ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Lenin Movie OTT : ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Lenin Movie OTT : ಅಖಿಲ್ ಅಕ್ಕಿನೇನಿ (akhil akkineni) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು 'ಲೆನಿನ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ್ದಾರೆ. ಮುರಳಿ ಕಿಶೋರ್ ಅಬ್ಬೂರ್ ನಿರ್ದೇಶನದ ಈ ಮಾಸ್ ಆಕ್ಷನ್ ಎಂಟರ್‌ಟೈನರ್ ಈಗ ಒಟಿಟಿಯಲ್ಲಿ ರಂಜಿಸಲು ಸಿದ್ಧವಾಗಿದೆ. ಅಖಿಲ್ ತಮ್ಮ ಹೊಸ ಗೆಟಪ್ ಮತ್ತು ಆಕ್ಷನ್ ಅಭಿನಯದಿಂದ ಮಾಸ್ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಭಾಮಾ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಅಖಿಲ್ ಅವರನ್ನು ರಂಜಿಸಿದರೆ, ಎಸ್. ಥಮನ್ ಅವರ ಮಾಸ್ ಬೀಟ್ಸ್ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು.

Ramayana Movie: ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ!  ವಿಶೇಷತೆ ಏನು?

ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ! ವಿಶೇಷತೆ ಏನು?

Ramayana Movie: ರಾಮಾನಂದ ಸಾಗರ್ ಅವರ ಟಿವಿ ಸರಣಿ ರಾಮಾಯಣವು ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಧಾರಾವಾಹಿಯಾಗಿ ಉಳಿದಿದೆ. 1987-88ರ ಅವಧಿಯಲ್ಲಿ ಪ್ರಸಾರವಾದ ಈ ಸರಣಿಯು ಇನ್ನೂ ಯಾವುದೇ ಭಾರತೀಯ ಧಾರಾವಾಹಿಯ ಅತ್ಯಧಿಕ ಟಿಆರ್‌ಪಿಯನ್ನು ಹೊಂದಿದೆ. 2020 ರಲ್ಲಿ ಕೊರೋನಾ ಸಮಯದಲ್ಲಿ ಮರುಪ್ರಸಾರವಾದಾಗ ಅದು ಮತ್ತೆ ಟಿವಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Anupama Parameswaran:  ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

Anupama Parameswaran: ಇತ್ತೀಚೆಗೆ, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ತಮಿಳು ನಟ ಧ್ರುವ ವಿಕ್ರಮ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕೆಲವು ಸಮಯದಿಂದ ನಡೆಯುತ್ತಿದ್ದರೆ, ಈಗ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಚಲನಚಿತ್ರ ವಲಯಗಳಲ್ಲಿ ಬಿಸಿ ವಿಷಯವಾಗಿದೆ. ಬ್ರೇಕಪ್ (Breakup) ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.

Ramayana:  ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

Ramayana: ಸೀತೆಯ (Sita Role) ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದರೆ, ಇನ್ನು ಕೆಲವರು ಅಲ್ಲ ಎನ್ನುತ್ತಿದ್ದಾರೆ. ಅಂದಹಾಗೆ ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುವ ಅವಕಾಶ ಕನ್ನಡದ ನಟಿಗೆ ಬಂದಿತ್ತು. ಈ ಹಿಂದೆಯೇ ಈ ಬಗ್ಗೆ ಚರ್ಚೆಗಳೂ ಆಗಿದ್ದವು.

Kannada New Movie: ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

Kannada New Movie: ಮನೋಜ್ ಅಣ್ಣಯ್ಯ (Manoj Annayya) ನಿರ್ದೇಶನದಲ್ಲಿ ಹಾಗೂ ಬಿ. ವಿನೋದ್ ಕುಮಾರ್ ನಿರ್ಮಿಸಿರುವ ತೇಜ್ವಿನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ 'ಎ' vivek simha starrer anireekshita atithigalu gets a certificate from cbfc ಪ್ರಮಾಣಪತ್ರ ನೀಡಿದೆ. ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಸೂಚಿಸಿದ್ದ ಸೆನ್ಸಾರ್ ಸಮಿತಿಯ ನಿರ್ದೇಶನಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ಅಂತಿಮ ಪ್ರಮಾಣಪತ್ರ ಲಭಿಸಿದೆ.

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

Kannada New Movie: ಸಿದ್ದು ಪೂರ್ಣಚಂದ್ರ ಈ ಮೂಲಕ ನಿರ್ದೇಶಕನಾಗಿ ತನ್ನದು ಭಿನ್ನಪಥ ಎಂಬ ಸಂದೇಶ ರವಾನಿಸಿದ್ದ ಅವರು, ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಒಳತೋಟಿಗೆ ಕಣ್ಣಾದ ಆ ಕಥನವೀಗ ಬ್ರಹ್ಮಕಮಲ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೆ ಅಣಿಗೊಂಡಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡು, ಪ್ರೇಕ್ಷಕರ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

Salman Khan: ರಿಯಾಲಿಟಿ ಶೋಗೆ ಎಂಟ್ರಿ  ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

Salman Khan: ನಟ ಸೊಹೈಲ್ ಖಾನ್ ಪ್ರಸ್ತುತ ರಿಯಾಲಿಟಿ ಶೋ ಅಲೈಯನ್ಸ್‌ನಲ್ಲಿ ಸ್ಪರ್ಧಿಯಾಗಿದ್ದಾರೆ. ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಈ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದರು, ಆದರೆ ಈಗ ಅವರನ್ನು ಹೊರಹಾಕಲಾಗಿದೆ ಸೊಹೈಲ್ ಅವರಿಗೆ ಶೋನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ವಾರವಂತೂ ಅವರಿಗೆ ಬಹಳ ಕಷ್ಟಕರವಾಗಿತ್ತು. ಈಗ ಮನೆಯಲ್ಲಿ ಸೊಹೈಲ್ ಅವರಿಗೆ ಬೆಂಬಲ ಸೂಚಿಸಲು ಅವರ ಸಹೋದರ, ಸ್ಟಾರ್ ನಟ ಸಲ್ಮಾನ್ ಖಾನ್ ಶೋಗೆ ಪ್ರವೇಶಿಸಿದ್ದಾರೆ.

Bhavantara Movie: ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

Bhavantara Movie: ಈ ಸಿನಿಮಾದ ‘ಮೊದಮೊದಲಿದು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಿದೆ.

ಬಹು ನಿರೀಕ್ಷಿತ ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಅನೌನ್ಸ್‌; ರಾಕಿಂಗ್‌ ಸ್ಟಾರ್‌ ಯಶ್‌ ಗ್ಯಾಂಗ್‌ಸ್ಟರ್‌ ಲುಕ್‌ಗೆ ರಿವೀಲ್‌ಗೆ ಕೌಂಟ್‌ಡೌನ್‌

ಕೌಂಟ್‌ಡೌನ್‌ ಶುರು; ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಯಶ್‌

Toxic Trailer Release Date: ಬಹುನಿರೀಕ್ಷಿತ, ಯಶ್‌ ಅಭಿನಯದ ʼಟಾಕ್ಸಿಕ್‌ʼ ಚಿತ್ರದ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಸ್ವತಃ ಯಶ್‌ ಈ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಸ್ಟ್‌ 8ರಂದು ಬೆಂಗಳೂರಿನಲ್ಲಿ ಟ್ರೈಲರ್‌ ಲಾಂಚ್‌ ಆಗಲಿದೆ. ಚಿತ್ರ ಆಗಸ್ಟ್‌ 26ರಂದು ತೆರೆ ಕಾಣಲಿದೆ.

Brahmagantu Serial: 'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

Brahmagantu Serial: ಜೂನ್‌ 17, 2024ರಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ತನ್ನ ಮೊದಲ ಸಂಚಿಕೆ ಆರಂಭ ಮಾಡಿತು. ಇದು ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರಾವಾಹಿ. ಈ ಹಿಂದೆ ಇದೇ ಟೈಟಲ್‌ನಲ್ಲಿ ನಟಿ ಗೀತಾ ಭಾರತಿ ಭಟ್‌ ಅವರನ್ನ ಪರಿಚಯಿಸಿತ್ತು ವಾಹಿನಿ. ಆಗ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಬಾಡಿ ಶೇಮಿಂಗ್‌'ನಂತಹ ಗಂಭೀರ ಕಥೆಯನ್ನ ಸೊಗಸಾಗಿ ಹೆಣೆಯಲಾಗಿತ್ತು.

Amruthdhaare Serial: ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

Amruthdhaare Serial: ಭೂಮಿಕಾಗೆ ಚಿಂತೆ ಕಾಡುತ್ತಿದೆ. ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.

Kangana Ranaut : 'ಯುವಜನರನ್ನು ದಾರಿ ತಪ್ಪಿಸಬೇಡಿ' ಟ್ರೋಲ್ ಮಾಡುವವರ ವಿರುದ್ಧ ಕಂಗನಾ ತಿರುಗೇಟು

'ಯುವಜನರನ್ನು ದಾರಿ ತಪ್ಪಿಸಬೇಡಿ'; ಕಂಗನಾ ತಿರುಗೇಟು

Kangana Ranaut :ಜೆನ್ ಝಡ್ ಪ್ರತಿಭಟನಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್‌ (kangana) ಹೇಳಿಕೆ ಮತ್ತಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಟ್ರೋಲ್‌ ಕೂಡ ಆದರುಈಗ, ಕಂಗನಾ ದುರ್ಬಲ ಹದಿಹರೆಯದವರನ್ನು ಮನವೊಲಿಸಬಾರದು ಎಂದು ಹೇಳುವ ಮೂಲಕ ಟ್ರೋಲ್‌ಗಳಿಗೆ (Troll) ತಿರುಗೇಟು ನೀಡಿದ್ದಾರೆ.

Mahesh Babu: ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗನ ಸಿನಿಮಾಗೆ ಬೆಂಬಲ ನೀಡದ ಸ್ಟಾರ್‌!

ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗನ ಸಿನಿಮಾಗೆ ಬೆಂಬಲ ನೀಡದ ಸ್ಟಾರ್‌!

Mahesh Babu: ಮಹೇಶ್ ಬಾಬು ಅವರ ಸೋದರಳಿಯ ಜಯ ಕೃಷ್ಣ ಘಟ್ಟಮನೇನಿ ಅವರ ಚೊಚ್ಚಲ ಚಿತ್ರ ಶ್ರೀನಿವಾಸ ಮಂಗಾಪುರಂ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ನಟನಿಗೆ ಬೆಂಬಲ ನೀಡದ ಕಾರಣಕ್ಕೆ ಟೀಕೆಗೆ ಒಳಗಾಗಿದ್ದಾರೆ.ಜಯ ಕೃಷ್ಣ ಮಹೇಶ್ ಬಾಬು ಅವರ ಸಹೋದರ ದಿವಂಗತ ರಮೇಶ್ ಬಾಬು ಅವರ ಮಗ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ: ಹಣ್ಣು-ಹಂಪಲು ನೀಡಿ ಪತಿಯ ಯೋಗಕ್ಷೇಮ ವಿಚಾರಿಸಿದ ಪತ್ನಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಇಂದು (ಜುಲೈ 31) ಭೇಟಿಯಾಗಿ ಹಣ್ಣು-ಹಂಪಲು ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ನಟ ಧನ್ವೀರ್ ಹಾಗೂ ನಟಿ ರಕ್ಷಿತಾ ಪ್ರೇಮ್ ಕೂಡ ಜೈಲಿಗೆ ಭೇಟಿ ನೀಡಿದ್ದರು.

ಅಯ್ಯೋ, ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್;‌ 6 ವಾರ ಯಾವ ಸಿನಿಮಾ ಶೂಟಿಂಗ್‌ಗೂ ಬರಂಗಿಲ್ಲ!

ಅಯ್ಯೋ, ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಆಘಾತ! ಏನಾಯ್ತು?

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸಿನಿಮಾವೊಂದರ ಹಾಡಿನ ಚಿತ್ರೀಕರಣದ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು, ವೈದ್ಯರು ಆರು ವಾರಗಳ ಕಾಲ ಕಟ್ಟುನಿಟ್ಟಿನ ವಿಶ್ರಾಂತಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲೂ ‘ರಾಮಾಯಣ’ ಸಿನಿಮಾ ಟ್ರೇಲರ್ ಧಮಾಕ; ರಣಬೀರ್‌ - ಯಶ್‌ ಹವಾ ಕಂಡು ಪಾಕ್ ಯೂಟ್ಯೂಬರ್‌ಗಳು ಫಿದಾ!

ಪಾಕಿಸ್ತಾನದಲ್ಲೂ ‘ರಾಮಾಯಣ’ ಹವಾ; ಯಶ್ ಅವತಾರಕ್ಕೆ ಪಾಕ್ ಯೂಟ್ಯೂಬರ್ಸ್ ಫಿದಾ

ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಟ್ರೇಲರ್ ಜುಲೈ 30 ರಂದು ಬಿಡುಗಡೆ ಆಗಿದ್ದು, ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಜೊತೆಗೆ ಪಾಕಿಸ್ತಾನದಲ್ಲೂ ಭಾರಿ ಸಂಚಲನ ಮೂಡಿಸಿದೆ. ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್, ಸಿಜಿಐ ಇದೆ ಎಂದು ಪಾಕಿಸ್ತಾನಿ ಯೂಟ್ಯೂಬರ್‌ಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಭಾರತದ ಬಾಕ್ಸ್ ಆಫೀಸ್‌ನಲ್ಲಿ ‘ಸ್ಪೈಡರ್-ಮ್ಯಾನ್’ ಹವಾ ಜೋರು: ಮೊದಲ ದಿನವೇ ದಾಖಲೆಯ ಕಲೆಕ್ಷನ್‌, ಕರ್ನಾಟಕದಲ್ಲೂ ಅಬ್ಬರಿಸಿದ ಪೀಟರ್ ಪಾರ್ಕರ್!

ಭಾರತದಲ್ಲಿ ʻಸ್ಪೈಡರ್ ಮ್ಯಾನ್ʼ ದಾಖಲೆ; ಕರ್ನಾಟಕದಲ್ಲಿ ‌ಭರ್ಜರಿ ಗಳಿಕೆ

ಟಾಮ್ ಹಾಲೆಂಡ್ ಮತ್ತು ಝೆಂಡಾಯ ನಟನೆಯ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಬರೋಬ್ಬರಿ 72.44 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ 'ಅವೇಂಜರ್ಸ್: ಎಂಡ್‌ಗೇಮ್' (65 ಕೋಟಿ ರೂ.) ದಾಖಲೆಯನ್ನು ಧೂಳೀಪಟ ಮಾಡಿದೆ.

ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಎಂಟ್ರಿಗೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಸಿಕ್ತು ಬಿಗ್ ಸರ್ಪ್ರೈಸ್; ಬಾಲಯ್ಯ ಕಿರಿ ಮಗಳು ತೇಜಸ್ವಿನಿ ಚಿತ್ರರಂಗ ಪ್ರವೇಶ

ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ ಬಾಲಯ್ಯ ಮಗಳು ತೇಜಸ್ವಿನಿ

ನಂದಮೂರಿ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ಚೊಚ್ಚಲ ಸಿನಿಮಾದ ಅಪ್ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ಸಿಕ್ಕಿದೆ. ಬಾಲಯ್ಯ ಅವರ ಕಿರಿ ಮಗಳು ತೇಜಸ್ವಿನಿ ನಟಿಯಾಗಿ ಬೆಳ್ಳಿಪರದೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಾಮಾಜಿಕ ಸಂದೇಶವಿರುವ ಸ್ಪೋರ್ಟ್ಸ್ ಡ್ರಾಮಾ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ.

ರಾಜ್ಯದ ಅಮ್ಮಂದಿರಿಗಾಗಿ ಜೀ ಕನ್ನಡದಲ್ಲಿ ಬರಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ; ಆಡಿಷನ್ ಎಲ್ಲಿ, ಯಾವಾಗ?

ಅಮ್ಮಂದಿರಿಗಾಗಿ ಬರ್ತಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇದೀಗ ರಾಜ್ಯದ ಅಮ್ಮಂದಿರಿಗಾಗಿ 'ಸೂಪರ್ ಮಾಮ್' ಸರಣಿಯೊಂದಿಗೆ ಮರಳಿದೆ. ಕೇವಲ ಕುಟುಂಬದ ಆರೈಕೆಯಲ್ಲೇ ತಮ್ಮ ಜೀವನ ಮುಡಿಪಾಗಿಟ್ಟ ತಾಯಂದಿರಿಗೆ ತಮ್ಮ ನೃತ್ಯ ಪ್ರತಿಭೆಯನ್ನು ತೋರಿಸಲು ಜೀ ಕನ್ನಡ ವೇದಿಕೆ ಕಲ್ಪಿಸಿದೆ.

Jolly Review: ಭೂಗತ ಲೋಕದಲ್ಲೊಂದು ʻಜಾಲಿʼ ಜಾಲಿಯಾದ ಪ್ರೇಮ್ ಕಹಾನಿ!

ನಟ ತಾರುಷ್‌ ಅಭಿನಯದ ʻಜಾಲಿʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

ನಟ ಹಾಗೂ ನಿರ್ದೇಶಕ ತಾರುಷ್ ಕೃಷ್ಣ ಅಭಿನಯದ 'ಜಾಲಿ' ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಿದೆ. ಗ್ಯಾರೇಜ್ ಯುವಕ ಜಾಲಿ ಹಾಗೂ ಜಾನು ನಡುವಿನ ಪ್ರೀತಿಗೆ ಭೂಗತ ಲೋಕದ ಪ್ರವೇಶದಿಂದ ಎದುರಾಗುವ ಸಂಕಷ್ಟಗಳೇ ಚಿತ್ರದ ಮುಖ್ಯ ಕಥಾಹಂದರ. ಮಾಸ್, ಲವ್, ಕಾಮಿಡಿ ಹಾಗೂ ಕೌಟುಂಬಿಕ ಸೆಂಟಿಮೆಂಟ್ ಬೆರೆತಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ಬಾಕ್ಸ್ ಆಫೀಸ್‌ನಲ್ಲಿ ‘ಲವ್ ಸೀಸನ್ಸ್’ ಕಮಾಲ್; ಯಶಸ್ವಿಯಾಗಿ 25 ದಿನ ಪೂರೈಸಿದ ಹೊಸಬರ ಸಿನಿಮಾ!

ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದ ಹೊಸಬರ ʻಲವ್ ಸೀಸನ್ಸ್ʼ ಸಿನಿಮಾ!

ರಂಗಭೂಮಿ ಹಿನ್ನೆಲೆಯ ಹೊಸಬರ ತಂಡವೇ ಸೇರಿ ನಿರ್ಮಿಸಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದೆ. ಜುಲೈ 3 ರಂದು ತೆರೆಕಂಡಿದ್ದ ಈ ಚಿತ್ರವು ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿತಾದರೂ, ಪ್ರೇಕ್ಷಕರ ‘ವರ್ಡ್ ಆಫ್ ಮೌತ್’ ಬಲದಿಂದ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ತನಿಷ್ಕ್ ನ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆ ಆರಂಭ: ನೂತನ ವಿನ್ಯಾಸಗಳಲ್ಲಿ ಮಿನುಗಲಿವೆ ನೈಸರ್ಗಿಕ ವಜ್ರಗಳ ಆಭರಣಗಳು

ತನಿಷ್ಕ್ ನ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆ ಆರಂಭ

ಈ ಬಾರಿಯ ಉತ್ಸವದಲ್ಲಿ ಆಧುನಿಕ ಶೈಲಿ ಹಾಗೂ ನವೀನ ತಂತ್ರಜ್ಞಾನ ಮೇಳೈಸಿದ ದೈನಂದಿನ ನೈಸರ್ಗಿಕ ವಜ್ರದ ಆಭರಣಗಳ ಹೊಸ ಶ್ರೇಣಿಯನ್ನು ಪರಿಚಯಿಸಲಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂ(Ananya Pandey)ಡೆ ಈ ಪ್ರಚಾರ ಅಭಿಯಾನದ ನೇತೃತ್ವ ವಹಿಸಿದ್ದು, ಯುವ ಪೀಳಿಗೆಯನ್ನು ಆಕರ್ಷಿಸುವ ಶೈಲಿಯಲ್ಲಿ ಅಭಿಯಾನ ಮೂಡಿಬಂದಿದೆ.

‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ, ಅವರ ಕಾಲು ತೊಳೆದು ನೀರು ಕುಡಿಯುವಾಸೆ’: ‘ಬಾರ್ಡರ್’ ಖ್ಯಾತಿಯ  ನಟ ಸುದೇಶ್ ಬೆರ್ರಿ ಹೇಳಿಕೆ ವೈರಲ್

ʻಪ್ರಧಾನಿ ಕಾಲು ತೊಳೆದು, ಆ ನೀರು ನಾನು ಕುಡಿಯಬೇಕುʼ ಎಂದ ನಟ ಸುದೇಶ್ ಬೆರ್ರಿ

'ಬಾರ್ಡರ್' ಸಿನಿಮಾ ಖ್ಯಾತಿಯ ಹಿರಿಯ ನಟ ಸುದೇಶ್ ಬೆರ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ವಿಷ್ಣುವಿನ ಅವತಾರ' ಎಂದು ಬಣ್ಣಿಸಿದ್ದು, ಅವರ ಕಾಲು ತೊಳೆದು ನೀರು ಕುಡಿಯುವ ಆಸೆ ಇದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜಂತರ್ ಮಂತರ್ ಪ್ರತಿಭಟನಾಕಾರರನ್ನು ನಿರುಪಯುಕ್ತರು ಎಂದು ಕರೆದಿದ್ದಾರೆ.

Ramayana trailer: ಯಶ್‌ರನ್ನು ಹೊಗಳಿದ ರಿಷಬ್ ಶೆಟ್ಟಿ! ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂದ ಡಿವೈನ್‌ ಸ್ಟಾರ್‌

Ramayana trailer: ಯಶ್‌ರನ್ನು ಹೊಗಳಿದ ರಿಷಬ್ ಶೆಟ್ಟಿ!

Yash: ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಿಷಬ್‌ ಕೂಡ ಹೊಗಳಿದ್ದಾರೆ. ಕಾಂತಾರ ಚಿತ್ರದಲ್ಲಿ ನಟಿಸಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ , ಟ್ರೇಲರ್ ಅನ್ನು ಶ್ಲಾಘಿಸಿದ್ದಾರೆ ಮತ್ತು ಕನ್ನಡ ನಟ ಯಶ್ ಅವರನ್ನು ವಿಶೇಷವಾಗಿ ಹೊಗಳಿದ್ದಾರೆ.

Loading...