ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್ʼ; ಗಗನ್ಗೆ ಬೆಂಡೆತ್ತಿದ ಸುದೀಪ್
Bigg Boss Kannada 13: ಸ್ಪರ್ಧಿ ಗಗನ್ ಚಿನ್ನಪ್ಪನ ಅಸಂಬದ್ಧ ಮಾತಿಗೆ ʻಕಿಚ್ಚʼ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಟದ ಶ್ಲಾಘನೆ ವೇಳೆ ಸುದೀಪ್ಗೆ ವ್ಯಂಗ್ಯವಾಗಿ ಮಾತನಾಡಲು ಹೋದ ಗಗನ್ಗೆ ಗಂಭೀರ ಎಚ್ಚರಿಕೆ ನೀಡಲಾಯಿತು. 'ನಾನಿಲ್ಲಿ ನಿರೂಪಕ, ನೀವೊಬ್ಬ ಸ್ಪರ್ಧಿ, ಮರ್ಯಾದೆ ಇರಲಿ' ಎಂದು ಕಿಚ್ಚ ಖಾರವಾಗಿ ಗುಡುಗಿದಾಗ, ಗಗನ್ ಹೆದರಿ 3 ಬಾರಿ ಕ್ಷಮೆಯಾಚಿಸಿದರು.