ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

'ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್'ನ 'ಟಿಐ22 ಬೈ ಅಹಂ' ಕಲೆಕ್ಷನ್‌ನ ಮುಖಚಿತ್ರವಾಗಿ ನಟ ಹರ್ಷವರ್ಧನ್ ರಾಣೆ ನೇಮಕ

ಟೈಟಾನಿಯಂ, ಚಿನ್ನ ಮತ್ತು ವಜ್ರಗಳ ಸಂಯೋಜನೆಯ ಕಲೆಕ್ಷನ್‌ ಬಿಡುಗಡೆ

ಮುಂಬೈನ ಜುಹುವಿನಲ್ಲಿರುವ ಒನ್‌8 ಕಮ್ಯೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕಲೆಕ್ಷನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. 'ದಿಟ್ಟವಾಗಿರಿ. ದೃಢವಾಗಿರಿ' ಎಂಬ ಪರಿಕಲ್ಪನೆಯಡಿ ವಿನ್ಯಾಸ ಗೊಂಡಿರುವ ಈ ಆಭರಣಗಳು ಆಧುನಿಕ ಪುರುಷರ ವ್ಯಕ್ತಿತ್ವ, ಬಲ ಮತ್ತು ವಿಶಿಷ್ಟತೆಯನ್ನು ಪ್ರತಿಬಿಂಬಿಸುತ್ತವೆ.

ʻಮೆಗಾಸ್ಟಾರ್ʼ ಚಿರಂಜೀವಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್;‌ ಹೊಸ ಸಿನಿಮಾದ ಟೈಟಲ್‌ ರಿವೀಲ್‌, ರಿಲೀಸ್‌ ಡೇಟ್‌ ಅನೌನ್ಸ್!

Mega 158: ನಟ ಚಿರಂಜೀವಿ ಅಭಿನಯದ ಹೊಸ ಸಿನಿಮಾದ ಟೈಟಲ್‌ ಘೋಷಣೆ!

ʻಮೆಗಾಸ್ಟಾರ್ʼ ಚಿರಂಜೀವಿ ಅವರ 158 ಚಿತ್ರಕ್ಕೆ ‘ಕಾಕಾ’ ಎಂದು ನಾಮಕರಣ ಮಾಡಲಾಗಿದ್ದು, ಜನ್ಮದಿನದ ಪ್ರಯುಕ್ತ ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆಗೊಂಡಿದೆ. ನಿರ್ದೇಶಕ ಬಾಬಿ ಕೊಲ್ಲಿ ಅವರ ಈ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಹೈ-ವೋಲ್ಟೇಜ್ ಸಿನಿಮಾ 2027ರ ಸಂಕ್ರಾಂತಿಗೆ ತೆರೆಕಾಣಲಿದೆ.

Zombie Reddy 2 NXT LVL: ʻಹನು-ಮಾನ್‌ʼ ಖ್ಯಾತಿಯ ನಟ ತೇಜ ಸಜ್ಜಾ ಸಿನಿಮಾಗೆ ಉಪೇಂದ್ರ ಎಂಟ್ರಿ; ಮತ್ತೆ ಟಾಲಿವುಡ್‌ನಲ್ಲಿ  ʻರಿಯಲ್‌ ಸ್ಟಾರ್‌ʼ ಮಿಂಚಿಂಗ್‌!

ತೇಜ ಸಜ್ಜಾ ನಟನೆಯ ʻಜಾಂಬಿ ರೆಡ್ಡಿ 2ʼ ಚಿತ್ರಕ್ಕೆ ನಟ ಉಪೇಂದ್ರ ಎಂಟ್ರಿ!

‘ಜಾಂಬಿ ರೆಡ್ಡಿ 2ʼ ಚಿತ್ರದಲ್ಲಿ ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಂಗ್ ಹೀರೋ ತೇಜ ಸಜ್ಜಾ ನಟನೆಯ ಈ ಸೀಕ್ವೆಲ್‌ಗೆ ಸುಪರ್ಣ್ ಎಸ್. ವರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರಶಾಂತ್ ವರ್ಮಾ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Yash: 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಅವಘಡ; ಕಾಲು ಮುರಿದುಕೊಂಡ ವಿದ್ಯಾರ್ಥಿ, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ?

ʻಟಾಕ್ಸಿಕ್ʼ ಪ್ರೀ-ರಿಲೀಸ್ ಅವಘಡ; ಪೊಲೀಸರು FIR ದಾಖಲಿಸಿದ್ದು ಯಾರ ಮೇಲೆ?

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಪ್ರಚಾರ ಸಭೆಯಲ್ಲಿ ಸ್ಕ್ಯಾಫೋಲ್ಡಿಂಗ್ ಬಿದ್ದು ವಿದ್ಯಾರ್ಥಿಯೊಬ್ಬ ಕಾಲು ಮುರಿದುಕೊಂಡಿದ್ದಾನೆ. ತೆಲಂಗಾಣದ ಮಲ್ಲಾರೆಡ್ಡಿ ಕ್ಯಾಂಪಸ್‌ನಲ್ಲಿ ಜನದಟ್ಟಣೆ ಮಿತಿಮೀರಿದ ಪರಿಣಾಮ ಸೌಂಡ್ ಬಾಕ್ಸ್ ಕುಸಿದು ಹಲವರು ಗಾಯಗೊಂಡಿದ್ದರು. ಸದ್ಯ ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಮೊದಲ ಬಾರಿಗೆ ಖಳನಾಯಕನಾದ ರವಿಚಂದ್ರನ್‌ ಪುತ್ರ ಮನೋರಂಜನ್: 'ಕೌಂತೇಯ' ಚಿತ್ರದಲ್ಲಿ ವಿಭಿನ್ನ ಪ್ರಯೋಗ!

'ಕೌಂತೇಯ' ಚಿತ್ರದಲಿ ಮೊದಲ ಬಾರಿಗೆ ವಿಲನ್ ಆದ ರವಿಚಂದ್ರನ್ ಪುತ್ರ ಮನೋರಂಜನ್

ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ಅವರು ʻಕೌಂತೇಯʼ ಚಿತ್ರದಲ್ಲಿ ಇದೇ ಮೊದಲ ಸಲ ಖಳನಾಯಕನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಬಿ.ಕೆ. ಚಂದ್ರಹಾಸ್ ಸಾರಥ್ಯದ ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ಅಚ್ಯುತ್ ಕುಮಾರ್, ಪ್ರಿಯಾಂಕಾ ತಿಮ್ಮೇಶ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್‌ ಈಚೆಗೆ ರಿಲೀಸ್‌ ಆಗಿದೆ.

‌ʻಯಶ್ ಜೊತೆ ನಾನು ಸಿನಿಮಾ ಮಾಡೋದು ಫಿಕ್ಸ್, ಆದರೆ...ʼ; ಸಾವಿರಾರು ಜನರ ಎದುರು ತೆಲುಗು ಸ್ಟಾರ್‌ ನಿರ್ಮಾಪಕನ ಬಿಗ್‌ ಅನೌನ್ಸ್‌ಮೆಂಟ್!‌

`ಯಶ್ ಜತೆ ಸಿನಿಮಾ ಮಾಡ್ತೀನಿ, ಆದರೆ..ʼ; ತೆಲುಗು ನಿರ್ಮಾಪಕ ಹೇಳಿದ್ದಿಷ್ಟು!

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾದ ತೆಲುಗು ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ. ಮುಂಬೈನಲ್ಲಿ ಚಿತ್ರದ ತುಣುಕುಗಳನ್ನು ವೀಕ್ಷಿಸಿ ಬೆರಗಾದ ಅವರು, ಈ ಸಿನಿಮಾ ಬರೋಬ್ಬರಿ ₹2000 ಕೋಟಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ʻನಾನು ಪ್ರೆಗ್ನೆಂಟ್‌ ಅಲ್ಲ, ಎಲ್ರೂ ಯಾಕ್ಹೀಗೆ ಅಂದ್ಕೋತಿದ್ದಾರೆ?ʼ; ಗರ್ಭಿಣಿ ಗಾಸಿಪ್‌ಗೆ ಸ್ಪಷ್ಟನೆ ಕೊಟ್ಟ ನಟಿ ಸೋನಲ್‌ ಮೊಂಥೆರೋ!

ʻನಾನು ಗರ್ಭಿಣಿಯಲ್ಲ..ʼ; ಪ್ರೆಗ್ನೆನ್ಸಿ ವದಂತಿಗೆ ಸೋನಲ್ ಮೊಂಥೆರೋ ಸ್ಪಷ್ಟನೆ

Sonal Monteiro Pregnancy Rumours: ನಟಿ ಸೋನಲ್ ಮೊಂಥೆರೋ ಅವರು ಗರ್ಭಿಣಿ ವದಂತಿ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹುಟ್ಟಿಕೊಂಡ ಗರ್ಭಿಣಿ ವದಂತಿಗಳನ್ನು ಅವರು ತಳ್ಳಿಹಾಕಿದ್ದು, ಅದೆಲ್ಲ ಕೇವಲ ತಪ್ಪು ಕಲ್ಪನೆ ಎಂದಿದ್ದಾರೆ.

ಕೋಮಲ್‌ ನಟನೆಯ ‘ರೋಲೆಕ್ಸ್’ ಚಿತ್ರಕ್ಕೆ ವಿನೋದ್ ಪ್ರಭಾಕರ್ ಎಂಟ್ರಿ: ಸೋನಲ್‌ಗೆ ‘ಮರಿ ಟೈಗರ್’ ಥ್ಯಾಂಕ್ಸ್ ಹೇಳಿದ್ದೇಕೆ?

Komal: ‘ರೋಲೆಕ್ಸ್’ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ನಟಿಸಲು ಕಾರಣ ಯಾರು?

ರೋಲೆಕ್ಸ್‌ ಸಿನಿಮಾದ ಟೀಸರ್ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದು, ಕೋಮಲ್ ಕುಮಾರ್ ಹಾಗೂ ವಿನೋದ್ ಪ್ರಭಾಕರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸೋನಲ್ ಮೊಂತೆರೊ ಅವರಿಂದಾಗಿ ತಮಗೆ ಈ ಮಹತ್ವದ ಪಾತ್ರ ಸಿಕ್ಕಿದೆ ಎಂದು ವಿನೋದ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ʻಸರಿಗಮಪ ಲಿಟಲ್‌ ಚಾಂಪ್ಸ್‌ʼ ವಿನ್ನರ್ ಟ್ರೋಫಿ ಮುಡಿಗೇರಿಸಿಕೊಂಡ ಅಶ್ಮಿತ್; ರನ್ನರ್‌ಅಪ್ ಅಚಿಂತ್ಯಗೆ ಸಿಕ್ಕ ಬಹುಮಾನವೆಷ್ಟು?

‌ʻಸರಿಗಮಪ ಲಿಟಲ್‌ʼ ಚಾಂಪ್ಸ್ ವಿನ್ನರ್ ಆದ ಅಶ್ಮಿತ್; ಮಂಗಳೂರಿಗೆ ಡಬಲ್ ಧಮಾಕ!

Sa Re Ga Ma Pa Little Champs Winner: ಮಂಗಳೂರಿನ ವಯೊಲಿನ್ ವಾದಕ ಗಾಯಕ ಅಶ್ಮಿತ್ ಅವರು ʻಸರಿಗಮಪ ಲಿಟಲ್‌ ಚಾಂಪ್ಸ್‌ʼ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು ನಾಗರಾಜ್ ಮಾರ್ಗದರ್ಶನದ ಈ ಬಾಲಪ್ರತಿಭೆಗೆ ಟ್ರೋಫಿ ಜೊತೆಗೆ 20 ಲಕ್ಷ ರೂ. ನಗದು ಸಂದಿದೆ.

'ಟಾಕ್ಸಿಕ್' ಹೈದರಾಬಾದ್‌  ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭಾರೀ ಅವಘಡ: ಸೌಂಡ್‌ಬಾಕ್ಸ್ ಕುಸಿದು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಯಶ್ ಆತಂಕ!

ʻಟಾಕ್ಸಿಕ್‌ʼ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಅವಘಡ; ವಿದ್ಯಾರ್ಥಿಗಳಿಗೆ ಗಾಯ!

ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಪ್ರೀ-ರಿಲೀಸ್‌ ಸಮಾರಂಭದಲ್ಲಿ ಸೌಂಡ್‌ಬಾಕ್ಸ್ ಕಂಬ ಏಕಾಏಕಿ ಕುಸಿದು ಬಿದ್ದು ಮೂವರು ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದಾರೆ. ಈ ಅನಾಹುತ ಕಂಡು ನಟ ಯಶ್ ಭಾಷಣ ನಿಲ್ಲಿಸಿ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Mahaveer Karna Teaser:  ತೆರೆಮೇಲೆ 'ಮಹಾವೀರ ಕರ್ಣ'ನ ಸಿನಿಮಾ; ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ!

Mahaveer Karna Teaser: ತೆರೆಮೇಲೆ 'ಮಹಾವೀರ ಕರ್ಣ'ನ ಸಿನಿಮಾ

Mahaveer Karna Teaser: ಪ್ರತಿಷ್ಠಿತ ಪೆನ್ ಮೂವೀಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್, ಆರ್‌ವಿ ಸ್ಟುಡಿಯೋಸ್ ಸಹಯೋಗದಲ್ಲಿ ಕರ್ಣನ ಬಗ್ಗೆ 'ಮಹಾವೀರ ಕರ್ಣ' ಸಿನಿಮಾ ಅನೌನ್ಸ್ ಆಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಕ್ಷಸುಡು, ಖಿಲಾಡಿ, ವೀರ ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ರಮೇಶ್ ವರ್ಮಾ 'ಮಹಾವೀರ ಕರ್ಣ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್‌?

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್‌!

Vijayalakshmi Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್‌ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ.

Om Prakash Rao: ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

Om Prakash Rao: ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ (Om Prakash Rao) ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮಾಧ್ಯಮವೊಂದಕ್ಕೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Bigg Boss Kannada 13: ನಾಯಕಿ ನಿರ್ಧಾರಕ್ಕೆ ತಂಡದವರೇ Rebel! ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss : ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss: ಸ್ಪರ್ಧಿಗಳ ಮಧ್ಯೆ ಹಣಾಹಣಿ ಜೋರಾಗಿದೆ. ಪೂರ್ಣಿಮಾ ತಂಡದಲ್ಲೇ ಅಸಮಧಾನ ಶುರುವಾಗಿತ್ತು. ನಾಯಕಿ ನಿರ್ಧಾರಕ್ಕೆ ತಂಡದವರೇ Rebel ಆಗಿದ್ದಾರೆ. ಮತ್ತೊಂದು ಕಡೆ ಟೀಂ ಕಟ್ಟುವಾಗ ಗಂಡು , ಹೆಣ್ಣು ಎಂಬ ಭೇದ ಶುರುವಾಗಿದೆ. ಅಗ್ನಿಪರೀಕ್ಷೆ ಅಖಾಡದಲ್ಲಿ ಗಂಡು-ಹೆಣ್ಣು ಭೇದನೇ ಇಲ್ಲ ಎಂಬ ಅಂಶವು ಇದರಲ್ಲಿದೆ.

Om Prakash: 3.85 ಕೋಟಿ ರೂ ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ದೂರು

3.85 ಕೋಟಿ ರೂ ವಂಚನೆ ಆರೋಪ: ಓಂ ಪ್ರಕಾಶ್ ರಾವ್ ವಿರುದ್ಧ ದೂರು

Om Prakash: ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫಿನಿಕ್ಸ್ ಸಿನಿಮಾ ನಿರ್ಮಾಣಕ್ಕೆ ಹಣ ಪಡೆದ ಆರೋಪ ಮಾಡಿ ದೂರು ನೀಡಿದ್ದಾರೆ. 3 ಕೋಟಿ 85 ಲಕ್ಷದಷ್ಟು ಹಣ ಪಡೆದಿದ್ದಾರೆ ಅಂತ ಆರೋಪ ಮಾಡಿದ್ದಾರೆ.

Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

Bigg Boss Kannada 13: ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 (Bigg boss Kannada 13) ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಈಗಾಗಲೇ ರಿವೀಲ್‌ ಆಗಿದೆ. 'ಅಗ್ನಿ ಪರೀಕ್ಷೆ'ಗೆ ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಎಲ್ಲವೂ ನಡೆದ ಮೇಲೆ ಇಲ್ಲಿ ವೀಕ್ಷಕರ ಮತದ ಆಧಾರದ ಮೇಲೆ ಕೇವಲ ಮೂರು ಮಂದಿಯನ್ನಷ್ಟೇ ಆಯ್ಕೆ ಮಾಡಿ ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಗುತ್ತದೆ.

Actor Prabhas: ‘ಸ್ಪಿರಿಟ್’ ಚಿತ್ರಕ್ಕಾಗಿ ಪ್ರಭಾಸ್ ಕಠಿಣ ಶ್ರಮ; ದಿನಕ್ಕೆ 17 ಗಂಟೆ ಶೂಟಿಂಗ್‌!

ಸ್ಪಿರಿಟ್ ಚಿತ್ರಕ್ಕಾಗಿ ಪ್ರಭಾಸ್ ಕಠಿಣ ಶ್ರಮ; ದಿನಕ್ಕೆ 17 ಗಂಟೆ ಶೂಟಿಂಗ್‌

Actor Prabhas: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ ಅವರ ಸಂದರ್ಶನಗಳ ನಂತರ, ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ಸ್ಪಿರಿಟ್ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಣಯ್ ವಂಗಾ ಇತ್ತೀಚೆಗೆ ಈ ಕಥೆಯು ಮುಖ್ಯವಾಗಿ ಹೈದರಾಬಾದ್‌ನಲ್ಲಿ ಆಧಾರಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಶೇ. 40ರಷ್ಟು ಶೂಟಿಂಗ್ ಮುಗಿದಿದ್ದು, ನಟಿ ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರಬಿದ್ದಿದ್ದಾರೆ. ಪ್ರಭಾಸ್ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Arjun Rampal : ವರ್ಷಗಳ ಪ್ರೀತಿಗೆ ಕೊನೆಗೂ ಸಿಕ್ಕಿತು ಅಧಿಕೃತ ಮುದ್ರೆ; ಮದುವೆ ಆದ ನಟ ಅರ್ಜುನ್ ರಾಂಪಾಲ್

Arjun Rampal : ಇಬ್ಬರು ಮಕ್ಕಳಿದ್ದರೂ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

Arjun Rampal : ಅರ್ಜುನ್ ರಾಂಪಾಲ್ (Arjun Rampal) ತಮ್ಮ ದೀರ್ಘಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರನ್ನು ಗೋವಾದಲ್ಲಿ ವಿವಾಹವಾದರು. ಬಾರ್ಡೆಜ್ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡರು. . ಇಬ್ಬರು ಮಕ್ಕಳ ಹೆತ್ತವರಾದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

Bigg Boss Kannada 13:  ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್! ಸರ್​ಪ್ರೈಸ್​ ಕೊಟ್ಟ ಕಿಚ್ಚ

ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್!

ಬಿಗ್ಬಾಸ್ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (Bigg Boss Kannada) ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಬಹಿರಂಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6, 2026ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ? ಕೊನೆಗೂ ಸ್ಪಷ್ಟನೆ ಕೊಟ್ಟ ತಂಡ

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ?

Kareena Kapoor: ವೈರಲ್ ಆಗಿರುವ ವಿಡಿಯೋದಲ್ಲಿ ಕರೀನಾ ಕಪೂರ್ ಜಿಮ್ ಉಡುಪಿನಲ್ಲಿ ತಮ್ಮ ಕಾರಿನತ್ತ ಸಾಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿದೆ. ಪಪಾರಾಜಿಗಳು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಕರೀನಾ ‘ಬೇಬಿ ಬಂಪ್’ ರೀತಿಯ ಹೊಟ್ಟೆಯೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Yash: ಕರ್ನಾಟಕದಲ್ಲಿ 10 ಕೋಟಿ ರೂ. ಮೌಲ್ಯದ ʻಟಾಕ್ಸಿಕ್‌ʼ ಟಿಕೆಟ್‌ ಸೇಲ್;‌ ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ʻರಾಕಿ ಭಾಯ್‌ʼ!

ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ಯಶ್‌!

Yash: ʻಟಾಕ್ಸಿಕ್‌ʼ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿ 10 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಬುಧವಾರದ ಮುಂಜಾನೆಯ ಶೋಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಇತ್ತ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿರುವ ಯಶ್, ವರಮಹಾಲಕ್ಷ್ಮಿ ಹಬ್ಬದಂದು ವಿಡಿಯೋ ಕಾಲ್ ಮೂಲಕ ಮಡದಿ ಮತ್ತು ಮಕ್ಕಳಿಗೆ ಶುಭಕೋರಿದ್ದಾರೆ.

Brahmakamala Review: ತಾಯ್ತನದ ತುಡಿತ ಜೊತೆಗೆ ಸಮಾಜದ ಮುಖವಾಡ ಬಿಚ್ಚಿಡುವ ʻಬ್ರಹ್ಮಕಮಲʼ

ಅದ್ವಿತಿ ಶೆಟ್ಟಿ ನಟನೆಯ ʻಬ್ರಹ್ಮಕಮಲʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Brahmakamala Movie Review: ಸಮಾಜದಲ್ಲಿ ಸಂತಾನವಿಲ್ಲದ ಹೆಣ್ಣು ಅನುಭವಿಸುವ ಅಪಮಾನ ಹಾಗೂ ಮಾನಸಿಕ ತೊಳಲಾಟವನ್ನು ಸಸ್ಪೆನ್ಸ್ ಥ್ರಿಲ್ಲರ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ಪ್ರಯೋಗಾತ್ಮಕ ಚಿತ್ರವಿದು. ಅಪೇಕ್ಷಾ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ತಾಯ್ತನದ ಹಂಬಲ ಮತ್ತು ಸಾಮಾಜಿಕ ಒತ್ತಡವನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ.

Sa ri Ga Ma Pa: ಸ್ವರ ಸಂಗ್ರಾಮದ ರಣರಂಗದಲ್ಲಿ ವಿಜೇತ ಪಟ್ಟಕ್ಕಾಗಿ ಲಿಟಲ್ ಚಾಂಪ್ಸ್ ಮಹಾ ಕದನ! ಯಾರಿಗೆ ಕಿರೀಟ?

ಸ್ವರ ಸಂಗ್ರಾಮದ ರಣರಂಗದಲ್ಲಿ ವಿಜೇತ ಪಟ್ಟಕ್ಕಾಗಿ ಲಿಟಲ್ ಚಾಂಪ್ಸ್ ಮಹಾ ಕದನ!

Sa ri Ga Ma Pa: ಸರಿಗಮಪ (Sa re ga Ma Pa)’. ಅದೆಷ್ಟೋ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಸರಿಗಮಪ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಈ ಶೋ ಮೂಲಕ ಗುರುತಿಸಿಕೊಂಡವರು ಈಗ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದಾರೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ (Grand Finale) ನಡೆಯಲಿದೆ.

Folk dancer:  ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ;  ತರಾಟೆಗೆ ತೆಗೆದುಕೊಂಡ ಪತ್ನಿ

ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ !

Eshwar Sai: ಹೋಟೆಲ್‌ನಲ್ಲಿ ಮತ್ತೊಬ್ಬ ಮಹಿಳಾ ಜಾನಪದ ಕಲಾವಿದೆ ಮಾಧುರಿ ರಾಥೋಡ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾಗ ಅವರ ಪತ್ನಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈಶ್ವರ್ ಸಾಯಿ ಅವರ ಪತ್ನಿ ತಮ್ಮ ಮತ್ತು ತಮ್ಮ ಪತಿಯ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಅವರು, ತಮ್ಮ ಪತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Loading...