ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

Love Mocktail 3 : ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ಎದುರಿಸಿದ ಲವ್ ಮಾಕ್ಟೇಲ್ 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

TVK ಪಕ್ಷದ ಗೆಲುವಿನ ಎಫೆಕ್ಟ್‌‌, ʻಜನ ನಾಯಗನ್‌ʼ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಭರ್ಜರಿ ಚೇಂಜ್: ವಿಜಯ್‌ ಫ್ಯಾನ್ಸ್‌ ಸಖತ್‌ ಥ್ರಿಲ್!

ʻಜನ ನಾಯಗನ್ʼ ಟೈಟಲ್ ಕಾರ್ಡ್ ಚೇಂಜ್; ʻದಳಪತಿʼ ವಿಜಯ್ ಫ್ಯಾನ್ಸ್ ಥ್ರಿಲ್

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಜಾಹೀರಾತುಗಳಲ್ಲಿ "ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್" ಎಂದು ಸಂಬೋಧಿಸಲಾಗಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ; ಸೊಸೆಗಾಗಿ ಮುದ್ದಿನ ಮಾವ ಧರಣಿ

Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ!

Annayya Serial: ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.

ʻಏಕ್ ದಿನ್ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಆಯ್ಕೆಯಾಗಿರಲಿಲ್ಲʼ; ಆಮಿರ್‌ ಖಾನ್‌ ಮಗನ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಹಿಂಗ್ಯಾಕೆ ಹೇಳಿದ್ರು?

ʻಆಮಿರ್‌ ಮಗನ ಸಿನಿಮಾಕ್ಕೆ ನಾನು ಸೂಕ್ತ ಆಯ್ಕೆ ಆಗಿರಲಿಲ್ಲʼ- ಸಾಯಿ ಪಲ್ಲವಿ

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ 'ಏಕ್ ದಿನ್' ಸಿನಿಮಾ ಸೋಲಿನ ಬೆನ್ನಲ್ಲೇ ನಾಯಕಿ ಸಾಯಿ ಪಲ್ಲವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಚಿತ್ರದ ಪಾತ್ರಕ್ಕೆ ತಾವು ಸರಿಯಾದ ಆಯ್ಕೆಯಲ್ಲ ಮತ್ತು ಗ್ಲಾಮರಸ್ ಆದ ಹೊಸ ಮುಖ ಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Actress Simran:  ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

Actress Simran: ಹಿಂದಿ ಚಲನಚಿತ್ರ ಸೆಟ್‌ಗಳಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ನಟಿ ಸಿಮ್ರಾನ್‌ ಸಂದರ್ಶನವೊಂದರಲ್ಲಿ (Interview) ಹೇಳಿಕೊಂಡಿದ್ದಾರೆ. ಸೌತ್‌ ನಟರ ಬಗ್ಗೆ ನಿರ್ಮಾಪಕರು ಕೂಡ ಚೌಕಾಶಿ ಮಾಡುತ್ತಾರೆ. ನನ್ನ ಜೀವನದ ಅರ್ಧಕ್ಕಿಂತ ಹೆಚ್ಚಿನದನ್ನು ನಾನು ಸಿನಿಮಾಗೆ ನೀಡಿದ್ದೇನೆ ಮತ್ತು ಅದರ ಹೊರತಾಗಿಯೂ, ನನಗೆ ಹೋದ ಕಡೆ ಗೌರವ ಕೊರತೆಯಿದ್ದರೆ, ಅದು ನೋವುಂಟು ಮಾಡುತ್ತದೆ. ಅದು ಅರ್ಥಹೀನ ಎಂದು ನೇರವಾಗಿ ಹೇಳಿದ್ದಾರೆ.

ʻಅಂದು 9 ಲಕ್ಷ, ಇಂದು 2 ಕೋಟಿʼ; ಹೊಸ ದಾಖಲೆ ಬರೆದ ಸತೀಶ್‌ ನೀನಾಸಂ - ರ‌ಚಿತಾ ರಾಮ್ ʻಅಯೋಗ್ಯ 2ʼ ಸಿನಿಮಾ

ದಾಖಲೆ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಸೇಲ್; ಸತೀಶ್ ಚಿತ್ರಕ್ಕೆ ಬೇಡಿಕೆ‌

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ 2' ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 2 ಕೋಟಿ ರೂ.ಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಮೊದಲ ಭಾಗದ 'ಏನಮ್ಮಿ ಏನಮ್ಮಿ' ಹಾಡಿನ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈ ಭಾರಿ ಮೊತ್ತಕ್ಕೆ ಹಕ್ಕುಗಳನ್ನು ಖರೀದಿಸಿದೆ.

Dr Rajkumar: ʻಪ್ರಚಾರಕ್ಕಾಗಿ ಮಾತಾಡುವವರ ಕಂಡು ಅಸಹ್ಯವಾಯಿತುʼ; ನಟ ಜಗ್ಗೇಶ್‌ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ?

ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ; ವಾರ್ನಿಂಗ್ ಕೊಟ್ಟ ಜಗ್ಗೇಶ್

ಡಾ. ರಾಜ್‌ಕುಮಾರ್ ಸಮಾಧಿ ಕುರಿತ ನಟ ಚೇತನ್ ಅಹಿಂಸಾ ಅವರ ವಿವಾದಾತ್ಮಕ ಹೇಳಿಕೆಗೆ ನಟ ಜಗ್ಗೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗಕ್ಕೆ ಅಡಿಪಾಯ ಹಾಕಿದ ಸಾಧಕರ ಬಗ್ಗೆ ಪ್ರಚಾರಕ್ಕಾಗಿ ಹಗುರವಾಗಿ ಮಾತನಾಡುವುದು ಅಸಹ್ಯ ಎಂದು ಜಗ್ಗೇಶ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

Nora Fatehi: ‘ಸರ್ಸೆ ಸರ್ಸೆ’ ಹಾಡು ವಿವಾದ; ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆ

‘ಸರ್ಸೆ ಸರ್ಸೆ’ ವಿವಾದ ; ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆ

Nora Fatehi: ʻಸರ್ಸೆ ಸರ್ಸೆʼ ಚಿತ್ರದ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಸಮನ್ಸ್ ಜಾರಿಯಾದ ನಂತರ ನಟಿ ನೋರಾ ಫತೇಹಿ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದರು . ವಿವಾದವನ್ನು ಉಲ್ಲೇಖಿಸಿದ ನೋರಾ, ಭಾವನೆಗಳನ್ನು ನೋಯಿಸುವ ಉದ್ದೇಶ ಎಂದಿಗೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು, ತಮ್ಮನ್ನು ಆ ಪರಿಸ್ಥಿತಿಗೆ ತಳ್ಳಲಾಗಿದೆ ಎಂದು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಕ್ಷಮೆಯಾಚಿಸಿದರು.

Maa Inti Bangaram: ‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ; ಹೊಸ ದಿನಾಂಕ ರಿವೀಲ್‌

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ; ಹೊಸ ದಿನಾಂಕ ರಿವೀಲ್‌

Maa Inti Bangaram: ಮಾ ಇಂಟಿ ಬಂಗಾರಂ ನಂದಿನಿ ರೆಡ್ಡಿ ನಿರ್ದೇಶನದ ಈ ಸಿನಿಮಾ, ಸಮಂತಾ ರುತ್ ಪ್ರಭು, ರಾಜ್ ನಿಡಿಮೋರು ಮತ್ತು ಹಿಮಾಂಕ್ ದುವ್ವೂರು ನಿರ್ಮಿಸಿದ್ದಾರೆ. ಸಮಂತಾ ಅವರಲ್ಲದೆ, ದಿಗಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಚಿತ್ರ ತೆರೆಗೆ ಬರುತ್ತಿಲ್ಲ, ಬದಲಿಗೆ ಬೇರೆ ದಿನಾಂಕವನ್ನು ರಿಲೀಸ್​​ಗೆ ನಿಗದಿ ಮಾಡಲಾಗುತ್ತಿದೆ. ಮೇ 15 ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದೂಡಲಾಗಿರುವುದರಿಂದ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕಾರಣ ಆದ್ರೂ ಏನು?

ದಿಢೀರ್‌ ಅಂತ ʻದಳಪತಿʼ ವಿಜಯ್‌ ಪರ ಬ್ಯಾಟ್‌ ಬೀಸಿದ ಕಮಲ್‌ ಹಾಸನ್‌‌ - ಪ್ರಕಾಶ್‌ ರಾಜ್;‌ ತಮಿಳುನಾಡು ರಾಜ್ಯಪಾಲರ ಧೋರಣೆಗೆ ಸಿಡಿಸಿಡಿ!

ʻದಳಪತಿʼ ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್ - ಪ್ರಕಾಶ್ ರಾಜ್

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅತಿಹೆಚ್ಚು ಸ್ಥಾನ ಗೆದ್ದಿದ್ದರೂ, ಬಹುಮತಕ್ಕೆ 10 ಸೀಟುಗಳ ಕೊರತೆ ಎದುರಾಗಿದೆ. ಈ ನಡುವೆ ಸರ್ಕಾರ ರಚನೆಗೆ ಮುನ್ನವೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ ರಾಜ್ಯಪಾಲರ ನಡೆಯನ್ನು ಖಂಡಿಸಿ, ವಿಜಯ್ ಪರವಾಗಿ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ನಿಂತಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Actor Yash: ಜಾಗತಿಕ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮಿಂಚಿಂಗ್‌; ಇದು ‘ದಿ ಯಶ್ ಎಫೆಕ್ಟ್’!

Actor Yash: ಜಾಗತಿಕ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮಿಂಚಿಂಗ್‌!

Actor Yash: ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ. ‘ಇದು ಯಶ್ ಎಫೆಕ್ಟ್’ ಎಂದು ಬರೆದಿದೆ. ಐಷಾರಾಮಿ ಕಾರಿನ ಒಳಗೆ ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ ಯಶ್ ಸ್ಟೈಲಿಶ್‌ ಪೋಸ್‌ ಕೊಟ್ಟಿದ್ದಾರೆ. ಈ ಪೋಟೋಗೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಇನ್ನೂ ಕೆಲವರು ಗೀತು ಮೋಹನ್‌ ದಾಸ್‌ ಅವರೊಂದಿಗೆ ಯಶ್‌ ಸಿನಿಮಾ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ; ಪೊಲೀಸ್ ಕೈಗೆ ಸಿಕ್ಕಿರೋ ಕೇಡಿ ಕತೆ ಹರೋಹರ!

Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ

Amruthadhaare Serial: ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದ. ಜಯದೇವ್​​ ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್​ಗೆ ಒಳಗಾಗಿದ್ದಾನೆ. ಊಟಕ್ಕೂ ಗತಿ ಇಲ್ಲದೇ ಅಲೆದಾಡುತ್ತಿದ್ದಾನೆ. ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ.

ನಟ ವಿಜಯ್‌ ಸಹೋದರಿ ವಿದ್ಯಾ ಸಾವನ್ನಪ್ಪಿದ್ದು ಹೇಗೆ? ʻದಳಪತಿʼ ಬದುಕನ್ನೇ ಬದಲಿಸಿತು ತಂಗಿಯ ನಿಧನ!

ವಿಜಯ್ ಕೈಯಲ್ಲೇ ಪ್ರಾಣಬಿಟ್ಟಿದ್ದ ತಂಗಿ; ಮೌನಿಯಾದ ʻದಳಪತಿʼ ಕಣ್ಣೀರಿನ ಕಥೆ!

ತಮಿಳುನಾಡು ಸಿಎಂ ಆಗಲು ಸಜ್ಜಾಗಿರುವ ನಟ ವಿಜಯ್ ಅವರ ಯಶಸ್ಸಿನ ಹಿಂದೆ ಮರೆಯಲಾಗದ ನೋವಿನ ಕಥೆಯಿದೆ. 1984ರಲ್ಲಿ ತಮ್ಮ ಮುದ್ದಿನ ತಂಗಿ ವಿದ್ಯಾ ಅವರನ್ನು ಅಕಾಲಿಕವಾಗಿ ಕಳೆದುಕೊಂಡ ವಿಜಯ್, ಅತ್ಯಂತ ಚಟುವಟಿಕೆಯ ಹುಡುಗನಿಂದ ಮೌನಿಯಾಗಿ, ಅಂತರ್ಮುಖಿಯಾಗಿ ಬದಲಾದರು.

‘ಬಾವ ಬಾವ’ ಹಾಡಿನಿಂದ ಸದ್ದು ಮಾಡಿದ ʻಸಿಟಿಲೈಟ್ಸ್‌ʼ; ವಿಜಯ್‌ ಕುಮಾರ್‌ ನಿರ್ದೇಶನದಲ್ಲಿ ವಿನಯ್‌ ರಾಜ್‌ಕುಮಾರ್‌ಗೆ ಹೊಸ ಲುಕ್‌!

ವಿನಯ್ ನಟನೆಯ 'ಸಿಟಿಲೈಟ್ಸ್‌' ಚಿತ್ರದ 'ಬಾವ ಬಾವ' ಸಾಂಗ್ ರಿಲೀಸ್!

ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಸಾರಥ್ಯದ ‘ಸಿಟಿಲೈಟ್ಸ್‌’ ಚಿತ್ರದ ‘ಬಾವ ಬಾವ’ ಎಂಬ ರ್ಯಾಪ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೂಲಕ ವಿಜಯ್ ಪುತ್ರಿ ಮೋನಿಷಾ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಗಣಿತದಲ್ಲಿ ಕಡಿಮೆ ಅಂಕ, ತಮಿಳಿನಲ್ಲಿ ಟಾಪರ್: ದಳಪತಿ ವಿಜಯ್ 10ನೇ ತರಗತಿ ಅಂಕಪಟ್ಟಿ ವೈರಲ್

ದಳಪತಿ ವಿಜಯ್ 10ನೇ ತರಗತಿಯಲ್ಲಿ ಪಡೆದ ಅಂಕವೆಷ್ಟು ಗೊತ್ತಾ?

ದಳಪತಿ ವಿಜಯ್ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ'ತಮಿಳಗ ವೆಟ್ರಿ ಕಳಗಂ'(TVK) ಪಕ್ಷದ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಆ ಮೂಲಕ ಚಿತ್ರರಂಗದ ಬಲಿಕ ರಾಜಕೀಯದಲ್ಲೂ ಮಿಂಚಿದ್ದಾರೆ. ಇದೀಗ ವಿಜಯ್ ಅವರ ಹತ್ತನೆ ತರಗತಿಯ ಅಂಕ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Trisha Krishnan: ತಿರುಚ್ಚಿರಾಪಳ್ಳಿ ಕ್ಷೇತ್ರದಿಂದ ತ್ರಿಷಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ?

ತಿರುಚ್ಚಿರಾಪಳ್ಳಿ ಕ್ಷೇತ್ರದಿಂದ ತ್ರಿಷಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ?

Tiruchirappalli East: ನಟಿ ತ್ರಿಶಾ ಕೃಷ್ಣನ್ ಕೂಡ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ದಳಪತಿ ವಿಜಯ್ ಹಾಗೂ ನಟಿ ತ್ರಿಷಾ ‘ಗಿಲ್ಲ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಜನ್ಮದಿನದಂದು ತಿರುಪತಿಗೆ ಭೇಟಿ ನೀಡಿದ್ದ ತ್ರಿಷಾ, ಆನಂತರ ವಿಜಯ್‌ ನಿವಾಸಕ್ಕೆ ತೆರಳಿದ್ದರು. ಇದೀಗ ತ್ರಿಷಾ ರಾಜಕೀಯಕ್ಕೆ ಬರೋದು ಗ್ಯಾರೆಂಟಿ ಎಂಬ ಗಾಳಿಸುದ್ದಿ ಹಬ್ಬಿದೆ.

Aamir Khan:‌ 3 ಇಡಿಯಟ್ಸ್’ ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಈ ಬಾಲಿವುಡ್ ಖ್ಯಾತ ನಟ?

3 ಇಡಿಯಟ್ಸ್’ ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಈ ಬಾಲಿವುಡ್ ಖ್ಯಾತ ನಟ?

Aamir Khan:‌ ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ನಾಲ್ಕು ಜನ ಗೆಳೆಯರ ಕತೆಯನ್ನು ರಾಜ್​ಕುಮಾರ್ ಹಿರಾನಿ ಈ ಬಾರಿ ನಿರ್ದೇಶಿಸಲಿದ್ದು ಈ ಸಿನಿಮಾಕ್ಕೆ ‘4 ಇಡಿಯಟ್ಸ್’ ಎಂದು ಹೆಸರಿಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಜೊತೆ ಈ ನಟ ಇರಲಿದ್ದಾರಂತೆ.

Ranbir Kapoor : ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಗರಂ; ವಿಡಿಯೋ ವೈರಲ್‌

ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಗರಂ; ವಿಡಿಯೋ ವೈರಲ್‌

Ranbir Kapoor :. ಪಾಪರಾಜಿಗಳು ಅಕ್ಷರಶಃ ಅವರನ್ನು ಸುತ್ತುವರಿದು ಫೋಟೋ ತೆಗೆಯಲು ಮುಗಿಬಿದ್ದರು. ರಣಬೀರ್ ಕಪೂರ್ (Ranbir Kapoor) ಅವರು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಮಂಗಳವಾರ, ರಣಬೀರ್ ಮತ್ತು ಆಲಿಯಾ 'ದಾದಿ ಕಿ ಶಾದಿ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಲು ಮುಂಬೈಗೆ ತೆರಳಿದರು.

ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ 'ಸು ಫ್ರಮ್ ಸೋ’ ನಟ ಜೆಪಿ ತುಮ್ಮಿನಾಡು!

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸು ಫ್ರಮ್ ಸೋ’ ನಟ ಜೆಪಿ ತುಮ್ಮಿನಾಡು!

J. P. Thuminad: ಜೆಪಿ ಅವರು ರಶ್ಮಿಕಾ ಎಂಬ ಹೆಸರಿನ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ದ್ದಾರೆ. ಮಂಗಳೂರಿನಲ್ಲಿ ಮದುವೆ ಸಮಾರಂಭ ನಡೆದಿದ್ದು ಆಪ್ತರು ಹಾಗೂ ಕುಟುಂಬದವರ ಜೊತೆ ಮದುವೆ ಕಾರ್ಯಕ್ರಮ ನಡೆದಿದೆ‌. 14 ವರ್ಷಗಳಿಂದ ಈ ಜೋಡಿಯೂ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಸಿಂಗಲ್ ಲೈಫ್ ಗೆ ಗುಡ್ ಬೈ ಹೇಳಿದ್ದಾರೆ.

Deepika Padukone: ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್; ಮತ್ತೆ ಲೀಕ್‌ ಆಯ್ತು ದೃಶ್ಯ

ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್; ಮತ್ತೆ ಲೀಕ್‌ ಆಯ್ತು ದೃಶ್ಯ

Deepika Padukone: ನಿರ್ದೇಶಕ ಸಿದ್ಧಾರ್ಥ್ ಆನಂದ್ ಅಭಿಮಾನಿಗಳು ಚಿತ್ರದ ಸೋರಿಕೆಯಾದ ವಿಷಯಗಳನ್ನು ಹಂಚಿಕೊಳ್ಳದಂತೆ ಕೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಹೊಸ ವೀಡಿಯೊದಲ್ಲಿ ನಟರಾದ ಶಾರುಖ್ ಖಾನ್ (Sharukh Khan) ಮತ್ತು ದೀಪಿಕಾ ಪಡುಕೋಣೆ ದಕ್ಷಿಣ ಆಫ್ರಿಕಾದ ಸೂರ್ಯಾಸ್ತದ ಸಮಯದ ಬೀಚ್‌ನಲ್ಲಿ ರೊಮ್ಯಾಂಟಿಕ್‌ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು.

Amruthadhaare Serial:  ಜೆಡಿಗೆ ವಿಧಿಯ ಶಾಪ; ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!

ಜೆಡಿಗೆ ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!

Amruthadhaare Serial: ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್‌ ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ.

Karan Johar: ಮೆಟ್ ಗಾಲಾದಲ್ಲಿ ಮಿಂಚಿದ  ಕರಣ್ ಜೋಹರ್; ಶಾರುಖ್‌ ಬಗ್ಗೆ ಏನು ಹೇಳಿದ್ರು?

Karan Johar: ಮೆಟ್ ಗಾಲಾದಲ್ಲಿ ಮಿಂಚಿದ ಕರಣ್ ಜೋಹರ್!

Met Gala: ಮೆಟ್ ಗಾಲಾ 2026 ರಲ್ಲಿ ಕರಣ್ ಜೋಹರ್ ತಮ್ಮ ಚೊಚ್ಚಲ ಪ್ರದರ್ಶನ ನೀಡಿದರು. ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಹಾಜರಾದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕರಾಗಿ ಐತಿಹಾಸಿಕ ಕ್ಷಣವನ್ನು ಗುರುತಿಸಿದರು. ಈ ಸಂದರ್ಭಕ್ಕಾಗಿ, ಅವರು ಮನೀಶ್ ಮಲ್ಹೋತ್ರಾ ಅವರ ಕಸ್ಟಮ್ ಧರಿಸಿದ್ದರು, ಬಟ್ಟೆಯ ವಿನ್ಯಾಸವು ರಾಜಾ ರವಿವರ್ಮರ ಸಾಂಪ್ರದಾಯಿಕ ಕಲಾಕೃತಿಗಳಿಂದ ಸ್ಫೂರ್ತಿ ಪಡೆದಿದೆ.

RB Choudary: ರಸ್ತೆ ಅಪಘಾತದಲ್ಲಿ ಖ್ಯಾತ ನಿರ್ಮಾಪಕ ಆರ್‌. ಬಿ ಚೌಧರಿ ನಿಧನ; ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಕಂಬನಿ

ರಸ್ತೆ ಅಪಘಾತದಲ್ಲಿ ಖ್ಯಾತ ನಿರ್ಮಾಪಕ ಆರ್‌. ಬಿ ಚೌಧರಿ ನಿಧನ

RB Choudary: ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಸೂಪರ್ ಗುಡ್ ಫಿಲ್ಮ್ಸ್’ ಸಂಸ್ಥಾಪಕ ಹಾಗೂ ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ರಜನಿಕಾಂತ್ , ಪವನ್ ಕಲ್ಯಾಣ್, ಖುಷ್ಬೂ ಸುಂದರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಚೌಧರಿ ಅವರು ಸೂಪರ್ ಗುಡ್ ಫಿಲ್ಮ್ಸ್ ನ ಸ್ಥಾಪಕರಾಗಿದ್ದರು ಮತ್ತು ಹಲವಾರು ಯಶಸ್ವಿ ವೃತ್ತಿಜೀವನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Kannada New Movie: ‘ಮೃತ್ಯುದೇವತೆ’ ಸಿನಿಮಾ ಹಾಡು ರಿಲೀಸ್‌ ಮಾಡಿದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್

‘ಮೃತ್ಯುದೇವತೆ’ ಸಿನಿಮಾ ಹಾಡು ರಿಲೀಸ್‌ ಮಾಡಿದ ಓಂ ಸಾಯಿ ಪ್ರಕಾಶ್

Kannada New Movie: ಸಮಾಜದಲ್ಲಿ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಪ್ರಕರಣಗಳು, ಹೀಗೆ ಟ್ರ್ಯಾಪ್ ಗೆ ಒಳಗಾದ ಮೂರು ಹೆಣ್ಣು ಮಕ್ಕಳು ಹೇಗ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹದೇವ್ ಅವರು ನಿರ್ದೇಶಿಸಿರುವ ಚಿತ್ರ ಮೃತ್ಯುದೇವತೆ.

Loading...