ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಸ್ಯಾಂಡಲ್‌ವುಡ್‌ಗೆ ಮರಳಿದ ʻಕೆಜಿಎಫ್‌ʼ ಚೆಲುವೆ ಶ್ರೀನಿಧಿ ಶೆಟ್ಟಿ; ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ ಅನೂಪ್‌ ಭಂಡಾರಿ!

ಸ್ಯಾಂಡಲ್‌ವುಡ್‌ಗೆ ಮರಳಿದ ಶ್ರೀನಿಧಿ ಶೆಟ್ಟಿ; ಯಾವುದು ಆ ಸಿನಿಮಾ?

ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿದ್ದ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಇದೀಗ ಭಂಡಾರಿ ಸಹೋದರರ ನೂತನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ‌ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ.

ʻರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ’: ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ಮಾತು

ʻರಾವಣನ ಪಾತ್ರಕ್ಕೆ ನಾನೇ ಬೆಸ್ಟ್ʼ; 'ಆಪ್ ಕಿ ಅದಾಲತ್' ಶೋನಲ್ಲಿ ಯಶ್ ಮಾತು

'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ತಾವು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ರಭು ಶ್ರೀರಾಮನ ದೈವಿಕತೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಎದುರಾಳಿ ರಾವಣ ಅಷ್ಟೇ ಪ್ರಬಲವಾಗಿರಬೇಕು ಎಂದು ಯಶ್‌ ಹೇಳಿದ್ದಾರೆ.

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡೋದ್ಯಾರು? ಕುತೂಹಲ ಮೂಡಿಸಿದ‌ ನಿರ್ದೇಶಕ ಪ್ರಶಾಂತ್ ವರ್ಮಾ ಪ್ಲ್ಯಾನ್!

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಚಿತ್ರದಲ್ಲಿ ರಾಮನ ಪಾತ್ರ ಮಾಡೋದ್ಯಾರು?

'ಹನು-ಮಾನ್' ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ನಟಿಸುತ್ತಿದ್ದಾರೆ. ಈ ಪೌರಾಣಿಕ ಸಿನಿಮಾದಲ್ಲಿ ಅತ್ಯಂತ ಮಹತ್ವದ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಉದ್ಘಾಟನೆ; ಭಾರತದ ಶ್ರೀಮಂತ ಕಲೆ, ಕರಕುಶಲ ಮತ್ತು ಕೈಮಗ್ಗ ಪರಂಪರೆಯ ಅನಾವರಣ

ಬೆಂಗಳೂರಿನಲ್ಲಿ ‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಉದ್ಘಾಟನೆ

ದೇಶದ ಕುಶಲಕರ್ಮಿಗಳು ಮತ್ತು ಕಲಾವಿದ ರಿಗೆ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಜನರಿಗೆ ಪರಿಚಯಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು. ಭಾರತೀಯ ಕರಕುಶಲ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳ ಜೀವನೋಪಾಯಕ್ಕೆ ನೆರವಾಗು ವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು

Pavithra Bandhana:  ಪವಿತ್ರ ಬಂಧನಕ್ಕೆ ಹೊಸ ಸಮಯ! ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಪವಿತ್ರ ಬಂಧನಕ್ಕೆ ಹೊಸ ಸಮಯ! ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Pavithra Bandhana: ಕಲರ್ಸ್ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿ, ಇನ್ನು ಮುಂದೆ ಹೊಸ ಸಮಯದಲ್ಲಿ ವೀಕ್ಷಕರನ್ನು ರಂಜಿಸಲಿದೆ. ಸೋಮವಾರದಿಂದ ‘ಪವಿತ್ರ ಬಂಧನ’ ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಪ್ರೀತಿಯ ಕನಸುಗಳ ನಡುವೆ, ಪರಿಸ್ಥಿತಿಯ ಒತ್ತಡದಿಂದಾಗಿ ಆಕೆ ದೇವದತ್‌ನನ್ನು ಮದುವೆಯಾಗುವ ಅನಿವಾರ್ಯತೆಗೆ ಸಿಲುಕುತ್ತಾಳೆ.

Trisha: ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಅಪ್ಪ- ಅಮ್ಮನ ಪಕ್ಕದಲ್ಲೇ ಬಂದು ಕುಳಿತ ತ್ರಿಶಾ!

ಮತ್ತೆ ಸಿಎಂ ವಿಜಯ್ ಅಪ್ಪ- ಅಮ್ಮನ ಪಕ್ಕದಲ್ಲೇ ಬಂದು ಕುಳಿತ ತ್ರಿಶಾ!

Vijay: ಶನಿವಾರ ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಕಾರ್ಯಕ್ರಮದ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಬ್ರೇಕಪ್ ರೂಮರ್ಸ್ ಬೆನ್ನಲ್ಲಿಯೇ ನಟಿ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಇವೆಂಟ್​ನಲ್ಲಿ ಭಾಗಿಯಾಗಿದ್ದು ಮೊದಲ ಸೀಟ್​​ನಲ್ಲಿಯೇ ಕುಳಿತುಕೊಂಡಿದ್ದರು.

Bigg Boss Kannada 13: ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

Bigg Boss Kannada 13: ಬಿಗ್‌ಬಾಸ್ ಕನ್ನಡ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಪ್ರತಿ ಸೀಸನ್‌ನಲ್ಲೂ ಹೊಸತನದ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿಯಾಗಿರುವುದು ಇದೀಗ ಬಿಡುಗಡೆಯಾಗಿರುವ ಅಗ್ನಿ ಪರೀಕ್ಷೆ ಹೊಸ ಪ್ರೋಮೋ.

Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಟ; ಟೀಕಿಸಿದ ಪತ್ನಿ

Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಟ; ಟೀಕಿಸಿದ ಪತ್ನಿ

Govinda: ಗೋವಿಂದ ಅವರ ಪತ್ನಿ ಸುನಿತಾ ಅಹುಜಾ , ನಟ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗೆ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂಬ ವದಂತಿಗಳ ನಡುವೆ, ಅವರಿಬ್ಬರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ್ದಾರೆ. ಶುಕ್ರವಾರ ಮುಂಬೈನಲ್ಲಿ ನಡೆದ ಪಾಪರಾಜಿ ಸಂವಾದದ ಸಂದರ್ಭದಲ್ಲಿ, ಸುನಿತಾ, ಗೋವಿಂದ "ತನ್ನ ಮಗಳಾಗುವಷ್ಟು ಚಿಕ್ಕ ವಯಸ್ಸಿನ ಹುಡುಗಿಯ ಜೊತೆ ಸುತ್ತಾಡುತ್ತಿದ್ದಾರೆ" ಎಂದು ಹೇಳಿದರು. ಈ ರೀತಿ ಹೇಳಿಕೆ ನೀಡುವ ಮೂಲಕ ಗೋವಿಂದ ಮೇಲೆ ತಮಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

Bigg Boss: ಹಿಂದಿ ಬಿಗ್ ಬಾಸ್ ಮನೆಗೆ  ಲಲಿತ್ ಮೋದಿ ಎಂಟ್ರಿ?

ಹಿಂದಿ ಬಿಗ್ ಬಾಸ್ ಮನೆಗೆ ಲಲಿತ್ ಮೋದಿ ಎಂಟ್ರಿ?

Bigg Boss: ಐಪಿಎಲ್ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್ ಮೋದಿ (Lalit Modi) ಮುಂಬರುವ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲಲಿತ್ ಮೋದಿ ಈಗ ಈ ಸುದ್ದಿ ಫೆಕ್‌ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ತಮ್ಮನ್ನು ಸಂಪರ್ಕಿಸಿಲ್ಲ ಮತ್ತು ಅದರಲ್ಲಿ ಭಾಗವಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

Bigg boss Kannada 13: ಬಿಗ್ ಬಾಸ್ ಮನೆಯಲ್ಲಿ ಒಬ್ಬರಾಗೋದು ಸುಲಭ ಅಲ್ಲ! ಯಾರು ಈ ಹೇಮಲತಾ ?

ಬಿಗ್ ಬಾಸ್ ಮನೆಯಲ್ಲಿ ಒಬ್ಬರಾಗೋದು ಸುಲಭ ಅಲ್ಲ! ಯಾರು ಈ ಹೇಮಲತಾ ?

Bigg boss Kannada 13: ಬಿಗ್‌ ಬಾಸ್‌ ಮನೆಯ ಸ್ಟಾರ್‌ ಕಂಟೆಸ್ಟಂಟ್‌ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್‌ ಗೌಡ ಅವರು ಬಿರುದು ಕೊಟ್ಟಿದ್ದಾರೆ.ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲೇ ಈಗ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

Amruthadhaare Serial: ಜೈದೇವ್ ಕಥೆ ಫಿನಿಶ್‌; ಮಲ್ಲಿ ತನಿಖೆ ಶುರು, ಜೀವ ಕೊಟ್ಟೇ ಬಿಟ್ಟ ಬಿಗ್‌ ಟ್ವಿಸ್ಟ್‌!

ಜೈದೇವ್ ಕಥೆ ಫಿನಿಶ್‌; ಜೀವ ಕೊಟ್ಟೇ ಬಿಟ್ಟ ಬಿಗ್‌ ಟ್ವಿಸ್ಟ್‌!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೊಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ಗೆ ಜೀವಾಯಿಂದಲೇ ಕಂಟಕ ಎದುರಾದಂತಿದೆ. ಇದೀಗ ಮಲ್ಲಿ ಬಲಿ ಜೀವಾ, ಜೈದೇವ್‌ ಕುರಿತಾಗಿ ಮಾತನಾಡಿದ್ದಾನೆ. ಜೈದೇವ್ - ಜೀವ ಜಿದ್ದಾ – ಜಿದ್ದಿಗೆ ಭೂಮಿ ಸಾಕ್ಷಿ ಆಗಲಿದ್ದಾಳಾ?

7 ವರ್ಷಗಳ ನಂತರ ಇನ್‌ಸ್ಟಾಗ್ರಾಮ್ DP ಬದಲಿಸಿದ ನಟ ಪ್ರಭಾಸ್: 'ಫೌಜಿ' ಮೇನಿಯಾ ಶುರು ಎಂದ ‌‘ಡಾರ್ಲಿಂಗ್‌’ ಫ್ಯಾನ್ಸ್

Fauji Movie: 7 ವರ್ಷದ ಬಳಿಕ ಸೋಷಿಯಲ್ ಮೀಡಿಯಾ DP ಬದಲಿಸಿದ ಪ್ರಭಾಸ್

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಏಳು ವರ್ಷಗಳ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ 'ಬಾಹುಬಲಿ' ಪ್ರೊಫೈಲ್ ಚಿತ್ರವನ್ನು ಬದಲಿಸಿ, ಮುಂಬರುವ 'ಫೌಜಿ' ಚಿತ್ರದ ರಗಡ್ ಸೈನಿಕನ ಲುಕ್ ಅಪ್‌ಡೇಟ್ ಮಾಡಿದ್ದಾರೆ. ಹನು ರಾಘವಪೂಡಿ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಡಿಸೆಂಬರ್ 3ರಂದು ಬಿಡುಗಡೆಯಾಗಲಿದೆ.

Bigg Boss Kannada 13: ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!

ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!

Bigg Boss Kannada 13: ನಸಾಮನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದೆ ‘ಬಿಗ್‌ ಬಾಸ್‌’ ತಂಡ. ಸಂಗೀತಾ ಶೃಂಗೇರಿ ಮತ್ತು ವಿನಯ್‌ ಗೌಡ ಈ ಬಾರಿ ಅವರೇ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಸೆಟ್‌ನಲ್ಲೇ ವಿನಯ್ ವಿರುದ್ಧ ಗರಂ ಆಗಿದ್ದಾರೆ.

Cocktail 2 OTT release: ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Cocktail 2 OTT release: 'ಕಾಕ್‌ಟೇಲ್ 2' ಅನ್ನು ದಿನೇಶ್ ವಿಜನ್, ಲವ್ ರಂಜನ್, ಪ್ರಮಿತಾ ಆರ್ ವಿಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ. ಕಾಕ್‌ಟೇಲ್ 2, 2012ರ ಕಲ್ಟ್2012ರ ಜುಲೈ 13ರಂದು ತೆರೆಕಂಡ ಮೂಲ​​ ಚಿತ್ರದಲ್ಲಿ ದೀಪಿಕಾ ಪಡುಕೋಣೆ​​ ವೆರೋನಿಕಾ ಪಾತ್ರದಲ್ಲಿ, ಸೈಫ್ ಅಲಿ ಖಾನ್ ಅವರು ಗೌತಮ್ ಕಪೂರ್ (ಗುಟ್ಲು) ಪಾತ್ರದಲ್ಲಿ ಮತ್ತು ಡಯಾನಾ ಪೆಂಟಿ ಅವರು ಕಾಯ್ ಮೀರಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಹಿಟ್ ಅಗಿ ಮೂವರಿಗೂ ಹೆಸರು ತಂದುಕೊಟ್ಟಿತ್ತು. ಹಿಟ್ ಕಾಕ್‌ಟೇಲ್‌ನ ಸೀಕ್ವೆಲ್​. ಆದ್ರೆ ಇದು ಮೊದಲ ಭಾಗದ ಮುಂದುವರಿದ ಕಥೆಯಲ್ಲ.

BISFF 2026ಕ್ಕೆ ಚಾಲನೆ: ಜಾಗತಿಕ ಕಿರುಚಿತ್ರಗಳು, AI ಮತ್ತು ಹೊಸ ಸಿನಿಮಾ ಸಂವಾದಕ್ಕೆ ವೇದಿಕೆ

ಜಾಗತಿಕ ಕಿರುಚಿತ್ರಗಳು, AI ಮತ್ತು ಹೊಸ ಸಿನಿಮಾ ಸಂವಾದಕ್ಕೆ ವೇದಿಕೆ

ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಪ್ರಸ್ತುತಿಯಲ್ಲಿ ನಡೆಯುತ್ತಿರುವ BISFF 2026, ಆ. 6ರಿಂದ 16ರವರೆಗೆ ಆನ್‌ಲೈನ್ ಹಾಗೂ ಆ.13ರಿಂದ 16ರವರೆಗೆ ಬೆಂಗಳೂರಿನ ವಿವಿಧ ಸಾಂಸ್ಕೃತಿಕ ಮತ್ತು ಸಿನಿಮಾ ಕೇಂದ್ರ ಗಳಲ್ಲಿ ನಡೆಯಲಿದೆ. ಈ ವರ್ಷದ ಚಿತ್ರೋತ್ಸವಕ್ಕೆ 100ಕ್ಕೂ ಹೆಚ್ಚು ದೇಶಗಳಿಂದ 3,300ಕ್ಕೂ ಅಧಿಕ ಚಿತ್ರಗಳು ಬಂದಿದ್ದು, ಅವುಗಳಲ್ಲಿ ಆಯ್ಕೆಯಾದ ಕೃತಿಗಳು ಭಾಷೆ, ಗಡಿ, ಗುರುತು ಮತ್ತು ಸಿನಿಮೀಯ ಅಭಿವ್ಯಕ್ತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.

ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ನಟ ಯಶ್ ಅಂದು ಹೋಗಲಿಲ್ಲ ಏಕೆ? ಕಾರಣ ಬಹಿರಂಗಪಡಿಸಿದ ʻರಾಕಿ ಭಾಯ್ʼ!‌

ಅಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ಯಶ್ ಹೋಗಲಿಲ್ಲ ಏಕೆ?

ʻರಾಕಿಂಗ್ ಸ್ಟಾರ್ʼ ಯಶ್ ಅವರು 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ಈ ಹಿಂದೆ ಮಂಡ್ಯದ ಅಭಿಮಾನಿ ರಾಮಕೃಷ್ಣ ಅವರ ಅಂತ್ಯಕ್ರಿಯೆಗೆ ತಾವು ಹೋಗದಿರಲು ಇದ್ದ ಬಲವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆತ್ಮಹತ್ಯೆಯಂತಹ ದುಡುಕಿನ ಕೃತ್ಯಗಳಿಗೆ ಹಾಜರಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Priyanka Chopra: ಶ್ರೀದೇವಿ ಜನ್ಮದಿನ; 'ಎಂಪ್ರೆಸ್' ಬಯಾಗ್ರಫಿ ಕವರ್ ಪೇಜ್ ರಿಲೀಸ್

ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ನಮನ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಅವರು "ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ"ಯ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಇದು ದಿವಂಗತ ನಟಿಯ ಐದು ದಶಕಗಳ ವೃತ್ತಿಜೀವನ ಕುರಿತ ಕಥೆಯಾಗಿದೆ. ಶ್ರೀದೇವಿ ಅವರ ಜೀವನ ಆಧಾರಿತ ಮುಂಬರುವ 'ಎಂಪ್ರೆಸ್' ಬಯಾಗ್ರಫಿಯ ಮೊದಲ ನೋಟವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗದ ಈ ಮಹಾನ್ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

IFFM 2026ರಲ್ಲಿ ರಿಷಬ್ ಶೆಟ್ಟಿಗೆ ಡಬಲ್ ಧಮಾಕ: ‘ಲೀಡರ್‌ಶಿಪ್ ಇನ್ ಸಿನಿಮಾ’ ಜೊತೆಗೆ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ರಿಷಬ್‌ಗೆ 2 ಪ್ರಶಸ್ತಿ!

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಪ್ರತಿಷ್ಠಿತ 'NAB IFFM Awards 2026' ಸಮಾರಂಭದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಎರಡು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಚಿತ್ರರಂಗದ ಅನುಪಮ ಸೇವೆಗಾಗಿ 'ಲೀಡರ್‌ಶಿಪ್ ಇನ್ ಸಿನಿಮಾ' ಹಾಗೂ 'ಕಾಂತಾರ: ಚಾಪ್ಟರ್ 1' ಚಿತ್ರದ ಅಪೂರ್ವ ಮೇಕಿಂಗ್‌ಗಾಗಿ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

‘ನಾನು ಇಂದಿಗೂ ಶಾರುಖ್ ಫ್ಯಾನ್, ನಮ್ಮ ಹಿರಿಯರಿಗಿಂತ ನಾನೇ ದೊಡ್ಡವನು ಅಂದುಕೊಂಡ ದಿನವೇ ನನ್ ಕಥೆ ಮುಗೀತು’; ‘ಆಪ್ ಕಿ ಅದಾಲತ್’ನಲ್ಲಿ ಯಶ್‌ ಓಪನ್‌ ಟಾಕ್!

ʻಆಪ್ ಕಿ ಅದಾಲತ್‌ʼ ಶೋನಲ್ಲಿ ಶಾರುಖ್‌ ಖಾನ್ ಬಗ್ಗೆ ನಟ ಯಶ್ ಹೇಳಿದ್ದೇನು?

ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ 'ಆಪ್ ಕಿ ಅದಾಲತ್' ಕಾರ್ಯಕ್ರಮದ ಕಟಕಟೆಯಲ್ಲಿ ಕಾಣಿಸಿಕೊಂಡ ಮೊಟ್ಟಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಶಾರುಖ್ ಖಾನ್ ಅವರ 'ಝೀರೋ' ಎದುರು ಕೆಜಿಎಫ್ ಗೆದ್ದರೂ, ಹಿರಿಯ ನಟರನ್ನು ಗೌರವಿಸುವುದಾಗಿ ಯಶ್ ವಿನಮ್ರತೆ ಮೆರೆದಿದ್ದಾರೆ.

ʻಟಾಕ್ಸಿಕ್ʼ ಶೂಟಿಂಗ್‌ ಟೈಮ್‌ನಲ್ಲಿ ಗರ್ಭಿಣಿ ಕಿಯಾರಾ ಅಡ್ವಾಣಿಗೆ ಬಾಡಿಗಾರ್ಡ್ ಆಗಿದ್ದ ಯಶ್: ಬಾಲಿವುಡ್‌ ನಟಿಯ ಡೆಡಿಕೇಷನ್‌ಗೆ ʻರಾಕಿಂಗ್ ಸ್ಟಾರ್ʼ ಫಿದಾ!

'ಟಾಕ್ಸಿಕ್' ಶೂಟಿಂಗ್ ‌ವೇಳೆ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್‌ ಆಗಿದ್ದ ಯಶ್!

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರೀಕರಣದ ವೇಳೆ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಬದ್ಧತೆಯನ್ನು ನಟ ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಸೆಟ್‌ನಲ್ಲಿ ಕಿಯಾರಾಗೆ ಬೌನ್ಸರ್‌ನಂತೆ ಕಾಳಜಿ ವಹಿಸಿದ್ದಾಗಿ ತಿಳಿಸಿದರು.

Yash: ʻಟಾಕ್ಸಿಕ್‌ʼ ಸಿನಿಮಾಗೆ ಸಿಕ್ತು ʻಎʼ ಸರ್ಟಿಫಿಕೇಟ್! 3.14 ಗಂಟೆ ಅವಧಿಯ ಈ ಚಿತ್ರದ ಒಂದೆಳೆ ಏನು?

Yash: ʻಟಾಕ್ಸಿಕ್ʼ ಸಿನಿಮಾಗೆ ‘A’ ಸರ್ಟಿಫಿಕೇಟ್; ಈ ಚಿತ್ರದ ಅವಧಿ ಎಷ್ಟು?

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ದೊರೆತಿದೆ. 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ತಂದೆ-ಮಗನಾಗಿ ಯಶ್ ಅಭಿನಯಿಸಿದ್ದಾರೆ.

29 ವರ್ಷಗಳ ನಂತರ ʻಅಮೆರಿಕಾ ಅಮೆರಿಕಾʼ ಚಿತ್ರಕ್ಕೆ ಸಿಕ್ವೇಲ್;‌ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

29 ವರ್ಷಗಳ ಬಳಿಕ ʻಅಮೆರಿಕಾ ಅಮೆರಿಕಾʼ ಸೀಕ್ವೆಲ್; ಬಿಡುಗಡೆ ದಿನಾಂಕ ಘೋಷಣೆ

ಕನ್ನಡ ಚಿತ್ರರಂಗದ ಸರ್ವಕಾಲಿಕ ಹಿಟ್‌ ಸಿನಿಮಾ 'ಅಮೆರಿಕಾ ಅಮೆರಿಕಾ' ಬಿಡುಗಡೆಯಾಗಿ 29 ವರ್ಷಗಳ ನಂತರ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ತೆರೆಗೆ ಬರಲು ಸಜ್ಜಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕಾಂಬಿನೇಷನ್‌ನ ಈ 7ನೇ ಚಿತ್ರದ 'ರನ್ ರನ್' ಗೀತೆ ಬಿಡುಗಡೆಯಾಗಿದ್ದು, ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸಿರುವ ಈ ಸಿನಿಮಾವನ್ನುಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಲಿದೆ.

ನಟ ದರ್ಶನ್ ಜೈಲು ಸೇರಿ ಇಂದಿಗೆ 1 ವರ್ಷ: ʻನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲʼ ಎಂದು ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್

ದರ್ಶನ್ ಜೈಲು ಸೇರಿ 1 ವರ್ಷ; 'ನೋವು ತಾಳಲು ಸಾಧ್ಯವಾಗುತ್ತಿಲ್ಲ' ಎಂದ ಪತ್ನಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಭರ್ತಿ ಒಂದು ವರ್ಷ ಪೂರೈಸಿದ್ದು, ಪತ್ನಿ ವಿಜಯಲಕ್ಷ್ಮಿ "ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಕಾಲ ಮತ್ತು ದೇವರಿಗೆ ಎಲ್ಲವನ್ನು ಬಿಟ್ಟಿದ್ದೇನೆ" ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತ ಸಹ-ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ವಿರೋಧಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಸೋನು ನಿಗಮ್?

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಗಾಯಕ?

Sonu Nigam: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಕುರಿತು ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯ ಬಗ್ಗೆ ಸೋನು ನಿಗಮ್ ಪ್ರತಿಕ್ರಿಯೆ ನೀಡದೇ ಇರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಸೋನು ಈಗ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ.

Loading...