ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Actor Upendra: ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ಔಟ್‌

ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

Actor Upendra: ತಮ್ಮ ವಿಶಿಷ್ಟ ಆಲೋಚನೆ ಹಾಗೂ ಚಿತ್ರಕಥೆಗಳ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದ ನೆಚ್ಚಿನ ನಟನ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರ ‘ನೆಕ್ಸ್ಟ್ ಲೆವೆಲ್’ (Next Level) ಸಿನಿಮಾದ ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರಕ್ಕೆ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ (Action Cut) ಹೇಳುತ್ತಿದ್ದಾರೆ.

Deepika Padukone : ಎರಡನೇ ಬಾರಿಗೆ ಪೋಷಕರಾದ  ದೀಪಿಕಾ-ರಣವೀರ್; ಹೆಣ್ಣು ಮಗು ಜನನ

ಎರಡನೇ ಬಾರಿಗೆ ಪೋಷಕರಾದ ದೀಪಿಕಾ-ರಣವೀರ್; ಹೆಣ್ಣು ಮಗು ಜನನ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಹೆಣ್ಣು ಮಗು ಜನಿಸಿದೆ. ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಈ ಸಂತೋಷದ ಸುದ್ದಿಯನ್ನು ಘೋಷಿಸಿದ್ದಾರೆ. ನಟಿ 'ವೆಲ್ಕಮ್ ಬೇಬಿ ಗರ್ಲ್' ಎಂದು ಬರೆದ ಹೆಜ್ಜೆಗುರುತುಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.

Bigg Boss Kannada 13: 50 ಪೈಸೆ ಬೆಲೆ ಇಲ್ಲ ಎಂದ ಮಂಜನ ಮಾತಿಗೆ ಕಿಚ್ಚ ಗರಂ; ಇದು ತಪ್ಪು ಮಾಡಿದವರಿಗೆ ದಂಡನೆ!

50 ಪೈಸೆ ಬೆಲೆ ಇಲ್ಲ ಎಂದ ಮಂಜನ ಮಾತಿಗೆ ಕಿಚ್ಚ ಗರಂ!

Bigg Boss Kannada 13:ವೀಕೆಂಡ್‌ ಬಂತು ಅಂದರೆ ಸ್ಪರ್ಧಿಗಳ ಆಟ, ತಪ್ಪು-ಸರಿಗಳ ಚರ್ಚೆ, ಕಿಚ್ಚನ ಕ್ಲಾಸ್‌ (Sudeep Class)-ಎಲ್ಲವನ್ನೂ ನೋಡಲು ವೀಕ್ಷಕರು ಕಾತರರಾಗಿರುತ್ತಾರೆ. ಈ ವಾರದ ವೀಕೆಂಡ್‌ ಎಪಿಸೋಡ್‌ ಕೂಡ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರೌಡಿ ವರ್ತನೆ, ಗುಂಪುಗಾರಿಕೆಗಳಿಂದ ಮನೆ ಮಂದಿಗೆ ಮಾತ್ರವಲ್ಲ ಇಡೀ ಬಿಗ್​​ಬಾಸ್ ಪ್ರೇಕ್ಷಕರಿಗೆ ಅಸಹನೆ ಮೂಡಿಸಿದ್ದ ಅಗ್ನಿ ಪರೀಕ್ಷೆ (Agni Parikshe) ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ ಕಿಚ್ಚ. ‘ಅಣ್ಣ’ ಎಂದ ಮಂಜನಿಗೆ ‘ನನ್ನ ತಮ್ಮಂದಿರಾಗಲು ಕೆಲ ಯೋಗ್ಯತೆಗಳು ಇರಬೇಕಾಗುತ್ತದೆ ಎಂದಿದ್ದಾರೆ.

Hrithik Roshan:  ಕತ್ರಿನಾ ಕೈಫ್ ಬಾಡಿ ಶೇಮಿಂಗ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

ಕತ್ರಿನಾ ಕೈಫ್ ಬಾಡಿ ಶೇಮಿಂಗ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

Hrithik Roshan: ನಟಿ ಕತ್ರಿನಾ ಕೈಫ್ (Katrina Kaif) ಅವರನ್ನು ಸಮರ್ಥಿಸಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ನಟ ಹೃತಿಕ್ ರೋಷನ್ ಲೈಕ್ ಮಾಡಿದ್ದಾರೆ. ಕತ್ರಿನಾ ಅಭಿಮಾನಿಗಳು ಈ ಸಣ್ಣತನದ ನಡೆಯನ್ನು ತಕ್ಷಣವೇ ಖಂಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನು ಬೆಂಬಲಿಸಿ ಹಾಕಿದ್ದ ಪೋಸ್ಟ್‌ ಒಂದಕ್ಕೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಲೈಕ್ ಮಾಡಿದ್ದಾರೆ. ಈ ಮೂಲಕ ತಮ್ಮ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ಸಹನಟಿಯ ಬೆಂಬಲಕ್ಕೆ ನಿಂತಿದ್ದಾರೆ.

Bigg Boss Kannada 13: ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಟ್‌ ಆಗೋದು ಇವರೇ! ಇರಲಿದೆ ಈ ಟ್ವಿಸ್ಟ್

ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಟ್‌ ಆಗೋದು ಇವರೇ! ಇರಲಿದೆ ಈ ಟ್ವಿಸ್ಟ್

Bigg Boss Kannada 13: ವೀಕೆಂಡ್‌ ಬಂದರೆ ಸಾಕು ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿರುತ್ತಾರೆ. ಅದರಲ್ಲೂ ಕೆಲವೊಂದಿಷ್ಟು ಸಲಹೆಗಳನ್ನು ವೀಕ್ಷಕರು ನೀಡುತ್ತಾರೆ. ಇಂದಿನ ವಾರ ನೋ ಎಲಿಮಿನೇಷನ್ ವೀಕ್ ಘೋಷಿಸಲಾಗಿದೆ ಎನ್ನಲಾಗುತ್ತಿದೆ. ನಾಮಿನೇಷನ್ ನಡೆದಿದ್ದರೂ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ.ಈ ಮಧ್ಯೆ ಅಗ್ನಿಪರೀಕ್ಷೆಯ ಕಾಮನ್ ಮ್ಯಾನ್ ಸ್ಪರ್ಧಿಗಳ ಮೇಲೆ ಪ್ರ್ಯಾಂಕ್ಎ ಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Bigg Boss Kannada 13: ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೋಗೋದು; ಧನುಷ್ ಓಪನ್ ಚಾಲೆಂಜ್

ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೋಗೋದು; ಧನುಷ್ ಚಾಲೆಂಜ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸಂಗೀತಾ ಭಟ್‌ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಮತ್ತೊಂದು ಕಡೆ ಕಾಮನ್‌ ಮ್ಯಾನ್‌ ಗ್ರೂಪ್‌ಗಳಲ್ಲಿ ಬಿರುಕು ಮೂಡಿದೆ. ಧನುಷ್‌ ಇದ್ದವರು ಲಿಖಿತ್-ಮಂಜು ಇಬ್ಬರಲ್ಲಿ ಒಬ್ಬರನ್ನು ಹೊರಗೆ ಕಳುಹಿಸಿ ಮನೆಗೆ ಹೋಗುವೆ ಎಂದು ಕಿರಣ್‌ ಮುಂದೆ ಹೇಳಿದ್ದಾರೆ.

Bigg Boss Kannada 13: ಮೊಟ್ಟ ಮೊದಲ ಕ್ಯಾಪ್ಟನ್‌ ಸಂಗೀತಾ! ಗೆಲುವನ್ನು ಸಂಭ್ರಮಿಸಿದ ಆಸಿಯಾ

ಮೊಟ್ಟ ಮೊದಲ ಕ್ಯಾಪ್ಟನ್‌ ಸಂಗೀತಾ! ಗೆಲುವನ್ನು ಸಂಭ್ರಮಿಸಿದ ಆಸಿಯಾ

Bigg Boss Kannada 13: ಸಂಗೀತಾ ಭಟ್ (Sangeetha bhat) ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಆಸಿಯಾ ಫಿರ್ದೋಸ್‌ ಹಾಗೂಸಂಗೀತಾ ಭಟ್‌ಎದುರಾಳಿಗಳಾಗಿ ಫೈಟ್‌ ಕೊಟ್ಟಿದ್ದು, ಇವರಿಗೆ ತಂಡಗಳ ಸಪೋರ್ಟ್‌ಬೇಕಿತ್ತು. ಎಲ್ಲಹಂತದಲ್ಲೂ ಸಂಗೀತಾ ಭಟ್‌ಗೆ ಸಾಥ್‌ ಸಿಕ್ಕಿದ್ದು, ‘ಬಿಗ್‌ ಬಾಸ್‌ ಸೀಸನ್‌-13’ರ ಮೊಟ್ಟ ಮೊದಲ ಕ್ಯಾಪ್ಟನ್‌ (Captain) ಆದರು.

Srinidhi Bengaluru:‌ “ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ”: ಶ್ರೀನಿಧಿ ಬೆಂಗಳೂರು

ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅತಿಥಿಗಳಾದ ಶ್ರೀನಿಧಿ ಬೆಂಗಳೂರು, ಬರಹಗಾರ ಹಾಗೂ ನಿರ್ದೇಶಕ ‘ಬ್ಲಿಂಕ್’, ‘ಜೆರಾಕ್ಸ್’ ಮತ್ತು ‘ವಿಡಿಯೋ’ ಚಿತ್ರಗಳಿಂದ ಚಿರ ಪರಿಚಿತರಾಗಿದ್ದಾರೆ. ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುತ್ತಾ, “ಒಂದು ಚಿತ್ರವು ಚಿತ್ರಕಥೆಯಿಂದ ಆರಂಭ ವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ” ಎಂದು ಹೇಳಿದರು

Katrina Kaif:  ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

Katrina Kaif: ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

Rashmika Mandanna: ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ಭಾಷೆ ಮತ್ತು ಉಚ್ಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮಾತನಾಡಿದ್ದಾರೆ, ಅನಗತ್ಯ ಟೀಕೆಗಳನ್ನು ನಿರ್ಲಕ್ಷಿಸಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ರಶ್ಮಿಕಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವುದರಿಂದ ಅವರ ವೃತ್ತಿಜೀವನದಲ್ಲಿ ಭಾಷೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಅವರು ಹೇಳಿದರು.

Bigg Boss Kannada 13: ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್‌ ಚಿನ್ನಪ್ಪ?

ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್‌ ಚಿನ್ನಪ್ಪ?

Bigg Boss Kannada 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಸ್ಪರ್ಧಿಗಳ ಗಲಾಟೆ ಜೋರಾಗಿದೆ. ಅದರಲ್ಲೂ ಟಾಸ್ಕ್‌ ಅಂತ ಬಂದರೆ ಉಸ್ತುವಾರಿ ಕೂಡ ಬಹಳ ಮುಖ್ಯ ಟಾಸ್ಕ್‌ನಲ್ಲಿ ವೈಷ್ಣವಿ ವಹಿಸಿದ ಉಸ್ತುವಾರಿ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಪ್ಪು ನಿರ್ಧಾರಗಳನ್ನ ತೆಗೆದುಕೊಂಡ ವೈಷ್ಣವಿ (Vaishnavi) ವಿರುದ್ಧ ಪ್ರೇಕ್ಷಕರು ಸೋಶಿಯಲ್‌ ಮೀಡಿಯಾಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಾತಿಗೆ ಕೋರ್ಟ್ ಗ್ರೀನ್‌ ಸಿಗ್ನಲ್

ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್‌!

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆಯಲ್ಲಿ ನಟ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ಮುಗಿಸಲು ಗಡುವು ವಿಧಿಸಿದ್ದು, ಅಗತ್ಯಬಿದ್ದರೆ ಇನ್-ಕ್ಯಾಮೆರಾ ವಿಚಾರಣೆ ನಡೆಸಲು ಸೂಚಿಸಿದೆ.

`ಧುರಂಧರ್', 'ಹನುಮಾನ್ ಅಂಶ್' ಹಿಂದಿಕ್ಕಿ ಆಸ್ಕರ್‌ ಅಂಗಳಕ್ಕೆ ಜಿಗಿದ ಮರಾಠಿಯ 'ಗೋಂಧಲ್' ಸಿನಿಮಾ; ಏನಿದರ ಕಥೆ?

ಆಸ್ಕರ್ ರೇಸ್‌ನಲ್ಲಿ ʻಧುರಂಧರ್ʼ ಮಣಿಸಿ ಮುನ್ನುಗ್ಗಿದ ಮರಾಠಿಯ ʻಗೋಂಧಲ್ʼ!

Gondhal Marathi Movie: ಮರಾಠಿಯ 'ಗೋಂಧಲ್' ಸಿನಿಮಾ ಭಾರತದ ಪರವಾಗಿ 99ನೇ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಸಂತೋಷ್ ದಾವಖರ್ ನಿರ್ದೇಶನದ ಈ ಸಿನಿಮಾವು ರಣವೀರ್ ಸಿಂಗ್‌ರ 'ಧುರಂಧರ್' ಹಾಗೂ ಭಕ್ತಿಪ್ರಧಾನ 'ಹನುಮಾನ್ ಅಂಶ್' ಚಿತ್ರಗಳನ್ನು ಹಿಂದಿಕ್ಕಿದೆ. ಇಳಯರಾಜಾ ಅವರ ಹಿನ್ನೆಲೆ ಸಂಗೀತವಿರುವ 'ಗೋಂಧಲ್' ಚಿತ್ರವು ಮರಾಠಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.

ʻದಾದಾಸಾಹೇಬ್ ಫಾಲ್ಕೆʼ ಪುರಸ್ಕೃತ ಅನಂತ್‌ ನಾಗ್ ನಟನೆಯಿಂದ ದೂರ ಉಳಿದಿರುವುದೇಕೆ? ಇದು ಅಭಿಮಾನಿಗಳಿಗೆ ಬೇಸರದ ವಿಷ್ಯ

ಬಣ್ಣದ ಲೋಕಕ್ಕೆ ನಟ ಅನಂತ್ ನಾಗ್ ಗುಡ್‌ಬೈ! ಈ ನಿರ್ಧಾರಕ್ಕೆ ಕಾರಣವೇನು?

Ananth Nag: ನಟ ಅನಂತ್‌ ನಾಗ್‌ ಅವರು ನಟನೆಯಿಂದ ದೂರ ಉಳಿಯುವ ನಿರ್ಧಾರವು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಿತ್ರಕಥೆಗಳ ಗುಣಮಟ್ಟದ ಕುಸಿತ, ಚಿತ್ರತಂಡಗಳಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಾಚಾರಗಳಿಂದ ಬೇಸತ್ತು ಅನಂತ್‌ ನಾಗ್‌ ಈ ಮಾತು ಹೇಳಿದ್ದಾರೆ.

Citylights Movie Review: ಮೆಜೆಸ್ಟಿಕ್‌ ಒಳಗಿನ ಅಪರಿಚಿತ ಲೋಕದ ಸತ್ಯ ದರ್ಶನ ಮಾಡಿಸುವ ‌ʻದುನಿಯಾʼ ವಿಜಯ್

ʻದುನಿಯಾʼ ವಿಜಯ್‌ ನಿರ್ದೇಶನದ ʻಸಿಟಿ ಲೈಟ್ಸ್‌ʼ ಹೇಗಿದೆ? ರೇಟಿಂಗ್‌ ಏನು?

City Lights Movie Review: ಬೆಂಗಳೂರಿನ ಮೆಜೆಸ್ಟಿಕ್ ಸುತ್ತಲಿನ ವೇಶ್ಯಾವಾಟಿಕೆ, ರೌಡಿಸಂ ಮತ್ತು ರಾಜಕೀಯ ಜಾಲವನ್ನು ಬಯಲು ಮಾಡುವ ಕಥೆಯನ್ನು ಸಿಟಿ ಲೈಟ್ಸ್‌ ಸಿನಿಮಾ ಹೊಂದಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ಹಳ್ಳಿ ಮುಗ್ಧನಾಗಿ ವಿನಯ್ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಶಕ್ತಿ ತುಂಬಿದೆ.

Bigg Boss kannada 13: ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ಭಯ

ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ನೆನೆದು ಮಂಜುಗೆ ಭಯ

Bigg Boss kannada 13: ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ (Mahakavi Manja) ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಸ್ವತಃ ಮಂಜನೇ ಭಯ ಹೊರ ಹಾಕಿದ್ದಾರೆ. ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ.

Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

Amruthadhaare Serial: ಅಮೃತಧಾರೆ ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್‌ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ ಈಗ ಎಂಟ್ರಿ ಆಗಿದೆ.

Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

Bigg Boss Kannada 13:ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ. ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ.ಕೋ ಪೈಲೆಟ್‌ನಾ ಮನವೊಲಿಸಬೇಕಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಆಸಿಯಾ ಮನವೊಲಿಸಲು ನೋಡಿದರು. ಆದರೆ ಕಿರಣ್‌ ಮಾತ್ರ ಪದೇ ಪದೇ ಟ್ರಿಗರ್‌ ಮಾಡುತ್ತಿದ್ದರು. ಇದೀಗ ಆಸಿಯಾ (Asia) ಅವರು ಕಿರಣ್‌ ಶಾಸ್ತ್ರಿ (kiran shastri) ಮೇಲೆ ಗರಂ ಆಗಿದ್ದಾರೆ. ಮುಚ್ಚೋ ಬಾಯಿ ಅಂತ ಕೂಗಾಡಿದ್ದಾರೆ.

Bigg Boss Kannada 13:  ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

ಮಂಜ ನಡವಳಿಕೆಗೆ ಬೇಸತ್ತು ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಮಂಜನ (mahakavi Manja) ಹಾವಳಿ ಕಿತಾಪತಿ ಜೋರಾಗಿದೆ. ಇದರಿಂದಾಗಿ ಸ್ಪರ್ಧಿಗಳು ಪರದಾಡುವಂತಾಗಿದೆ. ಸ್ಪರ್ಧಿಗಳೆಲ್ಲರೂ ಮಲಗಿರುವಾಗ, ಮಂಜು, ಲಿಖಿತ್‌ ಮತ್ತು ಧನುಷ್‌ ಮನಸಿಗೆ ಬಂದಂತೆ ಅಡುಗೆ ಮಾಡಿ ತಿಂದಿದ್ದಾರೆ. ಇದೇ ವಿಚಾರಕ್ಕೆ ಬೇಸರಗೊಂಡ ಅವಿನಾಶ್‌ ರೇಗಾಡಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ! ಶಾರುಖ್, ಸಲ್ಮಾನ್‌ ಟ್ವೀಟ್‌ ವೈರಲ್‌

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ!

PM Modi: ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ , ಸಲ್ಮಾನ್ ಖಾನ್ , ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಸಿದರು . ನಟರು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುವ ಸಂದೇಶಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ಶ್ಲಾಘಿಸಿದರೆ, ಸಲ್ಮಾನ್ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ಪ್ರಧಾನಿಯನ್ನು "ನರೇಂದ್ರ ಭಾಯ್‌ ಮೋದಿ" ಎಂದು ಹೇಳಿದ್ದಾರೆ.

Vishweshwar Bhat: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

Anant Nag: ಅನಂತ್ ನಾಗ್ ಮತ್ತು ಶಂಕರ್ ನಾಗ್—ಈ ಇಬ್ಬರು ಸಹೋದರರ ಒಡನಾಟ ಕನ್ನಡ ಸಾಂಸ್ಕೃತಿಕ ಲೋಕದ ಅತ್ಯಂತ ಸುಂದರ ಅಧ್ಯಾಯ. ಶಂಕರ್ ಅವರಲ್ಲೊಂದು ಕಾಡಿನ ಬೆಂಕಿಯಂತಹ ತೀವ್ರತೆ, ನಿರಂತರ ಚಲನೆ ಇದ್ದರೆ, ಅನಂತ್ ಅವರಲ್ಲಿ ಹರಿಯುವ ನದಿಯಂತಹ ಪ್ರಶಾಂತತೆ, ತಣ್ಣನೆಯ ಗಾಂಭೀರ್ಯವಿತ್ತು. ಶಂಕರ್ ನಿರ್ದೇಶಿಸಿದ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಕಾಣಿಸಿಕೊಂಡ ಪರಿ ಇಂದಿಗೂ ಮರೆಯಲಾಗದು-ಅನಂತ್‌ ನಾಗ್‌ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್‌ ಅವರು ಬರೆದ ಆತ್ಮೀಯ ಬರಹ ಇಲ್ಲಿದೆ.

Varanasi movie: ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Varanasi movie: ಎಸ್.ಎಸ್. ರಾಜಮೌಳಿ ತಮ್ಮ ಬಹುನಿರೀಕ್ಷಿತ ಚಿತ್ರ ವಾರಣಾಸಿ ಸಿನಿಮಾದ ಪ್ರಮೋಷನ್​​ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಭಾರಿ ಮೊತ್ತವನ್ನು ಅದಕ್ಕಾಗಿ ಖರ್ಚು ಸಹ ಮಾಡಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ವಾರಣಾಸಿ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ ಸಿನಿಮಾ ಎನ್ನಲಾಗುತ್ತಿದೆ.

Kannada New Movie: ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

Kannada New Movie: ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ನಂಬಿಕೆ, ಭಯ ಮತ್ತು ವಿಧಿ ಮುಖಾಮುಖಿಯಾಗುವ ಸಂಕೀರ್ಣ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಭಕ್ತಿ, ಭಾವನೆ ಹಾಗೂ ಹೈ-ವೋಲ್ಟೇಜ್ ರೋಮಾಂಚನವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡಲು ಸಜ್ಜಾಗಿದೆ.

Bigg Boss kannada 13: ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ! Video

ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ!

Bigg Boss kannada 13:ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಇದೀಗ ಸ್ಪರ್ಧಿಗಳು ಪರಸ್ಪರ ಸಂತಸದಲ್ಲಿ ಒಂದಷ್ಟು ಹೊತ್ತು ಕಾಲೆ ಕಳೆದಿದ್ದಾರೆ.ಕಾವ್ಯ ಅವರ ಬಗ್ಗೆ ತಾಂಡವ್ ಅವರು ತಮಾಷೆಯ ಮಾತುಗಳನ್ನಾಡಿದ್ದು, ಇದನ್ನು ಕೇಳಿ ಕಾವ್ಯ ಮುಗುಳು ನಕ್ಕಿದ್ದಾರೆ.

Loading...