ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻ9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆʼ; ʻಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರಗೆ ಬಿಗ್‌ ರಿಲೀಫ್!‌

ʻನಂಬಿದವರೇ ಸ್ವಾರ್ಥಕ್ಕೆ ಬಳಸಿಕೊಂಡ್ರುʼ ಎಂದು ಚೈತ್ರಾ ಹೇಳಿದ್ದೇಕೆ?

'ಬಿಗ್ ಬಾಸ್' ಖ್ಯಾತಿಯ ಫೈರ್‌ ಬ್ರ್ಯಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ ಅವರಿಗೆ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಗಂಗಾವತಿ ನ್ಯಾಯಾಲಯದಲ್ಲಿ ಭಾರಿ ಜಯ ಸಿಕ್ಕಿದೆ. 2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಮತ್ತು ದ್ವೇಷ ಭಾಷಣದ 5 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.

ಉತ್ತರ ಕರ್ನಾಟಕದ ಪ್ರತಿಭೆಗಳ ʻಹುಲಿಬೀರʼ ಸಿನಿಮಾದ ‘ಜಿಗ್ರಿ ದೋಸ್ತ್’ ಸಾಂಗ್‌ ರಿಲೀಸ್‌; ಇದು ಹಳ್ಳಿಗಳ ಉದ್ಧಾರದ ಕಥೆ

ʻಹುಲಿಬೀರʼ ಚಿತ್ರದ ಹೊಸ ಹಾಡು ರಿಲೀಸ್; ಇದು ಹಳ್ಳಿಗಳ ಉದ್ಧಾರದ ಕಥೆ

ಉತ್ತರ ಕರ್ನಾಟಕದ ಪ್ರತಿಭೆಗಳು ಒಗ್ಗೂಡಿ ನಿರ್ಮಿಸಿರುವ, ಹಳ್ಳಿಗಳ ಉದ್ಧಾರ ಹಾಗೂ ನಗರ ವಲಸೆ ತಡೆಯುವ ಸೂಕ್ಷ್ಮ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡು ಬಿಡುಗಡೆಯಾಗಿದೆ. ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದ, ಅಂಜನ್ ಹಾಗೂ ಚೈತ್ರಾ ತೋಟದ ನಟನೆಯ ಈ ಮಣ್ಣಿನ ಸೊಗಡಿನ ಚಿತ್ರಕ್ಕೆ ವೀರಸಮರ್ಥ್ ಜಾನಪದ ಶೈಲಿಯ ಸಂಗೀತ ನೀಡಿದ್ದಾರೆ.

ʻ15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗುವುದರ ಬಗ್ಗೆ ಯೋಚಿಸುವೆʼ; ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಹಳೇ ವಿಡಿಯೋ ವೈರಲ್‌, ಹೊಸ ಕಿರಿಕ್‌ ಶುರು!

ʻ15 ಕೋಟಿ ಕೊಟ್ರೆ ಯೋಚಿಸುವೆʼ ಎಂದಿದ್ದ ಅಪೂರ್ವ ಮುಖಿಜಾ; ಹಳೇ ವಿಡಿಯೋ ವೈರಲ್

'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಖ್ಯಾತಿಯ ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಅವರ ದುಬೈ ಶೇಖ್ ಕುರಿತಾದ ಹಳೇ ವಿಡಿಯೋ ಮತ್ತೆ ವೈರಲ್ ಆಗಿದ್ದು, ಟ್ರೋಲರ್‌ಗಳು ಅಶ್ಲೀಲ ಕಮೆಂಟ್‌ಗಳ ಮೂಲಕ ರೇಟ್ ನಿಗದಿಪಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ತಕಗೆ 12 ಸಾವಿರ ರೂ. ಆಫರ್ ಮಾಡಿದ ಪ್ರಶಾಂತ್ ಎಂಬ ವ್ಯಕ್ತಿಯ ಮೇಲೆ ದೂರು ನೀಡುವ ಮೂಲಕ ಅಪೂರ್ವ ಖಡಕ್ ಆಕ್ಷನ್ ತಗೆದುಕೊಂಡಿದ್ದಾರೆ.

ʻಡಾನ್‌ 3ʼ ವಿವಾದದ ಎಫೆಕ್ಟ್‌: ಮುಂದಿನ ಒಂದೂವರೆ ವರ್ಷ ರಣವೀರ್‌ ಸಿಂಗ್‌ ಫುಲ್‌ ಸೈಲೆಂಟ್;‌ ಮಾತುಕತೆ ಇಲ್ಲ, ಸಂದರ್ಶನವೂ ಇಲ್ಲ!

ಮಾಧ್ಯಮಗಳ ಜೊತೆ ರಣವೀರ್ ಮಾತುಕತೆ ಬಂದ್; ಮುಂದಿನ ಒಂದೂವರೆ ವರ್ಷ ನೋ ಸಂದರ್ಶನ

'ಡಾನ್ 3' ಸಿನಿಮಾದ ವಿವಾದ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೇಳಿದ್ದ 45 ಕೋಟಿ ರೂ. ಪರಿಹಾರದ ಕಿರಿಕ್‌ನಿಂದ ಬೇಸತ್ತಿರುವ ನಟ ರಣವೀರ್ ಸಿಂಗ್, ಕನಿಷ್ಠ 18 ತಿಂಗಳುಗಳ ಕಾಲ ಯಾವುದೇ ಮಾಧ್ಯಮ ಸಂದರ್ಶನ ನೀಡದಿರಲು ನಿರ್ಧರಿಸಿದ್ದಾರೆ. ಸದ್ಯ ಜೈ ಮೆಹ್ತಾ ನಿರ್ದೇಶನದ, ಕೋವಿಡ್ ಹಿನ್ನೆಲೆಯುಳ್ಳ ಎಐ ಆಧಾರಿತ ಜಾಂಬಿ ಸಿನಿಮಾ 'ಪ್ರಳಯ್' ಚಿತ್ರದ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಿದ್ದಾರೆ.

ಶಾಹಿದ್‌ ಕಪೂರ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಹೇಗಿದೆ? ರಶ್ಮಿಕಾ - ಕೃತಿ ಸನೋನ್‌ ಅಭಿನಯಕ್ಕೆ ಸಿಕ್ತಾ ಫುಲ್‌ ಮಾರ್ಕ್ಸ್?

ರಶ್ಮಿಕಾ ನಟನೆಯ ಕಾಕ್‌ಟೇಲ್ 2 ಚಿತ್ರಕ್ಕೆ ಪ್ರೇಕ್ಷಕರ ರೆಸ್ಫಾನ್ಸ್ ಹೇಗಿದೆ?

Cocktail 2 Twitter Review: ಹೋಮಿ ಅದಾಜಾನಿಯಾ ನಿರ್ದೇಶನದ, ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರ ಜೂನ್ 19 ರಂದು ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದಿದೆ. 14 ವರ್ಷಗಳ ಹಿಂದಿನ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.

Second Love: ನಟಿ ರಮ್ಯಾ ಕೃಷ್ಣನ್ ಕ್ರೇಜಿ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಪ್ಯಾಚ್-ಅಪ್ ಮಾಡ್ತಾರೆ ರಾಜಮಾತೆ ಶಿವಗಾಮಿ!

ರಮ್ಯಾ ಕೃಷ್ಣನ್ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಮತ್ತೊಂದು ಚಾನ್ಸ್

'ಬಾಹುಬಲಿ' ಖ್ಯಾತಿಯ ನಟಿ ರಮ್ಯಾ ಕೃಷ್ಣನ್ 'ಜಿಯೋ ಹಾಟ್‌ಸ್ಟಾರ್' ಒಟಿಟಿಯಲ್ಲಿ 'ಸೆಕೆಂಡ್ ಲವ್' ಎಂಬ ವಿಭಿನ್ನ ತಮಿಳು ಡೇಟಿಂಗ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಪ್ರೀತಿಯಲ್ಲಿ ಬ್ರೇಕಪ್ ಆಗಿ ನೊಂದಿರುವ 30 ವರ್ಷದೊಳಗಿನ 12 ಯುವಕ-ಯುವತಿಯರು ಎರಡನೇ ಪ್ರೀತಿ ಹುಡುಕಿಕೊಳ್ಳಲು ಈ ಶೋ ವೇದಿಕೆಯಾಗಲಿದ್ದು, ರಮ್ಯಾ ಕೃಷ್ಣನ್ ಮಾರ್ಗದರ್ಶಕಿಯಾಗಿ ಇರಲಿದ್ದಾರೆ.

Maa Inti Bangaram Twitter Review: ಸಮಂತಾ ನಟನೆಯ ಹೊಸ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು? ತೆಲುಗಿನಲ್ಲಿ ದಿಗಂತ್‌ಗೆ ಸಿಗಲಿದೆಯಾ ಗೆಲುವು?

ʻಮಾ ಇಂಟಿ ಬಂಗಾರಂʼ ಟ್ವಿಟರ್ ರಿವ್ಯೂ: ಕಮಾಲ್ ಮಾಡಿದ್ರಾ ನಟಿ ಸಮಂತಾ?

ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್‌ 19) ಬಿಡುಗಡೆಯಾಗಿದ್ದು, ಎಕ್ಸ್ (ಟ್ವಿಟ್ಟರ್) ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾದಲ್ಲಿ ಸಮಂತಾ ಸೊಸೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಬಿಡುಗಡೆಗೆ ಮುನ್ನವೇ 35 ಕೋಟಿ ರೂ. ಬಿಸಿನೆಸ್ ಮಾಡಿದ್ದ ಈ ಚಿತ್ರವನ್ನು ಸ್ವತಃ ಸಮಂತಾ ಅವರೇ ನಿರ್ಮಾಣ ಮಾಡಿದ್ದಾರೆ.

2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ‌ ದಿಲೀಪ್‌ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್

ʻಬ್ರಹ್ಮಗಂಟುʼ ಸೀರಿಯಲ್‌ಗೆ 2 ವರ್ಷ; ನಟಿ ದಿಯಾ ಪಾಲಕ್ಕಲ್ ಭಾವುಕ ಪೋಸ್ಟ್‌

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಬ್ರಹ್ಮಗಂಟು’ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಮೈಬಣ್ಣದ ತಾರತಮ್ಯದ ವಿರುದ್ಧದ ಸೂಕ್ಷ್ಮ ಕಥಾಹಂದರ ಹೊಂದಿರುವ ಈ ಸೀರಿಯಲ್‌ನ ನಾಯಕಿ ದಿಯಾ ಪಾಲಕ್ಕಲ್ (ದೀಪಾ) ಈ ಸಂದರ್ಭದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮಿಳು ನಟ ಧನುಷ್‌ 55ನೇ ಸಿನಿಮಾಗೆ ʻಓಂʼ ಟೈಟಲ್‌; ರಿಲೀಸ್‌ ಡೇಟ್‌ ಘೋಷಣೆ!

ಅಂದು ಶಿವಣ್ಣ, ಇಂದು ಧನುಷ್;‌ ಗೆಲುವು ತಂದುಕೊಡಲಿದೆಯಾ ʻಓಂʼ?

ತಮಿಳು ನಟ ಧನುಷ್ ಅವರ 55ನೇ ಚಿತ್ರಕ್ಕೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದ್ದು, ಅಕ್ಟೋಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿದ್ದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

Bigg Boss Kannada: ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

Bigg Boss Kannada: ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ. ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.

'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್‌ ಖುಷಿಯಾದ ನಟ ವಿನೋದ್‌ ಪ್ರಭಾಕರ್

ʻನನ್ನ ತಂದೆ ಟೈಗರ್ ಪ್ರಭಾಕರ್ ಅವ್ರ ಮುಂದುವರಿದ ಅಧ್ಯಾಯ ನಾನುʼ ಎಂದ ವಿನೋದ್

ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ, ಕೆ ಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ಸಂತೋಷ್ ನಾರಾಯಣನ್ ಸಂಗೀತ ಹಾಗೂ 'ಆಲ್ ಓಕೆ' ಅಲೋಕ್ ಧ್ವನಿಯಾಗಿರುವ ಈ ಗೀತೆಯ ಬಗ್ಗೆ ಭಾರಿ ಮೆಚ್ಚುಗೆ ಸಿಕ್ಕಿದೆ.

Salman Khan: ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?

ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?

Salman Khan: ರಾಜ್ ಮತ್ತು ಡಿಕೆ ಜೊತೆ ಆಕ್ಷನ್-ಕಾಮಿಡಿ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ ಎನ್ನಲಾಗಿತ್ತು . ಆಕ್ಷನ್-ಕಾಮಿಡಿ ಚಿತ್ರವನ್ನು ಮುಗಿಸಿದ ನಂತರ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನ್ವೇಷಿಸುತ್ತಿದ್ದಾರೆ. ಭಾರತೀಯ ಇತಿಹಾಸದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲಿ ಒಂದನ್ನು ಆಧರಿಸಿದ ದೊಡ್ಡ ಪ್ರಮಾಣದ ಅವಧಿಯ ನಾಟಕಕ್ಕಾಗಿ ಸಲ್ಮಾನ್ ಫರ್ಹಾನ್ ಅಖ್ತರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ, ಸಂಸದ ರವಿ ಕಿಶನ್? ʻಪೆದ್ದಿʼ ಕಲಾವಿದನ  'ಗುಟ್ಖಾಸನ' ವಿಡಿಯೋ ಸಖತ್‌ ವೈರಲ್!

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ರವಿ ಕಿಶನ್? ಪೆದ್ದಿ ನಟ ಸಖತ್‌ ಟ್ರೋಲ್‌

ಜನಪ್ರಿಯ ಬಹುಭಾಷಾ ನಟ ಮತ್ತು ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುವಾಗ ಏನನ್ನೋ ಅಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿದೆ. ಅವರು ಜಗಿಯುತ್ತಿರುವುದು ಗುಟ್ಕಾ ಅಥವಾ ಖೈನಿ ಇರಬಹುದು ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

Suhasini Mulay: ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಮದುವೆಯಾದ ʻಲಗಾನ್‌ʼ ನಟಿ

60ನೇ ವಯಸ್ಸಿನಲ್ಲಿ ಮದುವೆಯಾದ ʻಲಗಾನ್‌ʼ ನಟಿ!

Suhasini Mulay: ಸುಹಾಸಿನಿ ಮುಲೇ, 60 ನೇ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ವಿಜ್ಞಾನಿ ಅತುಲ್ ಗುರ್ತು ಜೊತೆ ವಿವಾಹವಾದರು. ಫೇಸ್‌ಬುಕ್‌ನಲ್ಲಿ ಪರಿಚಯ ಆಗಿ ಇದೀಗ ಪ್ರೀತಿಗೆ ತಿರುಗಿ ಅಂತೂ ಮದುವೆ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಾನತೆಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ತಾನು ಎಂದಿಗೂ ಕಂಡುಹಿಡಿಯದ ಕಾರಣ ತಾನು ಮೊದಲು ಮದುವೆಯಾಗಲಿಲ್ಲ ಎಂದು ಸುಹಾಸಿನಿ ಹೇಳಿದರು.

ಕನ್ನಡಿಗ ʻಎನ್‌ಕೌಂಟರ್‌ ದಯಾನಾಯಕ್‌ʼ ಬಯೋಪಿಕ್‌ ಮಾಡಲು ಮುಂದಾದ ನಿರ್ದೇಶಕ ರಾಮ್ ಗೋಪಾಲ್ ವರ್ಮ

RGV ನಿರ್ದೇಶನದಲ್ಲಿ ʻಎನ್‌ಕೌಂಟರ್ ಸ್ಪೆಷಲಿಸ್ಟ್ʼ ದಯಾ ನಾಯಕ್ ಬಯೋಪಿಕ್?

ಮುಂಬೈ ಭೂಗತ ಲೋಕದ ಕ್ರೈಮ್ ಥ್ರಿಲ್ಲರ್ ಚಿತ್ರಗಳ ಮಾಂತ್ರಿಕ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಪ್ರಸಿದ್ಧ ಎನ್‌ಕೌಂಟರ್ ಸ್ಪೆಷಲಿಸ್ಟ್ ಕನ್ನಡಿಗ ದಯಾ ನಾಯಕ್ ಅವರ ಬಯೋಪಿಕ್ ನಿರ್ದೇಶಿಸಲು ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಈ ಚಿತ್ರವನ್ನು ಆರ್‌ಜಿವಿ ಅವರ ಸೂಪರ್ ಹಿಟ್ 'ಕಂಪನಿ' ಸಿನಿಮ್ಯಾಟಿಕ್ ಯೂನಿವರ್ಸ್ ಜೊತೆ ಲಿಂಕ್ ಮಾಡುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.

Photos: ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ; ನಾಯಕಿಯರಾಗಿ ಕೀರ್ತಿ‌ ಸುರೇಶ್ - ಕೃತಿ ಶೆಟ್ಟಿ

ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ

ತೆಲುಗು ಚಿತ್ರರಂಗದ 'ಹಿಟ್ ಮಿಷನ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಅನಿಲ್ ರವಿಪುಡಿ ಅವರ ಮತ್ತೊಂದು ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಈ ಚಿತ್ರದಲ್ಲಿ 'ವಿಕ್ಟರಿ' ವೆಂಕಟೇಶ್ ಹಾಗೂ ನಂದಮೂರಿ ಕಲ್ಯಾಣ್ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಪ್ರಮುಖ ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್ ಅವರು ಚಿತ್ರದ ಚಿತ್ರಕಥೆಯನ್ನು (ಸ್ಕ್ರಿಪ್ಟ್) ನಿರ್ದೇಶಕ ಅನಿಲ್ ರವಿಪುಡಿ ಹಾಗೂ ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಒಳಗೊಂಡ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರೆ, ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಹಿರಿಯ ನಿರ್ದೇಶಕ-ನಿರ್ಮಾಪಕ ಕೆ. ರಾಘವೇಂದ್ರ ರಾವ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.

ʻಕಾಂತಾರʼ ರೀತಿಯಲ್ಲೇ 2 ಪಾರ್ಟ್‌ಗಳಲ್ಲಿ ಬರಲಿದೆ ರಿಷಬ್‌ ಶೆಟ್ಟಿಯ ಹೊಸ ಸಿನಿಮಾ; ಇದರ ಬಜೆಟ್‌ 500 ಕೋಟಿ!

ರಿಷಬ್ ಶೆಟ್ಟಿ ನಟನೆಯ 'ಛತ್ರಪತಿ ಶಿವಾಜಿ ಮಹಾರಾಜ್' ಬಗ್ಗೆ ಬಿಗ್‌ ಅಪ್ಡೇಟ್!‌

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗಲಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಐತಿಹಾಸಿಕ ಚಿತ್ರದ ಮೊದಲ ಭಾಗ 2028ರಲ್ಲಿ ಹಾಗೂ ಎರಡನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆಯಂತೆ.

ʻಕೂಲಿʼ ನಂತರ ಮತ್ತೊಂದು ತಮಿಳು ಸಿನಿಮಾದಲ್ಲಿ ʻರಿಯಲ್‌ ಸ್ಟಾರ್‌ʼ ಉಪೇಂದ್ರ; ಈ ಚಿತ್ರಕ್ಕೆ‌ ನಿರ್ದೇಶಕ ಸಿದ್ದಲಿಂಗಯ್ಯ ಮೊಮ್ಮಗ ಹೀರೋ

ʻಕೂಲಿʼ ಬೆನ್ನಲ್ಲೇ ಮತ್ತೊಂದು ತಮಿಳು ‌ಚಿತ್ರಕ್ಕೆ ಉಪೇಂದ್ರ ಗ್ರೀನ್‌ಸಿಗ್ನಲ್

'ರಿಯಲ್ ಸ್ಟಾರ್' ಉಪೇಂದ್ರ ಅವರು ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕಿದ್ದಾರೆ. ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ 'ಸ್ಟೋನ್ ಬೆಂಚ್' ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ವಿನಯ್ ರಾಜ್‌ಕುಮಾರ್  ನಟನೆಯ ʻಗ್ರಾಮಾಯಣʼ ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆ; ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ ನಟ ʻಲೂಸ್‌ ಮಾದʼ ಯೋಗಿ

ವಿನಯ್ ರಾಜ್‌ಕುಮಾರ್ ಅಭಿನಯದ ʻಗ್ರಾಮಾಯಣʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್

ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಗ್ರಾಮೀಣ ಸೊಗಡಿನ ಬಹುನಿರೀಕ್ಷಿತ 'ಗ್ರಾಮಾಯಣ' ಸಿನಿಮಾ ಇದೇ ಜುಲೈ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ 5ನೇ ಲಿರಿಕಲ್ ಸಾಂಗ್ ‘ಏನೇ ಹೇಳು ಕುಸುಮ’ ಬಿಡುಗಡೆ ಮಾಡಿ ಚಿತ್ರತಂಡ ಈ ಪ್ರಕಟಣೆ ನೀಡಿದೆ.

ಜೀ ಕನ್ನಡದಲ್ಲಿ ʻಡಾರ್ಲಿಂಗ್‌ʼ ಕೃಷ್ಣ ನಟನೆಯ ʻಲವ್ ಮಾಕ್‌ಟೇಲ್ 3ʼ ಪ್ರೀಮಿಯರ್; ಇದು ತಂದೆ - ಮಗಳ ಭಾವನಾತ್ಮಕ ಕಥೆ ಇರುವ ಸಿನಿಮಾ

ʻಲವ್ ಮಾಕ್‌ಟೇಲ್ 3ʼ ಸಿನಿಮಾದ ಕಿರುತೆರೆ ಪ್ರೀಮಿಯರ್ ದಿನಾಂಕ ಘೋಷಣೆ

'ಲವ್ ಮಾಕ್‌ಟೇಲ್ 3' ಸಿನಿಮಾವು ಇದೇ ಜೂನ್ 21ರ ಭಾನುವಾರ ಸಂಜೆ 4.30ಕ್ಕೆ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಥಮ ಬಾರಿಗೆ ಪ್ರಸಾರವಾಗಲಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ದತ್ತು ಮಗಳು ನಿಧಿಯನ್ನು ಉಳಿಸಿಕೊಳ್ಳಲು ತಂದೆ ಆದಿ ಕಾನೂನು ಹಾಗೂ ಸಮಾಜದ ವಿರುದ್ಧ ನಡೆಸುವ ಭಾವನಾತ್ಮಕ ಹೋರಾಟದ ಕಥೆಯಿದೆ.

Pawan Kalyan: ಅಭಿಮಾನಿಯ ಈ ಆಸೆ ಈಡೇರಿಸಿದ ಪವನ್ ಕಲ್ಯಾಣ್; ಭಾರೀ ಮೆಚ್ಚುಗೆ

ಅಭಿಮಾನಿಯ ಈ ಆಸೆ ಈಡೇರಿಸಿದ ಪವನ್ ಕಲ್ಯಾಣ್; ಭಾರೀ ಮೆಚ್ಚುಗೆ

Pawan Kalyan: ತೆಲಂಗಾಣದ ಹನಮಕೊಂಡದ ಜಿಲ್ಲೆಯ ಹನುಮಾನ್ ನಗರದ ನಿವಾಸಿ 17 ವರ್ಷದ ನಿರಂಜನ್ ಮಾರಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ ಈತ. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಎನ್ನುವ ಆಸೆಯನ್ನು ನಿರಂಜನ್ ವ್ಯಕ್ತಪಡಿಸುತ್ತಿದ್ದರು. ಈ ವಿಷಯ ತಿಳಿದು ಪವನ್ ಆತನ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಕಳೆದರು.

Actress Roopika: ಹಸೆಮಣೆ ಏರಲು ಸಜ್ಜಾದ  'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ; ಹುಡುಗ ಯಾರು?

ಹಸೆಮಣೆ ಏರಲು ಸಜ್ಜಾದ 'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ

Actress Roopika: ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ರೀತಿಯ ಕಿರುತೆರೆ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ರೂಪಿಕಾ ಬಣ್ಣ ಹಚ್ಚಿದ್ದರು. 'ಚೆಲುವಿನ ಚಿಲಿಪಿಲಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.ತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

Samantha Ruth Prabhu: ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

Samantha Ruth Prabhu: ವಿಜಯ್ ಮತ್ತು ಸಮಂತಾ ರುತ್ ಪ್ರಭು ಅವರು ‘ಕತ್ತಿ’, ‘ಥೇರಿ’ ಮತ್ತು ‘ಮೆರ್ಸಲ್’ಸೇರಿದಂತೆ ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ, ವರ್ಷಗಳ ನಂತರ, ಈ ಜೋಡಿ ಮತ್ತೆ ಒಂದಾಗಿದೆ. ಬುಧವಾರ (ಜೂನ್ 17) ಚೆನ್ನೈನಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಬಗ್ಗೆ ದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದಾರೆ.

Drishyam Movie: 'ದೃಶ್ಯಂ 3' ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ದೃಶ್ಯಂ 3 ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

Drishyam Movie: . ಮೊದಲ ಎರಡು ಆವೃತ್ತಿಗಳನ್ನು ರೀಮೇಕ್ ಮಾಡಲಾಗಿದ್ದರೂ, ಮೂರನೆಯದನ್ನು ರೀಮೇಕ್ ಮಾಡಲಾಗಿಲ್ಲ. ಕುತೂಹಲಕಾರಿಯಾಗಿ, ಚಿತ್ರದ ಬಗ್ಗೆ ವಿವಾದವೊಂದು ಹರಡಿತ್ತು, ಮೊದಲ ಆವೃತ್ತಿಯ ರಿಮೇಕ್ ಅನ್ನು ನಿರ್ದೇಶಿಸಿದ ನಿರ್ದೇಶಕಿ ಶ್ರೀ ಪ್ರಿಯಾ, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿ, ಚಿತ್ರದ ತೆಲುಗು ಹಕ್ಕುಗಳನ್ನು ತಾನು ಹೊಂದಿರುವುದಾಗಿ ಹೇಳಿಕೊಂಡರು.

Loading...