ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಶಿವಣ್ಣ-ಅಪ್ಪು ಬೆಳೆದಿದ್ದು ಕಲೆಯಿಂದಲೇ ಹೊರತು ನೆಪೋಟಿಸಮ್‌ನಿಂದಲ್ಲʼ; ‌ತಮ್ಮ ಹೇಳಿಕೆ ಬಗ್ಗೆ ಕ್ಲಾರಿಟಿ ಕೊಟ್ಟ ‌ʻಕಿಚ್ಚʼ ಸುದೀಪ್

ನೆಪೋಟಿಸಮ್‌ ಕುರಿತ ಹೇಳಿಕೆಗೆ ಕ್ಲಾರಿಟಿ ಕೊಟ್ಟ ‌ʻಕಿಚ್ಚʼ ಸುದೀಪ್!

ಕಿಚ್ಚ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ಎದುರಾಗಿದ್ದ 'ನೆಪೋಟಿಸಂ' ವಿವಾದಕ್ಕೆ ಮತ್ತೊಂದು ಸಂದರ್ಶನದ ಮೂಲಕ ಸಂಪೂರ್ಣ ಪೂರ್ಣವಿರಾಮ ಇಟ್ಟಿದ್ದಾರೆ. "ವರನಟ ಡಾ.ರಾಜ್‌ಕುಮಾರ್ ಕಾಲದಿಂದಲೂ ಕನ್ನಡಿಗರು ಕಲೆಯನ್ನು ಮಾತ್ರ ನೋಡಿ ಬೆಳೆಸಿದ್ದಾರೆ" ಎಂದು ಹೇಳಿದ್ದಾರೆ.

Rashmika Mandanna: ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

Rashmika Mandanna: ಭಾರತೀಯ ಸಂಗೀತ ಲೋಕದಲ್ಲಿ ಪ್ರಸಿದ್ಧ ಗಾಯಕಿ (ಕರ್ನಾಟಕ ಗಾಯಕಿ) ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನದ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

Ram Charan: ಮೂರೇ ದಿನಕ್ಕೆ ದಾಖಲೆಯ ಕಲೆಕ್ಷನ್‌ ಮಾಡಿದ ʻಪೆದ್ದಿʼ; ವಿಶ್ವಾದ್ಯಂತ ಈವರೆಗೂ ಆಗಿರುವ ಗಳಿಕೆ ಎಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಪ್ರಮಾಣ ಹಣ ಬಾಚಿಕೊಂಡ ʻಪೆದ್ದಿʼ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ವಿಶ್ವಾದ್ಯಂತ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 236.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Drishyam 3: ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

Drishyam 3: ಮೋಹನ್ ಲಾಲ್ ನಟಿಸಿದ 2013 ರ ಮಲಯಾಳಂ ದೃಶ್ಯಂ ಮತ್ತು 2022 ರಲ್ಲಿ ಬಿಡುಗಡೆಯಾದ ದೃಶ್ಯಂ 2ನ ಮುಂದುವರಿದ ಭಾಗ ಇದಾಗಿದೆ. ದೃಶ್ಯಂ ಚಿತ್ರವು ಭಾರತೀಯ ಚಲನಚಿತ್ರ ಪ್ರೇಕ್ಷಕರು ವಿವಿಧ ಭಾಷೆಗಳಲ್ಲಿ ಸ್ವೀಕರಿಸಿದ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಬೇರೆ ಯಾವುದೇ ಮಲಯಾಳಂ ಚಿತ್ರವು ಇಷ್ಟೊಂದು ಭಾಷೆಗಳಲ್ಲಿ ರೀಮೇಕ್ ಆಗಿಲ್ಲ. 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ಯಾಕೆ ರಿಮೇಕ್ ಆಗುತ್ತಿಲ್ಲ? ಈ ಪ್ರಶ್ನೆಗೆ ನಿರ್ದೇಶಕ ಜೀತು ಜೋಸೆಫ್ ಅವರೇ ಉತ್ತರ ನೀಡಿದ್ದಾರೆ.

Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ?

Kannada Serial: ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ. ಬಿಗ್‌ ಬಾಸ್‌ ಶೋ (Bigg Boss Show) ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುವುದು.ಹಾಗಾಗಿ ಯಾವ ಸೀರಿಯಲ್‌ ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ.

106ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಓಂ ಸಾಯಿಪ್ರಕಾಶ್;‌ ʻಕಾಮನ್‌ ಮ್ಯಾನ್‌ʼ ಚಿತ್ರದಲ್ಲಿದೆ ಲಾಯರ್ ಸಿಎಂ ಆಗುವ ಕಥೆ!

‌ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್

ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ ‘ಕಾಮನ್ ಮ್ಯಾನ್’ ಮೋಷನ್ ಪೋಸ್ಟರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸುರಭಿ ಫಿಲಂಸ್ ಅಡಿಯಲ್ಲಿ ಎನ್. ನರಸಿಂಹಮೂರ್ತಿ ನಿರ್ಮಿಸಿರುವ ಈ ಚಿತ್ರದಲ್ಲಿ, ಒಬ್ಬ ಸಾಮಾನ್ಯ ವಕೀಲ ಯಾವುದೇ ಚುನಾವಣೆ ಎದುರಿಸದೇ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾದರೆ ಏನೆಲ್ಲಾ ಸುಧಾರಣೆ ತರಬಹುದು ಎಂಬ ಕುತೂಹಲಕಾರಿ ರಾಜಕೀಯ ಕಥಾಹಂದರವಿದೆ.

ಕರಾವಳಿ ಸೊಗಡಿನ ‘ಕ್ಷೇತ್ರಪಾಲ’ನಾಗಿ ಬರ್ತಿದ್ದಾರೆ ರಾಘವ ಪೂಜಾರಿ; ಇದು ಊರನ್ನು ಕಾಯುವ ನಾಯಕನ ಕಥೆ

ಕರಾವಳಿ ಸೊಗಡಿನ ‘ಕ್ಷೇತ್ರಪಾಲ’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್‌

ಹಿರಿಯ ಪತ್ರಕರ್ತ ಜಗದೀಶ್ ಮಂಜಣ್ಣ ನಿರ್ದೇಶನದಲ್ಲಿ ಕರಾವಳಿಯ ವಿಶಿಷ್ಟ ಸಂಸ್ಕೃತಿ ಮತ್ತು ದೈವಿಕ ನಂಬಿಕೆಯ ಹಿನ್ನೆಲೆಯುಳ್ಳ ‘ಕ್ಷೇತ್ರಪಾಲ’ ಸಿನಿಮಾದ ಶೀರ್ಷಿಕೆ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ರಾಘವ ಪೂಜಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವು ಕೇವಲ ದೈವದ ಕಥೆಯಲ್ಲದೆ, ಇಡೀ ಊರನ್ನು ರಕ್ಷಿಸುವ ವ್ಯಕ್ತಿಯೊಬ್ಬನ ಹೋರಾಟವಾಗಿದೆಯಂತೆ.

ಕಾನೂನು ಹೋರಾಟದಲ್ಲಿ ಗೆದ್ದ ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ; ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು

‘ಬಾಸ್’ ಸಿನಿಮಾದ ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು! ರಿಲೀಸ್ ಯಾವಾಗ?

ನಟ ತನುಷ್ ಶಿವಣ್ಣ ಅಭಿನಯದ 'ಬಾಸ್' ಸಿನಿಮಾದ ಬಿಡುಗಡೆಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ತಂದಿದ್ದ ಕಾನೂನು ಅಡೆತಡೆಗಳು ಕೊನೆಗೂ ನಿವಾರಣೆಯಾಗಿವೆ. ಈ ಚಿತ್ರಕ್ಕೆ ಸಿವಿಲ್ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

Ashika Ranganath: ನಾಯಕಿ ಪಾತ್ರಕ್ಕೆ ಟೀಕೆ;  ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

Ashika Ranganath: ಜಾನ್ಹವಿ ಕಪೂರ್ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಆ ‘ಪೆದ್ದಿ’ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಕತೆಗೆ ಯಾವ ರೀತಿಯಲ್ಲೂ ಅವಶ್ಯಕ ಇಲ್ಲದೇ ಹೋದರೂ ಸಹ ನಟಿಯ ಅಂಗಾಂಗಗಳ ಮೇಲೆ ಫೋಕಸ್ ಮಾಡಿ ಗ್ಲಾಮರಸ್ ಆಗಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಟೀಕೆಗಳನ್ನು ನಟಿ ಆಶಿಕಾ ರಂಗನಾಥ್‌ ವಿರೋಧಿಸಿದ್ದಾರೆ.

Kalki 2: ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌;  ‘ಕಲ್ಕಿ 2’ ನಿರ್ದೇಶಕರು ಹೇಳಿದ್ದೇನು?

ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಕಲ್ಕಿ 2 ನಿರ್ದೇಶಕರು ಹೇಳಿದ್ದೇನು?

Kalki 2: ಕಲ್ಕಿ 2898 AD, 2024 ರ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿ ಹೊರಹೊಮ್ಮಿತು. ಚಿತ್ರದ ಸೀಕ್ವೆಲ್‌ ಈಗಾಗಲೇ ಕೆಲಸದಲ್ಲಿರುವಾಗ, ನಿರ್ದೇಶಕ ನಾಗ್ ಅಶ್ವಿನ್ ಈಗ ಅದರ ಚಿತ್ರೀಕರಣದ ಕುರಿತು ನವೀಕರಣವನ್ನು ಹಂಚಿಕೊಂಡಿದ್ದಾರೆ. ಚಿತ್ರವು ಡಿಸೆಂಬರ್ 2027 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿದೆ, ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Salim Kumar: ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ನಟ ಸಲೀಂ ಕುಮಾರ್ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ನಟ ಸಲೀಂ ಕುಮಾರ್ ಇನ್ನಿಲ್ಲ

Salim Kumar: ನಟ ಮತ್ತು ನಿರ್ದೇಶಕ ಸಲೀಂ ಕುಮಾರ್ (Salim Kumar) ಜೂನ್ 6 ರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸಲೀಂ ಕುಮಾರ್ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಅವರು ಸಾಯುವ ಮೊದಲು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

Bigg Boss Kannada: ಬಿಗ್‌ಬಾಸ್ ಸೀಸನ್‌ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌ ಪ್ರಕ್ರಿಯೆ ಹೇಗೆ?

ಬಿಗ್‌ ಬಾಸ್ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌ ಹೇಗೆ?

Bigg Boss Kannada: ಇದೀಗ ಹೊಸ ಸೀಸನ್ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್‌ ಹೊರಬಿದ್ದಿದೆ.'ಕಲರ್ಸ್ ಕನ್ನಡ'ದ 'ಕ್ವಾಟ್ಲಿ ಕಿಚನ್ ಸೀಸನ್ -2' ಗ್ಯಾಂಡ್ ಲಾಂಚ್ ವೇಳೆ 'ಬಿಗ್ ಬಾಸ್ -13' ಕುರಿತು ಬಿಗ್ ಅಪ್ಲೇಟ್ ನೀಡಲಾಗಿದೆ. ಈ ಸಲ 'ಬಿಗ್ ಬಾಸ್' ಮನೆಗೆ ಕಾಮನ್ ಮ್ಯಾನ್‌ಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್ -5'ನಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು.

Rachita Ram: ಟಾಲಿವುಡ್‌ಗೆ ರಚಿತಾರಾಮ್  ರೀ ಎಂಟ್ರಿ? ಏನಿದು ಅಪ್‌ಡೇಟ್‌?

ಟಾಲಿವುಡ್‌ಗೆ ರಚಿತಾರಾಮ್ ರೀ ಎಂಟ್ರಿ? ಏನಿದು ಅಪ್‌ಡೇಟ್‌?

Rachita Ram: ಚಿರಂಜೀವಿ ಅವರ ಮಹತ್ವಾಕಾಂಕ್ಷೆಯ 158 ನೇ ಚಿತ್ರ ಪ್ರಸ್ತುತ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. 'ವಾಲ್ತೇರು ವೀರಯ್ಯ' ನಂತಹ ಬ್ಲಾಕ್‌ಬಸ್ಟರ್‌ಗಳ ನಂತರ, ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕೊಲ್ಲಿ ಅವರ ಸಂಯೋಜನೆಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರೀಕ್ಷೆಗಳು ಗಗನಕ್ಕೇರಿವೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ರಚ್ಚು ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಇದೀಗ ಮೆಗಾಸ್ಟಾರ್ ಮುಂದಿನ ಚಿತ್ರದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದೆ ಎಂದು ಚರ್ಚೆ ನಡೀತಿದೆ.

Duniya Vijay:  ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

Duniya Vijay: ಬಹುನಿರೀಕ್ಷಿತ ಚಿತ್ರ 'ಸ್ಲಮ್‌ಡಾಗ್ 33 ಟೆಂಪಲ್ ರೋಡ್' ನ ಟೀಸರ್‌ಗೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಶನಿವಾರ ಬಹಿರಂಗಪಡಿಸಿದ್ದಾರೆ. ಇದೀಗ ಈ ಸಿನಿಮಾದ ಅಪ್​​ಡೇಟ್ ಹೊರಬಿದ್ದಿದ್ದು, ಸಿನಿಮಾದ ಮೊದಲ ಟೀಸರ್ ಜೂನ್ 8 ರಂದು ಬಿಡುಗಡೆ ಆಗಲಿದೆ. ಖ್ಯಾತ ನಟ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸ್ಲಂ ಡಾಗ್’ ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ.

Rakshith Shetty Birthday: ರಕ್ಷಿತ್‌ ಕಡೆಯಿಂದ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌! ಪೋಸ್ಟ್‌ನಲ್ಲಿ ಏನಿದೆ?

ರಕ್ಷಿತ್‌ ಕಡೆಯಿಂದ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌!

Rakshith Shetty Birthday: ರಕ್ಷಿತ್ ಶೆಟ್ಟಿ ಇಂದು (ಜೂನ್.6) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಹಾಗೂ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮಾಡಿರುವ ವಿಶಿಷ್ಟ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ನೇಹಿತ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.

Varanasi: ‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ ಯುದ್ಧ ಹೇಗಿರಲಿದೆ?

‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ ಯುದ್ಧ ಹೇಗಿರಲಿದೆ?

Varanasi: ಈ ಚಿತ್ರದಲ್ಲಿ ಮಹೇಶ್ ಬಾಬು , ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಮೊದಲ ನೋಟ ಬಿಡುಗಡೆಯಾದಾಗಿನಿಂದ, ಪ್ರೇಕ್ಷಕರು ಈಗಾಗಲೇ ಕಥಾವಸ್ತು ಮತ್ತು ಅದರ ಪೌರಾಣಿಕ ಲಿಂಕ್‌ಗಳ ಬಗ್ಗೆ ಸಕ್ರಿಯವಾಗಿ ಚರ್ಚಿಸುತ್ತಿದ್ದರು. ಬರಹಗಾರ ವಿಜಯೇಂದ್ರ ಪ್ರಸಾದ್ ಈಗ ಸಂವಾದದ ಸಂದರ್ಭದಲ್ಲಿ ಹೊಸ ವಿವರಗಳನ್ನು ಹಂಚಿಕೊಂಡಿದ್ದಾರೆ.

Athiradi OTT Release: ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮಲಯಾಳಂ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Athiradi OTT Release: 'ಮಿನ್ನಲ್ ಮುರಳಿ' ಚಿತ್ರಕಥೆಗೆ ಹೆಸರುವಾಸಿಯಾದ ಅರುಣ್ ಅನಿರುದ್ಧನ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು. ದರ್ಶನ್ ರಾಜೇಂದ್ರನ್, ರಿಯಾ ಶಿಬು, ಸರಿನ್ ಶಿಹಾಬ್, ಜಿಯೋ ಬೇಬಿ, ವಿಷ್ಣು ಮತ್ತು ಶೆಲ್ವಿನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನೀತ್ ಶ್ರೀನಿವಾಸನ್ ಮತ್ತು ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Amruthadhare Serial: ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ! ಅನಿರೀಕ್ಷಿತ ತಿರುವಿನಲ್ಲಿ ಅಮೃತಧಾರೆ

ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ!

Amruthadhare Serial: ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಅವಳನ್ನು ಕಿಡ್ನಾಪ್‌ ಮಾಡಿರೋದು ಭೂಮಿಕಾ ಗೊತ್ತಾಗಿದೆ. ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ ಸಹಾಯದೊಂದಿಗೆ ಸಹಾಯ ಪಡೆಯುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್‌ಗಳು ಮಿಂಚನ್ನು ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.

Peddi Movie:  ಎರಡನೇ ದಿನ ರಾಮ್‌ಚರಣ್‌ ʻಪೆದ್ದಿʼ ಮೂವಿ ಗಳಿಸಿದ್ದೆಷ್ಟು?

ಎರಡನೇ ದಿನ ರಾಮ್‌ಚರಣ್‌ ʻಪೆದ್ದಿʼ ಮೂವಿ ಗಳಿಸಿದ್ದೆಷ್ಟು?

Peddi Movie: ಮೊದಲ ದಿನದಂದು ಉತ್ತಮ ಸಂಖ್ಯೆಗಳೊಂದಿಗೆ ಬಿಡುಗಡೆಯಾದ ನಂತರ, ಶುಕ್ರವಾರ ಚಿತ್ರದ ಸಂಗ್ರಹ ನಿಧಾನವಾಯಿತು. ಸ್ಯಾಕ್ನಿಲ್ಕ್ ಅಂದಾಜಿನ ಪ್ರಕಾರ, 'ಪೆದ್ದಿ' ಎರಡನೇ ದಿನದಂದು 26.90 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ. ಈ ಅಂಕಿ ಅಂಶವು ಅದರ ಮೊದಲ ದಿನದ 51.00 ಕೋಟಿ ನಿವ್ವಳ ಸಂಗ್ರಹಕ್ಕೆ ಹೋಲಿಸಿದರೆ 47.3 ಪ್ರತಿಶತ ಕುಸಿತವನ್ನು ಸೂಚಿಸಿದೆ. ಮೊದಲ ಶುಕ್ರವಾರದಂದು ದೇಶಾದ್ಯಂತ 10,113 ಶೋಗಳನ್ನು ಪ್ರದರ್ಶನ ಕಂಡಿರುವ ಈ ಸಿನಿಮಾ, ಶೇಕಡಾ 32.8 ರಷ್ಟು ಆಕ್ಯುಪೆನ್ಸಿಯೊಂದಿಗೆ 26.90 ಕೋಟಿ ರೂಪಾಯಿನೆಟ್ ಕಲೆಕ್ಷನ್ ಮಾಡಿದೆ.

Naga Chaitanya: ಧೂತ ಸೀಸನ್ 2 ರ ಮೂಹೂರ್ತ  ಸಮಾರಂಭದ ಫೋಟೋ ಹಂಚಿಕೊಂಡ ಪಾರ್ವತಿ ತಿರುವೋತ್ತು!

ಧೂತ ಸೀಸನ್ 2ರ ಮೂಹೂರ್ತ ಫೋಟೋ ಹಂಚಿಕೊಂಡ ಪಾರ್ವತಿ ತಿರುವೋತ್ತು!

Naga Chaitanya:ಧೂತ' ೨೦೨೩ ರಲ್ಲಿ ವಿಕ್ರಮ್ ಕೆ ಕುಮಾರ್ ನಿರ್ದೇಶಿಸಿದ ಅಲೌಕಿಕ-ಹಾರರ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಇದರಲ್ಲಿ ನಾಗ ಚೈತನ್ಯ, ಪ್ರಿಯಾ ಭವಾನಿ ಶಂಕರ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾರ್ತ್ ಸ್ಟಾರ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರತ್ ಮಾರಾರ್ ನಿರ್ಮಿಸಿರುವ ಈ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Ugly Story OTT : ತೆರೆ ಕಂಡ 14 ದಿನದಲ್ಲೇ ಒಟಿಟಿಗೆ ಎಂಟ್ರಿ ಕೊಡ್ತು ಈ ಮೂವಿ!

ತೆರೆ ಕಂಡ 14 ದಿನದಲ್ಲೇ ಒಟಿಟಿಗೆ ಎಂಟ್ರಿ ಕೊಡ್ತು ಈ ಮೂವಿ!

Ugly Story OTT : ಮೇ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ಕೇವಲ ಎರಡು ವಾರಗಳ ನಂತರ OTT ನಲ್ಲಿ (OTT) ಬಿಡುಗಡೆಯಾಯಿತು. ಜೂನ್ 5 ರಿಂದ ಚಿತ್ರ ಸ್ಟ್ರೀಮಿಂಗ್ ಪ್ರಾರಂಭಿಸುವುದಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಹಾ ಅಧಿಕೃತವಾಗಿ ಘೋಷಿಸಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ವೀಕ್ಷಕರಿಗೆ ಈ ಘೋಷಣೆ ಒಳ್ಳೆಯ ಸುದ್ದಿಯಾಗಿದೆ.

Thalapathy Vijay: ವಿತರಕರಿಗೆ ದುಡ್ಡು ವಾಪಸ್‌ ಕೊಟ್ಟು ಡೀಲ್‌ ಕ್ಯಾನ್ಸಲ್‌ ಮಾಡಿದ್ರಾ ʻಜನ ನಾಯಗನ್‌ʼ ನಿರ್ಮಾಪಕರು? ಇದರ ಹಿಂದಿದೆ ಒಳ್ಳೆಯ ಉದ್ದೇಶ!

ʻಜನ ನಾಯಗನ್ʼ ಚಿತ್ರ ಎಲ್ಲಾ ವಿತರಣಾ ಹಕ್ಕುಗಳ ಡೀಲ್‌ ಕ್ಯಾನ್ಸಲ್! ಕಾರಣವೇನು?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಸಮಸ್ಯೆಯಿಂದಾಗಿ 6 ತಿಂಗಳು ವಿಳಂಬವಾಗುತ್ತಿರುವುದರಿಂದ, ವಿತರಕರ ನಷ್ಟ ತಪ್ಪಿಸಲು ವಿಜಯ್ ಒಂದು ನಿರ್ಧಾರ ಕೈಗೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರದ ಎಲ್ಲಾ ಥಿಯೇಟ್ರಿಕಲ್ ಒಪ್ಪಂದಗಳನ್ನು ರದ್ದುಗೊಳಿಸಲು ಸೂಚಿಸಿದ್ದಾರೆ.

ರಾಮ್ ಚರಣ್ ಆಯ್ತು, ʻಕಿಚ್ಚʼ ಸುದೀಪ್‌ಗೂ ವಿದೇಶಿ ಬಾಡಿಗಾರ್ಡ್; ʻಮ್ಯಾಂಗೋ ಪಚ್ಚʼ ಶೋನಲ್ಲಿ ಹೈಲೈಟ್‌ ಆದ ಈ ವ್ಯಕ್ತಿ ಯಾರು?

ʻಕಿಚ್ಚʼ ಸುದೀಪ್‌ಗೆ ಭದ್ರತೆ ನೀಡಲು ಬಂದ್ರಾ ವಿದೇಶಿ ಬಾಡಿಗಾರ್ಡ್?

ʻಕಿಚ್ಚʼ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬೆಂಗಳೂರಿನ ಸಂತೋಷ್ ಥಿಯೇಟರ್‌ಗೆ ಕಿಚ್ಚ ಸುದೀಪ್ ಕುಟುಂಬ ಸಮೇತ ಆಗಮಿಸಿದ್ದರು. ಈ ವೇಳೆ ವಿದೇಶಿ ಬಾಡಿಗಾರ್ಡ್ ಒಬ್ಬರು ಸುದೀಪ್ ಭದ್ರತೆಗೆ ನಿಂತಿದ್ದು ಭಾರಿ ಕುತೂಹಲ ಮೂಡಿಸಿದೆ.

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರಕ್ಕೆ ತಿಂಗಳಿಗೂ ಮೊದಲೇ ಅಡ್ವಾನ್ಸ್‌ ಬುಕ್ಕಿಂಗ್; ಇದು ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ!

ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ 'ದಿ ಒಡಿಸ್ಸಿ' ರಿಲೀಸ್‌ ಯಾವಾಗ?

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ಜೂನ್ 8 ರಿಂದ ಭಾರತದಲ್ಲಿ ಆರಂಭವಾಗಲಿದೆ ಎಂದು ವಾರ್ನರ್ ಬ್ರದರ್ಸ್ ಘೋಷಿಸಿದೆ. ಹೋಮರ್ ಮಹಾಕಾವ್ಯದ ಆಧರಿತ, ಸಂಪೂರ್ಣ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ಜಗತ್ತಿನ ಮೊದಲ ಚಿತ್ರ ಇದಾಗಿದೆ.

Loading...