ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
The Bengal Files: 'ಬೆಂಗಾಲ್ ಫೈಲ್ಸ್’ ಚಿತ್ರದಿಂದ ಮತ್ತೊಂದು ವಿವಾದ; ನಿಜವಾದ ಗೋಪಾಲ್ ಪಥ ಕುಟುಂಬದಿಂದ ಆಕ್ಷೇಪ

'ದಿ ಬೆಂಗಾಲ್ ಫೈಲ್ಸ್'ಗೆ ಎದುರಾಯಿತು ಮತ್ತೊಂದು ಸಂಕಷ್ಟ

1946ರ ಕೋಲ್ಕತ್ತ ಗಲಭೆಯ ಕುರಿತ ನೈಜ ಘಟನೆಯಾಧಾರಿತ ಸಿನಿಮಾ 'ದಿ ಬೆಂಗಾಲ್ ಫೈಲ್ಸ್‌'ನ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಕೋಲ್ಕತ್ತಾ ಪೊಲೀಸರು ತಡೆ ಹಿಡಿದಿದ್ದರು. ಆದರೆ ಇದೀಗ ಚಿತ್ರ ತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.

Deepika Padukone: ಅಟ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್‌ ಜತೆಗೆ ದೀಪಿಕಾ ಪಾತ್ರವೂ ಹೈಲೈಟ್‌; ಬರೋಬ್ಬರಿ 100 ದಿನ ಶೂಟಿಂಗ್‌

ಅಟ್ಲಿ-ಅಲ್ಲು ಅರ್ಜುನ್‌-ದೀಪಿಕಾ ಚಿತ್ರ ನವೆಂಬರ್‌ನಲ್ಲಿ ಆರಂಭ

AA22 x A6: ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹಲವು ದಿನಗಳ ಬ್ರೇಕ್‌ ನಂತರ ನಟನೆಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಅಟ್ಲಿ-ಅಲ್ಲು ಅರ್ಜುನ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಅವರು ಬರೋಬ್ಬರಿ 100 ದಿನಗಳ ಕಾಲ್‌ಶೀಟ್‌ ನೀಡಿದ್ದಾರೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

Lokesh Kanagaraj: ಬರೋಬ್ಬರಿ 46 ವರ್ಷಗಳ ಬಳಿಕ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ತೆರೆಮೇಲೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸಿನಿಪ್ರಿಯರು ಕುತೂಹಲಗೊಂಡಿದ್ದಾರೆ. ಈ ಚಿತ್ರಕ್ಕೆ ಸದ್ಯ ಕಾಲಿವುಡ್‌ನಲ್ಲಿ ಹೊಸ ಬಗೆಯ ಚಿತ್ರಗಳ ಮೂಲಕ ಗಮನ ಸೆಳೆದ ಲೋಕೇಶ್‌ ಕನಕರಾಜ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

Rukmini Vasanth: ರಿಷಬ್‌ ಶೆಟ್ಟಿ, ಜೂ. ಎನ್‌ಟಿಆರ್‌ ಬಳಿಕ ಯಶ್‌ಗೂ ರುಕ್ಮಿಣಿ ವಸಂತ್‌ ನಾಯಕಿ; ಯಾವ ಚಿತ್ರ?

ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರಕ್ಕೆ ರುಕ್ಮಿಣಿ ವಸಂತ್‌ ಆಯ್ಕೆ

Yash: ಸದ್ಯ ಸ್ಯಾಂಡಲ್‌ವುಡ್‌ ಮತ್ತು ವಿವಿಧ ಚಿತ್ರರಂಗದಲ್ಲಿ ಮಿಂಚುತ್ತಿರುವ ರುಕ್ಮಿಣಿ ವಸಂತ್‌ ಇದೀಗ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಪ್ರಿಯರ ಗಮನ ಸೆಳೆದ ʼಕಾಂತಾರ: ಚಾಪ್ಟರ್‌ 1' ಚಿತ್ರದಲ್ಲಿ ನಟಿಸುತ್ತಿರುವ ಅವರು ಮತ್ತೊಂದು ಬಹು ನಿರೀಕ್ಷಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Devil  Movie: ಈ ವರ್ಷವೇ 'ಡೆವಿಲ್' ಬಿಡುಗಡೆ? ಸಿಕ್ತು ಹೊಸ ಅಪ್ಡೇಟ್!

ದರ್ಶನ್ ಇಲ್ಲದೆಯೇ ಬಿಡುಗಡೆ ಆಗುತ್ತಾ ಡೆವಿಲ್?

The Devil Movie: ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿ ದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಗೂ ಸಿದ್ದವಾಗಿತ್ತು. ಇದೀಗ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಡೆವಿಲ್ ಚಿತ್ರ ರಿಲೀಸ್ ಆಗುತ್ತಾ ? "ಮಿಲನಾ ಪ್ರಕಾಶ್'' ಮತ್ತು ತಂಡ ಚಿತ್ರವನ್ನು ತೆರೆಗೆ ತರಲು ಮುಂದಾ ಗುತ್ತಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇದೀಗ ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ರಾಗಿರುವ ''ಉಮೇಶ್ ಬಣಕಾರ್'' ಪ್ರತಿಕ್ರಿಯೆ ನೀಡಿದ್ದಾರೆ.

Su From So: ತಮಿಳಿಗೆ ರಿಮೇಕ್‌ ಆಗಲಿದೆ 'ಸು ಫ್ರಮ್‌ ಸೋ'; ಹಕ್ಕು ಖರೀದಿಸಿದ ಖ್ಯಾತ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್‌

ತಮಿಳಿಗೆ ರಿಮೇಕ್‌ ಆಗಲಿದೆ 'ಸು ಫ್ರಮ್‌ ಸೋ'

NS Rajkumar: ಯಾವುದೇ ಸ್ಟಾರ್‌ ನಟರಿಲ್ಲದೆ ತೆರೆಕಂಡು ಯಸಸ್ವಿ ಪ್ರದರ್ಶಗೊಳ್ಳುತ್ತಿರುವ ಕನ್ನಡ ಸು ಫ್ರಮ್‌ ಸೋ ಸದ್ಯ ತೆಲುಗು ಮತ್ತು ಮಲಯಾಳಂನಲ್ಲಿಯೂ ರಿಲೀಸ್‌ ಆಗಿ ಮೋಡಿ ಮಾಡುತ್ತಿದೆ. ಇದೀಗ ಈ ಚಿತ್ರ ತಮಿಳಿಗೆ ರಿಮೇಕ್‌ ಆಗುತ್ತಿದೆ. ತಮಿಳು ರಿಮೇಕ್‌ ಹಕ್ಕನ್ನು ಖ್ಯಾತ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್‌ ಖರೀದಿಸಿದ್ದಾರೆ.

Actor Darshan: ದರ್ಶನ್‌ ಬೇಲ್‌ ಕ್ಯಾನ್ಸಲ್‌ಗೆ ಫ್ಯಾನ್ಸ್‌ ಕಾರಣಾನಾ? ಸುಪ್ರೀಂ ಕೋರ್ಟ್ ಆದೇಶದ 64ನೇ ಪುಟದಲ್ಲೇನಿದೆ?

ದರ್ಶನ್‌ ಬೇಲ್‌ ಕ್ಯಾನ್ಸಲ್‌ಗೆ ಫ್ಯಾನ್ಸ್‌ ಕಾರಣಾನಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ (Actor Darshan) ಇದೀಗ ಮತ್ತೆ ಜೈಲು ಸೇರಿದ್ದು, ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದಾರೆ. ದರ್ಶನ್‌ ಜಾಮೀನು ರದ್ಧತಿಗೆ ಕಾರಣವೇನು ಎಂಬುದನ್ನು ಹೈ ಕೋರ್ಟ್‌ ನ್ಯಾಯವಾದಿ ಸಹನಾ ಗೋಪಾಲ್‌ ಅವರು ತಿಳಿಸಿದ್ದಾರೆ.

Vishnuvardhan Memorial: ವಿಷ್ಣುವರ್ಧನ್ ಹೆಸರಲ್ಲಿ ಕಿಚ್ಚ ನಿರ್ಮಿಸಲಿರುವ ಸ್ಮಾರಕ ಹೇಗಿರಲಿದೆ?

ವಿಷ್ಣುವರ್ಧನ್ ಹೆಸರಲ್ಲಿ ಕಿಚ್ಚ ನಿರ್ಮಿಸಲಿರುವ ಸ್ಮಾರಕ ಹೇಗಿರಲಿದೆ?

ನಟ ವಿಷ್ಣುವರ್ಧನ್ ಸ್ಮಾರಕ ವಿಚಾರ ಇನ್ನು ಇತ್ಯರ್ಥ ಆಗುವ ಮುನ್ನವೇ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳು, ಸಿನಿಮಾ ಇಂಡಸ್ಟ್ರಿಯ ಮೇರು ಕಲಾವಿದರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಟ ಕಿಚ್ಚ ಸುದೀಪ್ ಕೂಡ ಸಮಾಧಿ ದ್ವಂಸ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ... ಇದೀಗ ವಿಷ್ಣುವರ್ಧನ್ ಹೆಸರಲ್ಲಿ ಸ್ಮಾರಕ ನಿರ್ಮಾಣಕ್ಕೆ ನಟ ಕಿಚ್ಚ ಸುದೀಪ್ ಜಾಗ ಖರೀದಿಸಿದ್ದಾರೆ.

Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಮತ್ತೊಂದು ಅಪ್‌ಡೇಟ್‌; ಮುಖ್ಯ ಪಾತ್ರದಲ್ಲಿ ಕರ್ನಾಟಕ ಮೂಲದ ಬಾಲಿವುಡ್‌ ನಟ

'ಕಾಂತಾರ: ಚಾಪ್ಟರ್‌ 1' ಚಿತ್ರದ ಮುಖ್ಯ ಪಾತ್ರದಲ್ಲಿ ಬಾಲಿವುಡ್‌ ನಟ

Gulshan Devaiah: ಸಿನಿ ಜಗತ್ತಿನ ಕುತೂಹಲ ಕೆರಳಿಸಿದ ಸ್ಯಾಂಡಲ್‌ವುಡ್‌ನ ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡದಿಂದ ಮತ್ತೊಂದು ಅಪ್‌ಡೇಟ್‌ ಹೊರಬಿದ್ದಿದೆ. ಗುಟ್ಟಾಗಿ ಚಿತ್ರೀಕರಣ ನಡೆಸಿ, ಕಲಾವಿದರ ವಿವರ ಬಿಟ್ಟುಕೊಡದ ಸಿನಿಮಾ ತಂಡ ಇದೀಗ ಒಂದೋಂದೇ ಪಾತ್ರವನ್ನು ಪರಿಚಯಿಸುತ್ತಿದೆ. ಇದೀಗ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಕೊಡಗು ಮೂಲದ ಬಾಲಿವುಡ್‌ ನಟ ಗುಲ್ಷನ್ ದೇವಯ್ಯ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ.

ZEE Power: ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅಲೆ ಎಬ್ಬಿಸಲು ಬರುತ್ತಿದೆ ಹೊಚ್ಚ ಹೊಸ ಚಾನೆಲ್ 'ಝೀ ಪವರ್'

'ಝೀ ಪವರ್' ಹೊಸ ವಾಹಿನಿಯು ಇದೇ 25 ರಿಂದ ನಿಮ್ಮ ಮುಂದೆ!

Zee Power Program: ಝೀ ಕನ್ನಡದ ಅಭೂತಪೂರ್ಣ ಯಶಸ್ಸಿನ ನಂತರ ಈಗ ZEEL ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ವಾಹಿನಿ 'ಝೀ ಪವರ್” ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ. ಆಗಸ್ಟ್ 23, 2025 ರಂದು ಪ್ರಾರಂಭವಾಗಲಿರುವ ಝೀ ಪವರ್ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ.

Ranveer Singh: ರಣವೀರ್ ಸಿಂಗ್ ಸಿನಿಮಾ ಸೆಟ್​​ನಲ್ಲಿ 120 ಜನ ಅಸ್ವಸ್ಥ; ಏಕಾಏಕಿ ಏನಾಯ್ತು?

ರಣವೀರ್ ಸಿಂಗ್ ಸಿನಿಮಾ ಸೆಟ್​​ನಲ್ಲಿ 120 ಜನ ಅಸ್ವಸ್ಥ

ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಮುಂಬರುವ ಚಿತ್ರ ಧುರಂಧರ್ (Dhurandhar) ಸಿನಿಮಾದ ಚಿತ್ರೀಕರಣವನ್ನು ಲಡಾಖ್‌ನ ಲೇಹ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಧುರಂಧರ್‌ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ 120 ಕ್ಕೂ ಅಧಿಕ ಅಧಿಕ ಮಂದಿ ಏಕಾಏಕಿ ಅಸ್ವಸ್ಥರಾಗಿದ್ದಾರೆ.

Bhagya Lakshmi Serial: ಆಫೀಸ್ ಕೆಲಸ ತಾಂಡವ್ ಮೇಲೆ ಹಾಕಿ ಭಾಗ್ಯ ಮನೆಗೆ ತೆರಳಿದ ಆದೀಶ್ವರ್

ಆಫೀಸ್ ಕೆಲಸ ತಾಂಡವ್ ಮೇಲೆ ಹಾಕಿ ಭಾಗ್ಯ ಮನೆಗೆ ತೆರಳಿದ ಆದೀ

ಮರುದಿನ ಆದೀಶ್ವರ್ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ಆದರೆ, ಈ ಚಾಲೆಂಜ್ ವಿಚಾರ ಭಾಗ್ಯ ಮನೆಯಲ್ಲಿ ಯಾರಿಗೂ ತಿಳಿದಿರುವುದಿಲ್ಲ.. ಸ್ವತಃ ಆದೀಗೆ ಕುಸುಮಾ ಹಾಗೂ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಾನೆ. ಕುಸುಮಾ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ.. ಸಣ್ಣ ಮಕ್ಕಳ ರೀತಿ ಏನಿದು ಚಾಲೆಂಜ್.. ನೀವು ದೊಡ್ಡವರು ಅಲ್ಲಿದ್ದರೆ ಚೆಂದ ಎಂದು ಹೇಳುತ್ತಾರೆ.

Puneeth Rajkumar: ಅಪ್ಪು ನಟಿಸಬೇಕಿದ್ದ ದ್ವಿತ್ವ ಸಿನಿಮಾ ಸ್ಕ್ರಿಪ್ಟ್ ಏನಾಯ್ತು?  ನಿರ್ದೇಶಕ ಪವನ್ ಕುಮಾರ್ ಹೇಳಿದ್ದೇನು?

ಅಪ್ಪು ನಟಿಸಬೇಕಿದ್ದ ದ್ವಿತ್ವ ಸಿನಿಮಾ ಸ್ಕ್ರಿಪ್ಟ್ ಏನಾಯ್ತು ಗೊತ್ತಾ?

Puneeth Rajkumar Dvitva Movie: ಪುನೀತ್ ರಾಜ್‌ಕುಮಾರ್‌ಗೆ ಅವರೊಂದಿಗೆ ಒಂದು ಸಿನಿಮಾ ಮಾಡಬೇಕು ಎಂಬುದು ನಿರ್ದೇಶಕ ಪವನ್ ಕುಮಾರ್ ಅವರ ಮನದಾಸೆಯಾಗಿತ್ತು. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಸಿದ್ಧ ಪಡಿಸಿ ಅದಕ್ಕೆ ದ್ವಿತ್ವ ಎಂಬ ಹೆಸರಿಟ್ಟರು. ಥೈಲ್ಯಾಂಡ್‌ನಲ್ಲಿ ಇದ್ದ ವೇಳೆ ಈ ಕಥೆಯನ್ನು ಮಾಡಿದ್ದು, ಅಲ್ಲಿಂದಲೇ ಸ್ಕ್ರಿಪ್ಟ್ ಅನ್ನು ಅಪ್ಪುಗೆ ಕಳಿಸಿದ್ದರಂತೆ. ಅದನ್ನು ನೋಡಿ ಅಪ್ಪು ಕೂಡ ಬಹಳ ಇಷ್ಟಪಟ್ಟರಂತೆ. ಆದರೆ ಅಷ್ಟರಲ್ಲಿ ಅಪ್ಪು ಅಕಾಲಿಕ ಮರಣ ಹೊಂದಿದ್ದರು. ಹಾಗಾದರೆ ಈ ಸಿನಿಮಾ ಸ್ಕ್ರಿಪ್ಟ್ ಏನಾಯ್ತು? ಎಂಬ ಅನೇಕ ಪ್ರಶ್ನೆಗೆ ಸ್ವತಃ ಪವನ್ ಅವರೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

Achyuta Potdar passes away: ತ್ರೀ ಈಡಿಯಟ್ಸ್‌ ಖ್ಯಾತಿಯ ನಟ ಅಚ್ಯುತ ಪೋತರ್‌ ಇನ್ನಿಲ್ಲ

ತ್ರೀ ಈಡಿಯಟ್ಸ್‌ ಖ್ಯಾತಿಯ ನಟ ಅಚ್ಯುತ ಪೋತರ್‌ ಇನ್ನಿಲ್ಲ

3 Idiots: ರಾಜ್‌ಕುಮಾರ್ ಹಿರಾನಿಯವರ ಬ್ಲಾಕ್‌ಬಸ್ಟರ್ ಚಲನಚಿತ್ರ 3 ಈಡಿಯಟ್ಸ್‌ನಲ್ಲಿ ಕಟ್ಟುನಿಟ್ಟಾದ ಎಂಜಿನಿಯರಿಂಗ್ ಪ್ರಾಧ್ಯಾಪಕನ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಮನೆಮಾತಾದರು. ಅವರ ‘ಕೆಹ್ನಾ ಕ್ಯಾ ಚಾಹತೇ ಹೋ’ ಎಂಬ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದೆ.

BB 19: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಟ್ರಾನ್ಸ್​ಜೆಂಡರ್: ಯಾರು ನೋಡಿ

ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಟ್ರಾನ್ಸ್​ಜೆಂಡರ್

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಸ್ಪರ್ಧಿಯಾಗಿ ಬಿಗ್ ಬಾಸ್ಗೆ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿದೆ. ಅನಯಾ ಬಂಗಾರ್ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕ್ರೀಡಾಪಟು ಎಂದು ಗುರುತಿಸಲ್ಪಟ್ಟಿದ್ದಾರೆ. ಹುಡುಗನಾಗಿದ್ದ ಆರ್ಯನ್ (ಮೊದಲ ಹೆಸರು) ಲಿಂಗ ಪರಿವರ್ತನೆ ಮಾಡಿಕೊಂಡು ಅನಯಾಳಾಗಿ ಸುದ್ದಿಯಾಗಿದ್ದರು.

BBM 7: ಬಿಗ್ ಬಾಸ್ ಮಲಯಾಳಂನಲ್ಲಿ ಬಿಗ್ ಟ್ವಿಸ್ಟ್: ಹಿಂದೆಂದೂ ಕಂಡು ಕೇಳರಿಯದ ಟಾಸ್ಕ್

ಬಿಗ್ ಬಾಸ್ ಮಲಯಾಳಂನಲ್ಲಿ ಬಿಗ್ ಟ್ವಿಸ್ಟ್

ಹಿರಿಯ ನಟ ಮೋಹನ್ ಲಾಲ್ ನೇತೃತ್ವದಲ್ಲಿ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಮಲಯಾಳಂ ಸೀಸನ್ 7 ಪ್ರಾರಂಭವಾಯಿತು. ಇದೀಗ ಈ ಶೋ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇದಕ್ಕೆ ಕಾರಣ ವೀಕೆಂಡ್ನಲ್ಲಿ ಬಂದ ಮೋಹನ್ ಲಾಲ್ ಬಹುದೊಡ್ಡ ಘೋಷಣೆ ಮಾಡಿರುವುದು.

Dad Movie: ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನದಲ್ಲಿ ಶಿವರಾಜ್‍ಕುಮಾರ್ ನಟನೆಯ ʼಡ್ಯಾಡ್‍ʼ ಚಿತ್ರಕ್ಕೆ ಚಾಲನೆ

ಶಿವರಾಜ್‍ಕುಮಾರ್ ನಟನೆಯ ʼಡ್ಯಾಡ್‍ʼ ಚಿತ್ರಕ್ಕೆ ಚಾಲನೆ

Dad Movie: ಶಿವರಾಜ್‍ಕುಮಾರ್ ಅಭಿನಯದ ʼಡ್ಯಾಡ್ʼ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Karan Johar: ಶಾರುಖ್‌ ಖಾನ್‌ ಮಗ ನಿರ್ದೇಶಿಸುತ್ತಿರುವ  ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕರಣ್ ಜೋಹರ್!

ಆರ್ಯನ್ ಖಾನ್ ನಿರ್ದೇಶನದ ಚಿತ್ರದಲ್ಲಿ ಕರಣ್ ಜೋಹರ್ ನಟನೆ!.

ಆರ್ಯನ್ ಖಾನ್ ಅವರ ಚೊಚ್ಚಲ ನಿರ್ದೆಶನದದ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ಕುರಿತಂತೆ ಕರಣ್ ಜೋಹರ್ ಅವರೇ ಸ್ವತಃ ಸ್ಪಷ್ಟನೆ ನೀಡಿದ್ದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದು ಕೊಂಡಿದ್ದಾರೆ..

Vishnuvardhan Memorial: ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಭೂಮಿ ಖರೀದಿಸಿದ ನಟ ಸುದೀಪ್‌

ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಭೂಮಿ ಖರೀದಿಸಿದ ನಟ ಸುದೀಪ್‌

Kiccha sudeep: ನಟ ಕಿಚ್ಚ ಸುದೀಪ್ ಅವರು ಬೆಂಗಳೂರಿನ ಕೆಂಗೇರಿಯ ಅಭಿಮಾನ್ ಸ್ಟುಡಿಯೋದಿಂದ ಸ್ವಲ್ಪ ದೂರದಲ್ಲಿ ಅರ್ಧ ಎಕರೆ ಜಾಗ ಖರೀದಿಸಿದ್ದು, ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಮಾಹಿತಿ ಲಭ್ಯವಾಗಿದೆ.

Elvish Yadav: ಮನೆ ಮೇಲಿನ ಗುಂಡಿನ ದಾಳಿ; ಕೊನೆಗೂ ಮೌನ ಮುರಿದ ಯೂಟ್ಯೂಬರ್ ಎಲ್ವಿಶ್ ಯಾದವ್

ಮನೆ ಮೇಲೆ ಗುಂಡಿನ ದಾಳಿ ಎಲ್ವಿಶ್ ಯಾದವ್ ಹೇಳಿದ್ದೇನು?

Bigg Boss Winner house: ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ಮನೆ ಹೊರಗೆ ಮೂವರು ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಒಂದು ಡಜನ್‌ಗೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡು ಹಾರಿಸುವ ಸಮಯದಲ್ಲಿ ಎಲ್ವಿಶ್ ಯಾದವ್ ಅವರ ನಿವಾಸದಲ್ಲಿ ಇರಲಿಲ್ಲ. ಘಟನೆ ಕುರಿತು ಎಲ್ವಿಶ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Parag Tyagi: ವಿವಾಹ ವಾರ್ಷಿಕೋತ್ಸವದಂದು ಅಗಲಿದ ಪತ್ನಿಯ ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ನಟಿಯ ಪತಿ

ಅಗಲಿದ ಪತ್ನಿಯ ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ನಟಿ ಪತಿ

ನಟ ಪರಾಗ್ ತ್ಯಾಗಿ ಅವರು ಶೆಫಾಲಿಯನ್ನು ತುಂಬಾ ಪ್ರೀತಿಸುತ್ತಿದ್ದು ಅವರ ಅಗಲುವಿಕೆ ಇಂದಿಗೂ ಅವರ ಜೀವನಕ್ಕೆ ದೊಡ್ಡ ಆಘಾತ ತಂದಂತಾಗಿದೆ. ಹೀಗಿರುವಾಗಲೇ ನಟ ಪರಾಗ್ ತ್ಯಾಗಿ ಅವರು ವಿವಾಹ ವಾರ್ಷಿಕೋತ್ಸವದಂದು ಅವರ ದಿವಂಗತ ಪತ್ನಿ ಸವಿನೆನಪಿಮ ಗೌರವಾರ್ಥವಾಗಿ ಅವರ ಮುಖದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ...

Vijay and Rashmika; ನ್ಯೂಯಾರ್ಕ್‌ನಲ್ಲಿ ಕೈ ಕೈ ಹಿಡಿದು ಸುತ್ತಾಟ; ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ್ರು ರಶ್ಮಿಕಾ, ವಿಜಯ್

ರಶ್ಮಿಕಾ- ವಿಜಯ್ ದೇವರಕೊಂಡ ವಿಡಿಯೋ ವೈರಲ್!

Vijay and Rashmika: ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್ ನಲ್ಲಿ ಭಾಗವಹಿಸಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಪೆರೇಡ್‌ನಲ್ಲಿ ಭಾಗಿಯಾಗಿದ್ದ ಈ ಜೋಡಿಯ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Singer Dua Lipa: ಖ್ಯಾತ ಗಾಯಕಿ ಬಿಕಿನಿ ಫೋಟೋಶೂಟ್- ಪಡ್ಡೆ ಹುಡುಗ್ರ ನಿದ್ದೆಗೆಡಿಸಿದ ಹಸಿ ಬಿಸಿ ಫೋಟೋಗಳು

ಖ್ಯಾತ ಗಾಯಕಿ ಬಿಕಿನಿ ಫೋಟೋಶೂಟ್‌ಗೆ ಫ್ಯಾನ್ಸ್‌ ಫುಲ್‌ ಫಿದಾ!

Bikini Photoshoot: ಅಂತಾರಾಷ್ಟ್ರೀಯ ಖ್ಯಾತಿಯ ಅಲ್ಬೇನಿಯನ್ ಗಾಯಕಿ ದುವಾ ಲಿಪಾ ತಮ್ಮ 30ನೇ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಬಹಳ ಗ್ರಾಂಡ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಭಾವಿ ಪತಿ, ನಟ ಕಲ್ಲೂಮ್ ಟರ್ನರ್ ಮತ್ತು ಆಪ್ತ ಸ್ನೇಹಿತರೊಂದಿಗೆ ಮಜ ಮಾಡುತ್ತಿರುವ ದುವಾ, ತಮ್ಮ ಹಾಲಿಡೇ ಫೋಟೋಗಳ ಮೂಲಕ ಇಡೀ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿ ಸಿದ್ದಾರೆ.

BB 19: ಬಿಗ್ ಬಾಸ್ ಆರಂಭಕ್ಕೆ ಕೇವಲ ಆರು ದಿನ ಬಾಕಿ: ಕಾದು ಕುಳಿತ ವೀಕ್ಷಕರು

ಬಿಗ್ ಬಾಸ್ ಆರಂಭಕ್ಕೆ ಕೇವಲ ಆರು ದಿನ ಬಾಕಿ

ಆಗಸ್ಟ್ 24ರಂದು ಅದ್ದೂರಿಯಾಗಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲಿದೆ. ಈ ಹಿಂದೆ ಆಗಸ್ಟ್ ಅಂತ್ಯದಲ್ಲಿ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಅಧಿಕೃತವಾಗಿ ವಾಹಿನಿ ಪ್ರೊಮೋ ಬಿಡುಗಡೆ ಮಾಡುವ ಮೂಲಕ ಖಚಿತತೆ ನೀಡಿತು.

Loading...