ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Cancel Aadhaar, PAN:  ಮೃತರ ಪಾನ್, ಆಧಾರ್‌ನಂತಹ ದಾಖಲೆಗಳನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಮರಣದ ಬಳಿಕ ಗುರುತು ದಾಖಲೆಗಳ ನಿರ್ವಹಣೆ ಹೇಗೆ ?

ವಿವಿಧ ರೀತಿಯ ವ್ಯವಹಾರಕ್ಕೆ ಸಂಬಂಧಿಸಿ ನಾವು ಬಳಸುವ ಆಧಾರ್ , ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಇತರ ಅಧಿಕೃತ ಗುರುತು ಮಾಹಿತಿ ಒಳಗೊಂಡಿರುವ ದಾಖಲೆಗಳನ್ನು ವ್ಯಕ್ತಿಯ ಮರಣದ ಬಳಿಕ ರದ್ದುಗೊಳಿಸಬೇಕು. ಇಲ್ಲವಾದರೆ ಇವು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಇವುಗಳನ್ನು ರದ್ದುಗೊಳಿಸುವುದು ಹೇಗೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Janardhan Reddy: ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌;   ಹೈಕೋರ್ಟ್‌ನಿಂದ ಜಾಮೀನು ಮಂಜೂರು

ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌; ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ(Obulapuram mining case) (janardhan reddy) 7 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ ಜನಾರ್ದನ ರೆಡ್ಡಿ ತೆಲಂಗಾಣ ಹೈಕೋರ್ಟ್​ ಬಿಗ್‌ ರಿಲೀಫ್‌ ನೀಡಿದೆ. ಸಿಬಿಐ ಕೋರ್ಟ್​ ವಿಧಿಸಿದ್ದ ಶಿಕ್ಷೆಯನ್ನು ಹೈ ಕೋರ್ಟ್‌ ರದ್ದುಗೊಳಿಸಿದೆ.

Indore Couple Missing: 'ಮೂರ್ಖರಿಂದ ಎಚ್ಚರ’: ಮೇಘಾಲಯ ಹತ್ಯೆ ಪ್ರಕರಣ ಕುರಿತು ಆಘಾತ ವ್ಯಕ್ತಪಡಿಸಿದ ಕಂಗನಾ ರಣಾವತ್

ಮೂರ್ಖರಿಂದ ಎಚ್ಚರ: ಮೇಘಾಲಯ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ MP

ಎಲ್ಲರ ಗಮನ ಸೆಳೆದಿರುವ ಮೇಘಾಲಯದ ಹತ್ಯೆ ಪ್ರಕರಣದ (Meghalaya murder case) ಬಗ್ಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

Indore Couple Missing: ಪತಿ ಹತ್ಯೆ ಬಳಿಕ ಎಸ್ಕೇಪ್‌ ಆಗಲು ಹಂತಕರು ಮಾಡಿದ್ದ ಪ್ಲಾನ್‌ ಏನು? ರಘುವಂಶಿ ಕೊಲೆ ಕೇಸ್‌ನಲ್ಲಿ ಸಿಕ್ತು ಬಿಗ್‌ ಅಪ್‌ಡೇಟ್‌

ಪತಿ ಹತ್ಯೆ ಬಳಿಕ ಎಸ್ಕೇಪ್‌ ಆಗಲು ಹಂತಕರು ಮಾಡಿದ್ದ ಪ್ಲಾನ್‌ ಏನು?

ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ದಂಪತಿಯ ಮಿಸ್ಸಿಂಗ್‌ ಕೇಸ್‌ ರಹಸ್ಯ ಇದೀಗ ಬಯಲಾಗಿದೆ. ಪತ್ನಿಯೇ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ವಿಚಾರಣೆ ವೇಳೆ ಸುಪಾರಿ ಕಿಲ್ಲರ್‌ಗಳು ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ.

Manipur Violence: ಶಮನಗೊಂಡ ಪ್ರತಿಭಟನೆ; ಮಣಿಪುರದ 5 ಜಿಲ್ಲೆಗಳಲ್ಲಿ  ಕರ್ಫ್ಯೂ ಸಡಿಲಿಕೆ

ಮಣಿಪುರದ 5 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ

ಮಣಿಪುರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಐದು ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು ಮಂಗಳವಾರ ಅನಿರ್ದಿಷ್ಟ ಕರ್ಫ್ಯೂ ಸಡಿಲಗೊಳಿಸಿವೆ . ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್, ಕಾಕ್ಚಿಂಗ್ ಮತ್ತು ಬಿಷ್ಣುಪುರಗಳಲ್ಲಿ ಸಂಪೂರ್ಣ ಸಾರ್ವಜನಿಕ ಕರ್ಫ್ಯೂವನ್ನು ಭಾಗಶಃ ಸಡಿಲಿಸಿದ್ದಾರೆ. ಮೈತೈ ಸಂಘಟನೆಯ ಮುಖ್ಯಸ್ಥ ಅರಾಂಬೈ ಟೆಂಗೋಲ್ ಬಂಧನದಿಂದ ಉಂಟಾದ ಹಿಂಸಾತ್ಮಕ ಪ್ರತಿಭಟನೆ ಬಳಿಕ ನಿಷೇಧಾಜ್ಞೆ ಹೊರಡಿಸಲಾಗಿತ್ತು.

ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ನಲ್ಲಿ ತೂಗು ಹಾಕಿದ ಸೈಕೋ ಪತಿ; ಶಾಕಿಂಗ್‌ ವಿಡಿಯೊ ಇಲ್ಲಿದೆ

ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ನಲ್ಲಿ ತೂಗು ಹಾಕಿದ ಸೈಕೋ ಪತಿ

Viral Video: ಉತ್ತರಾಖಂಡದ ವ್ಯಕ್ತಿಯೊಬ್ಬ ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ಗೆ ತೂಗು ಹಾಕಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಗಾಳಿಯಲ್ಲಿ ನೇತಾಡಿಕೊಂಡಿರುವ ಮಹಿಳೆ ತಮ್ಮನ್ನು ಕಾಪಾಡುವಂತೆ ಮೊರೆ ಇಡುತ್ತಿರುವುದು ಕೂಡ ಈ 31 ಸೆಕೆಂಡ್‌ಗಳ ವಿಡಿಯೊದಲ್ಲಿ ಸೆರೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

Pralhad Joshi: ಶೀಘ್ರದಲ್ಲೇ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ: ಪ್ರಲ್ಹಾದ್‌ ಜೋಶಿ

ಶೀಘ್ರದಲ್ಲೇ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ: ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಲ್ಲಿ ಭಾರತ ಬಡತನ ರೇಖೆಯನ್ನು ಅಳಿಸಿ ಹಾಕುವತ್ತ ಮಹತ್ತರ ಹೆಜ್ಜೆಯಿರಿಸಿದೆ. 2011-12ರಲ್ಲಿ ಶೇ.27.1 ರಷ್ಟಿದ್ದ ಬಡತನ ಪ್ರಮಾಣ ಇದೀಗ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.5.3ಕ್ಕೆ ಇಳಿದಿದೆ. 26 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರ ಬಂದಿದ್ದಾರೆ. ಆರ್ಥಿಕತೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ಖುದ್ದು ವಿಶ್ವ ಬ್ಯಾಂಕ್‌ ವರದಿಯೇ ಹೇಳಿದೆ. ʼಮೋದಿ ಸಾಧನೆ ಶೂನ್ಯ ಎನ್ನುವವರಿಗೆ ವಿಶ್ವ ಬ್ಯಾಂಕೇ ತಕ್ಕ ಉತ್ತರ ಕೊಟ್ಟಿದೆʼ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Stock Market: 10 ಸ್ಟಾಕ್ಸ್‌ಗಳಲ್ಲಿ ಎಲ್‌ಐಸಿ ಹೂಡಿಕೆ ಹೆಚ್ಚಳ

Stock Market: 10 ಸ್ಟಾಕ್ಸ್‌ ಗಳಲ್ಲಿ LIC ಹೂಡಿಕೆ ಹೆಚ್ಚಳ

LIC: ಎಲ್‌ಐಸಿಯು ಈ ವರ್ಷ ಜನವರಿ-ಮಾರ್ಚ್‌ ಅವಧಿಯಲ್ಲಿ, ಟಾಟಾ ಕೆಮಿಕಲ್ಸ್‌, ಏಷ್ಯನ್‌ ಪೇಂಟ್ಸ್‌ ಸೇರಿದಂತೆ 10 ಲಿಸ್ಟೆಡ್‌ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ. ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ಗಳು ತಮ್ಮ ಹೋಲ್ಡಿಂಗ್ಸ್‌ನಲ್ಲಿ ಯಾವ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಹಾಗೂ ಮಾರುಕಟ್ಟೆಯ ಸೆಂಟಿಮೆಂಟ್‌, ಸೆಕ್ಟರ್‌ ರೊಟೇಶನ್‌ ಮತ್ತು ಎಲ್‌ಐಸಿಯ ಕಾನ್ಫಿಡೆನ್ಸ್‌ ಅನ್ನು ಇಲ್ಲಿ ಗಮನಿಸಬಹುದು.

ಮದುವೆ ನಿಶ್ಚಯವಾಗಿದ್ದ 23 ವರ್ಷದ ಮಾಡೆಲ್ ಶವ ಮನೆಯಲ್ಲಿ ಪತ್ತೆ; ನಿಗೂಢ ಸಾವಿನ ಬೆನ್ನು ಹತ್ತಿದ ಪೊಲೀಸರು

ಮುದುವೆ ನಿಶ್ಚಯವಾಗಿದ್ದ 23 ವರ್ಷದ ಮಾಡೆಲ್ ಶವ ಮನೆಯಲ್ಲಿ ಪತ್ತೆ

ಗುಜರಾತ್‌ನ ಸೂರತ್‌ನಲ್ಲಿ 23 ವರ್ಷದ ಮಾಡೆಲ್ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಂಜಲಿ ಅಲ್ಪೇಶ್ ವರ್ಮೋರಾ ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು.

Operation Black Forest: ಛತ್ತೀಸ್‌ಗಢದಲ್ಲಿ ಆಪರೇಷನ್ ಬ್ಲ್ಯಾಕ್‌ ಫಾರೆಸ್ಟ್‌: ಮಾವೋವಾದಿ ನಾಯಕ ಬಸವರಾಜು ಸೇರಿ 27 ನಕ್ಸಲರ ಹತ್ಯೆ

ಆಪರೇಷನ್ ಬ್ಲ್ಯಾಕ್‌ ಫಾರೆಸ್ಟ್‌: ಬಸವರಾಜು ಸೇರಿ 27 ನಕ್ಸಲರ ಹತ್ಯೆ

ಭಾರತದಲ್ಲಿ ದಶಕಗಳ ನಕ್ಸಲ್ ವಿರೋಧಿ ಹೋರಾಟದಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಲಾಗಿದೆ. ಛತ್ತೀಸ್‌ಗಢದ ಕಾಡುಗಳಲ್ಲಿ ನಡೆದ 'ಆಪರೇಷನ್ ಬ್ಲ್ಯಾಕ್‌ ಫಾರೆಸ್ಟ್’ ಕಾರ್ಯಾಚರಣೆಯಲ್ಲಿ CPI (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ಬಸವರಾಜು ಸೇರಿ 27 ಕಟ್ಟಾ ನಕ್ಸಲರನ್ನು ಹತ್ಯೆಗೈಯಲಾಗಿದೆ ಎಂದು ಸರ್ಕಾರ ಮಂಗಳವಾರ ಘೋಷಿಸಿದೆ. 30 ವರ್ಷಗಳಲ್ಲಿ ಮೊದಲ ಬಾರಿಗೆ ಇಷ್ಟು ಉನ್ನತ ಶ್ರೇಣಿಯ ಮಾವೋವಾದಿ ನಾಯಕನನ್ನು ನಿಗ್ರಹ ಮಾಡಲಾಗಿದೆ.

Deve Gowda: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 11 ವರ್ಷಗಳ ಸಾಧನೆಗೆ ದೇವೇಗೌಡ ಹರ್ಷ

ಎನ್‌ಡಿಎ ಸರ್ಕಾರದ ಸಾಧನೆಗೆ ದೇವೇಗೌಡ ಮೆಚ್ಚುಗೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರದ 11 ವರ್ಷಗಳ ಆಡಳಿತವನ್ನು ಶ್ಲಾಘಿಸಿದ್ದಾರೆ. ಭಾರತದ ಭವಿಷ್ಯದ ದೃಷ್ಟಿಕೋನವು “ನಿರ್ಭಯ, ಧೈರ್ಯಶಾಲಿ ಮತ್ತು ರಚನಾತ್ಮಕ”ವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Sonam Raghuwanshi Case: ಪತಿಯ ಕೊಲೆಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದ ಸೋನಂ; ಮೇಘಾಲಯ ಹನಿಮೂನ್‌ ಹತ್ಯೆಯ ಭೀಕರ ರಹಸ್ಯ ಬಯಲು

ಪತಿಯ ಕೊಲೆಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದ ಸೋನಂ

Sonam Raghuvanshi: ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ ಮಧ್ಯ ಪ್ರದೇಶದ ಇಂದೋರ್‌ ಮೂಲದ ರಾಜ ರಘುವಂಶಿಯನ್ನು ಆತನ ಪತ್ನಿ ಸೋನಂ ರಘುವಂಶಿ ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸೋನಂ ತನ್ನ ಪ್ರಿಯಕರ ಮಧ್ಯ ಪ್ರದೇಶದ ರಾಜ್‌ ಕುಶ್ವಾಹಾ ಜತೆಗೂಡಿ ರಾಜ ರಘುವಂಶಿಯನ್ನು ಹತ್ಯೆ ಮಾಡಿದ್ದಾಳೆ. ಇದಕ್ಕಾಗಿ ಆಕೆ ಹಂತಕರಿಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದಳು ಎನ್ನಲಾಗಿದೆ.

Pak Terrorism: ಮತ್ತೆ ಪಾಕ್‌ ನಾಟಕ ಬಟಾಬಯಲು! ದೇಶದಲ್ಲಿ ಭಯೋತ್ಪಾದನೆ ಇದೆ ಎಂದು ಒಪ್ಪಿಕೊಂಡ ಸಂಸದೆ

ಪಾಕ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ

ಪತ್ರಕರ್ತೆ ಯಾಲ್ಡಾ ಹಕೀಮ್ ಅವರೊಂದಿಗಿನ ಸಂದರ್ಶನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆನೆಟರ್ ಶೆರ್ರಿ ರೆಹಮಾನ್ ಅವರು ಭಯೋತ್ಪಾದಕತೆಯಿಂದ ಪಾಕಿಸ್ತಾನ ಕೂಡ ತೊಂದರೆಗೆ ಒಳಗಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹಿಂದಿನ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಆ ಮೂಲಕ ಪಾಕ್‌ನ ಕುತಂತ್ರ ಬಯಲಾಗಿದೆ.

Gown Fashion 2025: ಸೆಲೆಬ್ರೆಟಿ ಲುಕ್‌ಗಾಗಿ ಟ್ರೆಂಡಿಯಾದ ಫ್ರಿಲ್ ಫ್ಲೇರ್ ಗೌನ್

ಸೆಲೆಬ್ರೆಟಿ ಲುಕ್‌ಗಾಗಿ ಟ್ರೆಂಡಿಯಾದ ಫ್ರಿಲ್ ಫ್ಲೇರ್ ಗೌನ್

Gown Fashion 2025: ಈ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್ ನೀಡುವ ನಾನಾ ಬಗೆಯ ಗೌನ್‌ಗಳಲ್ಲಿ, ಇಂದು ಅತಿ ಹೆಚ್ಚಾಗಿ ಫ್ರಿಲ್ ಫ್ಲೇರ್ ಡಿಸೈನ್ ಇರುವಂತಹ ವೆರೈಟಿ ವಿನ್ಯಾಸದ ಗೌನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳಲ್ಲಿ ಯಾವ್ಯಾವ ಡಿಸೈನ್ನವು ಪ್ರಚಲಿತದಲ್ಲಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Viral Video: ರಿಲ್ಯಾಕ್ಸ್‌ ಆಗೋಕೆ ಟೀ ಕುಡಿಯೋಣ ಅಂದ್ರೆ ಈಕೆ ಚಹಾ ಮಾಡೋ ರೀತಿ ಕಂಡ್ರೆ ಟೆನ್ಷನ್‌ ಆಗುತ್ತೆ! ವಿಡಿಯೊ ನೋಡಿ

ಟೀ ಹೀಗೂ ಮಾಡ್ತಾರಾ? ಇದನ್ನು ನೋಡಿದ್ರೆ ಚಹಾ ಪ್ರಿಯರಿಗೆ ಶಾಕ್‌ ಆಗ್ತಾರೆ!

ಮಹಿಳೆಯೊಬ್ಬಳು ಚಹಾ ತಯಾರಿಸಲು ತನ್ನ ಕೈಯನ್ನು ಬಳಸಿದ ತಮಾಷೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ಮಹಿಳೆಯ ಕೈಯಿಂದ ತಯಾರಿಸಿದ ಚಹಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು 43.2 ಮಿಲಿಯನ್ ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಕೂಡ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Viral Video: ರೈಲು ಪ್ರಯಾಣದ ವೇಳೆ ಪಿಜ್ಜಾ ಆರ್ಡರ್ ಮಾಡಿದ ವಿದೇಶಿ ಯುವಕ; ಮುಂದೆ ಆಗಿದ್ದೇನು ಗೊತ್ತಾ?

ಟ್ರೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿದ ವಿದೇಶಿಗ; ಆಮೇಲೇನಾಯ್ತು?

ಟ್ರಾವೆಲ್ ವ್ಲಾಗರ್ ಜಸ್ಟಿನ್ ಮರ್ಫಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಆತ ಮತ್ತು ಆತನ ಸ್ನೇಹಿತರು ಭಾರತದಲ್ಲಿ 14 ಗಂಟೆಗಳ ರೈಲು ಪ್ರಯಾಣದ ಸಮಯದಲ್ಲಿ ಡೊಮಿನೋಸ್‌ನಿಂದ ಚೀಸೀ ಪಿಜ್ಜಾಗಳನ್ನು ಆರ್ಡರ್ ಮಾಡಿ ಸವಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮುಂದೂಡಿಕೆ; ಕಾರಣವೇನು?

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮುಂದೂಡಿಕೆ

Shubhanshu Shukla: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೊಂಡೊಯ್ಯುವ ಆಕ್ಸಿಯಮ್-4 ಕಾರ್ಯಾಚರಣೆಯ ಉಡಾವಣೆಯನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಜೂನ್ 11 ಕ್ಕೆ ಮುಂದೂಡಲಾಗಿದೆ.

Viral Video: ತುತ್ತಿಟ್ಟವನ ಶವದ ಮುಂದೆ ಕೋತಿಯ ಮೂಕವೇದನೆ; ಈ ಮನಕಲುಕುವ ವಿಡಿಯೊ ನೋಡಿ

ತುತ್ತಿಟ್ಟವನ ಶವದ ಮುಂದೆ ಕೋತಿಯ ಮೂಕವೇದನೆ; ವಿಡಿಯೊ ವೈರಲ್‌

ತನಗೆ ಪ್ರತಿದಿನ ಊಟ ಕೊಡುತ್ತಿದ್ದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೋತಿ ವ್ಯಕ್ತಿಯ ಶವದ ಬಳಿ ಕುಳಿತು ಅತ್ತ ಘಟನೆ ಜಾರ್ಖಂಡ್‍ನ ದಿಯೋಘರ್‌ನಲ್ಲಿ ನಡೆದಿದೆ. ಈ ಹೃದಯಸ್ಪರ್ಶಿ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

Viral Video: ವರದಿ ಮಾಡ್ತಿದ್ದ ರಿಪೋರ್ಟರ್‌ ಮೇಲೆ ಗುಂಡಿನ ದಾಳಿ; ಶಾಕಿಂಗ್‌ ವಿಡಿಯೊ ಇಲ್ಲಿದೆ

ವರದಿಗಾರ್ತಿಯ ಕಾಲಿಗೆ ಗುಂಡೇಟು; ಅಷ್ಟಕ್ಕೂ ನಡೆದಿದ್ದೇನು?

ಲಾಸ್ ಏಂಜಲೀಸ್‍ನಲ್ಲಿ ನಡೆದ ಪ್ರತಿಭಟನೆ ಬಗ್ಗೆ ವರದಿ ಮಾಡುವಾಗ ಆಸ್ಟ್ರೇಲಿಯಾದ ನೈನ್ ನ್ಯೂಸ್ ವರದಿಗಾರ್ತಿ ಲಾರೆನ್ ಟೊಮಾಸಿಯಳ ಮೇಲೆ ರಬ್ಬರ್ ಗುಂಡನ್ನು ಹಾರಿಸಲಾಗಿದೆ. ಇದರ ಪರಿಣಾಮ ಅವಳ ಕಾಲಿಗೆ ಗುಂಡು ತಗುಲಿದೆಯಂತೆ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

Viral Video: ಮದ್ವೆಗೆ ರೆಡಿಯಾಗಿರೋ ಹುಡುಗರೇ...ಹುಷಾರು! ಈ ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

ವರನ ಕೈ ನಡುಗಿದ್ದಕ್ಕೆ ಮದ್ವೆ ಕ್ಯಾನ್ಸಲ್‌! ಏನಿದು ವೈರಲ್‌ ಸುದ್ದಿ?

ವಧುವಿನ ಹಣೆಗೆ ಸಿಂಧೂರ ಹಚ್ಚುವ ಸಮಯದಲ್ಲಿ ವರನ ಕೈ ನಡುಗಿದೆಯಂತೆ. ಇದರಿಂದ ಕೋಪಗೊಂಡ ವಧು ಅವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Physical assault Case: 6 ತಿಂಗಳು ಕೂಡಿ ಹಾಕಿ ನಿತ್ಯ ಚಿತ್ರಹಿಂಸೆ, ಅಶ್ಲೀಲ ವಿಡಿಯೊ ಶೂಟ್‌ಗೆ ಒತ್ತಾಯ; ಈಕೆ ಬದುಕುಳಿದಿದ್ದೇ ಒಂದು ಪವಾಡ!

ಅಶ್ಲೀಲ ವಿಡಿಯೊ ಶೂಟ್‌ಗೆ ಒಲ್ಲೆ ಎಂದಾಕೆಗೆ ಈ ನೀಚ ಮಾಡಿದ್ದೇನು ಗೊತ್ತಾ?

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡು ಆರು ತಿಂಗಳ ಕಾಲ ಗೃಹಬಂಧನದಲ್ಲಿಟ್ಟು ಕಿಡಿಗೇಡಿಯೊಬ್ಬ ನಿರಂತರ ಚಿತ್ರಹಿಂಸೆ ಕೊಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಆಕೆಗೆ ಕಬ್ಬಿಣದ ರಾಡ್‌ನಲ್ಲಿ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಉದ್ಯೋಗದ ಹೆಸರಿನಲ್ಲಿ ವಂಚಿಸಿ ಅಶ್ಲೀಲ ವೀಡಿಯೋ ಶೂಟ್ ಹಾಗೂ ಬಾರ್ ನೃತ್ಯ ಮಾಡಲು ಒತ್ತಡ ಹೇರಿದ್ದಾನೆ. ಇನ್ನೂ ಈ ಕೃತ್ಯದಲ್ಲಿ ಆರೋಪಿಗೆ ತಾಯಿ ಸಾಥ್‌ನೀಡಿರುವ ಘಟನೆ ನಡೆದಿದೆ.

Online Scam: ‘ಗರ್ಭಿಣಿ ಮಾಡಿ 5 ಲಕ್ಷ ರೂ. ಪಡೆಯಿರಿ’- ಎಚ್ಚರ... ಎಚ್ಚರ... ಯುವಕರೇ ನೀವೇ ಇವ್ರ ಟಾರ್ಗೆಟ್‌!

ಯುವಕರೇ, ಎಚ್ಚರ...ಎಚ್ಚರ! ಈ ಹೊಸ ಸ್ಕ್ಯಾಮ್‌ಗೆ ಬಲಿಯಾಗದಿರಿ

ಬಿಹಾರದ ನವಾಡಾದಲ್ಲಿ ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್’ ಎಂಬ ಕಂಪನಿಯು ಮಹಿಳೆಯರನ್ನು ಗರ್ಭಿಣಿಯಾಗಿಸಿದರೆ () 5 ಲಕ್ಷ ರೂ. ಪುರಸ್ಕಾರ ಎಂಬ ವಿಕೃತ ಜಾಹೀರಾತಿನ ಮೂಲಕ ಜನರನ್ನು ವಂಚಿಸಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್ ಶೋಷಣೆ ಮತ್ತು ಸಾರ್ವಜನಿಕ ಮೋಸದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

Fire Accident: ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ; ಹಲವರು ಟ್ರ್ಯಾಪ್‌!

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ; ಹಲವರು ಟ್ರ್ಯಾಪ್‌!

ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಧಗಧಗಿಸಿ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿವೆ. ಘಟನೆಯ ಸುದ್ದಿ ತಿಳಿದ ಕೂಡಲೇ ತುರ್ತಾಗಿ ಅಗ್ನಿಶಾಮಕ ದಳ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

Honeymoon Murder Case: ತಾನೇ ಹತ್ಯೆ ಮಾಡಿದ್ದ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸೋನಂ ಲವರ್‌! ವಿಡಿಯೊ ವೈರಲ್‌

ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲೂ ಹಂತಕ ಭಾಗಿ- ವಿಡಿಯೊ ನೋಡಿ

ಇಂದೋರ್‌ ಮೂಲದ ದಂಪತಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ಹೋಗಿ ಕಾಣೆಯಾಗಿದ್ದ ಪ್ರಕರಣದಲ್ಲಿ ಬಗೆದಷ್ಟು ಆಘಾತಕಾರಿ ಸಂಗತಿಗಳು ಹೊರ ಬೀಳುತ್ತಿವೆ. ಹಂತಕಿ ಸೋನಂ ಪ್ರಿಯಕರ ರಾಜ್‌ ಕುಶ್ವಾಹಾ, ಹತ್ಯೆಗೀಡಾದ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದ. ಅಲ್ಲದೇ ಆತನ ರಾಜಾ ರಘುವಂಶಿಯ ತಂದೆಯನ್ನು ಸಂತೈಸುತ್ತಿರುವ ವಿಡಿಯೊ ಭಾರೀ ವೈರಲ್‌ ಆಗುತ್ತಿದೆ.