ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಜನರಲ್ ಕ್ಯಾಟಲಿಸ್ಟ್ ನೇತೃತ್ವದಲ್ಲಿ 63 ಮಿಲಿಯನ್ ಡಾಲರ್ ಸಂಗ್ರಹಿಸಿದ ಸ್ಕ್ಯಾಪಿಯಾ

ಜನರಲ್ ಕ್ಯಾಟಲಿಸ್ಟ್ ನೇತೃತ್ವ: ಸ್ಕ್ಯಾಪಿಯಾದಿಂದ 63 ಮಿಲಿಯನ್ ಡಾಲರ್ ಸಂಗ್ರಹ

ಈ ಹೂಡಿಕೆಯು ನಮ್ಮ ಉತ್ಪನ್ನದ ಶ್ರೇಣಿಯನ್ನು ಮತ್ತಷ್ಟು ಬಲಪಡಿಸಲು, ಹೆಚ್ಚಿನ ಕೊಡುಗೆ ಗಳ ಮೂಲಕ ಗ್ರಾಹಕರಿಗೆ ಮೌಲ್ಯವನ್ನು ಒದಗಿಸಲು, ಬ್ರ್ಯಾಂಡ್ ಅನ್ನು ವಿಸ್ತರಿಸಲು ಮತ್ತು ನಾವು AI-ಆಧಾರಿತ ಸಂಸ್ಕೃತಿ ಮತ್ತು ಉತ್ಪನ್ನ ವಿಧಾನದ ಮೇಲೆ ಗಮನ ಹರಿಸುತ್ತಿರು ವಾಗ ಅತ್ಯುತ್ತಮ ಪ್ರತಿಭೆಗಳನ್ನು ತರಲು ಸಹಾಯ ಮಾಡುತ್ತದೆ.

ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ಹೈಕೋರ್ಟ್ ನಕಾರ

ಕಾಕ್ರೋಚ್ ಜನತಾ ಪಕ್ಷಕ್ಕೆ ಹೈಕೋರ್ಟ್ ನಲ್ಲಿ ಹಿನ್ನಡೆ

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹುಟ್ಟಿಕೊಂಡು ಭಾರಿ ಜನಪ್ರಿಯತೆ ಪಡೆದುಕೊಂಡ ಕಾಕ್ರೋಚ್ ಜನತಾ ಪಕ್ಷ ಇದೀಗ ವಿವಾದಗಳಿಂದಲೇ ಸುದ್ದಿ ಮಾಡುತ್ತಿದೆ. ಈ ನಡುವೆ ತನ್ನ ಎಕ್ಸ್ ಖಾತೆಗೆ ನಿಷೇಧ ಹೇರಿದ್ದು, ಇದನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ದೆಹಲಿ ಹೈಕೋರ್ಟ್ ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ನಿರಾಕರಿಸಿದೆ.

ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!

ಎದೆ ಬಡಿದುಕೊಂಡು ಗೋಳಾಡಿದ ಮಹಿಳೆಯೇ ಕೊಲೆಗಾತಿ!

Crime News: ಒಂದೇ ಕುಟುಂಬ ನಾಲ್ವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬಾ ದುಃಖಿತಳಾಗಿದ್ದು, ಜೋರಾಗಿ ಎದೆ ಬಡಿದುಕೊಳ್ಳುತ್ತಾ ಬೊಬ್ಬೆ ಹಾಕಿಕೊಂಡು ಅತ್ತಿದ್ದಾಳೆ. ಪ್ರಕರಣದಲ್ಲಿ ಈಕೆಯೇ ಪ್ರಮುಖ ಆರೋಪಿ ಎಂದು ತಿಳಿದುಬಂದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

"10 ನಿಮಿಷ ಸಿಕ್ಕಿದ್ರೆ" : ಭಾರತಕ್ಕೆ ನುಸುಳಿದ ಬಗೆಯನ್ನು ಬಿಚ್ಚಿಟ್ಟ ಬಾಂಗ್ಲಾದೇಶಿಯರು

ಅಕ್ರಮ ನುಸುಳುವಿಕೆಯ ರಹಸ್ಯ ಬಿಚ್ಚಿಟ್ಟ ಬಾಂಗ್ಲಾದೇಶಿಯರು!

ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರಳುತ್ತಿರುವ ಕೆಲವು ಬಾಂಗ್ಲಾದೇಶಿ ಅಕ್ರಮ ವಲಸಿಗರು, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿಧಾನ, ನಕಲಿ ದಾಖಲೆಗಳನ್ನು ಪಡೆದ ರೀತಿ ಹಾಗೂ ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಗಡಿ ಭದ್ರತೆಯ ಲೋಪದೋಷಗಳನ್ನು ಬಳಸಿಕೊಂಡು ಕೇವಲ 10 ನಿಮಿಷಗಳಲ್ಲಿ ಭಾರತ ಪ್ರವೇಶ ಸಾಧ್ಯವೆಂದು ಕೆಲವರು ಹೇಳಿದ್ದು, ಈ ಬೆಳವಣಿಗೆ ಗಡಿ ಭದ್ರತೆ ಮತ್ತು ಅಕ್ರಮ ವಲಸೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರವಾಗಿ ಹತ್ಯೆ ಮಾಡಿದ 16ರ ಅಪ್ರಾಪ್ತ

10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರ ಹತ್ಯೆ

Crime News: 16 ವರ್ಷದ ಬಾಲಕನೊಬ್ಬ ತನ್ನ 10 ವರ್ಷದ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಾಲಾಪರಾಧಿಗಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮನವೊಲಿಸಿದ್ದು ರಾಹುಲ್ ಗಾಂಧಿ; ಇದು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯೇ?

ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆಯೇ ಕಾಂಗ್ರೆಸ್ ?

ಕರ್ನಾಟಕ ರಾಜಕೀಯ ನಾಯಕತ್ವದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಕಾಂಗ್ರೆಸ್ ಪಕ್ಷ ಈ ಮೂಲಕ ಸಾಕಷ್ಟು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸೂಚನೆಯನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವೊಲಿಸಿರುವುದು ಈ ನಿಟ್ಟಿನಲ್ಲಿ ಒಂದು ಪ್ರಮುಖ ವಿಚಾರ ಎನ್ನಲಾಗುತ್ತಿದೆ.

ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ: AI ಬಳಕೆಯಲ್ಲಿ ಜರ್ಮನಿ, ಫ್ರಾನ್ಸ್‌ನ್ನೂ ಹಿಂದಿಕ್ಕಿ ದಾಖಲೆ!

ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ

State of India's Digital Economy 2026: ತಂತ್ರಜ್ಞಾನ ಮತ್ತು 'ಕೃತಕ ಬುದ್ಧಿಮತ್ತೆ' (ಎಐ) ಬಳಕೆಯಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. 'ICRIER-ಪ್ರೊಸಸ್ ಸೆಂಟರ್' ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿʼ (ಸೈಡ್‌ 2026) ವರದಿಯು, ಭಾರತದ ಈ ಅದ್ಭುತ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.

ಆಸ್ತಿ ವಿವಾದ: ಸಮಾಜವಾದಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಹಲ್ಲೆ, ವಿಡಿಯೋ ವೈರಲ್!

ಎಸ್‌ಪಿ ಮಹಿಳಾ ಘಟಕದ ಅಧ್ಯಕ್ಷೆ ಮೇಲೆ ಭೀಕರ ಹಲ್ಲೆ!

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾರ್ಗಿ ಪಟೇಲ್ ಅವರ ಮೇಲೆ ಅವರ ನಿವಾಸದಲ್ಲೇ ಹಲ್ಲೆ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ತಿ ಮತ್ತು ವ್ಯಾಪಾರ ಪಾಲುದಾರಿಕೆ ಸಂಬಂಧಿತ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಮಾಜಿ ಬ್ಲಾಕ್ ಪ್ರಮುಖ್ ಪ್ಯಾರೇಲಾಲ್ ಯಾದವ್ ಅವರ ಕುಟುಂಬ ಸದಸ್ಯರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡ ನಾಯಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿ ಎಸಿ ಅಗ್ನಿ ದುರಂತ: ತೀವ್ರ ಬೇಸಿಗೆಯಲ್ಲಿ ಏರ್-ಕಂಡಿಷನರ್‌ಗಳು ಅಪಾಯಕಾರಿಯಾಗುವುದು ಏಕೆ?

ನಿರಂತರ ಎಸಿ ಬಳಕೆ ಜೀವಕ್ಕೆ ಅಪಾಯವೇ?

ದಕ್ಷಿಣ ದೆಹಲಿಯ ಹೌಜ್ ಖಾಸ್‌ನಲ್ಲಿ ಎಸಿ ಸ್ಫೋಟದಿಂದ ನಿವೃತ್ತ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ ಮೃತಪಟ್ಟ ಘಟನೆ ಬೇಸಿಗೆಯಲ್ಲಿ ಎಸಿ ಬಳಕೆಯ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ಕಂಪ್ರೆಸರ್ ಓವರ್‌ಹೀಟಿಂಗ್, ಶಾರ್ಟ್ ಸರ್ಕ್ಯೂಟ್, ಹಳೆಯ ವೈರಿಂಗ್, ವೋಲ್ಟೇಜ್ ಏರಿಳಿತ ಹಾಗೂ ನಿರ್ವಹಣೆಯ ಕೊರತೆ ಅಗ್ನಿ ಅವಘಡಗಳಿಗೆ ಪ್ರಮುಖ ಕಾರಣಗಳಾಗಿವೆ. ತಜ್ಞರು ನಿಯಮಿತ ಸರ್ವಿಸ್, ಫಿಲ್ಟರ್ ಸ್ವಚ್ಛತೆ ಮತ್ತು ಸರಿಯಾದ ತಾಪಮಾನ ಸೆಟ್ಟಿಂಗ್‌ಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.

ಭಾರತಕ್ಕೆ 'ಎಲ್ ನಿನೋ' ಭೀತಿ: ದೇಶದಲ್ಲಿ ಮಳೆ ಕೊರತೆ ಮುನ್ಸೂಚನೆ

ಭಾರತಕ್ಕೆ 'ಎಲ್ ನಿನೋ' ಭೀತಿ

ಈ ವರ್ಷ ದೇಶದಲ್ಲಿ ನೈಋತ್ಯ ಮಾನ್ಸೂನ್ ಮೇಲೆ 'ಎಲ್ ನಿನೋ' ಪ್ರಭಾವ ಬೀರುವ ಸಾಧ್ಯತೆಯಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಕಡಿಮೆ ಮಳೆಯ ಮಟ್ಟವನ್ನು ತಲುಪಲಿದೆ ಎಂದು ತಿಳಿದು ಬಂದಿದೆ.

ಕೋಲ್ಕತ್ತಾದಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಿಸಲಿರುವ ಪ್ರಧಾನಿ ಮೋದಿ

ಕೋಲ್ಕತ್ತಾದಲ್ಲಿ ಯೋಗ ದಿನಾಚರಿಸಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು 2026ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಕೋಲ್ಕತ್ತಾದಲ್ಲಿ ಆಚರಿಸಲಿದ್ದಾರೆ. "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂಬ ಥೀಮ್ ನೊಂದಿಗೆ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸರ್ಕಾರ ಯೋಗ ಸಂಗಮ ಪೋರ್ಟಲ್ ಅನ್ನು ತೆರೆದಿದೆ. ಆಸಕ್ತರು ಇದರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು': ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS

ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು'

Enlight Jatayoo: ಭಾರತದ ಪ್ರಮುಖ ಕ್ಲೌಡ್ ಮತ್ತು ಡೇಟಾ ಸೆಂಟರ್ ಪೂರೈಕೆದಾರ ಸಂಸ್ಥೆಯಾದ 'ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.', ಇದೀಗ 'ಎನ್‌ಲೈಟ್ ಜಟಾಯು' ಎಂಬ ಡೇಟಾಬೇಸ್ ಆಕ್ಟಿವಿಟಿ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Siddaramaiah's Delhi Visit: ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ

ದೆಹಲಿಯಲ್ಲಿ ರಾಹುಲ್‌, ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ

ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ನವದೆಹಲಿಗೆ ಭೇಟಿ ನೀಡಿದ್ದಾರೆ. ಎರಡು ಅವಧಿಯಲ್ಲಿ ಕರ್ನಾಟಕದ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಪ್ರಧಾನಿ ವೈಯಕ್ತಿಕವಾಗಿ ಲೋಪಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದ ಸರ್ಕಾರ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸುಪ್ರೀಂ ಹೇಳಿದ್ದೇನು?

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಾದಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಆಲಿಸಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿನ "ಲೋಪ"ಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಮಗಳ ಕೊಲೆ ಆರೋಪದಲ್ಲಿ ಸಿಲುಕಿದ್ದ ತಂದೆ, ಮಗ ಜೈಲು ಪಾಲು; ಜೀವಂತವಾಗಿ ಮರಳಿ ಬಂದ ಯುವತಿ!

ಸಾವನ್ನಪ್ಪಿದ್ದ ಯುವತಿ ಜೀವಂತವಾಗಿ ವಾಪಸ್!

ಮಧ್ಯಪ್ರದೇಶದ ನಾಪತ್ತೆಯಾಗಿದ್ದ ಯುವತಿ ಶಿವಾನಿ, ಕೊಲೆಯಾಗಿದ್ದಾಳೆ ಎಂದು ಭಾವಿಸಿ ಆಕೆಯ ತಂದೆ ಮತ್ತು ಸಹೋದರರನ್ನು ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ಪತ್ತೆಯಾದ ತಲೆಯಿಲ್ಲದ ಸುಟ್ಟ ಶವವನ್ನು ಯಾವುದೇ ಖಚಿತ ಪುರಾವೆಗಳಿಲ್ಲದೆ ಶಿವಾನಿಯದ್ದೆಂದು ಗುರುತಿಸಲಾಗಿತ್ತು. ಆದರೆ 22 ದಿನಗಳ ಬಳಿಕ ಶಿವಾನಿ ಜೀವಂತವಾಗಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಇದೀಗ ಆ ಶವ ಯಾರದ್ದು ಎಂಬ ಪ್ರಶ್ನೆ ಪೊಲೀಸರ ಮುಂದಿದೆ.

ಐಟಿ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವು

ಸಿಡಿಲು ಬಡಿದು ಬೆಂಗಳೂರು ಟೆಕ್ಕಿ ಸಾವು

ಲಕ್ಷಾಂತರ ರೂಪಾಯಿ ಆದಾಯ ಹೊಂದಿದ್ದ ಕಾರ್ಪೊರೇಟ್ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ ರೋಷನ್ ಬಾಲಕೃಷ್ಣ ಮೃತರು. ಐಟಿ ವಲಯದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ತ್ಯಜಿಸಿ ಕೃಷಿ ವಲಯಕ್ಕೆ ಕಾಲಿಟ್ಟಿದ್ದರು.

ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ; ಜೂನ್ 11 ರ ನಂತರ ಮಳೆಯಾಗುವ ನಿರೀಕ್ಷೆ

ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ

Delay in Monsoon in Kerala: ಭಾರತೀಯ ಹವಾಮಾನ ಇಲಾಖೆ ಮುಂಗಾರು ಸ್ವಲ್ಪ ಮುಂಚಿತವಾಗಿ ಆರಂಭವಾಗಬಹುದು ಎಂದು ಮುನ್ಸೂಚನೆ ನೀಡಿದ್ದರೂ, ಮೇ 28 ಮತ್ತು ಜೂನ್ 4 ರ ನಡುವೆ ಕೇರಳದಲ್ಲಿ ಹೆಚ್ಚಾಗಿ ಒಣ ವಾತಾವರಣವನ್ನು ತೋರಿಸುತ್ತಿದೆ. ಮಾಹಿತಿ ಪ್ರಕಾರ, ಜೂನ್ 11ರ ನಂತರ ಮಳೆಯಾಗುವ ನಿರೀಕ್ಷೆಯಿದೆ.

ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ

ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು

ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಎಸಿ ಸ್ಪೋಟಗೊಂಡು ಮಾಜಿ ಐಎಎಸ್ ಅಧಿಕಾರಿ ಸಾವನಪ್ಪಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದೆ. ಮಾಜಿ ಐಎಎಸ್ ಅಧಿಕಾರಿ ಮತ್ತು ಭಾರತ ಸ್ಪರ್ಧಾ ಆಯೋಗದ (ಸಿಸಿಐ) ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಮೃತರು.

ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!

ಸಿದ್ದರಾಮಯ್ಯ ಪ್ರತೀಕಾರ: ಡಿಕೆಶಿ ಮತ್ತು ರಾಹುಲ್‌ಗೆ ರಾಜಕೀಯ ಇಕ್ಕಟ್ಟು

ರಾಜೀನಾಮೆ ಘೋಷಣೆಯ ಮುನ್ನ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಈ ನಡೆ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜಕೀಯ ಸವಾಲಾಗಿ ಪರಿಣಮಿಸಿದ್ದು, ಅಹಿಂದ-ಪ್ರಬಲ ಸಮುದಾಯಗಳ ಸಮೀಕರಣದ ನಡುವೆ ಮುಂದಿನ ರಾಜಕೀಯ ದಿಕ್ಕಿನ ಮೇಲೆ ಕುತೂಹಲ ಹೆಚ್ಚಿಸಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದರಿಂದ ಹಲವೆಡೆ ದಾಳಿಗೆ ಸಂಚು: ಉತ್ತರ ಪ್ರದೇಶದಲ್ಲಿ ನಾಲ್ವರ ಬಂಧನ

ವಿವಿಧೆಡೆ ದಾಳಿಗೆ ಸಂಚು: ಉತ್ತರಪ್ರದೇಶದಲ್ಲಿ ನಾಲ್ವರ ಬಂಧನ

ದೇಶದ ವಿವಿಧ ಭಾಗಗಳಲ್ಲಿ ದಾಳಿಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕದ ಕಾರ್ಯನಿರ್ವಹಿಸುತ್ತಿದ್ದ ಈ ನಾಲ್ವರು ಉತ್ತರ ಪ್ರದೇಶ, ದೆಹಲಿ, ಪಂಜಾಬ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು. ಇವರು ಪಾಕಿಸ್ತಾನ ಮೂಲದ ಭಯೋತ್ಪಾದಕರಾದ ​​ಶಹಜಾದ್ ಭಟ್ಟಿ ಮತ್ತು ಅಬಿದ್ ಜಾಟ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಸಹಕಾರದಿಂದ ಜಲ ವಿವಾದ ಬಗೆಹರಿಸಿ: ಮೇಕೆದಾಟು ಯೋಜನೆ ವಿಚಾರದಲ್ಲಿ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ

ಮೇಕೆದಾಟು ವಿವಾದದ ನಡುವೆ ಜಲ ಸಮಸ್ಯೆ ಪರಿಹಾರಕ್ಕೆ ಮೋದಿ ಸಲಹೆ

Mekedatu Issue: ಮೇಕೆದಾಟು ಯೋಜನೆ ತಡೆಯುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಪತ್ರ ಬರೆದಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯಗಳಿಗೆ ಅಂತಾರಾಜ್ಯ ಜಲ ವಿವಾದಗಳನ್ನು ಸಹಕಾರ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯ ಮೂಲಕ ಬಗೆ ಹರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

20 ವರ್ಷಗಳ ಬಳಿಕ ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿದ ಜಪಾನ್; ಕಾರಣವೇನು?

ಭಾರತದ ಮಾವಿನ ಹಣ್ಣಿಗೆ ಜಪಾನ್ ನಿಷೇಧ

ಸಂಸ್ಕರಣೆಯಲ್ಲಿ ಕಂಡು ಬಂದಿರುವ ದೋಷಗಳ ಕಾರಣದಿಂದ ಭಾರತದ ಮಾವಿನ ಹಣ್ಣುಗಳಿಗೆ ಜಪಾನ್ ನಲ್ಲಿ ನಿಷೇಧ ಹೇರಲಾಗಿದೆ. ಭಾರತದಿಂದ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಮೊದಲು ಸೋಂಕು ರಹಿತಗೊಳಿಸಲು ನಡೆಸಲಾಗುವ ಭಾರತೀಯ ಆವಿ ಶಾಖ ಸಂಸ್ಕರಣಾ ಸೌಲಭ್ಯಗಳ ಕಾರ್ಯಾಚರಣೆಯಲ್ಲಿ ದೋಷ ಕಂಡು ಬಂದಿರುವುದಾಗಿ ಜಪಾನಿನ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ: ಕೇಂದ್ರದಿಂದ 25,530 ಕೋಟಿ ರುಪಾಯಿ ಅನುದಾನ

ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ

Pralhad Joshi: 16ನೇ ಹಣಕಾಸು ಆಯೋಗದ ಅವಧಿಯಲ್ಲಿ ‘ಸಾರ್ಥಕ್ ಪಿಡಿಎಸ್’ಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ₹ 25,530 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ದೇಶದ ಪಡಿತರ ವ್ಯವಸ್ಥೆಯಲ್ಲಿ ಇದೊಂದು ಸುಧಾರಿತ ತಂತ್ರಜ್ಞಾನದ ಯೋಜನೆಯಾಗಿ 2031ರವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಗೋಹತ್ಯೆಯು ಬಕ್ರೀದ್ ಹಬ್ಬದ ಅತ್ಯಗತ್ಯ ಆಚರಣೆಯಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಬಕ್ರೀದ್ ವೇಳೆ ಗೋಹತ್ಯೆ ಅತ್ಯಗತ್ಯ ಆಚರಣೆಯಲ್ಲ: ಕೋರ್ಟ್

Madras High Court" ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ತಮಿಳುನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಯಲು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

Loading...