ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Lock Upp Season 2 : ನೆಟ್‌ಫ್ಲಿಕ್ಸ್‌ನ ಫೇಮಸ್‌ ಶೋ ʻಲಾಕ್ ಅಪ್ʼ! ವಿನ್ನರ್‌ ಆದ  ಶ್ರೇಯಾ ಕಲ್ರಾ

ನೆಟ್‌ಫ್ಲಿಕ್ಸ್‌ನ ಫೇಮಸ್‌ ಶೋ ʻಲಾಕ್ ಅಪ್ʼ! ವಿನ್ನರ್‌ ಆದ ಶ್ರೇಯಾ ಕಲ್ರಾ

Lock Upp Season 2: ಈ ಶೋ ಅನ್ನು ಫರಾ ಖಾನ್ ಮತ್ತು ರತೀಶ್ ದೇಶ್‌ಮುಖ್ ನಿರೂಪಣೆ ಮಾಡುತ್ತಿದ್ದು, ಏಕಾ ಕಪೂರ್ ನಿರ್ಮಿಸಿದ್ದಾರೆ. ಇದರ ಗ್ರ್ಯಾಂಡ್ ಫಿನಾಲೆ ಆಗಸ್ಟ್ 5, 2026 ರಂದು ರಾತ್ರಿ 8 ಗಂಟೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿದೆ. ಶಿವಂಗಿ ಜೋಶಿ, ರಾಮ್ ಕಪೂರ್, ಸುನಿತಾ ಅಹುಜಾ, ಹರ್ಷದ್ ಚೋಪ್ರಾ ಸೇರಿದಂತೆ 15 ಜನ ಪ್ರಸಿದ್ಧ ಸ್ಪರ್ಧಿಗಳು ಭಾಗವಹಿಸಿದ್ದರು.

Dorothy: ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ!  ಕೀರ್ತಿ ಸುರೇಶ್ ನಾಯಕಿ

ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ!

Dorothy: ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದ್ದರೂ, ಕೀರ್ತಿ ಸುರೇಶ್ ಜೊತೆಗೆ ಸನಂತ್ ಮತ್ತು ರಿಷಿಕಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದಲ್ಲದೆ, ಇಳಯರಾಜ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಲಿದ್ದಾರೆ. ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ, ಗುನೀತ್ ಮೊಂಗಾ ಕಪೂರ್ ಮತ್ತು ಅಚಿನ್ ಜೈನ್ ಅವರು ಧಮ್ಮಂ ಫಿಲ್ಮ್ಸ್ ಜೊತೆಗೆ ನಿರ್ಮಿಸಿದ್ದಾರೆ.

R Madhavan: ‘ಸಂಘಿ’ ಎಂದವರಿಗೆ ಆರ್‌ ಮಾಧವನ್ ತಿರುಗೇಟು

‘ಸಂಘಿ’ ಎಂದವರಿಗೆ ಆರ್‌ ಮಾಧವನ್ ತಿರುಗೇಟು

R Madhavan: ಭಾರತದ ಶ್ರೇಷ್ಠ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ‘ಜಿಡಿಎನ್’ (JDN) ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿತರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಆರ್‌. ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.

Chaitra Reddy: ಡಿವೋರ್ಸ್‌ ಹಂತದಲ್ಲಿ ಕನ್ನಡದ ಪ್ರಖ್ಯಾತ ಸೀರಿಯಲ್‌ ನಟಿ!

ಡಿವೋರ್ಸ್‌ ಹಂತದಲ್ಲಿ ಕನ್ನಡದ ಪ್ರಖ್ಯಾತ ಸೀರಿಯಲ್‌ ನಟಿ!

Chaitra Reddy: . ಚೈತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿದ್ದಾರೆ. ಆರು ವರ್ಷಗಳ ಹಿಂದೆ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಕನ್ನಡ ಮಾತ್ರವಲ್ಲದೆ ಈಗ ಹೆಚ್ಚಾಗಿ ತೆಲುಗು ಸೀರಿಯಲ್‌ಗಳಲ್ಲಿಯೇ ಬ್ಯೂಸಿಯಾಗಿರುವ ನಟಿ ಚೈತ್ರಾ ಲತಾ ರೆಡ್ಡಿ ಹಾಗೂ ನಿರ್ಮಾಪಕ ಕಮ್ ಸಿನಿಮಾಟೋಗ್ರಾಫರ್ ರಾಕೇಶ್ ಸಮಲಗೆ ವಿಚ್ಛೇದನ ನೀಡುವ ಹಾದಿಯಲ್ಲಿದ್ದಾರೆ ಎಂದು ವರದಿಯಾಗಿದೆ.

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್: ಸೆಪ್ಟೆಂಬರ್ 18ಕ್ಕೆ ಸಿನಿಮಾ ರಿಲೀಸ್!

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್

ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಮೂರನೇ ಬಾರಿಗೆ ತೆರೆಮೇಲೆ ಒಂದಾಗಿರುವ 'ಅಮರ್ಥ' ಸಿನಿಮಾ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಹಿರಿಯ ನಟ ಸುಂದರ್ ರಾಜ್ ಮೋಷನ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಪಂಚರಂಗಿ ಫಿಲಂಸ್ ನಿರ್ಮಿಸಿರುವ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ಈ ಚಿತ್ರಕ್ಕೆ ಯೂ/ಎ ಪ್ರಮಾಣಪತ್ರ ಸಿಕ್ಕಿದೆ.

‌ಪತ್ರಕರ್ತನಾಗಿ ಉಪೇಂದ್ರ ಅಣ್ಣನ ಮಗ ನಿರಂಜನ್;‌ ʻಸ್ಪಾರ್ಕ್‌ʼ ಚಿತ್ರದಲ್ಲಿ ನಟ ʻನೆನಪಿರಲಿʼ ಪ್ರೇಮ್‌ಗೆ  ಏನು ಪಾತ್ರ?

‘ಸ್ಪಾರ್ಕ್’ ಚಿತ್ರದ ‘ಶಕಲಕ’ ಹಾಡಿಗೆ ನಿರಂಜನ್ - ರಚನಾ ಭರ್ಜರಿ ಡ್ಯಾನ್ಸ್!

'ರಿಯಲ್ ಸ್ಟಾರ್' ಉಪೇಂದ್ರ ಅವರ ಸೋದರಸಂಬಂಧಿ ನಿರಂಜನ್ ಸುಧೀಂದ್ರ ಅಭಿನಯದ 'ಸ್ಪಾರ್ಕ್' ಚಿತ್ರದ 'ಶಕಲಕ ಭುಂ ಭೂಂ' ಹಾಡಿನ ಬಿಡುಗಡೆ ಅದ್ಧೂರಿಯಾಗಿ ನೆರವೇರಿದೆ. ಚಿತ್ರದಲ್ಲಿ ನಿರಂಜನ್ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತನಾಗಿ ನಟಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ.

Ravichandran: ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ‌ʻಶಾಂತಿ ಕ್ರಾಂತಿʼ ಟ್ರೆಂಡಿಂಗ್; ಫ್ಲಾಪ್‌ ಆಗಿದ್ದ ಸಿನಿಮಾವನ್ನು ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಆಗ್ರಹ!

'ಶಾಂತಿ ಕ್ರಾಂತಿ' ಚಿತ್ರ ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಡಿಮ್ಯಾಂಡ್!

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ದೇಶನದ, 35 ವರ್ಷಗಳ ಹಿಂದೆ 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ 'ಶಾಂತಿ ಕ್ರಾಂತಿ' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. 4 ಭಾಷೆಗಳಲ್ಲಿ ಮೂಡಿಬಂದಿದ್ದ ಈ ಚಿತ್ರವೇ ನೈಜ 'ಪ್ಯಾನ್ ಇಂಡಿಯಾ' ಸಿನಿಮಾ ಎಂದು ಬಣ್ಣಿಸುತ್ತಿರುವ ಅಭಿಮಾನಿಗಳು, ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಿ ಎಂದು ಆಗ್ರಹಪಡಿಸುತ್ತಿದ್ದಾರೆ.

'ರಾಮಾಯಣ' ಚಿತ್ರದ ಸಾಯಿ ಪಲ್ಲವಿ, ಲಾರಾ ದತ್ತಾ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್; ಖಡಕ್‌ ತಿರುಗೇಟು ನೀಡಿದ ವಸ್ತ್ರ ವಿನ್ಯಾಸಕರು!

ಸೀತೆ, ಕೈಕೇಯಿ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್‌; ತಿರುಗೇಟು ನೀಡಿದ ಡಿಸೈನರ್ಸ್!

ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ಲಾರಾ ದತ್ತಾ ಅವರ ಉಡುಪುಗಳ ವಿನ್ಯಾಸಕ್ಕೆ ವ್ಯಕ್ತವಾದ ಟ್ರೋಲಿಂಗ್‌ಗೆ ವಸ್ತ್ರ ವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಖಡಕ್ ಉತ್ತರ ನೀಡಿದ್ದಾರೆ. ಪ್ರತಿಯೊಂದು ಬಣ್ಣಕ್ಕೂ ಸಾಂಕೇತಿಕ ಅರ್ಥ ನೀಡಿ ಅತ್ಯಂತ ಭಕ್ತಿಯಿಂದ ಈ ಉಡುಪುಗಳನ್ನು ಡಿಸೈನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tumbadchi Manjula OTT : ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

Tumbadchi Manjula OTT : 'ಸು ಫ್ರಮ್ ಸೋ' ಮರಾಠಿಯಲ್ಲಿಯೂ (Maratahi Movie) ನಿರ್ಮಾಣಗೊಂಡಿತ್ತು. ಈ ಸಿನಿಮಾ . ಈಗ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರೇಕ್ಷಕರ ಪ್ರೀತಿ ಎರಡನ್ನೂ ಗೆದ್ದ ನಂತರ ಈಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಮರಾಠಿ ಭಾಷೆಯಲ್ಲಿ 'ತುಂಬಾಡ್ಚಿ ಮಂಜುಳಾ' ಶೀರ್ಷಿಕೆಯಡಿ ಸಿನಿಮಾ ಮೂಡಿಬಂದಿದ್ದು, ಜೂನ್​​ 5ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು.

Jason Sanjay :  ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

Jason Sanjay: ವಿಜಯ್ ಪುತ್ರ (Vijay) ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ-ರಾಜಕಾರಣಿ ವಿಜಯ್ ಅವರ ಪುತ್ರ ಯಶ್ ಅವರ ಕೆಜಿಎಫ್ ತಮ್ಮ ನೆಚ್ಚಿನ ಚಿತ್ರವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಸಿಗ್ಮಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಜೇಸನ್ , ಕಾಲ್ಪನಿಕ ನಿರೂಪಣೆಯನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆರೆಸಿ, ಮಾಸ್ ಚಿತ್ರವನ್ನು ನೀಡಿದ್ದಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಶ್ಲಾಘಿಸಿದರು.

Ramayana: ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

Ramayana: ರಾಮಾಯಣ ಟ್ರೈಲರ್‌ ಔಟ್‌ ಆಗಿದೆ. ಅಷ್ಟೇ ಅಲ್ಲ ಮೆಚ್ಚುಗೆಯನ್ನು ಗಳಿಸಿ ಪ್ರೇಕ್ಷಕರ ಮನಗೆದ್ದಿವೆ. ಆದರೆ ಕೆಲವು ದೃಶ್ಯಗಳ ಬಗ್ಗೆ ಅಸಾಮಾಧಾನ ವ್ಯಕ್ತವಾಗಿದೆ. 2024 ರ ಆದಿಪುರುಷ ಚಿತ್ರಕ್ಕೆ ಒಂದು ವರ್ಗ ಹೋಲಿಕೆ ಮಾಡುತ್ತಿದೆ. ಈಗ, ನಿತೇಶ್ ತಿವಾರಿ ಅವರ ರಾಮಾಯಣ ಬಿಡುಗಡೆಯಾಗಲು ಸಜ್ಜಾಗುತ್ತಿದ್ದಂತೆ, ಅನೇಕ ಅಭಿಮಾನಿಗಳು ಎರಡು ಚಿತ್ರಗಳನ್ನು ಹೋಲಿಸುತ್ತಿದ್ದಾರೆ, ಆದಿಪುರುಷದ ಸಂಭಾಷಣೆಕಾರ ಮನೋಜ್ ಮುಂತಶಿರ್ ಇದರ ವಿರುದ್ಧ ಎಚ್ಚರಿಸಿದ್ದಾರೆ.

Spandana Somanna: ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ;  ಫೋಟೋ ವೈರಲ್‌

ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ

Spandana Somanna: ಕಳ್ಳ ಪುಟ್ಟಿ ಎಂದೇ ಹೆಸರು ಪಡೆದಿರುವ ನಟಿ ಸ್ಪಂದನಾ ಸೋಮಣ್ಣ (Spandana Somanna) ಬಾಯ್‌ಫ್ರೆಂಡ್‌ ಪರಿಚಯಿಸಿದ್ದಾರೆ. ಹುಡುಗನ ಮುಖ ಮತ್ತು ಹೆಸರು ಬಹಿರಂಗಪಡಿಸದೆ ಸಸ್ಪೆನ್ಸ್ ಕಾಯ್ದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು (Boyfriednd) ವೈರಲ್ ಆಗಿವೆ.

ʻಕರಾವಳಿʼ ನಂತರ ʻಮಹಾನ್‌ʼ ಚಿತ್ರದಲ್ಲಿ ಮಿಂಚಲು ರೆಡಿಯಾದ ನಟ ಮಿತ್ರ; ವಿಜಯ ರಾಘವೇಂದ್ರಗೆ ಜೋಡಿಯಾದ ರಾಧಿಕಾ ನಾರಾಯಣ್

ʻಮಹಾನ್ʼ ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ರಾಧಿಕಾ; ನಟ ಮಿತ್ರಗೆ ಏನು ಪಾತ್ರ?

ನಿರ್ದೇಶಕ ಪಿ. ಸಿ. ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರಾಧಿಕಾ ನಾರಾಯಣ್ ಹಾಗೂ ನಟ ಮಿತ್ರ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರಕಾಶ್ ಬೂದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಸಾಮಾಜಿಕ ಕಾಳಜಿಯುಳ್ಳ ರೈತನಾಗಿ ನಟಿಸಿದ್ದಾರೆ.

ಖ್ಯಾತ ನಟ ಪ್ರದೀಪ್‌ ರಾವತ್‌ ನಿಧನ; ಬ್ಲಡ್‌ ಕ್ಯಾನ್ಸರ್‌ನಿಂದ ಮೃತಪಟ್ಟರೇ ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್?

ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್ ಪ್ರದೀಪ್‌ ರಾವತ್‌ ನಿಧನ!

'ಮಹಾಭಾರತ'ದ ಅಶ್ವತ್ಥಾಮ, 'ಗಜನಿ' ಹಾಗೂ ದರ್ಶನ್ ಅವರ 'ಗಜ' ಚಿತ್ರದ ಖ್ಯಾತ ಖಳನಟ ಪ್ರದೀಪ್ ರಾವತ್ (74) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಮೌಳಿ ಅವರ 'ಸೈ' ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಈ ಹಿರಿಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗ ಶ್ರದ್ಧಾಂಜಲಿ ಸಲ್ಲಿಸಿದೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

Sudeep: ʻಬಿಗ್‌ ಬಾಸ್‌ ಕನ್ನಡ 13ʼ ಶೋ ಯಾವಾಗ ಆರಂಭ? ಕೊನೆಗೂ ದಿನಾಂಕ ಘೋಷಣೆ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ರ ಪ್ರೋಮೋ ಬಿಡುಗಡೆಯಾಗಿದೆ. ಈ ಬಾರಿ ಜನಸಾಮಾನ್ಯರಿಗಾಗಿ 'ಅಗ್ನಿಪರೀಕ್ಷೆ' ಎಂಬ ಹೊಸ ಟಾಸ್ಕ್‌ ಪರಿಚಯಿಸಲಾಗಿದ್ದು, ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ಲಾಂಚ್ ಆಗಲಿದೆ. ಈ ಹಂತದಲ್ಲಿ ಗೆಲ್ಲುವವರು ನೇರವಾಗಿ ಬಿಗ್‌ ಬಾಸ್‌ ಶೋ ಪ್ರವೇಶಿಸಲಿದ್ದಾರೆ.

'ನಾನು ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೇನೆ': ಚಿತ್ರರಂಗದ ಆರಂಭದ ದಿನಗಳನ್ನು ನೆನೆದ ನಟಿ ಜ್ಯೋತಿಕಾ!

ʻಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೀತಿದ್ದೆʼ ಎಂದ ನಟಿ ಜ್ಯೋತಿಕಾ

ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪತಿ ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಕಾಖ ಕಾಖ' ಚಿತ್ರಕ್ಕೆ ಸೂರ್ಯ ಅವರನ್ನು ಶಿಫಾರಸು ಮಾಡಿದ್ದನ್ನು ನೆನೆದ ಅವರು, ಪತಿಯನ್ನು ನಿಜವಾದ 'ಗ್ರೀನ್ ಫ್ಲ್ಯಾಗ್' ಎಂದು ಬಣ್ಣಿಸಿದ್ದಾರೆ.

ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್‌; ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ

4 ದಿನಗಳಲ್ಲಿ 800 ಮಿಲಿಯನ್‌ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್!‌

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ ಜಾಗತಿಕ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟಿಸುತ್ತಿರುವ ಈ ಸಿನಿಮಾವು 2026ರ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ತೆರೆಕಾಣಲಿದೆ.

'ಗಣಪ' ಖ್ಯಾತಿಯ ಸಂತೋಷ್ ಬಾಲರಾಜ್ ನಟನೆಯ ಕೊನೆಯ ಸಿನಿಮಾ ಬಿಡುಗಡೆಗೆ ಸಜ್ಜು; ಪುಣ್ಯತಿಥಿಯಂದು ಫಸ್ಟ್‌ಲುಕ್‌ ರಿಲೀಸ್!‌

Ratnagarbha Movie: ಅಗಲಿದ ನಟ ಸಂತೋಷ್ ಕೊನೆಯ ಸಿನಿಮಾ ರಿಲೀಸ್‌ಗೆ ರೆಡಿ

'ಗಣಪ' ಹಾಗೂ 'ಕರಿಯ-2' ಚಿತ್ರಗಳ ಮೂಲಕ ಜನಪ್ರಿಯರಾಗಿದ್ದ ನಟ ಸಂತೋಷ್ ಬಾಲರಾಜ್ ಅಭಿನಯದ ಕೊನೆಯ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಿದ್ಧವಾಗಿದೆ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ದಿನವಾದ ಆಗಸ್ಟ್ 5 ರಂದು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್‌ ಆಗಲಿದೆ.

ತನುಷ್‌ ಶಿವಣ್ಣ ನಟನೆಯ ʻಬಾಸ್‌ʼ ಸಿನಿಮಾ ರಿಲೀಸ್‌ಗೆ ದಾಸನ ಒಪ್ಪಿಗೆ! ಚಿತ್ರತಂಡಕ್ಕೆ ವಿಜಯಲಕ್ಷ್ಮಿ - ದರ್ಶನ್‌ ಹೇಳಿದ್ದೇನು?

ʻಬಾಸ್ʼ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್; ನಟ ದರ್ಶನ್‌ ಹೇಳಿದ್ದೇನು?

ತನುಷ್ ಶಿವಣ್ಣ ನಟಿಸಿ, ನಿರ್ಮಿಸಿರುವ 'ಬಾಸ್‌' ಚಿತ್ರದ ಬಿಡುಗಡೆಗೆ ಎದುರಾಗಿದ್ದ ತಡೆಯಾಜ್ಞೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಹೊಸಬರ ಶ್ರಮವನ್ನು ಗೌರವಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದೆ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದಾರೆ.

Kiccha Sudeep: ಸೆ.6ರಿಂದ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಆರಂಭವಾಗುತ್ತಾ? ಏನಿದು ಗುಸುಗುಸು?

ಸೆ.6ರಿಂದ ‘ಬಿಗ್‌ ಬಾಸ್‌ ಕನ್ನಡ 13’ ಆರಂಭವಾಗುತ್ತಾ? ಏನಿದು ಗುಸುಗುಸು?

ʻಕಿಚ್ಚʼ ಸುದೀಪ್ ಸಾರಥ್ಯದ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಪ್ರಸಾರ ದಿನಾಂಕದ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು, ಸೆಪ್ಟೆಂಬರ್‌ 6 ರಿಂದ ಈ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಹಿಂದಿ ಸೇರಿದಂತೆ ಆರು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳು ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಏಕಕಾಲದಲ್ಲಿ ಜಾರಿಗೆ ಬರಲಿವೆ.

Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ

ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ

Priyanka Chopra: ಪ್ರಿಯಾಂಕಾ ಜಾಗತಿಕ ತಾರೆಯಾಗಿದ್ದರೂ, ಭಾರತದ ಮೇಲಿನ ಅವರ ಪ್ರೀತಿ ಹಾಗೆಯೇ ಉಳಿದಿದೆ ಮತ್ತು ಇದರ ಝಲಕ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಪ್ರಿಯಾಂಕಾ ತಮ್ಮ ಮಗಳು ಮಾಲತಿ ಮೇರಿಯನ್ನು ಆಗಾಗ್ಗೆ ದೇವಾಲಯಗಳಿಗೆ ಕರೆದೊಯ್ಯುತ್ತಾರೆ ಮತ್ತು ಬಾಲ್ಯದಿಂದಲೂ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪರಿಚಯಿಸುತ್ತಿದ್ದಾರೆ. ಈಗ, ಅವರ ವೀಡಿಯೊವೊಂದು ಸಖತ್‌ ಸುದ್ದಿಯಾಗಿದೆ. ಮಾಲತಿ ಹಿಂದೂ ಶ್ಲೋಕ ಹೇಳುವ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಪ್ರಿಯಾಂಕಾ ಅವರ ಈ ನಡೆಯನ್ನು ಶ್ಲಾಘಿಸುತ್ತಿದ್ದಾರೆ.

'ಆದಿಪುರುಷ್‌ ಸಿನಿಮಾ ಟೀಮ್‌ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ..ʼ; 'ರಾಮಾಯಣ' ಚಿತ್ರತಂಡಕ್ಕೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್

'ರಾಮಾಯಣ' ಟೀಮ್‌ಗೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್ ಕೊಟ್ಟಿದ್ದೇಕೆ?

ನಿತೀಶ್ ತಿವಾರಿ ನಿರ್ದೇಶನದ 4 ಸಾವಿರ ಕೋಟಿ ರೂ. ಬಜೆಟ್‌ನ 'ರಾಮಾಯಣ' ಚಿತ್ರತಂಡಕ್ಕೆ ದೆಹಲಿ ಮೂಲದ ಶ್ರೀ ರಾಮ್‌ಲೀಲಾ ಮಹಾಸಂಘ ಪತ್ರ ಬರೆದು ವಾರ್ನಿಂಗ್ ನೀಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಪಂಡಿತರಿಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕೆಂದು ಆಗ್ರಹಿಸಿದೆ.

ತ್ರಿಷಾ ಕುರಿತು ಅಸಭ್ಯ ಹೇಳಿಕೆ ವಿವಾದ; ಉದಯನಿಧಿ ಸ್ಟಾಲಿನ್‌ಗೆ ರಿಲೀಫ್‌: ರಿಲೀಸ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

ಉದಯನಿಧಿ ಸ್ಟಾಲಿನ್‌ ರಿಲೀಸ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

Udhayanidhi Stalin: ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್‌ ಹೈಕೋರ್ಟ್‌ ರಿಲೀಫ್‌ ನೀಡಿದೆ. ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ.

Bigg Boss 20 teaser: ಬಿಗ್‌ ಬಾಸ್‌​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್

ಬಿಗ್‌ ಬಾಸ್‌​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್

Bigg Boss 20 teaser: ಬಿಗ್ ಬಾಸ್ 20ಕ್ಕೆ ಸಜ್ಜಾಗುವ ಸಮಯ ಬಂದಿದೆ , ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ತಿಂಗಳುಗಳ ಊಹಾಪೋಹಗಳ ನಂತರ, ರಿಯಾಲಿಟಿ ಶೋ ಎರಡು ದಶಕಗಳನ್ನು ಆಚರಿಸುವ ಹೊಸ ಸೀಸನ್‌ನೊಂದಿಗೆ ಮತ್ತೆ ಬರಲಿದೆ. ಸಲ್ಮಾನ್ ಖಾನ್ ನಿರೂಪಣೆ ಮಾಡಿರುವ ಈ ರಿಯಾಲಿಟಿ ಶೋನ ಮೊದಲ ಟೀಸರ್ ಆಗಸ್ಟ್ 4 ರಂದು ರಿಯಾಲಿಟಿ ಶೋನ (Reality Show)ಪ್ರೀಮಿಯರ್ ದಿನಾಂಕದ ಘೋಷಣೆಯೊಂದಿಗೆ ಅನಾವರಣಗೊಳಿಸಲಾಯಿತು.

Loading...