ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ರೇಣುಕಾಸ್ವಾಮಿ ಕೊಲೆ ಕೇಸ್: ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇಕೆ ನಟ ದರ್ಶನ್?

ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೇಕೆ ನಟ ದರ್ಶನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವಿಳಂಬಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಟ ದರ್ಶನ್ ತೂಗುದೀಪ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸಲು ದರ್ಶನ್‌ ಕೋರಿದ್ದಾರೆ.

ʻಮೋದಿ ಇವೆಂಟ್ ಮ್ಯಾನೇಜ್‌ಮೆಂಟ್ ವೈಫಲ್ಯʼ ಎಂದು ಲೇವಡಿ ಮಾಡಿದ ಟಿಎಂಸಿ ನಾಯಕನಿಗೆ ನಟ ಅನಿಲ್‌ ಕುಮಾರ್‌ ಖಡಕ್‌ ಉತ್ತರ! ಅಷ್ಟಕ್ಕೂ ಆಗಿದ್ದೇನು?

ʻದೇಶ ಮುನ್ನಡೆಸಲು ಮೋದಿಯೇ ಅತ್ಯುತ್ತಮ ಆಯ್ಕೆʼ ಎಂದ ನಟ ಅನಿಲ್ ಕುಮಾರ್

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಲಾಘವ ಗಮನಿಸದೆ ಮುಂದೆ ಸಾಗಿದ ವಿಡಿಯೋ ಬಳಸಿ ಟ್ರೋಲ್ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ನಟ, ವಿಜ್ಞಾನಿ ಡಾ. ಅನಿಲ್ ಕುಮಾರ್ ರಸ್ತೋಗಿ ಖಡಕ್ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಹಾಲಿವುಡ್‌ನ Obsession ಸಿನಿಮಾ‌ ಬ್ಲಾಕ್‌ಬಸ್ಟರ್‌ ಹಿಟ್; ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಭಾರತದಲ್ಲಿನ ʻಒಬ್ಸೆಷನ್ʼ ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಕೇವಲ ಬರೀ 7 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾದ ‘ಒಬ್ಸೆಷನ್’ ಚಿತ್ರವು ವಿಶ್ವಾದ್ಯಂತ 2,240 ಕೋಟಿ ರೂ. ಕೊಳ್ಳೆಹೊಡೆದು ಐತಿಹಾಸಿಕ ದಾಖಲೆ ಬರೆದಿದೆ. ಭಾರತದಲ್ಲೂ ಈ ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು, ಭಾರತದಲ್ಲಿನ ಕಲೆಕ್ಷನ್ ರಿಪೋರ್ಟ್‌ ಕೇಳಿ ನಿರ್ದೇಶಕ ಕರಿ ಬಾರ್ಕರ್ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ರಾಮ್‌ ಚರಣ್‌ಗೆ ಹೊಸ ಬಿರುದು ನೀಡಿದ ಪ್ರಧಾನಿ ನರೇಂದ್ರ ಮೋದಿ; ಅಪ್ಪ ಚಿರಂಜೀವಿ ಖುಷಿಗೆ ಪಾರವೇ ಇಲ್ಲ!

ರಾಮ್ ಚರಣ್‌ಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ; ಅಪ್ಪ ಚಿರಂಜೀವಿ ಭಾವುಕ

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸು ಕಂಡಿರುವ ನಟ ರಾಮ್ ಚರಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ 'ನ್ಯೂ ಏಜ್ ಮೆಗಾಸ್ಟಾರ್' ಎಂಬ ವಿಶೇಷ ಬಿರುದು ನೀಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಧಾನಿ ಆಡಿದ ಈ ಮಾತುಗಳಿಗೆ ಮೆಗಾಸ್ಟಾರ್ ಚಿರಂಜೀವಿ ಭಾವುಕ ಟ್ವೀಟ್ ಮಾಡಿ, ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.

'ಗೌರಿ ಕಲ್ಯಾಣ' ಸೀರಿಯಲ್‌ನಿಂದ ನಟ ನಿಖಿಲ್ ಔಟ್: ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಭಂಜನ್ ನಾಯ್ಡು!

ʻಗೌರಿ ಕಲ್ಯಾಣʼ ಧಾರಾವಾಹಿಯ ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ಪ್ರಭಂಜನ್

ಕಲರ್ಸ್ ಕನ್ನಡ ವಾಹಿನಿಯ ‘ಗೌರಿ ಕಲ್ಯಾಣ’ ಧಾರಾವಾಹಿಯಿಂದ ಅನಿಕೇತ್ ಪಾತ್ರಧಾರಿ ನಟ ನಿಖಿಲ್ ಎನ್. ದಿಢೀರ್ ಹೊರನಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಆ ಪಾತ್ರಕ್ಕೆ 'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ಪ್ರಭಂಜನ್ ನಾಯ್ಡು ಬಣ್ಣ ಹಚ್ಚುತ್ತಿದ್ದಾರೆ.

ʻಮಾತಾಡಿದ್ರು ಕಷ್ಟ, ಮಾತನಾಡದಿದ್ರು ಕಷ್ಟʼ; ಟ್ರೋಲ್‌ಗಳ ಬಗ್ಗೆ ಇಷ್ಟೊಂದು ಸೀರಿಯಸ್‌ ಆಗಿಬಿಟ್ರಾ ‌ʻತಲೈವಾʼ ರಜನಿಕಾಂತ್?

ಸುಖಾಸುಮ್ಮನೆ ಟ್ರೋಲ್‌ ಮಾಡುವವರಿಗೆ ಮಾತಿನೇಟು ನೀಡಿದ ʻತಲೈವಾʼ ರಜನಿಕಾಂತ್!

ತಮಿಳುನಾಡು ಚುನಾವಣೆ ಹಾಗೂ ಮುಖ್ಯಮಂತ್ರಿ ವಿಜಯ್ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಅನಗತ್ಯ ಟ್ರೋಲ್‌ಗಳ ವಿರುದ್ಧ ಸೂಪರ್‌ಸ್ಟಾರ್ ರಜನಿಕಾಂತ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಹೊಸ ಚಿತ್ರ ‘ಧರ್ಮನ್’ ಲಾಂಚ್ ವೇಳೆ ಮಾತನಾಡಿದ ಅವರು, ಎಲ್ಲರಿಂದಲೂ ಪ್ರಶಂಸೆ ಬಯಸುವುದು ಮೂರ್ಖತನ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನವಿಲು ಗರಿ ಡ್ಯಾನ್ಸ್ ತಂದ ಸಂಕಷ್ಟ; ಬಹಿರಂಗವಾಗಿ ಕ್ಷಮೆ ಕೇಳಿದ ನಿವೇದಿತಾ ಗೌಡ - ಕಿಶನ್ ಬಿಳಗಲಿ

ನವಿಲು ಗರಿ ಡ್ಯಾನ್ಸ್‌ನಿಂದ ಸಂಕಷ್ಟ; ಕಿಶನ್‌ - ನಿವೇದಿತಾ ಗೌಡ ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ನವಿಲು ಗರಿಗಳನ್ನು ಬಳಸಿದ ನಟಿ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ತಮ್ಮ ತಪ್ಪಿನ ಗಂಭೀರತೆ ಅರಿತು ವಿಡಿಯೋವನ್ನು ಡಿಲೀಟ್ ಮಾಡಿರುವ ಕಿಶನ್‌ ಮತ್ತು ನಿವಿ, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ʻಡೆಡ್ಲಿ ಡಾಕ್ಟರ್‌ʼ ಆಗಿ ಬಂದ ತಲೈವಾ; ರಜನಿಕಾಂತ್‌ ನಟನೆಯ 173ನೇ ಸಿನಿಮಾದ ಟೈಟಲ್‌ - ಫಸ್ಟ್‌ ಲುಕ್‌ ರಿಲೀಸ್!

ರಜನಿಕಾಂತ್ ಹೊಸ ಚಿತ್ರಕ್ಕೆ 'ಧರ್ಮನ್' ಟೈಟಲ್ ಫಿಕ್ಸ್: ‌ಅಶ್ವಥ್‌ಗೆ ಚಾನ್ಸ್

ʻಸೂಪರ್‌ ಸ್ಟಾರ್' ರಜನಿಕಾಂತ್ ಅವರ 173ನೇ ಚಿತ್ರಕ್ಕೆ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಎಂದು ಹೆಸರಿಡಲಾಗಿದ್ದು, ಕೈಯಲ್ಲಿ ಸರ್ಜಿಕಲ್ ಬ್ಲೇಡ್ ಹಿಡಿದ ರಜನಿಕಾಂತ್‌ ಅವರ ಖಡಕ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಶ್ವತ್ ಮಾರಿಮುತ್ತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ.

ʻಬ್ರೇಕ್‌ಅಪ್‌ʼ ಎಂದವರಿಗೆ ʻಬ್ರೇಕಿಂಗ್‌ ನ್ಯೂಸ್‌ʼ ಕೊಟ್ಟ ನಟಿ ತ್ರಿಶಾ; ಸಿಎಂ ವಿಜಯ್‌ಗೆ ತಡವಾಗಿ ವಿಶ್‌ ಮಾಡಿದ ಆಪ್ತ ಗೆಳತಿ!

ಸಿಎಂ ‘ದಳಪತಿ’ ವಿಜಯ್ - ತ್ರಿಶಾ ಬ್ರೇಕಪ್‌ ವದಂತಿಗಳಿಗೆ ಬಿತ್ತು ಬ್ರೇಕ್!‌

ತಮಿಳುನಾಡು ಮುಖ್ಯಮಂತ್ರಿ, ನಟ ‘ದಳಪತಿ’ ವಿಜಯ್ ಮತ್ತು ನಟಿ ತ್ರಿಶಾ ನಡುವೆ ಬ್ರೇಕಪ್‌ ಆಗಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ವಿಜಯ್‌ ಜೊತೆಗಿನ ಮಧ್ಯರಾತ್ರಿಯ ಬರ್ತ್‌ಡೇ ಸೆಲೆಬ್ರೇಷನ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತ್ರಿಶಾ ಗಾಸಿಪ್ಪಿಗರ ಬಾಯಿ ಬಂದ್‌ ಮಾಡಿದ್ದಾರೆ.

ಕೇಳಿದಷ್ಟು ಸಂಭಾವನೆ ಕೊಡದ ನಿರ್ಮಾಪಕರು; ಸ್ವಂತ ಹಣದಲ್ಲಿ ಸಿನಿಮಾ ನಿರ್ಮಿಸಲು ಮುಂದಾದ ನಟ ಅಜಿತ್‌ ಕುಮಾರ್!‌

ಕೇಳಿದಷ್ಟು ದುಡ್ಡು ಕೊಡದ ನಿರ್ಮಾಪಕರು; ಸಿನಿಮಾ ನಿರ್ಮಾಣಕ್ಕಿಳಿದ ನಟ ಅಜಿತ್!

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ತಮ್ಮ 64ನೇ ಚಿತ್ರಕ್ಕೆ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದರಿಂದ ಪ್ರಮುಖ ನಿರ್ಮಾಣ ಸಂಸ್ಥೆಗಳು ಹಿಂಜರಿದಿದ್ದವು. ಇದರಿಂದ ಬೇಸತ್ತ ಅಜಿತ್, ಬೇರೆ ನಿರ್ಮಾಪಕರಿಗಾಗಿ ಕಾಯುವ ಬದಲು ಹೊಸ ಚಿತ್ರಕ್ಕೆ ತಾವೇ ಸ್ವತಃ ಬಂಡವಾಳ ಹೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದ್ವಿಭಾಷೆಯಲ್ಲಿ ಮೂಡಿಬಂದ 'ಶ್ರಾವಣಿ' ಕಿರುಚಿತ್ರ; ಜೂನ್ 26 ಕ್ಕೆ ಒಟಿಟಿಯಲ್ಲಿ ರಿಲೀಸ್!

ದ್ವಿಭಾಷೆಯಲ್ಲಿ ಮೂಡಿಬಂದ 'ಶ್ರಾವಣಿ' ಕಿರುಚಿತ್ರ ಜೂನ್ 26ಕ್ಕೆ ರಿಲೀಸ್

ಮುಳಬಾಗಿಲು ಮೂಲದ ವಿಕ್ರಮ್ ಕುಮಾರ್ ನಿರ್ದೇಶನದ 'ಶ್ರಾವಣಿ' ಎಂಬ 35 ನಿಮಿಷಗಳ ದ್ವಿಭಾಷಾ ಕಿರುಚಿತ್ರ ಜೂನ್ 26 ರಂದು 'ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್' ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಹರ್ಷ ಕಲ್ಯಾಣ್ ನಾಯಕನಾಗಿ ನಟಿಸಿರುವ, ಲವ್ ಹಾಗೂ ಸೆಂಟಿಮೆಂಟ್ ಜಾನರ್‌ನ ಈ ಕಿರುಚಿತ್ರಕ್ಕೆ ಅಶೋಕ್ ಮೋದಿ ಬಂಡವಾಳ ಹೂಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್; ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ದರ್ಶನ್ ಪತ್ನಿ ಬಗ್ಗೆ ಅಶ್ಲೀಲ ಕಾಮೆಂಟ್; ಆರೋಪಿಗಳ ಜಾಮೀನು ಅರ್ಜಿ ವಜಾ!

ಸ್ಯಾಂಡಲ್‌ವುಡ್‌ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ.

ʻವಿಜಯ್‌ ಹುಟ್ಟುಹಬ್ಬಕ್ಕೆ ವಿಶ್‌ ಇಲ್ಲ, ಇನ್‌ಸ್ಟಾಗ್ರಾಮ್‌ನಲ್ಲೂ ಫಾಲೋ ಮಾಡ್ತಿಲ್ಲʼ;‌ ಸಿಎಂ ಮೇಲೆ ಮುನಿಸಿಕೊಂಡ್ರಾ ನಟಿ ತ್ರಿಶಾ ಕೃಷ್ಣನ್?

ವಿಜಯ್ ಬರ್ತ್‌ಡೇಗೆ ವಿಶ್‌ ಮಾಡದ ತ್ರಿಶಾ! CM ಮೇಲೆ ಮುನಿಸಿಕೊಂಡ್ರಾ ಗೆಳತಿ?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಜೂನ್ 22ರ ಹುಟ್ಟುಹಬ್ಬ. ಆದರೆ, ಅಂದು ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಶುಭಕೋರದೆ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬರೀ ವಿಶ್ ಮಾಡುವುದು ಮಾತ್ರವಲ್ಲದೆ, ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿಶಾ ಅನ್‌ಫಾಲೋ ಮಾಡಿದ್ದು, ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ ಎಂಬ ವದಂತಿ ದಟ್ಟವಾಗಿದೆ.

ʻಬಿಗ್‌ ಬಾಸ್‌ʼ ಖ್ಯಾತಿಯ ಕಿಶನ್ - ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು; ನವಿಲು ಗರಿ ಉಡುಪು ಧರಿಸಿ ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ!

ನವಿಲು ಗರಿ ಉಡುಪು ಧರಿಸಿ ರೀಲ್ಸ್ ಮಾಡಿದ್ದಕ್ಕೆ ನಿವೇದಿತಾ-ಕಿಶನ್‌ಗೆ ಸಂಕಷ್ಟ

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ನಟ ಕಿಶನ್ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಇತ್ತೀಚೆಗೆ ಈ ಜೋಡಿಯು ಭಾರಿ ಪ್ರಮಾಣದ ನೈಜ ನವಿಲು ಗರಿಗಳಿಂದ ವಿನ್ಯಾಸಗೊಳಿಸಲಾದ ಉಡುಪುಗಳನ್ನು ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡಿದ್ದರು. ಅದೇ ಈಗ ಸಂಕಷ್ಟ ತಂದಿಟ್ಟಿದೆ.

ಚಿಕ್ಕಣ್ಣ ಹುಟ್ಟುಹಬ್ಬಕ್ಕೆ 'ಲಕ್ಷ್ಮೀಪುತ್ರ' ಚಿತ್ರತಂಡದ ಸ್ಪೆಷಲ್ ಗಿಫ್ಟ್: ಸರಿಗಮಪ ಪ್ರತಿಭೆಗಳಿಗೆ ʻಇನ್ಮೇಲೆʼ ಸಾಂಗ್‌ನಲ್ಲಿ ಚಾನ್ಸ್‌

Chikkanna: ಲಕ್ಷ್ಮೀಪುತ್ರ ಚಿತ್ರದಲ್ಲಿ ‌ʻಸರಿಗಮಪʼ ಪ್ರತಿಭೆಗಳಿಗೆ ಚಾನ್ಸ್

ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ 'ಲಕ್ಷ್ಮೀಪುತ್ರ' ಚಿತ್ರದ 'ಇನ್ಮೇಲೆ' ಎಂಬ ಮಂಡ್ಯ ಸೊಗಡಿನ ಪ್ರೇಮಗೀತೆಯನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಎ.ಪಿ. ಅರ್ಜುನ್ ಸಾಹಿತ್ಯ ಹಾಗೂ ಅರ್ಜುನ್ ಜನ್ಯ ಸಂಗೀತದ ಈ ಹಾಡಿನ ಮೂಲಕ 'ಸರಿಗಮಪ' ಖ್ಯಾತಿಯ ದರ್ಶನ್ ಮೇಳವಂಕಿ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ʻಗಿಲ್ಲಿ ಬಿಗ್‌ ಬಾಸ್‌ ಗೆಲ್ಲೋಕೆ ನಂದು ಕ್ರೆಡಿಟ್‌ ಇದೆ, ಅವ್ನಂದ್ರೆ ನಮಗೂ ತುಂಬಾ ಇಷ್ಟʼ; ಹೀರೋ ಆಗ್ತಿರುವ ಪಳಾರ್‌ಗೆ ವಿಶ್‌ ಮಾಡಿದ ಕರಿಬಸಪ್ಪ

ʻಗಿಲ್ಲಿ ನಟ ಬಿಗ್ ಬಾಸ್ ಗೆಲ್ಲೋಕೆ ನಂದೂ ಕ್ರೆಡಿಟ್ ಇದೆʼ- ಕರಿಬಸಪ್ಪ

ʻಬಿಗ್ ಬಾಸ್ʼ ಕನ್ನಡ ಸೀಸನ್ 12ರ ವಿನ್ನರ್ 'ಗಿಲ್ಲಿ' ನಟ ಅವರು 'ಪಳಾರ್' ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಈ ವೇಳೆ ಕರಿಬಸಪ್ಪ ಶುಭ ಹಾರೈಸಿದ್ದಾರೆ. ಗಿಲ್ಲಿ ಗೆಲುವಿನಲ್ಲಿ ತಮ್ಮದೂ ಕ್ರೆಡಿಟ್ ಇದೆ ಎಂದಿರುವ ಕರಿಬಸಪ್ಪ, "ಗಿಲ್ಲಿ ಒಳ್ಳೆ ಮನುಷ್ಯ. ನಮಗೆ ಗಿಲ್ಲಿ ಅಂದ್ರೆ ಬಹಳ ಇಷ್ಟ" ಎಂದು ಹೇಳಿಕೊಂಡಿದ್ದಾರೆ.

ಸಮಂತಾ ಪ್ರೆಗ್ನೆನ್ಸಿ ಸೀಕ್ರೆಟ್ ಲೀಕ್ ಮಾಡಿದ್ರಾ ಚಿರಂಜೀವಿ? ʻಮೆಗಾ‌ ಸ್ಟಾರ್‌ʼ ಟ್ವೀಟ್‌ಗೆ ʻಚಿರು ಲೀಕ್ಸ್‌ʼ ಎಂದು ಕಾಮೆಂಟ್‌ ಮಾಡಿದ ಫ್ಯಾನ್ಸ್!

ನಟಿ ಸಮಂತಾ ಪ್ರೆಗ್ನೆನ್ಸಿ ಸೀಕ್ರೆಟ್ ಲೀಕ್ ಮಾಡಿದ್ರಾ ಚಿರಂಜೀವಿ?

ನಟಿ ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿಯ ‘ಮಾ ಇಂಟಿ ಬಂಗಾರಂ’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಅವರು ಹಂಚಿಕೊಂಡಿರುವ ಒಂದು ಟ್ವೀಟ್‌ ಭಾರಿ ಸಂಚಲನ ಮೂಡಿಸಿದೆ. ಚಿತ್ರತಂಡವನ್ನು ಮನೆಗೆ ಕರೆಸಿ ಸತ್ಕರಿಸಿದ ಚಿರು, "ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಮಂತಾ-ರಾಜ್ ದಂಪತಿಗೆ ಶುಭಾಶಯ" ಎಂದು ಬರೆದಿದ್ದಾರೆ. ಅದೇ ಈಗ ಚರ್ಚೆಗೆ ಕಾರಣವಾಗಿದೆ.

Jacqueline Fernandez:  ಜಾಕ್ವೆಲಿನ್ ಕೈ ಹಿಡಿದು ಎಳೆದ ಬಾಡಿಗಾರ್ಡ್; ವಿಡಿಯೋ ವೈರಲ್‌

ಜಾಕ್ವೆಲಿನ್ ಕೈ ಹಿಡಿದು ಎಳೆದ ಬಾಡಿಗಾರ್ಡ್; ವಿಡಿಯೋ ವೈರಲ್‌

Jacqueline Fernandez: ಭಾನುವಾರ (ಜೂನ್ 22) ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಭಿಮಾನಿಗಳ ಪ್ರೀತಿಗೆ ಓಗೊಟ್ಟ ನಟಿ, ಅಲ್ಲೇ ನಿಂತು ಫೋಟೋಗೆ ಫೋಸ್ ನೀಡಲು ಮುಂದಾದರು.

ನಟಿ ಸಾಯಿ ಪಲ್ಲವಿ ಕೈತಪ್ಪಿದ ಲಕ್ಕಿ ಚಾನ್ಸ್; ಸಮಂತಾಗೆ ಭರ್ಜರಿ ಲಾಭ ತಂದುಕೊಟ್ಟ 'ಮಾ ಇಂಟಿ ಬಂಗಾರಂ'!

‘ಮಾ ಇಂಟಿ ಬಂಗಾರಂ’ ಭರ್ಜರಿ ಕಮಾಯಿ; ಸಾಯಿ ಪಲ್ಲವಿ ಕೈಬಿಟ್ಟ ಲಕ್ಕಿ ಚಾನ್ಸ್!

ನಟಿ ಸಾಯಿ ಪಲ್ಲವಿ ಅವರ ಕಾಲ್‌ಶೀಟ್ ಸಮಸ್ಯೆಯಿಂದಾಗಿ ಕೈತಪ್ಪಿದ ‘ಮಾ ಇಂಟಿ ಬಂಗಾರಂ’ ಚಿತ್ರದ ಆಫರ್ ನಟಿ ಸಮಂತಾ ಪಾಲಿಗೆ ಲಕ್ಕಿ ಚಾನ್ಸ್ ಆಗಿ ಬದಲಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ, ಸಮಂತಾ ಅವರ ಸ್ವಂತ ಬ್ಯಾನರ್ ಅಡಿಯ ಈ ಫ್ಯಾಮಿಲಿ ಆ್ಯಕ್ಷನ್ ಡ್ರಾಮಾ ಜೂನ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

54 ವರ್ಷದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಜೊತೆ ಮದುವೆಯಾದ ʻಟಗರು ಸರೋಜʼ ಖ್ಯಾತಿಯ ನಟಿ ತ್ರಿವೇಣಿ ರಾವ್

ಮಾಜಿ ಸಿಎಂ ಜೊತೆ ʻಟಗರುʼ ಸರೋಜ ಕಲ್ಯಾಣ; ತ್ರಿವೇಣಿ ಮದುವೆಯಾದ ವರ ಯಾರು?‌

'ಟಗರು' ಸಿನಿಮಾ ಖ್ಯಾತಿಯ ಕನ್ನಡ ನಟಿ ತ್ರಿವೇಣಿ ರಾವ್ ಅವರು ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಜೂನ್ 19ರಂದು ವಿವಾಹವಾಗಿದ್ದಾರೆ. 2025ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ 54 ವರ್ಷದ ಬಿಪ್ಲಬ್, ಈಗ ಎರಡನೇ ಮದುವೆಯಾಗಿದ್ದಾರೆ.

Kannada Serial Actress: ವಂಚನೆ ಪ್ರಕರಣ ; ಕಿರುತೆರೆ ನಟಿ ವನಿತಾ ಬಂಧನ

ವಂಚನೆ ಪ್ರಕರಣ ; ಕಿರುತೆರೆ ನಟಿ ವನಿತಾ ಬಂಧನ

Kannada Serial Actress: ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಮತ್ತೊಮ್ಮೆ ಸಾಹಸಕ್ಕಿಳಿದ ನಟ ಚಂದನ್‌ಕುಮಾರ್‌; ಹೊಸ ರೂಪದಲ್ಲಿ ಪುನಃ ಥಿಯೇಟರ್‌ಗೆ ಬರ್ತಿದೆ ʻಫ್ಲರ್ಟ್‌ʼ ಸಿನಿಮಾ

ಹೊಸ ರೂಪದಲ್ಲಿ ʻಫ್ಲರ್ಟ್‌ʼ ಸಿನಿಮಾ ರೀ-ರಿಲೀಸ್; ಮತ್ತೆ ಸಾಹಸಕ್ಕಿಳಿದ ಚಂದನ್

ಸ್ಯಾಂಡಲ್‌ವುಡ್ ನಟ ಚಂದನ್ ಕುಮಾರ್ ನಿರ್ದೇಶಿಸಿ, ನಟಿಸಿರುವ 'ಫ್ಲರ್ಟ್' ಸಿನಿಮಾ ಸದ್ಯದಲ್ಲೇ ಹೊಸ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. 'ಎ ಪ್ಯೂರ್ ಡವ್ ಸ್ಟೋರಿ' ಎಂಬ ಅಡಿಬರಹದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ವಿಶೇಷ ಹಾಡೊಂದನ್ನು ಹಾಡುವ ಮೂಲಕ ಬೆಂಬಲ ನೀಡಿದ್ದಾರೆ.

ಜಮೀನಿಗಾಗಿ ಕಿರಿಕ್;‌ ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಅರೆಸ್ಟ್‌!‌

ಜಮೀನು ಕಿರಿಕ್‌: ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಕೊಡಲಿಯಿಂದ ದಾಳಿ

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಹಿರಿಯ ಸಹೋದರ ವಿಜಯೇಂದ್ರನಾಥ್ ತಿವಾರಿ ಅವರ ಮೇಲೆ ಕೊಡಲಿಯಿಂದ ಮಾರಣಾಂತಿಕ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವಿಜಯೇಂದ್ರನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ʻಬ್ಲಾಸ್ಟ್‌ʼ TO ʻಬಾಹುಬಲಿʼ; ಈ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್‌ ಆಗಲಿರುವ ಸಿನಿಮಾ - ವೆಬ್ ಸೀರೀಸ್‌ಗಳ ಪಟ್ಟಿ ಇಲ್ಲಿದೆ

ಒಟಿಟಿಯಲ್ಲಿ ಈ ವಾರ ಬಿಗ್ ʻಬ್ಲಾಸ್ಟ್‌ʼ; ಬಾಹುಬಲಿ ಜತೆ ರಾಜಾ ಶಿವಾಜಿ ರಿಲೀಸ್

ಜೂನ್ ಕೊನೆಯ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆಶ್', ಅರ್ಜುನ್ ಸರ್ಜಾ ನಟನೆಯ ಆಕ್ಷನ್ ಥ್ರಿಲ್ಲರ್ 'ಬ್ಲಾಸ್ಟ್' ಹಾಗೂ ಎಸ್.ಎಸ್. ರಾಜಮೌಳಿ ಅವರ ಸಿನೆಮಾ ಜರ್ನಿಯ 'ಬಾಹುಬಲಿ: ದಿ ಟಾರ್ಚ್‌ಬೀರರ್' ಡಾಕ್ಯುಮೆಂಟರಿ ಸೇರಿದಂತೆ ಹಲವು ಕಂಟೆಂಟ್‌ಗಳು ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲು ರೆಡಿಯಾಗಿವೆ.

Loading...