ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

SJ Suryah: ತಮಿಳಿನ ʻಕಿಲ್ಲರ್‌ʼ ಸಿನಿಮಾ ಸೆಟ್‌ನಲ್ಲಿ ಭೀಕರ ದುರಂತ; ಸಿಲಿಂಡರ್ ಸ್ಫೋಟದಲ್ಲಿ ಓರ್ವ ತಂತ್ರಜ್ಞ ಸಾವು, ಮೂವರಿಗೆ ಗಾಯ

ʻಕಿಲ್ಲರ್ʼ ಸಿನಿಮಾ ಸೆಟ್‌ನಲ್ಲಿ ಭೀಕರ ಸಿಲಿಂಡರ್ ಸ್ಫೋಟ; ಓರ್ವ ದುರ್ಮರಣ!

ತಮಿಳು ನಟ, ನಿರ್ದೇಶಕ ಎಸ್‌ಜೆ ಸೂರ್ಯ ಅವರ ಮುಂಬರುವ 'ಕಿಲ್ಲರ್' ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಭೀಕರ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 26 ವರ್ಷದ ಯುವ ತಂತ್ರಜ್ಞ ಮದನ್ ಸಾವನ್ನಪ್ಪಿದ್ದಾರೆ. ಚೆನ್ನೈನ ಬಿನ್ನಿ ಮಿಲ್ಸ್‌ನಲ್ಲಿ ಬುಧವಾರ ಮುಂಜಾನೆ ಬಾಂಬ್ ಬ್ಲಾಸ್ಟ್ ದೃಶ್ಯ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದೆ.

ಆಮಿರ್ ಖಾನ್‌ಗೆ 3ನೇ ಮದುವೆ ಫಿಕ್ಸ್; 47 ವರ್ಷದ ಗರ್ಲ್‌ಫ್ರೆಂಡ್‌ ಗೌರಿ ಜೊತೆ ಸಿಂಪಲ್‌ ಆಗಿ ನಡೆಯಲಿದೆ ಕಲ್ಯಾಣ

ಆಮಿರ್‌ ಖಾನ್‌ 3ನೇ ಮದುವೆಗೆ ಮುಹೂರ್ತ‌ ಫಿಕ್ಸ್; ಗೌರಿ ಜತೆ ಸಿಂಪಲ್‌ ಕಲ್ಯಾಣ

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ 47 ವರ್ಷದ ಗೆಳತಿ ಗೌರಿ ಸ್ಪ್ರ್ಯಾಟ್ ಜೊತೆ ಜುಲೈ 5 ರಂದು ತಮ್ಮ ನಿವಾಸದಲ್ಲಿ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ ಮೂರನೇ ಮದುವೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಈ ಜೋಡಿಯ ಈ ಮದುವೆ ನಿರ್ಧಾರಕ್ಕೆ ಕುಟುಂಬಸ್ಥರು ಬೆಂಬಲ ನೀಡಿದ್ದಾರೆ.

ಅಸಹಕಾರ ಆದೇಶದ ವಿರುದ್ಧ ರಣವೀರ್ ಸಿಂಗ್‌ಗೆ ಮೊದಲ ಜಯ; ʻಡಾನ್‌ 3ʼ ವಿವಾದಕ್ಕೆ ತಾತ್ಕಾಲಿಕ ಬ್ರೇಕ್!

ʻಡಾನ್‌ 3ʼ ವಿವಾದ: ಕೋರ್ಟ್ ಮೆಟ್ಟಿಲೇರಿದ ನಟ ರಣವೀರ್ ಸಿಂಗ್‌ಗೆ ಸಿಕ್ತು ಜಯ

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಹೊರಡಿಸಲಾಗಿದ್ದ ಅಸಹಕಾರ ನಿರ್ದೇಶನವನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಜೂನ್ 3ರ ಬುಧವಾರ ಅಧಿಕೃತವಾಗಿ ಹಿಂಪಡೆದಿದೆ. ಚಿತ್ರಮಂಡಳಿಯ ಆದೇಶದ ವಿರುದ್ಧ ರಣವೀರ್ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಗೆಲುವಿಗಾಗಿ ʻಇರುಮುಡಿʼ ಹೊತ್ತ ನಟ ರವಿ ತೇಜ; ಟಾಲಿವುಡ್‌ ಮಾಸ್‌ ಮಹಾರಾಜನಿಗೆ ಈ ಬಾರಿಯಾದ್ರೂ ಸಕ್ಸಸ್‌ ಸಿಗಲಿದೆಯಾ?‌

ʻಇರುಮುಡಿ’ ಚಿತ್ರದ ಗ್ಲಿಂಪ್ಸ್ ರಿಲೀಸ್; ಅಯ್ಯಪ್ಪ ‌ಭಕ್ತನಾಗಿ ಬಂದ ರವಿ ತೇಜ

ಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜ ಸತತ ಸೋಲುಗಳಿಂದ ಹೊರಬರಲು ನಿರ್ದೇಶಕ ಶಿವ ನಿರ್ವಾಣ ಜೊತೆ ಕೈಜೋಡಿಸಿದ್ದು, ‘ದಿ ಹಾರ್ಟ್ ಆಫ್ ಇರುಮುಡಿ’ ಗ್ಲಿಂಪ್ಸ್ ಬುಧವಾರ ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ ಈ ಆಕ್ಷನ್ ಡ್ರಾಮಾದಲ್ಲಿ ರವಿತೇಜ ಅಯ್ಯಪ್ಪ ಸ್ವಾಮಿ ಭಕ್ತರಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಬಾಲಿವುಡ್‌ ನಟ ಜಾನ್ ಅಬ್ರಹಾಂ; ಎಲ್ಲರೆದುರು ಕೊಂಡಾಡಿದ ಸಂಸದೆ

ಕಂಗನಾಗೆ ದೊಡ್ಡ ಸಹಾಯ ಮಾಡಿದ ನಟ ಜಾನ್ ಅಬ್ರಾಹಂ; ಧನ್ಯವಾದ ಹೇಳಿದ ʻಕ್ವೀನ್ʼ

ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ನಟಿಸಿ ನಿರ್ಮಿಸಿರುವ ‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 26/11ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಕಾಮಾ ಆಸ್ಪತ್ರೆಯ ನರ್ಸ್‌ಗಳು 400 ಜನರ ಪ್ರಾಣ ಉಳಿಸಿದ ನೈಜ ಸಾಹಸದ ಕಥೆ ಇದಾಗಿದೆ.

‌ʻಪೆದ್ದಿʼ ಬಾಕ್ಸ್ ಆಫೀಸ್ ಕಲೆಕ್ಷನ್; ಮೊದಲ ದಿನವೇ 100 ಕೋಟಿ ಲೂಟಿ ಮಾಡಲು ಸಜ್ಜಾದ ರಾಮ್ ಚರಣ್!

ಮೊದಲ ದಿನವೇ 100 ಕೋಟಿ ಕ್ಲಬ್ ಸೇರುತ್ತಾ ರಾಮ್ ಚರಣ್ ಅಭಿನಯದ 'ಪೆದ್ದಿ'?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗುತ್ತಿದ್ದು, ಮೊದಲ ದಿನವೇ 100 ಕೋಟಿ ರೂ. ಗಳಿಸುವ ಭರವಸೆ ಮೂಡಿಸಿದೆ. ಜೂನ್ 3 ರಂದೇ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಆಂಧ್ರ-ತೆಲಂಗಾಣದಲ್ಲಿ 75 ಕೋಟಿ ಗ್ರಾಸ್ ನಿರೀಕ್ಷಿಸಲಾಗಿದೆ.

Kangana Ranaut: ಇದೊಂದೇ ಕಾರಣಕ್ಕೆ ಬಾಲಿವುಡ್‌ನಿಂದ ದೂರ ಇರುವೆ; ಕಂಗನಾ

ಇದೊಂದೇ ಕಾರಣಕ್ಕೆ ಬಾಲಿವುಡ್‌ನಿಂದ ದೂರ ಇರುವೆ; ಕಂಗನಾ

Kangana Ranaut: ಭಾರತ್ ಭಾಗ್ಯ ವಿಧಾತ'ದಲ್ಲಿ ನರ್ಸ್ ಪಾತ್ರವನ್ನು ನಿರ್ವಹಿಸಲಿದ್ದಾರೆ . ಮಂಗಳವಾರ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಈ ಪಾತ್ರವನ್ನು ನಿರ್ವಹಿಸಲು ಬಾಲಿವುಡ್‌ನಿಂದ ದೂರವಿರುವುದು ಎಷ್ಟು ಮುಖ್ಯ ಎಂದು ಕಂಗನಾ ಬಹಿರಂಗಪಡಿಸಿದರು. ನಿಜ ಜೀವನದೊಂದಿಗೆ ಸಂಪರ್ಕದಲ್ಲಿರುವುದರ ಮಹತ್ವದ ಬಗ್ಗೆ ಅವರು ಮಾತನಾಡಿದರು.

Amruthadhaare Serial: ಕೆಡಿ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

Amruthadhaare Serial: ಮಿಂಚು ಕಥೆಯಲ್ಲಿ ಬಹುದೊಡ್ಡ ಟ್ವಿಸ್ಟ್‌ ಪಡೆದುಕೊಂಡಿದೆ. ಜೈದೇವ್‌ ಆಟಕ್ಕೆ ಭೂಮಿ ಹಾಗೂ ಗೌತಮ್‌ ಬಲಿಯಾಗುತ್ತಿದ್ದಾರೆ. ಮಿಂಚು ತಮ್ಮ ಮಗಳು ಎಂದು ತಿಳಿದ ಭೂಮಿಕಾ-ಗೌತಮ್ ಆಕೆಯನ್ನು ದತ್ತು ನೀಡಲು ಮುಂದಾಗಿದ್ದಾರೆ. ಆದರೆ, ಜೈದೇವ್‌ನ (Jaidev) ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆನಾಗತ್ತೆ?

Jagadhatri Kannada Serial: ‘ಜಗದ್ಧಾತ್ರಿ’ ಧಾರಾವಾಹಿಗೆ ಈ ಸ್ಟಾರ್‌ ನಟ ಹೀರೋ? ಫ್ಯಾನ್ಸ್‌ ಫುಲ್‌ ಖುಷ್‌

‘ಜಗದ್ಧಾತ್ರಿ’ ಧಾರಾವಾಹಿಗೆ ಈ ಸ್ಟಾರ್‌ ನಟ ಹೀರೋ? ಫ್ಯಾನ್ಸ್‌ ಫುಲ್‌ ಖುಷ್‌

Jagadhatri Kannada Serial:ಈಗಾಗಲೇ ಎಲ್ಲೆಡೆ ವೈರಲ್ ಆಗಿರುವಂತೆ ಮೋಕ್ಷಿತಾ ಪೈ (Mokshitha Pai) ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ‘ಜಗದ್ಧಾತ್ರಿ’ ಪ್ರೊಮೋ ರಿಲೀಸ್ ಆಗಿದೆ. ಆದರೆ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದರೆ ವಾಯ್ಸ್ ಕೇಳಿ ಎಲ್ಲರೂ ಇದು ಮೋಕ್ಷಿತಾ ಪೈ ಅವರೇ ಎಂದು ಹೇಳಿದ್ದಾರೆ. ಈಗ ಈ ಬಹುನಿರೀಕ್ಷಿತ ಪ್ರೊಜೆಕ್ಟ್‌ನಿಂದ ಮತ್ತೊಂದು ದೊಡ್ಡ ಸುದ್ದಿ ಹೊರ ಬಿದ್ದಿದೆ.

Actor Yash: 24 ಕೋಟಿ ರೂ. ಮೌಲ್ಯದ ಜಮೀನು ಖರೀದಿಸಿದ ಯಶ್‌ ದಂಪತಿ; ಎಲ್ಲಿ?

24 ಕೋಟಿ ರೂ. ಮೌಲ್ಯದ ಜಮೀನು ಖರೀದಿಸಿದ ಯಶ್‌ ದಂಪತಿ; ಎಲ್ಲಿ?

Actor Yash: ಮಹಾರಾಷ್ಟ್ರದ ಜನಪ್ರಿಯ ಕರಾವಳಿ ಪ್ರದೇಶದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಖರೀದಿಯನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂ. ಕೊಟ್ಟು ಬೀಚ್ ಪಕ್ಕದ ಜಮೀನು ಸ್ವಂತ ಮಾಡಿಕೊಂಡಿದ್ದಾರೆ. ಮುಂಬೈ ಸಮೀಪದ ರಾಯಗಢದ ಅಲಿಬಾಗ್ (Alibag land) ತಾಲ್ಲೂಕಿನ ಕಾಮತ್ ಗ್ರಾಮದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಕೃಷಿಭೂಮಿ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

Ranveer Singh: 'ಡಾನ್ 3' ವಿವಾದ: ರಣ್​​ವೀರ್‌ ಸಿಂಗ್‌ಗೆ ಕಂಗನಾ ಬೆಂಬಲ

'ಡಾನ್ 3' ವಿವಾದ: ರಣ್​​ವೀರ್‌ ಸಿಂಗ್‌ಗೆ ಕಂಗನಾ ಬೆಂಬಲ

Ranveer Singh: 2023ರಲ್ಲಿ ಡಾನ್​ 3 (Don 3) ಅಧಿಕೃತವಾಗಿ ಘೋಷಣೆಯಾಗಿ, ಚಿತ್ರತಂಡ ರಣ್​​ವೀರ್ ಸಿಂಗ್ ಅವರನ್ನು ತಮ್ಮ ಮುಂದಿನ ನಾಯಕ ನಟ ಎಂದು ಪರಿಚಯಿಸಿತ್ತು. ಚಿತ್ರೀಕರಣ ಇನ್ನೇನು ಶುರುವಾಗಲಿದೆ ಎಂಬ ಹೊತ್ತಿಗೆ ನಾಯಕ ನಟ ಚಿತ್ರದಿಂದಲೇ ನಿರ್ಗಮಿಸಿದರು ಎಂಬ ವರದಿಗಳಿಂದ ಈ ವಿವಾದ ಹುಟ್ಟಿಕೊಂಡಿದೆ. ಹೊರನಡೆದ ನಂತರ ಕಳೆದ ತಿಂಗಳು, ಫರ್ಹಾನ್ ಅಖ್ತರ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಅನ್ನು ಸಂಪರ್ಕಿಸಿ, ನಟನ ನಿರ್ಗಮನವು ಚಿತ್ರದ ಪೂರ್ವ-ನಿರ್ಮಾಣ ಹಂತದಲ್ಲಿ ಸುಮಾರು 45 ಕೋಟಿ ರೂಪಾಯಿಗಳ ನಷ್ಟ ಉಂಟುಮಾಡಿದೆ ಎಂದು ಹೇಳಿಕೊಂಡಿದ್ದರು. ಇದೀಗ ಕಂಗನಾ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದು, ನಟನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಕ್ಯಾನ್ಸರ್ ಪೀಡಿತ ಅಭಿಮಾನಿಗೆ ನಟ ಯಶ್ ವಿಡಿಯೋ ಕಾಲ್; ʻನೀನು ಒಂಟಿಯಲ್ಲ..ʼ ಎಂದು ಧೈರ್ಯ ತುಂಬಿದ ʻರಾಕಿ ಭಾಯ್ʼ!

ಕ್ಯಾನ್ಸರ್ ಪೀಡಿತ ಅಭಿಮಾನಿಗೆ ಧೈರ್ಯ ತುಂಬಿದ ನಟ ಯಶ್; ವಿಡಿಯೋ ವೈರಲ್!

‘ರಾಕಿಂಗ್ ಸ್ಟಾರ್’ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಗಳಾದ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಕೆಲಸಗಳಲ್ಲಿ ತೀವ್ರ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಶಿವಮೊಗ್ಗ ಜಿಲ್ಲಾ ಅಭಿಮಾನಿ ಸಂಘದ ಅಧ್ಯಕ್ಷ ಸುನಿಲ್ ಅವರಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.

Ram Charan: ರಾಮ್‌ಚರಣ್ ಕಡೆ ನುಗ್ಗಿದ ವ್ಯಕ್ತಿ; ಗಾಬರಿ ಆದ ಜಾನ್ವಿ ಕಪೂರ್, ವಿಡಿಯೋ ವೈರಲ್‌

ರಾಮ್‌ಚರಣ್ ಕಡೆ ನುಗ್ಗಿದ ವ್ಯಕ್ತಿ; ಗಾಬರಿ ಆದ ಜಾನ್ವಿ ಕಪೂರ್!

Ram Charan: ವೀಡಿಯೊದಲ್ಲಿ, ರಾಮ್ ಚರಣ್‌ನಂತೆ ಕಾಣುವ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಅಭಿಮಾನಿ ನಟನಂತೆಯೇ ಅದೇ ಕೇಶವಿನ್ಯಾಸವನ್ನು ಹೊಂದಿದ್ದರು. ನಡೆಯಿಂದಾಗಿ ಸಿನಿಮಾದ ನಟಿ ಜಾನ್ವಿ ಕಪೂರ್ ಅವರು ಗಾಬರಿ ಆಗಿದ್ದಾರೆ. ರಾಮ್‌ಚರಣ್ ರೀತಿ ಹೋಲುವ ಅಭಿಮಾನಿಯೊಬ್ಬ ದಿಢೀರನೆ ನೆಚ್ಚಿನ ನಟನ ಕಡೆ ನುಗ್ಗಿದ್ದಾರೆ. ಪಕ್ಕದಲ್ಲಿ ಇದ್ದ ಜಾನ್ವಿ ಒಂದು ಕ್ಷಣ ಶಾಕ್ ಆಗಿದ್ದಾರೆ.ಬಾಡಿಗಾರ್ಡ್ ಕೆವಿನ್ ಕುಂಟಾ ಏಕಾಏಕಿ ಆತನನ್ನು ಅನಾಯಾಸವಾಗಿ ಎತ್ತಿಕೊಂಡು ಪಕ್ಕಕ್ಕೆ ಹೋಗಿರುವುದನ್ನು ನೋಡಬಹುದು.

ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸಿದ್ದಾರಾ ರಶ್ಮಿಕಾ ಮಂದಣ್ಣ - ಕೃತಿ ಸನೋನ್‌?‌ ಇಂಥದ್ದೊಂದು ವದಂತಿ ಹುಟ್ಟಿಕೊಂಡಿದ್ದೇಗೆ?

ʻಕಾಕ್‌ಟೇಲ್ 2ʼ ಚಿತ್ರದಲ್ಲಿ ರಶ್ಮಿಕಾ - ಕೃತಿ ಸಲಿಂಗಕಾಮಿಗಳಾ? ಸತ್ಯ ಏನು?

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಸಲಿಂಗಕಾಮಿಗಳಾಗಿ ನಟಿಸಿದ್ದಾರೆಂಬ ವದಂತಿಗಳಿಗೆ ತೆರೆ ಬಿದ್ದಿದೆ. ಸೆಟ್‌ನಲ್ಲಿ ಇವರಿಬ್ಬರ ಆಪ್ತ ಗೆಳೆತನವನ್ನು ನೋಡಿ ನಿರ್ದೇಶಕ ಹೋಮಿ ಅದಾಜಾನಿಯಾ ತಮಾಷೆಯಾಗಿ ಆಡಿದ ಮಾತೇ ಗಾಸಿಪ್‌ಗೆ ಕಾರಣವಾಗಿತ್ತಂತೆ!

Salman Khan: ʻಕಾಲಾ ಹಿರನ್' ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಲೀಗಲ್ ನೋಟಿಸ್!

ʻಕಾಲಾ ಹಿರನ್' ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಲೀಗಲ್ ನೋಟಿಸ್!

Salman Khan: ನಟನ ಇಮೇಜ್ ಬಳಸಿಕೊಂಡು ವಿವಾದ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಚಿತ್ರವನ್ನು ಭರತ ಶ್ರೀನಾಥ್ (Bharath Shreenath) ನಿರ್ದೇಶಿಸಿದ್ದಾರೆ ಮತ್ತು ಅಮಿತ್ ಜಾನಿ ನಿರ್ಮಿಸಿದ್ದಾರೆ. ವರದಿಯ ಪ್ರಕಾರ, ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ತಕ್ಷಣ ತೆಗೆದುಹಾಕುವಂತೆ ಕಾನೂನು ನೋಟಿಸ್ ನೀಡಿದೆ.

ವಿನೋದ್‌ ಪ್ರಭಾಕರ್‌ ನಟನೆಯ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌; ಚಿತ್ರತಂಡಕ್ಕೆ ಸಾಥ್‌ ನೀಡಿದ ಕೆವಿಎನ್ ಪ್ರೊಡಕ್ಷನ್ಸ್

Balaraman Dinagalu: ವಿನೋದ್ ಪ್ರಭಾಕರ್‌ಗೆ KVN ಪ್ರೊಡಕ್ಷನ್ಸ್ ಸಾಥ್‌!

ಸ್ಯಾಂಡಲ್‌ವುಡ್‌ನ ಕಲ್ಟ್ ಕ್ಲಾಸಿಕ್ 'ಆ ದಿನಗಳು' ಚಿತ್ರದ ಮುಂದುವರಿದ ಅಧ್ಯಾಯವಾಗಿ ಮೂಡಿಬರುತ್ತಿರುವ, ನಿರ್ದೇಶಕ ಕೆ.ಎಂ. ಚೈತನ್ಯ ಅವರ 'ಬಲರಾಮನ ದಿನಗಳು' ಸಿನಿಮಾ ಜೂನ್ 26 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 'ಮರಿ ಟೈಗರ್' ವಿನೋದ್ ಪ್ರಭಾಕರ್ ನಾಯಕರಾಗಿ ಹಾಗೂ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ʻದಳಪತಿʼ ವಿಜಯ್‌ ರೀತಿಯಲ್ಲೇ ರಾಜಕೀಯಕ್ಕೆ ಕಾಲಿಡುತ್ತಾರಾ ತಮಿಳಿನ ಮತ್ತೋರ್ವ ʻಸ್ಟಾರ್‌ʼ ನಟ? ತಂದೆಯಿಂದಲೇ ಸಿಕ್ತು ಸುಳಿವು!

ʻದಳಪತಿʼ ವಿಜಯ್ ಹಾದಿಯಲ್ಲೇ ರಾಜಕೀಯಕ್ಕೆ ಮತ್ತೋರ್ವ ತಮಿಳು ನಟ ಎಂಟ್ರಿ?

ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದ ಬೆನ್ನಲ್ಲೇ, ಈಗ ಬಹುಮುಖ ಪ್ರತಿಭೆ ಧನುಷ್ ಕೂಡ ಭವಿಷ್ಯದಲ್ಲಿ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಅವರ ತಂದೆ, ಹಿರಿಯ ನಿರ್ದೇಶಕ ಕಸ್ತೂರಿ ರಾಜಾ ಈ ಸಾಧ್ಯತೆಯನ್ನು ತಳ್ಳಿಹಾಕದೆ ಧನುಷ್ ವೈಯಕ್ತಿಕ ಇಷ್ಟಕ್ಕೆ ಬಿಟ್ಟಿದ್ದು ಎಂದು ಸುಳಿವು ನೀಡಿದ್ದಾರೆ.

ಯುವ ರಾಜ್‌ಕುಮಾರ್‌ ನಟನೆಯ 3ನೇ ಸಿನಿಮಾಕ್ಕೆ ಸಿಕ್ಕೇ ಬಿಟ್ರು ಭರವಸೆಯ ನಿರ್ದೇಶಕ; ಯಾರವರು?

ಯುವ ರಾಜ್‌ಕುಮಾರ್‌ ನಟನೆಯ 3ನೇ ಚಿತ್ರಕ್ಕೆ ಡೈರೆಕ್ಟರ್‌ ಫಿಕ್ಸ್!‌

ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್ ಅವರು 'ಯುವ' ಮತ್ತು 'ಎಕ್ಕ' ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಈ ಬಾರಿ ಜಡೇಶ್ ಕೆ ಹಂಪಿ ಅವರ ಜೊತೆಗೆ ಸಿನಿಮಾ ಮಾಡಲು ಯುವ ಒಪ್ಪಿಗೆ ನೀಡಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ.

ʻಸೀತಾರಾಮʼ ಸೀರಿಯಲ್‌ ಖ್ಯಾತಿಯ ರೀತಿ ಸಿಂಗ್‌ ಅಭಿನಯದ ʻನನ್ನ ಮಗಳೇ ಸೂಪರ್ ಸ್ಟಾರ್ʼ ಸಿನಿಮಾ ಟೀಸರ್‌ ರಿಲೀಸ್‌

‌ʻಸೀತಾರಾಮʼ ಖ್ಯಾತಿಯ ರೀತು ಸಿಂಗ್ ನಟನೆಯ ಹೊಸ ಚಿತ್ರದ ಟೀಸರ್ ರಿಲೀಸ್

‘ಸೀತಾರಾಮ’ ಧಾರಾವಾಹಿ ಖ್ಯಾತಿಯ ಬಾಲನಟಿ ರೀತು ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಡಾ. ಜಯಮಾಲಾ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆಯುರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.

ʻಶಾಲೆಯಲ್ಲಿ ಹಿಂದಿ ಮಾತನಾಡಿದ್ರೆ ಅಮ್ಮ ಚಪ್ಪಲಿಯಲ್ಲಿ ಹೊಡೀತಿದ್ರುʼ; ಬಾಲ್ಯದ ಕಹಿ ಸತ್ಯ ಬಿಚ್ಚಿಟ್ಟ ನಟ ಬಾಬಿ ಡಿಯೋಲ್

ಹಿಂದಿ ಮಾತನಾಡಿದಕ್ಕೆ ಬಾಬಿ ಡಿಯೋಲ್‌ಗೆ ಅಮ್ಮನಿಂದ ಸಿಕ್ಕಿತ್ತು ಚಪ್ಪಲಿ ಏಟು!

ಬಾಲಿವುಡ್ ನಟ ಬಾಬಿ ಡಿಯೋಲ್ ತಮ್ಮ ಬಾಲ್ಯದ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದ ಅವರು ಹಿಂದಿ ಮಾತನಾಡಿದ್ದಕ್ಕೆ ತಾಯಿ ಪ್ರಕಾಶ್ ಕೌರ್ ಗರಂ ಆಗಿದ್ದರು. ಮಗನಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದರು ಎಂಬ ಅಸಲಿ ಸಂಗತಿ ಬಹಿರಂಗವಾಗಿದೆ.

Amruthadhaare Serial:  ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

Amruthadhaare Serial: ಅಮೃತಧಾರೆಯಲ್ಲಿ ಗೌತಮ್‌ ಹಾಗೂ ಭೂಮಿ ಮಿಂಚು ವಿಚಾರವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಿಂಚುನೇ ತನ್ನ ಮಗಳು ಅನ್ನೋ ವಿಚಾರ ಭೂಮಿ ಗೌತಮ್‌ಗೆ ಇನ್ನೂ ಗೊತ್ತಿಲ್ಲ. ಹೀಗಿರುವಾಗ ಮಹಿಮಾಳಿಗೆ ದತ್ತು ಕೊಡಲು ಮುಂದಾಗಿದ್ದಾರೆ. ಅಪ್ಪನಾಗಿ ಸೋತೆ ಎಂದಯ ಗೌತಮ್‌ ಭಾವುಕನಾಗಿದ್ದಾನೆ.

Kushboo Sundar: ಮೋದಿ ಭೇಟಿ ಆದ ನಟಿ ಖುಷ್ಬೂ ಸುಂದರ್!‌ ಮಗಳ ಮದುವೆಗೆ ಆಹ್ವಾನ

ಮೋದಿ ಭೇಟಿ ಆದ ನಟಿ ಖುಷ್ಬೂ ಸುಂದರ್!‌ ಮಗಳ ಮದುವೆಗೆ ಆಹ್ವಾನ

Kushboo Sundar: ನಟಿ ಖುಷ್ಬೂ ಸುಂದರ್ ತಮ್ಮ ಕುಟುಂಬದೊಂದಿಗೆ ನವದೆಹಲಿಯಲ್ಲಿರುವ ಪ್ರಧಾನಿ ಕಚೇರಿಗೆ ಆಗಮಿಸಿದರು. ಕುಟುಂಬವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಯಿತು. ಖುಷ್ಬೂ ಸುಂದರ್ ತಮ್ಮ ಹಿರಿಯ ಮಗಳು ಅವಂತಿಕಾ ಅವರ ವಿವಾಹ ಪತ್ರವನ್ನು ಪ್ರಧಾನಿಯವರಿಗೆ ನೀಡಿದರು. ಭೇಟಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ವಿಶೇಷ ಶೀರ್ಷಿಕೆಯನ್ನು ಬರೆದಿದ್ದಾರೆ.

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವಿಚಾರ; ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲು

ಬಿಕಿನಿ ಫೋಟೋ ವಿಚಾರ; ಕೇಸ್ ದಾಖಲಿಸಿದ ರುಕ್ಮಿಣಿ ವಸಂತ್

Rukmini Vasanth: ನಟಿ ರುಕ್ಮಿಣಿ ವಸಂತ್‌ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. AI ತಂತ್ರಜ್ಞಾನ ಬಳಸಿ ಅಶ್ಲೀಲ ಪೋಟೊ ಸೃಷ್ಟಿ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ (Deep Fake) ಬಳಸಿ ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖ ಅಳವಡಿಕೆ ಮಾಡಲಾಗಿದೆ. ವಿಡಿಯೋ ಮತ್ತು ಪೋಟೊ ಕ್ರಿಯೆಟ್ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

Ravi Mohan: ರವಿ ಮೋಹನ್ (Ravi Mohan) ತಮ್ಮ ಪತ್ನಿ ಆರತಿ ರವಿ ಅವರಿಂದ ವಿಚ್ಛೇದನ ಪಡೆಯುವವರೆಗೆ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸುದ್ದಿಯಾಗಿದ್ದರು . ಇದಾದ ಕೆಲವು ದಿನಗಳ ನಂತರ, ಲೋಕೇಶ್ ಕನಕರಾಜ್ ಅವರು ನಟನನ್ನು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ಗೆ ಬೆಂಜ್ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

Loading...