ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

A Date Review: ಒಲವಿನ ಹಲವು ಮಜಲುಗಳನ್ನು ಪರಿಚಯಿಸುವ ಒಂದು ದಿನದ ಕಥೆ!

ಹೊಸ ಪ್ರತಿಭೆಗಳ ʻಎ ಡೇಟ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

A Date Review: ಆಧುನಿಕ ಕಾಲದ ಕಾರ್ಪೊರೇಟ್ ಪ್ರೇಮ ಸಂಬಂಧಗಳ ಸಂಕೀರ್ಣತೆಯನ್ನು ಕಟ್ಟಿಕೊಡುವ ಪ್ರಯತ್ನವೇ ʻಎ ಡೇಟ್‌ʼಸಿನಿಮಾ. ಕನ್ನಡಿಗ ಟೆಕ್ಕಿ ಹಾಗೂ ದೆಹಲಿ ಮೂಲದ ಯುವತಿಯ ನಡುವೆ ಬೆಂಗಳೂರಿನಲ್ಲಿ ಒಂದೇ ದಿನ ನಡೆಯುವ ಸಂವಾದಾತ್ಮಕ ಪಯಣವೇ ಚಿತ್ರದ ಜೀವಾಳ.

ಒಟಿಟಿಯಲ್ಲಿ ಈ ವಾರ ಮನರಂಜನೆಯ ಮಹಾಪೂರ; ‘DC’ ಸೇರಿ ಬಿಡುಗಡೆಯಾಗಲಿವೆ 5 ಭರ್ಜರಿ ಹಿಟ್ ಸಿನಿಮಾಗಳು!

ವೀಕೆಂಡ್ OTT ಧಮಾಕ: ತಮಿಳಿನ ‘ಡಿಸಿ’ ಸೇರಿದಂತೆ 5 ಹಿಟ್‌ ಸಿನಿಮಾಗಳು ರಿಲೀಸ್

OTT Movie Releases: ಸೆಪ್ಟೆಂಬರ್ ಮೊದಲ ವಾರದಲ್ಲಿ ಭಿನ್ನ ಜಾನರ್‌ನ ಐದು ಜನಪ್ರಿಯ ಸಿನಿಮಾಗಳು ಮನೆಮನೆಗೆ ತಲುಪಲು ಸಜ್ಜಾಗಿವೆ. ಗಲ್ಲಾಪೆಟ್ಟಿಗೆ ದಾಖಲೆ ಬರೆದ ಲೋಕೇಶ್ ಕನಕರಾಜ್ ಅವರ ‘ಡಿಸಿ’ ಸನ್‌ನೆಕ್ಸ್ಟ್‌ನಲ್ಲಿ ಹಾಗೂ ವರುಣ್ ತೇಜ್ ಅಭಿನಯದ ‘ಕೊರಿಯನ್ ಕನಕರಾಜು’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿವೆ.

6 ಭಾಷೆ, 95ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳ ಸಾಥ್; ದಾಖಲೆಯ ಪ್ರಾಯೋಜಕತ್ವದೊಂದಿಗೆ 'ಬಿಗ್ ಬಾಸ್ 2026' ಹಬ್ಬದ ಸೀಸನ್ ಆರಂಭ

ʻಬಿಗ್ ಬಾಸ್ 2026ʼ ಮಹಾ ಧಮಾಕ; 6 ಭಾಷೆ, 95 ಬ್ರ್ಯಾಂಡ್‌ಗಳ ಸಾಥ್!‌

ʻಬಿಗ್‌ ಬಾಸ್‌ 2026ʼ ರಿಯಾಲಿಟಿ ಶೋ 6 ಪ್ರಾದೇಶಿಕ ಭಾಷೆಗಳಲ್ಲಿ 95ಕ್ಕೂ ಅಧಿಕ ಕಾರ್ಪೊರೇಟ್ ಪ್ರಾಯೋಜಕರ ಭಾರಿ ಬೆಂಬಲದೊಂದಿಗೆ ಅಖಾಡಕ್ಕಿಳಿದಿದೆ. ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಪ್ರಮುಖ ತಾರೆಯರು ಮುನ್ನಡೆಸುವ ಈ ಕಾರ್ಯಕ್ರಮ ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಆರಂಭವಾಗಲಿದೆ.

ʻ‌ನನ್ನ ಮಗನ ತಪ್ಪನ್ನು ನಾನು ಸಹಿಸಲಾರೆ, ಕ್ಷಮಿಸಲಾರೆʼ; ಪುತ್ರ ಸಾಮ್ರಾಟ್‌ ಕೇಸ್‌ ಬಗ್ಗೆ ನಟ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ಪುತ್ರ ಸಾಮ್ರಾಟ್‌ ಕೇಸ್‌ ಬಗ್ಗೆ ನಟ ʻದುನಿಯಾʼ ವಿಜಯ್‌ ಫಸ್ಟ್‌ ರಿಯಾಕ್ಷನ್!‌

ʻದುನಿಯಾʼ ವಿಜಯ್‌ ಅವರ ಪುತ್ರ ಸಾಮ್ರಾಟ್ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂದೆಯಾಗಿ ಮಗನ ತಪ್ಪುಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Bigg Boss: 104 ಕ್ಯಾಮೆರಾಗಳು, ಒಂದು ರಹಸ್ಯ ರೂಮ್‌! ಹೇಗಿದೆ ಬಿಗ್‌ ಬಾಸ್‌ ಮನೆ?

104 ಕ್ಯಾಮೆರಾಗಳು, ಒಂದು ರಹಸ್ಯ ರೂಮ್‌! ಹೇಗಿದೆ ಬಿಗ್‌ ಬಾಸ್‌ ಮನೆ?

Bigg Boss:ಸೆಪ್ಟೆಂಬರ್ 6 ರ ಭಾನುವಾರದಂದು ಅದ್ಧೂರಿಯಾಗಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಈ ಸೀಸನ್‌ನ ಥೀಮ್ "ವರ್ದಾನ್" ಆಗಿದ್ದು, ಯಾವ ಸ್ಪರ್ಧಿಗಳು ಮನೆಗೆ ಪ್ರವೇಶಿಸುತ್ತಾರೆ ಎಂಬುದು ಅತ್ಯಂತ ಕುತೂಹಲಕಾರಿಯಾಗಿದೆ. ಸ್ಪರ್ಧಿಗಳ ಜೊತೆಗೆ, ಕಾರ್ಯಕ್ರಮದ ಹೊಸ ಮನೆಯೂ ಈ ಬಾರಿ ಚರ್ಚೆಯ ಪ್ರಮುಖ ವಿಷಯವಾಗಿದೆ. ಸುಮಾರು 19 ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ವಿನ್ಯಾಸಗೊಳಿಸಿದ ಓಮಂಗ್ ಕುಮಾರ್ ಅವರನ್ನು ಈಗ ಡಿಸೈನರ್ ವರ್ಷಾ ಜೈನ್ ಬದಲಾಯಿಸಿದ್ದಾರೆ.

Harshika Poonacha:  ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ  ಪೂಣಚ್ಚ

ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ ಪೂಣಚ್ಚ

Harshika Poonacha: 'ನಮ್ಮ ಚೋಟು ಕೃಷ್ಣ' (Chotu Krishna) ಅಂತಲೂ ಈ ಜೋಡಿ ಹೇಳಿದೆ. ಮಗುವಿನ ಮುಂಗೈ ಫೋಟೋ ಕೂಡ ಹಂಚಿಕೊಂಡಿದೆ. ಭುವನ್-ಹರ್ಷಿಕಾ ಬಾಳಿಗೆ ಪುಟ್ಟ ಕನ್ಹನ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ಸಡಗರ ಮನೆಮಾಡಿದೆ. ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಂಗೈ ಮಾತ್ರ ಕಾಣಿಸುತ್ತಿದೆ.

Bigg Boss Kannada 13: ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

Bigg Boss Kannada 13: ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಸ್ಪರ್ಧಿಸಲಿದ್ದು, 'ಅಗ್ನಿ ಪರೀಕ್ಷೆ' ಮೂಲಕ ಮೂವರು ಆಯ್ಕೆಯಾಗಲಿದ್ದಾರೆ. , ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ್ಧಿಗಳಿಗೆ ಮನೆಯಲ್ಲಿ 100 ದಿನ ಉಳಿದುಕೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

Allu Arjun: ಅಲ್ಲು ಅರ್ಜುನ್‌ ‘ರಾಕಾ’ ಈ ಡೇಟ್‌ಗೆ ರಿಲೀಸ್‌!

ಅಲ್ಲು ಅರ್ಜುನ್‌ ‘ರಾಕಾ’ ಈ ಡೇಟ್‌ಗೆ ರಿಲೀಸ್‌!

Allu Arjun: ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕಕ್ಕೆ ಸಂಬಂಧಿಸಿದ ಸುದ್ದಿ ಈಗ ಚಲನಚಿತ್ರ ವಲಯಗಳಲ್ಲಿ ಬಿಸಿ ವಿಷಯವಾಗಿದೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಬಝ್ ಪ್ರಕಾರ, ತಯಾರಕರು 'ರಾಕಾ' ಚಿತ್ರವನ್ನು ಡಿಸೆಂಬರ್ 31, 2027 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಿನಾಂಕ ದೃಢಪಟ್ಟರೆ, ಹೊಸ ವರ್ಷದ ಸಂದರ್ಭದಲ್ಲಿ 'ರಾಕಾ' ದೊಡ್ಡ ಬಾಕ್ಸ್ ಆಫೀಸ್ ಯುದ್ಧಕ್ಕೆ ಸಿದ್ಧವಾಗಿದೆ.

Ananthan Kaadu OTT: ನಟ ಆರ್ಯ ನಟನೆಯ 'ಅನಂತನ್ ಕಾಡು' ಈ ಒಟಿಟಿಗೆ ಎಂಟ್ರಿ!

ನಟ ಆರ್ಯ ನಟನೆಯ 'ಅನಂತನ್ ಕಾಡು' ಈ ಒಟಿಟಿಗೆ ಎಂಟ್ರಿ!

Ananthan Kaadu OTT: ಆರ್ಯ ಅಭಿನಯದ ಅನಂತನ್ ಕಾಡು (Ananthan Kaadu) ಈಗ ಡಿಜಿಟಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಮಲಯಾಳಂ-ತಮಿಳು ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ಚಿತ್ರವು ಒಟಿಟಿಯಲ್ಲಿ (Action thriller OTT) ಪ್ರಥಮ ಪ್ರದರ್ಶನಗೊಳ್ಳಲಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಮತ್ತೊಂದು ಅವಕಾಶವನ್ನು ನೀಡುತ್ತಿದೆ.

Kannada New Movie: ರಂಗಾಯಣ ರಘು ನಟನೆಯ 'ಹೊಸ ಜೀವನ' ಚಿತ್ರದ ಸಾಂಗ್‌ ಔಟ್‌!

ರಂಗಾಯಣ ರಘು ನಟನೆಯ 'ಹೊಸ ಜೀವನ' ಚಿತ್ರದ ಸಾಂಗ್‌ ಔಟ್‌!

Kannada New Movie: ರಂಗಾಯಣ ರಘು, ಪ್ರಭು ಮುಂಡ್ಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ 'ಹೊಸ ಜೀವನ' ಚಿತ್ರದ ಮೊದಲ ಸುಮಧುರ ಗೀತೆ "ಏನೇನೋ ಹಂಬಲ " ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಸ್ಯಾಂಡಲ್‌ವುಡ್‌ನ ನೆಚ್ಚಿನ ನಟ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Hanuman Ansh : ಬಾಲಿವುಡ್‌ನಿಂದ ಸಹಾಯ ಕೋರಿದೆ ಆದರೆ ಬೆಂಬಲ ಸಿಗಲಿಲ್ಲ; ಹನುಮಾನ್ ಅಂಶ್ ನಿರ್ದೇಶಕ

ಬಾಲಿವುಡ್‌ನಿಂದ ಯಾವುದೇ ಬೆಂಬಲ ಸಿಗಲಿಲ್ಲ; ಹನುಮಾನ್ ಅಂಶ್ ನಿರ್ದೇಶಕ

Hanuman Ansh : ಹನುಮಾನ್ ಅಂಶ್' (Hanuman Ansh) ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಚಿತ್ರ ನಿಧಾನವಾಗಿ ಆರಂಭವಾದರೂ ಈಗ ನಾಲ್ಕನೇ ವಾರದಲ್ಲಿ ಕನ್ನಡ ತಾರೆ ಯಶ್ ಅವರ 'ಟಾಕ್ಸಿಕ್' ಚಿತ್ರಕ್ಕಿಂತ ಮುಂದಿದೆ. ರೌನಾಕ್ ಜೊತೆಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಬಾಲಿವುಡ್ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಬೆಂಬಲಿಸಲಿಲ್ಲ ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಚಿತ್ರವು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ಉದ್ಯಮದ ಹಲವಾರು ಜನರು ಅವರನ್ನು ಅಭಿನಂದಿಸಲು ಕರೆ ಮಾಡಿದರು.

Bigg Boss: ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋದೆ! ಬಿಗ್ ಬಾಸ್ ನಟಿ ಮುಕ್ತ ಮಾತು

ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋದೆ! ಬಿಗ್ ಬಾಸ್ ನಟಿ ಮುಕ್ತ ಮಾತು

Bigg Boss: ಬಿಗ್ ಬಾಸ್ ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಪ್ರೇಮ ವೈಫಲ್ಯದ ಬಗ್ಗೆ ನಟಿ ಹಾಗೂ ನಿರೂಪಕಿ ಆರ್ಯ ಬಡಾಯಿ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಪ್ರೀತಿಯ ವೈಫಲ್ಯ ತನ್ನ ಮೇಲೆ ಎಷ್ಟು ಪರಿಣಾಮ ಬೀರಿತು ಎಂಬುದನ್ನು ನಟಿ ಅಶ್ವತಿ ಅಶೋಕ್ ವಿಶಾಲ್ ಅವರ ಪಾಡ್‌ಕಾಸ್ಟ್‌ನಲ್ಲಿ ಆರ್ಯ ವಿವರಿಸಿದ್ದಾರೆ.

‘ಉಳಿದದ್ದನ್ನು ಕಾಲ, ಕರ್ಮಕ್ಕೆ ಬಿಡುತ್ತೇನೆ’; ನಟ ʻದುನಿಯಾʼ ವಿಜಯ್‌ಗೆ ಡಿವೋರ್ಸ್ ನೀಡಿದ ಬಳಿಕ ನಾಗರತ್ನ ಸುದೀರ್ಘ ಪತ್ರ!

ಡಿವೋರ್ಸ್ ಬಳಿಕ 'ದುನಿಯಾ' ವಿಜಯ್‌ ಮಾಜಿ ಪತ್ನಿ ನಾಗರತ್ನ ಶಾಕಿಂಗ್‌ ಪೋಸ್ಟ್‌

‌ʻದುನಿಯಾʼ ವಿಜಯ್ ಪ್ರಕರಣದಲ್ಲಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಹೈಕೋರ್ಟ್ ಕಾನೂನಾತ್ಮಕ ಅಂತ್ಯ ಹಾಡಿದೆ. ತೀರ್ಪಿನ ಬೆನ್ನಲ್ಲೇ ಮಾಜಿ ಪತ್ನಿ ನಾಗರತ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸಲು ವಿಚ್ಛೇದನ ಪಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

ಸಹ ವಿದ್ಯಾರ್ಥಿ ಮೇಲೆ ಹಲ್ಲೆ: ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

Actor Duniya Vijay Son Samrat Controversy: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಎಸಿಜೆಎಂ 6ನೇ ನ್ಯಾಯಾಲಯದ ಆದೇಶ ಹೊರಡಿಸಿದೆ.

‘ಯಶ್ ನಮ್ ಹುಡುಗ, ಅವ್ನು ಸಾಧನೆ ಮಾಡಿದ್ರೆ, ನನ್ನ ತಮ್ಮ ಸಾಧಿಸಿದಂತೆ..’: ‘ಟಾಕ್ಸಿಕ್‌’ ಚಿತ್ರಕ್ಕೆ ಶಿವರಾಜ್‌ಕುಮಾರ್ ಫುಲ್‌ಮಾರ್ಕ್ಸ್‌!

‘ಮೇಕಿಂಗ್ ಅದ್ಭುತ, ಯಶ್ ಸೂಪರ್'; `ಟಾಕ್ಸಿಕ್' ಚಿತ್ರಕ್ಕೆ ಶಿವಣ್ಣ ಬಹುಪರಾಕ್

ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾವನ್ನ ವೀಕ್ಷಿಸಿದ ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದ ಅವರು, ಯಶ್ ತಮ್ಮನಿದ್ದಂತೆ, ಆತನ ಸಾಧನೆ ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳ ನಿರೂಪಣೆಯನ್ನು ಕೊಂಡಾಡಿದ ಶಿವಣ್ಣ, ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಕರೆ ನೀಡಿದ್ದಾರೆ.

ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಡಾ.ದ.ರಾ. ಬೇಂದ್ರೆ ಬದುಕಿನ ಮೇಲೆ ಬೆಳಕು ಚೆಲ್ಲುವ ʼಗಂಗಾವತರಣʼ ನಾಟಕ ಪ್ರದರ್ಶನ

ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ʼಗಂಗಾವತರಣʼ ನಾಟಕ ಪ್ರದರ್ಶನ

Bengaluru News: ರಂಗಸೌರಭ ವತಿಯಿಂದ ಸೆಪ್ಟೆಂಬರ್ 6 ರಂದು ಭಾನುವಾರ ಬೆಂಗಳೂರಿನ ಜೆಪಿ ನಗರದ ರಂಗಶಂಕರದಲ್ಲಿ ವರಕವಿ ಡಾ. ದ.ರಾ. ಬೇಂದ್ರೆ ಅವರ ಬದುಕು ಮತ್ತು ಬರಹಗಳ ಸಮಗ್ರ ಚಿತ್ರಣವುಳ್ಳ ʼಗಂಗಾವತರಣʼ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಯಶ್‌ ನಟನೆಯ ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ; ರನ್‌ಟೈಮ್‌ನಲ್ಲಿ 17 ನಿಮಿಷ ಕಟ್‌ ಮಾಡಿದ್ದೇಕೆ?

Yash: ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ!

Yash: ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ವರ್ಷನ್‌ ಅನ್ನು ಭಾರತದ ಆಯ್ದ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 4 ರಂದು ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಜಾಗತಿಕ ವೀಕ್ಷಕರ ಅಭಿರುಚಿಗೆ ತಕ್ಕಂತೆ ಭಾರತೀಯ ಆವೃತ್ತಿಗಿಂತ 17 ನಿಮಿಷಗಳನ್ನು ಕತ್ತರಿಸಿ 2 ಗಂಟೆ 57 ನಿಮಿಷಗಳಿಗೆ ಸಿನಿಮಾದ ಅವಧಿಯನ್ನು ಇಳಿಸಲಾಗಿದೆ.

Photos: ಸದ್ದಿಲ್ಲದೇ ಕರಾವಳಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಜೋಡಿ ಹಕ್ಕಿʼ ಸೀರಿಯಲ್‌ ಖ್ಯಾತಿಯ ಚೈತ್ರಾ ರಾವ್‌

Photos: ʻಜೋಡಿ ಹಕ್ಕಿʼ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರಾವ್‌ಗೆ ಮದುವೆ

ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರಾವ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಅತ್ಯಂತ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿಯ 'ಜಾನಕಿ ಟೀಚರ್' ಎಂದೇ ಪ್ರಸಿದ್ಧಿ ಪಡೆದು ಕನ್ನಡಿಗರ ಮನಗೆದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲೂ 'ಬೃಂದಾ' ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಧಾರಾವಾಹಿ ಅಂತ್ಯಗೊಂಡ ಬೆನ್ನಲ್ಲೇ, ಚೈತ್ರಾ ರಾವ್ ತಮ್ಮ ಬದುಕಿನ ಹೊಸ ಪಯಣವನ್ನು ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ಮದುವೆಯ ಸುಂದರ ಕ್ಷಣಗಳ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ನಟ ನಿರಂಜನ್‌ ಸುಧೀಂದ್ರಗೆ ʻಸ್ಯಾಂಡಲ್‌ವುಡ್‌ ಹೃತಿಕ್‌ ರೋಷನ್‌ʼ ಅಂತ ಹೇಳಿದ್ಯಾರು? ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ನಿರಂಜನ್‌ ಸುಧೀಂದ್ರ ನಟನೆಯ ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ಕಾರ್ಯಕ್ರಮದಲ್ಲಿ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ನಟನೆಯ ʻಸ್ಪಾರ್ಕ್‌ʼ ಚಿತ್ರದ 'ಮಧುರ ಮುಗುಳುನಗೆ' ಗೀತೆಯನ್ನು ಉಪೇಂದ್ರ ಅವರ ತಾಯಿ ಅನಸೂಯಮ್ಮ ಲೋಕಾರ್ಪಣೆಗೊಳಿಸಿದರು. ನಿರಂಜನ್ ಅವರ ನೃತ್ಯ ಹಾಗೂ ಸಾಹಸ ಮೆಚ್ಚಿದ ಡಾರ್ಲಿಂಗ್ ಕೃಷ್ಣ ಅವರನ್ನು ಕನ್ನಡದ ಹೃತಿಕ್ ರೋಷನ್ ಎಂದು ಕರೆದರೆ, ಪ್ರಿಯಾಂಕಾ ಉಪೇಂದ್ರ ತಮ್ಮ ಮಗನಿಗೂ ನಿರಂಜನ್ ಮಾದರಿ ಎಂದರು.

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಸಿನಿಮಾದಲ್ಲಿ ವಾಸುಕಿ ವೈಭವ್‌ ಹಾಡು; ಕನ್ನಡದ ಪ್ರತಿಭೆಗೆ ಟಾಲಿವುಡ್‌ನಲ್ಲಿ ಭಾರಿ ಮೆಚ್ಚುಗೆ

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಚಿತ್ರಕ್ಕೆ ಹಾಡು ಸಂಯೋಜಿಸಿದ ವಾಸುಕಿ ವೈಭವ್‌

ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʻಸ್ಪಿರಿಟ್ʼ‌ ಸಿನಿಮಾಕ್ಕೆ ಕನ್ನಡದ ವಾಸು‌ಕಿ ವೈಭವ್ ಎಂಟ್ರಿ ಕೊಟ್ಟಿದ್ದಾರೆ. ʻಸ್ಪಿರಿಟ್ʼ‌ ಸಿನಿಮಾದಲ್ಲಿ ವಾಸುಕಿ ಸಂಯೋಜಿಸಿರುವ ಹಾಡೊಂದು ಇರಲಿದ್ದು, ಅದು ಚಿತ್ರಮಂದಿರಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಭರವಸೆ ವ್ಯಕ್ತಪಡಿಸಿದ್ದಾರೆ.

ʻಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ..ʼ; ವಿಚ್ಛೇದನ ತೀರ್ಪು ಬಂದ ಮೇಲೆ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ಪತ್ನಿಯಿಂದ ವಿಚ್ಛೇದನ ಸಿಕ್ಕ ಮೇಲೆ ನಟ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ʻದುನಿಯಾʼ ವಿಜಯ್‌ ಅವರ ವಿಚ್ಛೇದನ ಪ್ರಕರಣ ಕೊನೆಗೂ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇತ್ಯರ್ಥಗೊಂಡಿದ್ದು, ದಂಪತಿಗೆ ವಿಚ್ಛೇದನ ಮಂಜೂರಾಗಿದೆ. ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂ. ಖಾಯಂ ಜೀವನಾಂಶ ಪಾವತಿಸಲು ನ್ಯಾಯಾಲಯ ಸೂಚಿಸಿದೆ. ತೀರ್ಪಿಗೆ ತಲೆಬಾಗಿ ಗೌರವ ವ್ಯಕ್ತಪಡಿಸಿರುವ ನಟ ವಿಜಯ್, ತಮ್ಮ ಮೇಲಾದ ಮಾನಸಿಕ ಕ್ರೌರ್ಯವನ್ನು ಕೋರ್ಟ್ ಪರಿಗಣಿಸಿದೆ ಎಂದಿದ್ದಾರೆ.

ಡಾ.ಬಿ.ಎಂ.ಉಮೇಶ್ ಕುಮಾರ್ ರವರಿಂದ ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ‘ಕಾಮಾಖ್ಯಪ್ರಿಯ’  ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

‘ಕಾಮಾಖ್ಯಪ್ರಿಯ’ ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

ನೂತನ ‘ಕಾಮಾಖ್ಯಪ್ರಿಯ’ ರಾಗ ಹಾಗೂ 9 ಭಾಷೆಗಳಲ್ಲಿ ಮೂಡಿಬಂದಿರುವ ಭಕ್ತಿಗೀತೆಗಳ ವಿಶೇಷ ಆಲ್ಬಮ್ ಅನ್ನು ಕ್ರಿಯೇಟಿವ್ ಡಿವೈಸಸ್ ಸಂಸ್ಥೆಯ ಛೇರ್ಮನ್, ಸಹಕಾರ ರತ್ನ ಹಾಗೂ ಕಲಾಪೋಷಕ ಡಾ.ಬಿ.ಎಂ.ಉಮೇಶ್ ಕುಮಾರ್ ಅವರು ಅಸ್ಸಾಂನ ಪ್ರಸಿದ್ಧ ಕಾಮಾಖ್ಯಾ ದೇವಾಲಯದಲ್ಲಿ ಬಿಡುಗಡೆ ಗೊಳಿಸಿದರು.

ಯುಕೆ, ಕೆನಡಾ, ಸಿಂಗಾಪುರಕ್ಕೆ ಜಿಯೋಹಾಟ್‌ಸ್ಟಾರ್‌ ಲಗ್ಗೆ: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಟ್ರೀಮಿಂಗ್‌ ಕ್ರಾಂತಿ

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋಹಾಟ್‌ಸ್ಟಾರ್‌

ಜಿಯೋಹಾಟ್‌ಸ್ಟಾರ್‌ ಸ್ಟ್ರೀಮಿಂಗ್ ವೇದಿಕೆ ಯುಕೆ, ಕೆನಡಾ ಮತ್ತು ಸಿಂಗಾಪುರ ದೇಶಗಳಿಗೆ ಅಧಿಕೃತವಾಗಿ ವಿಸ್ತರಣೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 12ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 1.60 ಲಕ್ಷ ಗಂಟೆಗಳ ಭಾರತೀಯ ಕಾರ್ಯಕ್ರಮಗಳನ್ನು ಹೊತ್ತು ತಂದಿದೆ.

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಸಾಥ್ ನೀಡಿದ ಹೊಂಬಾಳೆ ಫಿಲ್ಮ್ಸ್; ಕನ್ನಡ ಸಂಸ್ಥೆಯ ಮಡಿಲಿಗೆ ವಿದೇಶಿ ಹಕ್ಕುಗಳು!

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಸಾಥ್!

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘ಹನುಮಾನ್ ಅಂಶ್’ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಪಡೆದುಕೊಂಡಿದೆ. ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 63.82 ಕೋಟಿ ರೂಪಾಯಿ ಗಳಿಸಿ ಸದ್ದು ಮಾಡಿರುವ ಈ ಭಕ್ತಿಪ್ರಧಾನ ಸಿನಿಮಾ, ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

Loading...