ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

The Devil Movie: ಒಟಿಟಿಗೆ ಬರುತ್ತಿದೆ ದರ್ಶನ್ ಸಿನಿಮಾ ‘ಡೆವಿಲ್’: ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರುತ್ತಿದೆ ದರ್ಶನ್ ಸಿನಿಮಾ ‘ಡೆವಿಲ್’: ಸ್ಟ್ರೀಮಿಂಗ್‌ ಎಲ್ಲಿ?

The Devil Movie: ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡೋಣ ಎಂದು ಸುಮ್ಮನಾಗಿದ್ದರು. ಒಂದು ತಿಂಗಳು ಎರಡು ತಿಂಗಳು ಕಳೆದರೂ ಸಿನಿಮಾ ಓಟಿಟಿಗೆ ಎಂಟ್ರಿ ಕೊಡಲಿಲ್ಲ. ಅಭಿಮಾನಿಗಳಂತೂ ಕಾದು ಕಾದು ಸುಮ್ಮನಾಗಿದ್ದರು. ಇಷ್ಟು ತಡವಾಗಿ ಒಟಿಟಿಗೆ ಬರಲು ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕೊನೆಗೂ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಿದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

B Jayashree Karavali: ವಿವಾದಗಳ ಮಧ್ಯೆ ಕರಾವಳಿ ಚಿತ್ರತಂಡದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!

ವಿವಾದಗಳ ಮಧ್ಯೆ ಕರಾವಳಿ ಚಿತ್ರತಂಡದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!

B Jayashree Karavali: ಕರಾವಳಿ ಅಪ್ಪಟ ಕನ್ನಡದ ಸಿನಿಮಾ, ನಮ್ಮ ಮಣ್ಣಿನ ಸಿನಿಮಾ. ಈ ಸಿನಿಮಾಗೆ ಜಯಶ್ರೀ ಹಾಡಿರುವುದು ಸಿನಿಮಾ ಸಂಗೀತ ವಿಭಾಗಕ್ಕೆ ಮತ್ತಷ್ಟು ತೂಕ ಬಂದಂತೆ ಆಗಿದೆ. ಜಯಶ್ರೀ ಅವರ ಕಂಚಿನ ಕಂಠದಿಂದ ಯಾವ ರೀತಿಯ ಹಾಡು ಮೂಡಿಬಂದಿದೆ ಎನ್ನುವುದು ಸದ್ಯದ ಕುತೂಹಲ.. ಈ ಸಿನಿಮಾದಲ್ಲಿ ಜಯಶ್ರೀ ಅವರು ಎಮೋಷನಲ್ ಹಾಡನ್ನು ಹಾಡಿದ್ದಾರಾ ಅಥವಾ ಡಿವೈನ್ ಹಾಡಿಗೆ ಧ್ವನಿಯಾಗಿದ್ದಾರಾ ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

'ಕರಾವಳಿ' ವಿವಾದದ ನಡುವೆಯೂ ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಪ್ರಜ್ವಲ್‌ ದೇವರಾಜ್‌ ಮನವಿ: ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದೇನು?

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ನಟ ಪ್ರಜ್ವಲ್ ದೇವರಾಜ್ ಹೇಳಿದ್ದೇನು?

Karavali Film Controversy: ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟಿಸಿರುವ ʼಕರಾವಳಿʼ ಸಿನಿಮಾ ಹಾಗೂ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆ ನಟ ಪ್ರಜ್ವಲ್ ದೇವರಾಜ್ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದು, ಚಿತ್ರ ಥಿಯೇಟರ್‌ನಲ್ಲೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

Amruthadhaare Serial: ದಿಯಾ‌ ಕಾಣೆಯಾಗಿರೋ ವಿಷ್ಯ ಜೈದೇವ್ ನೆಮ್ಮದಿ ಕೆಡಿಸ್ತಿದೆ! ಮುಂದೇನು?

Amruthadhaare: ದಿಯಾ‌ ಕಾಣೆಯಾಗಿರೋ ವಿಷ್ಯ ಜೈದೇವ್ ನೆಮ್ಮದಿ ಕೆಡಿಸ್ತಿದೆ!

Amruthadhaare: ಇನ್ನೊಂದು ಕಡೆ 'ಅಮೃತಧಾರೆ' ಧಾರಾವಾಹಿಯಲ್ಲಿ ಪ್ರೇಕ್ಷಕರು ನಂಬಲಾಗದ ಟ್ವಿಸ್ಟ್ ಎದುರಾಗಿದೆ. ಕಥಾನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಆದರೆ, ಈ ಶಾಕಿಂಗ್ ವರದಿಯ ಹಿಂದೆ ಗೌತಮ್ ಮಲತಾಯಿ ಶಾಕುಂತಲಾದೇವಿಯ ಕುತಂತ್ರ ಇರಬಹುದೇ ಎಂಬ ಬಲವಾದ ಅನುಮಾನ ಈಗ ವೀಕ್ಷಕರಲ್ಲಿ ಮೂಡಿದೆ.

Double Occupancy OTT Release: ಕ್ಷಣ ಕ್ಷಣಕ್ಕೂ ಟ್ವಿಸ್ಟ್‌! ಈ ಫ್ಯಾಂಟಸಿ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಕ್ಷಣ ಕ್ಷಣಕ್ಕೂ ಟ್ವಿಸ್ಟ್‌! ಈ ಫ್ಯಾಂಟಸಿ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Double Occupancy OTT Release: ಅಶ್ವಿನ್ ಕಂದಸಾಮಿ ನಿರ್ದೇಶನದ ಈ ಚಿತ್ರವು ಈಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಅಶ್ವಿನ್ ಕಂದಸಾಮಿ ಬರೆದು ನಿರ್ದೇಶಿಸಿರುವ (Direction) ಈ ಚಿತ್ರವನ್ನು ಅವನಿ ಮೂವೀಸ್ ಮತ್ತು ಬೆಂಜ್ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಖುಷ್ಬು ಸುಂದರ್ , ಆನಂದಿತಾ ಸುಂದರ್, ಎಸಿ ಷಣ್ಮುಗಂ ಮತ್ತು ಎಸಿಎಸ್ ಅರುಣ್ ಕುಮಾರ್ (Arun Kumar) ನಿರ್ಮಿಸಿದ್ದಾರೆ.

Ramayana Movie: 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಚಿತ್ರದ ಪ್ರಚಾರ; ಏನಿದರ ವಿಶೇಷತೆ?

400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಚಿತ್ರದ ಪ್ರಚಾರ

Ramayana Movie: ಚಿತ್ರಕಲಾ ಸ್ಪರ್ಧೆಗಳು, ರಸಪ್ರಶ್ನೆಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಇತರ ತರಗತಿ ಚಟುವಟಿಕೆಗಳ ಮೂಲಕ ಯುವ ಪ್ರೇಕ್ಷಕರು ರಾಮಾಯಣದ ವಿಷಯಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಯಾರಕರು ತಿಳಿಸಿದ್ದಾರೆ. ಮಕ್ಕಳು ಮತ್ತು ಅವರ ಕುಟುಂಬಗಳ ನಡುವೆ ಮಹಾಕಾವ್ಯದ ಸಾಂಸ್ಕೃತಿಕ ಮಹತ್ವದ ಬಗ್ಗೆ ಸಂಭಾಷಣೆಗಳನ್ನು ಪ್ರೇರೇಪಿಸುವ ಆಶಯವನ್ನು ಹೊಂದಿದೆ.

Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್  ಹೇಳಿದ್ದೇನು?

'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

Karavali movie controversy: ಇಂದು ನಟಿ ಮೇಘನಾ ರಾಜ್ (Meghana Raj) ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ. ನಿರ್ದೇಶಕಿ ಸುನಯನಾ ಸುರೇಶ್ ಬರೆದ ಅಭಿಪ್ರಾಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತಾ ಪ್ರೇಮ್ (Rakshiha Prem) ಹಂಚಿಕೊಂಡಿದ್ದಾರೆ. ಆ ಮೂಲಕ ಪ್ರಜ್ವಲ್ ದೇವರಾಜ್‌ಗೆ ರಕ್ಷಿತಾ ಪ್ರೇಮ್ ಪರೋಕ್ಷ ಬೆಂಬಲ ನೀಡಿದ್ದಾರೆ.

ಮಾಜಿ ಮೈದುನ ಅಖಿಲ್‌ ನಟನೆಯ ʻಲೆನಿನ್‌ʼ ಚಿತ್ರಕ್ಕೆ ಮನಸಾರೆ ಹಾರೈಸಿದ ಸಮಂತಾ; ಮಾಜಿ ಅತ್ತಿಗೆಯ ಮಾತಿಗೆ ಕರಗಿದ ನಾಗ ಚೈತನ್ಯ ಸಹೋದರ

Lenin Movie: ಮಾಜಿ ಮೈದುನ ಅಖಿಲ್‌ಗೆ ʻಒಳ್ಳೇದಾಗಲಿʼ ಎಂದ ನಟಿ ಸಮಂತಾ

ಅಕ್ಕಿನೇನಿ ಅಖಿಲ್ ನಟನೆಯ ‘ಲೆನಿನ್’ ಸಿನಿಮಾ ಜುಲೈ 10 ರಂದು ಭರ್ಜರಿಯಾಗಿ ತೆರೆಕಂಡಿದ್ದು, ಮಾಜಿ ಅತ್ತಿಗೆ ಸಮಂತಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಚಿತ್ರವನ್ನು ಅಖಿಲ್ ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅಕ್ಕಿನೇನಿ ಕುಟುಂಬದಿಂದ ಸ್ಯಾಮ್‌ ದೂರವಾಗಿದ್ದರೂ, ಆತ್ಮೀಯತೆಯನ್ನು ಹಾಗೇ ಉಳಿಸಿಕೊಂಡಿರುವುದು ವಿಶೇಷ.

Swayambhu Movie: ‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

Swayambhu Movie: ಸಣ್ಣ ಗ್ಯಾಪ್‌ನ ನಂತರ ಟಾಲಿವುಡ್‌ ನಲ್ಲಿ ಮರಳಿ ಹವಾ ಕ್ರಿಯೇಟ್ ಮಾಡಿರುವ ನಭಾ ನಟೇಶ್, ‘ನಾಗಬಂಧಂ’ ಸಕ್ಸಸ್ ಬೆನ್ನಲ್ಲೇ ‘ಸ್ವಯಂಭು’ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೊಸ ಬಿಗ್ ಆಫರ್‌ಗಳು ಕೂಡ ನಭಾ ಅವರನ್ನು ಹುಡುಕಿಕೊಂಡು ಬರುತ್ತಿವೆ.

ʻಮೈನಾʼ ಸೀರಿಯಲ್‌ನಲ್ಲಿ ರೋಚಕ ಕಬಡ್ಡಿ ಪಂದ್ಯಾವಳಿ; ತಾಂಡವ್ ಪಾತ್ರದಲ್ಲಿ ಧನುಷ್ ಭರ್ಜರಿ ಎಂಟ್ರಿ, ಸಾಥ್‌ ನೀಡಿದ ದುರ್ಗಾಶ್ರೀ

'ಮೈನಾ' ಧಾರಾವಾಹಿಯಲ್ಲಿ ಕಬಡ್ಡಿ ಹಂಗಾಮಾ; ಜೋಡಿಯಾದ ಧನುಷ್‌ - ದುರ್ಗಾಶ್ರೀ

'ಸನ್ ಉದಯ' ವಾಹಿನಿಯ ಪ್ರಸಿದ್ಧ 'ಮೈನಾ' ಧಾರಾವಾಹಿಯಲ್ಲಿ ಊರಿನ ದೇವಸ್ಥಾನದ ಪವಿತ್ರ ಕಿರೀಟ ಮುಡಿಯುವ ಹಕ್ಕಿಗಾಗಿ ರೋಚಕ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ವಿಶೇಷ ಸಂಚಿಕೆಗಳಿಗೆ 'ತಾಂಡವ್' ಪಾತ್ರದ ಮೂಲಕ ನಟ ಧನುಷ್ ಹಾಗೂ ದುರ್ಗಾಶ್ರೀ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

Rishab Shetty: ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ! ಏನಿದು ಮ್ಯಾಟರ್‌?

ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ!

Rishab Shetty: ರಿಷಬ್‌ ಟ್ವೀಟ್‌ನಲ್ಲಿ ಕಿಚ್ಚ ಸುದೀಪ್‌ ಸರ್, ಇಷ್ಟು ದೀರ್ಘಕಾಲದ ನಂತರ ನಿಮ್ಮನ್ನು ಮತ್ತೆ ಭೇಟಿಯಾದದ್ದು ತುಂಬಾ ಸಂತೋಷವಾಯಿತು. ನಿಮ್ಮ ಆತ್ಮೀಯ ಸ್ವಾಗತ ಮತ್ತು ಅದ್ಭುತ ಆತಿಥ್ಯಕ್ಕೆ ಧನ್ಯವಾದಗಳು. ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮೇಲೆ ತೋರುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ʻಪ್ರಜ್ವಲ್‌ ಸಜ್ಜನ ವ್ಯಕ್ತಿ, ಯಾವುದೇ ವಿವಾದಗಳಿಗೆ ತಲೆ ಹಾಕಿದವರಲ್ಲʼ; ʻಡೈನಾಮಿಕ್‌ ಪ್ರಿನ್ಸ್‌ʼ ಬೆಂಬಲಕ್ಕೆ ನಿಂತ ಮೇಘನಾ ರಾಜ್ ಸರ್ಜಾ

ʻಅಪಪ್ರಚಾರಕ್ಕೆ ಕಿವಿಗೊಡಬೇಡಿʼ; ಪ್ರಜ್ವಲ್‌ ಫ್ಯಾನ್ಸ್‌ಗೆ ನಟಿ ಮೇಘನಾ ಮನವಿ

ನಟ ಪ್ರಜ್ವಲ್ ದೇವರಾಜ್ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ ಹಾಗೂ ಅಪಪ್ರಚಾರದ ವಿರುದ್ಧ ಅವರ ಗೆಳತಿ, ನಟಿ ಮೇಘನಾ ರಾಜ್ ಸರ್ಜಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ಅವರ ಸಜ್ಜನಿಕೆ ಹಾಗೂ ಚಿತ್ರರಂಗದ ಮೇಲಿರುವ ಅವರ ಶ್ರದ್ಧೆಯನ್ನು ಶ್ಲಾಘಿಸಿರುವ ಮೇಘನಾ, ಮುಂಬರುವ 'ಕರಾವಳಿ' ಸಿನಿಮಾ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಲಿದೆ ಎಂದು ಹೇಳಿದ್ದಾರೆ.

ಜೀ ಕನ್ನಡದ ವಾಹಿನಿಯ ‘ಜೋಡಿ ನಂ.1’ ರಿಯಾಲಿಟಿ ಶೋಗೆ ಗ್ರ್ಯಾಂಡ್ ಫಿನಾಲೆ; ಟ್ರೋಫಿಗಾಗಿ ಪೈಪೋಟಿ ನಡೆಸುವ ಟಾಪ್‌ 10 ಕಪಲ್‌ಗಳ ಲಿಸ್ಟ್‌ ಇಲ್ಲಿದೆ

ʻಜೋಡಿ ನಂ.1ʼ ಶೋಗೆ ಗ್ರ್ಯಾಂಡ್‌ ಫಿನಾಲೆ; ಟ್ರೋಫಿ ಗೆಲ್ಲೋದು ಯಾರು?

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ.1’ ಯಶಸ್ವಿ 14 ವಾರಗಳ ಪಯಣ ಮುಗಿಸಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಜುಲೈ 11 ಮತ್ತು 12ರ ವಾರಾಂತ್ಯದ ರಾತ್ರಿ 9 ಗಂಟೆಗೆ ಈ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಕೋಟೆ ಪ್ರಭಾಕರ್, ಗೀತಾ ಭಟ್ ಸೇರಿದಂತೆ 10 ಸೆಲೆಬ್ರಿಟಿ ಜೋಡಿಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದಾರೆ.

ʻಪ್ರಜ್ವಲ್‌ ದೇವರಾಜ್‌ಗೆ ದುಬಾರಿ ಸಂಭಾವನೆ ಕೊಟ್ಟಿದ್ದೇ ಈ ಕಾರಣಕ್ಕೆ, ಆದ್ರೆ...ʼ: ʻಕರಾವಳಿʼ ಚಿತ್ರತಂಡದಿಂದ ಹೊಸ ಟ್ವಿಸ್ಟ್‌!

Karavali Movie: ಸಿಕ್ಸ್ ಪ್ಯಾಕ್ ಮಾಡಲು ಹಿಂದೇಟು ಹಾಕಿದ್ರಾ ನಟ ಪ್ರಜ್ವಲ್?

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ವಿವಾದ ಈಗ ಪೊಲೀಸ್ ಠಾಣೆ ತಲುಪಿದೆ. ಟ್ರೇಲರ್ ಲಾಂಚ್ ವೇಳೆ ಗದ್ದಲ ಸೃಷ್ಟಿಸಿದ ಅಪರಿಚಿತರ ವಿರುದ್ಧ ಹಾಗೂ ಚಿತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರದ ತನಿಖೆಗೆ ಆಗ್ರಹಿಸಿ ಚಿತ್ರತಂಡ ದೂರು ನೀಡಿದೆ. ಈ ಮಧ್ಯೆ ನಿರ್ಮಾಣ ಸಂಸ್ಥೆ ಕಡೆಯಿಂದ ಸ್ಪಷ್ಟನೆಯೂ ಸಿಕ್ಕಿದೆ.

ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ, ದೆಹಲಿ ಹೈಕೋರ್ಟ್ ಹೇಳಿದ್ದೇನು?

ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಹಾಗೂ ಸಾಲ ಮರುಪಾವತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 3 ತಿಂಗಳ ಸರಳ ಜೈಲು ಶಿಕ್ಷೆ ಮತ್ತು ಕೋಟಿಗಟ್ಟಲೆ ದಂಡ ವಿಧಿಸಿದೆ. ಪದೇಪದೇ ಕೊಟ್ಟ ಭರವಸೆಯನ್ನು ಈಡೇರಿಸದ ನಟ ರಾಜ್‌ಪಾಲ್‌ಗೆ ವಿನಾಯಿತಿ ನಿರಾಕರಿಸಿರುವ ಕೋರ್ಟ್, ಮೇಲ್ಮನವಿಗಾಗಿ 2 ತಿಂಗಳ ಕಾಲ ತೀರ್ಪು ಜಾರಿಗೆ ತಡೆ ನೀಡಿದೆ.

ʻಜೈಲರ್‌ʼ ನಟ ವಿನಾಯಕನ್ ವಿರುದ್ಧ ಮತ್ತೊಂದು ಕೇಸ್‌ ದಾಖಲು; 8 ವರ್ಷದ ಮಗುವಿನ ಫೋಟೋ ಬಳಸಿ ಅಶ್ಲೀಲ ಕಾಮೆಂಟ್‌ ಮಾಡಿದ ಆರೋಪ!

ಮಗುವಿನ ಫೋಟೋಗೆ ಅಶ್ಲೀಲ ಕಾಮೆಂಟ್‌; ʻಜೈಲರ್ʼ ನಟ ವಿನಾಯಕನ್‌ ವಿರುದ್ಧ ಕೇಸ್‌

ʻಜೈಲರ್ʼ ಸಿನಿಮಾ ಖ್ಯಾತಿಯ ನಟ ವಿನಾಯಕನ್ ವಿರುದ್ಧ ಕೇಸ್‌ ದಾಖಲಾಗಿದೆ. 8 ವರ್ಷದ ಹೆಣ್ಣುಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಅಶ್ಲೀಲ ಕಾಮೆಂಟ್ ಮಾಡಿದ ಹಾಗೂ ಐಟಿ ಕಾಯ್ದೆ ಉಲ್ಲಂಘಿಸಿದ ಗಂಭೀರ ಆರೋಪದಡಿ ಕೇರಳದ ಮಾವೇಲಿಕ್ಕರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ದೆಹಲಿಯಲ್ಲಿ ದುಬಾರಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್‌; ಕಿಂಗ್‌ ಖಾನ್‌ಗೆ ಈ ಬಿಲ್ಡಿಂಗ್‌ ಜೊತೆಗಿನ ಸೆಂಟಿಮೆಂಟ್‌ ಏನ್‌ ಗೊತ್ತಾ?

ದೆಹಲಿ ಮನೆಯ ಮೇಲೆ ನಟ ಶಾರುಖ್‌ ಖಾನ್ ಸೆಂಟಿಮೆಂಟ್; 37 ಕೋಟಿ ರೂ.ಗೆ ಖರೀದಿ!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿರುವ ತಮ್ಮ ಹಳೆಯ ಕೌಟುಂಬಿಕ ನಿವಾಸದ ಎರಡು ಮಹಡಿಗಳನ್ನು ಬರೋಬ್ಬರಿ 37 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಮದುವೆಯ ಆರಂಭಿಕ ದಿನಗಳಲ್ಲಿ ಗೌರಿ ಖಾನ್ ಜೊತೆ ಶಾರುಖ್‌ ವಾಸವಿದ್ದರು. ಇದೀಗ ಈ ಇಡೀ ಕಟ್ಟಡದ ಸಂಪೂರ್ಣ ಮಾಲೀಕತ್ವವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.

Mother Promise Review: ತಾಯಾಣೆ, ಇದು ತಲೆನೋವು ಬರಿಸುವ ಸಿನಿಮಾ ಅಲ್ಲ, ನಗಿಸಿ ಹೊಟ್ಟೆನೋವು ಬರಿಸುವ ಸಿನಿಮಾ!

ಧನಂಜಯ್‌ ನಿರ್ಮಾಣದ ‌ʻಮದರ್ ಪ್ರಾಮಿಸ್ʼ ಸಿನಿಮಾ ಹೇಗಿದೆ? ರೇಟಿಂಗ್ ಎಷ್ಟು?

Mother Promise Movie Review: ಡಾಲಿ ಧನಂಜಯ್ ನಿರ್ಮಾಣದ ಹಾಗೂ ಪೂರ್ಣಚಂದ್ರ ಮೈಸೂರು ನಿರ್ದೇಶನದ 'ಮದರ್ ಪ್ರಾಮಿಸ್' ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಇಬ್ಬರು ಡಾನ್‌ಗಳ ಸುತ್ತ ಇಡೀ ಕಥೆ ಹೆಣೆಯಲಾಗಿದ್ದು, ಯಾವುದೇ ಲಾಜಿಕ್ ಇಲ್ಲದ 'ಮೈಂಡ್‌ಲೆಸ್ ಕಾಮಿಡಿ' ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದರ ಪೂರ್ಣ ವಿಮರ್ಶೆ ಇಲ್ಲಿದೆ.

OTT Releases: ಈ ವಾರ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌! ಯಾವುದೆಲ್ಲ?

ಈ ವಾರ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌! ಯಾವುದೆಲ್ಲ?

OTT Releases: ಬಹು ನಿರೀಕ್ಷಿತ ಥ್ರಿಲ್ಲರ್ ಇಕ್ಕಾದಿಂದ ಹಿಡಿದು, ಪತಿ ಪತ್ನಿ ಔರ್ ವೋ ದೋ ವರೆಗೆ ಸಿನಿಮಾಗಳಿವೆ. ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌ ಆಗಿವೆ. ಲವ್‌ಸ್ಟೋರಿ (Love story), ಸಸ್ಪೆನ್ಸ್‌ ಥ್ರಿಲ್ಲರ್‌, ಡ್ರಾಮಾ, ಆಕ್ಷನ್‌ ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್‌ ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Amruthadhaare Serial: ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

Amruthadhaare Serial: ಗೌತಮ್‌ ಇದಕ್ಕೂ ಮುಂಚೆ ತಲೆ ಸುತ್ತಿ ಬಿದ್ದಿದ್ದಾನೆ. ಇದರಿಂದ ಗಾಬರಿಯಾಗಿ ಆಸ್ಪತ್ರೆಯಲ್ಲಿ ಚೆಕಪ್‌ಗೂ ಕೊಟ್ಟಾಗಿತ್ತು. ಆದರೆ ಆಗಿದ್ದೇ ಬೇರೆ. ವೈದ್ಯರು ಕರೆ ಮಾಡಿ, ಭೂಮಿಕಾ ಮತ್ತು ಗೌತಮ್​ಗೆ ಬರಲು ಹೇಳಿದ್ರು. ಆಗ ಭೂಮಿಕಾ, ಬ್ಲಡ್​ ಟೆಸ್ಟ್​ನಲ್ಲಿ ಗೌತಮ್​ಗೆ ಏನಾದ್ರೂ ಸಮಸ್ಯೆ ಇದೆಯಾ ಎಂದು ಆತಂಕಗೊಂಡಿದ್ದಳು. ಆದರೆ ಇಲ್ಲಿ ಆಗಿದ್ದೇ ಬೇರೆ.

Prajwal Devaraj: ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

Prajwal Devaraj: ಕರಾವಳಿ ಸಿನಿಮಾ ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಗಲಾಟೆ ಮಾಡಿದ್ದವರ ವಿರುದ್ದ ಕೇಸ್ ದಾಖಲು ಆಗಿದೆ. ಟ್ರೇಲರ್ ಗಿಂತ ಟ್ರೇಲರ್ ಬಿಡುಗಡೆಗೆ ಬಾರದ ನಾಯಕ ನಟ ಪ್ರಜ್ವಲ್ ದೇವರಾಜ್ ಸುದ್ದಿ ಮಾಡಿದ್ದಾರೆ. ಸಂಭಾವನೆ ಬಾಕಿ ಉಳಿದ ಕಾರಣದಿಂದ ಡಬ್ಬಿಂಗ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

Sohail Khan: ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಕಾಯ್ದುಕೊಂಡ ಬಾಲಿವುಡ್‌ ಖ್ಯಾತ ಜೋಡಿ!

ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಕಾಯ್ದುಕೊಂಡ ಬಾಲಿವುಡ್‌ ಖ್ಯಾತ ಜೋಡಿ!

Sohail Khan: ಶೋನಲ್ಲಿ ಸೀಮಾ ಅವರನ್ನು ನೋಡಿದ ನಂತರ, ತಮ್ಮ ಸಂಬಂಧದಲ್ಲಿ ಏನಾದರೂ ತಪ್ಪು ಸಂಭವಿಸಿದಲ್ಲಿ, ತಾವು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡರು. 25 ವರ್ಷಗಳ ದಾಂಪತ್ಯದ ಅಂತ್ಯಕ್ಕೆ ತಾನೇ ಸಂಪೂರ್ಣ ಜವಾಬ್ದಾರ ಎಂದು ರಾಷ್ಟ್ರೀಯ ದೂರದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ. ಸೊಹೈಲ್ ಅವರ ಈ ಘನತೆಯುಳ್ಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಚ್ಛೇದನದ ಬಳಿಕವೂ ಇಬ್ಬರೂ ಪರಸ್ಪರ ಗೌರವ ಕಾಯ್ದುಕೊಂಡಿದ್ದಾರೆ.

Rashmika Mandanna: ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

Rashmika Mandanna: 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ರಶ್ಮಿಕಾ ಎರಡು ದಿನಗಳ ಕಾಲ ಯಾವುದೇ ಡ್ಯೂಪ್ (Dupe) ಬಳಸದೆ ತಾವೇ ಸ್ವತಃ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

CM Vijay: ‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

CM Vijay: 'ಜನ ನಾಯಗನ್' ಚಿತ್ರವು ಅಂತಿಮವಾಗಿ ಸೆನ್ಸಾರ್‌ ಪಡೆದುಕೊಂಡಿದೆ. ಚಿತ್ರಕ್ಕೆ ಗುರುವಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘A’ ಪ್ರಮಾಣಪತ್ರ ನೀಡಿದೆ. ಪ್ರಮಾಣೀಕರಣದ ಬಗ್ಗೆ ಈಗ CBFC ಅಧಿಕೃತ ವೆಬ್‌ಸೈಟ್‌ ಪ್ರಕಟಿಸಿದೆ. ಇದು ಚಿತ್ರದ ರನ್‌ಟೈಮ್ ಅನ್ನು 183 ನಿಮಿಷಗಳು (ಮೂರು ಗಂಟೆ ಮೂರು ನಿಮಿಷಗಳು) ಎಂದು ಪಟ್ಟಿ ಮಾಡುತ್ತದೆ. ಆದಾಗ್ಯೂ, ಜನ ನಾಯಗನ್ ಚಿತ್ರದ ಕಟ್ ಲಿಸ್ಟ್ ಅನ್ನು ಇನ್ನೂ CBFC ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿಲ್ಲ.

Loading...