ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಮ್ಯಾರೇಜ್ ಪಾರ್ಟಿʼ ಫಸ್ಟ್ ಲುಕ್ ರಿಲೀಸ್‌; ಚಯನ್ ಶೆಟ್ಟಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ತುಳು ನಟ ವಿನೀತ್‌ ಕುಮಾರ್‌

ಚಯನ್ ಶೆಟ್ಟಿ ನಿರ್ದೇಶನದ ʻಮ್ಯಾರೇಜ್ ಪಾರ್ಟಿʼ ಸಿನಿಮಾ ಫಸ್ಟ್ ಲುಕ್ ರಿಲೀಸ್‌

‘ಅಧಿಪತ್ರ’ ಚಿತ್ರದ ನಂತರ ನಿರ್ದೇಶಕ ಚಯನ್ ಶೆಟ್ಟಿ ಸಂಪೂರ್ಣ ಭಿನ್ನವಾದ ಪಕ್ಕಾ ಹಾಸ್ಯಪ್ರಧಾನ ‘ಮ್ಯಾರೇಜ್ ಪಾರ್ಟಿ’ ಚಿತ್ರದೊಂದಿಗೆ ಬಿಡುಗಡೆಗೆ ಸಜ್ಜಾಗಿದ್ದು, ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಶ್ರೀ ವಾರಾಹಿ ಫಿಲಂಸ್ ಅಡಿಯಲ್ಲಿ ಸಂತೋಷ್ ವಿ ನಿರ್ಮಿಸಿರುವ ಈ ಚಿತ್ರದ ಮೂಲಕ ತುಳು ನಟ ವಿನೀತ್ ಕುಮಾರ್ ಕನ್ನಡಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಗೌತಮ್‌ಗೆ ಹೇಗೋ ಭೂಮಿ ರಿಪೋರ್ಟ್‌ ಸಿಕ್ಕಿದೆ. ವೈದ್ಯರ ಬಳಿ ಬಂದು ಕೇಳಿದಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಮೂರನೇ ಹಂತ ಇದ್ದ ಕಾರಣ ವೈದ್ಯರು ಕೂಡ ಕಷ್ಟಕರ ಎಂದಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಶಾಕ್‌ ಆಗಿದ್ದಾನೆ. ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ.

Jodi No 1 Winner: ‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!  ಗೆದ್ದವರಿಗೆ ಏನು ಬಹುಮಾನ?

‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!

Jodi No 1 Winner: 30 ವರ್ಷಗಳಿಂದ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನ ಸಾಗಿಸುತ್ತಾ ಬಂದಿರುವ ಕೋಟೆ ಪ್ರಭಾಕರ್ - ಮಾಲತಿ ದಂಪತಿ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದಾರೆ. 5 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಹಾಗೇ, ವಿನ್ನರ್‌ ಟ್ರೋಫಿ ಸಿಕ್ಕಿದೆ. ‘ಜೋಡಿ ನಂ 1’ ಕಾರ್ಯಕ್ರಮದ ಮೊದಲ ರನ್ನರ್‌ ಅಪ್ ಆಗಿ ಧನರಾಜ್ ಆಚಾರ್ - ಪ್ರಜ್ಞಾ ದಂಪತಿ ಹೊರಹೊಮ್ಮಿದ್ದಾರೆ. ಎರಡನೇ ರನ್ನರ್‌ ಅಪ್ ಸ್ಥಾನ ಪಡೆದವರು ನಯನ ನಾಗರಾಜ್ - ಸುಹಾಸ್ ದಂಪತಿ.

Ramya Krishnan:  'ಕ್ವೀನ್' ಆದ ರಮ್ಯಾ ಕೃಷ್ಣನ್! ಈ ಪಾತ್ರದ ಮೂಲಕ ಮತ್ತೆ ತೆರೆಗೆ

'ಕ್ವೀನ್' ಆದ ರಮ್ಯಾ ಕೃಷ್ಣನ್! ಈ ಪಾತ್ರದ ಮೂಲಕ ಮತ್ತೆ ತೆರೆಗೆ

Ramya Krishnan: ಈ ಚಿತ್ರವನ್ನು ಒನ್ ಸರ್ಕಲ್ ಫಿಲ್ಮ್ಸ್ ಬ್ಯಾನರ್ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಕಾಲಕೇಯ ಪ್ರಭಾಕರ್ ಮತ್ತು ಅಜಯ್ ಘೋಷ್ ಖಳನಾಯಕರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿಕುಮಾರ್ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಥೆ 2006-2010 ರ ನಡುವೆ ನಡೆಯಲಿದೆ.ಈ ಚಿತ್ರವು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿದೆ ಎಂದು ವರದಿಯಾಗಿದೆ.

Daali Dhananjay: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ಕೆಟ್ಟ ಪ್ರಚಾರ; ಡಾಲಿ ಧನಂಜಯ್‌ ಬೇಸರ

‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ಕೆಟ್ಟ ಪ್ರಚಾರ; ಡಾಲಿ ಧನಂಜಯ್‌ ಬೇಸರ

Mother Promise: ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಕೆಲವರು ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಸಹ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್‌ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್ ಸಿಕ್ಕ ಬೆನ್ನಲ್ಲೇ ಲೀಕ್‌ ಆಯ್ತು ರಿಲೀಸ್‌ ಡೇಟ್;‌ ಸಿಎಂ ವಿಜಯ್‌ ಕೊನೇ ಸಿನಿಮಾ ಯಾವಾಗ ಬರತ್ತೆ?

ʻಜನ ನಾಯಗನ್ʼ ರಿಲೀಸ್ ಡೇಟ್ ಲೀಕ್; ಸಿಎಂ ವಿಜಯ್ ಕೊನೇ ಸಿನಿಮಾ ಬರೋದ್ಯಾವಾಗ?

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಿಂದ 12 ಬದಲಾವಣೆಗಳೊಂದಿಗೆ ‘ಎ’ ಪ್ರಮಾಣಪತ್ರ ಪಡೆದ ಬೆನ್ನಲ್ಲೇ, ಯುಕೆ ವಿತರಕರಿಂದ ಜುಲೈ 24 ರ ಬಿಡುಗಡೆ ದಿನಾಂಕ ಲೀಕ್ ಆಗಿದೆ. ಟಿವಿಕೆ ಪಕ್ಷದ ಉಲ್ಲೇಖ ಹಾಗೂ ರಾಷ್ಟ್ರಧ್ವಜದ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದು, ಸದ್ಯ ಎಲ್ಲರ ಗಮನ ರಿಲೀಸ್‌ ಡೇಟ್‌ ಮೇಲಿದೆ.

Actor Arya: ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

Actor Arya: ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ. ಅನಂತನ್ ಕಾಡು ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದ ಆರ್ಯ, ನಿರ್ಮಾಪಕ ವಿನೋದ್ ಮತ್ತು ಇತರರು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಳಸಲಾದ ಕ್ಯಾಮೆರಾ ಮತ್ತು ಬೆಳಕಿನ ಉಪಕರಣಗಳಿಗೆ ಬಾಕಿ ಇರುವ ₹ 1.80 ಕೋಟಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ಕಂಪನಿ ಆರೋಪಿಸಿದೆ.

ಭೂಗತ ಲೋಕದ ಕಥೆ ಹೇಳುತ್ತಾ ಗಮನಸೆಳೆದ ʻರಕ್ಕಿʼ; ರೌಡಿಸಂ ಸಿನಿಮಾಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್‌!

Rakky Movie: ಭೂಗತ ಲೋಕದ ಕಥೆಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್

ವಿಭಿನ್ನ ಚಿತ್ರಗಳ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೌಟುಂಬಿಕ ಎಳೆಯುಳ್ಳ ಭೂಗತ ಲೋಕದ ಕಥಾಹಂದರ ಹೊಂದಿರುವ ‘ರಕ್ಕಿ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಅಪ್ಪು ಅಭಿಮಾನಿ ರಕ್ಕಿ ಸುರೇಶ್ ನಾಯಕನಾಗಿ ನಟಿಸಿದ್ದು, ಬಿ. ಸುರೇಶ್, ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ʻನಾಯಕಿ ಪ್ರಧಾನ ಸಿನಿಮಾವನ್ನ ಯಾರ್ ನೋಡ್ತಾರೆ‌ʼ; ಎಲ್ಲರ ಅಭಿಪ್ರಾಯ ಸುಳ್ಳು ಮಾಡಿದ ನಟಿ ಸಮಂತಾ, 100 ಕೋಟಿ ಕ್ಲಬ್‌ ಸೇರಿದ 'ಮಾ ಇಂಟಿ ಬಂಗಾರಂ'!

100 ಕೋಟಿ ಕ್ಲಬ್‌ಗೆ 'ಮಾ ಇಂಟಿ ಬಂಗಾರಂ'; ಖುಷಿಯಾದ ತುಂಬು ಗರ್ಭಿಣಿ ಸಮಂತಾ!

ನಟಿ ಸಮಂತಾ ಮುಖ್ಯ ಭೂಮಿಕೆಯ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಸಮಂತಾ, ಈ ಸಿನಿಮಾ ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾವನ್ನು ಯಾರೂ ನೋಡುವುದಿಲ್ಲ ಎಂದು ವಿತರಕರು ಆಡಿಕೊಂಡಿದ್ದ ಕಹಿ ಮಾತನ್ನು ನೆನೆದು ಭಾವುಕರಾಗಿದ್ದಾರೆ.

Sunny Deol: ಭಾರತ ಮತ್ತು ಪಾಕ್ ವಿಭಜನೆಯ ಕಥೆ! ಬಟ್ವಾರಾದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

`ಬಟ್ವಾರಾ'ದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

Sunny Deol: ಭಾರತ ಮತ್ತು ಪಾಕ್ ವಿಭಜನೆಯ ನಂತರ ನಡೆದ ಗಲಭೆಗಳು ಮತ್ತು ಅಶಾಂತಿಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಶಬನಾ ಅಜ್ಮಿ ನಟಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಪ್ರೀತಿ ಜಿಂಟಾ, ಕರಣ್ ಡಿಯೋಲ್ ಮ್ತುತ ಅಭಿಮನ್ಯು ಸಿಂಗ್ ನಟಿಸಿದ್ದಾರೆ. ಚಿತ್ರ ಅಗಸ್ಟ್ 14, 2026 ರಂದು ತೆರೆಗೆ ಬರಲಿದೆ. ಬಟ್ವಾರಾ 1947 ಜುಲೈ 15 ರಂದು ತನ್ನ ಎರಡನೇ ಟೀಸರ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

Kulavadhu Actress : ಡಿವೋರ್ಸ್‌ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ

ಡಿವೋರ್ಸ್‌ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ

Kulavadhu Actress : ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದ 'ಕುಲವಧು' (Kulavadhu Serial) ಧಾರಾವಾಹಿ ದೀಪಿಕಾಗೆ ಹೆಚ್ಚಿನ ಪ್ರಖ್ಯಾತಿ ತಂದುಕೊಟ್ಟಿತ್ತು. 7 ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಆಕೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಏಕಾಏಕಿ ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ವೈಯಕ್ತಿಕ ಜೀವನದ ಬಗ್ಗೆ ಹೇಳೋದಾದರೆ ಲವ್‌ ಮ್ಯಾರೆಜ್‌ ಆಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಆಕರ್ಷ್ ಹಾಗೂ ದೀಪಿಕಾ ನಟಿಸಿದ್ದರು. ಆಗ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಒಳಗಾಗಿದ್ದರು.

‌Lenin Movie: ಕೊನೆಗೂ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದ ಅಖಿಲ್‌ ಅಕ್ಕಿನೇನಿ; ವಿಲನ್‌ ಪಾತ್ರ ಮಾಡಿ ಭಾರಿ ಮೆಚ್ಚುಗೆ ಪಡೆದ ಕನ್ನಡ ನಟ ಪ್ರಮೋದ್ ಪಂಜು

ಬಾಕ್ಸ್ ಆಫೀಸ್‌ನಲ್ಲಿ ʻಲೆನಿನ್ʼ ಸುನಾಮಿ; ತೆಲುಗಿನಲ್ಲಿ ಮಿಂಚಿದ ನಟ ಪ್ರಮೋದ್

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 37 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡಿದೆ. ಮುರಳಿ ಕಿಶೋರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಕನ್ನಡದ ನಟ ಪ್ರಮೋದ್ ಪಂಜು 'ವಸಂತ್' ಎಂಬ ಖಳನಾಯಕನಾಗಿ ಅಬ್ಬರಿಸಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

S. Janaki's last rites: ಗಾನಕೋಗಿಲೆ ಎಸ್‌.ಜಾನಕಿ ಪಂಚಭೂತಗಳಲ್ಲಿ ಲೀನ; ಚಿತೆಗೆ ಮೊಮ್ಮಗಳು ಅಪ್ಸರಾ ಅಗ್ನಿಸ್ಪರ್ಶ

ಪಂಚಭೂತಗಳಲ್ಲಿ ಎಸ್‌.ಜಾನಕಿ ಲೀನ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದಲ್ಲಿ ಭಾನುವಾರ ಸಂಜೆ ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್‌.ಜಾನಕಿ ಅರ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೊಮ್ಮಗಳು ಅಪ್ಸರಾ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

S Janaki: ʻನನ್ನ ಅಜ್ಜಿ ಈ ಜಗತ್ತಿಗೆ ಸೇರಿದವರು, ಅವರು ನಮ್ಮೆಲ್ಲರ ಹೃದಯಗಳಲ್ಲೂ ಇರುತ್ತಾರೆʼ; ಅಗಲಿದ ಜಾನಕಮ್ಮರನ್ನು ನೆನೆದ ಮೊಮ್ಮಗಳು, ಮಾಜಿ ಸೊಸೆ ಹೇಳಿದ್ದೇನು?

ʻಸ್ವರ ಸಾಮ್ರಾಜ್ಞಿʼ ಜಾನಕಮ್ಮರನ್ನು ನೆನೆದ ಮೊಮ್ಮಗಳು - ಮಾಜಿ ಸೊಸೆ

ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್‌ ಜಾನಕಿ ಅವರ ಅಂತ್ಯಸಂಸ್ಕಾರವನ್ನು ಮೈಸೂರು ಜಿಲ್ಲೆಯ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಜಾನಕಮ್ಮ ಇಡೀ ಜಗತ್ತಿಗೆ ಸೇರಿದ ಸ್ವತಂತ್ರ ಮನಸ್ಸಿನ ಧ್ವನಿ ಎಂದು ಮೊಮ್ಮಗಳು ಹಾಗೂ ಮಾಜಿ ಸೊಸೆ ಉಮಾ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ.

ಮಗ ಮುರಳಿ ಕೃಷ್ಣ ಜೊತೆ ತಮಿಳಿನ ಸೂಪರ್‌ ಹಿಟ್‌ ʻ96ʼ ಸಿನಿಮಾದಲ್ಲಿ ನಟಿಸಿದ್ದ ಎಸ್‌. ಜಾನಕಿ; ಅಂದು ಅಭಿಮಾನಿಗಳಿಗೆ ಆಗಿದ್ದ ನಿರಾಸೆ ಏನ್‌ ಗೊತ್ತಾ?

ʻ96ʼ ಚಿತ್ರದಲ್ಲಿ ನಟಿಸಿದ್ದ ಜಾನಕಿ; ಆದ್ರೆ ಫ್ಯಾನ್ಸ್‌ಗೆ ಬೇಜಾರಾಗಿದ್ದೇಕೆ?

8 ವರ್ಷಗಳ ಹಿಂದೆ ವಿಜಯ್ ಸೇತುಪತಿ ನಟನೆಯ '96' ಚಿತ್ರದಲ್ಲಿ ಜಾನಕಮ್ಮ ತಮ್ಮ ದಿವಂಗತ ಪುತ್ರ ಮುರಳಿ ಕೃಷ್ಣ ಅವರೊಂದಿಗೆ ನಟಿಸಿದ್ದರು. ನಾಲ್ಕು ನಿಮಿಷಗಳ ಅಪರೂಪದ ದೃಶ್ಯವನ್ನು ಚಿತ್ರದಿಂದ ಕತ್ತರಿಸಿ ತೆಗೆದುಹಾಕಲಾಗಿತ್ತು, ಇದು ಅಂದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು.

ಮಲಯಾಳಂ ರಿಯಾಲಿಟಿ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಗಾಯಕಿ ಜಾನಕಿ; ಹಳೆ ವಿಡಿಯೊ ಮತ್ತೆ ವೈರಲ್‌

ಮಲಯಾಳಂ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಜಾನಕಿ

S Janaki: ಸಾವಿರಾರು ಸೂಪರ್‌ ಹಿಟ್‌ ಕನ್ನಡ ಹಾಡುಗಳ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ. 88 ವರ್ಷದ ಅವರು ಜುಲೈ 11ರಂದು ಮೈಸೂರಿನಲ್ಲಿ ಅಸ್ತಂಗತರಾದರು. 4 ರಾಷ್ಟ್ರ ಪ್ರಸಸ್ತಿ ಮುಡಿಗೇರಿಸಿಕೊಂಡಿದ್ದ ಅವರು ತಮ್ಮ ವೃತ್ತಿ ಜೂವನದ ಅತಯಂತ ಕಠಿಣ ಹಾಡನ್ನು ಮಲಯಾಳಂ ರಿಯಾಲಿಟಿ ಶೋದಲ್ಲಿ ಪ್ರಸ್ತಾವಿಸಿದ್ದರು. ಆ ವಿಡಿಯೊ ಮತ್ತೆ ವೈರಲ್‌ ಆಗಿದೆ.

S Janaki: ಸರ್ಕಾರ ಎಸ್. ಜಾನಕಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಿ: ಬಸವರಾಜ ಬೊಮ್ಮಾಯಿ

ಸರ್ಕಾರ ಎಸ್. ಜಾನಕಿ ಅವರ ಸ್ಮಾರಕ ನಿರ್ಮಾಣ ಮಾಡಲಿ: ಬೊಮ್ಮಾಯಿ

ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದರು. ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿಗಾಗಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ʻಗಾನ ಕೋಗಿಲೆʼ ಎಸ್‌. ಜಾನಕಿ ನಿವ್ವಳ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಸ್ವರ ಸಾಮ್ರಾಜ್ಞಿಯ ಸಂಪತ್ತಿನ ವಿವರ

ಸ್ವರ ಸಾಮ್ರಾಜ್ಞಿ ಎಸ್‌. ಜಾನಕಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದ ಮೇರು ಗಾಯಕಿ ಎಸ್‌. ಜಾನಕಿ ಅವರ ಅಕಾಲಿಕ ನಿಧನ ಇಡೀ ಸಾಂಸ್ಕೃತಿಕ ಜಗತ್ತನ್ನು ಕಣ್ಣೀರಲ್ಲಿ ಮುಳುಗಿಸಿದೆ. ಆರು ದಶಕಗಳ ಕಾಲ 50 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಇವರ ಒಟ್ಟು ಆಸ್ತಿ ಸುಮಾರು 537 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಚೆನ್ನೈನಲ್ಲಿ ಬೃಹತ್ ರಿಯಲ್ ಎಸ್ಟೇಟ್ ಹೂಡಿಕೆ ಹೊಂದಿದ್ದ ಜಾನಕಮ್ಮ ಅವರಿಗೆ ಲೈವ್ ಕಾನ್ಸರ್ಟ್‌ಗಳು ಮತ್ತು ಸಂಭಾವನೆಗಳೇ ಪ್ರಮುಖ ಆದಾಯದ ಮೂಲಗಳಾಗಿದ್ದವು.

18ನೇ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ  ಜಾನಕಮ್ಮ; ಗಾನ ಕೋಗಿಲೆಗೆ ಪತಿ ರಾಮ್‌ ಪ್ರಸಾದ್‌ ನೀಡಿದ ಬೆಂಬಲ ಹೀಗಿತ್ತು

S Janaki: ಜಾನಕಮ್ಮನ ಸಂಗೀತ ಸಾಧನೆಗೆ ಬೆಂಬಲವಾಗಿ ನಿಂತಿದ್ದ ಪತಿ ರಾಮು

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಎಸ್. ಜಾನಕಿ ಹಾಗೂ ಅವರ ಪತಿ ವಿ. ರಾಮ್ ಪ್ರಸಾದ್ ಅವರ ದಾಂಪತ್ಯವು ಇಂದಿನ ತಲೆಮಾರಿಗೆ ಮಾದರಿಯಾಗಿದೆ. ಕೇವಲ 18ನೇ ವಯಸ್ಸಿನಲ್ಲಿ ವಿವಾಹವಾದ ಜಾನಕಮ್ಮಗೆ ಪತಿ ರಾಮ ದೊಡ್ಡ ಬೆಂಬಲವಾಗಿ ನಿಂತಿದ್ದರು.

Amruthadhaare Serial: ಅನುಮಾನ ಹುಟ್ಟಿದೆ ಶಕುಂತಲಾ ನಡೆ! ಜೈದೇವ್‌ ಮುಂದಿನ ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial: ಅನುಮಾನ ಹುಟ್ಟಿದೆ ಶಕುಂತಲಾ ನಡೆ!

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ. ಅಮೃತಧಾರೆಯಲ್ಲಿ ಭೂಮಿಕಾಗೆ ಅವಳ ನೆಚ್ಚಿನ ಪತಿ ಗೌತಮ್‌ ಒಂದು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಭೂಮಿ ಬರೆದ ಡೈರಿಯಲ್ಲಿರುವ ಭಾವುಕ ಬರಹ, ಕವನಗಳನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಆದರೆ ಇದರಲ್ಲಿ ಜೈದೇವ್‌ ಹಾಗೂ ಶಕುಂತಲಾ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ.

S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ

ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ

S Janaki: ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಭಾರತೀಯ ಸಂಗೀತಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಶ್ಲಾಘಿಸಿ ದೇಶಾದ್ಯಂತದಿಂದ ಅವರಿಗೆ ಅನೇಕ ಗೌರವಗಳು ಬರುತ್ತಿವೆ. ಪ್ರಧಾನಿ ಮೋದಿ ಎಸ್. ಜಾನಕಿಯವರ ನಿಧನವನ್ನು 'ಭರಿಸಲಾಗದ ನಷ್ಟ' ಎಂದು ಕರೆದಿದ್ದಾರೆ.

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌! ಶಿವಣ್ಣ ಕಷ್ಟದ ದಿನಗಳ ಸಂಪೂರ್ಣ ಚಿತ್ರವಿದು

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌!

Shiva Rajkumar Birthday: ಶಿವರಾಜ್​ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಗೀತಾ ಶಿವರಾಜ್​ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವರಾಜ್​ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್​ಕುಮಾರ್ ಇದರಲ್ಲಿ ಮಾತನಾಡಿದ್ದಾರೆ.

Ramayana Movie: ‘ರಾಮಾಯಣ’ ಚಿತ್ರದ ಟ್ರೇಲರ್  ರಿಲೀಸ್‌ ಡೇಟ್‌ ಅನೌನ್ಸ್‌!

‘ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

Ramayana Movie: ಸಿನಿಮಾ ಘೋಷಣೆಯಾದ ದಿನದಿಂದಲೂ ಪ್ರೇಕ್ಷಕರಲ್ಲಿ ಚಿತ್ರದ ದೃಶ್ಯ ವೈಭವದ ಬಗ್ಗೆ ಸಾಕಷ್ಟು ಕುತೂಹಲ ಮನೆಮಾಡಿದೆ. ಈ ಟ್ರೇಲರ್ ಮೂಲಕ ಚಿತ್ರದ ಭವ್ಯ ಲೋಕ, ಪಾತ್ರಗಳ ವಿವರ ಹಾಗೂ ಹಾಲಿವುಡ್ ಮಟ್ಟದ ಗ್ರಾಫಿಕ್ಸ್ ಝಲಕ್ ಕಾಣ ಸಿಗಲಿದೆ ಎಂಬ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಚಿತ್ರದ ಬಹುನಿರೀಕ್ಷಿತ ಟ್ರೇಲರ್ (Trailier) ಜುಲೈ 24, 2026 ರಂದು ವಿಶ್ವಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ತಂಡ ಅಧಿಕೃತವಾಗಿ ಘೋಷಿಸಿದೆ.

ಆಕಾಶದೀಪವು ನೀನು

ಆಕಾಶದೀಪವು ನೀನು

ನನ್ನ ಕೀರಲು ಕಂಠದಲ್ಲಿ ಅತ್ಯುತ್ಸಾಹದಿಂದ ನಿಮ್ಮ ಗಾಯನದ ಸಾಲುಗಳನ್ನು ಗುನುಗಿ, ಕೇಳಿದವರು ತಮಾಷೆ ಮಾಡಿದಾಗ ಒಂದು ರೀತಿ ಪುಳಕಗೊಂಡು, ಅದೇ ವೇಳೆ, ಅವರು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತಾಡಿದಾಗ, ಅವರೂ ನಿಮ್ಮ ಹಾಡುಗಳನ್ನು ಗುನುಗತೊಡಗಿದಾಗ, ‘ಅಮ್ಮಾ, ನನ್ನಮ್ಮಾ’ ಎಂದು ನಿಮ್ಮೊಳಿತು ಹಾರೈಸಿ ಈ ನನ್ನ ಅದೃಷ್ಟಶಾಲಿ ಕಿವಿಗಳ ಮೇಲ್ಗಡೆ ಲಟಿಕೆ ಮುರಿದವನು ನಾನು! ಅಮ್ಮಾ, ನನ್ನ ಹೃದಯದ ವೀಣೆ ಮೀಟಿ ಹರಸಿದ ಸ್ವರಧಾರಿಣಿ ನೀವು.

Loading...