ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Hanuman Ansh: ‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

Hanuman Ansh: ಹನುಮಾನ್ ಅಂಶ್ (Hanuman ansh) ಬಾಲಿವುಡ್ ಸೆಲೆಬ್ರಿಟಿಗಳಿಂದ ಬೆಂಬಲ ಪಡೆಯುತ್ತಿದ್ದಾರೆ, ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು. ಅವರು ಚಿತ್ರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು ಮತ್ತು ತಮ್ಮ ಅನುಭವದ ಒಂದು ನೋಟವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯ ಪ್ರಜೆ ಮುಖ್ಯಮಂತ್ರಿಯಾದರೆ ಏನಾಗುತ್ತೆ? ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್

‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್ ‌

Common Man Movie: ಗೌರಿಶಂಕರ್‌ ನಟನೆಯ ʻಕಾಮನ್‌ ಮ್ಯಾನ್ʼ‌ ಸಿನಿಮಾವು ಇದೇ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಪ್ರಜೆಯೊಬ್ಬ ಮುಖ್ಯಮಂತ್ರಿಯಾದಾಗ ಎದುರಾಗುವ ಸವಾಲುಗಳನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ತಮ್ಮ 106ನೇ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

Amrita Mahotsav: ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರ: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಪ್ರದೋಷ್ ಮಾಫಿ ಸಾಕ್ಷಿಗೆ ಬ್ರೇಕ್? ದರ್ಶನ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

Renukaswamy Murder Case: ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೆಳ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ನಿಯಮಾನುಸಾರ ಮರು ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

Bigg Boss kannada 13: ನಾಮಿನೇಷನ್ ಕಾವು! ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

Bigg Boss kannada 13: ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ , ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂದಿದ್ದ ಶಿವರಾಜ್‌ಕುಮಾರ್; ʻಸಾರಿʼ ಅಂತ್ಹೇಳಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ʻಕರುನಾಡ ಚಕ್ರವರ್ತಿʼ

‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂದು, ಬಳಿಕ ʻಸಾರಿʼ ಕೇಳಿದ ನಟ ಶಿವಣ್ಣ!

Shivarajkumar Hindi Sstatement: ತಮ್ಮ ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ನಟ ಶಿವರಾಜ್‌ಕುಮಾರ್ ಕ್ಷಮೆಯಾಚಿಸಿ ತೆರೆ ಎಳೆದಿದ್ದಾರೆ. ಹೊಸ ಚಿತ್ರ ‘ಒರಿಜಿನಲ್ ಮಾನ್‌ಸ್ಟರ್’ ಮುಹೂರ್ತದಲ್ಲಿ ಮಾತಿನ ಭರದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿದ್ದರು. ಕೂಡಲೇ ಎಚ್ಚೆತ್ತ ಅವರು, ಆ ಮಾತು ಬಾಯಿತಪ್ಪಿ ಬಂದಿದೆ ಎಂದಿದ್ದಾರೆ.

'ಖಾಲಿ ಪಲಾವ್‌ ತಾಂಡವ್‌ ರಾಮ್, ಗಗನ್‌ ಚಿನ್ನಪ್ಪ ಕೊಳೆತ ಟೊಮೇಟೊ..'; ಕಿರಣ್‌ - ಲಿಖಿತ್‌ ಮಾತಿನಿಂದ ಹೊತ್ತಿಕೊಳ್ಳುತ್ತಾ ಬೆಂಕಿ?

ಬಿಗ್‌ ಬಾಸ್‌ ಕನ್ನಡ 13: ತಾಂಡವ್‌ ರಾಮ್‌ಗೆ ಖಾಲಿ ಪಲಾವ್ ಅಂತ ಹೇಳಿದ್ಯಾರು?

Bigg Boss Kannada 13: ಬಿಗ್‌ ಬಾಸ್‌ ಮನೆಯ ವಿಮಾನದೊಳಗೆ ಸಹಸ್ಪರ್ಧಿಗಳ ವಿರುದ್ಧ ಹೊತ್ತಿಕೊಂಡ ಗಾಸಿಪ್ ಕಿಚ್ಚು ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ತಾಂಡವ್ ರಾಮ್‌ರನ್ನು ‘ಖಾಲಿ ಪಲಾವ್’ ಹಾಗೂ ಗಗನ್ ಚಿನ್ನಪ್ಪರನ್ನು ‘ಕೊಳೆತ ಟೊಮೇಟೊ’ ಎಂದು ವ್ಯಂಗ್ಯವಾಡಲಾಗಿದೆ.

'ಮಿರ್ಜಾಪುರ್' ಬಾಕ್ಸ್ ಆಫೀಸ್ ಕಲೆಕ್ಷನ್: ಸೋಮವಾರದ ಪರೀಕ್ಷೆಯಲ್ಲಿ ಪಂಕಜ್ ತ್ರಿಪಾಠಿ ಪಾಸ್! ನಾಲ್ಕು ದಿನಗಳ ಗಳಿಕೆ ಎಷ್ಟು?

'ಮಿರ್ಜಾಪುರ್' ಸಿನಿಮಾದ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಉಡೀಸ್!‌

Mirzapur Movie Collection: 'ಮಿರ್ಜಾಪುರ್' ಸಿನಿಮಾವು ಮೊದಲ ಸೋಮವಾರದ (ಸೆ.7) ಗಲ್ಲಾಪೆಟ್ಟಿಗೆ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಭಾರತದಲ್ಲಿ ನಾಲ್ಕನೇ ದಿನ 17.10 ಕೋಟಿ ರೂಪಾಯಿ ಗಳಿಸಿ, ಒಟ್ಟಾರೆ ಜಾಗತಿಕವಾಗಿ 154.05 ಕೋಟಿ ರೂಪಾಯಿ ಬಾಚಿಕೊಂಡಿದೆ.

ಕನ್ನಡ - ಹಿಂದಿಯಲ್ಲಿ ನಿರ್ಮಾಣವಾಗಲಿದೆ 'ಒರಿಜಿನಲ್‌ ಮಾನ್‌ಸ್ಟರ್‌'; ಶಿವರಾಜ್‌ಕುಮಾರ್‌ ಈ ಸಿನಿಮಾ ಒಪ್ಪಿಕೊಂಡಿದ್ದೇಕೆ?

ಕನ್ನಡ - ಹಿಂದಿಯಲ್ಲಿ ಶಿವಣ್ಣ ನಟನೆಯ ‘ಒರಿಜಿನಲ್‌ ಮಾನ್‌ಸ್ಟರ್‌’ ನಿರ್ಮಾಣ

'ಒರಿಜಿನಲ್‌ ಮಾನ್‌ಸ್ಟರ್‌' ಸಿನಿಮಾವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಸೆಟ್ಟೇರಿದೆ. ಸುಮಾರು ಎರಡೂವರೆ ವರ್ಷಗಳ ಬಿಡುವಿನ ನಂತರ ಆರ್. ಚಂದ್ರು ನಿರ್ದೇಶನಕ್ಕೆ ಮರಳಿದ್ದು, ಶಿವರಾಜಕುಮಾರ್ ನಾಯಕರಾಗಿ ಬಣ್ಣಹಚ್ಚಿದ್ದಾರೆ. ತೆಲುಗು ಖ್ಯಾತ ನಟ ಸುನೀಲ್ ಪ್ರಮುಖ ಪಾತ್ರದಲ್ಲಿದ್ದು, ಆಗಲೇ ಚಿತ್ರೀಕರಣ ಶುರುವಾಗಿದೆ.

Bigg Boss 13: 'ಇಲ್ಲಿ ಫ್ಯಾಮಿಲಿ ತರ ಇರಲು ಬಂದಿದ್ದರೆ, ಕಬ್ಬನ್‌ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿ'; ಒಂದೇ ದಿನಕ್ಕೆ ಅಸಲಿ ಆಟ ಶುರು ಮಾಡಿದ ಲಿಖಿತ್‌ ಗೊಂದಿ!

ʻಕಬ್ಬನ್ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿʼ; ಲಿಖಿತ್ ಹೀಗೆ ಹೇಳಿದ್ಯಾರಿಗೆ?

Bigg Boss Kannada 13: ಬಿಗ್‌ ಬಾಸ್‌ ಅಂಗಳಕ್ಕೆ ಬಂದ ಮೊದಲ ದಿನವೇ ಸ್ಪರ್ಧಿ ಲಿಖಿತ್ ಗೊಂದಿ ಧೂಳೆಬ್ಬಿಸಿದ್ದಾರೆ. ದೇಹದ ತೂಕದ ಕುರಿತು ಆಡಿದ ಮಾತು ಮನೆಯೊಳಗೆ ಪ್ರಥಮಾ ಪ್ರಸಾದ್ ಆಕ್ರೋಶಕ್ಕೆ ಗುರಿಯಾಗಿದೆ. ಸಂಸಾರ ಮಾಡಲು ಇದು ಕಬ್ಬನ್ ಪಾರ್ಕ್ ಅಲ್ಲವೆಂದು ಕಾಲೆಳೆದ ಲಿಖಿತ್ ಇತರರಿಗೂ ಸಡ್ಡುಹೊಡೆದಿದ್ದಾರೆ.

Bigg Boss Kannada 13: Stupid ಆಗಿ ಮಾತನಾಡಬೇಡಿ; ಕಿರಣ್ ಶಾಸ್ತ್ರಿ ಹಾಸ್ಯಕ್ಕೆ 'ಪ್ರಥಮ' ವಾರ್ನಿಂಗ್!

ಕಿರಣ್ ಶಾಸ್ತ್ರಿ ಹಾಸ್ಯಕ್ಕೆ 'ಪ್ರಥಮ' ವಾರ್ನಿಂಗ್!

Bigg Boss Kannada 13: ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದಂದಲೂ ಫ್ರಥಮಾ (Prathama) ಹಾಗೂ ಕಿರಣ್‌ ಶಾಸ್ತ್ರಿ (Kiran shastri) ಅವರಿಗೆ ಅಷ್ಟಕಷ್ಟೆ. ಈಗ ಮತ್ತೊಮ್ಮೆ ಜಗಳವಾಗಿದೆ.

Bipasha Basu: ಬಾಡಿ ಶೇಮಿಂಗ್ ವಿರುದ್ಧ ಬಿಪಾಶಾ ಖಡಕ್ ಉತ್ತರ

Bipasha Basu: ಬಾಡಿ ಶೇಮಿಂಗ್ ವಿರುದ್ಧ ಬಿಪಾಶಾ ಖಡಕ್ ಉತ್ತರ

Bipasha Basu: ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗೆ ಹೆಣ್ಣು ಮಗು 'ದೇವಿ' ಜನಿಸಿತು. ಬಿಪಾಶಾ ಸ್ವಲ್ಪ ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದಾರೆ ಮತ್ತು ಗರ್ಭಧಾರಣೆಯ ನಂತರ ಅವರ ತೂಕ ಹೆಚ್ಚಾಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೆರಿಗೆಯ ನಂತರ ಅವರು ಅನುಭವಿಸಿದ "ಪ್ರಮುಖ ಟ್ರೋಲಿಂಗ್" ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಹೆರಿಗೆಯ ನಂತರದ ತೂಕ ಹೆಚ್ಚಳಕ್ಕಾಗಿ ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದ ಬಾಲಿವುಡ್ ನಟಿ ಬಿಪಾಶಾ ಬಸು, ನಕಾರಾತ್ಮಕ ಕಾಮೆಂಟ್‌ಗಳಿಗೆ ತಕ್ಕ ತಿರುಗೇಟು ನೀಡಿದ್ದಾರೆ.

Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

Amruthadhaare Serial: ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಆದರೀಗ ವೀಕ್ಷಕರು ಊಹಿಸದೇ ಇರೋ ಅನೌನ್ಸ್‌ಮೆಂಟ್‌ ಮಾಡಿದೆ. ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ ಬದುಕಿನ ಹಾದಿ ಸುಲಭದಲ್ಲ.ಊಹಿಸೋಕಾಗ್ದಿರೋ ಅಮೃತಧಾರೆಯ ಹೊಸ ಅಧ್ಯಾಯ ಕಾಯ್ತಾ ಇರಿ ಎಂದು ಹೊಸ ಪ್ರೋಮೋ ಹಂಚಿಕೊಂಡಿದೆ.

Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ;ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

Bigg Boss Kannada 13: ಕೆಲವು ಸ್ಪರ್ಧಿಗಳು ಇನ್ನೂ ಫ್ಲೈಟ್‌ನಲ್ಲಿಯೇ ಇದ್ದಾರೆ. ನಾಮಿನೇಷನ್‌ ಪ್ರಕ್ರಿಯೆ ಕೂಡ ನಡೆದಿದೆ. ಬಹುತೇಕರು ಟಾರ್ಗೆಟ್‌ ಮಾಡಿದ್ದು ಮಹಾಕವಿ ಮಂಜು ಅವರನ್ನ. ಸದ್ಯ ಹೆಚ್ಚಾಗಿ ಸೌಂಡ್‌ ಮಾಡುತ್ತಿರೋದು ಕಾಮನ್‌ ಮ್ಯಾನ್‌ಗಳು. ನಿನ್ನೆಯ ಎಪಿಸೋಡ್‌ನಲ್ಲಿ ಮಂಜ ಹಾಗೂ ಕಿರಣ್‌ ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ. ಕಿರಣ್ ಶಾಸ್ತ್ರಿ ಅವರು ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ್ದಾರೆ.

Bigg Boss Kannada 13: ಹುಚ್ಚು ಅನ್ನೋಕೆ ನೀವ್ಯಾರು? ಕಿರಣ್ ಶಾಸ್ತ್ರಿಯನ್ನ ತರಾಟೆಗೆ ತೆಗೆದುಕೊಂಡ ವೈಷ್ಣವಿ

ಕಿರಣ್ ಶಾಸ್ತ್ರಿ, ವೈಷ್ಣವಿ ಮಧ್ಯೆ ಮಾರಾಮಾರಿ ಜಗಳ

Bigg Boss Kannada 13:ಬಿಗ್‌ ಬಾಸ್‌ ಮನೆ (Bigg Boss Kannada 13) ಒಂದೇ ದಿನಕ್ಕೆ ರಣರಂಗವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿದರೆ ಹೆಚ್ಚು ಅಟೆನ್ಷನ್ ಸಿಗುತ್ತದೆ ಎಂಬ ಭಾವನೆ ಕೆಲವು ಸ್ಪರ್ಧಿಗಳಿಗೆ ಇದ್ದಂತಿದೆ. ಮಂಜ, ಕಿರಣ್ ಶಾಸ್ತ್ರಿ (Kiran shastri) ಮುಂತಾದವರು ಮೊದಲ ದಿನವೇ ಜಗಳಕ್ಕೆ ಇಳಿದಿದ್ದಾರೆ. ಇದೀಗ ಕಿರಣ್ ಶಾಸ್ತ್ರಿ ಹಾಗೂ ವೈಷ್ಣವಿ ಜಗಳ ತಾರಕಕ್ಕೇರಿದೆ.

Varun Dhawan : ‘ಹನುಮಾನ್ ಅಂಶ್’ ಸಿನಿಮಾ ಹೊಗಳಿ ವರುಣ್ ಧವನ್ ಹೇಳಿದ್ದೇನು?

‘ಹನುಮಾನ್ ಅಂಶ್’ ಸಿನಿಮಾ ಹೊಗಳಿ ವರುಣ್ ಧವನ್ ಹೇಳಿದ್ದೇನು?

Varun Dhawan: ಹನುಮಾನ್ ಅಂಶ್ (Hanuman Ansh) ಪ್ರೇಕ್ಷಕರ ಮನಗೆದ್ದಿದೆ. ಯಾವುದೇ ಪ್ರಮುಖ ತಾರೆಯರಿಲ್ಲದ 2 ಕೋಟಿ ರೂಪಾಯಿಗಳ ಈ ಪುಟ್ಟ ಬಾಲಿವುಡ್ ಚಿತ್ರವು (Bollywood) ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಯಶಸ್ಸನ್ನು ಶ್ಲಾಘಿಸುತ್ತಾ, ನಟ ವರುಣ್ ಧವನ್ ಇತ್ತೀಚೆಗೆ ಚಿತ್ರವನ್ನು ಹೊಗಳುತ್ತಿರುವುದು ಕಂಡುಬಂದಿದೆ.

ತುಳುನಾಡಿನ ಅರ್ಜುನ್‌ ದೇವ್‌ ನಟನೆಯ ʻಟಾಸ್‌ʼ ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಕೈಜೋಡಿಸಿದ್ದೇಕೆ? ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಗಣಪ! ‌

‘ಟಾಸ್’ ಚಿತ್ರದ ಹೀರೋ ಅರ್ಜುನ್ ಕಾಪಿಕಾಡ್ ಜೊತೆ ನಟ ಗಣೇಶ್ ಸಿನಿಮಾ?

ತುಳುನಾಡಿನ ಪ್ರತಿಭೆ ಅರ್ಜುನ್ ಕಾಪಿಕಾಡ್ ಸಾರಥ್ಯದ ಟಾಸ್ ಚಿತ್ರವನ್ನು ನಟ ಗಣೇಶ್ ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಉತ್ತಮ ಕಂಟೆಂಟ್ ಬೆಂಬಲಿಸುವ ಉದ್ದೇಶದಿಂದ ಕೈಜೋಡಿಸಿರುವ ಗಣೇಶ್, ಭವಿಷ್ಯದಲ್ಲಿ ಅರ್ಜುನ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Shiva rajkumar: ಶಿವರಾಜ್‌ಕುಮಾರ್ - ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌

ಶಿವರಾಜ್‌ಕುಮಾರ್ - ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್!

Shiva rajkumar:ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಪಿಕಾಸೊ’ ಎಂದು ಹೆಸರಿಡಲಾಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ‘ಡ್ರಾಮಾ ಕಂಪನಿ’ ಅರ್ಪಿಸುವ ಈ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಹೊಸ ತಲೆಮಾರಿನ ನಟ ಅಭಿಶನ್ ಅವರ ಉತ್ಸಾಹ ಒಂದಾಗುತ್ತಿದ್ದು, ಗೌತಮ್ ಶಿವರಾಮನ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Renukaswamy Case: ಪವಿತ್ರಾ ಗೌಡ ಮನವಿಗೆ ಕೋರ್ಟ್‌ ಅಸ್ತು, ದರ್ಶನ್‌ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ ಹೊಸ ಬೇಡಿಕೆ?

Renukaswamy Case: ಪವಿತ್ರಾಗೆ ರಿಲೀಫ್, ಹೈಕೋರ್ಟ್‌ಗೆ ದರ್ಶನ್ ಹೊಸ ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಅರ್ಜಿಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅತ್ತ ವಕೀಲರ ಸಂಪರ್ಕ ಸಿಗುತ್ತಿಲ್ಲವೆಂದು ಖುದ್ದು ಹಾಜರಿಗಾಗಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಯುತ ವಿಚಾರಣೆಯ ಹಕ್ಕು ಕೋರಿ ದರ್ಶನ್‌ ಸಲ್ಲಿಸಿರುವ ಈ ಅರ್ಜಿ ಯಾವಾಗ ವಿಚಾರಣೆಗೆ ಬರಲಿದೆ ಎಂಬುದನ್ನು ಕಾದುನೋಡಬೇಕು.

Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

Bigg boss Kannada 13: ಬಿಗ್‌ ಬಾಸ್‌ ಕನ್ನಡ 13ರ (Bigg Boss Kannada 13) ಸ್ಪರ್ಧಿಗಳು ವಿಮಾನದಲ್ಲೇ ಇರುವಂತಾಗಿದೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಮಾನದಲ್ಲಿಯೂ ಕೆಲವು ಸಂತೋಷಕರ ಸನ್ನಿವೇಶಗಳು ನಡೆದಿವೆ. ಈ ಹೊಸ ಪ್ರೋಮೋ ನೋಡಿ ಸಖತ್‌ ಖುಷಿ ಆಗಿದ್ದಾರೆ ವೀಕ್ಷಕರು.

ಕೊನೆಗೂ 'ಕಾಗೆ ಬಂಗಾರ' ಸಿನಿಮಾಗೆ ಮುಹೂರ್ತ ನೆರವೇರಿಸಿದ 'ದುನಿಯಾ' ಸೂರಿ; ಅಚ್ಚರಿ ಮೂಡಿಸಿದ ಕಲಾವಿದರ ಆಯ್ಕೆ!

ಕೊನೆಗೂ 'ಕಾಗೆ ಬಂಗಾರ' ಆರಂಭಿಸಿದ 'ದುನಿಯಾ' ಸೂರಿ; ನಾಯಕಿಯಾಗಿ ರಿತನ್ಯಾ!

Kaage Bangara movie: ನಿರ್ದೇಶಕ ದುನಿಯಾ ಸೂರಿ ಕೊನೆಗೂ ʻಕಾಗೆ ಬಂಗಾರʼ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ‘ಬ್ಯಾಡ್ ಮ್ಯಾನರ್ಸ್‌’ ಬಳಿಕ ಅವರ ಯಾವ ಸಿನಿಮಾವು ಸೆಟ್ಟೇರಿರಲಿಲ್ಲ. ಹಾಗಾಗಿ, ಸೂರಿ ಅವರ ಹೊಸ ಸಿನಿಮಾಕ್ಕಾಗಿ ಕಾದುಕುಳಿತಿದ್ದರು.

10 ತಿಂಗಳ ಹಸುಗೂಸನ್ನು ಗಂಡನ ಮಡಿಲಿನಲ್ಲಿಟ್ಟು ತೆಲುಗು ‘ಬಿಗ್ ಬಾಸ್‌ 10’ ಶೋಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕನ್ನಡತಿ ಚೈತ್ರಾ ರೈ!

10 ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಹೋದ ಕನ್ನಡ ನಟಿ ಚೈತ್ರಾ ರೈ

ಕನ್ನಡ ನಟಿ ಚೈತ್ರಾ ರೈ ಅವರು ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಕೇವಲ 10 ತಿಂಗಳ ಹಸುಗೂಸನ್ನು ಪತಿಗೆ ಸುಪರ್ದಿಗೆ ನೀಡಿ, ರಿಯಾಲಿಟಿ ಶೋ ಪ್ರವೇಶಿಸಿದ ಅವರ ನಡೆ ಪ್ರೇಕ್ಷಕರ ಗಮನಸೆಳೆಯುತ್ತಿದೆ. 2ನೇ ಹೆರಿಗೆಯ ನಂತರ ಮೂರು ತಿಂಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದ ಚೈತ್ರಾ ಎಲ್ಲರ ಗಮನಸೆಳೆದಿದ್ದರು.

AI ಕ್ರಾಂತಿಯ ನಡುವೆ ನಟನೆಯ ಶಿಸ್ತು ಹುಡುಕಿಕೊಂಡು ರಂಗಭೂಮಿಗೆ ಮರಳಿದ ʻಅಮೃತಧಾರೆʼ ನಟ ರಾಜೇಶ್‌ ನಟರಂಗ

ʻಮಳೆ ನಿಲ್ಲುವವರೆಗೆ’ ನಾಟಕದ ಮೂಲಕ ರಂಗಭೂಮಿಗೆ ಮರಳಿದ ರಾಜೇಶ್‌ ನಟರಂಗ

'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ಖ್ಯಾತ ನಟ ರಾಜೇಶ್‌ ನಟರಂಗ ಅವರು ರಂಗಭೂಮಿಗೆ ಮರಳುತ್ತಿದ್ದು, ಕಳೆದುಹೋದ ನಟನಾ ಶಿಸ್ತನ್ನು ಮರಳಿ ಪಡೆಯಲು ಸಜ್ಜಾಗಿದ್ದಾರೆ. ಕೃತಕ ಬುದ್ಧಿಮತ್ತೆಯ ಆತಂಕ ಹಾಗೂ ಓಟಿಟಿ ಗೊಂದಲಗಳ ನಡುವೆ ನೈಜ ಕಲೆಯನ್ನು ಹುಡುಕುವ ಆಶಯ ವ್ಯಕ್ತಪಡಿಸಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

Bigg Boss Kannada 13: ವಿಮಾನದಲ್ಲೇ ಶುರುವಾಯ್ತು ಜಟಾಪಟಿ; ಮಾಡರ್ನ್ ಮಹಾಕವಿಗೆ ಟಕ್ಕರ್ ಕೊಟ್ಟ ಗಗನ್ ಚಿನ್ನಪ್ಪ!

BBK 13: ವಿಮಾನದಲ್ಲೇ ಮಹಾಕವಿ ಮಂಜನಿಗೆ ಗಗನ್ ಚಿನ್ನಪ್ಪ ಖಡಕ್ ವಾರ್ನಿಂಗ್!

ಬಿಗ್‌ ಬಾಸ್‌ ಕನ್ನಡ 13ರ ಸ್ಪರ್ಧಿಗಳು ವಿಮಾನದಲ್ಲೇ ತೀವ್ರ ವಾಕ್ಸಮರಕ್ಕೆ ಆರಂಭಿಸಿದ್ದಾರೆ. ಮನೆ ಪ್ರವೇಶಿಸುವ ಮುನ್ನವೇ ನೀಡಲಾದ ಸೂಟ್‌ಕೇಸ್ ಟಾಸ್ಕ್ ಹದಿನಾರು ಸ್ಪರ್ಧಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾಡರ್ನ್ ಮಹಾಕವಿ ಮಂಜನ ಅತಿಯಾದ ಮಾತಿಗೆ ಗಗನ್ ಚಿನ್ನಪ್ಪ, ಜಗ್ಗಾ ಮಮ್ಮಿ ಹಾಗೂ ತಾಂಡವ್ ರಾಮ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Loading...