ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ಕಡಲೆ ಕಾಯಿ ಪರಿಷೆಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್‌ವುಡ್‌ನ ʻಸ್ಟಾರ್‌ʼ ನಟಿ; ಯಾರಿರಬಹುದು ಗೆಸ್‌ ಮಾಡಿ!

ಕಡಲೆಕಾಯಿ ಪರಿಷೆಯಲ್ಲಿ ಮಾಸ್ಕ್ ಧರಿಸಿ ಸುತ್ತಾಡಿದ ʻಸ್ಟಾರ್‌ʼನಟಿ!

Kadalekai Parishe: ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸ್ಯಾಂಡಲ್‌ವುಡ್‌ನ ʻಡಿಂಪಲ್‌ ಕ್ವೀನ್ʼ ರಚಿತಾ ರಾಮ್‌ ಅವರು ಭೇಟಿ ನೀಡಿದ್ದಾರೆ. ಮಾಸ್ಕ್‌ ಧರಿಸಿ ತಮ್ಮ ತಂಡದೊಂದಿಗೆ ಜನಸಾಗರದ ಮಧ್ಯೆ ಸುತ್ತಾಡಿದ್ದಾರೆ ರಚಿತಾ ರಾಮ್. "18 ವರ್ಷಗಳ ಬಳಿಕ ಕಡಲೆಕಾಯಿ ಪರಿಷೆಗೆ ಹೋಗಿಬಂದೆ. ಎಂತಹ ಅದ್ಭುತ ಅನುಭವ ಇದು" ಎಂದು ರಚಿತಾ ರಾಮ್‌ ಸಂತಸ ಹಂಚಿಕೊಂಡಿದ್ದಾರೆ.

BBK 12: ʻನಾನು ಇರಲ್ಲ, ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌ʼ; ಏಕಾಏಕಿ ಅಶ್ವಿನಿ ಗೌಡ ಹೀಗೆ ಹೇಳಲು ಕಾರಣ ಏನು?

BBK 12: 'ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌' ಎಂದು ಕಣ್ಣೀರಿಟ್ಟ ಅಶ್ವಿನಿ

Bigg Boss Kannada 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ರಘು ಮತ್ತು ಅಶ್ವಿನಿ ಗೌಡ ನಡುವೆ ಮನೆ ಕೆಲಸದ ವಿಚಾರವಾಗಿ ದೊಡ್ಡ ಜಗಳ ನಡೆದಿದೆ. ಬ್ಯಾಕ್‌ ಪೇಯ್ನ್‌ ಕಾರಣಕ್ಕೆ 10 ನಿಮಿಷ ರೆಸ್ಟ್‌ ಕೇಳಿದ್ದ ಅಶ್ವಿನಿಗೆ, "ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ" ಎಂದು ರಘು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅಶ್ವಿನಿ, "ಯಾವನೋ ನೀನು ಲೇಯ್" ಎಂದು ರಘುಗೆ ತಿರುಗೇಟು ನೀಡಿದ್ದಾರೆ. ನಂತರ "ನನ್ನನ್ನು ಹೊರಗೆ ಕಳುಹಿಸಿ ಬಿಗ್‌ ಬಾಸ್‌" ಎಂದು ಮನೆ ಬಾಗಿಲನ್ನು ಬಡಿದಿದ್ದಾರೆ ಅಶ್ವಿನಿ ಗೌಡ.

BBK 12: ‌ʻಬಿಗ್‌ ಬಾಸ್ʼ ಮನೆಯಲ್ಲಿ ಈ ವಾರ 10 ಮಂದಿಗೆ ಢವಢವ; ನಾಮಿನೇಟ್‌ ಆದವರ ಫುಲ್‌ ಲಿಸ್ಟ್‌ ಇಲ್ಲಿದೆ!

BBK 12: ಈ ವಾರ 10 ಮಂದಿಗೆ ಢವಢವ! ನಾಮಿನೇಟ್‌ ಆದವರು ಯಾರು?

Bigg Boss Kannada 12 Nomination: 'ಬಿಗ್‌ ಬಾಸ್‌' ಮನೆಯಲ್ಲಿ ಈ ವಾರ ಒಟ್ಟು 10 ಮಂದಿ ನಾಮಿನೇಟ್‌ ಆಗಿದ್ದು, ಎಲಿಮಿನೇಷನ್ ಹವಾ ಜೋರಾಗಿದೆ. "ಯೋಗ್ಯತೆ ಇಲ್ಲದವರು ಮನೆಯಲ್ಲಿ ಇರುವುದು ಅಪರಾಧ" ಎಂದು ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ, 7 ಮಂದಿ ಮನೆಯ ಸದಸ್ಯರಿಂದ ನಾಮಿನೇಟ್‌ ಆಗಿದ್ದಾರೆ. ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ.

Aan Paavam Pollathathu OTT: ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸುವ ಒಂದೊಳ್ಳೆ ಮೂವಿ; ಒಟಿಟಿ ಎಂಟ್ರಿ ಯಾವಾಗ?

ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸುವ ಮೂವಿ; ಒಟಿಟಿ ಎಂಟ್ರಿ ಯಾವಾಗ?

OTT Movie: ಕಲೈಅರಸನ್ ತಂಗವೇಲ್ ನಿರ್ದೇಶನದ ಮತ್ತು ಯುವನ್ ಶಂಕರ್ ರಾಜ ಮತ್ತು ವೇದಿಕೆಕಾರನ್ಪಟ್ಟಿ ಎಸ್ ಶಕ್ತಿವೇಲ್ ನಿರ್ಮಾಣದ 'ಆನ್ ಪಾವಂ ಪೊಲ್ಲಥತು' ಚಿತ್ರವು ಈಗಾಗಲೇ OTT ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿದೆ. ರಿಯೋ ರಾಜ್, ಮಾಳವಿಕಾ ಮನೋಜ್, ಆರ್‌ಜೆ ವಿಘ್ನೇಶ್ಕಾಂತ್, ಶೀಲಾ, ಜೆನ್ಸನ್ ಧಿವಾಕರ್ ತಾರಾಗಣವಿದೆ. ಸದ್ಯ ಸಿನಿಮಾ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯುತ್ತಿದೆ. 7.3 ರ IMDb ರೇಟಿಂಗ್ ಗಳಿಸಿದೆ.

Amruthadhare Serial:  ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಕೈ ಜೋಡಿಸಾಯ್ತು!

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ.

Dhruva Sarja: ʻಕೆಡಿʼ ಬಳಿಕ ʻಕ್ರಿಮಿನಲ್ʼ ಆದ ಧ್ರುವ ಸರ್ಜಾ; ಅದ್ದೂರಿಯಾಗಿ ಲಾಂಚ್‌ ಆಯ್ತು ಹೊಸ ಸಿನಿಮಾ!

Criminal: ʻಕೆಡಿʼ ಆದ್ಮೇಲೆ ʻಕ್ರಿಮಿನಲ್‌ʼ ಆದ ಧ್ರುವ ಸರ್ಜಾ!

Dhruva Sarja New Movie Name: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಕ್ಕೆ 'ಕ್ರಿಮಿನಲ್‌' ಎಂದು ಟೈಟಲ್‌ ಇಡಲಾಗಿದೆ. ಪಕ್ಕಾ ಗ್ರಾಮೀಣ ಹಿನ್ನೆಲೆಯ ಈ ಚಿತ್ರವನ್ನು 'ಕೆರೆಬೇಟೆ' ಖ್ಯಾತಿಯ ರಾಜ್‌ ಗುರು ಬಿ. ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ರಚಿತಾ ರಾಮ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆ ಬೆಂಕಿಗೆ ಆಹುತಿ; ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಹರಸಾಹಸ

ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆ ಬೆಂಕಿಗೆ ಆಹುತಿ

Shiv Thakare: ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ್ಟ್‌ಮೆಂಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರ ಮನೆಯ ಗೋಡೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿವ್ ಠಾಕ್ರೆ ಅವರ ಮನೆಯೊಳಗಿನ ದೃಶ್ಯ, ಬೆಂಕಿದೊಡ್ಡ ಪ್ರಮಾಣದಲ್ಲಿದ್ದು, ವ್ಯಾಪಕ ಹಾನಿಯಾಗಿದೆ ಎಂದು ಎಂದು ವರದಿಯಾಗಿದೆ.

Manya Anand: ʻಧನುಷ್‌ ಕರೆದರೂ ಬರಲ್ವಾʼ; ಮ್ಯಾನೇಜರ್‌ ಮೇಲೆ ʻಕಾಸ್ಟಿಂಗ್‌ ಕೌಚ್‌ʼ ಆರೋಪ ಮಾಡಿದ ನಟಿ ಮಾನ್ಯ ಆನಂದ್!‌

Manya Anand:'ಧನುಷ್‌ ಕರೆದರೂ ಬರಲ್ವಾ'; ನಟಿಗೆ ಹಿಂಗೆ ಕೇಳಿದವರು ಯಾರು?

Manya Anand accuses Dhanush's Manager: ತಮಿಳು ನಟ ಧನುಷ್‌ ಅವರ ಮ್ಯಾನೇಜರ್‌ ಮತ್ತು ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ಸ್‌ನ ಸಿಇಓ ಶ್ರೇಯಸ್‌ ಮೇಲೆ ನಟಿ ಮಾನ್ಯ ಆನಂದ್‌ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಮಾನ್ಯ ಅವರನ್ನು ʻಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಬೇಕುʼ ಎಂದು ಶ್ರೇಯಸ್‌ ನೇರವಾಗಿ ಕೇಳಿದ್ದಾರಂತೆ!

Ranveer Singh: ಧುರಂಧರ್ ಟ್ರೈಲರ್‌ ಔಟ್‌; ಹಿಂದೆಂದೂ ಕಾಣದ ಉಗ್ರ ಅವತಾರದಲ್ಲಿ ರಣವೀರ್‌ ಸಿಂಗ್‌!

ಧುರಂಧರ್ ಟ್ರೈಲರ್‌ ಔಟ್‌; ಉಗ್ರ ಅವತಾರದಲ್ಲಿ ರಣವೀರ್‌ ಸಿಂಗ್‌!

Ranveer Singh: ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಸಿನಿಮಾಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿ ಗ್ನ ತೆಯನ್ನು ತಿಳಿಸುತ್ತದೆ. ಸಿನಿಮಾದಲ್ಲಿ ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗೂಢಚಾರಿಯ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಹೇಳುವ ಕಥೆ ಇದಾಗಿದೆ.

Marutha Movie: ಪೊಲೀಸ್ ಅಧಿಕಾರಿಗಳಿಂದ ಬಹುನಿರೀಕ್ಷಿತ ʼಮಾರುತʼ ಚಿತ್ರ ವೀಕ್ಷಣೆ

ಪೊಲೀಸ್ ಅಧಿಕಾರಿಗಳಿಂದ ಬಹುನಿರೀಕ್ಷಿತ ʼಮಾರುತʼ ಚಿತ್ರ ವೀಕ್ಷಣೆ

Sandalwood News: ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ʼಮಾರುತʼ ಚಿತ್ರವನ್ನು ಪೊಲೀಸ್‌ ಅಧಿಕಾರಿಗಳು ವೀಕ್ಷಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

BBK 12: ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು; ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಿಸ್ಟೇಕ್‌ ಆಗಬಾರ್ದಿತ್ತು!

BBK12: ಗಿಲ್ಲಿ ಮೇಲೆ ಕೇಸ್‌! ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ

Bigg Boss 12 Gilli Nata: ಗಿಲ್ಲಿ ನಟ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಮನೆಯ ಸದಸ್ಯೆ ರಿಷಾ ಗೌಡ ಅವರ ಬಟ್ಟೆಗಳನ್ನು ಬಾತ್‌ರೂಮ್‌ನಿಂದ ಹೊರಹಾಕಿದ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ಕುಶಲ ಎಂಬುವವರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ, ಆಯೋಗವು ಈ ಸಂಬಂಧ ಪೊಲೀಸರಿಗೆ ಪತ್ರ ಬರೆದಿದೆ.

BBK 12: ಗಿಲ್ಲಿ ನಟ ಹೇಳೋ ಮಾತಿಂದ ಅಶ್ವಿನಿ ಗೌಡಗೆ ನೋವಾಯ್ತು; ಕಣ್ಣೀರಿಟ್ಟ ರಾಜಮಾತೆಗೆ ಸಾಂತ್ವನ ಮಾಡಿದ್ಯಾರು?

Bigg Boss 12: ಗಿಲ್ಲಿ ಮಾತಿನಿಂದ ಅಶ್ವಿನಿಗೆ ಬೇಸರ! ಕಣ್ಣೀರಿಟ್ಟ ರಾಜಮಾತೆ!

BBK 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ವೈಮನಸ್ಸು ಈಗ ತಾರಕಕ್ಕೇರಿದೆ. ಗಿಲ್ಲಿ ನಟ ಕೊಟ್ಟ ಟಾಂಗ್‌ಗೆ ಅಶ್ವಿನಿ ಗೌಡ ತೀವ್ರವಾಗಿ ನೊಂದುಕೊಂಡು ಕಣ್ಣೀರಿಟ್ಟಿದ್ದಾರೆ. 'ಮರ್ಯಾದೆಗಾಗಿ ಬದುಕುತ್ತಿದ್ದೇನೆ' ಎಂದು ಅಶ್ವಿನಿ ನೋವು ತೋಡಿಕೊಂಡಿದ್ದಾರೆ. ಅಶ್ವಿನಿಗೆ ಧನುಷ್ ಸಾಂತ್ವನ ಹೇಳಿದ್ದಾರೆ. ಈ ವೇಳೆ ಗಿಲ್ಲಿಗೆ 'ವ್ಯಾಲ್ಯೂ ಇಲ್ಲ' ಎಂಬ ಮಾತುಗಳೂ ಬಂದಿವೆ.

Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್‌ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?

BBK 12: ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಧಿ ಜೈಲಿಗೆ ಹೋಗಿದ್ದೇಕೆ?

Cockroach Sudhi Marriage Story: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್‌ ಆಗಿ ಹೊರಗೆ ಬಂದಿದ್ದಾರೆ. ಇದೀಗ ಅವರು ತಾವು ಜೈಲಿಗೆ ಹೋಗಿದ್ದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಲವ್‌ ಮ್ಯಾರೇಜ್‌ ಕಾರಣದಿಂದ ಈ ಘಟನೆ ನಡೆದಿತ್ತು. ಆಗಿನ್ನೂ ಪತ್ನಿಗೆ 18 ವರ್ಷ ತುಂಬಿರದ ಕಾರಣ ಕೇಸ್‌ ದಾಖಲಾಗಿತ್ತು ಅಂತ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

The Girlfriend: ತಮ್ಮ ʻಸ್ಟಾರ್‌ ಪವರ್‌ʼ ಏನೆಂದು ತೋರಿಸಿದ ನಟಿ ರಶ್ಮಿಕಾ ಮಂದಣ್ಣ;‌  ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದ ಕಲೆಕ್ಷನ್ ಎಷ್ಟು?

ರಶ್ಮಿಕಾ ನಟನೆಯ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾ ಗೆಲ್ತಾ? ಕಲೆಕ್ಷನ್‌ ಎಷ್ಟು?

The Girlfriend Box Office Collection: ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಮಹಿಳಾ ಪ್ರಧಾನ ಸಿನಿಮಾ 'ದಿ ಗರ್ಲ್‌ಫ್ರೆಂಡ್‌' ಯಶಸ್ಸು ಕಂಡಿದೆ. ನವೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರ 11 ದಿನಗಳಲ್ಲಿ 28 ಕೋಟಿ ರೂ. ಗಳಿಸಿದೆ. ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೇ 21 ಕೋಟಿ ರೂ. ಹರಿದುಬಂದಿರುವ ಮಾಹಿತಿ ಇದೆ.

Varanasi: ಆರಂಭದಲ್ಲೇ ರಾಜಮೌಳಿಗೆ ಎದುರಾಯ್ತು ವಿಘ್ನ; ಜಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಿದ್ಯಾರು?

ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ವಿರುದ್ಧ ದೂರು ದಾಖಲು! ಕಾರಣವೇನು?

Police Complaint Against SS Rajamouli: ʻವಾರಣಾಸಿʼ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ಶುರು ಮಾಡಿರುವ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ" ಎಂದಿದ್ದರು. ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಎಂದು ರಾಷ್ಟ್ರೀಯ ವಾನರ ಸೇನೆ ಸರೂರ್‌ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದೆ.

Ravi Basrur : ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! Jr NTR, ಪ್ರಶಾಂತ್ ಸಿನಿಮಾ ಬಗ್ಗೆ ರವಿ ಬಸ್ರೂರ್ ಹೇಳಿದ್ದೇನು?

ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! ರವಿ ಬಸ್ರೂರ್ ಹೇಳಿದ್ದೇನು?

Jr NTR: ತಮ್ಮ ವೃತ್ತಿಜೀವನದುದ್ದಕ್ಕೂ ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ನಿರ್ದೇಶಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ರವಿ ಬಸ್ರೂರ್, ಕೆಜಿಎಫ್, ಸಲಾರ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮತ್ತು ಮಾರ್ಕೊ ಮುಂತಾದ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ಎನ್ ಟಿ ಆರ್-ನೀಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ತಮ್ಮ ಆಲ್ಬಂ ಟೈಟಾನ್ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಎನ್‌ಟಿಆರ್, ಪ್ರಶಾಂತ್ ನೀಲ್ ಅವರ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಕೆಜಿಎಫ್ ಅಥವಾ ಸಲಾರ್‌ನಂತಿರುವುದಿಲ್ಲ ಎಂದು ಹೇಳಿದ್ದಾರೆ.

Humane Sagar: ಜನಪ್ರಿಯ ಗಾಯಕ ಕೇವಲ 34ನೇ ವಯಸ್ಸಿಗೆ ನಿಧನ; ಸಿಎಂ ಸೇರಿ ಗಣ್ಯರ ಸಂತಾಪ

ಜನಪ್ರಿಯ ಗಾಯಕ ಕೇವಲ 34ನೇ ವಯಸ್ಸಿಗೆ ನಿಧನ

Odia singer : 100 ಕ್ಕೂ ಹೆಚ್ಚು ಒಡಿಯಾ ಹಾಡುಗಳಿಗೆ ಧ್ವನಿ ನೀಡಿದ್ದರು ಸಾಗರ್‌. ಕಳೆದ ಮೂರು ದಿನಗಳಿಂದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಜ್ಯಪಾಲ ಬಾಬು ಕಂಬಂಪತಿ ಕೂಡ ಸಾಗರ್ ಅವರಿಗೆ ಗೌರವ ಸಲ್ಲಿಸಿ, ಒಡಿಯಾ ಸಂಗೀತ ಮತ್ತು ಚಲನಚಿತ್ರ ಜಗತ್ತಿಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ ಎಂದು ಹೇಳಿದ್ದಾರೆ.

Bigg Boss Kannnada 12: ಏಕವಚನ ಬಳಕೆ ಮಾಡಿ, ಅಶ್ವಿನಿ ಗೌಡ ಪಿತ್ತ ನೆತ್ತಿಗೇರಿಸಿದ ಗಿಲ್ಲಿ; ಇಲ್ಲಿ ಉಸ್ತುವಾರಿಗಳದ್ದೇ ಕದನ!

ಏಕವಚನ ಬಳಕೆ ಮಾಡಿ, ಅಶ್ವಿನಿ ಗೌಡ ಪಿತ್ತ ನೆತ್ತಿಗೇರಿಸಿದ ಗಿಲ್ಲಿ

BBK 12: ಇದೀಗ ಹೊಸ ಪ್ರೋಮೊ ಔಟ್‌ ಆಗಿದ್ದು, ಗಿಲ್ಲಿ ಹಾಗೂ ಅಶ್ವಿನಿ ಗೌಡ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಆಟ ಆಡೋ ಸದಸ್ಯರಿಗಿಂತ ಉಸ್ತುವಾರಿಗಳ ಕದನ ಬಲು ಜೋರಾಗಿದೆ. ಈ ವೇಳೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಪಿತ್ತ ನೆತ್ತಿಗೇರಿದೆ. ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ ಅವರು, ʻನೀನು ಕರೆಕ್ಟ್‌ ಆಗಿ ಉಸ್ತುವಾರಿ ಮಾಡೊಮ್ಮೋʼ ಅಂತ ಕಿರುಚಾಡಿದ್ದಾರೆ.

Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!

ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ

BBK 12: ನಿನ್ನೆ ಬಿಗ್‌ ಬಾಸ್‌ ಮನೆಮಂದಿಗೆ ದಿನಸಿ ಗಳಿಸಲು ಟಾಸ್ಕ್‌ವೊಂದನ್ನ ನೀಡಿದ್ದರು. ಮನೆಯಲ್ಲಿ ಊಟಕ್ಕೆ ಸದಾ ಮುಂದು, ಕೆಲಸ ಅಂತ ಬಂದರೆ ಹಿಂದೆ ಇರೋ ಸ್ಪರ್ಧಿಯನ್ನ ಹೇಳಿ ಎಂದಿದ್ದರು. ಅದರಂತೆ ಮನೆಯವರು ಒಮ್ಮತದಿಂದ ಗಿಲ್ಲಿ ಅವರ ಹೆಸರನ್ನು ಹೇಳಿದರು. ಹೀಗಾಗಿ ಗುಲಾಮ ಎಂಬ ಪಟ್ಟವನ್ನು ಪಡೆದ ಗಿಲ್ಲಿ, ಬಿಗ್‌ ಬಾಸ್‌ ರೂಲ್ಸ್‌ನಂತೆ ಎಲ್ಲ ಸದಸ್ಯರ ವೈಯಕ್ತಿಕ ಕೆಲಸವನ್ನು ಮಾಡಬೇಕಿತ್ತು. ಗಿಲ್ಲಿ ಆಟವನ್ನ ಸರಿಯಾಗಿ ನಿಭಾಯಿಸದೇ, ಮನೆಮಂದಿಗೆಲ್ಲ ಶಿಕ್ಷೆ ಆಗುವಂತಾಯ್ತು ಎಂಬುದು ನೆಟ್ಟಿಗರು ಅಭಿಪ್ರಾಯ.

Bigg Boss Kannada: ಸುದೀಪ್‌ ಮಾತಿಗೂ ಬೆಲೆ ಇಲ್ವಾ? ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

BBK 12: ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ನಿಯಮಗಳಿವೆ. ಪಿಸು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಮೈಕ್‌ ಧರಿಸದೇ ಇರುವಂತಿಲ್ಲ.ಇಷ್ಟು ಇದ್ದರೂ ಈ ಹಿಂದೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಡ್ರೆಸಿಂಗ್ ರೂಮ್​​ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್​​ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ. ಇದು ಬಿಗ್ ಬಾಸ್ ಅನ್ನೇ ಕೆರಳಿಸಿದೆ. ಮಾತ್ರವಲ್ಲ ಬಿಗ್‌ ಬಾಸ್‌ ಕೂಡ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ.

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ! ಯಾರದು?

ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ

Colors Kannada: ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್​ ಏನೂ ಶುರುವಾಗಿಲ್ಲ. ಆದರೆ ಆದಿಗೆ ಇನ್ನೇನು ಭಾಗ್ಯಳ ಮೇಲೆ ಪ್ರೀತಿ ಶುರುವಾಗೋ ಹಂತದಲ್ಲೇ ಮನೆಯಲ್ಲಿ ಆದಿಗೆ ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಇದೀಗ ಸೀರಿಯಲ್‌ಗೆ ಖ್ಯಾತ ನಟಿ ಎಂಟ್ರಿ ಆಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದು?

Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!

ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ!

BBK 12: ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಒಂದಲ್ಲ ಒಂದು ಕಿತಾಪತಿ ಮಾಡುತ್ತಲೇ ಇರ್ತಾರೆ. ಇವರಿಬ್ಬರ ಟೀಂಗೆ ಧ್ರುವಂತ್‌ ಕೂಡ ಸೇರ್ಪಡೆಯಾಗಿದ್ದಾರೆ . ಇದೀಗ ಅಶ್ವಿನಿ-ಜಾಹ್ನವಿ ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದಾರೆ. ದೂರದಲ್ಲಿ ರಘು ಹಾಗೂ ಗಿಲ್ಲಿ ಇವರಿಬ್ಬರನ್ನು ನೋಡಿ ನಕ್ಕಿದ್ದಾರೆ. ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದಾರೆ. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್‌ ಬಾಸ್‌ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದಾರೆ.

Ranveer Singh: ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್ ಸಿಂಗ್ ಮೂವಿಯಿಂದ ಬಂತು ಬಿಗ್‌ ಅಪ್‌ಡೇಟ್‌!

ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್‌ ಮೂವಿ ಬಿಗ್‌ ಅಪ್‌ಡೇಟ್‌!

Dhurandhar: ವರದಿಗಳ ಪ್ರಕಾರ, ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ರಹಸ್ಯ ಭಾರತೀಯ ಗೂಢಚಾರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಆಚರಿಸುವ ಕಥೆಯಾಗಿದೆ. ಧುರಂಧರ್ ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ನಾಳೆ ನವೆಂಬರ್ 18 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆದಿತ್ಯ ಧರ್, ಧುರಂಧರ್ ಅವರ ನೇತೃತ್ವದಲ್ಲಿ ಚಿತ್ರವು ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

Bigg Boss Kannada 12:  ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್‌ ಸತೀಶ್‌?

ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ ಎಂದ ಡಾಗ್‌ ಸತೀಶ್‌!

BBK 12: ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದು ಸತೀಶ್‌ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಬರ್ತ್‌ಡೇ ಪಾರ್ಟಿ ಕುರಿತು ಹೇಳಿದ್ದಾರೆ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಗಿಲ್ಲಿ (Gilli) ಅವರನ್ನ ಮಾತ್ರ ಸೇರಿಸಲ್ಲ ಎಂದು ಹೇಳಿದ್ದಾರೆ.ಒಂದು ವೇಳೆ ಹೊರಗೆ ಬಂದರೆ ಕಾಕ್ರೋಚ್‌, ಸ್ಪಂದನಾ ಅವರನ್ನ ಪಾರ್ಟಿಗೆ ಕರೆಯಬೇಕು ಅಂತಿದೆ. ಗಿಲ್ಲಿ ಅವರಂತೂ ನಾನು ಸೇರಿಸೋದೆ ಇಲ್ಲ. ನನ್ನ ಒಂದೇ ಏಟಿಗೆ ಗಿಲ್ಲಿ ಬಿದ್ದು ಹೋಗ್ತಾನೆ ಎಂದರು.

Loading...