ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Thalaivar Thambi Thalaimaiyil OTT: ಸರಳ ಕಥೆ, ಹಳ್ಳಿಯ ಹಾಸ್ಯ, ಒಂದೊಳ್ಳೆ ಮೋಜಿನ ಸಿನಿಮಾ! ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಹಳ್ಳಿಯ ಹಾಸ್ಯ, ಒಂದೊಳ್ಳೆ ಮೋಜಿನ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

Kannada New Movie: 'ತಲೈವರ್ ತಂಬಿ ತಲೈಮೈಯಿಲ್' ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ನಂತರ ಈಗ OTT ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಪೊಂಗಲ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ಹಿಟ್ ಆಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಚಿತ್ರವನ್ನು ನಿತೀಶ್ ಸಹದೇವ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ತಮಿಳಿನ ಚೊಚ್ಚಿಲ ಚಿತ್ರವಾಗಿದೆ. 2023 ರಲ್ಲಿ ಮಲಯಾಳಂ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು.

ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ʻಪುಟ್ಟಕ್ಕನ ಮಕ್ಕಳುʼ ನಟಿ ಸಂಜನಾ ಬುರ್ಲಿ; ಇಲ್ಲಿವೆ ನಿಶ್ಚಿತಾರ್ಥದ ಫೋಟೋಗಳು

Photos: ಅದ್ದೂರಿಯಾಗಿ ನೆರವೇರಿತು ನಟಿ ಸಂಜನಾ ಬುರ್ಲಿ ಎಂಗೇಜ್‌ಮೆಂಟ್

ಕನ್ನಡ ಕಿರುತೆರೆಯಲ್ಲಿ 'ಪುಟ್ಟಕ್ಕನ ಮಕ್ಕಳು', 'ಶ್ರೀ ಗಂಧದ ಗುಡಿ' ಮುಂತಾದ ಧಾರಾವಾಹಿಗಳಿಂದ ಮೂಲಕ ಮನೆಮಾತಾಗಿರುವ ನಟಿ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇವರ ಮದುವೆ ಎಂಗೇಜ್‌ಮಂಟ್ ಸಮಾರಂಭವು ಸಂಭ್ರಮದಿಂದ ನೆರವೇರಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಮರ್ಥ ಚನ್ನಗಿರಿ ಅವರೊಂದಿಗೆ ಸಂಜನಾ ಬುರ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸಂಜನಾ ಬುರ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Star Movie: ಫೆ.13ಕ್ಕೆ `ಸ್ಟಾರ್‌' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್

ಫೆ.13ಕ್ಕೆ `ಸ್ಟಾರ್‌' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ

Star Kannada Movie: ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್​​ನಲ್ಲಿ ಶರತ್ ಪ್ರಕಾಶ್ ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ ಮಾಡಿದ್ದಾರೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್‌ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಕಾಶಿ ತಲುಪಿದ 'ಲಕ್ಷ್ಮಿಪುತ್ರ' ಸಿನಿಮಾ: ಮಣಿಕರ್ಣಿಕಾ ಘಾಟ್‌ನಲ್ಲಿ ಚಿಕ್ಕಣ್ಣನ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್!

ಕಾಶಿಯಲ್ಲಿ ಚಿಕ್ಕಣ್ಣನ 'ಲಕ್ಷ್ಮಿಪುತ್ರ' ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್

Lakshmiputra Movie Updates: ನಿರ್ಮಾಪಕ ಎ.ಪಿ. ಅರ್ಜುನ್ ಮತ್ತು ನಟ ಚಿಕ್ಕಣ್ಣ ಜೋಡಿಯ 'ಲಕ್ಷ್ಮಿಪುತ್ರ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕಾಶಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಮಣಿಕರ್ಣಿಕಾ ಘಾಟ್ ಮತ್ತು ಗಂಗಾ ನದಿ ತೀರದಲ್ಲಿ ನಡೆದ ಈ ಚಿತ್ರೀಕರಣದಲ್ಲಿ ತಾರಾ ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ʻಬಿಗ್‌ ಬಾಸ್‌ʼ ಶೋನಲ್ಲಿ ಸಿಕ್ಕ 20 ಲಕ್ಷ ರೂ. ವೋಚರ್‌ನಿಂದ ಬಂಗಾರ ಖರೀಸಿದ ʻರನ್ನರ್‌ ಅಪ್‌ʼ ರಕ್ಷಿತಾ ಶೆಟ್ಟಿ; ಏನೇನ್‌ ತಗೊಂಡ್ರು ನೋಡಿ!

20 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿದ ʻಬಿಗ್ ಬಾಸ್ʼ ರಕ್ಷಿತಾ ಶೆಟ್ಟಿ

Rakshitha Shetty Gold Purchase: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ಸಿಕ್ಕಿತ್ತು. ಇದೀಗ ಅವರು ಅದನ್ನು ಬಳಕೆ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ʻಸ್ಟಾರ್‌ʼ ಆಗಲು ಬಂದ ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ವಿನ್ನರ್‌ ಶರತ್‌

ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ವಿನ್ನರ್‌ ಶರತ್‌ ಈಗ 'ಸ್ಟಾರ್'!

ಶರತ್‌ ಪ್ರಕಾಶ್‌ ಅವರು ಸ್ಟಾರ್‌ ಸಿನಿಮಾದ ಮೂಲದ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಸೀಸನ್ 2ರ ವಿಜೇತರಾದ ಇವರು, ಈ ಚಿತ್ರವನ್ನು ಸ್ವತಃ ನಿರ್ಮಿಸಿ ನಟಿಸಿದ್ದಾರೆ. ಬೆಂಗಳೂರಿನ ಸ್ಲಂಗಳಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ರೌಡಿಸಂ ಕಥೆಯ ಜೊತೆಗೆ ತಂದೆ-ಮಗಳ ಬಾಂಧವ್ಯದ ಸೆಂಟಿಮೆಂಟ್ ಅನ್ನು ನಿರ್ದೇಶಕ ವಿಜಯಸೂರ್ಯ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.

ನಿರ್ದೇಶಕ ಆರ್.‌ ಚಂದ್ರುಗೆ ಗೌರವ ಡಾಕ್ಟರೇಟ್; ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಸಿಹಿ ಸುದ್ದಿ

ಆರ್. ಚಂದ್ರುಗೆ ಡಾಕ್ಟರೇಟ್ ಗೌರವ; ಹುಟ್ಟುಹಬ್ಬದ ಸಂಭ್ರಮದಲ್ಲೇ ಸರ್ಪ್ರೈಸ್‌

ನಿರ್ದೇಶಕ ಆರ್‌ ಚಂದ್ರು ಅವರು ಡಾಕ್ಟರೇಟ್‌ ಗೌರವಕ್ಕೆ ಪಾತ್ರರಾಗುವ ಮೂಲಕ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಶಿಡ್ಲಘಟ್ಟದ ಕೇಶವಾರ ಹಳ್ಳಿಯಿಂದ ಬಂದ ಇವರು ಸಿನಿಮಾ ರಂಗದ ಸಾಧನೆ ಮಾತ್ರವಲ್ಲದೆ, ಎತ್ತಿನಹೊಳೆ ಹೋರಾಟ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಾಜ ಸೇವೆಗಾಗಿ ಮಣಿಪುರ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಈ ಗೌರವ ಪಡೆದಿದ್ದಾರೆ.

ಕರುನಾಡ ಮನೆಮಗಳ ಸಾಧನೆಗೆ ವೇದಿಕೆಯಾಗಲಿದೆ ʻಕಲರ್ಸ್‌ ಕನ್ನಡತಿʼ; ಮಹಿಳೆಯರ ನಿಸ್ವಾರ್ಥ ಸೇವೆಗೆ ಸಿಗಲಿದೆ ಗೌರವ

ರಿಯಲ್‌ ಲೈಫ್‌ ನಾಯಕಿಯರ ಹುಡುಕಾಟ; ನಿಮ್ಮೂರಿನ 'ಕಲರ್ಸ್ ಕನ್ನಡತಿ' ಯಾರು?

Colors Kannadathi Campaign: ಕಲರ್ಸ್ ಕನ್ನಡ ವಾಹಿನಿಯು ನಾಡಿನ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕನ್ನು ಸಂಭ್ರಮಿಸಲು ಹೊಸ ವೇದಿಕೆ ಕಲ್ಪಿಸಿದೆ. ಕುಟುಂಬಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಸಾಧಕಿಯರನ್ನು ಗುರುತಿಸಿ ಗೌರವಿಸುವ ಈ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ಧಾರಾವಾಹಿಯ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ರಿಯಲ್ ಲೈಫ್ ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಜಗತ್ತಿಗೆ ಪರಿಚಯಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

Karthik Mahesh: ʻಆಲ್ಫಾʼ ಚಿತ್ರತಂಡಕ್ಕೆ ಸಾಥ್‌ ನೀಡಿದ ನಟ ಶ್ರೀಮುರಳಿ;  ಈ ಸಿನಿಮಾ ಯಾವಾಗ ರಿಲೀಸ್?

ʻಆಲ್ಫಾʼ ಟ್ರೇಲರ್ ರಿಲೀಸ್: ಹೇಮಂತ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

Alpha: Men love Vengeance Movie Release: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ʻಆಲ್ಫಾʼ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

CCL2026: ಸಿಸಿಎಲ್ ಟ್ರೋಫಿ ಫ್ಯಾನ್ಸ್‌ಗೆ ಅರ್ಪಿಸಿದ ಕಿಚ್ಚ; ಅಭಿಮಾನಿಗಳಿಗೂ ಇದೆ ಇದೊಂದು ಅವಕಾಶ!

ಸಿಸಿಎಲ್ ಟ್ರೋಫಿ ಫ್ಯಾನ್ಸ್‌ಗೆ ಅರ್ಪಿಸಿದ ಕಿಚ್ಚ

Sudeep: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರ ಮಹಾ ಸಮರದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಬರೋಬ್ಬರಿ 12 ವರ್ಷಗಳ ನಂತರ, ಮೂರನೇ ಬಾರಿಗೆ ಐತಿಹಾಸಿಕ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ತಾಯ್ನಾಡಿಗೆ ಹೊತ್ತು ತಂದಿದೆ.ಒತ್ತಡದ ನಡುವೆಯೂ ತಂಡವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಈ ಗೆಲುವು ಕಷ್ಟದ ದಿನಗಳಲ್ಲೂ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಅರ್ಪಣೆ.

Salman Khan: ಮುಂಬೈನ  RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿ

ಮುಂಬೈನ RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿ

RSS Mumbai event: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆ ದೇಶದೆಲ್ಲೆಡೆ ಆರ್‌ಎಸ್‌ಎಸ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಹಾಗೆಯೇ ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಟ ಸಲ್ಮಾನ್ ಖಾನ್ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂಬೈ ವ್ಯಾಖ್ಯಾನಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Film: ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ

ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ

Valavaara: ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​ ಕಟ್​ ಹೇಳಿರುವ ವಲವಾರ ಸಿನಿಮಾಗೆ ಇಡೀ ಚಿತ್ರರಂಗ ಜೈ ಎಂದಿದೆ.‌ ಶಿವಣ್ಣ, ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮೆಚ್ಚಿರುವ ಈ ಚಿತ್ರಕ್ಕೆ ಚಿತ್ರ ಸಾಹಿತಿ ಕವಿರಾಜ್ ಕೂಡ ಬೆಂಬಲವಾಗಿ ನಿಂತಿದ್ದಾರೆ‌‌.

Rajpal Yadav: ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್; ಏನಿದು ಪ್ರಕರಣ?

ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್

Tihar Jail : ತಮ್ಮ ಹಾಸ್ಯಮಯ ಸಮಯಪ್ರಜ್ಞೆಯಿಂದ ಪ್ರೇಕ್ಷಕರನ್ನು ನಗಿಸಲು ಹೆಸರುವಾಸಿಯಾದ ನಟ ರಾಜ್‌ಪಾಲ್ ಯಾದವ್ ಈಗ ತಿಹಾರ್ ಜೈಲು ಪಾಲಾಗಿದ್ದಾರೆ. ಬಾಲಿವುಡ್ ತಾರೆ ಮತ್ತೊಮ್ಮೆ ಕಾನೂನು ತೊಂದರೆಯಲ್ಲಿ ಸಿಲುಕಿದ್ದಾರೆ, ಕೋಟ್ಯಂತರ ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದ ಕಾರಣ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

Ramayana : ಯಶ್ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಈ ನಟ ಎಂಟ್ರಿ! ಪಾತ್ರ ಏನು?

ಯಶ್ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಈ ನಟ ಎಂಟ್ರಿ! ಪಾತ್ರ ಏನು?

Vikrant Massey: ಆರ್ಯನ್ ಖಾನ್ ಅವರ ಹಿಟ್ ಶೋ 'ದಿ ಬಿ**ಡ್ಸ್ ಆಫ್ ಬಾಲಿವುಡ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ರಾಘವ್ ಜುಯಾಲ್ , ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದಲ್ಲಿ ನಟಿಸಿದ್ದಾರೆ. ವರದಿಯ ಪ್ರಕಾರ, ಈ ಚಿತ್ರದಲ್ಲಿ ರಾವಣನ ಹಿರಿಯ ಮಗ ಮೇಘನಾದ (ಇಂದ್ರಜಿತ್ ಎಂದೂ ಕರೆಯುತ್ತಾರೆ) ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. 2027 ರ ದೀಪಾವಳಿಗೆ ಬಿಡುಗಡೆಯಾಗಲಿರುವ 'ರಾಮಾಯಣ: ಭಾಗ 2' ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

Rishab Shetty: ಮಲಯಾಳಂ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟನೆ? ಯಾವ ಮೂವಿ

ಮಲಯಾಳಂ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟನೆ? ಯಾವ ಮೂವಿ

Rishab Kantara: ಎಂ.ಟಿ. ವಾಸುದೇವನ್ ನಾಯರ್ ಅವರ ಪ್ರಸಿದ್ಧ ಕಾದಂಬರಿ 'ರಂಡಮೂಳಂ' ನ ಚಲನಚಿತ್ರ ರೂಪಾಂತರಕ್ಕಾಗಿ ಕೇರಳದ ಚಲನಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಾ ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಆ ಕಾಯುವಿಕೆ ಕೊನೆಗೂ ಮುಗಿದಂತೆ ಕಾಣುತ್ತಿದೆ. ಎಂ.ಟಿ. ವಾಸುದೇವನ್ ನಾಯರ್ ಅವರ ಪುತ್ರಿ ಅಶ್ವತಿ ವಿ ನಾಯರ್ , ಮಾರ್ಚ್ 2026 ರ ವೇಳೆಗೆ ಪ್ರೇಕ್ಷಕರು ಅಪ್‌ಡೇಟ್‌ ನಿರೀಕ್ಷಿಸಬಹುದು ಎಂದು ಇತ್ತೀಚೆಗೆ ದೃಢಪಡಿಸಿದರು.

Director Prem : ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು; ಕೆರಳಿ ಕೆಂಡವಾಗಿ ಖಡಕ್ ರಿಪ್ಲೈ !

ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು

Kanakapura Srinivas: ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ಕೆ ಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ತುಚ್ಚವಾಗಿ ಮಾತನಾಡಿದ್ದರು. ಪ್ರೇಮ್ , ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಬಿಡದೇ ಥರ್ಡ್ ಗ್ರೇಡ್ ಭಾಷೆಯನ್ನು ಉಪಯೋಗಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತು ಕೂಡ ನಾಲಿಗೆ ಹರಿಬಿಟ್ಟಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

D55: ಶ್ರೀಲೀಲಾ, ಸಾಯಿ ಪಲ್ಲವಿ ಮತ್ತು ಧನುಷ್ ಚಿತ್ರಕ್ಕೆ ಮುಹೂರ್ತ

ಶ್ರೀಲೀಲಾ, ಸಾಯಿ ಪಲ್ಲವಿ ಮತ್ತು ಧನುಷ್ ಚಿತ್ರಕ್ಕೆ ಮುಹೂರ್ತ

Sreeleela and Sai Pallavi : ಧನುಷ್ ಅವರ ಮುಂಬರುವ ಸಿನಿಮಾಗಳನ್ನು (Cinema) ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಕಾರಾ ನಂತರ, ಅವರು ಅಮರನ್ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮಹೂರ್ತ ಪೂಜೆ ಶನಿವಾರ ಚಿತ್ರತಂಡ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ನಡೆಯಿತು. ಚಿತ್ರದಲ್ಲಿ ನಟಿಸಲಿರುವ ಇಬ್ಬರು ನಟರಾದ ಶ್ರೀಲೀಲಾ ಮತ್ತು ಸಾಯಿ ಪಲ್ಲವಿ ಜೊತೆಗೆ ಧನುಷ್ ಕಾಣಿಸಿಕೊಂಡರು.

Kannada Movie: ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ; ಮೂವಿ ಯಾವುದು?

ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ!

Sangita Madhavan : 'ಯಾರೇ ನೀನು ಚೆಲುವೆ' ಸಿನಿಮಾ ಖ್ಯಾತಿ ನಟಿ ಸಂಗೀತ ಮಾಧವನ್ ಮತ್ತೆ ಸ್ಯಾಂಡಲ್‌ವುಡ್‌ ಕಡೆ ಮುಖ ಮಾಡಿದ್ದಾರೆ. ಹೊಸ ತಂಡವೊಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದೆ. ಲಾಂಗ್ ಗ್ಯಾಪ್ ಬಳಿಕ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರನ್ನ, ವಿಕ್ಟರಿ ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

Kis Kisko Pyaar Karoon 2 on OTT: ಕಪಿಲ್ ಶರ್ಮಾ ಈ ಕಾಮಿಡಿ ಮೂವಿ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಕಪಿಲ್ ಶರ್ಮಾ ಈ ಕಾಮಿಡಿ ಮೂವಿ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

Kapil Sharma: ಕಪಿಲ್ ಶರ್ಮಾ ಅವರ ಬಹುನಿರೀಕ್ಷಿತ ಸೀಕ್ವೆಲ್‌, ಕಿಸ್ ಕಿಸ್ಕೋ ಪ್ಯಾರ್ ಕರೂನ್ 2 , ಫೆಬ್ರವರಿ 6 ರಂದು ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ., ಚಿತ್ರಮಂದಿರಗಳಲ್ಲಿ ಅಷ್ಟಾಗಿ ಪ್ರದರ್ಶನ ತೋರಲಿಲ್ಲ ಶರ್ಮಾ ಅವರೊಂದಿಗೆ ಮಂಜೋತ್ ಸಿಂಗ್, ಹೀರಾ ವಾರಿನಾ, ತ್ರಿಧಾ ಚೌಧರಿ, ಪರುಲ್ ಗುಲಾಟಿ ಮತ್ತು ಆಯೇಷಾ ಖಾನ್ ನಟಿಸಿರುವ ಈ ಚಿತ್ರವು ಈಗ OTT ನಲ್ಲಿ ಲಭ್ಯವಿದೆ.

Bigg Boss Kannada 12: ಮತ್ತೆ ಒಂದಾದ ಬಿಗ್‌ಬಾಸ್ ಸ್ಪರ್ಧಿಗಳು; ಅಶ್ವಿನಿ ಮಸ್ತ್‌ ಡ್ಯಾನ್‌, ಗಿಲ್ಲಿ ಭರ್ಜರಿ ಕಾಮಿಡಿ!

ಮತ್ತೆ ಒಂದಾದ ಬಿಗ್‌ಬಾಸ್ ಸ್ಪರ್ಧಿಗಳು; ಅಶ್ವಿನಿ ಮಸ್ತ್‌ ಡ್ಯಾನ್‌!

Gilli Nata: ಬಿಗ್‌ ಬಾಸ್‌ ಸೀಸನ್‌ 12 ಮುಗಿದು ಹಲವು ದಿನಗಳ ಕಳೆದರೂ ಇನ್ನೂ ಅದರ ಹವಾ ನಿಂತಿಲ್ಲ. ಆಗಾಗ ಸ್ಪರ್ಧಿಗಳು ಸಂದರ್ಶನ ಮೂಲಕ ದರ್ಶನ ಮಾಡುತ್ತಲೇ ಇದ್ದಾರೆ. ಗಿಲ್ಲಿ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆ ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಹೆಸರು ‘ದೊಡ್ಮನೆ ಹಬ್ಬ . ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Upendra: ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಹಣ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಇದರ ಸುಳಿವು ಬಿಹಾರದ ದಶರಥಪುರದಲ್ಲಿ ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Ghooskhor Pandat row: ‘ಘೂಸ್‌ಖೋರ್ ಪಂಡತ್’ವಿವಾದ: ಮನೋಜ್ ಬಾಜಪೇಯಿ, ನೀರಜ್ ಪಾಂಡೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ

‘ಘೂಸ್‌ಖೋರ್ ಪಂಡತ್’ವಿವಾದ: ಭುಗಿಲೆದ್ದ ಪ್ರತಿಭಟನೆ

Manoj Bajpayee: ನೆಟ್‌ಫ್ಲಿಕ್ಸ್‌ ನಿರ್ಮಾಣದ ‘ಘೂಸ್‌ಖೋರ್ ಪಂಡತ್’ ಹಿಂದಿ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನೀರಜ್ ಪಾಂಡೆ ಅವರ ಮುಂಬರುವ ಚಿತ್ರ ‘ಘೂಸ್‌ಖೋರ್ ಪಂಡತ್ ಕುರಿತಾದ ವಿವಾದವು ಬೀದಿಗಳಿಗೂ ವ್ಯಾಪಿಸಿದ್ದು, ಚಿತ್ರದ ಆಕ್ಷೇಪಾರ್ಹ ಶೀರ್ಷಿಕೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಅನೇಕ ಸ್ಥಳಗಳಲ್ಲಿ, ನಿರ್ಮಾಪಕ ಪಾಂಡೆ ಮತ್ತು ಚಿತ್ರದ ನಾಯಕ ನಟ ಮನೋಜ್ ಬಾಜಪೇಯಿ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಲಾಯಿತು.

Rakshasa Web Series: ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ; ಬರ್ತಿದೆ ಕ್ರೈಮ್ ಸೈಕಲಾಜಿಕಲ್ ʻರಾಕ್ಷಸʼ ಸಿರೀಸ್‌

Rakshasa Web Series: ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ

Rakshasa Web Series: ಅಯ್ಯನ ಮನೆ, ಮಾರಿಕಲ್ಲು ವೆಬ್ ಸರಣಿ ಸಕ್ಸಸ್ ಬಳಿಕ zee5 ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ರಾಕ್ಷಸ ಎಂಬ ಟೈಟಲ್ ಇಡಲಾಗಿದೆ. ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ಈ ಸರಣಿ ಸಾಗಲಿದೆ. ಬಿಡುಗಡೆಯಾಗಿರುವ ರಾಕ್ಷಸ ಟ್ರೇಲರ್ ಕುತೂಹಲ ಹೆಚ್ಚಿಸಿದ್ದು, ಈ ಮೂಲಕ zee5 ಮತ್ತೊಂದು ವಿಶೇಷ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ.

BIFFes 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ

Bangalore International Film Festival : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಶುಕ್ರವಾರ (ಫೆ.6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್‌ ದೇಶದದ ʼಲಾಸ್ಟ್‌ ಲ್ಯಾಂಡ್‌ʼ, ಮರಾಠಿಯ ʼಸಬರ್‌ ಬೊಂಡಾʼ ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Loading...