ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Rukmini vasanth:   ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್​ ಕೇಸ್; ಮೂವರು ಆರೋಪಿಗಳ ಬಂಧನ

ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್​ ಕೇಸ್; ಮೂವರು ಆರೋಪಿಗಳ ಬಂಧನ

Rukmini vasanth: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಎಐ (AI) ತಂತ್ರಜ್ಞಾನ ಬಳಸಿ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ತಯಾರಿಸಿ ವೈರಲ್ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳ ಮೂವರು ಯುವಕರನ್ನು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Nagabandham Trailer: ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ 'ನಾಗಬಂಧಂ': ಟ್ರೈಲರ್‌ ಔಟ್‌

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ 'ನಾಗಬಂಧಂ'

Nagabandham Trailer: ಚಿತ್ರತಂಡ ಇತ್ತೀಚೆಗೆ ಈ ಚಿತ್ರದ ಅಧಿಕೃತ ಥಿಯೇಟ್ರಿಕಲ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಈ ಟ್ರೇಲರ್‌ನಲ್ಲಿ, ಚಿತ್ರ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ. ಚಿತ್ರದ ಬಗ್ಗೆ ಆಸಕ್ತಿ ಇನ್ನಷ್ಟು ಹೆಚ್ಚಾಗಿದೆ. ಮೊದಲ ಫ್ರೇಮ್‌ನಿಂದಲೇ ಪ್ರೇಕ್ಷಕರನ್ನು ಹೊಸ ಆಧ್ಯಾತ್ಮಿಕ ಮತ್ತು ಸಾಹಸಮಯ ಜಗತ್ತಿಗೆ ಕರೆದೊಯ್ಯುವಂತೆ ಟ್ರೇಲರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಬಿಡುಗಡೆಯಾದ ತಕ್ಷಣ, ಈ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಾಮಾನ್ಯ ಪೌರಾಣಿಕ ಚಿತ್ರಗಳಿಗಿಂತ ಭಿನ್ನವಾಗಿ ಹೊಸ ಪರಿಕಲ್ಪನೆಯೊಂದಿಗೆ ನಿರ್ಮಿಸಲಾದ ನಾಗಬಂಧಂ ಜುಲೈ 3 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

India Got Latent Season 2: ಮತ್ತೆ ಬರುತ್ತಿದೆ  ವಿವಾದಾತ್ಮಕ ಶೋ ; ಎಲ್ಲಿ ಪ್ರಸಾರ?

ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ ; ಎಲ್ಲಿ ಪ್ರಸಾರ?

India Got Latent Season 2: ‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ಬರಲಿದೆ ಎಂದು ಈ ಹಿಂದೆಯೇ ಸಮಯ್ ರೈನಾ ಘೋಷಿಸಿದ್ದರು. ಕೆಲ ವಾರಗಳ ಹಿಂದೆ ಶೋನ ಚಿತ್ರೀಕರಣದ ಫೋಟೊ ಸಹ ಲೀಕ್ ಆಗಿತ್ತು. ಇತ್ತೀಚೆಗಷ್ಟೆ ಈ ಶೋ ಕುರಿತ ಪೋಸ್ಟ್ ಒಂದನ್ನು ನೆಟ್​​ಫ್ಲಿಕ್ಸ್ ಹಂಚಿಕೊಳ್ಳುವ ಮೂಲಕ ಈ ಬಾರಿ ‘ಇಂಡಿಯಾ ಗಾಟ್ ಲೇಟೆಂಟ್ 2’ ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗಲಿದೆ ಎಂಬ ಸುಳಿವು ನೀಡಿತ್ತು.

Actor Rishab Shetty: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ನಟ ರಿಷಬ್‌ ಶೆಟ್ಟಿ ಭಾಗಿ; ಸಿಎಂ ಡಿಕೆಶಿಗೆ ಮಹತ್ವದ ಮನವಿ

ಕರಾವಳಿಯ ಜಾನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಿ: ರಿಷಬ್‌ ಶೆಟ್ಟಿ

Coastal Tourism Development: ಕರಾವಳಿಯಲ್ಲಿ ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Aamir Khan: ರಾಷ್ಟ್ರಪತಿ ದ್ರೌಪದಿ ಮುರ್ಮು ಬಯೋಪಿಕ್ ಮಾಡಲು ಮುಂದಾದ ಆಮೀರ್ ಖಾನ್

ರಾಷ್ಟ್ರಪತಿ ದ್ರೌಪದಿ ಮುರ್ಮು ಬಯೋಪಿಕ್ ಮಾಡಲು ಮುಂದಾದ ಆಮೀರ್ ಖಾನ್

Droupadi Murmu: ಆಮೀರ್ ಖಾನ್ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಆಧಾರಿತ ಪ್ರೇರಣಾದಾಯಿ ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದಾರೆ. ಹೊಸ ಸಾಕ್ಷ್ಯಚಿತ್ರದೊಂದಿಗೆ ಆಮಿರ್ ಖಾನ್ ಪ್ರೊಡಕ್ಷನ್ಸ್ ತೆರೆಗೆ ತರಲು ಸಜ್ಜಾಗಿದೆ.

Cocktail 2: ಹಿಂದಿ ಉಚ್ಚಾರಣೆ ಸರಿ ಇಲ್ಲ, ನಟಿಸಲು ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ; ರಶ್ಮಿಕಾ ನಟನೆ ಬಗ್ಗೆ ಖ್ಯಾತ  ವಿಮರ್ಶಕನ ಟೀಕೆ

ಹಿಂದಿ ಉಚ್ಚಾರಣೆ ಸರಿ ಇಲ್ಲ; ರಶ್ಮಿಕಾ ನಟನೆ ಬಗ್ಗೆ ಖ್ಯಾತ ವಿಮರ್ಶಕನ ಟೀಕೆ

cocktail 2: ಸಿನಿಮಾ ವೀಕ್ಷಿಸಿದ ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿರುವ ತರಣ್ ಆದರ್ಶ್, ರಶ್ಮಿಕಾ ಮಂದಣ್ಣ ಅವರ ನಟನೆಯ ಬಗ್ಗೆ ಕೆಲವು ನೆಗೆಟಿವ್ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ ದಿನದ ಬೆಳಗಿನ ಜಾವದಲ್ಲಿ, ಜನರು ಮೊದಲ ಪ್ರದರ್ಶನಗಳನ್ನು ಆಯ್ಕೆ ಮಾಡಿಕೊಂಡು ಕಾಕ್‌ಟೇಲ್ 2 ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು . ಅವರಲ್ಲಿ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್, ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ಉಜ್ವಲ ಭವಿಷ್ಯ ನುಡಿದರು.

Shraddha Kapoor: ʻಕಾಕ್‌ಟೇಲ್ 2’ ಪ್ರದರ್ಶನದಲ್ಲಿ ‘ಈಥಾ’ ಟೀಸರ್ ; ಶ್ರದ್ಧಾ ಕಪೂರ್ ಕಂಡು ಫ್ಯಾನ್ಸ್‌ ಥ್ರಿಲ್‌

‘ಈಥಾ’ ಟೀಸರ್ ಔಟ್‌; ಶ್ರದ್ಧಾ ಕಪೂರ್ ಕಂಡು ಫ್ಯಾನ್ಸ್‌ ಥ್ರಿಲ್‌

Shraddha Kapoor: ಛತ್ರಪತಿ ಸಂಭಾಜಿ ಮಹಾರಾಜ್ ಆಧಾರಿತ "ಛಾವಾ" ನಂತರ, ನಿರ್ದೇಶಕರು ಈಗ " 'ಈಥಾ' "ದಲ್ಲಿ ವಿಠಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಕಥೆಯನ್ನು ಪ್ರಸ್ತುತಪಡಿಸಲು ತಯಾರಿ ನಡೆಸುತ್ತಿದ್ದಾರೆ. ‘ಕಾಕ್‌ಟೇಲ್ 2’ ಚಿತ್ರದೊಂದಿಗೆ (Leaked Teaser) ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಟೀಸರ್ ಇಂದು ಬಿಡುಗಡೆಯಾಗಿದೆ. ಮರಾಠಿ ತಮಾಶಾ ಕಲಾವಿದೆ ವಿಠಾಬಾಯಿ ನಾರಾಯಣ ಗಾಂವ್ಕರ್ ಜೀವನ ಆಧಾರಿತ ಈ ಚಿತ್ರದಲ್ಲಿ ಶ್ರದ್ಧಾ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Keerthy Suresh:  ಕೀರ್ತಿ ಸುರೇಶ್-ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಾಡಿದ ಹಿರಿಯ ನಿರ್ದೇಶಕ; ವಿಡಿಯೋ ವೈರಲ್‌

ಕೀರ್ತಿ ಸುರೇಶ್-ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಾಡಿದ ನಿರ್ದೇಶಕ

Keerthy Suresh: ಅನಿಲ್ ರವಿಪುಡಿ ಅವರ ಮುಂಬರುವ ಚಿತ್ರದ ಬಿಡುಗಡೆಯ ವೀಡಿಯೊವೊಂದು ಹಿರಿಯ ತೆಲುಗು ಚಲನಚಿತ್ರ ನಿರ್ಮಾಪಕ ಕೆ ರಾಘವೇಂದ್ರ ರಾವ್ ಅವರನ್ನು ಆನ್‌ಲೈನ್ ಟೀಕೆಗೆ ಗುರಿಪಡಿಸಿದೆ. ಗುರುವಾರ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್‌ನಲ್ಲಿ, ಉದ್ಘಾಟನಾ ದೃಶ್ಯವನ್ನು ನಿರ್ದೇಶಿಸುವಾಗ 84 ವರ್ಷದ ವೃದ್ಧ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರನ್ನು ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ.

Samantha:  ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ

ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ

Samantha Ruth Prabhu: ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯೊಂದಿಗೆ ಬದುಕಿದ ಅನುಭವದ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ ದೂರ ಸರಿಯುವಂತೆ ಮಾಡಿತು. ಈ ಬಾರಿ ಅವರು ತಮ್ಮ ಸಿನಿಮಾದಿಂದಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಅವರು ಹಂಚಿಕೊಂಡಿರುವ ನೋವಿನ ಸಂಗತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.

'ದೇವಿ ಮಹಾತ್ಮೆ'‌ ಚಿತ್ರದ ಟೀಸರ್ ರಿಲೀಸ್:‌ ʻಅಭಿನಯಾಸುರʼ ರಂಗಾಯಣ ರಘು ನಟನೆ ಕಂಡು ಫ್ಯಾನ್ಸ್‌ ಥ್ರಿಲ್‌

'ದೇವಿ ಮಹಾತ್ಮೆ' ಚಿತ್ರದ ಟೀಸರ್‌ನಲ್ಲಿ ಕಮಾಲ್ ಮಾಡಿದ ರಂಗಾಯಣ ರಘು!

'ಮರ್ಯಾದೆ ಪ್ರಶ್ನೆ' ಖ್ಯಾತಿಯ ನಾಗರಾಜ್ ಸೋಮಯಾಜಿ ನಿರ್ದೇಶನದ, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದೇವಿ ಮಹಾತ್ಮೆ' ಚಿತ್ರದ ರೋಚಕ ಟೀಸರ್ ಬಿಡುಗಡೆಯಾಗಿದೆ. ಸಮುದ್ರ ತೀರದ ಹಿನ್ನೆಲೆ ಹಾಗೂ ಕರಾವಳಿಯ ಹುಲಿವೇಷದ ಸೊಗಡಿನೊಂದಿಗೆ ಮೂಡಿಬಂದಿರುವ ಈ ಟೀಸರ್‌ನಲ್ಲಿ ರಘು ಅವರ ಇಂಟೆನ್ಸ್ ನಟನೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ʻ9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆʼ; ʻಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರಗೆ ಬಿಗ್‌ ರಿಲೀಫ್!‌

ʻನಂಬಿದವರೇ ಸ್ವಾರ್ಥಕ್ಕೆ ಬಳಸಿಕೊಂಡ್ರುʼ ಎಂದು ಚೈತ್ರಾ ಹೇಳಿದ್ದೇಕೆ?

'ಬಿಗ್ ಬಾಸ್' ಖ್ಯಾತಿಯ ಫೈರ್‌ ಬ್ರ್ಯಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ ಅವರಿಗೆ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಗಂಗಾವತಿ ನ್ಯಾಯಾಲಯದಲ್ಲಿ ಭಾರಿ ಜಯ ಸಿಕ್ಕಿದೆ. 2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಮತ್ತು ದ್ವೇಷ ಭಾಷಣದ 5 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.

ಉತ್ತರ ಕರ್ನಾಟಕದ ಪ್ರತಿಭೆಗಳ ʻಹುಲಿಬೀರʼ ಸಿನಿಮಾದ ‘ಜಿಗ್ರಿ ದೋಸ್ತ್’ ಸಾಂಗ್‌ ರಿಲೀಸ್‌; ಇದು ಹಳ್ಳಿಗಳ ಉದ್ಧಾರದ ಕಥೆ

ʻಹುಲಿಬೀರʼ ಚಿತ್ರದ ಹೊಸ ಹಾಡು ರಿಲೀಸ್; ಇದು ಹಳ್ಳಿಗಳ ಉದ್ಧಾರದ ಕಥೆ

ಉತ್ತರ ಕರ್ನಾಟಕದ ಪ್ರತಿಭೆಗಳು ಒಗ್ಗೂಡಿ ನಿರ್ಮಿಸಿರುವ, ಹಳ್ಳಿಗಳ ಉದ್ಧಾರ ಹಾಗೂ ನಗರ ವಲಸೆ ತಡೆಯುವ ಸೂಕ್ಷ್ಮ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡು ಬಿಡುಗಡೆಯಾಗಿದೆ. ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದ, ಅಂಜನ್ ಹಾಗೂ ಚೈತ್ರಾ ತೋಟದ ನಟನೆಯ ಈ ಮಣ್ಣಿನ ಸೊಗಡಿನ ಚಿತ್ರಕ್ಕೆ ವೀರಸಮರ್ಥ್ ಜಾನಪದ ಶೈಲಿಯ ಸಂಗೀತ ನೀಡಿದ್ದಾರೆ.

ʻ15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗುವುದರ ಬಗ್ಗೆ ಯೋಚಿಸುವೆʼ; ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಹಳೇ ವಿಡಿಯೋ ವೈರಲ್‌, ಹೊಸ ಕಿರಿಕ್‌ ಶುರು!

ʻ15 ಕೋಟಿ ಕೊಟ್ರೆ ಯೋಚಿಸುವೆʼ ಎಂದಿದ್ದ ಅಪೂರ್ವ ಮುಖಿಜಾ; ಹಳೇ ವಿಡಿಯೋ ವೈರಲ್

'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಖ್ಯಾತಿಯ ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಅವರ ದುಬೈ ಶೇಖ್ ಕುರಿತಾದ ಹಳೇ ವಿಡಿಯೋ ಮತ್ತೆ ವೈರಲ್ ಆಗಿದ್ದು, ಟ್ರೋಲರ್‌ಗಳು ಅಶ್ಲೀಲ ಕಮೆಂಟ್‌ಗಳ ಮೂಲಕ ರೇಟ್ ನಿಗದಿಪಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ತಕಗೆ 12 ಸಾವಿರ ರೂ. ಆಫರ್ ಮಾಡಿದ ಪ್ರಶಾಂತ್ ಎಂಬ ವ್ಯಕ್ತಿಯ ಮೇಲೆ ದೂರು ನೀಡುವ ಮೂಲಕ ಅಪೂರ್ವ ಖಡಕ್ ಆಕ್ಷನ್ ತಗೆದುಕೊಂಡಿದ್ದಾರೆ.

ʻಡಾನ್‌ 3ʼ ವಿವಾದದ ಎಫೆಕ್ಟ್‌: ಮುಂದಿನ ಒಂದೂವರೆ ವರ್ಷ ರಣವೀರ್‌ ಸಿಂಗ್‌ ಫುಲ್‌ ಸೈಲೆಂಟ್;‌ ಮಾತುಕತೆ ಇಲ್ಲ, ಸಂದರ್ಶನವೂ ಇಲ್ಲ!

ಮಾಧ್ಯಮಗಳ ಜೊತೆ ರಣವೀರ್ ಮಾತುಕತೆ ಬಂದ್; ಮುಂದಿನ ಒಂದೂವರೆ ವರ್ಷ ನೋ ಸಂದರ್ಶನ

'ಡಾನ್ 3' ಸಿನಿಮಾದ ವಿವಾದ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೇಳಿದ್ದ 45 ಕೋಟಿ ರೂ. ಪರಿಹಾರದ ಕಿರಿಕ್‌ನಿಂದ ಬೇಸತ್ತಿರುವ ನಟ ರಣವೀರ್ ಸಿಂಗ್, ಕನಿಷ್ಠ 18 ತಿಂಗಳುಗಳ ಕಾಲ ಯಾವುದೇ ಮಾಧ್ಯಮ ಸಂದರ್ಶನ ನೀಡದಿರಲು ನಿರ್ಧರಿಸಿದ್ದಾರೆ. ಸದ್ಯ ಜೈ ಮೆಹ್ತಾ ನಿರ್ದೇಶನದ, ಕೋವಿಡ್ ಹಿನ್ನೆಲೆಯುಳ್ಳ ಎಐ ಆಧಾರಿತ ಜಾಂಬಿ ಸಿನಿಮಾ 'ಪ್ರಳಯ್' ಚಿತ್ರದ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಿದ್ದಾರೆ.

ಶಾಹಿದ್‌ ಕಪೂರ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಹೇಗಿದೆ? ರಶ್ಮಿಕಾ - ಕೃತಿ ಸನೋನ್‌ ಅಭಿನಯಕ್ಕೆ ಸಿಕ್ತಾ ಫುಲ್‌ ಮಾರ್ಕ್ಸ್?

ರಶ್ಮಿಕಾ ನಟನೆಯ ಕಾಕ್‌ಟೇಲ್ 2 ಚಿತ್ರಕ್ಕೆ ಪ್ರೇಕ್ಷಕರ ರೆಸ್ಫಾನ್ಸ್ ಹೇಗಿದೆ?

Cocktail 2 Twitter Review: ಹೋಮಿ ಅದಾಜಾನಿಯಾ ನಿರ್ದೇಶನದ, ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರ ಜೂನ್ 19 ರಂದು ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದಿದೆ. 14 ವರ್ಷಗಳ ಹಿಂದಿನ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.

Second Love: ನಟಿ ರಮ್ಯಾ ಕೃಷ್ಣನ್ ಕ್ರೇಜಿ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಪ್ಯಾಚ್-ಅಪ್ ಮಾಡ್ತಾರೆ ರಾಜಮಾತೆ ಶಿವಗಾಮಿ!

ರಮ್ಯಾ ಕೃಷ್ಣನ್ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಮತ್ತೊಂದು ಚಾನ್ಸ್

'ಬಾಹುಬಲಿ' ಖ್ಯಾತಿಯ ನಟಿ ರಮ್ಯಾ ಕೃಷ್ಣನ್ 'ಜಿಯೋ ಹಾಟ್‌ಸ್ಟಾರ್' ಒಟಿಟಿಯಲ್ಲಿ 'ಸೆಕೆಂಡ್ ಲವ್' ಎಂಬ ವಿಭಿನ್ನ ತಮಿಳು ಡೇಟಿಂಗ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಪ್ರೀತಿಯಲ್ಲಿ ಬ್ರೇಕಪ್ ಆಗಿ ನೊಂದಿರುವ 30 ವರ್ಷದೊಳಗಿನ 12 ಯುವಕ-ಯುವತಿಯರು ಎರಡನೇ ಪ್ರೀತಿ ಹುಡುಕಿಕೊಳ್ಳಲು ಈ ಶೋ ವೇದಿಕೆಯಾಗಲಿದ್ದು, ರಮ್ಯಾ ಕೃಷ್ಣನ್ ಮಾರ್ಗದರ್ಶಕಿಯಾಗಿ ಇರಲಿದ್ದಾರೆ.

Maa Inti Bangaram Twitter Review: ಸಮಂತಾ ನಟನೆಯ ಹೊಸ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು? ತೆಲುಗಿನಲ್ಲಿ ದಿಗಂತ್‌ಗೆ ಸಿಗಲಿದೆಯಾ ಗೆಲುವು?

ʻಮಾ ಇಂಟಿ ಬಂಗಾರಂʼ ಟ್ವಿಟರ್ ರಿವ್ಯೂ: ಕಮಾಲ್ ಮಾಡಿದ್ರಾ ನಟಿ ಸಮಂತಾ?

ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್‌ 19) ಬಿಡುಗಡೆಯಾಗಿದ್ದು, ಎಕ್ಸ್ (ಟ್ವಿಟ್ಟರ್) ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾದಲ್ಲಿ ಸಮಂತಾ ಸೊಸೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಬಿಡುಗಡೆಗೆ ಮುನ್ನವೇ 35 ಕೋಟಿ ರೂ. ಬಿಸಿನೆಸ್ ಮಾಡಿದ್ದ ಈ ಚಿತ್ರವನ್ನು ಸ್ವತಃ ಸಮಂತಾ ಅವರೇ ನಿರ್ಮಾಣ ಮಾಡಿದ್ದಾರೆ.

2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ‌ ದಿಲೀಪ್‌ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್

ʻಬ್ರಹ್ಮಗಂಟುʼ ಸೀರಿಯಲ್‌ಗೆ 2 ವರ್ಷ; ನಟಿ ದಿಯಾ ಪಾಲಕ್ಕಲ್ ಭಾವುಕ ಪೋಸ್ಟ್‌

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಬ್ರಹ್ಮಗಂಟು’ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಮೈಬಣ್ಣದ ತಾರತಮ್ಯದ ವಿರುದ್ಧದ ಸೂಕ್ಷ್ಮ ಕಥಾಹಂದರ ಹೊಂದಿರುವ ಈ ಸೀರಿಯಲ್‌ನ ನಾಯಕಿ ದಿಯಾ ಪಾಲಕ್ಕಲ್ (ದೀಪಾ) ಈ ಸಂದರ್ಭದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮಿಳು ನಟ ಧನುಷ್‌ 55ನೇ ಸಿನಿಮಾಗೆ ʻಓಂʼ ಟೈಟಲ್‌; ರಿಲೀಸ್‌ ಡೇಟ್‌ ಘೋಷಣೆ!

ಅಂದು ಶಿವಣ್ಣ, ಇಂದು ಧನುಷ್;‌ ಗೆಲುವು ತಂದುಕೊಡಲಿದೆಯಾ ʻಓಂʼ?

ತಮಿಳು ನಟ ಧನುಷ್ ಅವರ 55ನೇ ಚಿತ್ರಕ್ಕೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದ್ದು, ಅಕ್ಟೋಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿದ್ದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

Bigg Boss Kannada: ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

Bigg Boss Kannada: ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ. ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.

'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್‌ ಖುಷಿಯಾದ ನಟ ವಿನೋದ್‌ ಪ್ರಭಾಕರ್

ʻನನ್ನ ತಂದೆ ಟೈಗರ್ ಪ್ರಭಾಕರ್ ಅವ್ರ ಮುಂದುವರಿದ ಅಧ್ಯಾಯ ನಾನುʼ ಎಂದ ವಿನೋದ್

ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ, ಕೆ ಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ಸಂತೋಷ್ ನಾರಾಯಣನ್ ಸಂಗೀತ ಹಾಗೂ 'ಆಲ್ ಓಕೆ' ಅಲೋಕ್ ಧ್ವನಿಯಾಗಿರುವ ಈ ಗೀತೆಯ ಬಗ್ಗೆ ಭಾರಿ ಮೆಚ್ಚುಗೆ ಸಿಕ್ಕಿದೆ.

Salman Khan: ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?

ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?

Salman Khan: ರಾಜ್ ಮತ್ತು ಡಿಕೆ ಜೊತೆ ಆಕ್ಷನ್-ಕಾಮಿಡಿ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ ಎನ್ನಲಾಗಿತ್ತು . ಆಕ್ಷನ್-ಕಾಮಿಡಿ ಚಿತ್ರವನ್ನು ಮುಗಿಸಿದ ನಂತರ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನ್ವೇಷಿಸುತ್ತಿದ್ದಾರೆ. ಭಾರತೀಯ ಇತಿಹಾಸದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲಿ ಒಂದನ್ನು ಆಧರಿಸಿದ ದೊಡ್ಡ ಪ್ರಮಾಣದ ಅವಧಿಯ ನಾಟಕಕ್ಕಾಗಿ ಸಲ್ಮಾನ್ ಫರ್ಹಾನ್ ಅಖ್ತರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ, ಸಂಸದ ರವಿ ಕಿಶನ್? ʻಪೆದ್ದಿʼ ಕಲಾವಿದನ  'ಗುಟ್ಖಾಸನ' ವಿಡಿಯೋ ಸಖತ್‌ ವೈರಲ್!

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ರವಿ ಕಿಶನ್? ಪೆದ್ದಿ ನಟ ಸಖತ್‌ ಟ್ರೋಲ್‌

ಜನಪ್ರಿಯ ಬಹುಭಾಷಾ ನಟ ಮತ್ತು ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುವಾಗ ಏನನ್ನೋ ಅಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿದೆ. ಅವರು ಜಗಿಯುತ್ತಿರುವುದು ಗುಟ್ಕಾ ಅಥವಾ ಖೈನಿ ಇರಬಹುದು ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

Suhasini Mulay: ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಮದುವೆಯಾದ ʻಲಗಾನ್‌ʼ ನಟಿ

60ನೇ ವಯಸ್ಸಿನಲ್ಲಿ ಮದುವೆಯಾದ ʻಲಗಾನ್‌ʼ ನಟಿ!

Suhasini Mulay: ಸುಹಾಸಿನಿ ಮುಲೇ, 60 ನೇ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ವಿಜ್ಞಾನಿ ಅತುಲ್ ಗುರ್ತು ಜೊತೆ ವಿವಾಹವಾದರು. ಫೇಸ್‌ಬುಕ್‌ನಲ್ಲಿ ಪರಿಚಯ ಆಗಿ ಇದೀಗ ಪ್ರೀತಿಗೆ ತಿರುಗಿ ಅಂತೂ ಮದುವೆ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಾನತೆಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ತಾನು ಎಂದಿಗೂ ಕಂಡುಹಿಡಿಯದ ಕಾರಣ ತಾನು ಮೊದಲು ಮದುವೆಯಾಗಲಿಲ್ಲ ಎಂದು ಸುಹಾಸಿನಿ ಹೇಳಿದರು.

Loading...