ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Maa Inti Bangaaram OTT: ಒಟಿಗೆ ಬರಲು ಸಿದ್ಧವಾಯ್ತು 'ಮಾ ಇಂಟಿ ಬಂಗಾರಂ'! ಸ್ಟ್ರೀಮಿಂಗ್‌ ಎಲ್ಲಿ?

ಒಟಿಗೆ ಬರಲು ಸಿದ್ಧವಾಯ್ತು 'ಮಾ ಇಂಟಿ ಬಂಗಾರಂ'!

Maa Inti Bangaaram OTT: ಬಿವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಜೂನ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ತಮಿಳಿನಲ್ಲಿ 'ಎಂಗಲ್ ತಂಗಂ' ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಮಂತಾ , ತಮ್ಮ ನಿರ್ಮಾಣ ಬ್ಯಾನರ್ ಅಡಿಯಲ್ಲಿಯೇ ಚಿತ್ರ ನಿರ್ಮಿಸಿದರು. ಈಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಸಿನಿಮಾ ಈ ವರ್ಷ ರಿಲೀಸ್‌ ಆಗಲ್ಲ! ಕಾರಣ ಇಲ್ಲಿದೆ

Salman Khan: ‘ಮಾತೃಭೂಮಿ’ ಚಿತ್ರವು ಈ ವರ್ಷ ರಿಲೀಸ್ ಆಗೋದು ಡೌಟ್!

ಬಾಲಿವುಡ್ ನಟ ಸಲ್ಮಾನ್ ಖಾನ್, ಚಿತ್ರಾಂಗದಾ ಸಿಂಗ್ ಅಭಿನಯದ ‘ಮಾತೃಭೂಮಿ’ ಸಿನಿಮಾ ಈ ವರ್ಷ ಬಿಡುಗಡೆಯಾಗುವುದು ಅನುಮಾನವಾಗಿದೆ. ಚೀನಾ ಕುರಿತಾದ ಕೆಲವು ಸೂಕ್ಷ್ಮ ದೃಶ್ಯಗಳ ಉಲ್ಲೇಖಕ್ಕೆ ಭಾರತೀಯ ರಕ್ಷಣಾ ಸಚಿವಾಲಯವು ತೀವ್ರ ಆಕ್ಷೇಪಣೆ ಎತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

Sam Neill: ‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ನಿಧನ

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ನಿಧನ

Sam Neill: ಸ್ಯಾಮ್ ನೀಲ್ ಅವರು ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ತೀವ್ರ ಸ್ವರೂಪದ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ ಅವರಿಗೆ ಕಿಮೋಥೆರಪಿ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಆದರೆ, ಇಮ್ಯೂನ್ ಸಿಸ್ಟಮ್ ಮಾರ್ಪಡಿಸುವ ವಿಶೇಷವಾದ ಜೆನೆಟಿಕ್ ಚಿಕಿತ್ಸೆಯ ಮೂಲಕ ತಾವು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಈ ವರ್ಷದ ಏಪ್ರಿಲ್‌ನಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ಯಾಮ್ ಬಹಿರಂಗಪಡಿಸಿದ್ದರು.

ಕಿರುತೆರೆ ನಟ ರೋಹಿತ್ ಚಂದೆಲ್ ವಿರುದ್ಧ ಪೋಕ್ಸೋ ಕೇಸ್‌; 16 ವರ್ಷದ ಬಾಲಕಿಗೆ ಕಿರುಕುಳ ಕೊಟ್ಟ ಆರೋಪ, ಅರೆಸ್ಟ್‌ ಮಾಡಿದ ಮುಂಬೈ ಪೊಲೀಸ್!‌

ಅಪ್ರಾಪ್ತ ಬಾಲಕಿಗೆ ಕಿರುಕುಳ; ನಟ ರೋಹಿತ್ ಚಂದೆಲ್ ವಿರುದ್ಧ ಪೋಕ್ಸೋ ಕೇಸ್‌!

'ಪಾಂಡ್ಯ ಸ್ಟೋರ್' ಮತ್ತು 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ಖ್ಯಾತಿಯ ಹಿಂದಿ ಕಿರುತೆರೆ ನಟ ರೋಹಿತ್ ಚಂದೆಲ್ ಅವರನ್ನು ಮುಂಬೈ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿಗೆ ವಿವಿಧ ನಂಬರ್‌ಗಳಿಂದ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ ಹಾಗೂ ಮನೆಯ ಬಳಿ ಹಿಂಬಾಲಿಸಿ ದೈಹಿಕ ಹಲ್ಲೆ ನಡೆಸಿದ ಗಂಭೀರ ಆರೋಪ ನಟನ ಮೇಲಿದೆ.

S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್‌. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ

ʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼ ಎಸ್‌. ಜಾನಕಿ ನೆನೆದು ಪಿ. ಸುಶೀಲಾ ಭಾವುಕ

P susheela: ಭಾರತೀಯ ಚಿತ್ರರಂಗದ ಇಬ್ಬರು ಅದ್ಭುತ ಗಾಯಕಿಯರು ಎಸ್‌. ಜಾನಕಿ ಹಾಗೂ ಪಿ. ಸುಶೀಲ. ಸಮಕಾಲೀನರಾದ ಇಬ್ಬರೂ ತಮ್ಮ ಕೋಗಿಲ ಕಂಠದಿಂದ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಪಿ. ಸುಶೀಲಾ ಎಸ್. ಜಾನಕಿ ಜೊತೆಗಿನ ಒಡನಾಟ, ಸ್ನೇಹ, ಭಿನ್ನಾಭಿಪ್ರಾಯ, ಎಲ್ಲದ್ದರ ಬಗ್ಗೆ ಮೆಲುಕು ಹಾಕಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡ ನಟಿ ಶರ್ಮಿಳಾ ಮಾಂಡ್ರೆ: ಜೈಪುರದಲ್ಲಿ ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ಅದ್ಧೂರಿ ಕಲ್ಯಾಣ

ಜೈಪುರದಲ್ಲಿ ಅದ್ದೂರಿಯಾಗಿ ನಡೆಯಿತು ನಟಿ ಶರ್ಮಿಳಾ ಮಾಂಡ್ರೆ ಮದುವೆ

ಕನ್ನಡ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ತಮಿಳಿನ ಹೆಸರಾಂತ 'ಪ್ಯಾಷನ್ ಸ್ಟುಡಿಯೋಸ್' ಮಾಲೀಕ, ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಪುರದ ಐತಿಹಾಸಿಕ ಸಮೋಡೆ ಪ್ಯಾಲೇಸ್‌ನಲ್ಲಿ ಜುಲೈ 12ರಂದು ದಕ್ಷಿಣ ಭಾರತದ ವೈದಿಕ ಆಚರಣೆಗಳ ಪ್ರಕಾರ ಇವರ ವಿವಾಹ ಮಹೋತ್ಸವ ಜರುಗಿದೆ.

ಟಾಮ್ ಹಾಲೆಂಡ್ ಜೊತೆ ಇಡೀ 'ದಿ ಒಡಿಸ್ಸಿ' ಚಿತ್ರತಂಡವನ್ನು ಭಾರತಕ್ಕೆ ಕರೆತಂದ ನಿರ್ದೇಶಕ ಕ್ರಿಸ್ಟೋಫರ್ ನೋಲನ್

ಮುಂಬೈನಲ್ಲಿ ಹಾಲಿವುಡ್‌ ಹವಾ; 'ದಿ ಒಡಿಸ್ಸಿ' ಪ್ರಚಾರಕ್ಕಾಗಿ ಬಂದ ನೋಲನ್

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾದ ಪ್ರಚಾರಕ್ಕಾಗಿ ಟಾಮ್ ಹಾಲೆಂಡ್ ಹಾಗೂ ಮ್ಯಾಟ್ ಡಾಮನ್ ಮುಂಬೈಗೆ ಆಗಮಿಸಿದ್ದಾರೆ. ಸಂಪೂರ್ಣವಾಗಿ ಐಮ್ಯಾಕ್ಸ್ ಫಿಲ್ಮ್ ಕ್ಯಾಮೆರಾಗಳಲ್ಲೇ ಶೂಟ್ ಆದ ವಿಶ್ವದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯ ಈ ಸಿನಿಮಾ ಜುಲೈ 17 ರಂದು ತೆರೆಕಾಣಲಿದೆ.

ಶ್ರೀಮುರಳಿ ನಟನೆಯ ‘ಪರಾಕ್’ ಚಿತ್ರದ ಟೀಸರ್ ರಿಲೀಸ್; ಹೊಸಬರ ಡಿಫರೆಂಟ್ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ʻರೋರಿಂಗ್ ಸ್ಟಾರ್ʼ

ʻಪರಾಕ್ʼ ಟೀಸರ್ ರಿಲೀಸ್; ಸಿಕ್ಸ್‌ ಪ್ಯಾಕ್ ಲುಕ್‌ನಲ್ಲಿ ಮಿಂಚಿದ ಶ್ರೀಮುರಳಿ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಹಾಲೇಶ್ ಕೋಗುಂಡಿ ಚೊಚ್ಚಲ ನಿರ್ದೇಶನದ ‘ಪರಾಕ್’ ಚಿತ್ರದ ಖಡಕ್ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೂರೂವರೆ ವರ್ಷಗಳ ಕಥೆಯ ಶ್ರಮ ಹಾಗೂ ಭಾರಿ ಪೂರ್ವಸಿದ್ಧತೆಯೊಂದಿಗೆ ಮೂಡಿಬರುತ್ತಿರುವ ಈ ಆ್ಯಕ್ಷನ್ ಚಿತ್ರದಲ್ಲಿ ಶ್ರೀಮುರಳಿ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

ಸನ್‌ ರೈಸರ್ಸ್‌ ಓನರ್‌ ಕಾವ್ಯಾ ಮಾರನ್‌ - ಅನಿರುದ್ಧ್‌ ಮದುವೆಗೆ ಮುಹೂರ್ತ ಫಿಕ್ಸ್‌? ಎರಡೂ ಕುಟುಂಬಗಳಿಂದ ಸಿಕ್ತು ಗ್ರೀನ್‌ ಸಿಗ್ನಲ್

ಅನಿರುದ್ಧ್ - ಕಾವ್ಯಾ ಮಾರನ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್!

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಮತ್ತು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಅವರ ವಿವಾಹವು ಮುಂಬರುವ ನವೆಂಬರ್ ಎರಡನೇ ವಾರದಲ್ಲಿ ನಡೆಯಲಿದೆ ಎಂಬ ವದಂತಿ ದಟ್ಟವಾಗಿದೆ. ಅನಿರುದ್ಧ್ ಆಪ್ತ ಸಂಬಂಧಿ ವೈ. ಜಿ. ಮಹೇಂದ್ರನ್ ಈ ಮದುವೆಯನ್ನು ಖಚಿತಪಡಿಸಿದ್ದು, ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿದೆ.

ʻನಮ್ಮ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆʼ; ಗಂಭೀರ ಆತಂಕವನ್ನು ವ್ಯಕ್ತಪಡಿಸಿದ ನಿರ್ದೇಶಕ ಕೆ. ಎಂ. ಚೈತನ್ಯ

ಮಲ್ಟಿಪ್ಲೆಕ್ಸ್ ದಂಧೆ, ನಟರ ದುಬಾರಿ ಸಂಭಾವನೆ; ಕನ್ನಡ ಚಿತ್ರರಂಗ ಅವನತಿಯತ್ತ!

ಮಲ್ಟಿಪ್ಲೆಕ್ಸ್‌ಗಳ ದುಬಾರಿ ದರ, ಒಟಿಟಿಗಳ ಪೈಪೋಟಿ ಹಾಗೂ ನಟ-ತಂತ್ರಜ್ಞರ ಅತಿಯಾದ ಸಂಭಾವನೆಯಿಂದಾಗಿ ಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ ಎಂದು ನಿರ್ದೇಶಕ ಕೆ. ಎಂ. ಚೈತನ್ಯ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬೆಂಬಲ ನೀಡಿರುವ ಬಿ. ಎಸ್. ಲಿಂಗದೇವರು ಲಾಭದಲ್ಲಿ ಪಾಲುದಾರಿಕೆ ಮಾದರಿ ಅಳವಡಿಸಲು ಸಲಹೆ ನೀಡಿದ್ದರೆ, ನಾಗೇಂದ್ರ ಅರಸ್ ಅವರು ಕೇರಳ ಫಿಲಂ ಚೇಂಬರ್ ಮಾದರಿಯಲ್ಲಿ ಸ್ಟಾರ್‌ಗಳ ಸಂಭಾವನೆಗೆ ನಿಯಂತ್ರಣ ಹೇರಬೇಕು ಎಂದು ಹೇಳಿದ್ದಾರೆ.

ʻಮ್ಯಾರೇಜ್ ಪಾರ್ಟಿʼ ಫಸ್ಟ್ ಲುಕ್ ರಿಲೀಸ್‌; ಚಯನ್ ಶೆಟ್ಟಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ತುಳು ನಟ ವಿನೀತ್‌ ಕುಮಾರ್‌

ಚಯನ್ ಶೆಟ್ಟಿ ನಿರ್ದೇಶನದ ʻಮ್ಯಾರೇಜ್ ಪಾರ್ಟಿʼ ಸಿನಿಮಾ ಫಸ್ಟ್ ಲುಕ್ ರಿಲೀಸ್‌

‘ಅಧಿಪತ್ರ’ ಚಿತ್ರದ ನಂತರ ನಿರ್ದೇಶಕ ಚಯನ್ ಶೆಟ್ಟಿ ಸಂಪೂರ್ಣ ಭಿನ್ನವಾದ ಪಕ್ಕಾ ಹಾಸ್ಯಪ್ರಧಾನ ‘ಮ್ಯಾರೇಜ್ ಪಾರ್ಟಿ’ ಚಿತ್ರದೊಂದಿಗೆ ಬಿಡುಗಡೆಗೆ ಸಜ್ಜಾಗಿದ್ದು, ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಶ್ರೀ ವಾರಾಹಿ ಫಿಲಂಸ್ ಅಡಿಯಲ್ಲಿ ಸಂತೋಷ್ ವಿ ನಿರ್ಮಿಸಿರುವ ಈ ಚಿತ್ರದ ಮೂಲಕ ತುಳು ನಟ ವಿನೀತ್ ಕುಮಾರ್ ಕನ್ನಡಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಗೌತಮ್‌ಗೆ ಹೇಗೋ ಭೂಮಿ ರಿಪೋರ್ಟ್‌ ಸಿಕ್ಕಿದೆ. ವೈದ್ಯರ ಬಳಿ ಬಂದು ಕೇಳಿದಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಮೂರನೇ ಹಂತ ಇದ್ದ ಕಾರಣ ವೈದ್ಯರು ಕೂಡ ಕಷ್ಟಕರ ಎಂದಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಶಾಕ್‌ ಆಗಿದ್ದಾನೆ. ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ.

Jodi No 1 Winner: ‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!  ಗೆದ್ದವರಿಗೆ ಏನು ಬಹುಮಾನ?

‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!

Jodi No 1 Winner: 30 ವರ್ಷಗಳಿಂದ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನ ಸಾಗಿಸುತ್ತಾ ಬಂದಿರುವ ಕೋಟೆ ಪ್ರಭಾಕರ್ - ಮಾಲತಿ ದಂಪತಿ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದಾರೆ. 5 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಹಾಗೇ, ವಿನ್ನರ್‌ ಟ್ರೋಫಿ ಸಿಕ್ಕಿದೆ. ‘ಜೋಡಿ ನಂ 1’ ಕಾರ್ಯಕ್ರಮದ ಮೊದಲ ರನ್ನರ್‌ ಅಪ್ ಆಗಿ ಧನರಾಜ್ ಆಚಾರ್ - ಪ್ರಜ್ಞಾ ದಂಪತಿ ಹೊರಹೊಮ್ಮಿದ್ದಾರೆ. ಎರಡನೇ ರನ್ನರ್‌ ಅಪ್ ಸ್ಥಾನ ಪಡೆದವರು ನಯನ ನಾಗರಾಜ್ - ಸುಹಾಸ್ ದಂಪತಿ.

Ramya Krishnan:  'ಕ್ವೀನ್' ಆದ ರಮ್ಯಾ ಕೃಷ್ಣನ್! ಈ ಪಾತ್ರದ ಮೂಲಕ ಮತ್ತೆ ತೆರೆಗೆ

'ಕ್ವೀನ್' ಆದ ರಮ್ಯಾ ಕೃಷ್ಣನ್! ಈ ಪಾತ್ರದ ಮೂಲಕ ಮತ್ತೆ ತೆರೆಗೆ

Ramya Krishnan: ಈ ಚಿತ್ರವನ್ನು ಒನ್ ಸರ್ಕಲ್ ಫಿಲ್ಮ್ಸ್ ಬ್ಯಾನರ್ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಕಾಲಕೇಯ ಪ್ರಭಾಕರ್ ಮತ್ತು ಅಜಯ್ ಘೋಷ್ ಖಳನಾಯಕರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿಕುಮಾರ್ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಥೆ 2006-2010 ರ ನಡುವೆ ನಡೆಯಲಿದೆ.ಈ ಚಿತ್ರವು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿದೆ ಎಂದು ವರದಿಯಾಗಿದೆ.

Daali Dhananjay: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ಕೆಟ್ಟ ಪ್ರಚಾರ; ಡಾಲಿ ಧನಂಜಯ್‌ ಬೇಸರ

‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ಕೆಟ್ಟ ಪ್ರಚಾರ; ಡಾಲಿ ಧನಂಜಯ್‌ ಬೇಸರ

Mother Promise: ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಕೆಲವರು ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಸಹ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್‌ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್ ಸಿಕ್ಕ ಬೆನ್ನಲ್ಲೇ ಲೀಕ್‌ ಆಯ್ತು ರಿಲೀಸ್‌ ಡೇಟ್;‌ ಸಿಎಂ ವಿಜಯ್‌ ಕೊನೇ ಸಿನಿಮಾ ಯಾವಾಗ ಬರತ್ತೆ?

ʻಜನ ನಾಯಗನ್ʼ ರಿಲೀಸ್ ಡೇಟ್ ಲೀಕ್; ಸಿಎಂ ವಿಜಯ್ ಕೊನೇ ಸಿನಿಮಾ ಬರೋದ್ಯಾವಾಗ?

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಿಂದ 12 ಬದಲಾವಣೆಗಳೊಂದಿಗೆ ‘ಎ’ ಪ್ರಮಾಣಪತ್ರ ಪಡೆದ ಬೆನ್ನಲ್ಲೇ, ಯುಕೆ ವಿತರಕರಿಂದ ಜುಲೈ 24 ರ ಬಿಡುಗಡೆ ದಿನಾಂಕ ಲೀಕ್ ಆಗಿದೆ. ಟಿವಿಕೆ ಪಕ್ಷದ ಉಲ್ಲೇಖ ಹಾಗೂ ರಾಷ್ಟ್ರಧ್ವಜದ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದು, ಸದ್ಯ ಎಲ್ಲರ ಗಮನ ರಿಲೀಸ್‌ ಡೇಟ್‌ ಮೇಲಿದೆ.

Actor Arya: ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

Actor Arya: ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ. ಅನಂತನ್ ಕಾಡು ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದ ಆರ್ಯ, ನಿರ್ಮಾಪಕ ವಿನೋದ್ ಮತ್ತು ಇತರರು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಳಸಲಾದ ಕ್ಯಾಮೆರಾ ಮತ್ತು ಬೆಳಕಿನ ಉಪಕರಣಗಳಿಗೆ ಬಾಕಿ ಇರುವ ₹ 1.80 ಕೋಟಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ಕಂಪನಿ ಆರೋಪಿಸಿದೆ.

ಭೂಗತ ಲೋಕದ ಕಥೆ ಹೇಳುತ್ತಾ ಗಮನಸೆಳೆದ ʻರಕ್ಕಿʼ; ರೌಡಿಸಂ ಸಿನಿಮಾಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್‌!

Rakky Movie: ಭೂಗತ ಲೋಕದ ಕಥೆಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್

ವಿಭಿನ್ನ ಚಿತ್ರಗಳ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೌಟುಂಬಿಕ ಎಳೆಯುಳ್ಳ ಭೂಗತ ಲೋಕದ ಕಥಾಹಂದರ ಹೊಂದಿರುವ ‘ರಕ್ಕಿ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಅಪ್ಪು ಅಭಿಮಾನಿ ರಕ್ಕಿ ಸುರೇಶ್ ನಾಯಕನಾಗಿ ನಟಿಸಿದ್ದು, ಬಿ. ಸುರೇಶ್, ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ʻನಾಯಕಿ ಪ್ರಧಾನ ಸಿನಿಮಾವನ್ನ ಯಾರ್ ನೋಡ್ತಾರೆ‌ʼ; ಎಲ್ಲರ ಅಭಿಪ್ರಾಯ ಸುಳ್ಳು ಮಾಡಿದ ನಟಿ ಸಮಂತಾ, 100 ಕೋಟಿ ಕ್ಲಬ್‌ ಸೇರಿದ 'ಮಾ ಇಂಟಿ ಬಂಗಾರಂ'!

100 ಕೋಟಿ ಕ್ಲಬ್‌ಗೆ 'ಮಾ ಇಂಟಿ ಬಂಗಾರಂ'; ಖುಷಿಯಾದ ತುಂಬು ಗರ್ಭಿಣಿ ಸಮಂತಾ!

ನಟಿ ಸಮಂತಾ ಮುಖ್ಯ ಭೂಮಿಕೆಯ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಸಮಂತಾ, ಈ ಸಿನಿಮಾ ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾವನ್ನು ಯಾರೂ ನೋಡುವುದಿಲ್ಲ ಎಂದು ವಿತರಕರು ಆಡಿಕೊಂಡಿದ್ದ ಕಹಿ ಮಾತನ್ನು ನೆನೆದು ಭಾವುಕರಾಗಿದ್ದಾರೆ.

Sunny Deol: ಭಾರತ ಮತ್ತು ಪಾಕ್ ವಿಭಜನೆಯ ಕಥೆ! ಬಟ್ವಾರಾದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

`ಬಟ್ವಾರಾ'ದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

Sunny Deol: ಭಾರತ ಮತ್ತು ಪಾಕ್ ವಿಭಜನೆಯ ನಂತರ ನಡೆದ ಗಲಭೆಗಳು ಮತ್ತು ಅಶಾಂತಿಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಶಬನಾ ಅಜ್ಮಿ ನಟಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಪ್ರೀತಿ ಜಿಂಟಾ, ಕರಣ್ ಡಿಯೋಲ್ ಮ್ತುತ ಅಭಿಮನ್ಯು ಸಿಂಗ್ ನಟಿಸಿದ್ದಾರೆ. ಚಿತ್ರ ಅಗಸ್ಟ್ 14, 2026 ರಂದು ತೆರೆಗೆ ಬರಲಿದೆ. ಬಟ್ವಾರಾ 1947 ಜುಲೈ 15 ರಂದು ತನ್ನ ಎರಡನೇ ಟೀಸರ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

Kulavadhu Actress : ಡಿವೋರ್ಸ್‌ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ

ಡಿವೋರ್ಸ್‌ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ

Kulavadhu Actress : ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದ 'ಕುಲವಧು' (Kulavadhu Serial) ಧಾರಾವಾಹಿ ದೀಪಿಕಾಗೆ ಹೆಚ್ಚಿನ ಪ್ರಖ್ಯಾತಿ ತಂದುಕೊಟ್ಟಿತ್ತು. 7 ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಆಕೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಏಕಾಏಕಿ ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ವೈಯಕ್ತಿಕ ಜೀವನದ ಬಗ್ಗೆ ಹೇಳೋದಾದರೆ ಲವ್‌ ಮ್ಯಾರೆಜ್‌ ಆಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಆಕರ್ಷ್ ಹಾಗೂ ದೀಪಿಕಾ ನಟಿಸಿದ್ದರು. ಆಗ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಒಳಗಾಗಿದ್ದರು.

‌Lenin Movie: ಕೊನೆಗೂ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದ ಅಖಿಲ್‌ ಅಕ್ಕಿನೇನಿ; ವಿಲನ್‌ ಪಾತ್ರ ಮಾಡಿ ಭಾರಿ ಮೆಚ್ಚುಗೆ ಪಡೆದ ಕನ್ನಡ ನಟ ಪ್ರಮೋದ್ ಪಂಜು

ಬಾಕ್ಸ್ ಆಫೀಸ್‌ನಲ್ಲಿ ʻಲೆನಿನ್ʼ ಸುನಾಮಿ; ತೆಲುಗಿನಲ್ಲಿ ಮಿಂಚಿದ ನಟ ಪ್ರಮೋದ್

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 37 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡಿದೆ. ಮುರಳಿ ಕಿಶೋರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಕನ್ನಡದ ನಟ ಪ್ರಮೋದ್ ಪಂಜು 'ವಸಂತ್' ಎಂಬ ಖಳನಾಯಕನಾಗಿ ಅಬ್ಬರಿಸಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

S. Janaki's last rites: ಗಾನಕೋಗಿಲೆ ಎಸ್‌.ಜಾನಕಿ ಪಂಚಭೂತಗಳಲ್ಲಿ ಲೀನ; ಚಿತೆಗೆ ಮೊಮ್ಮಗಳು ಅಪ್ಸರಾ ಅಗ್ನಿಸ್ಪರ್ಶ

ಪಂಚಭೂತಗಳಲ್ಲಿ ಎಸ್‌.ಜಾನಕಿ ಲೀನ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದಲ್ಲಿ ಭಾನುವಾರ ಸಂಜೆ ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್‌.ಜಾನಕಿ ಅರ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೊಮ್ಮಗಳು ಅಪ್ಸರಾ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

S Janaki: ʻನನ್ನ ಅಜ್ಜಿ ಈ ಜಗತ್ತಿಗೆ ಸೇರಿದವರು, ಅವರು ನಮ್ಮೆಲ್ಲರ ಹೃದಯಗಳಲ್ಲೂ ಇರುತ್ತಾರೆʼ; ಅಗಲಿದ ಜಾನಕಮ್ಮರನ್ನು ನೆನೆದ ಮೊಮ್ಮಗಳು, ಮಾಜಿ ಸೊಸೆ ಹೇಳಿದ್ದೇನು?

ʻಸ್ವರ ಸಾಮ್ರಾಜ್ಞಿʼ ಜಾನಕಮ್ಮರನ್ನು ನೆನೆದ ಮೊಮ್ಮಗಳು - ಮಾಜಿ ಸೊಸೆ

ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್‌ ಜಾನಕಿ ಅವರ ಅಂತ್ಯಸಂಸ್ಕಾರವನ್ನು ಮೈಸೂರು ಜಿಲ್ಲೆಯ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಜಾನಕಮ್ಮ ಇಡೀ ಜಗತ್ತಿಗೆ ಸೇರಿದ ಸ್ವತಂತ್ರ ಮನಸ್ಸಿನ ಧ್ವನಿ ಎಂದು ಮೊಮ್ಮಗಳು ಹಾಗೂ ಮಾಜಿ ಸೊಸೆ ಉಮಾ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ.

Loading...