ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Photos: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಸಿನಿಮಾಕ್ಕೆ ಚೆನ್ನೈನಲ್ಲಿ ಮುಹೂರ್ತ; ʻಜೈ ಭೀಮ್‌ʼ ಡೈರೆಕ್ಟರ್ ಜೊತೆ ಕೈಜೋಡಿಸಿದ ನಟ ಸೂರ್ಯ

Hombale Films: ʻಜೈ ಭೀಮ್ʼ ಡೈರೆಕ್ಟರ್‌ ಜೊತೆ ಸೂರ್ಯ ಹೊಸ ಸಿನಿಮಾ ಮುಹೂರ್ತ

ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ಪ್ರತಿಷ್ಠಿತ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ ಈ ಹೊಸ ಚಿತ್ರಕ್ಕೆ ಇಂದು (ಜೂನ್ 29) ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಮೆಗಾ ಪ್ರಾಜೆಕ್ಟ್‌ಗಾಗಿ ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಹಾಗೂ 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ಪಾರ್ಕ್ ಹ್ಯಾಟ್ ಹೋಟೆಲ್‌ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಈ ಸಿನಿಮಾ ಆರಂಭವಾಗಿದೆ. ಚಿತ್ರತಂಡದ ಪ್ರಮುಖರು ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವುದ ಫೋಟೋಗಳು ಇಲ್ಲಿವೆ. ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಗಣದ ಅಧಿಕೃತ ಮಾಹಿತಿ ಹೊರಬೀಳಲಿದೆ.

ರೈತರ ಸಮಸ್ಯೆಗೆ ಧ್ವನಿ ಆಗಲಿದ್ದಾರೆ ಶಿವರಾಜ್‌ಕುಮಾರ್: ವಿಜಯ್‌ ರಾಘವೇಂದ್ರ ನಟನೆಯ 'ಮಹಾನ್' ಚಿತ್ರಕ್ಕೆ 'ಕರುನಾಡ ಚಕ್ರವರ್ತಿ' ಎಂಟ್ರಿ

ವಿಜಯ್ ರಾಘವೇಂದ್ರ ನಟನೆಯ ʻಮಹಾನ್ʼ ಚಿತ್ರಕ್ಕೆ ಶಿವಣ್ಣ ಖಡಕ್ ಎಂಟ್ರಿ‌

ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯ, ಪಿ. ಸಿ. ಶೇಖರ್ ನಿರ್ದೇಶನದ 'ಮಹಾನ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಲಾಯರ್‌ ಪಾತ್ರದಲ್ಲಿ ನಟಿಸಿದ್ದಾರೆ. ರೈತರ ಜೀವನಾಧಾರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವ್ಯವಸ್ಥೆಯನ್ನು ತಿದ್ದುವ ಶಕ್ತಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ʻರಕ್ಕಿʼ ಸಿನಿಮಾ ಮಾಡಲು ಜರ್ಮನಿಯಿಂದ ಬಂದ ನಟ; ಈ ಚಿತ್ರಕ್ಕೆ ಸಾಥ್‌ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ರಕ್ಕಿ‌ ಟ್ರೇಲರ್ ರಿಲೀಸ್;‌ ಜರ್ಮನಿಯಿಂದ ಬಂದ ಕನ್ನಡ ನಟನಿಗೆ ಅಶ್ವಿನಿ ಬೆಂಬಲ

ವೆಂಕಟ್ ಭಾರದ್ವಾಜ್ ನಿರ್ದೇಶನದ, ನಟ ರಕ್ಕಿ ಮುಖ್ಯ ಭೂಮಿಕೆಯ ‘ರಕ್ಕಿ’ ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ಜರ್ಮನಿಯಲ್ಲಿ ನೆಲೆಸಿರುವ ಐಟಿ ಉದ್ಯಮಿ ಸಾಲಿಗ್ರಾಮ ಸುರೇಶ್ ನಿರ್ಮಿಸಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ರಕ್ಕಿ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದಾರೆ.

NTR - ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಅನೌನ್ಸ್: ಕಾರ್ತಿಕೇಯನ ಅವತಾರದಲ್ಲಿ ಬರ್ತಾರೆ ತಾರಕ್!‌

ಷಣ್ಮುಖನ ಅವತಾರದಲ್ಲಿ ಮಿಂಚಲಿದ್ದಾರೆ NTR; ತಾರಕ್‌ ಫ್ಯಾನ್ಸ್‌ ಫುಲ್‌ ಖುಷಿ

ಜೂನಿಯರ್ ಎನ್‌ಟಿಆರ್ - ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಹೊಸ ಬಿಗ್ ಬಜೆಟ್ ಪೌರಾಣಿಕ ಚಿತ್ರ ಜೂನ್ 29ರಂದು ಅಧಿಕೃತವಾಗಿ ಪ್ರಕಟವಾಗಿದೆ. 'ಎನ್‌ಟಿಆರ್ ಆರ್ಟ್ಸ್' ಹಾಗೂ 'ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ.

ʻವಾರಣಾಸಿʼ ಸಿನಿಮಾ 2 ಭಾಗಗಳಲ್ಲಿ ತೆರೆಗೆ ಬರಲಿದೆಯಾ? ಮಿಲಿಯನ್‌ ಡಾಲರ್‌ ಪ್ರಶ್ನೆಗೆ ರಾಜಮೌಳಿ ಕೊಟ್ರು ಉತ್ತರ!

ʻವಾರಣಾಸಿʼ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಾ? ಸ್ಪಷ್ಟನೆ ಕೊಟ್ರು ರಾಜಮೌಳಿ

ಬಾಹುಬಲಿ ಮತ್ತು ಆರ್‌ಆರ್‌ಆರ್‌ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ನಾಯಕತ್ವದ 'ವಾರಣಾಸಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಸಂಬಂಧ ರಾಜಮೌಳಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ತಮಿಳು ನಟ ಸೂರ್ಯ ಜೊತೆಗೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; 'ಜೈ ಭೀಮ್' ನಿರ್ದೇಶಕನಿಗೆ ಮತ್ತೊಂದು ಚಾನ್ಸ್

ತಮಿಳು ನಟ ಸೂರ್ಯ ಜೊತೆಗೆ ಹೊಸ ಸಿನಿಮಾ ಘೋಷಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್

ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್, ನಟ ಸೂರ್ಯ ಮತ್ತು 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರೊಂದಿಗೆ ತಮ್ಮ ಹೊಸ ತಮಿಳು ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ನೈಜ ಘಟನೆಗಳ ಆಧಾರಿತ ಈ ಕಮರ್ಷಿಯಲ್ ಚಿತ್ರಕ್ಕೆ ಕಯಾದು ಲೋಹರ್ ನಾಯಕಿಯಾಗಿದ್ದು, ಸಾಯಿ ಅಭ್ಯಂಕರ್ ಸಂಗೀತ ನೀಡಲಿದ್ದಾರೆ.

Vinay Rajkumar: ಎಲ್ಲರ ಗಮನಸೆಳೆದ ʻಗ್ರಾಮಾಯಣʼ ಟ್ರೇಲರ್;‌ ಇದು ಅಗಲಿದ ನಿರೂಪಕಿ ಅಪರ್ಣಾ ನಟನೆಯ ಕೊನೇ ಸಿನಿಮಾ!

Vinay Rajkumar: ʻಗ್ರಾಮಾಯಣʼ ಟೀಮ್‌ಗೆ ಸಾಥ್‌ ನೀಡಿದ ʻದುನಿಯಾʼ ವಿಜಯ್

ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ಅದ್ದೂರಿ ಟ್ರೇಲರ್ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಎರಡು ವರ್ಷ ಅಗಲಿದ ನಿರೂಪಕಿ ಅಪರ್ಣಾ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಪತಿ ನಾಗರಾಜ್ ವಸ್ತಾರೆ ಟ್ರೇಲರ್ ಅನಾವರಣಗೊಳಿಸಿದರು. ಈ ಸಿನಿಮಾ ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಹೊಸಬರ ಕಥೆಗಳಿಗೆ ವೇದಿಕೆ ಕಲ್ಪಿಸಿದ ಪ್ರಿಯಾ ಸುದೀಪ್‌: 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಮೂಲಕ ಪ್ರತಿಭೆಗಳಿಗೆ ಬಂಪರ್ ಆಫರ್!

ಸುಪ್ರಿಯಾನ್ವಿ ಸ್ಟುಡಿಯೋಸ್‌ ಮೂಲಕ ಪ್ರತಿಭಾವಂತರಿಗೆ ಪ್ರಿಯಾ ಸುದೀಪ್ ಆಫರ್

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಒಡೆತನದ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್' ಚಿತ್ರರಂಗಕ್ಕೆ ಪ್ರವೇಶಿಸಲು ಬಯಸುವ ಹೊಸ ಪ್ರತಿಭೆಗಳ ಚಿತ್ರಕಥೆ ಹಾಗೂ ವಿಶಿಷ್ಟ ಕಲ್ಪನೆಗಳಿಗೆ ಮುಕ್ತ ಆಹ್ವಾನ ನೀಡಿದೆ. 'ಮ್ಯಾಂಗೋ ಪಚ್ಚ' ಚಿತ್ರದ ಯಶಸ್ಸಿನ ನಂತರ ಯುವ ಮನಸ್ಸುಗಳಿಗೆ ವೇದಿಕೆ ಕಲ್ಪಿಸಲು ಮುಂದಾಗಿರುವ ಸಂಸ್ಥೆಯು, ಹೊಸ ಇತಿಹಾಸ ಬರೆಯುವ ಸೃಜನಶೀಲ ಲೇಖಕರು ತಮ್ಮ ಕಥೆಗಳನ್ನು ಹಂಚಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದೆ.

ʻರಜನಿಕಾಂತ್ ನೋವಿನ ಮಾತುಗಳು ನನ್ನ ಕಣ್ಣು ತೆರೆಸಿದವುʼ ಎಂದ ನಟ ಜಗ್ಗೇಶ್;‌ ನವರಸ ನಾಯಕನ ಭಾವುಕ ಪೋಸ್ಟ್‌ನಲ್ಲಿ ಏನಿದೆ?

ʻರಜನಿಕಾಂತ್‌ ನೋವಿನ ಮಾತುಗಳು ಕಣ್ಣು ತೆರೆಸಿದವುʼ ಎಂದ ನಟ ಜಗ್ಗೇಶ್

‘ಧರ್ಮನ್’ ಚಿತ್ರದ ಲಾಂಚ್ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ ಮಾತುಗಳನ್ನು ಕೇಳಿ ನವರಸ ನಾಯಕ, ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಭಾವುಕರಾಗಿದ್ದಾರೆ. ತಮ್ಮ 18ನೇ ವಯಸ್ಸಿನ ಶೇಷಾದ್ರಿಪುರ ಕಾಲೇಜು ದಿನಗಳ ಕಷ್ಟದ ಹೋರಾಟ ಮತ್ತು ಹೆತ್ತವರ ಕನಸನ್ನು ಸ್ಮರಿಸಿರುವ ಜಗ್ಗೇಶ್, ರಜನಿಕಾಂತ್‌ ಅವರ ಮಾತುಗಳು ತಮ್ಮ ಕಣ್ಣು ತೆರೆಸಿದವು ಎಂದಿದ್ದಾರೆ.

ʻನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿʼ; ಸ್ನೇಹಿತ ವೈಶಾಖ್ ಆತ್ಮಹತ್ಯೆ ಬೆನ್ನಲ್ಲೇ ನಟಿ ಕೃಷಿ ತಾಪಂಡ ಅಸಮಾಧಾನ

ʻಆತನ ಆತ್ಮಕ್ಕೆ ಶಾಂತಿ ಸಿಗಲು ಬಿಡಿ‌ʼ; ಗೆಳೆಯನ ಸಾವಿನ ಬಳಿಕ ಕೃಷಿ ಪೋಸ್ಟ್

ನಟಿ ಕೃಷಿ ತಾಪಂಡ ತಮ್ಮ ಮನೆಯಲ್ಲಿ ಸಂಭವಿಸಿದ ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆಯ ಆಘಾತಕಾರಿ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತೀವ್ರ ದುಃಖದಲ್ಲಿರುವ ತಮ್ಮ ಹಾಗೂ ಮೃತರ ಕುಟುಂಬದ ಮೇಲೆ ನಿರಂತರವಾಗಿ ಊಹಾಪೋಹ ಹಾಗೂ ಪ್ರಶ್ನೆಗಳ ಒತ್ತಡ ಹೇರುತ್ತಿರುವವರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯ ಘಟನೆ ಆಧಾರಿತ 'ಅಪರಾಧಿ ನಾನಲ್ಲ' ಟ್ರೇಲರ್; ಕರಾವಳಿ ಪ್ರತಿಭೆಗಳ ಈ ಹೊಸ ಸಿನಿಮಾ ಜುಲೈ 3ಕ್ಕೆ ರಿಲೀಸ್!‌

ಕರಾವಳಿ ಪ್ರತಿಭೆಗಳ 'ಅಪರಾಧಿ ನಾನಲ್ಲ' ಸಿನಿಮಾವು ಜುಲೈ 3ಕ್ಕೆ ರಿಲೀಸ್‌

ಕರಾವಳಿ ಭಾಗದ ಹೆಸರಾಂತ ಕಲಾವಿದರ ದಂಡನ್ನೇ ಹೊಂದಿರುವ ಸತ್ಯ ಘಟನೆ ಆಧಾರಿತ ಸಸ್ಪೆನ್ಸ್-ಥ್ರಿಲ್ಲರ್ ‘ಅಪರಾಧಿ ನಾನಲ್ಲ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾವು ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಜೈಲಿನ ಹಿನ್ನೆಲೆಯಲ್ಲಿ ಮೂವರು ಕೈದಿಗಳು ಹಾಗೂ ಒಂದು ನಿಗೂಢ ಕೊಲೆಯ ಸುತ್ತ ಸಾಗುವ ಈ ಚಿತ್ರವನ್ನು ಯಶಂತ್ ಕಲ್ಲಡ್ಕ ನಿರ್ದೇಶಿಸಿದ್ದಾರೆ.

ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಿಲೀಸ್‌ ಆಯ್ತು 'ರಾಯರ ದರ್ಶನ' ಆಲ್ಬಂ ಸಾಂಗ್; ಶ್ರೀಸುಬುಧೇಂದ್ರ ತೀರ್ಥರಿಗೆ ಟಿಎನ್ಐಟಿ ಪ್ರಶಸ್ತಿ ಪ್ರದಾನ

ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಿಲೀಸ್‌ ಆಯ್ತು 'ರಾಯರ ದರ್ಶನ' ಆಲ್ಬಂ ಸಾಂಗ್

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿಪ್ರಧಾನ 'ರಾಯರ ದರ್ಶನ' ಆಲ್ಬಂ ಸಾಂಗ್ ಅನ್ನು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಿದರು. ರಘು ಭಟ್ ನಿರ್ದೇಶನ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿರುವ ಈ ವಿಡಿಯೋ ಗೀತೆಯಲ್ಲಿ ಮಠದ ವರ್ಷಪೂರ್ತಿಯ ಧಾರ್ಮಿಕ ಉತ್ಸವಗಳನ್ನು ನೈಜವಾಗಿ ಚಿತ್ರಿಸಲಾಗಿದೆ.

ʻಕುಸಿದು ಬೀಳುವ 5 ನಿಮಿಷ ಮುಂಚೆಯೂ ಉಲ್ಲಾಸ್ ಎನರ್ಜೆಟಿಕ್ ಆಗಿಯೇ ಇದ್ದʼ; ನಿರ್ಮಾಪಕ ಭಾ. ಮಾ. ಹರೀಶ್‌ ಪುತ್ರನ ಕೊನೇ ಕ್ಷಣಗಳ ಮಾಹಿತಿ ನೀಡಿದ ಸ್ನೇಹಿತ

ನಿರ್ಮಾಪಕ ಭಾ. ಮಾ. ಹರೀಶ್‌ ಮಗ ಉಲ್ಲಾಸ್‌ಗೆ ಕೊಡಚಾದ್ರಿಯಲ್ಲಿ ಆಗಿದ್ದೇನು?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್ ಅವರ ಪುತ್ರ ಉಲ್ಲಾಸ್ (ಜೂನ್ 27) ಶಿವಮೊಗ್ಗದ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮುಗಿಸಿ ಮರಳುವಾಗ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬರುವ ಡಿಸೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿದ್ದ ಉಲ್ಲಾಸ್, ಕುಸಿಯುವ ಐದು ನಿಮಿಷ ಮುಂಚೆಯೂ ಚುರುಕಾಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.

ರವಿಚಂದ್ರನ್‌, ಕಾಶೀನಾಥ್‌ ಸೇರಿ ಸ್ಯಾಂಡಲ್‌ವುಡ್‌ ಹೀರೋಗಳಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ಕೆ. ಭಾಗ್ಯರಾಜ್‌ ಸಿನಿಮಾಗಳು; ಇಲ್ಲಿದೆ ರಿಮೇಕ್‌ ಚಿತ್ರಗಳ ಲಿಸ್ಟ್!‌

ಕೆ. ಭಾಗ್ಯರಾಜ್‌ ಸಿನಿಮಾಗಳನ್ನು ರಿಮೇಕ್‌ ಮಾಡಿ ಗೆದ್ದಿದ್ದ ಕನ್ನಡ ಹೀರೋಗಳು

ತಮಿಳು ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಹಾಗೂ ‘ಕಿಂಗ್ ಆಫ್ ಸ್ಕ್ರೀನ್‌ಪ್ಲೇ’ ಎಂದೇ ಖ್ಯಾತರಾಗಿದ್ದ ಕೆ. ಭಾಗ್ಯರಾಜ್ ನಿಧನರಾಗಿದ್ದಾರೆ. ಮಧ್ಯಮ ವರ್ಗದ ಕೌಟುಂಬಿಕ ಹಾಗೂ ಹಾಸ್ಯ ಪ್ರಧಾನ ಕಥೆಗಳ ಮೂಲಕ ದಕ್ಷಿಣ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದ ಇವರ ಚಿತ್ರಗಳು ಸ್ಯಾಂಡಲ್‌ವುಡ್‌ನ ಹತ್ತಾರು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಮೂಲ ಪ್ರೇರಣೆಯಾಗಿದ್ದವು.

‌ʻಜನ ನಾಯಗನ್ʼ ನಿರ್ಮಾಪಕ ವೆಂಕಟ್‌ ನಾರಾಯಣ್‌ಗೆ ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಹುದ್ದೆ; ಸಿಎಂ ವಿಜಯ್‌ ನಡೆಗೆ ಡಿಎಂಕೆ ಆಕ್ರೋಶ

CM Vijay: ʻಜನ ನಾಯಗನ್‌ʼ ನಿರ್ಮಾಪಕರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆ!

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ನಿರ್ಮಾಪಕ ಕೆ. ವೆಂಕಟ್ ನಾರಾಯಣ್ (KVN) ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ತಮಿಳುನಾಡು ಸರ್ಕಾರ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ. ಸಿಎಂ ವಿಜಯ್ ಅವರ ಈ ನಡೆಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ತೀವ್ರ ಆಕ್ರೋಶ ಹೊರಹಾಕಿದೆ.

10 ವರ್ಷಗಳ ಬಳಿಕ ಪುನಃ ಒಂದಾದ ʻಪ್ರೇಮಂʼ ಜೋಡಿ; ನಿವಿನ್‌ ಪೌಲಿ ʻವಿಜಯಂʼ ಚಿತ್ರಕ್ಕೆ ಆಲ್ಫೋನ್ಸ್ ಪುತ್ರೆನ್ ಡೈರೆಕ್ಷನ್‌

10 ವರ್ಷದ ಬಳಿಕ ʻಪ್ರೇಮಂʼ ಜೋಡಿ ವಾಪಸ್; ನಿವಿನ್ ಪೌಲಿ 50ನೇ ಸಿನಿಮಾ ಘೋಷಣೆ‌

ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರಗಳಾದ 'ನೇರಂ' ಮತ್ತು 'ಪ್ರೇಮಂ' ನೀಡಿದ್ದ ನಟ ನಿವಿನ್ ಪೌಲಿ ಹಾಗೂ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಹತ್ತು ವರ್ಷಗಳ ನಂತರ ತಮ್ಮ ಹೊಸ ಚಿತ್ರ ‘ವಿಜಯಂ’ ಮೂಲಕ ಮತ್ತೆ ಒಂದಾಗಿದ್ದಾರೆ. ನಿವಿನ್ ಪೌಲಿ ಅವರ ವೃತ್ತಿಬದುಕಿನ 50ನೇ ಮೈಲಿಗಲ್ಲಿನ ಈ ಚಿತ್ರವು ರೇಸಿಂಗ್ ಲೋಕದ ಹಿನ್ನೆಲೆಯಲ್ಲಿ ಮೂಡಿಬರಲಿದೆ.

ʻಕೆಂಪಾಂಬುಧಿʼ ಸಿನಿಮಾ ಟೀಸರ್ ‌ರಿಲೀಸ್; ನಾಡಪ್ರಭು ಕೆಂಪೇಗೌಡರ ಇತಿಹಾಸ ಹೇಳುವ ಸಿನಿಮಾಕ್ಕೆ ‘ನೆನಪಿರಲಿ’ ಪ್ರೇಮ್ ಹೀರೋ

‘ನೆನಪಿರಲಿ’ ಪ್ರೇಮ್ ನಟನೆಯ ʻಕೆಂಪಾಂಬುಧಿʼ ಸಿನಿಮಾ ಟೀಸರ್ ‌ರಿಲೀಸ್

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ಸಾರುವ, ‘ನೆನಪಿರಲಿ’ ಪ್ರೇಮ್ ಹಾಗೂ ಮೇಘನಾ ಗಾಂವ್ಕರ್ ನಟನೆಯ ‘ಕೆಂಪಾಂಬುಧಿ’ ಚಿತ್ರದ ಭವ್ಯ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಮತ್ತು ಹೊಂಬಾಳೆ ಮ್ಯೂಸಿಕ್ ಸಹಯೋಗದ ಈ ಚಿತ್ರವನ್ನು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧರಿಸಿ ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ.

ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಶರ್ಮಿಳಾ ಮಾಂಡ್ರೆ; ಇಲ್ಲಿವೆ ಈ ಜೋಡಿಯ ಎಂಗೇಜ್‌ಮೆಂಟ್‌ ಫೋಟೋಗಳು

Photos: ತಮಿಳು ನಿರ್ಮಾಪಕ ಸುಧನ್ ಜೊತೆ ಶರ್ಮಿಳಾ ಮಾಂಡ್ರೆ ಎಂಗೇಜ್‌ಮೆಂಟ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ವೈಭವ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿದೆ. ಆಪ್ತ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ಜೋಡಿಯು ಉಂಗುರ ಬದಲಾಯಿಸಿಕೊಂಡಿತು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟನೆ ಮತ್ತು ಸಿನಿಮಾ ನಿರ್ಮಾಣದ ಮೂಲಕ ಶರ್ಮಿಳಾ ಮಾಂಡ್ರೆ ಗುರುತಿಸಿಕೊಂಡಿದ್ದರೆ, ಸುಧನ್ ಸುಂದರಂ ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವೆ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳು.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ

ಖ್ಯಾತ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ

N.S. Shankar Passed away: ಕನ್ನಡ ಚಿತ್ರರಂಗದ ನಿರ್ದೇಶಕ, ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್. ಶಂಕರ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕ್ರಿಕೆಟ್‌ ಆಟಗಾರ ಕೆ.ಎಲ್‌. ರಾಹುಲ್‌ನ 15 ತಿಂಗಳ ಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಪಂಚಪ್ರಾಣ; ದಿನವೂ ಫೋಟೊಕ್ಕೆ ಸ್ವೀಟ್‌ ಅರ್ಪಣೆ

ದಿನಾ ಮೋದಿ ಮಂತ್ರ ಜಪಿಸುವ ಕೆ.ಎಲ್‌. ರಾಹುಲ್‌ನ 16 ತಿಂಗಳ ಮಗಳು

Suniel Shetty: ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಕ್ಕೆ ಸ್ವೀಟ್‌ ಅರ್ಪಿಸುತ್ತಾಳೆ ಎಂದು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ತಿಳಿಸಿದ್ದಾರೆ. 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ, ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್‌. ರಾಹುಲ್‌ ಮತ್ತು ಸುನೀಲ್‌ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ದಂಪತಿಗೆ 2025ರ ಮಾರ್ಚ್‌ನಲ್ಲಿ ಇವಾರಾ ಜನಿಸಿದಳು.

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ; ಟ್ರೆಕ್ಕಿಂಗ್‌ ವೇಳೆ ಕೊಡಚಾದ್ರಿಯಲ್ಲಿ ಅವಘಡ

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ

Ullas Gowda Passed Away: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋದ ವೇಳೆ ಹೃದಯಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಭಾಗ್ಯರಾಜ್ ಹೃದಯಾಘಾತದಿಂದ ನಿಧನ

ಖ್ಯಾತ ತಮಿಳು ನಿರ್ದೇಶಕ, ನಟ ಭಾಗ್ಯರಾಜ್ ಹೃದಯಾಘಾತದಿಂದ ನಿಧನ

Writer K Bhagyaraj: ನಿರ್ಮಾಪಕ, ನಟ ಮತ್ತು ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಹೃದಯಾಘಾತದಿಂದ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ತಮಿಳು ಚಿತ್ರರಂಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಸಾರ್ವಜನಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಈ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ತಮ್ಮ ಸಾವಿಗೆ ಕೆಲವೇ ದಿನಗಳ ಮೊದಲು ಗೋವಾದಲ್ಲಿ ನಡೆದ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಿದ್ದರು.

Moda Kavida Vaatavarana Review: ಪ್ರೇಕ್ಷಕರೆದೆಗೆ ತಂಪೆರೆಯುತ್ತಲೇ ಬಿಸಿ ಮುಟ್ಟಿಸುವ ಹವಾಮಾನವಿದು..

ನಿರ್ದೇಶಕ ʻಸಿಂಪಲ್ʼ ಸುನಿಯ ‘ಮೋಡ ಕವಿದ ವಾತಾವರಣ’ ಸಿನಿಮಾ ಹೇಗಿದೆ?

ನಿರ್ದೇಶಕ ಸಿಂಪಲ್ ಸುನಿ ಅವರ ‘ಮೋಡ ಕವಿದ ವಾತಾವರಣ’ ಸಿನಿಮಾ ತೆರೆಕಂಡಿದ್ದು, ಶೀಲಂ ಎಂ. ಸ್ವಾಮಿ ಮೊದಲ ಬಾರಿಗೆ ಹೀರೋ ಆಗಿ ಸ್ಯಾಂಡಲ್‌ವಡ್‌ಗೆ ಕಾಲಿಟ್ಟಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ರೊಮ್ಯಾಂಟಿಕ್ ಕಾಮಿಡಿಯಂತೆ ಆರಂಭವಾದರೂ, ನಂತರ ಪೌರಾಣಿಕ ಕನೆಕ್ಷನ್ ಜೊತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಆಗಿಯೂ ಬದಲಾಗುತ್ತದೆ. ಈ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.

'ಬಾಹುಬಲಿ' ಬ್ಲಾಕ್‌ಬಸ್ಟರ್‌ ಹಿಟ್‌ ಆದ್ಮೇಲೆ 2-3 ವರ್ಷ ನಿದ್ದೆ ಮಾಡಲು ಒದ್ದಾಡಿದ್ದ ನಟ ಪ್ರಭಾಸ್! ಅಂಥದ್ದೇನಾಗಿತ್ತು?

ʻಬಾಹುಬಲಿ ಹಿಟ್ ಆದ್ಮೇಲೆ 2- 3 ವರ್ಷ ನಿದ್ದೆ ಇರಲಿಲ್ಲʼ- ನಟ ಪ್ರಭಾಸ್

'ಬಾಹುಬಲಿ' ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಬರೋಬ್ಬರಿ 2-3 ವರ್ಷಗಳ ಕಾಲ ತಮಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ಯಾನ್-ಇಂಡಿಯಾ ನಟ ಪ್ರಭಾಸ್ ಹೇಳಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಅವರು, ಚಿತ್ರದ ನಂತರ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಗಿ ತೀವ್ರ ಒತ್ತಡ ಎದುರಿಸಿದ್ದಾಗಿ ತಿಳಿಸಿದ್ದಾರೆ.

Loading...