ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ʻಕೊರಗಜ್ಜʼ ಚಿತ್ರಕ್ಕಾಗಿ ಸೃಷ್ಟಿಯಾಯ್ತು AI ಸಾಂಗ್;‌ ಲಿಯೋನೆಲ್ ಮೆಸ್ಸಿಗೂ ಈ ಹಾಡಿಗೂ ಇದೇ ಒಂದು ಸಂಬಂಧ!

Lionel Messi: ʻಕೊರಗಜ್ಜʼ ಚಿತ್ರದ ಹೊಸ ಹಾಡಿಗೂ ಮೆಸ್ಸಿಗೂ ಇದೇ ಸಂಬಂಧ!

Koragajja Movie Update: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾ ತಂಡವು ಪ್ರೇಕ್ಷಕರಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ವೈರಲ್ ಆಗಿದ್ದ AI (ಕೃತಕ ಬುದ್ಧಿಮತ್ತೆ) ಹಾಡನ್ನು ವಿನ್ಯಾಸಗೊಳಿಸಿದ್ದ ತಂಡವೇ ಈಗ ಕೊರಗಜ್ಜ ಚಿತ್ರದ ಹಾಡನ್ನೂ ಸಿದ್ಧಪಡಿಸಿದೆ.

BBK 12: ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ನಡೆಯುತ್ತಿದೆಯಾ? ಸ್ಪರ್ಧಿಗಳ ಪಿಆರ್‌ ಸ್ಟ್ರಾಟೆಜಿ ಬಗ್ಗೆ ವಿನಯ್‌ ಗೌಡ ಖಡಕ್‌ ಮಾತು

ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ಮಾಡ್ತಿದ್ದಾರಾ? ವಿನಯ್ ಗೌಡ ಏನಂದ್ರು?

Vinay Gowda on BBK 12: ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಸೀಸನ್ 12ರ ಸ್ಪರ್ಧಿಗಳ ಬಗ್ಗೆ ನಡೆಯುತ್ತಿರುವ 'ಪಿಆರ್ ಸ್ಟ್ರಾಟೆಜಿ'ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಗಿಲ್ಲಿ ಅವರನ್ನು ಗುರಿಯಾಗಿಸಿಕೊಂಡು ಕೆಲವು ಪಿಆರ್ ಏಜೆನ್ಸಿಗಳು ನೆಗೆಟಿವ್ ಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

BBK 12: ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟ ಗಿಲ್ಲಿ; ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ!

Bigg Boss 12: ರಾಶಿಕಾ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಮಾಡಿದ ಗಿಲ್ಲಿ ನಟ!

BBK 12 Captaincy Race: ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ. ಗಿಲ್ಲಿ ನಟ ಮತ್ತು ರಘು ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದರೂ, 'ಇಟ್ಟ ಗುರಿ ತಪ್ಪಲ್ಲ' ಟಾಸ್ಕ್‌ನಲ್ಲಿ ಗೆಲ್ಲುವ ಮೂಲಕ ಅವರಿಬ್ಬರೂ ನಾಮಿನೇಷನ್‌ನಿಂದ ಬಚಾವ್‌ ಆಗಿದ್ದಲ್ಲದೆ, ಕ್ಯಾಪ್ಟನ್ಸಿ ರೇಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ರಶ್ಮಿಕಾ ಬಳಿಕ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ ಶ್ರೀಲೀಲಾ: ಡಿಜಿಟಲ್ ಜವಾಬ್ದಾರಿ ಇರಲಿ ಎಂದು ಕಿವಿಮಾತು

ಡೀಪ್‌ಫೇಕ್ ವಿಡಿಯೊ ಬಗ್ಗೆ ನಟಿ ಶ್ರೀಲೀಲಾ ಕಿವಿ ಮಾತು

Sreeleela: ಎಐ ತಂತ್ರಜ್ಞಾನದ ದುರ್ಬಳಕೆ ಮತ್ತು ಡೀಪ್‌ಫೇಕ್ ವಿಡಿಯೊ ಕಂಟೆಂಟ್‌ ಬಗ್ಗೆ ಬಹುಭಾಷಾ ನಟಿ, ಕನ್ನಡತಿ ಶ್ರೀಲೀಲಾ ಧ್ವನಿ ಎತ್ತಿದ್ದಾರೆ. ಈ ತಂತ್ರಜ್ಞಾನಗಳು ಕ್ಷಿಪ್ರವಾಗಿ ಬೆಳೆಯುತ್ತಿರುವ ಕಾಲ ಘಟ್ಟದಲ್ಲಿ ಒಂದಷ್ಟು ಡಿಜಿಟಲ್ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದುವುದು ಅಗತ್ಯ ಕಿವಿ ಮಾತು ಹೇಳಿದ್ದಾರೆ.

'ಧುರಂಧರ್' ಚಿತ್ರದ ಶೂಟಿಂಗ್ ಪಾಕಿಸ್ತಾನದಲ್ಲೇ ನಡೆಯಿತಾ? ಅಲ್ಲಿನ ಸರ್ಕಾರ ಕರಾಚಿಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಿತ್ತಾ? ಇಲ್ಲಿದೆ ಅಸಲಿ ವಿಚಾರ

'ಧುರಂಧರ್' ಚಿತ್ರದ ಶೂಟಿಂಗ್ ಪಾಕಿಸ್ತಾನದಲ್ಲೇ ನಡೆಯಿತಾ?

ರಣವೀರ್ ಸಿಂಗ್ ನಟನೆಯ ಬಾಲಿವುಡ್‌ ಚಿತ್ರ ‘ಧುರಂಧರ್ʼ ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಅಡುತ್ತಿದೆ. ಕರಾಚಿಯ ಲ್ಯಾರಿ ಭೂಗತ ಲೋಕದಿಂದ ಪ್ರೇರಿತವಾದ ಮತ್ತು ಗ್ಯಾಂಗ್ ಜಾಲಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹೀಗಾಗಿ ಇದನ್ನು ನೈಜವಾಗಿ ತೋರ್ಪಡಿಸಲು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸುಮಾರು 6 ಎಕರೆ ವಿಸ್ತೀರ್ಣದಲ್ಲಿ ಪಾಕಿಸ್ತಾನದ ಕರಾಚಿ ಮಾದರಿಯ ದೊಡ್ಡ ಸೆಟ್ ನಿರ್ಮಿಸಲಾಗಿತ್ತು.

Web Series:   ಪಿ. ಸಿ. ಶೇಖರ್ ಡೈರೆಕ್ಷನ್‌ ಮೊದಲ ವೆಬ್ ಸಿರೀಸ್! ಎಲ್ಲಿ ಸ್ಟ್ರೀಮಿಂಗ್‌?

ಪಿ.ಸಿ.ಶೇಖರ್ ಡೈರೆಕ್ಷನ್‌ ಮೊದಲ ವೆಬ್ ಸಿರೀಸ್! ಎಲ್ಲಿ ಸ್ಟ್ರೀಮಿಂಗ್‌?

Web Series: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್ ಗೆ "Just us" ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್ ನ ಮೊದಲನೇ ಕಂತು ಪ್ರಸಾರವಾಗಲಿದೆ.

Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!

ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ ಹಾಗೂ ಗಿಲ್ಲಿ ಹಾವಳಿ ಜೋರಾಗಿದೆ. ರಜತ್‌ ಹಾಗೂ ಚೈತ್ರಾ ನಡುವೆ ಟಾಸ್ಕ್‌ ವೇಳೆ ಸಿಕ್ಕಾಪಟ್ಟೆ ಗಲಾಟೆ ಆಯ್ತು. ಫ್ಯಾಮಿಲಿ ಮ್ಯಾಟರ್‌ ಕೂಡ ಗಲಾಟೆ ಮಧ್ಯದಲ್ಲಿ ತಂದರು. ಇದೀಗ ರಜತ್‌ ಅವರು ಗಿಲ್ಲಿ ಇಟ್ಟುಕೊಂಡು ಚೈತ್ರಾ ಅವರನ್ನ ಉರಿಸುತ್ತಿದ್ದಾರೆ. ಚೈತ್ರಾ-ರಜತ್ ಜಗಳಕ್ಕೆ ಗಿಲ್ಲಿನೇ ಸೇತುವೆ ಆಗಿದ್ದಾರೆ.

Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

Amruthadhaare Serial End: ಭೂಮಿಕಾ-ಗೌತಮ್‌ ದೂರ ಇರೋದು ಕಂಡು ಅಜ್ಜಿ ಒಂದು ಮಾಡಲು ಪಣ ತೊಟ್ಟಿದ್ದಾಳೆ. ಅಜ್ಜಿ ಆಸೆ - ಅಭಿಮಾನಿಗಳ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ನೂರ್ಕಾಲ ಜೊತೆಯಾಗೇ ಇರ್ಬೇಕು ಎನ್ನೋ ಕ್ಯಾಪ್ಷನ್‌ ಕೂಡ ಕೊಟ್ಟಿದೆ ವಾಹಿನಿ. ಇನ್ನು ಧಾರಾವಾಹಿ ಕಥೆ ನೋಡಿ ಸೀರಿಯಲ್‌ ಅಂತ್ಯ ಕಾಣುತ್ತಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

MS Subbulakshmi: ಸಂಗೀತ ಕ್ಷೇತ್ರದ ಸಾಧಕಿ ಎಂಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಈ  ಖ್ಯಾತ ನಟಿ?

ಎಂಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಈ ಖ್ಯಾತ ನಟಿ?

MS Subbulakshmi Biopic: ಎಂ.ಎಸ್. ಸುಬ್ಬುಲಕ್ಷ್ಮಿ ಇಂದಿಗೂ ಭಾರತೀಯ ಸಂಗೀತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದ ಮೊದಲ ಸಂಗೀತಗಾರ್ತಿ ಅವರು, ಮತ್ತು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಅವರ ವೃತ್ತಿಜೀವನದಲ್ಲಿ ತೊಡಗಿಸಿಕೊಂಡವರು. ಇದೀಗ ಭಾರತದ ಶ್ರೇಷ್ಠ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನವನ್ನು ತೆರೆಯ ಮೇಲೆ ತರಲು ವೇದಿಕೆ ಸಜ್ಜಾಗುತ್ತಿದೆ.

Rashmika Mandanna:  ಬ್ಯಾಚುಲರೇಟ್ ಪಾರ್ಟಿಯ ಗುಂಗಲ್ಲಿ ಇದ್ದಾರಾ ರಶ್ಮಿಕಾ? ಫ್ರೆಂಡ್ಸ್‌ ಜೊತೆ ಶ್ರೀಲಾಂಕಾದಲ್ಲಿ ನ್ಯಾಶನಲ್‌ ಕ್ರಶ್‌

ಬ್ಯಾಚುಲರೇಟ್ ಪಾರ್ಟಿಯ ಗುಂಗಲ್ಲಿ ಇದ್ದಾರಾ ರಶ್ಮಿಕಾ?

Bachelorette Party: ರಶ್ಮಿಕಾ ಮಂದಣ್ಣ ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಲಿದ್ದಾರೆ ಎಂದು ವದಂತಿಗಳಿವೆ. ಮದುವೆಯ ವದಂತಿಗಳ ನಡುವೆ, ರಶ್ಮಿಕಾ ಇತ್ತೀಚೆಗೆ ಹುಡುಗಿಯರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬ್ಯಾಚುಲರೇಟ್ ಪ್ರವಾಸ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

Dhurandhar: ಅಕ್ಷಯ್ ಖನ್ನಾ ರೀತಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ರೆ ಹೇಗಿರತ್ತೆ? ವೈರಲ್‌ ಆಯ್ತು ವಿಡಿಯೊ

ಅಕ್ಷಯ್ ಖನ್ನಾ ರೀತಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ರೆ ಹೇಗಿರತ್ತೆ?

Akshaye Khanna: ‘ಧುರಂಧರ್ʼ ಸಿನಿಮಾ ಬಗ್ಗೆಯೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರದ ವಿಲನ್ ಪಾತ್ರಗಳು ಸಖತ್ ಹೈಲೈಟ್ ಆಗಿವೆ. ನಟರಾದ ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಮ್​ಪಾಲ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಿಯಲ್ ಗ್ಯಾಂಗ್​ಸ್ಟರ್ ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ.

Bigg Boss Kannada 12: ʻನೀನು ಸುಳ್ಳಿʼ ಎಂದು ಚೈತ್ರಾಗೆ ನೇರವಾಗಿ ಹೇಳಿದ ರಜತ್‌!

ʻನೀನು ಸುಳ್ಳಿʼ ಎಂದು ಚೈತ್ರಾಗೆ ನೇರವಾಗಿ ಹೇಳಿದ ರಜತ್‌!

Rajath: ಬಿಗ್‌ ಬಾಸ್‌ ಮನೆಯಲ್ಲಿ ಈಗ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಚೈತ್ರಾ ಕುಂದಾಪುರ ಹಾಗೂ ರಜತ್‌ ಅವರು ಬೇರೆ ಬೇರೆ ಟೀಂನಲ್ಲಿ ಆಡುತ್ತಿದ್ದಾರೆ. ಇಬ್ಬರ ಮಧ್ಯೆ ವಾರ್‌ ಆಗಿದೆ. ಚೈತ್ರಾ ಕುಂದಾಪುರ ಅವರು ರಜತ್ಅ ವರ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. ನಿಯಮ ಮುರಿದಿದ್ದೂ ಅಲ್ಲದೇ ಅವರು ಸುಳ್ಳು ಕೂಡ ಹೇಳಿದ್ದಾರೆ ಎಂದು ರಜತ್ ಗರಂ ಆಗಿದ್ದಾರೆ.

Rachita Ram: ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌; ರಚ್ಚು ಫ್ಯಾನ್ಸ್‌ ಫುಲ್‌ ಖುಷ್‌

ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌

Duniya Vijay: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ ʼಲ್ಯಾಂಡ್‌ಲಾರ್ಡ್ʼ ಕೂಡ ಒಂದು. ಸ್ಯಾಂಡಲ್‌ವುಡ್ ಸಲಗ, ದುನಿಯಾ ವಿಜಯ್ ಅಭಿನಯದ ಚಿತ್ರ ಇದಾಗಿದ್ದು, ಸಾರಥಿ ಫಿಲಂಸ್ ಬ್ಯಾನರ್‌ನಡಿ ಮೂಡಿಬರುತ್ತಿದೆ. ಹೇಮಂತ್ ಗೌಡ ಕೆ.ಎಸ್. ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದು, ಜಡೇಶ ಕೆ. ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.

Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

ಕಾವ್ಯ VS ಅಶ್ವಿನಿ; ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ

Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಬಿಗ್‌ ಬಾಸ್‌ ಕೊಟ್ಟಿರುವ ಟಾಸ್ಕ್‌ಗೆ ಸ್ಪರ್ಧಿಗಳು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಾವ್ಯ ಹಾಗೂ ಅಶ್ವಿನಿ ಅವರ ಸರದಿ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಏಕವಚನ ಬಳಕೆ ಮಾಡಿದ್ದಾರೆ.

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ? ಕ್ಲಾರಿಟಿ ಕೊಟ್ಟ ರಾಜ್ ಬಿ ಶೆಟ್ಟಿ

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ?

Rishab Shetty: 45 ಸಿನಿಮಾ ಟ್ರೈಲರ್‌ವನ್ನು ಮೊದಲಿಗೆ ರಿಷಬ್‌ ಅವರು ಲಾಂಚ್‌ ಮಾಡಿದ್ದರು. ಈ ವೇಳೆ ರಾಜ್‌ ಬಿ ಶೆಟ್ಟಿ ಅವರ ಹೆಸರು ಅವರು ಹೇಳಲೇ ಇಲ್ಲ. ರಿಷಬ್ ಶೆಟ್ಟಿ, ‘45’ ಸಿನಿಮಾಕ್ಕೆ ಶುಭ ಕೋರಿ ವಿಡಿಯೋ ಮಾಡಿದ್ದು, ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿಲ್ಲ ಎಂಬ ಚರ್ಚೆಗಳು ಆಗಿದ್ದವು. ರಿಷಬ್ ಶೆಟ್ಟಿಯವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿಯಾಗಲಿ, ರಕ್ಷಿತ್ ಆಗಲಿ ಪೋಸ್ಟ್ ಹಂಚಿಕೊಂಡಿಲ್ಲ.

Kirtan Nadagouda Son: ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು ; ಪವನ್‌ ಕಲ್ಯಾಣ್‌ ಟ್ವೀಟ್‌

ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು

Pawan Kalyan: ಕೀರ್ತನ್‌ ನಾಡಗೌಡ ಮತ್ತು ಅವರ ಪತ್ನಿ ಸಮೃದ್ದಿ ಪಟೇಲ್‌ ಅವರ ಏಕೈಕ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಕಳೆದುಕೊಂಡು ಕುಟುಂಬ ತೀವ್ರ ದುಃಖದಲ್ಲಿದೆ. ಈ ದುರಂತಕ್ಕೆ ಚಿತ್ರರಂಗದ ಹಲವು ಪ್ರಮುಖರು ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

Bhargavi LL.B: ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

Colors Kannada: ಕಲರ್ಸ್ ಕನ್ನಡ ದಲ್ಲಿ ಪ್ರಸಾರ ಆಗ್ತಿರುವ ಭಾರ್ಗವಿ ಎಲ್ ಎಲ್ ಬಿ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾರೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್ ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ. ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ, ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ.

BBK 12: ಶರಂಪರ ಕಿತ್ತಾಡಿದ ಚೈತ್ರಾ ಕುಂದಾಪುರ; ಫೈರ್‌ ಬ್ರ್ಯಾಂಡ್‌ ಜೊತೆ ಅಶ್ವಿನಿ ಗೌಡ ಫೈಟ್, ಸುಸ್ತಾಗಿಹೋದ ಕಾಪ್ಟನ್‌ ರಾಶಿಕಾ ಶೆಟ್ಟಿ!

Bigg Boss 12: ಚೈತ್ರಾ - ಅಶ್ವಿನಿ ಗೌಡ ಕಿತ್ತಾಟ, ಕಾಪ್ಟನ್‌ ರಾಶಿಕಾ ಕೂಗಾಟ

Chaitra Kundapura Vs Ashwini Gowda: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವೆ ದೊಡ್ಡ ಜಗಳವೇ ನಡೆದಿದೆ. ನಾಮಿನೇಷನ್ ಟಾಸ್ಕ್ ವೇಳೆ ಒಬ್ಬರನ್ನೊಬ್ಬರು ಪರಚಿಕೊಂಡಿದ್ದಾರೆ ಎನ್ನಲಾಗಿದ್ದು, ಅಶ್ವಿನಿ ತನ್ನ ಕೈಗೆ ಹೊಡೆದಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಅಂತಿಮವಾಗಿ ಏನಾಯ್ತು? ಮುಂದೆ ಓದಿ.

Lakshmi Nivasa Serial: ಅಂದು ಸೀರಿಯಲ್‌ ಬಗ್ಗೆ ಬೇಸರ! ಇದೀಗ ಧಾರಾವಾಹಿಯಿಂದಲೇ ಔಟ್‌, ಏನಿದು `ಲಕ್ಷ್ಮೀ ನಿವಾಸ' ವಿವಾದ?

ಸೀರಿಯಲ್‌ನಿಂದಲೇ ಔಟ್‌ ಆದ ಖ್ಯಾತ ನಟಿ! ಏನಿದು `ಲಕ್ಷ್ಮೀ ನಿವಾಸ' ವಿವಾದ?

Vijayalakshmi Subramani: ಈ ಸೀರಿಯಲ್‌ ಟಿಆರ್‌ಪಿ ರೇಸ್‌ನಲ್ಲಿಯೂ ಮುಂದೆ ಇದೆ. ಅಷ್ಟೇ ಅಲ್ಲ ಇಲ್ಲಿ ನಟಿಸಿರೋ ಅನೇಕ ಕಲಾವಿದರು ಧಾರಾವಾಹಿಯಿಂದ ಔಟ್‌ ಕೂಡ ಆಗಿದ್ದಾರೆ. ಆದರೆ ಹಿಂದೊಮ್ಮೆ ಅಂಜಲಿ ಸುಧಾಕರ್ ಹೊರಗೆ ಬಂದ್ಮೇಲೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಸಹ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಈಗ ವಿಜಯಲಕ್ಷ್ಮೀ ಸುಬ್ರಮಣಿ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಕಾರಣವೇನು?

Year Ender 2025: ಈ ವರ್ಷ ದಾಂಪತ್ಯ ಬದುಕಿಗೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರೇ ನೋಡಿ; ಇಲ್ಲಿದೆ ಫುಲ್‌ ಲಿಸ್ಟ್‌

Photos: 2025ರಲ್ಲಿ ಮದುವೆಯಾದ ಕನ್ನಡದ ಸೆಲೆಬ್ರಿಟಿಗಳು ಇವ್ರೇ ನೋಡಿ

2025ರಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕೆಲ ಸೆಲೆಬ್ರಿಟಿಗಳು ಅತ್ಯಂತ ಸರಳವಾಗಿ ಮದುವೆಯಾದರೆ, ಮತ್ತೆ ಕೆಲವರು ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. 2025ರ ಈ ವರ್ಷವು ಸೆಲೆಬ್ರಿಟಿಗಳು ತಮ್ಮ ಕಲ್ಯಾಣೋತ್ಸವದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದರು. ಈ ವರ್ಷ ವಿವಾಹವಾದ ಪ್ರಮುಖ ಕನ್ನಡದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಪತಿಯಿಂದಲೇ ಅಪಹರಣಕ್ಕೊಳಗಾದ ಕಿರುತೆರೆ ನಟಿ ಚೈತ್ರಾ! ಈ ಪ್ರಕರಣ ಮುಂದೇನಾಯ್ತು ನೋಡಿ!

ಕಿರುತೆರೆ ನಟಿ ಚೈತ್ರಾ ಅಪಹರಣ ಪ್ರಕರಣ: ಮಗುವಿಗಾಗಿ ಪತಿಯಿಂದಲೇ ಕಿಡ್ನಾಪ್!

Actress Chaitra Kidnap Case: ಖ್ಯಾತ ಕಿರುತೆರೆ ನಟಿ ಚೈತ್ರಾ ಆರ್. ಅವರನ್ನು ಅವರ ಪತಿ, ನಿರ್ಮಾಪಕ ಹರ್ಷವರ್ಧನ್ ಅಪಹರಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಒಂದು ವರ್ಷದ ಮಗಳ ಕಸ್ಟಡಿ ಪಡೆಯುವ ಸಲುವಾಗಿ ಪತ್ನಿ ಚೈತ್ರಾ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಈ ಸಂಬಂಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಮುಂದೇನಾಯ್ತು?

39 ವರ್ಷಗಳ ಹಿಂದೆ ʻಆನಂದ್‌ʼ ಸಿನಿಮಾಕ್ಕೆ ಖರ್ಷಾಗಿದ್ದೆಷ್ಟು?  ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?  ಶಿವಣ್ಣ ಕೊಟ್ಟಿದ್ರು ಪಕ್ಕಾ ಲೆಕ್ಕ!

'ಆನಂದ್' ಸಿನಿಮಾದ ಬಾಕ್ಸ್ ಆಫೀಸ್ ಸೀಕ್ರೆಟ್ ಬಿಚ್ಚಿಟ್ಟ ಶಿವಣ್ಣ!

Anand Movie Box Office: ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ 39 ವರ್ಷ ಪೂರೈಸಿರುವ ಶಿವರಾಜ್‌ಕುಮಾರ್, ತಮ್ಮ ಮೊದಲ ಸಿನಿಮಾ 'ಆನಂದ್' ಕುರಿತು ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದಾರೆ. 1986 ರಲ್ಲಿ ತೆರೆಕಂಡ ಈ ಸಿನಿಮಾದ ಬಜೆಟ್‌ ಮತ್ತು ಬಾಕ್ಸ್ ಆಫೀಸ್‌ ಕಲೆಕ್ಷನ್‌ ಬಗ್ಗೆ ಶಿವಣ್ಣ ಮಾಹಿತಿ ನೀಡಿದ್ದ ವಿಡಿಯೋವೊಂದು ವೈರಲ್‌ ಆಗಿದೆ.

OG Movie: ಹಿಟ್‌ ಸಿನಿಮಾ ಕೊಟ್ಟ ಡೈರೆಕ್ಟರ್‌ಗೆ ಐಷಾರಾಮಿ ಕಾರು ಗಿಫ್ಟ್‌ ನೀಡಿದ‌ ಡಿಸಿಎಂ ಪವನ್‌ ಕಲ್ಯಾಣ್; ಇದರ ಬೆಲೆ ಎಷ್ಟು ಗೊತ್ತಾ?

ಅಬ್ಬಬ್ಬಾ! ಡೈರೆಕ್ಟರ್‌ಗೆ ದುಬಾರಿ ಕಾರು ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!

They Call Him OG Movie: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು 'They Call Him OG' ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಸುಜೀತ್‌ಗೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪವನ್ ಕಲ್ಯಾಣ್ ತಮ್ಮ ವೃತ್ತಿಜೀವನದಲ್ಲಿ ನಿರ್ದೇಶಕರೊಬ್ಬರಿಗೆ ಇಷ್ಟು ದುಬಾರಿ ಗಿಫ್ಟ್ ನೀಡುತ್ತಿರುವುದು ಇದೇ ಮೊದಲು.

45 Movie: ʻಶಿವಣ್ಣ ಚಿನ್ನ ಅಲ್ಲ, ಅಪರಂಜಿʼ; ಹ್ಯಾಟ್ರಿಕ್‌ ಹೀರೋಗೆ ಹೊಗಳಿಕೆಯ ಸುರಿಮಳೆಗೈದ ಉಪೇಂದ್ರ

45 Movie: 'ಶಿವಣ್ಣ ಚಿನ್ನ ಅಲ್ಲ, ಅಪರಂಜಿ..' ಎಂದ ಉಪೇಂದ್ರ

45 Movie Trailer Release: ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ '45' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ರಮೇಶ್ ರೆಡ್ಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.‌ ಟ್ರೇಲರ್‌ ರಿಲೀಸ್‌ ವೇಳೆ, "ಶಿವಣ್ಣ ಚಿನ್ನ ಅಲ್ಲ, ಅಪರಂಜಿ" ಎಂದು ಉಪೇಂದ್ರ ಹೇಳಿದ್ದಾರೆ.

Loading...