ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

Jr NTR: ಜೂನಿಯರ್ ಎನ್‌ಟಿಆರ್‌ ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್‌ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.

Naga Chaitanya: ಹೊಸ ಹೇರ್ ಸ್ಟೈಲ್, ರಗಡ್‌ ಲುಕ್‌; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

Naga Chaitanya: ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಅವರ ಮುಂಬರುವ ಪೌರಾಣಿಕ ಥ್ರಿಲ್ಲರ್ ಚಿತ್ರ ವೃಷಕರ್ಮ. ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಲುಕ್‌ನ ಫೋಟೋಗಳನ್ನು (Look) ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

ʻಜನ ನಾಯಗನ್‌ʼ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; 120 ಕೋಟಿ ರೂ. ಡೀಲ್‌ ಕ್ಯಾನ್ಸಲ್‌ ಆಯ್ತಾ? ಏನಿದು ಹೊಸ ಮ್ಯಾಟರ್?‌

Thalapathy Vijay: 'ಜನ ನಾಯಗನ್' 120 ಕೋಟಿ ರೂ. ಡೀಲ್ ಕ್ಯಾನ್ಸಲ್ ಆಗತ್ತಾ?

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್'ಗೆ ಸಂಕಷ್ಟಗಳ ಸರಮಾಲೆಯೇ ಮುಂದುವರಿದಿದೆ. ಸೆನ್ಸಾರ್ ಮಂಡಳಿಯ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡಲ್ಪಡುತ್ತಿದೆ. ಈ ವಿಳಂಬದಿಂದ ಬೇಸತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋ, ಈ ಹಿಂದೆ ಮಾಡಿಕೊಂಡಿದ್ದ 120 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದವನ್ನು ರದ್ದುಗೊಳಿಸಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ.

Suryavamsha Serial : ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಜತ್ಕರ್‌ ಭಾವುಕ ಪೋಸ್ಟ್‌

ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಭಾವುಕ ಪೋಸ್ಟ್‌

Suryavamsha Serial : ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಜೊತೆ ಜೊತೆಯಲಿ’. ಈ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಜತ್ಕರ್‌ ಮಿಂಚಿದ್ದರು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್‌ ಡ್ಯೂಪರ್‌ ಹಿಟ್‌ ಸಿನಿಮಾ ‘ಸೂರ್ಯವಂಶ’ . ಈ ಸಿನಿಮಾ 1999 ರಲ್ಲಿ ತೆರೆಗೆ ಬಂದಿತ್ತು. ಇದೇ ಹೆಸರಿನ ‘ಸೂರ್ಯವಂಶ’ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದರು ಅನಿರುದ್ಧ್‌. ‘ಉದಯ ಟಿವಿ’ಯ ‘ಸೂರ್ಯವಂಶ’ ಶೀಘ್ರದಲ್ಲೇ ತನ್ನ ಪಯಣವನ್ನ ಮುಕ್ತಾಯಗೊಳಿಸಲಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರು‌ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

'ಧುರಂಧರ್ 2' ಚಿತ್ರದ ಮೊದಲ ಹಾಡು ರಿಲೀಸ್‌; ಮೋಡಿ ಮಾಡ್ತಿದೆ ಪಂಜಾಬಿ ಶೈಲಿಯ ʻಆರಿ ಆರಿʼ ಸಾಂಗ್, ಜಾದೂ ಮಾಡಿದ ಬಾಂಬೆ ರಾಕರ್ಸ್‌

'ಧುರಂಧರ್ 2' ಹವಾ ಶುರು; 'ಆರಿ ಆರಿ' ಹಾಡಿನಿಂದ ಮೋಡಿದ ʻಬಾಂಬೆ ರಾಕರ್ಸ್‌ʼ

ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಚಿತ್ರದ ಮೊದಲ ಹಾಡು 'ಆರಿ ಆರಿ' ಗುರುವಾರ (ಮಾ.12) ಬಿಡುಗಡೆಯಾಗಿದ್ದು, ಪಂಜಾಬಿ ಶೈಲಿಯ ಸಂಗೀತದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶಾಶ್ವತ್ ಸಚದೇವ್ ಸಂಗೀತ ನೀಡಿದ್ದು, ಜನಪ್ರಿಯ 'ಬಾಂಬೆ ರಾಕರ್ಸ್‌' ತಂಡವು ಈ ಹಾಡಿಗೆ ಕೆಲಸ ಮಾಡಿದೆ.

Kannada Serial TRP: ಈ ಧಾರಾವಾಹಿಗೆ ಮೊದಲ ಸ್ಥಾನ! ಲಿಸ್ಟ್‌ ಇಲ್ಲಿದೆ

Kannada Serial TRP: ಈ ಧಾರಾವಾಹಿಗೆ ಮೊದಲ ಸ್ಥಾನ! ಲಿಸ್ಟ್‌ ಇಲ್ಲಿದೆ

Kannada Serial TRP: ಧಾರಾವಾಹಿಗಳಿಗೆ ಅದರದ್ದೇ ಆದ ಫ್ಯಾನ್ಸ್‌ ವರ್ಗವಿದೆ. ಟಿವಿಯಲ್ಲಿ ಸೀರಿಯಲ್‌ ಜೊತೆಗೆ ರಿಯಾಲಿಟಿ ಶೋಗಳನ್ನು ಜನ ತುಂಬಾ ಇಷ್ಟ ಪಟ್ಟು ನೋಡ್ತಾರೆ. ರಿಯಾಲಿಟಿ ಶೋಗಳನ್ನು ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಅನ್ನೋದು ಗುರುವಾರ ರಿವೀಲ್‌ ಆಗುತ್ತಿದೆ. ಹಾಗಾದ್ರೆ ಈ ವಾರ TRP ಅಲ್ಲಿ ಧಾರಾವಾಹಿಗಳಗೆ ಇರೋ ಸ್ಥಾನಗಳು ಏನು?

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ  ಶವವಾಗಿ ಪತ್ತೆ

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ

Hari Murali : ಬಾಲನಟನಾಗಿ ಖ್ಯಾತಿ ಗಳಿಸಿದ್ದ ಮಲಯಾಳಂ ನಟ ಹರಿ ಮುರಳಿ 27 ನೇ ವಯಸ್ಸಿನಲ್ಲಿ ನಿಧನರಾದರು. ಕೇರಳದ ಪಯ್ಯನ್ನೂರಿನ ಅಣ್ಣೂರಿನಲ್ಲಿರುವ ಅವರ ಮನೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ಮುರಳಿಯವರ ಮೃತದೇಹವನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಸಾವಿನ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ʻ8 ವರ್ಷಗಳಿಂದ ಮೌನವಾಗಿದ್ದೆ, ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲʼ; 24 ಗಂಟೆಗಳ ಡೆಡ್‌ಲೈನ್ ಕೊಟ್ಟ ರಶ್ಮಿಕಾ ಮಂದಣ್ಣ

'8 ವರ್ಷದಿಂದ ಮೌನವಾಗಿದ್ದೆ, ಇನ್ಮುಂದೆ ಸಾಧ್ಯವಿಲ್ಲ'; ರಶ್ಮಿಕಾ ಮಂದಣ್ಣ ಗರಂ

Rashmika Mandanna: ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲ್ ಮತ್ತು ಕಿರುಕುಳದ ವಿರುದ್ಧ ನಟಿ ರಶ್ಮಿಕಾ ಮಂದಣ್ಣ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಸಂಭಾಷಣೆಯನ್ನು ತಿರುಚಿ ವೈರಲ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸುಳ್ಳು ಸುದ್ದಿ ಹರಡುವ ಮಾಧ್ಯಮಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

ʻಅವಳು ಹಿಂದೂವಾಗಿಯೇ ಇರುತ್ತಾಳೆ, ನಾನು ಮುಸ್ಲಿಂ ಆಗಿರುತ್ತೇನೆ, ಇಲ್ಲಿ ಲವ್‌ ಜಿಹಾದ್‌ ಪ್ರಶ್ನೆಯೇ ಇಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಖಾನ್ ಸ್ಪಷ್ಟನೆ

ʻಮತಾಂತರವಾಗಿಲ್ಲ, ಧರ್ಮ ಬದಲಿಸಿಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಸ್ಪಷ್ಟನೆ

Monalisa Bhosle Marriage Controversy: ಮಹಾಕುಂಭಮೇಳದಲ್ಲಿ ಗಮನಸೆಳೆದಿದ್ದ ಮೊನಾಲಿಸಾ ಭೋಂಸ್ಲೆ ಮತ್ತು ನಟ ಫರ್ಮಾನ್ ಖಾನ್ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, 'ಲವ್ ಜಿಹಾದ್' ಆರೋಪ ಕೇಳಿಬಂದಿವೆ. ಆದರೆ ಈ ಜೋಡಿ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ..

Darling Krishna: ʻಲವ್‌ ಮಾಕ್‌ಟೇಲ್‌ 3ʼ‌ ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಟಿಕೆಟ್ ಬುಕಿಂಗ್‌ ಓಪನ್; ಬೆಂಗಳೂರಿನಲ್ಲಿ ಹೇಗಿದೆ ರೆಸ್ಪಾನ್ಸ್?‌

ʻಲವ್‌ ಮಾಕ್‌ಟೇಲ್‌ 3ʼ‌‌ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್‌ ಓಪನ್

Love Mocktail 3 Paid Premiere Show: `ಡಾರ್ಲಿಂಗ್' ಕೃಷ್ಣ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಸಿನಿಮಾ ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮಾರ್ಚ್ 18ರಂದು ಆಯೋಜಿಸಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

MGR ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್‌; ಕ್ಲಾಸ್‌ ತೆಗೆದುಕೊಂಡ ತಮಿಳು ನಟ ವಿಶಾಲ್

ಎಂಜಿಆರ್‌ಗೆ ಅವಹೇಳನ: ತೆಲುಗು ನಟ ರಾಜೇಂದ್ರ ಪ್ರಸಾದ್ ವಿರುದ್ಧ ವಿಶಾಲ್ ಗರಂ

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ದಿಗ್ಗಜ ನಟ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ (MGR) ಬಗ್ಗೆ ನೀಡಿದ ಕೀಳುಮಟ್ಟದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ತಮ್ಮ ಮಾತಿನ ಮೂಲಕ ಎಂಜಿಆರ್ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ತಮಿಳು ನಟ ವಿಶಾಲ್ ತೀವ್ರವಾಗಿ ಖಂಡಿಸಿದ್ದಾರೆ.

ʻಆತ್ಮೀಯ ಸ್ನೇಹಿತರು, ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರುʼ; ಪತ್ರಕರ್ತ ಕೆ. ಜೆ. ಕುಮಾರ್‌ ನಿಧನಕ್ಕೆ ಕನ್ನಡದಲ್ಲಿಯೇ ರಜನಿಕಾಂತ್‌ ಸಂತಾಪ

ಪತ್ರಕರ್ತ ಕೆ ಜೆ ಕುಮಾರ್ ನಿಧನಕ್ಕೆ ರಜನಿಕಾಂತ್ ಕಂಬನಿ; ಕನ್ನಡದಲ್ಲಿ ಟ್ವೀಟ್

ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ (74) ಬುಧವಾರ ಸಂಜೆ ಮೈಸೂರಿನಲ್ಲಿ ನಿಧನರಾದರು. ಕಳೆದ 5 ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತ ಗೆಳೆಯರಾಗಿದ್ದರು. ಕುಮಾರ್‌ ನಿಧನಕ್ಕೆ ರಜನಿಕಾಂತ್ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ, "ನನ್ನ ಆರಂಭದ ಕಾಲದ ಪ್ರೋತ್ಸಾಹಕರು" ಎಂದು ಕಂಬನಿ ಮಿಡಿದಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ, ಆರೋಪಿಗಳಲ್ಲಿ ಸುದೀಪ್‌ ಫ್ಯಾನ್ಸ್‌ ಕೂಡ ಇದ್ದಾರೆ!

ದರ್ಶನ್‌ ಪತ್ನಿ ಬಗ್ಗೆ ಅಶ್ಲೀಲ ಕಾಮೆಂಟ್; ಆರೋಪಿಗಳಲ್ಲಿ ಕಿಚ್ಚನ ಫ್ಯಾನ್ಸ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 45ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ನಟ ಸುದೀಪ್ ಅವರ ಅಭಿಮಾನಿಗಳೂ ಸೇರಿದ್ದು, ನಕಲಿ ಐಡಿಗಳ ಮೂಲಕ ಇವರು ಕಿರುಕುಳ ನೀಡುತ್ತಿದ್ದರು ಎಂಬುದು ಸಾಬೀತಾಗಿದೆ.

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರಕ್ಕೆ ಏಜೆಂಟ್ ಕಾವೇರಿಯಾಗಿ ಎಂಟ್ರಿ ಕೊಟ್ಟ ಖ್ಯಾತ ನಟಿ ಅದಿತಿ ಬಾಲನ್

'ಏಜೆಂಟ್ ಕಾವೇರಿ'ಯಾಗಿ ಕರುನಾಡಿಗೆ ಎಂಟ್ರಿ ಕೊಟ್ಟ ತಮಿಳು ನಟಿ ಅದಿತಿ ಬಾಲನ್

'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದ ಮೂಲಕ ತಮಿಳಿನ ಪ್ರತಿಭಾನ್ವಿತ ನಟಿ ಅದಿತಿ ಬಾಲನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್‌ನಲ್ಲಿ ಅದಿತಿ 'ಏಜೆಂಟ್ ಕಾವೇರಿ' ಎಂಬ ಪ್ರಬಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅದಿತಿ ಬಾಲನ್ ಸೇರ್ಪಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Bhagyalakshmi Serial: ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು? ಭಾಗ್ಯಲಕ್ಷ್ಮೀ ಶೂಟಿಂಗ್ ಕ್ಲಿಪ್‌ ವೈರಲ್‌

ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು? ಭಾಗ್ಯಲಕ್ಷ್ಮೀ ಶೂಟಿಂಗ್ ಕ್ಲಿಪ್‌ ವೈರಲ್‌

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಕುತೂಹಲ ಘಟ್ಟ ತಲುಪಿದೆ. ತಾಂಡವ್ ಒಳ್ಳೆಯವನಾಗೋ ಪ್ರಯತ್ನದಲ್ಲಿ ಇದ್ದಾನೆ. ಭಾಗ್ಯಾಳ ಬಳಿ ಕ್ಷಮೆ ಕೇಳಿ ಮನೆಗೆ ಬರಬೇಕು ಎಂಬ ಪ್ರಯತ್ನಿಸುತ್ತಿದ್ದಾನೆ. ಇದು ನಾಟಕವೋ ಅಥವಾ ನಿಜಕ್ಕೂ ಆತ ಬದಲಾಗಿದ್ದಾನೋ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ ಆಗುವ ಪ್ರಯತ್ನದಲ್ಲಿ ಇದ್ದಾನೆ. ಚಿತ್ರೀಕರಣದ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟಾಗಿದೆ. ಸದ್ಯ ಸೀರಿಯಲ್‌ನ ಮೇಕಿಂಗ್ ಸೀನ್ ವೈರಲ್ ಆಗಿದೆ.

Anand Deverakonda: ರಶ್ಮಿಕಾ-ವಿಜಯ್‌ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ

ರಶ್ಮಿಕಾ-ವಿಜಯ್‌ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ

Anand Deverakonda: ನಟ ಆನಂದ್ ದೇವರಕೊಂಡ ಬುಧವಾರ ತಮ್ಮ ಸಹೋದರ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಹಲವಾರು ಸ್ನೇಹಿತರ ಜೊತೆಗೂಡಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ. ಮಾರ್ಚ್ 11 ರಂದು ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಸಂಭ್ರಮದ ನಡುವೆ ನೃತ್ಯ ಮಾಡುವುದನ್ನು ಕಾಣಬಹುದು.

Amruthadhaare Serial: ಕೇಡು ಬಯಸೋ ಕೇಡಿ ಜೇಡಿಗೆ, ಪಾಠ ಕಲಿಸೋಕೆ ರೆಡಿಯಾದ್ರು ಭೂಮಿ ಟೀಚರ್!

ಕೇಡು ಬಯಸೋ ಕೇಡಿ ಜೇಡಿಗೆ, ಪಾಠ ಕಲಿಸೋಕೆ ರೆಡಿಯಾದ್ರು ಭೂಮಿ ಟೀಚರ್!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕೇಡುತನ ಜೋರಾಗಿದೆ. ಒಂದು ಕಡೆ ಮಲ್ಲಿ ಸಿವಿಲ್‌ ಪರೀಕ್ಷೆಗೆ ತಯಾರಾಗುತ್ತಿದ್ದರೆ, ಇನ್ನೊಂದು ಕಡೆ ಜೈದೇವ್‌ ತನ್ನ ಕುತಂತ್ರದಿಂದ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ. ಅಷ್ಟೇ ಅಲ್ಲ ಈ ವಿಚಾರ ಭೂಮಿಕಾಗೂ ಗೊತ್ತಾಗಿದೆ. ಹೀಗಾಗಿ ಒಂದು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾಳೆ.

Agnisakshi Serial:  'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?

'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?

Agnisakshi Serial Kannada: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ . ಬರೋಬ್ಬರಿ ಏಳು ವರ್ಷಗಳ ಕಾಲ ತೆರೆ ಕಂಡ ಧಾರಾವಾಹಿ ಕನ್ನಡಿಗರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಸೀರಿಯಲ್ ನಟ-ನಟಿಯರು ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಡಿಂಪಲ್ ಕಪಲ್ ಗಳಾದ ಸಿಧ್ದಾರ್ಥ್ ಮತ್ತು ಸನ್ನಿಧಿ ವೀಕ್ಷಕರ ಮೋಸ್ಟ್ ಫೇವರಿಟ್ ಕಪಲ್ ಗಳಾಗಿದ್ದರು. ಇವತ್ತಿಗೂ ಕೂಡ ಈ ಜೋಡಿಯನ್ನು ಜನ ಇಷ್ಟಪಡುತ್ತಾರೆ. ಕಲರ್ಸ್ ಕನ್ನಡದಲ್ಲಿ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧವಾಗಿದೆ. ಚಾನೆಲ್ ಹಂಚಿಕೊಂಡಿರುವ ಪ್ರೋಮೋ ವೀಕ್ಷಕರ ಗಮನ ಸೆಳೆದಿದೆ, ಹಾಗಾದ್ರೆ ಈ ಸೀರಿಯಲ್‌ ನಾಯಕ ಯಾರು?

ಬಾಯ್‌ಫ್ರೆಂಡ್‌ ಫರ್ಮಾನ್‌ ಖಾನ್‌ ಜೊತೆ ಕೇರಳದಲ್ಲಿ ಮದುವೆಯಾದ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ; ʻತಂದೆಯಿಂದ ರಕ್ಷಣೆ ಕೊಡಿʼ ಅಂತ ಪೊಲೀಸರಿಗೆ ಮನವಿ

ಕೇರಳದಲ್ಲಿ ಫರ್ಮಾನ್‌ ಖಾನ್‌ ಜೊತೆ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ ಮದುವೆ

ʻಕುಂಭಮೇಳ ಗರ್ಲ್‌ʼ ಖ್ಯಾತಿಯ ಮೊನಾಲಿಸಾ ಭೋಂಸ್ಲೆ ಅವರು ಕೇರಳದ ಪೂವಾರ್‌ನಲ್ಲಿ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಂದೆ ವಿಜಯ್ ಸಿಂಗ್ ಅವರ ವಿರೋಧದ ನಡುವೆಯೂ ಪೊಲೀಸರ ರಕ್ಷಣೆ ಪಡೆದ ಮೊನಾಲಿಸಾ, ದೇವಸ್ಥಾನದಲ್ಲಿ ವಿವಾಹವಾದರು.

ʻಅಪ್ಪಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆʼ; ಗಂಡು ಮಗುವಿಗೆ ತಂದೆಯಾದ ಡೈರೆಕ್ಟರ್‌ ‌ʻಸಿಂಪಲ್ʼ ಸುನಿ

ಸಿಂಪಲ್ ಸುನಿ ಮನೆಗೆ ಬಂದ ಅಪ್ಪಟ ಅಪರಂಜಿ; ಗಂಡು ಮಗುವಿನ ತಂದೆಯಾದ ನಿರ್ದೇಶಕ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ 'ಸಿಂಪಲ್' ಸುನಿ ಅವರು ತಂದೆಯಾಗಿದ್ದಾರೆ. ಅವರ ಪತ್ನಿ ಸೌಂದರ್ಯ ಅವರು ಮಾರ್ಚ್ 11ರ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಸುನಿ ಹಂಚಿಕೊಂಡಿದ್ದಾರೆ.

ನಾಲ್ಕೇ ವರ್ಷಕ್ಕೆ ಮುರಿದುಬಿತ್ತು ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ; ಪತಿಯಿಂದ ಸಿಕ್ಕ ಜೀವನಾಂಶ ಎಷ್ಟು?

ಹನ್ಸಿಕಾ ದಾಂಪತ್ಯಕ್ಕೆ ಅಂತ್ಯ; 4 ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು ಏಕೆ?

Hansika Motwani Divorce: ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

'ನನಗೆ ಮದುವೆ, ಲವ್ ಅಂದ್ರೆ ಇಷ್ಟವಿಲ್ಲ...'; 'ಯಜಮಾನ' ಸೀರಿಯಲ್‌ ನಟಿ ಮಧುಶ್ರೀ ಭೈರಪ್ಪ ಹಿಂಗ್ಯಾಕೆ ಹೇಳಿದ್ರು?

'ನಮ್ಮಣ್ಣ ರೌಡಿ ಗೊತ್ತಾ'; ಪ್ರಪೋಸ್‌ ಮಾಡಿದವರಿಗೆ ಹೆದರಿಸುತ್ತಿದ್ದ ಮಧುಶ್ರೀ

Madhushree Byrappa: 'ಯಜಮಾನ' ಧಾರಾವಾಹಿಯ ನಟಿ ಮಧುಶ್ರೀ ಭೈರಪ್ಪ ಅವರು ಇತ್ತೀಚೆಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಮದುವೆ ಮತ್ತು ಪ್ರೀತಿಯ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಿದ್ದಾರೆ.

ʻಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 2 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಿದೆʼ; ಭವಿಷ್ಯ ನುಡಿದ ರಾಮ್‌ ಗೋಪಾಲ್‌ ವರ್ಮಾ

ʻಧುರಂಧರ್‌ 2ʼ ಕಲೆಕ್ಷನ್‌ ಬಗ್ಗೆ ಹೇಳಿ ಸೌತ್ ಸಿನಿಮಾಗಳಿಗೆ ಆರ್‌ಜಿವಿ ಟಾಂಗ್

Dhurandhar 2 Movie: ನಟ ರಣವೀರ್ ಸಿಂಗ್ ಅಭಿನಯದ ʻಧುರಂಧರ್‌ 2ʼ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮಾರ್ಚ್ 18ರಂದೇ ದೇಶಾದ್ಯಂತ 4,000 ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ಚಿತ್ರ 2,000 ಕೋಟಿ ರೂ. ಗಳಿಸಲಿದೆ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ʻಕಾವ್ಯ ನನ್ನನ್ನು ಅಪ್ಪಾಜಿ ಅಂತ ಕರೀತಾಳೆ, ನನ್ನ ಮಗಳ ಸ್ಥಾನ ತುಂಬಿದಳು, ನನಗೀಗ ಮೂವರು ಹೆಣ್ಣು ಮಕ್ಕಳುʼ; ʻಕೆಂಡಸಂಪಿಗೆʼ ನಟ ನಾಗರಾಜ್‌ ಕೋಟೆ

ʻನನ್ನ ಮಗಳ ಸ್ಥಾನ ತುಂಬಿದಳುʼ; ಕಾವ್ಯ ಬಗ್ಗೆ ನಟ ನಾಗರಾಜ್ ಕೋಟೆ ಭಾವುಕ ಮಾತು

'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಕಾವ್ಯ ಶೈವಗೆ ತಂದೆಯಾಗಿ ನಟಿಸಿದ್ದವರು ನಾಗರಾಜ್ ಕೋಟೆ. ಹೆಣ್ಣು ಮಕ್ಕಳು ಇಲ್ಲದ ನನಗೆ ಕಾವ್ಯ ಮಗಳ ಸ್ಥಾನ ತುಂಬಿದ್ದಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಾಗರಾಜ್‌ ಕೋಟೆ. "ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಹೃದಯದಲ್ಲಿ ಪ್ರೀತಿ ಇದ್ದರೆ ಸಾಕು" ಎಂದು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Loading...