ಕುಂಬಾರನಿಗೆ ಶಾಕ್ ಕೊಟ್ಟ ಆದಾಯ ತೆರಿಗೆ ಇಲಾಖೆ
ಮಣ್ಣಿನ ಮಡಿಕೆ ಮಾಡಿ ಕೇವಲ 2 ರೂ. ಗೆ ಮಾರಾಟ ಮಾಡುವ ಉತ್ತರಪ್ರದೇಶದ ಕುಂಬಾರನಿಗೆ ಆದಾಯ ತೆರಿಗೆ ಇಲಾಖೆಯು ಶಾಕ್ ಕೊಟ್ಟಿದೆ. ದಿನಕ್ಕೆ ಕನಿಷ್ಠ ಆದಾಯ ಹೊಂದಿರುವ ಕುಂಬಾರನಿಗೆ 1.25 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ ಆತನ ಹೆಸರಿನಲ್ಲಿ ಕಂಪೆನಿ ಇದೆ ಎಂದು ಹೇಳಲಾಗಿದ್ದು, ಇದು ತನಗೆ ಗೊತ್ತೇ ಇಲ್ಲ. ತನ್ನ ಪಾನ್ ಮತ್ತು ಆಧಾರ್ ದುರುಪಯೋಗವಾಗಿದೆ ಎಂದು ಆತ ಆರೋಪಿಸಿದ್ದಾನೆ.