌ ನೀಡಿದ ಚಿನ್ನ

Gold Silver Price Today: ಬೆಂಗಳೂರಿನಲ್ಲಿ ಶನಿವಾರ (ಫೆಬ್ರವರಿ 21) 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 175 ರುಪಾಯಿ ಹೆಚ್ಚಾಗಿ 14,600 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ ಚಿನ್ನ ಕೂಡ ದುಬಾರಿಯಾಗಿದ್ದು, 1 ಗ್ರಾಂಗೆ 191 ರುಪಾಯಿ ಅಧಿಕವಾಗಿ 15,928 ರುಪಾಯಿಗೆ ಬಂದು ನಿಂತಿದೆ.

Loading...