ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Mahaveer Karna Teaser:  ತೆರೆಮೇಲೆ 'ಮಹಾವೀರ ಕರ್ಣ'ನ ಸಿನಿಮಾ; ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ!

Mahaveer Karna Teaser: ತೆರೆಮೇಲೆ 'ಮಹಾವೀರ ಕರ್ಣ'ನ ಸಿನಿಮಾ

Mahaveer Karna Teaser: ಪ್ರತಿಷ್ಠಿತ ಪೆನ್ ಮೂವೀಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್, ಆರ್‌ವಿ ಸ್ಟುಡಿಯೋಸ್ ಸಹಯೋಗದಲ್ಲಿ ಕರ್ಣನ ಬಗ್ಗೆ 'ಮಹಾವೀರ ಕರ್ಣ' ಸಿನಿಮಾ ಅನೌನ್ಸ್ ಆಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಕ್ಷಸುಡು, ಖಿಲಾಡಿ, ವೀರ ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ರಮೇಶ್ ವರ್ಮಾ 'ಮಹಾವೀರ ಕರ್ಣ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್‌?

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್‌!

Vijayalakshmi Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್‌ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ.

Om Prakash Rao: ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

Om Prakash Rao: ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ (Om Prakash Rao) ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮಾಧ್ಯಮವೊಂದಕ್ಕೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Bigg Boss Kannada 13: ನಾಯಕಿ ನಿರ್ಧಾರಕ್ಕೆ ತಂಡದವರೇ Rebel! ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss : ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss: ಸ್ಪರ್ಧಿಗಳ ಮಧ್ಯೆ ಹಣಾಹಣಿ ಜೋರಾಗಿದೆ. ಪೂರ್ಣಿಮಾ ತಂಡದಲ್ಲೇ ಅಸಮಧಾನ ಶುರುವಾಗಿತ್ತು. ನಾಯಕಿ ನಿರ್ಧಾರಕ್ಕೆ ತಂಡದವರೇ Rebel ಆಗಿದ್ದಾರೆ. ಮತ್ತೊಂದು ಕಡೆ ಟೀಂ ಕಟ್ಟುವಾಗ ಗಂಡು , ಹೆಣ್ಣು ಎಂಬ ಭೇದ ಶುರುವಾಗಿದೆ. ಅಗ್ನಿಪರೀಕ್ಷೆ ಅಖಾಡದಲ್ಲಿ ಗಂಡು-ಹೆಣ್ಣು ಭೇದನೇ ಇಲ್ಲ ಎಂಬ ಅಂಶವು ಇದರಲ್ಲಿದೆ.

Om Prakash: 3.85 ಕೋಟಿ ರೂ ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ದೂರು

3.85 ಕೋಟಿ ರೂ ವಂಚನೆ ಆರೋಪ: ಓಂ ಪ್ರಕಾಶ್ ರಾವ್ ವಿರುದ್ಧ ದೂರು

Om Prakash: ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫಿನಿಕ್ಸ್ ಸಿನಿಮಾ ನಿರ್ಮಾಣಕ್ಕೆ ಹಣ ಪಡೆದ ಆರೋಪ ಮಾಡಿ ದೂರು ನೀಡಿದ್ದಾರೆ. 3 ಕೋಟಿ 85 ಲಕ್ಷದಷ್ಟು ಹಣ ಪಡೆದಿದ್ದಾರೆ ಅಂತ ಆರೋಪ ಮಾಡಿದ್ದಾರೆ.

Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

Bigg Boss Kannada 13: ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 (Bigg boss Kannada 13) ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಈಗಾಗಲೇ ರಿವೀಲ್‌ ಆಗಿದೆ. 'ಅಗ್ನಿ ಪರೀಕ್ಷೆ'ಗೆ ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಎಲ್ಲವೂ ನಡೆದ ಮೇಲೆ ಇಲ್ಲಿ ವೀಕ್ಷಕರ ಮತದ ಆಧಾರದ ಮೇಲೆ ಕೇವಲ ಮೂರು ಮಂದಿಯನ್ನಷ್ಟೇ ಆಯ್ಕೆ ಮಾಡಿ ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಗುತ್ತದೆ.

Actor Prabhas: ‘ಸ್ಪಿರಿಟ್’ ಚಿತ್ರಕ್ಕಾಗಿ ಪ್ರಭಾಸ್ ಕಠಿಣ ಶ್ರಮ; ದಿನಕ್ಕೆ 17 ಗಂಟೆ ಶೂಟಿಂಗ್‌!

ಸ್ಪಿರಿಟ್ ಚಿತ್ರಕ್ಕಾಗಿ ಪ್ರಭಾಸ್ ಕಠಿಣ ಶ್ರಮ; ದಿನಕ್ಕೆ 17 ಗಂಟೆ ಶೂಟಿಂಗ್‌

Actor Prabhas: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ ಅವರ ಸಂದರ್ಶನಗಳ ನಂತರ, ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ಸ್ಪಿರಿಟ್ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಣಯ್ ವಂಗಾ ಇತ್ತೀಚೆಗೆ ಈ ಕಥೆಯು ಮುಖ್ಯವಾಗಿ ಹೈದರಾಬಾದ್‌ನಲ್ಲಿ ಆಧಾರಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಶೇ. 40ರಷ್ಟು ಶೂಟಿಂಗ್ ಮುಗಿದಿದ್ದು, ನಟಿ ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರಬಿದ್ದಿದ್ದಾರೆ. ಪ್ರಭಾಸ್ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Arjun Rampal : ವರ್ಷಗಳ ಪ್ರೀತಿಗೆ ಕೊನೆಗೂ ಸಿಕ್ಕಿತು ಅಧಿಕೃತ ಮುದ್ರೆ; ಮದುವೆ ಆದ ನಟ ಅರ್ಜುನ್ ರಾಂಪಾಲ್

Arjun Rampal : ಇಬ್ಬರು ಮಕ್ಕಳಿದ್ದರೂ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

Arjun Rampal : ಅರ್ಜುನ್ ರಾಂಪಾಲ್ (Arjun Rampal) ತಮ್ಮ ದೀರ್ಘಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರನ್ನು ಗೋವಾದಲ್ಲಿ ವಿವಾಹವಾದರು. ಬಾರ್ಡೆಜ್ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡರು. . ಇಬ್ಬರು ಮಕ್ಕಳ ಹೆತ್ತವರಾದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

Bigg Boss Kannada 13:  ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್! ಸರ್​ಪ್ರೈಸ್​ ಕೊಟ್ಟ ಕಿಚ್ಚ

ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್!

ಬಿಗ್ಬಾಸ್ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (Bigg Boss Kannada) ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಬಹಿರಂಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6, 2026ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ? ಕೊನೆಗೂ ಸ್ಪಷ್ಟನೆ ಕೊಟ್ಟ ತಂಡ

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ?

Kareena Kapoor: ವೈರಲ್ ಆಗಿರುವ ವಿಡಿಯೋದಲ್ಲಿ ಕರೀನಾ ಕಪೂರ್ ಜಿಮ್ ಉಡುಪಿನಲ್ಲಿ ತಮ್ಮ ಕಾರಿನತ್ತ ಸಾಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿದೆ. ಪಪಾರಾಜಿಗಳು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಕರೀನಾ ‘ಬೇಬಿ ಬಂಪ್’ ರೀತಿಯ ಹೊಟ್ಟೆಯೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Yash: ಕರ್ನಾಟಕದಲ್ಲಿ 10 ಕೋಟಿ ರೂ. ಮೌಲ್ಯದ ʻಟಾಕ್ಸಿಕ್‌ʼ ಟಿಕೆಟ್‌ ಸೇಲ್;‌ ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ʻರಾಕಿ ಭಾಯ್‌ʼ!

ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ಯಶ್‌!

Yash: ʻಟಾಕ್ಸಿಕ್‌ʼ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿ 10 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಬುಧವಾರದ ಮುಂಜಾನೆಯ ಶೋಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಇತ್ತ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿರುವ ಯಶ್, ವರಮಹಾಲಕ್ಷ್ಮಿ ಹಬ್ಬದಂದು ವಿಡಿಯೋ ಕಾಲ್ ಮೂಲಕ ಮಡದಿ ಮತ್ತು ಮಕ್ಕಳಿಗೆ ಶುಭಕೋರಿದ್ದಾರೆ.

Brahmakamala Review: ತಾಯ್ತನದ ತುಡಿತ ಜೊತೆಗೆ ಸಮಾಜದ ಮುಖವಾಡ ಬಿಚ್ಚಿಡುವ ʻಬ್ರಹ್ಮಕಮಲʼ

ಅದ್ವಿತಿ ಶೆಟ್ಟಿ ನಟನೆಯ ʻಬ್ರಹ್ಮಕಮಲʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Brahmakamala Movie Review: ಸಮಾಜದಲ್ಲಿ ಸಂತಾನವಿಲ್ಲದ ಹೆಣ್ಣು ಅನುಭವಿಸುವ ಅಪಮಾನ ಹಾಗೂ ಮಾನಸಿಕ ತೊಳಲಾಟವನ್ನು ಸಸ್ಪೆನ್ಸ್ ಥ್ರಿಲ್ಲರ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ಪ್ರಯೋಗಾತ್ಮಕ ಚಿತ್ರವಿದು. ಅಪೇಕ್ಷಾ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ತಾಯ್ತನದ ಹಂಬಲ ಮತ್ತು ಸಾಮಾಜಿಕ ಒತ್ತಡವನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ.

Sa ri Ga Ma Pa: ಸ್ವರ ಸಂಗ್ರಾಮದ ರಣರಂಗದಲ್ಲಿ ವಿಜೇತ ಪಟ್ಟಕ್ಕಾಗಿ ಲಿಟಲ್ ಚಾಂಪ್ಸ್ ಮಹಾ ಕದನ! ಯಾರಿಗೆ ಕಿರೀಟ?

ಸ್ವರ ಸಂಗ್ರಾಮದ ರಣರಂಗದಲ್ಲಿ ವಿಜೇತ ಪಟ್ಟಕ್ಕಾಗಿ ಲಿಟಲ್ ಚಾಂಪ್ಸ್ ಮಹಾ ಕದನ!

Sa ri Ga Ma Pa: ಸರಿಗಮಪ (Sa re ga Ma Pa)’. ಅದೆಷ್ಟೋ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಸರಿಗಮಪ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಈ ಶೋ ಮೂಲಕ ಗುರುತಿಸಿಕೊಂಡವರು ಈಗ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದಾರೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ (Grand Finale) ನಡೆಯಲಿದೆ.

Folk dancer:  ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ;  ತರಾಟೆಗೆ ತೆಗೆದುಕೊಂಡ ಪತ್ನಿ

ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ !

Eshwar Sai: ಹೋಟೆಲ್‌ನಲ್ಲಿ ಮತ್ತೊಬ್ಬ ಮಹಿಳಾ ಜಾನಪದ ಕಲಾವಿದೆ ಮಾಧುರಿ ರಾಥೋಡ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾಗ ಅವರ ಪತ್ನಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈಶ್ವರ್ ಸಾಯಿ ಅವರ ಪತ್ನಿ ತಮ್ಮ ಮತ್ತು ತಮ್ಮ ಪತಿಯ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಅವರು, ತಮ್ಮ ಪತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಗಳ ವಯಸ್ಸಿನ ನಟಿ ಜೊತೆ 2ನೇ ಮದುವೆ ಆಗ್ತಾರಾ 62 ವರ್ಷದ ನಟ ಗೋವಿಂದ? ಪತ್ನಿ ಸುನೀತಾ ಅಹುಜಾ ಗಂಭೀರ ಆರೋಪ!

ನಟ ಗೋವಿಂದ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ ಸುನೀತಾ ಅಹುಜಾ

ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಕಲಹ ತಾರಕಕ್ಕೇರಿದೆ. ನಟಿ ಕೋಮಲ್ ರಾಣಿ ಜೊತೆಗಿನ ಪತಿ ಗೋವಿಂದ ಅವರ ಮದುವೆ ತಡೆಯಲು ವಿಚ್ಛೇದನ ಅರ್ಜಿ ಹಿಂಪಡೆದಿರುವುದಾಗಿ ರಾಖಿ ಸಾವಂತ್ ಜತೆಗಿನ ಸಂಭಾಷಣೆಯಲ್ಲಿ ಸುನೀತಾ ತಿಳಿಸಿದ್ದಾರೆ. ಈ ಮೂಲಕ ಗೋವಿಂದ ಕುಟುಂಬದ ಹೈಡ್ರಾಮಾ ಮತ್ತೊಮ್ಮೆ ಬಹಿರಂಗವಾಗಿದೆ.

Yash: ನೀವು 'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ವಿಚಾರ ನಿಮ್ಮ ಗಮನದಲ್ಲಿರಲಿ!

Yash: 'ಟಾಕ್ಸಿಕ್' ಟಿಕೆಟ್ ಬುಕ್ ಮಾಡುವ ಮುನ್ನ ಪೋಷಕರೇ ಇರಲಿ ಎಚ್ಚರ!

ʻಟಾಕ್ಸಿಕ್‌ʼ ಸಿನಿಮಾದ ಟಿಕೆಟ್‌ ಬುಕಿಂಗ್ ವಿಚಾರದಲ್ಲಿ ಅಭಿಮಾನಿಗಳು ಒಂದು ನಿಯಮ ಗಮನಿಸಬೇಕು. ಯಶ್ ನಟನೆಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ. ಹಾಗಾಗಿ, ಚಿತ್ರಮಂದಿರಗಳಲ್ಲಿ ಅನಗತ್ಯ ಗೊಂದಲ ತಡೆಯಲು ಪೋಷಕರು ಮಕ್ಕಳನ್ನು ಕರೆತರದಂತೆ ಮುನ್ನೆಚ್ಚರಿಕೆ ವಹಿಸಬೇಕು

ʻಪದ್ಮಶ್ರೀʼ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ನಿಧನ; ಕಂಬನಿ ಮಿಡಿದ ಚಿತ್ರರಂಗ

ಚೆನ್ನೈನಲ್ಲಿ ಸಾವನ್ನಪ್ಪಿದ ಹಿರಿಯ ನಟಿ ʻಸಾಹುಕಾರ್ʼ ಜಾನಕಿ; ಗಣ್ಯರ ಸಂತಾಪ

Sowcar Janaki Death: ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಡಾ. ರಾಜ್‌ಕುಮಾರ್ ಮತ್ತು ಎನ್‌ಟಿಆರ್‌ರಂತಹ ಲೆಜೆಂಡ್‌ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಡೈರೆಕ್ಟರ್‌ ಪಿ. ಎಸ್.‌ ಮಿತ್ರನ್‌ ಹೇಳಿದ ಕಥೆಯನ್ನು ಮೆಚ್ಚಿದ್ದ ʻರಾಕಿ ಭಾಯ್‌ʼ ಯಶ್‌! ಈ ಸಿನಿಮಾ ಸೆಟ್ಟೇರಲಿಲ್ಲ ಏಕೆ? ಯಾರೀ ತಮಿಳು ನಿರ್ದೇಶಕ?

ಯಶ್ ಮೆಚ್ಚಿದ ಕಥೆ ಡ್ರಾಪ್ ಆಗಿದ್ದೇಕೆ? ಸತ್ಯ ಬಿಚ್ಚಿಟ್ಟ ತಮಿಳು ಡೈರೆಕ್ಟರ್!

ʻರಾಕಿಂಗ್‌ ಸ್ಟಾರ್‌ʼ ಯಶ್‌ ಮತ್ತು ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ಅವರ ಕಾಂಬಿನೇಷನ್ ಸಿನಿಮಾವು ಕಾಲ್‌ಶೀಟ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಯಶ್ ಅವರಿಗಾಗಿ ಸಿದ್ಧಪಡಿಸಿದ್ದ ಆ್ಯಕ್ಷನ್ ಕಥೆಯು ಮೆಚ್ಚುಗೆ ಪಡೆದಿದ್ದರೂ, ಕಾಲ್‌ಶೀಟಡ್‌ ಕಾರಣದಿಂದ ಸೆಟ್ಟೇರಲು ಸಾಧ್ಯವಾಗಿಲ್ಲ ಎಂದು ಮಿತ್ರನ್ ಬಹಿರಂಗಪಡಿಸಿದ್ದಾರೆ.

Bigg Boss 13: ʻನನ್ನ ಟ್ರೋಲ್‌ ಮಾಡಿದಷ್ಟು ನಂಗೇ ಲಾಭ, ಕೋಟಿ ಖರ್ಚು ಮಾಡಿದ್ರೂ ಇಷ್ಟೊಂದು ಪ್ರಚಾರ ಸಿಕ್ತಿರಲಿಲ್ಲʼ; ವಿನಯ್‌ ಗೌಡ ಖಡಕ್‌ ಮಾತು

ʻಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆʼ ಎಂದ ವಿನಯ್ ಗೌಡ

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಅಗ್ನಿಪರೀಕ್ಷೆಯ ಜ್ಯೂರಿ ಸದಸ್ಯ ವಿನಯ್ ಗೌಡ ತಮ್ಮ ಮೇಲಿನ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ವೃತ್ತಕ್ಕೆ ಎರಡು ಭಾಗಗಳಿರುತ್ತವೆ ಎಂಬ ಹೇಳಿಕೆಗೆ ಜೋರ್ಡಾನ್ ಕರ್ವ್ ಪ್ರಮೇಯದ ವಿವರಣೆ ನೀಡಿದ ಅವರು, ನಕಾರಾತ್ಮಕ ಪ್ರಚಾರದಿಂದಲೇ ತಮಗೆ ಸಾಲು ಸಾಲು ಬ್ರ್ಯಾಂಡ್ ಪ್ರಮೋಷನ್ ಆಫರ್ ಸಿಗುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

Toxic Movie: ಯಶ್ (Yash) ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

Amruthadhaare Serial: ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ? ಇದು ʻಆಪರೇಷನ್​ ಮಧುರ ವ್ಯೂಹʼ!

ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ?

Amruthadhaare Serial: ಅಮೃತಧಾರೆ (Amruthadhaare Serial) ಧಾರಾವಾಹಿಯಲ್ಲಿ ಭೂಮಿ-ಮಲ್ಲಿ ಬೇಹುಗಾರಿಕೆ ಭರ್ಜರಿಯಾಗಿಯೇ ನಡೆಯುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೀಗ ಶಕುಂತಲಾ ಅಡ್ಡ ಆಗ್ತಾಳಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

Bandar OTT release: ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bandar OTT release: ಬಾಬಿ ಡಿಯೋಲ್ ಅಭಿನಯದ ಬಂದರ್ ಚಿತ್ರವು ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಜೀ5 ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆಗಸ್ಟ್ 28 ರಿಂದ ಬಂದರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ. ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಚಿತ್ರದಲ್ಲಿ ಬಾಬಿ ಡಿಯೋಲ್ ನಾಯಕನಾಗಿ ನಟಿಸಿದ್ದಾರೆ, ಜೊತೆಗೆ ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಕೂಡ ನಟಿಸಿದ್ದಾರೆ

Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

Bigg Boss Kannada 13: ʻಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಅಪ್ಪಟ ಹಳ್ಳಿ ಪ್ರತಿಭೆ. ಇವರ ಮೂಲ ಆದಯ ವ್ಯವಸಾಯ. ಹೇಮಲತಾ ಅವರಿಗೆ ಇಬ್ಬರೂ ಮಕ್ಕಳು. ವ್ಯವಸಾಯ, ಮನೆ ಕೆಲಸ ಮಾಡುತ್ತಾ ಹಾಡು ಹೇಳುವ ಅಭ್ಯಾಸ ಇವರದ್ದು. ಹೇಮಲತಾಗೆ ಈ ಟಾಸ್ಕ್‌ ನಿಭಾಯಿಸಲು ಕಷ್ಟವಾಯ್ತು. ಪ್ರತಿ ಸ್ಪರ್ಧಿಗಳು ಕೊಟ್ಟ ಕಾರಣಕ್ಕೆ ಹೇಮಲತಾ ಸಖತ್‌ ಸೈಲೆಂಟ್‌ ಆದ್ರು. ಇಷ್ಟು ಅರ್ಥ ಮಾಡಿಕೊಂಡು ಇಲ್ಲಿ ತನಕ ಆಟ ಆಡಿದೆ. ಬಿಗ್‌ ಬಾಸ್‌ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾದರು.

Yash: ‘ರಾಮಾಯಣ’ದಲ್ಲಿ ಯಶ್‌ ಅಬ್ಬರ;  ಫಿದಾ ಆದ ಹನಿ ಸಿಂಗ್

‘ರಾಮಾಯಣ’ದಲ್ಲಿ ಯಶ್‌ ಅಬ್ಬರ; ಫಿದಾ ಆದ ಹನಿ ಸಿಂಗ್

Yash: ಯಶ್ ಅವರ ರಾವಣನ ಚಿತ್ರಣವನ್ನು ಶ್ಲಾಘಿಸಿದ್ದಲ್ಲದೆ, ಚಿತ್ರದ ಟೀಸರ್ ವೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ತಾವು ರಾಮನ ದೊಡ್ಡ ಭಕ್ತ ಎಂದು ಅವರು ಹೇಳಿದರು, ಆದರೆ ಅವರ ಅಭಿಪ್ರಾಯದಲ್ಲಿ, ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಲವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದಲ್ಲಿ ದೆಹಲಿ ಮತ್ತು ಕರಂಪುರದಲ್ಲಿ ವೀಕ್ಷಿಸಿದ ರಾಮಲೀಲಾ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಾ, ಈ ಚಿತ್ರವು ಯಾರ ಭಾವನೆಗಳಿಗೂ ನೋವುಂಟು ಮಾಡಬಾರದು ಮತ್ತು ಆ ಆರಂಭಿಕ ನೆನಪುಗಳಂತೆ ಶುದ್ಧವಾಗಿ ಉಳಿಯಬೇಕು ಎಂದು ಅವರು ಆಶಿಸಿದರು.

Loading...