ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ. ರಾಜ್‌ಕುಮಾರ್ ನಟನೆಯ ʻಜಗ ಮೆಚ್ಚಿದ ಮಗʼ ಸಿನಿಮಾ ರೀ-ರಿಲೀಸ್

ಕಲರ್‌ನಲ್ಲಿ ತೆರೆಗೆ ಬರಲಿದೆ ಡಾ. ರಾಜ್‌ಕುಮಾರ್‌ ನಟನೆಯ ‘ಜಗ ಮೆಚ್ಚಿದ ಮಗ’!

ʻಜಗ ಮೆಚ್ಚಿದ ಮಗʼ ಸಿನಿಮಾವು ಕಲರ್‌ ರೂಪದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಮರುಬಿಡುಗಡೆಯಾಗಲಿದೆ. 1972ರ ಕಪ್ಪು-ಬಿಳುಪಿನ ಸಾಹಸಮಯ ಪೌರಾಣಿಕ ಚಿತ್ರಕ್ಕೆ ಚೆನ್ನೈನ ಪ್ರಸಾದ್ ಲ್ಯಾಬ್ಸ್‌ನಲ್ಲಿ ಒಂದೂವರೆ ವರ್ಷ ಶ್ರಮಿಸಿ ಸಿನಿಮಾಸ್ಕೋಪ್ ಹಾಗೂ 5.1 ಧ್ವನಿ ಅಳವಡಿಸಲಾಗಿದೆ.

Bigg Boss Kannada 13: ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿಯೊಂದಕ್ಕೂ ಜಗಳ ಶುರು ಆಗಿದೆ. ಮೊದಲ ವಾರದಲ್ಲೇ ಮನೆಯ ಕೆಲಸ ವಿಚಾರವಾಗಿ ಜಗಳ ಆಗಿತ್ತು. ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಗಳೂ ಆಯ್ತು. ಇದೀಗ ಮತ್ತೆ ಮನೆ ಕೆಲಸ ವಿಚಾರದಲ್ಲಿ ತಾರತಮ್ಯ ಶುರುವಾದಂತಿದೆ. ಲಿಖಿತ್‌ ಹಾಗೂ ಸಂಗೀತಾ (Sangeetha) ನಡುವೆ ಮಾತಿನ ಚಕಮಕಿ ನಡೆದಿದೆ.

ʻನಾಕು ತಂತಿʼ ಸಿನಿಮಾಕ್ಕಾಗಿ ಒಂದಾದ 'ಬಿಗ್ ಬಾಸ್' ಸಂಗೀತಾ ಭಟ್, ಖುಷಿ ರವಿ, ರೋಶಿನಿ ಪ್ರಕಾಶ್, ಸಿಂಧು ಶ್ರೀನಿವಾಸಮೂರ್ತಿ

ʻನಾಕು ತಂತಿ’ ಚಿತ್ರಕ್ಕಾಗಿ ಒಂದಾದ ಕನ್ನಡದ ನಾಲ್ವರು ಪ್ರತಿಭಾವಂತ ನಟಿಯರು

Naaku Tanti Movie: ʻನಾಕು ತಂತಿʼ ಸಿನಿಮಾ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಾದ ಸಂಗೀತಾ ಭಟ್, ಖುಷಿ ರವಿ, ರೋಷಿಣಿ ಪ್ರಕಾಶ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷ.

Bigg Boss Kannada 13: ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ;  ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!

ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದ ತಾಂಡವ್!

Bigg Boss Kannada 13: ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ವೈಷ್ಣವಿ ಕೌಂಡಿನ್ಯ, ಕಾವ್ಯ ಮೇಲೆ ವಾಗ್ದಾಳಿ ನಡೆಸಿದಲ್ಲದೇ, ತಾಂಡವ್ ರಾಮ್ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ‘ಅಗ್ನಿಪರೀಕ್ಷೆ’ಯಿಂದ ಆಯ್ಕೆ ‘ಬಿಗ್ ಬಾಸ್’ ಮನೆಯೊಳಗೆ ಬಂದ ನಾಲ್ವರ ಪೈಕಿ ಕಿರಣ್ ಶಾಸ್ತ್ರಿ ಬರಬರುತ್ತಲೇ ಪ್ರಥಮ ಪ್ರಸಾದ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ದರು. ಇದೀಗ ತಾಂಡವ್‌ ಸರದಿ.

Amruthadhaare Serial: ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

Amruthadhaare Serial: ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಇದ್ದಳು. ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆ ಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ ಫುಟೇಜ್​ ಚೆಕ್​ ಮಾಡಿಸಿದ್ದಾಳೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ.

ʻಜನ ನಾಯಗನ್‌ʼ ಸಿನಿಮಾದಲ್ಲಿ ನಟಿಸಿ `ಕಾಮನ್‌ಮ್ಯಾನ್‌' ಮುಖವಾಡ ತೊಟ್ಟು ʻಬಿಗ್‌ ಬಾಸ್‌ʼ ಮನೆಗೆ ಧನುಷ್‌ ಮಂಜುನಾಥ್‌ ಬಂದಿದ್ದು ಸರಿಯೇ? ಗರಂ ಆದ ವೀಕ್ಷಕರು!

Bigg Boss 13: ‘ಕಾಮನ್‌ಮ್ಯಾನ್’ ಕೋಟಾ ದುರುಪಯೋಗ! ಧನುಷ್ ಮಾಡಿದ್ದು ಸರಿಯೇ?

Bigg Boss Kannada 13: ‘ಅಗ್ನಿಪರೀಕ್ಷೆ’ ಆಡಿಷನ್ ಮೂಲಕ ಬಿಗ್‌ ಬಾಸ್‌ ಪ್ರವೇಶ ಪಡೆದ 14ನೇ ಸ್ಪರ್ಧಿ ಧನುಷ್ ಮಂಜುನಾಥ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಗಿನ್ನೆಸ್ ದಾಖಲೆ ಸೈಕ್ಲಿಸ್ಟ್ ಧನುಷ್, ‘ಜನ ನಾಯಗನ್’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದರೂ ಕಾಮನ್‌ ಮ್ಯಾನ್ ಕೋಟಾದಡಿ‌ ದೊಡ್ಮನೆ ಪ್ರವೇಶಿಸಿರುವುದು ವಿವಾದ ಸೃಷ್ಟಿಸಿದೆ.

ನಟ ಅರುಣ್‌ ಸಾಗರ್‌ ಮಗಳು ಅದಿತಿಗೆ ಜೋಡಿಯಾದ ಪೂರ್ಣ ಮೈಸೂರು; ಡಾಲಿ ನಿರ್ಮಾಣದ ʻಹೆಗ್ಗಣ ಮುದ್ದುʼ ಟ್ರೇಲರ್‌ ಹೇಗಿದೆ?

‘ಹೆಗ್ಗಣ ಮುದ್ದು’ ಚಿತ್ರದ ಮೂಲಕ ನಾಯಕಿಯಾದ ಅರುಣ್ ಸಾಗರ್ ಪುತ್ರಿ ಅದಿತಿ

Heggana Muddu Trailer: ʻಹೆಗ್ಗಣ ಮುದ್ದುʼ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಚಿತ್ರದಲ್ಲಿ ನವಜೋಡಿಯ ಕೌಟುಂಬಿಕ ಹಾಸ್ಯ ಹಾಗೂ ರೋಚಕ ತಿರುವುಗಳನ್ನು ಅದ್ಭುತವಾಗಿ ಹೆಣೆಯಲಾಗಿದೆ. ಪೂರ್ಣ ಮೈಸೂರು ಅವರಿಗೆ ನಾಯಕಿಯಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಾಥ್ ನೀಡಿದ್ದಾರೆ.

ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣ:  ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್

ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್

ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ 500 ಕೋಟಿ ರೂ. ಗಳ ನೋಟಿಸ್ ಜಾರಿ ಮಾಡಲಾಗಿದೆ.

ʻಬಿಗ್ ಬಾಸ್ʼ ಸ್ಪರ್ಧಿಗಳ ಅಸಲಿ ಮುಖವಾಡ ಕಳಚಿದ ಪ್ರಥಮಾ ಪ್ರಸಾದ್; ಯಾರಿಗೆ ಯಾವ ಪಟ್ಟ? ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಭವಿಷ್ಯ!

ಟಾಪ್ 5 ರೇಸ್‌ನಲ್ಲಿ ಯಾರು ಉಳ್ಕೊತಾರೆ? ಪ್ರಥಮಾ ಪ್ರಸಾದ್ ನುಡಿದ ಭವಿಷ್ಯವಿದು

Bigg Boss Kannada 13: ʻಬಿಗ್‌ ಬಾಸ್‌ 13ʼ ರಿಯಾಲಿಟಿ ಶೋನಿಂದ ಮೊದಲ ವಾರವೇ ನಿರ್ಗಮಿಸಿದ ನಟಿ ಪ್ರಥಮಾ ಪ್ರಸಾದ್, ಸಹ-ಸ್ಪರ್ಧಿಗಳ ನೈಜ ಮುಖವಾಡಗಳನ್ನು ಬಿಚ್ಚಿಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳ ನಡವಳಿಕೆ, ಅಹಂಕಾರ ಮತ್ತು ದೌರ್ಬಲ್ಯಗಳನ್ನು ನೇರ ಮಾತುಗಳಲ್ಲಿ ವಿಶ್ಲೇಷಿಸಿರುವ ಅವರು, ಸೌಂದರ್ಯ ಶೆಟ್ಟಿ, ಮಂಜು ಮತ್ತು ಗಗನ್ ಅವರ ಆಟದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ಗೆ ಚೆನ್ನೈನಲ್ಲಿ ಅದ್ದೂರಿ ಚಾಲನೆ; ನಟಿ ರಶ್ಮಿಕಾ ಮಂದಣ್ಣಗೆ ಕಮಲ್ ಹಾಸನ್ ಕೊಟ್ಟ ಸಲಹೆ ಏನು?

ರಶ್ಮಿಕಾ ನಟನೆಯ MS Subbulakshmi ಬಯೋಪಿಕ್‌ಗೆ ಚೆನ್ನೈನಲ್ಲಿ ಚಾಲನೆ

MS Subbulakshmi biopic: ‘ಭಾರತ ರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ ‘ಎಂಎಸ್: ಎ ಲೆಗಸಿ ಆನ್ ಸ್ಕ್ರೀನ್’ ಚಿತ್ರಕ್ಕೆ ಚೆನ್ನೈನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರಕ್ಕೆ ಗೌತಮ್ ತಿನ್ನನೂರಿ ನಿರ್ದೇಶನ, ಅನಿರುದ್ಧ್ ಸಂಗೀತ ಮತ್ತು ರಾಕ್‌ಲೈನ್-ಅಲ್ಲು ಅರವಿಂದ್ ನಿರ್ಮಾಣವಿದೆ.

ʻಬಿಗ್‌ ಬಾಸ್ʼ ಮನೆಯಲ್ಲಿ 2ನೇ ವಾರದ ನಾಮಿನೇಷನ್ ಫಿನೀಶ್; ಡೇಂಜರ್ ಝೋನ್‌ಗೆ ಬಿದ್ರು 9 ಮಂದಿ, ನಾಮಿನೇಟ್‌ ಮಾಡುವಾಗಲೂ ಮಂಜನ ಕಿರಿಕ್!‌

Bigg Boss ಮನೆಯಲ್ಲಿ ನಾಮಿನೇಷನ್ ಕದನ; ಮಂಜನ ಮಾತಿಗೆ ರೊಚ್ಚಿಗೆದ್ದ ಸೌಂದರ್ಯ

Bigg Boss 13 Nominations: ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಬಿರುಗಾಳಿ ಎಬ್ಬಿಸಿದ್ದು, ಒಟ್ಟು 9 ಸ್ಪರ್ಧಿಗಳು ಹೊರಬೀಳುವ ಆತಂಕದಲ್ಲಿದ್ದಾರೆ. ಮುಖಕ್ಕೆ ಫೋಮ್ ಹಚ್ಚುವ ಟಾಸ್ಕ್‌ನಲ್ಲಿ 8 ಮಂದಿ ನಾಮಿನೇಟ್ ಆದರೆ, ಪೈಲಟ್ ಸಂಗೀತಾ ಅವರು ವೈಷ್ಣವಿಯನ್ನು ನೇರವಾಗಿ ನಾಮಿನೇಟ್‌ ಮಾಡಿದರು.

ʻಪ್ರಧಾನಿ ಮೋದಿ ಅವರೇ ಟ್ವೀಟ್‌ ಮಾಡಿದ್ದು ಹೆಮ್ಮೆಯ ಸಂಗತಿ..ʼ; ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಅನಂತ್‌ ನಾಗ್‌ ಫಸ್ಟ್‌ ರಿಯಾಕ್ಷನ್‌

ದಾದಾಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ನಟ ಅನಂತ್ ನಾಗ್ ಮೊದಲ ಪ್ರತಿಕ್ರಿಯೆ

ಹಿರಿಯ ನಟ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನಾ ಟ್ವೀಟ್‌ಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಕಲೆಯ ಪಯಣಕ್ಕೆ ಸಾಥ್ ನೀಡಿದ ಕರ್ನಾಟಕದ ಸಮಸ್ತ ಜನತೆ, ರಂಗಕರ್ಮಿಗಳು ಹಾಗೂ ಪತ್ರಕರ್ತರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವವನ್ನು ಅರ್ಪಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ.

ʻಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಸಂದಿರುವುದು ಅತ್ಯಂತ ಅರ್ಹ ವ್ಯಕ್ತಿಗೆ ಸಿಕ್ಕ ಗೌರವ' ಎಂದ ನಟ ರಮೇಶ್ ಅರವಿಂದ್

ಅನಂತ್ ನಾಗ್‌ಗೆ ಫಾಲ್ಕೆ ಗರಿ: ‘ಅರ್ಹ ಸಾಧಕನಿಗೆ ಸಂದ ಗೌರವ’- ರಮೇಶ್ ಅರವಿಂದ್

Ananth Nag: ಕನ್ನಡ ಚಿತ್ರರಂಗದ ಹಿರಿಯ ನಟ ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಭಾಜನವಾಗಿರುವುದು ಭಾರತೀಯ ಚಿತ್ರರಂಗದ ಅತ್ಯಂತ ಅರ್ಹ ವ್ಯಕ್ತಿಗೆ ಸಂದ ಗೌರವ ಎಂದು ನಟ-ನಿರ್ದೇಶಕ ರಮೇಶ್ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ನಟನೆ, ಜ್ಞಾನ ಮತ್ತು ಪಾತ್ರಗಳ ಆಯ್ಕೆ ಇಂದಿನ ಪೀಳಿಗೆಗೆ ಮಾದರಿ ಎಂದಿದ್ದಾರೆ ರಮೇಶ್‌.

ಕನ್ನಡ ಚಿತ್ರರಂಗದ ಹೆಮ್ಮೆ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ; ಸಹಜ ನಟನೆಯ ಮೇರು ಕಲಾವಿದನ ಜೀವನದ ಅಪರೂಪದ ಹೆಜ್ಜೆಗಳು!

ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಗೆ ಭಾಜನರಾದ ಹೆಮ್ಮೆಯ ನಟ ಅನಂತ್ ನಾಗ್

Dadasaheb Phalke Award 2024: ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಐದು ದಶಕಗಳ ಅದ್ಭುತ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಪ್ರಕಟಿಸಿದೆ.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Dadasaheb Phalke Award: 'ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ-ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್‌ ನಾಗ್‌ಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ರೀತಿ ಇದು. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

Anant Nag: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ನಟ ಅನಂತ್ ನಾಗ್‌ಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸೇರಿ ಗಣ್ಯರಿಂದ ಅಭಿನಂದನೆ

ನಟ ಅನಂತ್ ನಾಗ್‌ಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

Dadasaheb Phalke Award 2024: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಗೌರವಾನ್ವಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಗರಿ

ಕನ್ನಡದ ಮೇರು ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗರಿ

Dadasaheb Phalke Award 2026: ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಐದು ದಶಕಗಳ ಅದ್ಭುತ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಪ್ರಕಟಿಸಿದೆ. ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ʻಟಾಕ್ಸಿಕ್‌ʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರಿಗೆ ಇಲ್ಲಿದೆ ಮತ್ತೊಂದು ಚಾನ್ಸ್, OTT ಅಂಗಳಕ್ಕೆ ಯಶ್‌ ಸಿನಿಮಾ! ಯಾವಾಗ, ಎಲ್ಲಿ ಪ್ರಸಾರ?

ಥಿಯೇಟರ್‌ನಲ್ಲಿ ಮಿಸ್ ಆಯ್ತಾ? OTTಗೆ ಬರ್ತಿದೆ ಯಶ್ ನಟನೆಯ ‘ಟಾಕ್ಸಿಕ್’!

Toxic OTT Release Date: ಯಶ್‌, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಟನೆಯ ಬಹುನಿರೀಕ್ಷಿತ ʻಟಾಕ್ಸಿಕ್ʼ‌ ಸಿನಿಮಾವು ಓಟಿಟಿಗೆ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ದಾಂಪತ್ಯ ಜೀವನದ 20ನೇ ವಸಂತಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕಾ; ವಿದೇಶದ ಚರ್ಚ್‌ನಲ್ಲಿ‌ ಮಕ್ಕಳೆದುರು ಮತ್ತೊಮ್ಮೆ ಮದುವೆಯಾದ ಸ್ಟಾರ್ ಜೋಡಿ‌

ಮಕ್ಕಳ ಸಮ್ಮುಖದಲ್ಲಿ ನಟ ಸೂರ್ಯ - ಜ್ಯೋತಿಕಾ ಮರುಮದುವೆ; ವಿಡಿಯೋಗಳು ವೈರಲ್

Suriya Jyothika Marriage: ಸೂರ್ಯ ಮತ್ತು ಜ್ಯೋತಿಕಾ ಅವರ ದಾಂಪತ್ಯಕ್ಕೆ ಈಗ 20 ವರ್ಷಗಳ ಸಂಭ್ರಮ. ಈ ಜೋಡಿ ವಿದೇಶದ ಚರ್ಚ್‌ನಲ್ಲಿ ಮಕ್ಕಳ ಸಮ್ಮುಖದಲ್ಲಿ ವೈವಾಹಿಕ ಪ್ರತಿಜ್ಞೆಗಳನ್ನು ನವೀಕರಿಸಿಕೊಂಡಿದೆ. ಮಗ ದೇವ್ ಜೊತೆ ಬಿಳಿ ಗೌನ್ ತೊಟ್ಟು ಬಂದ ಪತ್ನಿಯನ್ನು ಕಂಡು ನಟ ಸೂರ್ಯ ಆನಂದಭಾಷ್ಪ ಸುರಿಸಿದರು. ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಗಣಪತಿಗೆ ಆರತಿ ಮಾಡುವಾಗ ನಟ ಸಲ್ಮಾನ್ ಖಾನ್ ಎಡವಟ್ಟು;  ಅಣ್ಣನನ್ನು ತಿದ್ದಿದ ತಂಗಿ ಅರ್ಪಿತಾ! ‌

ಗಣಪತಿಗೆ ಆರತಿ ಬೆಳಗುವಾಗ ಸಲ್ಮಾನ್ ಎಡವಟ್ಟು; ತಪ್ಪು ತಿದ್ದಿದ ತಂಗಿ ಅರ್ಪಿತಾ

Salman Khan: ಗಣಪತಿ ಪೂಜೆಯ ವೇಳೆ ಆರತಿ ತಟ್ಟೆಯನ್ನು ಸಲ್ಮಾನ್‌ ಖಾನ್ ಉಲ್ಟಾ ತಿರುಗಿಸಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.‌ ಈ ವೇಳೆ ತಕ್ಷಣವೇ ಸಹೋದರಿ ಅರ್ಪಿತಾ ಅಣ್ಣನ ಕೈಹಿಡಿದು ತಿದ್ದಿದ್ದು, ಸಲ್ಮಾನ್ ನಗುತ್ತಲೇ ಸರಿಪಡಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

1980ರ ರೆಟ್ರೋ ಕಾಲದ ‘ಬೊಮ್ ಭಾಯ್’ ಚಿತ್ರಕ್ಕಾಗಿ ಒಂದಾದ ಶರಣ್, ದಿಗಂತ್, ನಿಶ್ವಿಕಾ ನಾಯ್ಡು

Bom Bhai Movie: 1980ರ ರೆಟ್ರೋ ಕಾಲಕ್ಕೆ ಕರೆದೊಯ್ಯಲಿದ್ದಾರೆ ಶರಣ್-ದಿಗಂತ್

Bom Bhai Movie: 1980ರ ದಶಕದ ರೆಟ್ರೋ ಕಾಲಘಟ್ಟದ ಹಿನ್ನೆಲೆಯುಳ್ಳ ‘ಬೊಮ್ ಭಾಯ್’ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಶಶಿಧರ್ ನಿರ್ದೇಶನದ ಈ ಸಿನಿಮಾಕ್ಕೆ ಪಿ.ಆರ್.ಎಫ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ದೀಪಕ್ ಛಾಯಾಗ್ರಹಣವಿದೆ.

Bigg Boss 13: ‘ನೀನೇ ನೆಟ್ಟಗಿಲ್ಲ, ಇನ್ನೊಬ್ರಿಗೆ ಏನು ಹೇಳೋಕೆ ಬರ್ತೀಯಾ..?’; ವೈಷ್ಣವಿ, ಕಾವ್ಯ ಗೌಡ ವಿರುದ್ಧ ಗುಡುಗಿದ ಕಿರಣ್ ಶಾಸ್ತ್ರಿ!

ʻನೀನೇ ನೆಟ್ಟಿಗಿಲ್ಲʼ; ವೈಷ್ಣವಿ ಮೇಲೆ ವಾಗ್ದಾಳಿ ಮಾಡಿದ ಕಿರಣ್‌ ಶಾಸ್ತೀ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಮಂಜನ ಅವಹೇಳನಕಾರಿ ಮಾತುಗಳಿಗೆ ಕಾವ್ಯ ಗೌಡ ಖಡಕ್ ತಿರುಗೇಟು ನೀಡಿದ ಬೆನ್ನಲ್ಲೇ, ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ಕಾವ್ಯ ನಡೆಯನ್ನು ಪ್ರಶ್ನಿಸಿದ್ದಾರೆ. ನಂತರ ಮಧ್ಯಪ್ರವೇಶಿಸಿದ ವೈಷ್ಣವಿ ಕೌಂಡಿನ್ಯ ಅವರ ಮೇಲೆ ಕಿರಣ್ ತೀವ್ರ ವಾಗ್ದಾಳಿ ನಡೆಸಿದ್ದು, "ನೀನೇ ನೆಟ್ಟಿಗಿಲ್ಲ" ಎಂದು ಕಿಡಿಕಾರಿದ್ದಾರೆ.

ʻಬಿಗ್‌ ಬಾಸ್ ಕನ್ನಡ 13ʼರ ಮೊದಲ ಪೈಲಟ್ ಆದ ಸಂಗೀತಾ ಭಟ್; ಚಾನ್ಸ್‌ ಮಿಸ್‌ ಆಗಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಕಿರಣ್ ಶಾಸ್ತ್ರಿ!

ತಾಂಡವ್‌ಗೆ ‘ಬಳೆ ತೊಟ್ಕೊಳ್ಳಿ..ʼ ಎಂದ ಕಿರಣ್ ಮೇಲೆ ಮಹಿಳಾ ಸ್ಪರ್ಧಿಗಳು ಗರಂ!

Bigg Boss 13: ಟಾಸ್ಕ್‌ನಲ್ಲಿ ಗೆದ್ದು ನಟಿ ಸಂಗೀತಾ ಭಟ್ ಗೆದ್ದು ನೇರವಾಗಿ ಕ್ಯಾಪ್ಟನ್ಸಿ ರೇಸ್ ಪ್ರವೇಶಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಅವಕಾಶ ವಂಚಿತರಾದ ಕಿರಣ್ ಶಾಸ್ತ್ರಿ ಆಕ್ರೋಶಗೊಂಡು ಮನೆಯವರ ವಿರುದ್ಧ ‘ಬಳೆ ತೊಟ್ಟು ಕೂತ್ಕೊಳ್ಳಿ’ ಎಂದು ಕೀಳಾಗಿ ಕೂಗಾಡಿದರು. ಇದಕ್ಕೆ ನಟಿ ವೈಷ್ಣವಿ, ತಾಂಡವ್ ಹಾಗೂ ಗಗನ್ ಚಿನ್ನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ʻಈಯಮ್ಮ ವಿಲನ್‌ ಆಂಟಿ, ಡುಮ್ಮಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆʼ; ʻಬಿಗ್‌ ಬಾಸ್ʼ‌ ಶೋನಿಂದ ಒಂದೇ ವಾರಕ್ಕೆ ಹೊರಬಂದ ನಟಿ ಪ್ರಥಮಾ ಪ್ರಸಾದ್‌ ಖಡಕ್‌ ರಿಯಾಕ್ಷನ್

ʻಬಿಗ್ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ನಟಿ ಪ್ರಥಮಾ ಪ್ರಸಾದ್ ಆಕ್ರೋಶ!

ನಟಿ ಪ್ರಥಮಾ ಪ್ರಸಾದ್‌ ಅವರು ಬಿಗ್‌ ಬಾಸ್‌ ರಿಯಾಲಿಟಿ ಶೋನ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ಬಾಡಿ ಶೇಮಿಂಗ್ ಹಾಗೂ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಟಿವಿ ಸಂಚಿಕೆಗಳಲ್ಲಿ ಕೇವಲ ಜಗಳವನ್ನಷ್ಟೇ ತೋರಿಸಿ, ತಮ್ಮ ಮಾನವೀಯ ಕಾಳಜಿಯನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗಟ್ಟಿದನಿಯ ಮಹಿಳೆಯರ ಆತ್ಮಗೌರವವನ್ನು ಸಮಾಜ ದುರಹಂಕಾರವೆಂದು ತಪ್ಪಾಗಿ ಗ್ರಹಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Loading...