ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Antara Banerjee: ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌: ಬಾಂದ್ರಾ-ಗಂಗಾನಗರ್‌ ಅರಾವಳಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಿದ್ದೇನು?

ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌!

Antara Banerjee: ಹಿಂದಿ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾದ ರೂಪದರ್ಶಿ ಮತ್ತು ನಟಿ ಅಂತರಾ ಬ್ಯಾನರ್ಜಿ (Antara Banerjee) ಈಗ ಸುದ್ದಿಗಳಲ್ಲಿದ್ದಾರೆ. ಸ್ಲೀಪರ್ ಟಿಕೆಟ್ ಬುಕ್ ಮಾಡಿದ ನಟಿ ಕಮ್ ಮಾಡೆಲ್ ಅಂತರಾ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ನಟಿ ಅರೆಸ್ಟ್ಆ ಗುತ್ತಿರಲಿಲ್ಲ. ನಕಲಿ ನಾಟಕ ಮಾಡಿ ಕೋಲಾಹಲ ಎಬ್ಬಿಸಲು ಯತ್ನಿಸಿದ ನಟಿಯನ್ನು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬ್ಲಾಕ್‌ ಬಸ್ಟರ್‌ ʻಧುರಂಧರ್‌ʼ ಬಳಿಕ ಹೊಸ ಸಿನಿಮಾ ಆರಂಭಿಸಿದ ರಣವೀರ್‌ ಸಿಂಗ್;‌ ಈ ಚಿತ್ರಕ್ಕೆ ಮಲಯಾಳಂನ ಸ್ಟಾರ್‌ ಡೈರೆಕ್ಟರ್‌ ಪುತ್ರಿ ನಾಯಕಿ!

'ಧುರಂಧರ್' ಹಿಟ್‌ ಆದ ಬಳಿಕ ಹೊಸ ಸಿನಿಮಾ ಶುರುಮಾಡಿದ ರಣವೀರ್‌ ಸಿಂಗ್

ಬ್ಲಾಕ್‌ಬಸ್ಟರ್ 'ಧುರಂಧರ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ನಟ ರಣ್‌ವೀರ್ ಸಿಂಗ್ ಅಭಿನಯದ 'ಪ್ರಳಯ್' ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಚಿತ್ರೀಕರಣ ಮುಂಬೈನಲ್ಲಿ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Ramayana trailer: ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್;  ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್; ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

Ramayana trailer : ‘ಕಳೆದ ಎರಡು ವರ್ಷಗಳಲ್ಲಿ ಬಂದ ನಮ್ಮ ದೇಶದ ಸಿನಿಮಾಗಳಿಗಿಂತ ಇದು ಹೇಗೆ ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ’ ಎಂದು ಪ್ರಶ್ನಿಸಿದ್ದಾರೆ. ‘ನಮ್ಮ ನಿರ್ದೇಶಕರಿಗೆ ಸ್ವದೇಶಿ ಪುರಾಣಗಳ ಮೇಲೆ ಗೌರವವಿಲ್ಲ, ಆದ್ದರಿಂದಲೇ ನಮಗೆ ಇಂತಹ ದೃಶ್ಯ ವೈಭವದ ಕಾವ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ (Cheena) ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಶಶಿಕುಮಾರ್‌ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಚಿತ್ರದ ಹಾಡಿಗೆ ಬಾಲಿವುಡ್‌ ಗಾಯಕ ಅರ್ಮಾನ್‌ ಮಲಿಕ್‌ ಧ್ವನಿ; ‘ಮೊದಲ ಪ್ರೀತಿ’ ಸಾಂಗ್‌ಗೆ ಉತ್ತಮ ರೆಸ್ಪಾನ್ಸ್‌

ಶಶಿಕುಮಾರ್ ಪುತ್ರನ 'ರಾಶಿ' ಚಿತ್ರದ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಟನೆಯ 'ರಾಶಿ' ಚಿತ್ರದ 'ಮೊದಲ ಪ್ರೀತಿ' ಮೆಲೋಡಿ ಹಾಡು ಬಿಡುಗಡೆಯಾಗಿದೆ. ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿ ನೀಡಿರುವ ಈ ಹಾಡಿಗೆ ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.

Yash:'ಕೆಜಿಎಫ್‌ಗೂ ಮುಂಚೆ ಯಶ್ ಯಾರು?ʼ; ವಿವಾದ ಸೃಷ್ಟಿಸಿದ್ದ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಹೇಳಿಕೆಗೆ ʻರಾಕಿಂಗ್‌ ಸ್ಟಾರ್‌ʼ ಖಡಕ್‌ ರಿಪ್ಲೈ!

ವಿವಾದ ಸೃಷ್ಟಿಸಿದ್ದ ಅಲ್ಲು ಅರವಿಂದ್ ಹೇಳಿಕೆಗೆ ಯಶ್‌ ಖಡಕ್‌ ರಿಪ್ಲೈ!

Yash:ಯಶ್ ಅವರ ಕುರಿತು ತೆಲುಗು ಚಿತ್ರರಂಗದ 'ಸ್ಟಾರ್' ನಿರ್ಮಾಪಕ ಅಲ್ಲು ಅರವಿಂದ್ (Allu arvanid) ಅವರು ಹೇಳಿದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಜಿಎಫ್ ಬರುವ ಮೊದಲು ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ? ಕಂಟೆಂಟ್‌ ಮತ್ತು ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಅದು ಹಿಟ್ ಆಯಿತು. ಇದೊಂದು ಉದಾಹರಣೆ ಅಷ್ಟೇ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಈ ಹಳೆಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ ಯಶ್‌.

Toxic intimate scenes: 'ಟಾಕ್ಸಿಕ್‌' ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಪತ್ನಿ ಬಗ್ಗೆ ಯಶ್‌ ಮುಕ್ತ ಮಾತು

ಟಾಕ್ಸಿಕ್‌ ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಯಶ್‌

Toxic intimate scenes: ಟಾಕ್ಸಿಕ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಫ್ಯಾನ್ಸ್‌ . ಆದಾಗ್ಯೂ, ಚಿತ್ರದ ಟ್ರೇಲರ್ ವಿವಾದಕ್ಕೆ ಕಾರಣವಾಯಿತು, ಹಲವಾರು ವೀಕ್ಷಕರು ಯಶ್ ಮತ್ತು ಇತರ ನಟರನ್ನು ಒಳಗೊಂಡ ಕಾಮಪ್ರಚೋದಕ ದೃಶ್ಯಗಳನ್ನು ಟೀಕಿಸಿದರು. ಇತ್ತೀಚಿನ ಸಂವಾದವೊಂದರಲ್ಲಿ, ಯಶ್ ತಮ್ಮ ಪತ್ನಿ ಮತ್ತು ಮಾಜಿ ನಟಿ ರಾಧಿಕಾ ಪಂಡಿತ್ ಈ ಇಂಟಿಮೇಟ್‌ ದೃಶ್ಯಗಳ ಬಗ್ಗೆ ಅವರ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದರು. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಜೊತೆ ಮಾತನಾಡಿದ ಯಶ್, ಇತರ ಯಾವುದೇ ಸಂಗಾತಿಯಂತೆ ತನ್ನ ಪತ್ನಿಯೂ ಸಹ ಅನ್‌ಕಫರ್ಟ್‌ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ಎಷ್ಟೇ ದುಡ್ಡು ಕೊಟ್ಟರೂ ಪಾನ್‌ ಮಸಾಲ ಜಾಹೀರಾತುಗಳನ್ನು ನಟ ಸನ್ನಿ ಡಿಯೋಲ್‌ ಒಪ್ಪಿಕೊಳ್ಳೋದಿಲ್ಲ! ಇದರ ಹಿಂದಿದೆ ಬಲವಾದ ಕಾರಣ

ನಟ ಸನ್ನಿ ಡಿಯೋಲ್‌ ಪಾನ್‌ ಮಸಾಲ ಜಾಹೀರಾತುಗಳನ್ನು ಒಪ್ಪದಿರಲು ಕಾರಣವೇನು?

ಬಾಲಿವುಡ್ ನಟ ಸನ್ನಿ ಡಿಯೋಲ್‌ ಅವರು ತಂಬಾಕು ಮತ್ತು ಪಾನ್ ಮಸಾಲ ಉತ್ಪನ್ನಗಳ ಜಾಹೀರಾತುಗಳಲ್ಲಿ ಎಂದಿಗೂ ನಟಿಸುವುದಿಲ್ಲವೆಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದ್ದಾರೆ. ಸಮಾಜಕ್ಕೆ ಮಾರಕವಾದ ವಸ್ತುಗಳ ಪ್ರಚಾರಕ್ಕೆ ತಮ್ಮ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದು ಹಲವು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ.

ʻಕರುಪ್ಪುʼ ಬೆನ್ನಲ್ಲೇ ನಟ ಸೂರ್ಯಗೆ ಮತ್ತೊಂದು ಜಾಕ್‌ಪಾಟ್;‌ ಬಾಕ್ಸ್‌ ಆಫೀಸ್‌ನಲ್ಲಿ ಶುರುವಾಯ್ತು ʻವಿಶ್ವನಾಥ್‌ & ಸನ್ಸ್‌ʼ ಜಾದೂ

Vishwanath & Sons: ʻಕರುಪ್ಪುʼ ನಂತರ ಸೂರ್ಯಗೆ ಮತ್ತೊಂದು ಗೆಲುವು ಫಿಕ್ಸ್

ನಟ ಸೂರ್ಯ ಹಾಗೂ ಮಮಿತಾ ಬೈಜು ಅಭಿನಯದ, ವೆಂಕಿ ಅಟ್ಲೂರಿ ನಿರ್ದೇಶನದ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಜಾಗತಿಕವಾಗಿ 75 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಾಣುತ್ತಾ ದಾಪುಗಾಲಿಟ್ಟಿದೆ.

ʻರಾಮಾಯಣʼ ಚಿತ್ರದ ಬಜೆಟ್‌ 4 ಸಾವಿರ ಕೋಟಿನಾ? ಕೊನೆಗೂ ʻರಾವಣʼ ಯಶ್‌ ಕಡೆಯಿಂದಲೇ ಸಿಕ್ತು ಫುಲ್‌ ಕ್ಲಾರಿಟಿ!

ʻರಾಮಾಯಣʼ ಬಜೆಟ್ 4 ಸಾವಿರ ಕೋಟಿನಾ?; ʻರಾವಣʼ ಯಶ್ ಕೊಟ್ರು ಖಡಕ್ ಕ್ಲಾರಿಟಿ!

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ನಟ ಯಶ್, 'ರಾಮಾಯಣ' ಚಿತ್ರದ 4,000 ಕೋಟಿ ರೂಪಾಯಿ ಮೊತ್ತವು ಕೇವಲ ನಿರ್ಮಾಣ ವೆಚ್ಚವಲ್ಲ, ಅದರಲ್ಲಿ ಹಾಲಿವುಡ್ ಮಟ್ಟದ ಜಾಗತಿಕ ಪ್ರಚಾರ ವೆಚ್ಚವೂ ಸೇರಿದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ನೀಡಿದ್ದ 'ಶೋ-ಆಫ್' ಕಾಮೆಂಟ್‌ಗೆ ಪ್ರಬುದ್ಧವಾಗಿ ಉತ್ತರಿಸಿದ ʻರಾಕಿ ಭಾಯ್‌ʼ ಯಶ್; ಆದ್ರೆ ಟಾಂಗ್‌ ಕೊಟ್ಟಿದ್ದು ಯಾರಿಗೆ?

ಅಂದು ರಶ್ಮಿಕಾ ನೀಡಿದ 'ಶೋ-ಆಫ್' ಹೇಳಿಕೆಗೆ ನಟ ಯಶ್ ಕೊಟ್ಟ ಉತ್ತರವೇನು?

ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ‘ಆಪ್ ಕೀ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ರಾಕಿಂಗ್ ಸ್ಟಾರ್ ಯಶ್, ಈ ಹಿಂದೆ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ನೀಡಿದ್ದ ‘ಶೋ-ಆಫ್’ ಹೇಳಿಕೆಗೆ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಇನ್ನೊಬ್ಬರ ಅಭಿಪ್ರಾಯ ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಕ್ವಾಟ್ಲೆ ಕಿಚನ್ ಸೀಸನ್ 2’ ವಿನ್ನರ್ ಆಗಿ ಹೊರಹೊಮ್ಮಿದ ಸೂರಜ್ ಸಿಂಗ್; ರನ್ನರ್ ಅಪ್ ಪಟ್ಟ ಪಡೆದ ನಟ ಭವಿಶ್, ಗೆದ್ದವರಿಗೆ ಸಿಕ್ಕ ಬಹುಮಾನವೇನು?

ʻಕ್ವಾಟ್ಲೆ ಕಿಚನ್ 2ʼ ಚಾಂಪಿಯನ್ ಸೂರಜ್ ಸಿಂಗ್; ಭವಿಶ್‌ಗೆ ರನ್ನರ್ ಅಪ್ ಪಟ್ಟ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕುಕ್ಕಿಂಗ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್ ಸೀಸನ್ 2' ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟ ಭವಿಶ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.

ವಯಸ್ಸಿನಲ್ಲಿ ತಮಗಿಂತ 23 ವರ್ಷ ಚಿಕ್ಕ ಹುಡುಗಿ ಜೊತೆ ಪ್ರೀತಿ; ‌ಹೊಸ ಗರ್ಲ್‌ಫ್ರೆಂಡ್‌ ಶುಭ್ರಾ ಶೆಟ್ಟಿ ಜತೆಗಿನ ಲವ್ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್

ʻ‌ಮದುವೆ ಮೇಲೆ ನಂಬಿಕೆ ಇಲ್ಲʼ; ಹೊಸ ಗರ್ಲ್‌ಫ್ರೆಂಡ್‌ ಬಗ್ಗೆ ಅನುರಾಗ್ ಮಾತು!

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಶುಭ್ರಾ ಶೆಟ್ಟಿ ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ತಮ್ಮ ಸುದೀರ್ಘ ಬಾಂಧವ್ಯದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇಬ್ಬರ ನಡುವೆ ಇಪ್ಪತ್ಮೂರು ವರ್ಷಗಳ ವಯಸ್ಸಿನ ಅಂತರವಿದ್ದರೂ ಪರಸ್ಪರ ಗೌರವದಿಂದ ಬದುಕುತ್ತಿದ್ದಾರೆ.

ʼʼಟಾಕ್ಸಿಕ್‌ʼ ಜೆನ್‌ ಝೀ ವೀಕ್ಷಕಕರಿಗೆ ಇಷ್ಟವಾಗಲಿದೆʼʼ: ಅಶ್ಲೀಲತೆಯ ಆರೋಪಕ್ಕೆ ಮುಟ್ಟಿ ನೋಡುವಂತೆ ತಿರುಗೇಟು ಕೊಟ್ಟ ಯಶ್‌

ʼಟಾಕ್ಸಿಕ್‌ʼ ಚಿತ್ರದಲ್ಲಿನ ಬೋಲ್ಡ್‌ ದೃಶ್ಯಗಳ ಬಗ್ಗೆ ಯಶ್‌ ಹೇಳಿದ್ದೇನು?

Toxic Movie: ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಕನ್ನಡ ʼಟಾಕ್ಸಿಕ್‌ʼ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್‌ 26ರಂದು ವಿಶ್ವಾದಯಂತ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ ಯಶ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಜಕೀಯಕ್ಕೆ ಬರುವ ಸುಳಿವು ಕೊಟ್ರಾ ಯಶ್‌? ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?

ರಾಜಕೀಯಕ್ಕೆ ಬರುವ ಸುಳಿವು ಕೊಟ್ರಾ ಯಶ್‌?

Actor Yash: ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಯಶ್‌ ರಾಜಕೀಯಕ್ಕೆ ಬರುತ್ತಾರ? ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಸ್ವತಃ ಯಶ್‌ ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ರಾಜಕೀಯ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Chennai Love Story:  OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

Chennai Love Story: ಭಾರಿ ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚೆನ್ನೈ ಲವ್ ಸ್ಟೋರಿ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸನ್ನು ಕಂಡಿತು. ಸುಮಾರು ರೂ. 16 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ರೂ. 60 ಕೋಟಿಯವರೆಗೆ ಸಂಗ್ರಹಿಸಿತು. ಕಿರಣ್ ಅಬ್ಬಾವರಾಮ್ ಅವರ ವ್ಯಾಪ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಚಿತ್ರ ಇದು.

ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ʻಕಾಫೀರ್‌ʼ ಎಂದು ಟೀಕೆ! ಗಳಗಳನೆ ಅತ್ತ ತೆಲುಗು ನಟಿ ಫಾರಿಯಾ ಅಬ್ದುಲ್ಲಾ

ಬೋನಾಲು ವೇಳೆ ಕಳಶ ಹೊತ್ತಿದ್ದಕ್ಕೆ ಕಾಫಿರ್ ಪಟ್ಟ; ಕಣ್ಣೀರಿಟ್ಟ ನಟಿ ಫಾರಿಯಾ!

ತೆಲುಗು ಚಿತ್ರರಂಗದ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ತೆಲಂಗಾಣದ ಸಾಂಪ್ರದಾಯಿಕ ‘ಬೋನಾಲು’ ಉತ್ಸವದಲ್ಲಿ ಕಳಶ ಹೊತ್ತು ನೃತ್ಯ ಮಾಡಿದ್ದಕ್ಕೆ ಕೆಲ ಮುಸ್ಲಿಮರಿಂದ ‘ಕಾಫಿರ್’ ಎಂದು ತೀವ್ರ ನಿಂದನೆಗೆ ಗುರಿಯಾಗಿದ್ದಾರೆ. ಈ ಧಾರ್ಮಿಕ ದ್ವೇಷದ ವಿರುದ್ಧ ಕಣ್ಣೀರಿಡುತ್ತಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ ನಟಿ ಫಾರಿಯಾ.

ʻನಾಚಿಕೆ ಇಲ್ಲದವರು, ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಡ್ತಿದ್ದಾರೆʼ; ಪತ್ನಿಯ ಕೀಳುಮಟ್ಟದ ಲೇವಡಿಗೆ ನಟ ಗೋವಿಂದಾ ಖಡಕ್‌ ತಿರುಗೇಟು!

ಪತ್ನಿ ಸುನೀತಾ ನೀಡಿದ ಕೀಳುಮಟ್ಟದ ಟೀಕೆಗೆ ನಟ ಗೋವಿಂದಾ ಖಡಕ್ ತಿರುಗೇಟು!

ಬಾಲಿವುಡ್ ನಟ ಗೋವಿಂದಾ ಮತ್ತು ಪತ್ನಿ ಸುನೀತಾ ಅಹುಜಾ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಟಿ ಕೋಮಲ್ ರಾಣಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪತ್ನಿ ಲೇವಡಿ ಮಾಡಿದ್ದಕ್ಕೆ ಗೋವಿಂದಾ ತಿರುಗೇಟು ನೀಡಿದ್ದಾರೆ. ತಮ್ಮ ವೃತ್ತಿಪರ ಕೆಲಸಗಳಿಗೆ ಅಡ್ಡಿಪಡಿಸದೆ ಮಿತಿಯಲ್ಲಿದ್ದರೆ ಒಳಿತು ಎಂದು ಎಚ್ಚರಿಸಿದ್ದಾರೆ.

Bigg Boss Kannada 13: ವೇದಿಕೆಯಲ್ಲಿ ಸೈಕ್ ರೈಮಿಂಗ್! ಚಂದನ್‌ ಶೆಟ್ಟಿ ತಬ್ಬಿಬ್ಬು, ಯಾರಿದು Modern ಬರಹಗಾರ ಮಹಾಕವಿ ಮಂಜ?

ವೇದಿಕೆಯಲ್ಲಿ ಸೈಕ್ ರೈಮಿಂಗ್! ಯಾರಿದು Modern ಬರಹಗಾರ?

Bigg Boss : ಆಗಸ್ಟ್‌ 16 ನಾಳೆಯಿಂದ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಪ್ರಸಾರವಾಗಲಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. Modern ಬರಹಗಾರ ಮಹಾಕವಿ ಮಂಜ' ಎಂಬ ಸ್ಪರ್ಧಿ ತನ್ನ ವಿಶಿಷ್ಟ ರ್ಯಾಪ್, ಮಿಮಿಕ್ರಿ ಮತ್ತು ಪಂಚ್ ಡೈಲಾಗ್‌ಗಳಿಂದ ಗಮನ ಸೆಳೆದಿದ್ದಾರೆ.

Kannada Serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರು ಇಷ್ಟ ಪಡೋ ಧಾರಾವಾಹಿ ಇದೊಂದೇ ಅಂತೆ! ಕಾರಣ ಇದು

ಕನ್ನಡ ಕಿರುತೆರೆಯಲ್ಲಿ ವೀಕ್ಷಕರು ಇಷ್ಟ ಪಡೋ ಧಾರಾವಾಹಿ ಇದೊಂದೇ ಅಂತೆ!

Kannada Serial: ಕನ್ನಡ ಕಿರುತೆರೆ (Kannada Serial) ಲೊಕದಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಒಂದೊಂದು ಸೀರಿಯಲ್‌ನಲ್ಲಿ ಥರೇಹವಾರಿ ಕಥೆಗಳು ಇವೆ. ಆದರೆ ಕೆಲವೊಂದು ಮಾತ್ರ ಜನರ ಮನ ಮುಟ್ಟುತ್ತವೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಚರ್ಚೆಗಳು ಆಗುತ್ತಿವೆ. ಅಂತದ್ದರಲ್ಲಿ, ಈ ಒಂದು ಧಾರಾವಾಹಿಯಲ್ಲಿ ಮಾತ್ರ ಮನೆ ಮಂದಿ ಜೊತೆಗೆ ಕುಳಿತು ನೋಡಬಹುದಾದ ಸೀರಿಯಲ್ ಇದು ಎಂದಿದ್ದಾರೆ ನೆಟ್ಟಿಗರು. ಯಾವುದು ಅದು

'ಎ ಡೇಟ್‌' ಚಿತ್ರದ ರ‍್ಯಾಪ್ ಶೈಲಿಯ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ; ತೆರೆಗೆ ಬರಲು ಸಜ್ಜಾದ ಹೊಸಬರ ಪ್ರಯೋಗಾತ್ಮಕ ಸಿನಿಮಾ

ಹೊಸಬರ 'ಎ ಡೇಟ್‌' ಚಿತ್ರದ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಶೀಲ ಕಥಾಹಂದರ ಹೊಂದಿರುವ ‘ಎ ಡೇಟ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಇಬ್ಬರು ಅಪರಿಚಿತರ ಒಂದು ದಿನದ ಪಯಣವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಯೋಧರ ಜೊತೆ ಕಾಲ ಕಳೆದ ಸೈಫ್ ಅಲಿ ಖಾನ್; ʻಭಾರತೀಯ ಸೇನೆ ಸದಾ ನಮ್ಮನ್ನು ಕಾಪಾಡುತ್ತದೆ ಅಂತ ನನ್ ಮಕ್ಕಳಿಗೆ ಹೇಳ್ತಿರ್ತಿನಿʼ ಎಂದ ನಟ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಯೋಧರೊಂದಿಗೆ ಕಾಲ ಕಳೆದ ಸೈಫ್ ಅಲಿ ಖಾನ್

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಜಮ್ಮು-ಕಾಶ್ಮೀರದ ಉರಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಮಯ ಕಳೆದಿದ್ದಾರೆ. ಯೋಧರೊಂದಿಗೆ ಭೋಜನ ಸವಿದು ಕ್ರಿಕೆಟ್ ಆಡಿದ ಅವರು, ಜಾಗತಿಕ ಸಂಘರ್ಷಗಳಿಂದ ಭಯಪಡುವ ತಮ್ಮ ಮಕ್ಕಳಿಗೆ ಭಾರತೀಯ ಸೇನೆಯೇ ರಕ್ಷಾಕವಚ ಎಂದು ಧೈರ್ಯ ತುಂಬುವುದಾಗಿ ತಿಳಿಸಿದರು.

ಸ್ಯಾಂಡಲ್‌ವುಡ್‌ಗೆ ಮರಳಿದ ʻಕೆಜಿಎಫ್‌ʼ ಚೆಲುವೆ ಶ್ರೀನಿಧಿ ಶೆಟ್ಟಿ; ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ ಅನೂಪ್‌ ಭಂಡಾರಿ!

ಸ್ಯಾಂಡಲ್‌ವುಡ್‌ಗೆ ಮರಳಿದ ಶ್ರೀನಿಧಿ ಶೆಟ್ಟಿ; ಯಾವುದು ಆ ಸಿನಿಮಾ?

ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿದ್ದ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಇದೀಗ ಭಂಡಾರಿ ಸಹೋದರರ ನೂತನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ‌ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ.

ʻರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ’: ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ಮಾತು

ʻರಾವಣನ ಪಾತ್ರಕ್ಕೆ ನಾನೇ ಬೆಸ್ಟ್ʼ; 'ಆಪ್ ಕಿ ಅದಾಲತ್' ಶೋನಲ್ಲಿ ಯಶ್ ಮಾತು

'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ತಾವು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ರಭು ಶ್ರೀರಾಮನ ದೈವಿಕತೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಎದುರಾಳಿ ರಾವಣ ಅಷ್ಟೇ ಪ್ರಬಲವಾಗಿರಬೇಕು ಎಂದು ಯಶ್‌ ಹೇಳಿದ್ದಾರೆ.

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡೋದ್ಯಾರು? ಕುತೂಹಲ ಮೂಡಿಸಿದ‌ ನಿರ್ದೇಶಕ ಪ್ರಶಾಂತ್ ವರ್ಮಾ ಪ್ಲ್ಯಾನ್!

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಚಿತ್ರದಲ್ಲಿ ರಾಮನ ಪಾತ್ರ ಮಾಡೋದ್ಯಾರು?

'ಹನು-ಮಾನ್' ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ನಟಿಸುತ್ತಿದ್ದಾರೆ. ಈ ಪೌರಾಣಿಕ ಸಿನಿಮಾದಲ್ಲಿ ಅತ್ಯಂತ ಮಹತ್ವದ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

Loading...