ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ತುಳುನಾಡಿನ ʻವೀರ ಕಂಬಳʼ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಿದ ಹಂಸಲೇಖ;‌ ಪಾತ್ರದ ಗುಟ್ಟನ್ನು ರಿವೀಲ್‌ ಮಾಡಲಿಲ್ಲ ನಟ ಆದಿತ್ಯ

ʻವೀರ ಕಂಬಳʼ ಸಿನಿಮಾದಲ್ಲಿ ನಟ ಆದಿತ್ಯಗೆ ಏನು ಪಾತ್ರ?

Veera Kambala Movie: ಹಂಸಲೇಖ ಅವರು ವೀರ ಕಂಬಳ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ 50 ವರ್ಷಗಳ ಸಿನಿಮಾ ಪಯಣದ ಸ್ಮರಣೀಯ ಚಿತ್ರವಿದು. ತುಳುನಾಡಿನ ಸಾಂಪ್ರದಾಯಿಕ ಕಂಬಳ ಮತ್ತು ಮುಂಬೈ ಅಂಡರ್‌ವರ್ಲ್ಡ್ ನಡುವಿನ ರೋಚಕ ಕಥೆ ಹೊಂದಿರುವ ಈ ಚಿತ್ರ ಫೆಬ್ರವರಿ 27 ರಂದು ತೆರೆಕಾಣಲಿದೆ.

Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

Nanda Gokula Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದ ಗೋಕುಲ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೊ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ಸೀರಿಯಲ್‌ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Pramod Shetty: ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

Rashmika : ಪ್ರಮೋದ್ ಶೆಟ್ಟಿ ‘ಶೇಷ 2016’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಇದೀಗ ಸಿನಿಮಾ ವಿಚಾರವಾಗಿ ಪ್ರಚಾರ ಕಾರ್ಯಗಳು ಆರಂಭವಾಗಿವೆ. ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಆಂಡ್ ಕಂಪನಿ ನಡುವೆ ಆಗಾಗ ಕಿರಿಕ್ ನಡೆಯುತ್ತೆ.

Photos: ʻನಾನಿಂದು ಏನಾಗಿದ್ದೇನೋ ಅದಕ್ಕೆ ನೀನೇ ಕಾರಣʼ; ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ ನಟ ಚಿರಂಜೀವಿ

Photos: ಪತ್ನಿ ಸುರೇಖಾ ಬರ್ತ್‌ಡೇಗೆ ನಟ ಚಿರಂಜೀವಿ ಭಾವುಕ ಪೋಸ್ಟ್

ಮೆಗಾ ಸ್ಟಾರ್‌ ಚಿರಂಜೀವಿ ಅವರ ಪತ್ನಿ ಸುರೇಖಾ ಅವರಿಗೆ ಇಂದು (ಫೆ.18) ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ತಮ್ಮ 46 ವರ್ಷಗಳ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಚಿರಂಜೀವಿ. "ಇಂದು ನಿನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ, ನನ್ನ ಹೃದಯಾಳದ ಮಾತು ಇಷ್ಟೇ, ʻನಾನಿಂದು ಏನಾಗಿದ್ದೇನೋ, ಅದಕ್ಕೆ ನೀನೇ ಕಾರಣʼ.. ಅಪಾರ ಪ್ರೀತಿಯೊಂದಿಗೆ, ಎಂದೆಂದಿಗೂ ನಿನ್ನವ.." ಎಂದು ಚಿರಂಜೀವಿ ಪ್ರೀತಿಯಿಂದ ಪತ್ನಿ ಸುರೇಖಾಗೆ ವಿಶ್‌ ಮಾಡಿದ್ದಾರೆ. ಇದೇ ವೇಳೆ ತಮ್ಮ ಬದುಕಿನ ಕೆಲವು ಅತ್ಯಮೂಲ್ಯವಾದ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಮನದಾಳದ ಕೆಲವು ಮಾತುಗಳನ್ನು ಚಿರಂಜೀವಿ ಹೇಳಿಕೊಂಡಿದ್ದಾರೆ.

Rana Daggubati: ಯಾವುದೇ ಸಿನಿಮಾಗಳಲ್ಲಿಯೂ ನಟಿಸಲಿಲ್ಲ, ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿದ್ರು; ರಾಣಾ ದಗ್ಗುಬಾಟಿಗೆ ಆಗಿದ್ದೇನು?

ಸಿನಿಮಾ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿದ್ರು ರಾಣಾ; ಆಗಿದ್ದೇನು?

Rhea Chakraborty's podcast: ನಟ ರಾಣಾ ದಗ್ಗುಬಾಟಿ ತಮ್ಮ ಆರೋಗ್ಯದ ಸವಾಲುಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಬೀರಿದ ಪರಿಣಾಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್, ಅಧ್ಯಾಯ 2 ನಲ್ಲಿ ಕಾಣಿಸಿಕೊಂಡ ನಟ, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ನಟನೆಯಿಂದ ವಿರಾಮ ತೆಗೆದುಕೊಂಡು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಬೇಕಾಯಿತು ಎಂದೂ ಹೇಳಿಕೊಂಡಿದ್ದಾರೆ.

"ಅಪ್ಪು ಅಂದ್ರೆ ದೇವರು, ಶಿವಣ್ಣ ನನ್ನನ್ನು ಕ್ಷಮಿಸಿಬಿಡಿ"; ವಿವಾದಾತ್ಮಕ ಹೇಳಿಕೆ ನೀಡಿ ಬಹಿರಂಗವಾಗಿ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್

ಫಿಲ್ಮ್ ಚೇಂಬರ್‌ನಲ್ಲಿ ಕೈಮುಗಿದು ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್!

ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ದರ್ಶನ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಇಂದು (ಫೆ.18) ವಾಣಿಜ್ಯ ಮಂಡಳಿಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. "ಆರ್ಥಿಕ ಸಂಕಷ್ಟ ಮತ್ತು ಸಿನಿಮಾದ ಬಿಡುಗಡೆಯ ಒತ್ತಡದಲ್ಲಿ ತಿಳಿಯದೆ ಮಾತನಾಡಿದ್ದೇನೆ, ಏಳು ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಿ" ಎಂದಿದ್ದಾರೆ.

Ram Charan: ʻಪೆದ್ದಿʼ ಸಿನಿಮಾ ಡೈರೆಕ್ಟರ್‌ಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ಶಿವರಾಜ್‌ಕುಮಾರ್;‌ ಕಾರಣವೇನು?

‌ಪೆದ್ದಿ ನಿರ್ದೇಶಕನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಶಿವಣ್ಣ; ಏನದು ಉಡುಗೊರೆ?

Ram Charan‌'s Peddi Movie: ʻಪೆದ್ದಿʼ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರ ಹುಟ್ಟುಹಬ್ಬದ ಪ್ರಯುಕ್ತ ನಟ ಶಿವರಾಜ್‌ಕುಮಾರ್ ಅವರು ದುಬಾರಿ ಬೆಲೆಯ 'ಜಿಸಿ' ಬ್ರ್ಯಾಂಡ್‌ನ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಮ್ ಚರಣ್ ಅಭಿನಯದ ಈ ಚಿತ್ರದಲ್ಲಿ ಶಿವಣ್ಣ 'ಗೌರ್ನಾಯ್ಡು' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ

ಶಿವಣ್ಣ - ಉಪೇಂದ್ರ ನಟನೆಯ '45' ಚಿತ್ರದ ಟೆಲಿವಿಷನ್ ಪ್ರೀಮಿಯರ್ ಯಾವಾಗ?

45 ಸಿನಿಮಾದ ಮೊದಲ ಪ್ರೀಮಿಯರ್‌ ಜೀ ಕನ್ನಡ ವಾಹಿನಿಯಲ್ಲಿ ಇದೇ ಫೆಬ್ರವರಿ 22 ರಂದು ಸಂಜೆ 4.30 ಕ್ಕೆ ನಡೆಯಲಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕನಾಗುವ ಗಿಲ್ಲಿ ನಟನ ಕನಸು ಎಲ್ಲಿಗೆ ಬಂತು? ʻಬಿಗ್‌ ಬಾಸ್‌ ವಿನ್ನರ್‌ʼ ಡೈರೆಕ್ಟರ್‌ ಆಗೋದು ಯಾವಾಗ?

ಬಿಗ್ ಬಾಸ್ ವಿನ್ನರ್ 'ಗಿಲ್ಲಿ' ನಟ ಸಿನಿಮಾ ನಿರ್ದೇಶನ ಮಾಡೋದ್ಯಾವಾಗ?

ಬಿಗ್ ಬಾಸ್ ವಿಜೇತ ಗಿಲ್ಲಿ ನಟ ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡಿರುವ ಗಿಲ್ಲಿ ನಟ, ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. "ನಿರ್ದೇಶನ ಎಂಬುದು ದೊಡ್ಡ ಜವಾಬ್ದಾರಿ" ಅಂತಲೂ ಅವರು ಹೇಳಿದ್ದಾರೆ.

Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ

Chaithra Kundapura Case: ಸಂದರ್ಶನವೊಂದರಲ್ಲಿ ಚೈತ್ರಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ತಮ್ಮ ಬಾಲ್ಯದ ಕಹಿ ಘಟನೆ, ಲವ್‌ ಸ್ಟೋರಿ, ತಂದೆಯ ಹೇಳಿಕೆ, ಚೆನ್‌ ಬೌನ್ಸ್‌ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ತುಂಬಾ ಜನ ಕಮೆಂಟ್‌ ಮಾಡಿದ್ದಾರೆ. ನನಗೆ ಯಾರೂ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸುವ ಉದ್ದೇಶ ಇಲ್ಲ. ಆದರೆ ನನ್ನ ಸುದ್ದಿಗೆ ಬಂದ್ರೂ ಬಿಡಲ್ಲ ಎಂದಿದ್ದಾರೆ.

Sidharth Malhotra: ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟ

ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ

Sidharth Malhotra Father: ನಟ ಸಿದ್ಧಾರ್ಥ್ ಮಲ್ಹೋತ್ರಾ ತಂದೆ ಸುನಿಲ್ ಮಲ್ಹೋತ್ರಾ ನಿಧನರಾಗಿದ್ದಾರ. ತಂದೆ ನಿಧನರಾಗಿದ್ದಾರೆ ಎಂದು ಮಂಗಳವಾರ ಸಂಜೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ಬಾಲ್ಯದಿಂದ ಇಂದಿನವರೆಗಿನ ಚಿತ್ರಗಳ ಸರಣಿಯನ್ನು ನಟ ಹಂಚಿಕೊಂಡಿದ್ದು, ಅವರ ಜೊತೆ ಹೃದಯಸ್ಪರ್ಶಿ ಕ್ಷಣಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

Amruthadhaare Serial:  ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

Amruthadhaare Serial: ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು!

Amruthadhaare Kannada Serial: ಮಲ್ಲಿ ಜೈದೇವ್‌ನಿಂದ ಮೋಸ ಹೋಗಿದ್ದು ಆಯ್ತು. ಸದ್ಯ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾಳೆ. ಜೆಡಿ ಕುತಂತ್ರಗಳಿಗೆ ಮತ್ತೆ ಬಲಿಯಾಗುತ್ತಿದ್ದಾಳೆ. ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು ಎಂದು ಮಲ್ಲಿ ಹಿಂದೆ ಹುಡುಗನನ್ನು ಬಿಟ್ಟಿದ್ದಾನೆ. ಆತ ಕೂಡ ಪ್ರೀತಿಯ ನಾಟಕ ಮಾಡ್ತಿದ್ದಾನೆ. ಆದರೀಗ ಕೇಡಿ ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು ಬಂದು ನಿಂತಿದ್ದಾನೆ. ಮುಂದೆನಾಗುತ್ತೆ?

Reality Show: ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

Reality Show: ಬಿಗ್ ಬಾಸ್ ಕಿರುತೆರೆ ಲೋಕದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎನ್ನುವುದು ಗೊತ್ತೇ ಇದೆ ಇದು ದೂರದರ್ಶನ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತದೆ. ಈ ರಿಯಾಲಿಟಿ ಶೋ ಹಲವು ಹಲವು ಭಾಷೆಗಳಲ್ಲಿಯೂ ಸಖತ್‌ ಕ್ರೇಜ್‌ ಹೊಂದಿದೆ. ಒಂದೇ ಮನೆಯಲ್ಲಿ ಸ್ಪರ್ಧಿಗಳು , ಟಾಸ್ಕ್‌ಗಳು, ಫೈಟ್‌ಗಳು, ಎಲಿಮಿನೇಷನ್‌ಗಳು ಈ ಸ್ವರೂಪದ ಕ್ರೇಜ್ ವಿಭಿನ್ನ ಮಟ್ಟದಲ್ಲಿದೆ. ಅದೇ ಸ್ವರೂಪದಲ್ಲಿ ಮತ್ತೊಂದು ದೊಡ್ಡ ರಿಯಾಲಿಟಿ ಶೋ ಅನ್ನು ತರುತ್ತಿದೆ ಈ ವಾಹಿನಿ.

KC Rudregowda: ರಾಜ್ ಕಮಲ್ ಚಿತ್ರಮಂದಿರದ ಮಾಲೀಕ, ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

KC Rudregowda: ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

KC Rudregowda: ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕ ಕೆ. ಸಿ. ಎನ್. ಗೌಡರ ಸಹೋದರ, ರಾಜಕಮಲ್ ಚಿತ್ರಮಂದಿರದ ಮಾಲೀಕರಾದ ಕೆ. ಸಿ. ರುದ್ರೇಗೌಡರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಿನಿಮಾ ಮಂದಿರಗಳ ಮಾಲೀಕರಾಗಿ ಕೆ.ಸಿ. ರುದ್ರೇಗೌಡರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

Pabbar Movie: 14 ವರ್ಷದ ಬಳಿಕ ಕ್ಲೀನ್ ಶೇವ್; 'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

ayyappa sharma: ಅಯ್ಯಪ್ಪ ಪಿ ಶರ್ಮ ಪಬ್ಬಾರ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಹೊಸ ಅವತಾರ ತಾಳಿದ್ದಾರೆ. ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಪಬ್ಬಾರ್ ಸಿನಿಮಾದ SP ಪಾತ್ರಕ್ಕಾಗಿ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೆ.

Maryade Ramanna Serial: ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು; ಈ ಸೀರಿಯಲ್‌ ಅಂತ್ಯ!

ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು!

Maryade Ramanna Kannada Serial: ಇತ್ತೀಚೆಗೆ ಕಿರುತೆರೆಯಲ್ಲಿ ಸಾಕಷ್ಟು ಹೊಸ ಧಾರಾವಾಹಿಗಳು ಬರುತ್ತಿವೆ. ಧಾರಾವಾಹಿಗಳಿಗೆ ಅವರದ್ದೇ ಆದ ವೀಕ್ಷಕರು ಇದ್ದಾರೆ. ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೋಮೋ ನೋಡಿದ ವೀಕ್ಷಕರು ಹಳ್ಳಿ ಸೊಗಡಿನ ಈ ಕಥೆ ಜನರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಹಾಗಾದ್ರೆ ಯಾವ ಧಾರಾವಾಹಿ ಅದು? ಎಲ್ಲಿ ಪ್ರಸಾರ?

Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

Amruthadhaare Kannada Serial: ಮಲ್ಲಿ ಕಾಲೇಜ್‌ಗೆ ಬಂಕ್‌ ಹಾಕುತ್ತಿರುವ ವಿಚಾರ ಭುಮಿಕಾಗೆ ಗೊತ್ತಾಗಿದೆ. ಟಿಫಿನ್‌ ಬಾಕ್ಸ್‌ ಕೊಡಲಿಕ್ಕೆ ಅಂತ ಕಾಲೇಜಿಗೆ ಬಂದ ಭೂಮಿಗೆ ಮಲ್ಲಿ ಒಬ್ಬ ಹುಡುಗನ ಜೊತೆ ಸುತ್ತುತ್ತಾ ಇರುವ ವಿಚಾರ ಆಕೆಯ ಸ್ನೇಹಿತೆಯಿಂದ ತಿಳಿದಿದೆ. ಮಲ್ಲಿ ಕ್ಲಾಸ್‌ ಬಂಕ್‌ ಮಾಡಿ ಹುಡುಗನ ಜೊತೆ ಸುತ್ತುತ್ತಿದ್ದಾಳೆ ಅನ್ನೋ ವಿಚಾರ ಕೇಳಿ ನಮ್‌ ಭೂಮಿಗೆ ತಲೆ ಸುತ್ತಿದಂತೆ ಆಗಿಬಿಟ್ಟಿದೆ. ಅಲ್ಲಿಂದ ಮಲ್ಲಿ ಬಗ್ಗೆ ಜಾಸ್ತಿ ಯೋಚನೆ ಮಾಡ್ತಾ ಇದ್ದಾಳೆ.

ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್; ಚೆಕ್ ಬೌನ್ಸ್ ಕೇಸ್‌ನಲ್ಲಿ 'ಗದರ್' ಬೆಡಗಿಗೆ ಸಂಕಷ್ಟ!

ಅಮೀಶಾ ಪಟೇಲ್‌ ವಿರುದ್ಧ ವಾರೆಂಟ್‌; ಬಾಲಿವುಡ್‌ಗೆ ಚೆಕ್‌ ಬೌನ್ಸ್‌ ಕಂಟಕ!

ನಟಿ ಅಮೀಶಾ ಪಟೇಲ್‌ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಪದೇ ಪದೇ ಸಮನ್ಸ್ ನೀಡಿದರೂ ಕೋರ್ಟ್‌ಗೆ ಹಾಜರಾಗದ ಕಾರಣ ಈಗ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದರೆ, ನಟಿ ಅಮೀಶಾ ಪಟೇಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಹಾಗಾದರೆ ಏನಿದು ಕೇಸ್?

ಆಸ್ಪತ್ರೆಗೆ ದಾಖಲಾದ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?

salman khan father salim khan health updates

ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 90 ವರ್ಷದ ಹಿರಿಯ ಸ್ಕ್ರಿಪ್ಟ್ ರೈಟರ್ ಸಲೀಂ ಖಾನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಸೇರಿದಂತೆ ಅರ್ಬಾಜ್, ಸೋಹೈಲ್ ಮತ್ತು ಇಡೀ ಖಾನ್ ಕುಟುಂಬ ಆಸ್ಪತ್ರೆಗೆ ಭೇಟಿ ನೀಡಿದೆ. ಸದ್ಯ ಅವರ ಅನಾರೋಗ್ಯದ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್!‌ ಫೋಟೋಗ್ರಾಫರ್ಸ್‌ ಟೀಮ್‌ಗೂ ಕಟ್ಟುನಿಟ್ಟಿನ ರೂಲ್ಸ್!‌

ರಶ್ಮಿಕಾ-ವಿಜಯ್ ಮದುವೆಯಲ್ಲಿ ಮೊಬೈಲ್ ಬ್ಯಾನ್; ಇಷ್ಟೊಂದು ಕಠಿಣ ಕ್ರಮ ಯಾಕೆ?

ರಾಜಸ್ಥಾನದ ಉದಯಪುರದಲ್ಲಿ ಫೆಬ್ರವರಿ 26 ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಅದ್ದೂರಿಯಾಗಿ ನೆರವೇರಲಿದೆ. ಈ ಖಾಸಗಿ ಸಮಾರಂಭದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಫೋಟೋ ಮತ್ತು ವಿಡಿಯೋಗಳು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Mahesh Babu: ʻವಾರಣಾಸಿʼ ಸಿನಿಮಾದಲ್ಲಿ ಶಿವಭಕ್ತನಾದ‌ ಪ್ರಕಾಶ್‌ ರಾಜ್; ಪಾತ್ರದ ಗುಟ್ಟು ರಟ್ಟಾಗಿ ಹೋಯ್ತಾ?

Varanasi: ರಾಜಮೌಳಿ - ಮಹೇಶ್ ಬಾಬು ಸಿನಿಮಾದಲ್ಲಿ ಪ್ರಕಾಶ್‌ ರಾಜ್ ಶಿವಭಕ್ತ

Varanasi Movie: ನಟ ಪ್ರಕಾಶ್‌ ರಾಜ್‌ ಅವರು ವಾರಣಾಸಿ ಚಿತ್ರದಲ್ಲಿ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಹೇಶ್ ಬಾಬು ಅವರ ತಂದೆಯಾಗಿಯೂ ಪ್ರಕಾಶ್‌ ರಾಜ್‌ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾವು 2027ರ ಏಪ್ರಿಲ್ 7 ರಂದು ತೆರೆಕಾಣಲಿದೆ.

ರಕ್ಷಿತ್‌ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್;‌ ʻರಿಚರ್ಡ್ ಆಂಟನಿʼ ಜೊತೆಗೆ ರೆಡಿಯಾಗಿವೆ ಮತ್ತೆ ನಾಲ್ಕು ಸಿನಿಮಾಗಳ ಸ್ಕ್ರಿಪ್ಟ್, ಇಲ್ಲಿದೆ ಬಿಗ್‌ ಅಪ್ಡೇಟ್!‌

ರಕ್ಷಿತ್ ಬಿಗ್ ಪ್ಲಾನ್; ರಿಚರ್ಡ್ ಆಂಟನಿ ಸೇರಿ 5 ಚಿತ್ರಗಳ ಸ್ಕ್ರಿಪ್ಟ್ ರೆಡಿ

Rakshit Shetty Richard Anthony: ಕಳೆದ ಮೂರು ವರ್ಷಗಳಿಂದ ಏಕಾಂತದಲ್ಲಿದ್ದ ನಟ ರಕ್ಷಿತ್ ಶೆಟ್ಟಿ, ಒಟ್ಟು ಐದು ಚಿತ್ರಗಳ ಸ್ಕ್ರಿಪ್ಟ್ ಪೂರ್ಣಗೊಳಿಸಿದ್ದು, ಮೊದಲು 'ರಿಚರ್ಡ್ ಆಂಟನಿ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೇ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು, 2027ರ ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

S Mahender: 2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯ ಹೇಗಿದೆ? ಎಸ್. ಮಹೇಂದರ್ ಮುಕ್ತ ಮಾತು

2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯದ ಬಗ್ಗೆ ಎಸ್. ಮಹೇಂದರ್ ಮಾತು

S Mahender yashoda: ನಟಿ ಶ್ರುತಿ ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಶ್ರುತಿ ಮತ್ತು ಮಹೇಂದರ್ ಪ್ರೇಮ ವಿವಾಹವಾಗಿದ್ದರು. ನಟಿ ಶ್ರುತಿ ಅವರಿಂದ ಎಸ್. ಮಹೇಂದರ್ ಡಿವೋರ್ಸ್ ಪಡೆದು ದೂರಾಗಿದ್ದರೂ ಮಗಳು ಗೌರಿ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಗಳು ಗೌರಿ ಹಾಗೂ 2ನೇ ಪತ್ನಿ ಯಶೋಧಾ ಬಗ್ಗೆ ಎಸ್. ಮಹೇಂದರ್ ಮಾತನಾಡಿದ್ದಾರೆ.

Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Naa Ninna Bidalaare: ಅಂಬಿಕಾ ಪಾತ್ರಧಾರಿ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Neetha Ashok: ನಟಿ ನೀತಾ ಅಶೋಕ್. ಜೀ ಕನ್ನಡ ವಾಹಿನಿಯಲ್ಲಿ 'ನಾ ನಿನ್ನ ಬಿಡಲಾರೆ' ಧಾರಾವಾಹಿ ತಾಯಿ ಅಂಬಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನೀತಾ ಅಶೋಕ್ ಅವರು 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಕಿನ್ನರಿ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೀತಾ ಅವರು ತಾರಿಣಿಯ ಗೆಳತಿ ಯಶೋದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Loading...