ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Fraud Case: ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

Jay Dudhane: ಸ್ಪ್ಲಿಟ್ಸ್‌ವಿಲ್ಲಾ 13 ಮತ್ತು ಬಿಗ್ ಬಾಸ್ ಮರಾಠಿ 3 ಖ್ಯಾತಿಯ ಜೇ ದುಧಾನೆ ಅವರನ್ನು ಭಾನುವಾರ (ಜನವರಿ 4) ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ರಿಯಲ್ ಎಸ್ಟೇಟ್ ಹಗರಣಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಟಿವಿ ತಾರೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಮಾನೆ ದೃಢಪಡಿಸಿದ್ದಾರೆ.

Devanobba Jaadugaara: ʻಪ್ರೇಮ ಕಾವ್ಯʼ ಸೀರಿಯಲ್‌ ನಟಿ ಪ್ರಿಯಾ ಆಚಾರ್‌ - ಸಚಿನ್ ಹೊಸ ಸಿನಿಮಾ ಟೀಸರ್‌ ರಿಲೀಸ್;‌ ಹುಚ್ಚ ವೆಂಕಟ್, ಸಿಂಪಲ್‌ ಸುನಿ ಸಪೋರ್ಟ್‌

ʻದೇವನೊಬ್ಬ ಜಾದೂಗಾರʼ ಟೀಸರ್; ಸಚಿನ್ - ಪ್ರಿಯಾ ಆಚಾರ್ ಸಿನಿಮಾಗೆ ಸುನಿ ಸಾಥ್

Devanobba Jaadugaara Teaser: ವರುಣ್ ನಿರ್ದೇಶನದ 'ದೇವನೊಬ್ಬ ಜಾದೂಗಾರ' ಸಿನಿಮಾವನ್ನು ಸೌದಿ ಅರೇಬಿಯಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಸಚಿನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿರುತೆರೆ ನಟಿ ಪ್ರಿಯಾ ಜೆ. ಆಚಾರ್ ನಾಯಕಿಯಾಗಿದ್ದು, ಶ್ವೇತಾ ಶ್ರೀವಾಸ್ತವ್‌, ಸಿಂಪಲ್ ಸುನಿ ಮತ್ತು ಹುಚ್ಚ ವೆಂಕಟ್ ಈ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Amruthadhare Serial : ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಮಾಸ್ಟರ್‌ ಪ್ಲ್ಯಾನ್‌?

ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಪ್ಲ್ಯಾನ್‌?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್‌ , ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಮಲ್ಲಿ ಸದಾ ನೆಮ್ಮದಿ ಕಳೆದುಕೊಂಡು ಇರಬೇಕು ಅಂತ ಡಿವೋರ್ಸ್‌ ಕೂಡ ಕೊಡದೆ ಇದ್ದಾನೆ ಜಯದೇವ್‌. ಇದೀಗ ಮತ್ತೊಂದು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ. ಮಲ್ಲಿ ಇನ್ನೊಬ್ಬ ಹುಡುಗನನ್ನು ಮದುವೆಯಾದರೆ ಆರಾಮಾಗಿ ಇರ್ತಾಳೆ, ಅವಳು ಮದುವೆ ಆಗಬಾರದು ಎಂದು ಅವನು ಲೆಕ್ಕ ಹಾಕಿದ್ದಾನೆ.

ʻಲವ್‌ ಮಾಕ್ಟೇಲ್‌ 3ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಡಾರ್ಲಿಂಗ್‌ʼ ಕೃಷ್ಣ; ಈ ಬಾರಿ ಏನ್‌ ವಿಶೇಷ?

'ಲವ್ ಮಾಕ್ಟೇಲ್ 3' ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ ʻಡಾರ್ಲಿಂಗ್‌ʼ ಕೃಷ್ಣ!

Love Mocktail 3 Release Date: ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ 'ಲವ್ ಮಾಕ್ಟೇಲ್' ಸರಣಿಯ ಮೂರನೇ ಭಾಗ 'ಲವ್ ಮಾಕ್ಟೇಲ್ 3' ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಕಥೆಯಲ್ಲಿ ತಂದೆ ಮತ್ತು ಮಗಳ ಬಾಂಧವ್ಯದ ವಿಶೇಷ ಎಳೆಯನ್ನು ಡಾರ್ಲಿಂಗ್ ಕೃಷ್ಣ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ

ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ!

Gilli Nata: ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ನಟ ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ ಎಂದಿದ್ದರು. ಇದೀಗ ಮತ್ತೊಂದು ಪ್ರೋಮೋ ಔಟ್‌ ಆಗಿದೆ. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

Bigg Boss Kannada 12: ಅಬ್ಬಬ್ಬಾ! ಧ್ರುವಂತ್‌ ಮೇಲೆ ರಕ್ಷಿತಾ ಶೆಟ್ಟಿಗೆ ಎಷ್ಟೊಂದು ಕೋಪ! ಸಿಕ್ಕಿದ್ದೇ ಚಾನ್ಸ್‌ ಅಂತ ಫುಲ್‌ ಪಂಚ್!‌

ʻಅಸಹ್ಯ ಅನ್ನೋಕೆ ನೀವ್ಯಾರು?ʼ; ಧ್ರುವಂತ್ ಮೇಲೆ ಅಬ್ಬರಿಸಿದ ರಕ್ಷಿತಾ ಶೆಟ್ಟಿ

Bigg Boss 12 Promo: ಬಿಗ್ ಬಾಸ್ ಕನ್ನಡ 12ರ ಇಂದಿನ (ಜನವರಿ 4) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ 'ಪಂಚಿಂಗ್ ಬ್ಯಾಗ್' ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಧ್ರುವಂತ್ ವಿರುದ್ಧ ಅಬ್ಬರಿಸಿದ್ದು, ಪಂಚಿಂಗ್ ಬ್ಯಾಗ್ ಕಿತ್ತುಹೋಗುವಷ್ಟು ಜೋರಾಗಿ ಹೊಡೆದಿದ್ದಾರೆ.

ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್‌ ಸಾಗರ್‌ ಪುತ್ರಿ ನಾಯಕಿ

ಡಾಲಿ ಪಿಕ್ಚರ್ಸ್‌ನ ಹೊಸ ಸಿನಿಮಾಕ್ಕೆ ಅರುಣ್ ಸಾಗರ್ ಪುತ್ರಿ ಅದಿತಿ ನಾಯಕಿ

Heggana Muddu Movie: ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ 6ನೇ ಚಿತ್ರವಾಗಿ 'ಹೆಗ್ಗಣ ಮುದ್ದು' ಸಿದ್ಧವಾಗುತ್ತಿದೆ. 'ಬಡವ ರಾಸ್ಕಲ್', 'ಹೆಡ್ ಬುಷ್' ಮತ್ತು 'ಟಗರು ಪಲ್ಯ' ಸಿನಿಮಾಗಳ ನಂತರ ಧನಂಜಯ ಅವರು ಈ ಸಿನಿಮಾ ಮಾಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್​ ಕೇಸ್‌; ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್‌ ಮಾಡಿದ ಸಿಸಿಬಿ ಪೊಲೀಸರು!

ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಮೆಂಟ್; ಮತ್ತಿಬ್ಬರು ಆರೋಪಿಗಳ ಬಂಧನ!

Vijayalakshmi Abusive Comment Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ನಾಗರಾಜ್ ತಳವಾರ ಮತ್ತು ಧಾರವಾಡದ ಪ್ರಶಾಂತ್ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 4ಕ್ಕೇರಿದೆ.

Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

ಬಿಗ್ ಬಾಸ್ ಮನೆಯೊಳಗೆ ಯಾಕೆ ಸುಮ್ಮನಿದ್ರಿʼ; ಮಾಳುಗೆ ಕಿಚ್ಚ ಸುದೀಪ್ ಪ್ರಶ್ನೆ

Bigg Boss Kannada 12 Maalu Nipanal: ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಮಾಳು ನಿಪನಾಳ್ ಅವರಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ. "ಹೊರಗಡೆ ಅಷ್ಟೊಂದು ಮಾತನಾಡುತ್ತಿರುವ ನೀವು ಮನೆಯೊಳಗೆ ಯಾಕೆ ಮೌನವಾಗಿದ್ರಿ?" ಎಂದು ಸುದೀಪ್ ಪ್ರಶ್ನಿಸಿದಾಗ ಮಾಳು ಅದಕ್ಕೆ ಉತ್ತರಿಸಿದ್ದಾರೆ.

Thalaivar 173: ಯಂಗ್‌ ಡೈರೆಕ್ಟರ್‌ಗೆ ಚಾನ್ಸ್‌ ಕೊಟ್ಟ ರಜನಿಕಾಂತ್;‌ ಅನುಭವಕ್ಕಿಂತ ಟ್ಯಾಲೆಂಟ್‌ ದೊಡ್ಡದು ಎಂದ್ರು 'ತಲೈವಾ' ಫ್ಯಾನ್ಸ್!‌

Thalaivar 173: ಕಮಲ್ ಹಾಸನ್ ನಿರ್ಮಾಣದ ರಜನಿ ಚಿತ್ರಕ್ಕೆ ಹೊಸ ಡೈರೆಕ್ಟರ್‌!

Thalaivar 173 Updates: ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಈಗ ತೆರೆಬಿದ್ದಿದೆ. 'ಡಾನ್' ಖ್ಯಾತಿಯ ನಿರ್ದೇಶಕ ಸಿಬಿ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡುತ್ತಿದೆ.

ವಿಜಯ್‌ ನಟನೆಯ ಕೊನೆಯ ಚಿತ್ರ ʻಜನ ನಾಯಗನ್‌ʼ‌ಗೆ ಬಾಲಯ್ಯ ಸಿನಿಮಾವೇ ಸ್ಪೂರ್ತಿ; ಆದರೆ 'ದಳಪತಿ' ಕೊಟ್ಟ ಟ್ವಿಸ್ಟ್‌ ಏನ್‌ ಗೊತ್ತಾ?

Jana Nayagan Trailer: ಬಾಲಯ್ಯ ಸಿನಿಮಾವನ್ನ ರಿಮೇಕ್‌ ಮಾಡಿದ್ರಾ ವಿಜಯ್?

Thalapathy Vijay‌ Jana Nayagan Trailer: ವಿಜಯ್‌ ಅವರ ಕೊನೇ ಚಿತ್ರ 'ಜನ ನಾಯಗನ್' ಟ್ರೇಲರ್ ಶನಿವಾರ ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ವಿಚಾರ ಚರ್ಚೆ ಆಗಿತ್ತು. ಅದಕ್ಕಿಲ್ಲಿ ಉತ್ತರ ಸಿಕ್ಕಿದೆ.

Bigg Boss Kannada 12:  ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ? ಕಾವು ಬಿಟ್ಟುಕೊಡಲಿಲ್ಲ ಏಕೆ?

ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ?

Sudeep: ಬಿಗ್‌ ಬಾಸ್‌ ವೀಕೆಂಡ್‌ ಪಂಚಾಯ್ತಿಯಲ್ಲಿ ಈ ವಾರ ಪ್ರಮುಖ ಹೈಲೈಟ್‌ ಗಿಲ್ಲಿ ನಟ ಆಗಿದ್ದರು. ಕಿಚ್ಚ ಸುದೀಪ್‌ ಅವರೇ ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಉಳಿದವರಿಗೆ ಆಟ ಇನ್ನೂ ಅರ್ಥ ಆಗಿಲ್ಲ ಅಂತ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇದರ ಜೊತೆಗೆ ನಾಮಿನೇಶನ್‌ ವಿಚಾರಕ್ಕೂ ಗಿಲ್ಲಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಕಿಚ್ಚ. ಕಾವ್ಯ ನಾಮಿನೇಟ್‌ ಮಾಡಲು ನೀವೇ 5 ಕಾರಣವನ್ನು ಕೊಡಿ ಎಂದಾಗ ಗಿಲ್ಲಿ ಮೌನವಾಗೇ ಇದ್ದರು. ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯ. ಈ ಬಗ್ಗೆ ಪೋಸ್ಟ್‌ ವೈರಲ್‌ ಆಗುತ್ತಿದೆ.

Bigg Boss Kannada 12: ನಿಮ್ಮನ್ನು ಬಿಗ್‌ ಬಾಸ್‌ ಹೊರಗೆ ಏಕೆ ಕಳುಹಿಸಿಲ್ಲ? ಕಾವ್ಯಾಗೆ ಕಿಚ್ಚನ ಖಡಕ್‌ ಪ್ರಶ್ನೆ

ಕಾವ್ಯ ನಿಮ್ಮನ್ನು ಬಿಗ್‌ ಬಾಸ್‌ ಹೊರಗೆ ಏಕೆ ಕಳುಹಿಸಿಲ್ಲ? ಕಿಚ್ಚನ ಪ್ರಶ್ನೆ

Kavya: ಬಿಗ್‌ ಬಾಸ್‌ ಅಂದರೆನೇ ನಿಯಮ. ನಿಯಮ ಅಂದರೆ ಬಿಗ್‌ ಬಾಸ್‌. ಯಾವುದೇ ನಿಯಮ ಉಲ್ಲಂಘನೆ ಆದ್ರೂ ಬಿಗ್‌ ಬಾಸ್‌ ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ತಾರೆ. ಫ್ಯಾಮಿಲಿ ವೀಕ್‌ ಸಂದರ್ಭದಲ್ಲಿ ಕಾವ್ಯ ಮನೆಯವರು ಬಿಗ್‌ ಬಾಸ್‌ ವಾರ್ನಿಂಗ್‌ ಕೊಟ್ಟಿದ್ದರು, ಪದೇ ಪದೇ ತಪ್ಪು ಮಾಡಿದ್ದರು. ಆ ಬಳಿಕ ಅವರನ್ನು ಹೊರಗೆ ಕೂಡ ಕಳಿಸಿದ್ದರು ಬಿಗ್‌ ಬಾಸ್‌. ಈ ಬಗ್ಗೆ ಎಪಿಸೋಡ್‌ ಶುರುವಾಗ್ತದ್ದಂತೆ ಸುದೀಪ್‌ ಪ್ರಸ್ತಾಪಿಸಿದ್ದಾರೆ. ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ ಎಂದು ನೇರವಾಗಿ ಕಾವ್ಯಗೆ ಹೇಳಿದ್ದಾರೆ ಸುದೀಪ್‌.

Bigg Boss Kannada 12: ಬನಿಯನ್ನೇ ಹಾಕ್ಕೊಂಡು ಇದ್ರು ಬದುಕುತ್ತಿರುವುದು ರಾಜನ ರೀತಿ! ಗಿಲ್ಲಿ ಗುಟ್ಟು ರಿವೀಲ್‌ ಮಾಡಿದ ಕಿಚ್ಚ

ಗಿಲ್ಲಿ ಫುಲ್‌ ಪ್ರಿಪೇರ್ ಆಗಿ ಬಂದಿದ್ದಾರಾ? ಸುದೀಪ್ ಅಚ್ಚರಿ ಹೇಳಿಕೆ

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ನಾಮಿನೇಶನ್‌ ವೇಳೆ ಕಾವ್ಯ ಅವರ ಬಗ್ಗೆ ಪಕ್ಷಪಾತ ಮಾಡಿರೋ ಬಗ್ಗೆಯೂ ಚರ್ಚಿಸಿದ್ದಾರೆ. ಗಿಲ್ಲಿ ರೀತಿ ಯಾರು ಕೂಡ ಬಿಗ್‌ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ ಎಂದೂ ಹೇಳಿದ್ದಾರೆ. ಕ್ಯಾಪ್ಟೆನ್ಸಿ ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್​​ಗಳಾಗಿದ್ದಾಗ ಗಿಲ್ಲಿಯ ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆಯೂ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ ಪಕ್ಕ ಹೋಗಿ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ; ನಿಮಗಂತೂ ಪಕ್ಕಾ ಉರಿಯತ್ತೆ ಎಂದ ಕಿಚ್ಚ!

ಗಿಲ್ಲಿ ಪಕ್ಕ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ! ಕಿಚ್ಚ ರಿಯಾಕ್ಷನ್‌ ಏನು?

Rakshitha: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ನಟ ಸಖತ್‌ ಹೈಲೈಟ್‌ ಆಗಿರೋ ಜೋಡಿ. ಆದರೆ ಈ ವೀಕೆಂಡ್‌ನಲ್ಲಿ ಗಿಲ್ಲಿ ಮಾಡಿದ ನಾಮಿನೇಶನ್‌ ಎಡವಟ್ಟಿಗೆ ಕಿಚ್ಚ ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾರೆ. ಇದೆಲ್ಲದರ ಹೊರತಾಗಿ ಗಿಲ್ಲಿ ಮೇಲೆ ರಕ್ಷಿತಾಗೆ ಪಾಸೆಸಿವ್‌ನೆಸ್‌ ಇರೋದು ಗೊತ್ತೇ ಇರುವ ವಿಚಾರ. ಸಾಕಷ್ಟು ಬಾರಿ ತೋರಿಸಿಕೊಂಡಿದ್ದಾರೆ. ಇದೀಗ ಕಿಚ್ಚ ಅವರೇ ಈ ಬಗ್ಗೆ ರಕ್ಷಿತಾಗೆ ಪರೋಕ್ಷವಾಗಿ ಹೇಳಿದ್ದಾರೆ.

ಬೈಕ್ ಡಿಕ್ಕಿಯಾಗಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ದಂಪತಿಗೆ ಗಾಯ

ರಸ್ತೆ ದಾಟುತ್ತಿದ್ದ ಬಹುಭಾಷಾ ನಟ, ಪತ್ನಿಗೆ ಬೈಕ್ ಡಿಕ್ಕಿ

ರಸ್ತೆ ಅಪಘಾತದಲ್ಲಿ ಬಹುಭಾಷಾ ನಟ ಮತ್ತು ಪತ್ನಿ ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಗುವಾಹಟಿಯ ಮೃಗಾಲಯ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಬರುವಾ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Actor Yash: ಯಶ್ ಹುಟ್ಟುಹಬ್ಬಕ್ಕೆ ಇದೆ ಸರ್‌ಪ್ರೈಸ್‌! ಏನದು?

ಯಶ್ ಹುಟ್ಟುಹಬ್ಬಕ್ಕೆ ಇದೆ ಸರ್‌ಪ್ರೈಸ್‌! ಏನದು?

Toxic: ಯಶ್ಪ್ರ ಮುಖ ಪಾತ್ರದಲ್ಲಿ ನಟಿಸಿರುವ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ , ಈ ವರ್ಷದ ಯುಗಾದಿ ಹಬ್ಬದಂದು ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಯಶ್ ಅವರ ಹುಟ್ಟುಹಬ್ಬ ಜನವರಿ 8ಕ್ಕಿದೆ. ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

Aryavardhan Guruji: ಕಿಚ್ಚ ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ

ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಆರ್ಯವರ್ಧನ್ ಗುರೂಜಿ ಕ್ಷಮೆ

Sudeep: ಆರ್ಯವರ್ಧನ್ ಗುರೂಜಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ, ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಮತ್ತೆ ಅದೇ ಆಗಿದೆ. ಸುದೀಪ್ ಮತ್ತು ಬಿಗ್ ಬಾಸ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದಾರೆ. ಸುದೀಪ್ ಮತ್ತು ಅವರ ಅಭಿಮಾನಿಗಳಿಗೆ ಆರ್ಯವರ್ಧನ್ ಗುರೂಜಿ ಒಂದು ಮನವಿ ಮಾಡಿದ್ದಾರೆ.

Yogaraj Bhat: ಕುಡುಕನೊಬ್ಬ ಸ್ಪೂರ್ತಿ!  ಹೊಸ ವರ್ಷವನ್ನು ʻಅಮಲುʼ ಹಾಡಿನೊಂದಿಗೆ  ಸ್ವಾಗತಿಸಿದ ಯೋಗರಾಜ್ ಭಟ್

ಹೊಸ ವರ್ಷವನ್ನು ʻಅಮಲುʼ ಹಾಡಿನೊಂದಿಗೆ ಸ್ವಾಗತಿಸಿದ ಯೋಗರಾಜ್ ಭಟ್

Amalu Song : ಯೋಗರಾಜ್ ಭಟ್ಮ ತ್ತು ಶರಣ್ ಅವರ 'ಅಮಲು' ಹಾಡು ಹೊಸ ವರ್ಷಕ್ಕೆ ಬಿಡುಗಡೆಯಾಗಿದೆ. ನಿರ್ದೇಶನದ ಜೊತೆಗೆ ಯೋಗರಾಜ್ ಭಟ್ ಗೀತರಚನೆಕಾರರಾಗಿಯೂ ಜನಪ್ರಿಯರು. ಈವೆರಗೂ ಸಾಕಷ್ಟು ಸೂಪರ್ ಹಿಟ್ ಚಿತ್ರಗೀತೆಗಳನ್ನು ರಚಿಸಿ ಅವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಪ್ರಸ್ತುತ "ಅಮಲು" ಎಂಬ ಹಾಡನ್ನು ಬರೆಯುವ ಮೂಲಕ ಯೋಗರಾಜ್ ಭಟ್ ಹೊಸವರ್ಷವನ್ನು ಸ್ವಾಗತಿಸಿದ್ದಾರೆ.

Bigg Boss Kannada 12:  ಅಧಿಕಾರ ಕೊಟ್ಟಾಗ, ನಮ್ಮಲ್ಲಿರೋ ಅಹಂಕಾರ ಹೇಗೆ ಹೊರಗೆ ಬರತ್ತೆ ಅನ್ನೋದಕ್ಕೆ ಗಿಲ್ಲಿನೇ ಸಾಕ್ಷಿ ಎಂದ ಅಶ್ವಿನಿ!

ʻಕ್ಯಾಪ್ಟನ್ʼ ಅಧಿಕಾರವನ್ನು ದುರ್ಬಳಕೆ ಮಾಡ್ಕೊಂಡ್ರಾ ಗಿಲ್ಲಿ?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಗಿಲ್ಲಿ ನಟ ಕ್ಯಾಪ್ಟನ್‌ ಆಗಿದ್ದರು. ಇದೀಗ ಗಿಲ್ಲಿಯ ಕ್ಯಾಪ್ಟನ್ಸಿ ಬಗ್ಗೆ ನೆಗೆಟಿವ್‌ ಮಾತಾಡಿದ್ದಾರೆ ಮನೆಮಂದಿ. ಫ್ಯಾಮಿಲಿ ವೀಕ್‌ ಇತ್ತು. ಕಂಟೆಸ್ಟೆಂಟ್‌ಗಳ ಕುಟುಂಬದವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅವರಿಗೆ ಈ ಬಾರಿ ಕ್ಯಾಪ್ಟನ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕು ಅನ್ನು ಬಿಗ್​ ಬಾಸ್​ ನೀಡಿದ್ರು. ಈ ಪೈಕಿ ಕಂಟೆಸ್ಟೆಂಟ್‌ಗಳ ಕುಟುಂಬದವರು ಹೆಚ್ಚಿನ ಮತಗಳನ್ನ ಗಿಲ್ಲಿ ನೀಡಿ, ಆ ಬಳಿಕ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಆಟವನ್ನ ಇಟ್ಟಿದ್ದರು ಬಿಗ್‌ ಬಾಸ್‌. ಗಿಲ್ಲಿ ಗೆದ್ದು ಮನೆಯ ಕ್ಯಾಪ್ಟನ್‌ ಆಗಿದ್ದರು.

Toxic Movie: ಯಶ್ 'ಟಾಕ್ಸಿಕ್' ಸಿನಿಮಾಗೆ ಬಾಲಿವುಡ್ ಬ್ಯೂಟಿ ಎಂಟ್ರಿ: ರೆಬೆಕಾ ಆಗಿ ತಾರಾ ಸುತಾರಿಯಾ ಫಸ್ಟ್ ಲುಕ್ ವೈರಲ್!

ಟಾಕ್ಸಿಕ್ ಚಿತ್ರದಲ್ಲಿ ತಾರಾ ಸುತಾರಿಯಾ ಹವಾ: ರೆಬೆಕಾ ಫಸ್ಟ್ ಲುಕ್ ಇಲ್ಲಿದೆ

Rocking Star Yash: ಇದೀಗ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲು ಮೂರು ತಿಂಗಳು ಬಾಕಿ ಇರುವಾಗಲೇ ಈ ಸಿನಿಮಾದಲ್ಲಿ ನಟ ಯಶ್ ಜೊತೆಗೆ ನಟಿ ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿ‌ಸುತ್ತಿದ್ದು ಅವರ ಫಸ್ಟ್ ಲುಕ್ ಫೋಟೊ ಆನ್ಲೈನ್ ನಲ್ಲಿ ಹರಿದಾಡುತ್ತಿದೆ.

Vijay Deverakonda: ‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ! ವಿಜಯ್ ದೇವರಕೊಂಡ ಬ್ಯಾಡ್‌ ಲಕ್‌

‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ!

Kingdom : ಗೌತಮ್ ತಿನ್ನನುರಿ ಅವರ ವಿಜಯ್ ದೇವರಕೊಂಡ ಅಭಿನಯದ ಕಿಂಗ್‌ಡಮ್ ಚಿತ್ರದ ಮುಂದುವರಿದ ಭಾಗ ರದ್ದಾಗಿದೆ. ನಿರ್ಮಾಪಕ ನಾಗ ವಂಶಿ ಐಡಲ್‌ಬ್ರೈನ್‌ಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು , ಅಲ್ಲಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ನೀರಸ ಪ್ರದರ್ಶನದ ಕಾರಣವನ್ನು ಚರ್ಚಿಸಲು ಅವರು ನಿರಾಕರಿಸಿದ್ದಾರೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ಒಟ್ಟೂ ನಾಲ್ಕಕ್ಕೆ ಏರಿದೆ.

Bigg Boss Kannada 12: ಅಶ್ವಿನಿ ಥರ ನೂರು ಶತ್ರು ಇದ್ದರೂ ಓಕೆ, ರಘು ಥರ ಒಬ್ಬ ಸ್ನೇಹಿತನೂ ಬೇಡ; ಗಿಲ್ಲಿ ಫ್ಯಾನ್ಸ್‌ ಬೇಸರ

Bigg Boss Kannada: ರಘು ಬಗ್ಗೆ ಗಿಲ್ಲಿ ಫ್ಯಾನ್ಸ್‌ ಬೇಸರ

Gilli Nata Raghu: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಧ್ರುವಂತ್‌ ಕಳಪೆ ಪಟ್ಟ ಪಡೆದುಕೊಂಡರೆ, ರಕ್ಷಿತಾ ಹಾಗೂ ಧನುಷ್‌ ಉತ್ತಮ ಪಡೆದುಕೊಂಡರು. ಬಿಗ್‌ ಬಾಸ್‌ ಮನೆಯ ಈ ಸಲದ ಕೊನೆಯ ಕ್ಯಾಪ್ಟನ್‌ ಆಗಿ ಧನುಷ್‌ ಅವರು ಆಯ್ಕೆ ಆಗಿದ್ದಾರೆ.ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಆಗಿದ್ದರೂ, ಸ್ಪರ್ಧಿಗಳ ನಿರ್ಧಾರ ಮತ್ತು ಬೆಂಬಲದಿಂದಾಗಿ ಧನುಷ್‌ ಗೆಲ್ಲುವಂತೆ ಆಯಿತು. ಇದರಿಂದಾಗಿ ಅಶ್ವಿನಿಗೆ ತೀವ್ರ ಬೇಸರ ಉಂಟಾಯಿತು. ಇದೆಲ್ಲ ಒಂದು ಕಡೆ ಆದ್ರೆ, ಕಳಪೆ ವಿಚಾರದಲ್ಲಿ ರಘು ಕೊಟ್ಟ ಕಾರಣ ಗಿಲ್ಲಿ ಫ್ಯಾನ್ಸ್‌ಗೆ ಬೇಸರ ಉಂಟು ಮಾಡಿದೆ.

Bigg Boss Kannada 12: ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ, ನಿಮಗೆ ಯೋಗ್ಯತೆ ಇಲ್ಲ! ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ಉಗ್ರಾವತಾರ

ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ! ಗಿಲ್ಲಿ ಉಗ್ರಾವತಾರ

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಸಮಯದಲ್ಲಿ ಭಾರಿ ಗಲಾಟೆ ನಡೆದಿದೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ದೊಡ್ಡ ವಾಗ್ವಾದವೇ ನಡೆದು ಹೋಗಿದೆ. ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ನೀಡಿದರು ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಸಿಕ್ಕಾಪಟ್ಟೆ ಸಿಟ್ಟಿನಿಂದ ಮಾತನಾಡಿದರು. ನನಗೆ ತಾಕತ್‌ ಇದ್ದಿದ್ದಕ್ಕೆ ನಾನು ಕ್ಯಾಪ್ಟನ್‌ ಆಗಿದ್ದು. ನಿಮಗೆ ಅದು ಯೋಗ್ಯತೆನೂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ ಗಿಲ್ಲಿ.

Loading...