ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

BBK 13: ಹಬ್ಬದ ಹೊತ್ತಿನಲ್ಲಿ ʻಬಿಗ್‌ ಬಾಸ್‌ʼ ಮನೆಯೊಳಗೆ ಆತಂಕ! ದಿಢೀರ್‌ ಅಂತ ಹೊರಗೆ ಬಂದ ಸ್ಪರ್ಧಿ ಓಂ ಪ್ರಕಾಶ್‌ ರಾವ್, ಅಷ್ಟಕ್ಕೂ ಆಗಿದ್ದೇನು?

ಮಾನಸಿಕ ಒತ್ತಡಕ್ಕೆ ಸಿಲುಕಿದ್ರಾ ಓಂ ಪ್ರಕಾಶ್ ರಾವ್? ʻಬಿಗ್ ಬಾಸ್ʼನಿಂದ ಔಟ್‌

ಬಿಗ್‌ ಬಾಸ್‌ ಕನ್ನಡ 13ರ ರಿಯಾಲಿಟಿ ಶೋನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸಿಕ ಒತ್ತಡದಿಂದ ಅವರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ʻರಾಮಾಯಣʼ ಸಿನಿಮಾದ ‘ಜೈ ಜೈ ರಾಮ್’ ಹಾಡು ರಿಲೀಸ್;‌ ರಣಬೀರ್‌ ಕಫೂರ್‌ - ಸಾಯಿ ಪಲ್ಲವಿ ಫ್ಯಾನ್ಸ್‌ ಖುಷ್‌

‘ರಾಮಾಯಣ’ ಚಿತ್ರದ ʻಜೈ ಜೈ ರಾಮ್‌ʼ ಹಾಡಿಗೆ ಅಭಿಮಾನಿಗಳು ಫಿದಾ

ʻರಾಮಾಯಣʼ ಚಿತ್ರದ ಮೊದಲು ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೋಡಿ ಎಲ್ಲರ ಗಮನಸೆಳೆದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದು, ಮೊದಲ ಭಾಗವು ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಾಣಲಿದೆ.

ʻನನ್ನ ಉಳಿತಾಯದ ಹಣವನ್ನೆಲ್ಲಾ ಹೂಡಿಕೆ ಮಾಡಿದೆ..ʼ; 250 ಕೋಟಿ ಗಳಿಸಿದ ʻಹನುಮಾನ್ ಅಂಶ್ʼ ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಗರ್ ಹೇಳಿದ ಸಕ್ಸಸ್‌ ಸ್ಟೋರಿ!

ʻಹನುಮಾನ್‌ ಅಂಶ್‌ʼ ಚಿತ್ರದಿಂದ ಬಂದ ಹಣವನ್ನು ದಾನ ಮಾಡಲು ಮುಂದಾದ ನಿರ್ಮಾಪಕಿ

ʻಹನುಮಾನ್‌ ಅಂಶ್ʼ‌ ಸಿನಿಮಾವು ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದು, 2 ಕೋಟಿ ಬಜೆಟ್‌ನಲ್ಲಿ ತಯಾರಾಗಿ 250 ಕೋಟಿಗೂ ಹೆಚ್ಚು ಗಳಿಕೆ ಮಾಡಿ, ಇತಿಹಾಸ ಸೃಷ್ಟಿಸಿದೆ. ನೀಮ್ ಕರೋಲಿ ಬಾಬಾ ಅವರ ಬೋಧನೆಗಳಾಧಾರಿತ ಈ ಚಿತ್ರಕ್ಕೆ 21 ವರ್ಷದ ಅನುಪ್ರಿಯಾ ನಗರ್ ತಮ್ಮ ಸಂಪೂರ್ಣ ಉಳಿತಾಯ ಹೂಡಿಕೆ ಮಾಡಿದ್ದರು.

ಯುವ ರಾಜ್‌ಕುಮಾರ್ ನಟನೆಯ 3ನೇ ಚಿತ್ರಕ್ಕೆ ‘ಪವರ್‌ಮ್ಯಾನ್‌’ ಟೈಟಲ್‌; ಈ ಚಿತ್ರಕ್ಕಾಗಿ ಖಡಕ್‌ ಟೀಮ್‌ ರೆಡಿ ಮಾಡಿದ ತರುಣ್ ಸುಧೀರ್!

ಗಣೇಶ ಹಬ್ಬದಂದು ಯುವ ರಾಜ್‌ಕುಮಾರ್ ನಟನೆಯ ‘ಪವರ್‌ಮ್ಯಾನ್‌’ ಸಿನಿಮಾ ಅನೌನ್ಸ್

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಯುವ ರಾಜ್‌ಕುಮಾರ್‌ ನಟನೆಯ ʻಪವರ್‌ಮ್ಯಾನ್‌ʼ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಜಡೇಶ ಕೆ. ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Bigg Boss 13: ವೀಕೆಂಡ್‌ ಸಂಚಿಕೆಯಲ್ಲಿ ಧರಿಸಲು ಸೂಕ್ತ ಉಡುಪಿಲ್ಲದೆ ಕಣ್ಣೀರಿಟ್ಟ ಜಗ್ಗಾ ಮಮ್ಮಿ; ಬಟ್ಟೆ ಕಳುಹಿಸಿದ ನಟ ಕಿಚ್ಚ ಸುದೀಪ್‌ಗೆ ಎಲ್ಲರಿಂದ ಮೆಚ್ಚುಗೆ

BBK 13: ಬಟ್ಟೆಗಾಗಿ ಜಗ್ಗಾ ಮಮ್ಮಿ ಬೇಸರ; ಉಡುಗೊರೆ ಕಳಿಸಿದ ʻಕಿಚ್ಚʼ ಸುದೀಪ್

ಬಿಗ್‌ ಬಾಸ್‌ ಕನ್ನಡ 13 ರಿಯಾಲಿಟಿ ಶೋನಲ್ಲಿ ಸೂಕ್ತ ಬಟ್ಟೆಯಿಲ್ಲದೇ ಕೊರಗುತ್ತಿದ್ದ ಜಗ್ಗಾ ಮಮ್ಮಿ ನೆರವಿಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡತನದ ಕಾರಣದಿಂದ ಬಿಗ್‌ ಬಾಸ್‌ ವೇದಿಕೆಗೆ ಸ್ನೇಹಿತನ ಬಟ್ಟೆ ಧರಿಸಿ ಬಂದಿದ್ದ ಜಗ್ಗಾ ಮಮ್ಮಿಗೆ ಈಗ ವಾರಾಂತ್ಯದ ಸಂಚಿಕೆಗಾಗಿ ಬಟ್ಟೆಗಳಿರಲಿಲ್ಲ. ಅದಕ್ಕಾಗಿ ಸುದೀಪ್ ವಿಶೇಷ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Photos: ಕರ್ನಾಟಕ ನಕ್ಷೆಯ ಡಾಲರ್‌ನಲ್ಲಿ ಮಿಂಚಿದ ʻಡಾಲಿʼ ಮಗನ ಹೆಸರು; ನಟ ಧನಂಜಯ್ ಪುತ್ರನಿಗೆ ಇಮ್ಮಡಿ ಪುಲಕೇಶಿ ನಂಟು!

ಮಗನಿಗೆ ʻಎರೆಯʼ ಎಂದು ನಾಮಕರಣ ಮಾಡಿದ ʻಡಾಲಿʼ ಧನಂಜಯ್; ಈ ಹೆಸರಿನ ಅರ್ಥವೇನು?

ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕರ್ನಾಟಕದ ನಕ್ಷೆಯಿರುವ ಚಿನ್ನದ ಡಾಲರ್‌ನ ಮಧ್ಯಭಾಗದಲ್ಲಿ ಮಗನ ಹೆಸರು ಕೆತ್ತಿಸಿ ಪ್ರದರ್ಶಿಸುವ ಮೂಲಕ, ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಕನ್ನಡ ನೆಲ, ಜಲ ಹಾಗೂ ಭಾಷೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಧನಂಜಯ್ ಅವರು ಮಗನಿಗಿಟ್ಟಿರುವ ಈ ಹೆಸರಿನ ಹಿಂದೆ ಸುಂದರವಾದ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಎಂಬುದು ಪುರಾತನ ಕನ್ನಡದ ಅರ್ಥಪೂರ್ಣ ಪದವಾಗಿದ್ದು, ಇದಕ್ಕೆ ‘ಒಡೆಯ’, ‘ಸ್ವಾಮಿ’ ಹಾಗೂ ‘ಅಧಿಪತಿ’ ಎಂಬ ಗಂಭೀರ ಅರ್ಥಗಳಿವೆ. ಇಲ್ಲಿವೆ ನೋಡಿ ‘ಡಾಲಿ’ ಮಗನ ಮುದ್ದಾದ ಫೋಟೋಗಳು.

ಗಣೇಶ ಚತುರ್ಥಿಯಂದು ಮಗನ ಹೆಸರು ರಿವೀಲ್ ಮಾಡಿದ ನಟ ʻಡಾಲಿʼ ಧನಂಜಯ್; ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿದ್ದೇಕೆ?

ಮುದ್ದು ಮಗನಿಗೆ ಚಾಲುಕ್ಯ ಮಹಾರಾಜರ ಬಾಲ್ಯದ ಹೆಸರಿಟ್ಟ‌ ನಟ ʻಡಾಲಿʼ ಧನಂಜಯ್

ನಟ ‘ಡಾಲಿ’ ಧನಂಜಯ್ ಅವರ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಲಾಗಿದೆ. ಕರ್ನಾಟಕದ ನಕ್ಷೆಯ ಚಿನ್ನದ ಡಾಲರ್ ಮೂಲಕ ಧನಂಜಯ್-ಧನ್ಯತಾ ದಂಪತಿ ಮಗನ ಹೆಸರನ್ನು ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಜಗತ್ತಿಗೆ ಪರಿಚಯಿಸಿದ್ದಾರೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಪದಕ್ಕೆ ಒಡೆಯ, ಸ್ವಾಮಿ, ಅಧಿಪತಿ ಎಂಬ ಗಂಭೀರ ಅರ್ಥಗಳಿವೆ.

ಮನೆಗೆ ಬಂದ ʻನವರಸ ನಾಯಕʼ ಜಗ್ಗೇಶ್‌ಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ವಾಚ್ ಉಡುಗೊರೆ ನೀಡಿದ ಶಿವಣ್ಣ ದಂಪತಿ

ನಟ ಜಗ್ಗೇ‌ಶ್‌ಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಶಿವರಾಜ್‌ಕುಮಾರ್ ದಂಪತಿ

ನಟ ಜಗ್ಗೇಶ್‌ ಅವರು ಶಿವರಾಜ್‌ಕುಮಾರ್‌ ನಿವಾಸಕ್ಕೆ ತೆರಳಿ ರಾಖಿ ಕಟ್ಟಿದ್ಧಾರೆ. ಅದಕ್ಕೆ ಪ್ರತಿಯಾಗಿ ಶಿವರಾಜ್‌ಕುಮಾರ್ ದಂಪತಿ ಸುಮಾರು 2.50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಐಷಾರಾಮಿ ವಾಚ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. "ಈ ಕುಟುಂಬಕ್ಕೆ ರಾಯರ ಆಶೀರ್ವಾದ ಸದಾ ಇರಲಿ" ಎಂದು ಜಗ್ಗೇಶ್ ಹಾರೈಸಿದ್ದಾರೆ.

BBK 13 Elimination: ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಡದೇ ಎಲಿಮಿನೇಟ್ ಆದ ಪ್ರಥಮಾ ಪ್ರಸಾದ್! ಇದು ಇತಿಹಾಸದಲ್ಲೇ ಮೊದಲು!

BBK 13: ʻಬಿಗ್ ಬಾಸ್ʼ ಮನೆಯೊಳಗೆ ಕಾಲಿಡದೇ ಪ್ರಥಮಾ ಪ್ರಸಾದ್ ಎಲಿಮಿನೇಟ್

Prathama Prasad Eviction: ʻಬಿಗ್ ಬಾಸ್ʼ ಕನ್ನಡ ಸೀಸನ್ 13ರಲ್ಲಿ ಅನಿರೀಕ್ಷಿತ ಆಘಾತ ತಂದಿದೆ. ಮೊದಲ ವಾರದಲ್ಲೇ ನಾಮಿನೇಟ್ ಆಗಿ ಕಡಿಮೆ ಮತ ಪಡೆದ ನಟಿ ಪ್ರಥಮಾ ಪ್ರಸಾದ್, ಮುಖ್ಯ ಮನೆಯೊಳಗೆ ಪ್ರವೇಶಿಸದೆಯೇ ಹೊರಬಿದ್ದು ಶೋ ಇತಿಹಾಸದಲ್ಲೇ ಮೊದಲ ಸ್ಪರ್ಧಿಯಾದರು. ತಾಯಿಯ ನೆರಳಿನಿಂದಾಚೆಗೆ ಸ್ವಂತ ಅಸ್ಮಿತೆ ಕಂಡುಕೊಳ್ಳಲು ಬಂದಿದ್ದ ಪ್ರಥಮಾ, ಬೇಸರದಿಂದ ಬಿಗ್‌ ಬಾಸ್‌ ವೇದಿಕೆಯಿಂದ ನಿರ್ಗಮಿಸಿದರು.

ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಬಾಚಿಕೊಂಡ ರವಿತೇಜ ನಟನೆಯ ‘ಇರುಮುಡಿ’ ಒಟಿಟಿಗೆ ಎಂಟ್ರಿ! ಯಾವಾಗ, ಎಲ್ಲಿ ವೀಕ್ಷಿಸಬಹುದು?

ರವಿತೇಜ ನಟನೆಯ ‘ಇರುಮುಡಿ’ ಚಿತ್ರದ OTT ರಿಲೀಸ್‌ ಡೇಟ್‌ ಫಿಕ್ಸ್!‌

Irumudi OTT Release Date: ʻಮಾಸ್ ಮಹಾರಾಜʼ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ನಟಿಸಿರುವ ‘ಇರುಮುಡಿ’ ಸಿನಿಮಾವು ಸೆಪ್ಟೆಂಬರ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. 45 ಕೋಟಿ ವೆಚ್ಚದಲ್ಲಿ ತಯಾರಾಗಿ 208 ಕೋಟಿ ಬಾಚಿದ ಈ ಚಿತ್ರ, ಮದ್ಯವ್ಯಸನಿ ಅಪ್ಪ ಹಾಗೂ ಮುದ್ದು ಮಗಳ ನಡುವಿನ ಭಾವನಾತ್ಮಕ ಪಯಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ.

ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ; ಪೋಸ್ಟರ್, ಆಹ್ವಾನ ಪತ್ರಿಕೆ ಬಿಡುಗಡೆ!

ಲತಾ ಮಂಗೇಶ್ಕರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ

Lata Mangeshkar tribute: ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ನಡೆಯಲಿರುವ 'ಚಿಟ್ಟೀ ಆಯೀ ಹೈ' ಕಾರ್ಯಕ್ರಮ ಇದೇ ಸೆಪ್ಟೆಂಬರ್ 19ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಕಮಲ್ ರಾಜ್ ನೇತೃತ್ವದಲ್ಲಿ ನಡೆಯಲಿರುವ ಈ ಅಪರೂಪದ ಗಾನ ನಮನಕ್ಕೆ ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಕುಟುಂಬ ಸಮೇತರಾಗಿ ಸಾಕ್ಷಿಯಾಗಲಿದ್ದಾರೆ.

Duniya Vijay: ನಟ ವಿನಯ್‌ ರಾಜ್‌ಕುಮಾರ್‌ ಈಗ ‘ಸ್ಯಾಂಡಲ್ ಮಯೂರʼ; ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿ ಶಿವಣ್ಣ ಹೇಳಿದ್ದೇನು?

Vinay Rajkumar: ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿದ ಶಿವಣ್ಣ

City Lights Trailer: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವಿನಯ್ ರಾಜ್‌ಕುಮಾರ್ ನಟನೆಯ ʻಸಿಟಿ ಲೈಟ್ಸ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ. ಜೊತೆಗೆ ವಿನಯ್‌ ಮಾಸ್ ಅವತಾರವನ್ನು ಕೊಂಡಾಡಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಅವರ ಪುತ್ರಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌; ಹಾಡಾಗಿ ಬಂತು ಟೈಲರ್‌ ಲವ್‌ ಸ್ಟೋರಿ!

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌

Kanasalu Album Song: ಗ್ರಾಮೀಣ ಹಿನ್ನೆಲೆಯ ಟೈಲರಿಂಗ್ ಅಂಗಡಿಯ ಹುಡುಗ ಹಾಗೂ ಗ್ರಾಹಕಿ ಮೀರಾ ನಡುವಿನ ಪರಿಶುದ್ಧ ಪ್ರೇಮಕಥೆಯನ್ನು ʻಕನಸಲುʼ ಆಲ್ಬಂ ಸಾಂಗ್ ಅನಾವರಣಗೊಳಿಸಿದೆ. ಶ್ರೀರಾಮ್ ಗಂಧರ್ವ ಅವರ ಸರ್ವತೋಮುಖ ಸಾರಥ್ಯದಲ್ಲಿ ಮೂಡಿಬಂದಿರುವ ಈ ವಿಡಿಯೋ ಆಲ್ಬಮ್ ಅನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿದೆ.

ಸಿಲ್ವರ್‌ಸ್ಟೋನ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಕೃಷ್ಣನ್ ಪ್ರತ್ಯಕ್ಷ: ಅಜಿತ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವಿಡಿಯೋ ವೈರಲ್‌

ಸಿಲ್ವರ್‌ಸ್ಟೋನ್‌ನಲ್ಲಿ ಸಿಎಂ ವಿಜಯ್ -‌ ತ್ರಿಷಾ ಜೋಡಿ ವಿಡಿಯೋ ವೈರಲ್!

ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ರೇಸ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಜಿತ್ ಕುಮಾರ್ ಸ್ಪರ್ಧಿಸಿದ ಈ ಪಂದ್ಯಾವಳಿಗೆ ವಿಜಯ್ ಚಾಲನೆ ನೀಡಿದ್ದು, ಗ್ಯಾಲರಿಯಲ್ಲಿ ತ್ರಿಷಾ ಜೊತೆ ನಿಂತು ರೇಸ್ ವೀಕ್ಷಿಸಿದರು.

ಕೇವಲ ಐದೇ ದಿನಕ್ಕೆ ‘ತೆಲುಗು ಬಿಗ್ ಬಾಸ್’ ಮನೆಯಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ: ಶಾಕಿಂಗ್ ಎಲಿಮಿನೇಷನ್‌ಗೆ ಕಾರಣವೇನು?

ಛೇ! ಐದೇ ದಿನಕ್ಕೆ ತೆಲುಗು ಬಿಗ್‌ ಬಾಸ್‌ನಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ

Chaithra Rai Eviction: ತೆಲುಗು ಬಿಗ್‌ಬಾಸ್ ಮೊದಲ ವಾರವೇ ಸಂಚಲನ ಮೂಡಿಸಿದೆ. ಕೇವಲ ಐದೇ ದಿನಕ್ಕೆ ಕನ್ನಡತಿ ಚೈತ್ರಾ ರೈ ಅನಿರೀಕ್ಷಿತ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ. ಹಸುಗೂಸನ್ನು ಬಿಟ್ಟು ವೃತ್ತಿಬದುಕಿನ ಹೊಸ ಕನಸುಗಳೊಂದಿಗೆ ದೊಡ್ಮನೆ ಪ್ರವೇಶಿಸಿದ್ದ ಚೈತ್ರಾಗೆ ಆಘಾತ ಎದುರಾಗಿದೆ.

BBK 13: ‘ಇಲ್ಲಿ ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ..’; ಓಂ ಪ್ರಕಾಶ್ ರಾವ್ ಮಾತು ಕೇಳಿ ‘ಕಿಚ್ಚ’ ಸುದೀಪ್‌ಗೆ ನಗುವೋ ನಗು!

ʻಬಿಗ್‌ ಬಾಸ್‌ʼನಲ್ಲಿ ʻಕಿಚ್ಚʼ ಸುದೀಪ್‌ಗೇ ಶಾಕ್ ಕೊಟ್ಟ ಓಂ ಪ್ರಕಾಶ್ ರಾವ್!

Bigg Boss Kannada 13: ಈ ಸೀಸನ್‌ನ ಮೊದಲ ವಾರದ ಪಂಚಾಯ್ತಿಯಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾರಿಸಿದ ಹಾಸ್ಯ ಚಟಾಕಿಗೆ ಕಿಚ್ಚ ಸುದೀಪ್ ನಗೆಗಡಲಲ್ಲಿ ತೇಲಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಸುದೀಪ್‌ಗಿಂತಲೂ ದೊಡ್ಡ ನಟರೆಂದು ವ್ಯಂಗ್ಯವಾಡಿದಾಗ, 'ಹುಚ್ಚ' ಸಿನಿಮಾ ನೆನೆದು ಸುದೀಪ್ ಪ್ರತ್ಯುತ್ತರ ನೀಡಿದರು.

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್. ಮರ್ಯಾದೆಯಿಂದ ಮಾತನಾಡಬೇಕುʼ; ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟ ಗಗನ್‌ ಚಿನ್ನಪ್ಪಗೆ ಬಿಸಿ ಮುಟ್ಟಿಸಿದ ‌ʻಕಿಚ್ಚʼ ಸುದೀಪ್

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್ʼ; ಗಗನ್‌ಗೆ ಬೆಂಡೆತ್ತಿದ ಸುದೀಪ್

Bigg Boss Kannada 13: ಸ್ಪರ್ಧಿ ಗಗನ್ ಚಿನ್ನಪ್ಪನ ಅಸಂಬದ್ಧ ಮಾತಿಗೆ ʻಕಿಚ್ಚʼ ಸುದೀಪ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಟದ ಶ್ಲಾಘನೆ ವೇಳೆ ಸುದೀಪ್‌ಗೆ ವ್ಯಂಗ್ಯವಾಗಿ ಮಾತನಾಡಲು ಹೋದ ಗಗನ್‌ಗೆ ಗಂಭೀರ ಎಚ್ಚರಿಕೆ ನೀಡಲಾಯಿತು. 'ನಾನಿಲ್ಲಿ ನಿರೂಪಕ, ನೀವೊಬ್ಬ ಸ್ಪರ್ಧಿ, ಮರ್ಯಾದೆ ಇರಲಿ' ಎಂದು ಕಿಚ್ಚ ಖಾರವಾಗಿ ಗುಡುಗಿದಾಗ, ಗಗನ್ ಹೆದರಿ 3 ಬಾರಿ ಕ್ಷಮೆಯಾಚಿಸಿದರು.

Hanuman Ansh : 100 ಕೋಟಿ ರೂ‌  OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

Hanuman Ansh : ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಸುತ್ತ ಹರಿದಾಡುತ್ತಿರುವ ಸುದ್ದಿಗಳ ನಡುವೆ, ನಿರ್ಮಾಪಕಿ ರಾಗಿಣಿ ಸೋನಾ (Ragini sona) ಅವರು ಚಿತ್ರವು 100 ಕೋಟಿ ರೂ.ಗಳ ಬೃಹತ್ OTT ಒಪ್ಪಂದವನ್ನು ಪಡೆದುಕೊಂಡಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಅಂತಹ ಹೇಳಿಕೆಗಳು ಆಧಾರರಹಿತ ಊಹಾಪೋಹಗಳಾಗಿವೆ.

Toxic Actor: 'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ  ಖಡಕ್ ಉತ್ತರ

'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ ಖಡಕ್ ಉತ್ತರ

Toxic Actor: ಟಾಕ್ಸಿಕ್: ಎ ಫೇರಿ ಟೇಲ್ (Toxic) ಫಾರ್ ಗ್ರೋನ್-ಅಪ್ಸ್ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ವಿಮರ್ಶಕರು ಮತ್ತು ಪ್ರೇಕ್ಷಕರು ಇದನ್ನು ಟೀಕಿಸಿದರು. ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರವು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದ್ದರೂ ಸಹ ವಿಶ್ವದಾದ್ಯಂತ ಸುಮಾರು ₹ 300 ಕೋಟಿ ಗಳಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಟ ಬೆನೆಡಿಕ್ಟ್ ಗ್ಯಾರೆಟ್, ನಕಾರಾತ್ಮಕ ವಿಮರ್ಶೆಗಳ ವಿರುದ್ಧ ಅದನ್ನು ಸಮರ್ಥಿಸಿಕೊಂಡರು.

Bigg Boss Kannada 13: ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

Bigg Boss Kannada 13: ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ (sueep Panchayti) ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

Kannada New Movie: ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

Amaravathi Police Station Movie: ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಅಂತಿಮ ಹಂತದ ಚಿತ್ರೀಕರಣವು ಅರಸೀಕೆರೆಯ ಗಿಜಿಹಳ್ಳಿ ಬಳಿ ಇರುವ ಯಾರ್ಡ್‌ವೊಂದರಲ್ಲಿ ನಡೆಯಿತು. ಕಳೆದ ನಾಲ್ಕೈದು ದಿನಗಳಿಂದ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ.

The Paradise: ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

The Paradise: ಶ್ರೀಕಾಂತ್ ಒಡೆಲಾ ಮತ್ತು ನಾನಿ ಅವರ ಎರಡನೇ ಚಿತ್ರ 'ದಿ ಪ್ಯಾರಡೈಸ್' ( The Paradise) ಘೋಷಣೆಯಾದಾಗ, ಚಲನಚಿತ್ರ ನಿರ್ಮಾಪಕ ಮತ್ತು ನಟ ಇನ್ನೇನು ಕಾಯ್ದಿರಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಬದಲಾಗಿ, ಚಿತ್ರದ ಬಿಡುಗಡೆಯನ್ನು ಹಲವು ಬಾರಿ ವಿಳಂಬ ಮಾಡಲಾಯಿತು. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡವು ಈಗ 'ದಿ ಪ್ಯಾರಡೈಸ್' ( The Paradise Trailer) ಚಿತ್ರದ ಟ್ರೇಲರ್ ಇರುವುದಿಲ್ಲ ಎಂದು ಘೋಷಿಸಿದೆ.

Spirit Movie: ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ  ಸಹೋದರ ಖಡಕ್ ವಾರ್ನಿಂಗ್

ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಖಡಕ್ ವಾರ್ನಿಂಗ್

Spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ಭದ್ರಕಳಿ ಪಿಕ್ಚರ್ಸ್‌ನ ಪ್ರಣಯ್ ರೆಡ್ಡಿ ವಂಗಾ ಇತ್ತೀಚೆಗೆ ರೋಮಂಚಕಂ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರ ಸೆಪ್ಟೆಂಬರ್ 3 ರಂದು ಬಿಡುಗಡೆಯಾಯಿತು ಮತ್ತು ನೀರಸ ವಿಮರ್ಶೆಗಳನ್ನು ಪಡೆಯಿತು. ತಮ್ಮ 'ರೋಮಾಂಚಕಂ' ಚಿತ್ರದ ಸೋಲಿಗೆ ನೆಗೆಟಿವ್ ರಿವ್ಯೂಗಳೇ ಕಾರಣ ಎಂದಿರುವ ಅವರು, ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾವನ್ನು ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Shrimad Bhagavatam Part 1: ಸಾಗರ್ ಪಿಕ್ಚರ್ಸ್‌ನಿಂದ  ಬರಲಿದೆ  ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

ಸಾಗರ್ ಪಿಕ್ಚರ್ಸ್‌ನಿಂದ ಬರಲಿದೆ ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

Shrimad Bhagavatam Part 1: ಶ್ರೀಮದ್ ಭಾಗವತ ಭಾಗ I: ವಿಷ್ಣುರತವನ್ನು ತರುತ್ತಿದೆ. ಪೌರಾಣಿಕ ಕಥಾಹಂದರದ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಕಡೆಯಿಂದ 7 ಭಾಗಗಳ ಬೃಹತ್ ಸಿನಿಮಾ ಘೋಷಣೆ ಆಗಿದೆ. ತಯಾರಕರು ಮುಂಬರುವ ಚಿತ್ರದ ಟೀಸರ್ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಶ್ರೀ ಕೃಷ್ಣನ ಆಶೀರ್ವಾದ ಹಸ್ತವನ್ನು ಚಿತ್ರಿಸುವ ಮತ್ತು ಧಾರ್ಮಿಕ, ಸ್ಮರಣೀಯ ಮತ್ತು ಸಂಪ್ರದಾಯದಲ್ಲಿ ಮುಳುಗಿರುವ ಈ ಪೋಸ್ಟರ್ ಮುಂದಿನ ಏಳು ಭಾಗಗಳಿಗೆ ನಾಂದಿ ಹಾಡುತ್ತದೆ.

Loading...