ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; ಭಾವುಕ ವಿಡಿಯೊ ವೈರಲ್

ಅಳಿಲಿನ ಅಂತ್ಯಸಂಸ್ಕಾರ ವೇಳೆ ಪುಟಾಣಿಗಳು ಕಣ್ಣೀರಿಟ್ಟ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುಟ್ಟ ಮಕ್ಕಳು ಅಳುತ್ತಾ, ಮೃತಪಟ್ಟ ಅಳಿಲಿಗೆ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದಕ್ಕೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡಿಗರ ಸಾಂಬಾರ್‌ ಪ್ರೀತಿಗೆ ಸಂಗೀತದ ಸ್ಪರ್ಶ: ಎಂ.ಟಿ.ಆರ್- ವಾಸು ದೀಕ್ಷಿತ್ ಜುಗಲ್‌ಬಂದಿಯಲ್ಲಿ ಮೂಡಿಬಂತು ವಿಶೇಷ ಸಾಂಬಾರ್ ಆ್ಯಂಥಮ್‌

ಕನ್ನಡಿಗರ ಸಾಂಬಾರ್‌ ಪ್ರೀತಿಗೆ ಸಂಗೀತದ ಸ್ಪರ್ಶ

ಬೆಂಗಳೂರಿನಲ್ಲಿ ನಡೆದ ವಿಶೇಷ ಲೈವ್ ಪ್ರದರ್ಶನದಲ್ಲಿ ಗಾಯಕ ವಾಸು ದೀಕ್ಷಿತ್ ಅವರಿಂದ ಬಿಡುಗಡೆಗೊಂಡ ಈ ಸಾಂಬಾರ್ ಆ್ಯಂಥಮ್‌, ಕರ್ನಾಟಕದ ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಅಂಗವಾಗಿರುವ ಸಾಂಬಾರ್‌ ನ ರುಚಿ, ನೆನಪುಗಳು ಮತ್ತು ಸಂಪ್ರದಾಯಗಳಿಗೆ ಸಂಗೀತದ ಮೂಲಕ ಸಲ್ಲಿಸಿರುವ ಒಂದು ಅಪೂರ್ವ ಗೌರವವಾಗಿದೆ.

ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಸೀಸನ್‌ 2ರ ಖ್ಯಾತಿಯ ಪದ್ದು ಗೌಡ ನಿಧನ

ಬ್ರೈನ್‌ ಟ್ಯೂಮರ್‌ನಿಂದ ಪದ್ದು ಗೌಡ ನಿಧನ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಸೀಸನ್‌ 2ರ ಖ್ಯಾತಿಯ ಪದ್ಮನಾಭ ಕೆ.ಎಂ (ಪದ್ದು ಗೌಡ) ಅವರು ಬ್ರೈನ್ ಟ್ಯೂಮರ್‌ನಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಕಳೆದ ಹಲವು ಸಮಯದಿಂದ ಅವರು ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

666 Operation Dream Theatre: ʻನಾನಿಲ್ಲಿ ಡಿಸೆಂಟ್‌ ಬಾಂಡ್‌ʼ ಎಂದ ಶಿವಣ್ಣ,‌ ʻಏಜೆಂಟ್‌ ಶಂಕರ್‌ʼ ಆಗಿ ಬಂದ ʻಡಾಲಿʼ ಧನಂಜಯ್‌!

ಶಿವಣ್ಣ- ಡಾಲಿಯ ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾದ ಟೀಸರ್‌ ಹೇಗಿದೆ?

ಡಾ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿರುವ, ಹೇಮಂತ್ ಎಂ. ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ರೋಮಾಂಚನಕಾರಿ ರೆಟ್ರೋ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶಿವಣ್ಣ 'ಏಜೆಂಟ್ ಪ್ರಕಾಶ್' ಆಗಿ ಹಾಗೂ ಧನಂಜಯ್ 'ಏಜೆಂಟ್ ಶಂಕರ್' ಆಗಿ ಪತ್ತೇದಾರಿ ಪ್ರಪಂಚದ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸದ್ದಿಲ್ಲದೇ ‘ಕಲ್ಯಾಣಿ’ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ ‘ಜಟ್ಟ’ ಗಿರಿರಾಜ್‌; ಇದು ಎರಡು ಸಂಸ್ಕೃತಿಗಳ ಮುಖಾಮುಖಿ

ʻಕಲ್ಯಾಣಿʼ ಚಿತ್ರದ ಶೂಟಿಂಗ್ ಮುಗಿಸಿದ 'ಜಟ್ಟ' ಗಿರಿರಾಜ್; ರಿಲೀಸ್‌ ಯಾವಾಗ?

'ಜಟ್ಟ' ಖ್ಯಾತಿಯ ಬಿ. ಎಂ. ಗಿರಿರಾಜ್ ನಿರ್ದೇಶನದ 'ಕಲ್ಯಾಣಿ' ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಲೇಖಕ ಬಸವ ರೆಡ್ಡಿ ಅವರ ಕಥೆ ಆಧರಿಸಿದ ಈ ಚಿತ್ರದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎರಡು ಭಿನ್ನ ಸಂಸ್ಕೃತಿಗಳ ನವಿರಾದ ಪ್ರೇಮಕಾವ್ಯವನ್ನು ತೋರಿಸಲಾಗಿದೆ.

CM Vijay: ʻಜನ ನಾಯಗನ್ʼ ಸಿನಿಮಾಗೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ! ಅಸಲಿ ಸತ್ಯ ಇಲ್ಲಿದೆ

ʻಜನ ನಾಯಗನ್ʼ ಚಿತ್ರಕ್ಕೆ ಇನ್ನೂ ಸೆನ್ಸಾರ್‌ ಪ್ರಮಾಣ ಪತ್ರ ಸಿಕ್ಕಿಲ್ಲ

ʻದಳಪತಿʼ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದೆ ಎಂಬ ವರದಿಗಳನ್ನು ಚಿತ್ರತಂಡ ನಿರಾಕರಿಸಿದೆ. ಸೆನ್ಸಾರ್‌ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿರುವ ಚಿತ್ರತಂಡ, ನಂತರ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ. ಮತ್ತೊಂದೆಡೆ, ಸೆನ್ಸಾರ್ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದ ಈ ಸಿನಿಮಾವನ್ನು 1.20 ಕೋಟಿಗೂ ಅಧಿಕ ಮಂದಿ ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸ್ಯಾಂಡಲ್‌ವುಡ್‌ಗೆ ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್‌ ಎಂಟ್ರಿ; ಒಟ್ಟೊಟ್ಟಿಗೆ ಅದ್ದೂರಿಯಾಗಿ ಲಾಂಚ್ ಆಗಲಿವೆ 2 ಸಿನಿಮಾಗಳು!

ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ

ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಸ್ಯಾಂಡಲ್‌ವುಡ್‌ಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಜುಲೈ 5ರಂದು ಇವರ ನಟನೆಯ ‘ಕರ್ಣಾಟಬಲಂ ಅಜೇಯಂ’ ಹಾಗೂ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ‘ಸೈನಿಕ 2’ ಚಿತ್ರಗಳ ಜಂಟಿ ಮುಹೂರ್ತ ನೆರವೇರಲಿದೆ.

ಕುತೂಹಲ ಮೂಡಿಸಿದ ʻಶಬರಿʼ ಚಿತ್ರದ ಟೀಸರ್‌; ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದೊಂದಿಗೆ ʻಒರಟʼ ಶ್ರೀ ಕಮ್‌ಬ್ಯಾಕ್!‌

ʻಒರಟʼ ಶ್ರೀ ನಿರ್ದೇಶನದ ʻಶಬರಿʼ ಚಿತ್ರದ ಟೀಸರ್‌ ರಿಲೀಸ್‌

‘ಒರಟ’ ಚಿತ್ರದ ಖ್ಯಾತಿಯ ನಿರ್ದೇಶಕ ಒರಟ ಶ್ರೀ ಸಾರಥ್ಯದ ಸಸ್ಪೆನ್ಸ್ ಥ್ರಿಲ್ಲರ್ ‘ಶಬರಿ’ ಚಿತ್ರದ ಟೀಸರ್ ಅನ್ನು ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಹಾಡುಗಳಿಗೆ ಮಾರುಹೋಗಿ ಲಹರಿ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಸಮರ್ಥ್ ಹಾಗೂ ಕೃತಿಕಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

‌ʻಇದು ವಿಚಾರಣೆಗೆ ಅರ್ಹವಲ್ಲದ ಅರ್ಜಿʼ; ದರ್ಶನ್‌ಗೆ ಸುಪ್ರೀಂ ಕೋರ್ಟ್‌ ʻಬಿಗ್‌ʼ ಶಾಕ್! ಜಾಮೀನಿನ ಬಗ್ಗೆ ಸದ್ಯಕ್ಕೆ ಯೋಚನೆಯೂ ಮಾಡಂಗಿಲ್ಲ `ದಾಸ'!

ದರ್ಶನ್‌ಗೆ ಸುಪ್ರೀಂ ಶಾಕ್; ನ್ಯಾಯಪೀಠದ ಮುಂದೆ ಬರುವ ಮುನ್ನವೇ ಅರ್ಜಿ ವಜಾ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌ ನೀಡಿದೆ. ಆದೇಶದ ತಿದ್ದುಪಡಿಗೆ ಕೋರಿದ್ದ ಅರ್ಜಿ ರಿಜಿಸ್ಟ್ರಾರ್ ಕಚೇರಿ ಮಟ್ಟದಲ್ಲೇ ತಿರಸ್ಕೃತಗೊಂಡಿದ್ದು, ದರ್ಶನ್ ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿದೆ. ಈ ಮೂಲಕ ದರ್ಶನ್ ಅವರ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಹಾಗೂ ಜೈಲುವಾಸ ಮುಂದುವರಿದಿದೆ.

ʻಬಿಗ್‌ ಬಾಸ್‌ʼ ಶೋನಿಂದ ಆಫರ್‌ ಬಂದರೂ ಮೇಘಾ ಶೆಟ್ಟಿ ಹೋಗುತ್ತಿಲ್ಲವೇಕೆ? ಇಲ್ಲಿದೆ ನೋಡಿ ಉತ್ತರ

`ಬಿಗ್ ಬಾಸ್' ಶೋಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ? ಅಸಲಿ ಮ್ಯಾಟ್ರು ಇಲ್ಲಿದೆ

'ಜೊತೆ ಜೊತೆಯಲಿ' ಧಾರಾವಾಹಿಯ ಖ್ಯಾತ ನಟಿ ಮೇಘಾ ಶೆಟ್ಟಿ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಹೋಗಲಿದ್ದಾರೆಂಬ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ, ಬಿಡುವಿಲ್ಲದ ಚಿತ್ರೀಕರಣ ಹಾಗೂ ಸಿನಿಮಾ ಡೇಟ್ಸ್ ಸಮಸ್ಯೆಯಿಂದಾಗಿ ಶೋ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ʻಎಲ್ಲಾ ಹುಡುಗ್ರು ಕಳ್ ನನ್ ಮಕ್ಕಳೇ..ʼ ಎಂದು ಹೇಳಿ ವಿವಾದಕ್ಕೆ ಸಿಲುಕಿದ ಸೋನು ಶ್ರೀನಿವಾಸ್ ಗೌಡ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ವಿರುದ್ಧ ದೂರು ದಾಖಲಾಗುತ್ತಾ?

ʻಎಲ್ಲಾ ಹುಡುಗ್ರು ಕಳ್ ನನ್ ಮಕ್ಕಳೇʼ ಎಂದ ಸೋನು; ರೊಚ್ಚಿಗೆದ್ದ ಗಂಡೈಕ್ಳು!

ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಇಡೀ ಪುರುಷ ಸಮುದಾಯವನ್ನು "ಕಳ್ಳ ನನ್ ಮಕ್ಕಳೇ" ಎಂದು ಅವಹೇಳನಕಾರಿಯಾಗಿ ನಿಂದಿಸಿ ವಿವಾದಕ್ಕೀಡಾಗಿದ್ದಾರೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವಿವಿಧ ಸಂಘಟನೆಗಳು ದೂರು ದಾಖಲಿಸಲು ಸಿದ್ಧತೆ ನಡೆಸಿವೆ.

61ನೇ ವಯಸ್ಸಿನಲ್ಲಿ ನಟ ಆಮಿರ್ ಖಾನ್‌ಗೆ 3ನೇ ಮದುವೆ; ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಜೊತೆ ಜುಲೈ 5ಕ್ಕೆ ಕಲ್ಯಾಣ

ಜು.5ಕ್ಕೆ ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮಿರ್‌ ಖಾನ್‌ 3ನೇ ಮದುವೆ

ಬಾಲಿವುಡ್‌ ನಟ ಆಮಿರ್ ಖಾನ್ (61) ಅವರು ಬೆಂಗಳೂರು ಮೂಲದ ಬಿಬ್ಲಂಟ್ ಸಲೂನ್ ಒಡತಿ ಗೌರಿ ಸ್ಪ್ರಾಟ್ (47) ಅವರೊಂದಿಗೆ ಜುಲೈ 5 ರಂದು ಮುಂಬೈನ ತಮ್ಮ ಬಾಂದ್ರಾ ನಿವಾಸದಲ್ಲಿ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೇವಲ ಆಪ್ತರ ಸಮ್ಮುಖದಲ್ಲಿ ಈ ವಿವಾಹ ನಡೆಯಲಿದ್ದು, ಆಮಿರ್ ಅವರ ಮೂವರು ಮಕ್ಕಳು ಮತ್ತು ಗೌರಿ ಅವರ ಮಗು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

Love Seasons Review: ಒಲವಿನ ಋತುವಿನಲ್ಲಿ ಮುಳುಗೇಳುವ ನಾಯಕ; ಪ್ರೀತಿಯ ಹುಡುಕಾಟವೇ ಆತನ ಕಾಯಕ

ರಂಗಭೂಮಿ ಪ್ರತಿಭೆಗಳ ʻಲವ್‌ ಸೀಸನ್ಸ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Love Seasons Kannada Movie Review: ನಿರ್ದೇಶಕ ಕೃತ್ವಿಕ್ ಅವರ ವಿವಿಧ ಲೇಯರ್‌ಗಳ ಪ್ರೇಮಕಥೆ ‘ಲವ್‌ ಸೀಸನ್ಸ್‌’ ಚಿತ್ರವು ಇಂದು (ಜುಲೈ 3) ತೆರೆಕಂಡಿದೆ. ಅನಾಥ ರಾಮ್ ಬದುಕಿನಲ್ಲಿ ಬಂದು ಹೋಗುವ ಮೂರು ಋತುಗಳಂತಹ ಮೂವರು ಹುಡುಗಿಯರ ಸುತ್ತ ಕಥೆ ಸಾಗಲಿದ್ದು, ದ್ವಿತೀಯಾರ್ಧದಲ್ಲಿ ಹಲವು ರೋಚಕ ತಿರುವುಗಳಿಂದ ಕೂಡಿದೆ.

ʻಲವ್‌ ಮಾಕ್ಟೇಲ್‌ 3ʼ ಸಕ್ಸಸ್‌ ಬಳಿಕ ಪಿ.ಸಿ. ಶೇಖರ್ ಜೊತೆ ಹೊಸ ಚಿತ್ರಕ್ಕೆ ಕೈಜೋಡಿಸಿದ ʻಡಾರ್ಲಿಂಗ್ʼ ಕೃಷ್ಣ

ಲವ್ ಮಾಕ್ಟೇಲ್ 3 ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಹೊಸ ಚಿತ್ರ ಅನೌನ್ಸ್

‘ಲವ್ ಮಾಕ್ಟೇಲ್ 3’ ಚಿತ್ರದ ಭರ್ಜರಿ ಗೆಲುವಿನ ನಗೆಯಲ್ಲಿರುವ ನಟ ‘ಡಾರ್ಲಿಂಗ್’ ಕೃಷ್ಣ, ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬೂದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶೇಷಾದ್ರಿಪುರದ ದೇವಸ್ಥಾನದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ.

ದಸರಾ ಹಬ್ಬದ ಮೇಲೆ ಕಣ್ಣಿಟ್ಟ ರಜನಿಕಾಂತ್;‌ ʻಜೈಲರ್‌ 2ʼ ರಿಲೀಸ್‌ ಡೇಟ್‌ ಫಿಕ್ಸ್‌, ಫುಲ್‌ ಖುಷ್‌ ಆದ್ರು ʻತಲೈವಾʼ ಫ್ಯಾನ್ಸ್!‌

ದಸರಾ ಹಬ್ಬಕ್ಕೆ ʻಜೈಲರ್‌ 2ʼ ರಿಲೀಸ್; ರಜನಿಕಾಂತ್‌ ಫ್ಯಾನ್ಸ್‌ ಫುಲ್‌ ಖುಷ್

ʻಸೂಪರ್‌ ಸ್ಟಾರ್ʼ ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಅಕ್ಟೋಬರ್ 15 ರ ದಸರಾ ಹಬ್ಬದ ಸುದಿನದಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇಂದು ಬಿಡುಗಡೆಯಾದ ಭರ್ಜರಿ ಪ್ರೋಮೋದಲ್ಲಿ ತಲೈವಾ ಖಡಕ್ ಲುಕ್ ಅನಾವರಣಗೊಂಡಿದೆ.

ʻಕೆಲವೊಂದು ಶಾಕಿಂಗ್‌ ಘಟನೆಗಳನ್ನ ಹೇಳೋದಕ್ಕೆ ಆಗಲ್ಲʼ; 18 ವರ್ಷಗಳ ಹಿಂದಿನ ವಿಚಾರಗಳನ್ನು ಬಿಚ್ಚಿಟ್ಟ ಗಣೇಶ್‌ ಪತ್ನಿ ಶಿಲ್ಪಾ!

ʻಮನೆ ಬಾಗಿಲು ತಟ್ಟುತ್ತಿದ್ದರುʼ; ಹಳೇ ದಿನಗಳನ್ನು ನೆನೆದ ಶಿಲ್ಪಾ ಗಣೇಶ್‌

'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು ಪತ್ನಿ ಶಿಲ್ಪಾ ಮದುವೆಯಾಗ 18 ವರ್ಷಗಳಾಗಿವೆ. ಇವರ ಮದುವೆಯ ಆರಂಭಿಕ ದಿನಗಳಲ್ಲಿ ವಿಚಿತ್ರ ಮತ್ತು ಆಘಾತಕಾರಿ ಅಭಿಮಾನದ ಘಟನೆಗಳು ನಡೆದಿದ್ದವು. ವಿಶ್ವವಾಣಿ ಟಿವಿ ಜೊತೆಗಿನ ಸಂದರ್ಶನದಲ್ಲಿ ಅವುಗಳನ್ನು ಶಿಲ್ಪಾ ಗಣೇಶ್‌ ಹಂಚಿಕೊಂಡಿದ್ದಾರೆ.

29 ವರ್ಷಗಳ ನಂತರ ಮತ್ತೆ ʻಅಮೆರಿಕಾ ಅಮೆರಿಕಾʼ ಗುಂಗಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌; ಪಾರ್ಟ್‌ 2ರ ವಿಶೇಷತೆಗಳೇನು?

ʻಅಮೆರಿಕಾ ಅಮೆರಿಕಾ 2ʼ ಸಿನಿಮಾ ಅನೌನ್ಸ್‌ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು 29 ವರ್ಷಗಳ ನಂತರ ತಮ್ಮದೇ ಬ್ಯಾನರ್ ಅಡಿಯಲ್ಲಿ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಶೀರ್ಷಿಕೆಯನ್ನು ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ಸಹನಾ ವಿಜಯಕುಮಾರ್ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

15 ದಿವಸಗಳ ಅಂತರದಲ್ಲಿ ಗಣೇಶ್‌ ನಟನೆಯ 2 ಸಿನಿಮಾ ರಿಲೀಸ್‌; ʻಗೋಲ್ಡನ್‌ ಸ್ಟಾರ್‌ʼ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌

15 ದಿನಗಳ ಅಂತರದಲ್ಲಿ ಗಣೇಶ್ ನಟನೆಯ 2 ಬಿಗ್ ಸಿನಿಮಾಗಳು ರಿಲೀಸ್!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ತಮ್ಮ ಹುಟ್ಟುಹಬ್ಬದ ಸುದಿನದಂದೇ ಅಭಿಮಾನಿಗಳಿಗೆ ಭರ್ಜರಿ ರಿಟರ್ನ್ ಗಿಫ್ಟ್ ನೀಡಿದ್ದು, ತಾವು ನಟಿಸಿರುವ ‘ಪಿನಾಕ’ ಹಾಗೂ ‘ಬೃಂದಾ ವಿಹಾರಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕೇವಲ 15 ದಿನಗಳ ಅಂತರದಲ್ಲಿ ಈ ಎರಡೂ ಬಿಗ್ ಬಜೆಟ್ ಚಿತ್ರಗಳು ರಿಲೀಸ್‌ ಆಗಲಿರುವುದು ವಿಶೇಷ.

ಮಕ್ಕಳ ಪ್ರಾರ್ಥನಾ ಗೀತೆ ಬರೆದ ʻಡಾಲಿʼ ಧನಂಜಯ; ಸಿದ್ದಗಂಗಾ ಮಠದ ಅಂಗಳದಲ್ಲಿ ನಡೆಯಿತು ‘ಮದರ್‌ ಪ್ರಾಮಿಸ್‌’ ಚಿತ್ರೀಕರಣ

ಮಕ್ಕಳಿಗಾಗಿ ಪ್ರಾರ್ಥನಾ ಗೀತೆ ಬರೆದ ಧನಂಜಯ; ಸಿದ್ದಗಂಗಾ ಮಠದಲ್ಲಿ ಶೂಟಿಂಗ್!

ನಟ ʻಡಾಲಿʼ ಧನಂಜಯ ಅವರು 'ಮದರ್ ಪ್ರಾಮಿಸ್' ಚಿತ್ರಕ್ಕಾಗಿ ಮೊದಲ ಬಾರಿಗೆ ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯೊಂದನ್ನು ಬರೆದಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಚಿತ್ರೀಕರಿಸಲಾದ ಈ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಪೂರ್ಣ ಮೈಸೂರು ನಿರ್ದೇಶನದ, ಈ ಕಾಮಿಡಿ ಥ್ರಿಲ್ಲರ್ ಸಿನಿಮಾವು ಜುಲೈ 10 ರಂದು ತೆರೆಗೆ ಬರಲಿದೆ.

ಫಿಲ್ಮ್‌ ಸಿಟಿಗೆ 500 ಕೋಟಿ, ಕಲಾವಿದರ ವಸತಿ ಯೋಜನೆಗೆ 5 ಎಕರೆ ಭೂಮಿ?; ವಾಣಿಜ್ಯ ಮಂಡಳಿ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಡಿ. ಕೆ. ಶಿವಕುಮಾರ್

ಕನ್ನಡ ಚಿತ್ರರಂಗದ ಉಳಿವಿಗಾಗಿ ಸರ್ಕಾರದ ಸಕಾರಾತ್ಮಕ ಸ್ಪಂದನೆ; ಸಿಎಂ ಭರವಸೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ನೇತೃತ್ವದ ನಿಯೋಗದ ಅಹವಾಲು ಆಲಿಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಹೊಸ ಚಲನಚಿತ್ರ ನೀತಿ ತರಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; ಡಿ ಕಂಪನಿ ಗ್ಯಾಂಗ್‌ ಸದಸ್ಯರ ಬಂಧನ

ಡಿ ಕಂಪನಿ ಗ್ಯಾಂಗ್‌ ಸದಸ್ಯರ ಬಂಧನ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ವಿರುದ್ಧ ಸಾಕ್ಷಿ ಹೇಳದಂತೆ ಸಾಕ್ಷಿಯೊಬ್ಬರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾದ ಪುನೀತ್, ಸುಹಾಸ್ ಮತ್ತು ವೇಣು ಎಂದು ಗುರುತಿಸಲಾಗಿದೆ.

ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಊಟ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

ಜೀವನಪೂರ್ತಿ ರುಚಿಯಿಲ್ಲದ ಊಟ ಮಾಡಬೇಕಾ ಸಮಂತಾ? ಆಘಾತಕಾರಿ ವಿಚಾರ ಬಹಿರಂಗ

ನಟಿ ಸಮಂತಾ ರುತ್ ಪ್ರಭು ಅವರು 'ಮಯೋಸೈಟಿಸ್' ಆಟೋ ಇಮ್ಯೂನ್ ಸಮಸ್ಯೆಯನ್ನು ಹತೋಟಿಯಲ್ಲಿಡಲು ಕಳೆದ ಎರಡು ವರ್ಷಗಳಿಂದ ಉಪ್ಪು ಮತ್ತು ಯಾವುದೇ ರುಚಿಯಿಲ್ಲದ ಕಠಿಣ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ನಿರ್ದೇಶಕಿ ನಂದಿನಿ ರೆಡ್ಡಿ ಬಹಿರಂಗಪಡಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ನಟನೆಯ 'ಲೆನಿನ್' ಚಿತ್ರದಲ್ಲಿ ಅಬ್ಬರಿಸಿದ ಕನ್ನಡದ ಪ್ರತಿಭಾವಂತ ಕಲಾವಿದರು

ತೆಲುಗಿನ 'ಲೆನಿನ್' ಚಿತ್ರದಲ್ಲಿ ಅಬ್ಬರಿಸಿದ ಕನ್ನಡದ ಪ್ರಮೋದ್‌ - ರಮೇಶ್‌

Lenin Movie Trailer: ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ನಟನೆಯ ‘ಲೆನಿನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕನ್ನಡದ ಪ್ರತಿಭಾವಂತ ಕಲಾವಿದರಾದ ಪ್ರಮೋದ್ ಮತ್ತು ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿ ಗಮನ ಸೆಳೆದಿದ್ದಾರೆ. ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ, ಈ ಸಿನಿಮಾ ಜುಲೈ 10 ರಂದು ತೆರೆಕಾಣಲಿದೆ.

ʻಅವ್ರು ಹೀರೋ, ನಾವು ತಡೆಯಲು ಸಾಧ್ಯವೇ?ʼ; ಪತಿ ಗೋವಿಂದ ಅಕ್ರಮ ಸಂಬಂಧಗಳ ಬಗ್ಗೆ ಬಾಯಿಬಿಟ್ಟ ಪತ್ನಿ ಸುನಿತಾ ಅಹುಜಾ!

ನಟ ಗೋವಿಂದ ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಸುನಿತಾ ಸ್ಫೋಟಕ ಹೇಳಿಕೆ!

ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ನೆಟ್‌ಫ್ಲಿಕ್ಸ್‌ನ ‘ಲಾಕ್ ಅಪ್ 2’ ರಿಯಾಲಿಟಿ ಶೋನಲ್ಲಿ ತಮ್ಮ ಪತಿಯ ಅಕ್ರಮ ಸಂಬಂಧಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗೋವಿಂದ ದೊಡ್ಡ ಹೀರೋ ಆಗಿರುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದಿರುವ ಅವರು, ಮಕ್ಕಳಿಗಾಗಿ ಬದುಕುತ್ತಿರುವುದಾಗಿ ಹೇಳಿದ್ದಾರೆ.

Loading...