ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Thalapathy Vijay: 'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ! ವಿಡಿಯೋ ವೈರಲ್‌

'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ!

Tamil actor Anandhi : ತಮಿಳು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1 ಸೀಸನ್ 7' ರ ವಿನ್ನರ್ ಆಗಿ ಹೊರಹೊಮ್ಮಿದ್ದ ನಟಿ ಆನಂದಿ, ಬೆಳ್ಳಿಪರದೆ ಮೇಲೆಯೂ ತಮ್ಮ ಸಾಪತ್ಯ ಸಾಬೀತುಪಡಿಸಿದವರು. ದಳಪತಿ ವಿಜಯ್ (Thalapathy Vijay) ಅಭಿನಯದ 'ಜನ ನಾಯಗನ್' ಚಿತ್ರದಲ್ಲಿ ತಮ್ಮ ದೃಶ್ಯವನ್ನು ಎಡಿಟಿಂಗ್‌ನಲ್ಲಿ ತೆಗೆದುಹಾಕಿದ್ದಕ್ಕೆ ನಟಿ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ತಾನು ದುರದೃಷ್ಟವಂತೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .

Thalapathy Vijay: ದುಬಾರಿ ಟಿಕೆಟ್‌ ದರದ ಎಫೆಕ್ಟ್‌! ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಲೂಟಿ ಮಾಡಿದ ʻಜನ ನಾಯಗನ್‌ʼ; ಮೊದಲ ದಿನ ಕರುನಾಡಿನಲ್ಲಿ ಸಿಕ್ಕ ಕಲೆಕ್ಷನ್‌ ಎಷ್ಟು?

ದುಬಾರಿ ಟಿಕೆಟ್‌ ರೇಟ್‌! ಕರ್ನಾಟಕದಲ್ಲಿ ʻಜನ ನಾಯಗನ್‌ʼ ಭರ್ಜರಿ ಕಲೆಕ್ಷನ್!

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ 'ದಳಪತಿ' ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಮೊದಲ ದಿನವೇ ಬರೋಬ್ಬರಿ 11.57 ಕೋಟಿ ರೂ. ಕಲೆಕ್ಷನ್ ಮಾಡಿ ಇತಿಹಾಸ ಬರೆದಿದೆ. ಬೆಂಗಳೂರಿನಲ್ಲಿ ದುಬಾರಿ ಟಿಕೆಟ್ ದರ ಇದ್ದ ಕಾರಣ, ಗಳಿಕೆ ಪ್ರಮಾಣ ಜಾಸ್ತಿ ಆಗಿದೆ.

‘ಶಬರಿ’ ಚಿತ್ರದ ‘ತಂದಾನಿ ತನನೋ’ ವೀಡಿಯೋ ಸಾಂಗ್ ರಿಲೀಸ್ ಮಾಡಿದ ಓಂ ಪ್ರಕಾಶ್ ರಾವ್ - ಬಾಲಾಜಿ!

‘ಶಬರಿ’ ಚಿತ್ರದ ‘ತಂದಾನಿ ತನನೋ’ ಸಾಂಗ್ ರಿಲೀಸ್ ಮಾಡಿದ ಓಂ ಪ್ರಕಾಶ್ ರಾವ್

ಒರಟ 'ಶ್ರೀ' ನಿರ್ದೇಶನದ ಬಹುನಿರೀಕ್ಷಿತ 'ಶಬರಿ' ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ "ತಂದಾನಿ ತನನೋ" ವೀಡಿಯೋ ಸಾಂಗ್ ಅನ್ನು ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಬಾಲಾಜಿ ವೀರಾಸ್ವಾಮಿ ಬಿಡುಗಡೆ ಮಾಡಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಹಾಗೂ ಅಶ್ವಿನ್ ಶರ್ಮಾ ಗಾಯನದ ಈ ಹಾಡಿಗೆ ಸ್ವತಃ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ.

ರಾಜಕೀಯ ಅಖಾಡಕ್ಕೆ ನಟ ಅಲ್ಲು ಅರ್ಜುನ್‌ ಎಂಟ್ರಿ; ಹರಿದಾಡುತ್ತಿರುವ ಗಾಸಿಪ್‌ ಹಿಂದಿನ ಸತ್ಯ ಬಿಚ್ಚಿಟ್ಟ ಮ್ಯಾನೇಜರ್!

ರಾಜಕೀಯ ಅಖಾಡಕ್ಕೆ ಅಲ್ಲು ಅರ್ಜುನ್? ಮ್ಯಾನೇಜರ್ ಕೊಟ್ರು ಬಿಗ್ ಟ್ವಿಸ್ಟ್‌

ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಅವರು ಮಾವನ ಮೂಲಕ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳಿಗೆ ಅವರ ಮ್ಯಾನೇಜರ್ ಶರತ್ ಚಂದ್ರ ನಾಯ್ಡು ಪೂರ್ಣ ವಿರಾಮ ನೀಡಿದ್ದಾರೆ. ಇದೆಲ್ಲಾ ಸಂಪೂರ್ಣ ಫೇಕ್ ನ್ಯೂಸ್ ಎಂದಿರುವ ಅವರು, 'ಪುಷ್ಪ' ಯಶಸ್ಸಿನ ಬಳಿಕ ಅಲ್ಲು ಅರ್ಜುನ್‌ ಕೈಯಲ್ಲಿ ಸಾಲು ಸಾಲು ಬೃಹತ್ ಪ್ಯಾನ್ ಇಂಡಿಯಾ ಸಿನಿಮಾಗಳಿವೆ ಎಂದಿದ್ದಾರೆ.

Thalapathy Vijay: ದಾಖಲೆ ಬರೆಯಲು ವಿಫಲವಾದ ʻಜನ ನಾಯಗನ್‌ʼ ಸಿನಿಮಾ;  ಆನ್‌ಲೈನ್ ಲೀಕ್‌ನಿಂದ ಕಲೆಕ್ಷನ್‌ಗೆ ಹೊಡೆತ! ಮೊದಲ ದಿನ ಎಷ್ಟಾಯ್ತು ಗಳಿಕೆ?

Vijay: ದಾಖಲೆ ಬರೆಯಲು ವಿಫಲವಾದ ‘ಜನ ನಾಯಗನ್’: ಮೊದಲ ದಿನದ ಗಳಿಕೆ ಎಷ್ಟು?

ತಮಿಳುನಾಡು ಮುಖ್ಯಮಂತ್ರಿ 'ದಳಪತಿ' ವಿಜಯ್ ಅವರ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಮೊದಲ ದಿನ ವಿಶ್ವದಾದ್ಯಂತ 78 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದ್ದು, ನಿರೀಕ್ಷಿತ 100 ಕೋಟಿ ಗಡಿ ದಾಟಲು ವಿಫಲವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 41 ಕೋಟಿ ರೂ. ಗಳಿಸಿದೆ.

Karavali Movie Review: ಕಂಬಳ ಗದ್ದೆಯಲ್ಲಿ ಸೇಡಿನ ಕಥೆ ಹೇಳುವ ʻಕರಾವಳಿʼ

Prajwal Devaraj: ʻಕರಾವಳಿʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Karavali Movie Review: ಗುರುದತ್ತ ಗಾಣಿಗ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಅಭಿನಯದ ‘ಕರಾವಳಿ’ ಸಿನಿಮಾ ಜುಲೈ 24 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಟ್ರೇಲರ್‌ನಷ್ಟೇ ಕುತೂಹಲಕಾರಿಯಾಗಿ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

Deepika Chikhalia: ಸಾಯಿ ಪಲ್ಲವಿ ನಟನೆಗೆ ಹಳೆಯ ಸೀತಾ ಪಾತ್ರಧಾರಿ ಮೆಚ್ಚುಗೆ!

ಸಾಯಿ ಪಲ್ಲವಿ ನಟನೆಗೆ ಹಳೆಯ ಸೀತಾ ಪಾತ್ರಧಾರಿ ಮೆಚ್ಚುಗೆ!

Deepika Chikhalia: ರಾಮಾಯಣವನ್ನು ಘೋಷಿಸಿದಾಗಿನಿಂದ , ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಯೋಜನೆಗಳಲ್ಲಿ ಒಂದಾಗಿದೆ, ರಣಬೀರ್ ಕಪೂರ್ (Ranbir Kapoor) ಅವರ ರಾಮನಾಗಿ ರೂಪಾಂತರಗೊಳ್ಳುವುದರಿಂದ ಹಿಡಿದು ಸಾಯಿ ಪಲ್ಲವಿ ಸೀತಾದೇವಿಯಾಗಿ ನಟಿಸುವವರೆಗೆ. ಈಗ, ರಾಮಾನಂದ ಸಾಗರ್ ಅವರ ಪೌರಾಣಿಕ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಚಿಖ್ಲಿಯಾ , ಸಾಯಿ ಪಲ್ಲವಿ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

Trisha Krishnan: 'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!

'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!

Trisha Krishnan: ಈ ಚಿತ್ರ ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಕ್ಕೆ ಬೆಳಗ್ಗೆಯಿಂದಲೇ ಸಕಾರಾತ್ಮಕ ವಿಮರ್ಶೆಗಳು ಬಂದವು ಮತ್ತು ಮೊದಲ ದಿನ ಉತ್ತಮ ಕಲೆಕ್ಷನ್ ಗಳಿಸಿತು. ತ್ರಿಷಾ, ಮೊದಲ ದಿನ ಜನ ನಾಯಗನ್ ಚಿತ್ರದ ಮೊದಲ ಪ್ರದರ್ಶನವನ್ನು ತಪ್ಪಿಸಿಕೊಳ್ಳಲಿಲ್ಲ. ಅವರು ಚೆನ್ನೈನ ರೋಹಿಣಿ ಥಿಯೇಟರ್‌ನಲ್ಲಿ ತಮ್ಮ ತಾಯಿ ಮತ್ತು ಸ್ನೇಹಿತರೊಂದಿಗೆ ವಿಜಯ್ ಅವರ ಚಿತ್ರವನ್ನು ವೀಕ್ಷಿಸಿದರು. ಒನ್ ಲಾಸ್ಟ್ ಟೈಮ್.. ಒನ್ ಲಾಸ್ಟ್ ಡ್ಯಾನ್ಸ್" ಎಂದು ಸ್ನೇಹಿತರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Ramayana Movie: ರಣಬೀರ್ ಕಪೂರ್ ಅವರ ಈ ತ್ಯಾಗವನ್ನು ಕೊಂಡಾಡಿದ ಯಶ್‌!

ರಣಬೀರ್ ಕಪೂರ್ ಅವರ ಈ ತ್ಯಾಗವನ್ನು ಕೊಂಡಾಡಿದ ಯಶ್‌!

Actor Yash: ಅಮೆರಿಕಾದಲ್ಲಿ ನಡೆದ ಕಾಮಿಕ್ ಕಾನ್ ನಲ್ಲಿ ರಾಮಾಯಣದ ನಿರ್ಮಾಪಕರು ಚಿತ್ರದ ಬಗ್ಗೆ ಚರ್ಚೆಗೆ ಕುಳಿತರು. ಚಿತ್ರದಲ್ಲಿ ರಾವಣನ ಪಾತ್ರ ವಹಿಸಿರುವ ಯಶ್, ಚಿತ್ರದ ಬಗ್ಗೆ ಮಾತ್ರವಲ್ಲ, ಚಿತ್ರದಲ್ಲಿನ ಅವರ ಸಹನಟ ಬಗ್ಗೆಯೂ ಮಾತನಾಡಿದರು. ರಣಬೀರ್ (Ranbir Kapoor) ಅವರ ರಾಮನ ಪಾತ್ರದ ಬಗ್ಗೆ ಯಶ್ ಮೆಚ್ಚುಗೆ ವ್ಯಕ್ತಪಡಿಸಿ ವೀಕ್ಷಕರಿಗೆ ಸಂದೇಶ ಹಂಚಿಕೊಂಡರು. ರಾಮನ ಪಾತ್ರ ನಿರ್ವಹಿಸುವುದು ಸುಲಭವಲ್ಲ ಮತ್ತು ಅವರು ನಿಜವಾಗಿಯೂ ಕೆಲಸ ಮಾಡಿದ ರೀತಿ, ಅವರ ಬಗ್ಗೆ ಅಪಾರ ಗೌರವವಿದೆ" ಎಂದು ಹೇಳಿದರು.

Ramayana trailer: ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

Ramayana trailer: ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಜಾಗತಿಕ ಪಾಲುದಾರಿಕೆಯಿಂದಾಗಿ ಟ್ರೇಲರ್ ಅನ್ನು ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ (Release) ಮಾಡಲು ನಿರ್ಧರಿಸಲಾಗಿದೆ. ಈ ಬೆಳವಣಿಗೆಯನ್ನು ಘೋಷಿಸಿದ ಮಲ್ಹೋತ್ರಾ, ಇದು ಭಾರತೀಯ ಸಿನಿಮಾಗೆ ಒಂದು ಹೆಗ್ಗುರುತು ಕ್ಷಣ ಎಂದು ಬಣ್ಣಿಸಿದರು ಮತ್ತು ರಾಮಾಯಣವನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಕೊಂಡೊಯ್ಯುವ ಅವರ ಬಹುದಿನಗಳ ಕನಸು ಅಂತಿಮವಾಗಿ ನನಸಾಗುತ್ತಿದೆ ಎಂದು ಹೇಳಿದರು.

Kannada New Movie: ವಿ. ನಾಗೇಂದ್ರ ಪ್ರಸಾದ್  ಮೂವಿ; ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ಔಟ್‌

‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ಔಟ್‌!

Kannada New Movie: ಡಾ. ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾದ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಸೋನು ನಿಗಮ್

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಗಾಯಕ

Sonu Nigam: ಯುವಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳು ಏಕೆ ಮೌನವಾಗಿರುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳು ಸೂಕ್ಷ್ಮ ವಿಷಯಗಳ ಬಗ್ಗೆ ಮಾತೇ ಆಡುವುದಿಲ್ಲ ಆರೋಪಿಸಿದರು. ಸದ್ಯ ಸೋನು ಅವರ ನಡವಳಿಕೆ ಕಂಡು ಅತ್ಯಂತ ನಾಚಿಗೇಡು ಎಂದು ಕಮೆಂಟ್‌ ಮಾಡಿದ್ದಾರೆ.

Indian Idol 16 grand finale: ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

Indian Idol 16 grand finale: ಈ ಬಾರಿ, ಕಾರ್ಯಕ್ರಮದ ಥೀಮ್ "ಯಾದೋಂಕಿ ಪ್ಲೇಪಟ್ಟಿ" ಆಗಿತ್ತು, ಇದು ಸೀಸನ್ ಉದ್ದಕ್ಕೂ ವೀಕ್ಷಕರನ್ನು ನಾಸ್ಟಾಲ್ಜಿಯಾ ಮತ್ತು ಉತ್ತಮ ಸಂಗೀತದೊಂದಿಗೆ ಸಂಪರ್ಕಿಸುವಂತೆ ಮಾಡಿತು. ಈಗ, ಅಂತಿಮ ಹಂತದಲ್ಲಿ, ಅಂಶಿಕಾ ಚೋಂಕರ್, ಜ್ಯೋತಿರ್ಮಯಿ ನಾಯಕ್, ಮನರಾಜ್ ವೀರ್ ಸಿಂಗ್, ಮಸ್ಕ್ ಬೋಸು, ಸುಹೇಲ್ ಸೂಫಿ ಮತ್ತು ತನಿಷ್ಕ್ ಶುಕ್ಲಾ ಟ್ರೋಫಿಯನ್ನು ಗೆಲ್ಲುವ ಅಗ್ರ ಆರು ಫೈನಲಿಸ್ಟ್‌ಗಳಾಗಿ ಮುಖಾಮುಖಿಯಾಗಲಿದ್ದಾರೆ.

ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ: 'ಹೋರಾಟ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬನ್ನಿ'- ಕನ್ನಡದ ಮಕ್ಕಳಿಗೆ ನಟ ಕಿಶೋರ್ ಭಾವನಾತ್ಮಕ ಮನವಿ

ʻನಾವು ವೈರಿಗಳಲ್ಲ, ನಿಮ್ಮ ಭವಿಷ್ಯಕ್ಕಾಗಿ ಬನ್ನಿʼ; ನಟ ಕಿಶೋರ್ ಮನವಿ

ನೀಟ್ ಪರೀಕ್ಷೆಯ ಸಾಲು ಸಾಲು ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಕನ್ನಡ ಮಕ್ಕಳ ಭಾಗವಹಿಸುವಿಕೆ ಕಡಿಮೆಯಿರುವುದಕ್ಕೆ ನಟ ಕಿಶೋರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮದೇ ಸ್ವಂತ ಭವಿಷ್ಯದ ರಕ್ಷಣೆಗಾಗಿ ಹೋರಾಟಕ್ಕೆ ಧುಮುಕಬೇಕೆಂದು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

Thalapathy Vijay: ʻಜನ ನಾಯಗನ್ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Jana Nayagan Movie Review: ತಮಿಳುನಾಡು ಸಿಎಂ 'ದಳಪತಿ' ವಿಜಯ್ ನಟನೆಯ ಅಂತಿಮ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ಮೂಲ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ವಿಜಯ್‌ ಫ್ಯಾನ್ಸ್‌ಗೆ ಇಷ್ಟವಾಗುತ್ತದೆಯೇ? ವಿಜಯ್‌ ಅವರಿಗೆ ಉತ್ತಮವಾದ ಬೀಳ್ಕೊಡುಗೆ ಸಿಕ್ಕಿದೆಯಾ? ಈ ಸಿನಿಮಾ ವಿಮರ್ಶೆ ಓದಿ.

"ಬೇಡ ಎಂದರೂ ಜ್ಞಾನಪೀಠ ಪ್ರಶಸ್ತಿ ಚರ್ಚೆ": ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ, ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಟ್ರೋಲ್‌

ಪ್ರೇಮ್ ಅಭಿಯಾನಕ್ಕೆ ಫುಲ್‌ ಸ್ಟಾಪ್‌ ಇಟ್ಟ ಹಂಸಲೇಖ! ಏನಿದು ಘಟನೆ?

Hamsalekha: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಕೆಲ ಅಭಿಮಾನಿಗಳು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಸಾರ್ವಜನಿಕ ಅಭಿಯಾನವನ್ನೇ ಪ್ರಾರಂಭಿಸಿದ್ದರು. ಇದೀಗ ಸ್ವತಃ ಹಂಸಲೇಖ ಅವರೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Jana Nayagan Twitter Review: ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ಜನ ನಾಯಗನ್‌ಗೆ ಪ್ರೇಕ್ಷಕರ ಜಯಕಾರ

ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ʻಜನ ನಾಯಗನ್‌ʼಗೆ ಪ್ರೇಕ್ಷಕರ ಜಯಕಾರ

Jana Nayagan Twitter Review: ಭಾರೀ ಮುಂಗಡ ಬುಕ್ಕಿಂಗ್ ಹಾಗೂ ಹೆಚ್ಚುತ್ತಿರುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಆರಂಭ ಪಡೆಯುವ ನಿರೀಕ್ಷೆಯಿದೆ. ಭಾರತದಲ್ಲಿ ಸುಮಾರು 2,500 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗಿವೆ. ಆದರೆ ತಮಿಳುನಾಡಿನಲ್ಲಿ ಎಂದಿನಂತೆ ಬೆಳಗ್ಗೆ 9 ಗಂಟೆಯಿಂದ ಪ್ರದರ್ಶನಗಳು ಆರಂಭಗೊಂಡಿವೆ. ಟ್ವಿಟರ್‌ ವಿಮರ್ಶೆ ಹೀಗಿದೆ.

Actor Yash: ‘ಜನ ನಾಯಗನ್’ ಪ್ರಚಾರ ವೇಳೆ  `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

‘ಜನ ನಾಯಗನ್’ ಪ್ರಚಾರ ವೇಳೆ `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Actor Yash: ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಆಗಸ್ಟ್ 26, 2026 ರಂದು ಚಿತ್ರಮಂದಿರಗಳಿಗೆ ಆಗಮಿಸಲಿದೆ. ಸಿನಿಮಾದ ನಿರ್ಮಾಪಕ ವೆಂಕಟ್ ಅವರು ತಮ್ಮದೇ ನಿರ್ಮಾಣದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿ ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

Amruthdhaare Serial: ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

Amruthdhaare Serial: ಅಮೃತಧಾರೆಯಲ್ಲಿ ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ವೀಕ್ಷಕರು ಭೂಮಿಕಾ ನಡವಳಿಕೆಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜೈದೇವ್‌ ವಿಚಾವಾಗಿಯೂ ಕುತೂಹಲ ತಿರುವು ಪಡೆದುಕೊಂಡಿದೆ. ಜೈದೇವ್‌ ಸ್ವತಃ ಭಾವನ ಮುಂದೆ ಸಿಕ್ಕಿ ಬೀಳುವಂತಿದೆ. ಭೂಮಿ ತಮ್ಮ ಏಕಾಏಕಿ ಜಯದೇವ್‌ ಭೇಟಿ ಮಾಡಲು ಬಂದಿದ್ದಾನೆ.

sumeet sachdev: ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

sumeet sachdev: ನಟ ಸುಮಿತ್ ಸಚ್‌ದೇವ್ (sumeet sachdev) ಇತ್ತೀಚೆಗೆ ಭೀಕರ ಘಟನೆಯಿಂದ ಪಾರಾಗಿದ್ದಾರೆ. ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿ, ಕೆಲವೇ ಕ್ಷಣಗಳಲ್ಲಿ ಅವರು ಸಾವು-ಬದುಕಿನ ನಡುವೆ ಹೋರಾಡುವಂತಾಗಿತ್ತು. ತಮ್ಮ ಸಹೋದರನ ಸಮಯಪ್ರಜ್ಞೆಯಿಂದ ತಮಗೆ ಮರುಜೀವ ಸಿಕ್ಕಿದೆ ಎಂದು ಸ್ವತಃ ಸುಮೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ (video) ಹಂಚಿಕೊಳ್ಳುವ ಮೂಲಕ ಈ ಅನುಭವ ಬಿಚ್ಚಿಟ್ಟಿದ್ದಾರೆ.

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

salman Khan: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೆಂಬಲ ನೀಡಿದ್ದಾರೆ. ಕಳೆದ ಹಲವಾರು ದಿನಗಳಿಂದ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ . ನಟ ಕೊನೆಗೂ ಮೌನ ಮುರಿದು ದೀರ್ಘ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.

Aamir Khan: ‘3 ಈಡಿಯಟ್ಸ್’ ಸಿನಿಮಾ  ಮರು-ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌ ಇಟ್ಟ ನಿರ್ಮಾಪಕ

3 ಈಡಿಯಟ್ಸ್ ಸಿನಿಮಾ ಮರು ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌!

Aamir Khan: 3 ಈಡಿಯಟ್ಸ್ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಹೆಚ್ಚು ಸಮಯ ಕಾಯಬೇಕಾಗಬಹುದು. ಬ್ಲಾಕ್‌ಬಸ್ಟರ್ ಹಾಸ್ಯ-ಸಿನಿಮಾ ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಿಗೆ ಮರಳಲಿದೆ ಎಂಬ ವರದಿಗಳನ್ನು ವಿಧು ವಿನೋದ್ ಚೋಪ್ರಾ ಫಿಲ್ಮ್ಸ್ ಅಧಿಕೃತವಾಗಿ ತಳ್ಳಿಹಾಕಿದೆ.

ನೀಟ್‌ ಪರೀಕ್ಷಾ ಅಕ್ರಮ ಆಧರಿಸಿ ಜೀ5ನಲ್ಲಿ ಹೊಸ ವೆಬ್‌ ಸರಣಿ: ಸಂಚಲನ ಮೂಡಿಸಿದ 'ದಿ ಸ್ಕ್ಯಾಮ್: ಲೀಕ್ಡ್' ಟೀಸರ್‌!

ನೀಟ್‌ ಸ್ಕ್ಯಾಮ್‌ ಕುರಿತು ಜೀ5ನಲ್ಲಿ ವೆಬ್‌ ಸೀರೀಸ್‌! ಟೀಸರ್‌ನಲ್ಲಿ ಏನಿದೆ?

ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಹಗರಣ ಆಧರಿಸಿ ಜೀ5 ಒಟಿಟಿಯಲ್ಲಿ 'ದಿ ಸ್ಕ್ಯಾಮ್: ಲೀಕ್ಡ್' ಎಂಬ ವೆಬ್ ಸರಣಿ ನಿರ್ಮಾಣವಾಗುತ್ತಿದ್ದು, ಜುಲೈ 22 ರಂದು ಬಿಡುಗಡೆಯಾದ ಇದರ ಟೀಸರ್ ಭಾರಿ ಸಂಚಲನ ಮೂಡಿಸಿದೆ.

MrBeast: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

MrBeast: ಮಿಸ್ಟರ್ ಬೀಸ್ಟ್ ಎಂದೇ ಜನಪ್ರಿಯರಾಗಿರುವ ಜಿಮ್ಮಿ ಡೊನಾಲ್ಡ್ಸನ್, ತಮ್ಮ ದೀರ್ಘಕಾಲದ ಗೆಳತಿ ಥಿಯಾ ಬೂಯ್ಸೆನ್ ಅವರನ್ನು ವಿವಾಹವಾದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. MrBeast ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್ಸನ್ "ನಾನು ಮಿಸೆಸ್ ಬೀಸ್ಟ್ ಅನ್ನು ಕಂಡುಕೊಂಡೆ" (I found MrsBeast). ಇದು ನನ್ನ ಜೀವನದ ಅತ್ಯಂತ ಸುಂದರವಾದ ದಿನ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

Loading...