ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Kannada New Movie: ‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ

‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ

Prem Love Nandini: ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ತಂಡವೊಂದು ಹೊಸ ಚಿತ್ರ “ಪ್ರೇಮ್ ಲವ್ ನಂದಿನಿ” ಚಿತ್ರ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ ಅವರ ನಿರ್ಮಾಣದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಸುಧಾ ಅಣ್ಣಾಶೇಠ.

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಸಿನಿಮಾ ಟೈಟಲ್‌ ಅನೌನ್ಸ್‌!

ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಸಿನಿಮಾ ಟೈಟಲ್‌ ಅನೌನ್ಸ್‌!

Puri Jagannadh: ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬೋದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ವಿಜಯ್ ಸೇತುಪತಿ ಬರ್ತಡೇ ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಪುರಿ-ವಿಜಯ್ ಬಹು ನಿರೀಕ್ಷಿತ ಸಿನಿಮಾಗೆ ಸ್ಲಂಡಾಗ್-33 ಟೆಂಪಲ್ ರೋಡ್ ಎಂಬ ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ.

OTT This Week: ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ ಹೊಸ ಸಿನಿಮಾಗಳು

ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ ಹೊಸ ಸಿನಿಮಾಗಳು

OTT: ಈ ವಾರಾಂತ್ಯವು ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್ , ಸೋನಿ ಲಿವ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಸರಣಿಗಳ ಹೊಸ ಶ್ರೇಣಿಯನ್ನು ತಂದಿದೆ. ಭಾವನಾತ್ಮಕ ವಿದಾಯಗಳಿಂದ ಹಿಡಿದು ಅಪರಾಧ ಥ್ರಿಲ್ಲರ್‌ಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವೀಕ್ಷಕರಿಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ.

Bigg Boss Kannada 12: ಫಿನಾಲೆ ದಿನ ಬನಿಯನ್ ಧರಿಸಿ ಬರ್ತಾರಾ ಗಿಲ್ಲಿ ನಟ? ಕಾವ್ಯಾ, ರಕ್ಷಿತಾ ಕಾಸ್ಟ್ಯೂಮ್ಸ್ ಹೇಗಿವೆ?

ಫಿನಾಲೆ ದಿನ ಬನಿಯನ್ ಧರಿಸಿ ಬರ್ತಾರಾ ಗಿಲ್ಲಿ ನಟ?

Gilli Nata: ಬಿಗ್‌ ಬಾಸ್‌ ಫಿನಾಲೆ ಬಂತು ಅಂದರೆ ವೀಕ್ಷರಲ್ಲಿ ವೋಟಿಂಗ್‌ ಮಾತ್ರ ಅಲ್ಲ ತಮ್ಮ ನೆಚ್ಚಿನ ಸ್ಪರ್ಧಿ ಧರಿಸುವ ಕಾಸ್ಟ್ಯೂಮ್‌ ಬಗ್ಗೆಯೂ ಚರ್ಚೆ ಮಾಡುತ್ತಲೇ ಇರ್ತಾರೆ. ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ ಡಿಸೈನರ್ ಗೌನ್‌ಗಳನ್ನು ತೊಟ್ಟು ಮಿಂಚಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. ಆದರೆ ವೀಕ್ಷಕರಲ್ಲಿ ಹೆಚ್ಚಾಗಿ ಕುತೂಹಲದಲ್ಲಿ ಇರೋದು ಗಿಲ್ಲಿ ನಟನ ಡ್ರೆಸ್‌ ಬಗ್ಗೆ.

Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ ಗೊತ್ತಾ?

ʻಬಿಗ್‌ ಬಾಸ್‌ʼ ಫಿನಾಲೆಗೆ ಕೌಂಟ್‌ಡೌನ್; ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ?

Bigg Boss Kannada 12: ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಧ್ರುವಂತ್ ಎಲಿಮಿನೇಷನ್ ನಂತರ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ವಿನ್ನರ್‌ ಯಾರಾಗಬೇಕು ಎಂಬುದಕ್ಕೆ ವೋಟಿಂಗ್ ಲೈನ್ಸ್ ಲೀಡ ತೆರೆದಿವೆ.

Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ!  ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ

ಇದು ಅನ್ನವನ್ನೇ ಕದ್ದು ತಿಂದ ಕಥೆ! ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ

Gilli Nata: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ತಮ್ಮ ಜೀವನದ ಜರ್ನಿಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಸ್ಪರ್ಧಿಗಳು.

Bigg Boss Kannada 12: ಡಿಸಿಪ್ಲಿನ್‌ನಲ್ಲಿ ಕಿಂಗ್, ಟಾಸ್ಕ್‌ಗಳಲ್ಲಿ ಮಾಸ್ಟರ್! ರಘು ಜರ್ನಿ ಇದು

ಡಿಸಿಪ್ಲಿನ್‌ನಲ್ಲಿ ಕಿಂಗ್, ಟಾಸ್ಕ್‌ಗಳಲ್ಲಿ ಮಾಸ್ಟರ್! ರಘು ಜರ್ನಿ ಇದು

Bigg Boss Raghu: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ರಾಘವೇಂದ್ರ ಅಲಿಯಾಸ್‌ ಮ್ಯೂಟೆಂಟ್‌ ರಘು ಕೂಡ ಪ್ರಬಲ ಸ್ಪರ್ಧಿಯೇ ಆಗಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಎಲ್ಲಾ ರೆಕಾರ್ಡ್‌ನೂ ಬ್ರೇಕ್‌ ಜೊತೆಗೆ ಕರ್ನಾಟಕ ಸರ್ಕಾರದಿಂದ ಕ್ರೀಡಾ ರತ್ನ ಅವಾರ್ಡ್‌ ಲಭಿಸಿದೆ. ಹೀಗಿರುವಾಗ ಬಿಗ್‌ ಬಾಸ್‌ ಮನೆಯ ಟಾಸ್ಕ್‌ಗಳಲ್ಲಿ ಅವರು ಕಠಿಣ ಸ್ಪರ್ಧಿ ಆಗದೇ ಇರೋಕೆ ಆಗತ್ತಾ? ಹೇಗಿತ್ತು ಅವರು ಪ್ರಯಾಣ?

Bigg Boss Kannada 12: ನಯವಾಗಿ ಬಂದ್ರೆ ಸ್ನೇಹಜೀವಿ! ಸಿಡಿ–ಮಿಡಿ ಮಾಡಿದ್ರೆ ಸುಂಟರಗಾಳಿ; ಹೇಗಿತ್ತು ರಾಜಮಾತೆ ಅಶ್ವಿನಿ ಗೌಡ ಜರ್ನಿ?

ರಾಜಮಾತೆ ಅಶ್ವಿನಿ ಗೌಡ ಬಿಗ್‌ ಬಾಸ್‌ ಪ್ರಯಾಣ ಹೇಗಿತ್ತು?

Ashwini Gowda: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಛಲಗಾರ್ತಿ ಅಶ್ವಿನಿ ಅವರು ಕೂಡ ಶೋ ಶುರುವಾದಾಗಿನಿಂದ ಸಖತ್‌ ಹೈಲೈಟ್‌ ಆದವರು. ಅಶ್ವಿನಿ ಗೌಡ ಟಾಸ್ಕ್‌ ಅಂತ ಬಂದರೆ ಸಖತ್‌ ಡೇರಿಂಗ್‌ ಅಲ್ಲಿ ಆಟ ಆಡದೇ ಬಿಟ್ಟು ಕೊಡುತ್ತ ಇರಲಿಲ್ಲ. ಅಶ್ವಿನಿ ಅವರ ಬಿಗ್‌ ಬಾಸ್‌ ಜರ್ನಿ ಹೀಗಿತ್ತು.

Bigg Boss 12: ʻಈ ಉತ್ಸಾಹವನ್ನ ಎಲೆಕ್ಷನ್‌ ಬಂದಾಗ ತೋರಿಸಿ, ದೇಶ ಉದ್ಧಾರ ಆಗತ್ತೆʼ; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ರಾ ಜಾಹ್ನವಿ?

ಅಶ್ವಿನಿ ಪರ ಜಾಹ್ನವಿ ಬ್ಯಾಟಿಂಗ್; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷ ಟಾಂಗ್?

Bigg Boss Kannada 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಹಂತ ತಲುಪಿದ್ದು, ಗೆಳತಿ ಅಶ್ವಿನಿ ಗೌಡ ಪರವಾಗಿ ಮಾಜಿ ಸ್ಪರ್ಧಿ ಜಾಹ್ನವಿ ಅವರು ಮತ ಯಾಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ನೀಡುತ್ತಿರುವ ಬೆದರಿಕೆಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ

ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ

Gilli Nata: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅದರಲ್ಲೂ ಗಿಲ್ಲಿ ಕ್ರೇಜ್‌ ಮಾತ್ರ ಸಖತ್‌ ಆಗಿ ಆಗ್ತಿದೆ. ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್​​ಕುಮಾರ್‌ ಭವಿಷ್ಯ ನುಡಿದಿದ್ದಾರೆ.

Dhanush:  ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?

ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ?

Mrunal: 2022 ರಲ್ಲಿ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಟ ಧನುಷ್‌ ಅವರ ಜೊತೆ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಆದರೆ ಧನುಷ್ ಅವರ ವೈಯಕ್ತಿಕ ಜೀವನವು ಇನ್ನೂ ಸುದ್ದಿಯಲ್ಲಿದೆ. 2024 ರಲ್ಲಿ ವಿಚ್ಛೇದನದ ನಂತರ, ನಟಿ ಮೃಣಾಲ್ ಠಾಕೂರ್ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್‌ ವೈರಲ್‌ ಆಗಿತ್ತು. ಧನುಷ್ ಮತ್ತು ಮೃಣಾಲ್ ಠಾಕೂರ್ ಇಬ್ಬರೂ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಪ್ರಾರಂಭಿಸಿದ್ದಾರೆ ಎಂದು ವರದಿ ಆಗಿತ್ತು.

Seetha Payanam Movie: 7 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್

'ಸೀತಾ ಪಯಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನೂಪ್ ರೂಬೆನ್ಸ್ ಕಮ್‌ಬ್ಯಾಕ್

Anoop Rubens: ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರು 7 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

ಫಿನಾಲೆಗೆ ಎರಡೇ ದಿನ ಬಾಕಿ; ದಿಢೀರ್‌ ಅಂತ ಶಾಕ್‌ ನೀಡಿದ ʻಬಿಗ್‌ ಬಾಸ್‌ʼ, ಬೇಕು ಅಂದಾಗೆಲ್ಲಾ ಇನ್ನೇಲೆ ಸ್ಪರ್ಧಿಗಳನ್ನ ನೋಡೋಕಾಗಲ್ಲ!

ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ಬಿಗ್ ಬಾಸ್ ʻಬಿಗ್ʼ ಟ್ವಿಸ್ಟ್!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ವಿದಾಯ ಹೇಳಿದ್ದಾರೆ.

Bigg Boss 12: ಅಯ್ಯೋ, ʻಗಿಚ್ಚಿ ಗಿಲಿ ಗಿಲಿʼ ಟೀಮ್‌ ಬಂದರೂ ರಕ್ಷಿತಾಗೆ ಗಿಲ್ಲಿದೇ ಚಿಂತೆ! ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

BBK 12: ಗಿಚ್ಚಿ ಗಿಲಿ ಗಿಲಿ ಟೀಮ್ ಬಂದರೂ ರಕ್ಷಿತಾಗೆ ಗಿಲ್ಲಿದೇ ಧ್ಯಾನ!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲರ್ಸ್ ಕನ್ನಡದ ನೂತನ ಶೋ 'ಗಿಚ್ಚಿ ಗಿಲಿ ಗಿಲಿ' ಜೂನಿಯರ್ಸ್ ತಂಡದ ಕಲಾವಿದರು ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಅವರು "ನನಗೆ ಗಿಲ್ಲಿ ಇಷ್ಟ" ಎಂದು ಹೇಳಿದ್ದು ಮನೆಯಲ್ಲಿ ನಗು ಉಕ್ಕಿಸಿದೆ.

ʻಗಿಲ್ಲಿ ನಟ ಬಂದಾಗ 6 ಬಾಡಿಗಾರ್ಡ್ಸ್‌ ಇದ್ರು, ಗಿಲ್ಲಿ ಕ್ರೇಜ್‌ ಬಿಗ್‌ ಬಾಸ್‌ಗೂ ಗೊತ್ತಿದೆʼ; ದೊಡ್ಮನೆಯೊಳಗೆ ನಡೆದ  ಫ್ಯಾನ್ಸ್ ಮೀಟ್‌ನ ಅಸಲಿ ಸತ್ಯ!

ಬಿಗ್‌ ಬಾಸ್‌ ಫ್ಯಾನ್ಸ್ ಮೀಟ್‌ನಲ್ಲಿ ಗಿಲ್ಲಿ ಬಂದಾಗ 6 ಬಾಡಿಗಾರ್ಡ್ಸ್‌ ನೇಮಕ

Bigg Boss 12 Gilli Nata: ಬಿಗ್ ಬಾಸ್ ಕನ್ನಡ 12ರ ಫಿನಾಲೆ ವಾರದಲ್ಲಿ ನಡೆದ ಫ್ಯಾನ್ಸ್ ಮೀಟ್, ಗಿಲ್ಲಿ ನಟನ ಬೃಹತ್ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಇತರೆ ಸ್ಪರ್ಧಿಗಳಿಗೆ ಇಬ್ಬರು ಬಾಡಿಗಾರ್ಡ್‌ಗಳಿದ್ದರೆ, ಗಿಲ್ಲಿ ಬಂದಾಗ ಭದ್ರತೆಗಾಗಿ ಆರು ಮಂದಿ ಬೌನ್ಸರ್‌ಗಳನ್ನು ನೇಮಿಸಲಾಗಿತ್ತು ಎಂದು ಅಭಿಮಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

Bigg Boss 12: ʻಇಲ್ಲಿಂದ ಹೋದ್ಮೇಲೆ ನಿನ್ನ ಬ್ಲಾಕ್‌ ಮಾಡ್ತಿನಿʼ ಎಂದ ಕಾವ್ಯ; ʻI Am Waiting..ʼ ಅಂತ ಕೌಂಟರ್‌ ಕೊಟ್ಟ ಗಿಲ್ಲಿ ನಟ!

ಸೀರಿಯಸ್ ಆಗಿ ಕ್ಷಮೆ ಕೇಳಿದ ಕಾವ್ಯ; ಮತ್ತೆ ಕಾಲೆಳೆದ ಗಿಲ್ಲಿ ನಟ!

Bigg Boss Kannada 12: ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ 'ಕ್ಷಮೆ ಕೇಳುವ' ವಿಶಿಷ್ಟ ಚಟುವಟಿಕೆ ನೀಡಿದ್ದರು. ಇದರಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ತಾನು ಈ ಹಿಂದೆ ಹರ್ಟ್ ಮಾಡಿದ್ದಕ್ಕಾಗಿ ಮತ್ತು ಜನರ ಮುಂದೆ ಕೂಗಾಡಿದ್ದಕ್ಕಾಗಿ ಮನಸಾರೆ ಕ್ಷಮೆ ಕೇಳಿದ್ದಾರೆ.

Kara First Glimpse: ಸಂಕ್ರಾಂತಿಗೆ ಗುಡ್‌ ನ್ಯೂಸ್‌ ಕೊಟ್ಟ ಧನುಷ್‌! ಹೊಸ ಸಿನಿಮಾ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಂಕ್ರಾಂತಿಗೆ ಗುಡ್‌ ನ್ಯೂಸ್‌ ಕೊಟ್ಟ ಧನುಷ್‌! ಲುಕ್‌ಗೆ ಫ್ಯಾನ್ಸ್‌ ಫಿದಾ

Kara first glimpse: ಧನುಷ್ ಅವರು ವಿಘ್ನೇಶ್ ರಾಜಾ ಅವರ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಲ್ಲದೆ, ಪೊಂಗಲ್ ಸಂದರ್ಭದಲ್ಲಿ ಮೊದಲ ಲುಕ್‌ ಮೂಲಕ ಅಚ್ಚರಿಗೊಳಿಸಿದರು. ದಿ ನೇಮ್ ಈಸ್ ಕಾರಾ ಎಂಬ ಶೀರ್ಷಿಕೆಯ, ಆಕ್ಷನ್-ಪ್ಯಾಕ್ಡ್ ಗ್ಲಿಂಪ್ಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮತ್ತು ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ.

Vijay Sethupathi: ಕೊನೆಗೂ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ  ವಿಜಯ್ ಸೇತುಪತಿ; ಆರ್ಭಟ ಶುರು!

ಕೊನೆಗೂ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ವಿಜಯ್ ಸೇತುಪತಿ

Jailer 2: ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ತಮಿಳು ಆಕ್ಷನ್-ಹಾಸ್ಯ ಚಿತ್ರ ಜೈಲರ್ 2 ನಲ್ಲಿ ತಾವು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ವಿಜಯ್ ಸೇತುಪತಿ ದೃಢಪಡಿಸಿದ್ದಾರೆ. 2023 ರ ಬಾಕ್ಸ್ ಆಫೀಸ್ ಹಿಟ್ ಜೈಲರ್ ಚಿತ್ರದ ಮುಂದುವರಿದ ಭಾಗದಲ್ಲಿ ರಜನಿಕಾಂತ್ ಅವರ ಪುನರಾಗದ ಬೆನ್ನಲ್ಲೇ ಈ ಘೋಷಣೆ ಬಂದಿದೆ. ಈ ಹಿಂದೆ ಅತಿಥಿ ಪಾತ್ರ ಅಥವಾ ಖಳನಾಯಕ ಪಾತ್ರಗಳನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದ ಸೇತುಪತಿ, ರಜನಿಕಾಂತ್ ಮೇಲಿನ ಮೆಚ್ಚುಗೆಯಿಂದಾಗಿ ಈ ವಿನಾಯಿತಿ ನೀಡಿದ್ದೇನೆ ಎಂದು ವ್ಯಕ್ತಪಡಿಸಿದರು.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಜೋಡಿಯಾದ ನಟ ಪೃಥ್ವಿ ಅಂಬಾರ್‌; ʻಚೌಕಿದಾರ್‌ ʼ ಸಿನಿಮಾ ಟ್ರೇಲರ್‌ ಹೇಗಿದೆ?

ಪೃಥ್ವಿ ಅಂಬಾರ್-ಧನ್ಯಾ ರಾಮ್‌ಕುಮಾರ್ ನಟನೆಯ ‌ʻಚೌಕಿದಾರ್ʼ ಟ್ರೇಲರ್ ರಿಲೀಸ್

Chowkidar Trailer: ಪೃಥ್ವಿ ಅಂಬಾರ್‌ ಮತ್ತು ಧನ್ಯಾ ರಾಮ್‌ಕುಮಾರ್ ನಟನೆಯ ಚೌಕಿದಾರ್‌ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಪ್ಪ - ಮಗನ ಬಾಂಧವ್ಯದ ಎಮೋಷನಲ್ ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಜ್ಜಾಗಿದ್ದಾರೆ.

45 movie OTT: ಕರುನಾಡಲ್ಲಿ ಅಬ್ಬರಿಸಿದ್ದ `45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

`45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Shiva Rajkumar: ರಾಜ್​ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದೀಗ ಸಂಕ್ರಾಂತಿಯಂದೇ ಸಿನಿಪ್ರಿಯರಿಗೆ ಭರ್ಜರಿ ಗಿಫ್ಟ್‌(Gift) ಕೊಟ್ಟಿದೆ.

Photos: ಬೆಜ್ಜವಳ್ಳಿಯಲ್ಲಿ ಸಂಭ್ರಮದ ಸಂಕ್ರಾಂತಿ; ಇರುಮುಡಿ ಹೊತ್ತು ಸಾಗಿದ ನಟ ಶಿವರಾಜ್‌ಕುಮಾರ್

ಬೆಜ್ಜವಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ; ಅಯ್ಯಪ್ಪನ ದರ್ಶನ ಪಡೆದ ಶಿವಣ್ಣ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಉತ್ಸವವು ಸಡಗರದಿಂದ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್ ದಂಪತಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಅವಧೂತ ವಿನಯ್ ಗುರೂಜಿ ಭಾಗವಹಿಸಿದ್ದರು.‌ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವದ ವೇಳೆ ಆಕಾಶದಲ್ಲಿ ಗರುಡ ದರ್ಶನವಾಗಿದ್ದು, ನೂರಾರು ಭಕ್ತರು ದರ್ಶನವನ್ನು ಪಡೆದರು. ಇನ್ನೂ, ಕ್ಷೇತ್ರದ ಸಂಪ್ರದಾಯದಂತೆ ನಟ ಶಿವರಾಜ್‌ಕುಮಾರ್ ಅವರು ಇರುಮುಡಿ ಹೊತ್ತು, ಅಯ್ಯಪ್ಪ ಸ್ವಾಮಿಗೆ ಪವಿತ್ರ ಅಭಿಷೇಕವನ್ನು ನೆರವೇರಿಸಿದರು. ಇಲ್ಲಿವೆ ನೋಡಿ ಫೋಟೋಗಳು.

ನಟಿ ಅಮೂಲ್ಯ ಕಮ್‌ಬ್ಯಾಕ್ ಸಿನಿಮಾಕ್ಕೆ ಹೀರೋ ಸಿಕ್ಕೇಬಿಟ್ರು! ʻಪೀಕಬೂʼ ಚಿತ್ರಕ್ಕೆ ಹೀರೋ ಆದ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ ನಟ ಶ್ರೀರಾಮ್‌

ʻಪೀಕಬೂʼ ಹೀರೋ ಫಿಕ್ಸ್: 'ಗೋಲ್ಡನ್ ಕ್ವೀನ್' ಅಮೂಲ್ಯಗೆ ನಟ ಶ್ರೀರಾಮ್ ಜೋಡಿ

Peekaboo Kannada Movie: ನಟಿ ಅಮೂಲ್ಯ ಅವರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿದ್ದು, ಅವರ ಹೊಸ ಚಿತ್ರದ ನಾಯಕನಾಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಸಿನಿಮಾದ ಹೀರೋ ರಿವಿಲ್ ಟೀಸರ್ ಬಿಡುಗಡೆಯಾಗಿದ್ದು, ಶ್ರೀರಾಮ್ ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Actor Jaggesh: ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌! ಚಿತ್ರರಂಗದ ಬೆಂಬಲ ಇಲ್ಲ ಎಂದು ಪೋಸ್ಟ್‌

ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌!

Piracy Post : ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್‌ ಪೋಸ್ಟ್ ಈ ರೀತಿ ಇದೆ.

ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

ಮೆಜೆಸ್ಟಿಕ್‌ನಲ್ಲಿ ಮಹೇಶ್ ಬಾಬು ಒಡೆತನದ‌ AMB ಸಿನಿಮಾಸ್ ಹೇಗಿದೆ ನೋಡಿ

AMB Cinemas Bengaluru:‌ ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಅತ್ಯುತ್ತಮ ಸಿನೆಮಾ ಅನುಭವಕ್ಕೆ ಹೆಸರಾಗಿರುವ ಮಹೇಶ್‌ ಬಾಬು ಒಡೆತನದ ಎಎಂಬಿ ಸಿನಿಮಾಸ್, ಈಗ ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತರುತ್ತಿದೆ. ಈ ಮಲ್ಟಿಪ್ಲೆಕ್ಸ್‌ನ ಒಳಾಂಗಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ವೈಶಿಷ್ಠ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

Loading...