ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಟಾಕ್ಸಿಕ್‌ʼ ರಿಲೀಸ್‌ ಹಿನ್ನೆಲೆಯಲ್ಲಿ ತಿರುಪತಿಗೆ ಮುಡಿ ಅರ್ಪಿಸಿದ್ರಾ ನಟಿ ನಯನತಾರಾ? ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯವೇನು?

ʻಟಾಕ್ಸಿಕ್ʼ ರಿಲೀಸ್‌ಗೂ ಮುನ್ನ ತಿರುಪತಿಗೆ ಮುಡಿ ಕೊಟ್ರಾ ನಟಿ ನಯನತಾರಾ?

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ‘ಗಂಗಾ’ ಪಾತ್ರ ನಿರ್ವಹಿಸಿರುವ ನಟಿ ನಯನತಾರಾ, ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಅರ್ಪಿಸಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡಲಾಗಿದೆ. ಆದರೆ ಈ ಬೋಳು ತಲೆಯ ಫೋಟೋಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ಸಾಬೀತಾಗಿದೆ.

ಮಲಯಾಳಂ ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಭುವನೇಶ್‌

ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ನೆರವೇರಿದ ನಟ ಭುವನೇಶ್‌ ಮದುವೆ

Bigg Boss Malayalam winner Anumol Marriage: ಮಲಯಾಳಂ ಕಿರುತೆರೆಯ ಖ್ಯಾತ ನಟಿ ಹಾಗೂ 'ಬಿಗ್ ಬಾಸ್ ಮಲಯಾಳಂ ಸೀಸನ್ 7' ವಿಜೇತೆ ಅನುಮೋಲ್ ಅವರು ತಮಿಳು ನಟ ಭುವನೇಶ್ ರಾಜೇಂದ್ರನ್ ಅವರೊಂದಿಗೆ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಳುನಾಡಿನ ‘ಟಾಸ್’ ಚಿತ್ರಕ್ಕೆ ಗೋಲ್ಡನ್ ಟಚ್!‌ ನಟ ಅರ್ಜುನ್ ದೇವ್  ಹೊಸ ಸಿನಿಮಾಗೆ ಸಾಥ್‌ ನೀಡಿದ ಶಿಲ್ಪಾ ಗಣೇಶ್

'ಟಾಸ್' ತುಳು ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್ ಪತ್ನಿ ಶಿಲ್ಪಾ ಸಾಥ್‌

ತುಳುನಾಡಿನ ನಟ ಅರ್ಜುನ್ ದೇವ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕನ್ನಡ ಮತ್ತು ತುಳು ದ್ವಿಭಾಷಾ ಚಿತ್ರ ‘ಟಾಸ್’ ಬಿಡುಗಡೆಗೆ ಸಜ್ಜಾಗಿದೆ. ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಗಣೇಶ್-ಶಿಲ್ಪಾ ದಂಪತಿ ಸಾಥ್ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯದ ‘ಹಲೋ ಹಲೋ ನೀಲಾಂಬರಿ’ ಹಾಡು ಅರ್ಮಾನ್ ಮಲಿಕ್ ಕಂಠದಲ್ಲಿ ಮೂಡಿಬಂದಿದೆ.

ʻನಾನೆಂದಿಗೂ ಪಾನ್‌ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲʼ ಎಂದಿದ್ದ ನಟ ಸನ್ನಿ ಡಿಯೋಲ್‌ಗೆ ಮುಜುಗರ; ಹಳೆಯ ವಿಡಿಯೋ ವೈರಲ್‌ ಮಾಡಿ ನೆಟ್ಟಿಗರ ಟ್ರೋಲ್‌

ಹಳೇ ವಿಡಿಯೋ ವೈರಲ್ ಮಾಡಿ ಸನ್ನಿ ಡಿಯೋಲ್‌ಗೆ ಟ್ರೋಲ್ ಮಾಡಿದ ನೆಟ್ಟಿಗರು!

ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ ಮತ್ತು ಮುಂದೆಯೂ ನಟಿಸುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರಿಗೆ ಈಗ ಮುಜುಗರ ಎದುರಾಗಿದೆ. ಅವರು ಈ ಹಿಂದೆ ರವಿ ಕಿಶನ್ ಜೊತೆ ನಟಿಸಿದ್ದ ಹಳೆಯ ಪಾನ್ ಮಸಾಲಾ ಜಾಹೀರಾತನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

Alia Bhatt: ಮಗಳ ಜೊತೆ  ಆಲಿಯಾ- ರಣಬೀರ್ ಜಾಲಿ ಜಾಲಿ!

ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!

Alia Bhatt: ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಅವರಿಬ್ಬರ ಕೆಮಿಸ್ಟ್ರಿ, ಪ್ರೀತಿ ನೋಡಿದ್ರೆ ಲಕ್ಷಾಂತರ ಹೃದಯಗಳು ಫಿದಾ ಆಗೋದು ಗ್ಯಾರಂಟಿ. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದು, ಈ ಜೋಡಿಗೆ ರಾಹಾ ಎಂಬ ಮುದ್ದಾದ ಮಗಳಿದ್ದಾಳೆ. ಆಲಿಯಾ ಭಟ್ತ ಮ್ಮ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗಿನ ವಕೇಶನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಾಯ್ತು!

ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಾಯ್ತು!

Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಿದ್ದಾಗಿದೆ. ಭೂಮಿ ಬೇಹುಗಾರಿಕೆ ಇಲ್ಲಿಂದ ಶುರು ಆಗಿದೆ. ಮಲ್ಲಿ ದಿಯಾ ವಿಚಾರವಾಗಿ ಮಾತನಾಡಿದ್ದು ಭೂಮಿಗೆ ಅನುಮಾನ ಶುರು ಆಗಿದೆ. ಹೀಗಾಹು ಶಕುನಿ ಮಾಮನನ್ನು ಛೂ ಬಿಟ್ಟಿದ್ದಾಳೆ. ಶಕುನಿ ಮಾಮ ಕೂಡ ಜೈದೇವ್ಗೆ ಚೆನ್ನಾಗಿ ಕುಡಿಸಿ ದಿಯಾ ವಿಚಾರವಾಗಿ ಸತ್ಯ ತಿಳಿಯಲು ನೋಡಿದ್ದಾನೆ. ಜೈದೇವ್‌ ದಿಯಾ ವಿಚಾರವಾಗಿ ಹೇಳ್ತಾನಾ ಅನ್ನೋದು ಸಂಚಿಕೆಯಲ್ಲಿ ಗೊತ್ತಾಗಲಿದೆ.

Anirudh Kavya: ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?  ಮದುವೆ ಸುಳಿವು ಕೊಟ್ಟೇ ಬಿಟ್ರಾ ಹಿರಿಯ ನಟ?

ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?

Anirudh Kavya: ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ವದಂತಿಗಳು ಮತ್ತೊಮ್ಮೆ ಗಮನ ಸೆಳೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ಇಬ್ಬರೂ ಡೆಸ್ಟಿನೇಶನ್ ವೆಡ್ಡಿಂಗ್ ಯೋಜಿಸುತ್ತಿದ್ದಾರೆ ಎಂಬ ಹೊಸ ವದಂತಿ ಶುರುವಾಗಿದೆ. ಆದರೆ ಅವರ ಸಂಬಂಧ, ನಿಶ್ಚಿತಾರ್ಥ ಅಥವಾ ವಿವಾಹ (Marriage) ಯೋಜನೆಗಳ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ .

Anupama Gowda: ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

Anupama Gowda: ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ (Anchoring) ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

Bigg Boss Telugu 10: ಬಿಗ್ ಬಾಸ್ ತೆಲುಗು ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

ಬಿಗ್ ಬಾಸ್ ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

Bigg Boss Telugu 10: ಹೊಸ ಪ್ರೋಮೋದಲ್ಲಿ (Promo), ನಿರೂಪಕರು ರಿಯಾಲಿಟಿ ಟಿವಿ (Reality Show) ಶೋನಲ್ಲಿ ಹತ್ತು ಪಟ್ಟು ಸವಾಲುಗಳನ್ನು ಭರವಸೆ ನೀಡುತ್ತಾರೆ. ಬಹಳ ನಿರೀಕ್ಷಿತ ಬಿಗ್ ಬಾಸ್ ಸೀಸನ್ 10 ತೆಲುಗು ಶೀಘ್ರದಲ್ಲೇ ಬರಲಿದೆ! 10X ಅಚ್ಚರಿಗಳು. 10X ನಾಟಕ. 10X ಸವಾಲುಗಳು. ಈ ಸಾರಿ ಸವಾಲು (ಈ ಬಾರಿ ಆಟವು ಪ್ರಶ್ನೆಗಳನ್ನು ಹೊಂದಿರುವುದಿಲ್ಲ) ಎಂದು ಬರೆದುಕೊಂಡಿದೆ.

Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ  ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

Anupama Parameswaran: ಹೆಸರಿಸದ ಮಾಜಿ ಗೆಳೆಯನೊಂದಿಗಿನ 2 ವರ್ಷಗಳ ಸಂಬಂಧದಲ್ಲಿ ಅನುಪಮಾ ಪರಮೇಶ್ವರನ್ ಅವರು ಬ್ರೇಕಪ್ ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವುಗಳಿಗೆ ಸಂಬಂಧಿಸಿದಂತೆ ಧ್ರುವ್ (dhruva) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಕೂಡ ಅನುಪಮಾ ಹೆಸರನ್ನು ಪ್ರಸ್ತಾಪಿಸಿಲ್ಲ.

Jana Nayagan OTT: ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'! ಸ್ಟ್ರೀಮಿಂಗ್‌ ಯಾವಾಗಿನಿಂದ?

ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'!

Jana Nayagan OTT: ಜನ ನಾಯಗನ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದಾಗ್ಯೂ, ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಹಲವಾರು ತಿಂಗಳುಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ಇದರಿಂದಾಗಿ, ಚಿತ್ರದ OTT ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದ Amazon Prime, OTT ಒಪ್ಪಂದವನ್ನು ರದ್ದುಗೊಳಿಸಿತು. ಆ ಬಳಿಕ ಸಿನಿಮಾ ತೆರೆ ಕಂಡಿತು.

Actor Darshan: ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ  ಹಾಜರಿಗೆ ಸೂಚನೆ

ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ!

Actor Darshan: ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಆರೋಪಿಗಳ ಸೂಚನೆ ನೀಡಿದೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಐ, ನೋಬಡಿ, ಜುಲೈ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ, ಆಕ್ಷನ್ ಥ್ರಿಲ್ಲರ್ ಒಟಿಟಿಗೆ ಬರಲು ರೆಡಿಯಾಗಿದೆ.

‘ಡಿಯರ್ ಹಸ್ಬೆಂಡ್’ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಗದ ಖಡಕ್ ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿ ಪಾವನಾ ಗೌಡ

'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಖಡಕ್ ಪೊಲೀಸ್ ಅವತಾರದಲ್ಲಿ ನಟಿ ಪಾವನಾ ಗೌಡ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪಾವನಾ ಗೌಡ ಮೊದಲ ಬಾರಿಗೆ 'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಖಡಕ್ ತನಿಖಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಂಭಾಷಣೆಗಳಿದ್ದು, ಸೂರಜ್ ಗೌಡ ಮತ್ತು ಕುಮಾರ ಬಂಗಾರಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ.

Actor Nagabhushana: ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

Actor Nagabhushana: ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ ಎಸ್. ಕೆ. ಸಂತೋಷ್ ಅವರು ನಿರ್ಮಿಸುತ್ತಿರುವ, 'ಪ್ರೊಡಕ್ಷನ್ ನಂ. 2' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಈ ಚಿತ್ರವನ್ನು ಜಗದೀಶ್ ಎನ್. ಕೋಲಾರ ನಿರ್ದೇಶಿಸುತ್ತಿದ್ದಾರೆ. ಇಂದು (ಆಗಸ್ಟ್ 17) ನಟ ನಾಗಭೂಷಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದೇ ಚಿತ್ರತಂಡ ಹೊಸ ಸಿನಿಮಾದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

Allu Arjun: ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಭಾರಿ ಟೀಕೆಯ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪೋಸ್ಟ್  ಡಿಲೀಟ್‌ ಮಾಡಿದ ಅಲ್ಲು ಅರ್ಜುನ್

ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಅಲ್ಲು ವಿರುದ್ಧ ಭಾರಿ ಟೀಕೆ

Allu Arjun: ಅಲ್ಲು ಅರ್ಜುನ್ ಹಂಚಿಕೊಂಡ ಫೋಟೋದಲ್ಲಿ ಕೆಂಪು ಕೋಟೆಯಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜದ ಚಿತ್ರವಿತ್ತು. ಹಿನ್ನೆಲೆಯಲ್ಲಿ ಅಶೋಕ ಚಕ್ರವಿದ್ದರೂ, ಅದು ಧ್ವಜದಲ್ಲಿ ಕಾಣೆಯಾಗಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಲೋಗೋ ಕೂಡ ಇತ್ತು. ಆ ಪೋಸ್ಟ್‌ನಲ್ಲಿ "ಹ್ಯಾಪಿ ಇಂಡಿಪೆಂಡೆನ್ಸ್ ಡೇ" ಎಂಬ ಪದಗಳಿದ್ದವು. ಇದು ಭಾರಿ ಟ್ರೋಲ್‌ಗೆ ಗುರಿಯಾಗಿದೆ.

ಪ್ರಭಾಸ್‌ ಕಾರಣಕ್ಕೆ ಶಾಹಿದ್‌ ಕಪೂರ್‌ ನಟನೆಯ ʻಅಶ್ವತ್ಥಾಮʼ ಸಿನಿಮಾ ಸ್ಥಗಿತ! ಕನ್ನಡದ ಆ ನಿರ್ದೇಶಕನಿಗೆ ನಿರಾಸೆ?

ʻಕಲ್ಕಿ' ಅಬ್ಬರಕ್ಕೆ ಶಾಹಿದ್ ಕಪೂರ್‌ ನಟನೆಯ 'ಅಶ್ವತ್ಥಾಮ' ಸಿನಿಮಾ ಸ್ಥಗಿತ!

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಖ್ಯಾತಿಯ ನಿರ್ದೇಶಕ ಸಚಿನ್ ರವಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಅಶ್ವತ್ಥಾಮ' ಸದ್ಯಕ್ಕೆ ಸ್ಥಗಿತಗೊಂಡಿದೆ. 'ಕಲ್ಕಿ 2898 ಎಡಿ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರ ಸೃಷ್ಟಿಸಿದ ಪ್ರಭಾವದಿಂದಾಗಿ ನಿರ್ಮಾಪಕ ಜಾಕಿ ಭಗ್ನಾನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರಂತೆ.

Bigg Boss Kannada 13: ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ `ಅಗ್ನಿಪರೀಕ್ಷೆ'ಯ juries! ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ

ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ ʻಅಗ್ನಿಪರೀಕ್ಷೆʼಯ juries!

Bigg Boss Kannada 13:ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ರತ್ನಾ ಚಂದ್ರಪ್ಪ, ಕಬಾಬ್ ಮಂಜು, ಚರಣ್ ಶೆಟ್ಟಿ ಹಾಗೂ ಜಿ.ಕೆ. ಪೂರ್ಣಿಮಾ ಅವರ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹೊಸ ಪ್ರೋಮೋ ಔಟ್‌ ಆಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಏದುಸಿರು ಬಿಡುತ್ತಿರುವ ಸನ್ನಿ ಡಿಯೋಲ್‌ ನಟನೆಯ ʻಬಟ್ವಾರಾ 1947ʼ ಸಿನಿಮಾ; ನಟ ಆಮಿರ್‌ ಖಾನ್‌ಗೆ ಲಾಸ್‌ ಆಗಲಿದೆಯಾ?

Sunny Deol: ಮೂರು ದಿನಗಳಲ್ಲಿ ʻಬಟ್ವಾರಾ 1947ʼ‌ ಚಿತ್ರ ಗಳಸಿದ್ದೆಷ್ಟು?

ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಹಾಗೂ ಸನ್ನಿ ಡಿಯೋಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಬಟ್ವಾರಾ 1947' ಚಿತ್ರ ಮೊದಲ ವಾರಾಂತ್ಯದಲ್ಲಿ ಜಾಗತಿಕವಾಗಿ ₹37.11 ಕೋಟಿ ಗಳಿಸಿ ಹಿನ್ನಡೆ ಅನುಭವಿಸಿದೆ. ₹70 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ನಿರ್ಮಾಪಕ ಆಮಿರ್ ಖಾನ್ ಅವರಿಗೆ ನಷ್ಟದ ಆತಂಕ ಎದುರಾಗಿದೆ.

ಅಂದು ʻಆಟೋಗ್ರಾಫ್‌ ಪ್ಲೀಸ್‌ʼ ಎಂದಿದ್ದ ಯಶ್‌ಗೆ ಅವಮಾನ ಮಾಡಿದ್ದ ಆ‌ ಸ್ಟಾರ್ ನಟ! ʻರಾಕಿ ಭಾಯ್‌ʼ ಬದಲಾಗಲು ಕಾರಣವಾಯ್ತು ಆ ಘಟನೆ

ನೆಚ್ಚಿನ ನಟನಿಂದಲೇ ಅವಮಾನ; ಇದು ನಟ ಯಶ್ ಬಾಲ್ಯದಲ್ಲಿ ನಡೆದ ಕಹಿ ಘಟನೆ

ʻರಾಕಿಂಗ್ ಸ್ಟಾರ್ʼ ಯಶ್ ಬಾಲ್ಯದಲ್ಲಿ ತಮ್ಮ ನೆಚ್ಚಿನ ನಟನ ಬಳಿ ಆಟೋಗ್ರಾಫ್ ಕೇಳಿದಾಗ ತೀವ್ರ ಅವಮಾನ ಮತ್ತು ತಿರಸ್ಕಾರ ಎದುರಿಸಿದ್ದ ಕಹಿ ಸತ್ಯವನ್ನು 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಆ ಕಹಿ ಘಟನೆಯಿಂದ ಆ ನಟನ ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದರಂತೆ ಯಶ್!

ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆ ಕಾಟ; ʻಏನಾದ್ರೂ ಪರಿಹಾರ ಮಾಡಿʼ ಎಂಬ ಮನವಿಗೆ ಅಲೋಕ್​ಕುಮಾರ್ ಏನಂದ್ರು?

ಜೈಲಿನಲ್ಲಿ ದರ್ಶನ್‌ಗೆ ಸೊಳ್ಳೆ ಕಾಟ; ಪರಿಹಾರ ಕೇಳಿದ್ದಕ್ಕೆ ADGP ಏನಂದ್ರು?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಸೊಳ್ಳೆ ಸಮಸ್ಯೆಗೆ ಪರಿಹಾರ ನೀಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಮ್ಯಾನ್ಯುಯಲ್ ನಿಯಮದಲ್ಲಿರುವುದಷ್ಟೇ ಒದಗಿಸಲು ಸಾಧ್ಯ ಎಂದು ಖಡಕ್ ಆಗಿ ತಿಳಿಸಿದ್ದಾರೆ.

36ನೇ ವಯಸ್ಸಿಗೆ ಪ್ರಾಣಬಿಟ್ಟ ಹಾಲಿವುಡ್‌ ನಟಿ ಹೇಡನ್ ಪ್ಯಾನೆಟಿಯರ್; ಈ ಸಾವಿಗೆ ಕಾರಣವೇನು?

36ನೇ ವಯಸ್ಸಿಗೆ ಕಣ್ಮುಚ್ಚಿದ ಹಾಲಿವುಡ್ ನಟಿ ಹೇಡನ್ ಪ್ಯಾನೆಟಿಯರ್!

ಹಾಲಿವುಡ್‌ನ ಜನಪ್ರಿಯ ನಟಿ ಹೇಡನ್ ಪ್ಯಾನೆಟಿಯರ್ (36) ಅಕಾಲಿಕವಾಗಿ ನಿಧನರಾಗಿದ್ದಾರೆ. 'ಹೀರೋಸ್', 'ನ್ಯಾಶ್‌ವಿಲ್' ಸರಣಿಗಳಿಂದ ಜಾಗತಿಕ ಖ್ಯಾತಿ ಗಳಿಸಿದ್ದ ಅವರು ವೈಯಕ್ತಿಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ಸಹೋದರನ ಅಕಾಲಿಕ ಸಾವಿನ ನೋವಿನ ನಡುವೆಯೂ ಚೇತರಿಸಿಕೊಳ್ಳುತ್ತಿದ್ದ ತಾರೆಯ ಹಠಾತ್ ನಿಧನಕ್ಕೆ ಅಧಿಕೃತ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ ಯಶ್ ಖಡಕ್ ಉತ್ತರ!

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನ ಟೀಕೆಗಳಿಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದಾರೆ. ಈ ಹಾಡು ಕಾಂಡೋಮ್ ಜಾಹೀರಾತಿನಂತಿದೆ ಎಂದವರಿಗೆ ಚಾಟಿ ಬೀಸಿದ ಯಶ್, ದೃಶ್ಯಗಳಲ್ಲಿ ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟಿಲ್ಲ ಎಂದಿದ್ದಾರೆ.

ʻಬಿಗ್ ಬಾಸ್ ಕನ್ನಡ ಸೀಸನ್ 13ʼ: ಸಾಮಾನ್ಯರ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಪಾಸ್; 'ಸ್ಟಾರ್ ಕಂಟೆಸ್ಟೆಂಟ್' ಎನಿಸಿಕೊಂಡ ಪೂರ್ಣಿಮಾ

‌ʻಬಿಗ್ ಬಾಸ್ ಕನ್ನಡ 13ʼ ಅಗ್ನಿಪರೀಕ್ಷೆ ಸುತ್ತಿನ ಅಸಲಿ ತೀರ್ಪುಗಾರರು ಯಾರು?

Bigg Boss Kannada Season 13: ಬಿಗ್‌ ಬಾಸ್‌ ಕನ್ನಡ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಮಂಡ್ಯದ ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಅವರು 'ಸ್ಟಾರ್ ಕಂಟೆಸ್ಟೆಂಟ್' ಆಗಿ ಹೊರಹೊಮ್ಮಿದ್ದಾರೆ. ಇನ್ನುಳಿದ ಆ ಮೂವರು ಸ್ಪರ್ಧಿಗಳು ಯಾರು?

Loading...