ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಧುರಂಧರ್‌ʼ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದ ನಟ ರಣವೀರ್‌ ಸಿಂಗ್‌ಗೆ ಶಾಕ್‌ ನೀಡಿದ ಬಾಲಿವುಡ್‌ ಡೈರೆಕ್ಟರ್!‌ ಅಷ್ಟಕ್ಕೂ ಏನಿದು ವಿವಾದ?

ʻಧುರಂಧರ್‌ʼ ಹೀರೋ ರಣವೀರ್ ಸಿಂಗ್ ಶಾಕ್! 40 ಕೋಟಿ ನಷ್ಟ ಆಯ್ತು ಅಂತ ದೂರು

ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳಿಂದಾಗಿ 'ಡಾನ್ 3' ಚಿತ್ರದಿಂದ ಹೊರನಡೆದಿದ್ದು, ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಒಕ್ಕೂಟಕ್ಕೆ ದೂರು ನೀಡಿದ್ದಾರೆ. ರಣವೀರ್ ಅವರ ಹಠಾತ್ ನಿರ್ಧಾರದಿಂದ ಶೂಟಿಂಗ್ ಅಸ್ತವ್ಯಸ್ತಗೊಂಡು 40 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ನಿರ್ಮಾಣ ಸಂಸ್ಥೆ ಆಕ್ರೋಶ ಹೊರಹಾಕಿದೆ.

‌Photos: ತಂದೆ - ತಾಯಿಯ 50ನೇ ಮದುವೆ ವಾರ್ಷಿಕೋತ್ಸವದಲ್ಲಿ ಮಿಂಚಿದ ನಟ ರಕ್ಷಿತ್‌ ಶೆಟ್ಟಿ; ಫ್ಯಾನ್ಸ್‌ ಕಣ್ಣಿಗೆ ಬಿದ್ದ ʻಸಿಂಪಲ್‌ ಸ್ಟಾರ್‌ʼ

ತಂದೆ-ತಾಯಿಯ 50ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ

ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ಬೆಳ್ಳಿಪರದೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರಾದರೂ, ಇದೀಗ ತಮ್ಮ ಕುಟುಂಬದ ವಿಶೇಷ ಸಂಭ್ರಮವೊಂದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರ ತಂದೆ ಶ್ರೀಧರ್ ಶೆಟ್ಟಿ ಮತ್ತು ತಾಯಿ ರಂಜನಾ ಶ್ರೀಧರ್ ಶೆಟ್ಟಿ ಅವರು ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ (50ನೇ ವಿವಾಹವಾರ್ಷಿಕೋತ್ಸವ) ಸಂಭ್ರಮದಲ್ಲಿದ್ದು, ಇಡೀ ಕುಟುಂಬ ಒಟ್ಟಾಗಿ ಈ ಸುದಿನವನ್ನು ಆಚರಿಸಿದೆ. ಈ ಹಿರಿಯ ಜೋಡಿಯ 50 ವರ್ಷಗಳ ತುಂಬು ದಾಂಪತ್ಯದ ಸವಿನೆನಪಿಗಾಗಿ ದೇವಸ್ಥಾನವೊಂದರಲ್ಲಿ ಸರಳ ಹಾಗೂ ಸುಂದರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಾಗವಹಿಸಿದ್ದ ಶೆಟ್ಟಿ ಕುಟುಂಬದವರು ವಿಶೇಷ ಪೂಜೆ, ಹೋಮ-ಹವನಗಳನ್ನು ನೆರವೇರಿಸುವ ಮೂಲಕ ತಂದೆ-ತಾಯಿಯ ಮದುವೆ ದಿನವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.

ಮೂರೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 117 ಕೋಟಿ ಬಾಚಿಕೊಂಡ ʻದೃಶ್ಯಂ 3ʼ; ಕರ್ನಾಟಕದಲ್ಲಿ ಮೋಹನ್‌ಲಾಲ್‌ ಸಿನಿಮಾಗೆ ಸಿಕ್ಕ ಹಣವೆಷ್ಟು?

ಬಾಕ್ಸ್ ಆಫೀಸ್‌ನಲ್ಲಿ ʻದೃಶ್ಯಂ 3ʼ ಸುನಾಮಿ; ಕರ್ನಾಟಕದಿಂದ ಸಿಕ್ಕ ಹಣವೆಷ್ಟು?

ನಟ ಮೋಹನ್‌ಲಾಲ್ ಅವರ 66ನೇ ಜನ್ಮದಿನದ ಅಂಗವಾಗಿ ಮೇ 21 ರಂದು ಬಿಡುಗಡೆಯಾದ 'ದೃಶ್ಯಂ 3' ಚಿತ್ರವು ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 117.17 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಕಲ್ಟ್ ಫ್ಯಾಮಿಲಿ ಥ್ರಿಲ್ಲರ್ ಚಿತ್ರಕ್ಕೆ ಕರ್ನಾಟಕದಲ್ಲೂ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ.

ʻಮೃತ್ಯುದೇವತೆʼ ಸಿನಿಮಾದ ʻನಮ್ಮಾವ ಮಾದೇವʼ ಹಾಡು ರಿಲೀಸ್‌; ಇದು ವಂಚಕರ ಜಾಲಕ್ಕೆ ಸಿಕ್ಕಿಬೀಳುವ ಹೆಣ್ಣುಮಕ್ಕಳ ಹೋರಾಟದ ಕಥೆ

ಅದೊಂದು ಸೀನ್‌ನಿಂದ ‘ಮೃತ್ಯುದೇವತೆ’ ರಿಲೀಸ್ ತಡ! ಸೆನ್ಸಾರ್‌ ಹೇಳಿದ್ದೇನು?‌

ಸಮಾಜದಲ್ಲಿ ಹೆಣ್ಣುಮಕ್ಕಳು ವಂಚಕರ ಜಾಲಕ್ಕೆ ಬಲಿಯಾಗುವುದನ್ನು ತಡೆದು ಶೋಷಕರನ್ನು ಶಿಕ್ಷಿಸುವ ಕಥೆ ಹೊಂದಿರುವ 'ಮೃತ್ಯುದೇವತೆ' ಚಿತ್ರದ 'ನಮ್ಮಾವ ಮಾದೇವ' ಹಾಡು ಬಿಡುಗಡೆಯಾಗಿದೆ. ನವೀನ್ ಮಹಾದೇವ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗಿಯಾಗಿ ಸಾರಿಕಾ ರಾವ್ ನಟಿಸಿದ್ದಾರೆ.

ʻರಾಯರ ದರ್ಶನʼ ಆಲ್ಬಂ ಸಾಂಗ್‌ಗೆ ಧ್ವನಿ ನೀಡಿದ ʻಬ್ರಹ್ಮಕಳಶʼ ಖ್ಯಾತಿಯ ಅಬ್ಬಿ; ಮಂತ್ರಾಲಯದಲ್ಲಿ ಬಿಡುಗಡೆಯಾಗಲಿರುವ ಹಾಡು

ʻಕಾಂತಾರʼ ಖ್ಯಾತಿಯ ಅಬ್ಬಿ ಕಂಠದಲ್ಲಿ ‌ರಾಯರ ಕುರಿತ ಭಕ್ತಿ ಗೀತೆ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆ ಸಾರುವ ‘ರಾಯರ ದರ್ಶನ’ ಆಲ್ಬಂ ಸಾಂಗ್ ಜೂನ್ 20 ರಂದು ಶ್ರೀ ಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಮತ್ತು ಟಿಎನ್‌ಐಟಿ ಲಾಂಛನದಲ್ಲಿ ಸುಗುಣ ರಘು ನಿರ್ಮಿಸಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

Peddi Movie: ಲಕ್ಷಾಂತರ ಜನರ ಎದುರು ದೊಡ್ಡ ಎಡವಟ್ಟು ಮಾಡಿದ ನಟ ರಾಮ್‌ ಚರಣ್!‌ ಕೊನೆಗೆ ಜಸ್‌ಪ್ರೀತ್ ಬುಮ್ರಾ ಬಳಿ ಕ್ಷಮೆ ಕೇಳಿದ್ದೇಕೆ?

ಬುಮ್ರಾ ಫುಟ್‌ಬಾಲ್ ‌ಆಡ್ತಾರಾ? ಪೆದ್ದಿ ಇವೆಂಟ್‌ನಲ್ಲಿ ರಾಮ್ ಚರಣ್ ಎಡವಟ್ಟು

ನಟ ರಾಮ್ ಚರಣ್ ಭೋಪಾಲ್‌ನಲ್ಲಿ ನಡೆದ ತಮ್ಮ 'ಪೆದ್ದಿ' ಚಿತ್ರದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಜಸ್‌ಪ್ರೀತ್ ಬುಮ್ರಾ ಅವರನ್ನು ಹೊಗಳುವ ಭರದಲ್ಲಿ, ಅವರು ಅದ್ಭುತವಾಗಿ ಫುಟ್‌ಬಾಲ್ ಆಡುತ್ತಾರೆ ಎಂದು ಕ್ರೀಡೆಯನ್ನೇ ಅದಲುಬದಲು ಮಾಡಿ ಮಾತನಾಡಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

Ramayana Movie: ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್‌?

ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್‌?

Ramayana Movie: ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ. ಇದರ ಮೊದಲ ಭಾಗ 2026ರಲ್ಲಿ ಮತ್ತು ಮುಂದಿನ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. 'ರಾಮಾಯಣ' 2026ರ ಅಕ್ಟೋಬರ್ 30 ರಂದು ಬಿಡುಗಡೆಯಾಗಬಹುದು. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಚಿತ್ರತಂಡ ರಣಬೀರ್ ಕಪೂರ್ ಅವರ ರಾಮನ ಅವತಾರದ ಪ್ರೋಮೋವನ್ನು ಬಿಡುಗಡೆ ಮಾಡಿತ್ತು.

Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್‌ ಯಾವಾಗ?

ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ

Jana Nayagan: ನಟನಾಗಿ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ ಐದು ತಿಂಗಳಿನಿಂದ ಸುದ್ದಿಯಲ್ಲಿದೆ. ಎಚ್ ವಿನೋತ್ ನಿರ್ದೇಶನದ ಚಿತ್ರವನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿತ್ತು. ಆದರೆ ಕೆಲವು ದಿನಗಳ ಮೊದಲು (ಸಿಬಿಎಫ್‌ಸಿ) ವಿಚಾರದಲ್ಲಿ ಸಿಲುಕಿಕೊಂಡಿದೆ. ಶನಿವಾರ, ಲೋಹಿತ್ ಎನ್‌ಕೆ ಸಿಎಂ ವಿಜಯ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಹೀಗಾಗಿ ಫ್ಯಾನ್ಸ್‌, ಸಿನಿಮಾ ಅಪ್‌ಡೇಟ್‌ಗೆ ನಿರೀಕ್ಷಿಸುತ್ತಿದ್ದಾರೆ.

Tanisha Kuppanda: ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್ ಮೇಲೆ ತನಿಷಾ ಕುಪ್ಪಂಡ ಕೆಂಡ; ಫೋಟೋ ವೈರಲ್‌

ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್ ಮೇಲೆ ತನಿಷಾ ಕುಪ್ಪಂಡ ಕೆಂಡ

ಬಿಗ್ ಬಾಸ್ ಮನೆಯಲ್ಲೂ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವದಿಂದಲೇ ಗುರುತಿಸಿಕೊಂಡಿದ್ದ ತನಿಷಾ, ಈಗ ಸೋಶಿಯಲ್ ಮೀಡಿಯಾ (Social Media) ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಬಿಗ್ ಬಾಸ್‌ನ ಬೆಂಕಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ತನಿಷಾ ನಿರ್ಮಾಪಕಿಯೂ ಹೌದು. ಉದ್ಯಮಿಯೂ ಹೌದು.

Rukmini Vasanth:  ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!

ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!

Rukmini Vasanth: ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್​ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದರಲ್ಲಿ ಇದೆ.ಇದರ ಹಿಂದಿನ ಸತ್ಯಾಂಶ ಕೊನೆಗೂ ಹೊರಬಿದ್ದಿದೆ. ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Rukmini Vasanth: ಬಿಕಿನಿಯಲ್ಲಿ ರುಕ್ಮಿಣಿ ವಸಂತ್ ಬೋಲ್ಡ್ ಅವತಾರ? ಲೀಕ್‌ ಆಯ್ತು ಫೋಟೋ

ಬಿಕಿನಿಯಲ್ಲಿ ರುಕ್ಮಿಣಿ ವಸಂತ್ ಬೋಲ್ಡ್ ಅವತಾರ? ಲೀಕ್‌ ಆಯ್ತು ಫೋಟೋ

Rukmini Vasanth: ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್​ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದರಲ್ಲಿ ಇದೆ.

Tumbadchi Manjula Trailer: ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹೇಗಿದೆ ಟ್ರೈಲರ್‌?

ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹೇಗಿದೆ ಟ್ರೈಲರ್‌?

Tumbadchi Manjula Trailer: ‘ಸು ಫ್ರಮ್ ಸೋ’ ಸಿನಿಮಾ 2025ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಈ ಚಿತ್ರ ಸದ್ದಿಲ್ಲದೆ ಮರಾಠಿಗೆ ರಿಮೇಕ್ ಆಗಿದೆ. ಮರಾಠಿಯಲ್ಲಿ ಈ ಚಿತ್ರಕ್ಕೆ ದೊಡ್ಡ ಹಿಂದಿ ಸಿನಿಮಾದ ಕನೆಕ್ಷನ್ ಕೊಡಲಾಗಿದೆ. ಕನ್ನಡದಲ್ಲಿ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂಬ ಟೈಟಲ್​​ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಟೈಟಲ್ ಉದ್ದ ಆಗುತ್ತದೆ ಎಂಬ ಕಾರಣಕ್ಕೆ, ‘ಸು ಫ್ರಮ್ ಸೋ’ ಎಂದು ಇಡಲಾಗಿತ್ತು. ಇದನ್ನು ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂದು ಇಡಲಾಗಿದೆ.

Aishwarya Rai: ಮಗಳು ಆರಾಧ್ಯ ಜೊತೆಗೆ ರೆಡ್ ಕಾರ್ಪೆಟ್  ಮೇಲೆ ಮಿಂಚಿದ ಐಶ್ವರ್ಯಾ ರೈ!

ಮಗಳು ಆರಾಧ್ಯ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವರ್ಯಾ ರೈ!

Aishwarya Rai: ಈ ಬಾರಿ ಅವರ ಮಗಳು ಆರಾಧ್ಯ ಬಚ್ಚನ್ (Aradhya) ಕೂಡ ಎಲ್ಲರ ಗಮನ ಸೆಳೆದರು. ತಾಯಿಯೊಂದಿಗೆ ಬಂದಿದ್ದು ಮಾತ್ರವಲ್ಲದೆ, ಈ ಬಾರಿ ಆರಾಧ್ಯ ಅಧಿಕೃತವಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಗುಲಾಬಿ ಬಣ್ಣದ ಗೌನ್ ನಲ್ಲಿ ಮಿಂಚುತ್ತಿರುವ ಐಶ್.. ಕೆಂಪು ಬಣ್ಣದ ಡ್ರೆಸ್ ನಲ್ಲಿ ಆರಾಧ್ಯ ಕೇನ್ಸ್ ಚಲನಚಿತ್ರೋತ್ಸವದ ಭಾಗವಾಗಿ ನಡೆದ 'ಲೋರಿಯಲ್ ಪ್ಯಾರಿಸ್ ಲೈಟ್ಸ್ ಆನ್ ವುಮೆನ್ಸ್ ವರ್ತ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಯಿ-ಮಗಳ ಜೋಡಿ ಸದ್ದು ಮಾಡಿತು .

'ಟಗರು ಪಲ್ಯ' ಡೈರೆಕ್ಟರ್‌ ಜೊತೆ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ 'ಪುಟ್ಟಕ್ಕನ ಮಕ್ಕಳು' ನಟ ಧನುಷ್

'ಟಗರು ಪಲ್ಯ' ಡೈರೆಕ್ಟರ್ ಜೊತೆ ʻಕಂಠಿʼ ಧನುಷ್ ಹೊಸ ಸಿನಿಮಾ; ನಾಯಕಿ ಯಾರು?

'ಟಗರು ಪಲ್ಯ' ಖ್ಯಾತಿಯ ನಿರ್ದೇಶಕ ಉಮೇಶ್ ಕೆ. ಕೃಪ ತಮ್ಮ ಎರಡನೇ ಸಿನಿಮಾಗೆ ಸದ್ದಿಲ್ಲದೆ ಚಾಲನೆ ನೀಡಿದ್ದು, ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಖ್ಯಾತ ನಟ ಧನುಷ್ ಮತ್ತು ಮನಸ್ವಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ʻರಾಮಾಯಣʼ ಸಿನಿಮಾ ಡಿಸ್ಟ್ರೀಬ್ಯೂಷನ್‌ ರೈಟ್ಸ್‌ ಬೆಲೆ ಕೇಳಿ ಬೆಚ್ಚಿಬಿದ್ದ ಬಾಲಿವುಡ್‌ ವಿತರಕರು! ನಿರ್ಮಾಪಕರ ಡಿಮ್ಯಾಂಡ್‌ ಏನು? ‌

ʻರಾಮಾಯಣʼ ಚಿತ್ರದ ವಿತರಣಾ ಹಕ್ಕುಗಳಿಗೆ ದುಬಾರಿ ಮೊತ್ತ ಕೇಳಿದ ನಿರ್ಮಾಪಕರು!

'ರಾಮಾಯಣ' ಸಿನಿಮಾದ ಹಿಂದಿ ಆವೃತ್ತಿಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳಿಗಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಬರೋಬ್ಬರಿ 450 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. 2026ರ ದೀಪಾವಳಿಗೆ ರಿಲೀಸ್ ಆಗಲಿರುವ ಈ ಚಿತ್ರದ ಬೆಲೆ ಕೇಳಿ ವಿತರಕರು ಹಿಂಜರಿಯುತ್ತಿದ್ದಾರೆ.

ಮಮ್ಮುಟ್ಟಿ - ಮೋಹನ್‌ಲಾಲ್ ನಟನೆಯ 'ಪೇಟ್ರಿಯಾಟ್' ಸಿನಿಮಾ OTT ರಿಲೀಸ್ ಡೇಟ್ ಫಿಕ್ಸ್; ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ʻಪೇಟ್ರಿಯಾಟ್ʼ OTT ರಿಲೀಸ್ ಡೇಟ್ ಫಿಕ್ಸ್;‌ ಎಲ್ಲಿ, ಯಾವಾಗ ನೋಡಬಹುದು?

ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ನಟನೆಯ 'ಪೇಟ್ರಿಯಾಟ್' ಸಿನಿಮಾ ಯಾವಾಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸ್ಪೈ ಪೊಲಿಟಿಕಲ್ ಥ್ರಿಲ್ಲರ್, ಬಾಕ್ಸ್ ಆಫೀಸ್‌ನಲ್ಲಿ ನೀರಸ ಪ್ರದರ್ಶನ ಕಂಡಿತ್ತು.

ʻಅಂದು ಚಿನ್ನ ದಾನ ಮಾಡಿದ್ವಿ, ಇಂದು ಇಂಧನ ಉಳಿಸೋಣʼ; ಪ್ರಧಾನಿ ಮೋದಿ ಉಳಿತಾಯ ಮಂತ್ರಕ್ಕೆ ನಟ ಕಮಲ್ ಹಾಸನ್ ಬೆಂಬಲ

ʻರಾಜಕಾರಣಕ್ಕಿಂತ ದೇಶದ ಮುಖ್ಯʼ; ಮೋದಿ ಉಳಿತಾಯ ಮಂತ್ರಕ್ಕೆ ಕಮಲ್ ಬೆಂಬಲ

ಜಾಗತಿಕ ಉದ್ವಿಗ್ನತೆ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಇಂಧನ ಉಳಿತಾಯದ ಕರೆಗೆ ನಟ, ರಾಜಕಾರಣಿ ಕಮಲ್ ಹಾಸನ್ ಬೆಂಬಲ ಸೂಚಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಾಲ್ಕು ನಿಮಿಷಗಳ ವಿಡಿಯೋ ಹಂಚಿಕೊಂಡಿರುವ ಅವರು, ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಜವಾಬ್ದಾರಿಯು ಪಕ್ಷ ರಾಜಕಾರಣಕ್ಕಿಂತ ಮಿಗಿಲಾಗಿರಬೇಕು ಎಂದಿದ್ದಾರೆ.

ಜಮ್ಮು- ಕಾಶ್ಮೀರದ ಸರ್ಕಾರಿ ಶಾಲೆಗೆ 1 ಕೋಟಿ ರೂ. ದೇಣಿಗೆ ನೀಡಿದ್ದ ಅಕ್ಷಯ್‌ ಕುಮಾರ್‌; ಆ ಸ್ಕೂಲ್‌ನಲ್ಲಿ ಏನೆಲ್ಲಾ ಬದಲಾವಣೆ ಆಯ್ತು?

ಅಕ್ಷಯ್ ಕುಮಾರ್ ಕೊಟ್ಟ 1 ಕೋಟಿ ದೇಣಿಗೆಯಿಂದ ಸರ್ಕಾರಿ ಶಾಲೆಗೆ ಹೊಸ ರೂಪ

ನಟ ಅಕ್ಷಯ್ ಕುಮಾರ್ ಅವರು 2021ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಡಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಶಾಲಾ ಮಕ್ಕಳ ಶೈಕ್ಷಣಿಕ ಅಗತ್ಯ ಕಂಡು ಭಾವುಕರಾಗಿದ್ದರು. ತಕ್ಷಣವೇ ಅವರು 1 ಕೋಟಿ ರೂ. ದೇಣಿಗೆ ಘೋಷಿಸಿದ್ದರು. ಈಗ ಆ ಶಾಲೆಯಲ್ಲಿ ಹೈಟೆಕ್ ಬದಲಾವಣೆಯಾಗಿದೆ.

ರಾಮ್‌ ಚರಣ್‌ ಜೊತೆ ಮಸ್ತಾಗಿ ಹೆಜ್ಜೆ ಹಾಕಿದ ನಟಿ ಶ್ರುತಿ ಹಾಸನ್;‌ 10 ವರ್ಷಗಳ ನಂತರ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಕಮಲ್‌ ಪುತ್ರಿ!

Ram Charan: ʻಪೆದ್ದಿʼ ಚಿತ್ರದ ಐಟಂ ಸಾಂಗ್‌ಗೆ ಶ್ರುತಿ ಹಾಸನ್ ಡ್ಯಾನ್ಸ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸನಾ ಕಾಂಬಿನೇಷನ್‌ನ 'ಪೆದ್ದಿ' ಚಿತ್ರದ 'ಹೆಲ್ಲಲ್ಲಲೋ' ಸ್ಪೆಷಲ್‌ ಸಾಂಗ್‌ನ ಪ್ರೋಮೋ ಬಿಡುಗಡೆಯಾಗಿದೆ. ನಟಿ ಶ್ರುತಿ ಹಾಸನ್ ಹತ್ತು ವರ್ಷಗಳ ನಂತರ ಈ ಐಟಂ ಸಾಂಗ್‌ನಲ್ಲಿ ಹಾಕಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಈ ಹಾಡಿನಲ್ಲಿ ಮತ್ತೋರ್ವ ನಟಿ ಕೂಡ ಹೆಜ್ಜೆ ಹಾಕಿದ್ದಾರಂತೆ.

Kangana Ranaut: ಕಂಗನಾ ಮಂಗಳಸೂತ್ರ ಧರಿಸಿದ್ದಕ್ಕೆ? ಕೊಟ್ಟ ಕಾರಣ ಇದು

ಕಂಗನಾ ಮಂಗಳಸೂತ್ರ ಧರಿಸಿದ್ದಕ್ಕೆ? ಕೊಟ್ಟ ಕಾರಣ ಇದು

Kangana Ranaut: ಇತ್ತೀಚೆಗೆ ಕಂಗನಾ ಅವರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಕುತ್ತಿಗೆಗೆ ಮಂಗಲಸೂತ್ರ ಮತ್ತು ಕೈಗಳಲ್ಲಿ ಹಸಿರು ಬಳೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ರಹಸ್ಯವಾಗಿ ಮದುವೆಯಾಗಿದ್ದಾರೆಯೇ? ಆ 'ಅದೃಷ್ಟವಂತ ವ್ಯಕ್ತಿ' ಯಾರು ಎಂಬ ಊಹಾಪೋಹಗಳು ಶುರುವಾಗಿದ್ದವು. ಈ ಎಲ್ಲ ಅಂತ ಕಂತೆಗಳಿಗೆ ಕಂಗನಾ ಈಗ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

Drishyam 3: ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮೋಹನ್‌ ಲಾಲ್‌! ಥಿಯೇಟರ್‌ನಲ್ಲೇ ಕಣ್ಣೀರು

ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮೋಹನ್‌ ಲಾಲ್‌!

Drishyam 3: ‘ದೃಶ್ಯಂ 3’ ಚಿತ್ರ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಗಳಿಕೆ ಮಾಡಿದೆ. ದುಬೈ ಮೊದಲಾದ ಕಡೆಗಳಲ್ಲಿರುವ ಅನಿವಾಸಿ ಭಾರತೀಯರು ಸಿನಿಮಾ ಇಷ್ಟಪಟ್ಟು ನೋಡಿದ್ದಾರೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ವಿಶ್ವಾದ್ಯಂತ ಒಟ್ಟು 43.37 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆಯ ಆರಂಭ ಪಡೆದಿದೆ.

ಹೊಂಬಾಳೆ ಫಿಲ್ಮ್ಸ್‌ ಜೊತೆ ಪ್ರಶಾಂತ್‌ ನೀಲ್‌ ಮೊದಲು ಕೈಜೋಡಿಸಿದ್ದು ʻಕೆಜಿಎಫ್‌ʼ ಸಿನಿಮಾಕ್ಕಾಗಿ ಅಲ್ಲ; ಅಪ್ಪು ಜೊತೆ ಮಾಡಬೇಕಿದ್ದ ಆ ಪ್ರಾಜೆಕ್ಟ್‌ ಏನಾಯ್ತು?

ಅಪ್ಪು-ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಆಹ್ವಾನ' ಚಿತ್ರ ಸೆಟ್ಟೇರಲಿಲ್ಲ ಏಕೆ?

ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಚಿತ್ರಕ್ಕೂ ಮುನ್ನ ಹೊಂಬಾಳೆ ಫಿಲ್ಮ್ಸ್ ಜೊತೆಗೂಡಿ ಪುನೀತ್ ರಾಜ್‌ಕುಮಾರ್ ಅವರಿಗಾಗಿ ‘ಆಹ್ವಾನ’ ಎಂಬ ಎಮೋಷನಲ್ ಫ್ಯಾಮಿಲಿ ಡ್ರಾಮಾ ಸಿನಿಮಾ ಮಾಡಬೇಕಿತ್ತು ಎಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಅಪ್ಪು ಅವರ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಆ ಸಿನಿಮಾ ಸೆಟ್ಟೇರಲಿಲ್ಲ!

Land Lord Movie: ಕಿರುತೆರೆಗೆ ಬಂತು 'ಲ್ಯಾಂಡ್‌ಲಾರ್ಡ್; ದುನಿಯಾ ವಿಜಯ್‌, ರಚಿತಾ ರಾಮ್‌ ಸಿನಿಮಾ ಪ್ರಸಾರ ಯಾವಾಗಿನಿಂದ?

ಕಿರುತೆರೆಗೆ ಬಂತು 'ಲ್ಯಾಂಡ್‌ಲಾರ್ಡ್; ಪ್ರಸಾರ ಯಾವಾಗಿನಿಂದ?

Land Lord Movie: ಈ ಸಿನಿಮಾದಲ್ಲಿ ಉಮಾಶ್ರೀ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರಜ್ ಗೌಡ ಹಾಗೂ ಸತ್ಯ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದರು. ವಿಜಯ್, ರಚಿತಾ ರಾಮ್, ಉಮಾಶ್ರೀ, ರಾಜ್ ಬಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಊಳಿಗಮಾನ್ಯ ಪದ್ಧತಿ, ಕೆಳವರ್ಗದ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು

Aishwarya Rai:  ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ; ಮಗಳ ಜೊತೆ ಕಂಡಿದ್ದು ಹೀಗೆ

ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ; ಮಗಳ ಜೊತೆ ಕಂಡಿದ್ದು ಹೀಗೆ

Aishwarya Rai: ಈ ವರ್ಷ ಕಾನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ (Aishwarya Rai) ಕಾಣಿಸಿಕೊಳ್ಳುತ್ತಾರಾ ಎಂಬ ಬಗ್ಗೆ ಊಹಾಪೋಹಗಳ ನಂತರ , ನಟಿ ಐಶ್ವರ್ಯಾ ರೈ ಕೊನೆಗೂ ಈಗ ಭಾಗಿಯಾಗುತ್ತಿದ್ದಾರೆ. ಭಾರತದ ಪರವಾಗಿ ಹಲವು ಪ್ರಮುಖ ಸೆಲೆಬ್ರಿಟಿಗಳು ಈ ರೆಡ್ ಕಾರ್ಪೆಟ್ (Red Carpet) ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

Loading...