ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Katrina Kaif :  ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ  ಚರ್ಚೆ

ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ ಚರ್ಚೆ

Katrina Kaif : ಪತಿ ವಿಕ್ಕಿ ಕೌಶಲ್ ಜೊತೆ 2025ರ ಕೊನೆಯಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡ ನಟಿ ಕತ್ರಿನಾ ಕೈಫ್, ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ನಟನೆಯಿಂದ ದೂರ ಉಳಿದು, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ, ಈಗ ಮತ್ತೆ ಕತ್ರಿನಾ ಆಕ್ಟಿಂಗ್‌ಗೆ ಮರಳಲು ಸಿದ್ಧರಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ʻಪೊಲೀಸ್ ಕಂಪ್ಲೈಂಟ್ʼ ಚಿತ್ರಕ್ಕಾಗಿ ಒಂದಾದ ವರಲಕ್ಷ್ಮೀ ಶರತ್‌ ಕುಮಾರ್ -‌ ರಾಗಿಣಿ ದ್ವಿವೇದಿ; ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್

Police Complaint ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಮದರ್ ಸೆಂಟಿಮೆಂಟ್

ಸ್ಯಾಂಡಲ್‌ವುಡ್‌‌ ನಟಿ ರಾಗಿಣಿ ದ್ವಿವೇದಿ ಹಾಗೂ ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ, ಮಹಿಳಾ ಪ್ರಧಾನ ಆ್ಯಕ್ಷನ್ ಥ್ರಿಲ್ಲರ್ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ಜೂನ್ 12 ರಂದು ಕರ್ನಾಟಕದ 70 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Michael On OTT: ಒಟಿಟಿಗೆ ಎಂಟ್ರಿ ಕೊಟ್ಟ 'ಮೈಕಲ್'! ಸ್ಟ್ರೀಮಿಂಗ್‌ ಎಲ್ಲಿ?

Michael On OTT: ಒಟಿಟಿಗೆ ಎಂಟ್ರಿ ಕೊಟ್ಟ 'ಮೈಕಲ್'! ಸ್ಟ್ರೀಮಿಂಗ್‌ ಎಲ್ಲಿ?

Michael On OTT: ಜಾಫರ್ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೈಕೆಲ್ (Michael On OTT) ಚಿತ್ರವು ಏಪ್ರಿಲ್ 24, 2026 ರಂದು ಚಿತ್ರಮಂದಿರಗಳಲ್ಲಿ (Threatre) ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ನಂತರ, ಈ ಚಿತ್ರವು ಈಗ ಭಾರತದಲ್ಲಿ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.

ಕಮಲ್‌ ಹಾಸನ್‌ ನಿರ್ಮಾಣದ ಹೊಸ ಸಿನಿಮಾದಲ್ಲಿ 5 ರೂಪಾಯಿ ಡಾಕ್ಟರ್ ಪಾತ್ರ ಮಾಡ್ತಾರಾ ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌?

5 ರೂಪಾಯಿ ಡಾಕ್ಟರ್ ಪಾತ್ರದಲ್ಲಿ‌ ʻಸೂಪರ್‌ ಸ್ಟಾರ್‌ʼ ರಜನಿಕಾಂತ್

ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ ‘ತಲೈವರ್ 173’ ಚಿತ್ರವನ್ನು ಕಮಲ್‌ ಹಾಸನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ‘ಡ್ರ್ಯಾಗನ್’ ಖ್ಯಾತಿಯ ಅಶ್ವತ್ ಮಾರಿಮುತ್ತು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ರಜನಿ ಅವರು ‘5 ರೂಪಾಯಿ ಡಾಕ್ಟರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Rikhi Badshah:  ರ‍್ಯಾಪರ್ ಬಾದ್‌ಶಾ ಜೊತೆಗಿನ ಮದುವೆ ಖಚಿತಪಡಿಸಿದ ಇಶಾ ರಿಖಿ!

ರ‍್ಯಾಪರ್ ಬಾದ್‌ಶಾ ಜೊತೆಗಿನ ಮದುವೆ ಖಚಿತಪಡಿಸಿದ ಇಶಾ ರಿಖಿ!

Rikhi Badshah: ಇಶಾ ರಿಖಿ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ ಅವರೊಂದಿಗಿನ ತಮ್ಮ ವಿವಾಹವನ್ನು ಕೊನೆಗೂ ದೃಢಪಡಿಸಿದ್ದಾರೆ. ಅವರ ಸಂಬಂಧದ ಬಗ್ಗೆ ತಿಂಗಳುಗಳ ಕಾಲ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ವರ್ಷದ ಆರಂಭದಲ್ಲಿ ದಂಪತಿ ವಿವಾಹದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆದ ನಂತರ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.

'ಬಾಯ್ಸ್ ನೆವರ್ ಕಾಂಪ್ರಮೈಸ್' ಸಿನಿಮಾಗೆ ಸಾಥ್‌ ನೀಡಲಿದ್ದಾರೆ ‌ʻಕಿಚ್ಚʼ ಸುದೀಪ್; ಜುಲೈ ಮೊದಲ ವಾರ ಟ್ರೇಲರ್‌ ರಿಲೀಸ್

`ಬಾಯ್ಸ್ ನೆವರ್ ಕಾಂಪ್ರಮೈಸ್ ಹವಾ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

ನಿರ್ಮಾಪಕ ಹರೀಶ್ ಜಲಗೆರೆ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಹಾರರ್ ಕಾಮಿಡಿ ಚಿತ್ರದ ಟ್ರೇಲರ್ ಅನ್ನು ಜುಲೈ ಮೊದಲ ವಾರದಲ್ಲಿ ನಟ ‘ಕಿಚ್ಚ’ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಮಾರಿಗೋಲ್ಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿಬಂದಿರುವ ಈ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾಕ್ಕೆ ಶಾರುಖ್ ಖಾನ್‌ ಬದಲು ಹೃತಿಕ್‌ ರೋಷನ್‌ ಎಂಟ್ರಿ; 40 ವರ್ಷಗಳ ಬಳಿಕ ತಲೈವಾ ಜೊತೆ ನಟನೆ

Rajinikanth: 'ಜೈಲರ್ 2' ಚಿತ್ರಕ್ಕೆ ಶಾರುಖ್‌ ಬದಲು ಹೃತಿಕ್ ರೋಷನ್ ಎಂಟ್ರಿ

`ಸೂಪರ್‌ಸ್ಟಾರ್' ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರದಲ್ಲಿ ಶಾರುಖ್ ಖಾನ್ ಬದಲಿಗೆ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ನಟಿಸುವುದು ಅಧಿಕೃತಗೊಂಡಿದೆ. 40 ವರ್ಷಗಳ ಹಿಂದೆ 'ಭಗವಾನ್ ದಾದಾ' ಚಿತ್ರದಲ್ಲಿ ಬಾಲನಟನಾಗಿ ರಜನಿ ಜೊತೆ ನಟಿಸಿದ್ದ ಹೃತಿಕ್, ಈಗ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ. ನೆಲ್ಸನ್ ನಿರ್ದೇಶನದ ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.

‘ಭಾರ್ಗವಿ ಎಲ್‌ಎಲ್‌ಬಿ’ ಸೀರಿಯಲ್‌ನಿಂದ ನಟಿ ಸುಜಾತಾ ಅಕ್ಷಯ್ ಏಕಾಏಕಿ ಹೊರಕ್ಕೆ: ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಲಾ ಪಾಟೀಲ್ ಪಾತ್ರಧಾರಿ!

ʻಭಾರ್ಗವಿ LLB' ಧಾರಾವಾಹಿಯಿಂದ ಸುಜಾತಾ ಹೊರಬಂದಿದ್ದೇಕೆ? ಇಲ್ಲಿದೆ ಸತ್ಯ!

ಕಲರ್ಸ್ ಕನ್ನಡದ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯ ಪ್ರಮುಖ ನಟಿ ಸುಜಾತಾ ಅಕ್ಷಯ್ (ನಿರ್ಮಲಾ ಪಾಟೀಲ್ ಪಾತ್ರಧಾರಿ) ಅವರನ್ನು ಏಕಾಏಕಿ ಬದಲಾಯಿಸಲಾಗಿದ್ದು, ಅವರ ಜಾಗಕ್ಕೆ ಸ್ವಾತಿ ಎಂಟ್ರಿ ಕೊಟ್ಟಿದ್ದಾರೆ. ಪ್ರೊಡಕ್ಷನ್ ಹೌಸ್ ತಮಗೆ ತಿಳಿಸದೆ ಈ ನಿರ್ಧಾರ ಕೈಗೊಂಡಿದೆ ಎಂದು ಬ್ಯಾಂಕಾಕ್ ಪ್ರವಾಸದಲ್ಲಿರುವ ಸುಜಾತಾ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಬೇಸರ ಹೊರಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ಕಾರ್ತಿಕ್ ರುವಾರಿ ಈಗ ಹೀರೋ; ಭರವಸೆ ಮೂಡಿಸಿದ 'ಗೋಲ್‌ಮಾಲ್ ಗ್ಯಾಂಗ್' ಟೀಸರ್!

ʻನನಗೆ ನಾಯಕಿಯಾಗಲು ಯಾವ ನಟಿಯೂ ಮುಂದೆ ಬರುತ್ತಿರಲಿಲ್ಲʼ- ಕಾರ್ತಿಕ್ ರುವಾರಿ

ಸೋಶಿಯಲ್ ಮೀಡಿಯಾ ತಾರೆ ಕಾರ್ತಿಕ್ ರುವಾರಿ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ‘ಗೋಲ್‌ಮಾಲ್ ಗ್ಯಾಂಗ್’ ಚಿತ್ರದ ಕಾಮಿಡಿ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾಗೆ ಆರಾಧನಾ ಭಟ್ ನಾಯಕಿಯಾಗಿದ್ದು, ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.

ನಟ ಪವನ್‌ ಕಲ್ಯಾಣ್‌ ನಿಜವಾದ ಹೆಸರು ಏನ್‌ ಗೊತ್ತಾ? ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಆಂಧ್ರ ಪ್ರದೇಶ ಡಿಸಿಎಂ

ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಹೆಸರಿನ ಹಿಂದಿರುವ ಅಸಲಿ ರಹಸ್ಯ ಬಯಲು!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಅಸಲಿ ಹೆಸರು 'ಪವನ್ ಕಲ್ಯಾಣ್' ಅಲ್ಲ, ಪೋಷಕರು ತಮಗೆ 'ಶ್ರೀ ಕಲ್ಯಾಣ್ ಕುಮಾರ್' ಎಂದು ನಾಮಕರಣ ಮಾಡಿದ್ದರು ಎಂಬ ರೋಚಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌ ಆಗಿ 2 ವರ್ಷ; ಪರಪ್ಪನ ಅಗ್ರಹಾರದಲ್ಲಿ ಮೌನಕ್ಕೆ ಜಾರಿದ ʻದಾಸʼ, ಆತ್ಮಕಥೆ ಬರೆಯೋಕೆ ಶುರು ಮಾಡಿದ ಪವಿತ್ರಾ ಗೌಡ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮೌನ; ಆತ್ಮಕಥೆ ಬರೀತಿದ್ದಾರೆ ಪವಿತ್ರಾ!

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನವಾಗಿ ಇಂದಿಗೆ (ಜೂನ್‌ 11) ಸರಿಯಾಗಿ ಎರಡು ವರ್ಷ ಕಳೆದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಬಳಿಕ ನಿರಾಶರಾಗಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿ ಪುಸ್ತಕ ಓದುತ್ತಿದ್ದಾರೆ.

Amruthadhaare Serial: ಪಾರು ಇಂದ ಗೊತ್ತಾಗತ್ತ ಮಹಾಸತ್ಯ? ಕೇಡಿನ ಸಿಕ್ಕಿಹಾಕಿಸ್ತಾಳಾ ಮಿಂಚು ?

ಪಾರು ಇಂದ ಗೊತ್ತಾಗತ್ತ ಮಹಾಸತ್ಯ? ಕೇಡಿನ ಸಿಕ್ಕಿಹಾಕಿಸ್ತಾಳಾ ಮಿಂಚು ?

Amruthadhaare Serial: ಅಮೃತಧಾರೆಯಲ್ಲಿ ಇದುವೆರೆಗೂ ಭೂಮಿ ಹಾಗೂ ಗೌತಮ್‌ಗೆ ಇದುವೆರೆಗೆ ಮಿಂಚುನೇ ತಮ್ಮ ಮಗಳು ಅನ್ನೋದು ಇದುವೆರೆಗೂ ಗೊತ್ತಾಗಿಲ್ಲ. ಪಾರು ಹಾಗೂ ಶಿವು ಈಗ ಎಂಟ್ರಿ ಕೊಟ್ಟಂತಿದೆ. ಪಾರು ಭೂಮಿಕಾಗೆ ಏನೋ ಕಾಲ್‌ ಮಾಡಿದ್ಲು ಆದರೆ ಹೇಳಬೇಕು ಅನ್ನೋ ವಿಚಾರ ಹೇಳದೇ ಸುಮ್ಮನೆ ಆಗಿದ್ದಾಳೆ. ಏನದು?

Dridam OTT: ಒಟಿಟಿಗೆ ಎಂಟ್ರಿ ಕೊಡಲಿದೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ! ಕನ್ನಡದಲ್ಲೂ ಲಭ್ಯ

ಒಟಿಟಿಗೆ ಎಂಟ್ರಿ ಕೊಡಲಿದೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ!

Dridam OTT: ದಿನೇಶ್ ಪ್ರಭಾಕರ್, ರಮೇಶ್ ಕೊಟ್ಟಾಯಂ, ಶೋಬಿ ತಿಲಕನ್, ನಂದನ್ ಉನ್ನಿ ಮತ್ತು ಮ್ಯಾಥ್ಯೂ ವರ್ಗೀಸ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಜೋಮನ್ ಜಾನ್ ಮತ್ತು ಲಿಂಟೊ ದೇವಸ್ಯ ಬರೆದಿದ್ದಾರೆ. ಚಿತ್ರದ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾದ ಆವೃತ್ತಿಗಳು ಒಟಿಟಿಯಲ್ಲಿಯೂ ಲಭ್ಯವಿರುತ್ತವೆ.

Rishab Shetty: ಐತಿಹಾಸಿಕ ಮೈಲಿಗಲ್ಲು; ದೀರ್ಘಾವಧಿ ಪ್ರಧಾನಿಯಾಗಿ ದಾಖಲೆ ಬರೆದ ಮೋದಿಗೆ ರಿಷಬ್‌ ಅಭಿನಂದನೆ

ದೀರ್ಘಾವಧಿ ಪ್ರಧಾನಿಯಾಗಿ ದಾಖಲೆ ಬರೆದ ಮೋದಿಗೆ ರಿಷಬ್‌ ಅಭಿನಂದನೆ

Rishab Shetty : ಸತತ ಮೂರು ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನ ದಡ ಸೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು 2014 ರಿಂದಲೂ ದೇಶದ ಪ್ರಧಾನಿಯಾಗಿದ್ದಾರೆ. ಈ ಮೂಲಕ ದೇಶದ ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

ರುಕ್ಮಿಣಿ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

Rukmini Vasanth: ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.

ನಟಿ ಶ್ರುತಿ ಅಭಿನಯದ 175ನೇ ಚಿತ್ರ ‘ಮದರ್’ಗೆ ಮುಹೂರ್ತ; ಅವಕಾಶ ಕೊಟ್ಟ ಅಣ್ಣಾವ್ರು, ಹಿಟ್‌ ಚಿತ್ರ ನೀಡಿದ ದ್ವಾರಕೀಶ್‌ರನ್ನು ನೆನೆದು ಭಾವುಕರಾದ ʻಕರ್ಪೂರದ ಗೊಂಬೆʼ

175ನೇ ಸಿನಿಮಾ ʻಮದರ್‌ʼ ಮುಹೂರ್ತದಲ್ಲಿ ಅಣ್ಣಾವ್ರನ್ನು ನೆನೆದ ನಟಿ ಶ್ರುತಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅಭಿನಯದ 175ನೇ ಚಿತ್ರ ‘ಮದರ್’ ಸಿನಿಮಾಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಮಂಡ್ಯದ ಹಿನ್ನೆಲೆಯ ಅನಕ್ಷರಸ್ಥ ಮಹಿಳೆಯ ರಗಡ್ ಹೋರಾಟದ ಕಥೆಯಿರುವ ಈ ಚಿತ್ರದ ಮುಹೂರ್ತಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದರು.

ಡಾಕ್ಯುಮೆಂಟರಿ ರೂಪದಲ್ಲಿ ತೆರೆಮೇಲೆ ಬರಲಿದೆ ʻಸೋಲಿಲ್ಲದ ಸರದಾರʼ ಖ್ಯಾತಿಯ 'ಬೆಳ್ಳೂಡಿ ಕಾಳಿ' ಟಗರಿನ ಯಶೋಗಾಥೆ

ʻಬೆಳ್ಳೂಡಿ ಕಾಳಿʼ ಟಗರಿನ ಬಯೋಪಿಕ್; ದೃಶ್ಯರೂಪದಲ್ಲಿ ಸೋಲಿಲ್ಲದ ಸರದಾರನ ಕಥೆ

ಟಗರು ಕಾಳಗದ ಇತಿಹಾಸದಲ್ಲಿ 'ಸೋಲಿಲ್ಲದ ಸರದಾರ' ಎಂದೇ ಖ್ಯಾತಿ ಗಳಿಸಿದ್ದ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ 'ಬೆಳ್ಳೂಡಿ ಕಾಳಿ' ಟಗರಿನ ರೋಚಕ ಯಶೋಗಾಥೆ ಈಗ 'ಕಾಳಿ-ದಿ ಗೋಟ್' ಹೆಸರಿನಲ್ಲಿ ಡಾಕ್ಯುಮೆಂಟರಿ ಆಗುತ್ತಿದೆ. ನಿರ್ದೇಶಕ ಗಿರೀಶ್ ಜಿ. ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಡಾಕ್ಯುಮೆಂಟರಿಯು ಸದ್ಯ ಪೋಸ್ಟ್‌ ಪ್ರೊಡಕ್ಷನ್ಸ್‌ ಹಂತದಲ್ಲಿದೆ.

ಧನುಷ್ ನಟನೆಯ ಹೊಸ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ? ಈ ಸಿನಿಮಾದ ಟೈಟಲ್‌ ಏನು?

ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಸಾಯಿ ಪಲ್ಲವಿ

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಧನುಷ್ ಅವರ 55ನೇ ಚಿತ್ರವು ಭಾರಿ ಕುತೂಹಲ ಮೂಡಿಸಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದರೆ ಎಂಬ ಮಾಹಿತಿ ಸಿಕ್ಕಿದೆ. ಧನುಷ್ ಜೊತೆಗೆ ಮಮ್ಮುಟ್ಟಿ, ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ತಮಿಳಿನ ಖ್ಯಾತ ನಟಿ ಐಶ್ವರ್ಯಾ ರಾಜೇಶ್!

‌ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಐಶ್ವರ್ಯಾ ರಾಜೇಶ್ ಎಂಟ್ರಿ

ತಮಿಳು ಹಾಗೂ ತೆಲುಗಿನ ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ಕೊನೆಗೂ ಅನಿವಾಸಿ ಭಾರತೀಯ ಅಮೋಘ್ ವಿಜಯ್ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯುಎಸ್‌ಎ ಮೂಲದ 'ಮ್ಯಾವ್ರಿಕ್ ಪ್ರೊಡಕ್ಷನ್ಸ್' ನಿರ್ಮಿಸಲಿರುವ ಈ ಮಹಿಳಾ ಪ್ರಧಾನ ಸಿನಿಮಾವು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಮೂಡಿಬರಲಿದೆ.

'ಲವ್ ಕೇಸ್' ಸಿನಿಮಾದಲ್ಲಿ ʻಕಾಂತಾರʼ ಖ್ಯಾತಿಯ ರಂಜನ್‌ಗೆ ʻಮಹಾನಟಿʼ ವಂಶಿ ಜೋಡಿ; ಅದ್ದೂರಿಯಾಗಿ ಮುಗಿದ ಶೂಟಿಂಗ್‌

ಲವ್ ಕೇಸ್ ಶೂಟಿಂಗ್ ಕಂಪ್ಲೀಟ್; ʻಕಾಂತಾರʼ ರಂಜನ್‌ಗೆ ಜೋಡಿಯಾದ ಮಹಾನಟಿ ವಂಶಿ

‘ಲವ್ ಕೇಸ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜೈಶ್ ನಿರ್ದೇಶನದ, ಮೋಹನ್ ಬಾಬು ನಿರ್ಮಿಸಿರುವ ಈ ಚಿತ್ರದಲ್ಲಿ ‘ಕಾಂತಾರ’ ಖ್ಯಾತಿಯ ರಂಜನ್ ಹಾಗೂ ‘ಮಹಾನಟಿ’ ವಂಶಿ ಜೋಡಿಯಾಗಿ ನಟಿಸಿದ್ದಾರೆ.

Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

Darshan Case:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದರು. ಒಟ್ಟು 7 ಮಂದಿ ಆರೋಪಿಗಳ ಜಾಮೀನು ರದ್ದತಿಗೆ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಐವರು ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಜಯ ಸಿಕ್ಕಂತಾಗಿದ್ದು, ತನಿಖಾ ಸಂಸ್ಥೆಗೆ ಕಾನೂನಾತ್ಮಕವಾಗಿ ಹಿನ್ನಡೆಯಾದಂತಾಗಿದೆ.

Alia Bhatt: ʻಆಲ್ಫಾʼ ಟೀಸರ್ ಬಿಡುಗಡೆ; ಆಲಿಯಾ ಭಟ್ ಬಗ್ಗೆ ಅಮಿತಾಭ್‌ ಮೆಚ್ಚುಗೆ

ʻಆಲ್ಫಾʼ ಟೀಸರ್ ಬಿಡುಗಡೆ; ಆಲಿಯಾ ಭಟ್ ಬಗ್ಗೆ ಅಮಿತಾಭ್‌ ಮೆಚ್ಚುಗೆ

Alia Bhatt: "ಫಸ್ಟ್ ಕಿಲ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆಲ್ಫಾದಲ್ಲಿ ಆಲಿಯಾ ಭಟ್ ನಟ ಬಾಬಿ ಡಿಯೋಲ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಟೀಸರ್ ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಆಲಿಯಾ ಅವರ ಆಕ್ಷನ್-ಪ್ಯಾಕ್ಡ್ ಶೈಲಿಯು ಇಡೀ ಟೀಸರ್‌ನ ಕೇಂದ್ರಬಿಂದುವಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಪ್ರಸ್ತುತ, ಆಲ್ಫಾ ಟೀಸರ್‌ನಲ್ಲಿ ಬಾಬಿ ಮತ್ತು ಆಲಿಯಾ ಮಾತ್ರ ಹೈಲೈಟ್ ಆಗಿದ್ದಾರೆ.

ʻಬಿಗ್‌ ಬಾಸ್‌ʼ ಖ್ಯಾತಿಯ ತನಿಷಾ ಕುಪ್ಪಂಡ ನಟನೆಯ ʻಊರಬ್ಬʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ ಕುಣಿಗಲ್ ಶಾಸಕ ರಂಗನಾಥ್

‘ಊರಬ್ಬ’ ಚಿತ್ರಕ್ಕಾಗಿ ಉಜ್ಜಿನಿ ಚೌಡೇಶ್ವರಿ ಜಾತ್ರೆಯಲ್ಲಿ ಲೈವ್ ಶೂಟಿಂಗ್

ಮಾಗಡಿ ತಾಲೂಕಿನ ಪ್ರಸಿದ್ಧ ಶ್ರೀ ಉಜ್ಜಿನಿ ಚೌಡೇಶ್ವರಿ ದೇವಿಯ ಜಾತ್ರೆಯ ನೈಜ ಘಟನೆಗಳ ಆಧಾರಿತ ‘ಊರಬ್ಬ’ ಚಿತ್ರದ ಟ್ರೇಲರ್ ಅನ್ನು ಶಾಸಕ ರಂಗನಾಥ್ ಬಿಡುಗಡೆ ಮಾಡಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ ಈ ಚಿತ್ರವನ್ನು ಭಾರತದಲ್ಲೇ ಮೊದಲ ಬಾರಿಗೆ 8 ಕ್ಯಾಮೆರಾಗಳ ಮೂಲಕ ಲೈವ್ ಜಾತ್ರೆಯಲ್ಲೇ ಶೂಟ್ ಮಾಡಲಾಗಿದೆ.

ʻಬಲರಾಮನ ದಿನಗಳುʼ  ಚಿತ್ರದ ʻಕ್ವಾಟರುʼ ಸಾಂಗ್‌ ರಿಲೀಸ್‌ ಮಾಡಿದ ನಟಿ ತಾರಾ ಅನುರಾಧ; ಸಿನಿಮಾ ವಿತರಣೆಗೆ ಸಾಥ್‌ ನೀಡಿದ ಕೆವಿಎನ್‌ ಪ್ರೊಡಕ್ಷನ್ಸ್‌

ʻಬಲರಾಮನ ದಿನಗಳುʼ ಸಿನಿಮಾದ ಹೊಸ ಸಾಂಗ್ ರಿಲೀಸ್‌ ಮಾಡಿದ ನಟಿ ತಾರಾ ಅನುರಾಧ‌

ಕೆ.ಎಂ. ಚೈತನ್ಯ ನಿರ್ದೇಶನದ, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ ‘ಬಲರಾಮನ ದಿನಗಳು’ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು..’ ಹಾಡನ್ನು ನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದ್ದಾರೆ. ‘ಆ ದಿನಗಳು’ ಚಿತ್ರದ 19 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಸಂಶೋಧನೆ ನಡೆಸಿ ಈ ಬೃಹತ್ ಬಜೆಟ್ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.

Loading...