ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Salman Khan: ‘ಕಾಲಾ ಹಿರಣ್’ ಸಿನಿಮಾ ವಿವಾದ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

‘ಕಾಲಾ ಹಿರಣ್’ ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

Salman Khan: ಸಲ್ಮಾನ್ ಖಾನ್ (Salman Khan) ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುವ ಟೀಸರ್ ಮತ್ತು ಇತರ ಪ್ರಚಾರದ ಇತರೆ ಕಂಟೆಂಟ್‌ ತೆಗೆದುಹಾಕುವಂತೆ ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ ಚಿತ್ರದ ನಿರ್ಮಾಪಕರಿಗೆ ಮಧ್ಯಂತರ ಆದೇಶ ನೀಡಿದೆ. ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್‌ನ ನಿರ್ಮಾಪಕ ಅಮಿತ್ ಜಾನಿ ಈಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಬಾಕಿ ಇರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ ಎಂಬ ಆರೋಪದ ಮೇಲೆ ಚಿತ್ರದ ಪ್ರಚಾರಗಳು ವಿವಾದಕ್ಕೆ ಕಾರಣವಾಗಿವೆ.

Vishnuvardhan:  ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

Vishnuvardhan: ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗಮನಸೆಳೆದ ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌; ರಿಲೀಸ್‌ ಡೇಟ್‌ ಘೋಷಿಸಿದ ಚಿತ್ರತಂಡ

ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌ ರಿಲೀಸ್

‘ಎ ಡೇಟ್‌’ ಚಿತ್ರದ ಹೊಸತನದ ನಿರೂಪಣೆಯೊಂದಿಗೆ ಸೆಪ್ಟೆಂಬರ್ 4ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ಅಂತರ್ಜಾಲದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಕಿರುಚಿತ್ರವೇ ಈಗ ಪೂರ್ಣ ಪ್ರಮಾಣದ ಸಿನಿಮಾಗೆ ಹೊರಹೊಮ್ಮಿದೆ. ಬೆಂಗಳೂರು ಮತ್ತು ದೆಹಲಿಯ ಜೋಡಿಯ ನಡುವೆ ಒಂದೇ ದಿನದಲ್ಲಿ ಸಾಗುವ ಕುತೂಹಲಕಾರಿ ಕಥಾಹಂದರವನ್ನು ಈ ಸಿನಿಮಾ ಹೊಂದಿದೆಯಂತೆ.

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌ ಸಂಜಯ್‌ ಸಿಂಗ್‌ಗೆ ಏನಾಯ್ತು?

ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌

Pavithra Gowda: ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಹೊಂದಿದ್ದಾರೆ. ಹಾಗಂತ ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ರಿವೀಲ್ ಮಾಡಿದ್ದರು. ಅಸಲಿಗೆ, 2007ರಲ್ಲಿಯೇ ಪವಿತ್ರಾ ಗೌಡಗೆ ಮದುವೆ ಆಗಿತ್ತು. ಅದೂ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ. ಸಂಜಯ್ ಸಿಂಗ್ (Sanjay Singh) ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹವಾಗಿದ್ದರು.

ಬಿಗ್‌ ಬಾಸ್ ಕನ್ನಡ 13 ‘ಅಗ್ನಿಪರೀಕ್ಷೆ’; ʻಒಂದು ವೃತ್ತಕ್ಕೆ ಎಷ್ಟು ಸೈಡ್ಸ್‌ ಇರುತ್ತವೆ?ʼ, ವಿನಯ್ ಗೌಡ ಕೇಳಿದ ಪ್ರಶ್ನೆಗೆ ನೆಟ್ಟಿಗರ ಭಾರಿ ಟ್ರೋಲ್!

BBK 13: ವಿನಯ್ ಗೌಡ ಕೇಳಿದ ವೃತ್ತದ ಪ್ರಶ್ನೆಗೆ ನೆಟ್ಟಿಗರಿಂದ ಟ್ರೋಲ್!

ಬಿಗ್‌ ಬಾಸ್ ಕನ್ನಡ 13 ಅಗ್ನಿಪರೀಕ್ಷೆ ವೇದಿಕೆಯಲ್ಲಿ ತೀರ್ಪುಗಾರ ವಿನಯ್ ಗೌಡ ಕೇಳಿದ ವಿಚಿತ್ರ ಪ್ರಶ್ನೆ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ. ಸ್ಪರ್ಧಿಯೊಬ್ಬರಿಗೆ ವೃತ್ತದ ಬದಿಗಳ ಬಗ್ಗೆ ಪ್ರಶ್ನಿಸಿದಾಗ, ಆತ ಶೂನ್ಯ ಎಂದಿದ್ದಾನೆ. ಆದರೆ ವಿನಯ್ ಇನ್‌ಸೈಡ್-ಔಟ್‌ಸೈಡ್ ಎಂದು ಕೌಂಟರ್ ಕೊಡಲು ಹೋಗಿ ತಪ್ಪು ಲಾಜಿಕ್ ಬಳಸಿದ್ದಾರೆ.

Samantha Ruth Prabhu: ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

Samantha: ಇತ್ತೀಚೆಗೆ ಈ ಜೋಡಿ ಬೇಬಿಮೂನ್ ಪ್ರವಾಸ ಕೈಗೊಂಡಿದ್ದು, ಅದರ ಮುದ್ದಾದ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ದಂಪತಿ, ಸದ್ಯ ವಿಶೇಷ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನಕ್ಕೂ ಮುನ್ನ ಫಾಲೋವರ್ಸ್‌ಗಳಿಗೆ ತಮ್ಮ ಪ್ರವಾಸದ ಬಗ್ಗೆ ಒಂದು ಸಣ್ಣ ಝಲಕ್‌ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯ ಕಲಹಕ್ಕೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್!

ನಟ ಗೋವಿಂದ - ಸುನೀತಾ ದಂಪತಿ ಬೇರೆಯಾಗಲ್ಲ; ಡಿವೋರ್ಸ್ ಅರ್ಜಿ‌ ವಾಪಸ್‌!

ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯದ ಬಿರುಕು ಸುಖಾಂತ್ಯ ಕಂಡಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸುನೀತಾ ಅಧಿಕೃತವಾಗಿ ಹಿಂಪಡೆದಿದ್ದಾರೆ. ಪುತ್ರ ಯಶವರ್ಧನ್ ಜೊತೆ ಕೋರ್ಟ್‌ಗೆ ಹಾಜರಾಗಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ವಿಲನ್ ಆದ ತೆಲುಗಿನ ‘ಸ್ಟಾರ್’ ಹೀರೋ; ‌ʻತಲೈವಾʼ ಫ್ಯಾನ್ಸ್ ಸಖತ್ ಥ್ರಿಲ್!

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ತೆಲುಗಿನ ‘ಸ್ಟಾರ್’ ಹೀರೋ ವಿಲನ್!

Rajinikanth: ‘ಧರ್ಮನ್’ ಚಿತ್ರದಲ್ಲಿ `ಸೂಪರ್ ಸ್ಟಾರ್' ರಜನಿಕಾಂತ್ ಖಡಕ್ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ಈ ಆ್ಯಕ್ಷನ್ ಚಿತ್ರದಲ್ಲಿ ರಜನಿಗೆ ವಿಲನ್ ಆಗಿ ತೆಲುಗು ನಾಯಕ ರಾಮ್ ಪೋತಿನೇನಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.

ʻಪವಿತ್ರಾ ಗೌಡ ನನಗೆ ಮಗಳಿದ್ದಂತೆ, ಅಲ್ಲಿರುವ ಎಲ್ಲರಿಗೂ ಸಾಂತ್ವನ ಹೇಳಿದೆʼ; ಜೈಲಿಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಿಷ್ಟು!

ʻಪವಿತ್ರಾ ಗೌಡ ಮಾನಸಿಕವಾಗಿ ನೊಂದಿದ್ದಾರೆ' ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಚಾರಣಾಧೀನ ಕೈದಿ ಪವಿತ್ರಾ ಗೌಡ ತಮಗೆ ಮಗಳಿದ್ದಂತೆ ಎಂದಿರುವ ಅವರು, ಜೈಲಿನಲ್ಲಿರುವ ಎಲ್ಲಾ ಮಹಿಳೆಯರಿಗೂ ಕಾನೂನು ನೆರವು ಹಾಗೂ ಸಾಂತ್ವನ ಅಗತ್ಯ ಎಂದಿದ್ದಾರೆ.

‘ಧುರಂಧರ್‌’ ಖ್ಯಾತಿಯ ನಟಿ ಸಾರಾ ಅರ್ಜುನ್‌ಗೆ ಜಾಕ್‌ಪಾಟ್‌; ಟಾಲಿವುಡ್‌ ಸ್ಟಾರ್‌ ನಟನ ಸಿನಿಮಾದಿಂದ ಬಂತು ಬಂಪರ್‌ ಆಫರ್!‌

‘ಧುರಂಧರ್‌’ ನಟಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಭರ್ಜರಿ ಜಾಕ್‌ಪಾಟ್‌!

ನಟಿ ಸಾರಾ ಅರ್ಜುನ್‌ ಅವರು ರಣವೀರ್‌ ಸಿಂಗ್‌ ಜೊತೆಗಿನ ‘ಧುರಂಧರ್’ ಸರಣಿಯ ಯಶಸ್ಸಿನ ಬೆನ್ನಲ್ಲೇ ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚರಣ್ ಹಾಗೂ ಸುಕುಮಾರ್ ಜೋಡಿಯ ಮೆಗಾ ಪ್ರಾಜೆಕ್ಟ್‌ನಲ್ಲಿ ಸಾರಾ ಅರ್ಜುನ್ ನಟಿಸುವುದು ಬಹುತೇಕ ಫಿಕ್ಸ್‌ ಎನ್ನಲಾಗಿದೆ.

ವರಮಹಾಲಕ್ಷ್ಮಿ ಹಬ್ಬದಂದೇ ʻಟಾಕ್ಸಿಕ್ʼ ಅಡ್ವಾನ್ಸ್ ಬುಕಿಂಗ್ ಶುರು;  12 ಸಾವಿರ ಸ್ಕ್ರೀನ್‌ಗಳಲ್ಲಿ ʻರಾಕಿ ಭಾಯ್‌ʼ ಯಶ್ ಹವಾ!

Yash: ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ʻಟಾಕ್ಸಿಕ್‌ʼ ಅಬ್ಬರ!

Toxic: A Fairy Tale for Grown-ups: ಯಶ್‌ ನಟನೆಯ ʻಟಾಕ್ಸಿಕ್‌ʼ ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತವಾಗಿ ಶುರುವಾಗಲಿದೆ. ಈ ಸಿನಿಮಾವು ಆಗಸ್ಟ್ 26 ರಂದು ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Spirit release : ಪ್ರಭಾಸ್‌ ʻಸ್ಪಿರಿಟ್ʼ ಪೋಸ್ಟ್‌ಪೋನ್‌? ಏನಿದು ಗಾಸಿಪ್‌?

ಪ್ರಭಾಸ್‌ ʻಸ್ಪಿರಿಟ್ʼ ಪೋಸ್ಟ್‌ಪೋನ್‌? ಏನಿದು ಗಾಸಿಪ್‌?

Spirit release: ಸಲ್ಮಾನ್ ಖಾನ್ 2027ರಲ್ಲಿ ತಮ್ಮ ನೆಚ್ಚಿನ ಬಿಡುಗಡೆ ವಿಂಡೋ, ಈದ್‌ಗೆ ಮರಳುವುದಾಗಿ ಘೋಷಿಸಿದಾಗಿನಿಂದ, ಆ ದಿನದಂದು ಬಿಡುಗಡೆಯಾಗಲಿರುವ ಪ್ರಭಾಸ್ ಅವರ ಸ್ಪಿರಿಟ್ ಚಿತ್ರವು ಮುಂದೂಡಲಾಗಿದೆ ಎಂಬ ಸಾಕಷ್ಟು ಊಹಾಪೋಹಗಳಿವೆ .ಆದರೀಗ ಸ್ಪಿರಿಟ್ ತಂಡ ಈ ವರದಿಗಳನ್ನು ನಿರಾಕರಿಸಿದೆ.

ನಾಲ್ಕೇ ದಿನಕ್ಕೆ 150 ಕೋಟಿ ರೂ. ಬಾಚಿದ ʻವಿಶ್ವನಾಥ್‌ ಆಂಡ್‌ ಸನ್ಸ್‌ʼ; ಕರ್ನಾಟಕದಲ್ಲಿ ಸೂರ್ಯ ಸಿನಿಮಾ ಈವರೆಗೆ ಗಳಿಸಿದ್ದೆಷ್ಟು?

Suriya: ‌ಈವರೆಗೂ ʻವಿಶ್ವನಾಥ್‌ & ಸನ್ಸ್‌ʼ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

ಸೂರ್ಯ ನಟನೆಯ ʻವಿಶ್ವನಾಥ್‌ ಆಂಡ್‌ ಸನ್ಸ್‌ʼ ಚಿತ್ರವು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಕರ್ನಾಟಕದಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ.

Amruthadhaare serial: ಭೂಮಿಕಾ ಪ್ಲಾನ್ ಪ್ಲಾಪ್‌; ಶಕುಂತಲಾಗೆ ಗೊತ್ತಾಗೇ ಹೋಯ್ತು ಮಹಾಸತ್ಯ!

ಭೂಮಿಕಾ ಪ್ಲಾನ್ ಪ್ಲಾಪ್‌; ಶಕುಂತಲಾಗೆ ಗೊತ್ತಾಗೇ ಹೋಯ್ತು ಮಹಾಸತ್ಯ!

Amruthadhaare serial: ಅಮೃತಧಾರೆಯಲ್ಲಿ (Amruthdhaare Serial) ಟ್ವಿಸ್ಟ್‌ ಪಡೆದು ಸಾಗುತ್ತಿದೆ .ಜೈದೇವ್‌ ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ ಮುಂದೆ ಹೇಳಿದ್ದಾಳೆ. ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಫೇಲ್‌ ಆಗಿದೆ.

NTR Trivikram: ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ಈ ಟೈಟಲ್?

ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ಈ ಟೈಟಲ್?

NTR Trivikram: ಜೂನಿಯರ್ ಎನ್ಟಿಆರ್ ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಪೌರಾಣಿಕ ಆಕ್ಷನ್ ಮಹಾಕಾವ್ಯಕ್ಕಾಗಿ ಕೈಜೋಡಿಸಲು ಸಜ್ಜಾಗಿದ್ದಾರೆ, ತಾತ್ಕಾಲಿಕವಾಗಿ ಎನ್ಟಿಆರ್ ಎಕ್ಸ್ ತ್ರಿವಿಕ್ರಮ್ ಎಂದು ಹೆಸರಿಸಲಾಗಿದೆ. ಈ ಚಿತ್ರ ಇನ್ನೂ ಸೆಟ್ಟೇರಿಲ್ಲದಿದ್ದರೂ, ತಯಾರಕರು ಈಗಾಗಲೇ ಅದರ ಶೀರ್ಷಿಕೆಯನ್ನು (Title) ಲಾಕ್ ಮಾಡಿರಬಹುದು.

Bigg boss Kannada 13: ಬಿಗ್‌ ಬಾಸ್‌ಗೆ ಸೆಲೆಕ್ಟ್‌ ಆಗಲು ಇದು ಲಾಸ್ಟ್‌ ಚಾನ್ಸ್‌; ಕಠಿಣವಾಯ್ತು ಟಾಸ್ಕ್‌!

ಬಿಗ್‌ ಬಾಸ್‌ಗೆ ಸೆಲೆಕ್ಟ್‌ ಆಗಲು ಇದು ಲಾಸ್ಟ್‌ ಚಾನ್ಸ್‌

Bigg boss Kannada 13: ಹೊಸ ಸೀಸನ್‌ನ ಆರಂಭಕ್ಕೂ ಮುನ್ನ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ದೀಕ್ಷಾ ಆರ್‌ ಶೆಟ್ಟಿ, ಮಾಡ್ರನ್‌ ಕವಿ ಮಂಜ, ಇಶಾ ನವೀನ್‌, ಯೋಗಿತಾ-ಯೋಗಶ್ರೀ, ಚರಣ್‌ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್‌ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್‌ ಆಗಿ ಮಾಡ್ರನ್‌ ಕವಿ ಮಂಜ, ಚರಣ್‌ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ (Promo) ಔಟ್‌ ಆಗಿದೆ.

Ramayana: ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

Ramayana:ವಿಶ್ವದಾದ್ಯಂತ ಸುಮಾರು 1,300 ಸ್ಕ್ರೀನ್‌ಎಕ್ಸ್ ಮತ್ತು 4ಡಿಎಕ್ಸ್ ಥಿಯೇಟರ್‌ಗಳಲ್ಲಿ ‘ರಾಮಾಯಣ’ ಪ್ರದರ್ಶನಗೊಳ್ಳಲಿದೆ. ಸ್ಕ್ರೀನ್‌ಎಕ್ಸ್ ಪರದೆಗಳು ಪ್ರೇಕ್ಷಕರಿಗೆ 270-ಡಿಗ್ರಿ ವಿಶಾಲ ದೃಶ್ಯದ ಅನುಭವ ನೀಡಲು ಮುಖ್ಯ ಪರದೆಯ ಜೊತೆಗೆ ಥಿಯೇಟರ್‌ನ ಅಕ್ಕಪಕ್ಕದ ಗೋಡೆಗಳ ಮೇಲೆಯೂ ದೃಶ್ಯಗಳು ವಿಸ್ತರಿಸಲ್ಪಡುತ್ತವೆ.

Bhargavi LLB: ಬರಲಿದೆಯಂತೆ ‘ಭಾರ್ಗವಿ ಎಲ್‌ಎಲ್‌ಬಿ - 2’ ಹೊಸ ಸೀಸನ್? ಏನಿದು ಸುದ್ದಿ?

ಬರಲಿದೆಯಂತೆ ‘ಭಾರ್ಗವಿ ಎಲ್‌ಎಲ್‌ಬಿ - 2’ ಹೊಸ ಸೀಸನ್? ಏನಿದು ಸುದ್ದಿ?

'ಭಾರ್ಗವಿ ಎಲ್‌ಎಲ್‌ಬಿ' (Bhargavi LLB) ಧಾರಾವಾಹಿ ಅಂತ್ಯ ಕಂಡಿದೆ. ಸ್ವಪ್ನ ಕೃಷ್ಣ ಅವರ ಕಲ್ಪನೆಯಲ್ಲಿ ರೂಪಗೊಂಡಿದ್ದ ಈ ಸೀರಿಯಲ್‌ನಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಹಾಗೂ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ನ್ಯಾಯ ಮತ್ತು ಕುಟುಂಬದ (Family) ನಡುವಿನ ರೋಚಕ ಕಥಾಹಂದರ ಹೊಂದಿತ್ತು,

ʻಟಾಕ್ಸಿಕ್ ಕಲೆಕ್ಷನ್ 2 ಸಾವಿರ ಕೋಟಿ ರೂ. ದಾಟಿದ್ರೂ ಆಶ್ಚರ್ಯವಿಲ್ಲʼ; ನಟ ಯಶ್ ರೇಂಜ್‌ ಎಂಥದ್ದು ಅಂತ ತಿಳಿಸಿದ ನಿರ್ದೇಶಕ ಮಂಜು ಮಾಂಡವ್ಯ!

ʻಮಾಸ್ಟರ್‌ ಪೀಸ್‌ʼ ಯಶ್ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಮಂಜು ಮಾಂಡವ್ಯ!

ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬದ್ಧತೆ ಹಾಗೂ ಜಾಗತಿಕ ಚಿಂತನೆಗಳ ಕುರಿತು ನಿರ್ದೇಶಕ ಮಂಜು ಮಾಂಡವ್ಯ ವಿಶ್ವವಾಣಿ ಟಿವಿ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಕಂಟೆಂಟ್ ಜನರಿಗೆ ತಲುಪಿದರೆ ವಿಶ್ವಾದ್ಯಂತ ₹2000 ಕೋಟಿ ಗಳಿಸಿದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್!‌ 2 ಹೊಸ ಸೀರಿಯಲ್‌ ಘೋಷಿಸಿದ ಟಿ. ಎನ್‌. ಸೀತಾರಾಮ್;‌ ಈ ಸೀರಿಯಲ್‌ಗಳು ಪ್ರಸಾರವಾಗುವುದು ಎಲ್ಲಿ?

2 ಹೊಸ ಧಾರಾವಾಹಿಗಳನ್ನು ಘೋಷಿಸಿದ ಟಿ. ಎನ್‌. ಸೀತಾರಾಮ್; ಯಾವಾಗ ಶುರು?

ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಎರಡು ಹೊಸ ಧಾರಾವಾಹಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ಒಂದಕ್ಕೆ ‘ಮುಂದಿನ ಅಧ್ಯಾಯ’ ಎಂದು ಹೆಸರಿಡಲಾಗಿದೆ. ಮೂರು ದಶಕಗಳ ತಮ್ಮ ಹಿಂದಿನ ಯಶಸ್ವಿ ಧಾರಾವಾಹಿಗಳ ಪಾತ್ರಗಳನ್ನು ಒಗ್ಗೂಡಿಸಿ ಈ ಕಥೆ ಹೆಣೆಯಲಾಗಿದೆ.

Amitabh Bachchan: ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌! KBC ವೇದಿಕೆಯಲ್ಲಿ ಮುಕ್ತ ಮಾತು

ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌!

Amitabh Bachchan: ಈ ನಟ ತಮ್ಮ ಅದ್ಭುತ ಸಿನಿಮಾಗಳಿಗಾಗಿ, ನಟನೆಗಾಗಿ ಹೆಸರುವಾಸಿಯಾಗಿದ್ದಾರೆ, ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದಶಕಗಳ ಹಿಂದೆ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಅದು ಇಷ್ಟೊಂದು ಸುಲಭವಾಗಿರಲಿಲ್ಲ. ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುತ್ತಿರುವ ಹಿರಿಯ ನಟ, ಮುಂಚೆ ಯುವ ನಟನಾಗಿ ತಾವು ಹೇಗೆ ತಿರಸ್ಕಾರವನ್ನು ಎದುರಿಸಿದರು ಮತ್ತು ಹೋರಾಟವನ್ನು ಮುಂದುವರೆಸಿದರು ಎಂಬುದನ್ನು ಹಂಚಿಕೊಂಡರು.

ದರ್ಶನ್‌ ಕೇಸ್‌ ಅಪ್ಡೇಟ್ಸ್:‌ ಮಾಫಿ ಸಾಕ್ಷಿಯಾಗಲು ಬಂದ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದೇನು? ದಿಢೀರ್‌ ಅಂತ ವಿಜಯಲಕ್ಷ್ಮೀ - ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದೇಕೆ?

ದರ್ಶನ್‌ ಭೇಟಿಗಾಗಿ ಜೈಲಿಗೆ ಬಂದ ಸ್ನೇಹಿತ ಧ‌ನ್ವೀರ್‌, ಪತ್ನಿ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸಿಸಿಹೆಚ್ ಕೋರ್ಟ್ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಸುಜಾತಾ ಅವರು ಪರಿಣಾಮಗಳ ಕುರಿತು ಪ್ರದೋಷ್‌ಗೆ ಎಚ್ಚರಿಕೆ ನೀಡಿದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು.

Bigg Boss Kannada 13: ಇಲ್ಲ ನಾನು ಆಚೆ ಹೋಗಲ್ಲ; ಬಿಗ್‌ ಬಾಸ್‌ ವೇದಿಕೆಯಲ್ಲೇ ಯುವಕ ಅಸಭ್ಯ ವರ್ತನೆ

ಇಲ್ಲ ನಾನು ಆಚೆ ಹೋಗಲ್ಲ; ಬಿಗ್‌ ಬಾಸ್‌ ವೇದಿಕೆಯಲ್ಲೇ ಯುವಕ ಅಸಭ್ಯ ವರ್ತನೆ

Bigg Boss Kannada 13: ದೀಕ್ಷಾ ಆರ್‌ ಶೆಟ್ಟಿ, ಮಾಡ್ರನ್‌ ಕವಿ ಮಂಜ, ಇಶಾ ನವೀನ್‌, ಯೋಗಿತಾ-ಯೋಗಶ್ರೀ, ಚರಣ್‌ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್‌ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್‌ ಆಗಿ ಮಾಡ್ರನ್‌ ಕವಿ ಮಂಜ, ಚರಣ್‌ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.

ಶಾರುಖ್‌ ಖಾನ್‌ ಒಡೆತನದ ‌ʻಮನ್ನತ್‌ʼ ಅರಮನೆಗೆ ಬಂದ್ವು 8 ಅಡಿ ಉದ್ದದ ಎರಡು ಹಾವುಗಳು; ಒಂದು ರಕ್ಷಣೆ, ಮತ್ತೊಂದು ಏನಾಯ್ತು?

ಶಾರುಖ್‌ ಮನೇಲಿ ಹಾವುಗಳು ಪ್ರತ್ಯಕ್ಷ: ಒಂದು ರಕ್ಷಣೆ, ಮತ್ತೊಂದು ಮಿಸ್ಸಿಂಗ್!

ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸ 'ಮನ್ನತ್' ಆವರಣದಲ್ಲಿ ಆಗಸ್ಟ್ 17ರ ರಾತ್ರಿ 8 ಅಡಿ ಉದ್ದದ ಎರಡು ಕೇರೆಹಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಉರಗ ತಜ್ಞ ವಿಕ್ಕಿ ದುಬೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೆಟ್ಟಿಲ ಕೆಳಗಿದ್ದ ಒಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

Loading...