ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

'ಕರಾವಳಿ' ಚಿತ್ರದ ಪವರ್‌ಫುಲ್ ಕವರ್ ಸಾಂಗ್ ಬಿಡುಗಡೆ; ʻಸು ಫ್ರಮ್ ಸೋʼ ಮಾದರಿಯಲ್ಲೇ ರಾಜ್ಯಾದ್ಯಂತ ಭರ್ಜರಿ ಪ್ರೀಮಿಯರ್‌ ಶೋಗಳಿಗೆ ಪ್ಲ್ಯಾನ್!‌

ʻಸು ಫ್ರಂ ಸೋʼ ಮಾದರಿಯಲ್ಲೇ 'ಕರಾವಳಿ' ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್‌ ಶೋ

ಪ್ರಜ್ವಲ್ ದೇವರಾಜ್ - ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಜುಲೈ 24ರ ರಿಲೀಸ್‌ಗೂ ಮುನ್ನ 'ಸು ಫ್ರಮ್ ಸೋ' ಮಾದರಿಯಲ್ಲೇ ರಾಜ್ಯಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ.

Thalapathy Vijay: 'ಜನ ನಾಯಗನ್' ಸಿನಿಮಾದ ಅಂಬೇಡ್ಕರ್ ಕುರಿತ ಡೈಲಾಗ್‌ಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ; ನಿರ್ಮಾಪಕ ಕೆವಿಎನ್‌ ಹೇಳಿದ್ದಿಷ್ಟು!

ʻಜನ ನಾಯಗನ್ʼ ಚಿತ್ರದಿಂದ ಅಂಬೇಡ್ಕರ್ ಕುರಿತ ಡೈಲಾಗ್‌ ಕಟ್‌ ಆಗಿದ್ದೇಕೆ?

ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆಗೆ ದಿನಗಣನೆ ಆರಂಭವಾಗಿರುವಾಗಲೇ ಈ ಚಿತ್ರದಲ್ಲಿದ್ದ ಅಂಬೇಡ್ಕರ್ ಅವರ ಸಂವಿಧಾನ ಮತ್ತು ವಿಜಯ್ ಅವರ 'ಟಿವಿಕೆ' ಪಕ್ಷವನ್ನು ಉಲ್ಲೇಖಿಸುವ ಪ್ರಮುಖ ಡೈಲಾಗ್‌ಗಳನ್ನು ತೆಗೆದುಹಾಕಲಾಗಿದ್ದು, ಈ ಬಗ್ಗೆ ನಿರ್ಮಾಪಕ ಕೆ. ವೆಂಕಟ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ʻದಳಪತಿʼ ವಿಜಯ್ ಪುತ್ರನ ʻಸಿಗ್ಮಾʼ ಸಿನಿಮಾ ರಿಲೀಸ್‌ಗೆ ರೆಡಿ; ತಮಿಳುನಾಡು ಸಿಎಂ ಮಗ ಜೇಸನ್‌ ಸಂಜಯ್‌ ಡೈರೆಕ್ಟರ್‌ ಆಗಿದ್ದೇಕೆ?

ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ರಿಲೀಸ್‌ಗೆ ರೆಡಿ!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

ಕಾನೂನು ಹೋರಾಟದಲ್ಲಿ ʻಬಾಸ್‌ʼ ಚಿತ್ರತಂಡಕ್ಕೆ ಗೆಲುವು; ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ, ರಿಲೀಸ್‌ ಯಾವಾಗ?

ಹೈಕೋರ್ಟ್‌ನಲ್ಲಿ ‘ಬಾಸ್’ ಚಿತ್ರಕ್ಕೆ ಜಯ; ಟ್ರೇಲರ್‌ ರಿಲೀಸ್‌ಗೆ ಕ್ಷಣಗಣನೆ!

ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್ 'ಬಾಸ್' ಸಿನಿಮಾದ ಬಿಡುಗಡೆಗೆ ಮುಕ್ತ ಅನುಮತಿ ನೀಡಿದೆ. ಒಂದೂವರೆ ತಿಂಗಳ ಕಠಿಣ ಕಾನೂನು ಹೋರಾಟದ ನಂತರ ಸಿಕ್ಕ ಈ ಜಯವನ್ನು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ಜಯ ಎಂದು ಚಿತ್ರತಂಡ ಬಣ್ಣಿಸಿದೆ.

K. N. Ganeshaiah: ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯ ಲೋಕಾರ್ಪಣೆ; ಸುಧಾಮೂರ್ತಿ, ರಮೇಶ್ ಅರವಿಂದ್ ಶ್ಲಾಘನೆ

ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯದ ಲೋಕಾರ್ಪಣೆ ಮಾಡಿದ ಸುಧಾಮೂರ್ತಿ-ರಮೇಶ್

ಕನ್ನಡಿಗರ ನೆಚ್ಚಿನ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯನ್ನು ಹೊಸ ದೃಷ್ಟಿಕೋನದೊಂದಿಗೆ ಪರಿಸರ ವಿಜ್ಞಾನ ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯ ಅವರು ಮರುಸೃಷ್ಟಿಸಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶನದ "ಪುಣ್ಯಕೋಟಿ ಶತಕರುಣಿ" ದೃಶ್ಯಕಾವ್ಯವನ್ನು ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಬಿಡುಗಡೆಗೊಳಿಸಿದ್ದಾರೆ.

ʻಲೈಫ್‌ ಟುಡೇʼ ಸಿನಿಮಾದ ಟ್ರೇಲರ್‌ ರಿಲೀಸ್;‌ ಲೇಖಾ ಚಂದ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂದ ತಬಲಾ ನಾಣಿ

ಲೇಖಾ ಚಂದ್ರ - ಕಿರಣ್‌ ನಟನೆಯ ʻಲೈಫ್ ಟುಡೇʼ ಸಿನಿಮಾ ಟ್ರೇಲರ್ ರಿಲೀಸ್‌

ಇಂದಿನ ಯುವ ಪೀಳಿಗೆಯ ಪ್ರೀತಿ ಹಾಗೂ ಸಂಬಂಧಗಳ ಏಳುಬೀಳುಗಳ ಕಥಾಹಂದರ ಹೊಂದಿರುವ, ಕಾಂತ ಕನ್ನಲ್ಲಿ ನಿರ್ದೇಶನದ ‘ಲೈಫ್ ಟುಡೇ’ ಚಿತ್ರದ ಟ್ರೇಲರ್ ಅಧಿಕೃತವಾಗಿ ಅನಾವರಣಗೊಂಡಿದೆ. ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಆಗಸ್ಟ್ 6 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ʻರಾಗಿಣಿ MMS 3' ಸಿನಿಮಾಗೆ ನಾಯಕಿಯಾದ ನಟಿ ತಮನ್ನಾ ಭಾಟಿಯಾ; ಲಂಡನ್‌ನಲ್ಲಿ ಶೂಟಿಂಗ್‌ ಶುರು

ʻರಾಗಿಣಿ MMS 3' ಚಿತ್ರಕ್ಕೆ ತಮನ್ನಾ ಭಾಟಿಯಾ ನಾಯಕಿ

ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ತನ್ನ ಯಶಸ್ವಿ ಹಾರರ್ ಫ್ರಾಂಚೈಸಿ ‘ರಾಗಿಣಿ MMS’ನ ಮೂರನೇ ಭಾಗವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಶಾಂಕ ಘೋಷ್ ನಿರ್ದೇಶನದ ಈ ಡೇಟ್ ನೈಟ್ ಹಾರರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ಜುನೈದ್ ಖಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Chand Mera Dil OTT release: ಅನನ್ಯಾ ಪಾಂಡೆ ನಟನೆಯ ಈ ರೊಮ್ಯಾಂಟಿಕ್‌ ಮೂವಿ ಒಟಿಟಿಗೆ ಎಂಟ್ರಿ!

ಅನನ್ಯಾ ಪಾಂಡೆ ನಟನೆಯ ಈ ರೊಮ್ಯಾಂಟಿಕ್‌ ಮೂವಿ ಒಟಿಟಿಗೆ ಎಂಟ್ರಿ!

Chand Mera Dil OTT release: "ಚಾಂದ್ ಮೇರಾ ದಿಲ್" ಚಿತ್ರವು (Chand Mera Dil OTT) ಮೇ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿವೇಕ್ ಸೋನಿ ನಿರ್ದೇಶಿಸಿದ ಈ ರೊಮ್ಯಾಂಟಿಕ್‌ ಮೂವಿ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಅನನ್ಯಾ ಪಾಂಡೆ ಅವರ ಭರತನಾಟ್ಯ ಸನ್ನಿವೇಶ ಟ್ರೋಲ್ ಕೂಡ ಆಗಿತ್ತು. ಅವರ ಧರಿಸಿರುವ ಡಿಸೈನರ್ ಲೆಹೆಂಗಾ ಮತ್ತು ಮಾಡಿರುವ ನೃತ್ಯದ ಶೈಲಿಯು ಸಾಂಪ್ರದಾಯಿಕ ಕಲೆಗೆ ಅಪಮಾನವಾಗಿದೆ ಎಂದು ಹಲವು ನೃತ್ಯ ಪ್ರಿಯರು ಮತ್ತು ನೆಟ್ಟಿಗರು ಟೀಕಿಸಿದ್ದರು.

Jason Sanjay: ಪರೋಕ್ಷವಾಗಿ ತಂದೆಯನ್ನು ದೂರಿದ್ರಾ ಸಿಎಂ ವಿಜಯ್ ಪುತ್ರ? ಜೇಸನ್ ಮುಕ್ತ ಮಾತು

ಪರೋಕ್ಷವಾಗಿ ತಂದೆಯನ್ನು ದೂರಿದ್ರಾ ಸಿಎಂ ವಿಜಯ್ ಪುತ್ರ?

Jason Sanjay: ವಿಜಯ್ ಅವರು ಸಿಎಂ ಆಗುವ ಮುಂಚೆಯೇ ಪತ್ನಿ ಸಂಗೀತಾ ಅವರೊಟ್ಟಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆ ಸಮಯದಲ್ಲಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ವಿಜಯ್’ ಹೆಸರನ್ನು ತೆಗೆದು ಹಾಕಿದ್ದರು. ಸಂದರ್ಶನದಲ್ಲಿ, ಸಂಜಯ್, ತಮಗೆ ವಿಜಯ್ ಅವರಿಂದ ಯಾವುದೇ ಸಹಾಯ ದೊರೆತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

Dhyan Sreenivasan: ದಳಪತಿ ವಿಜಯ್- ತ್ರಿಷಾ ಬಗ್ಗೆ ವೇದಿಕೆಯಲ್ಲೇ ಹಾಸ್ಯ ಮಾಡಿದ ಮಲಯಾಳಂ ನಟ

ದಳಪತಿ ವಿಜಯ್- ತ್ರಿಷಾ ಬಗ್ಗೆ ವೇದಿಕೆಯಲ್ಲೇ ಹಾಸ್ಯ ಮಾಡಿದ ಮಲಯಾಳಂ ನಟ

Dhyan Sreenivasan: ಧ್ಯಾನ್ ಶ್ರೀನಿವಾಸನ್ ತಮ್ಮ ಮುಂಬರುವ ಚಿತ್ರ 'ವಿಸಿಟರ್' ನ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ನಟ ಧ್ಯಾನ್ ಶ್ರೀನಿವಾಸನ್ ಅವರು ದಳಪತಿ ವಿಜಯ್, ತ್ರಿಷಾ ಕೃಷ್ಣನ್ ಜೋಡಿಯ ಕಾಲೆಳೆಯುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ವಿಜಯ್ ಪ್ರಮಾಣ ವಚನದ ವಿಷಯ ಇಟ್ಟುಕೊಂಡು ಅಣಕಿಸಿದ್ದಾರೆ.ಈ ವಿಡಿಯೋ ವೈರಲ್‌ ಆಗುತ್ತಿದೆ. ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರ ಮೇಲೆ ಹಾಸ್ಯ ಚಟಾಕಿ ಹಾರಿಸುತ್ತಾ , ನಟ ತಮ್ಮ ಸಹೋದ್ಯೋಗಿಗಳಾದ ನವ್ಯಾ ನಾಯರ್ ಮತ್ತು ಅಜು ವರ್ಗೀಸ್ ಅವರನ್ನು ಸಹ ಜೋಕ್‌ಗಳಲ್ಲಿ ಎಳೆದರು.

Aamir Khan: 3 ಈಡಿಯಟ್ಸ್ ಸೋನಮ್ ವಾಂಗ್ಚುಕ್‌ ಸ್ಫೂರ್ತಿ ಪಡೆದಿಲ್ಲ ಎಂದ ಆಮೀರ್‌ ಖಾನ್‌!

3 ಈಡಿಯಟ್ಸ್ ಸೋನಮ್ ವಾಂಗ್ಚುಕ್‌ ಸ್ಫೂರ್ತಿ ಪಡೆದಿಲ್ಲ ಎಂದ ಆಮೀರ್‌ ಖಾನ್‌!

Aamir Khan: 3 ಈಡಿಯಟ್ಸ್‌ನಲ್ಲಿ (3 Idiots) ತಮ್ಮ ಪಾತ್ರ ರಾಂಚೊ ಸೋನಮ್ ವಾಂಗ್‌ಚುಕ್ ಅವರನ್ನು ಆಧರಿಸಿದೆ ಎಂಬ ನಂಬಿಕೆಯನ್ನು ನಟ ಉಲ್ಲೇಖಿಸಿ, ಇದು ಹಾಗಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ತಮಗೆ ತೀವ್ರ ಕಳವಳವಿದೆ ಎಂದು ಆಮಿರ್ ಹೇಳಿದರು ಮತ್ತು ಅವರು ಶೀಘ್ರದಲ್ಲೇ ತಮ್ಮ ಉಪವಾಸವನ್ನು ಹಿಂತೆಗೆದುಕೊಳ್ಳುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

Ramayana Movie: 15 ವರ್ಷದ ಒಳಗಿನ ಮಕ್ಕಳು  ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು! ಕಾರಣ ಇದು

15 ವರ್ಷದ ಒಳಗಿನ ಮಕ್ಕಳು ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು!

Ramayana Movie: ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ಮಧ್ಯಮ ಪ್ರಮಾಣದ ಹಿಂಸಾಚಾರ ಇರುವುದರಿಂದ ಇದಕ್ಕೆ ‘M’ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ, ‘M’ ರೇಟಿಂಗ್ (M Rating) ಹೊಂದಿರುವ ಸಿನಿಮಾಗಳನ್ನು 15 ವರ್ಷದೊಳಗಿನ ಮಕ್ಕಳು ವೀಕ್ಷಿಸುವುದನ್ನು ಶಿಫಾರಸು ಮಾಡುವುದಿಲ್ಲ. ‘ರಾಮಾಯಣ’ ಚಿತ್ರದ 34 ನಿಮಿಷಗಳ ವಿಶೇಷ ವಿಡಿಯೋ ಪ್ಯಾಕೇಜ್ ಪರಿಶೀಲಿಸಿದ್ದು, ಅದಕ್ಕೆ ‘ಮೆಚ್ಯೂರ್’ ರೇಟಿಂಗ್ ‘ಆಸ್ಟ್ರೇಲಿಯಾ ಕ್ಲಾಸಿಫಿಕೇಷನ್ ಬೋರ್ಡ್’ ಕೊಟ್ಟಿದೆ .

ʻಭೂರಮೆʼ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ ʻಬಘೀರʼ ಖ್ಯಾತಿಯ ಎ. ಜೆ. ಶೆಟ್ಟಿ; ಸಾಥ್‌ ನೀಡಿದ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ದೇಶಕರು! ‌

ʻಭೂರಮೆʼ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ ಕನ್ನಡದ ಸ್ಟಾರ್‌ ನಿರ್ದೇಶಕರು

'ಕಬ್ಜ' ಹಾಗೂ 'ಬಘೀರ' ಚಿತ್ರಗಳ ಪ್ರಸಿದ್ಧ ಛಾಯಾಗ್ರಾಹಕ ಎ. ಜೆ. ಶೆಟ್ಟಿ ನಿರ್ದೇಶಿಸಿರುವ ಚೊಚ್ಚಲ ಆಲ್ಬಂ ಸಾಂಗ್ 'ಭೂರಮೆ' ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸ್ಟಾರ್ ನಿರ್ದೇಶಕರುಗಳಾದ ಎ. ಪಿ. ಅರ್ಜುನ್, ಚೇತನ್ ಕುಮಾರ್ ಮತ್ತು ಪವನ್ ಒಡೆಯರ್ ಹೊಸಬರ ಈ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.

ಒಂದೇ ರಾತ್ರಿಗೆ ತಮಿಳು ಸಿನಿಮಾಗಳ ಲೆಕ್ಕಾಚಾರ ಬದಲಿಸಿದ ʻಜನ ನಾಯಗನ್‌ʼ; ಸಿಎಂ ʻದಳಪತಿʼ ವಿಜಯ್‌ ಅಬ್ಬರಕ್ಕೆ ಸೈಡ್‌ಗೆ ಹೋದ ಚಿತ್ರಗಳಿವು!

CM Vijay: ʻಜನ ನಾಯಗನ್‌ʼ ಆರ್ಭಟಕ್ಕೆ ಹೆದರಿದ ಕಾಲಿವುಡ್‌ ಸಿನಿಮಾಗಳು!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಸಾಲು ಸಾಲು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದೂಡಿಕೊಂಡಿದ್ದು, ಚಿತ್ರರಂಗದ ಕ್ಯಾಲೆಂಡರ್ ಸಂಪೂರ್ಣ ಬದಲಾಗಿದೆ.

Daali Dhananjaya: ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್‌ ಬೇಸರ

ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್‌ ಬೇಸರ

Daali Dhananjaya: ‘ಮದರ್ ಪ್ರಾಮಿಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್‌ ಖಾಲಿ, ಜನರೇ ಇಲ್ಲ, ಕೆಟ್ಟ ಸಿನಿಮಾ ಎಂದೆಲ್ಲಾ ಕಮೆಂಟ್‌ ಹಾಕುವವರ ಬಗ್ಗೆ ನಟ ಡಾಲಿ ಧನಂಜಯ ಬೇಸರ ವ್ಯಕ್ತಪಡಿಸಿದ್ದಾರೆ.

ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಸಲ್ಮಾನ್‌ ಖಾನ್‌ ಸಹೋದರ ಸೋಹೈಲ್!‌ ಆದರೆ, ಕೊನೇ ಕ್ಷಣದಲ್ಲಿ ಹೆಸರು ಬದಲಾಗಿದ್ದೇಕೆ?

ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಸಲ್ಮಾನ್‌ ಸಹೋದರ ಸೋಹೈಲ್!

ಬಾಲಿವುಡ್ ನಟ ಸೋಹೈಲ್ ಖಾನ್ ತಮ್ಮ ಹಿರಿಯ ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಕಥೆಯನ್ನು ರಿಯಾಲಿಟಿ ಶೋನಲ್ಲಿ ಬಿಚ್ಚಿಟ್ಟಿದ್ದಾರೆ. ಮಾಜಿ ಪತ್ನಿ ಸೀಮಾ ಸಜ್ದೇಹ್ ಗರ್ಭಿಣಿಯಾಗಿದ್ದಾಗ ಮಾಡಿಕೊಂಡಿದ್ದ ಒಪ್ಪಂದದಂತೆ ಗಂಡು ಮಗುವಿಗೆ ಈ ಹೆಸರಿಡಲು ಪ್ಲಾನ್ ಮಾಡಲಾಗಿತ್ತು. ಆದರೆ ಹೆರಿಗೆಯ ನಂತರ ಆಗಿದ್ದೇ ಬೇರೆ!

Addinath Urmila divorce: 'ರಾಮಾಯಣ' ಸಿನಿಮಾ ಖ್ಯಾತಿಯ ನಟನ ಬಾಳಲ್ಲಿ ಬಿರುಗಾಳಿ; 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಜೋಡಿ

'ರಾಮಾಯಣ' ಸಿನಿಮಾ ಖ್ಯಾತಿಯ ನಟನ ಬಾಳಲ್ಲಿ ಬಿರುಗಾಳಿ !

Addinath Kothare: ಆದಿನಾಥ್ ಮತ್ತು ಊರ್ಮಿಳಾ ವಿಚ್ಛೇದನದ ಸುದ್ದಿ ತಿಳಿದಾಗ ಅನೇಕರು ಆಘಾತಕ್ಕೊಳಗಾದರು. ಕಳೆದ ಕೆಲವು ದಿನಗಳಿಂದ, ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದಿನಾಥ್ ಅವರ ಯಾವುದೇ ಚಿತ್ರಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳಲು ಊರ್ಮಿಳಾ ಬರುತ್ತಿರಲಿಲ್ಲ. ಆದಿನಾಥ್ ಕೊಠಾರೆ ಅವರಂತೆಯೇ ಊರ್ಮಿಳಾ ಕಾನಿಟ್ಕರ್ ಕೂಡ ಮರಾಠಿ ಚಿತ್ರರಂಗದ ಖ್ಯಾತ ಹೆಸರು. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಛಾಪು ಮೂಡಿಸಿದ್ದಾರೆ.

ಭರ್ಜರಿ ಫಸ್ಟ್‌ ಲುಕ್‌ ಜೊತೆಗೆ ರಿಲೀಸ್‌ ಡೇಟ್‌ ಘೋಷಿಸಿದ ʻಫೌಜಿʼ ಟೀಮ್‌ʼ; ʻಡಾರ್ಲಿಂಗ್ʼ ಪ್ರಭಾಸ್‌ ಫ್ಯಾನ್ಸ್‌ಗಂತೂ ಹಬ್ಬವೋ ಹಬ್ಬ!

ʻಫೌಜಿʼ ರಿಲೀಸ್ ಡೇಟ್ ಘೋಷಣೆ; ರಣಾಂಗಣದಲ್ಲಿ ಗನ್ ಹಿಡಿದು ಗರ್ಜಿಸಿದ ಪ್ರಭಾಸ್

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಫೌಜಿ' ಸಿನಿಮಾ ಇದೇ ವರ್ಷದ ಡಿಸೆಂಬರ್ 3 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ರಕ್ತಸಿಕ್ತ ಮಿಲಿಟರಿ ಉಡುಪಿನಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ರಗಡ್ ಪೋಸ್ಟರ್ ಲಾಂಚ್ ಆಗಿದ್ದು, ಇದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಲ್ಲೇ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

ಬೆಂಗಳೂರಿನಲ್ಲಿ 'ಸರಿಗಮಪ' ಆಡಿಷನ್; ರಾಷ್ಟ್ರಮಟ್ಟದಲ್ಲಿ ಮಿಂಚಲು ಕನ್ನಡದ ಗಾಯನ ಪ್ರತಿಭೆಗಳಿಗೆ ಇಲ್ಲಿದೆ ಸುವರ್ಣಾವಕಾಶ!

ಬೆಂಗಳೂರಿನಲ್ಲಿ ಜೀ ಟಿವಿ 'ಸರಿಗಮಪ' ಆಡಿಷನ್; ಕನ್ನಡಿಗರಿಗೆ ಸುವರ್ಣಾವಕಾಶ

ದೇಶದ ಅತ್ಯಂತ ಹೆಮ್ಮೆಯ ಸಂಗೀತ ರಿಯಾಲಿಟಿ ಶೋ ಜೀ ಟಿವಿಯ 'ಸರಿಗಮಪ' ತನ್ನ ಹೊಸ ಆವೃತ್ತಿಯ ಪ್ರತಿಭೆಗಳ ಹುಡುಕಾಟಕ್ಕಾಗಿ ಜುಲೈ 19 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ಹಮ್ಮಿಕೊಂಡಿದೆ. ಭಾಷೆಯ ಗಡಿಗಳಿಲ್ಲದ ಈ ಸಾಂಸ್ಕೃತಿಕ ಹಬ್ಬದಲ್ಲಿ ರಾಜ್ಯದ ಉದಯೋನ್ಮುಖ ಗಾಯಕರು ರಾಷ್ಟ್ರಮಟ್ಟದಲ್ಲಿ ಮಿಂಚಲು ಸುವರ್ಣಾವಕಾಶವಿದೆ.

‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ನಾಯಕಿಯಾದ ʻಪಾರುʼ ಖ್ಯಾತಿಯ ಮೋಕ್ಷಿತಾ ಪೈ; ಹೀರೋ ಆಗಿ ಬಂದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ ಪುತ್ರ ಭರತ್

Mokshitha Pai: ‌‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಹಾಡುಗಳು ರಿಲೀಸ್

‘ಪಾರು’ ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಹಾಗೂ ಭರತ್ ಕುಮಾರ್ ಮುಖ್ಯ ಭೂಮಿಕೆಯ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಎರಡು ಹಾಡುಗಳು ಅದ್ಧೂರಿಯಾಗಿ ಬಿಡುಗಡೆಯಾಗಿವೆ. ಉಮೇಶ್ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಾಣ್ ಸುವರ್ಣ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಇದರ ಆಡಿಯೋ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

Pallichattambi ott: ಟೊವಿನೋ ಥಾಮಸ್ ನಟನೆಯ 'ಪಳ್ಳಿ ಚಟ್ಟಂಬಿ' ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಟೊವಿನೋ ಥಾಮಸ್ ನಟನೆಯ 'ಪಳ್ಳಿ ಚಟ್ಟಂಬಿ' ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Pallichattambi ott: ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ಮತ್ತು ದೊಡ್ಡ ತಾರಾಬಳಗದೊಂದಿಗೆ ವಿಶಾಲವಾದ ಕ್ಯಾನ್ವಾಸ್‌ನಲ್ಲಿ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಚಿತ್ರವು ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಈ ಚಿತ್ರವು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಯಿತು. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿತ್ತು.

Amruthadhaare Serial: ಒಲವಿನ ಜೋಡಿಯ ಪ್ರೇಮೋತ್ಸವ; ಗೌತಮ್ - ಭೂಮಿಕಾ ವಿವಾಹ ಸಂಭ್ರಮ!

ಒಲವಿನ ಜೋಡಿಯ ಪ್ರೇಮೋತ್ಸವ; ಗೌತಮ್ - ಭೂಮಿಕಾ ವಿವಾಹ ಸಂಭ್ರಮ!

Amruthadhaare Serial: ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್‌ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್‌ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ. ಯಾವಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇದೆ ಅನ್ನೋದು ಗೊತ್ತಾಯ್ತೋ ಅಲ್ಲಿಂದ ಭೂಮಿ ಸೋತು ಹೋಗಿದ್ದಾಳೆ. ಈಗ ಹೊಸ ಪ್ರೋಮೋ ಔಟ್‌ ಆಗಿದೆ.

Saathvika: ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂದ್ರೆ ಮಕ್ಕಳು ಮಾಡ್ಕೊಬೇಡಿ! ರೇಖಾ ದಾಸ್ ಮಗಳು ಭಾವುಕ

ಜೊತೆಗಿರಲು ಸಾಧ್ಯವಿಲ್ಲ ಅಂದ್ರೆ ಮಕ್ಕಳು ಮಾಡ್ಕೊಬೇಡಿ! ಸಾತ್ವಿಕಾ ಭಾವುಕ

Saathvika: ಓಂ ಪ್ರಕಾಶ್‌ ರಾವ್‌ (Om prakash) ಅವರು ದಶಕಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಖ್ಯಾತ ಹ್ಯಾಸ್ಯಕಲಾವಿದ, ಬರಹಗಾರ ಮತ್ತು ರಂಗಭೂಮಿ ಕಲಾವಿದರಾಗಿದ್ದ ಹಿರಿಯ ನಟ ಎನ್ ಎಸ್‌ ರಾವ್‌ ಅವರು. ಮಗಳು ಶ್ರಾವ್ಯಾ ರಾವ್‌ (Shravya Rao) ಈಗ ಸಾತ್ವಿಕಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. `ಪಾಸಿಬಲ್',`ಹುಚ್ಚ 2' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಮೋಡ ಕವಿದ ವಾತಾವರಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Haiwaan first look out: KVN ನಿರ್ಮಾಣದ ಬಾಲಿವುಡ್​ ಸಿನಿಮಾ 'ಹೈವಾನ್'; ಪೋಸ್ಟರ್‌ ಔಟ್‌

KVN ನಿರ್ಮಾಣದ ಬಾಲಿವುಡ್​ ಸಿನಿಮಾ 'ಹೈವಾನ್'; ಪೋಸ್ಟರ್‌ ಔಟ್‌

Haiwaan first look out: ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್'​​ ನಿರ್ಮಾಣಕ್ಕೆ ಕನ್ನಡದ ಕೆವಿಎನ್​ ಕೈಜೋಡಿಸಿದ್ದು ಈಗ ಫಸ್ಟ್‌ ಲುಕ್‌ ಔಟ್‌ ಆಗಿದೆ. ಅಕ್ಷಯ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಸೈಫ್ ಮತ್ತು ಅಕ್ಷಯ್ ಕೊನೆಯ ಬಾರಿಗೆ 2008ರಲ್ಲಿ ಬಿಡುಗಡೆಯಾದ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ತಶಾನ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Loading...