ನೆಪೋಟಿಸಮ್ ಕುರಿತ ಹೇಳಿಕೆಗೆ ಕ್ಲಾರಿಟಿ ಕೊಟ್ಟ ʻಕಿಚ್ಚʼ ಸುದೀಪ್!
ಕಿಚ್ಚ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ಎದುರಾಗಿದ್ದ 'ನೆಪೋಟಿಸಂ' ವಿವಾದಕ್ಕೆ ಮತ್ತೊಂದು ಸಂದರ್ಶನದ ಮೂಲಕ ಸಂಪೂರ್ಣ ಪೂರ್ಣವಿರಾಮ ಇಟ್ಟಿದ್ದಾರೆ. "ವರನಟ ಡಾ.ರಾಜ್ಕುಮಾರ್ ಕಾಲದಿಂದಲೂ ಕನ್ನಡಿಗರು ಕಲೆಯನ್ನು ಮಾತ್ರ ನೋಡಿ ಬೆಳೆಸಿದ್ದಾರೆ" ಎಂದು ಹೇಳಿದ್ದಾರೆ.