ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
Firefly Movie: ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ

ಮಗಳ ಚಿತ್ರದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಶಿವ ರಾಜ್‌ಕುಮಾರ್

ಶಿವ ರಾಜ್‌ಜ್‌ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರ ʼಫೈರ್‌ ಫ್ಲೈ' ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದೆ. ಶಿವಣ್ಣನ ನಿವಾಸದಲ್ಲಿ ಟ್ರೈಲರ್ ಲಾಂಚ್ ಆಗಿದ್ದು, ಶಿವಣ್ಣನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಫಿಜ್ಜಾ ಡೆಲಿವರಿ ಬಾಯ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Actor Bank Janardhan: ಕನ್ನಡ ಜತೆಗೆ ತುಳು, ತಮಿಳು, ತೆಲುಗು ಚಿತ್ರಗಳಲ್ಲೂ ನಟನೆ; ಬ್ಯಾಂಕ್‌ ಜನಾರ್ದನ್‌ ಸಿನಿ ಜರ್ನಿ ಹೇಗಿತ್ತು?

ನಟ ಬ್ಯಾಂಕ್‌ ಜನಾರ್ದನ್‌ ಸಿನಿ ಜರ್ನಿ ಹೇಗಿತ್ತು?

Bank Janardhan Passes Away: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸಿಡಿಲಾಘಾತ ಎದುರಾಗಿದ್ದು, ಹಿರಿಯ ನಟ ಬ್ಯಾಂಕ್‌ ಜನಾರ್ದನ್‌ ನಿಧನ ಹೊಂದಿದ್ದಾರೆ. ಹಾಸ್ಯನಟರೆಂದೇ ಖ್ಯಾತರಾದ ಅವರು ಕಿರುತೆರೆ, ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. ಬಹುಭಾಷಾ ನಟರಾಗಿದ್ದ ಅವರ ಸಿನಿಜರ್ನಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

Bhagya Lakshmi Serial: ಕನ್ನಿಕಾಳ ಮಾಸ್ಟರ್ ಪ್ಲ್ಯಾನ್​ಗೆ ಭಾಗ್ಯಾ ಬಲಿ: ಬಂದ್ ಆಯ್ತು ಫುಡ್ ಬ್ಯುಸಿನೆಸ್

ಕನ್ನಿಕಾಳ ಮಾಸ್ಟರ್ ಪ್ಲ್ಯಾನ್​ಗೆ ಭಾಗ್ಯಾ ಬಲಿ

ಭಾಗ್ಯಾಳ ಮನೆಗೆ ದಿಢೀರ್ ಆಗಿ ಫುಡ್ ಡಿಪಾರ್ಟ್ಮೆಂಟ್ನಿಂದ 4-5 ಜನ ಆಫೀಸರ್ಸ್ ಬಂದಿದ್ದಾರೆ. ಇವರನ್ನ ಕಂಡು ಭಾಗ್ಯಾಗೆ ಆಘಾತ ಆಗಿದೆ. ನಾವು ಫುಡ್ ಡಿಪಾರ್ಟ್ಮೆಂಟ್ನಿಂದ ಬಂದಿದ್ದೇವೆ.. ನೀವೇನು ಫುಡ್ ಬ್ಯಿಸಿನೆಸ್ ಸ್ಟಾರ್ಟ್ ಮಾಡಿದ್ದೀರಿ ಅಲ್ವಾ.. ಅದರ ಲೈಸನ್ಸ್ ತೋರಿಸಿ ಎಂದು ಕೇಳಿದ್ದಾರೆ.

Anna Konidela: ಬೆಂಕಿ ದುರಂತದಿಂದ ಮಗ ಪಾರು; ತಿಮ್ಮಪ್ಪನಿಗೆ ಮುಡಿ ಕೊಟ್ಟ ನಟ ಪವನ್ ಕಲ್ಯಾಣ್ ಪತ್ನಿ

ಮಗನ ಆರೋಗ್ಯ ಚೇತರಿಕೆಗಾಗಿ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ

ನಟ ಪವನ್ ಕಲ್ಯಾಣ್ - ಅನ್ನಾ ಕೊನಿಡೆಲಾ ದಂಪತಿಯ 8 ವರ್ಷದ ಪುತ್ರ ಮಾರ್ಕ್ ಶಂಕರ್ ಏ. ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಮಗನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದ ಅನ್ನಾ ಕೊನಿಡೆಲಾ ತಿರುಪತಿ ದೇಗುಲಕ್ಕೆ ಭೇಟಿ ಮುಡಿ ಕೊಟ್ಟಿದ್ದಾರೆ.

Salman Khan: ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ; ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು

ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಹೊಸದಾಗಿ ಮತ್ತೊಂದು ಜೀವ ಬೆದರಿಕೆ ಬಂದಿದೆ. ವರ್ಲಿ ಆರ್‌ಟಿಒ ಆಫೀಸಿನ ವಾಟ್ಸಾಪ್ ಸಂಖ್ಯೆಗೆ ಆರೋಪಿ ಸಂದೇಶ ಕಳುಹಿಸಿ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿದ್ದಾನೆ. ಕಳುಹಿಸಲಾದ ಸಂದೇಶದಲ್ಲಿ, ನಟನ ಮನೆಗೆ ಪ್ರವೇಶಿಸಿ ಹತ್ಯೆ ಮಾಡುವುದಾಗಿ ಮತ್ತು ಅವರ ಕಾರಿನಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ.

Bank Janardhan Passes Away: ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ್ ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು.

Bank Janardhan passes away: ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ದನ ಇನ್ನಿಲ್ಲ

ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ದನ ಇನ್ನಿಲ್ಲ

ಕೆಲ ತಿಂಗಳ ಹಿಂದಷ್ಟೇ ಬ್ಯಾಂಕ್ ಜನಾರ್ದನ್‌ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಸಕ್ರಿಯವಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ.

Rajath Kishan: ‘ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ’: ಸತ್ಯ ಬಾಯಿಬಿಟ್ಟ ರಜತ್ ಕಿಶನ್

ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ: ಸತ್ಯ ಬಾಯಿಬಿಟ್ಟ ರಜತ್

Rajath Kishan machete case: ರಜತ್ ಕಿಶನ್ ಅವರು ನಿಜವಾದ ಮಚ್ಚು ಬಳಸಿ ರೀಲ್ಸ್ ಮಾಡಿ ಅದನ್ನು ಪೊಲೀಸರಿಗೆ ಸಿಗದಂತೆ ರೇಣುಕಾ ಸ್ವಾಮಿ ಶವ ಸಿಕ್ಕ ಸುಮನಹಳ್ಳಿ ಮೋರಿಯಲ್ಲಿ ಎಸೆದಿದ್ದರು ಎನ್ನಲಾಗಿತ್ತು. ಇದೀಗ ರಜತ್, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Muddu Sose: ಇಂದಿನಿಂದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಶುರು: ಕಥೆ ಏನು?

ಇಂದಿನಿಂದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಶುರು

ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಈ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ಶುಕ್ರವಾರ ಕೊನೆಗೊಂಡಿತ್ತು.

Ott Releases This Week: ʼರಾಕ್ಷಸʼ, ʼವಿಷ್ಣು ಪ್ರಿಯʼ; ಈ ವಾರ ಒಟಿಟಿಯಲ್ಲಿ ರಿಲೀಸ್‌ ಆದ ಕನ್ನಡ ಚಿತ್ರಗಳಿವು

ಈ ವಾರ ಒಟಿಟಿಯಲ್ಲಿ ರಿಲೀಸ್‌ ಆದ ಕನ್ನಡ ಚಿತ್ರಗಳಿವು

New Ott Releases This Week In Kannada: ಈ ವಾರ ಒಟಿಟಿಯಲ್ಲಿ ಕನ್ನಡದ ಹಲವು ಚಿತ್ರಗಳು ತೆರೆಕಂಡಿವೆ. ಥಿಯೇಟರ್‌ನಲ್ಲಿ ನೋಡಲು ಮಿಸ್‌ ಆದವರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದು. ಯಾವೆಲ್ಲ ಕನ್ನಡ ಚಿತ್ರಗಳು ಒಟಿಟಿಯಲ್ಲಿವೆ ಎನ್ನುವ ವಿವರ ಇಲ್ಲಿದೆ.

Alia Bhatt: ಪೆಟ್ ಡೇ ಆಚರಿಸಿದ ಆಲಿಯಾ; ಫೋಟೊ ಕ್ರೆಡಿಟ್ ಯಾರದ್ದು ಗೊತ್ತ?

ಆಲಿಯಾ ಭಟ್ ಮನೆಯಲ್ಲಿರುವ ಪುಟ್ಟ ಫೋಟೊಗ್ರಾಫರ್ ಯಾರು?

ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಇರುವ ಆಲಿಯಾ ಭಟ್ ಅವರಿಗೆ ವಿಶೇಷ ಫ್ಯಾನ್ ಬೇಸ್ ಇದೆ. ಉತ್ತರದಿಂದ ದಕ್ಷಿಣದ ತನಕ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಇದೀಗ ನಟಿ ಆಲಿಯಾ ಭಟ್ ಸಾಕುಪ್ರಾಣಿಗಳ ದಿನ ಆಚರಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಶೇಷ ಎಂದು ಈ ಫೋಟೊ ಕ್ಲಿಕ್‌ ಮಅಡಿದ್ದು ಅವರ ಮಗಳು 3 ವರ್ಷದ ರಾಹಾ ಅಂತೆ.

Aamir Khan: ಗೆಳತಿ ಗೌರಿ ಕೈ ಹಿಡಿದು ಫೋಟೊಗೆ ಪೋಸ್ ಕೊಟ್ಟ ನಟ ಆಮೀರ್ ಖಾನ್!

ಗೆಳತಿ ಗೌರಿ ಜೊತೆ ಕಾಣಿಸಿಕೊಂಡ ನಟ ಆಮೀರ್ ಖಾನ್!

ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಈ ಜೋಡಿ ಕೈ ಹಿಡಿದುಕೊಂಡೇ ಫೋಟೋ ಗೆ ಫೋಸ್ ಕೊಟ್ಟಿದ್ದಾರೆ‌. ಚೀನಾದ ಪಾಪರಾಜಿಗಳು ಈ ಜೋಡಿಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆಮೀರ್‌ ಖಾನ್‌ ಕಪ್ಪು ಕುರ್ತಾ, ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರೆ ಗೌರಿ ಫ್ಲವರ್ ಪ್ರಿಂಟೆಡ್‌ ಸೀರೆಯನ್ನು ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್‌ ರಾವ್‌ ಮಾಡಿ ಸಾಲ ಎಷ್ಟು ಗೊತ್ತಾ?

ಕೋಟಿ ಸಾಲ ಮಾಡಿದ ಬಗ್ಗೆ ನಟ ಅಜಯ್ ಹೇಳಿದ್ದೇನು?

Krishna Ajay Rao Interview: ಅಜಯ್ ನಟನೆಯ ಯುದ್ಧಕಾಂಡ ಚಿತ್ರದ ಟೀಸರ್‌ ಈಗಾಗಲೇ ರಿಲೀಸ್‌ ಆಗಿದ್ದು ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆ ಯಾಗಲಿದೆ. ಈ ನಡುವೆ  ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್  ಕೋಟಿ ಕೋಟಿ ಸಾಲ ಮಾಡಿ ತಮ್ಮ BWD ಕಾರನ್ನು ಮಾರಾಟ ಮಾಡಿರುವ ದೃಶ್ಯ ಸೋಷಿಯಲ್ ‌ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ನಟ ಅಜಯ್  ರಾವ್ ಅವರೇ  ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

KGF 3 Update: ಬಹುದೊಡ್ಡ ಸ್ಟಾರ್‌ ಸಮಾಗಮಕ್ಕೆ ಸ್ಯಾಂಡಲ್‌ವುಡ್‌ ಸಜ್ಜು; ʼಕೆಜಿಎಫ್‌ 3ʼ ಚಿತ್ರದಲ್ಲಿ ಯಶ್‌ ಜತೆ ನಟಿಸ್ತಾರ ಅಜಿತ್‌?

ʼಕೆಜಿಎಫ್‌ 3ʼ ಚಿತ್ರದಲ್ಲಿ ಯಶ್‌ ಜತೆ ಅಜಿತ್‌ ನಟನೆ?

Yash and Ajith Kumar: ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಸದ್ಯ ಜೂ.ಎನ್‌ಟಿರ್‌ ಅವರ ಟಾಲಿವುಡ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಮಧ್ಯೆ ಅವರು ʼಕೆಜಿಎಫ್‌ 3ʼ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು, ಇದರಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ಅಜಿತ್‌ ನಟಿಸಲಿದ್ದಾರಂತೆ.

Kantara Movie: ಕಾಂತಾರ-1 ಬೆನ್ನಲ್ಲೇ ಚಾಪ್ಟರ್ 3 ಸೆಟ್ಟೇರುತ್ತಾ? ಒಟ್ಟೊಟ್ಟಿಗೆ ಎರಡು ಚಿತ್ರಗಳ ಶೂಟಿಂಗ್?

ಕಾಂತಾರ ಚಾಪ್ಟರ್-3 ಶೂಟಿಂಗ್ ಶುರು! ಈ ಸುದ್ದಿ ನಿಜವೇ?

Kantara Movie: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಥಿಯೇಟರ್​​ನಲ್ಲಿ ಸೂಪರ್ ಹಿಟ್ ಆಗಿ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂಸೆಳೆದಿತ್ತು. ಇದೀಗ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್‌ 1' ಪ್ರೀಕ್ವೆಲ್‌ ಬಗ್ಗೆ ಕುತೂಹಲ ಹೆಚ್ಚಿದೆ. ಈಗಾಗಲೇ ಚಾಪ್ಟರ್-1 ಚಿತ್ರದ  ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ತಯಾರಿ ಹಂತದಲ್ಲಿರುವಾಗಲೇ ಈ ಮಧ್ಯೆ ಕಾಂತಾರ ಪಾರ್ಟ್ 3 ಬಗ್ಗೆಯು ಹೊಸ ಅಪ್ಡೇಟ್ ಸಿಕ್ಕಿದೆ‌.

Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಶೀಘ್ರವೇ ರಿಲೀಸ್‌

Green Movie:ಗ್ರೀನ್ ಒಂದು ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಇದು ವೀಕ್ಷಕರನ್ನು ಮಾನವ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ, ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ರಾಜ್ ವಿಜಯ್ ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ "ಗ್ರೀನ್" ಚಿತ್ರ ತೆರೆಗೆ ಬರಲು ಅಣಿಯಾಗಿದೆ.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ; ಆ.15ಕ್ಕೆ ಸಿನಿಮಾ ರಿಲೀಸ್‌

ಮಲ್ಟಿಸ್ಟಾರರ್ ʼ45ʼ ಚಿತ್ರ ಆ.15ಕ್ಕೆ ರಿಲೀಸ್‌; ಟೀಸರ್‌ಗೆ ಭಾರಿ ಮೆಚ್ಚುಗೆ

45 Movie: ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ʼ45ʼ ಚಿತ್ರದ ಟೀಸರ್‌ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಟೀಸರ್‌ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Rishab Shetty: ಸಿನಿಪ್ರಿಯರಿಗೆ ಡಬಲ್‌ ಧಮಾಕ; ʼಕಾಂತಾರʼ ಪ್ರೀಕ್ವೆಲ್‌ ಜತೆಗೆ ಸೀಕ್ವೆಲ್‌ ಕೂಡ ಬರಲಿದೆ!

ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಜತೆಗೆ ಸೀಕ್ವೆಲ್‌ಗೂ ಸಿದ್ಧತೆ?

Kantara Chapter 1: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ʼಕಾಂತಾರ ಚಾಪ್ಟರ್‌ 1ʼ ಕೂಡ ಒಂದು. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರ 2022ರಲ್ಲಿ ತೆರೆಕಂಡ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಎನ್ನುವುದು ವಿಶೇಷ. ಅ. 2ರಂದು ಈ ಸಿನಿಮಾ ರಿಲೀಸ್‌ ಆಗಲಿದೆ. ಇದರ ಜತೆಗೆ ಚಿತ್ರದ ಸೀಕ್ವೆಲ್‌ ಕೂಡ ತಯಾರಾಗಲಿದೆ ಎನ್ನುವ ಸುದ್ದಿ ಹಬ್ಬಿದೆ.

Rajath Kishan: 'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಜತ್

'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ರಜತ್ ಮಾತು

ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ರಜತ್ ಕಿಶನ್ ಕೆಲ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆಯಂತೆ.

ಇಂದು ವರನಟ ಡಾ.ರಾಜ್‌ ಕುಮಾರ್​ ಪುಣ್ಯತಿಥಿ; ನಟಸಾರ್ವಭೌಮನ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

ಇಂದು ಡಾ.ರಾಜ್‌​ ಪುಣ್ಯತಿಥಿ; ನಟಸಾರ್ವಭೌಮನ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ.

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ

ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್

ಕರ್ಣ ಸೀರಿಯಲ್​ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ.

Raj Kumar Death anniversary: ಇಂದು ಡಾ.ರಾಜ್‌ ಪುಣ್ಯತಿಥಿ; ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

ಇಂದು ಡಾ.ರಾಜ್‌ ಕುಮಾರ್‌ 19ನೇ ಪುಣ್ಯತಿಥಿ

Raj Kumar Death anniversary:ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ.

Rashmika Mandanna: ಒಮನ್‌ ಟ್ರಿಪ್‌ನಲ್ಲಿರೋ ರಶ್ಮಿಕಾ ಮತ್ತಷ್ಟು ಫೋಟೋಗಳು ವೈರಲ್‌- ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದ ಫ್ಯಾನ್ಸ್‌

ವಿಜಯ್‌ ದೇವರಕೊಂಡ ಕ್ಲಿಕ್ಕಿಸಿದ ಶೇರ್‌ ಮಾಡಿದ ರಶ್ಮಿಕಾ

Rashmika Mandanna: ಬೀಚ್‌, ಸನ್‌ಸೆಟ್‌, ನೇಚರ್‌ ಅನ್ನು ಅತಿ ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಅವರ ಈಗ ವೈರಲಾಗುತ್ತಿರೋ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ಇನ್ನು ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಇವರಿಬ್ಬರ ಫ್ಯಾನ್ಸ್ ಊಹಿಸಿದ್ದಾರೆ. ಈ ಫೊಟೋದಲ್ಲಿ ರಶ್ಮಿಕಾ, ಎತ್ತರದ ಪ್ರದೇಶದಲ್ಲಿ ಕುಳಿತು ಒಮನ್‌ನ ಸನ್‌ಸೆಟ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

Anirudh Ravichander: ಮೇ.31ಕ್ಕೆ ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಜೆ!

ಬೆಂಗಳೂರಿನಲ್ಲಿ ಅನಿರುದ್ಧ್ ಮ್ಯೂಸಿಕ್ ಹಬ್ಬ!

ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದೂ ಕೂಡ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ಅನಿರುದ್ಧ್ ರವಿಚಂದರ್ ರೆಡಿಯಾಗಿದ್ದಾರೆ.