ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

OTT ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಜೀ5; 7 ಭಾಷೆಯಲ್ಲಿ ಹೊಸ ವೆಬ್ ಸಿರೀಸ್, ಸಿನಿಮಾಗಳ ಘೋಷಣೆ!

OTT ವೀಕ್ಷಕರಿಗೆ ಜೀ5 ಸಿಹಿ ಸುದ್ದಿ; ಹೊಸ ಸೀರೀಸ್‌, ಸಿನಿಮಾಗಳ ಘೋಷಣೆ

ಭಾರತೀಯ ಪ್ರಾದೇಶಿಕ ಮನರಂಜನಾ ಲೋಕದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿರುವ 'ಜೀ5' ಒಟಿಟಿ ವೇದಿಕೆಯು ಏಕಕಾಲಕ್ಕೆ ಕನ್ನಡ, ಹಿಂದಿ, ತಮಿಳು ಸೇರಿದಂತೆ 7 ಭಾಷೆಗಳಲ್ಲಿ ಹೊಸ ವೆಬ್ ಸರಣಿಗಳು, ಚಿತ್ರಗಳು ಹಾಗೂ ಎಐ ಬೆಂಬಲಿತ ಕಥೆಗಳನ್ನು ಘೋಷಣೆ ಮಾಡಿದೆ.

ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್ ಪೋಸ್ಟ್ ವೈರಲ್: ಧ್ರುವ್ ವಿಕ್ರಮ್‌ ಜೊತೆಗಿನ ಸಂಬಂಧಕ್ಕೆ ಬಿತ್ತಾ ಫುಲ್‌ಸ್ಟಾಪ್?

ಧ್ರುವ್ ವಿಕ್ರಮ್ ಜತೆ ಬ್ರೇಕಪ್? ʻಯಾರ ಅನುಮತಿಯೂ ಬೇಕಿಲ್ಲʼ ಎಂದ ನಟಿ ಅನುಪಮಾ

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ಮುಂದೆ ತಮ್ಮ ಜೀವನದ ನಿರ್ಧಾರಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಬರೆದುಕೊಂಡಿರುವ ನಟಿ, ನಟ ಧ್ರುವ್ ವಿಕ್ರಮ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

Arjun Kapoor: ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ಸಾಹಿಬಾ ಬಾಲಿ

ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ಸಾಹಿಬಾ ಬಾಲಿ

Arjun Kapoor: ಅರ್ಜುನ್ ಕಪೂರ್ (Arjun Kapoor) ಮತ್ತು ಸಾಹಿಬಾ ಬಾಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಸುದ್ದಿಯಾದರು. ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಡೇಟಿಂಗ್ ವದಂತಿಗಳಿಗೆ ಕಾರಣವಾಯಿತು. ಈಗ, ಸಾಹಿಬಾ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಊಹಾಪೋಹಕ್ಕೆ ಉತ್ತರ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, ಸಾಹಿಬಾ ಲಾರ್ಡ್ಸ್‌ನಲ್ಲಿ ಅರ್ಜುನ್ ಕಪೂರ್ ಜೊತೆ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌;  ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌!

Amruthadhaare serial: ಒಂದು ಕಡೆ ಭೂಮಿಗೆ ಕ್ಯಾನ್ಸರ್‌ (Bhoomika Cancer) ಇರೋ ವಿಚಾರ ಗೌತಮ್‌ಗೆ ಗೊತ್ತಾದರೆ, ಇನ್ನೊಂದು ಕಡೆ ಮಲ್ಲಿ ಜೈದೇವ್‌ಗೆ ವಾರ್ನಿಂಗ್‌ ಮಾಡಿದ್ದಾಳೆ. ಮಲ್ಲಿ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾಳೆ. ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು. ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು.

Aishwarya Sindogi : ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

Aishwarya Sindogi : ಐಶ್ವರ್ಯಾ ಸಿಂಧೋಗಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ.

Salman Khan: ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿಯ (SRA) ನೂತನ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಷನ್ ಸಪೋರ್ಟ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮೊನ್ನೆಮೊನ್ನೆಯಷ್ಟೇ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಅದೇ ವೇಳೆ ಸೆರೆಯಾದ ವಿಡಿಯೋದಲ್ಲಿ ಸಲ್ಮಾನ್ ಖಾನ್ ತೀರಾ ದಣಿದಂತೆ, ತುಂಬಾ ವಯಸ್ಸಾದಂತೆ, ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣಿಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ನಟ ತಮ್ಮ ಆರೋಗ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ಸ್ವಲ್ಪ ನಿಗೂಢ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Yash: 'ಟಾಕ್ಸಿಕ್' ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್;‌ ಬೆಂಗಳೂರಿನಲ್ಲಿ ನಡೆಯಲಿದೆ ಅದ್ದೂರಿ ಸಮಾರಂಭ

Yash: ʻಟಾಕ್ಸಿಕ್ʼ ಚಿತ್ರದ ಟ್ರೇಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಟ್ರೇಲರ್ ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಈ ಚಿತ್ರ ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ. ಸದ್ಯ ಯಶ್‌ ಅವರ ಅಭಿಮಾನಿಗಳ ಗಮನ ಟಾಕ್ಸಿಕ್ ಟ್ರೇಲರ್‌ ಮೇಲಿದೆ.

ಬಿಗಿ ಭದ್ರತೆಯ ನಡುವೆಯೂ 'ರಾಮಾಯಣ' ಚಿತ್ರದ ಟ್ರೇಲರ್ ಲೀಕ್‌, ಚಿತ್ರತಂಡಕ್ಕೆ ಬಿಗ್ ಶಾಕ್!‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್

ಬಿಗಿ ಭದ್ರತೆಯ ನಡುವೆಯೂ ʻರಾಮಾಯಣʼ ಟ್ರೇಲರ್ ಲೀಕ್; ಚಿತ್ರತಂಡಕ್ಕೆ ಶಾಕ್!

ನಿರ್ದೇಶಕ ನಿತೇಶ್ ತಿವಾರಿ ಅವರ ಭಾರಿ ಬಜೆಟ್‌ನ 'ರಾಮಾಯಣ' ಚಿತ್ರದ ಟ್ರೇಲರ್‌ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಟ್ರೇಲರ್‌ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಲೀಕ್ ಆದ ಕಳಪೆ ಗುಣಮಟ್ಟದ ವಿಡಿಯೋದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಹಾಗೂ ರಾಮನಾಗಿ ರಣಬೀರ್ ಕಪೂರ್ ಝಲಕ್ ಕಾಣಿಸಿದ್ದು, ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಗೊಳಿಸಿದೆ.

ಕರ್ನಾಟಕದಲ್ಲಿ ʻಜನ ನಾಯಗನ್‌ʼ ಸಿನಿಮಾ ಟಿಕೆಟ್‌ ದರ 1000 ರೂ.! ಆದರೆ, ತಮಿಳುನಾಡಿನಲ್ಲಿ 190 ರೂ. ದಾಟೋದಿಲ್ಲವೇಕೆ? ಇಲ್ಲಿದೆ ಮಾಹಿತಿ

ತಮಿಳುನಾಡಿನಲ್ಲಿ ‘ಜನ ನಾಯಗನ್‌’ ಟಿಕೆಟ್‌ ದರ 190 ರೂ. ಫಿಕ್ಸ್! ಕಾರಣವೇನು?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಜುಲೈ 23 ರಂದು ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಟಿಕೆಟ್ ದರ 1,000 ರೂಪಾಯಿಗೆ ತಲುಪಿದೆ. ಆದರೆ ತಮಿಳುನಾಡಿನಲ್ಲಿ ಸರ್ಕಾರಿ ನಿಯಮಾವಳಿಗಳ ಕಾರಣದಿಂದಾಗಿ ಟಿಕೆಟ್ ದರ 190 ರೂಪಾಯಿ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪ್ರಶ್ನೆ ಮಾಡಿದ್ದೇಕೆ?

ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆನಾ? ತಾರಾಗಣದ ಬಗ್ಗೆ ಅನ್ನು ಕಪೂರ್ ಪ್ರಶ್ನೆ

ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ತಾರಾಗಣದ ಆಯ್ಕೆ ಕುರಿತು ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚಿತ್ರತಂಡ ಮರೆತಿದೆ ಎಂದಿದ್ದಾರೆ.

Photos: ನಟಿ ಶರ್ಮಿಳಾ ಮಾಂಡ್ರೆ ಈಗ ʻಮಿಸಸ್‌  ಸುಂದರಂʼ; ತಮಿಳು ನಿರ್ಮಾಪಕನ ಜೊತೆ ಕನ್ನಡ ನಟಿಯ ಮದುವೆಯ ಸುಂದರ ಕ್ಷಣಗಳು

ತಮಿಳು ನಿರ್ಮಾಪಕನ ಜತೆ ಶರ್ಮಿಳಾ ಮಾಂಡ್ರೆ ಕಲ್ಯಾಣ; ಇಲ್ಲಿವೆ ಮದುವೆ ಫೋಟೋಗಳು

ಸ್ಯಾಂಡಲ್‌ವುಡ್‌ ನಟಿ ಶರ್ಮಿಳಾ ಮಾಂಡ್ರೆ ಈಚೆಗೆ ತಮಿಳು ನಿರ್ಮಾಪಕ ಸುಧನ್‌ ಸುಂದರಂ ಅವರನ್ನ ಮದುವೆಯಾದರು. ಜೈಪುರದಲ್ಲಿ ಅದ್ದೂರಿಯಾಗಿ ಇವರಿಬ್ಬರ ಕಲ್ಯಾಣ ಮಹೋತ್ಸವ ನಡೆದಿತ್ತು. ಇದೀಗ ತಮ್ಮ ಮದುವೆಯ ಅದ್ದೂರಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಶರ್ಮಿಳಾ ಮಾಂಡ್ರೆ ಶೇರ್‌ ಮಾಡಿಕೊಂಡಿದ್ದಾರೆ. "From Ms Mandre to Mrs Sundaram" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಇಲ್ಲಿವೆ ನೋಡಿ ಅವರ ಮದುವೆಯ ಸುಂದರ ಫೋಟೋಗಳು.

ʻಅಯ್ಯಯ್ಯೋ, ಸಲ್ಲು ಭಾಯ್‌ಗೆ ಏನಾಗಿಹೋಯ್ತು?ʼ; ಸಲ್ಮಾನ್‌ ಖಾನ್‌ ಲುಕ್‌ ನೋಡಿ ಗಾಬರಿಬಿದ್ದ ಅಭಿಮಾನಿಗಳು!

ಭಾಯ್‌ಜಾನ್‌ಗೆ ಏನಾಯ್ತು?; ಸಲ್ಮಾನ್ ಖಾನ್ ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಐಟಿ ಸರ್ವರ್ ರೂಮ್ ಉದ್ಘಾಟನೆ ವೇಳೆ ತೀರಾ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಕ್ಲೀನ್ ಶೇವ್ ಹಾಗೂ ಸಿಂಪಲ್ ಶರ್ಟ್ ಧರಿಸಿದ್ದ ಸಲ್ಮಾನ್ ಅವರ ವಯಸ್ಸಾದ ಲುಕ್ ನೋಡಿ ಆತಂಕಗೊಂಡಿರುವ ಅಭಿಮಾನಿಗಳು, ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಅದ್ದೂರಿ ಕಾರ್ಯಕ್ರಮ; ಜುಲೈ 24ರಂದು ಬರಲಿದೆ ಪ್ಯಾನ್‌ ವರ್ಲ್ಡ್‌ ಟ್ರೇಲರ್!‌

Yash: ದೆಹಲಿಯಲ್ಲಿ ‘ರಾಮಾಯಣ’ ಸಿನಿಮಾಗೆ ಅದ್ದೂರಿ ಕಾರ್ಯಕ್ರಮ

ಭಾರತೀಯ ಸಂಸ್ಕೃತಿಯ ಮಹಾಕಾವ್ಯ ‘ರಾಮಾಯಣ’ ಚಿತ್ರದ ಜಾಗತಿಕ ಪಯಣಕ್ಕೆ ದೆಹಲಿಯ ‘ಪ್ರಥಮ ಸಂಕಲ್ಪ’ ಇವೆಂಟ್ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

Kannada New Movie:ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಚಂದ್ರಹಾಸ ಸಿನಿಮಾದ ಮೊದಲ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ.. ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ. ಈ ಚಡ್ಡಿ ಬಡ್ಡಿ ಹಾಡನ್ನ ನಟ ಶರಣ್‌ ಹಾಗೂ ಗಾಯಕ ನವೀನ್‌ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡನ್ನ ಹಾಡಿದ್ದಾರೆ .

72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್‌

ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ

National Film Awards 2026: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (72nd National Film Awards announced) ವಿಜೇತರನ್ನು ಇಂದು ಶನಿವಾರ ನವದೆಹಲಿಯಲ್ಲಿ ಘೋಷಿಸಲಾಯಿತು. ಚಲನಚಿತ್ರ ತೀರ್ಪುಗಾರರ ಅಧ್ಯಕ್ಷತೆಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯರಾಜ್ ವಹಿಸಿದ್ದರು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ.

72nd National film awards: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಇಲ್ಲಿದೆ ಲೈವ್‌ ಲಿಂಕ್‌ Video

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಇಲ್ಲಿದೆ ಲೈವ್‌ ಲಿಂಕ್‌

72nd National film awards: ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್​​ನಲ್ಲಿ ಆಯೋಜಿಸಲಾಗಿರುವ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಪ್ರಮುಖರು ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಖಾತೆ ಪ್ರಮುಖರು ಪ್ರಶಸ್ತಿ ಪಡೆದ ಚಲನಚಿತ್ರಗಳು, ಕಲಾವಿದರು ಹಾಗೂ ತಂತ್ರಜ್ಞರ ಹೆಸರು ಘೋಷಣೆ ಮಾಡುತ್ತಿದ್ದಾರೆ. 2024ರಲ್ಲಿ ಸಿಬಿಎಫ್​​ಸಿ ಪ್ರಮಾಣ ಪತ್ರ ಪಡೆದ ಸಿನಿಮಾಗಳನ್ನು, ಪ್ರಶಸ್ತಿ ಆಯ್ಕೆ ಸಮಿತಿಯು ವೀಕ್ಷಿಸಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತಿದೆ. ಲೈವ್ ವಿಡಿಯೋ ಇಲ್ಲಿದೆ.

Varanasi Movie: ‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

Varanasi Movie: ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ (Poster) ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ. ಉಗ್ರ ಪಾತ್ರ’ ಎಂದು ರಾಜಮೌಳಿ (Rajamouli) ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಉಡುಗೆ ತೊಟ್ಟು, ಮೊನಚಾದ ಲುಕ್ ನೀಡುತ್ತಿದ್ದಾರೆ. ‘

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!  ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೊತ್ತಾಗಿದೆ. ಮದುವೆ ವಾರ್ಷಿಕೋತ್ಸವ ದಿನ ಭೂಮಿ ಹಾಗೂ ಗೌತಮ್‌ ಡಿನ್ನರ್‌ ಡೇಟ್‌ ಹೋಗಿದ್ದರು. ಅಲ್ಲಿ ರಕ್ತದ ವಾಂತಿ ಮಾಡಿಕೊಂಡಿದ್ದಾಳೆ ಭೂಮಿ.

Amitabh Bachchan: ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ! ಈ ಬಾರಿ ವಿಶೇಷತೆ ಏನು?

ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ!

Amitabh Bachchan: ಕೌನ್ ಬನೇಗಾ ಕರೋಡ್ ಪತಿ 18 ನೇ ಸೀಸನ್ ಬರಲು ಸಜ್ಜಾಗುತ್ತಿದೆ. ಅಮಿತಾಬ್ ಬಚ್ಚನ್ ಮತ್ತೊಮ್ಮೆ ಆಯೋಜಿಸಿರುವ ಈ ರಸಪ್ರಶ್ನೆ ಕಾರ್ಯಕ್ರಮವು 'ಸೋಚ್ನಾ ಪಡೇಗಾ' ಎಂಬ ಹೊಸ ಥೀಮ್ ನೊಂದಿಗೆ ಬರುತ್ತಿದೆ. ಈ ಸೀಸನ್ ನಲ್ಲಿ, ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳುವ ಬದಲು ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ಜ್ಞಾನವನ್ನು ಅನ್ವಯಿಸುವ ಸಾಮರ್ಥ್ಯ ಇರಲಿದೆ ಎನ್ನಲಾಗಿದೆ.

Samantha Ruth Prabhu : ನಟಿ ಸಮಂತಾ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

ನಟಿ ಸಮಂತಾ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

Samantha Ruth Prabhu : 'ಮಾ ಇಂಟಿ ಬಂಗಾರಂ' ಬ್ಲಾಕ್‌ಬಸ್ಟರ್ ಆಗಿರುವುದರಿಂದ ಸಮಂತಾ ಮತ್ತು ಅವರ ಪತಿ ರಾಜ್ ನಿಧಿಮೋರು ತುಂಬಾ ಸಂತೋಷಪಟ್ಟಿದ್ದಾರೆ. ಪ್ರಸ್ತುತ ಯಶಸ್ಸನ್ನು ಅನುಭವಿಸುತ್ತಿರುವ ದಂಪತಿ ಇತ್ತೀಚೆಗೆ ಥೈಲ್ಯಾಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ಹಿಂದಿರುಗಿದ ನಂತರ, ಅವರು ಶುಭ ಕಾರ್ಯಕ್ರಮಕ್ಕಾಗಿ ಚಿತ್ತೂರಿನಲ್ಲಿರುವ ರಾಜ್ ಅವರ ಮನೆಗೆ ಹೋದರು. ಈ ಸಂದರ್ಭದಲ್ಲಿ, ಅತ್ತಾರಿನ್‌ನಲ್ಲಿ ಸ್ಯಾಮ್‌ಗಾಗಿ ಸರಳ ಸೀಮಂತ ಮಾಡಲಾಯ್ತು.

Deepika Padukone: 7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

7 ತಿಂಗಳ ಗರ್ಭಿಣಿ ದೀಪಿಕಾ ಆ್ಯಕ್ಷನ್​ ಸೀನ್​ ಶೂಟಿಂಗ್​!

Deepika Padukone: ನಟಿ ದೀಪಿಕಾ, ಶೀಘ್ರದಲ್ಲೇ ಅಲ್ಲು ಅರ್ಜುನ್ ಜೊತೆ ರಾಕಾ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರು ಚಿತ್ರಕ್ಕಾಗಿ ಆಕ್ಷನ್ ಸನ್ನಿವೇಶಗಳನ್ನೂ ಮಾಡಬೇಕಾಗಿದೆ. ಆದರೆ ಏಳು ತಿಂಗಳ ಗರ್ಭಿಣಿ ಹೊರತಾಗಿಯೂ ದೀಪಿಕಾ ಆ್ಯಕ್ಷನ್​ ದೃಶ್ಯಗಳಿಗೆ ಡ್ಯೂಪ್​ ಬಳಸದೇ ಖುದ್ದು ಮಾಡುತ್ತಿದ್ದಾರೆ!ದೀಪಿಕಾ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾ. ವಿ. ನಾಗೇಂದ್ರ ಪ್ರಸಾದ್‌ಗೆ 50ನೇ ಹುಟ್ಟುಹಬ್ಬ; ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ

ʻಕವಿರತ್ನʼ ನಾಗೇಂದ್ರ ಪ್ರಸಾದ್‌ಗೆ 50ರ ಸಂಭ್ರಮ; ಜು.19ಕ್ಕೆ ಮಹಾ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ 3,000ಕ್ಕೂ ಹೆಚ್ಚು ಅದ್ಭುತ ಹಾಡುಗಳನ್ನು ಹೆಣೆದಿರುವ ಜನಪ್ರಿಯ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ ಆಯೋಜಿಸಲಾಗಿದೆ.

Rakul Preet Singh: ಬಾಲಿವುಡ್‌ನಲ್ಲಿ ಅಸೂಯೆ, ತೆಲುಗು ಚಿತ್ರರಂಗದಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

ಬಾಲಿವುಡ್‌ನಲ್ಲಿ ಅಸೂಯೆ, ಟಾಲಿವುಡ್‌ನಲ್ಲಿ ಒಗ್ಗಟ್ಟು! ರಕುಲ್ ನೇರ ಮಾತು

Rakul Preet Singh: ರಕುಲ್, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌, ಟಾಲಿವುಡ್‌ ಉದ್ಯಮಗಳಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. ಈ ನೇರ ನುಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

Loading...