ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Bigg Boss Kannada 13:  ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

Bigg Boss Kannada 13: ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ. ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off! Video

ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಬಿಗ್ ಬಾಸ್ ಸೀಸನ್‌ಗಳಲ್ಲಿ (Bigg Boss Kannada 13) ಸುದೀಪ್ ಎರಡು ಸೀನ್‌ಗಳನ್ನ ನೆನಪಿಟ್ಟುಕೊಂಡಿದ್ದಾರೆ. ಈ ಎರಡರಲ್ಲಿ ಮೊದಲ ಸೀಸನ್‌ ಇವರಿಗೆ ಯಾವಾಗಲೂ ಇಷ್ಟ ಆಗುವ ಸೀಸನ್ ಆಗಿದೆ. ಸತತ 12 ಸೀಸನ್‌ ನಡೆಸಿಕೊಟ್ಟ ಕೀರ್ತಿ ಕಿಚ್ಚನಿಗೆ ಇದೆ. ಈ ಬಾರಿ ಹಲವು ಸೆಲೆಬ್ರಿಟಿಗಳ ಜೊತೆಗೆ 'ಅಗ್ನಿಪರೀಕ್ಷೆ' ಗೆದ್ದ ಮೂವರು ಜನಸಾಮಾನ್ಯರೂ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ.

Amruthadhaare Serial: ಭೂಮಿ - ಮಲ್ಲಿ ಬಲೆಯ ಸುಳಿವು ಜೇಡಿಗೆ ಸಿಕ್ಕೇ ಬಿಡ್ತು! ಮಧುರಾ ಕಥೆ ಏನು?

ಭೂಮಿ - ಮಲ್ಲಿ ಬಲೆಯ ಸುಳಿವು ಜೇಡಿಗೆ ಸಿಕ್ಕೇ ಬಿಡ್ತು!

Amruthadhaare Serial:ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿರೋದು ಗೊತ್ತೇ ಇದೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಳು. ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ ಹೂಡಿದ ಹನಿಟ್ರ್ಯಾಪ್ ಈಗ ಫೇಲ್‌ ಆಗಿದೆ. ಪೊಲೀಸ್ ಅಧಿಕಾರಿ ಮಧುರಾಳ ನಿಜಬಣ್ಣ ಜೈದೇವ್‌ಗೆ ತಿಳಿದುಹೋಗಿದೆ.

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಮುಂಬರುವ ಚಿತ್ರ 'ಮೈಸಾ' (Mysa Movie) ಚಿತ್ರೀಕರಣದ ಸಮಯದಲ್ಲಿ ಸೊಂಟದ ಗಾಯಕ್ಕೆ ಒಳಗಾದ ನಂತರ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡರು . ತಮ್ಮ ಗಾಯದ ಬಗ್ಗೆ ಮಾತನಾಡಿದ ಸುಮಾರು ಒಂದು ತಿಂಗಳ ನಂತರ, ರಶ್ಮಿಕಾ ಶೀಘ್ರದಲ್ಲೇ ಮತ್ತೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

Bigg Boss Kannada 13: ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್​ ಗೌಡ (vinay Gowda) ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇದೀಗ ಈ ಬಗ್ಗೆ ಸುದೀಪ್​ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ಉತ್ತರ ಕೊಟ್ಟಿದ್ದು ಹೀಗೆ.

Korean Kanakaraju OTT: ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

Korean Kanakaraju OTT: ಹಾರರ್ (Horror) ಮತ್ತು ಹಾಸ್ಯ ಅಂಶಗಳನ್ನು ಸಂಯೋಜಿಸಿರುವ ಈ ಚಿತ್ರವು ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆಯಿತು. ಥಿಯೇಟ್ರಿಕಲ್ ರನ್ ಪೂರ್ಣಗೊಂಡ ನಂತರ, ಇದು ಈಗ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹಾಗಾದರೆ, ವರುಣ್ ತೇಜ್ ಅವರ ಚಿತ್ರ ಯಾವಾಗ ಮತ್ತು ಎಲ್ಲಿ ಸ್ಟ್ರೀಮಿಂಗ್ ಆಗಲಿದೆ ?

Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಲು ವಾರವಷ್ಟೆ ಬಾಕಿ ಇದೆ. ಕಿಚ್ಚ ಸುದೀಪ್ ಮತ್ತು ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಈ ಸೀಸನ್​​ನ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ ಕುರಿತಾಗಿ ಒಂದು ಪ್ರಶ್ನೆ ಬಂದಿದೆ. ಸುದೀಪ್‌ ಕೂಡ ಖಡಕ್‌ ಉತ್ತರ ನೀಡಿದ್ದಾರೆ.

kiccha sudeep: ತಾಯಿಯ ಸ್ಮರಣಾರ್ಥ ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ  ಬೆಳಕಾದ ಕಿಚ್ಚ ಸುದೀಪ್

ತಾಯಿಯ ಸ್ಮರಣಾರ್ಥ ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಬೆಳಕಾದ ಕಿಚ್ಚ ಸುದೀಪ್

kiccha sudeep: ಕಿಚ್ಚ ಸುದೀಪ್ (Sudeep) ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಪ್ರೀತಿಯ ತಾಯಿ ಸರೋಜಾ ಸಂಜೀವ್ (Saroja Sanjeeva) ಅವರ ಸ್ಮರಣಾರ್ಥವಾಗಿ ಸುದೀಪ್ ಇದೀಗ ಅತ್ಯಂತ ಶ್ಲಾಘನೀಯ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ವಿತರಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಶಾಶ್ವತ ಆಸರೆಯಾಗಿದ್ದಾರೆ.

ಅದ್ಧೂರಿಯಾಗಿ ನೆರವೇರಿದ ಚಿಕ್ಕಣ್ಣ- ಪಾವನ ವಿವಾಹ; ತಾಳಿ ಕಟ್ಟುವ ವೇಳೆ ವಧು ಭಾವುಕ

ಅದ್ಧೂರಿಯಾಗಿ ನೆರವೇರಿದ ಚಿಕ್ಕಣ್ಣ- ಪಾವನ ವಿವಾಹ

Chikkanna and Pavana's wedding: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಹಾಗೂ ಪಾವನಾ ಅವರೊಂದಿಗೆ ಇಂದು ವಿವಾಹವಾಗಿದ್ದಾರೆ. ಮೈಸೂರಿನ ಪ್ರಸಿದ್ಧ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆ ನಡೆದಿದೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

Toxic box office collection:  ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಏನು?

Toxic box office collection: ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಏನು?

Toxic box office collection: 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ತನ್ನ ಮೊದಲ ಶನಿವಾರದಂದು ಗಣನೀಯ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ ಪ್ರವೇಶಿಸಿದೆ. ಭಾರತದಲ್ಲಿ 101.10 ಕೋಟಿ ರೂ. ನಿವ್ವಳ ಗಳಿಸಿದ ನಂತರ, ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು 2 ನೇ ದಿನದಂದು 37.65 ಕೋಟಿ ರೂ. ಮತ್ತು 3 ನೇ ದಿನದಂದು 27.20 ಕೋಟಿ ರೂ. ಗಳಿಸಿ, ಭಾರತದ ನಿವ್ವಳ ಸಂಗ್ರಹವನ್ನು 165.95 ಕೋಟಿ ರೂ.ಗೆ ಹೆಚ್ಚಿಸಿದೆ.

DC OTT release date out: ಥಿಯೇಟರ್‌ನಲ್ಲಿ 100 ಕೋಟಿ ಗಳಿಸಿದ 'DC' ಈ ಒಟಿಟಿಗೆ ಎಂಟ್ರಿ!

ಥಿಯೇಟರ್‌ನಲ್ಲಿ 100 ಕೋಟಿ ಗಳಿಸಿದ 'DC' ಈ ಒಟಿಟಿಗೆ ಎಂಟ್ರಿ!

DC OTT release date out: ಡಿಸಿ ಸಿನಿಮಾ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆರಂಭದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇರದಿದ್ದರೂ, ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ವಾಮಿಕಾ ಗಬ್ಬಿ ಮತ್ತು ಲೋಕೇಶ್ ಕನಕರಾಜ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ಡಿಸಿ (DC) ಶೀಘ್ರದಲ್ಲೇ ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ.

Batwara 1947: ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ : ನಟಿ ಶಬಾನಾ

ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ : ನಟಿ ಶಬಾನಾ

Batwara 1947: ಸನ್ನಿ ಡಿಯೋಲ್ ಅಭಿನಯದ ಬಟ್ವಾರಾ (Batwara 1947) 1947 ಆ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು, ಆದರೆ ಆ ಚಿತ್ರವನ್ನು ಪ್ರೇಕ್ಷಕರು ಪೂರ್ಣ ಹೃದಯದಿಂದ ಸ್ವೀಕರಿಸಲಿಲ್ಲ, ಅದರ ಬಾಕ್ಸ್ ಆಫೀಸ್ ಪ್ರದರ್ಶನವು ಇದಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ, ಶಬಾನಾ ಅಜ್ಮಿ ( Shabana Azmi ) ಚಿತ್ರದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಪ್ರೇಕ್ಷಕರು ಸನ್ನಿ ಡಿಯೋಲ್ (Sunny Deol) ಅವರನ್ನು ಮುಸ್ಲಿಂ ಪಾತ್ರದಲ್ಲಿ ಸ್ವೀಕರಿಸಲು ಸಾಧ್ಯವಾಗದಿರುವುದೇ ಚಿತ್ರದ ಸೋಲಿಗೆ ಪ್ರಮುಖ ಕಾರಣವಿರಬಹುದು ಎಂದು ಶಬಾನಾ ಹೇಳಿದ್ದಾರೆ.

Emraan Hashmi : ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ; ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಪೋಸ್ಟ್‌ಪೋನ್‌

ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

Emraan Hashmi: 'ಅವರಪನ್ 2' ಚಿತ್ರದ ಯಶಸ್ಸನ್ನು ಆನಂದಿಸುತ್ತಿರುವ ನಟ, ಹಲವಾರು ದಿನಗಳಿಂದ ಅಸ್ವಸ್ಥರಾಗಿದ್ದ ನಂತರ ಪರೀಕ್ಷೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ, ಅವರ ಫಲಿತಾಂಶಗಳು ಪಾಸಿಟಿವ್ (Positive) ಆಗಿವೆ. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಮೂಲಭೂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ನಟ ಇತ್ತೀಚೆಗೆ ತಮ್ಮ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪ್ರದರ್ಶನಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದರು, ಆದರೆ ಕಾರ್ಯಕ್ರಮವನ್ನು ಮರು ನಿಗದಿಪಡಿಸಲಾಗುವುದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ನಟ ರವಿಚಂದ್ರನ್‌ಗೆ ವಿಧಾನ ಪರಿಷತ್ ಸ್ಥಾನ? ಸಿಎಂ ಡಿ.ಕೆ. ಶಿವಕುಮಾರ್‌ ಶಿಫಾರಸು?

ರವಿಚಂದ್ರನ್ ರಾಜಕೀಯಕ್ಕೆ ಎಂಟ್ರಿ?

V. Ravichandran: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ರವಿಚಂದ್ರನ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಥವಾ ಸಿಎಂ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ರವಿಚಂದ್ರನ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆತ್ಮೀಯ ಸ್ನೇಹ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

Rishab Shetty: ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ʼಟಾಕ್ಸಿಕ್‌ʼ ಬಗ್ಗೆ ರಿಷಬ್‌ ಶೆಟ್ಟಿ ಮೆಚ್ಚುಗೆಯ ಪೋಸ್ಟ್‌

ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ರಿಷಬ್‌ ಶೆಟ್ಟಿ

Rishab Shetty:`ಟಾಕ್ಸಿಕ್’ (Toxic Movie) ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಉಪೇಂದ್ರ (Upendra) ಕೂಡ ಟ್ವೀಟ್‌ ಮಾಡಿದ್ದರು. ಇದೀಗ ರಿಷಬ್‌ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ. .ಕನ್ನಡ ಸಿನಿಮಾವನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುವ ನಿಮ್ಮ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.

ಮೂರು ದಿನಗಳ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ; ನಟಿ ಸೋನಾಲ್ ಮೊಂಥೆರೊ ರಿಂದ ಉದ್ಘಾಟನೆ

ಬೆಂಗಳೂರಿನಲ್ಲಿ ‘ದಿ ಜ್ಯುವೆಲರಿ ಶೋ’ಗೆ ಅದ್ದೂರಿ ಚಾಲನೆ

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ವಿವಿಧ ನಗರಗಳ ಪ್ರಮುಖ ಜ್ಯುವೆಲರ್‌ಗಳು ಹಾಗೂ ವಿನ್ಯಾಸಗಳನ್ನು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಪರಿಚಯಿಸುವ ವೇದಿಕೆ ಯಾಗಿದ್ದು, ಹಬ್ಬ ಮತ್ತು ಮದುವೆ ಋತುವಿನ ಖರೀದಿಗೆ ವಿಶೇಷ ಆಕರ್ಷಣೆಯಾಗಿದೆ. ಶೋ ಆ.29ರಿಂದ 31ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ನಡೆಯಲಿದ್ದು, ಆಭರಣ ಪ್ರಿಯರಿಗೆ ವೈವಿಧ್ಯಮಯ ವಿನ್ಯಾಸಗಳನ್ನು ವೀಕ್ಷಿಸಿ ಖರೀದಿಸಲು ಅವಕಾಶ ಕಲ್ಪಿಸಿದೆ.

Bigg Boss Kannada 13: ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

Bigg Boss Kannada 13: ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಅಗ್ನಿಪರೀಕ್ಷೆಗೆ ಒಳಗಾದವರು ಲಾವಣ್ಯ ಕುಮಾರಿ (Lavanya Kumari). ಏಕಾಏಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕುಮಾರಿ ಕಾಣ್ತಿಲ್ಲ ಅಂತ ವೀಕ್ಷಕರು ಕಮೆಂಟ್‌ ಕೂಡ ಮಾಡಿದ್ದರು. ಇದೀಗ ಉತ್ತರ ಸಿಕ್ಕಿದೆ.

Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ

ಯಶ್ ಅದ್ಭುತ ಕಲಾವಿದ; ಆ್ಯಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಮೆಚ್ಚುಗೆ

Actor Yash: ಆಕ್ಷನ್‌ ದೃಶ್ಯಗಳು (Action Sequance) ವಿಶೇಷ ಪ್ರಶಂಸೆಯನ್ನು ಗಳಿಸಿದೆ. ಸಾಹಸ ನೃತ್ಯ ಸಂಯೋಜಕ ಜೆಜೆ ಪೆರ್ರಿ (JJ Perry) ಈಗ ಈ ಸನ್ನಿವೇಶವು ಹೇಗೆ ಇದ್ದಿತ್ತು? ಜೊತೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ .

Actor Vinayakan: ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್; ಡಿವೋರ್ಸ್​ಗೆ ನಾನೇ ಕಾರಣ ಎಂದಿದ್ದೇಕೆ?

ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್!

Actor Vinayakan: ಖ್ಯಾತ ನಟ ವಿನಾಯಕನ್ ತಮ್ಮ 40 ವರ್ಷಗಳ ದೀರ್ಘ ವೈವಾಹಿಕ ಜೀವನ ಅಂತ್ಯಗೊಂಡಿದೆ. ಮಹಾರಾಜ ಕಾಲೇಜಿನಲ್ಲಿ 19 ನೇ ವಯಸ್ಸಿನಲ್ಲಿ ಪ್ರಾರಂಭವಾದ ಪ್ರೀತಿ ಮತ್ತು 40 ವರ್ಷಗಳ ಸುದೀರ್ಘ ದಾಂಪತ್ಯದ ಮುರಿದುಬಿದ್ದ ನಂತರ ವಿನಾಯಕನ್ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಪತ್ನಿ ಬಬಿತಾ ಅವರಿಂದ ಬೇರ್ಪಡಲು ಸಂಪೂರ್ಣ ಕಾರಣವನ್ನು ವಿವರಿಸಿದರು. ವಿನಾಯಕನ್ ಪ್ರಕಾರ, ಈ ವಿಚ್ಛೇದನದಲ್ಲಿ (Divorce) ಅವರ ಪತ್ನಿಯ ತಪ್ಪಿಲ್ಲ, ಆದರೆ ಅವರ ಸ್ವಭಾವ ಮಾತ್ರ ಕಾರಣವಾಗಿತ್ತು ಎಂದಿದ್ದರು.

Bigg Boss Kannada 13:  ‘ಕ್ಯಾಮರಾ ಆಫ್ ಮಾಡಿ’  ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

‘ಕ್ಯಾಮರಾ ಆಫ್ ಮಾಡಿ’ ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

Bigg Boss Kannada 13: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ನಡೆಯುತ್ತಿದೆ. ಅಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ಪೂರ್ಣಿಮಾ ‘ಅಗ್ನಿಪರೀಕ್ಷೆ’ ವೇದಿಕೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣಿಮಾ ಆಡಿರುವ ಮಾತುಗಳಿಗೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಅಸಮಾಧಾನಗೊಂಡಿದ್ದಾರೆ. ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Sahaa Movie: ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ  ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ;  ನಟಿಯ ನೇರ ಸವಾಲು!

ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ತಲೆ ಬೋಳಿಸಿಕೊಳ್ಳುತ್ತೇನೆ; ನಟಿಯ ನೇರ ಸವಾಲು

swetha lakshman: ಸಹಾ ತಂಡವು ಚಿತ್ರದ ಬಗ್ಗೆ ಬಲವಾದ ಮತ್ತು ಅತಿರೇಕದ ಹೇಳಿಕೆಗಳನ್ನು ನೀಡುತ್ತಿದೆ, ಮತ್ತು ಈಗ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ (swetha lakshman) ಸಿನಿಮಾ ನಿರಾಸೆ ಮೂಡಿಸಿದರೆ ಅಮೀರ್‌ಪೇಟೆ ರಸ್ತೆಯಲ್ಲಿ ತಲೆಬೋಳಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.

Nandagokula Serial : ‘ನಂದಗೋಕುಲ’ ಸೀರಿಯಲ್‌ಗೆ ಕೇಶವ ವಿದಾಯ; ಭಾವುಕ ಪೋಸ್ಟ್‌

‘ನಂದಗೋಕುಲ’ ಸೀರಿಯಲ್‌ಗೆ ಕೇಶವ ವಿದಾಯ; ಭಾವುಕ ಪೋಸ್ಟ್‌

Nandagokula Serial : ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೀರಿಯಲ್‌ನಿಂದ ಆಚೆ ಬಂದಿದ್ದಾರೆ. ಕೇಶವ ಪಾತ್ರಕ್ಕೆ ವಿದಾಯ: ‘ನನ್ನ ಪಯಣದ ಒಂದು ವಿಶೇಷ ಅಧ್ಯಾಯ ಮುಗಿಯುತ್ತಿದೆ. ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ‘ಕೇಶವ’ ಪಾತ್ರ ಹಾಗೂ ‘ನಂದಗೋಕುಲ ಧಾರಾವಾಹಿಯೊಂದಿಗಿನ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.

Karavali Movie OTT: ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

karavali Movie OTT: ​ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

Shiva Rajkumar:  ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

Shiva Rajkumar: ಡಾ. ಶಿವರಾಜ್‌ಕುಮಾರ್ (Shivarajkumar) ನಟನೆಯ ಬಹುನಿರೀಕ್ಷಿತ ‘ಬೇಲ್’ ಚಿತ್ರದ (Bail Movie) ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವಣ್ಣ ಎಂದಿನ ತಮ್ಮ ಖಡಕ್ ಶೈಲಿಯ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

Loading...