ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಲಷ್ಕರ್-ಎ-ತೈಬಾ  ಜೊತೆ ನಂಟು: ಹರಿಯಾಣ, ರಾಜಸ್ಥಾನದ ಹಲವರ ಬಂಧನ

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಲವರ ಬಂಧನ

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹರಿಯಾಣ ಮತ್ತು ರಾಜಸ್ಥಾನದ ಹಲವಾರು ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ನಕಲಿ ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್‌ಗಳನ್ನು ಮಾಡಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇರಾನ್-ಅಮೆರಿಕ ಯುದ್ಧ; ಭಾರತದ ಕಾಫಿ ರಫ್ತಿಗೆ ಭಾರೀ ಹೊಡೆತ

ಭಾರತದ ಕಾಫಿ ರಫ್ತಿಗೆ ಹೊಡೆತ ಬಿದ್ದ ಇರಾನ್-ಅಮೆರಿಕ ಯುದ್ಧ

India coffee exports: ದಶಕಗಳ ಕಾಲ ಭಾರತೀಯ ಕಾಫಿ ದುಬೈ, ಕುವೈತ್ ನಗರ ಮತ್ತು ರಿಯಾದ್‌ನ ಕಫೆಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿದೆ. ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಇದ್ದರೂ ಸಹ, ವ್ಯಾಪಾರ ಮಾರ್ಗಗಳು ಜಟಿಲವಾಗಿವೆ. ಸಾಗಣೆ ವೆಚ್ಚವು ತುಂಬಾ ಹೆಚ್ಚಾಗಿದ್ದು, ಅದು ಉದ್ಯಮದ ಮೇಲೆ ಒತ್ತಡ ಹೇರಿದೆ.

ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ

ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ

Kerala student self-harming: ಕೇರಳದ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟ (ಆತ್ಮಹತ್ಯೆ ಮಾಡಿದ) ನಂತರ ಪೊಲೀಸರು ಅಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯನ್ನು ತಿರುವನಂತಪುರಂನ ಪುದುಕುಲಂಗರದ ಉಳಮಲಕ್ಕಲ್ ಮೂಲದ ನಿತಿನ್ ರಾಜ್ ಆರ್‌ಎಲ್ (22) ಎಂದು ಗುರುತಿಸಲಾಗಿದೆ.

SIR Phase 2: 7.2 ಕೋಟಿಗೂ ಹೆಚ್ಚು ಮತದಾರರ ಹೆಸರು ಕೈಬಿಟ್ಟ ಚುನಾವಣಾ ಆಯೋಗ

7.2 ಕೋಟಿಗೂ ಹೆಚ್ಚು ಮತದಾರರ ಹೆಸರು ಅಳಿಸಿದ ಎಸ್ಐಆರ್

ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ ಮುಂದುವರಿದಿದೆ. ಎರಡನೇ ಹಂತದಲ್ಲಿ 7.2 ಕೋಟಿಗೂ ಹೆಚ್ಚು ಮತದಾರರು ಹೆಸರನ್ನು ಕೈ ಬಿಡಲಾಗಿದೆ. 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಎರಡನೇ ಹಂತದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಉತ್ತರ ಪ್ರದೇಶದ ಅತೀ ಹೆಚ್ಚು ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ.

20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ʼಪಿಯಾʼ ಸಾಂಗ್‌

ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ಆಶಾ ಹಾಡಿದ್ದ ಸಾಂಗ್‌

Singer Asha Bhosle: ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಎಂಟು ದಶಕಗಳ ದೀರ್ಘ ವೃತ್ತಿಜೀವನದಲ್ಲಿ ಅವರು ಹಾಡಿದ ಘಜಲ್‌ಗಳು, ಪಾಪ್ ಹಾಡುಗಳು ಮತ್ತು ಡ್ಯೂಯೆಟ್‌ಗಳನ್ನು ನೆನೆದು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲ ಪೀಳಿಗೆಯವರಿಗೂ ಇಷ್ಟವಾಗಿರುವ ವಿಶೇಷ ಹಾಡು ಎಂದರೆ ಪಿಯಾ ತು ಅಬ್ ತೊ ಆಜಾ. ಇದು ಕ್ಯಾರವಾನ್ ಸಿನಿಮಾದ ಹಾಡು.

ಹೆತ್ತವರ ವಿರೋಧದ ನಡುವೆಯೂ ವಿವಾಹ,  ಗರ್ಭಿಣಿಯಾಗಿದ್ದಾಗಲೇ ವಿಚ್ಛೇದನ; ಆಶಾ ಭೋಸ್ಲೆ ನಡೆದು ಬಂದ ಹಾದಿ ಹೇಗಿತ್ತು?

ಆಶಾ ಭೋಸ್ಲೆ ನಡೆದು ಬಂದ ದಾರಿ ಎಲ್ಲರಿಗೂ ಸ್ಪೂರ್ತಿ

Asha Bhosle Life story: ತಮ್ಮ ಕೋಗಿಲೆ ಕಂಠ ಮತ್ತು ಅಪಾರ ವೈವಿಧ್ಯತೆಯಿಂದ ವಿಶ್ವದಾದ್ಯಂತ ಗೌರವಿಸಲ್ಪಟ್ಟಿದ್ದರೂ, ಆಶಾ ಭೋಸ್ಲೆ ತಮ್ಮ ಜೀವನದ ಆರಂಭಿಕ ಕಷ್ಟಗಳ ಬಗ್ಗೆ, ವಿಶೇಷವಾಗಿ ತಮ್ಮ ಮೊದಲ ವಿವಾಹದ ಬಗ್ಗೆ, ಒಮ್ಮೆ ಮನಬಿಚ್ಚಿ ಮಾತನಾಡಿದ್ದರು. ತಮ್ಮ ದಾಂಪತ್ಯ ಜೀವನದಲ್ಲಿ ಹಿಂಸೆ ಮತ್ತು ಕೆಟ್ಟ ವರ್ತನೆ ಅನುಭವಿಸಿದ್ದಾಗಿ ಹಂಚಿಕೊಂಡಿದ್ದರು.

ಜೆನ್ ಝಿ ತಲೆಮಾರನ್ನೂ ಸೆಳೆಯುವ ಆಶಾ ಭೋಸ್ಲೆ ಹಾಡಿರುವ  10 ಐಕಾನಿಕ್ ಹಾಡುಗಳು

ಪ್ರತಿ ಪೀಳಿಗೆಯ ಧ್ವನಿ ಆಶಾ ಭೋಸ್ಲೆ

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಹಾಡಿರುವ ಹಾಡುಗಳು ಇವತ್ತಿನ ಪೀಳಿಗೆಯೂ ಗುನುಗುನಿಸುತ್ತದೆ. ಇದಕ್ಕೆ ಕಾರಣ ಅವರ ಧ್ವನಿ ಬೀರಿರುವ ಪ್ರಭಾವ. ಚುರಾ ಲಿಯಾ ಹೈ ತುಮ್ನೆ ಜೋ ನಂತಹ ಪ್ರಣಯ ಹಾಡುಗಳಿಂದ ಹಿಡಿದು ಹಂಗಾಮಾ ಹೋ ಗಯಾ ನಂತಹ ಹಲವಾರು ಲವಲವಿಕೆಯ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ ಅವರ ಹಾಡುಗಳು ಇಂದಿನ ಯುವಜನರ ಪ್ಲೇಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಅಂತಹ ಹತ್ತು ಹಾಡುಗಳು ಇಲ್ಲಿವೆ.

"ಅವರ ಹಾಡುಗಳು ಜನರ ಮನಸಲ್ಲಿ ಶಾಶ್ವತ"; ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Asha Bhosle's Death: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ಭಾನುವಾರ ನಿಧನರಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರು ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಧ್ವನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.

ಮಹಿಳಾ ಕೋಟಾ ಮಸೂದೆಗೆ ಬೆಂಬಲ ಕೋರಿದ ಪ್ರಧಾನಿ ಮೋದಿ;  ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ

ಮಹಿಳಾ ಕೋಟಾ ಮಸೂದೆಗೆ ಬೆಂಬಲ ಕೋರಿದ ಪ್ರಧಾನಿ ಮೋದಿ

ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ರಾಜಕೀಯ ಪಕ್ಷಗಳ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಸರ್ಕಾರವು "ಮಹಿಳೆಯರನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ಬದಲು ರಾಜಕೀಯ ಲಾಭ ಪಡೆಯಲು" ಪಾರದರ್ಶಕತೆ ಇಲ್ಲದೆ ಈ ಕ್ರಮವನ್ನು ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಸ್, ಟ್ರಕ್, ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ: 13 ಮಂದಿ ದುರ್ಮರಣ, 30 ಜನರಿಗೆ ಗಾಯ

ಬಸ್, ಟ್ರಕ್, ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ

Road accident: ಬಸ್, ಟ್ರಕ್ ಮತ್ತು ಪಿಕಪ್ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಮೃತಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕೆಟ್ಟ ಸುದ್ದಿ; ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.

US- Iran War: ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’

ಕದನ ವಿರಾಮ: ಹಾರ್ಮುಜ್ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಹಡಗುಗಳ ಸಂಚಾರ ಈಗ ಪುನರಾರಂಭಗೊಂಡಿದೆ. ಸುಮಾರು 20,400 ಟನ್ ಅಡುಗೆ ಅನಿಲವನ್ನು (LPG) ಹೊತ್ತಿರುವ ಜಗ್ ವಿಕ್ರಮ್, ಶನಿವಾರ ಬೆಳಿಗ್ಗೆ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಓಮನ್ ಕೊಲ್ಲಿಯತ್ತ ಸಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದಲ್ಲಿ ಭಯೋತ್ಪಾದನಾ ಜಾಲ ವಿಸ್ತರಣೆ; ಬಯಲಾಯಿತು ಪಾಕಿಸ್ತಾನದ ಉಗ್ರರ ಸಂಚು

ಉತ್ತರಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

ಸಾಮಾಜಿಕ ಮಾಧ್ಯಮ ಬಳಕೆಯು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಪಾಕಿಸ್ತಾನದ ಭಯೋತ್ಪಾದಕರು ಭಯೋತ್ಪಾದನೆಯ ಜಾಲವನ್ನು ವಿಸ್ತರಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಈ ಮೂಲಕ ಹಲವು ರಹಸ್ಯವಾಗಿದ್ದ ಮಾಹಿತಿಗಳು ಬೆಳಕಿಗೆ ಬಂದಿದೆ.

ಭಾರತದ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದ ವಿದೇಶಿ ಪ್ರತಿನಿಧಿಗಳು

ಭಾರತದ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದ ವಿದೇಶಿ ಪ್ರತಿನಿಧಿಗಳು

India election: 22 ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾರತದಲ್ಲಿ ನಡೆದ ಚುನಾವಣೆಯ ನಿರ್ವಹಣೆಯನ್ನು ಶ್ಲಾಘಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್ 8 ಮತ್ತು 9 ರಂದು ವಿಧಾನಸಭಾ ಚುನಾವಣೆಗಳ ಪ್ರಮಾಣ ಮತ್ತು ನಿರ್ವಹಣೆಯನ್ನು ವೀಕ್ಷಿಸಲು ಮೂರು ಪ್ರದೇಶಗಳಿಗೆ ಭೇಟಿ ನೀಡಿದರು.

ಅವಾಚ್ಯ ಶಬ್ಧಗಳಿಂದ ನಿಂದಿಸಿದರೆ ರೂ. 500 ದಂಡ: ಈ ಗ್ರಾಮದ ರೂಲ್ಸ್‌ ಒಮ್ಮೆ ಕೇಳಲೇ ಬೇಕು

ಈ ಗ್ರಾಮದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರೆ ರೂ. 500 ದಂಡ!

Abuse-free village: ಮಧ್ಯಪ್ರದೇಶದ ಬುರಹಾನ್ಪುರ ಜಿಲ್ಲೆಯ ಒಂದು ಗ್ರಾಮವು ತನ್ನನ್ನು ನಿಂದನೆ ಮಾತುಗಳಿಲ್ಲದ ಗ್ರಾಮ ಎಂದು ಘೋಷಿಸಿಕೊಂಡಿದೆ. ಅಸಭ್ಯ ಭಾಷೆಯ ಬಳಕೆಗೆ ಇಲ್ಲಿ ಕಟ್ಟುನಿಟ್ಟಿನ ದಂಡಗಳನ್ನು ವಿಧಿಸಿದೆ. ಮುಂಬೈನಲ್ಲಿ ಸುಮಾರು 20 ವರ್ಷಗಳ ಕಾಲ ಕಳೆದ ನಂತರ ಕೆಲವು ತಿಂಗಳ ಹಿಂದೆ ಬೋರ್ಸರ್‌ಗೆ ಮರಳಿದ ಅಶ್ವಿನ್ ಪಾಟೀಲ್ ಇದರ ನೇತೃತ್ವ ವಹಿಸಿದ್ದರು.

ಕಿವಿಯಲ್ಲೇ ಸಿಡಿಯಿತು ಇಯರ್‌ ಬಡ್ಸ್‌; MBBS ವಿದ್ಯಾರ್ಥಿನಿ ಹಂಚಿಕೊಂಡ ಭಯಾನಕ ವಿಡಿಯೋದಲ್ಲೇನಿದೆ?

MBBS ವಿದ್ಯಾರ್ಥಿನಿಯ ಕಿವಿಯಲ್ಲೇ ಸಿಡಿಯಿತು ಇಯರ್‌ ಬಡ್ಸ್‌

earbud exploded in ear: ರಾಜಸ್ಥಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ವೈರ್‌ಲೆಸ್ ಇಯರ್‌ಬಡ್ ಬಳಕೆಯ ಸಮಯದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಕಿವಿಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆದ ಚರ್ಚೆಯ ನಂತರ, ಜೆಬಿಎಲ್ ಇಯರ್‌ಬಡ್ ದೂರನ್ನು ಗಮನಿಸಿರುವುದಾಗಿ ಒಪ್ಪಿಕೊಂಡಿದೆ.

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?  ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?

ಉತ್ತರ ಪ್ರದೇಶದ ಕಿಂತೂರು ಗ್ರಾಮವು ಖೊಮೇನಿ ಅವರ ವಂಶದ ಮೂಲವಾಗಿ ಪ್ರಸಿದ್ಧಿ ಪಡೆದಿದೆ. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಭಾರತದಿಂದ ಇರಾನ್‌ಗೆ ವಲಸೆ ಹೋಗಿ ಅಲ್ಲಿ ನೆಲೆಸಿದ ಪರಿಣಾಮ, ಈ ಗ್ರಾಮವು ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಕೊಂಡಿಯಾಗಿ ಇಂದಿಗೂ ಗುರುತಿಸಿಕೊಂಡಿದೆ.

ವಿಮಾನದ ಸೀಟುಗಳಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳು! ಇಸ್ಲಾಮಾಬಾದ್‌ಗೆ  ತೆರಳಿದ ವಿಮಾನದಲ್ಲಿತ್ತು ಕಣ್ಣೀರ ಕಥೆ

ಮಿನಾಬ್ ಸ್ಮರಣೆಯಲ್ಲಿ ಪಾಕ್‌ಗೆ ಹಿಂದಿರುಗಿದ ಇರಾನ್ ನಿಯೋಗ

ಅಮೆರಿಕದೊಂದಿಗೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳಿದ ಇರಾನ್ ನಿಯೋಗ, ಮಿನಾಬ್ ದಾಳಿಯಲ್ಲಿ ಸಾವನ್ನಪ್ಪಿದ ಮಕ್ಕಳ ನೆನಪಿಗಾಗಿ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು ಮತ್ತು ಚಿತ್ರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಜಗತ್ತಿನ ಗಮನ ಸೆಳೆದಿದೆ. ‘Minab168’ ಹೆಸರಿನ ಈ ಸಂಕೇತಾತ್ಮಕ ಕ್ರಮ ಯುದ್ಧದ ಭೀಕರ ಮಾನವೀಯ ನಷ್ಟವನ್ನು ಒತ್ತಿಹೇಳುತ್ತದೆ.

ಹಾಡಹಗಲೇ ವಕೀಲನನ್ನು ಗುಂಡಿಕ್ಕಿ ಕೊಂದ ಹಂತಕರು; ನೋಡ ನೋಡುತ್ತಲೇ ಬೈಕ್‌ನಲ್ಲಿ ಪರಾರಿ

ವಕೀಲರ ಗುಂಡಿಕ್ಕಿ ಹತ್ಯೆ: ಹಂತಕರು ಬೈಕ್‌ನಲ್ಲಿ ಪರಾರಿ

Crime News: ಹಾಡಹಗಲೇ ವಕೀಲರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಹಿರಿಯ ವಕೀಲ ರಾಜೀವ್ ಸಿಂಗ್ ಮೃತ ದುರ್ದೈವಿ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ;  ಗಂಟಲು ಸೀಳಿ ಕೊಂದ ಶಾಲಾ ಹಾಸ್ಟೆಲ್ ಸೆಕ್ಯುರಿಟಿ!

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!

ಬಿಹಾರದ ಜಹಾನಾಬಾದ್ ಜಿಲ್ಲೆಯಲ್ಲಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕ್ಯಾಂಟೀನ್ ಕಾವಲುಗಾರನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ, ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇರಾನ್ ಕದನ ವಿರಾಮದ ನಡುವೆ ದೇಶದ ಇಂಧನ ಭದ್ರತೆ ಕುರಿತ ಮಾತುಕತೆಗಾಗಿ ಯುಎಇಗೆ ತೆರಳಿದ ಜೈಶಂಕರ್

ಕದನ ವಿರಾಮದ ಸಂದರ್ಭದಲ್ಲಿ ಯುಎಇಗೆ ತೆರಳಿದ ಜೈಶಂಕರ್

ಇರಾನ್ ಯುದ್ಧ ಪ್ರಾರಂಭವಾದ ಬಳಿಕ ವಿಶ್ವದಲ್ಲೇ ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟನ್ನು ಎದುರಿಸಿತ್ತು. ಇದರ ಪರಿಣಾಮ ಮುಂದಿನ ಹಲವಾರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ದೇಶದ ಇಂಧನ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಇದೀಗ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದ್ದಾರೆ.

ಅತ್ಯಾಚಾರ, ಬಲವಂತದ ಮತಾಂತರ ಆರೋಪ;  ಹೈಕೋರ್ಟ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕೋರ್ಟ್‌ ಆವರಣದಲ್ಲೇ ಮಹಿಳೆ ಆತ್ಮಹತ್ಯೆ ಯತ್ನ

ಲಕ್ನೋದಲ್ಲಿರುವ ಅಲಹಾಬಾದ್ ಹೈಕೋರ್ಟ್ ಪೀಠದಲ್ಲಿ ಮಹಿಳೆಯೊಬ್ಬರು ಮೇಲ್ಛಾವಣಿ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಆತಂಕ ಸೃಷ್ಟಿಸಿದೆ. ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಮತಾಂತರದ ಆರೋಪಗಳ ಹಿನ್ನೆಲೆಯಲ್ಲಿ ಒತ್ತಡ ಎದುರಿಸುತ್ತಿದ್ದ ಮಹಿಳೆ ಈ ಕ್ರಮಕ್ಕೆ ಮುಂದಾಗಿದ್ದು, ಬಳಿಕ ಅಧಿಕಾರಿಗಳು ಮತ್ತು ವಕೀಲರ ಮಧ್ಯಪ್ರವೇಶದಿಂದ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದುವೆಯಾಗಲು ತಿರಸ್ಕರಿಸಿದಕ್ಕೆ ಎಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ ಪಾಪಿ; ಮನನೊಂದ ಯುವತಿ ಆತ್ಮಹತ್ಯೆ

ಎಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ ಆರೋಪಿ

Crime News: ಮದುವೆಯಾಗಲು ನಿರಾಕರಿಸಿದ ಕಾರಣ ವ್ಯಕ್ತಿಯೊಬ್ಬ ಯುವತಿಗೆ ಎಚ್‌ಐವಿ ಪಾಸಿಟಿವ್ ರಕ್ತವನ್ನು ಚುಚ್ಚಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿತ್ತು. ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ, ಏ.10 ರಂದು ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆರೋಪಿ ಮನೋಹರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ; ಸಂಭಾಷಣೆ ಹೇಗಿತ್ತು?

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ

ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸುತ್ತಿರುವ ಈ ವಿಡಿಯೊ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

Loading...