ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ನಟಿ ಶ್ರುತಿ ಅಭಿನಯದ 175ನೇ ಚಿತ್ರ ‘ಮದರ್’ಗೆ ಮುಹೂರ್ತ; ಅವಕಾಶ ಕೊಟ್ಟ ಅಣ್ಣಾವ್ರು, ಹಿಟ್‌ ಚಿತ್ರ ನೀಡಿದ ದ್ವಾರಕೀಶ್‌ರನ್ನು ನೆನೆದು ಭಾವುಕರಾದ ʻಕರ್ಪೂರದ ಗೊಂಬೆʼ

175ನೇ ಸಿನಿಮಾ ʻಮದರ್‌ʼ ಮುಹೂರ್ತದಲ್ಲಿ ಅಣ್ಣಾವ್ರನ್ನು ನೆನೆದ ನಟಿ ಶ್ರುತಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅಭಿನಯದ 175ನೇ ಚಿತ್ರ ‘ಮದರ್’ ಸಿನಿಮಾಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಮಂಡ್ಯದ ಹಿನ್ನೆಲೆಯ ಅನಕ್ಷರಸ್ಥ ಮಹಿಳೆಯ ರಗಡ್ ಹೋರಾಟದ ಕಥೆಯಿರುವ ಈ ಚಿತ್ರದ ಮುಹೂರ್ತಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದರು.

ಡಾಕ್ಯುಮೆಂಟರಿ ರೂಪದಲ್ಲಿ ತೆರೆಮೇಲೆ ಬರಲಿದೆ ʻಸೋಲಿಲ್ಲದ ಸರದಾರʼ ಖ್ಯಾತಿಯ 'ಬೆಳ್ಳೂಡಿ ಕಾಳಿ' ಟಗರಿನ ಯಶೋಗಾಥೆ

ʻಬೆಳ್ಳೂಡಿ ಕಾಳಿʼ ಟಗರಿನ ಬಯೋಪಿಕ್; ದೃಶ್ಯರೂಪದಲ್ಲಿ ಸೋಲಿಲ್ಲದ ಸರದಾರನ ಕಥೆ

ಟಗರು ಕಾಳಗದ ಇತಿಹಾಸದಲ್ಲಿ 'ಸೋಲಿಲ್ಲದ ಸರದಾರ' ಎಂದೇ ಖ್ಯಾತಿ ಗಳಿಸಿದ್ದ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ 'ಬೆಳ್ಳೂಡಿ ಕಾಳಿ' ಟಗರಿನ ರೋಚಕ ಯಶೋಗಾಥೆ ಈಗ 'ಕಾಳಿ-ದಿ ಗೋಟ್' ಹೆಸರಿನಲ್ಲಿ ಡಾಕ್ಯುಮೆಂಟರಿ ಆಗುತ್ತಿದೆ. ನಿರ್ದೇಶಕ ಗಿರೀಶ್ ಜಿ. ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಡಾಕ್ಯುಮೆಂಟರಿಯು ಸದ್ಯ ಪೋಸ್ಟ್‌ ಪ್ರೊಡಕ್ಷನ್ಸ್‌ ಹಂತದಲ್ಲಿದೆ.

ಧನುಷ್ ನಟನೆಯ ಹೊಸ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ? ಈ ಸಿನಿಮಾದ ಟೈಟಲ್‌ ಏನು?

ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಧನುಷ್ ಅವರ 55ನೇ ಚಿತ್ರವು ಭಾರಿ ಕುತೂಹಲ ಮೂಡಿಸಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದರೆ ಎಂಬ ಮಾಹಿತಿ ಸಿಕ್ಕಿದೆ. ಧನುಷ್ ಜೊತೆಗೆ ಮಮ್ಮುಟ್ಟಿ, ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ತಮಿಳಿನ ಖ್ಯಾತ ನಟಿ ಐಶ್ವರ್ಯಾ ರಾಜೇಶ್!

‌ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಐಶ್ವರ್ಯಾ ರಾಜೇಶ್ ಎಂಟ್ರಿ

ತಮಿಳು ಹಾಗೂ ತೆಲುಗಿನ ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ಕೊನೆಗೂ ಅನಿವಾಸಿ ಭಾರತೀಯ ಅಮೋಘ್ ವಿಜಯ್ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯುಎಸ್‌ಎ ಮೂಲದ 'ಮ್ಯಾವ್ರಿಕ್ ಪ್ರೊಡಕ್ಷನ್ಸ್' ನಿರ್ಮಿಸಲಿರುವ ಈ ಮಹಿಳಾ ಪ್ರಧಾನ ಸಿನಿಮಾವು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಮೂಡಿಬರಲಿದೆ.

'ಲವ್ ಕೇಸ್' ಸಿನಿಮಾದಲ್ಲಿ ʻಕಾಂತಾರʼ ಖ್ಯಾತಿಯ ರಂಜನ್‌ಗೆ ʻಮಹಾನಟಿʼ ವಂಶಿ ಜೋಡಿ; ಅದ್ದೂರಿಯಾಗಿ ಮುಗಿದ ಶೂಟಿಂಗ್‌

ಲವ್ ಕೇಸ್ ಶೂಟಿಂಗ್ ಕಂಪ್ಲೀಟ್; ʻಕಾಂತಾರʼ ರಂಜನ್‌ಗೆ ಜೋಡಿಯಾದ ಮಹಾನಟಿ ವಂಶಿ

‘ಲವ್ ಕೇಸ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜೈಶ್ ನಿರ್ದೇಶನದ, ಮೋಹನ್ ಬಾಬು ನಿರ್ಮಿಸಿರುವ ಈ ಚಿತ್ರದಲ್ಲಿ ‘ಕಾಂತಾರ’ ಖ್ಯಾತಿಯ ರಂಜನ್ ಹಾಗೂ ‘ಮಹಾನಟಿ’ ವಂಶಿ ಜೋಡಿಯಾಗಿ ನಟಿಸಿದ್ದಾರೆ.

Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

Darshan Case:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದರು. ಒಟ್ಟು 7 ಮಂದಿ ಆರೋಪಿಗಳ ಜಾಮೀನು ರದ್ದತಿಗೆ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಐವರು ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಜಯ ಸಿಕ್ಕಂತಾಗಿದ್ದು, ತನಿಖಾ ಸಂಸ್ಥೆಗೆ ಕಾನೂನಾತ್ಮಕವಾಗಿ ಹಿನ್ನಡೆಯಾದಂತಾಗಿದೆ.

Alia Bhatt: ʻಆಲ್ಫಾʼ ಟೀಸರ್ ಬಿಡುಗಡೆ; ಆಲಿಯಾ ಭಟ್ ಬಗ್ಗೆ ಅಮಿತಾಭ್‌ ಮೆಚ್ಚುಗೆ

ʻಆಲ್ಫಾʼ ಟೀಸರ್ ಬಿಡುಗಡೆ; ಆಲಿಯಾ ಭಟ್ ಬಗ್ಗೆ ಅಮಿತಾಭ್‌ ಮೆಚ್ಚುಗೆ

Alia Bhatt: "ಫಸ್ಟ್ ಕಿಲ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆಲ್ಫಾದಲ್ಲಿ ಆಲಿಯಾ ಭಟ್ ನಟ ಬಾಬಿ ಡಿಯೋಲ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಟೀಸರ್ ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಆಲಿಯಾ ಅವರ ಆಕ್ಷನ್-ಪ್ಯಾಕ್ಡ್ ಶೈಲಿಯು ಇಡೀ ಟೀಸರ್‌ನ ಕೇಂದ್ರಬಿಂದುವಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಪ್ರಸ್ತುತ, ಆಲ್ಫಾ ಟೀಸರ್‌ನಲ್ಲಿ ಬಾಬಿ ಮತ್ತು ಆಲಿಯಾ ಮಾತ್ರ ಹೈಲೈಟ್ ಆಗಿದ್ದಾರೆ.

ʻಬಿಗ್‌ ಬಾಸ್‌ʼ ಖ್ಯಾತಿಯ ತನಿಷಾ ಕುಪ್ಪಂಡ ನಟನೆಯ ʻಊರಬ್ಬʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ ಕುಣಿಗಲ್ ಶಾಸಕ ರಂಗನಾಥ್

‘ಊರಬ್ಬ’ ಚಿತ್ರಕ್ಕಾಗಿ ಉಜ್ಜಿನಿ ಚೌಡೇಶ್ವರಿ ಜಾತ್ರೆಯಲ್ಲಿ ಲೈವ್ ಶೂಟಿಂಗ್

ಮಾಗಡಿ ತಾಲೂಕಿನ ಪ್ರಸಿದ್ಧ ಶ್ರೀ ಉಜ್ಜಿನಿ ಚೌಡೇಶ್ವರಿ ದೇವಿಯ ಜಾತ್ರೆಯ ನೈಜ ಘಟನೆಗಳ ಆಧಾರಿತ ‘ಊರಬ್ಬ’ ಚಿತ್ರದ ಟ್ರೇಲರ್ ಅನ್ನು ಶಾಸಕ ರಂಗನಾಥ್ ಬಿಡುಗಡೆ ಮಾಡಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ ಈ ಚಿತ್ರವನ್ನು ಭಾರತದಲ್ಲೇ ಮೊದಲ ಬಾರಿಗೆ 8 ಕ್ಯಾಮೆರಾಗಳ ಮೂಲಕ ಲೈವ್ ಜಾತ್ರೆಯಲ್ಲೇ ಶೂಟ್ ಮಾಡಲಾಗಿದೆ.

ʻಬಲರಾಮನ ದಿನಗಳುʼ  ಚಿತ್ರದ ʻಕ್ವಾಟರುʼ ಸಾಂಗ್‌ ರಿಲೀಸ್‌ ಮಾಡಿದ ನಟಿ ತಾರಾ ಅನುರಾಧ; ಸಿನಿಮಾ ವಿತರಣೆಗೆ ಸಾಥ್‌ ನೀಡಿದ ಕೆವಿಎನ್‌ ಪ್ರೊಡಕ್ಷನ್ಸ್‌

ʻಬಲರಾಮನ ದಿನಗಳುʼ ಸಿನಿಮಾದ ಹೊಸ ಸಾಂಗ್ ರಿಲೀಸ್‌ ಮಾಡಿದ ನಟಿ ತಾರಾ ಅನುರಾಧ‌

ಕೆ.ಎಂ. ಚೈತನ್ಯ ನಿರ್ದೇಶನದ, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ ‘ಬಲರಾಮನ ದಿನಗಳು’ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು..’ ಹಾಡನ್ನು ನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದ್ದಾರೆ. ‘ಆ ದಿನಗಳು’ ಚಿತ್ರದ 19 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಸಂಶೋಧನೆ ನಡೆಸಿ ಈ ಬೃಹತ್ ಬಜೆಟ್ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.

‘ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನೇ ಖುದ್ದಾಗಿ ತಿಳಿಸುತ್ತೇನೆ, ಸಮಯ ಕೊಡಿ’; ವಿಚ್ಛೇದನದ ವದಂತಿಗಳಿಗೆ ನಟಿ ಶುಭಾ ಪೂಂಜಾ ಪ್ರತಿಕ್ರಿಯೆ

ʻನನ್ನ ವೈಯಕ್ತಿಕ ಜೀವನದ ಬಗ್ಗೆ ನಾನೇ ತಿಳಿಸುತ್ತೇನೆ'; ಶುಭಾ ಪೂಂಜಾ ಮನವಿ

ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ವರದಿ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವದಂತಿಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿರುವ ಶುಭಾ, ತಮಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Amruthadhaare Serial: ಕೇಡಿ ಜೈದೇವ್‌ ಮುಖವಾಡ ಕಳಚಿ ಬೀಳೋ ಹೊತ್ತು ಬಂದಾಯ್ತು!

Amruthadhaare: ಕೇಡಿ ಜೈದೇವ್‌ ಮುಖವಾಡ ಕಳಚಿ ಬೀಳೋ ಹೊತ್ತು ಬಂದಾಯ್ತು!

Amruthadhaare Serial: ಅಮೃತಧಾರೆಯಲ್ಲಿ (amruthadhaare) ಮಿಂಚು ಹುಡುಕಾಟ, ಗೌತಮ್ ಬಂಧನ ಮತ್ತು ಜೈದೇವ್‌ನ ಕುತಂತ್ರಗಳ ನಡುವೆ ಕಥೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಅಂತೂ ಮಿಂಚುಳನ್ನು ಕಾಪಾಡಿಕೊಂಡಿದ್ದಾಳೆ ಭೂಮಿ. ಆದರೀಗ ಕೇಡಿ (KD) ಮುಖವಾಡ ಕಳಚಿಬೀಳೋ ಹೊತ್ತು ಬಂದಂತಿದೆ.

Kiccha Sudeep: ಮುಂದಿನ ಯೋಜನೆಗಳ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಘೋಷಣೆ; ಫ್ಯಾನ್ಸ್‌ ಖುಷ್‌!

ಮುಂದಿನ ಯೋಜನೆಗಳ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಘೋಷಣೆ

Kiccha Sudeep: ಇಷ್ಟು ದಿನ ಕಿಚ್ಚನ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈ ಒಂದೇ ಒಂದು ಪೋಸ್ಟ್ ಖುಷಿ ನೀಡಿದೆ. ಕಿಚ್ಚ ಸುದೀಪ್ ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ನೀಡಿದ್ದಾರೆ.

Salman Khan : ಗೆಳತಿ ನಿಧನದಿಂದ ತೀವ್ರ ದುಃಖಿತರಾದ ಸಲ್ಮಾನ್‌ ಖಾನ್‌; ಯಾರು ಈ ಕುಮುದ್ ರಾಣೆ ?

salman Khan : ಗೆಳತಿ ನಿಧನದಿಂದ ತೀವ್ರ ದುಃಖಿತರಾದ ಸಲ್ಮಾನ್‌ ಖಾನ್‌

Salman Khan : ಮಂಗಳವಾರ ಮುಂಬೈನಲ್ಲಿ ಕುಮುದ್ ರಾಣೆ ಅಂತ್ಯಕ್ರಿಯೆ ನಡೆಸಲಾಯಿತು. ಕುಮುದ್ ರಾಣೆ ಅವರ ಮರಣದ ನಂತರ, ಸಲ್ಮಾನ್ ಖಾನ್ ಅಳುತ್ತಿರುವ ವಿಡಿಯೋವೊಂದು ಕಾಣಿಸಿಕೊಂಡಿದೆ. ಸಲ್ಮಾನ್ ಖಾನ್ ಕುಮುದ್ ರಾಣೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಮುದ್ ರಾಣೆ ನಟನಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ (Family) ತುಂಬಾ ಆಪ್ತರಾಗಿದ್ದರು.

Bharathiraja: ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿರಾಜ  ನಿಧನ

ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿರಾಜ ನಿಧನ

Bharathiraja: ನಟ ಭಾರತಿರಾಜ (Bharathiraja) ಅವರು ಜೂನ್ 10 ಬುಧವಾರದಂದು ವಯೋಸಹಜ ಸಮಸ್ಯೆಗಳಿಂದಾಗಿ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. "ನಮ್ಮ ಸಂಘದ ಹಿರಿಯ ಸದಸ್ಯರಲ್ಲಿ ಒಬ್ಬರೂ, ಮಾಜಿ ಅಧ್ಯಕ್ಷರೂ ಆಗಿದ್ದ ನಿರ್ದೇಶಕ ಶ್ರೀ ಭಾರತಿರಾಜ ಅವರು ಇಂದು ಮುಂಜಾನೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

Chaitra Rao: ಕೂದಲಿಗೆ ಕತ್ತರಿ, ಶಾಕಿಂಗ್‌ ವಿಚಾರ ತೆರೆದಿಟ್ಟ 'ಗಿಣಿರಾಮ' ಆಯಿಸಾಹೇಬ್​!

ಕೂದಲಿಗೆ ಕತ್ತರಿ, ಶಾಕಿಂಗ್‌ ವಿಚಾರ ತೆರೆದಿಟ್ಟ 'ಗಿಣಿರಾಮ' ಆಯಿಸಾಹೇಬ್​!

Chaitra Rao: ಗಿಣಿರಾಮ ಬಳಿಕ ‘ಕೆಂಡಸಂಪಿಗೆ’ ಧಾರಾವಾಹಿ ಮಾಡಿದರ. ‘ಅವನು ಮತ್ತೆ ಶ್ರಾವಣಿ’. ಇದರಲ್ಲಿ ಕೂಡ ನೆಗೆಟಿವ್‌ ಪಾತ್ರ ಮಾಡಿದ್ದರು. ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಸೀರಿಯಲ್‌ ಮಾಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಸುಲಲಿತವಾಗಿ ಮಾತನಾಡಿ ವೀಕ್ಷಕರ ಮನ ಗೆದ್ದಿದ್ದರು. ಆದರೆ ನಟಿ ಸೀರಿಯಲ್‌ ಬಳಿಕ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ಉತ್ತರ ಸಿಕ್ಕಿದೆ. ಜೊತೆಗೆ ಶಾಕಿಂಗ್​ ವಿಷ್ಯವನ್ನೂ ತಿಳಿಸಿದ್ದಾರೆ.

Allu Arjun: ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌! ಏನಂದ್ರು?

ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌! ಏನಂದ್ರು?

Allu Arjun: ಅಲ್ಲು ಅರ್ಜುನ್ ಅವರ ಈ ಟ್ವೀಟ್‌ನಿಂದ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಹಲವು ದಿನಗಳಿಂದ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರ ಜೊತೆಗೆ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಸ್ವಲ್ಪ ಅಂತರವಿದೆ ಎಂಬ ವದಂತಿಗಳೂ ಹಬ್ಬಿದ್ದವು. ಇನ್ನು, 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಐದು ದಿನಗಳಲ್ಲಿ 249 ಕೋಟಿ ರೂ. ಗಳಿಸಿದೆ.

Karikaada Kannada movie: ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ  ಈ ಒಟಿಟಿಯಲ್ಲಿ ಪ್ರಸಾರ!

ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ಈ ಒಟಿಟಿಯಲ್ಲಿ ಪ್ರಸಾರ!

Karikaada Kannada movie: ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು.‌ ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು.

ಪತ್ನಿ ಆರತಿ ಜೊತೆಗಿನ ವಿಚ್ಛೇದನ ಪ್ರಕರಣದಲ್ಲಿ ನಟ ರವಿ ಮೋಹನ್‌ಗೆ ಹಿನ್ನಡೆ; ಜೀವನಾಂಶ ಅರ್ಜಿಯ ವಿಚಾರಣೆಗೆ ಕಾಲಾವಕಾಶ ಕೇಳಿದ್ದಕ್ಕೆ ಹೈಕೋರ್ಟ್ ಹೇಳಿದ್ದೇನು?

ನಟ ʻಜಯಂʼ ರವಿಗೆ ಹೈಕೋರ್ಟ್ ಶಾಕ್; ಪತ್ನಿ ಜೀವನಾಂಶ ಕೇಸ್‌ನಲ್ಲಿ ಹಿನ್ನಡೆ!

ಪತ್ನಿ ಆರತಿ ಸಲ್ಲಿಸಿರುವ ಮಧ್ಯಂತರ ಜೀವನಾಂಶ ಅರ್ಜಿಯ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದ ನಟ ರವಿ ಮೋಹನ್ (ʻಜಯಂʼ ರವಿ) ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟನಿಗೆ ಭಾರಿ ಹಿನ್ನಡೆಯಾಗಿದೆ. ಮಕ್ಕಳ ಶಾಲಾ ಶುಲ್ಕ ಹಾಗೂ ಜೀವನಾಂಶ ಪಾವತಿಸದ ಕಾರಣ ಆರತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Kangana Ranaut: ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ

ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ

Kangana Ranaut: ಒಂದು ಕಾಲದಲ್ಲಿ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಮಾಡಿದ್ದಕ್ಕೆ ಹೆಸರುವಾಸಿಯಾಗಿದ್ದರು. ಆ ಪಾತ್ರಗಳು ಅವರ ಆರಂಭಿಕ ಪರದೆಯ ಇಮೇಜ್ ಅನ್ನು ವ್ಯಾಖ್ಯಾನಿಸಿದವು ಆದರೆ ಅವರ ವೃತ್ತಿಜೀವನದ ಹಾದಿಯನ್ನು ನಿರ್ಧರಿಸಲಿಲ್ಲ ಎಂದು ಹೇಳಿದ್ದಾರೆ. ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಸಜ್ಜಾದ ಸ್ಯಾಂಡಲ್‌ವುಡ್‌ನ ಯುವ ತಂಡ: ಬಂದಿದೆ ‘ನಮ್ಮೂರು ನಮ್ಮವರು’ ಆಲ್ಬಂ

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಬಂತು ‌ʻನಮ್ಮೂರು ನಮ್ಮವರುʼ ಸಾಂಗ್

ಸಮಾಜದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆಗಳು ಸಜ್ಜಾಗಿದ್ದು, ‘ನಮ್ಮೂರು ನಮ್ಮವರು’ ಕ್ರಾಂತಿಕಾರಿ ಮ್ಯೂಸಿಕ್ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಆರೋಹ ಫಿಲಂಸ್ ಲಾಂಛನದಲ್ಲಿ ವಕೀಲ ಸಂದೀಪ್ ಪಾಟೀಲ್ ಬೆಂಬಲದೊಂದಿಗೆ ಮೂಡಿಬಂದಿರುವ ಈ ಜಾಗೃತಿ ಗೀತೆಗೆ ಮಯೂರ್ ಅಂಬೇಕಲ್ಲು ಸಂಗೀತ ನೀಡಿದ್ದಾರೆ.

ʻಟಾಕ್ಸಿಕ್‌ ಚಿತ್ರಕ್ಕೆ 100 ದಿನಗಳ ರೀ-ಶೂಟ್‌, 40 ಕೋಟಿ ಹೆಚ್ಚುವರಿ ಖರ್ಚುʼ; ಯಶ್‌ ಸಿನಿಮಾ ಕುರಿತ ಈ ವದಂತಿಗೆ ಕೊನೆಗೂ ಸಿಕ್ತು ಕ್ಲಾರಿಟಿ!

ʻಟಾಕ್ಸಿಕ್ʼಗೆ 100 ದಿನಗಳ ರೀ-ಶೂಟ್? ಮತ್ತೆ 40 ಕೋಟಿ ಖರ್ಚು! ಇಲ್ಲಿದೆ ಸತ್ಯ

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 500 ಕೋಟಿ ರೂ. ಭಾರಿ ಬಜೆಟ್‌ನ 'ಟಾಕ್ಸಿಕ್' ಸಿನಿಮಾ 100 ದಿನಗಳ ಕಾಲ ರೀ-ಶೂಟಿಂಗ್ ಆಗುತ್ತಿದ್ದು, 40 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂಬ ವದಂತಿಗಳನ್ನು ಚಿತ್ರತಂಡದ ಆಪ್ತ ಮೂಲಗಳು ತಳ್ಳಿಹಾಕಿವೆ. ಜಾಗತಿಕ ಮಾರುಕಟ್ಟೆ ಮತ್ತು ಇರಾನ್ ಯುದ್ಧದ ಕಾರಣಗಳಿಂದ ಬಿಡುಗಡೆ ದಿನಾಂಕ ವಿಳಂಬವಾಗಿದ್ದೇ ಈ ಊಹಾಪೋಹಗಳಿಗೆ ಮೂಲ ಕಾರಣ ಎನ್ನಲಾಗಿದೆ.

ಒಟಿಟಿಯಲ್ಲೂ ಭರ್ಜರಿ ದಾಖಲೆ ಬರೆದ ʻಧುರಂಧರ್‌ 2ʼ; ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿದ ರಣವೀರ್‌ ಸಿಂಗ್‌ ಸಿನಿಮಾ

ಒಟಿಟಿಯಲ್ಲೂ ಮುಂದುವರಿದ ʻಧುರಂಧರ್ 2ʼ ಅಬ್ಬರ; ಸೃಷ್ಟಿಯಾಯ್ತು ಹೊಸ ದಾಖಲೆ

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ, ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 5 ಕೋಟಿ ವೀಕ್ಷಕರನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಥಿಯೇಟರ್‌ಗಿಂತ 5 ಪಟ್ಟು ಹೆಚ್ಚು ವೀಕ್ಷಣೆ ಪಡೆದಿದ್ದು ವಿಶೇಷ.

ಸೋಮವಾರದ ಪರೀಕ್ಷೆಯಲ್ಲಿ ʻಪೆದ್ದಿʼ ಪಾಸ್‌; ಕರ್ನಾಟಕದಲ್ಲಿ ರಾಮ್‌ ಚರಣ್‌ ಸಿನಿಮಾಗೆ ಈವರೆಗೂ ಸಿಕ್ಕ ಹಣವೆಷ್ಟು?

Peddi Collection‌: ಐದೇ ದಿನಕ್ಕೆ ಹೊಸ ದಾಖಲೆ ಬರೆದ ರಾಮ್‌ ಚರಣ್ ಸಿನಿಮಾ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಐದೇ ದಿನಗಳಲ್ಲಿ 315 ಕೋಟಿ ರೂ. ಗಳಿಸಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಮೊದಲ ಸೋಲೋ ಚಿತ್ರ ಇದಾಗಿದೆ. ಕರ್ನಾಟಕದಲ್ಲಿಯೂ ಪೆದ್ದಿ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ.

‌ʻಸ್ಲಮ್‌ಡಾಗ್‌ʼ ಟೀಸರ್‌ ರಿಲೀಸ್: ತಮಿಳು ನಟ ವಿಜಯ್‌ ಸೇತುಪತಿ ಎದುರು ಅಬ್ಬರಿಸಿದ ʻಸ್ಯಾಂಡಲ್‌ವುಡ್‌ ಸಲಗʼ‌

ʻಸ್ಲಮ್‌ಡಾಗ್‌ʼ ಚಿತ್ರದಲ್ಲಿ ಅಬ್ಬರಿಸಿದ ಕನ್ನಡ ನಟ ʻದುನಿಯಾʼ ವಿಜಯ್‌

ಪುರಿ ಜಗನ್ನಾಥ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಟೀಸರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷುಕನಾಗಿ ಪವರ್‌ಫುಲ್ ಸಂಭಾಷಣೆಗಳ ಮೂಲಕ ಮಿಂಚಿದ್ದರೆ, ಸ್ಯಾಂಡಲ್‌ವುಡ್ ‘ಸಲಗ’ ದುನಿಯಾ ವಿಜಯ್ ರಗಡ್ ವಿಲನ್ ಆಗಿ ವಿಶಿಷ್ಟ ಮ್ಯಾನರಿಸಂ ಮೂಲಕ ಅಬ್ಬರಿಸಿದ್ದಾರೆ.

Loading...