ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಯುವ ರಾಜ್‌ಕುಮಾರ್‌ ನಟನೆಯ 3ನೇ ಸಿನಿಮಾಕ್ಕೆ ಸಿಕ್ಕೇ ಬಿಟ್ರು ಭರವಸೆಯ ನಿರ್ದೇಶಕ; ಯಾರವರು?

ಯುವ ರಾಜ್‌ಕುಮಾರ್‌ ನಟನೆಯ 3ನೇ ಚಿತ್ರಕ್ಕೆ ಡೈರೆಕ್ಟರ್‌ ಫಿಕ್ಸ್!‌

ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್ ಅವರು 'ಯುವ' ಮತ್ತು 'ಎಕ್ಕ' ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಈ ಬಾರಿ ಜಡೇಶ್ ಕೆ ಹಂಪಿ ಅವರ ಜೊತೆಗೆ ಸಿನಿಮಾ ಮಾಡಲು ಯುವ ಒಪ್ಪಿಗೆ ನೀಡಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ.

ʻಸೀತಾರಾಮʼ ಸೀರಿಯಲ್‌ ಖ್ಯಾತಿಯ ರೀತಿ ಸಿಂಗ್‌ ಅಭಿನಯದ ʻನನ್ನ ಮಗಳೇ ಸೂಪರ್ ಸ್ಟಾರ್ʼ ಸಿನಿಮಾ ಟೀಸರ್‌ ರಿಲೀಸ್‌

‌ʻಸೀತಾರಾಮʼ ಖ್ಯಾತಿಯ ರೀತು ಸಿಂಗ್ ನಟನೆಯ ಹೊಸ ಚಿತ್ರದ ಟೀಸರ್ ರಿಲೀಸ್

‘ಸೀತಾರಾಮ’ ಧಾರಾವಾಹಿ ಖ್ಯಾತಿಯ ಬಾಲನಟಿ ರೀತು ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಡಾ. ಜಯಮಾಲಾ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆಯುರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.

ʻಶಾಲೆಯಲ್ಲಿ ಹಿಂದಿ ಮಾತನಾಡಿದ್ರೆ ಅಮ್ಮ ಚಪ್ಪಲಿಯಲ್ಲಿ ಹೊಡೀತಿದ್ರುʼ; ಬಾಲ್ಯದ ಕಹಿ ಸತ್ಯ ಬಿಚ್ಚಿಟ್ಟ ನಟ ಬಾಬಿ ಡಿಯೋಲ್

ಹಿಂದಿ ಮಾತನಾಡಿದಕ್ಕೆ ಬಾಬಿ ಡಿಯೋಲ್‌ಗೆ ಅಮ್ಮನಿಂದ ಸಿಕ್ಕಿತ್ತು ಚಪ್ಪಲಿ ಏಟು!

ಬಾಲಿವುಡ್ ನಟ ಬಾಬಿ ಡಿಯೋಲ್ ತಮ್ಮ ಬಾಲ್ಯದ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದ ಅವರು ಹಿಂದಿ ಮಾತನಾಡಿದ್ದಕ್ಕೆ ತಾಯಿ ಪ್ರಕಾಶ್ ಕೌರ್ ಗರಂ ಆಗಿದ್ದರು. ಮಗನಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದರು ಎಂಬ ಅಸಲಿ ಸಂಗತಿ ಬಹಿರಂಗವಾಗಿದೆ.

Amruthadhaare Serial:  ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

Amruthadhaare Serial: ಅಮೃತಧಾರೆಯಲ್ಲಿ ಗೌತಮ್‌ ಹಾಗೂ ಭೂಮಿ ಮಿಂಚು ವಿಚಾರವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಿಂಚುನೇ ತನ್ನ ಮಗಳು ಅನ್ನೋ ವಿಚಾರ ಭೂಮಿ ಗೌತಮ್‌ಗೆ ಇನ್ನೂ ಗೊತ್ತಿಲ್ಲ. ಹೀಗಿರುವಾಗ ಮಹಿಮಾಳಿಗೆ ದತ್ತು ಕೊಡಲು ಮುಂದಾಗಿದ್ದಾರೆ. ಅಪ್ಪನಾಗಿ ಸೋತೆ ಎಂದಯ ಗೌತಮ್‌ ಭಾವುಕನಾಗಿದ್ದಾನೆ.

Kushboo Sundar: ಮೋದಿ ಭೇಟಿ ಆದ ನಟಿ ಖುಷ್ಬೂ ಸುಂದರ್!‌ ಮಗಳ ಮದುವೆಗೆ ಆಹ್ವಾನ

ಮೋದಿ ಭೇಟಿ ಆದ ನಟಿ ಖುಷ್ಬೂ ಸುಂದರ್!‌ ಮಗಳ ಮದುವೆಗೆ ಆಹ್ವಾನ

Kushboo Sundar: ನಟಿ ಖುಷ್ಬೂ ಸುಂದರ್ ತಮ್ಮ ಕುಟುಂಬದೊಂದಿಗೆ ನವದೆಹಲಿಯಲ್ಲಿರುವ ಪ್ರಧಾನಿ ಕಚೇರಿಗೆ ಆಗಮಿಸಿದರು. ಕುಟುಂಬವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಯಿತು. ಖುಷ್ಬೂ ಸುಂದರ್ ತಮ್ಮ ಹಿರಿಯ ಮಗಳು ಅವಂತಿಕಾ ಅವರ ವಿವಾಹ ಪತ್ರವನ್ನು ಪ್ರಧಾನಿಯವರಿಗೆ ನೀಡಿದರು. ಭೇಟಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ವಿಶೇಷ ಶೀರ್ಷಿಕೆಯನ್ನು ಬರೆದಿದ್ದಾರೆ.

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವಿಚಾರ; ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲು

ಬಿಕಿನಿ ಫೋಟೋ ವಿಚಾರ; ಕೇಸ್ ದಾಖಲಿಸಿದ ರುಕ್ಮಿಣಿ ವಸಂತ್

Rukmini Vasanth: ನಟಿ ರುಕ್ಮಿಣಿ ವಸಂತ್‌ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. AI ತಂತ್ರಜ್ಞಾನ ಬಳಸಿ ಅಶ್ಲೀಲ ಪೋಟೊ ಸೃಷ್ಟಿ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ (Deep Fake) ಬಳಸಿ ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖ ಅಳವಡಿಕೆ ಮಾಡಲಾಗಿದೆ. ವಿಡಿಯೋ ಮತ್ತು ಪೋಟೊ ಕ್ರಿಯೆಟ್ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

Ravi Mohan: ರವಿ ಮೋಹನ್ (Ravi Mohan) ತಮ್ಮ ಪತ್ನಿ ಆರತಿ ರವಿ ಅವರಿಂದ ವಿಚ್ಛೇದನ ಪಡೆಯುವವರೆಗೆ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸುದ್ದಿಯಾಗಿದ್ದರು . ಇದಾದ ಕೆಲವು ದಿನಗಳ ನಂತರ, ಲೋಕೇಶ್ ಕನಕರಾಜ್ ಅವರು ನಟನನ್ನು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ಗೆ ಬೆಂಜ್ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

Mahesh Babu: ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

Mahesh Babu: ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ, ಐಮ್ಯಾಕ್ಸ್ ಸಂಸ್ಥೆಯು ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ಏಷ್ಯನ್ ಸಿನಿಮಾಸ್ ಜೊತೆ ಕೈಜೋಡಿಸುವ ಮೂಲಕ ಹೈದರಾಬಾದ್‌ಗೆ ಭರ್ಜರಿ ಕೊಡುಗೆ ನೀಡುತ್ತಿದೆ. ರಾಜಮೌಳಿ ಬಯಸಿದಂತೆ ನಗರದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಆರಂಭ ಆಗುತ್ತಿದೆ.

ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ರಶ್ಮಿಕಾ ಮಂದಣ್ಣ; ಇಷ್ಟೊಂದು ದುಡ್ಡು ಕೊಟ್ಟ ಆ ಚಿತ್ರತಂಡ ಯಾವುದು?

ದುಬಾರಿ ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ ನಟಿ ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ನ 'ಕಿರಿಕ್ ಪಾರ್ಟಿ' ಮೂಲಕ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ವೃತ್ತಿಜೀವನದ ಸರ್ವಕಾಲಿಕ ಗರಿಷ್ಠ 15 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಇಷ್ಟೊಂದು ದೊಡ್ಡಮೊತ್ತದ ಸಂಭಾವನೆ ನೀಡಿದವರು ಯಾರು? ಮುಂದೆ ಓದಿ.

CM Vijay : MGR ಕೂಡ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ! ಸಿಎಂ ವಿಜಯ್ ನೇರ ಹೇಳಿಕೆ

MGR ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ; ಸಿಎಂ ವಿಜಯ್

CM Vijay :ಮಿಳುನಾಡು ಮುಖ್ಯಮಂತ್ರಿ ವಿಜಯ್ ಸೋಮವಾರ ತಿರುಚಿರಾಪಳ್ಳಿಯಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು, ಅಲ್ಲಿ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಮತ್ತು ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆಯಿಂದ ದೂರ ಸರಿದಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ "ದಿವಂಗತ ಸಿಎಂ ಎಂಜಿಆರ್ ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಗಳಿಸಲಿಲ್ಲ ಎಂದು ಅವರು ಹೇಳಿದರು. ನಾನು ನನ್ನನ್ನು ಎಂಜಿಆರ್‌ಎಂಜಿಆರ್‌ಗೆ ಹೋಲಿಸಿಕೊಳ್ಳುತ್ತಿಲ್ಲ, ಆದರೆ ನಾನು ನಿಮ್ಮ ವಿಜಯ್, ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ತೋರಿಸಿದ ಹಾದಿಯಲ್ಲಿ ಕೆಲಸ ಮಾಡಲು ಬಂದಿದ್ದೇನೆ" ಎಂದು ಹೇಳಿದರು.

‘ಕಿರುನಗೆ’ ಚಿತ್ರದ ಟೈಟಲ್‌ ರಿಲೀಸ್‌ ಮಾಡಿದ ಡಾ. ರಾಜ್‌ಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು; ಚಿತ್ರತಂಡಕ್ಕೆ ಸಿಕ್ತು ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ

'ಕಿರುನಗೆ' ಟೈಟಲ್ ರಿಲೀಸ್; ತಂದೆ-ತಾಯಿಗಾಗಿ ಪ್ರೀತಿ ತ್ಯಾಗ ಮಾಡೋ ಹೊಸ ಕಥೆ

ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರ ‘ಕಿರುನಗೆ’ ಶೀರ್ಷಿಕೆಯನ್ನು ವರನಟ ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಅವರು ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ವಿಜಯ್ ರಾಜ್ ಮತ್ತು ಖುಷ್ಬು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಹೆತ್ತವರ ಸಂತೋಷಕ್ಕಾಗಿ ಮಕ್ಕಳು ಮಾಡುವ ಪ್ರೇಮ ತ್ಯಾಗದ ಕಥೆ ಹೊಂದಿದೆಯಂತೆ.

Taapsee Pannu : ಮಹಿಳೆಯರೇ ಈ ತಪ್ಪು ಮಾಡಬೇಡಿ! ನಟಿ ತಾಪ್ಸಿ ಪನ್ನು ಮನವಿ ಏನು?

ಮಹಿಳೆಯರೇ ಈ ತಪ್ಪು ಮಾಡಬೇಡಿ! ನಟಿ ತಾಪ್ಸಿ ಪನ್ನು ಮನವಿ ಏನು?

Taapsee Pannu : ತಾಪ್ಸಿ ಪನ್ನು ಈ ಮೊದಲು ತಾವು ಕೂಡ ಹೊಟ್ಟೆಯ ಬೊಚ್ಚು ಕರಗಿಸಲು ಹೋಗಿ ತೊಂದರೆಗೆ ಸಿಲುಕಿರುವುದಾಗಿ ಹೇಳಿದ್ದಾರೆ. ಸ್ಲಿಮ್ ಮತ್ತು ಫಿಟ್ (Fit) ಆಗಿ ಕಾಣಿಸಿಕೊಳ್ಳಲು ತಾವು ತುಂಬಾ ಶ್ರಮಿಸಿರುವುದಾಗಿ ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಹಿಂಸಿಸಿಕೊಂಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.

ರಿಲೀಸ್‌ಗೂ ಮುನ್ನವೇ ʻಕೊರಗಜ್ಜʼ ಸಿನಿಮಾ ಡೈರೆಕ್ಟರ್‌ ಸುಧೀರ್ ಅತ್ತಾವರ್‌ಗೆ ಸಿಕ್ತು ಐಷಾರಾಮಿ ಫ್ಲಾಟ್; ಕೊಟ್ಟಿದ್ದು ಯಾರು?

ʻಕೊರಗಜ್ಜʼ‌ ರಿಲೀಸ್‌ಗೂ ಮುನ್ನವೇ ಡೈರೆಕ್ಟರ್‌ಗೆ ಐಷಾರಾಮಿ ಫ್ಲಾಟ್ ಗಿಫ್ಟ್!

ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿರುವ ‘ಕೊರಗಜ್ಜ’ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ 1.75 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ. ಕನ್ನಡದಲ್ಲೇ ಮೊದಲ ಬಾರಿಗೆ 2Dಯಿಂದ 3Dಗೆ ಬದಲಾಗುತ್ತಿರುವ ಈ 40 ಕೋಟಿ ಬಜೆಟ್‌ನ ಸಿನಿಮಾ, ಚೈನೀಸ್ ಭಾಷೆಗೂ ಡಬ್ ಆಗುತ್ತಿದೆ.

ʻಜೈಲರ್ 2ʼ ಬೆನ್ನಲ್ಲೇ ಮತ್ತೊಂದು ತಮಿಳು ಚಿತ್ರ ಒಪ್ಪಿಕೊಂಡ ಶಿವಣ್ಣ; ʻಟೂರಿಸ್ಟ್‌ ಫ್ಯಾಮಿಲಿʼ ಡೈರೆಕ್ಟರ್‌ ಜೊತೆ ʻಹ್ಯಾಟ್ರಿಕ್‌ ಹೀರೋʼ ಹೊಸ ಸಿನಿಮಾ

ಶಿವರಾಜ್‌ಕುಮಾರ್ ನಟನೆಯ 4ನೇ ತಮಿಳು ಚಿತ್ರಕ್ಕೆ ಅದ್ದೂರಿ ಮುಹೂರ್ತ

ʻಹ್ಯಾಟ್ರಿಕ್‌ ಹೀರೋʼ ಶಿವರಾಜ್‌ಕುಮಾರ್ ಅವರು ಜೈಲರ್, ಕ್ಯಾಪ್ಟನ್ ಮಿಲ್ಲರ್ ಹಾಗೂ ಜೈಲರ್ 2 ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ತಮ್ಮ 4ನೇ ತಮಿಳು ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಟೂರಿಸ್ಟ್‌ ಫ್ಯಾಮಿಲಿ ಖ್ಯಾತಿಯ ನಿರ್ದೇಶಕ ಅಭಿಷನ್ ಜೀವೀಂತ್, ಯೋಗಲಕ್ಷ್ಮೀ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ಗೆ ಮೊದಲ ಬಾರಿಗೆ ಜೋಡಿಯಾದ ಸಲಗ ಸುಂದರಿ ಸಂಜನಾ ಆನಂದ್‌; ಯಾವುದು ಆ ಸಿನಿಮಾ?

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಂಜನಾ ಆನಂದ್

‘ಸಲಗ’ ಚಿತ್ರದ ಖ್ಯಾತಿಯ ನಟಿ ಸಂಜನಾ ಆನಂದ್ ಈಗ ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಹಲವು ಬಿಗ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಸಂಜನಾ, ಇದೇ ಮೊದಲ ಬಾರಿಗೆ ಗಣೇಶ್‌ಗೆ ಜೋಡಿಯಾಗಿರುವುದು ವಿಶೇಷ.

ʻಕ್ವಾಟ್ಲೆ ಕಿಚನ್‌ʼ ಸೀಸನ್ 2ರಲ್ಲಿ ಮೇಘನಾ ರಾಜ್ ಜಡ್ಜ್;‌ ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ರಾವ್‌ ಎಂಟ್ರಿ, ವೇದಿಕೆ ಮೇಲೆ ʻ‌ಬಿಗ್‌ ಬಾಸ್‌ʼ ಹನುಮಂತ ಮಿಂಚಿಂಗ್!

Kwatle Kitchen 2: ಜಡ್ಜ್ ಸೀಟಿನಲ್ಲಿ ಮೇಘನಾ ರಾಜ್, ನಿರೂಪಕಿಯಾಗಿ ಸುಷ್ಮಾ

ಕಲರ್ಸ್ ಕನ್ನಡ ವಾಹಿನಿಯ ವಿಭಿನ್ನ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಜೂನ್ 6 ಮತ್ತು 7 ರ ರಾತ್ರಿ 9 ಗಂಟೆಗೆ ಗ್ರ್ಯಾಂಡ್ ಲಾಂಚ್ ಆಗಲು ಸಜ್ಜಾಗಿದೆ. ಈ ಬಾರಿ ಹಿರಿಯ ನಟಿ ಶ್ರುತಿ ಜಾಗಕ್ಕೆ ನಟಿ ಮೇಘನಾ ರಾಜ್ ಸರ್ಜಾ ಹೊಸ ತೀರ್ಪುಗಾರರಾಗಿ ಎಂಟ್ರಿ ಕೊಟ್ಟಿರುವುದು ವಿಶೇಷ.

‘ಲವ್ ಇನ್ಶೂರೆನ್ಸ್ ಕಂಪೆನಿ’ ಸಿನಿಮಾ ಸೋತಿದ್ದಕ್ಕೆ ರೊಚ್ಚಿಗೆದ್ದ ನಟಿ ನಯನತಾರಾ ಪತಿ; ಯಾರ ಮೇಲೆ ವಿಘ್ನೇಶ್‌ ಶಿವನ್‌ಗೆ ಕೋಪ?

ʻನನ್ನ ಕನಸು ನುಚ್ಚುನೂರಾಯ್ತುʼ; LIK ಸಿನಿಮಾ ಸೋಲಿಗೆ ನಯನತಾರಾ ಪತಿ ಬೇಸರ

ಪ್ರದೀಪ್ ರಂಗನಾಥನ್ ಹಾಗೂ ಕೃತಿ ಶೆಟ್ಟಿ ನಟನೆಯ, ವಿಘ್ನೇಶ್ ಶಿವನ್ ನಿರ್ದೇಶನದ 'ಲವ್ ಇನ್ಶೂರೆನ್ಸ್ ಕಂಪೆನಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಂಡಿಲ್ಲ. ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕರು, ಉದ್ದೇಶಪೂರ್ವಕ ನೆಗೆಟಿವಿಟಿಯಿಂದಾಗಿ ತಮ್ಮ ಕನಸು ನುಚ್ಚುನೂರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Brown OTT : ಜೀ5ನಲ್ಲಿ ಕರಿಷ್ಮಾ ಕಪೂರ್ ನಟನೆಯ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್‌; ಸ್ಟ್ರೀಮಿಂಗ್‌ ಯಾವಾಗಿನಿಂದ?

ಜೀ5ನಲ್ಲಿ ಕರಿಷ್ಮಾ ಕಪೂರ್ ನಟನೆಯ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್‌

Brown OTT : ಕರಿಷ್ಮಾ ಕಪೂರ್ ಜೊತೆಗೆ, "ಬ್ರೌನ್" ವೆಬ್ ಸರಣಿಯಲ್ಲಿ ಹೆಲೆನ್, ಸೋನಿ ರಜ್ದಾನ್, ಸೂರ್ಯ ಶರ್ಮಾ ಮತ್ತು ಜಿಶು ಸೇನ್‌ಗುಪ್ತಾ ಮುಂತಾದ ನಟರು ನಟಿಸಿದ್ದಾರೆ. ಪರೇಶ್ ಪಹುಜಾ, ಅಜಿಂಕ್ಯ ದೇವ್ ಮತ್ತು ಆರ್ಯನ್ ಭೌಮಿಕ್ ಕೂಡ ಈ ಸರಣಿಯ ಭಾಗವಾಗಿದ್ದಾರೆ. ಇದು ವರ್ಷದ ಅತ್ಯಂತ ನಿರೀಕ್ಷಿತ ವೆಬ್ ಸರಣಿ ಬಿಡುಗಡೆಗಳಲ್ಲಿ ಒಂದಾಗಿದೆ.

Amruthadhaare Serial: ದಿಯಾ ಕಥೆ ಮುಗಿಸಿದ ಜೈದೇವ್‌! ಗೌತಮ್‌ ಜೋಡಿಗೆ 'ಮಿಂಚು' ಸುಳಿವು ಸಿಗಲಿದ್ಯಾ?

ದಿಯಾ ಕಥೆ ಮುಗಿಸಿದ ಜೈದೇವ್‌! ಗೌತಮ್‌ ಜೋಡಿಗೆ 'ಮಿಂಚು' ಸುಳಿವು ಸಿಗಲಿದ್ಯಾ?

Amruthadhaare Serial: ಜೈದೇವ್ ತನ್ನ ಪತ್ನಿ ದಿಯಾಳನ್ನು ಕೊಲೆ ಮಾಡಿದ್ದಾನೆ. ಜೈದೇವ್ ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್​​ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯನ್ನು ಸಾಯಿಸಿದ್ದಾನೆ. ಇನ್ನೊಂದು ಕಡೆ ಭೂಮಿ ಮಗಳು ಹುಡುಕಾಟದಲ್ಲಿ ಇದ್ದಾಳೆ.

Agnisakshi Serial : ಅವನು ಸುಡುವ ಜ್ವಾಲೆ, ಅವಳು ಸುರಿವ ಮಳೆ!  ‘ಅಗ್ನಿಸಾಕ್ಷಿ’ಈ ದಿನದಿಂದ ಶುರು

ಅವನು ಸುಡುವ ಜ್ವಾಲೆ, ಅವಳು ಸುರಿವ ಮಳೆ! ಅಗ್ನಿಸಾಕ್ಷಿ ಈ ದಿನದಿಂದ ಶುರು

Colora Kannada: ಈ ಬಾರಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಇದೇ ಜೂನ್ 8ರಿಂದ ಶುರುವಾಗಲಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಹೊಸ ಪ್ರೋಮೋ ಝಲಕ್ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳು ಸಂಪೂರ್ಣ ಭಿನ್ನವಾಗಿ ಮೂಡಿಬಂದಿವೆ.

Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

Suman Kalyanpur: ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ (Suman Kalyanpur ) ಅವರು ವಯೋಸಹಜ ಕಾಯಿಲೆಗಳಿಂದ ಭಾನುವಾರ ಸಂಜೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು (Passes away). ಅವರಿಗೆ 89 ವರ್ಷ ವಯಸ್ಸಾಗಿತ್ತು.ಲೇಖಕಿ ಮತ್ತು ನಿಕಟವರ್ತಿ ಮಂಗಳಾ ಖಾಡಿಲ್ಕರ್ ಅವರ ಪ್ರಕಾರ, ಕಲ್ಯಾಣ್‌ಪುರ್ ಅವರು ರಾತ್ರಿ 8 ಗಂಟೆ ಸುಮಾರಿಗೆ ಲೋಖಂಡ್ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

Aishwarya Rai: ಐಶ್ವರ್ಯಾ ರೈ ಮಗಳಿಗೆ ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಕೊಟ್ಟಿಲ್ವಂತೆ!

ಐಶ್ವರ್ಯಾ ರೈ ಮಗಳಿಗೆ ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಕೊಟ್ಟಿಲ್ವಂತೆ!

Aishwarya Rai: ಸಂವಾದ ಕಾರ್ಯಕ್ರಮದಲ್ಲಿ ಐಶ್ವರ್ಯಾ ಅವರು, ಆರಾಧ್ಯ (Aradhya) ಅವರದ್ದು ಎಂದು ಹೇಳಿಕೊಳ್ಳುವ ಹಲವಾರು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ವಿರುದ್ಧ ಮಾತನಾಡಿದರು. "ಅದು ಅವಳಲ್ಲ; ಅವಳು ಸಾಮಾಜಿಕ ಮಾಧ್ಯಮದಲ್ಲಿಲ್ಲ" ಎಂದು ಹೇಳಿದ ನಟಿ, ದೇಶದ ಅತ್ಯಂತ ಗುರುತಿಸಲ್ಪಟ್ಟ ಸೆಲೆಬ್ರಿಟಿ ಮಕ್ಕಳಲ್ಲಿ ಒಬ್ಬಳಾಗಿದ್ದರೂ ತನ್ನ ಮಗಳು ಯಾವುದೇ ಸೋಷಿಯಲ್‌ ಮೀಡಿಯಾ ಬಳಕೆ ಮಾಡುವುದಿಲ್ಲ ಎಂದಿದ್ದಾರೆ.

'ದೇವದಾಸ್' ಚಿತ್ರದ 'ಡೋಲಾ ರೇ ಡೋಲಾ' ಹಾಡಿನ ಶೂಟಿಂಗ್ ವೇಳೆ ನಟಿ ಮಾಧುರಿ ದೀಕ್ಷಿತ್ ಗರ್ಭಿಣಿ ಆಗಿದ್ರಾ? ಕೊನೆಗೂ ಸತ್ಯ ಬಹಿರಂಗ!

ʻಡೋಲಾ ರೇ ಡೋಲಾʼ ಸಾಂಗ್‌ ಶೂಟಿಂಗ್ ವೇಳೆ ನಟಿ ಮಾಧುರಿ ಗರ್ಭಿಣಿ ಆಗಿದ್ರಾ?

‘ದೇವದಾಸ್’ ಚಿತ್ರದ ‘ಡೋಲಾ ರೇ ಡೋಲಾ’ ಹಾಡಿನ ಚಿತ್ರೀಕರಣದ ವೇಳೆ ನಟಿ ಮಾಧುರಿ ದೀಕ್ಷಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಸಹ ನೃತ್ಯ ನಿರ್ದೇಶಕಿ ರುಬೀನಾ ಖಾನ್ ಅವರ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸ್ವತಃ ಮಾಧುರಿ ಆ ಹೇಳಿಕೆಯನ್ನ ತಳ್ಳಿಹಾಕಿದ್ದಾರೆ.

Sobhita Dhulipala: ಪತ್ನಿ ಶೋಭಿತಾಗೆ ಇದೊಂದು ಮಾತು ಹೇಳಿ ಕ್ಯೂಟ್‌ ವಿಶ್‌ ಮಾಡಿದ ನಾಗ ಚೈತನ್ಯ!

ಪತ್ನಿ ಶೋಭಿತಾಗೆ ಇದೊಂದು ಮಾತು ಹೇಳಿ ಕ್ಯೂಟ್‌ ವಿಶ್‌ ಮಾಡಿದ ನಾಗ ಚೈತನ್ಯ!

Sobhita Dhulipala: ನಟಿ ಶೋಭಿತಾ ಧುಲಿಪಾಲಾ 34 ನೇ ವರ್ಷಕ್ಕೆ ಕಾಲಿಟ್ಟರು. ಪತಿ, ನಟ ನಾಗ ಚೈತನ್ಯ ಅತ್ಯಂತ ಪ್ರೀತಿಯಿಂದ ಶುಭಾಷಯ ತಿಳಿಸಿದ್ದಾರೆ. ಫ್ಯಾನ್ಸ್‌ ನೋಡಿರದ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಶೋಭಿತಾ ಅವರನ್ನು ಮದುವೆಯಾಗಿದ್ದಕ್ಕೆ ತಮಗೆ ಎಷ್ಟು ಪ್ರೀತಿ ಇದೆ ಎಂದು ಬರೆದಿದ್ದಾರೆ, ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Loading...