ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

BBK 12: ಸೀಕ್ರೆಟ್‌ ರೂಮ್‌ನ ಸೀಕ್ರೆಟ್‌ ಬಯಲಾಗೋದು ಯಾವಾಗ? ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ!

BBK 12: ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ! ಏನ್‌ ಪ್ರಾಬ್ಲಂ?

BBK 12 Weekend Episode: ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರ ಪರಿಸ್ಥಿತಿ ಈಗ ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯಿತಿಗೆ ತಲುಪಿದೆ. ಇಂದಿನ (ಡಿ.20) ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ರಕ್ಷಿತಾ ಸೀಕ್ರೆಟ್ ರೂಮ್‌ನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ; ಬಹುಮುಖ ಪ್ರತಿಭೆಯ ಬದುಕು ಅಂತ್ಯ

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ

Sreenivasan Death: ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ ಹಾಗೂ ನಿರ್ದೇಶಕ ಶ್ರೀನಿವಾಸನ್ (69) ಅವರು ಶನಿವಾರ (ಡಿಸೆಂಬರ್ 20) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

BBK 12: ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆದ ಕಾವ್ಯ ಶೈವ; ಅದೊಂದು ವಿಚಾರದಲ್ಲಿ ಗಿಲ್ಲಿ ಸೀರಿಯಸ್ ಆಗಿಬಿಟ್ರಾ?

‌ʻಬಿಗ್ ಬಾಸ್ʼ ಮನೆಗೆ ಇನ್ಮೇಲೆ ಕಾವ್ಯ ಕ್ಯಾಪ್ಟನ್; ಗಿಲ್ಲಿ ಬದಲಾಗಿದ್ದೇಕೆ?

BBK 12 Update: ಬಿಗ್ ಬಾಸ್ ಕನ್ನಡ 12ರಲ್ಲಿ ಕಾವ್ಯ ಶೈವ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮನೆಯ ಬಹುತೇಕ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು. ಆದರೆ, ಕಾವ್ಯ ಕ್ಯಾಪ್ಟನ್ ಆದರೂ ಅವರ ಆಪ್ತ ಗೆಳೆಯ ಗಿಲ್ಲಿ ನಟ ಕ್ಯಾಪ್ಟನ್ ರೂಮ್‌ಗೆ ಹೋಗಲು ನಿರಾಕರಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

Pavitra Gowda: ದರ್ಶನ್‌ ಭೇಟಿಗೆ ಅಂಗಲಾಚುತ್ತಿರುವ ಪವಿತ್ರಾ; ಸಹವಾಸವೇ ಬೇಡ ಎಂದ್ರಾ ದಾಸ?

ದರ್ಶನ್‌ ಭೇಟಿಗೆ ಅಂಗಲಾಚುತ್ತಿರುವ ಪವಿತ್ರಾ; ಸಹವಾಸವೇ ಬೇಡ ಎಂದ್ರಾ ದಾಸ?

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ, ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭ ಆಗಿದೆ. ಇದೀಗ ಪವಿತ್ರಾ ಗೌಡ ದರ್ಶನ್‌ ಭೇಟಿಗೆ ಅವಕಾಶ ಕೋರಿದ್ದರು ಎಂದು ತಿಳಿದು ಬಂದಿದೆ.

ರಾಚಯ್ಯ - ನಿಂಗವ್ವ ರೊಮ್ಯಾಂಟಿಕ್‌ ಗೀತೆಗೆ ಆಲ್‌ ದಿ ಬೆಸ್ಟ್‌ ಹೇಳಿದ ಸ್ಯಾಂಡಲ್‌ವುಡ್‌ ಕಪಲ್ಸ್;‌ ʻಲ್ಯಾಂಡ್‌ಲಾರ್ಡ್‌ʼ ರಿಲೀಸ್‌ಗೆ ದಿನಗಣನೆ

Duniya VIjay: ʻಲ್ಯಾಂಡ್‌ಲಾರ್ಡ್ʼ ಚಿತ್ರದ ʻನಿಂಗವ್ವʼ ಸಾಂಗ್‌ ರಿಲೀಸ್‌

Landlord Song Launch: ಜಡೇಶ್ ಕೆ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಚಿತ್ರದ "ನಿಂಗವ್ವ ನಿಂಗವ್ವ" ಎಂಬ ರೊಮ್ಯಾಂಟಿಕ್ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಹಾಡಿನಲ್ಲಿ ದುನಿಯಾ ವಿಜಯ್ (ರಾಚಯ್ಯ) ಮತ್ತು ರಚಿತಾ ರಾಮ್ (ನಿಂಗವ್ವ) ಜೋಡಿಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ'; ತಿಳಿಯದೇ ಮಾತನಾಡುವವರಿಗೆ ತಮ್ಮ ಸಾಧನೆ ತೆರದಿಟ್ಟ ಜಗ್ಗೇಶ್‌!

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ' ಎಂದ ಜಗ್ಗೇಶ್‌

Jaggesh MP Report: ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ನಟ ಜಗ್ಗೇಶ್ ಅವರು ಕಳೆದ 2.5 ವರ್ಷಗಳಲ್ಲಿ ಸಂಸತ್ತಿನಲ್ಲಿ ತಾವು ಮಾಡಿದ ಕೆಲಸಗಳ ವಿವರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸಾಧನೆಯನ್ನು ಪ್ರಶ್ನಿಸುವವರಿಗೆ ಉತ್ತರವಾಗಿ, ಇದುವರೆಗೆ 10 ಅಧಿವೇಶನಗಳಲ್ಲಿ 268 ಪ್ರಶ್ನೆಗಳನ್ನು ಕೇಳಿರುವುದಾಗಿ ಅವರು ತಿಳಿಸಿದ್ದಾರೆ.

Darshan: ಥೇಟ್ ‌ಅಪ್ಪನಂತೆಯೇ ಮಿಂಚಿದ ವಿನೀಶ್;‌ ʻದಿ ಡೆವಿಲ್‌ʼ ಸಿನಿಮಾದ ಮೇಕಿಂಗ್‌ ಫೋಟೋಗಳನ್ನು ಕಂಡು ʻಡಿ ಬಾಸ್‌ʼ ಫ್ಯಾನ್ಸ್‌ಗೆ ಖುಷಿಯೋ ಖುಷಿ

Photos: ಥೇಟ್ ‌ಅಪ್ಪನಂತೆಯೇ ಮಿಂಚಿದ ದರ್ಶನ್ ಪುತ್ರ ವಿನೀಶ್‌

ನಟ ದರ್ಶನ್‌ ಅವರ ನಟನೆಯ ʻದಿ ಡೆವಿಲ್ʼ‌ ಸಿನಿಮಾವು ಈಚೆಗಷ್ಟೇ ತೆರೆಕಂಡಿತ್ತು. ದರ್ಶನ್‌ ಅಭಿಮಾನಿಗಳು ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ವೆಲ್‌ಕಮ್‌ ಮಾಡಿದರು. ಸದ್ಯ ಈ ಚಿತ್ರದ ಮೇಕಿಂಗ್‌ ಸ್ಟಿಲ್‌ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ ಇರುವಂತಹ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ. ಜೊತೆಗೆ ರಾಜಸ್ಥಾನಕ್ಕೆ ಹೋದಾಗಿನ ಫೋಟೋಗಳು ಕೂಡ ಇಲ್ಲಿವೆ ನೋಡಿ.

ಅಬ್ಬಬ್ಬಾ! ʻಧುರಂಧರ್‌ʼ ಚಿತ್ರವನ್ನ ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ರಾಮ್‌ ಗೋಪಾಲ್‌ ವರ್ಮಾ; ನಿರ್ದೇಶಕರು ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ʻಧುರಂಧರ್‌ʼ ಚಿತ್ರಕ್ಕೆ ರಾಮ್‌ ಗೋಪಾಲ್‌ ವರ್ಮಾ ಭಾರಿ ಶ್ಲಾಘನೆ!

RGV Reviews Dhurandhar: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಿರ್ದೇಶಕ ಆದಿತ್ಯ ಧರ್ ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸಿದ್ದಾರೆ, ಇದೊಂದು ಕ್ವಾಂಟಮ್ ಲೀಪ್ (ದೈತ್ಯ ಜಿಗಿತ)" ಎಂದು ಆರ್‌ಜಿವಿ ಬಣ್ಣಿಸಿದ್ದಾರೆ.

Shilpa Shetty: ʻಆಧಾರವಿಲ್ಲದೇ ನನ್ನ ಹೆಸರನ್ನು ತಳುಕು ಹಾಕುವ ಪ್ರಯತ್ನʼ; 60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ಶಿಲ್ಪಾ ಶೆಟ್ಟಿ

60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ನಟಿ ಶಿಲ್ಪಾ ಶೆಟ್ಟಿ

Shilpa Shetty: ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮೇಲಿನ ವಂಚನೆ ಆರೋಪಗಳ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉದ್ಯಮಿ ದೀಪಕ್ ಕೊಠಾರಿ ಅವರು ಮಾಡಿರುವ 60 ಕೋಟಿ ರೂ. ವಂಚನೆ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

14 ದಿನಗಳಲ್ಲಿ ‌ʻಧುರಂಧರ್‌ʼ ಸಿನಿಮಾ ಗಳಿಸಿದ ಹಣವೆಷ್ಟು?  ʻಕಾಂತಾರ: ಚಾಪ್ಟರ್‌ 1ʼ ಚಿತ್ರದ ದಾಖಲೆ ಬ್ರೇಕ್‌ ಮಾಡಲು ಇನ್ನೆಷ್ಟು ಕೋಟಿ ಬೇಕು?

ʻಕಾಂತಾರʼ ದಾಖಲೆ ಬ್ರೇಕ್‌ ಮಾಡಲು ‌ʻಧುರಂಧರ್‌ʼಗೆ ಇನ್ನೆಷ್ಟು ಕೋಟಿ ಬೇಕು?

Dhurandhar Box Office Report: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ 14 ದಿನಗಳಲ್ಲಿ ಜಾಗತಿಕವಾಗಿ 700 ಕೋಟಿ ರೂ. ಗಳಿಸುವ ಮೂಲಕ ಇತಿಹಾಸ ಬರೆದಿದೆ. ಭಾರತವೊಂದರಲ್ಲೇ ಈ ಚಿತ್ರವು 479.50 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಇಂದು (ಡಿ.19) 500 ಕೋಟಿ ಗಡಿ ದಾಟುವುದು ಖಚಿತವಾಗಿದೆ.

SVC 59: ಹಳ್ಳಿ ಹೈದನಾಗಿ ಮಿಂಚಲಿದ್ದಾರೆ ನಟ ವಿಜಯ್ ದೇವರಕೊಂಡ; ಫ್ಯಾನ್ಸ್‌ಗೆ ಸರ್ಪ್ರೈಸ್‌ ನೀಡಲು ರೆಡಿಯಾದ ರೌಡಿ ಬಾಯ್!‌

SVC 59: ಹೊಸ ಚಿತ್ರದಲ್ಲಿ ಹಳ್ಳಿ ಹೈದನಾಗಿ ಮಿಂಚಲಿದ್ದಾರೆ ವಿಜಯ್ ದೇವರಕೊಂಡ

SVC 59 Movie Update: ವಿಜಯ್ ದೇವರಕೊಂಡ ನಟನೆಯ ಮುಂದಿನ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 22ರಂದು ಸಂಜೆ 7.29ಕ್ಕೆ ಅಧಿಕೃತ ಶೀರ್ಷಿಕೆ ಹೊರಬೀಳಲಿದೆ. ರವಿ ಕಿರಣ್ ಕೋಲ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಹಳ್ಳಿ ಬ್ಯಾಕ್‌ಡ್ರಾಪ್‌ನ ಮಾಸ್ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Annayya: ಮಾರಿಗುಡಿ ಮನೆಮಗ ಶಿವಣ್ಣನ 'ಮಡಿಲು' ಯೋಜನೆ; ಜಾಗೃತಿ ಮೂಡಿಸಿದ ಅಣ್ಣಯ್ಯನಿಗೆ ಭಾರಿ ಮೆಚ್ಚುಗೆ

'ಮಡಿಲು' ಯೋಜನೆ ಮೂಲಕ ಜಾಗೃತಿ ಮೂಡಿಸಿದ ʻಅಣ್ಣಯ್ಯʼ

Annayya Serial: ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿರುವ ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಈಗ ಕ್ರಾಂತಿಕಾರಿ ಬದಲಾವಣೆಯ ಸಂದೇಶವೊಂದು ಮೂಡಿಬಂದಿದೆ. ಕಥಾನಾಯಕ ಶಿವು (ವಿಕಾಶ್ ಉತ್ತಯ್ಯ), ತನ್ನ ತಂಗಿಯರಷ್ಟೇ ಅಲ್ಲದೆ ಊರಿನ ಎಲ್ಲಾ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ 'ಮಡಿಲು' ಎಂಬ ಯೋಜನೆಯನ್ನು ಆರಂಭಿಸಿದ್ದಾನೆ.

BBK 12: 'ಬಿಗ್ ಬಾಸ್' ಸೀಕ್ರೆಟ್ ರೂಮ್ ಬಗ್ಗೆ ಆ ಇಬ್ಬರು ಸದಸ್ಯರಿಗೆ ಬಂತು ಡೌಟ್; ಸತ್ಯ ಗೊತ್ತಾಗೋದು ಯಾವಾಗ?

'ಬಿಗ್ ಬಾಸ್' ಸೀಕ್ರೆಟ್ ರೂಮ್ ಬಗ್ಗೆ ಆ ಇಬ್ಬರು ಸದಸ್ಯರಿಗೆ ಬಂತು ಡೌಟ್!

BBK 12 Secret Room Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ 'ಸೀಕ್ರೆಟ್ ರೂಮ್' ಎನ್ನುವುದು ಈಗ ಸೀಕ್ರೆಟ್ ಆಗಿ ಉಳಿದಿಲ್ಲ! ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡದೆ ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ ಎಂಬ ಬಲವಾದ ಅನುಮಾನವನ್ನು ಕಾವ್ಯ ಮತ್ತು ಗಿಲ್ಲಿ ನಟ ವ್ಯಕ್ತಪಡಿಸಿದ್ದಾರೆ.

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗಾಯಕ ಕುಮಾರ್ ಸಾನು; 50 ಕೋಟಿ ರುಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಕೆ

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕುಮಾರ್ ಸಾನು

Kumar Sanu files defamation case: ಪ್ರಸಿದ್ಧ ಗಾಯಕ ಕುಮಾರ್ ಸಾನು ತಮ್ಮ ಮಾಜಿ ಪತ್ನಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಹೂಡಿದ್ದಾರೆ. ಅವರು ಈ ಮೊಕದ್ದಮೆಯಲ್ಲಿ 50 ಕೋಟಿ ರುಪಾಯಿ ಪರಿಹಾರ ಕೇಳಿದ್ದಾರೆ. ಮಾಜಿ ಪತ್ನಿಯ ಆರೋಪವು ದುರುದ್ದೇಶಪೂರಿತ ಮತ್ತು ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

The Raja Saab Movie ಇವೆಂಟ್‌ನಲ್ಲಿ ತಳ್ಳಾಟ; ಜನಸಂದಣಿಯಲ್ಲಿ ಪರದಾಡಿದ ನಟಿ ನಿಧಿ ಅಗರ್ವಾಲ್‌, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ವಿರುದ್ಧ?

The Raja Saab: ಜನಸಂದಣಿಯಲ್ಲಿ ಪರದಾಡಿದ ನಿಧಿ ಅಗರ್ವಾಲ್‌! ಮುಂದೇನಾಯ್ತು?

The Raja Saab Event Chaos: ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆದ 'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು 'ಸಹನಾ ಸಹನಾ' ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ಭಾರಿ ಸದ್ದು ಮಾಡಿದೆ. ನಟಿ ನಿಧಿ ಅಗರ್ವಾಲ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ತೀವ್ರ ತಳ್ಳಾಟ ನಡೆದಿದೆ. ಘಟನೆ ನಂತರ ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ.

ದೊಡ್ಡವರಿಗೆ ಟಕ್ಕರ್‌ ಕೊಡುವಂತಹ ಮಕ್ಕಳು ನಿಮ್ಮ ಮನೆಯಲ್ಲಿದ್ದಾರಾ?  ಹಾಗಿದ್ರೆ ಬೆಂಗಳೂರಿನಲ್ಲಿ ನಡೆಯುವ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ಗೆ ಬನ್ನಿ!

ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ ಎಲ್ಲಿ? ಯಾವಾಗ?

Gicchi Gili Gili Juniors Audition: ಕಲರ್ಸ್‌ ಕನ್ನಡ ವಾಹಿನಿಯ ಯಶಸ್ವಿ ಶೋ 'ಗಿಚ್ಚಿ ಗಿಲಿಗಿಲಿ' ಈಗ ಮಕ್ಕಳಿಗಾಗಿ ವಿಶೇಷ ಆವೃತ್ತಿಯನ್ನು ತರುತ್ತಿದೆ. 'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಹೆಸರಿನಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋಗಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಆಡಿಷನ್ ನಡೆಯಲಿದೆ.

Year Ender 2025: ಈ ವರ್ಷ ಗಮನ ಸೆಳೆದ ಟಿವಿ ಕಾರ್ಯಕ್ರಮಗಳಿವು; ಇಲ್ಲಿದೆ ಪಟ್ಟಿ

ಈ ವರ್ಷ ಗಮನ ಸೆಳೆದ ಟಿವಿ ಕಾರ್ಯಕ್ರಮಗಳಿವು

Tv Programme: ಸಿನಿಮಾ ಮಾತ್ರವಲ್ಲ ಕಿರುತೆರೆಗೆ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ. ದೈನಂದಿನ ಧಾರಾವಾಹಿಗಳಿಂದ ಹಿಡಿದು ಸಂಭಾಷಣೆಗಳಲ್ಲಿ ಪ್ರಾಬಲ್ಯ ಸಾಧಿಸುವ ರಿಯಾಲಿಟಿ ಶೋಗಳವರೆಗೆ ಹಲವಾರು ಟಿವಿ ಕಾರ್ಯಕ್ರಮಗಳು ಗಮನ ಸೆಳೆಯುವಲ್ಲಿ ಮತ್ತು ವೀಕ್ಷಕರ ಹೃದಯಗಳನ್ನು ಗೆಲ್ಲುವಲ್ಲಿ ಈ ವರ್ಷ ಯಶಸ್ವಿಯಾಗಿವೆ. ಈ ವರ್ಷ ವೀಕ್ಷಕರಿಗೆ ಹೆಚ್ಚು ಗಮನ ಸೆಳೆದ ಕಾರ್ಯಕ್ರಮಗಳಿವು.

Malayalam OTT: ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ ಯಾವಾಗ?

Malayalam cinema lights up OTT : ಮಲಯಾಳಂ ಸಿನಿಮಾ ಈ ವಾರ ಮೂರು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಟ್ರಿ ಕೊಡಲಿದೆ. ಈ ವಾರವೂ OTT ಅಭಿಮಾನಿಗಳಿಗೆ ಹಲವು ವಿಷಯಗಳು ಕಾದಿವೆ. ಅದು ಮಮ್ಮುಟ್ಟಿ ಅವರ ಮನಮುಟ್ಟುವ ತನಿಖಾ ಸರಣಿಯಾಗಿರಲಿ ಅಥವಾ ನಿವಿನ್ ಪೌಲಿ ಅವರ ಸಾಮಾಜಿಕವಾಗಿ ಪ್ರಸ್ತುತವಾದ ಕಥೆಯಾಗಿರಲಿ, ಎಲ್ಲರಿಗೂ ಒಂದು ರಸದೌತಣ ಇದೆ.

45 ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದ ಭಾರತದ ಖ್ಯಾತ ಪ್ರೊಡಕ್ಷನ್‌ ಸಂಸ್ಥೆಗಳು; ಶಿವಣ್ಣ- ಉಪ್ಪಿ ಚಿತ್ರಕ್ಕೆ ವಿದೇಶದಲ್ಲಿ ಹೇಗಿದೆ ರೆಸ್ಪಾನ್ಸ್?

'45' ಚಿತ್ರದ ಐದು ಭಾಷೆಯ ವಿತರಣಾ ಹಕ್ಕುಗಳು ಯಾರ ಪಾಲಾಯ್ತು?

45 Movie Update: ಅರ್ಜುನ್ ಜನ್ಯ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ '45' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ದಾಖಲೆ ಮೊತ್ತಕ್ಕೆ ಜೀ ನೆಟ್‌ವರ್ಕ್ (Zee Network) ಪಾಲಾಗಿವೆ. ಕೆನಡಾದಲ್ಲಿ ಎರಡು ದಿನ ಮೊದಲೇ ಅಂದರೆ ಡಿಸೆಂಬರ್ 23 ರಂದೇ ಶೋಗಳು ಆರಂಭವಾಗಲಿದ್ದು, ಈಗಾಗಲೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

Ravichandran: 'ಒಂದು ವರ್ಷ ಬರೀ ಕಣ್ಣೋಟದಲ್ಲೇ ಲವ್ವು..'; 'ಬಿಗ್‌ ಬಾಸ್‌' ಮನೆಯಲ್ಲಿ  'ಪ್ರೇಮ್‌ ಕಹಾನಿ' ಬಿಚ್ಚಿಟ್ಟ 'ಕ್ರೇಜಿ ಸ್ಟಾರ್‌'

BBK 12: ಕಾಲೇಜಿನಲ್ಲಿ ಅರಳಿದ್ದ ಲವ್; ಇದು ರವಿಚಂದ್ರನ್ 'ಪ್ರೇಮ್‌ ಕಹಾನಿ'!‌

BBK 12 Ravichandran: ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿರುವ 'ಕನಸುಗಾರ' ರವಿಚಂದ್ರನ್, ತಮ್ಮ ಕಾಲೇಜು ದಿನಗಳ ರೊಮ್ಯಾಂಟಿಕ್ ಪ್ರೇಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಬೈಕ್ ಏರಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ, ಒಂದು ಹುಡುಗಿಯ ನಗುವಿಗೆ ಮನಸೋತ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ.

Pyar Movie: ರಾಶಿಕಾ ಶೆಟ್ಟಿಗಾಗಿ ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಟ್ಟ ನಟ ರವಿಚಂದ್ರನ್;‌ ದೊಡ್ಮನೆ ಈಗ ಸಖತ್‌ ಕಲರ್‌ಫುಲ್

ರವಿಚಂದ್ರನ್‌ ಸಿನಿಮಾದಲ್ಲಿ ಮಗಳಾದ ರಾಶಿಕಾ; ದೊಡ್ಮನೆಯಲ್ಲಿ ಕ್ರೇಜಿ‌ ಸ್ಟಾರ್

BBK 12 Special Entry: ಬಿಗ್ ಬಾಸ್ ಕನ್ನಡ 12ರ ಮನೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅದ್ದೂರಿ ಎಂಟ್ರಿ ನೀಡಿದ್ದಾರೆ. ತಾವು ನಟಿಸಿರುವ 'ಪ್ಯಾರ್' (Pyar) ಚಿತ್ರದ ಪ್ರಚಾರಕ್ಕಾಗಿ ಅವರು ದೊಡ್ಮನೆಗೆ ಆಗಮಿಸಿದ್ದಾರೆ. ವಿಶೇಷವೆಂದರೆ, ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಶೆಟ್ಟಿ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಮಗಳಾಗಿ ನಟಿಸಿದ್ದಾರೆ.

ʻಕೊರಗಜ್ಜʼ ಚಿತ್ರಕ್ಕಾಗಿ ಸೃಷ್ಟಿಯಾಯ್ತು AI ಸಾಂಗ್;‌ ಲಿಯೋನೆಲ್ ಮೆಸ್ಸಿಗೂ ಈ ಹಾಡಿಗೂ ಇದೇ ಒಂದು ಸಂಬಂಧ!

Lionel Messi: ʻಕೊರಗಜ್ಜʼ ಚಿತ್ರದ ಹೊಸ ಹಾಡಿಗೂ ಮೆಸ್ಸಿಗೂ ಇದೇ ಸಂಬಂಧ!

Koragajja Movie Update: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾ ತಂಡವು ಪ್ರೇಕ್ಷಕರಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ವೈರಲ್ ಆಗಿದ್ದ AI (ಕೃತಕ ಬುದ್ಧಿಮತ್ತೆ) ಹಾಡನ್ನು ವಿನ್ಯಾಸಗೊಳಿಸಿದ್ದ ತಂಡವೇ ಈಗ ಕೊರಗಜ್ಜ ಚಿತ್ರದ ಹಾಡನ್ನೂ ಸಿದ್ಧಪಡಿಸಿದೆ.

BBK 12: ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ನಡೆಯುತ್ತಿದೆಯಾ? ಸ್ಪರ್ಧಿಗಳ ಪಿಆರ್‌ ಸ್ಟ್ರಾಟೆಜಿ ಬಗ್ಗೆ ವಿನಯ್‌ ಗೌಡ ಖಡಕ್‌ ಮಾತು

ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ಮಾಡ್ತಿದ್ದಾರಾ? ವಿನಯ್ ಗೌಡ ಏನಂದ್ರು?

Vinay Gowda on BBK 12: ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಸೀಸನ್ 12ರ ಸ್ಪರ್ಧಿಗಳ ಬಗ್ಗೆ ನಡೆಯುತ್ತಿರುವ 'ಪಿಆರ್ ಸ್ಟ್ರಾಟೆಜಿ'ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಗಿಲ್ಲಿ ಅವರನ್ನು ಗುರಿಯಾಗಿಸಿಕೊಂಡು ಕೆಲವು ಪಿಆರ್ ಏಜೆನ್ಸಿಗಳು ನೆಗೆಟಿವ್ ಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

BBK 12: ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟ ಗಿಲ್ಲಿ; ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ!

Bigg Boss 12: ರಾಶಿಕಾ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಮಾಡಿದ ಗಿಲ್ಲಿ ನಟ!

BBK 12 Captaincy Race: ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ. ಗಿಲ್ಲಿ ನಟ ಮತ್ತು ರಘು ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದರೂ, 'ಇಟ್ಟ ಗುರಿ ತಪ್ಪಲ್ಲ' ಟಾಸ್ಕ್‌ನಲ್ಲಿ ಗೆಲ್ಲುವ ಮೂಲಕ ಅವರಿಬ್ಬರೂ ನಾಮಿನೇಷನ್‌ನಿಂದ ಬಚಾವ್‌ ಆಗಿದ್ದಲ್ಲದೆ, ಕ್ಯಾಪ್ಟನ್ಸಿ ರೇಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

Loading...