ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Kangana Ranaut: ಅಸಹ್ಯ, ವಾಂತಿ ಬರುವಂತಹದ್ದು! Gen Z ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

Gen Z ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ!

Kangana Ranaut: ನಟಿ ಕಂಗನಾ ರಣಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೊಗಳನ್ನು ಟೀಕಿಸಿದರು. ಪ್ರತಿಭಟನಾಕಾರರ ನಡವಳಿಕೆ ವಾಂತಿ ಬರುವಂತಹದ್ದು ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ವಯಸ್ಸಿನ ಅಂತರದ್ದೇ ಚರ್ಚೆ!

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?‌

ಸೌತ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹಾಗೂ ಭಾರತೀಯ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮುಂಬೈನ ಕೆಫೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿ ವೈರಲ್ ಆಗಿದೆ. 33 ವರ್ಷದ ಮೃಣಾಲ್ ಹಾಗೂ 24 ವರ್ಷದ ಜೈಸ್ವಾಲ್ ನಡುವಿನ 9 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

Anurag Dobhal: ಪತ್ನಿ ಮೋಸ ಮಾಡಿದಳು ಎಂದು ಸಾಕ್ಷಿ ಸಮೇತ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ

ಪತ್ನಿ ಮೋಸ ಮಾಡಿದಳು ಎಂದು ಸಾಕ್ಷಿ ಸಮೇತ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ

Anurag Dobhal: ಬಿಗ್ ಬಾಸ್ ಸ್ಪರ್ಧಿ (Bigg Boss) ಅನುರಾಗ್ ದೊಬಾಲ್ (Anurag Dobhal) ಪ್ರೀತಿಸಿ ಮದುವೆ ಆದ ಪತ್ನಿಯಿಂದಲೇ ತಮಗೆ ಆಗಿರುವ ಮೋಸವನ್ನು ಅವರು ಈಗ ಬಯಲು ಮಾಡಿದ್ದಾರೆ. ತಮ್ಮ ಕುಟುಂಬದವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಹಿಂದೆ ಅನುರಾಗ್ ಆರೋಪಿಸಿದ್ದರು. ತಮ್ಮದೇ ಕುಟುಂಬದವರ ವಿರುದ್ಧವೇ ಅನುರಾಗ್ ದೊಬಾಲ್ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ.

ಪತ್ನಿಯ ಅಪೋಲೋ ಆಸ್ಪತ್ರೆ ಇದ್ದರೂ ಶಸ್ತ್ರ ಚಿಕಿತ್ಸೆಗಾಗಿ ನಟ ರಾಮ್‌ ಚರಣ್ ಕೊಯಮತ್ತೂರಿಗೆ ಹೋಗಿದ್ದೇಕೆ? ಚಿರು ಪುತ್ರನಿಗೆ ಏನು ಸಮಸ್ಯೆ?

ರಾಮ್‌ ಚರಣ್‌ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ಹೋಗಿದ್ದೇಕೆ?

ನಟ ರಾಮ್ ಚರಣ್ ಅವರಿಗೆ ಸೋಮವಾರ (ಜುಲೈ 27) ಕೊಯಮತ್ತೂರಿನ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಆದರೆ, ಪತ್ನಿ ಉಪಾಸನಾ ಅವರ 'ಅಪೋಲೋ' ಆಸ್ಪತ್ರೆಯಿದ್ದರೂ, ಶಸ್ತ್ರಚಿಕಿತ್ಸೆಗೆ ಕೊಯಮತ್ತೂರನ್ನು ರಾಮ್‌ ಚರಣ್ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಕೇಳಿಬಂದಿದೆ.

Batwara : ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥಾವಸ್ತು ಹೊಂದಿರುವ ʼಬಟ್ವಾರಾʼಕ್ಕೆ  ʻಎʼ ಸೆರ್ಟಿಫಿಕೇಟ್

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥೆ; ʼಬಟ್ವಾರಾʼಕ್ಕೆ ʻಎʼ ಸೆರ್ಟಿಫಿಕೇಟ್

Sunny Deol: ಭಾರತ ಮತ್ತು ಪಾಕ್ ವಿಭಜನೆಯ ನಂತರ ನಡೆದ ಗಲಭೆಗಳು ಮತ್ತು ಅಶಾಂತಿಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸನ್ನಿ ಡಿಯೋಲ್ ( Sunny Deol) ಮತ್ತು ಶಬನಾ ಅಜ್ಮಿ (Shabana Azmi) ನಟಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಪ್ರೀತಿ ಜಿಂಟಾ, ಕರಣ್ ಡಿಯೋಲ್ ಮ್ತುತ ಅಭಿಮನ್ಯು ಸಿಂಗ್ ನಟಿಸಿದ್ದಾರೆ.

Thalapathy Vijay: ಚೆನ್ನೈನ ಮಾಲ್‌ನಲ್ಲಿ ʻಜನ ನಾಯಗನ್‌ʼ ಸಿನಿಮಾ ಪ್ರದರ್ಶನ ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಚೆನ್ನೈ ಮಾಲ್‌ನಲ್ಲಿ 'ಜನ ನಾಯಗನ್' ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ!

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ಬೆಳಗಿನ ಶೋ ಚೆನ್ನೈನ ಅಂಪಾ ಮಾಲ್‌ನ ಪಿವಿಆರ್‌ನಲ್ಲಿ ಗಂಟೆಗಟ್ಟಲೆ ಸ್ಥಗಿತಗೊಂಡಿತು. 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ಪಡೆದಿರುವ ಈ ಚಿತ್ರಕ್ಕೆ ಪೋಷಕರು ಮಕ್ಕಳನ್ನು ಕರೆತಂದಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ, ಸಿನಿಮಾವನ್ನು ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.

‘ರಾಯನ್‌’ ಚಿತ್ರಕ್ಕೆ ನ್ಯಾಷನಲ್‌ ಅವಾರ್ಡ್‌ ಸಿಕ್ಕಿದ್ದಕ್ಕೆ ಟೀಕೆ; ವಿರೋಧಿಗಳಿಗೆ ಸಖತ್‌ ಆಗಿಯೇ ಟಾಂಗ್‌ ಕೊಟ್ಟ ನಟ ಧನುಷ್‌

ʻರಾಯನ್‌ʼ ಚಿತ್ರಕ್ಕೆ ʻರಾಷ್ಟ್ರ ಪ್ರಶಸ್ತಿʼ; ಟೀಕಿಸಿದವ್ರಿಗೆ ಧನುಷ್‌ ಟಾಂಗ್

'ರಾಯನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕುಹಕಗಳಿಗೆ ನಟ ಧನುಷ್ ಖಡಕ್ ಉತ್ತರ ನೀಡಿದ್ದಾರೆ. ಆ ವರ್ಷ 'ಮೆಯ್ಯಳಗನ್' ಹಾಗೂ 'ಮಹಾರಾಜ'ಗಳಂತಹ ಉತ್ತಮ ಸಿನಿಮಾಗಳಿದ್ದರೂ, 'ರಾಯನ್' ಚಿತ್ರಕ್ಕಾಗಿ ತಾವು ಪಟ್ಟ ಪ್ರಾಮಾಣಿಕ ಶ್ರಮವನ್ನು ಯಾರೂ ಕಡೆಗಣಿಸಬಾರದು ಎಂದಿದ್ದಾರೆ.

ರಿಷಬ್ ಶೆಟ್ಟಿಯ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಿಂದ ಬಿಗ್ ಅಪ್‌ಡೇಟ್: ‘ಬೆಳವಡಿ ಮಲ್ಲಮ್ಮ’ ಪಾತ್ರಕ್ಕೆ ಭೂಮಿ ಪೆಡ್ನೇಕರ್ ಆಯ್ಕೆ!

ರಿಷಬ್ ಶೆಟ್ಟಿ ಸಿನಿಮಾದಲ್ಲಿ ಬೆಳವಡಿ ಮಲ್ಲಮ್ಮನಾಗಿ ನಟಿ ಭೂಮಿ ಪೆಡ್ನೇಕರ್!

'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ನಟನೆಯ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸೇರ್ಪಡೆಯಾಗಿದ್ದಾರೆ. ಕರುನಾಡಿನ ಧೈರ್ಯಶಾಲಿ ವೀರಮಹಿಳೆ 'ಬೆಳವಡಿ ಮಲ್ಲಮ್ಮ' ಅವರ ಐತಿಹಾಸಿಕ ಪಾತ್ರವನ್ನು ಭೂಮಿ ನಿರ್ವಹಿಸುತ್ತಿದ್ದಾರೆ.

9 ಭಕ್ತಿಗೀತೆಗಳುಳ್ಳ ‘ರಾಜರ ಭಾಗ್ಯವಿದು’ ಆಲ್ಬಂ ಬಿಡುಗಡೆ; ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಚನ

9 ಭಕ್ತಿಗೀತೆಗಳುಳ್ಳ ʻರಾಜರ ಭಾಗ್ಯವಿದುʼ ವಿಡಿಯೋ ಆಲ್ಬಂ ಲೋಕಾರ್ಪಣೆ

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 'ಶ್ರೀ ಹಯವದನ ಫೌಂಡೇಶನ್' ವತಿಯಿಂದ ಭಾವಸಮೀರ ಶ್ರೀ ವಾದಿರಾಜ ಸ್ವಾಮಿಗಳ ವಿರಚಿತ 9 ಭಕ್ತಿಗೀತೆಗಳನ್ನೊಳಗೊಂಡ "ರಾಜರ ಭಾಗ್ಯವಿದು" ಹಾಗೂ "ದಶಾವತಾರ ಸ್ತುತಿ" ವಿಡಿಯೋ ಆಲ್ಬಂಗಳನ್ನು ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿದರು.

ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡುವವರ ಮೇಲೆ ಸಮರ ಸಾರಿದ ʻಬಿಗ್‌ ಬಾಸ್‌ʼ ಧ್ರುವಂತ್;‌ ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ?

ಕೆಟ್ಟ ಕಾಮೆಂಟ್‌ ಹಾಕೋರ ಮೇಲೆ ʻಬಿಗ್‌ ಬಾಸ್‌ʼ ಧ್ರುವಂತ್ ಕಾನೂನು ಸಮರ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಮಾಜಿ ಸ್ಪರ್ಧಿ ಹಾಗೂ ನಟ ಧ್ರುವಂತ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದ ಟ್ರೋಲರ್‌ಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮತ್ತು ಬಸವೇಶ್ವರ ನಗರದ ಸೈಬರ್ ಸೆಲ್‌ನಲ್ಲಿ ದೂರು ನೀಡಿದ್ದಾರೆ.

Dr Rajkumar: 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಪುಸ್ತಕ ಬಿಡುಗಡೆ; ʻಅಣ್ಣಾವ್ರು ಹಾಲಿನಂತೆ ಪರಿಶುದ್ಧʼ- ಎನ್. ಆರ್. ರಮೇಶ್

ʻಲೀಲಮ್ಮ.. ನಿನ್ನ ಗಂಡ ಯಾರಮ್ಮʼ ಪುಸ್ತಕ ಲೋಕಾರ್ಪಣೆ; ಲೇಖಕರು ಹೇಳಿದ್ದೇನು?

ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಬರೆದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ..?' ಕೃತಿ ಲೋಕಾರ್ಪಣೆಗೊಂಡಿದೆ. ನಟಿ ಲೀಲಾವತಿ ಅವರ ಪತಿ ರಂಗಭೂಮಿ ಕಲಾವಿದ ಮಹಾಲಿಂಗ ಭಾಗವತರ್ ಎಂಬುದಕ್ಕೆ ಚೆನ್ನೈನ ಆಸ್ತಿ ದಾಖಲೆಗಳ ಸಾಕ್ಷಿ ಒದಗಿಸಲಾಗಿದ್ದು, ಡಾ. ರಾಜ್ ಹಾಲಿನಂತೆ ಪರಿಶುದ್ಧರು ಎಂಬ ಸತ್ಯ ಎಂದು ಅವರು ಹೇಳಿದ್ದಾರೆ.

‘ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ’: ನೋವು ನೀಡುವವರ ವಿರುದ್ಧ ಸಿಡಿದೆದ್ದ ನಟಿ ಕೃಷಿ ತಾಪಂಡ

‌ʻಬೇರೆಯವರ ನೋವು ನಿಮಗೆ ಮನರಂಜನೆಯೇʼ; ನಟಿ ಕೃಷಿ ತಾಪಂಡ ಖಡಕ್‌ ಪ್ರಶ್ನೆ!

ವೈಯಕ್ತಿಕ ಬದುಕಿನ ಏಳುಬೀಳುಗಳಿಂದ ನೋವಿನಲ್ಲಿರುವ ನಟಿ ಕೃಷಿ ತಾಪಂಡ ಅವರನ್ನೇ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಆ ಬಗ್ಗೆ ನಟಿ ಕೃಷಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಮೌನ ಎಂದರೆ ದೌರ್ಬಲ್ಯವಲ್ಲ, ಒಳ್ಳೆಯತನ ನನ್ನ ವ್ಯಕ್ತಿತ್ವ ಎಂದಿದ್ದಾರೆ ಕೃಷಿ.

Amruthdhaare Serial:  ಮಲ್ಲಿಯ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬೀಳ್ತಾನಾ?

Amruthdhaare: ಮಲ್ಲಿಯ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬೀಳ್ತಾನಾ?

Amruthdhaare Serial: ಅಮೃತಧಾರೆ (Amruthdhaare serial) ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್​ ಬಂದಿದ್ದು, ಆಕೆಯ ಬದುಕು ಹೋರಾಟಮಯವಾಗಿದೆ. ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಆಗಿ ಎಂಟ್ರಿ ಕೊಟ್ಟಿರುವ ಮಲ್ಲಿ, ಜೈದೇವ್ ಮತ್ತು ಶಕುಂತಲಾ ಕುತಂತ್ರವನ್ನು ಬಯಲಿಗೆಳೆಯುವ ಹಂತದಲ್ಲಿ ಇರುವಂತಿದೆ.

Ramayana Movie: ಇದೊಂದು ಕಾರಣಕ್ಕೆ ಎರಡು ಭಾಗಗಳಲ್ಲಿ ಬರ್ತಾ ಇದೆ ರಾಮಾಯಣ!

ಇದೊಂದು ಕಾರಣಕ್ಕೆ ಎರಡು ಭಾಗಗಳಲ್ಲಿ ಬರ್ತಾ ಇದೆ ರಾಮಾಯಣ!

Ramayana Movie: ಬಹುನಿರೀಕ್ಷಿತ ಪೌರಾಣಿಕ ಚಿತ್ರವು ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಇದರ ಟೀಸರ್ ಅಧಿಕೃತ ಬಿಡುಗಡೆಗೆ ಮೊದಲೇ ಭಾರಿ ಸಂಚಲನ ಮೂಡಿಸಿದೆ. ತಯಾರಕರು ಇನ್ನೂ ಟ್ರೇಲರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡದಿದ್ದರೂ, ಪ್ರದರ್ಶನಗಳಿಂದ ಸೋರಿಕೆಯಾದ ಹಲವಾರು ತುಣುಕುಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Indian Idol 16 winner : ಈ ಬಾರಿಯ ಇಂಡಿಯನ್ ಐಡಲ್ 16ರ ವಿನ್ನರ್‌ ಇವರೇ!

ಈ ಬಾರಿಯ ಇಂಡಿಯನ್ ಐಡಲ್ 16ರ ವಿನ್ನರ್‌ ಇವರೇ!

Indian Idol 16 winner : ಇಂಡಿಯನ್ ಐಡಲ್ ಸೀಸನ್ 16 ರ ವಿಜೇತರನ್ನು ಭಾನುವಾರ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಘೋಷಿಸಲಾಯಿತು. ಒಡಿಶಾದ ಜ್ಯೋತಿರ್ಮಯಿ ನಾಯಕ್ ಈ ಸೀಸನ್‌ನ ವಿಜೇತೆಯಾಗಿ ಆಯ್ಕೆಯಾದರು. ಸಹ ಫೈನಲಿಸ್ಟ್‌ಗಳಾದ ಅನ್ಶಿಕಾ ಚೋಂಕರ್, ಮನ್ರಾಜ್ ವೀರ್ ಸಿಂಗ್, ಮೈಸ್ಕೆಮ್ ಬೋಸು, ಸುಹೈಲ್ ಸೂಫಿ ಮತ್ತು ತನಿಷ್ಕ್ ಶುಕ್ಲಾ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದ್ದಾರೆ.

Rishab Shetty: ಹಾಲಿವುಡ್‌ನಲ್ಲಿ ಮಿಂಚಿದ  ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್

ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್!

Spider Man: ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ.‌ ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ.

ನಟ ಅಖಿಲ್‌ಗಿಂತ ಪತ್ನಿ ಜೈನಬ್‌ 10 ವರ್ಷ ದೊಡ್ಡವರಾ? ಮೊದಲ ಬಾರಿಗೆ ಎಲ್ಲದಕ್ಕೂ ಪ್ರಬುದ್ಧ ಉತ್ತರ ನೀಡಿದ ನಾಗಾರ್ಜುನ ಪುತ್ರ!

ಪತ್ನಿ ಜೈನಬ್ ವಯಸ್ಸಿನ ಅಂತರದ‌ ಬಗ್ಗೆ ಟ್ರೋಲ್ಸ್; ನಟ ಅಖಿಲ್ ಹೇಳಿದ್ದೇನು?

'ಲೆನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಅಖಿಲ್ ಅಕ್ಕಿನೇನಿ, ತಮ್ಮ ಪತ್ನಿ ಜೈನಬ್ ಅವರ ಧರ್ಮ ಹಾಗೂ ಇಬ್ಬರ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆದ ಟ್ರೋಲ್‌ಗಳಿಗೆ ಮೊದಲ ಬಾರಿಗೆ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.

ನೀಟ್‌ ಪ್ರತಿಭಟನೆ ಬಗ್ಗೆ ಪೋಸ್ಟ್‌ ಹಾಕಿ 3 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಪರ್ಲೆ ಮಾಣಿ; ಅಷ್ಟಕ್ಕೂ  ಅದರಲ್ಲೇನಿತ್ತು?

ನೀಟ್ ಬಗ್ಗೆ ಪೋಸ್ಟ್; 3 ಲಕ್ಷ ಫಾಲೋವರ್ಸ್ ಕಳೆದುಕೊಂಡ ನಿರೂಪಕಿ ಪರ್ಲೆ ಮಾಣಿ

ದೆಹಲಿಯಲ್ಲಿ ನಡೆದ ನೀಟ್ ಪೇಪರ್ ಲೀಕ್ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ 'ಬಿಗ್ ಬಾಸ್' ಖ್ಯಾತಿಯ ಪರ್ಲೆ ಮಾಣಿ ತೀವ್ರ ವಿವಾದಕ್ಕೆ ಈಡಾಗಿದ್ದಾರೆ. ಪ್ರತಿಭಟನೆಗಿಂತ ಜೀವ ಮುಖ್ಯ ಎಂದು ಸಲಹೆ ನೀಡಿದ್ದಕ್ಕೆ ಅವರು ಎರಡೇ ದಿನಗಳಲ್ಲಿ 3 ಲಕ್ಷ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

‌ʻವಾರಣಾಸಿʼ ಚಿತ್ರದ ಶೂಟಿಂಗ್‌ಗಾಗಿ ಗಂಡ - ಮಗಳೊಂದಿಗೆ ಹೈದರಾಬಾದ್‌ಗೆ ಬಂದಿಳಿದ ನಟಿ ಪ್ರಿಯಾಂಕಾ ಚೋಪ್ರಾ

ʻವಾರಣಾಸಿ' ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿಯೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದು, ವಿಡಿಯೋ ವೈರಲ್ ಆಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಹಾಗೂ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಶೂಟಿಂಗ್‌ಗಾಗಿ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ʻರಾಮಾಯಣ: ಪಾರ್ಟ್‌ 1ʼ ಚಿತ್ರದಲ್ಲಿ ರಣಬೀರ್‌ ಕಪೂರ್‌ - ಯಶ್‌ ಮುಖಾಮುಖಿ ಆಗ್ತಾರಾ? ಇಲ್ಲಿದೆ ಅಸಲಿ ಸತ್ಯ!

ʻರಾಮಾಯಣ: ಪಾರ್ಟ್ 1‌ʼರಲ್ಲಿ ರಣಬೀರ್ ಕಪೂರ್‌ - ಯಶ್ ಮುಖಾಮುಖಿ ಆಗಲ್ವಾ?

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಮುಖಾಮುಖಿಯಾಗುವ ದೃಶ್ಯಗಳ ಶೂಟಿಂಗ್ ಇನ್ನೂ ನಡೆದಿಲ್ಲ ಎಂಬ ಸತ್ಯ ಹೊರಬಿದ್ದಿದೆ. 'ಸ್ಯಾನ್ ಡಿಯೋಗೋ ಕಾಮಿಕ್-ಕಾನ್'ನಲ್ಲಿ ಮಾತನಾಡಿದ ರಣಬೀರ್, "ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ನಾವಿಬ್ಬರೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ.

ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ‘ಕರಾವಳಿ’ ಸದ್ದು: 2ನೇ ದಿನ ಪ್ರಜ್ವಲ್ ದೇವರಾಜ್ ಸಿನಿಮಾದ ಕಲೆಕ್ಷನ್ ಡಬಲ್!

Prajwal: ವಿವಾದಗಳ ನಡುವೆಯೂ ʻಕರಾವಳಿʼ ಧಮಾಕಾ; ಎಷ್ಟಾಯ್ತು ಕಲೆಕ್ಷನ್?

ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡರಷ್ಟು ಹೆಚ್ಚಾಗಿದೆಯಂತೆ. ಕಂಬಳದ ಹಿನ್ನೆಲೆಯ ಈ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆಯಿಂದಾಗಿ ಹೆಚ್ಚುವರಿಯಾಗಿ 25 ಸ್ಕ್ರೀನ್‌ಗಳನ್ನು ಸೇರಿಸಲಾಗಿದೆ.

ʻಲವ್‌ ಮಾಕ್ಟೇಲ್‌ʼ ಆಯ್ತು, ಈಗ 'ಲವ್ ಕಾಕ್ಟೇಲ್' ಕುಡಿಸಲು ಬಂದ ನಟ ಹರೀಶ್ ರಾಜ್; ಈ ಬಾರಿ ಪ್ಲೇಬಾಯ್‌ ಆಗಿ ಮಿಂಚಿಂಗ್!‌

ʻಲವ್ ಕಾಕ್ಟೇಲ್ʼ ಸಿನಿಮಾದಲ್ಲಿ ಪ್ಲೇ ಬಾಯ್ ಆಗಿ ಬಂದ ನಟ ಹರೀಶ್ ರಾಜ್!

ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಅನುಭವ ಹೊಂದಿರುವ ನಟ ಹಾಗೂ ನಿರ್ದೇಶಕ ಹರೀಶ್ ರಾಜ್ ಅಭಿನಯದ ‘ಲವ್ ಕಾಕ್ಟೇಲ್’ ಚಿತ್ರದ ಮೇಕಿಂಗ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಲವ್ ಫೇಲ್ಯೂರ್ ಆದ ನಂತರವೂ ಜೀವನವನ್ನು ಜಾಲಿಯಾಗಿ ಹೇಗೆ ಕಳೆಯಬಹುದು ಎಂಬುದನ್ನು ಪ್ಲೇ ಬಾಯ್ ಶೈಲಿಯಲ್ಲಿ ಹೆಣೆದಿರುವ ಈ ಚಿತ್ರಕ್ಕೆ ಜನಾರ್ಧನ್ ಪಿ ಬಂಡವಾಳ ಹೂಡಿದ್ದಾರೆ.

ಬಸ್ ಕಂಡಕ್ಟರ್ ಟು ʻಸೂಪರ್‌ ಸ್ಟಾರ್ʼ; ಆತ್ಮಕಥೆ ಬರೆಯುತ್ತಿದ್ದಾರೆ ರಜನಿಕಾಂತ್, ಸಿನಿಮಾ ಆಗಲಿದೆಯಾ ʻತಲೈವಾʼ ಬದುಕು?

ಆತ್ಮಕಥೆ ಬರೆಯುವಲ್ಲಿ ರಜನಿಕಾಂತ್ ಬ್ಯುಸಿ! ಬರಲಿದೆಯಾ ʻತಲೈವಾʼ ಬಯೋಪಿಕ್?‌

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಆನಂತ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವ ರಜನಿಕಾಂತ್ ಅವರ ಜೀವನ ಪಯಣ ಈಗ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ರಜನಿಕಾಂತ್ ಪ್ರಸ್ತುತ ತಾವು ಬರೆಯುತ್ತಿರುವ ಆತ್ಮಕಥೆಯನ್ನು ಆಧರಿಸಿ ಬಯೋಪಿಕ್ ನಿರ್ಮಿಸುವ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

3ನೇ ದಿನಕ್ಕೆ ಚೇತರಿಸಿಕೊಂಡ ʻಜನ ನಾಯಗನ್‌ʼ; ʻದಳಪತಿʼ ವಿಜಯ್‌ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ!

2ನೇ ದಿನ ಕುಸಿತ, 3ನೇ ದಿನ ಚೇತರಿಕೆ; ʻಜನ ನಾಯಗನ್‌ʼ ಕಲೆಕ್ಷನ್‌ ಜಾದೂ!

ʻದಳಪತಿʼವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, 3ನೇ ದಿನ ಶೇ. 34.8 ರಷ್ಟು ಚೇತರಿಕೆ ಕಂಡು ಭಾರತದಲ್ಲಿ 92.35 ಕೋಟಿ ರೂ. ಗಳಿಕೆ ಮಾಡಿದೆ. ಜಾಗತಿಕವಾಗಿ 171.84 ಕೋಟಿ ಗಳಿಸಿರುವ ಎಚ್. ವಿನೋದ್ ನಿರ್ದೇಶನದ ಈ ಚಿತ್ರ, ಭಾನುವಾರದ ಗಳಿಕೆಯೊಂದಿಗೆ 200 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.

Loading...