ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಅಶ್ವಿನಿ ಗೌಡಗೆ ಮತ್ತೆ ಕಾಲೆಳೆದ ಗಿಲ್ಲಿ ನಟ; ಈ ಬಾರಿ ಸಾಥ್‌ ನೀಡಿದ ರಾಶಿಕಾ ಶೆಟ್ಟಿ!

ʻಕ್ಯಾಪ್ಟನ್ ಆಗೋ ಯೋಗ್ಯತೆ ಇಲ್ಲʼ; ಅಶ್ವಿನಿಗೆ ಗಿಲ್ಲಿ - ಕಾವ್ಯ ಟಕ್ಕರ್!

Gilli Nata vs Ashwini: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಶ್ವಿನಿ ಗೌಡ ಅವರನ್ನು ಅಣಕಿಸುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಅಶ್ವಿನಿ ಅವರು ಧ್ರುವಂತ್ ಬಳಿ ರಕ್ಷಣೆ ಕೇಳುವುದನ್ನು ಇಮಿಟೇಟ್ ಮಾಡಿದ ಗಿಲ್ಲಿಗೆ ರಾಶಿಕಾ ಮತ್ತು ಕಾವ್ಯ ಧ್ವನಿಗೂಡಿಸಿದ್ದಾರೆ. ಇದರಿಂದ ಕೆರಳಿದ ಅಶ್ವಿನಿ, "ನೀವು ಕ್ಯಾಪ್ಟನ್ ಆಗಿ ಏನು ದಬಾಕ್ಕಿದ್ದೀರಿ ಅಂತ ಗೊತ್ತು" ಎಂದು ತಿರುಗೇಟು ನೀಡಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ʻಬಿಗ್ ಬಾಸ್ʼ ಮನೆಯೊಳಗೆ The Devil ಬಗ್ಗೆ ಹೇಳಿ ಸಂಭ್ರಮಿಸಿದ್ದ ಗಿಲ್ಲಿ ನಟ!

Gilli Nata in The Devil: ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ ಗಿಲ್ಲಿ ನಟ, ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆಯ ಬಗ್ಗೆ ಅವರು ಮನೆಯೊಳಗೆ ದಿನ ಎಣಿಸುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಪಾತ್ರ ಚಿಕ್ಕದಾದರೂ ಇಂಟರ್ವಲ್‌ನಲ್ಲಿ ದೊಡ್ಡ ಟ್ವಿಸ್ಟ್ ನೀಡಲಿದೆ ಎಂದು ಗಿಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ.

ವಾಸ್ತವ ಮತ್ತು ಭ್ರಮೆಯ ನಡುವಿನ ʻವಿಕಲ್ಪʼ ಸಿನಿಮಾ; ಟೀಸರ್‌ ರಿಲೀಸ್‌ ಮಾಡಿದ ಪತ್ರಕರ್ತ ಜೋಗಿ

ʻವಿಕಲ್ಪʼ ಚಿತ್ರದ ಟೀಸರ್‌ ರಿಲೀಸ್‌ ಮಾಡಿದ ಹಿರಿಯ ಪತ್ರಕರ್ತ ಜೋಗಿ

Vikalpa Teaser Launch: ಪೃಥ್ವಿರಾಜ್ ಪಾಟೀಲ್ ನಿರ್ದೇಶಿಸಿ, ನಟಿಸಿರುವ 'ವಿಕಲ್ಪ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಸುರೂಸ್ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟೀಸರ್ ಅನ್ನು ಹಿರಿಯ ಪತ್ರಕರ್ತ ಜೋಗಿ ಬಿಡುಗಡೆ ಮಾಡಿದ್ದಾರೆ. ಮನುಷ್ಯನ ಮನಸ್ಸಿನ ಒಳಗಿನ ತುಮುಲ ಮತ್ತು ವಾಸ್ತವ ಸ್ಥಿತಿಗಳ ನಡುವಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿ ಹರಿಣಿ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Thalapathy Vijay: ʻಜನ ನಾಯಗನ್‌ʼ ಎಫೆಕ್ಟ್‌! ಒಟಿಟಿಯಲ್ಲಿ 2 ವರ್ಷದ ಬಳಿಕ ಬಾಲಯ್ಯ ನಟನೆಯ ʻಭಗವಂತ್‌ ಕೇಸರಿʼ‌ ಟ್ರೆಂಡಿಂಗ್; ಕಾರಣವೇನು?

ʻಜನ ನಾಯಗನ್‌ʼನಿಂದ ಬಾಲಯ್ಯಗೆ ಲಾಭ; ಒಟಿಟಿಯಲ್ಲಿ 'ಭಗವಂತ್ ಕೇಸರಿ' ಟ್ರೆಂಡ್!

Bhagavanth Kesari Remake: ವಿಜಯ್ ಅವರ 'ಜನ ನಾಯಗನ್' ಚಿತ್ರವು ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ್ ಕೇಸರಿ'ಯ ರಿಮೇಕ್ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ. ಇದರಿಂದಾಗಿ ಅನೇಕ ಪ್ರೇಕ್ಷಕರು ಮೂಲ ಸಿನಿಮಾವನ್ನು ನೋಡಲು ಅಮೇಜಾನ್ ಪ್ರೈಮ್ ಮತ್ತು ಜಿಯೋ ಹಾಟ್ ಸ್ಟಾರ್‌ಗೆ ಮುಗಿಬೀಳುತ್ತಿದ್ದಾರೆ.

ʻಬಿಗ್‌ ಬಾಸ್‌ʼ ಸ್ಪರ್ಧಿಗಳಿಗೆ ʻರೆಡ್‌ ಕಾರ್ಡ್‌ʼ ಕೊಟ್ರೆ ಏನಾಗುತ್ತೆ ಗೊತ್ತಾ? ಇದನ್ನ ನಿರೂಪಕರು ಕೊಡುವುದು ಏಕೆ?

ʻಬಿಗ್ ಬಾಸ್ʼ ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ಟರೆ ಮುಂದೇನಾಗುತ್ತೆ?

Bigg Boss Red Card Rules: ತಮಿಳು ಬಿಗ್ ಬಾಸ್ ಸೀಸನ್ 9ರಲ್ಲಿ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್ ಅಮಾನವೀಯವಾಗಿ ನಡೆದುಕೊಂಡಿದ್ದಕ್ಕಾಗಿ ನಿರೂಪಕ ವಿಜಯ್ ಸೇತುಪತಿ ರೆಡ್ ಕಾರ್ಡ್ ನೀಡಿ ಹೊರಹಾಕಿದ್ದಾರೆ. ಈ ರೆಡ್ ಕಾರ್ಡ್ ಎನ್ನುವುದು ಸ್ಪರ್ಧಿಯೊಬ್ಬರ ಸಂಭಾವನೆಯನ್ನು ಕಸಿದುಕೊಳ್ಳುವುದಲ್ಲದೆ, ಅವರನ್ನು ಶೋನಿಂದ ಕಪ್ಪುಪಟ್ಟಿಗೆ (Blacklist) ಸೇರಿಸುತ್ತದೆ.

ʻತಿಥಿʼ ಚಿತ್ರದ ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀಗೌಡ ಆಯ್ಕೆಯಾಗಿದ್ದು ಹೇಗೆ? ಅಂದು ʻಗಾಡ್‌ಫಾದರ್‌ʼ ನಿರ್ದೇಶಕರಿಂದಲೂ ಸಿಕ್ಕಿತ್ತು ಮೆಚ್ಚುಗೆ

ತಿಥಿ ಚಿತ್ರದ ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀಗೌಡ ಆಯ್ಕೆಯಾಗಿದ್ದು ಹೇಗೆ?

Century Gowda Passes Away: ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ 'ತಿಥಿ'ಯಲ್ಲಿ 'ಸೆಂಚುರಿ ಗೌಡ'ನಾಗಿ ನಟಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಸಿಂಗ್ರೀಗೌಡ (100+) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ರೈತ ಪ್ರತಿಭೆಯನ್ನು ಚಿತ್ರದ ಕಥೆಗಾರ ಈರೇಗೌಡ ಅವರು ಗುರುತಿಸಿ ಬೆಳ್ಳಿತೆರೆಗೆ ತಂದಿದ್ದರು.

Chiranjeevi Hanuman:  AI ಆಧಾರಿತ ಚಿತ್ರ ಚಿರಂಜೀವಿ ಹನುಮಾನ್; ರಿಲೀಸ್‌ ಯಾವಾಗ?

AI ಆಧಾರಿತ ಚಿತ್ರ ಚಿರಂಜೀವಿ ಹನುಮಾನ್; ರಿಲೀಸ್‌ ಯಾವಾಗ?

Rajesh Mapuskar : ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜೇಶ್ ಮಾಪುಸ್ಕರ್ ಅವರು ಭಾರತದ ಮೊದಲ ಸಂಪೂರ್ಣ AI-ನಿರ್ಮಿತ ಚಿರಂಜೀವಿ ಹನುಮಾನ್ - ದಿ ಎಟರ್ನಲ್ ಅನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷ ಹನುಮಾನ್ ಜಯಂತಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹನುಮನ ಶಕ್ತಿ, ಭಕ್ತಿ ಮತ್ತು ದೈವತ್ವವನ್ನು ದೊಡ್ಡ ಪರದೆಯ ಮೇಲೆ ವಿಜೃಂಬಿಸಲಿದೆ.

Gilli Nata: ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್;  ಪಾರ್ಟಿ ಅರೇಂಜ್, ಹಲವರಿಂದ ಟೀಕೆ

ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್!

Dog satish: ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಹೈಲೈಟ್‌ಗಳಲ್ಲಿ ಗಿಲ್ಲಿ ಕೂಡ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಕ್ರೇಜ್‌ ಕೂಡ ಜಾಸ್ತಿ ಇದೆ. ಗಿಲ್ಲಿಯೇ ಈ ಬಿಗ್‌ಬಾಸ್‌ ವಿನ್ನರ್‌ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಗಿಲ್ಲಿ ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದು ಎಲಿಮಿನೇಟ್‌ ಆದ ಸ್ಪರ್ಧಿ ಡಾಗ್‌ ಸತೀಶ್‌ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದೂ ಇದೆ. ಗಿಲ್ಲಿ ಎಷ್ಟು ಕೆಟ್ಟವನು ಅಂದ್ರೆ ಲೈಫಲ್ಲಿ ನಾನು ಅವನಷ್ಟು ಕೆಟ್ಟವನನ್ನ, ಕೊಳಕನನ್ನ, ಕಳ್ಳನನ್ನ ನೋಡೇ ಇಲ್ಲ ಎಂದಿದ್ದರು. ಆದರೀಗ ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.

Deepika Padukone: ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಬರ್ತ್‌ಡೇ; ಫ್ಯಾನ್ಸ್‌ ಜೊತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ನಟಿ

ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಬರ್ತ್‌ಡೇ

Deepika actress: ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನ ಇಂದು (ಜನವರಿ 5) ಆಚರಿಸಿಕೊಳ್ಳುತ್ತಿರುವ ದೀಪಿಕಾ, ರಾಷ್ಟ್ರ ಮಟ್ಟದ ಬ್ಯಾಡ್ ಮಿಂಟನ್ ಚಾಂಪಿಯನ್ ಆಗಿ ನಂತರ ಬಾಲಿವುಡ್‌ ಸೂಪರ್ ಸ್ಟಾರ್ ಆಗಿ ಬೆಳೆದವರು. ದೀಪಿಕಾ ಮುಂಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದ ಪೂರ್ವ ಆಚರಣೆಯನ್ನು ಆಯೋಜಿಸಿದ್ದರು.

Century Gowda Passes Away: 'ತಿಥಿ' ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

'ತಿಥಿ' ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

ತಿಥಿ ಸಿನಿಮಾದ ಮೂಲಕ ಸಿಂಗಾರಿ ಗೌಡ ಅಲಿಯಾಸ್ ಸೆಂಚುರಿ ಗೌಡ ಜನಪ್ರಿಯರಾಗಿದ್ದರು. ʼತಿಥಿ' ಸಿನಿಮಾದಿಂದ ಜನಪ್ರಿಯತೆ ಗಳಿಸಿದ 'ಸೆಂಚುರಿ ಗೌಡ'ರ ನಿಜವಾದ ಹೆಸರು ಸಿಂಗಾರಿ ಗೌಡ ಅಥವಾ ಸಿಂಗ್ರಿ ಗೌಡ. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದ್ದರು.

Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ

Rashika Shetty: ಬಿಗ್‌ ಬಾಸ್‌ ಸೀಸನ್‌ 12ರ ಸೂಪರ್‌ ಸಂಡೇ ವಿಥ್‌ ಬಾದ್‌ಷಾ ಸುದೀಪ ಸಂಚಿಕೆ ಮಸ್ತ್‌ ಆಗಿದೆ. ಮನೆಯ ಸದಸ್ಯರಿಗೆ ಸುದೀಪ್‌ ಅವರು ಒಂದು ಚಟುವಟಿಕೆ ನೀಡಿದ್ದರು. ಅದೇನೆಂದರೆ, ಮನೆಯೊಳಗೆ ಇರುವ ಪಂಚಿಂಗ್‌ ಬ್ಯಾಗ್‌ಗೆ ಪಂಚ್‌ ಮಾಡಬೇಕು, ಅದರ ಮೇಲೆ ಮನೆಯ ಸದಸ್ಯರ ಫೋಟೋವನ್ನು ಹಚ್ಚಿ, ಮನಸ್ಸಿಲ್ಲಿ ಏನು ಹೇಳಬೇಕೋ ಎಂದಿರುತ್ತೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಈ ವೇಳೆ ಅಶ್ವಿನಿ ಅವರು ಬೇಕಬಿಟ್ಟಿ ರಾಶಿಕಾ ಬಗ್ಗೆ ಮಾತನಾಡಿದ್ದಾರೆ ಎಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ. ರಾಶಿಕಾ ಬಗ್ಗೆ ಅಶ್ವಿನಿ ಹೇಳಿದ ಮಾತು ಫ್ಯಾನ್ಸ್‌ಗೂ ಬೇಸರ ತರಿಸಿದೆ.

Bigg Boss Kannada 12: ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ; ನಾಮಿನೇಶನ್‌ ವೇಳೆ ಭರ್ಜರಿ ಕೂಗಾಟ

ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ! ಕಾರಣ ಇದು

Rashika Shetty: ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಇನ್ನು ಫಿನಾಲೆ ವೀಕ್‌ಗೆ ಒಂದೇ ವಾರ ಇದೆ ಎಂದು ಸುದೀಪ್‌ ಕೂಡ ಘೋಷಣೆ ಮಾಡಿದ್ದಾರೆ. ಅದಕ್ಕೂ ಮುಂಚೆ ಈಗ ನಾಮಿನೇಶನ್‌ ಪ್ರಕ್ರಿಯೆ ನಡೆದಿದೆ. ಈ ವೇಳೆ ರಕ್ಷಿತಾ ಹಾಗೂ ರಾಶಿಕಾ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

Spandana: ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಸ್ಪಂದನಾ ಸೋಮಣ್ಣ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ. ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದರು. ಈ ವಾರ ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿ ಈಗ ಔಟ್‌ ಆಗಿದ್ದಾರೆ.

Fraud Case: ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

Jay Dudhane: ಸ್ಪ್ಲಿಟ್ಸ್‌ವಿಲ್ಲಾ 13 ಮತ್ತು ಬಿಗ್ ಬಾಸ್ ಮರಾಠಿ 3 ಖ್ಯಾತಿಯ ಜೇ ದುಧಾನೆ ಅವರನ್ನು ಭಾನುವಾರ (ಜನವರಿ 4) ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ರಿಯಲ್ ಎಸ್ಟೇಟ್ ಹಗರಣಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಟಿವಿ ತಾರೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಮಾನೆ ದೃಢಪಡಿಸಿದ್ದಾರೆ.

Devanobba Jaadugaara: ʻಪ್ರೇಮ ಕಾವ್ಯʼ ಸೀರಿಯಲ್‌ ನಟಿ ಪ್ರಿಯಾ ಆಚಾರ್‌ - ಸಚಿನ್ ಹೊಸ ಸಿನಿಮಾ ಟೀಸರ್‌ ರಿಲೀಸ್;‌ ಹುಚ್ಚ ವೆಂಕಟ್, ಸಿಂಪಲ್‌ ಸುನಿ ಸಪೋರ್ಟ್‌

ʻದೇವನೊಬ್ಬ ಜಾದೂಗಾರʼ ಟೀಸರ್; ಸಚಿನ್ - ಪ್ರಿಯಾ ಆಚಾರ್ ಸಿನಿಮಾಗೆ ಸುನಿ ಸಾಥ್

Devanobba Jaadugaara Teaser: ವರುಣ್ ನಿರ್ದೇಶನದ 'ದೇವನೊಬ್ಬ ಜಾದೂಗಾರ' ಸಿನಿಮಾವನ್ನು ಸೌದಿ ಅರೇಬಿಯಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಸಚಿನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿರುತೆರೆ ನಟಿ ಪ್ರಿಯಾ ಜೆ. ಆಚಾರ್ ನಾಯಕಿಯಾಗಿದ್ದು, ಶ್ವೇತಾ ಶ್ರೀವಾಸ್ತವ್‌, ಸಿಂಪಲ್ ಸುನಿ ಮತ್ತು ಹುಚ್ಚ ವೆಂಕಟ್ ಈ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Amruthadhare Serial : ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಮಾಸ್ಟರ್‌ ಪ್ಲ್ಯಾನ್‌?

ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಪ್ಲ್ಯಾನ್‌?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್‌ , ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಮಲ್ಲಿ ಸದಾ ನೆಮ್ಮದಿ ಕಳೆದುಕೊಂಡು ಇರಬೇಕು ಅಂತ ಡಿವೋರ್ಸ್‌ ಕೂಡ ಕೊಡದೆ ಇದ್ದಾನೆ ಜಯದೇವ್‌. ಇದೀಗ ಮತ್ತೊಂದು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ. ಮಲ್ಲಿ ಇನ್ನೊಬ್ಬ ಹುಡುಗನನ್ನು ಮದುವೆಯಾದರೆ ಆರಾಮಾಗಿ ಇರ್ತಾಳೆ, ಅವಳು ಮದುವೆ ಆಗಬಾರದು ಎಂದು ಅವನು ಲೆಕ್ಕ ಹಾಕಿದ್ದಾನೆ.

ʻಲವ್‌ ಮಾಕ್ಟೇಲ್‌ 3ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಡಾರ್ಲಿಂಗ್‌ʼ ಕೃಷ್ಣ; ಈ ಬಾರಿ ಏನ್‌ ವಿಶೇಷ?

'ಲವ್ ಮಾಕ್ಟೇಲ್ 3' ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ ʻಡಾರ್ಲಿಂಗ್‌ʼ ಕೃಷ್ಣ!

Love Mocktail 3 Release Date: ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ 'ಲವ್ ಮಾಕ್ಟೇಲ್' ಸರಣಿಯ ಮೂರನೇ ಭಾಗ 'ಲವ್ ಮಾಕ್ಟೇಲ್ 3' ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಕಥೆಯಲ್ಲಿ ತಂದೆ ಮತ್ತು ಮಗಳ ಬಾಂಧವ್ಯದ ವಿಶೇಷ ಎಳೆಯನ್ನು ಡಾರ್ಲಿಂಗ್ ಕೃಷ್ಣ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ

ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ!

Gilli Nata: ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ನಟ ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ ಎಂದಿದ್ದರು. ಇದೀಗ ಮತ್ತೊಂದು ಪ್ರೋಮೋ ಔಟ್‌ ಆಗಿದೆ. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

Bigg Boss Kannada 12: ಅಬ್ಬಬ್ಬಾ! ಧ್ರುವಂತ್‌ ಮೇಲೆ ರಕ್ಷಿತಾ ಶೆಟ್ಟಿಗೆ ಎಷ್ಟೊಂದು ಕೋಪ! ಸಿಕ್ಕಿದ್ದೇ ಚಾನ್ಸ್‌ ಅಂತ ಫುಲ್‌ ಪಂಚ್!‌

ʻಅಸಹ್ಯ ಅನ್ನೋಕೆ ನೀವ್ಯಾರು?ʼ; ಧ್ರುವಂತ್ ಮೇಲೆ ಅಬ್ಬರಿಸಿದ ರಕ್ಷಿತಾ ಶೆಟ್ಟಿ

Bigg Boss 12 Promo: ಬಿಗ್ ಬಾಸ್ ಕನ್ನಡ 12ರ ಇಂದಿನ (ಜನವರಿ 4) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ 'ಪಂಚಿಂಗ್ ಬ್ಯಾಗ್' ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಧ್ರುವಂತ್ ವಿರುದ್ಧ ಅಬ್ಬರಿಸಿದ್ದು, ಪಂಚಿಂಗ್ ಬ್ಯಾಗ್ ಕಿತ್ತುಹೋಗುವಷ್ಟು ಜೋರಾಗಿ ಹೊಡೆದಿದ್ದಾರೆ.

ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್‌ ಸಾಗರ್‌ ಪುತ್ರಿ ನಾಯಕಿ

ಡಾಲಿ ಪಿಕ್ಚರ್ಸ್‌ನ ಹೊಸ ಸಿನಿಮಾಕ್ಕೆ ಅರುಣ್ ಸಾಗರ್ ಪುತ್ರಿ ಅದಿತಿ ನಾಯಕಿ

Heggana Muddu Movie: ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ 6ನೇ ಚಿತ್ರವಾಗಿ 'ಹೆಗ್ಗಣ ಮುದ್ದು' ಸಿದ್ಧವಾಗುತ್ತಿದೆ. 'ಬಡವ ರಾಸ್ಕಲ್', 'ಹೆಡ್ ಬುಷ್' ಮತ್ತು 'ಟಗರು ಪಲ್ಯ' ಸಿನಿಮಾಗಳ ನಂತರ ಧನಂಜಯ ಅವರು ಈ ಸಿನಿಮಾ ಮಾಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್​ ಕೇಸ್‌; ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್‌ ಮಾಡಿದ ಸಿಸಿಬಿ ಪೊಲೀಸರು!

ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಮೆಂಟ್; ಮತ್ತಿಬ್ಬರು ಆರೋಪಿಗಳ ಬಂಧನ!

Vijayalakshmi Abusive Comment Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ನಾಗರಾಜ್ ತಳವಾರ ಮತ್ತು ಧಾರವಾಡದ ಪ್ರಶಾಂತ್ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 4ಕ್ಕೇರಿದೆ.

Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

ಬಿಗ್ ಬಾಸ್ ಮನೆಯೊಳಗೆ ಯಾಕೆ ಸುಮ್ಮನಿದ್ರಿʼ; ಮಾಳುಗೆ ಕಿಚ್ಚ ಸುದೀಪ್ ಪ್ರಶ್ನೆ

Bigg Boss Kannada 12 Maalu Nipanal: ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಮಾಳು ನಿಪನಾಳ್ ಅವರಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ. "ಹೊರಗಡೆ ಅಷ್ಟೊಂದು ಮಾತನಾಡುತ್ತಿರುವ ನೀವು ಮನೆಯೊಳಗೆ ಯಾಕೆ ಮೌನವಾಗಿದ್ರಿ?" ಎಂದು ಸುದೀಪ್ ಪ್ರಶ್ನಿಸಿದಾಗ ಮಾಳು ಅದಕ್ಕೆ ಉತ್ತರಿಸಿದ್ದಾರೆ.

Thalaivar 173: ಯಂಗ್‌ ಡೈರೆಕ್ಟರ್‌ಗೆ ಚಾನ್ಸ್‌ ಕೊಟ್ಟ ರಜನಿಕಾಂತ್;‌ ಅನುಭವಕ್ಕಿಂತ ಟ್ಯಾಲೆಂಟ್‌ ದೊಡ್ಡದು ಎಂದ್ರು 'ತಲೈವಾ' ಫ್ಯಾನ್ಸ್!‌

Thalaivar 173: ಕಮಲ್ ಹಾಸನ್ ನಿರ್ಮಾಣದ ರಜನಿ ಚಿತ್ರಕ್ಕೆ ಹೊಸ ಡೈರೆಕ್ಟರ್‌!

Thalaivar 173 Updates: ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಈಗ ತೆರೆಬಿದ್ದಿದೆ. 'ಡಾನ್' ಖ್ಯಾತಿಯ ನಿರ್ದೇಶಕ ಸಿಬಿ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡುತ್ತಿದೆ.

ವಿಜಯ್‌ ನಟನೆಯ ಕೊನೆಯ ಚಿತ್ರ ʻಜನ ನಾಯಗನ್‌ʼ‌ಗೆ ಬಾಲಯ್ಯ ಸಿನಿಮಾವೇ ಸ್ಪೂರ್ತಿ; ಆದರೆ 'ದಳಪತಿ' ಕೊಟ್ಟ ಟ್ವಿಸ್ಟ್‌ ಏನ್‌ ಗೊತ್ತಾ?

Jana Nayagan Trailer: ಬಾಲಯ್ಯ ಸಿನಿಮಾವನ್ನ ರಿಮೇಕ್‌ ಮಾಡಿದ್ರಾ ವಿಜಯ್?

Thalapathy Vijay‌ Jana Nayagan Trailer: ವಿಜಯ್‌ ಅವರ ಕೊನೇ ಚಿತ್ರ 'ಜನ ನಾಯಗನ್' ಟ್ರೇಲರ್ ಶನಿವಾರ ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ವಿಚಾರ ಚರ್ಚೆ ಆಗಿತ್ತು. ಅದಕ್ಕಿಲ್ಲಿ ಉತ್ತರ ಸಿಕ್ಕಿದೆ.

Loading...