ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ಫೆ.20 ರಂದು ಶಿರಸಿಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್

ಫೆ.20 ರಂದು ಶಿರಸಿಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಆಡಿಷನ್ ಗಳು ಕರ್ನಾಟಕದ 31 ಜಿಲ್ಲೆಗಳಲ್ಲಿ ನಡೆಯಲಿದೆ. ಚೆನ್ನಾಗಿ ಹಾಡುವ ಮಕ್ಕಳು 3 ರಿಂದ 15 ವರ್ಷದ ಒಳಗಿದ್ದರೆ 3 ವಿಭಿನವಾದ ಹಾಡುಗಳನ್ನು ಕಲಿತು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವ ಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ.

ಉದಯೋನ್ಮುಖ ಕಲಾವಿದರಿಗಾಗಿ 'ಪರಮ್ ವಿಹಾರ': ಫೆಬ್ರವರಿ 22ರಂದು ಬಸವನಗುಡಿಯಲ್ಲಿ ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

ಫೆಬ್ರವರಿ 22ರಂದು ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

Param Foundation: ಪರಮ್ ಫೌಂಡೇಶನ್ ವತಿಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಪರಮ್ ಕಲ್ಚರ್' ಅಡಿಯಲ್ಲಿ 'ಪರಮ್ ವಿಹಾರ' ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ಫೆಬ್ರವರಿ 22ರಂದು ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಪ್ರತಿಷ್ಠಿತ 'ಅಬಲಾಶ್ರಮ'ದಲ್ಲಿ ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ.

Photos: ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಚಿಲ್ಲರ್‌ ಮಂಜು ಮದುವೆ ಫಿಕ್ಸ್;‌ ಹುಡುಗಿ ಯಾರು? ಎಂಗೇಜ್‌ಮೆಂಟ್‌ ಆಗಿದ್ದೆಲ್ಲಿ?

ಚಿಲ್ಲರ್ ಮಂಜು ಬದುಕಿಗೆ ಕಾರುಣ್ಯ ಎಂಟ್ರಿ: ಸದ್ದಿಲ್ಲದೆ ನಡೆದ ನಿಶ್ಚಿತಾರ್ಥ

ಕಲರ್ಸ್‌ ಕನ್ನಡ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಮತ್ತು ʻಮಜಾಭಾರತʼ ರಿಯಾಲಿಟಿ ಶೋಗಳ ಮೂಲಕ ಫೇಮಸ್‌ ಆಗಿರುವ ನಟ ಚಿಲ್ಲರ್‌ ಮಂಜು (ಮಂಜುನಾಥ್‌). ತಮ್ಮ ಕಾಮಿಡಿ ಟೈಮಿಂಗ್‌ ಹಾಗೂ ಎಕ್ಸ್‌ಪ್ರೆಶನ್‌ಗಳಿಂದ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿರುವ ಮಂಜ, ಒಂದು ಗುಡ್‌ ನ್ಯೂಸ್‌ ನೀಡಿದ್ದಾರೆ. ಅದೇನಪ್ಪ ಅಂದ್ರೆ, ಅವರು ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಕಾರುಣ್ಯಾ ಎಂಬುವವರ ಜೊತೆಗೆ ಚಿಲ್ಲರ್ ಮಂಜ ಎಂಗೇಜ್‌ ಆಗಿದ್ದು, ಈಚೆಗೆ ಸಿಂಪಲ್‌ ಆಗಿ ಅವರ ಎಂಗೇಜ್‌ಮೆಂಟ್‌ ನಡೆದಿದೆ. ಇದೇ ಶೋನ ಕಲಾವಿದರಾದ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚಿಲ್ಲರ್ ಮಂಜು ಕೂಡ ಎಂಗೇಜ್‌ ಆಗಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ಈ ಎಂಗೇಜ್‌ಮೆಂಟ್‌ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿವೆ ನೋಡಿ ಚಿಲ್ಲರ್‌ ಮಂಜು ಮತ್ತು ಕಾರುಣ್ಯಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು.

Toxic Teaser: ದಿಢೀರ್‌ ಅಂತ ಸರ್ಪ್ರೈಸ್‌ ನೀಡಿದ ‌ʻರಾಕಿಂಗ್‌ ಸ್ಟಾರ್‌ʼ ಯಶ್; ರಾಯನ ಮತ್ತೊಂದು ಝಲಕ್‌ ನೋಡಲು ನೀವು ರೆಡಿನಾ?

ರಕ್ತಸಿಕ್ತ ರಣರಂಗದಲ್ಲಿ 'ರಾಯ'ನ ಅಬ್ಬರ; ಬರ್ತಿದೆ ʻಟಾಕ್ಸಿಕ್‌‌ʼ ಟೀಸರ್‌

Toxic Teaser Release Date: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಅನ್ನು ದಿಢೀರ್‌ ಎಂದು ಘೋಷಣೆ ಮಾಡಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ 'ರಾಯ' ಎಂಬ ರಗಡ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಈಗ ರಿಲೀಸ್‌ ಆಗಿರುವ ಹೊಸ ಪೋಸ್ಟರ್ ಭೀಕರ ಹಿಂಸಾಚಾರದ ಸುಳಿವು ನೀಡಿದೆ.

Raakshasa Web Series: ನಿರೂಪಕಿ ಅನುಶ್ರೀ ಮದುವೆಯಲ್ಲಿ ಆಗಿದ್ದೇನು? ವಿಜಯ್‌ ರಾಘವೇಂದ್ರ - ತರುಣ್‌ ಸುಧೀರ್‌ ಥ್ಯಾಂಕ್ಸ್‌ ಹೇಳಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್‌ ಕಥೆ

ಅನುಶ್ರೀ ಮದುವೆಯಲ್ಲಿ ಫಿಕ್ಸ್ ಆಗಿತ್ತು ವಿಜಯ್ ರಾಘವೇಂದ್ರ ವೆಬ್‌ ಸೀರೀಸ್!

ನಿರ್ಮಾಪಕ ತರುಣ್ ಸುಧೀರ್ ಮತ್ತು ನಟ ವಿಜಯ್ ರಾಘವೇಂದ್ರ ಅವರ ಈ ಬಹುನಿರೀಕ್ಷಿತ ರಾಕ್ಷಸ ವೆಬ್ ಸರಣಿ ಫೆಬ್ರವರಿ 20ರಿಂದ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಪ್ರಾಜೆಕ್ಟ್‌ಗೆ ವಿಜಯ್‌ ರಾಘವೇಂದ್ರ ಆಯ್ಕೆ ಆಗಿದ್ದು ನಿರೂಪಕಿ ಅನುಶ್ರೀ ಮದುವೆಯಲ್ಲಿ ಅನ್ನೋದು ವಿಶೇಷ. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಹೊಂದಿರುವ ಈ ಸರಣಿಯಲ್ಲಿ ಮಯೂರಿ ಕ್ಯಾತರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

Suhana Syed: ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

Suhana Syed singer: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ . ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ಮದುವೆಯಾಗಿದ್ದರು. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸಖತ್ ಆಕ್ಟೀವ್ ಆಗಿದ್ದಾರೆ.

Vijay Deverakonda: ವಿಜಯ್‌ ದೇವರಕೊಂಡ ಮನೆ ಈಗ ಝಗಮಗ! ಮದುವೆ ತಯಾರಿ ಹೇಗಿದೆ?

ವಿಜಯ್‌ ದೇವರಕೊಂಡ ಮನೆ ಈಗ ಝಗಮಗ! ಮದುವೆ ತಯಾರಿ ಹೇಗಿದೆ?

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ತಿಂಗಳು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಈ ಜೋಡಿ ಇನ್ನೂ ಮೌನವಾಗಿದ್ದು, ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿರುವ ಮತ್ತು ಸೋರಿಕೆಯಾದ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮದುವೆ ಆಗುತ್ತಿರೋದು ಫಿಕ್ಸ್‌ ಎನ್ನಲಾಗುತ್ತಿದೆ. ಹೂವಿನ ಅಲಂಕಾರ ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟ ವಿಜಯ್ ದೇವರಕೊಂಡ ಅವರ ಮನೆಯ ವಿಡಿಯೋ ಇದೀಗ ವೈರಲ್‌ ಆಗಿದೆ.

Amruthadhaare serial: ಗೌತಮ್‌ ಮುಂದೆ ಸುನಿ ಡ್ರಾಮ ಬಲು ಜೋರು! ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌?

Amruthadhaare serial: ಗೌತಮ್‌ ಮುಂದೆ ಸುನಿ ಡ್ರಾಮ ಬಲು ಜೋರು!

Amruthadhaare Kannada serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮೇಲೆಯೇ ಕಥೆ ಸಾಗುತ್ತಿದ್ದು, ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾ ಇದೆ. ಜೈದೇವ್‌ ಆಸ್ತಿ ಸಿಕ್ಕರೂ ಮಲ್ಲಿ ನೆಮ್ಮದಿ ಹಾಳು ಮಾಡದೇ ಇರೋನೇ ಅಲ್ಲ ಅಂತ ನಿರ್ಧಾರ ಮಾಡಿದ್ದಾಗಿದೆ. ಸಿಂಪಲ್‌ ಸುನಿಯನ್ನ ಸದ್ಯಕ್ಕಂತೂ ಮಲ್ಲಿ ವಿರುದ್ಧ ಛೂ ಬಿಟ್ಟಿದ್ದಾನೆ.

Bhagyalakshmi Kannada Serial: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ನಟ ಸುದರ್ಶನ್!

‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ಸುದರ್ಶನ್!

Actor Sudharshan: ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕೊನೆ ಆಗುತ್ತಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಸುಷ್ಮಾ ರಾವ್‌ ಕೂಡ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದರು. ಈಗ ತಾಂಡವ್ ಪಾತ್ರ ಮಾಡ್ತಿರೋ ಸುದರ್ಶನ್ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ತುಳುನಾಡಿನ ʻವೀರ ಕಂಬಳʼ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಿದ ಹಂಸಲೇಖ;‌ ಪಾತ್ರದ ಗುಟ್ಟನ್ನು ರಿವೀಲ್‌ ಮಾಡಲಿಲ್ಲ ನಟ ಆದಿತ್ಯ

ʻವೀರ ಕಂಬಳʼ ಸಿನಿಮಾದಲ್ಲಿ ನಟ ಆದಿತ್ಯಗೆ ಏನು ಪಾತ್ರ?

Veera Kambala Movie: ಹಂಸಲೇಖ ಅವರು ವೀರ ಕಂಬಳ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ 50 ವರ್ಷಗಳ ಸಿನಿಮಾ ಪಯಣದ ಸ್ಮರಣೀಯ ಚಿತ್ರವಿದು. ತುಳುನಾಡಿನ ಸಾಂಪ್ರದಾಯಿಕ ಕಂಬಳ ಮತ್ತು ಮುಂಬೈ ಅಂಡರ್‌ವರ್ಲ್ಡ್ ನಡುವಿನ ರೋಚಕ ಕಥೆ ಹೊಂದಿರುವ ಈ ಚಿತ್ರ ಫೆಬ್ರವರಿ 27 ರಂದು ತೆರೆಕಾಣಲಿದೆ.

Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

Nanda Gokula Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದ ಗೋಕುಲ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೊ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ಸೀರಿಯಲ್‌ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Pramod Shetty: ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

Rashmika : ಪ್ರಮೋದ್ ಶೆಟ್ಟಿ ‘ಶೇಷ 2016’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಇದೀಗ ಸಿನಿಮಾ ವಿಚಾರವಾಗಿ ಪ್ರಚಾರ ಕಾರ್ಯಗಳು ಆರಂಭವಾಗಿವೆ. ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಆಂಡ್ ಕಂಪನಿ ನಡುವೆ ಆಗಾಗ ಕಿರಿಕ್ ನಡೆಯುತ್ತೆ.

Photos: ʻನಾನಿಂದು ಏನಾಗಿದ್ದೇನೋ ಅದಕ್ಕೆ ನೀನೇ ಕಾರಣʼ; ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ ನಟ ಚಿರಂಜೀವಿ

Photos: ಪತ್ನಿ ಸುರೇಖಾ ಬರ್ತ್‌ಡೇಗೆ ನಟ ಚಿರಂಜೀವಿ ಭಾವುಕ ಪೋಸ್ಟ್

ಮೆಗಾ ಸ್ಟಾರ್‌ ಚಿರಂಜೀವಿ ಅವರ ಪತ್ನಿ ಸುರೇಖಾ ಅವರಿಗೆ ಇಂದು (ಫೆ.18) ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ತಮ್ಮ 46 ವರ್ಷಗಳ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಚಿರಂಜೀವಿ. "ಇಂದು ನಿನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ, ನನ್ನ ಹೃದಯಾಳದ ಮಾತು ಇಷ್ಟೇ, ʻನಾನಿಂದು ಏನಾಗಿದ್ದೇನೋ, ಅದಕ್ಕೆ ನೀನೇ ಕಾರಣʼ.. ಅಪಾರ ಪ್ರೀತಿಯೊಂದಿಗೆ, ಎಂದೆಂದಿಗೂ ನಿನ್ನವ.." ಎಂದು ಚಿರಂಜೀವಿ ಪ್ರೀತಿಯಿಂದ ಪತ್ನಿ ಸುರೇಖಾಗೆ ವಿಶ್‌ ಮಾಡಿದ್ದಾರೆ. ಇದೇ ವೇಳೆ ತಮ್ಮ ಬದುಕಿನ ಕೆಲವು ಅತ್ಯಮೂಲ್ಯವಾದ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಮನದಾಳದ ಕೆಲವು ಮಾತುಗಳನ್ನು ಚಿರಂಜೀವಿ ಹೇಳಿಕೊಂಡಿದ್ದಾರೆ.

Rana Daggubati: ಯಾವುದೇ ಸಿನಿಮಾಗಳಲ್ಲಿಯೂ ನಟಿಸಲಿಲ್ಲ, ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿದ್ರು; ರಾಣಾ ದಗ್ಗುಬಾಟಿಗೆ ಆಗಿದ್ದೇನು?

ಸಿನಿಮಾ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿದ್ರು ರಾಣಾ; ಆಗಿದ್ದೇನು?

Rhea Chakraborty's podcast: ನಟ ರಾಣಾ ದಗ್ಗುಬಾಟಿ ತಮ್ಮ ಆರೋಗ್ಯದ ಸವಾಲುಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಬೀರಿದ ಪರಿಣಾಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್, ಅಧ್ಯಾಯ 2 ನಲ್ಲಿ ಕಾಣಿಸಿಕೊಂಡ ನಟ, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ನಟನೆಯಿಂದ ವಿರಾಮ ತೆಗೆದುಕೊಂಡು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಬೇಕಾಯಿತು ಎಂದೂ ಹೇಳಿಕೊಂಡಿದ್ದಾರೆ.

"ಅಪ್ಪು ಅಂದ್ರೆ ದೇವರು, ಶಿವಣ್ಣ ನನ್ನನ್ನು ಕ್ಷಮಿಸಿಬಿಡಿ"; ವಿವಾದಾತ್ಮಕ ಹೇಳಿಕೆ ನೀಡಿ ಬಹಿರಂಗವಾಗಿ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್

ಫಿಲ್ಮ್ ಚೇಂಬರ್‌ನಲ್ಲಿ ಕೈಮುಗಿದು ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್!

ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ದರ್ಶನ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಇಂದು (ಫೆ.18) ವಾಣಿಜ್ಯ ಮಂಡಳಿಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. "ಆರ್ಥಿಕ ಸಂಕಷ್ಟ ಮತ್ತು ಸಿನಿಮಾದ ಬಿಡುಗಡೆಯ ಒತ್ತಡದಲ್ಲಿ ತಿಳಿಯದೆ ಮಾತನಾಡಿದ್ದೇನೆ, ಏಳು ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಿ" ಎಂದಿದ್ದಾರೆ.

Ram Charan: ʻಪೆದ್ದಿʼ ಸಿನಿಮಾ ಡೈರೆಕ್ಟರ್‌ಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ಶಿವರಾಜ್‌ಕುಮಾರ್;‌ ಕಾರಣವೇನು?

‌ಪೆದ್ದಿ ನಿರ್ದೇಶಕನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಶಿವಣ್ಣ; ಏನದು ಉಡುಗೊರೆ?

Ram Charan‌'s Peddi Movie: ʻಪೆದ್ದಿʼ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರ ಹುಟ್ಟುಹಬ್ಬದ ಪ್ರಯುಕ್ತ ನಟ ಶಿವರಾಜ್‌ಕುಮಾರ್ ಅವರು ದುಬಾರಿ ಬೆಲೆಯ 'ಜಿಸಿ' ಬ್ರ್ಯಾಂಡ್‌ನ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಮ್ ಚರಣ್ ಅಭಿನಯದ ಈ ಚಿತ್ರದಲ್ಲಿ ಶಿವಣ್ಣ 'ಗೌರ್ನಾಯ್ಡು' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ

ಶಿವಣ್ಣ - ಉಪೇಂದ್ರ ನಟನೆಯ '45' ಚಿತ್ರದ ಟೆಲಿವಿಷನ್ ಪ್ರೀಮಿಯರ್ ಯಾವಾಗ?

45 ಸಿನಿಮಾದ ಮೊದಲ ಪ್ರೀಮಿಯರ್‌ ಜೀ ಕನ್ನಡ ವಾಹಿನಿಯಲ್ಲಿ ಇದೇ ಫೆಬ್ರವರಿ 22 ರಂದು ಸಂಜೆ 4.30 ಕ್ಕೆ ನಡೆಯಲಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕನಾಗುವ ಗಿಲ್ಲಿ ನಟನ ಕನಸು ಎಲ್ಲಿಗೆ ಬಂತು? ʻಬಿಗ್‌ ಬಾಸ್‌ ವಿನ್ನರ್‌ʼ ಡೈರೆಕ್ಟರ್‌ ಆಗೋದು ಯಾವಾಗ?

ಬಿಗ್ ಬಾಸ್ ವಿನ್ನರ್ 'ಗಿಲ್ಲಿ' ನಟ ಸಿನಿಮಾ ನಿರ್ದೇಶನ ಮಾಡೋದ್ಯಾವಾಗ?

ಬಿಗ್ ಬಾಸ್ ವಿಜೇತ ಗಿಲ್ಲಿ ನಟ ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡಿರುವ ಗಿಲ್ಲಿ ನಟ, ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. "ನಿರ್ದೇಶನ ಎಂಬುದು ದೊಡ್ಡ ಜವಾಬ್ದಾರಿ" ಅಂತಲೂ ಅವರು ಹೇಳಿದ್ದಾರೆ.

Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ

Chaithra Kundapura Case: ಸಂದರ್ಶನವೊಂದರಲ್ಲಿ ಚೈತ್ರಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ತಮ್ಮ ಬಾಲ್ಯದ ಕಹಿ ಘಟನೆ, ಲವ್‌ ಸ್ಟೋರಿ, ತಂದೆಯ ಹೇಳಿಕೆ, ಚೆನ್‌ ಬೌನ್ಸ್‌ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ತುಂಬಾ ಜನ ಕಮೆಂಟ್‌ ಮಾಡಿದ್ದಾರೆ. ನನಗೆ ಯಾರೂ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸುವ ಉದ್ದೇಶ ಇಲ್ಲ. ಆದರೆ ನನ್ನ ಸುದ್ದಿಗೆ ಬಂದ್ರೂ ಬಿಡಲ್ಲ ಎಂದಿದ್ದಾರೆ.

Sidharth Malhotra: ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟ

ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ

Sidharth Malhotra Father: ನಟ ಸಿದ್ಧಾರ್ಥ್ ಮಲ್ಹೋತ್ರಾ ತಂದೆ ಸುನಿಲ್ ಮಲ್ಹೋತ್ರಾ ನಿಧನರಾಗಿದ್ದಾರ. ತಂದೆ ನಿಧನರಾಗಿದ್ದಾರೆ ಎಂದು ಮಂಗಳವಾರ ಸಂಜೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ಬಾಲ್ಯದಿಂದ ಇಂದಿನವರೆಗಿನ ಚಿತ್ರಗಳ ಸರಣಿಯನ್ನು ನಟ ಹಂಚಿಕೊಂಡಿದ್ದು, ಅವರ ಜೊತೆ ಹೃದಯಸ್ಪರ್ಶಿ ಕ್ಷಣಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

Amruthadhaare Serial:  ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

Amruthadhaare Serial: ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು!

Amruthadhaare Kannada Serial: ಮಲ್ಲಿ ಜೈದೇವ್‌ನಿಂದ ಮೋಸ ಹೋಗಿದ್ದು ಆಯ್ತು. ಸದ್ಯ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾಳೆ. ಜೆಡಿ ಕುತಂತ್ರಗಳಿಗೆ ಮತ್ತೆ ಬಲಿಯಾಗುತ್ತಿದ್ದಾಳೆ. ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು ಎಂದು ಮಲ್ಲಿ ಹಿಂದೆ ಹುಡುಗನನ್ನು ಬಿಟ್ಟಿದ್ದಾನೆ. ಆತ ಕೂಡ ಪ್ರೀತಿಯ ನಾಟಕ ಮಾಡ್ತಿದ್ದಾನೆ. ಆದರೀಗ ಕೇಡಿ ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು ಬಂದು ನಿಂತಿದ್ದಾನೆ. ಮುಂದೆನಾಗುತ್ತೆ?

Reality Show: ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

Reality Show: ಬಿಗ್ ಬಾಸ್ ಕಿರುತೆರೆ ಲೋಕದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎನ್ನುವುದು ಗೊತ್ತೇ ಇದೆ ಇದು ದೂರದರ್ಶನ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತದೆ. ಈ ರಿಯಾಲಿಟಿ ಶೋ ಹಲವು ಹಲವು ಭಾಷೆಗಳಲ್ಲಿಯೂ ಸಖತ್‌ ಕ್ರೇಜ್‌ ಹೊಂದಿದೆ. ಒಂದೇ ಮನೆಯಲ್ಲಿ ಸ್ಪರ್ಧಿಗಳು , ಟಾಸ್ಕ್‌ಗಳು, ಫೈಟ್‌ಗಳು, ಎಲಿಮಿನೇಷನ್‌ಗಳು ಈ ಸ್ವರೂಪದ ಕ್ರೇಜ್ ವಿಭಿನ್ನ ಮಟ್ಟದಲ್ಲಿದೆ. ಅದೇ ಸ್ವರೂಪದಲ್ಲಿ ಮತ್ತೊಂದು ದೊಡ್ಡ ರಿಯಾಲಿಟಿ ಶೋ ಅನ್ನು ತರುತ್ತಿದೆ ಈ ವಾಹಿನಿ.

KC Rudregowda: ರಾಜ್ ಕಮಲ್ ಚಿತ್ರಮಂದಿರದ ಮಾಲೀಕ, ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

KC Rudregowda: ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

KC Rudregowda: ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕ ಕೆ. ಸಿ. ಎನ್. ಗೌಡರ ಸಹೋದರ, ರಾಜಕಮಲ್ ಚಿತ್ರಮಂದಿರದ ಮಾಲೀಕರಾದ ಕೆ. ಸಿ. ರುದ್ರೇಗೌಡರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಿನಿಮಾ ಮಂದಿರಗಳ ಮಾಲೀಕರಾಗಿ ಕೆ.ಸಿ. ರುದ್ರೇಗೌಡರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

Pabbar Movie: 14 ವರ್ಷದ ಬಳಿಕ ಕ್ಲೀನ್ ಶೇವ್; 'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

ayyappa sharma: ಅಯ್ಯಪ್ಪ ಪಿ ಶರ್ಮ ಪಬ್ಬಾರ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಹೊಸ ಅವತಾರ ತಾಳಿದ್ದಾರೆ. ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಪಬ್ಬಾರ್ ಸಿನಿಮಾದ SP ಪಾತ್ರಕ್ಕಾಗಿ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೆ.

Loading...