ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ʻಜೈ ಶ್ರೀ ರಾಮ..ʼ ಎನ್ನುತ್ತಾ ಅಂಜನಾದ್ರಿ ಬೆಟ್ಟದಲ್ಲಿ ʻಜೈ ಹನುಮಾನ್‌ʼ ಸಿನಿಮಾ ಆರಂಭಿಸಿದ ರಿಷಬ್‌ ಶೆಟ್ಟಿ; ಇಲ್ಲಿವೆ ಮುಹೂರ್ತದ ಫೋಟೋಗಳು

Photos: 'ಜೈ ಶ್ರೀರಾಮ್' ಎನ್ನುತ್ತಾ 'ಜೈ ಹನುಮಾನ್' ಶುರು ಮಾಡಿದ ರಿಷಬ್!

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯದ ʻಜೈ ಹನುಮಾನ್ʼ‌ ಸಿನಿಮಾಕ್ಕೆ ಕೊಪ್ಪಳದ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಟ ರಿಷಬ್‌ ಶೆಟ್ಟಿ, "ಜೈ ಶ್ರೀ ರಾಮ.. ಹನುಮಂತನ ದೈವಿಕ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್...‌ ಈ ಪವಿತ್ರ ಪ್ರಯಾಣವನ್ನು ಪ್ರಾರಂಭಿಸುವುದು ನನ್ನ ಹೃದಯವನ್ನು ಅಪಾರ ಕೃತಜ್ಞತೆ ಮತ್ತು ಜವಾಬ್ದಾರಿಯಿಂದ ತುಂಬಿಸಿದೆ" ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ ನೋಡಿ.

Maryaade Ramanna serial: ಅಖಾಡದಲ್ಲಿ ಪಂದ್ಯ ಗೆಲ್ಲೋ ರಾಮಣ್ಣ, ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ?

Maryaade Ramanna: ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ ರಾಮಣ್ಣ?

Maryaade Ramanna serial: ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಯೊಂದು ಬರುತ್ತಿದೆ. ಅದುವೇ ‘ಮರ್ಯಾದೆ ರಾಮಣ್ಣ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಪೈಲ್ವಾನ್‌ ಕುರಿತ ಕಥೆ ಹೊಂದಿದ್ದು, ಎರಡನೇ ಪ್ರೋಮೋ ರಿಲೀಸ್‌ ಆಗಿದೆ. ಹಠಮಾರಿ ನಾಯಕ ಮತ್ತು ಮೃದು ಸ್ವಭಾವದ ನಾಯಕಿಯ ನಡುವಿನ ಜಟಾಪಟಿ ಇದೆ. ಈ ಧಾರಾವಾಹಿಯಲ್ಲಿ ನಾಯಕ ಚೇತನ್‌ ಚಂದ್ರ .

ʻಜನ ನಾಯಗನ್‌ʼ ಸಿನಿಮಾ ನೋಡಲು ಇನ್ನೂ 4 ತಿಂಗಳು ಕಾಯಬೇಕು? ಇದು ಸುದ್ದಿ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಖುಷಿ ನೀಡುತ್ತಾ?

ʻಜನ ನಾಯಗನ್‌ʼ ಸದ್ಯಕ್ಕೆ ರಿಲೀಸ್‌ ಆಗೋದಿಲ್ವಾ? ಚಿತ್ರತಂಡದ ಪ್ಲ್ಯಾನ್‌ ಏನು?

Jana Nayagan Movie: ತಮಿಳಿನ ಜನ ನಾಯಗನ್‌ ಸಿನಿಮಾದ ಬಿಡುಗಡೆಗೆ ತಡವಾಗುತ್ತಿರುವುದರಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಜನವರಿಯಲ್ಲಿ ಬರಬೇಕಿದ್ದ ವಿಜಯ್ ಅವರ ಈ ಕೊನೆಯ ಸಿನಿಮಾ ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ರಿಲೀಸ್ ಆಗುವ ಸಾಧ್ಯತೆಯಿದೆ.

Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್‌

Amruthadhaare: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್!

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೇಡಿಯ ದರ್ಪಕ್ಕೆ ಗೌತಮ್ ದಿವಾನ್ ಸಿಡಿದ್ದೆದ್ದಿದ್ದಾನೆ. ಜೈದೇವ್‌ ಮಾಡಿರುವ , ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಮಲ್ಲಿ ವಿರುದ್ಧ ಸುನಿಯನ್ನು ಎತ್ತಿಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸಾಲದೇ ಗೌತಮ್‌ನಿಂದ ಆಸ್ತಿಯನ್ನ ಪೂರ್ತಿ ಕಬಳಿಸಿದರೂ ಇನ್ನೂ ತನ್ನ ಹಳೆ ಬುದ್ಧಿಯನ್ನು ಬಿಡುತ್ತಿಲ್ಲ. ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ.

Actor Darshan: ದರ್ಶನ್ ಲಾಕ್ ಆಗಬಾರದಿತ್ತು, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

ದರ್ಶನ್ ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

killer venkatesh: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದವರು ಕಿಲ್ಲರ್‌ ವೆಂಕಟೇಶ್‌ . ಹಿರಿಯ ಪತ್ರಕರ್ತರಾದ ಗಣೇಶ್‌ ಕಾಸರಗೋಡು ಅವರು ಕಿಲ್ಲರ್‌ ವೆಂಕಟೇಶ್‌ ಅವರನ್ನ ಹುಡುಕಿಕೊಂಡು ತುಮಕೂರಿಗೆ ಹೋಗಿದ್ದರು. ಅಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿಸಿದ್ದರು. ಕಿಲ್ಲರ್‌ ವೆಂಕಟೇಶ್‌ ಅವರು ತಮ್ಮ ಆರೋಗ್ಯ ಸ್ಥಿತಿ, ಸಿನಿ ಜೀವನ, ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ತೆರೆಮೇಲೆ ಬರ್ತಿದ್ದಾರೆ ʻಭೀಮಾತೀರದ ಹಂತಕರುʼ; ರವಿ ಬೆಳಗೆರೆ ಪಾತ್ರ ಮಾಡಲಿದ್ದಾರೆ ಪುತ್ರಿ ಭಾವನಾ

ತೆರೆಮೇಲೆ ಮತ್ತೆ ರಕ್ತಚರಿತ್ರೆ; 2 ಭಾಗಗಳಲ್ಲಿ ಬರಲಿದೆ 'ಭೀಮಾತೀರದ ಹಂತಕರು'

Bheematheerada Hantakaru movie: ರವಿ ಬೆಳಗೆರೆ ಅವರ ʻಭೀಮಾತೀರದ ಹಂತಕರುʼ ಕೃತಿ ಆಧಾರಿತವಾಗಿ ಎರಡು ಭಾಗಗಳಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ 90ರ ದಶಕದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ರಕ್ತಚರಿತ್ರೆಗೆ ಕಬಡ್ಡಿ ನರೇಂದ್ರ ಬಾಬು ಸಿನಿಮಾರೂಪ ನೀಡುತ್ತಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ತೆಲುಗು ನಿರ್ಮಾಪಕರನ್ನು ಕರೆತಂದ ರಿಷಬ್‌ ಶೆಟ್ಟಿ; ʻಜೈ ಹನುಮಾನ್‌ʼ ಬಗ್ಗೆ ʻಡಿವೈನ್‌ ಸ್ಟಾರ್‌ʼ ಹೇಳಿದ್ದೇನು?

ಅಂಜನಾದ್ರಿ ಬೆಟ್ಟಕ್ಕೆ ಟಾಲಿವುಡ್‌ ನಿರ್ಮಾಪಕರನ್ನು ಕರೆತಂದ ರಿಷಬ್ ಶೆಟ್ಟಿ!

Jai Hanuman Movie: ರಿಷಬ್‌ ಶೆಟ್ಟಿ ಅವರ ಜೈ ಹನುಮಾನ್‌ ಚಿತ್ರದ ಮುಹೂರ್ತವು ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಆಸೆಯಂತೆ ಹನುಮಂತನ ಜನ್ಮಸ್ಥಳದಲ್ಲೇ ಈ ಕಾರ್ಯಕ್ರಮ ನಡೆದಿದ್ದು, ಇದು ಹನುಮನಿಗೆ ಮಾಡುವ ಸೇವೆ ಎಂದಿದ್ದಾರೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂ. ಎಂ. ಕೀರವಾಣಿ ಅವರ ಸಂಗೀತ ನಿರ್ದೇಶನವಿದೆ.

'ಟಾಕ್ಸಿಕ್ʼ ಸಿನಿಮಾಕ್ಕೆ ರವಿ ಬಸ್ರೂರು ಒಬ್ರೇ ಮ್ಯೂಸಿಕ್‌ ಡೈರೆಕ್ಟರ್‌ ಅಲ್ಲ! ಹಾಡುಗಳ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಮಾಹಿತಿ

ಭಾರಿ ಮೊತ್ತಕ್ಕೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಖರೀದಿಸಿದ ಜೀ ಮ್ಯೂಸಿಕ್!

Yash Toxic Movie Updates: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾದ ಚಿತ್ರದ ಆಡಿಯೋ ಹಕ್ಕುಗಳನ್ನು 'ಜೀ ಮ್ಯೂಸಿಕ್ ಕಂಪನಿ' ಬೃಹತ್ ಮೊತ್ತಕ್ಕೆ ಖರೀದಿಸಿದೆ. ಕೇವಲ ರವಿ ಬಸ್ರೂರ್ ಮಾತ್ರವಲ್ಲದೆ ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ ಸೇರಿದಂತೆ ಘಟಾನುಘಟಿ ಸಂಗೀತ ನಿರ್ದೇಶಕರು ಟಾಕ್ಸಿಕ್ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ವಿಶೇಷ.

ಅಂಜನಾದ್ರಿ ಬೆಟ್ಟದಲ್ಲಿ ಶುರುವಾಯ್ತು ರಿಷಬ್‌ ಶೆಟ್ಟಿ ಹೊಸ ಸಿನಿಮಾ; ʻಜೈ ಹನುಮಾನ್‌ʼ ಚಿತ್ರಕ್ಕೆ ಅದ್ದೂರಿ ಮುಹೂರ್ತ

Rishab Shetty: ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ

Jai Hanuman Movie: ರಿಷಬ್‌ ಶೆಟ್ಟಿ ಅವರ ಜೈ ಹನುಮಾನ್‌ ಸಿನಿಮಾದ ಮುಹೂರ್ತವು ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಇಂದು (ಫೆ.22) ಅದ್ದೂರಿಯಾಗಿ ನೆರವೇರಿತು. 'ಕಾಂತಾರ'ದ ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ.

70th Filmfare Awards:  ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ? ಫಿಲ್ಮ್‌ಫೇರ್ ಅವಾರ್ಡ್‌ ಕಂಪ್ಲೀಟ್‌ ಲಿಸ್ಟ್ ಔಟ್‌

Filmfare Awards: ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ?

70th Filmfare Awards Kannada: 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ಪ್ರಶಸ್ತಿಗಳು ಅನೌನ್ಸ್‌ ಆಗಿದೆ. ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ಈ ಕಾರ್ಯಕ್ರಮವು ಫೆಬ್ರವರಿ 21 ರಂದು ನಡೆದಿದೆ. ಕನ್ನಡದಲ್ಲಿ 'ಶಾಖಾಹಾರಿ' ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ.

Ravi Basrur: ರವಿ ಬಸ್ರೂರ್​​ಗೆ 35 ಲಕ್ಷದ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ ವಿಶ್ವಕ್ ಸೇನ್

ರವಿ ಬಸ್ರೂರ್​​ಗೆ 35 ಲಕ್ಷದ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ ವಿಶ್ವಕ್ ಸೇನ್

Vishwak Honours Ravi Basrur: ಸಂಗೀತ ನಿರ್ದೇಶಕ ರವಿ ಬಸ್ರೂರು 'ಕೆಜಿಎಫ್' ಯಶಸ್ಸಿನ ನಂತರ ಕನ್ನಡ ಹಾಗೂ ಪರಭಾಷೆಯಲ್ಲಿ ಭಾರಿ ಬೇಡಿಕೆ ಗಳಿಸಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ರವಿ ಟ್ಯೂನ್‌ಗಳಿಗಾಗಿ ಕಾಯುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಮೆಚ್ಚಿ ತೆಲುಗು ನಟ ವಿಶ್ವಕ್ ಸೇನ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ .ಈ ಸಂದರ್ಭದ ಫೋಟೋ ವೈರಲ್ ಆಗಿದೆ. ವಾಚ್ ಅನ್ನು ರವಿ ಅವರು ಎಲ್ಲರ ಎದುರು ತೋರಿಸಿದ್ದಾರೆ.

kavya gowda: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ಕಾವ್ಯ ಗೌಡ; ನಟಿ ಹೇಳಿದ ಸತ್ಯ ಏನು?

ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ

Kavya Gowda : ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ಹಲ್ಲೆ ನಡೆದು ದೂರು ಕೂಡ ದಾಖಲಾಗಿತ್ತು. ಓರಗಿತ್ತಿಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಇದೀಗ ನಟಿ ಕಾವ್ಯಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಮನೆಯ ಕೆಲ ಸಿಸಿಟಿವಿ ದೃಶ್ಯಗಳನ್ನು (CCTV) ಶೇರ್ ಮಾಡಿಕೊಂಡಿದ್ದಾರೆ.ತಮ್ಮ ಮೇಲೆ ಚಪ್ಪಲಿ ಎಸೆಯುತ್ತಿರುವ ವಿಡಿಯೋವನ್ನು ಸಹ ಕಾವ್ಯಾ ರಿವೀಲ್ ಮಾಡಿದ್ದಾರೆ. ನೀವು ಬರೀ ಒನ್‌ ಸೈಡ್‌ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನ ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ನಟಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.

Actor Darshan: ನಿಮ್ಮ ಡಿ ಬಾಸ್‌ ಮಾನಸಿಕವಾಗಿ ಸ್ಟ್ರಾಂಗ್ ಇದ್ದಾರೆ; ದೊಡ್ಡ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮೀ

ದರ್ಶನ್‌ ಮಾನಸಿಕ ಸ್ಥಿತಿ ಬಗ್ಗೆ ವಿಜಯಲಕ್ಷ್ಮೀ ದರ್ಶನ್‌ ಮಾತು!

Dhanveerrah Hayagreeva: ಮಂಡ್ಯದಲ್ಲಿ ನಡೆದ ಧನ್ವೀರ್ ನಟಿಸಿದ 'ಹಯಗ್ರೀವ' ಸಿನಿಮಾ ಇವೆಂಟ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್‌ ಹಾಗೂ ಮಗ ವಿನೀಶ್‌ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನು ಕೇಳಿ ದರ್ಶನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಟ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ವದಂತಿಗಳಿಗೆ (Gossip) ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

Rashmika Vijay Deverakonda : ಉದಯಪುರಕ್ಕೆ ತೆರಳಿದ್ರಾ ರಶ್ಮಿಕಾ-ವಿಜಯ್‌ ಜೋಡಿ?

ಉದಯಪುರಕ್ಕೆ ತೆರಳಿದ್ರಾ ರಶ್ಮಿಕಾ-ವಿಜಯ್‌ ಜೋಡಿ?

Rashmika Vijay: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಇದೆ ಫೆ.26ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯುತ್ತಿದೆ. ಈ ಮದುವೆಯು ತುಂಬ ಖಾಸಗಿಯಾಗಿ ನಡೆಯಲಿದ್ದು, ಯಾವುದೇ ಸೆಲೆಬ್ರಿಟಿಗಳಿಗೆ ಈ ಮದುವೆಯಲ್ಲಿ ಆಹ್ವಾನ ನೀಡಿಲ್ಲ.ಇದೀಗ ಹೈದರಾಬಾದ್ (Hydarabad) ವಿಮಾನ ನಿಲ್ದಾಣದಲ್ಲಿ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಕುತೂಹಲಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Toxic: ʻಟಾಕ್ಸಿಕ್‌ʼನಿಂದ ಹೊರ ಬಿತ್ತು ಮತ್ತೊಂದು ಪೋಸ್ಟರ್‌! ಪಾತ್ರದ ಸುಳಿವು ಬಿಟ್ಟುಕೊಟ್ರಾ ಯಶ್‌?

ʻಟಾಕ್ಸಿಕ್‌ʼನಿಂದ ಹೊರ ಬಿತ್ತು ಮತ್ತೊಂದು ರಗಡ್‌ ಪೋಸ್ಟರ್‌!

Yash: ಯಶ್ಅ ಭಿನಯದ ಟಾಕ್ಸಿಕ್ ಚಿತ್ರದ ನಿರ್ಮಾಪಕರು ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆ ಮಾಡಿದ್ದಾಗಿದೆ. ಸುಮಾರು ಎರಡು ನಿಮಿಷಗಳ ಟೀಸರ್‌ನಲ್ಲಿ, ರಾಯ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರ. ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಚಿತ್ರದ ನಿರ್ಮಾಪಕರು ಮತ್ತೆ ಹೊಸ ಪೋಸ್ಟರ್ (New Poster) ಅನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಯಶ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ, ಅವರ ಕ್ಲೀನ್-ಶೇವ್ ಮಾಡಿದ ಲುಕ್ ಹೊರಬಂದಿದ್ದು, ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

KHxRK reunion: ರಜನಿಕಾಂತ್ - ಕಮಲ್ ಚಿತ್ರದ ಪ್ರೋಮೊ ಔಟ್‌! ಇವರದ್ದೇ ಡೈರೆಕ್ಷನ್‌

ರಜನಿಕಾಂತ್ - ಕಮಲ್ ಚಿತ್ರದ ಪ್ರೋಮೊ ಔಟ್‌! ಇವರದ್ದೇ ಡೈರೆಕ್ಷನ್‌

Rajini: ರಜನಿಕಾಂತ್ ಮತ್ತು ಕಮಲ್ ಹಾಸನ್ ಅಭಿನಯದ ಮುಂಬರುವ ಚಿತ್ರ 'KHxRK' ನ ಬಹು ನಿರೀಕ್ಷಿತ ಪ್ರೋಮೋ ಬಿಡುಗಡೆಯಾಯಿತು. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ದಿಗ್ಗಜ ನಟರಿಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ರೆಡ್‌ ಜೈಂಟ್ ಮೂವೀಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡಲಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಇದೆ. X ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತವಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Amruthadhaare Serial: ಜಯದೇವ್‌ ಕುತಂತ್ರ ಗೌತಮ್‌ಗೆ ಗೊತ್ತಾಗದೇ ಹೋಯ್ತಾ? ಜೆಡಿ ಅನಾಚಾರ ಒಂದೆರಡಲ್ಲ

Amruthadhaare Serial: ಜಯದೇವ್‌ ಕುತಂತ್ರ ಗೌತಮ್‌ಗೆ ಗೊತ್ತಾಗದೇ ಹೋಯ್ತಾ?

Amruthadhaare Kannada Serial: ಅಮೃತಧಾರೆಯಲ್ಲಿ ಸದ್ಯ ಜೈದೇವ್‌ (Jaidev) ಕುತಂತ್ರ ಮಿತಿ ಮೀರುತ್ತಿದೆ. ಒಂದು ಕಡೆ ಗೌತಮ್‌ ದಿವಾನ್‌ ಆಸ್ತಿಯನ್ನು ಕಬಳಸಿದರೂ ಇನ್ನಷ್ಟು ತೊಂದರೆ ಕೊಡಲು ನೋಡುತ್ತಿದ್ದಾನೆ. ಮಲ್ಲಿ ಜೀವನ ಹಾಳಾಗಬೇಕು ಅಂತ ಸುನಿಯನ್ನು ಛೂ ಬಿಟ್ಟರೂ ಇನ್ನೂ ಸುಮ್ಮನಾಗುತ್ತಿಲ್ಲ ಕೆಡಿ ಜೈದೇವ್‌. ಗೌತಮ್‌ ದಿವಾನ್‌ , ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡುತ್ತಿದ್ದನು. ಆಗ ಜಯದೇವ್‌ ಇದನ್ನೆಲ್ಲ ತಡೆದು, ತನ್ನ ತಂದೆಗೆ ಬಾಯಿಗೆ ಬಂದ ಹಾಗೆ ಬೈದು, ಪಿಂಡ ಬಿಡೋದಿಲ್ಲ ಎಂದು ತಕರಾರು ಎತ್ತಿದ್ದಾನೆ.

Toxic teaser: ಕೇವಲ 24 ಗಂಟೆಗಳಲ್ಲಿ ‘ಟಾಕ್ಸಿಕ್’ ಟೀಸರ್ ಯಾವ ಭಾಷೆಯಲ್ಲಿ ಹೆಚ್ಚು ವೀಕ್ಷಣೆ ಗೊತ್ತಾ?

‘ಟಾಕ್ಸಿಕ್’ ಟೀಸರ್ ಯಾವ ಭಾಷೆಯಲ್ಲಿ ಹೆಚ್ಚು ವೀಕ್ಷಣೆ ಗೊತ್ತಾ?

Yash: ಕನ್ನಡದ ಸ್ಟಾರ್ ನಟ ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್ ನಿನ್ನೆ (ಫೆ.20) ಬಿಡುಗಡೆಯಾಗಿದೆ. ಆಕ್ಷನ್, ರಕ್ತಪಾತ ಮತ್ತು ಯಶ್‌ ಅವರ ವಿಭಿನ್ನ ಲುಕ್‌ನಿಂದ ಸಿನಿಪ್ರಿಯರ ಗಮನ ಸೆಳೆದಿದೆ. 'ಟಾಕ್ಸಿಕ್' ಒಂದು ಪ್ಯಾನ್-ಇಂಡಿಯನ್ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪರಿಣಾಮವಾಗಿ, ಇದರ ಟೀಸರ್ ಐದು ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಟೀಸರ್ ಬಗ್ಗೆ ಹಾಡಿ ಹೊಗಳಿ ಫ್ಯಾನ್ಸ್‌ ಕಾಮೆಂಟ್ ಮಾಡಿದ್ದಾರೆ.

Karna Kannada Serial: ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಒಂದಾಯ್ತು ಸ್ತ್ರೀ ಶಕ್ತಿ!

ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಒಂದಾಯ್ತು ಸ್ತ್ರೀ ಶಕ್ತಿ!

Karna Kannada Serial: ಕರ್ಣ ಎಷ್ಟೇ ಹೇಳಿದರೂ ಕೂಡ, ಯಾರೂ ಅವನ ಮಾತು ಕೇಳುತ್ತಿಲ್ಲ. ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ ಎಷ್ಟೇ ಗೋಗರೆದರೂ ಪ್ರಯೋಜನವಾಗುತ್ತಿಲ್ಲ. ಇದೀಗ ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿದೆ. ಈಗ ಹೊಸ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು

ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು

Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26, 2026 ರಂದು ಅದ್ದೂರಿ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ. ಬಹಳ ದಿನಗಳಿಂದ ತಮ್ಮ ವಿವಾಹದ ವಿವರಗಳನ್ನು ಗೌಪ್ಯವಾಗಿಟ್ಟಿದ್ದ ಜೋಡಿ, ದಿನಾಂಕ, ಸಮಯ, ಸ್ಥಳ ಮತ್ತು ಸಂಬಂಧಿತ ಸಂಪರ್ಕ ಸಂಖ್ಯೆಗಳು ಸೇರಿದಂತೆ ಅವರ ವಿವಾಹ ಆಮಂತ್ರಣ ಪತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ.

Toxic Movie Teaser:  `ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

`ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

Rukmini Vasanth: ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್​​ನಲ್ಲಿ ಯಶ್ ಯಂಗ್ ಲುಕ್​​ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ. ನೆಟ್ಟಿಗರು ಹಸಿಬಿಸಿ ದೃಶ್ಯಗಳಲ್ಲಿ ಇರೋ ನಾಯಕಿ ಯಾರು ಅಂತ ಹುಡುಕುವುದಕ್ಕೆ ಮುಂದಾಗಿದ್ದಾರೆ.

Actor Yash: ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್‌ ಸೂಕ್ತ ಆಯ್ಕೆಯಂತೆ!

ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್‌ ಸೂಕ್ತ ಆಯ್ಕೆಯಂತೆ!

Ravana Role Yash: ಈ ವರ್ಷ ಬಿಡುಗಡೆಯಾಗುತ್ತಿರುವ ನಟ ಯಶ್ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು - ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ . ಅಭಿಮಾನಿಗಳು ಯಶ್ ಅವರ ಟಾಕ್ಸಿಕ್ ಚಿತ್ರದ ಟೀಸರ್ ಅನ್ನು ನೋಡಿ ಸಖತ್‌ ಖುಷ್‌ ಆಗಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ವರ್ಷನ್​​ಗಳಲ್ಲಿ ಟೀಸರ್ ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಯಂಗ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಇನ್ನೊಂದು ಶೇಡ್‌ನಲ್ಲಿ ಉಗ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಯಶ್‌.

Cocktail 2: ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ

ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ

Kriti Sanon: 2012ರ ಬಹುನಿರೀಕ್ಷಿತ ಚಿತ್ರ ಕಾಕ್‌ಟೇಲ್‌ನ ಮುಂದುವರಿದ ಭಾಗ ಕಾಕ್ಟೇಲ್ 2 ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ರಶ್ಮಿಕಾ ಮಂದಣ್ಣ , ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರ ಮತ್ತೊಮ್ಮೆ ಸುದ್ದಿಯಾಗಿದೆ. ರಶ್ಮಿಕಾ ಮತ್ತು ಕೃತಿ ಈ ಚಿತ್ರದಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Actor Darshan: ಯಾವ ಶತ್ರುವಿಗೂ ಬೇಡ; ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

Dhanveerah: ದರ್ಶನ್ ಅಭಿಮಾನಿಗಳು ವಿಶೇಷವಾಗಿಯೇ ಜನ್ಮ ದಿನ ಆಚರಣೆ ಮಾಡಿದ್ದರು. ತಮ್ಮ ಏರಿಯಾಗಳಲ್ಲಿ ಅನ್ನ ಸಂತರ್ಪಣೆ ಮಾಡಿದ್ದರು. ಆಶ್ರಮಗಳಿಗೆ ಹೋಗಿ ಹಣ್ಣುಹಂಪಲು ವಿತರಣೆ ಮಾಡಿದ್ದರು. ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಮೋಷನ್‌ ಕೂಡ ಭರದಿಂದ ಸಾಗುತ್ತಿದೆ. ಸಂದರ್ಶನವೊಂದರಲ್ಲಿ ಬರ್ತ್‌ಡೇ ದಿನ ತಂದೆಯನ್ನು ಭೇಟಿ ಮಾಡಿದ ವಿನೀಶ್ ಬಗ್ಗೆ ಧನ್ವೀರ್‌ ಮಾತನಾಡಿ ಬೇಸರ ಹೊರ ಹಾಕಿದ್ದಾರೆ.

Loading...