Rishab Shetty: ರಿಷಬ್ ಶೆಟ್ಟಿ ವಿರುದ್ಧ ದೈವರಾಧಕರ ತೀವ್ರ ಆಕ್ರೋಶ
Kantara: ‘ಕಾಂತಾರ: ಚಾಪ್ಟರ್ 1’ ಸಕ್ಸೆಸ್ ಆದ ಬಳಿಕ ತಂಡದ ಜೊತೆ ಮಂಗಳೂರಿಗೆ ತೆರಳಿ ಇತ್ತೀಚೆಗೆ ಹರಕೆ ಕೋಲ ಮಾಡಿಸಿದ್ದರು ರಿಷಬ್ ಶೆಟ್ಟಿ. ಕೋಲದ ವೇಳೆ ದೈವ ನರ್ತಕ ರಿಷಬ್ ಶೆಟ್ಟಿ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದರಲ್ಲಿ, ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಹರಕೆಯ ನೇಮ ಅಂತಾ ಇಲ್ಲ. ಧರ್ಮ ನೇಮ ನೀಡುವ ಕ್ರಮ ಇದೆ ಎಂದು ಹೇಳಿದ್ದಾರೆ.