ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಸಂಗೀತ ನಿರ್ದೇಶಕ ಗುರು ಕಿರಣ್‌ಗೆ ಮಾತೃ ವಿಯೋಗ; ಭಾವುಕ ಪೋಸ್ಟ್‌ ಹಂಚಿಕೊಂಡ ವೈರಲ್‌

ಸಂಗೀತ ನಿರ್ದೇಶಕ ಗುರು ಕಿರಣ್‌ಗೆ ಮಾತೃ ವಿಯೋಗ

Guru Kiran's mother passes away: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್ ಎ. ರತ್ನಕಾಂತಿ ಶೆಟ್ಟಿ ಅವರ ತಾಯಿ ನಿನ್ನೆ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಕಂಗಾಲಾಗಿರುವ ಗುರು ಕಿರಣ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಭಾವುಕರಾಗಿದ್ದಾರೆ. “ತುಂಬಿದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ನಿಧನದ ಹೃದಯವಿದ್ರಾವಕ ಸುದ್ದಿಯನ್ನ ಹಂಚಿಕೊಳ್ಳುತ್ತಿದ್ದೇನೆ.

Suriya: ನಟ ಸೂರ್ಯ ಅವರ ವಿಶ್ವನಾಥ್ ಆಂಡ್ ಸನ್ಸ್ ಟ್ರೈಲರ್ ರಿಲೀಸ್

ನಟ ಸೂರ್ಯ ಅವರ ವಿಶ್ವನಾಥ್ ಆಂಡ್ ಸನ್ಸ್ ಟ್ರೈಲರ್ ರಿಲೀಸ್

Suriya: ನಟ ಸೂರ್ಯ ಈಗ 'ವಿಶ್ವನಾಥ್ ಆಂಡ್ ಸನ್ಸ್' ಎಂಬ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರವು ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿಗಳಿಗೆ ಸೂರ್ಯ ಮತ್ತು ಮಮಿತಾ (Mamitha) ಬೈಜು ಅವರ ಪಾತ್ರಗಳ ನಡುವಿನ ವಯಸ್ಸಿನ ಅಂತರದ ಪ್ರಣಯವನ್ನು ಒಳಗೊಂಡಿರುವ ಚಿತ್ರದ ಪ್ರಪಂಚದ ಬಗ್ಗೆ ಒಂದು ಸಣ್ಣ ಝಲಕ್‌ ನೀಡಿದೆ.

Mahesh Babu: ಮಹೇಶ್‌ ಬಾಬು ಬರ್ತ್‌ಡೇ; 'ವಾರಣಾಸಿ'ಯಿಂದ ಬಂತು ಬಿಗ್‌ ಸರ್‌ಪ್ರೈಸ್‌

ಮಹೇಶ್‌ ಬಾಬು ಬರ್ತ್‌ಡೇ; 'ವಾರಣಾಸಿ'ಯಿಂದ ಬಂತು ಬಿಗ್‌ ಸರ್‌ಪ್ರೈಸ್‌

Mahesh Babu: ಆಗಸ್ಟ್ 9 ರಂದು ಮಹೇಶ್ ಬಾಬು ಅವರ ಹುಟ್ಟುಹಬ್ಬ (Mahesh Babu Birthday) ಬರುತ್ತಿದ್ದಂತೆ, ತೆಲುಗು ರಾಜ್ಯಗಳಲ್ಲಿ ಹಾಗೂ ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಕಳೆದ ವಾರದಿಂದಲೇ ಅಭಿಮಾನಿಗಳು ಮಹೇಶ್ ಅವರ ಹುಟ್ಟುಹಬ್ಬದ ಆಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ವಿಶೇಷ ದಿನದಂದು ವಾರಣಾಸಿ ತಂಡ ಮಹೇಶ್‌ ಬಾಬು ಲುಕ್‌ ಅನಾವರಣಗೊಳಿಸಿದೆ.

Kannada New Movie:  ‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ

‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ

Kannada New Movie: ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ (ಆಗಸ್ಟ್ 5) ಅಂಗವಾಗಿ, ಅವರು ನಟಿಸಿ, ನಿರ್ದೇಶಿಸಿದ್ದ ‘ಬೆಂಟ್ಲಿ’ ಸಿನಿಮಾದ ಅಧಿಕೃತ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅಕಾಲಿಕ ಮರಣ ಹೊಂದಿದ್ದ ಸಂತೋಷ್ ಅವರ ಅಗಲಿಕೆ ಚಂದನವನಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಸಿನಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶ್ವೇತಾ ಬಾಲರಾಜು ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ಬಾಲರಾಜು ಅವರೊಂದಿಗೆ ಸಿಮ್ರಾನ್ ನಾಟೇಕರ್, ಶ್ರುತಿ, ಚರಣ್‌ರಾಜ್, ರಾಜಾ ಬಲವಾಡಿ ಮುಂತಾದವರು ನಟಿಸಿದ್ದಾರೆ.

Actor Yash: ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್‌ ಬಗ್ಗೆ ಹೇಳಿದ್ದೇನು?

ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್‌ ಬಗ್ಗೆ ಹೇಳಿದ್ದೇನು?

Actor Yash: ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಯನತಾರಾ (Nayanathara) ಸೇರಿದಂತೆ ಚಿತ್ರದ ತಾರಾಗಣ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಈ ಈವೆಂಟ್‌ಗೆ ಭಾಗಿಯಾಗಿದರ ಬಗ್ಗೆ ಮಾತನಾಡಿದ್ದಾರೆ.

ಡಾ. ವಿದ್ಯಾಭೂಷಣ್ - ಮೇಧಾ ಅವರ 'ಭಜ ಮನ' ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ

ಡಾ. ವಿದ್ಯಾಭೂಷಣ್‌ರ 'ಭಜ ಮನ' ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ

Bhaja Mana Pre-concert Workshop: ಬೆಂಗಳೂರಿನಲ್ಲಿ 'ಪರಮ್ ಕಲ್ಚರ್' ಸಂಸ್ಥೆಯು 'ಹರಿವಂಶ ಗ್ರೂಪ್' ಮತ್ತು ಜಯನಗರದ 'ಯುವಕ ಸಂಘ'ದ ಸಹಯೋಗದಲ್ಲಿ ಆಯೋಜಿಸಿದ್ದ 'ಭಜ ಮನ' ಎಂಬ ಎರಡು ದಿನಗಳ ವಿಶೇಷ ಪೂರ್ವ-ಕಛೇರಿ ಗಾಯನ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

Toxic movie Trailer: ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

Toxic movie Trailer: ಯಶ್‌ ಮೊದಲ ಬಾರಿಗೆ ಸಿನಿಮಾ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಅಭಿಮಾನಿಗಳು, ಚಿತ್ರತಂಡ ಹಾಗೂ ಸಿನಿಮಾದ ಉದ್ದೇಶದ ಬಗ್ಗೆ ಹಲವು ಕುತೂಹಲಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.ಕರ್ನಾಟಕ ಜನತೆ ಕೊಟ್ಟಿರುವ ಶಕ್ತಿ, ಜವಬ್ಧಾರಿ. ಪ್ರತಿ ಸಿನಿಮಾದಲ್ಲೂ ಹಿಟ್‌ ಮಾಡುವಾಗ, ಕೆಲಸ ಮಾಡು ಅಂತ ನೆನಪಿಸುತ್ತೆ. ಕೆಲಸ ಮಾಡುತ್ತ ಮುಂದೆ ಹೆಜ್ಜೆ ಇಟ್ಟಿದ್ದೀನಿ. ಇನ್ನೂ ಮಂದೆ ಹೋಗಲು ನಿಮ್ಮ ಆಶೀರ್ವಾದ ಇರಲಿ ಎಂದರು.

Toxic Trailer: 'ಟಾಕ್ಸಿಕ್‌' ಟ್ರೈಲರ್‌ ಔಟ್‌ ಆಗುತ್ತಿದ್ದಂತೆ ಈ ಒಂದು ಸೀನ್‌ ಬಗ್ಗೆ ಶುರುವಾಯ್ತು ಚರ್ಚೆ!

ಟ್ರೈಲರ್‌ ಔಟ್‌ ಆಗುತ್ತಿದ್ದಂತೆ ಈ ಒಂದು ಸೀನ್‌ ಬಗ್ಗೆ ಶುರುವಾಯ್ತು ಚರ್ಚೆ!

Toxic Trailer: ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಹಿಳೆಯರು ಯಶ್‌ ಪಾತ್ರಕ್ಕಾಗಿ ಪರಸ್ಪರ ಪೈಪೋಟಿ ನಡೆಸುವ ದೃಶ್ಯಗಳೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿವೆ. ಜೊತೆಗೆ ಯಶ್‌ ಅವರ ಬೋಲ್ಡ್‌ ಲುಕ್‌ ಕೂಡ ಗಮನ ಸೆಳೆಯುತ್ತದೆ. ಇಡೀ ಟ್ರೇಲರ್‌ನಲ್ಲಿ ಆ್ಯಕ್ಷನ್‌, ಹಿಂಸೆ, ರಕ್ತಪಾತ ಮತ್ತು ಯಶ್‌ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಲ್ಲೂ ಯಶ್‌ ಬೆತ್ತಲಾಗಿರೋ ದೃಶ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'! ʼಟಾಕ್ಸಿಕ್‌ʼ ಟ್ರೈಲರ್‌ ಕಂಡು ದಂಗಾದ್ರು ಫ್ಯಾನ್ಸ್‌

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'!

Toxic Tailer Release: ಟಾಕ್ಸಿಕ್' (Toxic) ಚಿತ್ರದ ಟ್ರೈಲರ್ (Trailer Out) ಇಂದು (ಆಗಸ್ಟ್ 8) ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಚಿತ್ರದ ಟ್ರೈಲರ್‌ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವು 2026ರ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಇದೀಗ ಟಾಕ್ಸಿಕ್‌ ಟ್ರೈಲರ್‌ ಔಟ್‌ ಆಗಿದೆ.

ʻಟಾಕ್ಸಿಕ್‌ʼ ಟ್ರೈಲರ್‌ ರಿಲೀಸ್‌ಗೆ ಕ್ಷಣಗಣನೆ; ಹೊಸ ಪೋಸ್ಟರ್ ಮೂಲಕ ಟೈಮಿಂಗ್ಸ್ ಅನೌನ್ಸ್ ಮಾಡಿದ ಯಶ್

ʻಟಾಕ್ಸಿಕ್‌ʼ ಟ್ರೈಲರ್‌ ರಿಲೀಸ್: ಟೈಮ್ ರಿವೀಲ್ ಮಾಡಿದ ಯಶ್

Toxic Trailer: ಇತ್ತೀಚೆಗಷ್ಟೇ ಯಶ್‌ ನಟನೆಯ ಬಾಲಿವುಡ್‌ನ 'ರಾಮಾಯಣ' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಇದರ ಬೆನ್ನಲ್ಲೇ 'ಟಾಕ್ಸಿಕ್' ಟ್ರೈಲರ್‌ನ ಅಧಿಕೃತ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಯಶ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಟ್ರೈಲರ್ ರಿಲೀಸ್ ಟೈಮಿಂಗ್ಸ್ ಅನೌನ್ಸ್ ಮಾಡಿದ್ದಾರೆ.

Toxic Trailer:  ʻಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ ಇವೆಂಟ್‌! ಶಿವಣ್ಣ ಮುಖ್ಯ ಅತಿಥಿ

`ಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ ಇವೆಂಟ್‌! ಶಿವಣ್ಣ ಮುಖ್ಯ ಅತಿಥಿ

Toxic Trailer: ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಕನ್ನಡದ ನಟಿ ರುಕ್ಮಿಣಿ ವಸಂತ್ ಅವರುಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಸಂಜೆಯ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟಿಯರು ಮಾತ್ರವೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಹಲವಾರು ಖ್ಯಾತನಾಮರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದಿನ ಟ್ರೇಲರ್‌ ಲಾಂಚ್‌ ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್.

Bharat Bhhagya Viddhaata OTT: 'ಭಾರತ್ ಭಾಗ್ಯ ವಿಧಾತ' ಚಿತ್ರ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

'ಭಾರತ್ ಭಾಗ್ಯ ವಿಧಾತ' ಚಿತ್ರ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bharat Bhhagya Viddhaata OTT: ಕಂಗನಾ ರಣಾವತ್‌ (Kangana Ranavat) ಅಭಿನಯದ ಭಾರತ್ ಭಾಗ್ಯ ವಿಧಾತ ಚಿತ್ರ ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಉತ್ತಮ ವಿಮರ್ಶೆಗಳನ್ನು ಗಳಿಸಿತು ಆದರೆ ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಛಾಪು ಮೂಡಿಸಲಿಲ್ಲ. 26/11 ಭಯೋತ್ಪಾದಕ ದಾಳಿಯ ಘಟನೆಗಳನ್ನು ಆಧರಿಸಿದ ಈ ಚಿತ್ರವು ಶೀಘ್ರದಲ್ಲೇ ಒಟಿಟಿಗೆ ಬರುತ್ತಿದೆ.

Rakesh adiga:  ರಾಕೇಶ್‌ ಅಡಿಗ ಮದುವೆ ಫಿಕ್ಸ್‌! ಭಾವಿ ಪತ್ನಿ ಬಗ್ಗೆ ಹೇಳಿದ್ದೇನು?

ರಾಕೇಶ್‌ ಅಡಿಗ ಮದುವೆ ಫಿಕ್ಸ್‌! ಭಾವಿ ಪತ್ನಿ ಬಗ್ಗೆ ಹೇಳಿದ್ದೇನು?

Rakesh adiga: ಬಿಗ್ ಬಾಸ್’ (Bigg Boss Kannada) ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಳಸಂಗಾತಿಯ ಬಗ್ಗೆ ಸ್ವತಃ ರಾಕೇಶ್‌ ಅವರೇ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Ramayana: ದೀಪಾವಳಿಗೂ ಎರಡು ದಿನ ಮುನ್ನ ರಾಮಾಯಣ ತೆರೆಗೆ! ನಮಿತ್ ಮಲ್ಹೋತ್ರಾ ಕೊಟ್ಟ ಕಾರಣ ಇದು

ದೀಪಾವಳಿಗೂ ಎರಡು ದಿನ ಮುನ್ನ ರಾಮಾಯಣ ತೆರೆಗೆ!

Ramayana: ಈ ವಾರದ ಆರಂಭದಲ್ಲಿ ನಿತೇಶ್ ತಿವಾರಿ ಅವರ ರಾಮಾಯಣದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಯಿತು. ಮೊದಲ ಬಾರಿಗೆ ಇಂಗ್ಲಿಷ್-ಡಬ್ ಮಾಡಲಾದ ಟ್ರೇಲರ್ ಚಿತ್ರದ ನಿಖರವಾದ ಬಿಡುಗಡೆ ದಿನಾಂಕವನ್ನು ಘೋಷಿಸಿತು. ರಾಮಾಯಣ ಮೊದಲ ಭಾಗವು ನವೆಂಬರ್ 6, 2026ರಂದು ಬಿಡುಗಡೆಯಾಗಲಿದ್ದು, ಇದರ ಎರಡನೇ ಭಾಗವು 2027ರ ದೀಪಾವಳಿ (Deepavali) ಆಸುಪಾಸಿನಲ್ಲಿ ತೆರೆಗೆಪ್ಪಳಿಸುವ ನಿರೀಕ್ಷೆಯಿದೆ. ಯಶ್ ಅಭಿನಯದ ಚಿತ್ರವು ಜಾಗತಿಕವಾಗಿ ಬಿಡುಗಡೆಯಾದ ಎರಡು ದಿನಗಳ ನಂತರ ಭಾರತದಲ್ಲಿ ಬಿಡುಗಡೆಯಾಗಲಿದೆ.

Ravi Mohan: ಮತ್ತೆ ಸೋಷಿಯಲ್‌ ಮೀಡಿಯಾಗೆ ಕಮ್‌ ಬ್ಯಾಕ್‌ ಆದ ಕೆನೀಶಾ ಫ್ರಾನ್ಸಿಸ್!

ಮತ್ತೆ ಸೋಷಿಯಲ್‌ ಮೀಡಿಯಾಗೆ ಕಮ್‌ ಬ್ಯಾಕ್‌ ಆದ ಕೆನೀಶಾ ಫ್ರಾನ್ಸಿಸ್!

Ravi Mohan: ನಟ ರವಿ ಮೋಹನ್ (Ravi Mohan) ಅವರ ತಮ್ಮ ಪತ್ನಿ ಆರತಿ ರವಿ ಅವರೊಂದಿಗಿನ ವಿವಾದಾತ್ಮಕ ವಿಚ್ಛೇದನದ ಬಗ್ಗೆ ಆಗಾಗ್ಗೆ ಸುದ್ದಿಗಳು ಬರುತ್ತವೆ, ಹಾಗೆಯೇ ವೈದ್ಯ-ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧವೂ ಸಹ ಸುದ್ದಿಯಲ್ಲಿ ಇರುತ್ತದೆ. ಸುಮಾರು ಮೂರು ತಿಂಗಳ ನಂತರ, ಚೆನ್ನೈ ಮತ್ತು ಸಾಮಾಜಿಕ ಮಾಧ್ಯಮವನ್ನು ತೊರೆದ ನಂತರ, ಗಾಯಕಿ ಎರಡು ಪೋಸ್ಟ್‌ಗಳೊಂದಿಗೆ ಮತ್ತೆ ಕಮ್‌ ಬ್ಯಾಕ್‌ ಅಗಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ! ಆದ್ರೂ ವೀಕ್ಷಕರಿಗೆ ಇದೊಂದೇ ಬೇಸರ

ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ!

Bigg Boss Kannada 13: ಬಿಗ್‌ ಬಾಸ್‌ ಅಗ್ನಿಪರೀಕ್ಷೆʼ (Bigg Boss agnipariskshe) ಎಂಬ ವಿಶೇಷ ಸೆಲೆಕ್ಷನ್‌ ಪ್ರಕ್ರಿಯೆ ಇದೆ. ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್‌ ಗೌಡ ಚಂದನ್‌ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪ್ರೋಮೋ ಔಟ್‌ ಆಗಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.

Krithi Bangera: ಬದುಕಿಗೆ ವಿದಾಯ ಹೇಳಿದ ಉಡುಪಿಯ ಖ್ಯಾತ ಮಾಡೆಲ್

ಬದುಕಿಗೆ ವಿದಾಯ ಹೇಳಿದ ಉಡುಪಿಯ ಖ್ಯಾತ ಮಾಡೆಲ್

Krithi Bangera: 27 ವರ್ಷದ ಯುವ ಪ್ರತಿಭೆ ಕೃತಿ ಬಂಗೇರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮಾಡಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸ್ಟಾರ್‌ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಆನಂದ ನಿಲಯʼ; ಮುಖ್ಯಪಾತ್ರದಲ್ಲಿ  'ಆಕಾಶದೀಪ' ಖ್ಯಾತಿಯ ನಟಿ ದಿವ್ಯ ಶ್ರೀಧರ್

ʻಆನಂದ ನಿಲಯʼ ಸೀರಿಯಲ್‌ ಮೂಲಕ ʻಆಕಾಶದೀಪʼ ನಟಿ ದಿವ್ಯ ಶ್ರೀಧರ್ ಕಂಬ್ಯಾಕ್!

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ 'ಆನಂದ ನಿಲಯ' ಎಂಬ ನೂತನ ಕೌಟುಂಬಿಕ ಧಾರಾವಾಹಿ ಪ್ರಸಾರವಾಗಲಿದೆ. 'ಆಕಾಶದೀಪ' ಖ್ಯಾತಿಯ ದಿವ್ಯ ಶ್ರೀಧರ್ ಹಾಗೂ ಹಿರಿಯ ನಟ ರಾಕೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಧಾರಾವಾಹಿಯನ್ನು ಆದರ್ಶ್ ಹೆಗಡೆ ನಿರ್ದೇಶಿಸಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲೂ ವೀಕ್ಷಿಸಬಹುದು.

ಬೆಂಗಳೂರಿನಲ್ಲಿ ʻಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ಗೆ ಕ್ಷಣಗಣನೆ; ತಾಯ್ನಾಡಿನಿಂದಲೇ ದೊಡ್ಡ ಸಿಗ್ನಲ್‌ ಕೊಡ್ತಿದ್ದಾರೆ ಯಶ್‌!

ಬೆಂಗಳೂರಿಗೆ ಬರ್ತಿದೆ Toxic ಟೀಮ್;‌ ಯಶ್‌ ಹವಾ ನೋಡಲು ಫ್ಯಾನ್ಸ್‌ ರೆಡಿ!

'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರೀಕರಣ ಆರಂಭವಾಗಿ ಭರ್ತಿ 2 ವರ್ಷ ಪೂರೈಸುತ್ತಿರುವ ಈ ದಿನದಂದು ದೇಶದ ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣಗೊಳ್ಳಲಿದೆ.

Mithun Chakraborty: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ

ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ

Mithun Chakraborty: 76 ವರ್ಷ ವಯಸ್ಸಿನ ಪ್ರಾಯದ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ. ಅಲ್ಲದೇ, ಅವರ ಆರೋಗ್ಯ ಸ್ಥಿರವಾಗಿದೆ. ಮಿಥುನ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ ಸಿಎಂ ಸುವೇಂದು. ಮಿಥುನ್ ಆಸ್ಪತ್ರೆಗೆ ದಾಖಲಾದಾಗ ಸುವೇಂದು ಅಧಿಕಾರಿ ಅವರು ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ 2024ರಲ್ಲಿ ಮಿಥುನ್ ಅವರ ಕೈಗೆ ಮೂಳೆ ಶಸ್ತ್ರಚಿಕಿತ್ಸೆ ನಡೆದಾಗಲೂ ಸುವೇಂದು ಅವರು ಭೇಟಿ ನೀಡಿದ್ದರು.

Ayogya 2 Review: ಸಿದ್ಧ ಸೂತ್ರದ ಗುಂಗಿನಲ್ಲಿ ಹಳ್ಳಿ ರಾಜಕಾರಣದ ಸುತ್ತ ತಿರುಗುವ ಸಿದ್ದೇಗೌಡ!

ಸತೀಶ್‌ ನೀನಾಸಂ -‌ ರಚಿತಾ ರಾಮ್ ಜೋಡಿಯ ʻಅಯೋಗ್ಯ 2ʼ ಸಿನಿಮಾ ಹೇಗಿದೆ?

Ayogya 2 Movie Review: ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಸಿನಿಮಾ ಇಂದು (ಆಗಸ್ಟ್ 7, 2026) ತೆರೆಕಂಡಿದೆ. ಪಂಚಾಯಿತಿ ಸದಸ್ಯನಾಗಿರುವ ಸಿದ್ಧೇಗೌಡ ಈಗ ಅಧ್ಯಕ್ಷ ಸ್ಥಾನಕ್ಕಾಗಿ ಪುನಃ ಬಚ್ಚೇಗೌಡನ ವಿರುದ್ಧ ನಡೆಸುವ ಹೋರಾಟವೇ ಚಿತ್ರದ ಕಥೆಯಾಗಿದೆ.

KTPA: ನಟಿ ಹಂಸ, ಧ್ರುವಂತ್ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಗರಂ!

ಕಲಾವಿದರಿಗೆ ಎಚ್ಚರಿಕೆ ನೀಡಿದ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ!

Kannada Serial Artist: ನಟಿ ಹಂಸ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಅಭಿನಯಿಸಿದರು. ಸಂಭಾವನೆ ನೀಡಿಲ್ಲ ಎಂದು ಹಂಸ ಪ್ರತಾಪ್ ಆರೋಪಿಸಿದ್ದರು. 'ಬಿಗ್ ಬಾಸ್' ಸ್ಪರ್ಧಿ ಧ್ರುವಂತ್ ರಹಗಾರ ಸುಂದರ್ ಸಹ ನಿರ್ಮಾಪಕರ ವಿರುದ್ಧ ಮಾತನಾಡಿದ್ದರು. ಕಿರುತೆರೆ ನಿರ್ಮಾಪಕರ ಸಂಘ ತೀವ್ರವಾಗಿ ಖಂಡಿಸಿದೆ ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ , ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.

ನಟ ವಿಜಯ್ ವಿರುದ್ಧದ ಡಿವೋರ್ಸ್‌ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ; ಪ್ರಕರಣ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ!

ಸಿಎಂ ವಿಜಯ್‌ - ಸಂಗೀತಾ ಡಿವೋರ್ಸ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌!

ತಮಿಳುನಾಡು ಸಿಎಂ ವಿಜಯ್‌ ಅವರ ಪತ್ನಿ ಸಂಗೀತಾ ಅವರು ಕಳೆದ ಫೆಬ್ರವರಿಯಲ್ಲಿ ಡಿವೋರ್ಸ್‌ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದು ವಿಜಯ್‌ ಅಭಿಮಾನಿಗಳಿಗೆ ದೊಡ್ಡ ಶಾಕ್‌ ನೀಡಿತ್ತು. ಅಲ್ಲದೆ, ಅರ್ಜಿಯಲ್ಲಿ ವಿಜಯ್‌ಗೆ ನಟಿಯೊಬ್ಬರ ಜೊತೆ ಅಫೇರ್‌ ಇದೆ ಎಂಬ ಆರೋಪ ಮಾಡಲಾಗಿತ್ತು. ಸದ್ಯ ಈ ಡಿವೋರ್ಸ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

City Lights Movie: ದುನಿಯಾ ವಿಜಯ್‌ ನಿರ್ದೇಶನದ 'ಸಿಟಿಲೈಟ್ಸ್‌' ಸಿನಿಮಾದ 3ನೇ ಹಾಡು ರಿಲೀಸ್‌; ಜಾನಪದ ಹಾಡಿಗೆ ರ‍್ಯಾಪ್‌ ಟಚ್‌

ಸಿಟಿ ಲೈಟ್ಸ್‌ ಚಿತ್ರದ 3ನೇ ಹಾಡು ಬಿಡುಗಡೆ; ಜಾನಪದ ಹಾಡಿಗೆ ರ‍್ಯಾಪ್‌ ಟಚ್‌

ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ʼಸಿಟಿ ಲೈಟ್ಸ್‌ʼ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇನ್ನು ಪ್ರತಿ ಬಾರಿ ಜಾನಪದ, ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದಿಡುವ ದುನಿಯಾ ವಿಜಯ್‌, ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನು ಬಳಸಿಕೊಂಡು ಈಗಿನ ಟ್ರೆಂಡ್‌ಗೆ ತಕ್ಕಂತೆ ಹೊಸ ಸಾಂಗ್‌ ರಿಲೀಸ್‌ ಮಾಡಿದ್ದಾರೆ.

Loading...