ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Prajwal Devaraj: ʻಕರಾವಳಿʼ ಚಿತ್ರಕ್ಕಾಗಿ 700 ವರ್ಷಗಳ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಶೂಟಿಂಗ್

700 ವರ್ಷಗಳ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ‘ಕರಾವಳಿ’ ಚಿತ್ರದ ಶೂಟಿಂಗ್!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಚಿತ್ರದ ‘ಸೋಲ್ ಆಫ್ ಕರಾವಳಿ’ ಹಾಡು ಬಿಡುಗಡೆಯಾಗಿದೆ. 700 ವರ್ಷಗಳ ಭವ್ಯ ಇತಿಹಾಸವಿರುವ ಪ್ರಸಿದ್ಧ ಕಟಪಾಡಿ ಕಂಬಳದ ನೈಜ ಟ್ರ್ಯಾಕ್‌ನಲ್ಲಿ ಈ ಹಾಡನ್ನು ಇದೇ ಮೊದಲ ಬಾರಿಗೆ ಚಿತ್ರೀಕರಿಸಿರುವುದು ವಿಶೇಷ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾ ಜುಲೈ 24ಕ್ಕೆ ತೆರೆಕಾಣಲಿದೆ.

ಈ ವಾರದ ಕಿರುತೆರೆ TRP ಲೆಕ್ಕಾಚಾರ ಉಲ್ಟಾ ಪಲ್ಟಾ; ಅಬ್ಬರಿಸಿದ ʻಕಲರ್ಸ್ ಕನ್ನಡʼ ಧಾರಾವಾಹಿಗಳು

ಈ ವಾರದ ಟಿಆರ್‌ಪಿಯಲ್ಲಿ ಕಲರ್ಸ್ ಕನ್ನಡ ಧಾರಾವಾಹಿಗಳ ಗಮನಾರ್ಹ ಸಾಧನೆ

ಕನ್ನಡ ಕಿರುತೆರೆಯ ಟಿಆರ್‌ಪಿ ರೇಟಿಂಗ್ ಪಟ್ಟಿಯಲ್ಲಿ ಇಷ್ಟು ದಿನ ಏಕಸ್ವಾಮ್ಯ ಹೊಂದಿದ್ದ ಜೀ ಕನ್ನಡ ವಾಹಿನಿಗೆ ಈಗ ಕಲರ್ಸ್ ಕನ್ನಡದಿಂದ ಅನಿರೀಕ್ಷಿತ ಆಘಾತ ಎದುರಾಗಿದೆ. ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯು 6.6 ರೇಟಿಂಗ್‌ನೊಂದಿಗೆ ಇಡೀ ಪ್ರಥಮ ಸ್ಥಾನ ಉಳಿಸಿಕೊಂಡಿದ್ದರೂ, ಕಲರ್ಸ್ ಕನ್ನಡದ 'ನಂದಗೋಕುಲ', 'ಶ್ರೀಗಂಧದ ಗುಡಿ' ಸೇರಿದಂತೆ 5 ಪ್ರಮುಖ ಧಾರಾವಾಹಿಗಳು ಭರ್ಜರಿ ರೇಟಿಂಗ್ ಪಡೆದುಕೊಂಡು, ತೀವ್ರ ಪೈಪೋಟಿ ನೀಡಿವೆ.

ʻನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ..ʼ; ವಿನೀಶ್‌ ಕಾರು ಅಪಘಾತದ ಕುರಿತು ವಿಜಯಲಕ್ಷ್ಮೀ ದರ್ಶನ್‌ ಸ್ಪಷ್ಟನೆ

ದರ್ಶನ್ ಪುತ್ರನ ಕಾರು ಅಪಘಾತ: ʻಸುಳ್ಳು ಸುದ್ದಿ ನಂಬಬೇಡಿʼ ಎಂದ ವಿಜಯಲಕ್ಷ್ಮಿ

ನಟ ದರ್ಶನ್ ಪುತ್ರ ವಿನೀಶ್ ಕಾರು ಅಪಘಾತ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಸಂಪೂರ್ಣ ಸುಳ್ಳು ಎಂದು ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟಪಡಿಸಿದ್ದಾರೆ. ವಾಹನವನ್ನು ಚಾಲಕನೇ ಚಲಾಯಿಸುತ್ತಿದ್ದು, ಬೈಕ್ ಸವಾರರೇ ಬಂದು ಗುದ್ದಿದ್ದಾರೆ. ಮಾನವೀಯತೆಯಿಂದ ವಿನೀಶ್ ಕಾರಿನಿಂದ ಕೆಳಗಿಳಿದಿದ್ದನ್ನು ತಪ್ಪಾಗಿ ಬಿಂಬಿಸಲಾಗಿದೆ. ಎಂದು ಅವರು ಹೇಳಿದ್ದಾರೆ.

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಲೋಕದ ಬಲವಾದ ಕಥೆ

ವಿನೋದ್‌ ಪ್ರಭಾಕರ್‌ ಅಭಿನಯದ ʻಬಲರಾಮನ ದಿನಗಳುʼ ಸಿನಿಮಾ ಹೇಗಿದೆ?

'ಆ ದಿನಗಳು' ಚಿತ್ರ ತೆರೆಕಂಡು 19 ವರ್ಷಗಳ ನಂತರ ನಿರ್ದೇಶಕ ಕೆ. ಎಂ. ಚೈತನ್ಯ 80-90ರ ದಶಕದ ಬೆಂಗಳೂರು ಭೂಗತ ಲೋಕದ ಹಿನ್ನೆಲೆಯಲ್ಲಿ 'ಬಲರಾಮನ ದಿನಗಳು' ಚಿತ್ರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿನೋದ್ ಪ್ರಭಾಕರ್ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ.

ಬೆಂಗಳೂರಿನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಕಾರ್‌ ಅಪಘಾತ; ಸ್ಕೂಟರ್‌ಗೆ ಡಿಕ್ಕಿ

ಬೆಂಗಳೂರಿನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಕಾರ್‌ ಅಪಘಾತ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಪುತ್ರ ವಿನೀಶ್‌ ಕೂಡ ಇದೀಗ ಯಡವಟ್ಟು ಮಾಡಿಕೊಂಡಿದ್ದಾನೆ. ವಿನೀಶ್‌ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜರಾಜೇಶ್ವರಿ ನಗರದಲ್ಲಿ ಅಪಘಾತಕ್ಕೀಡಾಗಿದೆ. ನೀಶ್‌ ಡ್ರೈವ್‌ ಮಾಡುತ್ತಿದ್ದ ಪೋರ್ಡ್‌ ಎಂಡೋವರ್‌ ಕಾರು, ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮಂಗಳೂರಿಗೆ ಬಂದಿಳಿದ ʻಕಿಂಗ್ʼ ಖಾನ್: 'ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಮಂಗಳೂರಿಗೆ ಬಂದಿಳಿದ ಶಾರುಖ್‌; ಏರ್‌ಪೋರ್ಟ್ ಬಳಿ ಮುಗಿಬಿದ್ದ ಫ್ಯಾನ್ಸ್‌

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಶನ್ ಹಮ್ಮಿಕೊಂಡಿರುವ 'ಆನ್ ಇವನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕಾಗಿ ಗುರುವಾರ ಸಂಜೆ ಮಂಗಳೂರಿಗೆ ಬಂದಿಳಿದಿದ್ದಾರೆ. ಶಾರುಖ್‌ ಮಂಗಳೂರಿಗೆ ಆಗಮಿಸುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ದಂಡೇ ನೆರೆದಿತ್ತು.

ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ; ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ;‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

ಕನ್ನಡ ನಟಿ ಕೃಷಿ ತಾಪಂಡ ಅವರ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಬೆಡ್‌ರೂಮ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಮೇಘನಾ ನೀಡಿದ ದೂರಿನನ್ವಯ ದಾಂಪತ್ಯದಲ್ಲಿ ವಿರಸವಿತ್ತು ಎನ್ನಲಾಗಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

ಸಿಎಂ ವಿಜಯ್‌ ಹುಟ್ಟುಹಬ್ಬವನ್ನು ಆಚರಿಸಲಿಲ್ವಾ ನಟಿ ತ್ರಿಷಾ ಕೃಷ್ಣನ್? AI ಫೋಟೋ ಶೇರ್‌ ಮಾಡಿ ಯಾಮಾರಿಸಿದ್ರಾ? ಗಾಯಕಿಯ ಹೊಸ ಆರೋಪ!

ವಿಜಯ್ ಬರ್ತ್‌ಡೇ ಫೋಟೋ ನಕಲಿ? ಎಐ ಫೋಟೋ ಬಳಸಿ ಯಾಮಾರಿಸಿದ್ರಾ ನಟಿ ತ್ರಿಶಾ?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್ ಅವರ 52ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದ ಫೋಟೋ ಸಂಪೂರ್ಣ ನಕಲಿ ಹಾಗೂ ಎಐ (AI) ಜನರೇಟೆಡ್ ಎಂದು ವಿವಾದಾತ್ಮಕ ಗಾಯಕಿ ಸುಚಿತ್ರಾ ಆರೋಪಿಸಿದ್ದಾರೆ. ಸುಚಿತ್ರಾ ಲೇವಡಿ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

'ಲವ್ ಸೀಸನ್ಸ್' ಚಿತ್ರದ ರೋಚಕ ಟ್ರೇಲರ್ ರಿಲೀಸ್: ಹೀರೋ ಮುಕುಂದ ರಾಮಸ್ವಾಮಿ ಬರ್ತ್‌ಡೇಗೆ ಚಿತ್ರತಂಡದಿಂದ ಸ್ಪೆಷಲ್‌ ಗಿಫ್ಟ್‌!

ʻಲವ್ ಸೀಸನ್ಸ್ʼ ಟ್ರೇಲರ್ ರಿಲೀಸ್: ಹೀರೋ ಜನ್ಮದಿನಕ್ಕೆ ಚಿತ್ರತಂಡದ ಗಿಫ್ಟ್

ಸ್ಯಾಂಡಲ್‌ವುಡ್‌ನ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಲವ್ ಸೀಸನ್ಸ್’ ಅಧಿಕೃತ ಟ್ರೇಲರ್ ನಟ ಮುಕುಂದ ರಾಮಸ್ವಾಮಿ ಅವರ ಜನ್ಮದಿನದ ಅಂಗವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೃತ್ವಿಕ್ ನಿರ್ದೇಶನದ ಹಾಗೂ ಎನ್.ಆರ್ ಮಂಜುನಾಥ ನಿರ್ಮಾಣದ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಪ್ರತಿಭೆಗಳು ನಟಿಸಿದ್ದಾರೆ. ಈ ಚಿತ್ರವು ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ನಾಳೆ ಬಿಡುಗಡೆಯಾಗಲಿದೆ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್‌ ಬೆಂಗಳೂರಿನ ಆ ಒಂದು ಘಟನೆ

ಕ್ರೈಂ ಥ್ರಿಲ್ಲರ್ ವೆಬ್ ಸರಣಿ ಬೆಂಗಳೂರಿನ ಆ ಒಂದು ಘಟನೆ ಬಿಡುಗಡೆ ನಾಳೆ

ಸ್ವತಂತ್ರ ನಿರ್ಮಾಣ ಸಂಸ್ಥೆಯಾದ ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕ್ರೈಂ ಥ್ರಿಲ್ಲರ್ ವೆಬ್ ಸರಣಿ "ಬೆಂಗಳೂರಿನನ ಆ ಒಂದು ಘಟನೆ" ಬಿಡುಗಡೆಗೆ ಸಜ್ಜಾಗಿದೆ. ಈ ಕಥೆ ಅತ್ಯಾಚಾರ ಪ್ರಕರಣವೊಂದರ ತನಿಖೆಯನ್ನು ಆಧರಿಸಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ನಿರೂಪಿಸಲಾಗಿದೆ. ತನಿಖೆಯ ಪ್ರತಿ ಹಂತದಲ್ಲೂ ಅನಿರೀಕ್ಷಿತ ತಿರುವುಗಳು, ರೋಚಕ ಬೆಳವಣಿಗೆಗಳು ಮತ್ತು ಕುತೂಹಲವನ್ನು ಹೆಚ್ಚಿಸುವ ಘಟನೆಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡಲಿವೆ.

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ!

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ

ನಟಿ ಕೃಷಿ ತಾಪಂಡ ಅವರ ಆರ್‌ ಆರ್‌ ನಗರದಲ್ಲಿರುವ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಟಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ವೈಶಾಕ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿದ್ದ ವೈಶಾಕ್‌ ನಾನಿನ್ನು ಬದುಕುವುದಿಲ್ಲ, ಸಾಯುತ್ತೇನೆ ಎಂದು ಹೇಳಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್: ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇಕೆ ನಟ ದರ್ಶನ್?

ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೇಕೆ ನಟ ದರ್ಶನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವಿಳಂಬಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಟ ದರ್ಶನ್ ತೂಗುದೀಪ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸಲು ದರ್ಶನ್‌ ಕೋರಿದ್ದಾರೆ.

ʻಮೋದಿ ಇವೆಂಟ್ ಮ್ಯಾನೇಜ್‌ಮೆಂಟ್ ವೈಫಲ್ಯʼ ಎಂದು ಲೇವಡಿ ಮಾಡಿದ ಟಿಎಂಸಿ ನಾಯಕನಿಗೆ ನಟ ಅನಿಲ್‌ ಕುಮಾರ್‌ ಖಡಕ್‌ ಉತ್ತರ! ಅಷ್ಟಕ್ಕೂ ಆಗಿದ್ದೇನು?

ʻದೇಶ ಮುನ್ನಡೆಸಲು ಮೋದಿಯೇ ಅತ್ಯುತ್ತಮ ಆಯ್ಕೆʼ ಎಂದ ನಟ ಅನಿಲ್ ಕುಮಾರ್

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಲಾಘವ ಗಮನಿಸದೆ ಮುಂದೆ ಸಾಗಿದ ವಿಡಿಯೋ ಬಳಸಿ ಟ್ರೋಲ್ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ನಟ, ವಿಜ್ಞಾನಿ ಡಾ. ಅನಿಲ್ ಕುಮಾರ್ ರಸ್ತೋಗಿ ಖಡಕ್ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಹಾಲಿವುಡ್‌ನ Obsession ಸಿನಿಮಾ‌ ಬ್ಲಾಕ್‌ಬಸ್ಟರ್‌ ಹಿಟ್; ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಭಾರತದಲ್ಲಿನ ʻಒಬ್ಸೆಷನ್ʼ ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಕೇವಲ ಬರೀ 7 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾದ ‘ಒಬ್ಸೆಷನ್’ ಚಿತ್ರವು ವಿಶ್ವಾದ್ಯಂತ 2,240 ಕೋಟಿ ರೂ. ಕೊಳ್ಳೆಹೊಡೆದು ಐತಿಹಾಸಿಕ ದಾಖಲೆ ಬರೆದಿದೆ. ಭಾರತದಲ್ಲೂ ಈ ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು, ಭಾರತದಲ್ಲಿನ ಕಲೆಕ್ಷನ್ ರಿಪೋರ್ಟ್‌ ಕೇಳಿ ನಿರ್ದೇಶಕ ಕರಿ ಬಾರ್ಕರ್ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ರಾಮ್‌ ಚರಣ್‌ಗೆ ಹೊಸ ಬಿರುದು ನೀಡಿದ ಪ್ರಧಾನಿ ನರೇಂದ್ರ ಮೋದಿ; ಅಪ್ಪ ಚಿರಂಜೀವಿ ಖುಷಿಗೆ ಪಾರವೇ ಇಲ್ಲ!

ರಾಮ್ ಚರಣ್‌ಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ; ಅಪ್ಪ ಚಿರಂಜೀವಿ ಭಾವುಕ

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸು ಕಂಡಿರುವ ನಟ ರಾಮ್ ಚರಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ 'ನ್ಯೂ ಏಜ್ ಮೆಗಾಸ್ಟಾರ್' ಎಂಬ ವಿಶೇಷ ಬಿರುದು ನೀಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಧಾನಿ ಆಡಿದ ಈ ಮಾತುಗಳಿಗೆ ಮೆಗಾಸ್ಟಾರ್ ಚಿರಂಜೀವಿ ಭಾವುಕ ಟ್ವೀಟ್ ಮಾಡಿ, ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.

'ಗೌರಿ ಕಲ್ಯಾಣ' ಸೀರಿಯಲ್‌ನಿಂದ ನಟ ನಿಖಿಲ್ ಔಟ್: ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಭಂಜನ್ ನಾಯ್ಡು!

ʻಗೌರಿ ಕಲ್ಯಾಣʼ ಧಾರಾವಾಹಿಯ ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ಪ್ರಭಂಜನ್

ಕಲರ್ಸ್ ಕನ್ನಡ ವಾಹಿನಿಯ ‘ಗೌರಿ ಕಲ್ಯಾಣ’ ಧಾರಾವಾಹಿಯಿಂದ ಅನಿಕೇತ್ ಪಾತ್ರಧಾರಿ ನಟ ನಿಖಿಲ್ ಎನ್. ದಿಢೀರ್ ಹೊರನಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಆ ಪಾತ್ರಕ್ಕೆ 'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ಪ್ರಭಂಜನ್ ನಾಯ್ಡು ಬಣ್ಣ ಹಚ್ಚುತ್ತಿದ್ದಾರೆ.

ʻಮಾತಾಡಿದ್ರು ಕಷ್ಟ, ಮಾತನಾಡದಿದ್ರು ಕಷ್ಟʼ; ಟ್ರೋಲ್‌ಗಳ ಬಗ್ಗೆ ಇಷ್ಟೊಂದು ಸೀರಿಯಸ್‌ ಆಗಿಬಿಟ್ರಾ ‌ʻತಲೈವಾʼ ರಜನಿಕಾಂತ್?

ಸುಖಾಸುಮ್ಮನೆ ಟ್ರೋಲ್‌ ಮಾಡುವವರಿಗೆ ಮಾತಿನೇಟು ನೀಡಿದ ʻತಲೈವಾʼ ರಜನಿಕಾಂತ್!

ತಮಿಳುನಾಡು ಚುನಾವಣೆ ಹಾಗೂ ಮುಖ್ಯಮಂತ್ರಿ ವಿಜಯ್ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಅನಗತ್ಯ ಟ್ರೋಲ್‌ಗಳ ವಿರುದ್ಧ ಸೂಪರ್‌ಸ್ಟಾರ್ ರಜನಿಕಾಂತ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಹೊಸ ಚಿತ್ರ ‘ಧರ್ಮನ್’ ಲಾಂಚ್ ವೇಳೆ ಮಾತನಾಡಿದ ಅವರು, ಎಲ್ಲರಿಂದಲೂ ಪ್ರಶಂಸೆ ಬಯಸುವುದು ಮೂರ್ಖತನ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನವಿಲು ಗರಿ ಡ್ಯಾನ್ಸ್ ತಂದ ಸಂಕಷ್ಟ; ಬಹಿರಂಗವಾಗಿ ಕ್ಷಮೆ ಕೇಳಿದ ನಿವೇದಿತಾ ಗೌಡ - ಕಿಶನ್ ಬಿಳಗಲಿ

ನವಿಲು ಗರಿ ಡ್ಯಾನ್ಸ್‌ನಿಂದ ಸಂಕಷ್ಟ; ಕಿಶನ್‌ - ನಿವೇದಿತಾ ಗೌಡ ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ನವಿಲು ಗರಿಗಳನ್ನು ಬಳಸಿದ ನಟಿ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ತಮ್ಮ ತಪ್ಪಿನ ಗಂಭೀರತೆ ಅರಿತು ವಿಡಿಯೋವನ್ನು ಡಿಲೀಟ್ ಮಾಡಿರುವ ಕಿಶನ್‌ ಮತ್ತು ನಿವಿ, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ʻಡೆಡ್ಲಿ ಡಾಕ್ಟರ್‌ʼ ಆಗಿ ಬಂದ ತಲೈವಾ; ರಜನಿಕಾಂತ್‌ ನಟನೆಯ 173ನೇ ಸಿನಿಮಾದ ಟೈಟಲ್‌ - ಫಸ್ಟ್‌ ಲುಕ್‌ ರಿಲೀಸ್!

ರಜನಿಕಾಂತ್ ಹೊಸ ಚಿತ್ರಕ್ಕೆ 'ಧರ್ಮನ್' ಟೈಟಲ್ ಫಿಕ್ಸ್: ‌ಅಶ್ವಥ್‌ಗೆ ಚಾನ್ಸ್

ʻಸೂಪರ್‌ ಸ್ಟಾರ್' ರಜನಿಕಾಂತ್ ಅವರ 173ನೇ ಚಿತ್ರಕ್ಕೆ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಎಂದು ಹೆಸರಿಡಲಾಗಿದ್ದು, ಕೈಯಲ್ಲಿ ಸರ್ಜಿಕಲ್ ಬ್ಲೇಡ್ ಹಿಡಿದ ರಜನಿಕಾಂತ್‌ ಅವರ ಖಡಕ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಶ್ವತ್ ಮಾರಿಮುತ್ತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ.

ʻಬ್ರೇಕ್‌ಅಪ್‌ʼ ಎಂದವರಿಗೆ ʻಬ್ರೇಕಿಂಗ್‌ ನ್ಯೂಸ್‌ʼ ಕೊಟ್ಟ ನಟಿ ತ್ರಿಶಾ; ಸಿಎಂ ವಿಜಯ್‌ಗೆ ತಡವಾಗಿ ವಿಶ್‌ ಮಾಡಿದ ಆಪ್ತ ಗೆಳತಿ!

ಸಿಎಂ ‘ದಳಪತಿ’ ವಿಜಯ್ - ತ್ರಿಶಾ ಬ್ರೇಕಪ್‌ ವದಂತಿಗಳಿಗೆ ಬಿತ್ತು ಬ್ರೇಕ್!‌

ತಮಿಳುನಾಡು ಮುಖ್ಯಮಂತ್ರಿ, ನಟ ‘ದಳಪತಿ’ ವಿಜಯ್ ಮತ್ತು ನಟಿ ತ್ರಿಶಾ ನಡುವೆ ಬ್ರೇಕಪ್‌ ಆಗಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ವಿಜಯ್‌ ಜೊತೆಗಿನ ಮಧ್ಯರಾತ್ರಿಯ ಬರ್ತ್‌ಡೇ ಸೆಲೆಬ್ರೇಷನ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತ್ರಿಶಾ ಗಾಸಿಪ್ಪಿಗರ ಬಾಯಿ ಬಂದ್‌ ಮಾಡಿದ್ದಾರೆ.

ಕೇಳಿದಷ್ಟು ಸಂಭಾವನೆ ಕೊಡದ ನಿರ್ಮಾಪಕರು; ಸ್ವಂತ ಹಣದಲ್ಲಿ ಸಿನಿಮಾ ನಿರ್ಮಿಸಲು ಮುಂದಾದ ನಟ ಅಜಿತ್‌ ಕುಮಾರ್!‌

ಕೇಳಿದಷ್ಟು ದುಡ್ಡು ಕೊಡದ ನಿರ್ಮಾಪಕರು; ಸಿನಿಮಾ ನಿರ್ಮಾಣಕ್ಕಿಳಿದ ನಟ ಅಜಿತ್!

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ತಮ್ಮ 64ನೇ ಚಿತ್ರಕ್ಕೆ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದರಿಂದ ಪ್ರಮುಖ ನಿರ್ಮಾಣ ಸಂಸ್ಥೆಗಳು ಹಿಂಜರಿದಿದ್ದವು. ಇದರಿಂದ ಬೇಸತ್ತ ಅಜಿತ್, ಬೇರೆ ನಿರ್ಮಾಪಕರಿಗಾಗಿ ಕಾಯುವ ಬದಲು ಹೊಸ ಚಿತ್ರಕ್ಕೆ ತಾವೇ ಸ್ವತಃ ಬಂಡವಾಳ ಹೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದ್ವಿಭಾಷೆಯಲ್ಲಿ ಮೂಡಿಬಂದ 'ಶ್ರಾವಣಿ' ಕಿರುಚಿತ್ರ; ಜೂನ್ 26 ಕ್ಕೆ ಒಟಿಟಿಯಲ್ಲಿ ರಿಲೀಸ್!

ದ್ವಿಭಾಷೆಯಲ್ಲಿ ಮೂಡಿಬಂದ 'ಶ್ರಾವಣಿ' ಕಿರುಚಿತ್ರ ಜೂನ್ 26ಕ್ಕೆ ರಿಲೀಸ್

ಮುಳಬಾಗಿಲು ಮೂಲದ ವಿಕ್ರಮ್ ಕುಮಾರ್ ನಿರ್ದೇಶನದ 'ಶ್ರಾವಣಿ' ಎಂಬ 35 ನಿಮಿಷಗಳ ದ್ವಿಭಾಷಾ ಕಿರುಚಿತ್ರ ಜೂನ್ 26 ರಂದು 'ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್' ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಹರ್ಷ ಕಲ್ಯಾಣ್ ನಾಯಕನಾಗಿ ನಟಿಸಿರುವ, ಲವ್ ಹಾಗೂ ಸೆಂಟಿಮೆಂಟ್ ಜಾನರ್‌ನ ಈ ಕಿರುಚಿತ್ರಕ್ಕೆ ಅಶೋಕ್ ಮೋದಿ ಬಂಡವಾಳ ಹೂಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್; ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ದರ್ಶನ್ ಪತ್ನಿ ಬಗ್ಗೆ ಅಶ್ಲೀಲ ಕಾಮೆಂಟ್; ಆರೋಪಿಗಳ ಜಾಮೀನು ಅರ್ಜಿ ವಜಾ!

ಸ್ಯಾಂಡಲ್‌ವುಡ್‌ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ.

ʻವಿಜಯ್‌ ಹುಟ್ಟುಹಬ್ಬಕ್ಕೆ ವಿಶ್‌ ಇಲ್ಲ, ಇನ್‌ಸ್ಟಾಗ್ರಾಮ್‌ನಲ್ಲೂ ಫಾಲೋ ಮಾಡ್ತಿಲ್ಲʼ;‌ ಸಿಎಂ ಮೇಲೆ ಮುನಿಸಿಕೊಂಡ್ರಾ ನಟಿ ತ್ರಿಶಾ ಕೃಷ್ಣನ್?

ವಿಜಯ್ ಬರ್ತ್‌ಡೇಗೆ ವಿಶ್‌ ಮಾಡದ ತ್ರಿಶಾ! CM ಮೇಲೆ ಮುನಿಸಿಕೊಂಡ್ರಾ ಗೆಳತಿ?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಜೂನ್ 22ರ ಹುಟ್ಟುಹಬ್ಬ. ಆದರೆ, ಅಂದು ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಶುಭಕೋರದೆ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬರೀ ವಿಶ್ ಮಾಡುವುದು ಮಾತ್ರವಲ್ಲದೆ, ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿಶಾ ಅನ್‌ಫಾಲೋ ಮಾಡಿದ್ದು, ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ ಎಂಬ ವದಂತಿ ದಟ್ಟವಾಗಿದೆ.

Loading...