ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Pabbar Movie: 14 ವರ್ಷದ ಬಳಿಕ ಕ್ಲೀನ್ ಶೇವ್; 'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

ayyappa sharma: ಅಯ್ಯಪ್ಪ ಪಿ ಶರ್ಮ ಪಬ್ಬಾರ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಹೊಸ ಅವತಾರ ತಾಳಿದ್ದಾರೆ. ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಪಬ್ಬಾರ್ ಸಿನಿಮಾದ SP ಪಾತ್ರಕ್ಕಾಗಿ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೆ.

Maryade Ramanna Serial: ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು; ಈ ಸೀರಿಯಲ್‌ ಅಂತ್ಯ!

ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು!

Maryade Ramanna Kannada Serial: ಇತ್ತೀಚೆಗೆ ಕಿರುತೆರೆಯಲ್ಲಿ ಸಾಕಷ್ಟು ಹೊಸ ಧಾರಾವಾಹಿಗಳು ಬರುತ್ತಿವೆ. ಧಾರಾವಾಹಿಗಳಿಗೆ ಅವರದ್ದೇ ಆದ ವೀಕ್ಷಕರು ಇದ್ದಾರೆ. ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೋಮೋ ನೋಡಿದ ವೀಕ್ಷಕರು ಹಳ್ಳಿ ಸೊಗಡಿನ ಈ ಕಥೆ ಜನರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಹಾಗಾದ್ರೆ ಯಾವ ಧಾರಾವಾಹಿ ಅದು? ಎಲ್ಲಿ ಪ್ರಸಾರ?

Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

Amruthadhaare Kannada Serial: ಮಲ್ಲಿ ಕಾಲೇಜ್‌ಗೆ ಬಂಕ್‌ ಹಾಕುತ್ತಿರುವ ವಿಚಾರ ಭುಮಿಕಾಗೆ ಗೊತ್ತಾಗಿದೆ. ಟಿಫಿನ್‌ ಬಾಕ್ಸ್‌ ಕೊಡಲಿಕ್ಕೆ ಅಂತ ಕಾಲೇಜಿಗೆ ಬಂದ ಭೂಮಿಗೆ ಮಲ್ಲಿ ಒಬ್ಬ ಹುಡುಗನ ಜೊತೆ ಸುತ್ತುತ್ತಾ ಇರುವ ವಿಚಾರ ಆಕೆಯ ಸ್ನೇಹಿತೆಯಿಂದ ತಿಳಿದಿದೆ. ಮಲ್ಲಿ ಕ್ಲಾಸ್‌ ಬಂಕ್‌ ಮಾಡಿ ಹುಡುಗನ ಜೊತೆ ಸುತ್ತುತ್ತಿದ್ದಾಳೆ ಅನ್ನೋ ವಿಚಾರ ಕೇಳಿ ನಮ್‌ ಭೂಮಿಗೆ ತಲೆ ಸುತ್ತಿದಂತೆ ಆಗಿಬಿಟ್ಟಿದೆ. ಅಲ್ಲಿಂದ ಮಲ್ಲಿ ಬಗ್ಗೆ ಜಾಸ್ತಿ ಯೋಚನೆ ಮಾಡ್ತಾ ಇದ್ದಾಳೆ.

ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್; ಚೆಕ್ ಬೌನ್ಸ್ ಕೇಸ್‌ನಲ್ಲಿ 'ಗದರ್' ಬೆಡಗಿಗೆ ಸಂಕಷ್ಟ!

ಅಮೀಶಾ ಪಟೇಲ್‌ ವಿರುದ್ಧ ವಾರೆಂಟ್‌; ಬಾಲಿವುಡ್‌ಗೆ ಚೆಕ್‌ ಬೌನ್ಸ್‌ ಕಂಟಕ!

ನಟಿ ಅಮೀಶಾ ಪಟೇಲ್‌ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಪದೇ ಪದೇ ಸಮನ್ಸ್ ನೀಡಿದರೂ ಕೋರ್ಟ್‌ಗೆ ಹಾಜರಾಗದ ಕಾರಣ ಈಗ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದರೆ, ನಟಿ ಅಮೀಶಾ ಪಟೇಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಹಾಗಾದರೆ ಏನಿದು ಕೇಸ್?

ಆಸ್ಪತ್ರೆಗೆ ದಾಖಲಾದ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?

salman khan father salim khan health updates

ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 90 ವರ್ಷದ ಹಿರಿಯ ಸ್ಕ್ರಿಪ್ಟ್ ರೈಟರ್ ಸಲೀಂ ಖಾನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಸೇರಿದಂತೆ ಅರ್ಬಾಜ್, ಸೋಹೈಲ್ ಮತ್ತು ಇಡೀ ಖಾನ್ ಕುಟುಂಬ ಆಸ್ಪತ್ರೆಗೆ ಭೇಟಿ ನೀಡಿದೆ. ಸದ್ಯ ಅವರ ಅನಾರೋಗ್ಯದ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್!‌ ಫೋಟೋಗ್ರಾಫರ್ಸ್‌ ಟೀಮ್‌ಗೂ ಕಟ್ಟುನಿಟ್ಟಿನ ರೂಲ್ಸ್!‌

ರಶ್ಮಿಕಾ-ವಿಜಯ್ ಮದುವೆಯಲ್ಲಿ ಮೊಬೈಲ್ ಬ್ಯಾನ್; ಇಷ್ಟೊಂದು ಕಠಿಣ ಕ್ರಮ ಯಾಕೆ?

ರಾಜಸ್ಥಾನದ ಉದಯಪುರದಲ್ಲಿ ಫೆಬ್ರವರಿ 26 ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಅದ್ದೂರಿಯಾಗಿ ನೆರವೇರಲಿದೆ. ಈ ಖಾಸಗಿ ಸಮಾರಂಭದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಫೋಟೋ ಮತ್ತು ವಿಡಿಯೋಗಳು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Mahesh Babu: ʻವಾರಣಾಸಿʼ ಸಿನಿಮಾದಲ್ಲಿ ಶಿವಭಕ್ತನಾದ‌ ಪ್ರಕಾಶ್‌ ರಾಜ್; ಪಾತ್ರದ ಗುಟ್ಟು ರಟ್ಟಾಗಿ ಹೋಯ್ತಾ?

Varanasi: ರಾಜಮೌಳಿ - ಮಹೇಶ್ ಬಾಬು ಸಿನಿಮಾದಲ್ಲಿ ಪ್ರಕಾಶ್‌ ರಾಜ್ ಶಿವಭಕ್ತ

Varanasi Movie: ನಟ ಪ್ರಕಾಶ್‌ ರಾಜ್‌ ಅವರು ವಾರಣಾಸಿ ಚಿತ್ರದಲ್ಲಿ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಹೇಶ್ ಬಾಬು ಅವರ ತಂದೆಯಾಗಿಯೂ ಪ್ರಕಾಶ್‌ ರಾಜ್‌ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾವು 2027ರ ಏಪ್ರಿಲ್ 7 ರಂದು ತೆರೆಕಾಣಲಿದೆ.

ರಕ್ಷಿತ್‌ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್;‌ ʻರಿಚರ್ಡ್ ಆಂಟನಿʼ ಜೊತೆಗೆ ರೆಡಿಯಾಗಿವೆ ಮತ್ತೆ ನಾಲ್ಕು ಸಿನಿಮಾಗಳ ಸ್ಕ್ರಿಪ್ಟ್, ಇಲ್ಲಿದೆ ಬಿಗ್‌ ಅಪ್ಡೇಟ್!‌

ರಕ್ಷಿತ್ ಬಿಗ್ ಪ್ಲಾನ್; ರಿಚರ್ಡ್ ಆಂಟನಿ ಸೇರಿ 5 ಚಿತ್ರಗಳ ಸ್ಕ್ರಿಪ್ಟ್ ರೆಡಿ

Rakshit Shetty Richard Anthony: ಕಳೆದ ಮೂರು ವರ್ಷಗಳಿಂದ ಏಕಾಂತದಲ್ಲಿದ್ದ ನಟ ರಕ್ಷಿತ್ ಶೆಟ್ಟಿ, ಒಟ್ಟು ಐದು ಚಿತ್ರಗಳ ಸ್ಕ್ರಿಪ್ಟ್ ಪೂರ್ಣಗೊಳಿಸಿದ್ದು, ಮೊದಲು 'ರಿಚರ್ಡ್ ಆಂಟನಿ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೇ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು, 2027ರ ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

S Mahender: 2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯ ಹೇಗಿದೆ? ಎಸ್. ಮಹೇಂದರ್ ಮುಕ್ತ ಮಾತು

2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯದ ಬಗ್ಗೆ ಎಸ್. ಮಹೇಂದರ್ ಮಾತು

S Mahender yashoda: ನಟಿ ಶ್ರುತಿ ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಶ್ರುತಿ ಮತ್ತು ಮಹೇಂದರ್ ಪ್ರೇಮ ವಿವಾಹವಾಗಿದ್ದರು. ನಟಿ ಶ್ರುತಿ ಅವರಿಂದ ಎಸ್. ಮಹೇಂದರ್ ಡಿವೋರ್ಸ್ ಪಡೆದು ದೂರಾಗಿದ್ದರೂ ಮಗಳು ಗೌರಿ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಗಳು ಗೌರಿ ಹಾಗೂ 2ನೇ ಪತ್ನಿ ಯಶೋಧಾ ಬಗ್ಗೆ ಎಸ್. ಮಹೇಂದರ್ ಮಾತನಾಡಿದ್ದಾರೆ.

Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Naa Ninna Bidalaare: ಅಂಬಿಕಾ ಪಾತ್ರಧಾರಿ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Neetha Ashok: ನಟಿ ನೀತಾ ಅಶೋಕ್. ಜೀ ಕನ್ನಡ ವಾಹಿನಿಯಲ್ಲಿ 'ನಾ ನಿನ್ನ ಬಿಡಲಾರೆ' ಧಾರಾವಾಹಿ ತಾಯಿ ಅಂಬಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನೀತಾ ಅಶೋಕ್ ಅವರು 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಕಿನ್ನರಿ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೀತಾ ಅವರು ತಾರಿಣಿಯ ಗೆಳತಿ ಯಶೋದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Bhagyalakshmi Serial Kannada: ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರವೇ ಅಂತ್ಯ ಆಯ್ತಾ?

Bhagyalakshmi Serial: ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರವೇ ಅಂತ್ಯ?

Bhagyalakshmi Serial: ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ರೋಚಕ ತಿರುವು ಕಂಡಿದೆ. ಕೆಲವು ದಿನಗಳಿಂದ ಕಥೆಗಳನ್ನು ಗಮನಿಸಿದ ವೀಕ್ಷಕರಿಗೆ ಧಾರಾವಾಹಿ ಮುಕ್ತಾಯವಾಗುತ್ತೆ ಎಂಬ ಅನುಮಾನಗಳು ಶುರುವಾಗಿವೆ. ಅದರಂತೆ ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಮಗಳಿಗೋಸ್ಕರ ಭಾಗ್ಯ, ತಾಂಡವ್‌ನನ್ನು ಮನೆಯೊಳಗೆ ಕರೆಸಿಕೊಂಡಿದ್ದಾಳೆ. ಶ್ರೇಷ್ಠ ಈಗ ಬಿಲ್ಡಿಂಗ್‌ನಿಂದ ಕೆಳಗಡೆ ಬೀಳೋ ನಿರ್ಧಾರ ಮಾಡಿದ್ದಾಳೆ.

Salman Khan :  ಸಾನ್ವಿ ಸುದೀಪ್ ಕಂಠಕ್ಕೆ ಫಿದಾ ಆದ್ರು ಸಲ್ಮಾನ್ ಖಾನ್​​; ಪೋಸ್ಟ್‌ನಲ್ಲಿ ಏನಿದೆ?

ಸಾನ್ವಿ ಸುದೀಪ್ ಕಂಠಕ್ಕೆ ಫಿದಾ ಆದ್ರು ಸಲ್ಮಾನ್ ಖಾನ್​​!

Salman Khan: 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡು ಸಿನಿಮಾ ರಿಲೀಸ್‌ ಒಳಗೆಯೇ ಸಖತ್‌ ಟ್ರೆಂಡಿಂಗ್‌ ಆಗಿತ್ತು. ಡಿಸೆಂಬರ್ 25 ರಂದು 'ಮಾರ್ಕ್' ಸಿನಿಮಾ ತೆರೆಗೆ ಅಪ್ಪಳಿಸಿತ್ತು. 'ಮಾರ್ಕ್' ಸಿನಿಮಾದ ಪಾರ್ಟಿ ಸಾಂಗ್ - 'ಮಸ್ತ್ ಮಲೈಕಾ' ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ‌ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಾಡು ಬಾಲಿವುಡ್ ನಟ ಸಲ್ಮಾನ್ ಖಾನ್​​ಗೂ ಸಾಕಷ್ಟು ಇಷ್ಟ ಆಗಿದೆ.

Tanisha Kuppanda:  ದರ್ಶನ್​ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್‌

ದರ್ಶನ್​ ಹೆಸರಿನಲ್ಲಿ ಅನ್ನ ಸಂತರ್ಪಣೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್‌

Darshan Birthday: ನಟ ದರ್ಶನ್​ ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ ಸಖತ್‌ ಸೆಲೆಬ್ರೇಷನ್‌ ಮಾಡಿದ್ದರು. ದರ್ಶನ್​ ಅವರು ಜೈಲಿನಲ್ಲಿ ಇರುವ ಹಿನ್ನೆಲೆಯಲ್ಲಿ, ಅವರ ಅನುಪಸ್ಥಿತಿಯಲ್ಲಿಯೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದರು. ಅದರಲ್ಲಿ ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿದ್ದರು. ದರ್ಶನ್ ಅವರ ಹೆಸರನ್ನು ಉಗುರಿನ ಮೇಲೆ ಬರೆದುಕೊಂಡು, ಅವರ ಶೀಘ್ರ ಬಿಡುಗಡೆಗಾಗಿ ಹಾರೈಸಿದ್ದಾರೆ. ಇದೀಗ ಈ ಫೋಟೋಗಳು ವೈರಲ್‌ ಆಗಿವೆ.

ಯೂಟ್ಯೂಬರ್‌ಗಳ ಕಾಟಕ್ಕೆ ತತ್ತರಿಸಿಹೋದ ಮಲಯಾಳಂ ನಟಿ ರೇಖಾ ರತೀಶ್; ಕೇರಳ ಸಿಎಂಗೆ ಮಾಡಿದ ಮನವಿ ಏನು?

ʻನನ್ನನ್ನು ಬದುಕಲು ಬಿಡಿʼ; ಯೂಟ್ಯೂಬರ್‌ಗಳಿಗೆ ನಟಿ ರೇಖಾ ರತೀಶ್ ಟಾರ್ಗೆಟ್‌?

Rekha Ratheesh News: ಮಲಯಾಳಂ ನಟಿ ರೇಖಾ ರತೀಶ್ ಅವರು ತಮ್ಮ ಬಗ್ಗೆ ಅವಹೇಳನಕಾರಿ ಥಂಬ್‌ನೇಲ್‌ಗಳನ್ನು ಬಳಸಿ ವಿಡಿಯೋ ಮಾಡುತ್ತಿರುವ ಯೂಟ್ಯೂಬರ್‌ಗಳ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ್ದಾರೆ. ಸಿಂಗಲ್‌ ಪೇರೆಂಟ್‌ ಆಗಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ನನಗೆ ಈ ಯೂಟ್ಯೂಬ್ ಚಾನೆಲ್‌ಗಳಿಂದ ತೀವ್ರ ಮಾನಸಿಕ ಹಿಂಸೆ ಅಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Actor Suriya:  ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

RJ Balaji: ಆರ್ ಜೆ ಬಾಲಾಜಿ ನಿರ್ದೇಶನದ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಈ ಚಿತ್ರದ ಬಗ್ಗೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ, ಇದರಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಲಾಜಿ, ತಮಿಳುನಾಡು ಚುನಾವಣೆಯ ನಂತರವೇ ಈ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು

ತಿಹಾರ್ ಜೈಲಿನಿಂದ ಹೊರಬಂದ ರಾಜ್‌ಪಾಲ್ ಯಾದವ್; ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನಿಗೆ ನ್ಯಾಯಾಲಯದಿಂದ ಜಾಮೀನು!

ಜೈಲಿನಲ್ಲಿದ್ದ ನಟ ರಾಜ್‌ಪಾಲ್‌ ಯಾದವ್‌ಗೆ ಜಾಮೀನು; ಮತ್ತೆ ವಿಚಾರಣೆ ಯಾವಾಗ?

ರಾಜ್‌ಪಾಲ್‌ ಯಾದವ್‌ ಅರೆಸ್ಟ್‌ ಸುದ್ದಿಯು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು. 9 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ರಾಜ್‌ಪಾಲ್‌ಗೆ ಈಗ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಇರುವುದರಿಂದ ಈ ಜಾಮೀನು ಅವರಿಗೆ ದೊಡ್ಡ ಸಮಾಧಾನ ನೀಡಿದೆ ಎನ್ನಬಹುದು.

Toxic Movie: ʻಟಾಕ್ಸಿಕ್ʼ ಸಿನಿಮಾದಿಂದ ಹೊರ ಬಿತ್ತು ಎಕ್ಸಕ್ಲೂಸಿವ್‌ ಅಪ್‌ಡೇಟ್‌! ಇದೇ ತಿಂಗಳಲ್ಲಿ ಗುಡ್ ನ್ಯೂಸ್

ಟಾಕ್ಸಿಕ್ ಸಿನಿಮಾದಿಂದ ಹೊರ ಬಿತ್ತು ಎಕ್ಸಕ್ಲೂಸಿವ್‌ ಅಪ್‌ಡೇಟ್‌!

Yash Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಇದೀಗ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಗಲಿದೆ ಎನ್ನಲಾಗುತ್ತಿದೆ. ಮುನ್ನ ಫೆಬ್ರವರಿ ಅಂತ್ಯದ ವೇಳೆಗೆ ಸಿಹಿ ಸುದ್ದಿ ನೀಡೋದು ಗ್ಯಾರಂಟಿ ಎನ್ನಲಾಗುತ್ತಿದೆ.

Photos: ಮೊದಲನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಡಾಲಿ ಧನಂಜಯ ದಂಪತಿ; ಇಲ್ಲಿವೆ ಅಪರೂಪದ ಫೋಟೋಗಳು

Photos: ಧನಂಜಯ್ - ಧನ್ಯತಾಗೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು ಕಳೆದ ವರ್ಷ ಫೆ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಈ ಮದುವೆಗೆ ಸಾವಿರಾರು ಅಭಿಮಾನಿಗಳು, ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಆಗಮಿಸಿ, ಧನು ಮತ್ತು ಧನ್ಯತಾಗೆ ಶುಭ ಹಾರೈಸಿದ್ದರು. ಅಂದಹಾಗೆ, ಧನಂಜಯ್‌ ಅವರು ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪತ್ನಿ ಧನ್ಯತಾ ಅವರು ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

Amruthadhaare Kannada Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ' ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬರೋ ಸಮಯ ಬಂದಿದೆ. ಗೌತಮ್‌ ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇನ್ನೊಂದು ಕಡೆ ಜೈದೇವ್‌ ಹಾಗೂ ಸುನಿ ಮಾಸ್ಟರ್‌ ಪ್ಲ್ಯಾನ್‌ ಮಾಡಿರುವಂತಿದೆ. ಮಲ್ಲಿ ಡೈರೆಕ್ಟ್‌ ಆಗಿ ಸುನಿಗೆ ಮನೆಗೆ ಆಹ್ವಾನಿಸಿದ್ದಾಳೆ. ಮುಂದೇನಾಗುತ್ತೆ?

ಕಿರುತೆರೆ ನಟಿ ರಶ್ಮಿ ಲೀಲಾ ನಿಧನ; ಫಲಿಸದ ಪ್ರಾರ್ಥನೆ, ಶ್ವಾಸಕೋಶದ ಕಾಯಿಲೆಯೊಂದಿಗೆ ಹೋರಾಡಿ ಕೊನೆಯುಸಿರೆಳೆದ ಕಿರುತೆರೆ ಕಲಾವಿದೆ

ವಿಧಿಯಾಟಕ್ಕೆ ಸೋತ ನಟಿ ರಶ್ಮಿ ಲೀಲಾ; ಕೊನೆಯುಸಿರೆಳೆದ ಕಿರುತೆರೆ ಕಲಾವಿದೆ

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ ನಟಿ ರಶ್ಮಿ ಲೀಲಾ ಇಂದು (ಫೆ.16) ಸಾವನ್ನಪ್ಪಿದ್ದಾರೆ. ಅವರ ಪತಿ, ಖ್ಯಾತ ಸಂಭಾಷಣೆಕಾರ ಸಾರಕ್ಕಿ ಮಂಜು ತಮ್ಮ ಪತ್ನಿಯನ್ನು ಉಳಿಸಿಕೊಳ್ಳಲು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ಪ್ರಯತ್ನ ನಡೆಸಿದರೂ, ಯಾವುದೂ ಫಲ ಕೊಡಲಿಲ್ಲ.

ವಿಜಯ್-ರಶ್ಮಿಕಾ ಮದುವೆ ಡೇಟ್ ಫಿಕ್ಸ್: ವೆಡ್ಡಿಂಗ್ ಕಾರ್ಡ್ ಹೇಗಿದೆ ಗೊತ್ತಾ?

ರಶ್ಮಿಕಾ-ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್!

Vijay Deverakonda-Rashmika Mandanna: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಕಳೆದ ಕೆಲವು ದಿನದಿಂದ ಚರ್ಚೆಯಾಗುತ್ತಿದೆ. ಕೊನೆಗೂ ಇದಕ್ಕೆ ಕ್ಲಾರಿಫಿಕೇಶನ್ ಸಿಕ್ಕಿದೆ. ಅವರ ಮದುವೆಯ ಆಮಂತ್ರಣ ಪತ್ರ ವೈರಲ್ ಆಗಿದೆ. ಫೆಬ್ರವರಿ 26ರಂದು ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.

Pavithra Gowda: ದರ್ಶನ್‌ ಬರ್ತ್‌ಡೇ ದಿನವೇ ಪವಿತ್ರಾಗೆ ನಿರಾಸೆ;  ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ದರ್ಶನ್‌ ಬರ್ತ್‌ಡೇ ದಿನವೇ ಪವಿತ್ರಾಗೆ ನಿರಾಸೆ; ಸಿಗಲಿಲ್ಲ ಜಾಮೀನು!

Darshan : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಮಧ್ಯಂತರ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ದರ್ಶನ್ ಬರ್ತ್​ಡೇ ದಿನವೇ ಪವಿತ್ರಾ ಗೌಡಗೆ ಬಿಗ್ ಶಾಕ್ ಸಿಕ್ಕಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯ ಜಾಮೀನು ವಜಾ ಆಗಿದೆ. ಮಗಳಿಗೆ ಪರೀಕ್ಷೆ ಸಮೀಪಿಸಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್​​ನಲ್ಲಿ ಕೋರಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ.

Photos: ಒಟ್ಟಿಗೆ ಕಾಣಿಸಿಕೊಂಡ 'ಕಾದಂಬರಿ' ಸೀರಿಯಲ್‌ ಸಹೋದರಿಯರು; ಗೆಳೆತನವನ್ನ ಸಂಭ್ರಮಿಸಿದ ನಟಿ ಶ್ವೇತಾ ಚಂಗಪ್ಪ - ಸಿಂಧು ಕಲ್ಯಾಣ್

'ಕಾದಂಬರಿ' ಧಾರಾವಾಹಿ ಸಹೋದರಿಯರಾದ ಶ್ವೇತಾ ಚೆಂಗಪ್ಪ - ಸಿಂಧು ಅಪೂರ್ವ ಸಂಗಮ

ಉದಯ ಟಿವಿಯ ‘ಕಾದಂಬರಿ’ ಧಾರಾವಾಹಿಯಲ್ಲಿ ಸಹೋದರಿಯರಾಗಿ ಕಾಣಿಸಿಕೊಂಡವರು ಶ್ವೇತಾ ಚೆಂಗಪ್ಪ ಮತ್ತು ಸಿಂಧು ಕಲ್ಯಾಣ್.‌ ಇದೀಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನದಂದು ಫ್ರೆಂಡ್‌ಶಿಪ್ ಡೇ ಆಚರಿಸಿದ್ದಾರೆ. ಆ ಕುರಿತು ಬರೆದುಕೊಂಡಿರುವ ಶ್ವೇತಾ ಚೆಂಗಪ್ಪ, "ಕಾದಂಬರಿ ಇಂದ ಶುರುವಾದ ಸ್ನೇಹ.. ಆದಿ ಇಂದ ಕೊನೆವರೆಗೆ... ವ್ಯಾಲೆಂಟೈನ್ಸ್ ಡೇ (Valentine's Day) ಆಚರಿಸಲು ಎಂಥಾ ಅದ್ಭುತವಾದ ಮಾರ್ಗವಿದು! ಇದು ವ್ಯಾಲೆಂಟೈನ್ಸ್ ಡೇಗಿಂತ ಫ್ರೆಂಡ್‌ಶಿಪ್ ಡೇ (Friendship Day) ತರಹವೇ ಇತ್ತು.. ತುಂಬಾ ಮಜಾ, ನಗು ಮತ್ತು ಹಂಚಿಕೊಳ್ಳಲು ನೂರಾರು ವಿಷಯಗಳು... ನನ್ನ 'ಫಾರ್‌ಎವರ್ ಫ್ರೆಂಡ್ಸ್' ನಾವು.." ಎಂದಿದ್ದಾರೆ. ಜೊತೆಗೆ ತಮ್ಮಿಬ್ಬರ ಕುಟುಂಬಗಳು ಒಟ್ಟಿಗೆ ಇರುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟ ಧನ್ವೀರ್ ಗೌಡ ಉತ್ತಮ ಬಾಂಧವ್ಯ ಹೊಂದಿದ್ದಾರೆ .ಅಷ್ಟೇ ಅಲ್ಲದೆ ನಟ ದರ್ಶನ್ ಅರೆಸ್ಟ್ ಆದ ಆರಂಭದಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೈಲಿಗೆ ಧನ್ವೀರ್ ಗೌಡ ಭೇಟಿ ನೀಡುತ್ತಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ (Darshan Birthday) ಜೈಲು ಸೇರಿದ ಬಳಿಕ ಕೆಲವರು ಅವರಿಂದ ದೂರಾಗಿದ್ದಾರೆ. ಧನ್ವೀರ್ ಮಾತ್ರ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಧನ್ವೀರ್ ) ತಮ್ಮ ನೆಚ್ಚಿನ ಅಣ್ಣನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ.

Loading...