ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್

ಚಾಮುಂಡಿ ಬೆಟ್ಟದಲ್ಲಿ ರಣವೀರ್; ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕ್ಷಮೆಯಾಚನೆ

ಬಾಲಿವುಡ್ ನಟ ರಣವೀರ್ ಸಿಂಗ್ ಗೋವಾ ಚಲನಚಿತ್ರೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವಕೋಲದ ದೃಶ್ಯವನ್ನು ಅಣಕಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಸಂಬಂಧ ಅವರೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯೊಂದಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ʻಪೆದ್ದಿ ಚಿತ್ರದ ನಟನೆಗಾಗಿ ರಾಮ್‌ ಚರಣ್‌ಗೆ ನ್ಯಾಷನಲ್‌ ಅವಾರ್ಡ್‌ ಸಿಗಬೇಕುʼ ಎಂದ ನಟ ಶಿವರಾಜ್‌ಕುಮಾರ್‌

ʻನನಗೆ ರಾಮ್ ಚರಣ್‌, ನನ್ನ ತಮ್ಮ ಅಪ್ಪು ಥರ..ʼ ಎಂದ ಶಿವರಾಜಕುಮಾರ್

ಬೆಂಗಳೂರಿನಲ್ಲಿ ಜರುಗಿದ ‘ಪೆದ್ದಿ’ ಚಿತ್ರದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಅವರ ಕುಸ್ತಿ ಕೋಚ್ 'ಗೌರನಾಯ್ಡು' ಪಾತ್ರದಲ್ಲಿ ನಟಿಸಿರುವ ಶಿವಣ್ಣ, ರಾಮ್ ಚರಣ್ ತಮಗೆ ಅಪ್ಪು (ಪುನೀತ್) ತರಹದ ಸ್ವಂತ ಸಹೋದರನಿದ್ದಂತೆ ಎಂದು ಭಾವುಕರಾಗಿದ್ದಾರೆ.

ಬೆಂಗಳೂರಿಗೆ ಬಂದಿದ್ದ ರಾಮ್‌ ಚರಣ್‌ ಜೊತೆ ಹೈಲೈಟ್‌ ಆದ ಬಾಡಿಗಾರ್ಡ್;‌ ಯಾರೀತ? ʻಮೆಗಾ ಪವರ್‌ ಸ್ಟಾರ್‌ʼ ಕೊಡ್ತಿರುವ ಸಂಬಳ ಎಷ್ಟು?

ರಾಮ್ ಚರಣ್‌ಗೆ ರಕ್ಷಣಾ ಕವಚದಂತಿರುವ ಈ ಬಾಡಿಗಾರ್ಡ್‌ ಯಾರು? ಸ್ಯಾಲರಿ ಎಷ್ಟು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟನ ಜೊತೆಗಿದ್ದ ಅಂತರರಾಷ್ಟ್ರೀಯ ಬಾಡಿಗಾರ್ಡ್ ಕೆವಿನ್ ಕುಂಟ ಎಲ್ಲರ ಗಮನ ಸೆಳೆದಿದ್ದಾರೆ. ಆಫ್ರಿಕಾ ಮೂಲದ, ಇಟಲಿಯ ಪ್ರೊಫೆಷನಲ್ ಎಂಎಂಎ ಚಾಂಪಿಯನ್ ಆಗಿರುವ ಕೆವಿನ್‌ಗೆ ರಾಮ್ ಚರಣ್ ದುಬಾರಿ ಸಂಬಳ ಕೊಡುತ್ತಿದ್ದಾರೆ.

Photos: ಡಾಕ್ಟರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ನಿರಂಜನ್‌ ಸುಧೀಂದ್ರ; ಉಪೇಂದ್ರ ಕುಟುಂಬದಲ್ಲಿ ಮದುವೆ ಸಂಭ್ರಮ

Photos: ಅದ್ದೂರಿಯಾಗಿ ನಡೆದ ಉಪೇಂದ್ರ ಅಣ್ಣನ ಮಗ ನಿರಂಜನ್ ನಿಶ್ಚಿತಾರ್ಥ

`ರಿಯಲ್ ಸ್ಟಾರ್' ಉಪೇಂದ್ರ ಅವರ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಿದೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಪುತ್ರ, ನಟ ನಿರಂಜನ್ ಸುಧೀಂದ್ರ ಅವರು ಮೇ 25ರ ಸೋಮವಾರದ ಶುಭ ಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಸಂಜನಾ ಬಿ. ರಾಜ್ ಅವರೊಂದಿಗೆ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ನಿರಂಜನ್ ಮತ್ತು ಸಂಜನಾ ಪರಸ್ಪರ ಉಂಗುರ ಬದಲಿಸಿಕೊಂಡರು. ಸದ್ಯದಲ್ಲೇ ಈ ಜೋಡಿಯ ವಿವಾಹ ಮಹೋತ್ಸವ ಜರುಗಲಿದ್ದು, ನಿಶ್ಚಿತಾರ್ಥದ ಆಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ನಟ ವಿಜಯ ರಾಘವೇಂದ್ರ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ನೀಡಿದ `ಮಹಾನ್' ಟೀಮ್‌; ರೈತರ ಪರ ಧ್ವನಿ ಎತ್ತಿದ ʻಚಿನ್ನಾರಿ ಮುತ್ತʼ

ನಟ ವಿಜಯ ರಾಘವೇಂದ್ರಗೆ ಬರ್ತ್‌ಡೇ ಸರ್ಪ್ರೈಸ್ ನೀಡಿದ 'ಮಹಾನ್' ಟೀಮ್‌

ನಟ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ 'ಮಹಾನ್' ಚಿತ್ರತಂಡ ವಿಶೇಷ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಪಿ.ಸಿ. ಶೇಖರ್ ನಿರ್ದೇಶನದ 11ನೇ ಚಿತ್ರವಾದ ಇದರಲ್ಲಿ ವಿಜಯ್ ರಾಘವೇಂದ್ರ ರೈತರ ಪರ ಧ್ವನಿ ಎತ್ತುವ ಕಷ್ಟಜೀವಿ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ.

ʻದಳಪತಿʼ ವಿಜಯ್‌, ಅಜಿತ್‌, ಸೂರ್ಯ ಪಾಲಿಗೆ ಲಕ್ಕಿಯಾದ ನಟಿ ತ್ರಿಶಾ ಕೃಷ್ಣನ್ ;‌ 25 ವರ್ಷಗಳಾದರೂ ಕುಂದದ ʻಕುಂದವೈʼ ಚಾರ್ಮ್‌!

ವಿಜಯ್, ಅಜಿತ್, ಸೂರ್ಯಗೆ ‌ನಟಿ ತ್ರಿಶಾ ಲಕ್ಕಿ ಚಾರ್ಮ್! ಹೇಗೆ ಗೊತ್ತಾ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದರೂ ನಟಿ ತ್ರಿಷಾ ಕೃಷ್ಣನ್ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ದಳಪತಿ ವಿಜಯ್, ಅಜಿತ್ ಕುಮಾರ್ ಹಾಗೂ ಸೂರ್ಯ ಅವರ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಚಿತ್ರಗಳಿಗೆ ಇವರೇ ನಾಯಕಿಯಾಗಿದ್ದು, ತ್ರಿಶಾ ಈಗ ಉದ್ಯಮದ 'ಲಕ್ಕಿ ಚಾರ್ಮ್' ಆಗಿ ಹೊರಹೊಮ್ಮಿದ್ದಾರೆ.

Don 3 Movie: ʻಧುರಂಧರ್‌ʼ ಹೀರೋ ರಣವೀರ್ ಸಿಂಗ್‌ಗೆ ಬಿಗ್‌ ಶಾಕ್! ಚಿತ್ರರಂಗದಿಂದಲೇ ನಿಷೇಧ, ಯಾಕಿಂಥ ನಿರ್ಧಾರ?

ಚಿತ್ರರಂಗದಿಂದ ನಟ ರಣವೀರ್ ಸಿಂಗ್‌ ಬ್ಯಾನ್‌! ಇಂಥ ನಿರ್ಧಾರಕ್ಕೆ ಕಾರಣವೇನು?

'ಡಾನ್ 3' ಚಿತ್ರದಿಂದ ಕೊನೆ ಕ್ಷಣದಲ್ಲಿ ಹೊರನಡೆದ ಕಾರಣಕ್ಕೆ ನಟ ರಣವೀರ್ ಸಿಂಗ್ ಅವರನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಚಿತ್ರರಂಗದಿಂದ ಅಧಿಕೃತವಾಗಿ ನಿಷೇಧಿಸಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಆಗಿರುವ 45 ಕೋಟಿ ರೂಪಾಯಿಗಳ ಭಾರಿ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಒತ್ತಾಯಿಸಿದ್ದಾರೆ.

ʻಡಿಯರ್ ಹಸ್ಬೆಂಡ್’ ಸಿನಿಮಾಕ್ಕಾಗಿ ಒಂದಾದ ಸೂರಜ್ ಗೌಡ - ಶರಣ್ಯಾ ಶೆಟ್ಟಿ; ಕಂಪ್ಲೀಟ್ ಆಯ್ತು ಸಾಂಗ್ಸ್ ರೆಕಾರ್ಡಿಂಗ್

ʻಡಿಯರ್ ಹಸ್ಬೆಂಡ್ʼ ಚಿತ್ರಕ್ಕಾಗಿ ಟಪೋರಿ ಸಾಂಗ್‌ ಹಾಡಿದ ಬಾಲಿವುಡ್‌ ಗಾಯಕ

ಸೂರಜ್ ಗೌಡ ಹಾಗೂ ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದ ಹಾಡುಗಳ ಧ್ವನಿಮುದ್ರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವೀರ್ ಸಮರ್ಥ್ ಸಂಗೀತದಲ್ಲಿ ಮೂಡಿಬಂದಿರುವ ಮಂಡ್ಯ ಸೊಗಡಿನ ‘ಮಾಲಾಶ್ರೀ ಸಿಕ್ಕಳೋ...’ ಟಪೋರಿ ಗೀತೆಗೆ ಬಾಲಿವುಡ್‌ನ ನಕಾಶ್ ಧ್ವನಿಯಾಗಿದ್ದಾರೆ.

Crazy Brahma Event: ʻನಮ್‌ ಯಜಮಾನ್ರು ಅಂದು ಕನಸುಗಾರ, ಇಂದು ಮಾತುಗಾರʼ; ರವಿಚಂದ್ರನ್‌ಗೆ ಹಂಸಲೇಖ ಬಹುಪರಾಕ್‌

ʻಕ್ರೇಜಿ-ಬ್ರಹ್ಮʼ ಇವೆಂಟ್‌ನಲ್ಲಿ ರವಿಚಂದ್ರನ್ - ಹಂಸಲೇಖ ‌ಜೋಡಿಯ ಮ್ಯಾಜಿಕ್

'ಕ್ರೇಜಿಸ್ಟಾರ್' ರವಿಚಂದ್ರನ್ ಹಾಗೂ 'ನಾದಬ್ರಹ್ಮ' ಹಂಸಲೇಖ ಜೋಡಿಯನ್ನು ಒಂದೇ ವೇದಿಕೆಯಲ್ಲಿ ಗೌರವಿಸಲು ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೇನಾದಲ್ಲಿ "ಕ್ರೇಜಿ - ಬ್ರಹ್ಮ" ಮೆಗಾ ಇವೆಂಟ್ ಆಯೋಜಿಸಲಾಗಿದೆ. ಈ ಜೋಡಿಯ 16 ವರ್ಷಗಳ ಸಂಗೀತ ಪಯಣವನ್ನು ಕೊಂಡಾಡುವ ಈ ಕಾರ್ಯಕ್ರಮದ ಅಂಗವಾಗಿ 80 ಅಡಿಯ ಬೃಹತ್ ಕಟೌಟ್ ಅನಾವರಣಗೊಳಿಸಲಾಗಿದೆ.

ಧನುಷ್‌ ನಟನೆಯ ʻಕರʼ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಘೋಷಣೆ; ಯಾವಾಗ, ಎಲ್ಲಿ ನೋಡಬಹುದು?

ಧನುಷ್ ನಟನೆಯ ‘ಕರ’ OTT ಸ್ಟ್ರೀಮಿಂಗ್ ಡೇಟ್ ಅನೌನ್ಸ್‌;‌ ಫ್ಯಾನ್ಸ್‌ ಖುಷ್‌!

ತಮಿಳು ನಟ ಧನುಷ್ ಮತ್ತು ಮಮಿತಾ ಬೈಜು ಅಭಿನಯದ ‘ಕರ’ ಸಿನಿಮಾ ಮೇ 28 ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಜಾಗತಿಕವಾಗಿ ಸ್ಟ್ರೀಮಿಂಗ್ ಆಗಲಿದೆ. ವಿಘ್ನೇಶ್ ರಾಜಾ ನಿರ್ದೇಶನದ ಈ ಥ್ರಿಲ್ಲರ್ ಚಿತ್ರವು 1990ರ ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ, ಬ್ಯಾಂಕ್ ದರೋಡೆ ಮತ್ತು ಅಪರಾಧ ಲೋಕಕ್ಕೆ ಮರಳುವ ಮಾಜಿ ಕಳ್ಳನೊಬ್ಬನ ಕಥೆಯನ್ನು ಒಳಗೊಂಡಿದೆ.

Padma Awards 2026: ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಲಿಸ್ಟ್‌

Padma Awards 2026: ಈ ವರ್ಷ ಭಾರತ ಸರ್ಕಾರ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಐದು ಪದ್ಮವಿಭೂಷಣ ಗೌರವಗಳು, 13 ಪದ್ಮಭೂಷಣ ಪ್ರಶಸ್ತಿಗಳು ಮತ್ತು 113 ಪದ್ಮಶ್ರೀ ಗೌರವಗಳು ಸೇರಿವೆ. ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಗೌರವಗಳನ್ನು ನೀಡಲಾಗುತ್ತದೆ.

Jagapathi Babu: ಖಿನ್ನತೆಯಿಂದ ಹೊರಬರಲು ಪ್ರಭಾಸ್‌ ಸಹಾಯ! ಜಗಪತಿ ಬಾಬು ಮುಕ್ತ ಮಾತು

ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದ್ದೇ ಪ್ರಭಾಸ್‌ ಎಂದ ಖ್ಯಾತ ನಟ!

Actor Prabhas: ಹಿರಿಯ ನಟ ಜಗಪತಿ ಬಾಬು ಇತ್ತೀಚೆಗೆ ಪ್ರಭಾಸ್ ಬಗ್ಗೆ ಮೆಚ್ಚುಗೆ ಮಾತು ಮಾತನಾಡಿದರು. ನಟ ಖಿನ್ನತೆಯಿಂದ ಬಳಲುತ್ತಿದ್ದಾಗ ಸಹಾಯ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಜೀವನದಲ್ಲಿ ಕಠಿಣ ಭಾವನಾತ್ಮಕ ಹಂತವನ್ನು ಎದುರಿಸುತ್ತಿದ್ದಾಗ ಪ್ರಭಾಸ್ ಹೇಗೆ ಆತ್ಮವಿಶ್ವಾಸ ತುಂಬಿದರು ಎಂಬುದನ್ನು ಜಗಪತಿ ಹಂಚಿಕೊಂಡರು. ಪ್ರಭಾಸ್ ಚಿತ್ರೀಕರಣದಿಂದ ಹಿಂತಿರುಗುವಾಗ ತಮ್ಮನ್ನು ಲವಲವಿಕೆಯಿಂದ ಮತ್ತು ಪ್ರೇರಣೆಯಿಂದ ಇರಿಸಿಕೊಳ್ಳಲು ವೈಯಕ್ತಿಕವಾಗಿ ಭೇಟಿ ಮಾಡಲು ಬಂದಿದ್ದರು ಎಂದು ನಟ ಬಹಿರಂಗಪಡಿಸಿದರು.

Thalapathy Vijay: ʻಜನ ನಾಯಗನ್‌ʼ ಚಿತ್ರಕ್ಕೆ ಸಿಕ್ತು ಹೊಸ ರಿಲೀಸ್‌ ಡೇಟ್‌? ಒಂದೇ ದಿನ 2 ಸಿನಿಮಾ ರಿಲೀಸ್‌ ಮಾಡಲಿದೆಯಾ `ಕೆವಿಎನ್‌ ಪ್ರೊಡಕ್ಷನ್ಸ್'?‌

ಸಿಎಂ ವಿಜಯ್ ಹುಟ್ಟುಹಬ್ಬದ ಉಡುಗೊರೆಯಾಗಿ ಬರಲಿದೆಯಾ ʻಜನ ನಾಯಗನ್‌ʼ?

ತಮಿಳುನಾಡು ಸಿಎಂ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಲ್ಲಿ ಐದು ತಿಂಗಳಿನಿಂದ ಪ್ರಮಾಣಪತ್ರ ಸಿಗದೆ ನೆನೆಗುದಿಗೆ ಬಿದ್ದಿದೆ. ಆದರೆ ಟಿಕೆಟ್ ಬುಕಿಂಗ್ ಆಪ್‌ಗಳಲ್ಲಿ ಈ ಚಿತ್ರವು ಜೂನ್ 19 ರಂದು ಬಿಡುಗಡೆಯಾಗಲಿದೆ ಎಂದು ತೋರಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ʻರಾಜಕಾರಣದ ಮೂಲಕ ನನ್ನ 3ನೇ ಇನ್ನಿಂಗ್ಸ್‌ ಆರಂಭಿಸಿದ್ದೇನೆʼ ಎಂದ ನಿರೂಪಕಿ ಜಾಹ್ನವಿ; ಜೆಡಿಎಸ್‌ ಪಕ್ಷ ಸೇರಿದ ಮಾಜಿ ʻಬಿಗ್‌ ಬಾಸ್‌ʼ ಸ್ಪರ್ಧಿ

JDS ಸೇರಿ ʻ3ನೇ ಇನ್ನಿಂಗ್ಸ್ ಆರಂಭʼ ಎಂದ ʻಬಿಗ್ ಬಾಸ್ʼ ಜಾಹ್ನವಿ

ಕಿರುತೆರೆ ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಾಧ್ಯಮ ಹಾಗೂ ರಿಯಾಲಿಟಿ ಶೋಗಳ ಯಶಸ್ಸಿನ ಬಳಿಕ ಇದು ತಮ್ಮ ಮೂರನೇ ಇನ್ನಿಂಗ್ಸ್ ಎಂದು ಬಣ್ಣಿಸಿರುವ ಅವರು, ಸಮಾಜ ಸೇವೆಯೇ ತಮ್ಮ ಏಕೈಕ ಹೆಗ್ಗುರಿಯಾಗಿದೆ ಎಂದಿದ್ದಾರೆ.

Amruthadhaare Serial: ಅನಿರೀಕ್ಷಿತವಾಗಿ ಬಂದಿರೋ ಸವಾಲನ್ನು  ಹೇಗೆ ಎದುರಿಸ್ತಾರೆ ಗೌತಮ್ - ಭೂಮಿಕಾ ?

ಅನಿರೀಕ್ಷಿತವಾಗಿ ಬಂದಿರೋ ಸವಾಲನ್ನು ಹೇಗೆ ಎದುರಿಸ್ತಾರೆ ಗೌತಮ್ ?

Amruthadhaare Serial: ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಮತ್ತೊಮ್ಮೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಹಿಮಾಗೆ ಮಕ್ಕಳು ಆಗದೇ ಇರೋ ಸಂಗತಿ ತಿಳಿದು ಡಿಪ್ರೇಶನ್‌ಗೆ ಹೋಗಿದ್ದಾಳೆ. ಅಷ್ಟೇ ಅಲ್ಲ ಭೂಮಿ ತಾಯಿ ಇನ್ನೊಂದು ಡಿಮ್ಯಾಂಡ್‌ ಮಾಡಿದ್ದಾರೆ. ಇದನ್ನು ಕೇಳಿ ಶಾಕ್‌ ಆಗಿದ್ದಾನೆ ಗೌತಮ್‌.

ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೂ ಅಶ್ಲೀಲ ಸನ್ನೆ; ವಿಕೃತ ಮನಸ್ಸಿನ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಕೆಂಡಾಮಂಡಲ

ಅಶ್ಲೀಲ ಸನ್ನೆ ತೋರಿಸಿದ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಗರಂ!

ಸ್ವಿಮ್ಮಿಂಗ್ ಪೂಲ್ ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೆ ಪುರುಷರು ಅಶ್ಲೀಲ ಸನ್ನೆ ಮಾಡಿದ ವೀಡಿಯೋ ವೈರಲ್‌ ಆಗಿದ್ದು, ನಟಿ ಭೂಮಿ ಪೆಡ್ನೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಇದು ಯುವ ಪೀಳಿಗೆಯ ಆತಂಕಕಾರಿ ವಿಕೃತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ.

Toxic movie:  ‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

Toxic movie: ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯಶ್‌ ಅಮ್ಮ ಪುಷ್ಪಾ ಅರುಣ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳು ಬರ್ತಿವೆ. ಪ್ರೇಕ್ಷಕರಿಗೆ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಾರೆ. ಅಭಿರುಚಿ ಬದಲಾದಂತೆ ಕಥೆ, ಸಿನಿಮಾ ಎಲ್ಲವೂ ಬದಲಾಗುತ್ತದೆ ಎಂದು ಪುಷ್ಪಾ ಅರುಣ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Ananya Panday: ಭರತನಾಟ್ಯ ದೃಶ್ಯ ವೈರಲ್;  ಭಾರಿ ಟೀಕೆಗೆ ಗುರಿಯಾದ ಅನನ್ಯಾ ಪಾಂಡೆ

ಭರತನಾಟ್ಯ ದೃಶ್ಯ ವೈರಲ್; ಭಾರಿ ಟೀಕೆಗೆ ಗುರಿಯಾದ ಅನನ್ಯಾ ಪಾಂಡೆ

Ananya Panday Trolled: ಚಿತ್ರದ ಭರತನಾಟ್ಯ ನೃತ್ಯ ಸನ್ನಿವೇಶವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನನ್ಯಾ ಪಾಂಡೆ ಟೀಕೆಗೆ ಗುರಿಯಾಗಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ನಟಿ ಭರತನಾಟ್ಯ ಪ್ರದರ್ಶಿಸುವ ಕಿರು ತುಣುಕು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೆಲವು ನೆಟಿಜನ್‌ಗಳು ಈ ನೃತ್ಯ ಚಲನೆಗಳನ್ನು 'ರೊಬೊಟಿಕ್' ಎಂದು ಕರೆದಿದ್ದಾರೆ. ಏತನ್ಮಧ್ಯೆ, ಇನ್ನೂ ಕೆಲವರು ಭರತನಾಟ್ಯಕ್ಕೆ ಮಾಡುವ ಸಂಪೂರ್ಣ ಗೌರವ ಎಂದು ಕರೆದಿದ್ದಾರೆ.

Kangana Ranaut:  ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು!

ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು!

Kangana Ranaut: ಕ್ಯಾನೆಸ್‌ನಲ್ಲಿ ಯಾವಾಗಲೂ ತಮ್ಮ ಲುಕ್‌ಗಳಿಂದ ಗಮನ ಸೆಳೆಯುತ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಭಾಗವು ಐಶರ್ಯಾ ಅವರ ಲುಕ್‌ಗಳನ್ನು ಟ್ರೋಲ್ ಮಾಡಿದೆ. ನಟಿ ಕಂಗನಾ ರನೌತ್ ಅವರು ಐಶ್ವರ್ಯಾ ಅವರನ್ನು ಬೆಂಬಲಿಸಿ, ಅವರು 'ಅದ್ಭುತವಾಗಿ ಕಾಣುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

Hera Pheri 3: ʻಹೇರಾ ಫೇರಿ 3’ ಸಿನಿಮಾದಿಂದ ಮತ್ತೆ  ಹೊರಬಂದ ಪರೇಶ್ ರಾವಲ್? ಕಾರಣ ಏನು?

ʻಹೇರಾ ಫೇರಿ 3’ ಸಿನಿಮಾದಿಂದ ಮತ್ತೆ ಹೊರಬಂದ ಪರೇಶ್ ರಾವಲ್?

Hera Pheri 3: ಕಳೆದ ವರ್ಷ, ಹೇರಾ ಫೆರಿ 3 ಚಿತ್ರೀಕರಣ ಪ್ರಾರಂಭವಾಗುವ ಹಂತದಲ್ಲಿದ್ದಾಗ, ಪರೇಶ್ ರಾವಲ್ ಹಠಾತ್ತನೆ ಚಿತ್ರದಿಂದ ಹಿಂದೆ ಸರಿದರು, ಇದು ನ್ಯಾಯಾಲಯದ ಪ್ರಕರಣಕ್ಕೆ ಕಾರಣವಾಯಿತು. ವಿವಾದದ ನಂತರ, ಅವರು ಮತ್ತೆ ಚಿತ್ರಕ್ಕೆ ಸೇರಿಕೊಂಡರು. ಪರೇಶ್ ರಾವಲ್ ಅವರು ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ.

Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಇಟಲಿ ಪ್ರವಾಸದಲ್ಲಿ ಮೋದಿ ಅವರು ಮೆಲೋನಿಗೆ ಕೇವಲ ಮೆಲೊಡಿ ಮಾತ್ರ ಕೊಡಲಿಲ್ಲ. ಅಸ್ಸಾಂನಲ್ಲಿ ತಯಾರಾಗುವ ‘ಮುಗಾ’ ರೇಷ್ಮೆ ಶಾಲು ಮತ್ತು ಮಣಿಪುರದಲ್ಲಿ ತಯಾರಾಗುವ ‘ಶಿರುಯಿ ಲಿಲಿ’ ರೇಷ್ಮೆ ಶಾಲನ್ನು ಕೂಡ ಕೊಟ್ಟಿದ್ದರು. ಆದರೆ ಅದರ ಬಗ್ಗೆ ಎಲ್ಲಿಯೂ ಹೆಚ್ಚು ಸುದ್ದಿ ಆಗಲಿಲ್ಲ. ಸುದ್ದಿ ಆದದ್ದು ಐವತ್ತು ರೂಪಾಯಿಯ ಮೆಲೊಡಿ ಚಾಕ್ಲೇಟ್ ಮಾತ್ರ.

Anchor Jhanvi: ಬಿಗ್‌ಬಾಸ್‌ ಖ್ಯಾತಿಯ ಜಾಹ್ನವಿ ರಾಜಕೀಯಕ್ಕೆ ಎಂಟ್ರಿ; ಎಚ್‌ಡಿಕೆ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ

ನಿರೂಪಕಿ, ಬಿಗ್‌ಬಾಸ್‌ ಖ್ಯಾತಿಯ ಜಾಹ್ನವಿ ಜೆಡಿಎಸ್‌ ಸೇರ್ಪಡೆ

ನಟಿ ಹಾಗೂ ಟಿವಿ ನಿರೂಪಕಿ ಜಾಹ್ನವಿ ಅವರು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್‌.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾನುವಾರ ಸೇರ್ಪಡೆಯಾಗಿದ್ದಾರೆ. ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡ ಅವರು ಪಕ್ಷದ ಧ್ವಜವನ್ನು ನೀಡಿ ಜಾಹ್ನವಿ ಅವರನ್ನು ಸ್ವಾಗತಿಸಿದರು.

Ragini IPS 2: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ರಾಗಿಣಿ ದ್ವಿವೇದಿ; ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಜಗ್ಗೇಶ್‌ ಮಕ್ಕಳು

ಜನ್ಮದಿನದಂದೇ ಫ್ಯಾನ್ಸ್‌ಗೆ ಬಿಗ್ ಗಿಫ್ಟ್ ನೀಡಿದ ನಟಿ ರಾಗಿಣಿ ದ್ವಿವೇದಿ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ 'ರಾಗಿಣಿ ಐಪಿಎಸ್ 2' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಜಂಟಿಯಾಗಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದ ಸೂರ್ಯ ನಟನೆಯ ʻಕರುಪ್ಪುʼ ಸಿನಿಮಾ; ಕರುನಾಡಿನಲ್ಲಿ 9 ದಿನಕ್ಕೆ ಆದ ಗಳಿಕೆ ಎಷ್ಟು?

ಬಾಕ್ಸ್ ಆಫೀಸ್‌ನಲ್ಲಿ Karuppu ಹವಾ; ಕರ್ನಾಟಕದಲ್ಲಿ ಆದ ಗಳಿಕೆ ಎಷ್ಟು?‌

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ 'ಕರುಪ್ಪು' ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 9 ದಿನಗಳಲ್ಲಿ ಬರೋಬ್ಬರಿ 217.74 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಕರ್ನಾಟಕದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ದಾಖಲೆ ಪ್ರಮಾಣದ ಹಣವನ್ನು ಬಾಚಿಕೊಂಡಿದೆ.

Loading...