ನಿರ್ಮಾಪಕ ಭಾ. ಮಾ. ಹರೀಶ್ ಮಗ ಉಲ್ಲಾಸ್ಗೆ ಕೊಡಚಾದ್ರಿಯಲ್ಲಿ ಆಗಿದ್ದೇನು?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್ ಅವರ ಪುತ್ರ ಉಲ್ಲಾಸ್ (ಜೂನ್ 27) ಶಿವಮೊಗ್ಗದ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮುಗಿಸಿ ಮರಳುವಾಗ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬರುವ ಡಿಸೆಂಬರ್ನಲ್ಲಿ ಮದುವೆ ನಿಶ್ಚಯವಾಗಿದ್ದ ಉಲ್ಲಾಸ್, ಕುಸಿಯುವ ಐದು ನಿಮಿಷ ಮುಂಚೆಯೂ ಚುರುಕಾಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.