‘ಕ್ಯಾಮರಾ ಆಫ್ ಮಾಡಿ’ ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ
Bigg Boss Kannada 13: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ನಡೆಯುತ್ತಿದೆ. ಅಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ಪೂರ್ಣಿಮಾ ‘ಅಗ್ನಿಪರೀಕ್ಷೆ’ ವೇದಿಕೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣಿಮಾ ಆಡಿರುವ ಮಾತುಗಳಿಗೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಅಸಮಾಧಾನಗೊಂಡಿದ್ದಾರೆ. ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.