ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Amruthadhaare Serial:  ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!

ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!

Amruthadhaare Serial: ಸದ್ಯ ಪ್ರಸಾರವಾಗುತ್ತಿರುವ ಎಪಿಸೋಡ್ ಪ್ರಕಾರ ಈಗ ಮಿಂಚುವನ್ನು ಕಿಡ್ನಾಪರ್ ಜೊತೆ ಹೋರಾಡಿ, ಮಿಂಚುವಿಗೆ ಯಾವುದೇ ಅಪಾಯ ಆಗದ ಹಾಗೆ ಕರೆದುಕೊಂಡು ಬಂದಿದ್ದಾಳೆ ಭೂಮಿಕಾ. ಆದರೆ ಈಗ ತಮ್ಮ ಮಗಳ ಹುಡುಕಾಟ ಮಾತ್ರ ಮುಂದುವರೆದಿದೆ. ಅಂಗೈಯಲ್ಲಿ ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ – ಭೂಮಿ ಇದ್ದಾರೆ. ನಕಲಿ ತಂದೆಯ ಬಳಿ ಗೌತಮ್‌ ಮನವಿ ಮಾಡಿಕೊಂಡಿದ್ದಾನೆ.

Kangana Ranaut: ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ; ಕಲೆಕ್ಷನ್‌ ಎಷ್ಟು?

ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ

Kangana Ranaut: ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿತು, ದಿಲ್ಜಿತ್ ದೋಸಾಂಜ್ ನಟಿಸಿದ ಮೈ ವಾಪಸ್ ಆವುಂಗಾ ಮತ್ತು ಮನೋಜ್ ಬಾಜ್‌ಪೇಯಿ ನಟಿಸಿದ ಗವರ್ನರ್ ಜೊತೆಗೆ ಬಿಡುಗಡೆಯಾಗಿದೆ. ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಚಿತ್ರವು ತನ್ನ ಆರಂಭಿಕ ದಿನಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಹೆಣಗಾಡಿದೆ. ಮೊದಲ ದಿನ ಕೇವಲ 1 ಕೋಟಿ ರೂ. ಸಂಗ್ರಹಿಸಿದ್ದು, ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Dhamaal 4 Trailer: ಅಜಯ್ ದೇವಗನ್ ‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

Dhamaal 4 Trailer: ಈ ಚಿತ್ರಗಳ ಸೀಕ್ವೆಲ್‌ಗಳು ಸಹ ಬಿಡುಗಡೆಯಾಗಿವೆ. ಮತ್ತು ಪ್ರೇಕ್ಷಕರು ಅವುಗಳನ್ನು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ. ಅಕ್ಷಯ್ ಕುಮಾರ್ ಕೆಲವೇ ದಿನಗಳಲ್ಲಿ ವೆಲ್ಕಮ್ ನ ಮೂರನೇ ಕಂತನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆಲವೇ ದಿನಗಳ ನಂತರ, ಅಜಯ್ ದೇವಗನ್ ಅದೇ ಹಳೆಯ ಹಾಸ್ಯ ಸಿನಿಮಾ ಧಮಾಲ್ ನ ನಾಲ್ಕನೇ ಕಂತನ್ನು ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

Model Arrested:  ಕೇರಳ ಮಾಡೆಲ್ ಬ್ಯಾಗ್‌ನಲ್ಲಿ ಡ್ರಗ್ಸ್! ಮುಂಬೈ ಏರ್ಪೋರ್ಟ್‌ನಲ್ಲಿ ಅರೆಸ್ಟ್‌

ಕೇರಳ ಮಾಡೆಲ್ ಬ್ಯಾಗ್‌ನಲ್ಲಿ ಡ್ರಗ್ಸ್! ಮುಂಬೈ ಏರ್ಪೋರ್ಟ್‌ನಲ್ಲಿ ಅರೆಸ್ಟ್‌

Model Arrested: ಬ್ಯಾಂಕಾಕ್‌ನಿಂದ ಭಾರತಕ್ಕೆ ಸುಮಾರು 11.8 ಕೋಟಿ ರೂಪಾಯಿ ಮೌಲ್ಯದ 11.8 ಕೆಜಿ ಹೈಡ್ರೋಪೋನಿಕ್ ಮಾದಕ ದ್ರವ್ಯ ಕಳ್ಳ ಕಳ್ಳಸಾಗಣೆ ಮಾಡುತ್ತಿದ್ದ ಗಂಭೀರ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಖಾಸಗಿ ಬ್ಯಾಂಕ್‌ನ ಉದ್ಯೋಗಿಯಾಗಿರುವ 29 ವರ್ಷದ ಈ ಯುವತಿಯನ್ನು ಕಸ್ಟಮ್ಸ್ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಹೆಸರು ಹರ್ಷ ಸನ್ನಿ. ಈಕೆ ಗುರುವಾರ ಬೆಳಗ್ಗೆ ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Raghava Lawrence:  ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

Raghava Lawrence: ವಿಜಯ್ ಅವರಿಂದ ತೆರವಾದ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ನಟ-ಚಲನಚಿತ್ರ ನಿರ್ಮಾಪಕ ರಾಘವ ಲಾರೆನ್ಸ್ ಶುಕ್ರವಾರ ರಾಜಕೀಯ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಸ್ಥಾನಕ್ಕೆ ಲಾರೆನ್ಸ್ ಅವರನ್ನು ಲಿಂಕ್ ಮಾಡಲಾಗಿದೆ ಎಂಬ ವರದಿಗಳ ನಂತರ ಈ ಘೋಷಣೆ ಬಂದಿದೆ.

Actor Suriya:  ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ಛಾಯಾಗ್ರಾಹಕ ಜಿಕೆ ವಿಷ್ಣು, ಸಂಪಾದಕ ಆರ್ ಕಲೈವಾಣನ್ ಮತ್ತು ಸಂಗೀತ ಸಂಯೋಜಕ ಸಾಯಿ ಅಭ್ಯಂಕರ್ ಅವರಿಗೆ ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಆವೃತ್ತಿಯ ಕಾರುಗಳನ್ನು ಉ ಡುಗೊರೆಯಾಗಿ ನೀಡಿದ ನಂತರ, ಅವರು ಆರ್‌ಜೆ ಬಾಲಾಜಿಗೆ ಹೊಚ್ಚ ಹೊಸ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದರು. ಈ ವಾರ ಸಿನಿಮಾ ಓಟಿಟಿಗೆಗೂ ಬಂದಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ ಮಾಡೋರಿಗೆ 94 ವರ್ಷದ ಸಿಂಗೀತಂ ಶ್ರೀನಿವಾಸ ರಾವ್ ಟಾಂಗ್‌;‌ 77 ದಿನಗಳಲ್ಲಿ ʻಸಿಂಗ್‌ ಗೀತಂʼ ಚಿತ್ರೀಕರಣ ಫಿನೀಶ್‌

ಕೇವಲ 77 ದಿನದಲ್ಲಿ ʻಸಿಂಗ್ ಗೀತಂʼ ಚಿತ್ರದ ಶೂಟಿಂಗ್‌ ಮುಗಿಸಿದ್ದ ಸಿಂಗೀತಂ!

94 ವರ್ಷದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವರ್ಷಗಟ್ಟಲೆ ಶೂಟಿಂಗ್ ಎಳೆಯುವ ಇಂದಿನ ತಲೆಮಾರಿಗೆ ಮಾದರಿಯಾಗಿ ತಮ್ಮ ‘ಸಿಂಗ್ ಗೀತಂ’ ಸಿನಿಮಾವನ್ನು ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿ ಜೂನ್ 12 ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.

8 Kannada Movie: ಬಾಲಿವುಡ್‌ನ ಅನುರಾಗ್‌ ಕಶ್ಯಪ್‌ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್‌ ರಿಲೀಸ್

‌8 Movie: ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡದ ಸಿನಿಮಾದ ಟೀಸರ್‌ ರಿಲೀಸ್

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಚೊಚ್ಚಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ‘8’ (ಎಂಟು) ಚಿತ್ರದ ಸಸ್ಪೆನ್ಸ್ ಹಾಗೂ ಎಮೋಷನಲ್ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು ಮನುಷ್ಯನ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕಥಾಹಂದರವನ್ನು ಹೊಂದಿದೆ.

Bigg Boss 20:  ‘ಬಿಗ್ ಬಾಸ್ 20’ ಶುರು! ಈ ಬಾರಿ ನಿರೂಪಣೆ ಯಾರದ್ದು?

‘ಬಿಗ್ ಬಾಸ್ 20’ ಶುರು! ಈ ಬಾರಿ ನಿರೂಪಣೆ ಯಾರದ್ದು?

Salman Khan: ವರದಿಯ ಪ್ರಕಾರ, ಬಿಗ್ ಬಾಸ್‌ನ ಹೊಸ ಸೀಸನ್ ಸೆಪ್ಟೆಂಬರ್ 21 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ . ರಿಯಾಲಿಟಿ ಶೋನ ಸೆಟ್‌ಗೆ ಮರಳುವ ಮೊದಲು, ಸಲ್ಮಾನ್ ಖಾನ್ ತಮ್ಮ ಮುಂಬರುವ ಆಕ್ಷನ್-ಥ್ರಿಲ್ಲರ್ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಮುಗಿಸಲು ಯೋಜಿಸಿದ್ದಾರೆ. ಬಹು ನಿರೀಕ್ಷಿತ, ಹೆಸರಿಡದ ಈ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದು, ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ.

ಭಾರತೀಯ OTT ರಂಗದಲ್ಲಿ ಹೊಸ ಕ್ರಾಂತಿ; 100 ಮಿಲಿಯನ್ ದಾಟಿದ ಜಿಯೋಹಾಟ್‌ಸ್ಟಾರ್ ಬಳಕೆದಾರರ ಸಂಖ್ಯೆ!

OTT ಲೋಕದಲ್ಲಿ ಜಿಯೋಹಾಟ್‌ಸ್ಟಾರ್ ಧಮಾಕಾ; 10 ಕೋಟಿ ದಾಟಿದ ಬಳಕೆದಾರರ ಸಂಖ್ಯೆ

ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಭಾರತೀಯ ಡಿಜಿಟಲ್ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಂದಿನ ಅವಸರದ ಬದುಕಿಗೆ ಸೂಕ್ತವಾದ 30 ರಿಂದ 60 ಸೆಕೆಂಡುಗಳ ವರ್ಟಿಕಲ್ ಶೈಲಿಯ ಕಥೆಗಳು ಯುವ ಸಮೂಹವನ್ನು ಸೆಳೆದಿದೆ.

ಪ್ರಿಯಾ ಜೊತೆ ಮದುವೆ ಆಗೋದಾಗಿ ಮೊದಲು ಸಂಚಿತ್‌‌ ಸಂಜೀವ್‌ಗೆ ಹೇಳಿದ್ದ ನಟ ಸುದೀಪ್; ಅಂದು ಜೂನಿಯರ್‌ ಕಿಚ್ಚ ಏನ್‌ ಹೇಳಿದ್ರು ಗೊತ್ತಾ?

ಪ್ರಿಯಾ - ಸುದೀಪ್ ಮದುವೆಗೆ ನೋ ಎಂದಿದ್ದ ಸಂಚಿತ್! ಇಲ್ಲಿದೆ ಆ ಕ್ಯೂಟ್‌ ಕಾರಣ

ನಟ ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು ಮದುವೆಯಾಗುವ ನಿರ್ಧಾರವನ್ನು ಮೊದಲು ಸೋದರಳಿಯ ಸಂಚಿತ್ ಸಂಜೀವ್‌ಗೆ ತಿಳಿಸಿದ್ದರಂತೆ. ಆದರೆ ಆಗ ಸಂಚಿತ್ ಮಾತ್ರ ಈ ಮದುವೆ ಬೇಡ ಎಂದು ಹೇಳಿದ್ದರಂತೆ! ಈ ತಮಾಷೆಯ ಪ್ರಸಂಗವನ್ನು ಸಂಚಿತ್‌ ಅವರೇ ಹೇಳಿಕೊಂಡಿದ್ದಾರೆ.

Tamil Nadu CM Vijay: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್‌; 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್‌

Kollur Mookambika Temple: ತಮಿಳುನಾಡು ಸಿಎಂ ವಿಜಯ್ ಅವರ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇಗುಲದ ಸುತ್ತಮುತ್ತ ಹಾಗೂ ಅವರು ತೆರಳು ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ದೇವಿಯ ದರ್ಶನದ ಬಳಿಕ ಅವರು ಚೆನ್ನೈಗೆ ನಿರ್ಗಮಿಸಿದರು.

ʻಮಹಾನ್ ಕಿಲಾಡಿʼ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಟ್ಟ ‌ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಿಂಚು; ಜಡ್ಜ್‌ ಸ್ಥಾನದಲ್ಲಿ ಗಣೇಶ್‌ ಸಹೋದರ ಮಹೇಶ್‌ ಕೃಷ್ಣ

ಮಿಂಚು ಸಾರಥ್ಯದ ʻಮಹಾನ್ ಕಿಲಾಡಿʼ ಶೋಗೆ ನಟ ಗಣೇಶ್ ಸೋದರ ಮಹೇಶ್ ಕೃಷ್ಣ ಜಡ್ಜ್

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಿಂಚು ಸಾರಥ್ಯದಲ್ಲಿ 'ಮಹಾನ್ ಕಿಲಾಡಿ' ಎಂಬ ಹೊಸ ರಿಯಾಲಿಟಿ ಶೋ ಅಧಿಕೃತವಾಗಿ ಸಜ್ಜಾಗಿದ್ದು, ಇದರ ಪೋಸ್ಟರ್ ಹಾಗೂ ಟ್ರೇಲರ್ ಲೋಕಾರ್ಪಣೆಗೊಂಡಿದೆ. ಚಿತ್ರರಂಗದಲ್ಲಿ ಅವಕಾಶ ವಂಚಿತರಾದಾಗ ಧೃತಿಗೆಡದೆ ಮಿಂಚು ಈ ವೇದಿಕೆ ಸೃಷ್ಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೃಷ್ಣ ಜಡ್ಜ್ ಆಗಿರುವ ಈ ಶೋ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.

ರಾಯರ ಸನ್ಯಾಸ ದೀಕ್ಷೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಸೀರಿಯಲ್‌ನಲ್ಲಿ ರಾಯರ ಪಟ್ಟಾಭಿಷೇಕ

ಜೀ ಕನ್ನಡ ವಾಹಿನಿಯ ಯಶಸ್ವಿ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ವೆಂಕಟನಾಥರು ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವಾಗ ಪತ್ನಿ ಸರಸ್ವತಿಯ ಮಾನಸಿಕ ತೊಳಲಾಟ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.

ಜಯನಗರದಲ್ಲಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ: ಜೂ.12ರಿಂದ 2 ದಿನಗಳ ಅಪೂರ್ವ ಅವಕಾಶ!

ಜೂ.12ರಿಂದ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ:

Bengaluru News: 'ಪರಮ್ ಕಲ್ಚರ್' ಹಾಗೂ 'ಹರಿವಂಶ ಗ್ರೂಪ್' ಸಹಯೋಗದೊಂದಿಗೆ ಬೆಂಗಳೂರಿನ ಜಯನಗರದ ಯುವಕ ಸಂಘದಲ್ಲಿ ಜೂನ್ 12 ಮತ್ತು 13ರಂದು ಸಂಜೆ 6 ರಿಂದ 8ಗಂಟೆಯವರೆಗೆ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನʼ ವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಸೂರ್ಯಗಾಯತ್ರಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

Tamil Nadu CM Vijay: ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್‌; ರಸ್ತೆ ಮಾರ್ಗದ ಮೂಲಕ ಕೊಲ್ಲೂರಿಗೆ ಪ್ರಯಾಣ

ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್‌

Kollur Mookambika temple: ಮಂಗಳೂರು ವಿಮಾನ ನಿಲ್ದಾಣದಿಂದ ಹೊರಬಂದ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸಂಜೆ ವೇಳೆಗೆ ಅವರು ಕೊಲ್ಲೂರಿಗೆ ತಲುಪಲಿದ್ದಾರೆ.

Ram Charan: ʻಪೆದ್ದಿʼ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್‌ ಪಡೆದ ಹಣವೆಷ್ಟು? ವಿವಾದದ ನಂತರ ಸದ್ದು ಮಾಡಿದ ಸಂಭಾವನೆ ಮ್ಯಾಟರ್!‌

Ram Charan: ʻಪೆದ್ದಿʼ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಜಾನ್ವಿ ಕಪೂರ್

ತೆಲುಗು ನಟ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದರೂ, ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚೀಯಮ್ಮ' ಪಾತ್ರ ತೀವ್ರ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಈ ಮಧ್ಯೆ ಈ ಚಿತ್ರಕ್ಕಾಗಿ ಜಾನ್ವಿ ತಮ್ಮ ವೃತ್ತಿಜೀವನದಲ್ಲೇ ಗರಿಷ್ಠ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʻಆ ಕಿಡಿಗೇಡಿಗಳನ್ನು ಸುಮ್ನೆ ಬಿಡಲ್ಲʼ; ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಆಘಾತಕಾರಿ ಸುಳ್ಳು ಸುದ್ದಿ ಮತ್ತು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆತಂಕ ಮೂಡಿಸಿತ್ತು. ಈ ಕುರಿತು ಸ್ವತಃ ದೊಡ್ಡಣ್ಣ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತಾವು ಸಂಪೂರ್ಣ ಆರೋಗ್ಯವಾಗಿ ಮತ್ತು ನೆಮ್ಮದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Prakash Raj: ಧರ್ಮಸ್ಥಳ ಬುರುಡೆ ಪ್ರಕರಣ;  ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

ಧರ್ಮಸ್ಥಳ ಬುರುಡೆ ಪ್ರಕರಣ; ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

Prakash Raj: ಮೊದಲು ಬುರುಡೆ ಗ್ಯಾಂಗ್ ಜೊತೆಗಿದ್ದ ಚಿನ್ನಯ್ಯ ಇದೀಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿದೆ ಈ ಕುರಿತು ಮಾಧ್ಯಮಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ, ಪ್ರಕಾಶ್ ರಾಜ್ ಈ ಆರೋಪಗಳನ್ನು ಸುಳ್ಳು ಎಂದು ಖಂಡಿಸಿ, ಶೀಘ್ರದಲ್ಲೇ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

OTT This Week: ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

OTT This Week: ನೆಟ್‌ಫ್ಲಿಕ್ಸ್‌, ಸನ್‌ನೆಕ್ಸ್ಟ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.ಹೊಸ ತೆಲುಗು ಚಲನಚಿತ್ರಗಳು ಮತ್ತು ಸಿರೀಸ್‌ಗಳು ಶೀಘ್ರದಲ್ಲೇ ಸ್ಟ್ರೀಮಿಂಗ್ (Series) ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿವೆ. ಪ್ರೇಕ್ಷಕರು ಹೊಸ ಬಿಡುಗಡೆಗಳನ್ನು ಆನಂದಿಸಲು ಇದು ಸೂಕ್ತ ಸಮಯ. ಯಾವೆಲ್ಲ ಸಿನಿಮಾಗಳು (Cinema) ರಿಲೀಸ್‌?

Akshay Kumar: ಸಿನಿ ಇಂಡಸ್ಟ್ರಿಗೆ ಗುಡ್‌ಬೈ?  ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

ಸಿನಿ ಇಂಡಸ್ಟ್ರಿಗೆ ಗುಡ್‌ಬೈ? ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

Akshay Kumar: ಅಕ್ಷಯ್ ಕುಮಾರ್ ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಆಕ್ಷನ್, ಹಾಸ್ಯ, ಪ್ರಣಯ ಮತ್ತು ಸಾಮಾಜಿಕ ವಿಷಯ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶೀಘ್ರದಲ್ಲೇ, ಅವರ 'ವೆಲ್‌ಕಮ್' ಚಿತ್ರದ ಮುಂದುವರಿದ ಭಾಗ 'ವೆಲ್‌ಕಮ್ ಟು ದಿ ಜಂಗಲ್' ಬಿಡುಗಡೆಯಾಗಲಿದೆ. 'ವೆಲ್‌ಕಮ್ ಟು ದಿ ಜಂಗಲ್' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅವರು ಪ್ರತಿದಿನ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಹೇಳಿದರು.

Pranit More: ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು ಜಂಗ್ರಾ, ಸೇಜಲ್ ಪವಾರ್‌ಗೆ ಮಹಿಳಾ ಆಯೋಗ ನೋಟಿಸ್

ಬಿರಿಯಾನಿ ವಿವಾದ: ಪ್ರಣಿತ್ ಮೋರೆಗೆ ಮಹಿಳಾ ಆಯೋಗ ನೋಟಿಸ್

Pranit More: ಪ್ರಣಿತ್ ಮೋರೆ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದ ಸಂದರ್ಭದಲ್ಲಿ ಹಿಮಾಂಶು ಜಂಗ್ರಾ ಮಾಡಿದ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಪರಿಗಣಿಸಿದೆ . ₹ 375 ಬಿರಿಯಾನಿ ಜೋಕ್‌ಗೆ ಸಂಬಂಧಿಸಿದಂತೆ ಪ್ರಣಿತ್, ಹಿಮಾಂಶು ಮತ್ತು ಸೇಜಲ್ ಪವಾರ್ ವಿರುದ್ಧ ಮುಂಬೈ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .

Katrina Kaif :  ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ  ಚರ್ಚೆ

ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ ಚರ್ಚೆ

Katrina Kaif : ಪತಿ ವಿಕ್ಕಿ ಕೌಶಲ್ ಜೊತೆ 2025ರ ಕೊನೆಯಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡ ನಟಿ ಕತ್ರಿನಾ ಕೈಫ್, ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ನಟನೆಯಿಂದ ದೂರ ಉಳಿದು, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ, ಈಗ ಮತ್ತೆ ಕತ್ರಿನಾ ಆಕ್ಟಿಂಗ್‌ಗೆ ಮರಳಲು ಸಿದ್ಧರಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ʻಪೊಲೀಸ್ ಕಂಪ್ಲೈಂಟ್ʼ ಚಿತ್ರಕ್ಕಾಗಿ ಒಂದಾದ ವರಲಕ್ಷ್ಮೀ ಶರತ್‌ ಕುಮಾರ್ -‌ ರಾಗಿಣಿ ದ್ವಿವೇದಿ; ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್

Police Complaint ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಮದರ್ ಸೆಂಟಿಮೆಂಟ್

ಸ್ಯಾಂಡಲ್‌ವುಡ್‌‌ ನಟಿ ರಾಗಿಣಿ ದ್ವಿವೇದಿ ಹಾಗೂ ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ, ಮಹಿಳಾ ಪ್ರಧಾನ ಆ್ಯಕ್ಷನ್ ಥ್ರಿಲ್ಲರ್ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ಜೂನ್ 12 ರಂದು ಕರ್ನಾಟಕದ 70 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Loading...