ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Globe Trotter OTT: ಒಟಿಟಿಯಲ್ಲಿ ʻGlobe Trotterʼ ಈವೆಂಟ್! ರಾಜಮೌಳಿ - ಮಹೇಶ್‌ ಬಾಬು ಸಿನಿಮಾ ಕಾರ್ಯಕ್ರಮ ಲೈವ್‌ ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

ಒಟಿಟಿಯಲ್ಲಿ ʻGlobe Trotterʼ ಈವೆಂಟ್! ಲೈವ್‌ ಸ್ಟ್ರೀಮಿಂಗ್‌ ಎಲ್ಲಿ?

ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಈ (Globe Trotter ) ಮುಂಬರುವ ಚಿತ್ರವು ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಲಿದೆ. ಕುಂಭ (kumbha) ಪಾತ್ರದಲ್ಲಿ ಪೃಥ್ವಿರಾಜ್ ಅವರ ಮೊದಲ ಲುಕ್‌ ಬಿಡುಗಡೆಯಾದ ನಂತರ ಸಿನಿಪ್ರಿಯರಲ್ಲಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಎಸ್.ಎಸ್. ರಾಜಮೌಳಿ ನೇತೃತ್ವದಲ್ಲಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಅಭಿಮಾನಿಗಳಿಂದ ನಡೆಸಲ್ಪಡುವ ಕಾರ್ಯಕ್ರಮವು ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ.

Bigg Boss Kannada 12: ಈ ಸ್ಪರ್ಧಿಗೆ ಕಳಪೆ ಕೊಡಬೇಕು ಅಂತ ಅಶ್ವಿನಿ -ಜಾಹ್ನವಿ ಪ್ಲ್ಯಾನ್‌! ಆದ್ರೆ ಮಾಳು ಆಯ್ಕೆ ಯಾಕಾಗಿ ಆಯ್ತು?

ಈ ಸ್ಪರ್ಧಿಗೆ ಕಳಪೆ ಕೊಡಬೇಕು ಅಂತ ಅಶ್ವಿನಿ -ಜಾಹ್ನವಿ ಪ್ಲ್ಯಾನ್‌!

ಈ ಹಿಂದೆ ಕೂಡ ಗಿಲ್ಲಿ ( Bigg Boss Gilli) ಅವರಿಗೆ ಕಳಪೆಯನ್ನು (Kalape) ನೀಡುವಾಗ ಪ್ಲಾನ್‌ ಮಾಡಿಯೇ ನೀಡಿದ್ದರು. ವೀಕೆಂಡ್‌ನಲ್ಲಿ ಗಿಲ್ಲಿಗೆ ಕಳಪೆ ನೀಡಬೇಕು ಎಂದು ಚರ್ಚಿಸಿ ಕಳಪೆ ಕೊಟ್ಟಿದ್ದು ಎಷ್ಟು ಸರಿ? ಎಂದು ಕಿಚ್ಚ ಸುದೀಪ್‌ (sudeep) ಅವರು ಕೂಡ ಪ್ರಶ್ನೆ ಮಾಡಿದ್ದರು. ಆ ವೇಳೆ, ಕಾಕ್ರೋಚ್‌ ಸುಧಿ ಸುದೀಪ್‌ ಅವರ ಮುಂದೆ ತಾವು ಮಾಡಿದ ಪ್ಲ್ಯಾನಿಂಗ್‌ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೀಗ ಮತ್ತೆ ಅದೇ ತಪ್ಪನ್ನ ಮಾಡಿದ್ದಾರೆ ಅಶ್ವಿನಿ -ಜಾಹ್ನವಿ (Ashwini). ಕೊನೆಯಲ್ಲಿ ಮಾಳು ಅವರಿಗೆ ಕಳಪೆ ಕೊಟ್ಟಿದ್ದೇಕೆ? ಈ ನಿರ್ಧಾರ ಬದಲಾಗಿದ್ದೇಕೆ?

Kamini Kaushal: ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್  98ನೇ ವಯಸ್ಸಿಗೆ ನಿಧನ

ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್ 98ನೇ ವಯಸ್ಸಿಗೆ ನಿಧನ

ನಟಿ ಕಾಮಿನಿ ಕೌಶಲ್ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು (Bollywood) ಆಳಿದವರು. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ನಟಿಯರಲ್ಲಿ ಒಬ್ಬರಾಗಿದ್ದರು. ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಅವರಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದರು. ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್‌ಪ್ರೆಸ್, 2019 ರಲ್ಲಿ ಕಬೀರ್ ಸಿಂಗ್ ಮತ್ತು 2022 ರಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರಗಳಲ್ಲಿ ಕಾಣಿಸಿಕೊಂಡರು.

Nishaanchi OTT: ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ ಸಿನಿಮಾ! 2 ಪಾರ್ಟ್‌ಗಳು ಏಕಕಾಲಕ್ಕೆ ಸ್ಟ್ರೀಮಿಂಗ್‌, ಎಲ್ಲಿ?

ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಅನುರಾಗ್ ಕಶ್ಯಪ್ (Anurag Kashyap) ಅವರ ಎರಡು ಭಾಗಗಳ ಕ್ರೈಂ ಡ್ರಾಮ ಮೂವಿ, 'ನಿಶಾಂಚಿ' (Nishaanchi)ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಐಶ್ವರ್ಯ ಠಾಕ್ರೆ ಮತ್ತು ವೇದಿಕಾ ಪಿಂಟೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶಾಂಚಿ ಸೆಪ್ಟೆಂಬರ್ 19, 2025 ರಂದು ಬಿಡುಗಡೆಯಾಯಿತು (Release). ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿತ್ತು. ಇದರಲ್ಲಿ ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ಕುಮುದ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Saalumarada Thimmakka Death: ʻವೃಕ್ಷಮಾತೆʼ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಕಂಬನಿ ಮಿಡಿದ ಡಿಸಿಎಂ ಪವನ್‌ ಕಲ್ಯಾಣ್‌

ಸಾಲುಮರದ ತಿಮ್ಮಕ್ಕ ನಿಧನಕ್ಕೆ ನಟ ಪವನ್‌ ಕಲ್ಯಾಣ್‌ ಸಂತಾಪ

ಸಾಲುಮರದ ತಿಮ್ಮಕ್ಕ ಅವರು 114 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಆಂಧ್ರ ಪ್ರದೇಶದ ಡಿಸಿಎಂ, ನಟ ಪವನ್‌ ಕಲ್ಯಾಣ್‌ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. 'ವೃಕ್ಷಮಾತೆ' ತಿಮ್ಮಕ್ಕ ಅವರು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿ ಎಂದಿದ್ದಾರೆ.

Anirudh Ravichander : ಸಂಗೀತ ನಿರ್ದೇಶಕ ಅನಿರುದ್ದ್ ಜೊತೆಗೆ ಕಾವ್ಯಾ ಮಾರನ್ ಡೇಟಿಂಗ್‌? ವಿಡಿಯೊ ವೈರಲ್‌

ಸಂಗೀತ ನಿರ್ದೇಶಕ ಅನಿರುದ್ದ್ ಜೊತೆಗೆ ಕಾವ್ಯಾ ಮಾರನ್ ಡೇಟಿಂಗ್‌?

ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ (Kavya Maran). ಸನ್​​ರೈಸಸ್ ಹೈದರಾಬಾದ್ ತಂಡದ ಮಾಲಕಿ ಆಗಿರುವ ಜೊತೆಗೆ ಇನ್ನೂ ಹಲವಾರು ಉದ್ಯಮಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇದೇ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರ ಮದುವೆ (Marriage) ಸುದ್ದಿ ಹರಿದಾಡಿತ್ತು. ಆಗ ಟ್ವೀಟ್ ಮಾಡಿದ್ದ ಅನಿರುದ್ಧ್ ಅದೆಲ್ಲ ಸುಳ್ಳು ಎಂದಿದ್ದರು. ನ್ಯೂಯಾರ್ಕ್ ಬೀದಿಗಳಲ್ಲಿ ಒಟ್ಟಿಗೆ ಅಡ್ಡಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಈ ಜೋಡಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿವೆ.

'ವಾರ್ತೆಗಳು.. ಓದುತ್ತಿರುವವರು ಶಂಕರ್‌ನಾಗ್' ಸಿನಿಮಾಕ್ಕೆ ಹೀರೋ ಆದ ನಾಗಶೇಖರ್

ನಾಗಶೇಖರ್ ಈಗ ಹೀರೋ ಕಮ್‌ ಮ್ಯೂಸಿಕ್‌ ಡೈರೆಕ್ಟರ್!

ನಾಗಶೇಖರ್ ಅವರು ನಿರ್ದೇಶನಕ್ಕೆ ಸ್ವಲ್ಪ ವಿರಾಮ ನೀಡಿ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಸಿನಿಮಾದ ಮೂಲಕ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ಧಾರೆ. ಅವರ ಹುಟ್ಟುಹಬ್ಬದಂದು (ನ. 11) ಈ ವಿಭಿನ್ನ ಟೈಟಲ್‌ನ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಇದೇ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ನಾಗಶೇಖರ್.‌

BBK 12: ಕ್ಯಾಪ್ಟನ್‌ ಪಟ್ಟಕ್ಕೇರಿದ್ದ ಮಾಳು ನಿಪನಾಳ್‌ ಈಗ ʻಜೈಲುʼ ಹಕ್ಕಿ!  ತಪ್ಪಾಗಿದ್ದು ಎಲ್ಲಿ? ‌

BBK 12: ಮಾಳುಗೆ ʻಕಳಪೆʼ‌ ಪಟ್ಟ ನೀಡಿದ ʻಬಿಗ್ ಬಾಸ್‌ʼ ಸ್ಪರ್ಧಿಗಳು!

ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್‌ ಅವರು ಈಗ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಕ್ಯಾಪ್ಟನ್‌ ಆಗಿದ್ದರಿಂದ ಅವರಿಗೆ ಸಿಕ್ಕಿದ್ದ ನಾಮಿನೇಟ್‌ ಮಾಡುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿದೆ.

Star Fashion 2025: ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ನಟಿ ರಾಶಿ ಖನ್ನಾ

ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ನಟಿ ರಾಶಿ ಖನ್ನಾ

Actress Raashi Khanna: ಬಾಲಿವುಡ್‌ ನಟಿ ರಾಶಿ ಖನ್ನಾ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೀವೆಜ್‌ ಕಾಣಿಸುವಂತಹ ಡೀಪ್‌ ಡಿಸೈನ್‌ನ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ರಾಶಿ ಖನ್ನಾ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಹುಬ್ಬೇರಿದೆ.‌ ಇದ್ಯಾವ ಬಗೆಯ ಡಿಸೈನರ್‌ವೇರ್‌? ವಿಶೇಷತೆಯೇನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಹಿರಿಯ ನಟ ಧರ್ಮೇಂದ್ರ ಫ್ಯಾಮಿಲಿಯ ಖಾಸಗಿತನಕ್ಕೆ ಧಕ್ಕೆ; ಆಸ್ಪತ್ರೆ ಸಿಬ್ಬಂದಿ ಅರೆಸ್ಟ್!‌

ಧರ್ಮೇಂದ್ರ ಫ್ಯಾಮಿಲಿಯ ಖಾಸಗಿ ಕ್ಷಣಗಳ ವಿಡಿಯೋ ರೆಕಾರ್ಡ್; ಸಿಬ್ಬಂದಿ ಬಂಧನ!

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಐಸಿಯು ವಿಡಿಯೋ ವೈರಲ್‌ ಆದ ನಂತರ, ಕುಟುಂಬದ ಖಾಸಗಿತನಕ್ಕೆ ಧಕ್ಕೆ ತಂದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ನವೆಂಬರ್‌ 13ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆತರಲಾಗಿದೆ.

Gatha Vaibhava Review: ʻಸಿಂಪಲ್‌ʼ ಸುನಿ ಹೇಳಿದ ಜನ್ಮ ಜನ್ಮಾಂತರದ ಗತವೈಭವದ ಕಥೆ!

‌ʻಸಿಂಪಲ್ʼ ಸುನಿ ನಿರ್ದೇಶನದ ʻಗತವೈಭವʼ ಸಿನಿಮಾ ವಿಮರ್ಶೆ

ʻಸಿಂಪಲ್ʼ‌ ಸುನಿ ಮತ್ತು ನವ ನಟ ದುಷ್ಯಂತ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ʻಗತವೈಭವʼ ಸಿನಿಮಾವು ಇಂದು (ನ.14) ತೆರೆಕಂಡಿದೆ. ಟ್ರೇಲರ್‌ನಿಂದಲೇ ಗಮನಸೆಳೆದಿದ್ದ ಈ ಸಿನಿಮಾದಲ್ಲ ನಾಯಕಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಮರ್ಶೆ ಹೇಗಿದೆ? ಇಲ್ಲಿದೆ ಓದಿ.

Bigg Boss Kannada 12: ಚಾನೆಲ್​ ವಿರುದ್ಧ ಗಂಭೀರ ಆರೋಪ ಮಾಡಿದ ಜಾಹ್ನವಿ; ಕಾರಣ ಇದು

ಚಾನೆಲ್​ ವಿರುದ್ಧ ಗಂಭೀರ ಆರೋಪ ಮಾಡಿದ ಜಾಹ್ನವಿ; ಕಾರಣ ಇದು

ಬಿಗ್‌ ಬಾಸ್‌ (Bigg Boss Kannada 12) ಸ್ಪಂದನಾ ಸೋಮಣ್ಣ (Spandana Somanna) ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವಾಹಿನಿಯೇ (Channel) ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಜಾಹ್ನವಿ ಅವರು ಆರೋಪಿಸಿದ್ದರು. ಈ ಬಗ್ಗೆ ಸೂರಜ್‌ ತಿಳಿ ಹೇಳಿದ್ದಾಗಿದೆ, ನಿನ್ನೆಯ ಸಂಚಿಕೆಯಲ್ಲಿ ಈ ಬಗ್ಗೆ ಕಾವ್ಯ (Kavya Shaiva) ಕೂಡ ಜಾಹ್ನವಿ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಪ್ರತಿವಾರವೂ ಎಲಿಮಿನೇಷನ್ (Elimination)​ ನಡೆಯುತ್ತದೆ. ವೀಕ್ಷಕರು ಹಾಕುವ ವೋಟ್‌ಗಳ ಆಧಾರದ ಮೇಲೆ ಇದು ನಡೆಯುತ್ತದೆ ಎನ್ನುತ್ತದೆ ಬಿಗ್​ಬಾಸ್​. ಆದರೆ ಜಾಹ್ನವಿ ಆರೋಪ ಮಾತ್ರ ಬೇರೆ.

Shreya Ghoshal: ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು; ಅನೇಕರು ಅಸ್ವಸ್ಥ

ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು; ಅನೇಕರು ಅಸ್ವಸ್ಥ

ಒಡಿಶಾದ ಕಟಕ್‌ನಲ್ಲಿ ( Bali Yatra in Cuttack Odisha) ನಡೆದ ಪ್ರಸಿದ್ಧ ಬಾಲಿ ಯಾತ್ರೆಯ ಅಂತಿಮ ದಿನದಂದು ಗುರುವಾರ ಸಂಜೆ ತಡರಾತ್ರಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ನೂಗು ನುಗ್ಗಲಿನಲ್ಲಿ (A stampede) ಹಲವರು ಮೂರ್ಛೆ ಹೋಗಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ. ಗುಂಪನ್ನು ಚದುರಿಸಲು (Shreya Ghoshal) ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಹಲವಾರು ಜನರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

Bigg Boss Kannada 12: ರಘು ಕೊಟ್ಟ ಟಾರ್ಚರ್‌ಗೆ ಸುಸ್ತಾದ ಗಿಲ್ಲಿ! 'ಮೋಟು ಪತ್ಲು' ಜೋಡಿ ಕಂಡು ಬಿದ್ದು ಬಿದ್ದು ನಕ್ಕ ಮನೆಮಂದಿ

Bigg Boss Kannada 12: ರಘು ಕೊಟ್ಟ ಟಾರ್ಚರ್‌ಗೆ ಸುಸ್ತಾದ ಗಿಲ್ಲಿ!

ಗಿಲ್ಲಿ ಅವರಿಗೆ ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಕೆಲಸ ,ಮಾಡೋದು ಅಂದ್ರೆ ಆಗೋದೇ ಇಲ್ಲ.ಕಿಚ್ಚನ ಪಂಚಾಯಿತಿಯಲ್ಲೂ ಈ ವಿಚಾರ ಬಂದಿತ್ತು. ಆದರೀಗ ಕ್ಯಾಪ್ಟನ್‌ ರಘು ಅವರು ಗಿಲ್ಲಿ ಅವರನ್ನ ಬೆಂಡೆತ್ತಿದ್ದಾರೆ. ಆದರೀಗ ಕ್ಯಾಪ್ಟನ್‌ ರಘು ಅವರ ಟಾರ್ಚರ್‌ಗೆ (Raghu Captain) ಗಿಲ್ಲಿ ಹೈರಾಣು ಆಗಿದ್ದಾರೆ. ಇವರಿಬ್ಬರ ಕಿತಾಪತಿಗೆ 'ಮೋಟು ಪತ್ಲು' (Motu Patlu) ಜೋಡಿ ಎಂದೇ ಕರೆಯುತ್ತಿದ್ದಾರೆ. ರಘು ಅವರು ಎಲ್ಲೇ ಇದ್ದರೂ , ಅವರನ್ನ ಅಂಟಿಕೊಂಡೇ ಇರ್ತಾರೆ ಗಿಲ್ಲಿ.

Bigg Boss Kannada 12: ಓವರ್​ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ?​ ರಘು ಆಟಕ್ಕೆ ಬಹುಪರಾಕ್‌ ಅಂತಿದ್ದಾರೆ ವೀಕ್ಷಕರು!

Bigg Boss Kannada 12: ಓವರ್​ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ?​

ಗಿಲ್ಲಿ (Bigg Boss Kannada 12) ಅವರು ಟಾಸ್ಕ್‌ ಅಂತ ಬಂದಾಗಲೂ ಸರಿಯಾಗಿ ಈ ನಡುವೆ ನಿಭಾಯಿಸುತ್ತಿಲ್ಲ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ ರಕ್ಷಿತಾ (Rakshitha) ಅವರ ವಿಚಾರಕ್ಕೆ, ಮೂರನೇ ವಾರ ಗಿಲ್ಲಿ (Gilli) ಅವರಿಗೆ ಕಿಚ್ಚನ ಚಪ್ಪಾಳೆ (Kichchana Chappale) ಬಂತು. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ (Over Confidence) ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿದೆ. ಇದರ ಜೊತೆಗೆ ರಘು ಅವರ ಆಟವನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಘು ಅವರು ಬರು ಬರುತ್ತಲೇ ಕ್ಯಾಪ್ಟನ್‌ ಆದವರು. ಬಿಗ್‌ ಬಾಸ್‌ ಮನೆಯ ಮೊದಲ ಕ್ಯಾಪ್ಟನ್‌ ಆದವರು ರಘು.

Bigg Boss Kannada: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ್ರಾ ರಘು?  ಡೇಂಜರ್ಸ್‌ ಝೋನ್‌ನಲ್ಲಿ ಕಾಕ್ರೋಚ್ ಸುಧಿ!

Bigg Boss Kannada 12: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ್ರಾ ರಘು?

ಈ ವಾರ ನಾಮಿನೇಟ್‌ (Nominate) ಆಗದವರು ನಾಮಿನೇಟ್‌ ಆದ್ರು, ಡೇಂಜರ್ಜ್‌ ಝೋನ್‌ನಲ್ಲಿ ಇದ್ದವರು ಸೇಫ್‌ ಆದ್ರು. ಗೇಮ್‌ ವಿಚಾರಕ್ಕೆ ಬರೋದಾದರೆ, ಮನೆಯ ಕ್ಯಾಪ್ಟನ್ ಮಾಳು ನಿಪನಾಳ (Malu Nipanal) ಅವರು ಕಾಕ್ರೋಚ್ ಸುಧಿಯನ್ನು (Sudhi) ನೇರವಾಗಿ ನಾಮಿನೇಟ್ (Bigg Boss Kannada 12) ಮಾಡಿದರು. ನಿನ್ನೆಯ ಟಾಸ್ಕ್‌ನಲ್ಲಿ ರಘು ಅವರು ವಿನ್‌ ಆಗೋದು ಖಚಿತ ಎನ್ನುವಂತಾಗಿದೆ. ಒಂದು ವೇಳೆ ರಘು ಅವರು ವಿನ್‌ ಆದ್ರೆ ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ (Captain) ಅವರಿಗೆ ಒಲಿಯಲಿದೆ. ಜೊತೆಗೆ ರಿಷಾ ಅವರು ಸುದೀಪ್‌ ಅವರಿಂದ ನೇರವಾಗಿ ನಾಮಿನೇಟ್‌ ಆಗಿದ್ದಾರೆ.

ʻನಾನು ಮನೆಗೋದ್ರು ಪರವಾಗಿಲ್ಲ, ರಕ್ಷಿತಾಗೆ ಹೊಡೀತಿನಿʼ; ರೊಚ್ಚಿಗೆದ್ದ ʻಬಿಗ್‌ ಬಾಸ್‌ʼ ಸ್ಪರ್ಧಿ!

ರಕ್ಷಿತಾ ಶೆಟ್ಟಿ ಮೇಲೆ ಹಲ್ಲೆ ಮಾಡುವ ಮಾತನ್ನೇಳಿದ ʻಬಿಗ್ ಬಾಸ್‌ʼ ಸ್ಪರ್ಧಿ!

ʻಬಿಗ್‌ ಬಾಸ್‌ʼ ಮನೆಯಲ್ಲಿ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಜಾಹ್ನವಿ ಅವರು ರಕ್ಷಿತಾ ಶೆಟ್ಟಿ ಮೇಲೆ ರೊಚ್ಚಿಗೆದ್ದಿದ್ದಾರೆ. ಟಾಸ್ಕ್‌ ವೇಳೆ ರಕ್ಷಿತಾ ಪಟ್ಟು ಸಡಿಲಿಸದೆ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, "ನಾನು ಮ್ಯಾನ್ ಹ್ಯಾಂಡಲಿಂಗ್ (ಹಲ್ಲೆ) ಮಾಡಿ, ಮನೆಗೆ ಹೋಗ್ತೀನಿ" ಎಂದು ಜಾಹ್ನವಿ ಹೇಳಿದ್ದಾರೆ.

ಸುದೀಪ್‌ ಅಕ್ಕನ ಮಗನ ಚಿತ್ರಕ್ಕೆ ಭಾರಿ ಡಿಮ್ಯಾಂಡ್! ಸಂಚಿತ್‌ ʻಮ್ಯಾಂಗೋ ಪಚ್ಚʼ ಆಡಿಯೋ ರೈಟ್ಸ್‌ ಸೇಲ್

ʻಕಿಚ್ಚʼ ಸುದೀಪ್‌ ಸೋದರಳಿಯನ 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ಭಾರಿ ಡಿಮ್ಯಾಂಡ್!

ʻಮ್ಯಾಂಗೋ ಪಚ್ಚʼ ಸಿನಿಮಾದ ಆಡಿಯೋ ಹಕ್ಕುಗಳು ದುಬಾರಿ ಮೊತ್ತಕ್ಕೆ ಸರೆಗಮ ಸಂಸ್ಥೆಯ ಪಾಲಾಗಿವೆ. ಕಿಚ್‌ ಸುದೀಪ್‌ ಅವರ ಸೋದರಳಿಯ ಸಂಚಿತ್‌ ಸಂಜೀವ್‌ ಹೊಸ ಸಿನಿಮಾವಾಗಿದ್ದು, ವಿವೇಕ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ.

Dance Karnataka Dance: ಪ್ರೇಕ್ಷಕರಿಗೆ ಮನರಂಜನೆ ನೀಡಲು ಮತ್ತೆ ಮರಳಿ ಬಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್- ಯಾವಾಗ ಆರಂಭ?

ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್!

Dance Karnataka Dance: ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷ ಕರನ್ನು ರಂಜಿಸುತ್ತಾ ಬಂದಿರುವ ಝೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. . ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗಲಿದೆ.

ನಾಲ್ಕೇ ತಿಂಗಳಿನಲ್ಲಿ ರೆಡಿಯಾಯ್ತು ʻಕಿಚ್ಚʼ ಸುದೀಪ್‌ ಹೊಸ ಸಿನಿಮಾ; ʻಮಾರ್ಕ್‌ʼ ಟೀಮ್‌ನಿಂದ ಹೊರಬಿತ್ತು ಗುಡ್‌ ನ್ಯೂಸ್!‌

ನಾಲ್ಕೇ ತಿಂಗಳಿನಲ್ಲಿ ಸುದೀಪ್‌ ʻಮಾರ್ಕ್‌ʼಶೂಟಿಂಗ್‌ ಫಿನೀಶ್‌

ಮಾರ್ಕ್ ಸಿನಿಮಾದ ಚಿತ್ರೀಕರಣವು ಕೇವಲ ನಾಲ್ಕು ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ನಟ ʻಕಿಚ್ಚʼ ಸುದೀಪ್‌ ಅವರು ಟ್ವೀಟ್‌ ಮೂಲಕ ಇಡೀ ತಂಡದ 110 ದಿನಗಳ ಕಠಿಣ ಶ್ರಮವನ್ನು ಕೊಂಡಾಡಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್‌ ಹಬ್ಬದಂದು ಈ ಚಿತ್ರವು ಗ್ರ್ಯಾಂಡ್ ಆಗಿ ತೆರೆಕಾಣಲಿದೆ.

ಎಲ್ಲರೆದುರೇ ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ- ವಿಡಿಯೊ ವೈರಲ್

ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ

Vijay Deverakonda And Rashmika Mandanna: ನಟಿ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ ಸಿನಿಮಾದ ಸಕ್ಸಸ್ ಪಾರ್ಟಿಗೆ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ‌. ಈ ವೇಳೆ ವೇದಿಕೆ ಬಳಿಯಲ್ಲಿಯೇ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Marnami Movie: 'ಮಾರ್ನಮಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ- ಫೋಟೋಸ್ ಇಲ್ಲಿದೆ!

ಮಾರ್ನಮಿ ಚಿತ್ರಕ್ಕೆ ಕಿಚ್ಚನ ಸಾಥ್- ಫೋಟೋಸ್ ಇಲ್ಲಿದೆ!

Marnami Movie Trailer: ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ 'ಮಾರ್ನಮಿ' ಸಿನಿ ಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ವಿಧಿ ನೆರವೇರಿಸಿದ ನಯನತಾರಾ ದಂಪತಿ

Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿನಿಮಾ ಹಾಗೂ ಕ್ರಿಕೆಟ್‌ನ ಸೆಲೆಬ್ರಿಟಿಗಳು ಆಗಾಗ ಆಗಮಿಸುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್‌ ತಮ್ಮ ಗಂಡ ವಿಕ್ಕಿ ಕೌಶಲ್‌ ಜೊತೆಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿದ್ದರು. ಸಂತಾನಫಲದ ಸಮಸ್ಯೆಯನ್ನು ಹೊಂದಿದವರಿಗೆ ಕುಕ್ಕೆ ಸುಬ್ರಹ್ಮಣ್ಯದ ಭೇಟಿಗೆ ಜ್ಯೋತಿಷಿಗಳು ಸೂಚಿಸುವುದು ಸಾಮಾನ್ಯವಾಗಿದೆ. ಸಚಿನ್‌ ತೆಂಡುಲ್ಕರ್‌, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ.

Thama movie OTT : ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಭಾಗವಾಗಿರುವ ಈ ಹಾರರ್ ಕಾಮಿಡಿ (Horror Comedy Movie) ಚಿತ್ರವನ್ನು ಆದಿತ್ಯ ಸರ್ಪೋತರ್ ನಿರ್ದೇಶಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್​ ಸ್ಟೋರಿ (Love story) ಕೂಡ ಇದೆ. ‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

Loading...