ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಥ್ರಿಲ್ಲರ್‌ ಮಂಜು ನಿರ್ದೇಶನದ ಸಿನಿಮಾದ ʻಡೆಡ್ಲಿ ಕಿಲ್ಲರ್ʼ ಸಿನಿಮಾಕ್ಕೆ ಸಾಥ್‌ ನೀಡಿದ ನಟಿ ರಾಗಿಣಿ ದ್ವಿವೇದಿ

ʻಡೆಡ್ಲಿ ಕಿಲ್ಲರ್ʼ ಟ್ರೇಲರ್ ರಿಲೀಸ್; ಥ್ರಿಲ್ಲರ್ ಮಂಜುಗೆ ನಟಿ ರಾಗಿಣಿ ಸಾಥ್

'ಪೊಲೀಸ್ ಸ್ಟೋರಿ' ಖ್ಯಾತಿಯ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು 15 ವರ್ಷಗಳ ಬಳಿಕ ನಿರ್ದೇಶಿಸಿರುವ 'ಡೆಡ್ಲಿ ಕಿಲ್ಲರ್' ಚಿತ್ರದ ಭರ್ಜರಿ ಟ್ರೇಲರ್ ಅನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದ್ದಾರೆ. ಕೀರ್ತಿ ಸಿಲ್ವರ್ ಸ್ಕ್ರೀನ್ ಅಡಿ ಮೂಡಿಬಂದಿರುವ ಈ ಕಾಡಿನ ಹಿನ್ನೆಲೆಯ ಸಸ್ಪೆನ್ಸ್ ಹಾರರ್ ಚಿತ್ರದಲ್ಲಿ ಅಭಯ್‌ವೀರ್ ಹಾಗೂ ನಿವೀಕ್ಷಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ʻಕನಸು ಕಾಣಲು ಎಲ್ಲರಿಗೂ ಹಕ್ಕಿದೆ...ʼ; ಸುದೀಪ್‌ ಎದುರಲ್ಲೇ ನೆಪೋಟಿಸಂ ಕುರಿತ ಚರ್ಚೆಗೆ ಶಿವರಾಜ್‌ಕುಮಾರ್‌ ಖಡಕ್‌ ರಿಯಾಕ್ಷನ್‌!

ನೆಪೋಟಿಸಂ ಕುರಿತ ಪ್ರಶ್ನೆಗೆ ಶಿವರಾಜ್‌ಕುಮಾರ್‌ ಖಡಕ್‌ ರಿಯಾಕ್ಷನ್

ನಟ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರದರ್ಶನಕ್ಕೆ ಬಂದಿದ್ದ ಶಿವರಾಜ್‌ಕುಮಾರ್, ಇತ್ತೀಚೆಗೆ ಕೇಳಿಬಂದ ನೆಪೋಟಿಸಂ ಪ್ರಶ್ನೆಗೆ ಮಾಧ್ಯಮಗಳ ಎದುರು ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರರಂಗದಲ್ಲಿ ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ ಎಂದು ಶಿವಣ್ಣ ಹೇಳಿದ್ದಾರೆ.

Karuppu OTT release:  ಸೂಪರ್ ​ಹಿಟ್ ʻಕರುಪ್ಪುʼ ಈ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗಿನಿಂದ?

ಸೂಪರ್ ​ಹಿಟ್ ʻಕರುಪ್ಪುʼ ಈ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗಿನಿಂದ?

Karuppu OTT release: ಆರ್‌ಜೆ ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಎಂಟರ್‌ಟೈನರ್ ಪ್ರದೇಶಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ ಮತ್ತು ವರ್ಷದ ಅತಿದೊಡ್ಡ ತಮಿಳು ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತೆಲುಗಿನಲ್ಲಿ ವೀರಭದ್ರು ಎಂಬ ಹೆಸರಿನಲ್ಲಿ ಬಿಡುಗಡೆಯಾದ ಈ ಚಿತ್ರವು ಇತ್ತೀಚೆಗೆ ವಿಶ್ವಾದ್ಯಂತ ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ.

Amruthadhaare Serial: ಮಗಳಿಗಾಗಿ ಮಿಡಿದಿದೆ ತಾಯಿ ಹೃದಯ; ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ವಾಹಿನಿ!

ಅಮೃತಧಾರೆ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ವಾಹಿನಿ!

Amruthadhaare Serial: ಮಗಳನ್ನು ಕಾಪಾಡಲು ಮುಂದಾಗುವ ಭೂಮಿಕಾ ಎದುರು ಬರುವ ಪ್ರತಿಯೊಬ್ಬ ಗೂಂಡಾಗೂ ತಕ್ಕ ಶಾಸ್ತಿ ಮಾಡುತ್ತಾಳೆ. ಅಷ್ಟೇ ಅಲ್ಲ ಫೈಟ್‌ ಕೂಡ ಮಾಡುತ್ತಾಳೆ. ಭೂಮಿಕಾ ತನ್ನ ಮಗಳು ಮಿಂಚನ್ನು ಕಿಡ್ನ್ಯಾಪರ್‌ಗಳಿಂದ ಸುರಕ್ಷಿತವಾಗಿ ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

Kangana Ranaut: ನರ್ಸ್​​ಗಳ ವೃತ್ತಿಯ ಬಗ್ಗೆ ಕಂಗನಾ ಮಾತು

Kangana Ranaut: ನರ್ಸ್​​ಗಳ ವೃತ್ತಿಯ ಬಗ್ಗೆ ಕಂಗನಾ ಮಾತು

Kangana Ranaut: 'ಭಾರತ್ ಭಾಗ್ಯ ವಿಧಾತ' ಚಿತ್ರ ಬಿಡುಗಡೆಯಾಗುವ ಮುನ್ನ , ನಟಿ-ರಾಜಕಾರಣಿ ಕಂಗನಾ ರನೌತ್, ಆರೋಗ್ಯ ರಕ್ಷಣೆಯಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸಿದ್ದರೂ ಅವರಿಗೆ ಗೌರವ ಮತ್ತು ಮನ್ನಣೆ ಇಲ್ಲ ಎಂದು ಹೇಳಿದ್ದಾರೆ. 26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ಮುಂಬೈನ ಕಾಮಾ ಆಸ್ಪತ್ರೆ ಸಿಬ್ಬಂದಿಯ ನೈಜ ಕಥೆಯಿಂದ ಪ್ರೇರಿತವಾದ ಈ ಚಿತ್ರವು ದಾದಿಯರು, ವಾರ್ಡ್ ಬಾಯ್‌ಗಳು ಮತ್ತು ಆಸ್ಪತ್ರೆ ಕೆಲಸಗಾರರನ್ನು ತನ್ನ ಕಥೆಯ ಹೃದಯಭಾಗದಲ್ಲಿ ಇರಿಸುತ್ತದೆ ಎಂದಿದ್ದಾರೆ.

Drishyam 3:  ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್

‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್

Drishyam 3: ದೃಶ್ಯಂ ತೆಲುಗಿನಲ್ಲಿ ರೀಮೇಕ್ ಮಾಡಲಾಗಿಲ್ಲ, ಆದರೆ ನೇರವಾಗಿ ಬಿಡುಗಡೆ ಮಾಡಲಾಯಿತು. ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ದೃಶ್ಯಂ 3' ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ಕಲೆಕ್ಷನ್ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡಿತು. ಇದು ವಿಶ್ವಾದ್ಯಂತ 230 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿದೆ. OTT ನಲ್ಲಿ ಈ ಚಿತ್ರ ರಿಲೀಸ್‌ ಯಾವಾಗ ಅಂತ ಕೇಳ್ತಿದ್ದಾರೆ.

ʻಶಿವಣ್ಣ-ಅಪ್ಪು ಬೆಳೆದಿದ್ದು ಕಲೆಯಿಂದಲೇ ಹೊರತು ನೆಪೋಟಿಸಮ್‌ನಿಂದಲ್ಲʼ; ‌ತಮ್ಮ ಹೇಳಿಕೆ ಬಗ್ಗೆ ಕ್ಲಾರಿಟಿ ಕೊಟ್ಟ ‌ʻಕಿಚ್ಚʼ ಸುದೀಪ್

ನೆಪೋಟಿಸಮ್‌ ಕುರಿತ ಹೇಳಿಕೆಗೆ ಕ್ಲಾರಿಟಿ ಕೊಟ್ಟ ‌ʻಕಿಚ್ಚʼ ಸುದೀಪ್!

ಕಿಚ್ಚ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ಎದುರಾಗಿದ್ದ 'ನೆಪೋಟಿಸಂ' ವಿವಾದಕ್ಕೆ ಮತ್ತೊಂದು ಸಂದರ್ಶನದ ಮೂಲಕ ಸಂಪೂರ್ಣ ಪೂರ್ಣವಿರಾಮ ಇಟ್ಟಿದ್ದಾರೆ. "ವರನಟ ಡಾ.ರಾಜ್‌ಕುಮಾರ್ ಕಾಲದಿಂದಲೂ ಕನ್ನಡಿಗರು ಕಲೆಯನ್ನು ಮಾತ್ರ ನೋಡಿ ಬೆಳೆಸಿದ್ದಾರೆ" ಎಂದು ಹೇಳಿದ್ದಾರೆ.

Rashmika Mandanna: ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

Rashmika Mandanna: ಭಾರತೀಯ ಸಂಗೀತ ಲೋಕದಲ್ಲಿ ಪ್ರಸಿದ್ಧ ಗಾಯಕಿ (ಕರ್ನಾಟಕ ಗಾಯಕಿ) ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನದ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

Ram Charan: ಮೂರೇ ದಿನಕ್ಕೆ ದಾಖಲೆಯ ಕಲೆಕ್ಷನ್‌ ಮಾಡಿದ ʻಪೆದ್ದಿʼ; ವಿಶ್ವಾದ್ಯಂತ ಈವರೆಗೂ ಆಗಿರುವ ಗಳಿಕೆ ಎಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಪ್ರಮಾಣ ಹಣ ಬಾಚಿಕೊಂಡ ʻಪೆದ್ದಿʼ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ವಿಶ್ವಾದ್ಯಂತ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 236.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Drishyam 3: ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

Drishyam 3: ಮೋಹನ್ ಲಾಲ್ ನಟಿಸಿದ 2013 ರ ಮಲಯಾಳಂ ದೃಶ್ಯಂ ಮತ್ತು 2022 ರಲ್ಲಿ ಬಿಡುಗಡೆಯಾದ ದೃಶ್ಯಂ 2ನ ಮುಂದುವರಿದ ಭಾಗ ಇದಾಗಿದೆ. ದೃಶ್ಯಂ ಚಿತ್ರವು ಭಾರತೀಯ ಚಲನಚಿತ್ರ ಪ್ರೇಕ್ಷಕರು ವಿವಿಧ ಭಾಷೆಗಳಲ್ಲಿ ಸ್ವೀಕರಿಸಿದ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಬೇರೆ ಯಾವುದೇ ಮಲಯಾಳಂ ಚಿತ್ರವು ಇಷ್ಟೊಂದು ಭಾಷೆಗಳಲ್ಲಿ ರೀಮೇಕ್ ಆಗಿಲ್ಲ. 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ಯಾಕೆ ರಿಮೇಕ್ ಆಗುತ್ತಿಲ್ಲ? ಈ ಪ್ರಶ್ನೆಗೆ ನಿರ್ದೇಶಕ ಜೀತು ಜೋಸೆಫ್ ಅವರೇ ಉತ್ತರ ನೀಡಿದ್ದಾರೆ.

Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ?

Kannada Serial: ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ. ಬಿಗ್‌ ಬಾಸ್‌ ಶೋ (Bigg Boss Show) ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುವುದು.ಹಾಗಾಗಿ ಯಾವ ಸೀರಿಯಲ್‌ ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ.

106ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಓಂ ಸಾಯಿಪ್ರಕಾಶ್;‌ ʻಕಾಮನ್‌ ಮ್ಯಾನ್‌ʼ ಚಿತ್ರದಲ್ಲಿದೆ ಲಾಯರ್ ಸಿಎಂ ಆಗುವ ಕಥೆ!

‌ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್

ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ ‘ಕಾಮನ್ ಮ್ಯಾನ್’ ಮೋಷನ್ ಪೋಸ್ಟರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸುರಭಿ ಫಿಲಂಸ್ ಅಡಿಯಲ್ಲಿ ಎನ್. ನರಸಿಂಹಮೂರ್ತಿ ನಿರ್ಮಿಸಿರುವ ಈ ಚಿತ್ರದಲ್ಲಿ, ಒಬ್ಬ ಸಾಮಾನ್ಯ ವಕೀಲ ಯಾವುದೇ ಚುನಾವಣೆ ಎದುರಿಸದೇ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾದರೆ ಏನೆಲ್ಲಾ ಸುಧಾರಣೆ ತರಬಹುದು ಎಂಬ ಕುತೂಹಲಕಾರಿ ರಾಜಕೀಯ ಕಥಾಹಂದರವಿದೆ.

ಕರಾವಳಿ ಸೊಗಡಿನ ‘ಕ್ಷೇತ್ರಪಾಲ’ನಾಗಿ ಬರ್ತಿದ್ದಾರೆ ರಾಘವ ಪೂಜಾರಿ; ಇದು ಊರನ್ನು ಕಾಯುವ ನಾಯಕನ ಕಥೆ

ಕರಾವಳಿ ಸೊಗಡಿನ ‘ಕ್ಷೇತ್ರಪಾಲ’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್‌

ಹಿರಿಯ ಪತ್ರಕರ್ತ ಜಗದೀಶ್ ಮಂಜಣ್ಣ ನಿರ್ದೇಶನದಲ್ಲಿ ಕರಾವಳಿಯ ವಿಶಿಷ್ಟ ಸಂಸ್ಕೃತಿ ಮತ್ತು ದೈವಿಕ ನಂಬಿಕೆಯ ಹಿನ್ನೆಲೆಯುಳ್ಳ ‘ಕ್ಷೇತ್ರಪಾಲ’ ಸಿನಿಮಾದ ಶೀರ್ಷಿಕೆ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ರಾಘವ ಪೂಜಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವು ಕೇವಲ ದೈವದ ಕಥೆಯಲ್ಲದೆ, ಇಡೀ ಊರನ್ನು ರಕ್ಷಿಸುವ ವ್ಯಕ್ತಿಯೊಬ್ಬನ ಹೋರಾಟವಾಗಿದೆಯಂತೆ.

ಕಾನೂನು ಹೋರಾಟದಲ್ಲಿ ಗೆದ್ದ ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ; ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು

‘ಬಾಸ್’ ಸಿನಿಮಾದ ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು! ರಿಲೀಸ್ ಯಾವಾಗ?

ನಟ ತನುಷ್ ಶಿವಣ್ಣ ಅಭಿನಯದ 'ಬಾಸ್' ಸಿನಿಮಾದ ಬಿಡುಗಡೆಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ತಂದಿದ್ದ ಕಾನೂನು ಅಡೆತಡೆಗಳು ಕೊನೆಗೂ ನಿವಾರಣೆಯಾಗಿವೆ. ಈ ಚಿತ್ರಕ್ಕೆ ಸಿವಿಲ್ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

Ashika Ranganath: ನಾಯಕಿ ಪಾತ್ರಕ್ಕೆ ಟೀಕೆ;  ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

Ashika Ranganath: ಜಾನ್ಹವಿ ಕಪೂರ್ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಆ ‘ಪೆದ್ದಿ’ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಕತೆಗೆ ಯಾವ ರೀತಿಯಲ್ಲೂ ಅವಶ್ಯಕ ಇಲ್ಲದೇ ಹೋದರೂ ಸಹ ನಟಿಯ ಅಂಗಾಂಗಗಳ ಮೇಲೆ ಫೋಕಸ್ ಮಾಡಿ ಗ್ಲಾಮರಸ್ ಆಗಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಟೀಕೆಗಳನ್ನು ನಟಿ ಆಶಿಕಾ ರಂಗನಾಥ್‌ ವಿರೋಧಿಸಿದ್ದಾರೆ.

Kalki 2: ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌;  ‘ಕಲ್ಕಿ 2’ ನಿರ್ದೇಶಕರು ಹೇಳಿದ್ದೇನು?

ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಕಲ್ಕಿ 2 ನಿರ್ದೇಶಕರು ಹೇಳಿದ್ದೇನು?

Kalki 2: ಕಲ್ಕಿ 2898 AD, 2024 ರ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿ ಹೊರಹೊಮ್ಮಿತು. ಚಿತ್ರದ ಸೀಕ್ವೆಲ್‌ ಈಗಾಗಲೇ ಕೆಲಸದಲ್ಲಿರುವಾಗ, ನಿರ್ದೇಶಕ ನಾಗ್ ಅಶ್ವಿನ್ ಈಗ ಅದರ ಚಿತ್ರೀಕರಣದ ಕುರಿತು ನವೀಕರಣವನ್ನು ಹಂಚಿಕೊಂಡಿದ್ದಾರೆ. ಚಿತ್ರವು ಡಿಸೆಂಬರ್ 2027 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿದೆ, ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Salim Kumar: ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ನಟ ಸಲೀಂ ಕುಮಾರ್ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ನಟ ಸಲೀಂ ಕುಮಾರ್ ಇನ್ನಿಲ್ಲ

Salim Kumar: ನಟ ಮತ್ತು ನಿರ್ದೇಶಕ ಸಲೀಂ ಕುಮಾರ್ (Salim Kumar) ಜೂನ್ 6 ರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸಲೀಂ ಕುಮಾರ್ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಅವರು ಸಾಯುವ ಮೊದಲು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

Bigg Boss Kannada: ಬಿಗ್‌ಬಾಸ್ ಸೀಸನ್‌ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌ ಪ್ರಕ್ರಿಯೆ ಹೇಗೆ?

ಬಿಗ್‌ ಬಾಸ್ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌ ಹೇಗೆ?

Bigg Boss Kannada: ಇದೀಗ ಹೊಸ ಸೀಸನ್ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್‌ ಹೊರಬಿದ್ದಿದೆ.'ಕಲರ್ಸ್ ಕನ್ನಡ'ದ 'ಕ್ವಾಟ್ಲಿ ಕಿಚನ್ ಸೀಸನ್ -2' ಗ್ಯಾಂಡ್ ಲಾಂಚ್ ವೇಳೆ 'ಬಿಗ್ ಬಾಸ್ -13' ಕುರಿತು ಬಿಗ್ ಅಪ್ಲೇಟ್ ನೀಡಲಾಗಿದೆ. ಈ ಸಲ 'ಬಿಗ್ ಬಾಸ್' ಮನೆಗೆ ಕಾಮನ್ ಮ್ಯಾನ್‌ಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್ -5'ನಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು.

Rachita Ram: ಟಾಲಿವುಡ್‌ಗೆ ರಚಿತಾರಾಮ್  ರೀ ಎಂಟ್ರಿ? ಏನಿದು ಅಪ್‌ಡೇಟ್‌?

ಟಾಲಿವುಡ್‌ಗೆ ರಚಿತಾರಾಮ್ ರೀ ಎಂಟ್ರಿ? ಏನಿದು ಅಪ್‌ಡೇಟ್‌?

Rachita Ram: ಚಿರಂಜೀವಿ ಅವರ ಮಹತ್ವಾಕಾಂಕ್ಷೆಯ 158 ನೇ ಚಿತ್ರ ಪ್ರಸ್ತುತ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. 'ವಾಲ್ತೇರು ವೀರಯ್ಯ' ನಂತಹ ಬ್ಲಾಕ್‌ಬಸ್ಟರ್‌ಗಳ ನಂತರ, ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕೊಲ್ಲಿ ಅವರ ಸಂಯೋಜನೆಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರೀಕ್ಷೆಗಳು ಗಗನಕ್ಕೇರಿವೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ರಚ್ಚು ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಇದೀಗ ಮೆಗಾಸ್ಟಾರ್ ಮುಂದಿನ ಚಿತ್ರದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದೆ ಎಂದು ಚರ್ಚೆ ನಡೀತಿದೆ.

Duniya Vijay:  ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

Duniya Vijay: ಬಹುನಿರೀಕ್ಷಿತ ಚಿತ್ರ 'ಸ್ಲಮ್‌ಡಾಗ್ 33 ಟೆಂಪಲ್ ರೋಡ್' ನ ಟೀಸರ್‌ಗೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಶನಿವಾರ ಬಹಿರಂಗಪಡಿಸಿದ್ದಾರೆ. ಇದೀಗ ಈ ಸಿನಿಮಾದ ಅಪ್​​ಡೇಟ್ ಹೊರಬಿದ್ದಿದ್ದು, ಸಿನಿಮಾದ ಮೊದಲ ಟೀಸರ್ ಜೂನ್ 8 ರಂದು ಬಿಡುಗಡೆ ಆಗಲಿದೆ. ಖ್ಯಾತ ನಟ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸ್ಲಂ ಡಾಗ್’ ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ.

Rakshith Shetty Birthday: ರಕ್ಷಿತ್‌ ಕಡೆಯಿಂದ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌! ಪೋಸ್ಟ್‌ನಲ್ಲಿ ಏನಿದೆ?

ರಕ್ಷಿತ್‌ ಕಡೆಯಿಂದ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌!

Rakshith Shetty Birthday: ರಕ್ಷಿತ್ ಶೆಟ್ಟಿ ಇಂದು (ಜೂನ್.6) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಹಾಗೂ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮಾಡಿರುವ ವಿಶಿಷ್ಟ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ನೇಹಿತ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.

Varanasi: ‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ ಯುದ್ಧ ಹೇಗಿರಲಿದೆ?

‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ ಯುದ್ಧ ಹೇಗಿರಲಿದೆ?

Varanasi: ಈ ಚಿತ್ರದಲ್ಲಿ ಮಹೇಶ್ ಬಾಬು , ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಮೊದಲ ನೋಟ ಬಿಡುಗಡೆಯಾದಾಗಿನಿಂದ, ಪ್ರೇಕ್ಷಕರು ಈಗಾಗಲೇ ಕಥಾವಸ್ತು ಮತ್ತು ಅದರ ಪೌರಾಣಿಕ ಲಿಂಕ್‌ಗಳ ಬಗ್ಗೆ ಸಕ್ರಿಯವಾಗಿ ಚರ್ಚಿಸುತ್ತಿದ್ದರು. ಬರಹಗಾರ ವಿಜಯೇಂದ್ರ ಪ್ರಸಾದ್ ಈಗ ಸಂವಾದದ ಸಂದರ್ಭದಲ್ಲಿ ಹೊಸ ವಿವರಗಳನ್ನು ಹಂಚಿಕೊಂಡಿದ್ದಾರೆ.

Athiradi OTT Release: ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮಲಯಾಳಂ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Athiradi OTT Release: 'ಮಿನ್ನಲ್ ಮುರಳಿ' ಚಿತ್ರಕಥೆಗೆ ಹೆಸರುವಾಸಿಯಾದ ಅರುಣ್ ಅನಿರುದ್ಧನ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು. ದರ್ಶನ್ ರಾಜೇಂದ್ರನ್, ರಿಯಾ ಶಿಬು, ಸರಿನ್ ಶಿಹಾಬ್, ಜಿಯೋ ಬೇಬಿ, ವಿಷ್ಣು ಮತ್ತು ಶೆಲ್ವಿನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನೀತ್ ಶ್ರೀನಿವಾಸನ್ ಮತ್ತು ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Amruthadhare Serial: ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ! ಅನಿರೀಕ್ಷಿತ ತಿರುವಿನಲ್ಲಿ ಅಮೃತಧಾರೆ

ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ!

Amruthadhare Serial: ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಅವಳನ್ನು ಕಿಡ್ನಾಪ್‌ ಮಾಡಿರೋದು ಭೂಮಿಕಾ ಗೊತ್ತಾಗಿದೆ. ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ ಸಹಾಯದೊಂದಿಗೆ ಸಹಾಯ ಪಡೆಯುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್‌ಗಳು ಮಿಂಚನ್ನು ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.

Loading...