ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

Crime News: ಟ್ಯೂಶನ್‌ ಮುಗಿಸಿ ಮನೆಗೆ ಬರ್ತಿದ್ದ ಬಾಲಕಿ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ; ರಣಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಬಾಲಕಿ ಮೇಲೆ ಡೆಡ್ಲಿ ಅಟ್ಯಾಕ್‌! ಭೀಕರ ದೃಶ್ಯ ಇಲ್ಲಿದೆ ನೋಡಿ

17-Year-Old Girl Shot: ಹರಿಯಾಣದ ಫರೀದಾಬಾದ್‌ನಲ್ಲಿ 17 ವರ್ಷದ ಬಾಲಕಿಯನ್ನು ಅವಳ ಟ್ಯೂಷನ್‌ಮೇಟ್ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಬಾಲ್ಲಭಗಢದ ಶ್ಯಾಮ್ ಕಾಲೋನಿಯಲ್ಲಿನ ತನ್ನ ಮನೆಯ ಸಮೀಪವಿದ್ದಾಗಲೇ ಈ ದಾಳಿ ನಡೆದಿದೆ. ವರದಿಗಳ ಪ್ರಕಾರ, ಸಂಜೆ ಸುಮಾರು 5 ಗಂಟೆಯ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿಯು ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್‌ ವೈರಲ್‌

ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್‌ ವೈರಲ್‌

Spitting on Rotis at Wedding: ಮದುವೆಗೆ ಬಂದ ಅತಿಥಿಗಳಿಗೆ ಊಟಕ್ಕೆ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಆ ರೊಟ್ಟಿಯ ಹಿಟ್ಟಿನ ಮೇಲೆ ಉಗುಳುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರಲು ಸೋಶಿಯಲ್ ಮಿಡಿಯಾದಲ್ಲಿ ಅಧಿಕಾರಿಗಳನ್ನು ಟ್ಯಾಗ್ ಮಾಡಿ ವಿಡಿಯೊ ಪೋಸ್ಟ್ ಹಂಚಿಕೊಳ್ಳಲಾಗಿದೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Viral Video: ನೆಚ್ಚಿನ ಪತ್ನಿಗೆ ಚಿನ್ನದ ಸರ ಕೊಡಿಸಲು ಈ ಭೂಪ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಚಿಲ್ಲರೆ ಕೂಡಿಟ್ಟು ಪತ್ನಿಗೆ ಚಿನ್ನದ ಸರ ಕೊಡಿಸಿದ ಪತಿ!

ವ್ಯಕ್ತಿಯೊಬ್ಬ ಒಂದು ವರ್ಷಕ್ಕೂ ಹೆಚ್ಚು ಕಾಲ ಹಣ ಕೂಡಿಟ್ಟು ತನ್ನ ಚಿಲ್ಲರೆ ಹಣ ದಲ್ಲಿಯೇ ಪತ್ನಿಗೆ ಚಿನ್ನದ ಸರ ಕೊಡಿಸಿದ್ದ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ. ಚಿಲ್ಲರೆ ಸಂಗ್ರಹ ಮಾಡಿದ್ದ ಎರಡು ಚೀಲಗಳ ಸಮೇತ ಆ ವ್ಯಕ್ತಿ ಆಭರಣ ಮಳಿಗೆಗೆ ಬಂದಿದ್ದು ಬಳಿಕ ಅದೇ ಚಿಲ್ಲರೆ ಹಣದಲ್ಲಿಯೇ ಚಿನ್ನದ ಸರ ಖರೀದಿ ಮಾಡಿದ್ದಾನೆ‌. ಸದ್ಯ ಈ ವ್ಯಕ್ತಿಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ಮೇಲಿನ ಆತನ ಪ್ರೀತಿ ಮತ್ತು ಮುಗ್ದತೆಯೂ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.. 22 ವರ್ಷದ ಅಭಿಷೇಕ್ ಯಾದವ್ ಅವರು ತನ್ನ ಪತ್ನಿಗೆ ಚಿನ್ನದ ಸರ ಕೊಡಿಸಬೇಕು ಎಂಬ ಕಾರಣಕ್ಕೆ ಒಂದು ವರ್ಷಕ್ಕು ಹೆಚ್ಚು ಕಾಲ ಹಣ ಸಂಗ್ರಹಿಸಿದ್ದು ತಿಳಿದು ಬಂದಿದೆ.

physical assault Case: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌... ಮೂವರು ಕಾಮುಕರ ಮೇಲೆ ಫೈರಿಂಗ್‌

ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌; ಆರೋಪಿಗಳಿಗೆ ಗುಂಡೇಟು

Coimbatore physical assault Case: ತಮಿಳುನಾಡಿನ ಕೊಯಮತ್ತೂರಿನ ವಿಮಾನ ನಿಲ್ದಾಣದ ಸಮೀಪ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಇದೀಗ ರಾಜಕೀಯ ಸ್ವರೂರ ಪಡೆದುಕೊಂಡಿದ್ದು, ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ ನಡೆಸಿದೆ.

Bihar Assembly Election: ಬಿಹಾರ ವಿಧಾನಸಭಾ ಚುನಾವಣೆ ಯಾವಾಗ? ಎಷ್ಟು ಹಂತಗಳಲ್ಲಿ ಮತದಾನ? ಸಂಪೂರ್ಣ ವಿವರ ಇಲ್ಲಿದೆ

ಬಿಹಾರದಲ್ಲಿ ಮತದಾನ ಯಾವಾಗ?

When is bihar election 2025: ಬಿಹಾರದಲ್ಲಿ 2025ರ ವಿಧಾನಸಭಾ ಚುನಾವಣೆಯ ಪೂರ್ಣ ವೇಳಾಪಟ್ಟಿ ರಾಜ್ಯ ಚುನಾವಣೆ ಆಯೋಗದಿಂದ ಪ್ರಕಟವಾಗಿದೆ. ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಮುಖ್ಯ ದಿನಾಂಕಗಳು, ಮತದಾನ ದಿನಗಳು ಮತ್ತು ಫಲಿತಾಂಶ ಪ್ರಕಟಣೆಯ ದಿನಾಂಕಗಳು ಸಹ ಪ್ರಕಟಗೊಂಡಿವೆ. ಮತದಾರರು ತಮ್ಮ ಪ್ರತಿನಿಧಿಗಳನ್ನು ಆರಿಸಲು ಮುಂದಾಗುತ್ತಿದ್ದಾರೆ. ಮೊದಲ ಹಂತದ ಮತದಾನ ನವೆಂಬರ್ 6 ರಂದು ಮತ್ತು ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಎರಡೂ ಹಂತಗಳಲ್ಲಿ 2,616 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Viral Video: ಚಿಕನ್ ಫ್ರೈ ವಿಚಾರಕ್ಕೆ ಮದ್ವೆ ಮನೆ ಆಯ್ತು ರಣಾಂಗಣ! ಬಂಧುಗಳ ನಡುವೆ ಮಾರಾಮಾರಿ

ಚಿಕನ್ ಫ್ರೈ ವಿಚಾರದಲ್ಲಿ ಮದುವೆ ಮನೆಯಲ್ಲಿ ಬಿಗ್‌ ಫೈಟ್‌!

Wedding Event Turns into Battlefield: ಮದುವೆ ಸಮಾರಂಭವೊಂದು ಅಚ್ಚರಿಯ ರೀತಿಯಲ್ಲಿ ಅಸ್ತವ್ಯಸ್ತಗೊಂಡಿದೆ. ಊಟದ ವೇಳೆ ಚಿಕನ್ ಫ್ರೈ ಹಂಚಿಕೆಯಲ್ಲಿ ಉಂಟಾದ ತಕರಾರಿನಿಂದ ಅತಿಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದು ಹೊಯ್‍ಕೈ ಮಟ್ಟಕ್ಕೆ ತಲುಪಿದೆ. ಚಿಕನ್ ಫ್ರೈಗಳನ್ನು ಬಡಿಸುವ ಬಗ್ಗೆ ವಧು ಮತ್ತು ವರನ ಕಡೆಯವರ ನಡುವೆ ಜಗಳ ಭುಗಿಲೆದ್ದಿದೆ. ವರನ ಕುಟುಂಬದ ಕೆಲವು ಸದಸ್ಯರು ಅಲ್ಪ ಪ್ರಮಾಣದ ಖಾದ್ಯವನ್ನಷ್ಟೇ ಬಡಿಸಲಾಗುತ್ತಿದೆ ಎಂದು ದೂರಿದರು. ಸ್ಥಳದಲ್ಲಿದ್ದವರು ಘಟನೆಯ ದೃಶ್ಯವನ್ನು ಚಿತ್ರೀಕರಿಸಿದ್ದು, ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅದು ಭಾರಿ ವೈರಲ್ ಆಗಿದೆ.

Earthquake: ವಿಶಾಖಪಟ್ಟಣದಲ್ಲಿ ಪ್ರಬಲ ಭೂಕಂಪ? ಆತಂಕದಲ್ಲಿ ಜನ! ಅತ್ತ ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ

ವಿಶಾಖಪಟ್ಟಣದಲ್ಲಿ ಭೂಕಂಪ? ವೈರಲ್‌ ಸುದ್ದಿಯ ಅಸಲಿತ್ತೇನು?

Earthquake in Andhra Pradesh: ಇಂದು ಆಂಧ್ರಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ. ಹಲವು ಬಳಕೆದಾರರು, ತಮ್ಮ ಪ್ರದೇಶದಲ್ಲಿ ನೆಲ ಕಂಪಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿಯೂ ಪ್ರಬಲ ಭೂಕಂಪನ ಸಂಭವಿಸಿದ್ದು, ಅದರ ಪರಿಣಾಮಗಳು ಸುತ್ತಮುತ್ತಲಿನ ಪ್ರದೇಶಗಳಿಗೂ ತಲುಪಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜನರಿಗೆ ಶಾಂತವಾಗಿರಲು ಹಾಗೂ ಅಧಿಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲು ಸಲಹೆ ನೀಡಲಾಗಿದೆ.

UIDAI Aadhaar Update:  ಆಧಾರ್‌ ಕಾರ್ಡ್‌ನಲ್ಲಿರೋ ಫೋಟೋ ಚೇಂಜ್‌ ಮಾಡ್ಬೇಕೆ? ಇಲ್ಲಿದೆ ಸರಳ ಮಾರ್ಗ

ಆಧಾರ್‌ ಕಾರ್ಡ್‌ನ ಫೋಟೋ ಚೇಂಜ್‌ಗೆ ಇಲ್ಲಿದೆ ಸರಳ ಮಾರ್ಗ!

Simple Steps UIDAI Aadhaar Update: ಆಧಾರ್ ಕಾರ್ಡ್ ನಮ್ಮ ಅತ್ಯಂತ ಮುಖ್ಯವಾದ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಇದರಲ್ಲಿರುವ ಹೆಸರು, ವಿಳಾಸ, ಜನ್ಮದಿನಾಂಕ ಮತ್ತು ಫೋಟೋಗಳು ನಿಮ್ಮ ಗುರುತಿನ ಪ್ರಮಾಣವಾಗಿ ಬಳಸಲಾಗುತ್ತವೆ. ಆದರೆ, ಕೆಲವೊಮ್ಮೆ ಫೋಟೋ ಹಳೆಯದಾಗಿರಬಹುದು ಅಥವಾ ಸರಿಯಾಗಿ ಕಾಣದಿರಬಹುದು. ಇಂತಹ ಸಂದರ್ಭಗಳಲ್ಲಿ, ನೀವು ಸುಲಭವಾಗಿ ಹೊಸ ಫೋಟೋವನ್ನು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬಹುದು. ಇಲ್ಲಿ ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಸರಳ ಹಂತಗಳನ್ನು ತಿಳಿದುಕೊಳ್ಳೋಣ.

Bihar Election ground report by Raghav Sharma Nidle: ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಅಹಿಯಾಪುರ ಟೋಲಿಯಲ್ಲಿ ಸುಮಾರು 1400 ಮತದಾರರಿದ್ದಾರೆ. ಎನ್ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟ, ಜನ ಸುರಾಜ್‌ ಪಾರ್ಟಿ ಸೇರಿ ಯಾವ ಪಕ್ಷದವರೂ ಈವರೆಗೆ ಇಲ್ಲಿ ಮತ ಕೇಳಲು ಬಂದಿಲ್ಲ. ಮತ ಕೇಳಲು ಬರುವ, ನಮ್ಮ ಸಮಸ್ಯೆಗಳನ್ನು ಆಲಿಸುವ ಮಂದಿಗೆ ಮತ ಹಾಕುತ್ತೇವೆ ಎಂದು ನಿವಾಸಿ ಗರು ವಿಶ್ವವಾಣಿ ಜತೆ ಮಾತನಾಡಿದರು. ಅಷ್ಟಕ್ಕೂ, ಮತ ಹಾಕಿ ಏನು ಪ್ರಯೋಜನ ಹೇಳಿ? ನಮ್ಮ ಜೀವನ ಹೀಗೆ ಇರುತ್ತದಲ್ಲ ಎನ್ನುತ್ತಾರೆ ಅವರು.

Air India Plain Crash: ʼಹೆಂಡತಿ, ಮಗುವಿನೊಂದಿಗೂ ಮಾತನಾಡಲಾಗುತ್ತಿಲ್ಲʼ; ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಹೇಳಿದ್ದೇನು?

ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?

ಜೂನ್ 12 ರಂದು ಅಹಮದಾಬಾದ್‌ನಲ್ಲಿ 241 ಜೀವಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್‌ಕುಮಾರ್ ರಮೇಶ್ ತಮ್ಮ ಜೀವನ ಅತ್ಯಂತ ಕಷ್ಟಕರ ದಿನಗಳ ಕುರಿತು ಮಾತನಾಡಿದ್ದಾರೆ. ರಮೇಶ್ ಅವರಿಗೆ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಇರುವುದು ಪತ್ತೆಯಾಗಿದೆ ಆದರೆ ಭಾರತದಿಂದ ಲೀಸೆಸ್ಟರ್‌ಗೆ ಹಿಂದಿರುಗಿದಾಗಿನಿಂದ ಚಿಕಿತ್ಸೆ ಪಡೆದಿಲ್ಲ ಎಂದು ತಿಳಿದು ಬಂದಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವು ಟೇಕ್ ಆಫ್ ಆದ ತಕ್ಷಣವೇ ಪತನಗೊಂಡಿತು. ಅಹಮದಾಬಾದ್​​ ವಿಮಾನ ನಿಲ್ದಾಣದಿಂದ ಲಂಡನ್​ಗೆ ಹೊರಟಿದ್ದ ವಿಮಾನವು ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು.

Road Accident: ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ; 5 ಕಿ.ಮೀ ರಸ್ತೆಯುದ್ದಕ್ಕೂ ಸರಣಿ ಅಪಘಾತ, 19 ಮಂದಿ ಸಾವು

ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ; 5 ಕಿ.ಮೀ ರಸ್ತೆಯುದ್ದಕ್ಕೂ ಸರಣಿ ಅಪಘಾತ

ರಾಜಸ್ಥಾನದ (Rajastan) ಜೈಪುರದಲ್ಲಿ (Jaipur) ಭೀಕರ ಅಪಘಾತವೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ಡಂಪರ್ ಟ್ರಕ್ ಚಾಲಕನೊಬ್ಬ ಐದು (Road Accident) ಕಿಲೋಮೀಟರ್ ರೋಡ್‌ನಾದ್ಯಂತ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಚಾಲಕ ಕುಡಿದ ಮತ್ತಿನಲ್ಲಿ ಟ್ರಕ್‌ ಚಲಾಯಿಸಿದ್ದಾನೆ. ಸರಣಿ ಅಪಘಾತದ ಬಳಿಕವೂ ಆತ ವಾಹನವನ್ನು ಚಲಾಯಿಸುತ್ತಲೇ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭೀಕರ ಅಪಘಾತದಲ್ಲಿ ಹಲವಾರು ವಾಹನಗಳು ಜಖಂಗೊಂಡ ನಂತರ ಆತ ಟ್ರಕ್‌ ನಿಲ್ಲಿಸಿದ್ದಾನೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಅಪಘಾತ ಮಾಡಿದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Narendra Modi: ಪ್ರಧಾನಿ ಮೋದಿ ವಿಶ್ವ ಚಾಂಪಿಯನ್‌ ಭಾರತೀಯ ಮಹಿಳಾ ತಂಡದ ಭೇಟಿ ಸಾಧ್ಯತೆ

ನ.5 ರಂದು ಪ್ರಧಾನಿ ಮೋದಿ ಭಾರತೀಯ ಮಹಿಳಾ ತಂಡದ ಭೇಟಿ ಸಾಧ್ಯತೆ

ವಿಶ್ವಕಪ್‌ ಗೆದ್ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ(BCCI) (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಗದು ಬಹುಮಾನವನ್ನು ಘೋಷಿಸಿದೆ. ಭಾರತೀಯ ತಂಡ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ನಗದು ಬಹುಮಾನವನ್ನು ಘೋಷಿಸಿದರು.

Road Accident: ನಿಲ್ಲುತ್ತಿಲ್ಲ ಮಾರಣಹೋಮ; ಕಳೆದೊಂದು ತಿಂಗಳಲ್ಲಿ ಡೆಡ್ಲಿ ಆಕ್ಸಿಡೆಂಟ್ಸ್‌ಗೆ ಬಲಿಯಾದವರೆಷ್ಟು?

ಕಳೆದೊಂದು ತಿಂಗಳಲ್ಲಿ ಡೆಡ್ಲಿ ಆಕ್ಸಿಡೆಂಟ್ಸ್‌ಗೆ ಬಲಿಯಾದವರೆಷ್ಟು?

Deadly Accident:ರಾಜ್ಯವೂ ಸೇರಿದಂತೆ ದೇಶಾದ್ಯಂತ ರಸ್ತೆ ಅಪಘಾತಗಳ ಮಾರಣಹೋಮ ನಿಲ್ಲುತ್ತಲೇ ಮುಂದುವರಿದೆ. ಕಳೆದೊಂದು ತಿಂಗಳಲ್ಲಂತೂ ನಿತ್ಯ ಭೀಕರ ಅಪಘಾತಗಳ ವರದಿ ಎಡೆಬಿಡದೆ ಕೇಳಿ ಬರುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ರಸ್ತೆ ಗುಂಡಿಗಳ ಕಾರಣ ಅಥವಾ ಬಿಎಂಟಿಸಿ ಚಾಲಕ ಅಜಾಗೂರಕತೆ ಪರಿಣಾಮ ನಿತ್ಯ ಒಂದಿಲ್ಲೊಂದು ಜೀವ ಬಲಿಯಾಗುತ್ತಲೇ ಇವೆ. ಹಾಗಾದರೆ ದೇಶದಲ್ಲಿ ಕಳೆದೊಂದು ತಿಂಗಳಲ್ಲಿ ನಡೆದ ಡೆಡ್ಲಿ ಅಪಘಾತದ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

Telangana Road Accident: ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ; ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 20 ಮಂದಿ ಸಾವು

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ; 20 ಮಂದಿ ಸಾವು

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಸೋಮವಾರ (ನವೆಂಬರ್‌ 3) ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತಕ್ಕೀಡಾದ ಬಸ್‌ ತಂಡೂರ್‌ನಿಂದ ಹೈದರಾಬಾದ್‌ ಕಡೆಗೆ ತೆರಳುತ್ತಿತ್ತು.

Bihar Election ground report by Raghav Sharma Nidle: ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿ ಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ. ಆರ್.ಜೆ.ಡಿ.ಯಿಂದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ವ್ಯಕ್ತಿ ಸ್ಪರ್ಧಿಸುವುದು ದೊಡ್ಡ ವಿಷಯವಲ್ಲ, ಏಕೆಂದರೆ ಆ ಪಕ್ಷಕ್ಕೇ ಬಾಹುಬಲಿ ಹಿನ್ನೆಲೆ ಇದೆ.

Pushkar Fair: 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು; ವಿಮೆ ಹಣಕ್ಕಾಗಿ ಮೂಕ ಪ್ರಾಣಿಯ ಕೊಲೆ?

21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು

Pushkar Animal Fair in Rajasthan: ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಆಗಿ ಸಾವನ್ನಪ್ಪಿದ್ದು, ಪ್ರಾಣಿಪ್ರುಯರು ಆಘಾತ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್‌ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು.

Shashi Tharoor: ಇಂಗ್ಲೆಂಡ್‌ ವಿದ್ವಾಂಸರಿಗೆ ಭಾರತ ಪ್ರವೇಶ ನಿರಾಕರಣೆ: ಬಿಜೆಪಿಯ ಸ್ವಪನ್ ದಾಸ್‌ಗುಪ್ತಾಗೆ  ಶಶಿ ತರೂರ್ ಬೆಂಬಲ

ಭಾರತಕ್ಕೆ ದಪ್ಪ ಚರ್ಮ ಬೇಕು ಎಂದ ತರೂರ್

ಇಂಗ್ಲೆಂಡ್‌ ಮೂಲದ ಪ್ರಸಿದ್ಧ ಹಿಂದಿ ವಿದ್ವಾಂಸ ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಅವರಿಗೆ ಭಾರತ ಪ್ರವೇಶ ನಿರಾಕರಿಸಿದ ಕೇಂದ್ರ ಸರ್ಕಾರದ ರೀತಿಯನ್ನು ಬಿಜೆಪಿ ನಾಯಕ ಮತ್ತು ಹಿರಿಯ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಟೀಕಿಸಿದ್ದಾರೆ. ಈ ಕುರಿತು ಅವರು ಬರೆದಿರುವ ಅಂಕಣಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂತಹ ಕ್ರಮಗಳು ಭಾರತದ ಪ್ರತಿಷ್ಠೆಗೆ ವಿಮರ್ಶಾತ್ಮಕ ಲೇಖನಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ ಎಂದು ತರೂರ್ ಎಚ್ಚರಿಸಿದ್ದಾರೆ. ಭಾರತವು ದಪ್ಪ ಚರ್ಮ, ವಿಶಾಲ ಮನಸ್ಸು ಮತ್ತು ದೊಡ್ಡ ಹೃದಯವನ್ನು ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

Rajasthan Road Accident: ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು 15 ಮಂದಿ ಸಾವು; ರಾಜಸ್ಥಾನದಲ್ಲಿ ಘೋರ ಅವಘಡ

ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು 15 ಮಂದಿ ಸಾವು

Road Accident: ರಾಜಸ್ಥಾನದಲ್ಲಿ ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾಜಸ್ಥಾನದ ಫಲೋಡಿಯಲ್ಲಿ ನವೆಂಬರ್‌ 2ರಂದು ಈ ಅವಘಡ ನಡೆದಿದೆ. ಮೃತರು ಬಿಕಾನೇರ್‌ನ ಕೊಲಾಯತ್‌ಗೆ ಭೇಟಿ ನೀಡಿ ಜೋಧ್‌ಪುರದ ಸುರ್‌ಸಾಗರ್‌ಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ.

Bihar Assembly Election: ಬಿಹಾರ ಚುನವಣಾ ರ‍್ಯಾಲಿಯಲ್ಲಿ ಆರ್‌ಜೆಡಿ ಬೆಂಬಲಿಗರಿಂದ ಹಲ್ಲೆ: ಮನೋಜ್ ತಿವಾರಿ ಆರೋಪ

ಚುನಾವಣಾ ರ‍್ಯಾಲಿಯಲ್ಲಿ ಹಲ್ಲೆ: ಬಿಜೆಪಿ ಸಂಸದ

ಆರ್‌ಜೆಡಿ ಬೆಂಬಲಿಗರು ಬಿಹಾರ ಚುನಾವಣಾ ರ‍್ಯಾಲಿ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಹಾರದ ಡುಮ್ರಾನ್‌ನಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆರ್‌ಜೆಡಿ ಗೂಂಡಾಗಿರಿ ನಡೆಸುತ್ತಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ. ಈಶಾನ್ಯ ದೆಹಲಿಯಿಂದ ಮೂರು ಬಾರಿ ಸಂಸದರಾಗಿರುವ ತಾವು ಘರ್ಷಣೆ ತೀವ್ರವಾಗುವುದನ್ನು ತಪ್ಪಿಸಲು ಸ್ಥಳದಿಂದ ಹೊರಟು ಬಂದಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೂ ಮೊದಲು ನಡೆದ ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಜನ ಸುರಾಜ್ ಪಕ್ಷದ ಬೆಂಬಲಿಗ ದುಲರ್ ಚಂದ್ ಯಾದವ್ ಜೆಡಿ(ಯು) ಜತೆಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು.

Rahul Gandhi: ಬಿಹಾರದಲ್ಲಿ ಹೆಚ್ಚಾಯ್ತು ಚುನಾವಣೆ ಕಾವು; ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

Bihar Assembly Election 2025: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ನಾನಾ ಕಸರತ್ತಿನಲ್ಲಿ ನಿರತವಾಗಿವೆ. ಇದೀಗ ಬೇಗುಸರಾಯ್‌ನ ಕೊಳವೊಂದಕ್ಕೆ ಹಾರಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಮೀನು ಹಿಡಿದು ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ದೋಣಿಯಿಂದ ನೀರಿಗೆ ಜಿಗಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಬೆರಗುಗಣ್ಣನಿಂದ ನೋಡಿದರೆ, ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ನಡೆಯನ್ನು ಶ್ಲಾಘಿಸಿದ್ದಾರೆ.

Reliance Jio: ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ

ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ

Google AI Pro: ರಿಲಯನ್ಸ್ ಮತ್ತು ಗೂಗಲ್ ಜಂಟಿಯಾಗಿ ಭಾರತದ ಎಐ ಕ್ರಾಂತಿಗೆ ವೇಗ ನೀಡಲು ಪಾಲುದಾರಿಕೆ ಘೋಷಿಸಿವೆ. ಜಿಯೋ ಬಳಕೆದಾರರಿಗೆ 35,100 ರೂ. ಮೌಲ್ಯದ ಗೂಗಲ್ ಎಐ ಪ್ರೊ ಉಚಿತವಾಗಿ ಸಿಗಲಿದೆ. ಇದರಿಂದ 2 ಟಿಬಿ ಕ್ಲೌಡ್ ಸ್ಟೋರೇಜ್, ಗೂಗಲ್ ಜೆಮಿನಿ 2.5 ಪ್ರೊ ಬಳಕೆಗೆ ಅವಕಾಶ ಸಿಗಲಿದೆ.

ISRO: ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ  ಯಶಸ್ವಿ ಉಡಾವಣೆ

ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ ಯಶಸ್ವಿ ಉಡಾವಣೆ

Communication Satellite CMS-03: ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ನವೆಂಬರ್‌ 2ರಂದು ಇಸ್ರೋದ ಅತ್ಯಂತ ತೂಕದ ಎಂಎಸ್‌-03 ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಅತ್ಯಂತ ಭಾರವಾದ ಸಂವಹನ ಉಪಗ್ರಹವಾದ ಸಿಎಂಎಸ್‌-03 ಹೊತ್ತ ಇಸ್ರೋ ಹೆವಿ-ಲಿಫ್ಟ್ ರಾಕೆಟ್, 'ಬಾಹುಬಲಿ' ಎಂದು ಕರೆಸಿಕೊಳ್ಳುವ ಎಲ್‌ವಿಎಂ3-ಎಂ5 ಶ್ರೀಹರಿಕೋಟದ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಚಿಮ್ಮಿದೆ. ಎಲ್‌ವಿಎಂ3-ಎಂ5 ರಾಕೆಟ್‌ನಲ್ಲಿ ಸುಮಾರು 16-20 ನಿಮಿಷಗಳ ಹಾರಾಟ ನಡೆಸಿದ ನಂತರ ಉಪಗ್ರಹವು ಸುಮಾರು 180 ಕಿ.ಮೀ ಎತ್ತರವನ್ನು ತಲುಪಿ ಬೇರ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

Viral Video: ಪಾಕಿಸ್ತಾನದಲ್ಲಿ ಕೇವಲ 20 ರೂ. ಸಿಗುತ್ತೆ ಹೊಟೇಲ್‌ ರೂಂ! ಇದರ ಅವಸ್ಥೆ ಹೇಗಿದೆ ಗೊತ್ತಾ?

ಪಾಕ್‌ನ ಈ ಅತ್ಯಂತ ಅಗ್ಗದ ಹೊಟೇಲ್‌ ಹೇಗಿದೆ ಗೊತ್ತಾ?

World’s ‘Cheapest Hotel’ In Pakistan’: ಪಾಕಿಸ್ತಾನದ ಪೇಶಾವರದಲ್ಲಿರುವ ಹೊಟೇಲ್ ಒಂದರಲ್ಲಿ ವಿಶ್ವದಲ್ಲೇ ಅತೀ ಅಗ್ಗದ ದರದ ಸೇವೆಯನ್ನು ನೀಡುತ್ತಿದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ರಾತ್ರಿ ಈ ಹೊಟೇಲ್ ನಲ್ಲಿ ತಂಗಲು ಬರೀ 20 ರೂಪಾಯಿ ದರವನ್ನು ನಿಗಧಿ ಮಾಡಿದೆ. ಇಷ್ಟು ಕಡಿಮೆ ದರ ದಲ್ಲಿ ತಂಗುವ ವ್ಯವಸ್ಥೆ ಮಾಡಿದ್ದು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ನಮ್ಮ ದೇಶದಲ್ಲೇ ಅತೀ ಕಡಿಮೆಗೆ ಸ್ಟೇ ಮಾಡಲು ರೂಮ್ ಹುಡುಕುದಾದರೆ 500-800 ರೂಪಾಯಿ ತನಕ ಕನಿಷ್ಠ ದರ ಇದ್ದೇ ಇರುತ್ತದೆ. ಆದರೆ ಪಾಕಿಸ್ತಾನದ ಈ ಹೊಟೇಲ್ ನ ಬೆಲೆಯು ಬರೀ 20 ರೂಪಾಯಿ ಆಗಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದ ಹೊಟೇಲ್ ಸ್ಟೇ ಎಂದು ಹೇಳಲಾಗುತ್ತಿದ್ದು ಇದರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Tragic Drowning: ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ನವೆಂಬರ್‌ 2ರಂದು ನಡೆದಿದೆ. ಮೃತರನ್ನು ಅಫ್ನಾನ್‌, ರಹಾನುದ್ದೀನ್‌ ಮತ್ತು ಅಫ್ರಾಸ್‌ ಎಂದು ಗುರುತಿಸಲಾಗಿದೆ. ಪ್ರವಾಸ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಾಗ ಬಲವಾದ ಅಲೆ ಬಂದು ಮೂವರು ಮುಳು ಹೋಗಿ ಅಸುನೀಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

Loading...