ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Sandalwood Actor Ramesh Arvind: ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರ ತನ್ನಿ: ಪ್ರೇಕ್ಷಕರ ನೋಟದಲ್ಲಿ ಪ್ರೀತಿ ಇರಲಿ ನಟ ಅರವಿಂದ ರಮೇಶ್

ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರತನ್ನಿ: ನಟ ಅರವಿಂದ ರಮೇಶ್

ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಹಾಗೂ ಸಲುಗೆಯಿಂದ ಅವರಲ್ಲಿನ ಪ್ರತಿಭೆ ಯನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸುಂದರ ಮೂರ್ತಿಯಂತೆ ರೂಪಿಸಬಹುದು. ಶಿಕ್ಷಕರ ನಿರಂತರ ಬೆಂಬಲ ದೊರೆತರೆ ಮಕ್ಕಳು ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ

ತೆಲುಗು 'ಬಿಗ್‌ ಬಾಸ್‌' ಶೋಗೆ ಕಾಲಿಟ್ಟ ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ನಟ ನಿಹಾರ್‌ ಮುಕೇಶ್; ನಿರೂಪಕ ನಾಗಾರ್ಜುನ ಕೇಳಿದ್ದೇನು?

ತೆಲುಗು ಬಿಗ್‌ ಬಾಸ್‌ನಲ್ಲಿ 'ತೀರ್ಥರೂಪ ತಂದೆಯವರಿಗೆ' ಹೀರೋ ನಿಹಾರ್‌ ಮುಕೇಶ್

ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ ಅಧಿಕೃತ ಸ್ಪರ್ಧಿಯಾಗಿ ಪಾದಾರ್ಪಣೆ ಕನ್ನಡ ನಟ ನಿಹಾರ್ ಮುಕೇಶ್‌ ಮಾಡಿದ್ದಾರೆ. ತೆಲುಗು ಧಾರಾವಾಹಿಗಳಲ್ಲಿ ಮಿಂಚಿ, ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ನಿಹಾರ್ ಮುಕೇಶ್‌, ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

BBK 13: ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ ಯಾರು? ಇನ್‌ಸ್ಟಾಗ್ರಾಮ್‌ನಲ್ಲಿ ಯಾರಿಗೆ ಜಾಸ್ತಿ ಫಾಲೋವರ್ಸ್?

BBK 13ರ ಸ್ಪರ್ಧಿಗಳಲ್ಲಿ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್ ಯಾರಿಗೆ ಜಾಸ್ತಿ?

`ಕಿಚ್ಚ' ಸುದೀಪ್‌ ಅವರ ಸಾರಥ್ಯದಲ್ಲಿ 'ಬಿಗ್‌ ಬಾಸ್‌ ಕನ್ನಡ ಸೀಸನ್‌ 13' ಆರಂಭವಾಗಿದೆ. ಒಟ್ಟು 16 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರಲ್ಲಿ 12 ಮಂದಿ ಸೆಲೆಬ್ರಿಟಿಗಳಾಗಿದ್ದರೆ, 4 ಮಂದಿ 'ಅಗ್ನಿಪರೀಕ್ಷೆ'ಯನ್ನು ದಾಟಿ ಬಿಗ್‌ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ ಎಷ್ಟು ಫಾಲೋವರ್ಸ್‌ ಇದ್ದಾರೆ? ಯಾರಿಗೆ ಹೆಚ್ಚು ಮತ್ತು ಯಾರಿಗೆ ಕಡಿಮೆ ಫಾಲೋವರ್ಸ್‌ ಇದ್ದಾರೆ? ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವುದು ಸೌಂದರ್ಯ ಶೆಟ್ಟಿ. ಉಳಿದ ಸ್ಪರ್ಧಿಗಳ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ವಿವರ ಇಲ್ಲಿದೆ.

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ಈ ಸರಣಿ ಮತ್ತು ಅದರ ನಾಲ್ಕು ಸೀಸನ್‌ಗಳನ್ನು ಅಭಿಮಾನಿಗಳ ನೆಚ್ಚಿನವು ಎಂದು ಪರಿಗಣಿಸಲಾಗಿದೆ ಮತ್ತು ವೀಕ್ಷಕರು ಪಂಚಾಯತ್ 5 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ . ಫುಲೇರಾ ಗ್ರಾಮ ಪಂಚಾಯತ್‌ನ ರೋಮಾಂಚಕ ಮತ್ತು ಹಾಸ್ಯಮಯ ಕಥೆಯನ್ನು ಹೇಳುವ ಪಂಚಾಯತ್ 5 (Panchayat) ರ OTT ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದು OTT ಯಲ್ಲಿ ಯಾವಾಗ ಮತ್ತು ಎಲ್ಲಿ ಸ್ಟ್ರೀಮ್ ಆಗುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿದೆ.

Bigg Boss Tamil 10: ಟಾಕ್ಸಿಕ್ ತಂಡದಿಂದ ಕಾನೂನು ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌!

ಟಾಕ್ಸಿಕ್‌ನಿಂದ ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌

Bigg Boss Tamil 10: ಯೂಟ್ಯೂಬರ್ ಪ್ರಶಾಂತ್ ರಂಗಸ್ವಾಮಿ (Prashanth ranagaswamy) ಅವರಿಗೆ ನೋಟಿಸ್‌ ನೀಡಿತ್ತು. ಬೆಂಗಳೂರಿನ ನ್ಯಾಯಾಲಯವು ಚಿತ್ರದ ಬಗ್ಗೆ ಸುಳ್ಳು ಅಥವಾ ಮಾನಹಾನಿಕರ ವಿಷಯಗಳ ಪ್ರಕಟಣೆ ಅಥವಾ ಪ್ರಸಾರವನ್ನು ನಿರ್ಬಂಧಿಸುವ ಮಧ್ಯಂತರ ಆದೇಶವನ್ನು ನೀಡಿದ ನಂತರ ಈ ನೋಟಿಸ್ (Notice) ಕಳುಹಿಸಲಾಗಿತ್ತು. ಆದರೀಗ ಒಂದು ಹೊಸ ಸುದ್ದಿ ಔಟ್‌ ಆಗಿದೆ. ಬಿಗ್ ಬಾಸ್ ತಮಿಳು 10 ರ ಸ್ಪರ್ಧಿ ಪ್ರಶಾಂತ್ ರಂಗಸ್ವಾಮಿ ಅವರನ್ನು ಮನೆಗೆ ಪ್ರವೇಶಿಸುವ ಮೊದಲೇ ಹೊರಹಾಕಲಾಗಿದೆ ಎಂದು ವರದಿಯಾಗಿದೆ.

Bigg boss Kannada 13: ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

Bigg boss Kannada 13:ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಹಾಗೆಯೇ ಮೂರ್ತಿಯ ಕೈಯಲ್ಲಿ "ಕಿಚ್ಚನ ಚಪ್ಪಾಳೆ" ಬರಹವುಳ್ಳ ಪತ್ರವಿತ್ತು. ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಯಾರಿಗೆ?

Bigg Boss kannada 13: ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಕೊಡ್ತಾ ಇದ್ದೀರಾ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ಬರೋಬ್ಬರಿ 16 ಮಂದಿ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಇದೀಗ ಮೊದಲ ದಿನವೇ ಸ್ಪರ್ಧಿಗಳ ರೋಧನೆ ಶುರು ಆಗಿದೆ. ಹೊಸ ಪ್ರೋಮೋ ಔಟ್‌ ಆಗಿದೆ. ಒಟ್ಟಾರೆಯಾಗಿ ಮೊದಲ ದಿನವೇ ಸ್ಪರ್ಧಿಗಳಿಗೆ ಕಠಿಣ ಸವಾಲು ಎದುರಾಗಿದೆ.

ʻಬಿಗ್ ಬಾಸ್ʼ ಮನೆಗೆ ‘ಮಾಡರ್ನ್ ಮಹಾಕವಿ ಮಂಜ’ ಎಂಟ್ರಿ; ಅಗ್ನಿಪರೀಕ್ಷೆಯ ಜ್ಯೂರಿಗಳಿಂದ ಸಿಕ್ತು ಬಂಪರ್‌ ಆಫರ್!‌

ಬಿಗ್ ಬಾಸ್ ಮನೆಗೆ ಮಾಡರ್ನ್ ಮಹಾಕವಿ ಮಂಜ ಎಂಟ್ರಿ; ಈ ಆಫರ್‌ ಕೊಟ್ಟಿದ್ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್ 13ಕ್ಕೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಪ್ರವೇಶಿಸಿದ್ದಾರೆ. ಅಗ್ನಿಪರೀಕ್ಷೆಯ ತೀರ್ಪುಗಾರರಾಗಿದ್ದ ನಟಿ ಶ್ರುತಿ ನೇತೃತ್ವದ ತಂಡ ಇವರಿಗೆ ಈ ಮಹತ್ವದ ಅವಕಾಶ ನೀಡಿದೆ. ಮಾತೆತ್ತಿದರೆ ಪ್ರಾಸಬದ್ಧವಾಗಿ ಮಾತನಾಡುವ, ಅರ್ಧ ತಲೆ ಬೋಳಿಸಿಕೊಂಡು ಗಮನ ಸೆಳೆದ ಈ ಪ್ರತಿಭೆ, ಜನಸಾಮಾನ್ಯರ ಕೋಟಾದಡಿ ನಾಲ್ಕನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ.

Bigg Boss Kannada 13:  ʻಪವಿತ್ರ ಬಂಧನʼ ಖ್ಯಾತ ನಟ ಯಶಸ್‌ ಕೃಷ್ಣ ಬಿಗ್‌ ಬಾಸ್‌ಗೆ ಎಂಟ್ರಿ!

ʻಪವಿತ್ರ ಬಂಧನʼ ಖ್ಯಾತ ನಟ ಯಶಸ್‌ ಕೃಷ್ಣ ಬಿಗ್‌ ಬಾಸ್‌ಗೆ ಎಂಟ್ರಿ!

Bigg Boss Kannada 13: ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಪವಿತ್ರʼ ಬಂಧನ ಧಾರಾವಾಹಿ, ಕಡಿಮೆ ಸಮಯದಲ್ಲಿ ಪ್ರೇಕ್ಷಕರ ಫೇವರಿಟ್‌ ಸೀರಿಯಲ್‌ ಆಗಿಬಿಟ್ಟಿತ್ತು. ಅದರಲ್ಲೂ ತಿಲಕ್‌ ದೇಶಮುಖ್‌ ಅವರ ಪಾತ್ರ ಎಲ್ರಿಗೂ ಕನೆಕ್ಟ್‌ ಆಗಿತ್ತು. ಪವಿತ್ರಾ ಜೊತೆ ಮದುವೆಯಾಗಬೇಕಿದ್ದ ತಿಲಕ್‌, ಮದುವೆಯ ದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಡ್ತಾನೆ. ಯಶಸ್‌ ಕೃಷ್ಣ ಪಾತ್ರ ಮುಗಿದಾಗ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ನಟ ಬಿಗ್‌ ಬಾಸ್‌ ವೇದಿಕೆ ಬಂದಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ನೇರವಾಗಿ ದೊಡ್ಮನೆಗೆ ಬಂದ ಗಿನ್ನೆಸ್ ದಾಖಲೆ ವೀರ ಧನುಷ್!

ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ಮನೆಗೆ ಬಲಗಾಲಿಟ್ಟು ಬಂದ ಧನುಷ್

Bigg Boss Kannada 13: ಬಿಗ್‌ ಬಾಸ್‌ ಅಂಗಳಕ್ಕೆ ಅಗ್ನಿಪರೀಕ್ಷೆಯ ಕಠಿಣ ಸವಾಲುಗಳನ್ನು ಗೆದ್ದು ಗಿನ್ನೆಸ್ ದಾಖಲೆ ವೀರ ಧನುಷ್ ಮಂಜುನಾಥ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಮಾಜದಿಂದ ಎದುರಿಸಿದ ಅವಮಾನ, ಬಡತನ ಮತ್ತು ತಿರಸ್ಕಾರಗಳ ನಡುವೆಯೂ ಛಲ ಬಿಡದೆ ಹೋರಾಡಿದ ಧನುಷ್, ಈ ಬಾರಿ ಗೆಲ್ಲುವ ಹಠ ತೊಟ್ಟಿದ್ದಾರೆ.

Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ (vaishnavi koundinya) ಎಂಟ್ರಿ ಕೊಟ್ಟಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ವೈಷ್ಣವಿ, ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ ಪ್ರೇಮ ಕಾವ್ಯದಲ್ಲಿ ನಟಿಸಿದ್ದರು.

ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಟ್ಟ ನಟ ತಾಂಡವ್ ರಾಮ್: ʻಆಕ್ಷನ್‌ಗೆ ರಿಯಾಕ್ಷನ್ ಗ್ಯಾರಂಟಿʼ ಎಂದ ʻಜೋಡಿ ಹಕ್ಕಿʼ ಹೀರೋ!

ʻಸಾಧಿಸುವವರೆಗೆ ಮದುವೆ ಆಗಲ್ಲʼ ಎನ್ನುತ್ತ ಬಿಗ್‌ಬಾಸ್‌ಗೆ ಬಂದ ತಾಂಡವ್ ರಾಮ್‌

ʻಬಿಗ್ ಬಾಸ್ʼ ಮನೆಗೆ ನಟ ತಾಂಡವ್‌ ರಾಮ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬಂದು ಕಿರುತೆರೆ, ಹಿರಿತೆರೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಇವರು, ವೈಯಕ್ತಿಕ ಬದುಕಿನ ಕಷ್ಟಗಳು ಮತ್ತು ಜೈಲುವಾಸದ ವಿವಾದಗಳನ್ನು ಎದುರಿಸಿ ಬಂದಿದ್ದಾರೆ.

ಕಿರುತೆರೆಯಿಂದ ʻಬಿಗ್‌ ಬಾಸ್‌ʼ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಎಂಟ್ರಿ: ನೆಗೆಟಿವ್ ರೋಲ್‌ಗೆ ಆಡಿಷನ್ ಕೊಟ್ಟು ನಾಯಕಿಯಾದ ಛಲಗಾತಿಯ ರೋಚಕ ಪಯಣ!

BBK 13: ʻಬಿಗ್‌ ಬಾಸ್‌' ಮನೆಗೆ ಬಂದ ದಾವಣಗೆರೆ ಬೆಡಗಿ ಆಸಿಯಾ ಫಿರ್ದೋಸ್

BBK 13: ಬಿಗ್‌ ಬಾಸ್ ಕನ್ನಡದ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್ಥೊಡಾಕ್ಸ್ ಕುಟುಂಬದ ವಿರೋಧದ ನಡುವೆಯೂ ತಾಯಿಯ ಬೆಂಬಲದಿಂದ ನಟನಾ ರಂಗಕ್ಕೆ ಕಾಲಿಟ್ಟ ದಾವಣಗೆರೆಯ ಈ ಪ್ರತಿಭೆ, ನೂರಾರು ತಿರಸ್ಕಾರಗಳನ್ನು ಎದುರಿಸಿದ್ದರು.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

Bigg Boss Kannada 13: ಈ ಸಲ ಬಿಗ್‌ ಬಾಸ್‌ ಸೀಸನ್‌ ಆರಂಭಕ್ಕೂ ಮೊದಲೇ ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ವಿಡಿಯೋಗಳನ್ನು ಕಳುಹಿಸಿದ್ದರು. ಇದರಲ್ಲಿ ಅಳೆದು ತೂಗಿ ಕೇವಲ 60 ಕಂಟೆಸ್ಟೆಂಟ್‌ಗಳನ್ನು ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮ ಆಯ್ಕೆ ಮಾಡಿತ್ತು. ಲಿಖಿತ್ ಅವರು ದೊಡ್ಮನೆಗೆ ಬಿಗ್‌ ಎಂಟ್ರಿ ಕೊಟ್ಟಿದ್ದಾರೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ವಿಮಾನ ಏರಿದ ಕಿರಣ್‌ ಶಾಸ್ತ್ರಿ; ʻಕಾಮನ್‌ ಮ್ಯಾನ್‌ʼ ಕ್ಯಾಂಪ್‌ನಿಂದ ದೊಡ್ಮನೆಗೆ ಬಂದ ಮೊದಲ ಸ್ಪರ್ಧಿ!

ಅಗ್ನಿಪರೀಕ್ಷೆ ಗೆದ್ದು ಬಿಗ್‌ ಬಾಸ್‌ಗೆ ಬಂದ ಕಾಮನ್ ಮ್ಯಾನ್ ಕಿರಣ್ ಶಾಸ್ತ್ರಿ

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಸಾಮಾನ್ಯ ವರ್ಗದ ಪ್ರತಿನಿಧಿಯಾಗಿ ಕಿರಣ್ ಶಾಸ್ತ್ರಿ ಒಂಬತ್ತನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳನ್ನು ಹಿಂದಿಕ್ಕಿ, ಎದುರಾಳಿಗಳ ಕುತಂತ್ರಗಳ ನಡುವೆಯೂ ಜನತೆಯ ಅತೀವ ಪ್ರೀತಿ ಮತ್ತು ಮತಗಳಿಂದ ಮುಖ್ಯ ಮನೆಗೆ ಆಯ್ಕೆಯಾಗಿದ್ದಾರೆ.

Bigg Boss Kannada 13: ದೊಡ್ಮನೆಗೆ ಬಂದ  ʻಸೀತಾರಾಮʼ  ಖ್ಯಾತಿಯ ಗಗನ್ ಚಿನ್ನಪ್ಪ

ದೊಡ್ಮನೆಗೆ ಬಂದ ʻಸೀತಾರಾಮʼ ಖ್ಯಾತಿಯ ಗಗನ್ ಚಿನ್ನಪ್ಪ

Bigg Boss Kannada 13: ಗಗನ್ ಚಿನ್ನಪ್ಪ (gagan chinnappa), ಕನ್ನಡ ಕಿರುತೆರೆಯ ʻಸೀತಾರಾಮʼ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದ ನಟ. ಈ ಧಾರಾವಾಹಿಯಲ್ಲಿನ ರಾಮ್‌ ಪಾತ್ರವು ಅವರಿಗೆ ದೊಡ್ಡ ಮಟ್ಟಿಗೆ ಖ್ಯಾತಿ ತಂದುಕೊಟ್ಟಿತು. ಇದೀಗ ಗಗನ್‌ ಬಿಗ್‌ ಬಾಸ್‌ಗೆ (Bigg Boss kannada 13) ಎಂಟ್ರಿ ಕೊಟ್ಟಿದ್ದಾರೆ. ಮನೆ ಕಟ್ಟುವ ಜವಬ್ದಾರಿ ಹೊತ್ತಿರೋ ನಟ, ಮನರಂಜನೆ ಕೊಡೋದು ಗ್ಯಾರಂಟಿ ಅಂತ ಎಂಟ್ರಿ ಕೊಟ್ಟಿದ್ದಾರೆ.

Bigg Boss kannada 13: ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

Bigg Boss kannada 13: ಬಿಗ್​​ ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧೆಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ ಬಂದಿದ್ದಾರೆ. ಮಂಗಳೂರು ಮೂಲದ ಮಾಡೆಲ್ ಸೌಂದರ್ಯಾ ಶೆಟ್ಟಿ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಎರಡನೇ ಸ್ಪರ್ಧಿಯಾಗಿ, ಅವಿನಾಶ್‌ ಷಠಮರ್ಷಣ ಮೂರನೇ ಸ್ಪರ್ಧಿಯಾಗಿ ಬಂದರು. ಈಗ ವಿನಯ್ ಪ್ರಸಾದ್ ಅವರ ಪುತ್ರಿ ಪ್ರಥಮ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ.

BBK 13: ʻಬಿಗ್ ಬಾಸ್ʼ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಎಂಟ್ರಿ: ‘ಸಿಂಪತಿ ಬೇಡವೇ ಬೇಡ’ ಎಂದ ನಟ!

Bigg Boss ಮನೆಗೆ 3ನೇ ಸ್ಪರ್ಧಿಯಾಗಿ ನಟ ಅವಿನಾಶ್ ಷಠಮರ್ಶನ್ ಎಂಟ್ರಿ

ಬಿಗ್‌ ಬಾಸ್‌ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಪ್ರವೇಶಿಸುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ನಟರಾಗಿ ಗುರುತಿಸಿಕೊಂಡಿರುವ ಇವರು ಮೂರನೇ ಸ್ಪರ್ಧಿಯಾಗಿ ಆಗಮಿಸಿ, ಜನರ ಅನಗತ್ಯ ಅನುಕಂಪ ತಮಗೆ ಬೇಡವೆಂದು ಎಂದು ಖಡಕ್ಕಾಗಿ ಹೇಳಿದ್ದಾರೆ.

Bigg Boss Kannada 13: ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೌಂದರ್ಯ ಶೆಟ್ಟಿ; ಯಾರಿಗೂ ಹೆದರದ ಕುಡ್ಲದ ಬೆಡಗಿಯ ಹಿನ್ನೆಲೆ ಏನು?

ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೌಂದರ್ಯ ಶೆಟ್ಟಿ!

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಗ್ರ್ಯಾಂಡ್ ಓಪನಿಂಗ್‌ನಲ್ಲಿ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಬೋಲ್ಡ್‌, ಫ್ಯಾಷನ್‌ ಮೂಲಕ ವೀಕ್ಷಕರ ಮನ ಸೆಳೆದು ಸಖತ್ ಸದ್ದು ಮಾಡುತ್ತಿದ್ದಾರೆ. ಸೌಂದರ್ಯ ಶೆಟ್ಟಿ (Soundarya Shetty), ಅವರ ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ, ಮೂಲತಃ ಕರ್ನಾಟಕದ ಮಂಗಳೂರಿನವರು. ಸೌಂದರ್ಯ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ‘ಸ್ಯಾಂಡಿ’ ಅಂತಲೇ ಫೇಮಸ್. ಸನ್ನಿ ಲಿಯೋನ್ ಸಹ ಸೌಂದರ್ಯ ಶೆಟ್ಟಿ ಅವರನ್ನ ಪ್ರೀತಿಯಿಂದ ಸ್ಯಾಂಡಿ ಅಂತಲೇ ಕರೆಯುತ್ತಿದ್ದರು.

BBK 13: ʻಬಿಗ್‌ ಬಾಸ್‌ʼ ಕನ್ನಡ 13ಕ್ಕೆ ‘ಲವ್‌ ಮಾಕ್‌ಟೇಲ್‌ 3’ ಖ್ಯಾತಿಯ ‘ಜಗ್ಗಾ ಮಮ್ಮಿ’ ಎಂಟ್ರಿ; ಮೊದಲ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಜಗದೀಶ್!

ʻಬಿಗ್ ಬಾಸ್ʼ ಕನ್ನಡ 13 ಶೋಗೆ 'ಜಗ್ಗಾ ಮಮ್ಮಿ' ಅಚ್ಚರಿಯ ಎಂಟ್ರಿ!

ಮಂಡ್ಯ ಮೂಲದ ಜಗದೀಶ್ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಕ್ಕನ ಮನೆ ಅಡುಗೆಯವನಾಗಿದ್ದ ಇವರು 'ಲವ್ ಮಾಕ್‌ಟೇಲ್ 3' ಮೂಲಕ ಮನೆಮಾತಾಗಿದ್ದರು. ಸಾಲ ತೀರಿಸಲು ಬಂದಿರುವುದಾಗಿ ಹೇಳಿದ ಜಗದೀಶ್, ಟಾಸ್ಕ್ ಆಡಿ ಟ್ರೋಫಿ ಗೆಲ್ಲುವ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಎದುರು ತಮ್ಮ ಕಷ್ಟದ ಬದುಕು ತೆರೆದಿಟ್ಟಿದ್ದಾರೆ.

Bigg Boss Kannada 13: ಈ ಬಾರಿ ಸ್ಪರ್ಧಿಗಳಿಗೆ ಇರಲಿದೆ ಈ ಹೊಸ ಟ್ವಿಸ್ಟ್‌! ಕಿಚ್ಚ ಕೊಟ್ಟ ಹಿಂಟ್‌ ಏನು?

ಈ ಬಾರಿ ಸ್ಪರ್ಧಿಗಳಿಗೆ ಇರಲಿದೆ ಈ ಹೊಸ ಟ್ವಿಸ್ಟ್‌!

Bigg Boss Kannada 13: ಈ ಬಾರಿ ಬಿಗ್​​ಬಾಸ್​​ನಲ್ಲಿ ಅಪರೂಪದ ಘಟನೆ ನಡೆಯಲಿದೆ. ನಾಲ್ಕು ಭಾಷೆಯ ಬಿಗ್​​ಬಾಸ್​ ಶೋ ಒಟ್ಟಿಗೆ ಆರಂಭ ಆಗುತ್ತಿದ್ದು, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಬಿಗ್​​ಬಾಸ್​​ ಏಕಕಾಲಕ್ಕೆ ಪ್ರಾರಂಭ ಆಗುತ್ತಿದೆ. ಇದೀಗ ಕಿಚ್ಚ ಈ ಬಾರಿಯ ಬಿಗ್‌ ಬಾಸ್‌ ಬಗ್ಗೆ ಒಂದು ಸುಳಿವು ನೀಡಿದ್ದಾರೆ. ಏನದು?

ʻಕಿಚ್ಚʼ ಸುದೀಪ್‌ ಸಾರಥ್ಯದಲ್ಲಿ ‘ಬಿಗ್‌ ಬಾಸ್ ಕನ್ನಡ 13’ ಆರಂಭ; ಈ ಸಲದ ದೊಡ್ಮನೆಯ ವಿನ್ಯಾಸ ಹೇಗಿದೆ? ಏನೇನ್‌ ಸ್ಪೆಷಾಲಿಟಿ ಇದೆ?

ʻಬಿಗ್ ಬಾಸ್ 13ʼಕ್ಕೆ ಗ್ರ್ಯಾಂಡ್ ಓಪನಿಂಗ್‌; ಈ ಸಲದ ದೊಡ್ಮನೆ ಹೇಗಿದೆ?

Bigg Boss Kannada 13: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್‌ ಬಾಸ್‌ 13 ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಬಾರಿ ಇಡೀ ಮನೆಯನ್ನು ಜಾಗತಿಕ ಪ್ರವಾಸಿ ತಾಣಗಳು ಮತ್ತು ಏವಿಯೇಷನ್ ಶೈಲಿಯಲ್ಲಿ ವಿನೂತನವಾಗಿ ಸಿಂಗರಿಸಲಾಗಿದೆ. ವಿಮಾನದ ಕಾಕ್‌ಪಿಟ್ ಪ್ರವೇಶದ್ವಾರ, ಕನ್ನಡದ ಸೊಗಡಿನ ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮಾದರಿಯ ಜೈಲು ಇನ್ನಿತರ ಸ್ಪೆಷಾಲಿಟಿಗಳು ಮನೆಯೊಳಗೆ ಇವೆ.

Bigg boss Kannada 13: BBK 13: ಶೋ ಎಂಟ್ರಿ ಕೊಡ್ತಿದ್ದಂಗೆ ಬಿಗ್‌ ಬಾಸ್‌ಗೇ ಕೌಂಟರ್‌ ಕೊಟ್ಟ ಓಂ ಪ್ರಕಾಶ್‌ ರಾವ್; ಈ ಡೈರೆಕ್ಟರ್‌ ಮಾತಿಗೆ ಬೀಪ್‌ ಹಾಕ್ತಾರಾ?

ಶೋ ಎಂಟ್ರಿ ಕೊಡ್ತಿದ್ದಂಗೆ ಬಿಗ್‌ ಬಾಸ್‌ಗೇ ಕೌಂಟರ್‌ ಕೊಟ್ಟ ಓಂ ಪ್ರಕಾಶ್‌

Bigg boss Kannada 13: ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸ್ಪರ್ಧಿಗಳಾಗಿ ಪ್ರವೇಶ ಪಡೆದಿದ್ದಾರೆ. ಇದರ ಬೆನ್ನಲ್ಲೇ ಹೊಸ ಪ್ರೋಮೋ ಔಟ್‌ ಆಗಿದೆ. ಹೌದು ಕನ್ನಡ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು (ಸೆ.6) ಸಂಜೆ ಬಿಗ್ ಬಾಸ್ ಸೀಸನ್ 13 ಅಧಿಕೃತವಾಗಿ ಅದ್ದೂರಿಯಾಗಿ ಆರಂಭವಾಗಲಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿದೆ.

‌ʻಬಿಗ್‌ ಬಾಸ್‌ʼ ಕನ್ನಡ 13ರ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಕಾಮನ್‌ ಮ್ಯಾನ್‌ ಕೆಟಗರಿಗೆ ಬಂಪರ್ ಚಾನ್ಸ್!

ʻಬಿಗ್ ಬಾಸ್ʼ ಕನ್ನಡ 13 ಶುರು; ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವ್ರೇ ನೋಡಿ!

ಕಿಚ್ಚ ಸುದೀಪ್ ಸಾರಥ್ಯದಲ್ಲಿ ‌ʻಬಿಗ್‌ ಬಾಸ್‌ʼ ಕನ್ನಡ 13 ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ಈ ಬಾರಿಯ ವಿಶೇಷವೆಂದರೆ ಸೀಸನ್ 5ರ ಮಾದರಿಯಲ್ಲಿ ಕಾಮನ್ ಮ್ಯಾನ್ ಕೋಟಾದಡಿ ನಾಲ್ವರು ಸಾಮಾನ್ಯ ಪ್ರತಿಭೆಗಳು ಅಗ್ನಿಪರೀಕ್ಷೆ ದಾಟಿ ನೇರವಾಗಿ ದೊಡ್ಮನೆಗೆ ಲಗ್ಗೆ ಇಡಲಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಪ್ರಮುಖ ನಟ-ನಟಿಯರು ಸೇರಿ ಒಟ್ಟು 18 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಒಳಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Loading...