ದರ್ಶನ್ಗೆ ಸುಪ್ರೀಂ ಶಾಕ್; ನ್ಯಾಯಪೀಠದ ಮುಂದೆ ಬರುವ ಮುನ್ನವೇ ಅರ್ಜಿ ವಜಾ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಆದೇಶದ ತಿದ್ದುಪಡಿಗೆ ಕೋರಿದ್ದ ಅರ್ಜಿ ರಿಜಿಸ್ಟ್ರಾರ್ ಕಚೇರಿ ಮಟ್ಟದಲ್ಲೇ ತಿರಸ್ಕೃತಗೊಂಡಿದ್ದು, ದರ್ಶನ್ ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿದೆ. ಈ ಮೂಲಕ ದರ್ಶನ್ ಅವರ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಹಾಗೂ ಜೈಲುವಾಸ ಮುಂದುವರಿದಿದೆ.