ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಆಯ್ಕೆ!

ಮೆಲ್ಬೋರ್ನ್ ಫೆಸ್ಟಿವಲ್‌ಗೆ ಆಯ್ಕೆಯಾದ ಕನ್ನಡದ ‘ಪುಟ್ಟಣ್ಣನ ಕತ್ತೆ’ ಸಿನಿಮಾ

ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ಗೆ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ಜಾಗತಿಕ ಮನ್ನಣೆ ಪಡೆದಿದೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಸಿನಿಮಾವು ನಗರಕ್ಕೆ ವಲಸೆ ಬಂದು ಕತ್ತೆ ಹಾಲು ಮಾರಿ ಬದುಕುವ ಗ್ರಾಮೀಣ ಜನರ ನೈಜ, ಸಂಕೀರ್ಣ ಬದುಕಿನ ಕಥೆಯನ್ನು ಹೇಳುತ್ತದೆಯಂತೆ.

‘ಬಿಗ್ ಬಾಸ್‌ 13’ ಮನೆಯಲ್ಲಿ ಮಹಿಳಾ ಸ್ಪರ್ಧಿಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿ, ತೊಡೆ ತಟ್ಟಿದ ಮಂಜನ ನಡೆ ಸರಿಯೇ? ಕಿಚ್ಚನ ಪಂಚಾಯಿತಿ ಮೇಲೆ ವೀಕ್ಷಕರು ಕಣ್ಣು!

ಸೌಂದರ್ಯಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿದ ಮಂಜ; ವೀಕ್ಷಕರು ಗರಂ!

Bigg Boss Kannada 13: ಬಿಗ್‌ ಬಾಸ್‌ ಮನೆಯ ಮೊದಲ ವಾರದ ಕಣ್ಗಾವಲು ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ಕಾಮನ್ ಮ್ಯಾನ್ ಸ್ಪರ್ಧಿಗಳಾದ ಮಂಜ ಮತ್ತು ಧನುಷ್ ಮಹಿಳಾ ಸ್ಪರ್ಧಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸೌಂದರ್ಯ ಶೆಟ್ಟಿಗೆ ಮೂಳೆ ಮುರಿಯುವ ಜೀವಬೆದರಿಕೆ ಹಾಕಿ, ಅವರ ಮುಂದೆ ತೊಡೆ ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಂಜನ ವಿರುದ್ಧ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟನೆ; ನಿರ್ಮಾಣದ ಹೊಣೆಹೊತ್ತ ರಾಕ್‌ಲೈನ್ ವೆಂಕಟೇಶ್‌

ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಶ್ಮಿಕಾ

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವುದು ಖಚಿತವಾಗಿದೆ. ‘ಎಂ.ಎಸ್. – ಎ ಲೆಗಸಿ ಆನ್ ಸ್ಕ್ರೀನ್’ ಹೆಸರಿನ ಈ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ಹಾಗೂ ಬನ್ನಿ ವಾಸು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ.

‘ಬಿಗ್ ಬಾಸ್‌’ ಮನೇಲಿ ಮತ್ತೆ ‘ಬಳೆ’ ಕಿರಿಕ್; ʻನಾಲಾಯಕ್‌ ನನ್ ಮಕ್ಳ.. ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ..ʼ ಎನ್ನುತ್ತಾ ಹದ್ದುಮೀರಿ ವರ್ತಿಸಿದ ಕಿರಣ್‌ ಶಾಸ್ತ್ರಿ, ಕೆರಳಿದ ಗಗನ್‌!

BBK 13: ʻನಿಮ್ ಯೋಗ್ಯತೆಗೆ ಬೆಂಕಿ ಹಾಕ..ʼ ಎಂದ ಕಿರಣ್‌ಗೆ ಗಗನ್ ವಾರ್ನಿಂಗ್!

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ನಿಯಮ ಮುರಿದ ಆರೋಪ ಹೊತ್ತ ಕಿರಣ್ ಶಾಸ್ತ್ರಿ, ಉಸ್ತುವಾರಿ ತಾಂಡವ್ ಮೇಲೆ ಆಕ್ರೋಶಗೊಂಡಿದ್ದಾರೆ. ಸಹನೆ ಕಳೆದುಕೊಂಡ ಕಿರಣ್‌, "ಬಳೆ ತೊಟ್ಟುಕೊಳ್ಳಿ" ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಗಗನ್ ಖಡಕ್ ತಿರುಗೇಟು ನೀಡಿದ್ದಾರೆ.

BBK 13: ಗಗನ್‌ ಚಿನ್ನಪ್ಪ, ತಾಂಡವ್‌ಗೆ‌ ಬಿಗ್ ಶಾಕ್‌ ನೀಡಿದ ಕಿರಣ್‌ ಶಾಸ್ತ್ರಿ; ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಮಾಡಿದ 'ಬಿಗ್‌ ಬಾಸ್'!

ಗಗನ್ - ತಾಂಡವ್‌ಗೆ ಶಾಕ್ ನೀಡಿದ ಕಿರಣ್; ಕ್ಯಾಪ್ಟನ್ಸಿ ರೇಸ್ ಉಲ್ಟಾಪಲ್ಟಾ!

ಬಿಗ್‌ ಬಾಸ್‌ ಕ್ಯಾಪ್ಟನ್ಸಿ ರೇಸ್‌ನಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಪ್ರಬಲ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಹೊರಬಿದ್ದಿದ್ದಾರೆ. ದಿನಸಿ ಖರೀದಿಯ ‘ಬಿಗ್ ಪೇಟೆ’ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಚಾಣಾಕ್ಷ ನಡೆ ಇಡೀ ಮನೆಯ ಲೆಕ್ಕಾಚಾರವನ್ನೇ ಬದಲಿಸಿತು. ಜಗದೀಶ್ ಮತ್ತು ಅವಿನಾಶ್ ಸುಲಭವಾಗಿ ಸ್ಥಾನ ತ್ಯಾಗ ಮಾಡಿದ್ದು ಅಚ್ಚರಿ ಮೂಡಿಸಿತು.

Bigg Boss 13: ಬೆಂಕಿ ಹಚ್ಚಿದ ‘ಡೋಲು ಬೋಲು’ ಮಾತು! ʻಎಲ್ಲಿಂದ ಬರ್ತಾರೋ ಚೈಲ್ಡ್‌ ಚಪಾತಿಗಳು..ʼ ಎಂದು ಗುಡುಗಿದ ಗಗನ್‌ ಚಿನ್ನಪ್ಪ!

ʻಬಿಗ್ ಬಾಸ್ʼ ಮನೆಯಲ್ಲಿ ರಾದ್ಧಾಂತ; ‘ಡೋಲು ಬೋಲು’ ಮಾತಿಗೆ ಕೆರಳಿದ ಗಗನ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಆರಂಭದಲ್ಲೇ ತಾರಕಕ್ಕೇರಿದೆ. ಧನುಷ್ ಮಂಜುನಾಥ್ ಆಡಿದ ‘ಡೋಲು ಬೋಲು’ ಎಂಬ ಗೇಲಿ ಮಾತಿಗೆ ಸಿಡಿದೆದ್ದ ಗಗನ್ ಚಿನ್ನಪ್ಪ, ‘ಎಲ್ಲಿಂದ ಬರ್ತಾರೋ ಈ ಚೈಲ್ಡ್ ಚಪಾತಿಗಳು’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ʻಟಾಕ್ಸಿಕ್‌ʼ ಬಳಿಕ ಕೆವಿಎನ್‌ ಪ್ರೊಡಕ್ಷನ್ಸ್‌ನಿಂದ ಹೊಸ ಸಿನಿಮಾ ಘೋಷಣೆ; 'ಮಂಗಳ ಗೌರಿ' ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ – ರುಕ್ಮಿಣಿ ವಸಂತ್!

‘ಮಂಗಳ ಗೌರಿ’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ - ರುಕ್ಮಿಣಿ ವಸಂತ್

Mangala Gowri Movie: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಾಕ್ಷಾಯಣಿ ಟಾಕೀಸ್ ಜಂಟಿ ನಿರ್ಮಾಣದ ʻಮಂಗಳ ಗೌರಿʼ ಚಿತ್ರದಲ್ಲಿ ನಟಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಹುಲ್ ಪಿಕೆ ನಿರ್ದೇಶನದ ಈ ಸಿನಿಮಾದಲ್ಲಿ ರುಕ್ಮಿಣಿ ಖಾಕಿ ತೊಟ್ಟು ಕಾನ್‌ಸ್ಟೆಬಲ್ ಪಾತ್ರದಲ್ಲಿ ಮಿಂಚುತ್ತಿದ್ದು, ಫಸ್ಟ್‌ ಲುಕ್‌ ಎಲ್ಲರ ಗಮನಸೆಳೆಯುತ್ತಿದೆ.

BBK 13: ಹಬ್ಬದ ಹೊತ್ತಿನಲ್ಲಿ ʻಬಿಗ್‌ ಬಾಸ್‌ʼ ಮನೆಯೊಳಗೆ ಆತಂಕ! ದಿಢೀರ್‌ ಅಂತ ಹೊರಗೆ ಬಂದ ಸ್ಪರ್ಧಿ ಓಂ ಪ್ರಕಾಶ್‌ ರಾವ್, ಅಷ್ಟಕ್ಕೂ ಆಗಿದ್ದೇನು?

ಮಾನಸಿಕ ಒತ್ತಡಕ್ಕೆ ಸಿಲುಕಿದ್ರಾ ಓಂ ಪ್ರಕಾಶ್ ರಾವ್? ʻಬಿಗ್ ಬಾಸ್ʼನಿಂದ ಔಟ್‌

ಬಿಗ್‌ ಬಾಸ್‌ ಕನ್ನಡ 13ರ ರಿಯಾಲಿಟಿ ಶೋನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸಿಕ ಒತ್ತಡದಿಂದ ಅವರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ʻರಾಮಾಯಣʼ ಸಿನಿಮಾದ ‘ಜೈ ಜೈ ರಾಮ್’ ಹಾಡು ರಿಲೀಸ್;‌ ರಣಬೀರ್‌ ಕಫೂರ್‌ - ಸಾಯಿ ಪಲ್ಲವಿ ಫ್ಯಾನ್ಸ್‌ ಖುಷ್‌

‘ರಾಮಾಯಣ’ ಚಿತ್ರದ ʻಜೈ ಜೈ ರಾಮ್‌ʼ ಹಾಡಿಗೆ ಅಭಿಮಾನಿಗಳು ಫಿದಾ

ʻರಾಮಾಯಣʼ ಚಿತ್ರದ ಮೊದಲು ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೋಡಿ ಎಲ್ಲರ ಗಮನಸೆಳೆದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದು, ಮೊದಲ ಭಾಗವು ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಾಣಲಿದೆ.

ʻನನ್ನ ಉಳಿತಾಯದ ಹಣವನ್ನೆಲ್ಲಾ ಹೂಡಿಕೆ ಮಾಡಿದೆ..ʼ; 250 ಕೋಟಿ ಗಳಿಸಿದ ʻಹನುಮಾನ್ ಅಂಶ್ʼ ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಗರ್ ಹೇಳಿದ ಸಕ್ಸಸ್‌ ಸ್ಟೋರಿ!

ʻಹನುಮಾನ್‌ ಅಂಶ್‌ʼ ಚಿತ್ರದಿಂದ ಬಂದ ಹಣವನ್ನು ದಾನ ಮಾಡಲು ಮುಂದಾದ ನಿರ್ಮಾಪಕಿ

ʻಹನುಮಾನ್‌ ಅಂಶ್ʼ‌ ಸಿನಿಮಾವು ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದು, 2 ಕೋಟಿ ಬಜೆಟ್‌ನಲ್ಲಿ ತಯಾರಾಗಿ 250 ಕೋಟಿಗೂ ಹೆಚ್ಚು ಗಳಿಕೆ ಮಾಡಿ, ಇತಿಹಾಸ ಸೃಷ್ಟಿಸಿದೆ. ನೀಮ್ ಕರೋಲಿ ಬಾಬಾ ಅವರ ಬೋಧನೆಗಳಾಧಾರಿತ ಈ ಚಿತ್ರಕ್ಕೆ 21 ವರ್ಷದ ಅನುಪ್ರಿಯಾ ನಗರ್ ತಮ್ಮ ಸಂಪೂರ್ಣ ಉಳಿತಾಯ ಹೂಡಿಕೆ ಮಾಡಿದ್ದರು.

ಯುವ ರಾಜ್‌ಕುಮಾರ್ ನಟನೆಯ 3ನೇ ಚಿತ್ರಕ್ಕೆ ‘ಪವರ್‌ಮ್ಯಾನ್‌’ ಟೈಟಲ್‌; ಈ ಚಿತ್ರಕ್ಕಾಗಿ ಖಡಕ್‌ ಟೀಮ್‌ ರೆಡಿ ಮಾಡಿದ ತರುಣ್ ಸುಧೀರ್!

ಗಣೇಶ ಹಬ್ಬದಂದು ಯುವ ರಾಜ್‌ಕುಮಾರ್ ನಟನೆಯ ‘ಪವರ್‌ಮ್ಯಾನ್‌’ ಸಿನಿಮಾ ಅನೌನ್ಸ್

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಯುವ ರಾಜ್‌ಕುಮಾರ್‌ ನಟನೆಯ ʻಪವರ್‌ಮ್ಯಾನ್‌ʼ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಜಡೇಶ ಕೆ. ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Bigg Boss 13: ವೀಕೆಂಡ್‌ ಸಂಚಿಕೆಯಲ್ಲಿ ಧರಿಸಲು ಸೂಕ್ತ ಉಡುಪಿಲ್ಲದೆ ಕಣ್ಣೀರಿಟ್ಟ ಜಗ್ಗಾ ಮಮ್ಮಿ; ಬಟ್ಟೆ ಕಳುಹಿಸಿದ ನಟ ಕಿಚ್ಚ ಸುದೀಪ್‌ಗೆ ಎಲ್ಲರಿಂದ ಮೆಚ್ಚುಗೆ

BBK 13: ಬಟ್ಟೆಗಾಗಿ ಜಗ್ಗಾ ಮಮ್ಮಿ ಬೇಸರ; ಉಡುಗೊರೆ ಕಳಿಸಿದ ʻಕಿಚ್ಚʼ ಸುದೀಪ್

ಬಿಗ್‌ ಬಾಸ್‌ ಕನ್ನಡ 13 ರಿಯಾಲಿಟಿ ಶೋನಲ್ಲಿ ಸೂಕ್ತ ಬಟ್ಟೆಯಿಲ್ಲದೇ ಕೊರಗುತ್ತಿದ್ದ ಜಗ್ಗಾ ಮಮ್ಮಿ ನೆರವಿಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡತನದ ಕಾರಣದಿಂದ ಬಿಗ್‌ ಬಾಸ್‌ ವೇದಿಕೆಗೆ ಸ್ನೇಹಿತನ ಬಟ್ಟೆ ಧರಿಸಿ ಬಂದಿದ್ದ ಜಗ್ಗಾ ಮಮ್ಮಿಗೆ ಈಗ ವಾರಾಂತ್ಯದ ಸಂಚಿಕೆಗಾಗಿ ಬಟ್ಟೆಗಳಿರಲಿಲ್ಲ. ಅದಕ್ಕಾಗಿ ಸುದೀಪ್ ವಿಶೇಷ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Photos: ಕರ್ನಾಟಕ ನಕ್ಷೆಯ ಡಾಲರ್‌ನಲ್ಲಿ ಮಿಂಚಿದ ʻಡಾಲಿʼ ಮಗನ ಹೆಸರು; ನಟ ಧನಂಜಯ್ ಪುತ್ರನಿಗೆ ಇಮ್ಮಡಿ ಪುಲಕೇಶಿ ನಂಟು!

ಮಗನಿಗೆ ʻಎರೆಯʼ ಎಂದು ನಾಮಕರಣ ಮಾಡಿದ ʻಡಾಲಿʼ ಧನಂಜಯ್; ಈ ಹೆಸರಿನ ಅರ್ಥವೇನು?

ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕರ್ನಾಟಕದ ನಕ್ಷೆಯಿರುವ ಚಿನ್ನದ ಡಾಲರ್‌ನ ಮಧ್ಯಭಾಗದಲ್ಲಿ ಮಗನ ಹೆಸರು ಕೆತ್ತಿಸಿ ಪ್ರದರ್ಶಿಸುವ ಮೂಲಕ, ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಕನ್ನಡ ನೆಲ, ಜಲ ಹಾಗೂ ಭಾಷೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಧನಂಜಯ್ ಅವರು ಮಗನಿಗಿಟ್ಟಿರುವ ಈ ಹೆಸರಿನ ಹಿಂದೆ ಸುಂದರವಾದ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಎಂಬುದು ಪುರಾತನ ಕನ್ನಡದ ಅರ್ಥಪೂರ್ಣ ಪದವಾಗಿದ್ದು, ಇದಕ್ಕೆ ‘ಒಡೆಯ’, ‘ಸ್ವಾಮಿ’ ಹಾಗೂ ‘ಅಧಿಪತಿ’ ಎಂಬ ಗಂಭೀರ ಅರ್ಥಗಳಿವೆ. ಇಲ್ಲಿವೆ ನೋಡಿ ‘ಡಾಲಿ’ ಮಗನ ಮುದ್ದಾದ ಫೋಟೋಗಳು.

ಗಣೇಶ ಚತುರ್ಥಿಯಂದು ಮಗನ ಹೆಸರು ರಿವೀಲ್ ಮಾಡಿದ ನಟ ʻಡಾಲಿʼ ಧನಂಜಯ್; ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿದ್ದೇಕೆ?

ಮುದ್ದು ಮಗನಿಗೆ ಚಾಲುಕ್ಯ ಮಹಾರಾಜರ ಬಾಲ್ಯದ ಹೆಸರಿಟ್ಟ‌ ನಟ ʻಡಾಲಿʼ ಧನಂಜಯ್

ನಟ ‘ಡಾಲಿ’ ಧನಂಜಯ್ ಅವರ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಲಾಗಿದೆ. ಕರ್ನಾಟಕದ ನಕ್ಷೆಯ ಚಿನ್ನದ ಡಾಲರ್ ಮೂಲಕ ಧನಂಜಯ್-ಧನ್ಯತಾ ದಂಪತಿ ಮಗನ ಹೆಸರನ್ನು ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಜಗತ್ತಿಗೆ ಪರಿಚಯಿಸಿದ್ದಾರೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಪದಕ್ಕೆ ಒಡೆಯ, ಸ್ವಾಮಿ, ಅಧಿಪತಿ ಎಂಬ ಗಂಭೀರ ಅರ್ಥಗಳಿವೆ.

ಮನೆಗೆ ಬಂದ ʻನವರಸ ನಾಯಕʼ ಜಗ್ಗೇಶ್‌ಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ವಾಚ್ ಉಡುಗೊರೆ ನೀಡಿದ ಶಿವಣ್ಣ ದಂಪತಿ

ನಟ ಜಗ್ಗೇ‌ಶ್‌ಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಶಿವರಾಜ್‌ಕುಮಾರ್ ದಂಪತಿ

ನಟ ಜಗ್ಗೇಶ್‌ ಅವರು ಶಿವರಾಜ್‌ಕುಮಾರ್‌ ನಿವಾಸಕ್ಕೆ ತೆರಳಿ ರಾಖಿ ಕಟ್ಟಿದ್ಧಾರೆ. ಅದಕ್ಕೆ ಪ್ರತಿಯಾಗಿ ಶಿವರಾಜ್‌ಕುಮಾರ್ ದಂಪತಿ ಸುಮಾರು 2.50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಐಷಾರಾಮಿ ವಾಚ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. "ಈ ಕುಟುಂಬಕ್ಕೆ ರಾಯರ ಆಶೀರ್ವಾದ ಸದಾ ಇರಲಿ" ಎಂದು ಜಗ್ಗೇಶ್ ಹಾರೈಸಿದ್ದಾರೆ.

BBK 13 Elimination: ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಡದೇ ಎಲಿಮಿನೇಟ್ ಆದ ಪ್ರಥಮಾ ಪ್ರಸಾದ್! ಇದು ಇತಿಹಾಸದಲ್ಲೇ ಮೊದಲು!

BBK 13: ʻಬಿಗ್ ಬಾಸ್ʼ ಮನೆಯೊಳಗೆ ಕಾಲಿಡದೇ ಪ್ರಥಮಾ ಪ್ರಸಾದ್ ಎಲಿಮಿನೇಟ್

Prathama Prasad Eviction: ʻಬಿಗ್ ಬಾಸ್ʼ ಕನ್ನಡ ಸೀಸನ್ 13ರಲ್ಲಿ ಅನಿರೀಕ್ಷಿತ ಆಘಾತ ತಂದಿದೆ. ಮೊದಲ ವಾರದಲ್ಲೇ ನಾಮಿನೇಟ್ ಆಗಿ ಕಡಿಮೆ ಮತ ಪಡೆದ ನಟಿ ಪ್ರಥಮಾ ಪ್ರಸಾದ್, ಮುಖ್ಯ ಮನೆಯೊಳಗೆ ಪ್ರವೇಶಿಸದೆಯೇ ಹೊರಬಿದ್ದು ಶೋ ಇತಿಹಾಸದಲ್ಲೇ ಮೊದಲ ಸ್ಪರ್ಧಿಯಾದರು. ತಾಯಿಯ ನೆರಳಿನಿಂದಾಚೆಗೆ ಸ್ವಂತ ಅಸ್ಮಿತೆ ಕಂಡುಕೊಳ್ಳಲು ಬಂದಿದ್ದ ಪ್ರಥಮಾ, ಬೇಸರದಿಂದ ಬಿಗ್‌ ಬಾಸ್‌ ವೇದಿಕೆಯಿಂದ ನಿರ್ಗಮಿಸಿದರು.

ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಬಾಚಿಕೊಂಡ ರವಿತೇಜ ನಟನೆಯ ‘ಇರುಮುಡಿ’ ಒಟಿಟಿಗೆ ಎಂಟ್ರಿ! ಯಾವಾಗ, ಎಲ್ಲಿ ವೀಕ್ಷಿಸಬಹುದು?

ರವಿತೇಜ ನಟನೆಯ ‘ಇರುಮುಡಿ’ ಚಿತ್ರದ OTT ರಿಲೀಸ್‌ ಡೇಟ್‌ ಫಿಕ್ಸ್!‌

Irumudi OTT Release Date: ʻಮಾಸ್ ಮಹಾರಾಜʼ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ನಟಿಸಿರುವ ‘ಇರುಮುಡಿ’ ಸಿನಿಮಾವು ಸೆಪ್ಟೆಂಬರ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. 45 ಕೋಟಿ ವೆಚ್ಚದಲ್ಲಿ ತಯಾರಾಗಿ 208 ಕೋಟಿ ಬಾಚಿದ ಈ ಚಿತ್ರ, ಮದ್ಯವ್ಯಸನಿ ಅಪ್ಪ ಹಾಗೂ ಮುದ್ದು ಮಗಳ ನಡುವಿನ ಭಾವನಾತ್ಮಕ ಪಯಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ.

ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ; ಪೋಸ್ಟರ್, ಆಹ್ವಾನ ಪತ್ರಿಕೆ ಬಿಡುಗಡೆ!

ಲತಾ ಮಂಗೇಶ್ಕರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ

Lata Mangeshkar tribute: ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ನಡೆಯಲಿರುವ 'ಚಿಟ್ಟೀ ಆಯೀ ಹೈ' ಕಾರ್ಯಕ್ರಮ ಇದೇ ಸೆಪ್ಟೆಂಬರ್ 19ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಕಮಲ್ ರಾಜ್ ನೇತೃತ್ವದಲ್ಲಿ ನಡೆಯಲಿರುವ ಈ ಅಪರೂಪದ ಗಾನ ನಮನಕ್ಕೆ ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಕುಟುಂಬ ಸಮೇತರಾಗಿ ಸಾಕ್ಷಿಯಾಗಲಿದ್ದಾರೆ.

Duniya Vijay: ನಟ ವಿನಯ್‌ ರಾಜ್‌ಕುಮಾರ್‌ ಈಗ ‘ಸ್ಯಾಂಡಲ್ ಮಯೂರʼ; ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿ ಶಿವಣ್ಣ ಹೇಳಿದ್ದೇನು?

Vinay Rajkumar: ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿದ ಶಿವಣ್ಣ

City Lights Trailer: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವಿನಯ್ ರಾಜ್‌ಕುಮಾರ್ ನಟನೆಯ ʻಸಿಟಿ ಲೈಟ್ಸ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ. ಜೊತೆಗೆ ವಿನಯ್‌ ಮಾಸ್ ಅವತಾರವನ್ನು ಕೊಂಡಾಡಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಅವರ ಪುತ್ರಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌; ಹಾಡಾಗಿ ಬಂತು ಟೈಲರ್‌ ಲವ್‌ ಸ್ಟೋರಿ!

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌

Kanasalu Album Song: ಗ್ರಾಮೀಣ ಹಿನ್ನೆಲೆಯ ಟೈಲರಿಂಗ್ ಅಂಗಡಿಯ ಹುಡುಗ ಹಾಗೂ ಗ್ರಾಹಕಿ ಮೀರಾ ನಡುವಿನ ಪರಿಶುದ್ಧ ಪ್ರೇಮಕಥೆಯನ್ನು ʻಕನಸಲುʼ ಆಲ್ಬಂ ಸಾಂಗ್ ಅನಾವರಣಗೊಳಿಸಿದೆ. ಶ್ರೀರಾಮ್ ಗಂಧರ್ವ ಅವರ ಸರ್ವತೋಮುಖ ಸಾರಥ್ಯದಲ್ಲಿ ಮೂಡಿಬಂದಿರುವ ಈ ವಿಡಿಯೋ ಆಲ್ಬಮ್ ಅನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿದೆ.

ಸಿಲ್ವರ್‌ಸ್ಟೋನ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಕೃಷ್ಣನ್ ಪ್ರತ್ಯಕ್ಷ: ಅಜಿತ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವಿಡಿಯೋ ವೈರಲ್‌

ಸಿಲ್ವರ್‌ಸ್ಟೋನ್‌ನಲ್ಲಿ ಸಿಎಂ ವಿಜಯ್ -‌ ತ್ರಿಷಾ ಜೋಡಿ ವಿಡಿಯೋ ವೈರಲ್!

ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ರೇಸ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಜಿತ್ ಕುಮಾರ್ ಸ್ಪರ್ಧಿಸಿದ ಈ ಪಂದ್ಯಾವಳಿಗೆ ವಿಜಯ್ ಚಾಲನೆ ನೀಡಿದ್ದು, ಗ್ಯಾಲರಿಯಲ್ಲಿ ತ್ರಿಷಾ ಜೊತೆ ನಿಂತು ರೇಸ್ ವೀಕ್ಷಿಸಿದರು.

ಕೇವಲ ಐದೇ ದಿನಕ್ಕೆ ‘ತೆಲುಗು ಬಿಗ್ ಬಾಸ್’ ಮನೆಯಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ: ಶಾಕಿಂಗ್ ಎಲಿಮಿನೇಷನ್‌ಗೆ ಕಾರಣವೇನು?

ಛೇ! ಐದೇ ದಿನಕ್ಕೆ ತೆಲುಗು ಬಿಗ್‌ ಬಾಸ್‌ನಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ

Chaithra Rai Eviction: ತೆಲುಗು ಬಿಗ್‌ಬಾಸ್ ಮೊದಲ ವಾರವೇ ಸಂಚಲನ ಮೂಡಿಸಿದೆ. ಕೇವಲ ಐದೇ ದಿನಕ್ಕೆ ಕನ್ನಡತಿ ಚೈತ್ರಾ ರೈ ಅನಿರೀಕ್ಷಿತ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ. ಹಸುಗೂಸನ್ನು ಬಿಟ್ಟು ವೃತ್ತಿಬದುಕಿನ ಹೊಸ ಕನಸುಗಳೊಂದಿಗೆ ದೊಡ್ಮನೆ ಪ್ರವೇಶಿಸಿದ್ದ ಚೈತ್ರಾಗೆ ಆಘಾತ ಎದುರಾಗಿದೆ.

BBK 13: ‘ಇಲ್ಲಿ ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ..’; ಓಂ ಪ್ರಕಾಶ್ ರಾವ್ ಮಾತು ಕೇಳಿ ‘ಕಿಚ್ಚ’ ಸುದೀಪ್‌ಗೆ ನಗುವೋ ನಗು!

ʻಬಿಗ್‌ ಬಾಸ್‌ʼನಲ್ಲಿ ʻಕಿಚ್ಚʼ ಸುದೀಪ್‌ಗೇ ಶಾಕ್ ಕೊಟ್ಟ ಓಂ ಪ್ರಕಾಶ್ ರಾವ್!

Bigg Boss Kannada 13: ಈ ಸೀಸನ್‌ನ ಮೊದಲ ವಾರದ ಪಂಚಾಯ್ತಿಯಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾರಿಸಿದ ಹಾಸ್ಯ ಚಟಾಕಿಗೆ ಕಿಚ್ಚ ಸುದೀಪ್ ನಗೆಗಡಲಲ್ಲಿ ತೇಲಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಸುದೀಪ್‌ಗಿಂತಲೂ ದೊಡ್ಡ ನಟರೆಂದು ವ್ಯಂಗ್ಯವಾಡಿದಾಗ, 'ಹುಚ್ಚ' ಸಿನಿಮಾ ನೆನೆದು ಸುದೀಪ್ ಪ್ರತ್ಯುತ್ತರ ನೀಡಿದರು.

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್. ಮರ್ಯಾದೆಯಿಂದ ಮಾತನಾಡಬೇಕುʼ; ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟ ಗಗನ್‌ ಚಿನ್ನಪ್ಪಗೆ ಬಿಸಿ ಮುಟ್ಟಿಸಿದ ‌ʻಕಿಚ್ಚʼ ಸುದೀಪ್

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್ʼ; ಗಗನ್‌ಗೆ ಬೆಂಡೆತ್ತಿದ ಸುದೀಪ್

Bigg Boss Kannada 13: ಸ್ಪರ್ಧಿ ಗಗನ್ ಚಿನ್ನಪ್ಪನ ಅಸಂಬದ್ಧ ಮಾತಿಗೆ ʻಕಿಚ್ಚʼ ಸುದೀಪ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಟದ ಶ್ಲಾಘನೆ ವೇಳೆ ಸುದೀಪ್‌ಗೆ ವ್ಯಂಗ್ಯವಾಗಿ ಮಾತನಾಡಲು ಹೋದ ಗಗನ್‌ಗೆ ಗಂಭೀರ ಎಚ್ಚರಿಕೆ ನೀಡಲಾಯಿತು. 'ನಾನಿಲ್ಲಿ ನಿರೂಪಕ, ನೀವೊಬ್ಬ ಸ್ಪರ್ಧಿ, ಮರ್ಯಾದೆ ಇರಲಿ' ಎಂದು ಕಿಚ್ಚ ಖಾರವಾಗಿ ಗುಡುಗಿದಾಗ, ಗಗನ್ ಹೆದರಿ 3 ಬಾರಿ ಕ್ಷಮೆಯಾಚಿಸಿದರು.

Loading...