ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ನಟ ರವಿಚಂದ್ರನ್‌ಗೆ ವಿಧಾನ ಪರಿಷತ್ ಸ್ಥಾನ? ಸಿಎಂ ಡಿ.ಕೆ. ಶಿವಕುಮಾರ್‌ ಶಿಫಾರಸು?

ರವಿಚಂದ್ರನ್ ರಾಜಕೀಯಕ್ಕೆ ಎಂಟ್ರಿ?

V. Ravichandran: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ರವಿಚಂದ್ರನ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಥವಾ ಸಿಎಂ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ರವಿಚಂದ್ರನ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆತ್ಮೀಯ ಸ್ನೇಹ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

Rishab Shetty: ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ʼಟಾಕ್ಸಿಕ್‌ʼ ಬಗ್ಗೆ ರಿಷಬ್‌ ಶೆಟ್ಟಿ ಮೆಚ್ಚುಗೆಯ ಪೋಸ್ಟ್‌

ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ರಿಷಬ್‌ ಶೆಟ್ಟಿ

Rishab Shetty:`ಟಾಕ್ಸಿಕ್’ (Toxic Movie) ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಉಪೇಂದ್ರ (Upendra) ಕೂಡ ಟ್ವೀಟ್‌ ಮಾಡಿದ್ದರು. ಇದೀಗ ರಿಷಬ್‌ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ. .ಕನ್ನಡ ಸಿನಿಮಾವನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುವ ನಿಮ್ಮ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.

ಮೂರು ದಿನಗಳ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ; ನಟಿ ಸೋನಾಲ್ ಮೊಂಥೆರೊ ರಿಂದ ಉದ್ಘಾಟನೆ

ಬೆಂಗಳೂರಿನಲ್ಲಿ ‘ದಿ ಜ್ಯುವೆಲರಿ ಶೋ’ಗೆ ಅದ್ದೂರಿ ಚಾಲನೆ

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ವಿವಿಧ ನಗರಗಳ ಪ್ರಮುಖ ಜ್ಯುವೆಲರ್‌ಗಳು ಹಾಗೂ ವಿನ್ಯಾಸಗಳನ್ನು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಪರಿಚಯಿಸುವ ವೇದಿಕೆ ಯಾಗಿದ್ದು, ಹಬ್ಬ ಮತ್ತು ಮದುವೆ ಋತುವಿನ ಖರೀದಿಗೆ ವಿಶೇಷ ಆಕರ್ಷಣೆಯಾಗಿದೆ. ಶೋ ಆ.29ರಿಂದ 31ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ನಡೆಯಲಿದ್ದು, ಆಭರಣ ಪ್ರಿಯರಿಗೆ ವೈವಿಧ್ಯಮಯ ವಿನ್ಯಾಸಗಳನ್ನು ವೀಕ್ಷಿಸಿ ಖರೀದಿಸಲು ಅವಕಾಶ ಕಲ್ಪಿಸಿದೆ.

Bigg Boss Kannada 13: ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

Bigg Boss Kannada 13: ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಅಗ್ನಿಪರೀಕ್ಷೆಗೆ ಒಳಗಾದವರು ಲಾವಣ್ಯ ಕುಮಾರಿ (Lavanya Kumari). ಏಕಾಏಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕುಮಾರಿ ಕಾಣ್ತಿಲ್ಲ ಅಂತ ವೀಕ್ಷಕರು ಕಮೆಂಟ್‌ ಕೂಡ ಮಾಡಿದ್ದರು. ಇದೀಗ ಉತ್ತರ ಸಿಕ್ಕಿದೆ.

Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ

ಯಶ್ ಅದ್ಭುತ ಕಲಾವಿದ; ಆ್ಯಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಮೆಚ್ಚುಗೆ

Actor Yash: ಆಕ್ಷನ್‌ ದೃಶ್ಯಗಳು (Action Sequance) ವಿಶೇಷ ಪ್ರಶಂಸೆಯನ್ನು ಗಳಿಸಿದೆ. ಸಾಹಸ ನೃತ್ಯ ಸಂಯೋಜಕ ಜೆಜೆ ಪೆರ್ರಿ (JJ Perry) ಈಗ ಈ ಸನ್ನಿವೇಶವು ಹೇಗೆ ಇದ್ದಿತ್ತು? ಜೊತೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ .

Actor Vinayakan: ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್; ಡಿವೋರ್ಸ್​ಗೆ ನಾನೇ ಕಾರಣ ಎಂದಿದ್ದೇಕೆ?

ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್!

Actor Vinayakan: ಖ್ಯಾತ ನಟ ವಿನಾಯಕನ್ ತಮ್ಮ 40 ವರ್ಷಗಳ ದೀರ್ಘ ವೈವಾಹಿಕ ಜೀವನ ಅಂತ್ಯಗೊಂಡಿದೆ. ಮಹಾರಾಜ ಕಾಲೇಜಿನಲ್ಲಿ 19 ನೇ ವಯಸ್ಸಿನಲ್ಲಿ ಪ್ರಾರಂಭವಾದ ಪ್ರೀತಿ ಮತ್ತು 40 ವರ್ಷಗಳ ಸುದೀರ್ಘ ದಾಂಪತ್ಯದ ಮುರಿದುಬಿದ್ದ ನಂತರ ವಿನಾಯಕನ್ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಪತ್ನಿ ಬಬಿತಾ ಅವರಿಂದ ಬೇರ್ಪಡಲು ಸಂಪೂರ್ಣ ಕಾರಣವನ್ನು ವಿವರಿಸಿದರು. ವಿನಾಯಕನ್ ಪ್ರಕಾರ, ಈ ವಿಚ್ಛೇದನದಲ್ಲಿ (Divorce) ಅವರ ಪತ್ನಿಯ ತಪ್ಪಿಲ್ಲ, ಆದರೆ ಅವರ ಸ್ವಭಾವ ಮಾತ್ರ ಕಾರಣವಾಗಿತ್ತು ಎಂದಿದ್ದರು.

Bigg Boss Kannada 13:  ‘ಕ್ಯಾಮರಾ ಆಫ್ ಮಾಡಿ’  ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

‘ಕ್ಯಾಮರಾ ಆಫ್ ಮಾಡಿ’ ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

Bigg Boss Kannada 13: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ನಡೆಯುತ್ತಿದೆ. ಅಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ಪೂರ್ಣಿಮಾ ‘ಅಗ್ನಿಪರೀಕ್ಷೆ’ ವೇದಿಕೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣಿಮಾ ಆಡಿರುವ ಮಾತುಗಳಿಗೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಅಸಮಾಧಾನಗೊಂಡಿದ್ದಾರೆ. ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Sahaa Movie: ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ  ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ;  ನಟಿಯ ನೇರ ಸವಾಲು!

ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ತಲೆ ಬೋಳಿಸಿಕೊಳ್ಳುತ್ತೇನೆ; ನಟಿಯ ನೇರ ಸವಾಲು

swetha lakshman: ಸಹಾ ತಂಡವು ಚಿತ್ರದ ಬಗ್ಗೆ ಬಲವಾದ ಮತ್ತು ಅತಿರೇಕದ ಹೇಳಿಕೆಗಳನ್ನು ನೀಡುತ್ತಿದೆ, ಮತ್ತು ಈಗ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ (swetha lakshman) ಸಿನಿಮಾ ನಿರಾಸೆ ಮೂಡಿಸಿದರೆ ಅಮೀರ್‌ಪೇಟೆ ರಸ್ತೆಯಲ್ಲಿ ತಲೆಬೋಳಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.

Nandagokula Serial : ‘ನಂದಗೋಕುಲ’ ಸೀರಿಯಲ್‌ಗೆ ಕೇಶವ ವಿದಾಯ; ಭಾವುಕ ಪೋಸ್ಟ್‌

‘ನಂದಗೋಕುಲ’ ಸೀರಿಯಲ್‌ಗೆ ಕೇಶವ ವಿದಾಯ; ಭಾವುಕ ಪೋಸ್ಟ್‌

Nandagokula Serial : ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೀರಿಯಲ್‌ನಿಂದ ಆಚೆ ಬಂದಿದ್ದಾರೆ. ಕೇಶವ ಪಾತ್ರಕ್ಕೆ ವಿದಾಯ: ‘ನನ್ನ ಪಯಣದ ಒಂದು ವಿಶೇಷ ಅಧ್ಯಾಯ ಮುಗಿಯುತ್ತಿದೆ. ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ‘ಕೇಶವ’ ಪಾತ್ರ ಹಾಗೂ ‘ನಂದಗೋಕುಲ ಧಾರಾವಾಹಿಯೊಂದಿಗಿನ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.

Karavali Movie OTT: ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

karavali Movie OTT: ​ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

Shiva Rajkumar:  ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

Shiva Rajkumar: ಡಾ. ಶಿವರಾಜ್‌ಕುಮಾರ್ (Shivarajkumar) ನಟನೆಯ ಬಹುನಿರೀಕ್ಷಿತ ‘ಬೇಲ್’ ಚಿತ್ರದ (Bail Movie) ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವಣ್ಣ ಎಂದಿನ ತಮ್ಮ ಖಡಕ್ ಶೈಲಿಯ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

Toxic Movie: `ರಾಯ'ನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್

`ರಾಯ'ನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್

Toxic Movie: ‘ಟಾಕ್ಸಿಕ್’ ಸಿನಿಮಾಗೆ (Toxic Movie) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂಥ ಸಂದರ್ಭದಲ್ಲಿ ಉಪೇಂದ್ರ (Upendra) ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್‌ (Sudeep) ಕೂಡ ಮನಸಾರೆ ವಿಶ್‌ ಮಾಡಿದ್ದಾರೆ.

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

Toxic movie : ‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

Rishab Shetty: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್‌ ಶೆಟ್ಟಿ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್‌ ಶೆಟ್ಟಿ!

Rishab Shetty: ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸೃಷ್ಟಿಯಾದ ಅಭೂತಪೂರ್ವ ಯಶಸ್ಸು ಮತ್ತು ಅವರ ಸಿನಿಮಾಗಳ ಪ್ರಭಾವವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಸಿನಿಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ಸ್ಥಾನ ಪಡೆದರೆ, ಬರಹಗಾರರ ವಿಭಾಗದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಸ್ಥಾನ ಪಡೆದಿದ್ದಾರೆ.

ಯಶ್‌ ನಟನೆಯ ʼಟಾಕ್ಸಿಕ್ʼ ಸಿನಿಮಾದಲ್ಲಿ ಅತಿಯಾದ ಹಿಂಸೆ, ಸ್ತ್ರೀ ವಿರೋಧಿ ಧೋರಣೆ: ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಕಿಡಿ

ʼಟಾಕ್ಸಿಕ್‌ʼ ಚಿತ್ರದ ವಿರುದ್ಧ ಅಣ್ಣಾಮಲೈ ಕಿಡಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ʼಟಾಕ್ಸಿಕ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಗಳಿಕೆ ಕಾಣುತ್ತಿರುವ ಬೆನ್ನಲ್ಲೇ ಸೆನ್ಸಾರ್ ಮಂಡಳಿ ವಿರುದ್ಧ ತಮಿಳುನಾಡಿನ ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ತೀವ್ರ ವಾಗ್ದಾಳಿ ನೆಡೆಸಿದ್ದಾರೆ. ಸಿನಿಮಾದಲ್ಲಿ ತೋರಿಸಲಾಗಿರುವ ಅತಿಯಾದ ಹಿಂಸೆ ಮತ್ತು ಮಹಿಳೆಯರ ಕುರಿತಾದ ಅಸಭ್ಯ ಚಿತ್ರಣವನ್ನು ತಡೆಯಲು ಸಿಬಿಎಫ್‌ಸಿ ವಿಫಲವಾಗಿದೆ ಎಂದು ಆರೋಪಿಸಿದ್ದು, ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೂ ಕಟ್ಟುನಿಟ್ಟಿನ ಸೆನ್ಸಾರ್ ನಿಯಮ ಅನ್ವಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Toxic box office collection day 2: ಟಾಕ್ಸಿಕ್ ಎರಡನೇ ದಿನದ ಕಲೆಕ್ಷನ್ ಎಷ್ಟು

Toxic box office collection: ಟಾಕ್ಸಿಕ್ ಎರಡನೇ ದಿನದ ಕಲೆಕ್ಷನ್ ಎಷ್ಟು

Toxic box office collection day 2: ಯಶ್ ಅಭಿನಯದ ಟಾಕ್ಸಿಕ್ : ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic) ಚಿತ್ರವು ನೀರಸ ವಿಮರ್ಶೆಗಳಿಗೆ ತೆರೆಕಂಡಿತು ಆದರೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತು, ದೇಶೀಯ ಬಾಕ್ಸ್ ಆಫೀಸ್ ನಲ್ಲಿ ₹ 100 ಕೋಟಿ (Collection) ಗಡಿ ದಾಟಿತು. ಚಿತ್ರದ ಬಗ್ಗೆ ಟ್ರೋಲ್‌ಗಳು ಮತ್ತು ಮೀಮ್‌ಗಳ ಹೊರತಾಗಿಯೂ, ಗುರುವಾರ ಎರಡನೇ ದಿನ ಹೇಗಿದೆ ಎಂಬುದು ಇಲ್ಲಿದೆ.

Uorfi Javed: ಆಸ್ಪತ್ರೆಗೆ ದಾಖಲಾದ ಉರ್ಫಿ ಜಾವೇದ್!

Uorfi Javed: ಆಸ್ಪತ್ರೆಗೆ ದಾಖಲಾದ ಉರ್ಫಿ ಜಾವೇದ್!

Uorfi Javed: ಉರ್ಫಿ ಜಾವೇದ್ ಅವರ ಇತ್ತೀಚಿನ ಪೋಸ್ಟ್ ಅವರ ಅಭಿಮಾನಿಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಪ್ರತಿ ವರ್ಷವೂ ತಮಗೆ ಆಸ್ಪತ್ರೆ ವಾಸ ತಪ್ಪಿದ್ದಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಉರ್ಫಿ ಆಸ್ಪತ್ರೆಯಲ್ಲಿನ ತನ್ನ ಕೆಲವು ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಇದೆ.

Toxic:  ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಟಾಕ್ಸಿಕ್‌ ಚಿತ್ರತಂಡ

ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಟಾಕ್ಸಿಕ್‌ ಚಿತ್ರತಂಡ

Toxic: ಬೆಂಗಳೂರು ಮೂಲದ ‘ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ‘ಕೆವಿಎನ್’ ಹಾಗೂ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪರವಾಗಿ ಈ ನೋಟಿಸ್ ನೀಡಿದೆ. ‘ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್ ಸಿನಿಮಾಗೆ ಸಂಬಂಧಿಸಿದಂತೆ ನೀವು ಡಿಜಿಟಲ್ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ.

Allu Arjun: ಫೋರ್ಬ್ಸ್ ಇಂಡಿಯಾ ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್

ಫೋರ್ಬ್ಸ್ ಇಂಡಿಯಾ ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್

Allu Arjun: ಫೋರ್ಬ್ಸ್ ಇಂಡಿಯಾದ 'ಶೋಸ್ಟಾಪರ್ಸ್ 2026' ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ಅವರ ಜನಪ್ರಿಯತೆಯ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತೀಯ ತಾರೆಯರ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಈ ಮುಖಪುಟವು ಕೇವಲ ಒಬ್ಬ ನಟನಾಗಿ ಅವರ ಯಶಸ್ಸನ್ನು ಮಾತ್ರವಲ್ಲದೆ, ಸಾಂಸ್ಕೃತಿಕ ವಿದ್ಯಮಾನವಾಗಿ ಅಲ್ಲು ಅರ್ಜುನ್ ಬೆಳೆದು ನಿಂತಿರುವ ಪರಿಯನ್ನೂ ಸಂಭ್ರಮಿಸುತ್ತದೆ.

'ನನ್ನ ಮಗ ಹಲಸಿನ ಹಣ್ಣು ಇದ್ದಂಗೆ, ಎಷ್ಟೇ ನೆಗೆಟಿವ್‌ ಮಾಡಿದ್ರು ಅವ್ನ ಯಾರೂ ತಡೆಯೋಕೆ ಆಗಲ್ಲ': ಟೀಕೆಗಳಿಗೆ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಖಡಕ್ ತಿರುಗೇಟು!

‌ʻನನ್ ಮಗ ಹಲಸಿನ ಹಣ್ಣಿದ್ದಂಗೆʼ; ಯಶ್ ತಾಯಿ ಪುಷ್ಪಾ ಹಿಂಗ್ಯಾಕೆ ಹೇಳಿದ್ರು?

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ಕುರಿತು ಹಬ್ಬುತ್ತಿರುವ ನಕಾರಾತ್ಮಕ ಮಾತುಗಳಿಗೆ ನಟ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಯಶ್ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಅವರು, ಟ್ರೋಲರ್ಸ್‌ಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

Jailer 2 Movie: ರಜನಿಕಾಂತ್‌ ಎದುರು ಪೈಪೋಟಿಗೆ ಇಳಿಯಲು ಸಜ್ಜಾದ ವಿಜಯ್‌ ದೇವರಕೊಂಡ - ರಶ್ಮಿಕಾ ಜೋಡಿ

Jailer 2: ರಜನಿಕಾಂತ್‌ ಜೊತೆ ವಿಜಯ್‌ ದೇವರಕೊಂಡ - ರಶ್ಮಿಕಾ ಪೈಪೋಟಿ!

ಈ ಬಾರಿಯ ದಸರಾ ಹಬ್ಬದಂದು ಬಾಕ್ಸಾಫೀಸ್‌ನಲ್ಲಿ ಭಾರೀ ಹಣಾಹಣಿ ಏರ್ಪಡಲಿದೆ. ಸೂಪರ್‌ಸ್ಟಾರ್ ರಜನಿಕಾಂತ್ ʻಜೈಲರ್‌ 2ʼ ಅಬ್ಬರದ ಎದುರು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಚಿತ್ರವನ್ನು ಅಖಾಡಕ್ಕಿಳಿಸುತ್ತಿದೆ. ಆ ಹಿನ್ನಲೆಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಕುತೂಹಲ ಮೂಡಿದೆ.

ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ʻಟಾಕ್ಸಿಕ್‌ʼಗೆ ಎಷ್ಟನೇ ಸ್ಥಾನ? ಯಶ್‌ ಮುಂದೆ ಮಂಡಿಯೂರಿದ ʻಜವಾನ್ʼ‌, ʻಆದಿಪುರುಷ್ʼ!

ಬಾಕ್ಸ್ ಆಫೀಸ್ ಉಡೀಸ್‌; ಯಾವೆಲ್ಲ ಚಿತ್ರಗಳಿಗೆ 'ಟಾಕ್ಸಿಕ್' ಟಕ್ಕರ್ ಕೊಡ್ತು?

ನಟ ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾವು ಮೊದಲ ದಿನವೇ ವಿಶ್ವಾದ್ಯಂತ ಸುಮಾರು ₹150 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಭೂತಪೂರ್ವ ದಾಖಲೆ ಬರೆದಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಶಾರುಖ್ ಖಾನ್ ಅವರ ಜವಾನ್ ಹಾಗೂ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.

ಕೋವಿಡ್‌ ದಿನಗಳ ನೈಜ ಬದುಕಿಗೆ ಕನ್ನಡಿ ಹಿಡಿಯಲಿದೆ 'ಲಾಕ್‌ಡೌನ್ 21 ಡೇಸ್'; ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?

ಕೊರೊನಾ ಕಾಲದ ಸಂಕಷ್ಟಕ್ಕೆ ಕನ್ನಡಿ ಹಿಡಿಯುವ 'ಲಾಕ್‌ಡೌನ್ 21 ಡೇಸ್' ಸಿನಿಮಾ

ʻಲಾಕ್‌ಡೌನ್‌ 21 ಡೇಸ್‌ʼ ಸಿನಿಮಾ ಕೊರೊನಾ ಕಾಲದ ಸಂಕಷ್ಟಗಳನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ಹಠಾತ್ ಲಾಕ್‌ಡೌನ್ ತಂದೊಡ್ಡಿದ ಆರ್ಥಿಕ ಹೊಡೆತ ಹಾಗೂ ಸಾಮಾನ್ಯ ಜನರ ನೋವಿನ ನಡುವೆ ಅರಳುವ ಪ್ರೇಮಕಥೆಯನ್ನು ನಿರ್ದೇಶಕರಾದ ಮಧುಮೋಹನ್ ಮತ್ತು ಮಾಚಯ್ಯ ತೆರೆಗೆ ತರುತ್ತಿದ್ದಾರೆ.

ʻಎಂದಿಗೂ ನಾನು ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವುದಿಲ್ಲ..ʼ; ʻಟಾಕ್ಸಿಕ್‌ʼ ಸಿನಿಮಾ ರಿಲೀಸ್‌ ಆದ್ಮೇಲೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಬಗ್ಗೆ ಭಾರಿ ಚರ್ಚೆ!

ʻಟಾಕ್ಸಿಕ್ʼ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೇ ವಿಡಿಯೋ ವೈರಲ್!

ʻಟಾಕ್ಸಿಕ್‌ʼ ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ‘ಟಾಕ್ಸಿಕ್’ ಬಿಡುಗಡೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆ, ಅವರ, "ನಾನು ಬರೆಯುವುದೇ ಒಂದು, ಶೂಟ್ ಮಾಡುವುದೇ ಇನ್ನೊಂದು" ಎಂಬ ಹೇಳಿದೆ ಮುನ್ನೆಲೆಗೆ ಬಂದಿವೆ. ಈ ಎಲ್ಲ ಚರ್ಚೆಗಳ ಹೊರತಾಗಿಯೂ, ಯಶ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆದಿದೆ.

Loading...