ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

ʻಬಿಗ್‌ ಬಾಸ್‌ʼ ಕನ್ನಡ 12ರಲ್ಲಿ ರಘುಗೆ ಒಮ್ಮೆಯೂ ಸಿಗಲಿಲ್ಲ ʻಉತ್ತಮʼ; ಬೇಸರಗೊಂಡ ಗೆಳೆಯನಿಗೆ ಖತರ್ನಾಕ್‌ ಸಲಹೆ ಕೊಟ್ಟ ಗಿಲ್ಲಿ ನಟ!

ರಘುಗೆ ಒಮ್ಮೆಯೂ ಸಿಗದ 'ಉತ್ತಮ'; ಗೆಳೆಯನ ಬೇಸರಕ್ಕೆ ಗಿಲ್ಲಿಯ ಖತರ್ನಾಕ್ ಸಲಹೆ

Bigg Boss Kannada 12 Update: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಸದಾ ಅಡುಗೆ ಮತ್ತು ಟಾಸ್ಕ್‌ನಲ್ಲಿ ತೊಡಗಿಸಿಕೊಂಡರೂ ತಮಗೆ ಒಮ್ಮೆಯೂ 'ಉತ್ತಮ' ಪಟ್ಟ ಸಿಕ್ಕಿಲ್ಲ ಎಂದು ರಘು ಬೇಸರ ವ್ಯಕ್ತಪಡಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ 12ʼ ಮುಗಿಯೋದ್ರೊಳಗೆ ಅಶ್ವಿನಿ ಗೌಡ - ಧ್ರುವಂತ್‌ ಕನಸನ್ನು ನನಸು ಮಾಡಿದ ʻಕಿಚ್ಚʼ ಸುದೀಪ್;‌ ಕಣ್ಣೀರಿಟ್ಟ ರಾಜಮಾತೆ!

Bigg Boss 12 ಫಿನಾಲೆಗೂ ಮುನ್ನ ಅಶ್ವಿನಿ-ಧ್ರುವಂತ್‌ಗೆ ದೊಡ್ಡ ಉಡುಗೊರೆ!

Bigg Boss Kannada 12 Update: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಒಂದು ವಾರ ಬಾಕಿ ಇರುವಂತೆ, ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಅಶ್ವಿನಿ ಗೌಡ ಮತ್ತು ಧ್ರುವಂತ್‌ಗೆ ನೀಡಿ ಗೌರವಿಸಿದ್ದಾರೆ. ಈ ಸೀಸನ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಪಡೆಯಬೇಕೆಂಬ ದೊಡ್ಡ ಕನಸಿತ್ತು.

ʻಕೆಜಿಎಫ್ʼ ರೈಟರ್ ಸಿನಿಮಾಗೆ ಸಾಥ್‌ ನೀಡಿದ ಬಾಲಿವುಡ್‌ನ ರೆಮೋ ಡಿಸೋಜಾ; ದುಬೈನಲ್ಲಿ ಕನ್ನಡದ 'ವೈಲ್ಡ್ ಟೈಗರ್ ಸಫಾರಿ' ಟೀಸರ್‌ ರಿಲೀಸ್‌!

ದುಬೈ ಗ್ಲೋಬಲ್ ವಿಲೇಜ್‌ನಲ್ಲಿ ಕನ್ನಡದ ವೈಲ್ಡ್ ಟೈಗರ್ ಸಫಾರಿ ಟೀಸರ್‌ ರಿಲೀಸ್

Wild Tiger Safari Update: 'ಕೆಜಿಎಫ್' ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ 'ವೈಲ್ಡ್ ಟೈಗರ್ ಸಫಾರಿ' ಚಿತ್ರದ ಟೀಸರ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಲಿವುಡ್ ನಿರ್ದೇಶಕ ರೆಮೋ ಡಿಸೋಜಾ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ʻಟಾಕ್ಸಿಕ್‌ʼ ಟೀಸರ್‌ನಲ್ಲಿ ಅಶ್ಲೀಲತೆ; ಸೆನ್ಸಾರ್‌ ಮಂಡಳಿಗೆ ದೂರು ಸಲ್ಲಿಕೆ! ʻಕುಟುಂಬಸಮೇತ ನೋಡೋಕಾಗುತ್ತಾ? ಸಿನಿಮಾದವ್ರಿಗೆ ಜವಾಬ್ದಾರಿ ಇರಬೇಕುʼ ಎಂದು ಪ್ರಶ್ನೆ!

Yash: ʻಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲತೆಯಿದೆʼ; ದೂರು ದಾಖಲು

Toxic Teaser Controversy: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ಆರೋಪಿಸಿ ವಕೀಲ ಲೋಹಿತ್ ಕುಮಾರ್ ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮುನ್ನ ಸೆನ್ಸಾರ್ ಪ್ರಮಾಣಪತ್ರ ಪ್ರದರ್ಶಿಸಿಲ್ಲ ಮತ್ತು ಇದು ಕುಟುಂಬ ಸಮೇತ ನೋಡುವಂತಿಲ್ಲ ಎಂದು ಅವರು ದೂರಿದ್ದಾರೆ.

Toxic: ರಾಯನ ಮುಂದೆ ಅಬ್ಬರಿಸಿದ ಆ ಹಾಲಿವುಡ್‌ ವಿಲನ್‌ ಯಾರು ಗೊತ್ತಾ? ಯಶ್‌ಗೆ ಥ್ಯಾಂಕ್ಸ್‌ ಹೇಳಿದ್ದೇಕೆ ಈ ನಟ?

ʻಟಾಕ್ಸಿಕ್‌ʼ ಚಿತ್ರದಲ್ಲಿ ಅಬ್ಬರಿಸಿದ ಹಾಲಿವುಡ್ ವಿಲನ್; ಯಾರೀ ಕೈಲ್ ಪಾಲ್?

Toxic Movie: ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಹಾಲಿವುಡ್ ನಟ ಕೈಲ್ ಪಾಲ್ (Kyle Paul) ಈಗ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪ್ರಭಾವಿ ವಿಲನ್ ಪಾತ್ರ ನಿರ್ವಹಿಸಿರುವ ಇವರು, ತಮಗೆ ಈ ಅವಕಾಶ ನೀಡಿದ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ತಿಳಿಸಿದ್ದಾರೆ.

Parasakthi Twitter Review: ಶಿವಕಾರ್ತಿಕೇಯನ್-ಶ್ರೀಲೀಲಾ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು? ವಿಲನ್ ಪಾತ್ರದಲ್ಲಿ ʻಜಯಂʼ ರವಿ ಮಿಂಚಿದ್ರಾ?

‌ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರಕ್ಕೆ ಹೇಗಿದೆ ರೆಸ್ಪಾನ್ಸ್?

Parashakti Movie Review: ಶಿವಕಾರ್ತಿಕೇಯನ್, ಜಯಂ ರವಿ, ಅಥರ್ವ ಮತ್ತು ಶ್ರೀಲೀಲಾ ಅಭಿನಯದ, ಸುಧಾ ಕೊಂಗರಾ ನಿರ್ದೇಶನದ 'ಪರಾಶಕ್ತಿ' ಸಿನಿಮಾ ಜನವರಿ 10ರಂದು ಬಿಡುಗಡೆಯಾಗಿದೆ. ಈ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಮಾಹಿತಿ.

The Raja Saab Collection: ಮಿಶ್ರ ಪ್ರತಿಕ್ರಿಯೆ ನಡುವೆಯೂ 'ದಿ ರಾಜಾ ಸಾಬ್' ಅಬ್ಬರ; ಪ್ರಭಾಸ್‌ ಹಾರರ್ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

ʻದಿ ರಾಜಾ ಸಾಬ್ʼ ಕಲೆಕ್ಷನ್; ಪ್ರಭಾಸ್ ಸಿನಿಮಾ ಮೊದಲ ದಿನದ ಗಳಿಕೆ ಎಷ್ಟು?

The Raja Saab Box Office: ಪ್ರಭಾಸ್ ಮತ್ತು ಮಾರುತಿ ಕಾಂಬಿನೇಷನ್‌ನ 'ದಿ ರಾಜಾ ಸಾಬ್' ಸಿನಿಮಾ ಜನವರಿ 9ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

Bigg Boss 12: ಗಿಲ್ಲಿ - ರಘು ಜೊತೆ ಯಾರು ಕ್ಲೋಸ್‌ ಆಗಬಾರದು, ಇದು ರಕ್ಷಿತಾಗೆ ಇಷ್ಟ ಆಗಲ್ಲ! ಸತ್ಯ ಹೊರಹಾಕಿಸಿದ ಸುದೀಪ್‌!

ರಕ್ಷಿತಾ ಶೆಟ್ಟಿ ಪೊಸೆಸಿವ್ ಆಟ! 'ಇದು ಯಾರಪ್ಪನ ಮನೆಯೂ ಅಲ್ಲ' ಎಂದ ಸುದೀಪ್‌

BBK 12 Weekend Update: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಘು ಅವರ ಮೇಲೆ ರಕ್ಷಿತಾ ಶೆಟ್ಟಿ ತೋರುತ್ತಿರುವ ಅತಿಯಾದ ಪೊಸೆಸಿವ್ ನಡವಳಿಕೆಯನ್ನು ಕಿಚ್ಚ ಸುದೀಪ್ ಈ ವಾರ ಪ್ರಶ್ನಿಸಿದ್ದಾರೆ. ಗಿಲ್ಲಿ ಜೊತೆ ಬೇರೆಯವರು ಕುಳಿತುಕೊಳ್ಳಬಾರದು ಎಂದು ಬೀನ್ ಬ್ಯಾಗ್ ಸರಿಸಿದ ರಕ್ಷಿತಾ ನಡೆಯನ್ನು ಸುದೀಪ್ ಮಾತನಾಡಿದ್ದಾರೆ.

Bigg Boss Kannada 12: ಅಶ್ವಿನಿ ಗೌಡ - ಧ್ರುವಂತ್ ಮೇಲೆ ಎಲ್ರಿಗೂ ಕಣ್ಣು; ಒಬ್ರು ಉತ್ತಮ, ಮತ್ತೊಬ್ರು ಕಳಪೆ!

ಅಶ್ವಿನಿಗೆ 'ಉತ್ತಮ' ಕಿರೀಟ; ಆಟದಲ್ಲಿ ಗೆದ್ದರೂ ಧ್ರುವಂತ್‌ಗೆ 'ಕಳಪೆ' ಪಟ್ಟ!

Bigg Boss Kannada 12 Update: ಬಿಗ್‌ ಬಾಸ್‌ ಸೀಸನ್ 12ರ ಅಂತ್ಯ ಸಮೀಪಿಸುತ್ತಿರುವ ಬೆನ್ನಲ್ಲೇ ಮನೆಯೊಳಗೆ ಮಹತ್ವದ ಬೆಳವಣಿಗೆ ನಡೆದಿದೆ. ಈ ವಾರ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಶ್ವಿನಿ ಗೌಡ 'ಉತ್ತಮ' ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಇಡೀ ವಾರ ಅಶ್ವಿನಿ ಜೊತೆ ಸೇರಿ ಟಾಸ್ಕ್ ಗೆದ್ದಿದ್ದರೂ, ಧ್ರುವಂತ್ ಅವರು ಮನೆಯವರ ಕೆಂಗಣ್ಣಿಗೆ ಗುರಿಯಾಗಿ 'ಕಳಪೆ' ಪಟ್ಟ ಪಡೆದುಕೊಂಡಿದ್ದಾರೆ.

Prabhas: ಪ್ರಭಾಸ್ ಫ್ಯಾನ್ಸ್ ಹುಚ್ಚಾಟ; ಥಿಯೇಟರ್ ಒಳಗೆ ಕೆಜಿಗಟ್ಟಲೆ ಕಾನ್ಫೆಟ್ಟಿ ಸುಟ್ಟ ಅಭಿಮಾನಿಗಳು!

ಥಿಯೇಟರ್ ಒಳಗೆ ಕೆಜಿಗಟ್ಟಲೆ ಕಾನ್ಫೆಟ್ಟಿ ಸುಟ್ಟ ಪ್ರಭಾಸ್‌ ಫ್ಯಾನ್ಸ್‌!

Prabhas: ಪ್ರಭಾಸ್ ಮತ್ತು ಸಂಜಯ್ ದತ್ ಅವರ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ಬಿಡುಗಡೆಯು ಭಾರತದಾದ್ಯಂತ ವ್ಯಾಪಕ ಉತ್ಸಾಹವನ್ನು ಹುಟ್ಟುಹಾಕಿದೆ, ಆದರೆ ಒಡಿಶಾದ ಅಶೋಕ್ ಥಿಯೇಟರ್‌ನಲ್ಲಿ ನಡೆದ ಒಂದು ನಿರ್ದಿಷ್ಟ ಪ್ರದರ್ಶನವು ಅಭಿಮಾನಿಗಳು ಚಿತ್ರದ ಸಮಯದಲ್ಲಿ ಕಾನ್ಫೆಟ್ಟಿಯನ್ನು ಸುಟ್ಟಿದ್ದಾರೆ. ಇದು ಅಭಿಮಾನಿಗಳ ನಡವಳಿಕೆ ಮತ್ತು ಪ್ರಬುದ್ಧತೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.

Maa Inti Bangaaram: ಸಮಂತಾ ಗಂಡನಾಗಿ ದೂದ್ ಪೇಡಾ ದಿಗಂತ್‌! ʻಮಾ ಇಂಟಿ ಬಂಗಾರಂʼ ಟೀಸರ್‌ನಲ್ಲಿ ಸ್ಯಾಮ್‌ ಬೆಂಕಿ ಅವತಾರ

ಸಮಂತಾ ಗಂಡನಾಗಿ ದೂದ್ ಪೇಡಾ ದಿಗಂತ್‌! ಟೀಸರ್‌ನಲ್ಲಿ ಸ್ಯಾಮ್‌ ಬೆಂಕಿ ಅವತಾರ

Diganth: ನಟಿ ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ 'ಮಾ ಇಂಟಿ ಬಂಗಾರಂ' ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಶುಕ್ರವಾರ (ಜನವರಿ 9), ನಟಿ ಸಮಂತಾ ಅವರ ರೋಮಾಂಚಕ ಟೀಸರ್ ಟ್ರೇಲರ್ ಔಟ್‌ ಆಗಿದೆ. ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಸಮಂತಾ ಮಿಂಚಿದ್ದಾರೆ. ಸಮಂತಾ ಪತಿಯ ಪಾತ್ರದಲ್ಲಿ ನಮ್ಮ ಕನ್ನಡದ ಪ್ರತಿಭೆ ದಿಗಂತ್ ಮಂಚಾಲೆ ನಟಿಸಿದ್ದಾರೆ.

Toxic Teaser:‌ ಯಶ್ ಜೊತೆ ಕಾರಿನಲ್ಲಿದ್ದ ಆ ಸುಂದರಿ 'ನಟಾಲಿಯಾ' ಅಲ್ಲ! 'ಟಾಕ್ಸಿಕ್' ಮಿಸ್ಟರಿ ಹುಡುಗಿ ಬಗ್ಗೆ ಬಿಗ್ ಟ್ವಿಸ್ಟ್ ಕೊಟ್ಟ ಡೈರೆಕ್ಟರ್!‌

ಯಶ್ ಜೊತೆ ಕಾರಿನಲ್ಲಿದ್ದಿದ್ದು ನಟಾಲಿಯಾ ಅಲ್ಲ! 'ಟಾಕ್ಸಿಕ್' ಸುಂದರಿ ರಹಸ್ಯ?

Toxic Mystery Girl: ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನಲ್ಲಿ ಕಾರಿನ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ ಯಾರು ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಆರಂಭದಲ್ಲಿ ಅವರು ಉಕ್ರೇನ್ ಮೂಲದ ನಟಾಲಿಯಾ ಬರ್ನ್ ಎಂದು ಭಾವಿಸಲಾಗಿತ್ತು, ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ ನಟಿಯ ಬಗ್ಗೆ ಫುಲ್‌ ಮಾಹಿತಿ ಹಂಚಿಕೊಂಡಿದ್ದಾರೆ.

Bigg Boss Kannada 12: ಇದೊಂದೇ ಕಾರಣಕ್ಕೆ ಗಿಲ್ಲಿ ಮುಂದೆಯೇ ಶಿಶಿರ್ ಶಾಸ್ತ್ರಿ ನೆನಪಿಸಿಕೊಂಡ ಕಾವ್ಯ!

ಇದೊಂದೇ ಕಾರಣಕ್ಕೆ ಗಿಲ್ಲಿ ಮುಂದೆಯೇ ಶಿಶಿರ್ ಶಾಸ್ತ್ರಿ ನೆನಪಿಸಿಕೊಂಡ ಕಾವ್ಯ!

Gilli Nata: ಬಿಗ್‌ ಬಾಸ್‌ ಫಿನಾಲೆ ಹತ್ತಿರವಾದಂತೆ ಸ್ಪರ್ಧಿಗಳು ಈಗಲೇ ಮನೆಯನ್ನ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ʼ ಅಂದ್ರೆ ಆಟ ಅಷ್ಟೇ ಅಲ್ಲ, ಜೀವನ ಪಾಠ ಕಲಿಸೋ ಶೋ ಅಂರ ರಘು, ಕಾವ್ಯ, ರಾಶಿಕಾ ಮಾತನಾಡಿಕೊಂಡಿದ್ದಾರೆ. ಈ ವೇಳೆ ಕಾವ್ಯ ಅವರು ಶಿಶಿರ್ ಮಾತನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಗಿಲ್ಲಿ ನಟ ಹಾಗೂ ರಕ್ಷಿತಾ ಕೂಡ ಅಲ್ಲೇ ಇದ್ದರು.

Thalapathy Vijay: ʻಜನ ನಾಯಗನ್‌ʼ ಚಿತ್ರಕ್ಕೆ ತಪ್ಪದ ಸಂಕಷ್ಟ, ಸದ್ಯಕ್ಕೆ ಸಿಗೋದಿಲ್ಲ ಸೆನ್ಸಾರ್‌ ಸರ್ಟಿಫಿಕೇಟ್‌; ಕೋರ್ಟ್‌ನಲ್ಲಿ ಮತ್ತೆ ಹೈಡ್ರಾಮಾ!

ಬೆಳಿಗ್ಗೆ ಸಿಹಿ ಸುದ್ದಿ, ಸಂಜೆಗೆ ಕಹಿ! 'ಜನ ನಾಯಗನ್' ರಿಲೀಸ್‌ಗೆ ತಡೆಯಾಜ್ಞೆ

Jana Nayagan Legal Battle: ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾದ ಕುರಿತ ವಿಚಾರಣೆ ಇಂದು (ಜ.9) ನಡೆದಿದೆ. ಆದರೆ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.

Bigg Boss Kannada 12: ಗಿಲ್ಲಿ ಜೊತೆ ಮಾತಾಡೋಕೆ ಪ್ರೈವೆಸಿ ಬೇಕಾ? ಇದೇನು ನಿನ್ನ ಮನೇನಾ?  ರಕ್ಷಿತಾ ಮೆಲೆ ಉರಿದು ಬಿದ್ದ ರಾಶಿಕಾ

ಗಿಲ್ಲಿ ಜೊತೆ ಮಾತಾಡೋಕೆ ಪ್ರೈವೆಸಿ ಬೇಕಾ? ರಕ್ಷಿತಾ ಮೆಲೆ ರಾಶಿಕಾ ಗರಂ

Rashika Shetty: ಬಿಗ್‌ ಬಾಸ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್‌ ಹೆಚ್ಚಾಗುತ್ತಿದೆ. ಕಳಪೆ ಉತ್ತಮ ನೀಡುವ ಸಮಯದಲ್ಲಿ ರಾಶಿಕಾ ಹಾಗೂ ರಕ್ಷಿತಾ ನಡುವೆ ವಾದ ವಿವಾದಗಳು ಆಗಿವೆ. ಸಂಪ್ರದಾಯದಂತೆ ಒಬ್ಬೊಬ್ಬರು ಒಬ್ಬೊಬ್ಬರಿಗೆ ಕಳಪೆ ಕೊಟ್ಟಿದ್ದಾರೆ. ರಾಶಿಕಾ, ರಕ್ಷಿತಾ ಶೆಟ್ಟಿಗೆ ಕಳಪೆ ಕೊಟ್ಟಿದ್ದಾರೆ ಆದರೆ ಇದು ರಕ್ಷಿತಾ ಶೆಟ್ಟಿಗೆ ಸಖತ್‌ ಕೋಪ ಬರಿಸುವಂತೆ ಮಾಡಿದೆ. ರಕ್ಷಿತಾರ ಜಗಳ, ವಾದ ನೋಡಿ ಧ್ರುವಂತ್ ನಕ್ಕಿದ್ದಾರೆ.

ದುಬಾರಿ ʻಜನ ನಾಯಗನ್‌ʼ ಚಿತ್ರಕ್ಕೆ ನಿರ್ಮಾಪಕರು ಖರ್ಚು ಮಾಡಿದ್ದೆಷ್ಟು? ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?

Thalapathy Vijay: 'ಜನ ನಾಯಗನ್' ಸಿನಿಮಾ ಕಲಾವಿದರ ಸಿಕ್ಕ ಸಂಭಾವನೆ ಎಷ್ಟು?

Jana Nayagan Budget: 'ದಳಪತಿ' ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಸೆನ್ಸಾರ್ ಸಮಸ್ಯೆಯಿಂದಾಗಿ ಜ. 9ರ ಬಿಡುಗಡೆಯಿಂದ ವಂಚಿತವಾಗಿದ್ದರೂ, ತನ್ನ ಬೃಹತ್ ಬಜೆಟ್‌ನಿಂದ ಸದ್ದು ಮಾಡುತ್ತಿದೆ. ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ಸ್ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಿದ್ದು, ವಿಜಯ್‌ ದುಬಾರಿ ಸಂಭಾವನೆ ಪಡೆಯುವ ಮೂಲಕ ಭಾರತದ ಅತಿಹೆಚ್ಚು ಸಂಭಾವನೆ ಪಡೆದ ನಟ ಎನಿಸಿಕೊಂಡಿದ್ದಾರೆ.

21ನೇ ಬಾರಿಗೆ ಒಂದಾದ ಹಂಸಲೇಖ - ಎಸ್‌. ಮಹೇಂದರ್;‌  ಶ್ರೀಗುರುರಾಯರು ಬ್ಯಾನರ್‌ನಲ್ಲಿ ಹೊಸ ಘೋಷಣೆ

ಹಂಸಲೇಖ - ಎಸ್‌. ಮಹೇಂದರ್ ಜೋಡಿಯ 21ನೇ ಸಿನಿಮಾ ಘೋಷಣೆ

Hamsalekha - S Mahendar New Movie: ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲೊಂದಾದ ನಿರ್ದೇಶಕ ಎಸ್. ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ 21ನೇ ಬಾರಿಗೆ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ್ದಾರೆ. ಕಳೆದ 33 ವರ್ಷಗಳಿಂದ 20 ಸಿನಿಮಾಗಳಲ್ಲಿ ಸತತ ಗೆಲುವು ಕಂಡಿರುವ ಈ ಜೋಡಿ, ಈಗ 'ಶ್ರೀಗುರುರಾಯರು' ಬ್ಯಾನರ್ ಅಡಿಯಲ್ಲಿ ಹೊಸ ಚಿತ್ರಕ್ಕೆ ಸಜ್ಜಾಗಿದೆ.

ʻಟಾಕ್ಸಿಕ್‌ʼ ಟೀಸರ್‌ ರಿಲೀಸ್‌ ಬೆನ್ನಲ್ಲೇ ಯಶ್‌ ಪ್ರತಿಭೆಯನ್ನು ಕೊಂಡಾಡಿದ ನಿರ್ದೇಶಕಿ ಗೀತು ಮೋಹನ್‌ದಾಸ್‌

'ಟಾಕ್ಸಿಕ್' ಟೀಸರ್ ಸುನಾಮಿ: ಯಶ್ ಪ್ರತಿಭೆ ಕಂಡು ಬೆರಗಾದ ಗೀತು ಮೋಹನ್‌ದಾಸ್‌

Toxic Movie Teaser Released: ಯಶ್‌ ಅವರ ಟಾಕ್ಸಿಕ್ ಟೀಸರ್ ಕೇವಲ 24 ಗಂಟೆಗಳಲ್ಲಿ 200 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ. ಈ ಸಂಭ್ರಮದ ನಡುವೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರು ಯಶ್ ಅವರ ಪ್ರತಿಭೆ, ಶಿಸ್ತು ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ‌

ʻಮಾರ್ಕ್ʼ ಬಾಕ್ಸ್‌ ಆಫೀಸ್‌ ಕಲೆಕ್ಷನ್; 2 ವಾರಕ್ಕೆ ‌ʻಕಿಚ್ಚʼ ಸುದೀಪ್‌  ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಆರ್ಭಟ; 50 ಕೋಟಿ ರೂ. ಗಡಿ ದಾಟಿದ 'ಮಾರ್ಕ್'!

Mark movie box office: ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಕೇವಲ ಎರಡು ವಾರಗಳಲ್ಲಿ 51.30 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಸತ್ಯಜ್ಯೋತಿ ಫಿಲ್ಮ್ಸ್‌ಗೆ‌ ಕನ್ನಡಕ್ಕೆ ಅದ್ಧೂರಿ ಕಮ್‌ ಬ್ಯಾಕ್‌ ನೀಡಿರುವ ಈ ಚಿತ್ರ, ಬೆಂಗಳೂರಿನಲ್ಲಿ ಮೂರನೇ ವಾರವೂ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದೆ.

Gilli Nata: ʻಪ್ಲೀಸ್..‌ ಗಿಲ್ಲಿಗೆ ಒಂದು ಬಾಚಣಿಗೆ ಕೊಡ್ರಿʼ; ಕೈಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ, ಅಬ್ಬಬ್ಬಾ! ಇಂಥ ಕ್ರೇಜ್‌ ಎಲ್ಲಾದರೂ ಉಂಟೇ?

'ಗಿಲ್ಲಿ ನಟನಿಗೆ ಬಾಚಣಿಗೆ ಕೊಡ್ರಿ': ಟ್ಯಾಟೂ ಆರ್ಟಿಸ್ಟ್ ಮನವಿ ಮಾಡಿದ್ದೇಕೆ?

Bigg Boss 12 Gilli Nata: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಸೃಷ್ಟಿಸಿರುವ ಕ್ರೇಜ್ ಈಗ ಮಂಡ್ಯದ ಅಭಿಮಾನಿಯೊಬ್ಬರು ಅವರ ಚಿತ್ರವನ್ನೇ ಕೈಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದೆ. ಟ್ಯಾಟೂ ಆರ್ಟಿಸ್ಟ್ "ಟ್ಯಾಟೂ ಘೋಸ್ಟ್" ಅವರು ಗಿಲ್ಲಿಯ ಕೆದರಿದ ಕೂದಲನ್ನು ಚಿತ್ರಿಸುವುದು ಕಷ್ಟವೆಂದು ಹಾಸ್ಯಮಯವಾಗಿ ಬಾಚಣಿಗೆ ನೀಡುವಂತೆ ಬಿಗ್ ಬಾಸ್ ಟೀಮ್‌ಗೆ ಮನವಿ ಮಾಡಿದ್ದಾರೆ.

Jana Nayagan: ವಿಜಯ್‌ಗೆ  ಬಿಗ್‌ ರಿಲೀಫ್; 'ಜನ ನಾಯಗನ್' ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ವಿಜಯ್‌ಗೆ ಬಿಗ್‌ ರಿಲೀಫ್; 'ಜನನಾಯಗನ್‌'ಗೆ ಸಿಕ್ತು ಗ್ರೀನ್ ಸಿಗ್ನಲ್!

Madras High Court: ಸೆನ್ಸಾರ್ ಪ್ರಮಾಣಪತ್ರದ ಕುರಿತಾದ ಭಾರೀ ವಿವಾದದ ನಂತರ, ಮದ್ರಾಸ್ ಹೈಕೋರ್ಟ್ ಶುಕ್ರವಾರ ಸೆನ್ಸಾರ್ ಮಂಡಳಿಗೆ ವಿಜಯ್ ಅವರ ' ಜನ ನಾಯಗನ್' ಚಿತ್ರಕ್ಕೆ ಯುಎ ಪ್ರಮಾಣಪತ್ರವನ್ನು ನೀಡುವಂತೆ ಆದೇಶಿಸಿದೆ . ವಿಜಯ್ ಪೂರ್ಣಾವಧಿ ರಾಜಕೀಯಕ್ಕೆ ಧುಮುಕುವ ಮೊದಲು ಅವರ ಕೊನೆಯ ಚಿತ್ರ ಎಂದು ಹೇಳಲಾಗಿದೆ. ಪ್ರಮಾಣಪತ್ರವನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಸೆನ್ಸಾರ್ ಮಂಡಳಿಗೆ ಆದೇಶಿಸಿತು.

Kantara Chapter 1:  ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ‘ಕಾಂತಾರ ಚಾಪ್ಟರ್ 1’;  ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್ ಸಿನಿಮಾ ಸ್ಪರ್ಧೆ

ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ‘ಕಾಂತಾರ ಚಾಪ್ಟರ್ 1’

Rishab: ಕಳೆದ ವರ್ಷ 'ಕಾಂತಾರ-1' ಹಾಗೂ 'ಮಹಾವತಾರ್‌ ನರಸಿಂಹ' ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಿರ್ಮಾಣ ಮಾಡಿದ್ದು ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’. ಚಿತ್ರಗಳನ್ನು ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ರೇಸ್​​ಗೆ ಪ್ರವೇಶಿಸಿದೆ.

Bigg Boss Kannada12: ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ; ಗಿಲ್ಲಿಗೆ ಸ್ನೇಹಿತೆ ರಕ್ಷಿತಾ ಬುದ್ಧಿಮಾತು

ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ;ಗಿಲ್ಲಿಗೆ ರಕ್ಷಿತಾ ಬುದ್ಧಿಮಾತು

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ, ಕಾವ್ಯ ಹಾಗೂ ರಕ್ಷಿತಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ರಕ್ಷಿತಾ ಶೆಟ್ಟಿ ಅವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ (Kavya shaiva) ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ ಹೆಚ್ಚಾಗಿದೆ. ಅದು ಗಿಲ್ಲಿಗೂ ಗೊತ್ತಾಗಿದೆ. ಕಾವ್ಯ ಹಾಗೂ ಗಿಲ್ಲಿ ಮಧ್ಯೆ ಸಣ್ಣ ಮನಸ್ತಾಪ ಆಗಿದೆ . ಹೀಗಾಗಿ ಪದೇ ಪದೇ ಗಿಲ್ಲಿ ಅವರು ಕಾವ್ಯಾಗೆ ಸಾರಿ ಕೇಳ್ತಾನೆ ಇದ್ದಾರೆ. ಆದರೂ ಕಾವ್ಯ ಸರಿ ಹೋದಂತಿಲ್ಲ. ಇದರ ಬೆನ್ನಲ್ಲೇ ರಕ್ಷಿತಾ ಗಿಲ್ಲಿಗೆ ಕೆಲವು ಬುದ್ದಿ ಮಾತುಗಳನ್ನು ಒಳ್ಳೆಯ ಸ್ನೇಹಿತೆಯಾಗಿ ಹೇಳಿದ್ದಾರೆ. ಏನದು?

The Raja Saab Twitter review: ಪ್ರಭಾಸ್‌ 'ದಿ ರಾಜಾಸಾಬ್' ಸಿನಿಮಾ ಅದ್ಧೂರಿ ರಿಲೀಸ್‌; ನೋಡಿದವರು ಏನಂದ್ರು?

'ದಿ ರಾಜಾಸಾಬ್' ಸಿನಿಮಾ ಅದ್ಧೂರಿ ರಿಲೀಸ್‌; ನೋಡಿದವರು ಏನಂದ್ರು?

Prabhas: ಪ್ರಭಾಸ್ 'ದಿ ರಾಜಾ ಸಾಬ್' ತೆಲುಗು ಹಾರರ್-ಹಾಸ್ಯ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಿದ್ದಾರೆ. ಇಂದು (ಜನವರಿ 9) ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಮಾರುತಿ ನಿರ್ದೇಶನದ ಈ ಚಿತ್ರವು ಭಾರತದಾದ್ಯಂತ ರಿಲೀಸ್‌ ಆಗಿದೆ. ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ನಡೆದಿವೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Loading...