ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ಕರೂರು ಕಾಲ್ತುಳಿತ ಪ್ರಕರಣ; ಸಿಬಿಐನಿಂದ ವಿಜಯ್‌ಗೆ ಡ್ರಿಲ್‌, ವಿಚಾರಣೆಯಲ್ಲಿ ನಡೆದಿದ್ದೇನು?

ಸಿಬಿಐ ವಿಚಾರಣೆಗೆ ಹಾಜರಾದ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್

Karur Stampede: ಕರೂರು ಕಾಲ್ತುಳಿತ ಪ್ರಕರಣದಲ್ಲಿ 41 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ನಟ–ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ದೆಹಲಿಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಕಾರ್ಯಕ್ರಮ ಆರಂಭ ಸಮಯ ಮತ್ತು ವಿಜಯ್ ಆಗಮನದ ನಡುವೆ ಸಂಭವಿಸಿದ ಏಳು ಗಂಟೆಗಳ ವಿಳಂಬವೇ ಜನಸಂದಣಿ ನಿಯಂತ್ರಣ ತಪ್ಪಲು ಕಾರಣವಾಯಿತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Yash:  ಪಾರ್ಟ್​ನರ್​ ಆಗಿರುವ ಹೆಮ್ಮೆಯಿದೆ!  ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

Yash Ramayana: ಮುಂಬರುವ ಚಿತ್ರ ರಾಮಾಯಣದ ಸುತ್ತ ನಿರೀಕ್ಷೆಗಳು ಹೆಚ್ಚಾಗುತ್ತಿರುವಂತೆಯೇ, ನಟ-ನಿರ್ಮಾಪಕ ಯಶ್ ಇತ್ತೀಚೆಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡರು . ಕೆಲವು ದಿನಗಳ ಹಿಂದೆ ಯಶ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ವಲ್ಪ ಸಮಯದ ನಂತರ ಈ ಅಪ್‌ಡೇಟ್‌ ಬಂದಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ವಿಶೇಷವಾಗಿ ಶುಭಕೋರಿದ್ದರು. ಇದೀಗ, ಯಶ್​ ಧನ್ಯವಾದ ಅರ್ಪಿಸಿದ್ದಾರೆ.

Prabhas: ಮಿಶ್ರ ಪ್ರತಿಕ್ರಿಯೆ ಇದ್ದರೂ 3 ದಿನಕ್ಕೆ 183 ಕೋಟಿ ರೂ. ಬಾಚಿಕೊಂಡ ʻದಿ ರಾಜಾ ಸಾಬ್‌ʼ; ಆದ್ರೆ ನಿರ್ಮಾಪಕರು ಲಾಭ ಗಳಿಸ್ತಾರಾ?

3 ದಿನಕ್ಕೆ 183 ಕೋಟಿ ಬಾಚಿದ ರಾಜಾ ಸಾಬ್; ಆದರೂ ನಿರ್ಮಾಪಕರಿಗೆ ನಷ್ಟದ ಭೀತಿ?

Prabhas The Raja Saab: 'ದಿ ರಾಜಾ ಸಾಬ್' ಚಿತ್ರವು 3 ದಿನಗಳಲ್ಲಿ ಜಾಗತಿಕವಾಗಿ 183 ಕೋಟಿ ರೂ. ಗಳಿಸಿದೆ. ಆದರೆ, 400 ಕೋಟಿ ರೂ. ಬಜೆಟ್‌ನ ಈ ಚಿತ್ರಕ್ಕೆ ಭಾನುವಾರವೇ ಕಲೆಕ್ಷನ್ ಕುಸಿತ ಕಂಡಿರುವುದು ಆತಂಕ ಮೂಡಿಸಿದೆ. ಇಂದು ಚಿರಂಜೀವಿ ಅವರ ಸಿನಿಮಾ ಬಿಡುಗಡೆಯಾಗಿರುವುದರಿಂದ ಮತ್ತು ರಾಜಾ ಸಾಬ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ನಿರ್ಮಾಪಕರಿಗೆ ನಿರೀಕ್ಷಿತ ಲಾಭ ಸಿಗುವುದು ಅನುಮಾನ ಎಂದು ಬಾಕ್ಸ್ ಆಫೀಸ್ ಪಂಡಿತರು ವಿಶ್ಲೇಷಿಸಿದ್ದಾರೆ.

Bigg Boss Kannada 12: ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ;  ಗಿಲ್ಲಿ ಮೂಗು ಆಲೂಗಡ್ಡೆ ಥರಾನೇ ಇದೆಯಂತೆ!

ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ!

Gilli Nata: ಬಿಗ್‌ ಬಾಸ್‌ ಮನೆಯಲ್ಲೂ ಹೊರಗೂ ಗಿಲ್ಲಿ ಹವಾ ಜೋರಾಗಿದೆ. ಸುದೀಪ್‌ ಅವರು ವೀಕೆಂಡ್‌ ಪಂಚಾಯ್ತಿಯಲ್ಲಿ ಗಿಲ್ಲಿ ಅವರೇ ಉಳಿದ ಒಂದು ವಾರ ಅಡುಗೆ ಮಾಡಿ ಬಡಿಸಬೇಕು ಅಂದಿದ್ದರು. ಅದರಂತೆ ಅಡುಗೆ ಮಾಡಿದ್ದಾರೆ. ಗಿಲ್ಲಿ ಮಾಡಿದ ಅಡುಗೆ ತಿಂದು ಹೈರಾಣ್‌ ಆಗಿದ್ದಾರೆ ಮನೆಮಂದಿ. ಧ್ರುವಂತ್‌ ಅಂತೂ ನನ್ನ ಬ್ರೇನ್‌ ವರ್ಕ್‌ ಆಗ್ತಿಲ್ಲ ಎಂದಿದ್ದಾರೆ.

Bigg Boss Kannada 12:  ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ! ಸ್ಪರ್ಧಿಗಳಿಗೆ ನೀವು ಕೊಡಲು ಬಯಸೋ ಬಿರುದು ಏನು?

ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸಮೀಪಿಸುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್‌ ಆಗಿದ್ದು, ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳು ನಿಮಗೆ ಯಾವ ಬಿರುದು ನೀಡಬೇಕು ಎಂದು ಬಯಸುವಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ.

ಇತಿಹಾಸ ಸೃಷ್ಟಿಸಿದ ʻಕುಣಿಗಲ್ ಉತ್ಸವʼ; 35 ಸಾವಿರ ಜನರ ಎದುರು ʻಕಿಚ್ಚʼ ಸುದೀಪ್‌ಗೆ ಸನ್ಮಾನಿಸಿದ ಡಿ.ಕೆ. ಶಿವಕುಮಾರ್‌

ಕುಣಿಗಲ್ ಉತ್ಸವ: 35 ಸಾವಿರ ಜನರ ಎದುರು ಕಿಚ್ಚನಿಗೆ ಡಿಕೆ ಶಿವಕುಮಾರ್ ಸನ್ಮಾನ

ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ' ನಡೆಯಿತು. ಸಿನಿಮಾ ಸೆಟ್‌ಗಿಂತಲೂ ಅದ್ದೂರಿಯಾಗಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ ಶಾಸಕ‌ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ‌ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭವು ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್‌ ಗೌಡ್ರು‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.

Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್  ಹೇಳಿದ್ದೇನು?

ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್ ಹೇಳಿದ್ದೇನು?

Rajath: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ ಇದೀಗ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ʻಡಿಯರ್ ಹಸ್ಬೆಂಡ್ʼ ಸಿನಿಮಾ ಟೀಸರ್‌ ರಿಲೀಸ್‌ ಮಾಡಿದ ಸುದೀಪ್; ಹೊಸ ಪ್ರತಿಭೆಗಳಿಗೆ ʻಕಿಚ್ಚʼ ಹೇಳಿದ್ದೇನು?

'ಡಿಯರ್ ಹಸ್ಬೆಂಡ್' ಟೀಸರ್ ರಿಲೀಸ್: ಹೊಸಬರ ಬೆನ್ನು ತಟ್ಟಿದ ಕಿಚ್ಚ ಸುದೀಪ್!

Dear Husband Teaser: 'ಡಿಯರ್ ಹಸ್ಬೆಂಡ್' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಹೊಸಬರಿಗೆ ಸಾಥ್ ನೀಡಿದ್ದಾರೆ ಸುದೀಪ್. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರವೀಣ್‌, ಸೂರಜ್ ಗೌಡ ಮತ್ತು ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಮಗಳಿಗೆ ʻಕುವೀರʼ ಎಂದು ನಾಮಕರಣ ಮಾಡಿ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ ರಿಷಿ; ಈ ಹೆಸರಿನ ಅರ್ಥ ಏನು?

ರಿಷಿ ಮಗಳ ಹೆಸರು ಕುವೀರ; ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಫೋಟೋ ರಿವೀಲ್

'ಆಪರೇಷನ್ ಅಲಮೇಲಮ್ಮ' ಮತ್ತು 'ಕವಲುದಾರಿ'ಯಂತಹ ಹಿಟ್ ಸಿನಿಮಾಗಳ ಮೂಲಕ ಮನೆಮಾತಾಗಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಿಷಿ (Rishi) ಅವರು ಕಳೆದ ವರ್ಷ ಹೆಣ್ಣು ಮಗುವಿನ ತಂದೆಯಾಗಿದ್ದರು. ರಿಷಿ ಅವರು ತಮ್ಮ ಪತ್ನಿ ಸ್ವಾತಿ ಅವರೊಂದಿಗೆ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಮಗುವಿನ ಆಗಮನದ ಸುದ್ದಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದ ರಿಷಿ, ಇದೀಗ ತಮ್ಮ ಮುದ್ದಾದ ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತು ಮಗಳಿಗೆ ಇಟ್ಟಿರುವ ಹೆಸರನ್ನು ಕೂಡ ರಿವೀಲ್‌ ಮಾಡಿದ್ದಾರೆ.

Prabhas: ʻಧುರಂಧರ್‌ʼ ಅಬ್ಬರಕ್ಕೆ ಬಾಲಿವುಡ್‌ನಲ್ಲಿ ಮಂಕಾದ ʻದಿ ರಾಜಾ ಸಾಬ್‌ʼ; 38ನೇ ದಿನದಲ್ಲೂ ಕಲೆಕ್ಷನ್‌ ಕಿಂಗ್‌ ಆದ ರಣವೀರ್‌ ಸಿಂಗ್‌!

'ರಾಜಾ ಸಾಬ್'ಗೆ ರಣವೀರ್ ಪಂಚ್: 38ನೇ ದಿನವೂ 'ಧುರಂಧರ್' ಕಲೆಕ್ಷನ್ ಕಿಂಗ್!

Ranveer Singh: 'ಧುರಂಧರ್' ಸಿನಿಮಾ 38ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಪಾರುಪತ್ಯ ಮೆರೆದಿದೆ. ವಿಶ್ವಾದ್ಯಂತ 1280+ ಕೋಟಿ ರೂ. ಗಳಿಸಿರುವ ಈ ಚಿತ್ರ, ಹಿಂದಿ ಬೆಲ್ಟ್‌ನಲ್ಲಿ ಪ್ರಭಾಸ್ ಅವರ ಹೊಸ ಚಿತ್ರ 'ದಿ ರಾಜಾ ಸಾಬ್'ಗಿಂತ ಹೆಚ್ಚು ಗಳಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಬಿಗ್‌ಬಾಸ್‌ಗೆ ʻರಣ ಹದ್ದುʼ ಸಂಕಷ್ಟ; ನಟ ಕಿಚ್ಚ ಸುದೀಪ್‌ ವಿರುದ್ಧ ಅರಣ್ಯಾಧಿಕಾರಿಗೆ ದೂರು

ನಟ ಸುದೀಪ್‌ಗೆ ʻರಣ ಹದ್ದುʼ ಸಂಕಷ್ಟ; ಅರಣ್ಯಾಧಿಕಾರಿಗೆ ದೂರು

ಅಳಿವಿನಂಚಿನಲ್ಲಿರುವ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ನಟ ಸುದೀಪ್ ಅವರ ವಿರುದ್ಧ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಮನ್ಸೂರ್‌ ಅವರಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.

ʻಟಾಕ್ಸಿಕ್‌ʼ ಟೀಸರ್‌ ಬಗ್ಗೆ ʻಆಮ್‌ ಆದ್ಮಿʼ ಕೆಂಡಾಮಂಡಲ;  ʻಇದೇನಾ ಫ್ಯಾಮಿಲಿ ಸಿನಿಮಾ?' ಎಂದು ಮಹಿಳಾ ಆಯೋಗಕ್ಕೆ ದೂರು!

'ಟಾಕ್ಸಿಕ್' ಟೀಸರ್ ವಿರುದ್ಧ ಕೆಂಡಾಮಂಡಲ: ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ!

Toxic Movie Teaser: ಯಶ್‌ ಅವರ ಟಾಕ್ಸಿಕ್‌ ಸಿನಿಮಾದ ಟೀಸರ್‌ ವಿರುದ್ಧ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಇಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿದೆ.

ʻಬಿಗ್‌ ಬಾಸ್‌ 12ʼ ಫಿನಾಲೆ ರಣರಂಗ; ಕೊನೇ ವಾರದಲ್ಲಿ 6 ಮಂದಿಗೆ ನಾಮಿನೇಷನ್‌ ಭೀತಿ, ಮಿಡ್‌ ವೀಕ್‌ನಲ್ಲಿ ಮನೆಯಿಂದ ಎಲಿಮಿನೇಟ್‌ ಆಗೋದ್ಯಾರು?

ಫಿನಾಲೆ ವಾರದಲ್ಲಿ ಶಾಕಿಂಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್! ಯಾರು ಎಲಿಮಿನೇಟ್?

Bigg Boss Kannada Season 12: ಬಿಗ್‌ ಬಾಸ್‌ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಮನೆಯಲ್ಲಿ ಆತಂಕ ಮನೆಮಾಡಿದೆ. ಧನುಷ್ ಹೊರತುಪಡಿಸಿ ಉಳಿದ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ 'ಮಿಡ್ ವೀಕ್ ಎಲಿಮಿನೇಷನ್' ನಡೆಯಲಿದೆ. ಮಂಗಳವಾರದವರೆಗೆ ಮಾತ್ರ ವೋಟಿಂಗ್ ಅವಕಾಶವಿದ್ದು, ಯಾರು ಹೊರಹೋಗುತ್ತಾರೆಂಬ ಕುತೂಹಲ ಹೆಚ್ಚಿದೆ.

ʻಬಿಗ್‌ ಬಾಸ್‌ʼ ಮನೆಯಲ್ಲಿ 2ನೇ ಬಾರಿಗೆ ಭಾವುಕರಾಗಿ ಕಣ್ಣೀರಿಟ್ಟ ರಘು; ರಕ್ಷಿತಾ ಶೆಟ್ಟಿ ಪ್ರಬುದ್ಧತೆಗೆ ಕಿಚ್ಚ ಸುದೀಪ್‌ ಬಹುಪರಾಕ್!

ರಘುಗೆ ಒಲಿದ 'ಉತ್ತಮ' ಪಟ್ಟ; ರಕ್ಷಿತಾ ಪ್ರಬುದ್ಧತೆಗೆ ಕಿಚ್ಚನ ಬಹುಪರಾಕ್

Bigg Boss Kannada Season 12: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದ್ದಂತೆ ಮನೆಯಲ್ಲಿ ಭಾವನಾತ್ಮಕ ಕ್ಷಣಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ 'ಉತ್ತಮ' ಮೆಡಲ್ ಅನ್ನು ರಘುಗೆ ನೀಡುವ ಮೂಲಕ ಎಲ್ಲರ ಮನಗೆದ್ದರು. ಇದನ್ನು ಕಂಡು ರಘು ಭಾವುಕರಾದರು.

Yash: ಸುದೀಪ್ ಮೆಚ್ಚುಗೆಗೆ ಉತ್ತರಿಸಿದ ಯಶ್! ನೀವು ನನ್ನ ಹಿರಿಯರು ಎಂದ ರಾಕಿಂಗ್‌ ಸ್ಟಾರ್‌

ಸುದೀಪ್ ಮೆಚ್ಚುಗೆಗೆ ಉತ್ತರಿಸಿದ ಯಶ್!

Sudeep Yash: ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಹೊಸ ಸಿನಿಮಾ ʻಟಾಕ್ಸಿಕ್‌ʼ ಸ್ಪೆಷಲ್‌ ಟೀಸರ್‌ ರಿಲೀಸ್ ಆಗಿರೋದು ಗೊತ್ತೇ ಇದೆ. ಟೀಸರ್‌ನಲ್ಲಿರುವ ಯಶ್‌ ಬೋಲ್ಡ್‌ ಅವತಾರ ಎಲ್ಲರ ಗಮನಸೆಳೆದಿತ್ತು. ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ಗಟ್ಟಲೇ ವೀವ್ಸ್‌ ಅನ್ನು ಈ ಟೀಸರ್ ಪಡೆದುಕೊಂಡಿರುವುದು ವಿಶೇಷ. ಟೀಸರ್‌ ನೋಡಿ, ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್‌ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟ್ವೀಟ್​​ಗೆ ಯಶ್ಪ್ರ ತಿಕ್ರಿಯೆ ನೀಡಿದ್ದಾರೆ.

Bigg Boss Kannada 12: ಧನುಷ್‌ ಗೌಡ ಪ್ರಕಾರ ಇವರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರಂತೆ! ಯಾರದು?

ಧನುಷ್‌ ಗೌಡ ಪ್ರಕಾರ ಇವರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರಂತೆ!

Dhanush: ಈಗಾಗಲೇ ಬಿಗ್‌ ಬಾಸ್‌ ಮನೆಯಿಂದ ರಾಶಿಕಾ ಔಟ್‌ ಆಗಿದ್ದಾರೆ. ಮಿಡ್‌ ವೀಕ್‌ ಎಲಿಮಿನೇಶನ್‌ ಇದೆ ಎಂದು ಕಿಚ್ಚ ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ. ಟಾಪ್‌ 5ರಲ್ಲಿ ಒಬ್ಬರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರೆ, ಮಧ್ಯರಾತ್ರಿ ಎಲಿಮಿನೇಶನ್‌ ಆಗುವುದು. ಈಗಾಗಲೇ ವೋಟಿಂಗ್‌ ಲೈನ್ಸ್‌ ಓಪನ್‌ ಇದೆ. ಅದಕ್ಕೂ ಮುಂಚೆ ಧನುಷ್‌ ಈಗ ಯಾರು ಹೋಗ್ತಾರೆ ಅಂತ ಮಾತನಾಡಿದ್ದಾರೆ. ಪಂಚಾಯ್ತಿ ಮುಗಿದ ಬಳಿಕ ಕಾವ್ಯ ಅವರು ಸಖತ್‌ ಅಪ್‌ಸೆಟ್‌ ಆಗಿದ್ದರು. ಆಗ ಧನುಷ್‌ ಮಾತನಾಡಿದ್ದಾರೆ.

Bigg Boss Kannada 12: ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್‌ ಏನು?

ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್‌ ಏನು?

Gilli Nata: ನಿನ್ನೆ ಕಿಚ್ಚನ ಕೊನೇಯ ಪಂಚಾಯ್ತಿ ನಡೆದಿದೆ. ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಕೆಲವು ಟಿಪ್ಸ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೊನೆಯದಾಗಿ ಯಾರಿಗಾದರೂ ಸಾರಿ ಕೇಳೋದಾದರೆ ಕೇಳಬಹುದು, ಮೆಚ್ಚಿನ ಉಡುಗೊರೆ ನೀಡಬಹುದು ಎಂದರು. ಅದರಂತೆ ಸ್ಪರ್ಧಿಗಳು ತಮ್ಮಿಷ್ಟದವರಿಗೆ ಉಡುಗೊರೆಯನ್ನು ನೀಡಿದ್ದಾರೆ. ಗಿಲ್ಲಿ ಒಳ್ಳೆಯ ಗಿಫ್ಟ್‌ ಕೊಟ್ಟರೆ, ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.

Bigg Boss Kannada 12: ಟಕರು ಟಕರು ಟಮಟೆ ಏಟು, ಕನ್ನಡ ಜನತೆ ಅಲ್ಟಿಮೇಟು; ಗಿಲ್ಲಿ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

ಗಿಲ್ಲಿ ಹೇಳಿದ ಈ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ!

Gilli Nata: ಬಿಗ್‌ ಬಾಸ್‌ ಫಿನಾಲೆ ಸನೀಹದಲ್ಲಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ರಾಶಿಕಾ ಈಗಾಗಲೇ ಔಟ್‌ ಆಗಿದ್ದಾರೆ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲಿಗೆ ಕಿಚ್ಚ ಅವರು ಎಲಿಮಿನೇಟ್‌ ಆಗಿದ್ದೀರಿ ಅಂದುಕೊಳ್ಳಿ, ಸಣ್ಣ ಸ್ಪೀಚ್‌ ಮಾಡಿ ಎಂದಿದ್ದಾರೆ. ಪ್ರತಿಯೊಬ್ಬರು ಮಾತನಾಡಿದ್ದಾರೆ. ಆದರೆ ಗಿಲ್ಲಿ ನಟನ ಭಾಷಣಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ

ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ!

ashwini Dhruvanth: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸನೀಹದಲ್ಲಿದೆ. ಈಗಾಗಲೇ ರಾಶಿಕಾ ಅವರು ಔಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರ ಜೊತೆಗೆ ಸರ್‌ಪ್ರೈಸ್‌ ಬಿಗ್‌ ಬಾಸ್‌ ನೀಡುತ್ತಲೇ ಇದ್ದಾರೆ. ಇದೀಗ ಮಲ್ಲಮ್ಮ ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಧ್ರುವಂತ್‌ ಬಿಗ್‌ ಬಾಸ್‌ ಶುರುವಾದಾಗಿನಿಂದ ಮಲ್ಲಮ್ಮ ಜೊತೆ ಸಖತ್‌ ಕ್ಲೋಸ್‌ ಇದ್ದರು. ಆದರೀಗ ಎಲ್ಲವೂ ಬದಲಾದಂತಿದೆ. ಮಲ್ಲಮ್ಮ ಬಗ್ಗೆ ಧ್ರುವಂತ್‌ ಅವರು ಅಶ್ವಿನಿ ಜೊತೆ ಮಾತನಾಡುತ್ತ ಅಸಮಧಾನ ಹೊರ ಹಾಕಿದ್ದಾರೆ.

Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್!  ಬಿಗ್​ ಬಾಸ್​ನಿಂದ ರಾಶಿಕಾ ಶೆಟ್ಟಿ ಔಟ್‌

ಬಿಗ್​ ಬಾಸ್​ನಿಂದ ರಾಶಿಕಾ ಶೆಟ್ಟಿ ಔಟ್‌

Rashika Shetty: `ಬಿಗ್‌ ಬಾಸ್‌ ಕನ್ನಡ 12’ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಿರುವಾಗಲೇ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್‌ ಹೆಚ್ಚಾಗಿದೆ. ಈ ವಾರ ʻಬಿಗ್‌ ಬಾಸ್‌ʼ ಮನೆಯಿಂದ ಹೊರಗೆ ಹೋಗಲು ಒಟ್ಟು 7 ಮಂದಿ ನಾಮಿನೇಟ್‌ ಆಗಿದ್ದರು. ಇದೀಗ ರಾಶಿಕಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್‌ ನೀಡುವ ರಾಶಿಕಾ ಶೆಟ್ಟಿ ಔಟ್‌ ಆಗಿದ್ದಾರೆ.

Ekam OTT:  ಏಳು ಕಥೆಗಳ ಒಂದು ಸುಂದರ ಪ್ರಯಾಣ;  ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

ಏಳು ಕಥೆಗಳ ಒಂದು ಸುಂದರ ಪ್ರಯಾಣ; ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

Raj B shetty: ಏಕಂ ಚಿತ್ರದಲ್ಲಿ ಹಲವಾರು ಕಥೆಗಳಿವೆ. ಇದು ಬೇರೆ ರೀತಿಯ ಚಿತ್ರವೇ ಆಗಿದೆ. ಕರಾವಳಿ ಸೊಡಗಿನ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಕಥಾ ಸಂಗ್ರಹವನ್ನು ಹೊಂದಿರುವ "ಏಕಂ" ಎಂಬ ವೆಬ್ ಸರಣಿ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿದೆ."ಏಕಂ" ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ‌ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.

‌ʻಜನ ನಾಯಗನ್ʼ ಪೈಪೋಟಿ ಇಲ್ಲದೇ ಪೊಂಗಲ್‌ಗೆ ಸಿಂಗಲ್‌ ಆಗಿ ಅಖಾಡಕ್ಕಿಳಿದ ʻಪರಾಶಕ್ತಿʼ ಚಿತ್ರದ ಕಲೆಕ್ಷನ್‌ ಎಷ್ಟು? ದಾಖಲೆ ಬರೆಯುತ್ತಾರಾ ಶಿವಕಾರ್ತಿಕೇಯನ್?

'ಜನ ನಾಯಗನ್' ಇಲ್ಲದ ಅಖಾಡದಲ್ಲಿ 'ಪರಾಶಕ್ತಿ' ದರ್ಬಾರ್ ಮಾಡ್ತಾ?

Sivakarthikeyan: ದಳಪತಿ ವಿಜಯ್ ಅವರ 'ಜನ ನಾಯಗನ್' ಪೋಸ್ಟ್‌ಪೋನ್‌ ಆಗಿದ್ದರಿಂದ 'ಪರಾಶಕ್ತಿ' ಚಿತ್ರವು ಪೊಂಗಲ್‌ಗೆ ಸೋಲೋ ಆಗಿ ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಮೊದಲ ದಿನ ಈ ಸಿನಿಮಾವು ಜಾಗತಿಕವಾಗಿ 27 ಕೋಟಿ ರೂ. ಗಳಿಸಿದೆ.

Prashant Tamang: ʻಇಂಡಿಯನ್‌ ಐಡಲ್‌ 3’ ವಿನ್ನರ್‌, ಗಾಯಕ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

ʻಇಂಡಿಯನ್‌ ಐಡಲ್‌ 3’ ವಿನ್ನರ್‌ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

Indian Idol 3 Winner: ಇಂಡಿಯನ್ ಐಡಲ್‌ನ ಮೂರನೇ ಸೀಸನ್ ಗೆದ್ದ ನಂತರ ಮನೆಮಾತಾದ ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ಭಾ ನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು.ಅವರಿಗೆ 43 ವರ್ಷ ವಯಸ್ಸಾಗಿತ್ತು. ದೆಹಲಿಯ ಮನಯೆಲ್ಲಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಶಾಂತ್ ತಮಾಂಗ್ ನಿಧನರಾಗಿದ್ದಾರೆ.

ʻದಿ ರಾಜಾ ಸಾಬ್‌ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್‌ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ನೋಡಿ?

ಬಾಕ್ಸ್ ಆಫೀಸ್‌ನಲ್ಲಿ ʻರಾಜಾ ಸಾಬ್‌ʼಗೆ ಆಘಾತ: 2ನೇ ದಿನದ ಗಳಿಕೆಯಲ್ಲಿ ಕುಸಿತ

The Raja Saab Box Office Collection: 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಫಲಿತಾಂಶ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 112 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ ಭಾರತದಲ್ಲಿ ಶೇ.50ರಷ್ಟು ಕುಸಿತ ಕಂಡು ಕೇವಲ 27.85 ಕೋಟಿ ರೂ. ಗಳಿಸಿದೆ.

Loading...