ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Mrunal Thakur: ಧನುಶ್ ಜೊತೆ  ಗುಟ್ಟಾಗಿ ವಿವಾಹ ; ಮೃಣಾಲ್‌ ಮುಕ್ತ ಮಾತು!

ಧನುಶ್ ಜೊತೆ ಗುಟ್ಟಾಗಿ ವಿವಾಹ ; ಮೃಣಾಲ್‌ ಮುಕ್ತ ಮಾತು!

Dhanush: ದಕ್ಷಿಣದ ಕೆಲವಾರು ಸಿನಿಮಾಗಳಲ್ಲಿ ಜೊತೆಗೆ ಕೆಲ ಬಾಲಿವುಡ್​​ ಸಿನಿಮಾಗಳಲ್ಲಿಯೂ ಮೃಣಾಲ್ ಠಾಕೂರ್ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಮೃಣಾಲ್ ಠಾಕೂರ್ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿತ್ತು. ಅದುವೇ ಸ್ಟಾರ್ ನಟ ಧನುಶ್ ಜೊತೆಗೆ ಮದುವೆ. ನಟ ಧನುಷ್ ಅವರನ್ನು ಪ್ರೇಮಿಗಳ ದಿನದಂದು ಮದುವೆಯಾಗಲಿದ್ದಾರೆ ಎಂಬ ವದಂತಿಗಳಿವೆ. ಇದೀಗ ಮದುವೆ ಬಗ್ಗೆಯೇ ನಟಿ ಕ್ಲಾರಿಟಿ ಕೊಟ್ಟಿದ್ದಾರೆ.

ಏನು, ರಾಜ್‌ಪಾಲ್‌ ಯಾದವ್‌ ಜೈಲಿಂದ ರಿಲೀಸ್‌ ಆದ್ರಾ? 9 ಕೋಟಿ ಸಾಲವನ್ನ ಸಲ್ಮಾನ್‌ ಖಾನ್‌ ತೀರಿಸಿದ್ರಾ? ಇಲ್ಲಿದೆ ನೋಡಿ ಅಸಲಿ ಸತ್ಯ!

ರಾಜ್‌ಪಾಲ್ ಯಾದವ್ ಜೈಲಿನಿಂದ ರಿಲೀಸ್ ಆದ್ರಾ? ಅಸಲಿ ಸತ್ಯ ಬಿಚ್ಚಿಟ್ಟ ಪತ್ನಿ!

ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ನಟ ರಾಜ್‌ಪಾಲ್‌ ಯಾದವ್‌ ಅವರ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಸದ್ಯ ತಿಹಾರ್‌ ಜೈಲಿನಿಂದ ಅವರ ಹೊರಗೆ ಬಂದು ಸಲ್ಮಾನ್‌ ಖಾನ್‌ ಅವರಿಗೆ ಧನ್ಯವಾದ ಹೇಳಿದ್ದಾರೆ ಎಂಬರ್ಥದ ವಿಡಿಯೋವೊಂದು ಹರಿದಾಡುತ್ತಿದ್ದು, ಅದು ಗೊಂದಲ ಮೂಡಿಸಿದೆ. ಆದರೆ ಅಸಲಿ ವಿಷ್ಯ‌ ಇಲ್ಲಿದೆ ನೋಡಿ.

Lakshmi Nivasa Serial: ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು

ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು

Lakshmi Nivasa Kannada Serial: ಲಕ್ಷ್ಮೀ ನಿವಾಸದಲ್ಲಿ ರೋಚಕ ಟ್ವಿಸ್ಟ್‌ ಬಂದಿದೆ. ಶ್ರೀಕಾಂತ್‌ ತಂಗಿ ಗಂಡ, ಶ್ರೀಕಾಂತ್ ಬರುತ್ತಿದ್ದ ಕಾರ್‌ಗೆ ಅಪಘಾತ ಮಾಡಿದ್ದನು. ಆಗ ಶ್ರೀಕಾಂತ್‌ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಏಕಾಏಕಿ ಶ್ರೀಕಾಂತ್‌ ಪ್ರತ್ಯಕ್ಷವಾಗಿದ್ದಾನೆ. ಇಷ್ಟೂ ದಿನ ಶ್ರೀಕಾಂತ್‌ ಎಲ್ಲಿದ್ದ? ಮಗಳಿಗೆ ನನ್ನ ಅವಶ್ಯಕತೆ ಇದೆ ಎನ್ನೋದನ್ನು ಮರೆತು ಇಷ್ಟೂ ದಿನ ಸುಮ್ಮನಿದ್ದದ್ದೇಕೆ? ಅಪಘಾತದಲ್ಲಿ ಏನಾಯ್ತು?

ವಯಸ್ಸು 65 ದಾಟಿದರೂ ಬಾಕ್ಸ್‌ ಆಫೀಸ್‌ನಲ್ಲಿ ಕುಗ್ಗಿಲ್ಲ ಇವರ ಹವಾ! ಚಿರಂಜೀವಿ, ರಜನಿಕಾಂತ್‌, ಸನ್ನಿ ಡಿಯೋಲ್‌ಗೆ ಏಜ್‌ ಈಸ್‌ ಎ ಜಸ್ಟ್‌ ನಂಬರ್!‌

Rajinikanth: ಚಿತ್ರರಂಗದ ಹಳೇ ಹುಲಿಗಳ ಅಬ್ಬರ; ಬಾಕ್ಸ್ ಆಫೀಸ್ ಗಡಗಡ!

2026ರಲ್ಲಿ ಬಾಕ್ಸ್‌ ಆಫೀಸ್ ಹೊಸ ಇತಿಹಾಸ ಬರೆಯುತ್ತಿದೆ. 70ರ ಹರೆಯದ ಚಿರಂಜೀವಿ ಅವರು 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಮೂಲಕ ದಾಖಲೆ ಬರೆದರೆ, 68ರ ಸನ್ನಿ ಡಿಯೋಲ್ ನಟನೆಯ 'ಬಾರ್ಡರ್ 2' ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಇವರ ಬೆನ್ನಲ್ಲೇ 75ರ ರಜನಿಕಾಂತ್ 'ಜೈಲರ್ 2' ಮೂಲಕ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

Sanjay Leela Bhansali: 'ಜೈ ಸೋಮನಾಥ್' ಚಿತ್ರಕ್ಕಾಗಿ ಒಂದಾದ ಸಂಜಯ್ ಲೀಲಾ -ಕೇತನ್ ಮೆಹ್ತಾ; ಏನಿದು ಕಥೆ?

'ಜೈ ಸೋಮನಾಥ್' ಚಿತ್ರಕ್ಕಾಗಿ ಒಂದಾದ ಸಂಜಯ್ ಲೀಲಾ -ಕೇತನ್ ಮೆಹ್ತಾ!

Jai Somnath Movie: ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂದಿನ ಸಿನಿಮಾ 'ಜೈ ಸೋಮನಾಥ್' ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಐತಿಹಾಸಿಕ ಸಿನಿಮಾ 2027 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವು ಗುಜರಾತ್‌ನ ಸೋಮನಾಥ ದೇವಾಲಯದ ಸುತ್ತಲಿನ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಘಟನೆಗಳನ್ನು ಒಳಗೊಂಡಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Karna Serial: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್; ಸಂಜಯನ ಮುಂದಿನ ಪ್ಲ್ಯಾನ್‌ ಏನು?

Karna Serial: ನಿಧಿ ಈಗ ಸರ್ಜನ್; ಸಂಜಯನ ಮುಂದಿನ ಪ್ಲ್ಯಾನ್‌ ಏನು?

Karna Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರ್ಣ' ಧಾರಾವಾಹಿ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ.ಇಷ್ಟು ದಿನ ಸಜ್ಜನನಂತೆ ನಟಿಸುತ್ತಿದ್ದ ಸಂಜಯ್ ಅಸಲಿ ಬಣ್ಣ ಈಗ ಇಡೀ ಕುಟುಂಬದ ಮುಂದೆ ಬಯಲಾಗಿದೆ.ಸಂಜಯ್‌ನ ಸಂಚಿನಿಂದ ತಾನು ಫೇಲ್ ಆಗಿದ್ದೇನೆಂದು ಕುಸಿದು ಹೋಗಿದ್ದ ನಿಧಿಗೆ ಈಗ ನ್ಯಾಯ ಸಿಕ್ಕಿದೆ. ಎಲ್ಲರ ಮುಂದೆ ಸತ್ಯವನ್ನು ಬಯಲು ಮಾಡಿದ ಕರ್ಣ, ನಿಧಿಯೇ ಕಾಲೇಜಿನ ಟಾಪರ್ ಎಂದು ಸಾಬೀತುಪಡಿಸಿದ್ದಾನೆ.

ಶಿವರಾತ್ರಿ ಹಬ್ಬದಂದು ಸುಖಾಗಮನ ಬಯಸುತ್ತಾ ಬಂದ ʻಗೋಲ್ಡನ್ ಸ್ಟಾರ್‌ʼ ಗಣೇಶ್; ವಿಂಟೇಜ್‌ ʻಗೋಲ್ಡನ್‌ ಸ್ಟಾರ್‌ʼ ಕಮ್‌ಬ್ಯಾಕ್‌ ಅಂತ ಫ್ಯಾನ್ಸ್‌ಗೆ ಖುಷಿ

ನಟ ಗಣೇಶ್‌ ಹೊಸ ಸಿನಿಮಾಕ್ಕೆ ʻತಮ್ಮ ಸುಖಾಗಮನ ಬಯಸುವ' ಟೈಟಲ್!

ʻಗೋಲ್ಡನ್ ಸ್ಟಾರ್‌ʼ ಗಣೇಶ್ ಅವರು ಹೀರೋ ಆಗಿ 20 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲೇ ಅವರ ಮುಂಬರುವ 'ತಮ್ಮ ಸುಖಾಗಮನ ಬಯಸುವ' ಚಿತ್ರದ ಮುಹೂರ್ತ ನೆರವೇರಿದೆ. ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಈ ಚಿತ್ರವು ಭಾವನಾತ್ಮಕ ಕೌಟುಂಬಿಕ ಕಥಾಹಂದರವನ್ನು ಹೊಂದಿದ್ದು, ಗಣೇಶ್ ಅವರಿಗೆ ಕಥೆ ಆಪ್ತವಾಗಿದೆಯಂತೆ.

ʻಧುರಂಧರ್‌ʼ ಸಿನಿಮಾದ ರೆಹಮಾನ್ ಡಕಾಯಿತ್ ಪಾತ್ರವನ್ನ ರಿಜೆಕ್ಟ್‌ ಮಾಡಿದ್ರಾ ನಾಗಾರ್ಜುನ? ಅಕ್ಷಯ್‌ ಖನ್ನಾ ಬಗ್ಗೆ ಹೇಳಿದ್ದೇನು?

Dhurandhar: ರೆಹಮಾನ್ ಡಕಾಯಿತ್ ಪಾತ್ರ ರಿಜೆಕ್ಟ್ ಮಾಡಿದ್ರಾ ನಾಗಾರ್ಜುನ?

ಧುರಂಧರ್‌ ಚಿತ್ರದ ರೆಹಮಾನ್ ಡಕಾಯಿತ್ ಪಾತ್ರ‌ ಆಫರ್ ಆನ್ನು ನಾಗಾರ್ಜುನ ತಿರಸ್ಕರಿಸಿದ್ದರು ಎಂಬ ವದಂತಿ ಸುಳ್ಳೆಂದು ಸಾಬೀತಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಾಗಾರ್ಜುನ, ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮತ್ತು ಅಕ್ಷಯ್ ಖನ್ನಾ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.

Muddhu Sose Serial: ಮುದ್ದು ಸೊಸೆ ಮಹಾಸಂಚಿಕೆ; ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ

Muddhu Sose Serial: ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ

Muddu Sose Kannada Serial: ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿಯ ಈ ಮಹಾ ಸಂಚಿಕೆಯು ಇಂದಿನಿಂದ ಆರಂಭವಾಗಲಿದೆ. ಸ್ವಂತ ಮಗಳು ಭವಾನಿ ಕಾಲೇಜಿನಲ್ಲಿ ಓದುವಾಗ ಲವ್ ಮಾಡಿ ಮದುವೆ ಮಾಡಿಕೊಂಡಳು ಎಂಬ ಸಿಟ್ಟಿನಿಂದ, ‘ಇನ್ಮುಂದೆ ಮನೆ ಹೆಣ್ಮಕ್ಕಳು ಕಾಲೇಜಿಗೆ ಹೋಗಂಗಿಲ್ಲ’ ಅಂತ ಶಿವರಾಮೇಗೌಡ ಎಂದೋ ನಿರ್ಧಾರ ಮಾಡಿ ಆಗಿದೆ. ಶಿವರಾಮೇಗೌಡ್ರ ಸೊಸೆಯಾಗಿ ಬಂದಿರೋದು ವಿದ್ಯಾ. ಹೆಸರಿನ ತಕ್ಕಂತೆ ಈಕೆ ವಿದ್ಯಾವಂತೆ. ಡಾಕ್ಟರ್ ಆಗಬೇಕು ಎಂಬ ಮಹದಾಸೆ ವಿದ್ಯಾಗಿದೆ. ಆದರೆ ಸಾಕಷ್ಟು ಅಡೆ ತಡೆಗಳು ಆಕೆಗೆ ಇದೆ.

ʻಜನ ನಾಯಗನ್‌ʼ ಚಿತ್ರಕ್ಕಾಗಿ ಕಾಯುತ್ತಿರುವ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಮತ್ತೆ ನಿರಾಸೆ ಕಾದಿದೆಯಾ? ಕೆನಡಾದಿಂದ ಕೇಳಿಬಂತು ಕಹಿಸುದ್ದಿ!

'ಜನ ನಾಯಗನ್' ಮತ್ತೆ ವಿಘ್ನ; ವಿಜಯ್‌ ಫ್ಯಾನ್ಸ್‌ಗೆ ಮತ್ತೊಮ್ಮೆ ನಿರಾಸೆ?

Jana Nayagan Movie Release Update: ಜನ ನಾಯಗನ್‌ ಸಿನಿಮಾದ ಬಿಡುಗಡೆ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದು ವಿಜಯ್ ಅಭಿಮಾನಿಗಳಲ್ಲಿ ಮತ್ತೆ ಆತಂಕ ಮೂಡಿಸಿದೆ. ಕೆನಡಾದ ವಿತರಕರು ನೀಡಿರುವ ಹೊಸ ಮಾಹಿತಿ ಈಗ ದಳಪತಿ ಫ್ಯಾನ್ಸ್‌ ನಿದ್ದೆಗೆಡಿಸಿದೆ.

ಶಿವರಾತ್ರಿ ಹಬ್ಬದ ಪ್ರಯುಕ್ತ 'ನಾಗಬಂಧಂ' ಟೀಸರ್ ರಿಲೀಸ್; ಟಾಲಿವುಡ್‌ ನಟ ಮಹೇಶ್‌ ಬಾಬು ಹೇಳಿದ್ದೇನು?

ಶಿವರಾತ್ರಿ ಸಂಭ್ರಮಕ್ಕೆ 'ನಾಗಬಂಧಂ' ಟೀಸರ್ ಗಿಫ್ಟ್! ಮಹೇಶ್‌ ಬಾಬು ಏನಂದ್ರು?

Nagabandham Movie Teaser Released: ಮಹಾ ಶಿವರಾತ್ರಿ ಪ್ರಯುಕ್ತ ನಾಗಬಂಧಂ ಸಿನಿಮಾ ಟೀಸರ್‌ ಬಿಡುಗಡೆಯಾಗಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಈ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ವಿರಾಟ್ ಕರ್ಣ ನಾಯಕನಾಗಿ ನಟಿಸಿದ್ದು, ನಭಾ ನಟೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ನಾಮಾ ನಿರ್ದೇಶನದ ಈ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

Photos: ಅದ್ದೂರಿಯಾಗಿ ಎಂಗೇಜ್‌ ಆದ ʻಗತವೈಭವʼ ಹೀರೋ ದುಷ್ಯಂತ್;‌ ಬೀಗರಾದ ತುಮಕೂರಿನ ಪ್ರಭಾವಿ ರಾಜಕೀಯ ನಾಯಕರು

Photos: ಎಂಗೇಜ್‌ ಆದ ʻಗತವೈಭವʼ ಹೀರೋ ದುಷ್ಯಂತ್;‌ ಹುಡುಗಿ ಯಾರು?

ಸಿಂಪಲ್‌ ಸುನಿ ನಿರ್ದೇಶನದ ʻಗತವೈಭವʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಕಾಲಿಟ್ಟ ನಟ ದುಷ್ಯಂತ್‌, ಇದೀಗ ಸದ್ದಿಲ್ಲದೇ ದಾಂಪತ್ಯ ಬದುಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ತಮ್ಮ ಎಂಗೇಜ್‌ಮೆಂಟ್‌ ಅನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಅಂದಹಾಗೆ, ಇವರು ಮದುವೆ ಆಗುತ್ತಿರುವ ಹುಡುಗಿ ಯಾರು? ರಚನಾ. ಹೌದು, ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿಯಾಗಿರುವ ರಚನಾ ಅವರನ್ನು ದುಷ್ಯಂತ್‌ ವರಿಸುತ್ತಿದ್ದು, ಈ ಮದುವೆ ಮೂಲಕ ಎರಡು ರಾಜಕೀಯ ಕುಟುಂಬಗಳ ನಡುವೆ ಸಂಬಂಧ ಬೆಳೆಯುತ್ತಿದೆ. ಹೌದು, ದುಷ್ಯಂತ್‌ ತಂದೆ ಎಸ್‌ ಆರ್‌ ಶ್ರೀನಿವಾಸ್‌ ಅವರು ಕೂಡ ಗುಬ್ಬಿ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಈ ಎಂಗೇಜ್‌ಮೆಂಟ್‌ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ ನೋಡಿ.

'ರಕ್ಕಸಪುರದೋಳ್' ಟ್ರೇಲರ್ ನೋಡಿ ಸಲ್ಮಾನ್ ಖಾನ್ ಫಿದಾ; ಬಾಲಿವುಡ್‌ಗೆ ಹೋಗಲಿದೆಯಾ ರಾಜ್ ಬಿ ಶೆಟ್ಟಿ ಸಿನಿಮಾ? ಚಿತ್ರತಂಡಕ್ಕೆ ʻಭಾಯ್‌ಜಾನ್‌ʼ ಹೇಳಿದ್ದೇನು?

Raj B Shetty: ʻರಕ್ಕಸಪುರದೋಳ್ʼ‌ ಟ್ರೇಲರ್‌ ನೋಡಿ ಸಲ್ಮಾನ್‌ ಏನಂದ್ರು?

ರಾಜ್‌ ಬಿ ಶೆಟ್ಟಿ ಅವರ ರಕ್ಕಸಪುರದೋಳ್‌ ಸಿನಿಮಾವು ನಟ ಸಲ್ಮಾನ್ ಖಾನ್ ಅವರ ಗಮನ ಸೆಳೆದಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು, ಅದರ ಟ್ರೇಲರ್ ವೀಕ್ಷಿಸಿದ ಸಲ್ಮಾನ್ ಖಾನ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರವಿವರ್ಮಗೆ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

Abhishek Bachchan : AI ಪ್ರತಿಯೊಬ್ಬ ನಟನನ್ನೂ ಹೆದರಿಸುವಂತಿದೆ; ಅಭಿಷೇಕ್ ಬಚ್ಚನ್

AI ಪ್ರತಿಯೊಬ್ಬ ನಟನನ್ನೂ ಹೆದರಿಸುವಂತಿದೆ; ಅಭಿಷೇಕ್ ಬಚ್ಚನ್

Artificial Intelligence: ನಟ ಅಭಿಷೇಕ್ ಬಚ್ಚನ್ ಅವರು AI (ಕೃತಕ ಬುದ್ಧಿಮತ್ತೆ) (Artificial Intelligence) ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಅದು ನಟರಿಗೆ ಹೇಗೆ ಹಾನಿಕಾರಕವಾಗಬಹುದು ಎಂಬುದರ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ತನಗೆ ಭಯ ಹುಟ್ಟಿಸುತ್ತದೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

Rajinikanth: ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ; ಹಾಲಿನ ಅಭಿಷೇಕ ಮಾಡಿದ ಅಭಿಮಾನಿ

ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ ಮಾಡಿದ ಫ್ಯಾನ್‌!

shivaratri: ಮಹಾಶಿವರಾತ್ರಿಗೂ ಮುನ್ನ, ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಯೊಬ್ಬರು ನಟನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಅಭಿಮಾನಿಯೊಬ್ಬರು ಸೂಪರ್‌ಸ್ಟಾರ್ ಪೋಸ್ಟರ್‌ಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಲಾಗಿದ್ದು, ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

Rakshit Shetty: ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌!

‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌!

Pramod shetty: ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ರಕ್ಷಿತ್ ಶೆಟ್ಟಿ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಿರಿಕ್ ಪಾರ್ಟಿ, ಚಾರ್ಲಿ ಹಾಗೂ ಸಪ್ತಸಾಗರದಾಚೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಬಳಿಕ ಅವರ ಅಭಿನಯದ ಯಾವ ಸಿನಿಮಾ ಕೂಡ ಬಂದಿಲ್ಲ.

ವ್ಯಾಲೆಂಟೈನ್ಸ್ ಡೇಯಂದು ಜೈಲಿನಿಂದಲೇ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಐಷಾರಾಮಿ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌ ಚಂದ್ರಶೇಖರ್‌

ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌

Sukesh Chandrashekhar: ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಪ್ರೇಯಸಿ, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಫೆಬ್ರವರಿ 14ರಂದು ಐಷಾರಾಮಿ ಹೆಲಿಕಾಫ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ʼಬೇಬಿ ಬೊಮ್ಮ ಜಾಕ್ವೆಲ್‌ʼ ಎಂದು ಕರೆದು ಭಾವನಾತ್ಮಕ ಪತ್ರ ಬರೆದಿದ್ದಾರೆ.

Ranbir Kapoor : ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್

ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್

Ranbir: ನಟ ರಣಬೀರ್ ಕಪೂರ್ ತಮ್ಮ ಬ್ರ್ಯಾಂಡ್ ಆರ್ಕ್ಸ್‌ನ ವಾರ್ಷಿಕೋತ್ಸವ ಅಗವಾಗಿ ಇನ್‌ಸ್ಟಾ ಲೈವ್‌ ಬಂದಿದ್ದರು, , ಅಲ್ಲಿ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಮುಂಬರುವ ಚಿತ್ರಗಳ ಕುರಿತು ಪ್ರಮುಖ ಅಪ್‌ಡೇಟ್‌ಗಳನ್ನು ಹಂಚಿಕೊಂಡರು. ಖ್ಯಾತ ನಿರ್ಮಾಪಕ-ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಅಂಡ್ ವಾರ್' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿದೆ. ಇದರಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Rekha Vedavyas: ಆ ಕಾರಣಗಳಿಂದ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ; ನಟಿ ಚಿತ್ರ ರೇಖಾ

ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯ ಹೇಳಿದ ನಟಿ ರೇಖಾ

Rekha actress: ಈ ಹಿಂದೆ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ಸುಂದರ ನಟಿ ಅಂದರೆ ಅದುವೇ ಕನ್ನಡತಿ ‘ಚಿತ್ರʼ ರೇಖಾ. ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ (Kannada) ಸಿನಿಮಾ ಮಾಡಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ (Cinema) ದೂರವಿದ್ದ ಈ ಸುಂದರ ನಟಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Hombale Films : ಹೊಂಬಾಳೆಯ ʻಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್; ನಾಳೆ ಹಾಡು ಬಿಡುಗಡೆ

ಹೊಂಬಾಳೆಯ ʻಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್

Shiva Shambho Swayambho: ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'ಶಿವ ಶಂಭೋ ಸ್ವಯಂಭೋ' ಹಾಡಿನ ಪ್ರೊಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. 'ಭಕ್ತಿಯ ಅಲೆ ಆರಂಭವಾಗಿದೆ' ಎಂಬ ಅಡಿಬರಹ ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ನಿಮ್ಮನ್ನು ಭಕ್ತಿ ಸಾಗರದಲ್ಲಿ ಮುಳುಗಿಸಲು ಸಿದ್ಧವಾಗಿದೆ. ಕೆಜಿಎಫ್ ಮತ್ತು ಕಾಂತಾರದಂತಹ ದೊಡ್ಡ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಈಗ ಸಂಗೀತ ಕ್ಷೇತ್ರದಲ್ಲಿ (Music) ತನ್ನ ಛಾಪು ಮೂಡಿಸುತ್ತಿದೆ.

Yash: ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ; ವ್ಯಾಲೆಂಟೈನ್‌ ಡೇಗೆ ಯಶ್‌ಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ರಾಧಿಕಾ

ಯಶ್‌ಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ರಾಧಿಕಾ

Radhika: ರಾಧಿಕಾ ಪಂಡಿತ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಯಾವುದೇ ಶುಭ ಸಮಾರಂಭಗಳಿರಲಿ, ವಿಶೇಷ ದಿನಗಳಿರಲಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಹುಟ್ಟುಹಬ್ಬ, ಮ್ಯಾರೇಜ್‌ ಆನಿವರ್ಸರಿ ಇತ್ಯಾದಿಗಳಿಗೆ ಹಾಕಿಕೊಳ್ಳೋ ಪೋಸ್ಟ್‌ಗಳು ವೈರಲ್‌ ಆಗುತ್ತವೆ. ಇದೀಗ ವ್ಯಾಲೆಂಟೈನ್‌ ಡೇ ಸಂದರ್ಭದಲ್ಲಿ ರಾಧಿಕಾ ಪಂಡಿತ್‌ ಯಶ್‌ಗೆ ಹಾರೈಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಾಧಿಕಾ ಪಂಡಿತ್ ಅವರು ಯಶ್​ಗೆ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ.

Dhanush: ಕಾನೂನು ಸಂಕಷ್ಟದಲ್ಲಿ ಧನುಷ್; ಏನಿದು ಪ್ರಕರಣ?

ಕಾನೂನು ಸಂಕಷ್ಟದಲ್ಲಿ ಧನುಷ್; ಏನಿದು ಪ್ರಕರಣ?

Dhanush production: ಬಹಳ ದಿನಗಳಿಂದ ವಿಳಂಬವಾಗಿದ್ದ ಚಿತ್ರ ನಿರ್ಮಾಣ ಸಂಸ್ಥೆ ತೆನಾಂಡಲ್ ಫಿಲ್ಮ್ಸ್, ನಟ ಧನುಷ್ಅ ವರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಆರ್ಥಿಕ ಹಿನ್ನಡೆಯನ್ನು ಉಲ್ಲೇಖಿಸಿ ಬ್ಯಾನರ್ ₹ 20 ಕೋಟಿ ಪರಿಹಾರವನ್ನು ಕೋರಿದೆ ಎಂದು ವರದಿಯಾಗಿದೆ. 2016ರಲ್ಲಿ ಒಪ್ಪಿಕೊಂಡ 'ನಾನ್ ರುದ್ರನ್' ಸಿನಿಮಾ ಯೋಜನೆಯ ವಿಳಂಬಕ್ಕೆ ಧನುಶ್ ಅವರೇ ಕಾರಣ ಎಂದು ಸಂಸ್ಥೆ ಆರೋಪಿಸಿದೆ. ಚಿತ್ರಕಥೆ ನೀಡದೆ ಯೋಜನೆ ಸ್ಥಗಿತಗೊಂಡಿದೆ.

Namit Malhotra: ರಾಮಾಯಣ ನಮ್ಮ ಸಂಸ್ಕೃತಿ ,ಹಿಂದೆಂದೂ ನೋಡಿರದ ರೀತಿಯಲ್ಲಿ ಸಿನಿಮಾ ಬರತ್ತೆ; ನಮಿತ್ ಮಲ್ಹೋತ್ರಾ

ಯಶ್ ಚಿತ್ರದ ನಿರ್ಮಾಪಕನ ಹೊಸ ಹೇಳಿಕೆ, ಸಿನಿಮಾ ಹೇಗೆ ಇರಲಿದೆ?

Yash: ನಮಿತ್ ಮಲ್ಹೋತ್ರಾ (Namit Malhotra) ಅವರ ರಾಮಾಯಣವು (Ramayana Movie) ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಒಳ್ಳೆಯ ಸಂಗೀತ ಮತ್ತು ಅದ್ಭುತ ತಾರಾಗಣವಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಇತ್ತೀಚೆಗೆ ರಾಮಾಯಣ ಸಿನಿಮಾ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ರಾಮಾಯಣ ನಮ್ಮ ಸಂಸ್ಕೃತಿ, ನಮ್ಮ ಕಥೆಗಳು ಮತ್ತು ನಮ್ಮ ಇತಿಹಾಸದ ಅಡಿಪಾಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?

ಅಲ್ಲು ಸಿರೀಶ್ ಹಳದಿ ಶಾಸ್ತ್ರ; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?

allu arjun: ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಶುಕ್ರವಾರ ತಮ್ಮ ಸಹೋದರ ಅಲ್ಲು ಸಿರೀಶ್ ಅವರ ಹಳದಿ ಶಾಸ್ತ್ರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಶೂಟಿಂಗ್ ವೇಳಾಪಟ್ಟಿ ಇದಿದ್ದರಿಂದ ಹಾಜರಾಗಲು ಸಾಧ್ಯವಾಗದ ಕಾರಣ ಅವರು ಅದನ್ನು ಎಷ್ಟು ಮಿಸ್ ಮಾಡಿಕೊಂಡರು ಎಂಬುದನ್ನು ಪೋಸ್ಟ್‌ ಮೂಲಕ ವ್ಯಕ್ತ ಪಡಿಸಿದರು.

Loading...