ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Amruthadhaare Serial: ಗೌತಮ್ - ಭೂಮಿಕಾ ಒಂದಾಗೋ ಅಮೃತ ಘಳಿಗೆ! ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌

ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌!

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಭೂಮಿಕಾ ವಾಪಸ್‌ ಆದ್ರೆ, ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ. ಇದೀಗ ಧಾರಾವಾಹಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ಆದಷ್ಟು ಬೇಗ ಭೂಮಿ ಗೌತಮ್‌ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ.

Mark: ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಸುದೀಪ್;‌ ಹೊಸ ವರ್ಷಕ್ಕೆ ಕಿಚ್ಚ ಕೊಡ್ತಿರುವ ಗಿಫ್ಟ್‌ ಏನು ಗೊತ್ತಾ?

Mark: ಫ್ಯಾನ್ಸ್‌ ಪ್ರೀತಿ ಕಂಡು 'ಮನ ತುಂಬಿ ಬಂದಿದೆ' ಎಂದ ʼಕಿಚ್ಚʼ ಸುದೀಪ್

Mark Movie: ಕಿಚ್ಚ ಸುದೀಪ್‌ ಅಭಿನಯದ 'ಮಾರ್ಕ್' ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಸುದೀಪ್ ಭಾವುಕರಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ಅವರು, ಅಭಿಮಾನಿಗಳ ಸಂಭ್ರಮ ಕಂಡು ಧನ್ಯತಾ ಭಾವ ವ್ಯಕ್ತಪಡಿಸಿದ್ದಾರೆ ಮತ್ತು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಭೇಟಿ ಮಾಡಿದ್ದ ಅಭಿಮಾನಿ ಗೌರಮ್ಮ ಇನ್ನಿಲ್ಲ

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಗೌರಮ್ಮ ನಿಧನ

ಪುನೀತ್‌ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಹುಬ್ಬಳ್ಳಿಯ ವೀರಾಪೂರ ಓಣಿಯ ನಿವಾಸಿ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ ನಿಧನರಾದರು. ತಮ್ಮ ಅಪ್ಪಟ ಅಭಿಮಾನಿಯನ್ನು ಕಾಣಲು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಿಂದೆ ಗೌರಮ್ಮ ಅವರ ಮನೆಗೆ ಭೇಟಿ ನೀಡಿ ಸಮಯ ಕಳೆದಿದ್ದರು.

ಮೊದಲ ಬಾರಿಗೆ ಬಣ್ಣ ಹಚ್ಚಿದ  ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌; ಯಾವ ಸಿನಿಮಾಕ್ಕಾಗಿ ಗೊತ್ತಾ?

ಬಣ್ಣದ ಲೋಕಕ್ಕೆ ನಟರಾಗಿ ಎಂಟ್ರಿ ಕೊಟ್ಟ ಎ ಆರ್ ರೆಹಮಾನ್!

ಎ ಆರ್‌ ರೆಹಮಾನ್‌ ಅವರು ಇದೇ ಮೊದಲ ಬಾರಿಗೆ ಪ್ರಭುದೇವ ಅಭಿನಯದ 'ಮೂನ್‌ವಾಕ್' (Moonwalk) ಎಂಬ ಕಾಮಿಡಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮನೋಜ್ ಎನ್‌ಎಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು 'ಆಂಗ್ರಿ ಡೈರೆಕ್ಟರ್' ಪಾತ್ರ ನಿರ್ವಹಿಸಲಿದ್ದಾರೆ.

BBK 12: ʻಮಾರ್ಕ್‌ʼ ನೋಡಲು ಬಂದ ಸುದೀಪ್‌ ಎದುರು ಗಿಲ್ಲಿ ನಟನಿಗೆ ಜೈಕಾರ; ಕಿಚ್ಚನಿಗೆ ಮಾತಿನ ಮಲ್ಲನ ಫ್ಯಾನ್ಸ್‌ ಬೇಡಿಕೆ ಏನು?

Bigg Boss 12: 'ಗಿಲ್ಲಿ ಗೆಲ್ಲಬೇಕು..'; ಸುದೀಪ್ ಎದುರೇ ಅಭಿಮಾನಿಗಳ ಬೇಡಿಕೆ

Kiccha Sudeep: 'ಮಾರ್ಕ್' ಸಿನಿಮಾವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈಚೆಗೆ ಸುದೀಪ್‌ ಥಿಯೇಟರ್‌ಗೆ ಭೇಟಿ ನೀಡಿ, ಫ್ಯಾನ್ಸ್‌ ಜೊತೆ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. "ಗಿಲ್ಲಿ ಗೆಲ್ಲಬೇಕು" ಎಂದು ಅಭಿಮಾನಿಗಳು ಕೂಗಿದಾಗ ಸುದೀಪ್ ಸ್ಮೈಲ್ ನೀಡಿದರು.

Spirit first look: ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌! 'ಸ್ಪಿರಿಟ್' ಹೊಸ ಪೋಸ್ಟರ್‌ ಔಟ್‌

ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌!

Prabhas: ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರೀಟ್' ಚಿತ್ರದ ಹೊಸ ಪೋಸ್ಟರ್ ಔಟ್‌ ಆಗಿದೆ. ಹೊಸ ವರ್ಷದಂದು ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಪ್ರಭಾಸ್ ಮತ್ತು ತೃಪ್ತಿ ಡಿಮ್ರಿ ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಲನಚಿತ್ರ ಪೋಸ್ಟರ್‌ನ ಮೊದಲ ನೋಟವನ್ನು ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ವಿಶೇಷ ಅಚ್ಚರಿ ಮೂಡಿಸಿದರು.

Bigg Boss Kannada 12: ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕನ್ನಡ ಕಿರುತೆರೆ ನಟಿ ಮೆಚ್ಚುಗೆ

ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕಿರುತೆರೆ ನಟಿ ಮೆಚ್ಚುಗೆ

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಗಿಲ್ಲಿ ಆಟಕ್ಕೆ ಅನೇಕರು ಮನಸೋತಿದ್ದಾರೆ. ಫಿನಾಲೆ ಮುಂಚೆಯೇ ಗಿಲ್ಲಿಯೇ ಈ ಬಾರಿ ಕಪ್‌ ಗೆಲ್ಲೋದು ಅಂತ ಕಮೆಂಟ್‌ ಮಾಡ್ತಿದ್ದಾರೆ. ಗಿಲ್ಲಿ ಜೊತೆ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿರೋ ಅದೆಷ್ಟೋ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ .ಕಲರ್ಸ್‌ ಕನ್ನಡದ ಮಂಗಳ ಗೌರಿ ಮದುವೆಯಲ್ಲಿ ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದ ಯಶಸ್ವಿನಿ ಕೆ ಸ್ವಾಮಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್​ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ

`ನೀನೊಬ್ಬ ಥರ್ಡ್​ ಕ್ಲಾಸ್ʼ! ಗಿಲ್ಲಿಗೆ ಬಾಯಿಗೆ ಬಂದಂತೆ ಬೈದ ಅಶ್ವಿನಿ

Gilli Nata: ಬಿಗ್‌ ಬಾಸ್‌ ಇನ್ನೇನು ಕೊನೆಗ ಘಟ್ಟ ತಲಪುವ ಹಂತದಲ್ಲಿಯೇ ಗಿಲ್ಲಿ-ಅಶ್ವಿನಿ ನಡುವೆ ಜಗಳ ಜೋರಾಗುತ್ತಿದೆ. 2.0 ಅಂತ ಅನ್ನುತ್ತಿದ್ದ ಅಶ್ವಿನಿ ಅವರು ಈಗ ಕೆಂಡ ಆಗಿದ್ದಾರೆ. ಸೆಕೆಂಡ್‌ ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗಿದೆ ಅಂತ ಅನ್ನುವಾಗಲೇ ಅಶ್ವಿನಿ ಅವರು ಬೇಕಾಬಿಟ್ಟಿ ಕೆಲವು ಪದಗಳನ್ನು ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ಆದರೆ ಗಿಲ್ಲಿಗೆ ಅಶ್ವಿನಿ ಅವರು ಈಗ ಜೋಕರ್, ಥರ್ಡ್​ ಕ್ಲಾಸ್ ಎಂದೆಲ್ಲ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್‌ ಮಾಡಿದ ಧ್ರುವಂತ್-ಅಶ್ವಿನಿ; ಸ್ನೇಹಿತನಿಗೆ ಕಾವು ಬುದ್ಧಿ ಮಾತು

ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್‌ ಮಾಡಿದ ಧ್ರುವಂತ್-ಅಶ್ವಿನಿ

Gilli Nata: ಬಿಗ್‌ ಬಾಸ್‌ ಮುಗಿಯಲು ಕೆಲವು ದಿನಗಳು ಬಾಕಿ ಇವೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಮತ್ತೊಂದು ಕಡೆ ಧ್ರುವಂತ್‌ , ಅಶ್ವಿನಿ ಒಂದಾಗಿ ಗಿಲ್ಲಿಯನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಗಿಲ್ಲಿ ಕಾಮಿಡಿ ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತದೆ. ಈ ಬಗ್ಗೆ ಗಿಲ್ಲಿ ನಟ ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾದ ವಿವಾದ ಬಳಿಕ ಕಾವ್ಯ ಅವರು ಗಿಲ್ಲಿ ನಟನಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.

Bigg Boss Kannada 12: ಉಸ್ತುವಾರಿಯಲ್ಲಿ ಧ್ರುವಂತ್‌ ಭಾರೀ ಮೋಸ? ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ ನಟ?

ಉಸ್ತುವಾರಿಯಲ್ಲಿ ಧ್ರುವಂತ್‌ ಭಾರೀ ಮೋಸ? ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್​​ಗಳು ಜೋರಾಗಿ ನಡೆಯುತ್ತಿದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ. ಇದೀಗ ಆಡುವ ಭರದಲ್ಲಿ ಧ್ರುವಂತ್‌ ಅವರು ಕಾವ್ಯ ಅವರಿಗೆ ಕಾವ್ಯ ಬಾಯ್ ಮುಚ್ಕೊಂಡ್ ಕೂತ್ಕೋ ಎಂದೂ ಹೇಳಿದ್ದಾರೆ.

Kichcha Sudeep: ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆ; ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ ಎಂದ ಕಿಚ್ಚ

ವಿಜಯಲಕ್ಷ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ರಿಯಾಕ್ಷನ್ ಹೇಗಿತ್ತು?

Sudeep: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ದಿಢೀರ್‌ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಆಗಮಿಸಿದ್ದರು. ತಮ್ಮ ವಕೀಲರ ಜೊತೆಗೆ ಆಗಮಿಸಿದ್ದ ಅವರು, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.

Varanasi : ʻವಾರಣಾಸಿʼ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮ ತಯಾರಿ ಹೇಗಿತ್ತು ಗೊತ್ತಾ? BTS ವಿಡಿಯೊ ಔಟ್‌

ʻವಾರಣಾಸಿʼ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮ ತಯಾರಿ ಹೇಗಿತ್ತು ಗೊತ್ತಾ?

SS Rajamouli: ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ ವಾರಣಾಸಿಯ ಟೈಟಲ್ ಟೀಸರ್ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದ ಅದ್ದೂರಿ ಬಿಡುಗಡೆ (Release Programme) ಕಾರ್ಯಕ್ರಮದ ನಿರ್ಮಾಣವನ್ನು ದಾಖಲಿಸುವ ತೆರೆಮರೆಯ ವೀಡಿಯೊವನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದ ಹಿಂದಿನ 20 ದಿನಗಳ ತಯಾರಿ ಹೇಗಿತ್ತು ಎಂಬುದು ವಿಡಿಯೋದಲ್ಲಿದೆ.

New Year OTT releases 2026:  ಪ್ರೇಕ್ಷಕರಿಗೆ ಬಿಗ್ ಮನರಂಜನೆ; ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾಗಳಿವು

ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾಗಳಿವು

OTT Movies: ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಹೊಸ ವರ್ಷದಂದು ಜನ ಭರ್ಜರಿ ಸಂಭ್ರಮಾಚರಣೆ ಮಾಡುತ್ತಾರೆ. ಜೊತೆಗೆ ಹೊಸ ವರ್ಷವು ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ತರಲಿ ಎಂದು ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ ಹರಸುತ್ತಾರೆ. ಹೊಸ ವರ್ಷದ ಮುನ್ನಾದಿನದಂದು ಕೆಲವು ಸಿನಿಮಾಗಳು ಒಟಿಟಿ ಎಂಟ್ರಿ ಕೊಡುತ್ತಿವೆ. ಮನೆಯಲ್ಲೇ ಸಂಭ್ರಮಾಚರಣೆ ಮಾಡುತ್ತ ಈ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

Alia Bhatt:  ಇದೊಂದು ಕಾರಣಕ್ಕೆ ಒಟ್ಟಿಗೆ ಹಲವು ಸಿನಿಮಾಗಳನ್ನ ಮಾಡ್ತಾ ಇಲ್ವಂತೆ ಆಲಿಯಾ ಭಟ್‌!

ಇದೊಂದು ಕಾರಣಕ್ಕೆ ಒಟ್ಟಿಗೆ ಹಲವು ಸಿನಿಮಾಗಳನ್ನ ಮಾಡ್ತಾ ಇಲ್ವಂತೆ ಆಲಿಯಾ!

Raha: ಹೆರಿಗೆಯ ನಂತರ ಕೆಲಸಕ್ಕೆ ಮರಳುವುದರಿಂದ ಹಿಡಿದು ಅರ್ಥಪೂರ್ಣ ಪಾತ್ರಗಳನ್ನು ಆಯ್ಕೆ ಮಾಡುವವರೆಗೆ, ಬಾಲಿವುಡ್ ನಟಿಯರು ಮುಂದಿದ್ದಾರೆ. 2022 ರಲ್ಲಿ ತನ್ನ ಮಗಳು ರಾಹಾಳನ್ನು ಸ್ವಾಗತಿಸಿದ ಆಲಿಯಾ ಭಟ್ , ನೀಡಿದ ಇತ್ತೀಚಿನ ಸಂದರ್ಶನದಲ್ಲಿ , ಚಲನಚಿತ್ರಗಳ ಮೇಲಿನ ಪ್ರೀತಿ ಬದಲಾಗದೆ ಇದ್ದರೂ, ತನ್ನ ಕೆಲಸದ ವೇಗವನ್ನು ಹೇಗೆ ನಿಧಾನಗೊಳಿಸಿದ್ದೇನೆ ಎಂಬುದರ ಕುರಿತು ಮಾತನಾಡಿದರು.

Theertharoopa Thandeyavarige Review: ಬದುಕಿನ ಹುಡುಕಾಟದಲ್ಲಿ ಬಹಿರಂಗವಾಗುವ ಅಂತರಂಗದ ಸತ್ಯಗಳು!

'ತೀರ್ಥರೂಪ ತಂದೆಯವರಿಗೆ' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Theertharoopa Thandeyavarige Movie Review: ತಂದೆಯ ಅಸ್ತಿತ್ವವನ್ನು ಹುಡುಕುವ ಒಬ್ಬ ಟ್ರಾವೆಲ್ ವ್ಲಾಗರ್‌ನ ಭಾವುಕ ಕಥೆಯನ್ನು ಒಳಗೊಂಡ ತೀರ್ಥರೂಪ ತಂದೆಯವರಿಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಹೇಗಿದೆ? ಯಾವ ರೀತಿಯ ಜಾನರ್‌ನ ಸಿನಿಮಾ ಇದು? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

Bhuvann Ponnannaa: ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌ ಪೊನ್ನಣ್ಣ; ಏನದು?

ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌!

Bhuvann: ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಭುವನ್‌ ಪೊನ್ನಣ್ಣ ತಮ್ಮ ಹುಟ್ಟುಹಬ್ಬದಂದು (ಡಿ.30) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ. ಏನದು?

BhagyaLakshmi Serial: ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಅತ್ತೆ ಸೊಸೆಯೇ ಪ್ರಮುಖ ಹೈಲೈಟ್‌. ಅತ್ತೆ ತನ್ನ ಸೊಸೆಯ ಭವಿಷ್ಯಕ್ಕಾಗಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದ್ಯ ಆದಿ ಹಾಗೂ ಭಾಗ್ಯ (Adi Bhagya) ಒಂದಾಗುವಂತೆ ಕುಸುಮಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಕುಸುಮಾ ತನ್ನ ಸೊಸೆ ಭಾಗ್ಯಳ ಪರವಾಗಿ ನಿಲ್ಲುವ ರೀತಿ ಎಲ್ಲರಿಗೂ ಮಾದರಿಯಾಗಿದೆ.

ತಂದೆಯಿಂದಲೇ ʻಫಾದರ್‌ʼ ಚಿತ್ರದ ಥೀಮ್ ವಿಡಿಯೋ ರಿಲೀಸ್‌ ಮಾಡಿಸಿದ ಆರ್‌. ಚಂದ್ರು; ಇದು ಪ್ರಕಾಶ್‌ ರಾಜ್‌ - ʻಡಾರ್ಲಿಂಗ್‌ʼ ಕೃಷ್ಣ ಸಿನಿಮಾ

Father: ತಂದೆಯಿಂದಲೇ 'ಫಾದರ್' ಥೀಮ್ ವಿಡಿಯೋ ರಿಲೀಸ್ ಮಾಡಿಸಿದ ಆರ್. ಚಂದ್ರು

Father Movie: ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಕಥೆಯನ್ನು ಫಾದರ್‌ ಸಿನಿಮಾ ಹೊಂದಿದ್ದು, ಆರ್. ಚಂದ್ರು ಅವರ ತಂದೆಯವರಿಂದಲೇ ಈ ಚಿತ್ರದ ಥೀಮ್ ವಿಡಿಯೋ ಬಿಡುಗಡೆಗೊಂಡಿದೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರಾಜಮೋಹನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Bigg Boss Kannada 12: ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಅಶ್ವಿನಿ ಟಾಂಗ್‌; ಸ್ಪಂದನಾ- ರಾಶಿಕಾ ಒಬ್ಬರನ್ನೊಬ್ಬರು ಲಾಕ್!

ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಟಾಸ್ಕ್‌ ವೇಳೆ ಅಶ್ವಿನಿ ಟಾಂಗ್‌

Spadana Rashika: ಕ್ಯಾಪ್ಟನ್ಸ್‌ ರೇಸ್‌ನಲ್ಲಿ ಸ್ಪಂದನಾ ಹಾಗೂ ರಾಶಿಕಾ ನಡುವೆ ಸ್ಪರ್ಧಿ ಏರ್ಪಟ್ಟಿದೆ. ಈ ವೇಳೆ ಒಬ್ಬರಿಗೊಬ್ಬರು ಎಳೆದಾಡಿಕೊಂಡಿದ್ದಾರೆ. ಇವರಿಬ್ಬರೂ ಆಟ ಆಡ್ತಾ ಇದ್ದಾರೋ ಹಾಗೆ ಕುಸ್ತಿ ಮಾಡ್ತಾ ಇದ್ದಾರೋ ಅಂತ ಮನೆಮಂದಿ ಕನ್‌ಫ್ಯೂಸ್‌ ಆಗಿದ್ದಾರೆ. ಬಿಲ್ಲೆಗಳನ್ನು ಜೋಡಿಸುವ ಆಟವು ದೈಹಿಕ ಜಟಾಪಟಿಗೆ ತಿರುಗಿದೆ.

Bigg Boss 12: ಈಸೀ ಆಗಿ ನಾಮಿನೇಟ್‌ ಆಗಬೇಕಿದ್ದ ಕಾವ್ಯ ಬಚಾವ್‌ ಆಗಿದ್ದು ಹೇಗೆ? ಗಿಲ್ಲಿ ನಟ ಬಾಯ್ಬಿಟ್ಟ ಸತ್ಯವಿದು!

ಕಾವ್ಯ ನಾಮಿನೇಟ್ ಆಗದಿರಲು ಇದೇ ಕಾರಣ; ಗಿಲ್ಲಿ ನಟ ಬಿಚ್ಚಿಟ್ಟ ಸ್ಫೋಟಕ ಸತ್ಯ!

BBK 12 Nominations: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಕಾವ್ಯ ಶೈವ ಈ ವಾರ ನಾಮಿನೇಷನ್‌ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೂವರು ಸದಸ್ಯರು ಕಾವ್ಯ ಹೆಸರನ್ನು ಸೂಚಿಸಿದರೂ, ಗಿಲ್ಲಿ ನಟ ಅವುಗಳನ್ನು ಸೂಕ್ತ ಕಾರಣವಲ್ಲ ಎಂದು ತಿರಸ್ಕರಿಸಿದ್ದರು.

Actor Jaggesh: ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್; ಲೈವ್ ವಿಡಿಯೋದಲ್ಲಿ ಹೇಳಿದ್ದೇನು?

ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್

Sandalwood: ಇತ್ತೀಚೆಗೆ ಪೈರಸಿ ಮಾಡೋರ ಕಾಟ ಹೆಚ್ಚಾಗಿದೆ. ಮಾರ್ಕ್‌ ಸಿನಿಮಾ ವೇಳೆ ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ನವರಸ ನಾಯಕ ಜಗ್ಗೇಶ್‌ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ ಲೈವ್ ಬಂದು ಈ ಬಗ್ಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Bigg Boss Kannada 12: ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್‌

ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್‌

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿವೀಕ್ಷಕರಿಗರ ಸಖತ್‌ ಕ್ರೇಜ್‌ ಹುಟ್ಟು ಹಾಕಿರೋ ಸ್ಪರ್ಧಿ ಅಂದರೆ ಅದುವೇ ಗಿಲ್ಲಿ ನಟ. ನಟನಿಗೆ ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಇತ್ತೀಚೆಗಂತೂ ಗಿಲ್ಲಿ ಕ್ರೇಜ್‌ ಜೋರಾಗಿದೆ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ಗಿಲ್ಲಿ ನಟನದ್ದೇ ರೀಲ್ಸ್‌. ಸೂರಜ್‌ ಎಲಿಮಿನೇಟ್‌ ಆದ ಬಳಿಕ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆಯೇ ಹಾಡಿ ಹೊಗಳಿದ್ದಾರೆ. ಹೀಗಿರುವಾಗ ಮಾಳು ಅವರು ಗಿಲ್ಲಿ ಬಗ್ಗೆ ಕೊಟ್ಟಿರುವ ಹೇಳಿಕೆಗಳ ಬಗ್ಗೆ ಗಿಲ್ಲಿ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಕಾನೂನು ಎಲ್ಲರಿಗೂ ಒಂದೇ ಅಂತ ನಂಬಿದ್ದೆ.. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ..ʼ; ದಿಢೀರನೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ವಿಜಯಲಕ್ಷ್ಮಿ ದರ್ಶನ್

'ಕಾನೂನು ಎಲ್ಲರಿಗೂ ಒಂದೇ ಅಂತ ಅಂದುಕೊಂಡಿದ್ದೆ...'- ವಿಜಯಲಕ್ಷಿ ದರ್ಶನ್‌

Vijayalakshmi Darshan: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಸೈಬರ್ ಕಿರುಕುಳದ ದೂರಿನ ಬಗ್ಗೆ ಏನೂ ಬೆಳವಣಿಗೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಯಾಮಿಲಿ ಜೊತೆ ಗೋವಾದಲ್ಲಿ ಸಮಯ ಕಳೆದ ʻಕಾಂತಾರʼ ಸ್ಟಾರ್‌ ರಿಷಬ್‌ ಶೆಟ್ಟಿ; ಪತ್ನಿ ಪ್ರಗತಿ ಹಂಚಿಕೊಂಡ ಫೋಟೋಗಳು ಇಲ್ಲಿವೆ

Photos: ಫ್ಯಾಮಿಲಿ ಜೊತೆ ಗೋವಾದಲ್ಲಿ ಸಮಯ ಕಳೆದ ರಿಷಬ್‌ ಶೆಟ್ಟಿ

ನಟ ರಿಷಬ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್‌ 1 ಸಿನಿಮಾದ ಸಕ್ಸಸ್‌ ಬಳಿಕ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಸತತ 3 ವರ್ಷಗಳ ಕಾಲ ಕಾಂತಾರ 1 ಸಿನಿಮಾಕ್ಕಾಗಿ ನಿರಂತರವಾಗಿ ರಿಷಬ್‌ ಶೆಟ್ಟಿ ಅವರು ಕೆಲಸ ಮಾಡಿದ್ದರು. ಇದೀಗ ಫ್ಯಾಮಿಲಿಗಾಗಿ ಸಮಯ ನೀಡಿರುವ ರಿಷಬ್‌ ಶೆಟ್ಟಿ, ಈಚೆಗೆ ಪತ್ನ ಪ್ರಗತಿ ಶೆಟ್ಟಿ ಮತ್ತು ಮಕ್ಕಳ ಜೊತೆಗೆ ಗೋವಾಕ್ಕೆ ಹೋಗಿದ್ದರು. ಪ್ರಗತಿ ಶೆಟ್ಟಿ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Loading...