ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ʻಲವ್‌ ಯು ಮುದ್ದುʼ ಸಿನಿಮಾ ನೋಡಿ ಖುಷಿಯಾದ ಶಿವರಾಜ್‌ಕುಮಾರ್;‌ ನಟ ಸಿದ್ದು ಮೂಲಿಮನಿಗೆ ʻಹ್ಯಾಟ್ರಿಕ್‌ ಹೀರೋʼ ಹೇಳಿದ್ದೇನು?

'ಲವ್ ಯು ಮುದ್ದು' ಸಿನಿಮಾ ನೋಡಿ ಶಿವಣ್ಣ ಫಿದಾ; ನಟ ಸಿದ್ದುಗೆ ಹೇಳಿದ್ದೇನು?

ʻಲವ್‌ ಯು ಮುದ್ದುʼ ಸಿನಿಮಾವು ಸೊಲ್ಲಾಪುರದ ಪ್ರಸಿದ್ಧ ಯೂಟ್ಯೂಬ್ ಜೋಡಿಯ ನೈಜ ಪ್ರೇಮಕಥೆಯನ್ನಾಧರಿಸಿದ್ದು, ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗ್ತಿದೆ. ಈ ಚಿತ್ರವನ್ನು ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Sri Raghavendra Mahathme: ವಾರಾಂತ್ಯದಲ್ಲಿ ಭಕ್ತಿಸುಧೆ! ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವಿವಾಹ ವೈಭವ

ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವಿವಾಹ ವೈಭವ

Kannada Serial: ಜೀ ಕನ್ನಡ `ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಭಕ್ತಿಪರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆ ವಿವರಿಸುತ್ತದೆ ಈ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು ಮತ್ತು ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಕಥಾಶೈಲಿ, ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಆತ್ಮಚರಿತ್ರೆ ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ.

ಕಲರ್ಸ್‌ ಕನ್ನಡ 'ಅನುಬಂಧ ಅವಾರ್ಡ್ಸ್‌': ಕಿರುತೆರೆ ಕಲಾವಿದರ ಸಂಭ್ರಮಕ್ಕೆ ಮೆರುಗು ತುಂಬಿದ ಸ್ಯಾಂಡಲ್‌ವುಡ್‌ ದಿಗ್ಗಜರು

Photos: ಕಲರ್ಸ್‌ ಕನ್ನಡ ವಾಹಿನಿಯ 'ಅನುಬಂಧ ಅವಾರ್ಡ್ಸ್‌' 3 ದಿನ ಪ್ರಸಾರ

ಕನ್ನಡ ಕಿರುತೆರೆಯ ಜನಪ್ರಿಯ 'ಕಲರ್ಸ್‌ ಕನ್ನಡ' ವಾಹಿನಿ ತನ್ನ 12ನೇ ವರ್ಷದ 'ಅನುಬಂಧ ಅವಾರ್ಡ್ಸ್‌' ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಯ ಮಹಾಪೂರವೇ ಹರಿಯಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಅನುಬಂಧ ಅವಾರ್ಡ್ಸ್‌ ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಬದಲಿಗೆ ಕಲರ್ಸ್‌ ಕನ್ನಡ ಮತ್ತು ಅದರ ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ. ನಮ್ಮ ಕಥೆಗಳನ್ನು ತಮ್ಮದೇ ಕಥೆಗಳಂತೆ ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರೇಕ್ಷಕರು ಮತ್ತು ನಮ್ಮ ನಡುವಿನ ಅಳಿಸಲಾಗದ ಬಂಧಕ್ಕೆ ಸಲ್ಲುವ ಗೌರವವೇ ಈ 'ಅನುಬಂಧ ಅವಾರ್ಡ್ಸ್‌'.

Daali Dhananjaya: ತಂದೆ ಆಗ್ತಿದ್ದಾರೆ  ಡಾಲಿ ಧನಂಜಯ್; ವೇದಿಕೆಯಲ್ಲೇ ಸಂತೋಷದ ವಿಚಾರ ಹಂಚಿಕೊಂಡ ನಟ

Daali Dhananjaya: ತಂದೆ ಆಗ್ತಿದ್ದಾರೆ ಡಾಲಿ ಧನಂಜಯ್

Dhananjaya: ಡಾಲಿ ಧನಂಜಯ್‌ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್ ಅವರು 'ಉದಯ ಕನ್ನಡಿಗ 2025' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಜೆನ್‌ ಝೀ ಕಾಲಘಟ್ಟದ ಕಥೆ ಇರುವ ʻಇಂದಿರಾʼ; ಮಾಜಿ ಪ್ರಧಾನಿಗೂ ಈ ಸಿನಿಮಾಕ್ಕೂ ಏನ್‌ ಸಂಬಂಧ?

ಜೆನ್ ಝೀ ಬಗ್ಗೆ ಕಥೆ ಇರುವ 'ಇಂದಿರಾ' ಚಿತ್ರದ ಪೋಸ್ಟರ್‌ - ಟೀಸರ್‌ ರಿಲೀಸ್‌!

GEN-Z ತಲೆಮಾರಿನ ಯುವಕರ ಆಲೋಚನಾ ಲಹರಿ ಮತ್ತು ತಂತ್ರಜ್ಞಾನದ ಪ್ರಭಾವದ ಕುರಿತು 'ಇಂದಿರಾ' ಸಿನಿಮಾ ಸಿದ್ಧವಾಗುತ್ತಿದೆ. ವೇದ್‌ ನಿರ್ದೇಶನದ ಈ ಚಿತ್ರವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಇಂಟರ್‌ನೆಟ್ ಬಳಕೆ ಹಾಗೂ ಅದರ ಸಾಧಕ-ಬಾಧಕಗಳನ್ನು ಈ ಸಿನಿಮಾ ಚರ್ಚಿಸಲಿದೆ.

ಆದಿತ್ಯ, ಪ್ರಕಾಶ್‌ ರಾಜ್‌ ನಟನೆಯ ʻವೀರ ಕಂಬಳʼ ಸಿನಿಮಾ ರಿಲೀಸ್‌ ಬಗ್ಗೆ ಬಿಗ್‌ ಅಪ್ಡೇಟ್;‌ ಇದು ತುಳುನಾಡಿನ ನೆಲಮೂಲದ ಕಥೆ

ಆದಿತ್ಯ-ಪ್ರಕಾಶ್ ರೈ ನಟನೆಯ ʻವೀರ ಕಂಬಳʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್!

ವೀರ ಕಂಬಳ ಸಿನಿಮಾವು ತುಳುನಾಡಿನ 800 ವರ್ಷಗಳ ಐತಿಹಾಸಿಕ ಕ್ರೀಡೆಯಾದ ಕಂಬಳದ ನೈಜ ಚಿತ್ರಣವನ್ನು ಒಳಗೊಂಡಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಆದಿತ್ಯ, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಬಿಗ್‌ ಬಾಸ್‌ಗೆ ಹೋಗೋದಕ್ಕೂ ಮುನ್ನ ಗಿಲ್ಲಿ ನಟ ʻಪಿಆರ್‌ʼ ನೇಮಕ ಮಾಡಿದ್ದು ನಿಜ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ!

ಗಿಲ್ಲಿ ನಟನ ಗೆಲುವಿನ ಹಿಂದೆ PR ತಂತ್ರವಿದೆಯಾ? ಆರೋಪಗಳಿಗೆ ಖಡಕ್ ಉತ್ತರ!

ಬಿಗ್‌ ಬಾಸ್‌ ಕನ್ನಡ 12 ವಿಜೇತ ಗಿಲ್ಲಿ ನಟ ಅವರು ತಮ್ಮ ಗೆಲುವಿನ ಹಿಂದೆ 'ಪಿಆರ್' ತಂತ್ರವಿದೆ ಎಂಬ ಆರೋಪಕ್ಕೆ ತೆರೆ ಎಳೆದಿದ್ದಾರೆ. ತಮಗೆ ಪಿಆರ್ ಪದದ ಅರ್ಥವೇ ಗೊತ್ತಿರಲಿಲ್ಲ ಎಂದು ಹೇಳಿರುವ ಅವರು, ಕೇವಲ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಕ್ಯಾಪ್ಷನ್‌ಗಳ ನಿರ್ವಹಣೆಗಾಗಿ ಮಾತ್ರ ಒಂದು ಟೀಮ್ ನೇಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಮನೆಗೆ ಕರೆಸಿ ಗಿಲ್ಲಿ ನಟನಿಗೆ 10 ಲಕ್ಷ ರೂ. ನೀಡಿದ ಸುದೀಪ್;‌ ಬಿಗ್‌ ಬಾಸ್‌ ವಿನ್ನರ್‌ಗೆ ʻಕಿಚ್ಚʼ ಕೊಟ್ಟ ಸಲಹೆ ಏನು ಗೊತ್ತಾ?

Bigg Boss 12: ಗಿಲ್ಲಿಯನ್ನು ಮನೆಗೆ ಕರೆಸಿ 10 ಲಕ್ಷ ರೂ. ನೀಡಿದ ಸುದೀಪ್!

Bigg Boss Kannada 12 Winner: ಬಿಗ್‌ ಬಾಸ್‌ ಗೆದ್ದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಅವರು ತಾವೇ ಘೋಷಿಸಿದಂತೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ. ಗಿಲ್ಲಿಯನ್ನು ತಮ್ಮ ಮನೆಗೆ ಆಹ್ವಾನಿಸಿದ ಸುದೀಪ್, ಹಣದ ಜೊತೆಗೆ ಜೀವನದ ದೊಡ್ಡ ಪಾಠವನ್ನು ಬೋಧಿಸಿದ್ದಾರೆ.

ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಉಗ್ರಂʼ ಮಂಜು; ಈ ಮದುವೆಗೆ ಯಾರೆಲ್ಲಾ ಹೋಗಿದ್ರು ನೋಡಿ

Photos: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ʻಉಗ್ರಂʼ ಮಂಜು

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ 'ಬಿಗ್‌ ಬಾಸ್ ಕನ್ನಡ' ಖ್ಯಾತಿಯ ಉಗ್ರಂ ಮಂಜು ಅವರು ಇಂದು (ಜ.23) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ, ಗುರು-ಹಿರಿಯರ ಸಮ್ಮುಖದಲ್ಲಿ ಮಂಜು ಅವರು ಸಾಯಿ ಸಂಧ್ಯಾ ಅವರ ಕೊರಳಿಗೆ ತಾಳಿ ಕಟ್ಟುವ ಮೂಲಕ ಹೊಸ ಬದುಕಿಗೆ ನಾಂದಿ ಹಾಡಿದರು. ಧರ್ಮಸ್ಥಳದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಮಂಜು ಅವರ ಕೈಹಿಡಿದಿರುವ ಸಾಯಿ ಸಂಧ್ಯಾ ಅವರು ವೃತ್ತಿಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Cult Movie Review: ʻಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳುʼ ಎನ್ನುವ ಭಗ್ನಪ್ರೇಮಿಯೊಬ್ಬನ ʼಕಲ್ಟ್‌ʼ ಲವ್‌ ಸ್ಟೋರಿ

Cult Review: ಝೈದ್‌ ಖಾನ್‌ ನಟನೆಯ ʻಕಲ್ಟ್ʼ‌ ಸಿನಿಮಾ ವಿಮರ್ಶೆ - ರೇಟಿಂಗ್!

Cult Review: ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾವು ಪ್ರೀತಿಯಲ್ಲಿ ಸೋತ ಭಗ್ನಪ್ರೇಮಿಯೊಬ್ಬನ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದ ಹೇಗಿದೆ? ಸಿನಿಪ್ರಿಯರಿಗೆ ಝೈದ್‌ ಖಾನ್‌ ನಟನೆಯ ಇಷ್ಟವಾಗುತ್ತದೆಯಾ? ಮುಂದೆ ಓದಿ.

Landlord Review: ಉಳ್ಳವರ ಮೇಲೆ ಇಲ್ಲದವರ ಹೋರಾಟ; ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯನ ಹೊಡೆದಾಟ!

Duniya Vijay: ʻಲ್ಯಾಂಡ್‌ಲಾರ್ಡ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Landlord Review And Rating: ದುನಿಯಾ ವಿಜಯ್‌ ಅವರ ಲ್ಯಾಂಡ್‌ಲಾರ್ಡ್ ಸಿನಿಮಾವು ಉಳ್ಳವರ ದರ್ಪ ಮತ್ತು ಇಲ್ಲದವರ ಹಕ್ಕಿನ ಹೋರಾಟದ ಕಥೆಯಾಗಿದೆ. ರಾಚಯ್ಯ (ದುನಿಯಾ ವಿಜಯ್) ಎಂಬ ಶ್ರಮಿಕ ವರ್ಗದ ವ್ಯಕ್ತಿ ಮತ್ತು ಭೂಮಾಲೀಕ ಸಣ್ಣ ಧಣಿ (ರಾಜ್ ಬಿ ಶೆಟ್ಟಿ) ನಡುವಿನ ಜಿದ್ದಾಜಿದ್ದಿನ ಸಂಘರ್ಷವೇ ಚಿತ್ರದ ಜೀವಾಳ. ಜಡೇಶ್ ಕೆ ಹಂಪಿ ನಿರ್ದೇಶನದ ಈ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು? ಮುಂದೆ ಓದಿ.

Hayagrriva Teaser:  ‘ಹಯಗ್ರೀವ‘ ಟೀಸರ್ ಔಟ್‌; ಅಬ್ಬರಿಸಿದ ಧನ್ವೀರ್‌, ಪಾತ್ರ ಏನು?

‘ಹಯಗ್ರೀವ‘ ಟೀಸರ್ ಔಟ್‌; ಅಬ್ಬರಿಸಿದ ಧನ್ವೀರ್‌, ಪಾತ್ರ ಏನು?

Dhanveerah Gowda: ನಟ ಧನ್ವಿರ್ ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ಅ ಭಿಮಾನಿಯಾದ ಇವರು ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ವಿಜಯಲಕ್ಷ್ಮೀ ದರ್ಶನ್‌ ಕೂಡ ಪೋಸ್ಟ್‌ ಹಂಚಿಕೊಂಡು ಸಾಥ್‌ ನೀಡಿದ್ದಾರೆ.

Pawan Wadeyar:  ವಿಜಯ ರಾಘವೇಂದ್ರ ಸಿನಿಮಾಗೆ ಪವನ್ ಒಡೆಯರ್ ಸಾಥ್!

ವಿಜಯ ರಾಘವೇಂದ್ರ ಸಿನಿಮಾಗೆ ಪವನ್ ಒಡೆಯರ್ ಸಾಥ್!

Vijay Raghavendra: ನಿರ್ದೇಶನ‌ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿರುವ ಪವನ್ ಒಡೆಯರ್ ಈಗ ಸಿನಿಮಾಗಳ ಪ್ರೆಸೆಂಟ್ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ.ಜೊತೆಗೆ ಪವನ್ ನಿರ್ಮಾಣದಲ್ಲಿಯೂ ಹೆಸರು ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ‌ ಮಾಡುತ್ತಿರುವ ಅವರೀಗ ಹೊಸ ಹೆಜ್ಜೆ ಇಟ್ಟಿದ್ದಾರೆ.

OTT Releases This Week: ಮಾರ್ಕ್‌, 45 ಸೇರಿದಂತೆ ಈ ವಾರ ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಹಬ್ಬ! ಯಾವೆಲ್ಲ ಮೂವೀಸ್‌ ಎಂಟ್ರಿ?

ಮಾರ್ಕ್‌, 45 ಸೇರಿದಂತೆ ಈ ವಾರ ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಹಬ್ಬ!

OTT: ಈ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಸ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳು ಲಭ್ಯವಿರುತ್ತವೆ, ಅವುಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ 5, ಸೋನಿಲೈವ್, ಮನೋರಮಾಮ್ಯಾಕ್ಸ್, ಲಯನ್ಸ್‌ಗೇಟ್ ಪ್ಲೇ, ಸನ್ಎನ್‌ಎಕ್ಸ್‌ಟಿ, ಮತ್ತು ಜಿಯೋಸಿನಿಮಾ (ಹಿಂದೆ ಜಿಯೋಹಾಟ್‌ಸ್ಟಾರ್)ಗಳಲ್ಲಿ ಸ್ಟ್ರೀಮಿಂಗ್‌ ಆಗಲಿವೆ.

Kannada New Movie: ಬೆಲ್ ಬಾಟಮ್ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್‌! ನಿರ್ದೇಶಕರು ಯಾರು?

ಬೆಲ್ ಬಾಟಮ್ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್‌!

santosh kumar KC: ಕನ್ನಡ ಚಿತ್ರರಂಗಕ್ಕೆ ಬೆಲ್ ಬಾಟಮ್ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಏಳು ವರ್ಷಗಳ ಗ್ಯಾಪ್ ಬಳಿಕ ತಮ್ಮದೇ ಗೋಲ್ಡನ್ ಹಾರ್ಸ್ ಬ್ಯಾನರ್ ನಡಿ ಹುಬ್ಬಳ್ಳಿ ಹಂಟರ್ಸ್ ಎಂಬ ಚಿತ್ರ ನಿರ್ಮಾಣಕ್ಕೆ‌ ಸಂತೋಷ್ ಇಳಿದಿದ್ದಾರೆ.

Ugramm Manju Marriage: ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

Ugram Manju: ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ (ಜ.23) ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ (dharmasthala) ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

Kavya Shaiva: ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಇಷ್ಟ ಆಗಿಲ್ಲ; ಕಾವ್ಯ

ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಇಷ್ಟ ಆಗಿಲ್ಲ; ಕಾವ್ಯ

Bigg Boss Kannada 12: ಬಿಗ್ ಬಾಸ್ ಸೀಸನ್ 12ರ 4ನೇ ರನ್ನರ್ ಅಪ್ ಕಾವ್ಯ ಶೈವ (Kavya Shaiva) ಹೊರಹೊಮ್ಮಿದ್ದರು. ಬಿಗ್‌ಬಾಸ್‌ ಕನ್ನಡ ಸೀಸನ್‌ನಲ್ಲಿ ಗಮನ ಸೆಳೆದ ಜೋಡಿ ಅಂದರೆ ಗಿಲ್ಲಿ–ಕಾವ್ಯ ಜೋಡಿ. ಮನೆಯೊಳಗೆ ಗಿಲ್ಲಿ ಸದಾ ಕಾವ್ಯ ಅವರೊಂದಿಗೆ ಹಾಸ್ಯಭರಿತ ಮಾತುಗಳು, ಜೋಕ್‌ಗಳು ಹಾಗೂ ಸ್ನೇಹಪೂರ್ಣ ವರ್ತನೆಯ ಮೂಲಕ ಗಮನ ಸೆಳೆಯುತ್ತಿದ್ದರು. ಇದರಿಂದಾಗಿ ಇಬ್ಬರ ನಡುವಿನ ಆತ್ಮೀಯತೆ ವೀಕ್ಷಕರಿಗೆ ಮೆಚ್ಚುಗೆಯಾಯಿತು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Puttakkana Makkalu: ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!

ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!

Zee Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್‌ ಇದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.

Oscars 2026 : ಆಸ್ಕರ್‌ ರೇಸ್‌ನಿಂದ ಭಾರತದ ಹೋಮ್‌ಬೌಂಡ್‌ ಔಟ್‌; ಕನ್ನಡ ಸಿನಿಮಾಗಳಿಗೂ ನಿರಾಸೆ

ಆಸ್ಕರ್‌ ರೇಸ್‌ನಿಂದ ಭಾರತದ ಹೋಮ್‌ಬೌಂಡ್‌ ಔಟ್‌!

Oscar: 98ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶನಗಳನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ವಾರಗಳ ಕಾಲ ಜಾಗತಿಕವಾಗಿ ಕಾಯುತ್ತಿದ್ದ ಚಿತ್ರ ಮುಕ್ತಾಯಗೊಂಡಿದೆ. ಭಾರತದಲ್ಲಿ, ನೀರಜ್ ಘಯ್ವಾನ್ ಅವರ ಹೋಮ್‌ಬೌಂಡ್ ಚಿತ್ರದ ಮೇಲೆ ನಿರೀಕ್ಷೆ ಇದ್ದಿತ್ತು. ಭಾರತದ 'ಹೋಮ್‌ಬೌಂಡ್' ಸಿನಿಮಾ ಪ್ರಶಸ್ತಿ ರೇಸ್‌ನಿಂಗ್ ಹೊರಬಿದ್ದು ನಿರಾಸೆ ಮೂಡಿಸಿದೆ. ಕನ್ನಡ ಚಿತ್ರಗಳಿಗೂ ನಿರಾಸೆಯಾಗಿದೆ.

Border 2: ಅಡ್ವಾನ್ಸ್​ ಬುಕಿಂಗ್‌ನಲ್ಲಿ ʻಧುರಂಧರ್ʼ ರೆಕಾರ್ಡ್ ಬ್ರೇಕ್ ಮಾಡಿದ 'ಬಾರ್ಡರ್ 2'! ಇಂದು ರಿಲೀಸ್‌

ಸನ್ನಿ ಡಿಯೋಲ್ 'ಬಾರ್ಡರ್ 2' ರಿಲೀಸ್‌!

Sunny Deol : 2026ರಲ್ಲಿನ ಅತಿ ಹೆಚ್ಚು ಕಲೆಕ್ಷನ್ ಮಾಡುವ ಮೊದಲ ಸಿನಿಮಾವಾಗುವ ನಿರೀಕ್ಷೆ ಹೆಚ್ಚಿದೆ. ಅಲ್ಲದೇ ಧುರಂಧರ್ ಮತ್ತು ಛಾವಾದಂತಹ ಇತ್ತೀಚಿನ ಸೂಪರ್ ಹಿಟ್ ಚಿತ್ರಗಳ ಮೊದಲ ದಿನದ ಕಲೆಕ್ಷನ್​​ ದಾಖಲೆಗೂ ಸವಾಲೆಸೆಯಬಹುದು.ಸನ್ನಿ ಡಿಯೋಲ್​​ ಮುಖ್ಯಭೂಮಿಕೆಯ ಈ ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಯಾವುದೇ ಕಟ್ಸ್ ಇಲ್ಲದೇ ಯುಎ 13 ಪ್ಲಸ್ ಪ್ರಮಾಣಪತ್ರ ಪಡೆದುಕೊಂಡಿದೆ. ಇದು ಫ್ಯಾಮಿಲಿ ಆಡಿಯನ್ಸ್​ಗೆ ಸೂಕ್ತ ಸಿನಿಮಾ ಆಗಿದೆ. ಇಂದು ರಿಲೀಸ್‌ ಆಗಿದೆ.

'ಕರಾವಳಿ' ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ ರಿಲೀಸ್;‌ ʻಮುದ್ದು ಗುಮ್ಮʼ ಹಾಡನ್ನು ಮುದ್ದಾಗಿ ಹಾಡಿದ ಸಿದ್ ಶ್ರೀರಾಮ್

Prajwal: 'ಕರಾವಳಿ' ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಸಿದ್ ಶ್ರೀರಾಮ್ ಧ್ವನಿ

ಕರಾವಳಿ ಸಿನಿಮಾದ ಬಹುನಿರೀಕ್ಷಿತ 'ಮುದ್ದು ಗುಮ್ಮ' ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಸಿದ್ ಶ್ರೀರಾಮ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಸಚಿನ್ ಬಸ್ರೂರು ಸಂಗೀತ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯವಿರುವ ಈ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದೆ.

ʻಬಿಗ್‌ ಬಾಸ್‌ʼ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಸೂರಜ್‌ ನಟಿಸುತ್ತಿರುವ ʻಪವಿತ್ರ ಬಂಧನʼ ಕಥೆ ಏನು? ಈ ಸೀರಿಯಲ್‌ ಪ್ರಸಾರ ಆಗೋದ್ಯಾವಾಗ?

ಬಿಗ್ ಬಾಸ್ ಸೂರಜ್ ಈಗ ಸೀರಿಯಲ್ ಹೀರೋ; 'ಪವಿತ್ರ ಬಂಧನ'ದಲ್ಲಿ ಏನು ಪಾತ್ರ?

ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಅವರ ನಟನೆಯ ಚೊಚ್ಚಲ ಸೀರಿಯಲ್ ಪವಿತ್ರ ಬಂಧನ ಪ್ರಸಾರಕ್ಕೆ ಅಣಿಯಾಗಿದೆ. ರಾಮನಗರದ ಸ್ವಾಭಿಮಾನಿ ಹುಡುಗಿ ಪವಿತ್ರಾ ಮತ್ತು ಶಿಸ್ತಿನ ಉದ್ಯಮಿ ದೇವ್‌ದತ್ ದೇಶಮುಖ್ ಅನಿವಾರ್ಯವಾಗಿ ವಿವಾಹವಾಗುವ ವಿಚಿತ್ರ ಸನ್ನಿವೇಶದ ಕಥೆ ಇದಾಗಿದೆ. ಜನವರಿ 27 ರಿಂದ ಕಲರ್ಸ್‌ ಕನ್ನಡದಲ್ಲಿ ಈ ಸೀರಿಯಲ್‌ ಪ್ರಸಾರವಾಗಲಿದೆ.

ʻಗೌರಿ ಕಲ್ಯಾಣʼ ಧಾರಾವಾಹಿಗೆ ನಾಯಕಿಯಾದ ಶಿಲ್ಪಾ ಕಾಮತ್‌; ಈ ಸೀರಿಯಲ್‌ ಯಾವಾಗ ಪ್ರಸಾರ?

'ಗೌರಿ ಕಲ್ಯಾಣ' ಸೀರಿಯಲ್‌ಗೆ ನಾಯಕಿಯಾದ ಶಿಲ್ಪಾ ಕಾಮತ್!

Gowri Kalyana Serial: ನಟಿ ಶಿಲ್ಪಾ ಕಾಮತ್‌ ಮುಖ್ಯಭೂಮಿಕೆಯಲ್ಲಿರುವ ಗೌರಿ ಕಲ್ಯಾಣ ಧಾರಾವಾಹಿಯು ಕಲರ್ಸ್‌ ಕನ್ನಡದಲ್ಲಿ ಜನವರಿ 27ರಿಂದ ಪ್ರತಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ತನ್ನ ಮೂವರು ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆತನಕ್ಕೆ ಸೊಸೆಯಾಗಿ ಕಳುಹಿಸಬೇಕೆಂಬ ತಾಯಿ ಕಾಂತಲಕ್ಷ್ಮಿಯ ಹಂಬಲವೇ ಈ ಕಥೆಯ ಜೀವಾಳ.

ʻಬಿಗ್‌ ಬಾಸ್‌ ಕನ್ನಡ 12ʼ ಶೋನಲ್ಲಿ ಗೆದ್ದ ಗಿಲ್ಲಿ ನಟನಿಗೆ ಸಿಕ್ತು ಸಿಎಂ ಸಿದ್ದರಾಮಯ್ಯ ಆಶೀರ್ವಾದ; ಇಲ್ಲಿವೆ ನೋಡಿ ಫೋಟೋಗಳು

Photos: ಸಿಎಂ ಸಿದ್ದರಾಮಯ್ಯ ಆಶೀರ್ವಾದ ಪಡೆದ ಬಿಗ್ ಬಾಸ್ ವಿನ್ನರ್ ಗಿಲ್ಲಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮಹತ್ವದ ಗೆಲುವು ದಾಖಲಿಸಿರುವ ಗಿಲ್ಲಿ ನಟ ಅವರು ಇಂದು (ಜ.22) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗಿಲ್ಲಿ ನಟ ಆಶೀರ್ವಾದ ಪಡೆದುಕೊಂಡಿದ್ದಾರೆ. ಗಿಲ್ಲಿ ಜನಪ್ರಿಯತೆಯ ಬಗ್ಗೆ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಿಲ್ಲಿ ನಟನ ಪೋಷಕರ ಬಗ್ಗೆ ವಿಚಾರಿಸಿದ್ದಾರೆ.

Loading...