ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Kajal Aggarwal: ಸೌತ್‌ನವರ ಈ ಗುಣವನ್ನು ಬಾಲಿವುಡ್‌ ಕಲಿಯಬೇಕು ಎಂದ ಕಾಜಲ್ ಅಗರ್ವಾಲ್

ಸೌತ್‌ನವರ ಈ ಗುಣವನ್ನು ಬಾಲಿವುಡ್‌ ಕಲಿಯಬೇಕು ಎಂದ ಕಾಜಲ್!

Kajal Aggarwal: ಶುಭಂಕರ್ ಮಿಶ್ರಾ (Shubashankar Mishra) ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ, ಬಾಲಿವುಡ್‌ಗಿಂತ ದಕ್ಷಿಣ ಚಿತ್ರರಂಗಕ್ಕೆ ಆದ್ಯತೆ ನೀಡಿದ್ದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಬಾಲಿವುಡ್ ದಕ್ಷಿಣದಿಂದ ಸಮಯಪಾಲನೆಯನ್ನು ಕಲಿಯಬೇಕು. ಹಿಂದಿ ಸಿನಿಮಾಗಳಲ್ಲಿ ಯಾವುದೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಾನು ಸಮಯಕ್ಕೆ ಸರಿಯಾಗಿ ತಲುಪಲು ಒಗ್ಗಿಕೊಂಡಿದ್ದೇನೆ ಮತ್ತು ಅದು ನನಗೆ ಇಷ್ಟ. ಹಿಂದಿಯಲ್ಲಿ ಸಮಯ ತುಂಬಾ ಸರಿಯಿಲ್ಲ" ಎಂದು ಹೇಳಿದರು.

'ಹುಡ್ಗೀರು ಡೇಂಜರಸ್' ಅಂತ ಹಾಡಿದ ನಟ ʻನೀನಾಸಂʼ ಸತೀಶ್‌; ‘ಅಯೋಗ್ಯ 2’ ಚಿತ್ರದ ಮತ್ತೊಂದು ಕ್ಯಾಚಿ ಸಾಂಗ್‌ ರಿಲೀಸ್‌

'ಹುಡ್ಗೀರು ಡೇಂಜರಸ್' ಅಂತ ಹಾಡೋಕೆ ಶುರು ಮಾಡಿದ ನಟ ಸತೀಶ್‌ ʻನೀನಾಸಂʼ

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಚಿತ್ರದ ‘ಹುಡ್ಗೀರ್ ಡೇಂಜರಸ್’ ಎಂಬ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

Balakrishna: ಶೂಟಿಂಗ್ ಸೆಟ್​ನಲ್ಲಿ ಅವಘಡ; ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ ಜ್ಯೂ ಎನ್​​ಟಿಆರ್

ಶೂಟಿಂಗ್ ಸೆಟ್​ನಲ್ಲಿ ಅವಘಡ; ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ Jr NTR

NBK 111 : ಚಿತ್ರೀಕರಣದ ಸಮಯದಲ್ಲಿ ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ ಗಾಯಗೊಂಡಿದ್ದಾರೆ. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ. ಇದೀಗ ಜೂ ಎನ್​​ಟಿಆರ್ (Jr NTR) ಅವರು ಚಿಕ್ಕಪ್ಪನ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ್ದಾರೆ.ಜ್ಯೂ ಎನ್​​ಟಿಆರ್ ಮತ್ತು ಚಿಕ್ಕಪ್ಪ ಬಾಲಯ್ಯ ನಡುವೆ ಮುನಿಸು ಇತ್ತು ಎನ್ನಲಾಗಿತ್ತು. ಆದರೆ ಜ್ಯೂ ಎನ್​​ಟಿಆರ್ ಆ ಮುನಿಸು ಮರೆತು, ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ್ದಾರೆ.

'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್ ರಿಲೀಸ್: ಜುಲೈ 31ಕ್ಕೆ ತೆರೆಗೆ ಬರಲಿದೆ ಕುಮಾರ್ ಬಂಗಾರಪ್ಪ-ರಾಗಿಣಿ ಸಿನಿಮಾ!

ಕುಮಾರ್‌ ಬಂಗಾರಪ್ಪ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್‌ ರಿಲೀಸ್‌

ಸಾರ್ವಜನಿಕ ಪಡಿತರ ವ್ಯವಸ್ಥೆಯ ಲೋಪದೋಷಗಳು ಹಾಗೂ ಅವ್ಯವಹಾರಗಳ ಕುರಿತಾದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕುಮಾರ್ ಬಂಗಾರಪ್ಪ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ಈ ಸಾಮಾಜಿಕ ಕಳಕಳಿಯ ಚಿತ್ರವನ್ನು ಮಂಡ್ಯ ಗ್ರಾಮೀಣ ಭಾಗದಲ್ಲಿ 52 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

Lakshmi Nivasa Serial: ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ; ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ?

Lakshmi Nivasa: ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ!

Lakshmi Nivasa Serial: ಧಾರಾವಾಹಿಯ ಪ್ರತಿ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದ್ದು, ಅವ್ರದ್ದೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಈ ಸೀರಿಯಲ್ ಆರಂಭವಾದಾಗಿನಿಂದ ಒಂದು ರೀತಿಯಲ್ಲಿ ಸೈಕೋ ಗಂಡನ ರೀತಿಯಲ್ಲಿ ಜಯಂತ್‌ ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ ಗಂಡ ಕೊಟ್ಟ ಎಲ್ಲಾ ನೋವನ್ನು ಸಹಿಸಿಕೊಂಡು ಬರುತ್ತಿದ್ದವಳು ಜಾನು. ಯಾರಿಗೂ ಹೇಳಲು ಆಗದೆ ತನ್ನಲ್ಲಿಯೇ ಎಲ್ಲಾ ನೋವುಗಳನ್ನು ಇಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದ ಜಾನು ಈಗ ಫುಲ್‌ಸ್ಟಾಪ್‌ ಇಟ್ಟಿದ್ದಾಳೆ.

'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಸಾಂಗ್ ರಿಲೀಸ್: ಅಪ್ಪ ʻದುನಿಯಾʼ ವಿಜಯ್ ಕುಮಾರ್‌ ಬಗ್ಗೆ ಮಗಳು ಮೋನಿಷಾ ಹೇಳಿದ್ದೇನು?

ದುನಿಯಾ ವಿಜಯ್‌ ಪುತ್ರಿಯ ʻಸಿಟಿ ಲೈಟ್ಸ್ʼ ಚಿತ್ರದ ʻಕಂದಮ್ಮʼ ಸಾಂಗ್‌ ರಿಲೀಸ್

‘ದುನಿಯಾ’ ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ವಿನಯ್ ರಾಜ್‌ಕುಮಾರ್ ಹಾಗೂ ಮಗಳು ಮೋನಿಷಾ ನಟನೆಯ 'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತದ, ಸಂಜಿತ್ ಹೆಗಡೆ ಹಾಡಿರುವ ಈ ಗೀತೆಯನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್!

ದರ್ಶನ್ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ-ನಟಿ ರಕ್ಷಿತಾ ಪ್ರೇಮ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಮಂಗಳವಾರ (ಜುಲೈ 21) ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಖ್ಯಾತ ನಟಿ ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಪ್ರತ್ಯೇಕ ಕಾರುಗಳಲ್ಲಿ ಬಂದ ಇಬ್ಬರು ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ.

ಧ್ರುವ ಸರ್ಜಾ ಜೊತೆಗಿನ ಹೊಸ ಸಿನಿಮಾದಿಂದ ಹೊರಬಂದ ʻದುನಿಯಾʼ ಸೂರಿ; ʻಆಕ್ಷನ್‌ ಪ್ರಿನ್ಸ್‌ʼ ಫ್ಯಾನ್ಸ್‌ಗೆ ನಿರಾಸೆ!

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಸಿನಿಮಾದಿಂದ ಹೊರಬಂದ 'ದುನಿಯಾ' ಸೂರಿ!

Director Suri exits Dhruva Sarja film: ನಿರ್ದೇಶಕ 'ದುನಿಯಾ' ಸೂರಿ ಹಾಗೂ 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಸದ್ಯಕ್ಕೆ ರದ್ದಾಗಿದೆ. ಧ್ರುವ ಸರ್ಜಾ ಅಭಿನಯದ 'ಕ್ರಿಮಿನಲ್' ಸಿನಿಮಾ ಚಿತ್ರೀಕರಣ ತೀವ್ರ ವಿಳಂಬವಾಗುತ್ತಿರುವುದರಿಂದ, ಸಮಯ ಮತ್ತು ಹೂಡಿಕೆಯ ಹಿತದೃಷ್ಟಿಯಿಂದ ಸೂರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Yash: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡು ರಿಲೀಸ್; ಪ್ರಮೋದ್ ಮರವಂತೆ ಬರೆದ ಸಾಹಿತ್ಯಕ್ಕೆ ಫ್ಯಾನ್ಸ್ ಫಿದಾ, ಇಲ್ಲಿದೆ ಓದಿ ಫುಲ್‌ ಸಾಂಗ್!

Toxic ಚಿತ್ರಕ್ಕಾಗಿ ಪ್ರಮೋದ್‌ ಮರವಂತೆ ಬರೆದ ಹಾಡಿನ ಲಿರಿಕ್ಸ್‌ ಇಲ್ಲಿದೆ

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಎರಡನೇ ಹಾಡು 'ಮನಮೋಹಕ' ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ವಿರಹ ಹಾಗೂ ಹಂಬಲದ ಪ್ರೇಮಗೀತೆಯನ್ನು ಸಿದ್ಧಾರ್ಥ್ ಬಸ್ರೂರ್ ಅವರು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಹಾಡಿದ್ದಾರೆ.

'ಕರಾವಳಿ'‌ ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್; ಪ್ರಜ್ವಲ್‌ - ರಾಜ್‌ ಬಿ ಶೆಟ್ಟಿ ಸಿನಿಮಾ ನೋಡಿ ಮಂಗಳೂರು, ಶಿವಮೊಗ್ಗ ಜನತೆ ಹೇಳಿದ್ದೇನು?

ʻಕರಾವಳಿʼ ಚಿತ್ರದ ಪ್ರೀಮಿಯರ್ ಶೋಗೆ ಮಂಗಳೂರು, ಶಿವಮೊಗ್ಗ ಪ್ರೇಕ್ಷಕರು ಫಿದಾ

ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಚಿತ್ರದ ಪ್ರೀಮಿಯರ್ ಶೋಗಳು ಮಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಲ್ಲಿ ಯಶಸ್ವಿಯಾಗಿ ನೆರವೇರಿವೆ. ಜುಲೈ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಭಾವುಕ ಕಥೆ, ಮೇಕಿಂಗ್ ಹಾಗೂ 'ಮಹಾಬಲ'-'ಮಾವೀರ' ಪಾತ್ರಗಳಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಟಾಕ್ಸಿಕ್' ಚಿತ್ರದ 2ನೇ ಸಾಂಗ್ ರಿಲೀಸ್: ಯಶ್ - ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

ಟಾಕ್ಸಿಕ್ 2ನೇ ಸಾಂಗ್ ರಿಲೀಸ್; ಯಶ್-ತಾರಾ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ!

'ರಾಕಿಂಗ್ ಸ್ಟಾರ್' ಯಶ್ ಹಾಗೂ ತಾರಾ ಸುತಾರಿಯಾ ಅಭಿನಯದ 'ಟಾಕ್ಸಿಕ್' ಸಿನಿಮಾದ 'ಮನಮೋಹಕ' ಪ್ರೇಮಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. 'ತಬಾಹಿ' ಹಾಡಿನ ಯಶಸ್ಸಿನ ಬಳಿಕ ಮೂಡಿಬಂದಿರುವ ಈ ಮಧುರ ಗೀತೆಯು 'ರಾಯ' ಮತ್ತು 'ರಿಬೆಕಾ' ಪಾತ್ರಗಳ ಪ್ರೀತಿಯನ್ನು ತೋರಿಸಿದೆ.

ಗಾಯಕ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌; 'ಆವಾರಾಪನ್ 2' ಚಿತ್ರದ ಹೊಸ ಹಾಡಿಗೆ ಧ್ವನಿ

‌ʻಆವಾರಾಪನ್ 2ʼ ಸಿನಿಮಾದ ಹಾಡಿನ ಮೂಲಕ ಸಿಂಗರ್ ಅರಿಜಿತ್ ಸಿಂಗ್ ಕಂಬ್ಯಾಕ್!

ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ಹಠಾತ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದ ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್, ಇದೀಗ ಮತ್ತೆ ಮೈಕ್ ಹಿಡಿಯುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ 'ಆವಾರಾಪನ್ 2' ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಧ್ವನಿಯಾಗಿದ್ದಾರೆ.

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ!

Amruthdhaare Serial: ಅಮೃತಧಾರೆ (Aruthdhaare Serial) ಧಾರಾವಾಹಿಯಲ್ಲಿ ಭೂಮಿ ಮೇಲೆ ಕಥೆ ಸಾಗುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಹೀಗಾಗಿ ಈಗ ಗೌತಮ್‌ ಪ್ರೀತಿಗೆ ಭೂಮಿ ಗೆದ್ದೆ ಗೆಲ್ಲುತ್ತಾಳೆ.

Kantara Chapter 1: ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು

ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು

Kantara Chapter 1: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನ, ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಿರ್ಮಾಪಕರು ಬಿಡುಗಡೆ ಮಾಡಿದ "ಬ್ರಹ್ಮಕಲಶ" ಹಾಡು ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ಜನಪ್ರಿಯವಾಯಿತು. ಚಿತ್ರದ ಭಕ್ತಿಗೀತೆ ‘ಬ್ರಹ್ಮಕಲಶ’ (brahmakalasha) ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ರೀಲ್ಸ್‌ಗಳಲ್ಲಿ ಬಳಸಲ್ಪಟ್ಟ ಮೊದಲ ಕನ್ನಡ ಚಲನಚಿತ್ರ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Jana Nayagan glimpse: ಸಿಎಂ ಲುಕ್ ಹೈಲೈಟ್! ಶುರುವಾಯ್ತು ಹೊಸ ಚರ್ಚೆ

ಸಿಎಂ ಲುಕ್ ಹೈಲೈಟ್! ಶುರುವಾಯ್ತು ಹೊಸ ಚರ್ಚೆ

Jana Nayagan glimpse: ಎಚ್. ವಿನೋತ್ ನಿರ್ದೇಶನದ ಮತ್ತು ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಚಿತ್ರವು ಜುಲೈ 23 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಹಲವಾರು ರಾಜ್ಯಗಳಲ್ಲಿ ಪ್ರೀ ಬುಕಿಂಗ್‌ಗಳು ವೇಗವಾಗಿ ನಡೆಯುತ್ತಿದ್ದಂತೆ, ಹೊಸದಾಗಿ ಬಿಡುಗಡೆಯಾದ ಗ್ಲಿಂಪ್ಸ್ ವಿಜಯ್ ಅವರ ಪೂರ್ಣ ಸಮಯದ ರಾಜಕೀಯ ಪ್ರಯಾಣ, ಕೊನೆಯ ಚಿತ್ರ ಯಾವುದು ಎಂಬುದರ ಸುತ್ತಲಿನ ಬಝ್ ಅನ್ನು ಮತ್ತಷ್ಟು ಹೆಚ್ಚಿಸಿದೆ.ರಾಜಕೀಯ ಶೈಲಿಯ ದೃಶ್ಯಗಳು ಮತ್ತು ಶೀರ್ಷಿಕೆಯೊಂದಿಗೆ ಪ್ರೋಮೋ ಚರ್ಚೆಯನ್ನು ಹುಟ್ಟುಹಾಕಿದೆ.

Ramayana Movie 2026: ಕೊನೆಗೂ ರಾಮಾಯಣದ ಜಟಾಯು ಪಾತ್ರದ ರಹಸ್ಯ ಬಯಲು!

ಕೊನೆಗೂ ರಾಮಾಯಣದ ಜಟಾಯು ಪಾತ್ರದ ರಹಸ್ಯ ಬಯಲು!

Ramayana Movie 2026: ನಿತೇಶ್ ತಿವಾರಿ ಅವರ ರಾಮಾಯಣವು 2026 ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ತಾರಾಬಳಗ ಹೊಂದಿರುವ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ಈಗ, ಹಿರಿಯ ನಟ ಅನುಪಮ್ ಖೇರ್ ಕೂಡ ಈ ಯೋಜನೆಯ ಭಾಗವಾಗಿದ್ದಾರೆ ಎಂದು ತಿಳಿದುಬಂದಿದೆ.

Actor Hrithik: ಗಾಯಕ ಮೋಹನ್ ಕೃಷ್ಣ ಪುತ್ರ ಆತ್ಮಹತ್ಯೆ? ಮಂಡ್ಯ ರಮೇಶ್ ಸಂತಾಪ

ಗಾಯಕ ಮೋಹನ್ ಕೃಷ್ಣ ಪುತ್ರ ಆತ್ಮಹತ್ಯೆ? ಮಂಡ್ಯ ರಮೇಶ್ ಸಂತಾಪ

Actor Hrithik: ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್. ಹೃತಿಕ್ ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ʻಮಗನಿಗೆ ನನ್ನ ಸಿನಿಮಾಗಳಿಂದ ಮುಜುಗರ ಆಗಬಾರದುʼ; ಬೋಲ್ಡ್‌ ಇಂಟಿಮೇಟ್ ದೃಶ್ಯಗಳಿಗೆ 'ನೋ' ಎಂದ ಕಾಜಲ್ ಅಗರ್ವಾಲ್

ʻಮಗನಿಗೆ ನನ್ನ ಸಿನಿಮಾ ನೋಡಿ ಮುಜುಗರ ಆಗಬಾರದುʼ ಎಂದ ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಅವಕಾಶ ಬಂದರೂ ಪರದೆಯ ಮೇಲೆ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಲ್ಕು ವರ್ಷದ ಮಗ ನೀಲ್ ಬೆಳೆದು ದೊಡ್ಡವನಾದ ಮೇಲೆ ತಮ್ಮ ಸಿನಿಮಾಗಳನ್ನು ನೋಡಿ ಮುಜುಗರ ಪಟ್ಟುಕೊಳ್ಳಬಾರದು ಎಂಬ ಕಾರಣಕ್ಕೆ ಈ ವೈಯಕ್ತಿಕ ಗಡಿಗಳನ್ನು ವಿಧಿಸಿಕೊಂಡಿರುವುದಾಗಿ ತಿಳಿಸಿದ್ಧಾರೆ.

Ramayana trailer: ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ  ಫಿದಾ! ಯಶ್‌ ಬಗ್ಗೆ ಏನಂದ್ರು?

ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ ಫಿದಾ! ಯಶ್‌ ಬಗ್ಗೆ ಏನಂದ್ರು?

Ramayana trailer: ನಿರ್ದೇಶಕ ಅಟ್ಲೀ ಟ್ರೈಲರ್‌ ಅನ್ನು ಆಗಲೇ ವೀಕ್ಷಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಾಮಾಯಣ: ಭಾಗ 1 ದೀಪಾವಳಿ ಹಬ್ಬದಂದು ನವೆಂಬರ್ 8, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ (theatre) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ.

ರಿಷಬ್ ಶೆಟ್ಟಿಯ ʻಛತ್ರಪತಿ ಶಿವಾಜಿʼ ಸಿನಿಮಾ ಬಜೆಟ್‌ 500 ಕೋಟಿ! ಈ ಚಿತ್ರಕ್ಕಾಗಿ ಭಾರತಕ್ಕೆ ಬರಲಿದೆ 'ಗೇಮ್ ಆಫ್ ಥ್ರೋನ್ಸ್' ಸ್ಟಂಟ್ ಟೀಮ್

ʻಛತ್ರಪತಿ ಶಿವಾಜಿʼ ಚಿತ್ರಕ್ಕೆ ʻಗೇಮ್ ಆಫ್ ಥ್ರೋನ್ಸ್ʼ ಟೀಮ್‌ ಎಂಟ್ರಿ

'ಕಾಂತಾರ' ನಟ ರಿಷಬ್ ಶೆಟ್ಟಿ ನಟನೆಯ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವು ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. 'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ಹಾಲಿವುಡ್ ಸ್ಟಂಟ್ ತಂಡ ಯುದ್ಧ ದೃಶ್ಯಗಳಿಗೆ ಸಾಥ್ ನೀಡಲಿದ್ದು, ಈ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದೆ.

Kannada serial: ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

Kannada serial: ಜಗದ್ಧಾತ್ರಿ’ ಧಾರಾವಾಹಿ ಬರ್ತಾ ಇರೋದು ಗೊತ್ತೇ ಇದೆ. ಈಗಾಗಲೇ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಇದಕ್ಕಾಗಿ ಯಾವ ಸೀರಿಯಲ್​ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್​ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈ ಧಾರಾವಾಹಿ ಅಂತ್ಯ ಆಗ್ತಿಲ್ಲ ಎನ್ನಲಾಗುತ್ತಿದೆ.

'ಲಾಕ್ ಅಪ್ 2' ಶೋನಲ್ಲಿ ಒಂದು ಮುತ್ತಿನ ಕಥೆ! ಕಿಸ್ ಕೊಟ್ಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ, ಪತಿ ಪರ ಬ್ಯಾಟ್‌ ಬೀಸಿದ ಗೌತಮಿ ಕಪೂರ್

ಅನುಮತಿ ಇಲ್ಲದೇ ಕಿಸ್‌ ಕೊಟ್ಟ ನಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ

'ಲಾಕ್ ಅಪ್: ಸಚ್ ಯಾ ಸಜಾ' ಸೀಸನ್ 2 ರಿಯಾಲಿಟಿ ಶೋನಲ್ಲಿ ಹಿರಿಯ ನಟ ರಾಮ್ ಕಪೂರ್ ತಮ್ಮ ಅನುಮತಿಯಿಲ್ಲದೆ ಅಸಭ್ಯವಾಗಿ ಮುತ್ತು ನೀಡಿದ್ದಾರೆ ಎಂದು ಸಹ-ಸ್ಪರ್ಧಿ ಶ್ರೇಯಾ ಕಾಲ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಮ್ ಪತ್ನಿ ಗೌತಮಿ ಕಪೂರ್ ತಮ್ಮ ಪತಿಯ ಪರ ಮಾತನಾಡಿದ್ದಾರೆ.

ʻವಾರಣಾಸಿʼ ಡೈರೆಕ್ಟರ್‌ ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್‌ ಚಾನ್ಸ್‌ ಕೇಳಿದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು!

ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಕೇಳಿದ‌ ಪಿ. ವಿ. ಸಿಂಧು!

ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಜಪಾನ್ ಓಪನ್ ಸೂಪರ್-750 ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಎರಡು ವರ್ಷಗಳ ಸುದೀರ್ಘ ಫಾರ್ಮ್ ಕೊರತೆಯ ನಂತರ ಯಮಗುಚಿ ವಿರುದ್ಧ ಭರ್ಜರಿ ಜಯ ಗಳಿಸಿದ ಸಿಂಧು ಅವರಿಗೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡʼ ಶೋ ಆರಂಭದ ಬಗ್ಗೆ ಇಲ್ಲಿದೆ ಬಿಗ್‌ ಅಪ್ಡೇಟ್‌; ಕಿರುತೆರೆಯ ಈ ಅತಿದೊಡ್ಡ ಶೋ ಮೂಲಕ ನಿರೂಪಕರಾದ ಸೌರವ್‌ ಗಂಗೂಲಿ

ʻಬಿಗ್‌ ಬಾಸ್‌' ಪ್ರಿಯರಿಗೆ ಇಲ್ಲಿದೆ ಬಿಗ್ ಅಪ್ಡೇಟ್; ಈ ಶೋ ಯಾವಾಗ ಶುರು?

ಜಿಯೋಸ್ಟಾರ್ ಸಂಸ್ಥೆಯು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದು, ಕಿಚ್ಚ ಸುದೀಪ್ ಸಾರಥ್ಯದ 'ಬಿಗ್ ಬಾಸ್ ಕನ್ನಡ' ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳ ಹೊಸ ಸೀಸನ್‌ಗಳು ಮುಂಬರುವ ಸೆಪ್ಟೆಂಬರ್‌ನಿಂದ ಜಿಯೋಹಾಟ್‌ಸ್ಟಾರ್ ಒಟಿಟಿ ಹಾಗೂ ಜಿಯೋಸ್ಟಾರ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿವೆ.

Loading...