ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಬಾಕ್ಸ್‌ ಆಫೀಸ್‌ನಲ್ಲಿ ʻಕರುಪ್ಪುʼ ರುದ್ರತಾಂಡವ; ಭರ್ಜರಿ ಸಕ್ಸಸ್‌ ಸಿಕ್ಕ ಖುಷಿಯಲ್ಲಿ ದುಬಾರಿ ಕಾರುಗಳನ್ನು ಗಿಫ್ಟ್‌ ಕೊಟ್ಟ ನಟ ಸೂರ್ಯ! ಯಾರಿಗೆಲ್ಲಾ ಸಿಕ್ತು?

ʻಕರುಪ್ಪುʼ ಸೂಪರ್ ಹಿಟ್‌: ಖುಷಿಗೆ ದುಬಾರಿ ಕಾರುಗಳನ್ನ ಗಿಫ್ಟ್ ಕೊಟ್ಟ ಸೂರ್ಯ

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ, ಆರ್‌ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಳಿಸುವ ಮೂಲಕ ಸೂರ್ಯ ವೃತ್ತಿಜೀವನದಲ್ಲೇ ಬೃಹತ್ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಯಶಸ್ಸಿನ ಖುಷಿಯಲ್ಲಿ ಸೂರ್ಯ ಅವರು ಚಿತ್ರದಲ್ಲಿ ಕೆಲಸ ಮಾಡಿದ ಕೆಲವರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದ್ದಾರೆ.

Gicchi Giligili Juniors: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ! ‘ಗಿಚ್ಚಿಗಿಲಿಗಿಲಿ ಜ್ಯೂನಿಯರ್ಸ್‌’ ಗ್ರ್ಯಾಂಡ್‌ ಫಿನಾಲೆ

Gicchi Giligili: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ!

Gicchi Giligili Juniors:ಗಿಚ್ಚಿ-ಗಿಲಿಗಿಲಿ ವಿನ್ನರ್‌’ ಬೆಲ್ಟ್‌ ನೋಡುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಎಮೋಷನಲ್‌ ಕ್ಷಣವನ್ನ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ. ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌' ಅದ್ದೂರಿ ಕಾರ್ಯಕ್ರಮವನ್ನ ಹೋಸ್ಟ್‌ ಮಾಡಿದ್ದು ನಟಿ, ನಿರೂಪಕಿ ಅನುಪಮಾ ಗೌಡ ಅವರು. ಇಷ್ಟು ವಾರಗಳ ಕಾಲ ಕಾರ್ಯಕ್ರಮ ನಿರೂಪಿಸಿದ ನಟಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಾಣಿಸಿಕೊಂಡಿಲ್ಲ

ʻಭಾವಾಂತರʼ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಮುಂದಾದ ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮಾ; ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ

ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಈಗ ಡೈರೆಕ್ಟರ್; ಸಾಥ್‌ ನೀಡಿದ ʻಹೊಂಬಾಳೆʼ

ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು, ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಮೂಲಕ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ನಿರ್ದೇಶನದ ಚೊಚ್ಚಲ ಚಿತ್ರ ‘ಭಾವಾಂತರ’ದ ಆಡಿಯೋ ಹಕ್ಕುಗಳನ್ನು ಖರೀದಿಸಿ ಬೆನ್ನೆಲುಬಾಗಿ ನಿಂತಿದೆ.

CM vijay: 'ಜನ ನಾಯಗನ್' ಸಿನಿಮಾ ಬಿಡುಗಡೆ ಯಾವಾಗ? ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಎಚ್. ವಿನೋದ್

ʻಜನ ನಾಯಗನ್ʼ ರಿಲೀಸ್: ʻಸತ್ಯ ಹೇಳೋ ಧೈರ್ಯವಿಲ್ಲʼ ಎಂದಿದ್ದೇಕೆ ನಿರ್ದೇಶಕ?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಗನ್' ಬಿಡುಗಡೆ ವಿಳಂಬದ ಕುರಿತು ನಿರ್ದೇಶಕ ಎಚ್. ವಿನೋದ್, "ನನಗೆ ನಿಜ ಹೇಳುವ ಧೈರ್ಯ ನನಗಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸೆನ್ಸಾರ್ ಮಂಡಳಿಯ ಕಾನೂನು ಹೋರಾಟ, ಆನ್‌ಲೈನ್ ಲೀಕ್ ಹಾಗೂ ಸೈಬರ್ ಕ್ರೈಮ್ ಬಂಧನಗಳ ನಡುವೆಯೂ ಚಿತ್ರದ ಮೇಲಿನ ಕ್ರೇಜ್ ಕುಗ್ಗಿಲ್ಲ.

Obsession: ಬಜೆಟ್‌ 7 ಕೋಟಿ, ಕಲೆಕ್ಷನ್‌ 1 ಸಾವಿರ ಕೋಟಿ! ಚಿತ್ರ ನಿರ್ಮಾಣಕ್ಕೆ ಸುಖಾಸುಮ್ಮನೆ ಹಣ ವ್ಯಯ ಮಾಡೋರಿಗೆ ಈ ಹಾರರ್‌ ಸಿನಿಮಾ ಒಂದೊಳ್ಳೆ ಪಾಠ!

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ Obsession; 1000 ಕೋಟಿ ಗಳಿಸಿದ ಸಿನಿಮಾ

26 ವರ್ಷದ ಯೂಟ್ಯೂಬರ್ ಕರ್ರಿ ಬೇಕರ್ ನಿರ್ದೇಶನದ 'ಒಬ್ಸೆಷನ್' ಹಾರರ್ ಸಿನಿಮಾ ಕೇವಲ 7+ ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿ ಮೂರೇ ವಾರಗಳಲ್ಲಿ ಜಾಗತಿಕವಾಗಿ 1030+ ಕೋಟಿ ರೂ. ಗಳಿಸಿ ಇತಿಹಾಸ ಸೃಷ್ಟಿಸಿದೆ. ಅಮೆರಿಕ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಗ್ ಬಜೆಟ್ ಚಿತ್ರಗಳ ಪೈಪೋಟಿ ನಡುವೆಯೂ ಈ ಚಿತ್ರ ಧೂಳೆಬ್ಬಿಸಿದೆ.

ಕ್ಯಾನ್ಸರ್‌ ಕಾರಣದಿಂದ ʻಪೆದ್ದಿʼ ಸಿನಿಮಾವನ್ನು ಕೈಬಿಟ್ಟಿದ್ದ ಶಿವರಾಜ್‌ಕುಮಾರ್;‌ ಅಂದು ನಿರ್ದೇಶಕರು ಹೇಳಿದ್ದೇನು ಗೊತ್ತಾ?

Ram Charan: ʻಪೆದ್ದಿʼ ಚಿತ್ರದಿಂದ ಹೊರನಡೆಯಲು ನಿರ್ಧರಿಸಿದ್ದ ಶಿವಣ್ಣ

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್ ಅವರು ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದಿಂದ ಹೊರನಡೆಯಲು ನಿರ್ಧರಿಸಿದ್ದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆದರೆ, ನಿರ್ದೇಶಕ ಬುಚ್ಚಿ ಬಾಬು ಹಾಗೂ ಚಿತ್ರತಂಡ ಶಿವಣ್ಣ ಅವರಿಗಾಗಿಯೇ ಸುದೀರ್ಘ ಕಾಲ ಕಾದಿದ್ದರು.

ʻಪೆದ್ದಿʼ ಚಿತ್ರಕ್ಕಾಗಿ ರಾಮ್‌ ಚರಣ್, ಶಿವರಾಜ್‌ಕುಮಾರ್‌ ಪಡೆದ ಸಂಭಾವನೆ ಎಷ್ಟು? ನಟಿ ಜಾನ್ವಿ ಕಪೂರ್‌ ಎಷ್ಟು ಚಾರ್ಜ್‌ ಮಾಡಿದ್ರು?

‌ʻಪೆದ್ದಿʼ ಚಿತ್ರಕ್ಕಾಗಿ ರಾಮ್ ಚರಣ್‌, ಶಿವಣ್ಣನಿಗೆ ಸಿಕ್ಕ ಸಂಭಾವನೆ ಎಷ್ಟು?

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಿಗ್ ಬಜೆಟ್ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ಚಿತ್ರದ ತಾರಾಗಣದ ಸಂಭಾವನೆ ವಿವರಗಳು ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ರಾಮ್ ಚರಣ್ 100 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದರೆ, ನಿರ್ದೇಶಕ ಬುಚ್ಚಿಬಾಬು ಸನಾ 30 ಕೋಟಿ ರೂ. ಪಡೆದಿದ್ದಾರೆ.

Amruthadhaare Serial: ಮಿಂಚು ರಹಸ್ಯಕ್ಕೆ ತಲುಪುವುದಕ್ಕೆ ಕೇಡಿ ಜೇಡಿ ಒಂದೇ ಹೆಜ್ಜೆ!

ಮಿಂಚು ರಹಸ್ಯಕ್ಕೆ ತಲುಪುವುದಕ್ಕೆ ಕೇಡಿ ಜೇಡಿ ಒಂದೇ ಹೆಜ್ಜೆ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಗೌತಮ್-ಭೂಮಿಕಾ ಮಿಂಚುವನ್ನು ದತ್ತು ನೀಡಲು ಯೋಚಿಸುತ್ತಿರುವಾಗ, ಜೈದೇವನಿಗೆ ಆಘಾತಕಾರಿ ಸತ್ಯವೊಂದು ತಿಳಿಯುತ್ತದೆ. ಲಕ್ಷ್ಮೀಕಾಂತನಿಂದ ಆಕಸ್ಮಿಕವಾಗಿ ಹೊರಬಿದ್ದ ಮಾತಿನಿಂದ, ಮಿಂಚು ಗೌತಮ್-ಭೂಮಿಕಾಳ ಸ್ವಂತ ಮಗಳು ಎಂಬ ರಹಸ್ಯ ಜೈದೇವನಿಗೆ ಗೊತ್ತಾಗುತ್ತದೆ. ಮುಂದೆ ಮಿಂಚು ಗತಿ ಏನು?

Rashmika Mandanna: ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್; ವಿಡಿಯೋ ವೈರಲ್‌

ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್; ವಿಡಿಯೋ ವೈರಲ್‌

Rashmika Mandanna: ರಶ್ಮಿಕಾ ಪ್ರಸ್ತುತ ಬಾಲಿವುಡ್ ಚಿತ್ರ ಕಾಕ್ಟೇಲ್ 2 (Cocktail 2) ನಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ನಟಿಸಿರುವ ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಿಂದ ಬಿಡುಗಡೆಯಾದ ಪೋಸ್ಟರ್‌ಗಳು ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರನ್ನು ಮೆಚ್ಚಿಕೊಂಡಿವೆ. ಇತ್ತೀಚೆಗೆ, ಕಾಕ್‌ಟೇಲ್ 2 ರ ಪ್ರಚಾರದ ಸಮಯದಲ್ಲಿ, ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಾಧ್ಯಮಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಶಾಹಿದ್ ತಮಾಷೆಯಾಗಿ ರಶ್ಮಿಕಾ ಅವರ ಭುಜದ ಮೇಲೆ ಕೈ ಹಾಕಿದರು. ಆದರೆ, ಆ ಸಮಯದಲ್ಲಿ ರಶ್ಮಿಕಾ ಸ್ವಲ್ಪ ಮುಜುಗರಕ್ಕೊಳಗಾದಂತೆ ನಟಿಸಿ, ತಕ್ಷಣ ಹಿಂದೆ ಸರಿದು ಅವರ ಕೈಯನ್ನು ತಳ್ಳಿದರು.

Vijay Trisha: ತ್ರಿಶಾ ಜೊತೆಯಲ್ಲೇ ಬಂದ ಸಿಎಂ ವಿಜಯ್; ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಜೋಡಿ

ತ್ರಿಶಾ ಜೊತೆಯಲ್ಲೇ ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

Vijay Trisha: ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ (89) ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಅವರ ಸಾವಿನ ಸುದ್ದಿ ತಮಿಳು ಚಿತ್ರರಂಗ ಮತ್ತು ಅಜಿತ್ ಅವರ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿತು. ಅವರ ತಾಯಿ ನಿಧನರಾದಾಗ ಅಜಿತ್ ದುಬೈನಲ್ಲಿದ್ದರು. ವಿಷಯ ತಿಳಿದ ತಕ್ಷಣ ಅವರು ಚೆನ್ನೈ ತಲುಪಿದರು. ಅಜಿತ್ ಕುಮಾರ್ ಮತ್ತು ದಳಪತಿ ವಿಜಯ್ (Vijay) ಅವರು ಆಪ್ತವಾಗಿದ್ದಾರೆ. ಅವರ ಜೊತೆ ನಟಿ ತ್ರಿಶಾ ಅವರಿಗೂ ಉತ್ತಮ ಬಾಂಧವ್ಯ ಇದೆ. ಅಜಿತ್ ತಾಯಿಯ ಅಂತಿಮ ದರ್ಶನ ಪಡೆಯಲು ತ್ರಿಶಾ ಮತ್ತು ವಿಜಯ್ ಅವರು ಒಟ್ಟಾಗಿ ಆಗಮಿಸಿದ್ದಾರೆ.

Actor Jayaram: ಧೋನಿ ಪತ್ನಿಯ ಈ ನಡೆಗೆ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ ನಟ ಜಯರಾಂ!

ಧೋನಿ ಪತ್ನಿಯ ಈ ನಡೆಗೆ ಗೊಂದಲಕ್ಕೆ ಒಳಗಾಗಿದ್ದರಂತೆ ನಟ ಜಯರಾಂ!

Actor Jayaram: ‘ಕಾಂತಾರ 2’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಮಲಯಾಳಂ ನಟ ಜಯರಾಂ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದಲ್ಲಿರುವಾಗ ಸಾಕ್ಷಿ ಧೋನಿಯ ಕತೆ ವಿವರಿಸಿದರು. ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದ ಸಮಯದಲ್ಲಿ ಸಾಕ್ಷಿ ಧೋನಿಯೊಂದಿಗಿನ ಅನಿರೀಕ್ಷಿತ ಭೇಟಿಯನ್ನು ನೆನಪಿಸಿಕೊಂಡರು.

Joseph Vijay: ವಿಜಯ್ ಅವರ ಈ ನಡೆಗೆ ಶ್ಲಾಘಿಸಿದ ರಾಮ್ ಚರಣ್

Joseph Vijay: ವಿಜಯ್ ಅವರ ಈ ನಡೆಗೆ ಶ್ಲಾಘಿಸಿದ ರಾಮ್ ಚರಣ್

Ram Charan: ವಿಜಯ್ ಮೇ 10 ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟನೆಯಿಂದ ನಿವೃತ್ತಿ ಘೋಷಿಸಿದ ಅವರು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನದತ್ತ ಗಮನಹರಿಸಲು ತಮ್ಮ ನಟನಾ ವೃತ್ತಿಜೀವನವನ್ನು ತೊರೆದರು. ಈ ಬಗ್ಗೆ ರಾಮ್‌ಚರಣ್‌ ಹೊಗಳಿದ್ದಾರೆ.

Yuvarajkumar: ಕೇದಾರನಾಥಕ್ಕೆ ತೆರಳಿ ಶಿವನ ದರ್ಶನ ಪಡೆದ ಯುವ ರಾಜಕುಮಾರ್; ಪೋಸ್ಟ್‌ನಲ್ಲಿ ಏನಿದೆ?

ಕೇದಾರನಾಥಕ್ಕೆ ತೆರಳಿ ಶಿವನ ದರ್ಶನ ಪಡೆದ ಯುವ ರಾಜಕುಮಾರ್

Yuvarajkumar: ಯುವರಾಜಕುಮಾರ್ ಕೇದಾರನಾಥಕ್ಕೆ ತೆರಳಿ, ಶಿವನ ದರ್ಶನ (Shiva) ಪಡೆದು ಬಂದಿದ್ದಾರೆ,ಕೇದಾರನಾಥ ದೇವಸ್ಥಾನ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಯಾತ್ರೆಯಲ್ಲಿ ತಾನು ಜಿವನದ ಬಗ್ಗೆ ಏನೇನು ಕಲಿತೆ ಎನ್ನುವುದನ್ನು ನಟ ತಿಳಿಸಿದ್ದಾರೆ. ಸಾಮಾನ್ಯರಂತೆ ಕೇದಾರನಾಥ ದೇವಸ್ಥಾನಕ್ಕೆ ಚಾರಣ ಮಾಡುವ ಮೂಲಕ ತಲುಪಿದ್ದಾರೆ.

Ajith Kumar: ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ

Ajith Kumar: ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ

Ajith Kumar: ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು 85 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು. ನಟ ಮತ್ತು ಅವರ ಕುಟುಂಬಕ್ಕೆ ಸಂತಾಪಗಳು ಹರಿದು ಬರುತ್ತಿವೆ, ಅನೇಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ನಟ-ರಾಜಕಾರಣಿ ಕಮಲ್ ಹಾಸನ್ ಕೂಡ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಹೇಳಿಕೆ ಬರೆದಿದ್ದಾರೆ.

Premalu 2: ‘ಪ್ರೇಮಲು’ಫ್ಯಾನ್ಸ್‌ಗೆ ನಿರಾಸೆ; ಶಾಕಿಂಗ್‌ ನ್ಯೂಸ್‌ ಔಟ್‌

Premalu 2: ‘ಪ್ರೇಮಲು’ಫ್ಯಾನ್ಸ್‌ಗೆ ನಿರಾಸೆ; ಶಾಕಿಂಗ್‌ ನ್ಯೂಸ್‌ ಔಟ್‌

Premalu 2: ಇತ್ತೀಚಿನ ವರ್ಷಗಳಲ್ಲಿ ಕಲ್ಟ್ ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿದ ಕೆಲವೇ ಚಿತ್ರಗಳಲ್ಲಿ ಒಂದಾಗಿದೆ. ನಸ್ಲೆನ್ ಮತ್ತು ಮಮಿತಾ ಬೈಜು ನಟಿಸಿದ ಈ ಚಿತ್ರವು ಯುವಕರನ್ನು, ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸಿತು ಮತ್ತು 2024 ರಲ್ಲಿ ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿತು. 'ಪ್ರೇಮಲು' ಚಿತ್ರದ ಸೀಕ್ವೆಲ್ (Sequel) 'ಪ್ರೇಮಲು 2' ಸದ್ಯಕ್ಕೆ ರದ್ದಾಗಿದೆ.

Naga Chaitanya: ಸಮಂತಾಗೆ ಮೋಸ ! ವೃತ್ತಿಜೀವನವನ್ನು ಹಾಳು ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ

ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ; ಕಾರಣ ಇದು

Samantha: ಸಮಂತಾ ಜೊತೆಗೆ ವಿಚ್ಚೇದನವಾದ ದಿನದಿಂದ ನಾಗಚೈತನ್ಯ ವಿರುದ್ಧ ಆನ್‌ಲೈನ್‌ನಲ್ಲಿ ನೆಗೆಟಿವ್ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾಗ ಚೈತನ್ಯ ತನ್ನ ಮಾಜಿ ಪತ್ನಿ ಸಮಂತಾಗೆ ಮೋಸ ಮಾಡಿ, ಅವರ ಜೀವನವನ್ನೇ ಹಾಳು ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ನಾಗ ಚೈತನ್ಯ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

Siddu Moolimani:  ಸದ್ದಿಲ್ಲದೇ ಒಟಿಟಿಗೆ ಬಂತು ಕನ್ನಡ ಹಾರರ್ ಕಾಮಿಡಿ ಸಿನಿಮಾ ; ಸ್ಟ್ರೀಮಿಂಗ್‌ ಎಲ್ಲಿ?

ಸದ್ದಿಲ್ಲದೇ ಒಟಿಟಿಗೆ ಬಂತು ಕನ್ನಡ ಹಾರರ್ ಕಾಮಿಡಿ ಸಿನಿಮಾ

Siddu Moolimani: ಎನ್ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಗಿರಿಧರ ಟಿ ವಸಂತಪುರ ನಿರ್ಮಿಸಿದ್ದಾರೆ. ಸುಜಾತಾ ಗಿರಿಧರ ಸಹ-ನಿರ್ಮಾಪಕರಾಗಿದ್ದಾರೆ. ಲವ್ ಯು ಮುದ್ದು ನಂತರ ಸಿದ್ದು ಮೂಲಿಮನಿ ಸೀಟ್ ಎಡ್ಜ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಇದೀಗ ಈ ಸಿನಿಮಾ ಒಟಿಟಿಗೆ (OTT) ಎಂಟ್ರಿ ಕೊಡುತ್ತಿದೆ.

Ranbir Kapoor: ಈ ಎಲ್ಲ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್!

ಈ ಎಲ್ಲ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್!

Ranbir Kapoor: ರಾಮಾಯಣ ಇತ್ತೀಚಿನ ದಿನಗಳಲ್ಲಿ ಸುದ್ದಿಗಳಲ್ಲಿದೆ. ಏತನ್ಮಧ್ಯೆ, ರಣಬೀರ್ ಕಪೂರ್ ಇತ್ತೀಚೆಗೆ ರಾಮಾಯಣ ಮತ್ತು ಅವರ ಪಾತ್ರದ ಬಗ್ಗೆ ಮಾತನಾಡಿದರು. ಈ ಚಿತ್ರ ತಮ್ಮ ಜೀವನವನ್ನು ಬದಲಿಸಿದೆ ಎಂದಿದ್ದಾರೆ. ಮಗಳು ರಾಹಾಳಿಗಾಗಿ ಉತ್ತಮ ತಂದೆಯಾಗಲು ಈ ಪಾತ್ರ ಪ್ರೇರಣೆ ನೀಡಿದೆ ಎಂದು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

Kiara Advani:  ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ

‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ

Kiara Advani: ಯಾರಾ ಅಡ್ವಾಣಿಗೆ ಈ ಚಿತ್ರವು ಆಧುನಿಕ ಪ್ರೀತಿ ಮತ್ತು ಅಸಾಂಪ್ರದಾಯಿಕ ಸಂಬಂಧಗಳ ಬಗ್ಗೆಯೂ ಅಷ್ಟೇ ಮುಖ್ಯವಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

September 21 Review: ಮರೆವಿನ ಲೋಕದಲ್ಲಿ ಮೆಲೋಡ್ರಾಮಾ ಇಲ್ಲದ ಸರಳ ನಿರೂಪಣೆ

ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಸಿನಿಮಾ ಹೇಗಿದೆ?

ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಹಾಗೂ ಪ್ರವೀಣ್ ನಟನೆಯ 'ಸೆಪ್ಟೆಂಬರ್ 21' ಚಿತ್ರವು ಅಲ್ಝೈಮರ್ಸ್ ಕಾಯಿಲೆಯಿಂದ ನಲುಗುವ ವೃದ್ಧ ಹಾಗೂ ಆತನನ್ನು ಸಾಕಿ ಸಲಹುವ ಮಧ್ಯಮ ವರ್ಗದ ಗೃಹಿಣಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

Kiara Advani: `ಟಾಕ್ಸಿಕ್' ಶೂಟಿಂಗ್‌ನಲ್ಲಿ ಹಾಯ್​, ಹಲೋ ಕೂಡ ಹೇಳೋ ಹಾಗಿರಲಿಲ್ವಂತೆ! ಕಿಯಾರಾ ಹೇಳಿದ್ದೇನು?

`ಟಾಕ್ಸಿಕ್' ಶೂಟಿಂಗ್‌ನಲ್ಲಿ ʻಹಾಯ್​ʼ ಕೂಡ ಹೇಳೋ ಹಾಗಿರಲಿಲ್ವಂತೆ! ಕಾರಣ?

Toxic Movie: ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಿಸಿದ ಸವಾಲುಗಳ ಬಗ್ಗೆ ಕಿಯಾರಾ ಮಾತನಾಡುತ್ತಾ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿರುವುದರಿಂದ ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪ್ರತಿಯೊಂದು ಸನ್ನಿವೇಶವನ್ನು ಎರಡು ಬಾರಿ ಚಿತ್ರೀಕರಿಸಲಾಗಿದೆ, ಮೊದಲು ಇಂಗ್ಲಿಷ್‌ನಲ್ಲಿ ಮತ್ತು ನಂತರ ಕನ್ನಡದಲ್ಲಿ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಕರವಾಗಿತ್ತು ಎಂದು ಅವರು ಹೇಳಿದರು.

ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ವಿ. ನಾಗೇಂದ್ರ ಪ್ರಸಾದ್; ‌ʻಇದು ಮತ್ತೊಂದು ಮುಂಗಾರು ಮಳೆ ಆಗಲಿದೆʼ ಎಂದ ಹೀರೋ ಕಿರಣ್

ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

ಯುವ ಪ್ರತಿಭೆಗಳ ‘ಲೈಫ್ ಟುಡೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪ್ರೇಮಗೀತೆ ‘ನೀನೊಬ್ಬಳೆ...’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ, ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ನಟನೆಯ ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

ʻಡಾನ್ 3ʼ ವಿವಾದಕ್ಕೆ ಸಲ್ಮಾನ್ ಖಾನ್ ಎಂಟ್ರಿ; ರಣವೀರ್ ಸಿಂಗ್ -ಫರ್ಹಾನ್ ಅಖ್ತರ್‌ಗೆ ʻಭಾಯ್‌ಜಾನ್ʼ ಬುದ್ಧಿವಾದ!

ರಣವೀರ್ ಸಿಂಗ್-ಫರ್ಹಾನ್ ಮಧ್ಯೆ ಸಂಧಾನ ಮಾಡಿದ್ರಾ ಸಲ್ಮಾನ್‌ ಖಾನ್?

ಬಾಲಿವುಡ್‌ನ ಬಹುನಿರೀಕ್ಷಿತ 'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರಿಂದ ಉಂಟಾಗಿದ್ದ 45 ಕೋಟಿ ರೂ. ನಷ್ಟದ ವಿವಾದಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಫರ್ಹಾನ್ ಅಖ್ತರ್ - ರಣವೀರ್ ಸಿಂಗ್ ಅವರಿಗೆ ಆಪ್ತರಾಗಿರುವ ನಟ ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.

OTT ಅಂಗಳಕ್ಕೆ ಎಂಟ್ರಿ ಕೊಟ್ಟ ಕಾಳಿದಾಸ; ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!

ಒಟಿಟಿಯಲ್ಲಿ ಬರಲಿದೆ ಧ್ರುವ ಸರ್ಜಾ ನಟನೆಯ ʻಕೆಡಿʼ ಸಿನಿಮಾ; ಎಲ್ಲಿ, ಯಾವಾಗ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ-ದಿ ಡೆವಿಲ್’ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಈ ಚಿತ್ರ, ಸದ್ಯ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

Loading...