ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಕೆಲವೊಂದು ಶಾಕಿಂಗ್‌ ಘಟನೆಗಳನ್ನ ಹೇಳೋದಕ್ಕೆ ಆಗಲ್ಲʼ; 18 ವರ್ಷಗಳ ಹಿಂದಿನ ವಿಚಾರಗಳನ್ನು ಬಿಚ್ಚಿಟ್ಟ ಗಣೇಶ್‌ ಪತ್ನಿ ಶಿಲ್ಪಾ!

ʻಮನೆ ಬಾಗಿಲು ತಟ್ಟುತ್ತಿದ್ದರುʼ; ಹಳೇ ದಿನಗಳನ್ನು ನೆನೆದ ಶಿಲ್ಪಾ ಗಣೇಶ್‌

'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು ಪತ್ನಿ ಶಿಲ್ಪಾ ಮದುವೆಯಾಗ 18 ವರ್ಷಗಳಾಗಿವೆ. ಇವರ ಮದುವೆಯ ಆರಂಭಿಕ ದಿನಗಳಲ್ಲಿ ವಿಚಿತ್ರ ಮತ್ತು ಆಘಾತಕಾರಿ ಅಭಿಮಾನದ ಘಟನೆಗಳು ನಡೆದಿದ್ದವು. ವಿಶ್ವವಾಣಿ ಟಿವಿ ಜೊತೆಗಿನ ಸಂದರ್ಶನದಲ್ಲಿ ಅವುಗಳನ್ನು ಶಿಲ್ಪಾ ಗಣೇಶ್‌ ಹಂಚಿಕೊಂಡಿದ್ದಾರೆ.

29 ವರ್ಷಗಳ ನಂತರ ಮತ್ತೆ ʻಅಮೆರಿಕಾ ಅಮೆರಿಕಾʼ ಗುಂಗಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌; ಪಾರ್ಟ್‌ 2ರ ವಿಶೇಷತೆಗಳೇನು?

ʻಅಮೆರಿಕಾ ಅಮೆರಿಕಾ 2ʼ ಸಿನಿಮಾ ಅನೌನ್ಸ್‌ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು 29 ವರ್ಷಗಳ ನಂತರ ತಮ್ಮದೇ ಬ್ಯಾನರ್ ಅಡಿಯಲ್ಲಿ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಶೀರ್ಷಿಕೆಯನ್ನು ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ಸಹನಾ ವಿಜಯಕುಮಾರ್ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

15 ದಿವಸಗಳ ಅಂತರದಲ್ಲಿ ಗಣೇಶ್‌ ನಟನೆಯ 2 ಸಿನಿಮಾ ರಿಲೀಸ್‌; ʻಗೋಲ್ಡನ್‌ ಸ್ಟಾರ್‌ʼ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌

15 ದಿನಗಳ ಅಂತರದಲ್ಲಿ ಗಣೇಶ್ ನಟನೆಯ 2 ಬಿಗ್ ಸಿನಿಮಾಗಳು ರಿಲೀಸ್!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ತಮ್ಮ ಹುಟ್ಟುಹಬ್ಬದ ಸುದಿನದಂದೇ ಅಭಿಮಾನಿಗಳಿಗೆ ಭರ್ಜರಿ ರಿಟರ್ನ್ ಗಿಫ್ಟ್ ನೀಡಿದ್ದು, ತಾವು ನಟಿಸಿರುವ ‘ಪಿನಾಕ’ ಹಾಗೂ ‘ಬೃಂದಾ ವಿಹಾರಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕೇವಲ 15 ದಿನಗಳ ಅಂತರದಲ್ಲಿ ಈ ಎರಡೂ ಬಿಗ್ ಬಜೆಟ್ ಚಿತ್ರಗಳು ರಿಲೀಸ್‌ ಆಗಲಿರುವುದು ವಿಶೇಷ.

ಮಕ್ಕಳ ಪ್ರಾರ್ಥನಾ ಗೀತೆ ಬರೆದ ʻಡಾಲಿʼ ಧನಂಜಯ; ಸಿದ್ದಗಂಗಾ ಮಠದ ಅಂಗಳದಲ್ಲಿ ನಡೆಯಿತು ‘ಮದರ್‌ ಪ್ರಾಮಿಸ್‌’ ಚಿತ್ರೀಕರಣ

ಮಕ್ಕಳಿಗಾಗಿ ಪ್ರಾರ್ಥನಾ ಗೀತೆ ಬರೆದ ಧನಂಜಯ; ಸಿದ್ದಗಂಗಾ ಮಠದಲ್ಲಿ ಶೂಟಿಂಗ್!

ನಟ ʻಡಾಲಿʼ ಧನಂಜಯ ಅವರು 'ಮದರ್ ಪ್ರಾಮಿಸ್' ಚಿತ್ರಕ್ಕಾಗಿ ಮೊದಲ ಬಾರಿಗೆ ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯೊಂದನ್ನು ಬರೆದಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಚಿತ್ರೀಕರಿಸಲಾದ ಈ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಪೂರ್ಣ ಮೈಸೂರು ನಿರ್ದೇಶನದ, ಈ ಕಾಮಿಡಿ ಥ್ರಿಲ್ಲರ್ ಸಿನಿಮಾವು ಜುಲೈ 10 ರಂದು ತೆರೆಗೆ ಬರಲಿದೆ.

ಫಿಲ್ಮ್‌ ಸಿಟಿಗೆ 500 ಕೋಟಿ, ಕಲಾವಿದರ ವಸತಿ ಯೋಜನೆಗೆ 5 ಎಕರೆ ಭೂಮಿ?; ವಾಣಿಜ್ಯ ಮಂಡಳಿ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಡಿ. ಕೆ. ಶಿವಕುಮಾರ್

ಕನ್ನಡ ಚಿತ್ರರಂಗದ ಉಳಿವಿಗಾಗಿ ಸರ್ಕಾರದ ಸಕಾರಾತ್ಮಕ ಸ್ಪಂದನೆ; ಸಿಎಂ ಭರವಸೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ನೇತೃತ್ವದ ನಿಯೋಗದ ಅಹವಾಲು ಆಲಿಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಹೊಸ ಚಲನಚಿತ್ರ ನೀತಿ ತರಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; ಡಿ ಕಂಪನಿ ಗ್ಯಾಂಗ್‌ ಸದಸ್ಯರ ಬಂಧನ

ಡಿ ಕಂಪನಿ ಗ್ಯಾಂಗ್‌ ಸದಸ್ಯರ ಬಂಧನ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ವಿರುದ್ಧ ಸಾಕ್ಷಿ ಹೇಳದಂತೆ ಸಾಕ್ಷಿಯೊಬ್ಬರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾದ ಪುನೀತ್, ಸುಹಾಸ್ ಮತ್ತು ವೇಣು ಎಂದು ಗುರುತಿಸಲಾಗಿದೆ.

ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಊಟ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

ಜೀವನಪೂರ್ತಿ ರುಚಿಯಿಲ್ಲದ ಊಟ ಮಾಡಬೇಕಾ ಸಮಂತಾ? ಆಘಾತಕಾರಿ ವಿಚಾರ ಬಹಿರಂಗ

ನಟಿ ಸಮಂತಾ ರುತ್ ಪ್ರಭು ಅವರು 'ಮಯೋಸೈಟಿಸ್' ಆಟೋ ಇಮ್ಯೂನ್ ಸಮಸ್ಯೆಯನ್ನು ಹತೋಟಿಯಲ್ಲಿಡಲು ಕಳೆದ ಎರಡು ವರ್ಷಗಳಿಂದ ಉಪ್ಪು ಮತ್ತು ಯಾವುದೇ ರುಚಿಯಿಲ್ಲದ ಕಠಿಣ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ನಿರ್ದೇಶಕಿ ನಂದಿನಿ ರೆಡ್ಡಿ ಬಹಿರಂಗಪಡಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ನಟನೆಯ 'ಲೆನಿನ್' ಚಿತ್ರದಲ್ಲಿ ಅಬ್ಬರಿಸಿದ ಕನ್ನಡದ ಪ್ರತಿಭಾವಂತ ಕಲಾವಿದರು

ತೆಲುಗಿನ 'ಲೆನಿನ್' ಚಿತ್ರದಲ್ಲಿ ಅಬ್ಬರಿಸಿದ ಕನ್ನಡದ ಪ್ರಮೋದ್‌ - ರಮೇಶ್‌

Lenin Movie Trailer: ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ನಟನೆಯ ‘ಲೆನಿನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕನ್ನಡದ ಪ್ರತಿಭಾವಂತ ಕಲಾವಿದರಾದ ಪ್ರಮೋದ್ ಮತ್ತು ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿ ಗಮನ ಸೆಳೆದಿದ್ದಾರೆ. ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ, ಈ ಸಿನಿಮಾ ಜುಲೈ 10 ರಂದು ತೆರೆಕಾಣಲಿದೆ.

ʻಅವ್ರು ಹೀರೋ, ನಾವು ತಡೆಯಲು ಸಾಧ್ಯವೇ?ʼ; ಪತಿ ಗೋವಿಂದ ಅಕ್ರಮ ಸಂಬಂಧಗಳ ಬಗ್ಗೆ ಬಾಯಿಬಿಟ್ಟ ಪತ್ನಿ ಸುನಿತಾ ಅಹುಜಾ!

ನಟ ಗೋವಿಂದ ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಸುನಿತಾ ಸ್ಫೋಟಕ ಹೇಳಿಕೆ!

ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ನೆಟ್‌ಫ್ಲಿಕ್ಸ್‌ನ ‘ಲಾಕ್ ಅಪ್ 2’ ರಿಯಾಲಿಟಿ ಶೋನಲ್ಲಿ ತಮ್ಮ ಪತಿಯ ಅಕ್ರಮ ಸಂಬಂಧಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗೋವಿಂದ ದೊಡ್ಡ ಹೀರೋ ಆಗಿರುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದಿರುವ ಅವರು, ಮಕ್ಕಳಿಗಾಗಿ ಬದುಕುತ್ತಿರುವುದಾಗಿ ಹೇಳಿದ್ದಾರೆ.

ʻಭಾಗ್ಯವಂತರುʼ ಸೀರಿಯಲ್‌ ಮೂಲಕ ಕಿರುತೆರೆಗೆ ಮರಳಿದ ನಟ ಸುಚೇಂದ್ರ ಪ್ರಸಾದ್; ಜನನಿಯಾಗಿ ಮಿಂಚಲಿದ್ದಾರೆ ನಟಿ ತನ್ವಿ ರಾವ್‌

ಸನ್ ಉದಯದಲ್ಲಿ ಹೊಸ ಧಾರಾವಾಹಿ ʻಭಾಗ್ಯವಂತರುʼ; ಜುಲೈ 6ರಿಂದ ಪ್ರಸಾರ

ಸನ್ ಉದಯ ವಾಹಿನಿಯಲ್ಲಿ ಜುಲೈ 6 ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 7.30 ಕ್ಕೆ ಹೊಸ ಕೌಟುಂಬಿಕ ಧಾರಾವಾಹಿ ‘ಭಾಗ್ಯವಂತರು’ ಪ್ರಸಾರವಾಗಲಿದೆ. ಬದುಕಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಕನಸುಗಳನ್ನು ಹೊಂದಿರುವ ಜನನಿ, ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿಯನ್ನು ವರಿಸಿದ ನಂತರ ವೃತ್ತಿಜೀವನ ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಇದರ ಕಥಾಹಂದರವಾಗಿದೆ.

ʻಒಬ್ಬೊಬ್ರೇ ಬರ್ತಿರಾ? ಒಟ್ಟಿಗೆ ಬರ್ತಿರಾ?ʼ; ʻಟಾಕ್ಸಿಕ್‌ʼನ ಮಾನ್‌ಸ್ಟರ್‌ ಮಹಿಳೆಯರ ಜೊತೆ ಯಶ್‌ ಕುಸ್ತಿ!

Toxic: ಮಕ್ಕಳಿಗೆ ಎಚ್ಚರಿಕೆ ಕೊಟ್ಟು ʻಲೇಡೀಸ್ʼ ಟೀಸರ್‌ ರಿಲೀಸ್‌ ಮಾಡಿದ ಯಶ್

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಟೀಸರ್‌ ಬಿಡುಗಡೆಯಾಗಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಅವರ ರಗಡ್ ಲುಕ್‌ ಅನಾವರಣಗೊಂಡಿದೆ. ಈ ಸಿನಿಮಾವು ಆಗಸ್ಟ್‌ 26ರಂದು ತೆರೆಗೆ ಬರಲಿದೆ.

ʻಕೈ-ಕಾಲು ಹಿಡಿದಾದ್ರೂ ಡಿ ಬಾಸ್‌ನ ನನ್ ಸಿನಿಮಾ ಈವೆಂಟ್‌ಗೆ ಕರೆದುಕೊಂಡು ಬರ್ತಿದ್ದೆʼ; ಜನ್ಮದಿನದಂದು ದರ್ಶನ್‌ರನ್ನು ನೆನೆದ ಸೋನು ಶ್ರೀನಿವಾಸ್‌ ಗೌಡ

ಜನ್ಮದಿನದಂದು ದರ್ಶನ್‌ರನ್ನು ನೆನೆದ ಸೋನು; ದಾಸನ ಬಗ್ಗೆ ಹೇಳಿದ್ದೇನು?‌

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ್ ಗೌಡ ಅವರ ಜನ್ಮದಿನದಂದು ಅವರು ನಟಿಸಿರುವ 'ಕೇಕೆ' ಚಿತ್ರದ 'ಗುಂಟೂರು ಅಮ್ಮಾಯಿ' ಐಟಂ ಗೀತೆ ಬಿಡುಗಡೆಯಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು, ಕಾಲಿಗೆ ಬಿದ್ದಾದರೂ ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರನ್ನುಕರೆತರುತ್ತಿದ್ದೆ ಎಂದು ಭಾವುಕರಾಗಿ ಹೇಳಿದ್ದಾರೆ.

ಜುಲೈನಿಂದ ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿರುವ ಬಹುನಿರೀಕ್ಷಿತ ʻಟಾಪ್‌ 10ʼ ಸಿನಿಮಾಗಳ ಲಿಸ್ಟ್‌ ಇಲ್ಲಿದೆ; IMDb ಪಟ್ಟಿಯಲ್ಲಿ ಯಶ್‌ ಅಬ್ಬರ!

IMDb ಲಿಸ್ಟ್‌ನಲ್ಲಿ ಯಶ್ ಅಬ್ಬರ; ʻಟಾಕ್ಸಿಕ್‌ʼ ಸಿನಿಮಾಕ್ಕೆ ಎಷ್ಟನೇ ಸ್ಥಾನ?

ವರ್ಷದ ಮೊದಲಾರ್ಧವು ಈಗಾಗಲೇ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಬಾಲಿವುಡ್‌, ಟಾಲಿವುಡ್‌ ಒಳ್ಳೆಯ ಬೆಳೆ ತೆಗೆದಿವೆ. ತಮಿಳು ಚಿತ್ರರಂಗ ಕೂಡ ಒಂದು ಹಂತಕ್ಕೆ ಸೇಫ್‌ ಆಗಿದೆ. ಮಲಯಾಳಂನಿಂದ ಕಂಟೆಂಟ್‌ ಆಧಾರಿತ ಸಿನಿಮಾಗಳ ಸದ್ದು ಜೋರಾಗಿದೆ. ಸ್ಯಾಂಡಲ್‌ವುಡ್‌ ಇನ್ನೂ ಚೇತರಿಸಿಕೊಳ್ಳಬೇಕಿದೆ. ಸದ್ಯ ಎಲ್ಲರ ಕಣ್ಣುಗಳು 2026ರ ದ್ವಿತೀಯಾರ್ಧದ ಮೇಲಿದೆ. ಭಾರತದ ವಿವಿಧ ಭಾಷೆಯ ಹಲವು ದೊಡ್ಡ ಬಜೆಟ್ ಸಿನಿಮಾಗಳು ಜುಲೈನಿಂದ ಡಿಸೆಂಬರ್‌ ಅವಧಿಯಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಆ ಹಿನ್ನೆಲೆಯಲ್ಲಿ IMDb ಸಂಸ್ಥೆಯು '2026ರ ರ ದ್ವಿತೀಯಾರ್ಧದ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ' ಪಟ್ಟಿಯನ್ನು ಅನಾವರಣಗೊಳಿಸಿದೆ. ಎಲ್ಲರ ನಿರೀಕ್ಷೆಯಂತೆಯೇ, ರಣಬೀರ್ ಕಪೂರ್ - ಯಶ್‌ ಅವರ 'ರಾಮಾಯಣ: ಪಾರ್ಟ್ 1' ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾದರೆ, ಕನ್ನಡ ಟಾಕ್ಸಿಕ್‌ಗೆ ಎಷ್ಟನೇ ಸ್ಥಾನ ಮುಂದೆ ನೋಡಿ.

ಒಟ್ಟೊಟ್ಟಿಗೆ 7 ಸಿನಿಮಾಗಳಲ್ಲಿ ಬ್ಯುಸಿಯಾದ ʻಮುಗಿಲ್‌ಪೇಟೆʼ ನಟಿ ಕಯಾದು ಲೋಹರ್; ದಕ್ಷಿಣ ಭಾರತದಲ್ಲಿ ದರ್ಬಾರ್‌!

ದಕ್ಷಿಣ ಭಾರತದಲ್ಲಿ ʻಮುಗಿಲ್‌ಪೇಟೆʼ ನಟಿ ಕಯಾದು ಲೋಹರ್ ದರ್ಬಾರ್‌

ಕನ್ನಡದ ‘ಮುಗಿಲ್‌ಪೇಟೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಕಯಾದು ಲೋಹರ್, 'ಡ್ರಾಗನ್' ಚಿತ್ರದ ಯಶಸ್ಸು ಹಾಗೂ 'ಪವಳ ಮಲ್ಲಿ' ಆಲ್ಬಂ ಸಾಂಗ್ ಸಕ್ಸಸ್ ನಂತರ ಸದ್ಯ ದಕ್ಷಿಣ ಭಾರತದ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ. ಅವರ ಕೈಯಲ್ಲಿ ಪ್ರಸ್ತುತ 7 ಪ್ರಮುಖ ಚಿತ್ರಗಳಿವೆ.

ʻಕೇಕೆʼ ಚಿತ್ರದ ʻಗುಂಟೂರು ಅಮ್ಮಾಯಿʼ ಐಟಂ ಸಾಂಗ್‌ನಲ್ಲಿ ಸೋನು ಶ್ರೀನಿವಾಸ್‌ ಗೌಡ ಭರ್ಜರಿ ಸ್ಟೆಪ್‌; ಹುಟ್ಟುಹಬ್ಬಕ್ಕೆ ಸಖತ್‌ ಗಿಫ್ಟ್‌

ʻಕೇಕೆʼ ಚಿತ್ರದ ಐಟಂ ಸಾಂಗ್‌ನಲ್ಲಿ ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ‘ಕೇಕೆ’ ಚಿತ್ರದ ‘ಗುಂಟೂರು ಅಮ್ಮಾಯಿ’ ಎಂಬ ವಿಶೇಷ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರಣ್ ತೋಟಂಬೈಲ್ ಸಂಗೀತ ನೀಡಿರುವ ಈ ಹಾಡಿನಲ್ಲಿ ತೆಲುಗು ಸಾಹಿತ್ಯ ಬಳಸಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಮತ್ತು ಚಿತ್ರತಂಡದ ನಡುವೆ ಭಾರಿ ವಾಗ್ವಾದ ಜರುಗಿತು.

'ಪರಾಶಕ್ತಿ' ಚಿತ್ರದ ನಿರ್ಮಾಪಕರ ವಿರುದ್ಧ ಸುಧಾ ಕೊಂಗರಾ ಕೆಂಡ; ಸಂಭಾವನೆ ಕೊಡದೇ ಸತಾಯಿಸಿದ್ದಕ್ಕೆ ಕೋರ್ಟ್‌ ಮೆಟ್ಟಿಲೇರಿದ ನಿರ್ದೇಶಕಿ!

'ಪರಾಶಕ್ತಿ' ನಿರ್ಮಾಪಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಸುಧಾ ಕೊಂಗರಾ

ಶಿವಕಾರ್ತಿಕೇಯನ್ ಹಾಗೂ ಶ್ರೀಲೀಲಾ ನಟನೆಯ 'ಪರಾಶಕ್ತಿ' ಚಿತ್ರವನ್ನು ನಿರ್ದೇಶಿಸಿದ್ದಕ್ಕಾಗಿ ತಮಗೆ ಬರಬೇಕಿದ್ದ 8.39 ಕೋಟಿ ರೂಪಾಯಿ ಬಾಕಿ ಸಂಭಾವನೆಯನ್ನು ಪಾವತಿಸದ ನಿರ್ಮಾಣ ಸಂಸ್ಥೆ 'ಡಾನ್ ಪಿಕ್ಚರ್ಸ್' ವಿರುದ್ಧ ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗರಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಧ ವರ್ಷ ಕಳೆದರೂ ಚೇತರಿಸಿಕೊಳ್ಳದ ಸ್ಯಾಂಡಲ್‌ವುಡ್‌, ಪರಭಾಷೆಯ ಸಿನಿಮಾಗಳಿಗೆ ಸಖತ್‌ ದುಡ್ಡು! ಉಳಿದ ಆರು ತಿಂಗಳ ಕಥೆ ಏನು?

2026ರಲ್ಲಿ ತೆರೆಕಂಡ ಕನ್ನಡ ಚಿತ್ರಗಳೆಷ್ಟು? ಬಾಕ್ಸ್‌ಆಫೀಸ್‌ ರಿಸಲ್ಟ್‌ ಏನು?

Sandalwood Box Office 2026: ಈ ವರ್ಷದ ಮೊದಲ ಆರು ತಿಂಗಳಲ್ಲಿ ಕನ್ನಡ ಚಿತ್ರರಂಗ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ್ದು, 100ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿದ್ದರೂ ಒಟ್ಟು ಗಳಿಕೆ 85 ಕೋಟಿ ರೂ. ದಾಟಿಲ್ಲ. 'ಲವ್ ಮಾಕ್ಟೇಲ್ 3' ಲಾಭ ತಂದಿದ್ದರೆ, ಲಾಸ್‌ ಆದ ಸಿನಿಮಾಗಳೇ ಜಾಸ್ತಿ! ಇದೇ ವೇಳೆ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಲಾಭ ಮಾಡಿಕೊಂಡಿವೆ!

ʻಬಿಗ್ ಬಾಸ್ʼ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ತಡರಾತ್ರಿ ಕಿರುಕುಳ; ರಸ್ತೆಯಲ್ಲೇ ಮುಜುಗರ ಉಂಟು ಮಾಡಿದ ವಿಕೃತಕಾಮಿ

ವಿಕೃತಕಾಮಿಯ ಕಾಟದಿಂದ ನಟಿ ದಿವ್ಯಾ ಸುರೇಶ್‌ಗೆ ಮುಜುಗರ; ವಿಡಿಯೋ ವೈರಲ್

'ಬಿಗ್ ಬಾಸ್ ಕನ್ನಡ 8' ಖ್ಯಾತಿಯ ನಟಿ ದಿವ್ಯಾ ಸುರೇಶ್ ಹಾಗೂ ಅವರ ಸಹೋದರಿಗೆ ಜೂನ್ 28ರ ತಡರಾತ್ರಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಅಪರಿಚಿತ ಯುವಕನೊಬ್ಬ ವಿಕೃತವಾಗಿ ವರ್ತಿಸಿ ತೀವ್ರ ಮಾನಸಿಕ ಕಿರುಕುಳ ನೀಡಿದ್ದಾನೆ. ಕಾರಿನೊಳಗೆ ಕುಳಿತರೂ ಬಿಡದೆ ಅಸಭ್ಯ ಸನ್ನೆ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

Photos: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಸಿನಿಮಾಕ್ಕೆ ಚೆನ್ನೈನಲ್ಲಿ ಮುಹೂರ್ತ; ʻಜೈ ಭೀಮ್‌ʼ ಡೈರೆಕ್ಟರ್ ಜೊತೆ ಕೈಜೋಡಿಸಿದ ನಟ ಸೂರ್ಯ

Hombale Films: ʻಜೈ ಭೀಮ್ʼ ಡೈರೆಕ್ಟರ್‌ ಜೊತೆ ಸೂರ್ಯ ಹೊಸ ಸಿನಿಮಾ ಮುಹೂರ್ತ

ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ಪ್ರತಿಷ್ಠಿತ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ ಈ ಹೊಸ ಚಿತ್ರಕ್ಕೆ ಇಂದು (ಜೂನ್ 29) ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಮೆಗಾ ಪ್ರಾಜೆಕ್ಟ್‌ಗಾಗಿ ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಹಾಗೂ 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ಪಾರ್ಕ್ ಹ್ಯಾಟ್ ಹೋಟೆಲ್‌ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಈ ಸಿನಿಮಾ ಆರಂಭವಾಗಿದೆ. ಚಿತ್ರತಂಡದ ಪ್ರಮುಖರು ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವುದ ಫೋಟೋಗಳು ಇಲ್ಲಿವೆ. ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಗಣದ ಅಧಿಕೃತ ಮಾಹಿತಿ ಹೊರಬೀಳಲಿದೆ.

ರೈತರ ಸಮಸ್ಯೆಗೆ ಧ್ವನಿ ಆಗಲಿದ್ದಾರೆ ಶಿವರಾಜ್‌ಕುಮಾರ್: ವಿಜಯ್‌ ರಾಘವೇಂದ್ರ ನಟನೆಯ 'ಮಹಾನ್' ಚಿತ್ರಕ್ಕೆ 'ಕರುನಾಡ ಚಕ್ರವರ್ತಿ' ಎಂಟ್ರಿ

ವಿಜಯ್ ರಾಘವೇಂದ್ರ ನಟನೆಯ ʻಮಹಾನ್ʼ ಚಿತ್ರಕ್ಕೆ ಶಿವಣ್ಣ ಖಡಕ್ ಎಂಟ್ರಿ‌

ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯ, ಪಿ. ಸಿ. ಶೇಖರ್ ನಿರ್ದೇಶನದ 'ಮಹಾನ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಲಾಯರ್‌ ಪಾತ್ರದಲ್ಲಿ ನಟಿಸಿದ್ದಾರೆ. ರೈತರ ಜೀವನಾಧಾರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವ್ಯವಸ್ಥೆಯನ್ನು ತಿದ್ದುವ ಶಕ್ತಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ʻರಕ್ಕಿʼ ಸಿನಿಮಾ ಮಾಡಲು ಜರ್ಮನಿಯಿಂದ ಬಂದ ನಟ; ಈ ಚಿತ್ರಕ್ಕೆ ಸಾಥ್‌ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ರಕ್ಕಿ‌ ಟ್ರೇಲರ್ ರಿಲೀಸ್;‌ ಜರ್ಮನಿಯಿಂದ ಬಂದ ಕನ್ನಡ ನಟನಿಗೆ ಅಶ್ವಿನಿ ಬೆಂಬಲ

ವೆಂಕಟ್ ಭಾರದ್ವಾಜ್ ನಿರ್ದೇಶನದ, ನಟ ರಕ್ಕಿ ಮುಖ್ಯ ಭೂಮಿಕೆಯ ‘ರಕ್ಕಿ’ ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ಜರ್ಮನಿಯಲ್ಲಿ ನೆಲೆಸಿರುವ ಐಟಿ ಉದ್ಯಮಿ ಸಾಲಿಗ್ರಾಮ ಸುರೇಶ್ ನಿರ್ಮಿಸಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ರಕ್ಕಿ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದಾರೆ.

NTR - ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಅನೌನ್ಸ್: ಕಾರ್ತಿಕೇಯನ ಅವತಾರದಲ್ಲಿ ಬರ್ತಾರೆ ತಾರಕ್!‌

ಷಣ್ಮುಖನ ಅವತಾರದಲ್ಲಿ ಮಿಂಚಲಿದ್ದಾರೆ NTR; ತಾರಕ್‌ ಫ್ಯಾನ್ಸ್‌ ಫುಲ್‌ ಖುಷಿ

ಜೂನಿಯರ್ ಎನ್‌ಟಿಆರ್ - ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಹೊಸ ಬಿಗ್ ಬಜೆಟ್ ಪೌರಾಣಿಕ ಚಿತ್ರ ಜೂನ್ 29ರಂದು ಅಧಿಕೃತವಾಗಿ ಪ್ರಕಟವಾಗಿದೆ. 'ಎನ್‌ಟಿಆರ್ ಆರ್ಟ್ಸ್' ಹಾಗೂ 'ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ.

ʻವಾರಣಾಸಿʼ ಸಿನಿಮಾ 2 ಭಾಗಗಳಲ್ಲಿ ತೆರೆಗೆ ಬರಲಿದೆಯಾ? ಮಿಲಿಯನ್‌ ಡಾಲರ್‌ ಪ್ರಶ್ನೆಗೆ ರಾಜಮೌಳಿ ಕೊಟ್ರು ಉತ್ತರ!

ʻವಾರಣಾಸಿʼ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಾ? ಸ್ಪಷ್ಟನೆ ಕೊಟ್ರು ರಾಜಮೌಳಿ

ಬಾಹುಬಲಿ ಮತ್ತು ಆರ್‌ಆರ್‌ಆರ್‌ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ನಾಯಕತ್ವದ 'ವಾರಣಾಸಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಸಂಬಂಧ ರಾಜಮೌಳಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ತಮಿಳು ನಟ ಸೂರ್ಯ ಜೊತೆಗೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; 'ಜೈ ಭೀಮ್' ನಿರ್ದೇಶಕನಿಗೆ ಮತ್ತೊಂದು ಚಾನ್ಸ್

ತಮಿಳು ನಟ ಸೂರ್ಯ ಜೊತೆಗೆ ಹೊಸ ಸಿನಿಮಾ ಘೋಷಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್

ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್, ನಟ ಸೂರ್ಯ ಮತ್ತು 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರೊಂದಿಗೆ ತಮ್ಮ ಹೊಸ ತಮಿಳು ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ನೈಜ ಘಟನೆಗಳ ಆಧಾರಿತ ಈ ಕಮರ್ಷಿಯಲ್ ಚಿತ್ರಕ್ಕೆ ಕಯಾದು ಲೋಹರ್ ನಾಯಕಿಯಾಗಿದ್ದು, ಸಾಯಿ ಅಭ್ಯಂಕರ್ ಸಂಗೀತ ನೀಡಲಿದ್ದಾರೆ.

Loading...