ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

ಜಾಹ್ನವಿ ಕುತಂತ್ರ ಫಲಿಸಿತಾ? ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

Gilli Nata: ರೂಮ್‌ನಲ್ಲಿ ಕಾವ್ಯ, ಸ್ಪಂದನಾ, ಗಿಲ್ಲಿ ಎಲ್ಲರೂ ಕುಳಿತುಕೊಂಡು ಆಂಕರಿಂಗ್‌ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಆಗ ಗಿಲ್ಲಿ ಆಂಕರಿಂಗ್‌ ಆಗುವ ಆಸೆ ಬಗ್ಗೆ ವ್ಯಕ್ತಪಡಿಸುತ್ತಾರೆ. ಗಿಲ್ಲಿ ಹಾಗೂ ಕಾವ್ಯ ತಮಾಷೆಯಾಗಿಯೇ ಚರ್ಚೆ ಶುರು ಮಾಡುತ್ತಾರೆ. ಆಗ ಗಿಲ್ಲಿ ತಾವು ಸವಿ ರುಚಿ ಕಾರ್ಯಕ್ರಮಕ್ಕೆ ಆಂಕರಿಂಗ್‌ ಆಗಬೇಕು ಎನ್ನುತ್ತಾರೆ. ಅದಕ್ಕೆ ಕಾವ್ಯ ಅವರು ಸವಿರುಚಿಗೆಲ್ಲ ಬೇಡ ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಜಾಹ್ನವಿ, ಒಂದು ಶೋ ಬಗ್ಗೆ ಕೆಟ್ಟದ್ದಾಗಿ ಹೇಳ್ತಿದ್ದಾರೆ ಎಂದು ಬಿಂಬಿಸಲು ನೋಡಿದ್ದಾರೆ.

Bigg Boss Kannada 12: ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ! ಧ್ರುವಂತ್‌ ಹೊಸ ಆರೋಪ

ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ!

Dhruvanth: ನಿನ್ನೆಯ (ನ.25) ಎಪಿಸೋಡ್‌ನಲ್ಲಿ ಧ್ರುವಂತ್‌ ಅವರು ಜಾಹ್ನವಿ ಹಾಗೂ ಅಶ್ವಿನಿ ವಿರುದ್ಧ ಖಡಕ್‌ ಆಗಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ಗಿಲ್ಲಿ ಬಳಿ ಧ್ರುವಂತ್‌ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ದುಡ್ಡಿಗಾಗಿ ಜಾಹ್ನವಿ ಈ ರೀತಿ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಧ್ರುವಂತ್ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ನಾಮಿನೇಷನ್‌ ವೇಳೆಯೂ ಜಾಹ್ನವಿ ಹಾಗೂ ಅಶ್ವಿನಿ ಅವರನ್ನೇ ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ ಧ್ರುವಂತ್‌.

Bigg Boss Kannada 12:  ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

Bigg Boss Kannada : ಬಿಗ್‌ ಬಾಸ್‌ ಹೌಸ್‌ ಈಗ ಬಿಗ್‌ ಬಾಸ್‌ ಪ್ಯಾಲೆಸ್‌ ಆಗಿದೆ. ಮೊದಲಿಗೆ ಹಿಂದಿನ ಸೀಸನ್‌ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ರಜತ್‌ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್‌ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್‌ ಬಾಸ್‌ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

Bigg Boss Kannada 12: `ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು'; ತಿರುಗಿಬಿದ್ದ ವಂಶದ ಕುಡಿಗೆ ಗಿಲ್ಲಿಯ ಖಡಕ್‌ ಉತ್ತರ!

ತಿರುಗಿಬಿದ್ದ ʻವಂಶದ ಕುಡಿʼಗೆ ಗಿಲ್ಲಿಯ ಖಡಕ್‌ ಉತ್ತರ!

Rakshitha shetty: ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಈಗ ಜಾಹ್ನವಿ ಮಾತನ್ನು ನಂಬಿದ ರಕ್ಷಿತಾ ಗಿಲ್ಲಿ ಮಾತನ್ನು ನಂಬಲಿಲ್ಲ.ನೋಡದೇ , ಕೇಳದೇ ಗಿಲ್ಲಿ ಅವರನ್ನ ನಾಮಿನೇಟ್‌ ಮಾಡಿದ್ದಾರೆ. ರಕ್ಷಿತಾ ನಾಮಿನೇಟ್‌ ಆದ ಬಳಿಕ ಗಿಲ್ಲಿ ಕೂಡ ಸಖತ್‌ ಆಗಿಯೇ ಕೌಂಟರ್‌ ಕೊಟ್ಟರು. ಅಷ್ಟು ಬುದ್ಧಿವಂತೆ ಆಗಿದ್ರೆ, ಪ್ರತ್ಯಕ್ಷ ಕಂಡ್ರು ಪ್ರಮಾಣಿಸಿ ನೋಡಬೇಕು. ಈ ವಿಚಾರದಲ್ಲಿ ಸುದೀಪ್‌ ಅವರು ಒಂದು ಹಾಡು ಹೇಳಿದ್ದರು. ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದುʼ ಎಂದು ಉತ್ತರ ಕೊಟ್ಟಿದ್ದಾರೆ ಗಿಲ್ಲಿ.

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

Directed by Puri Jagannath: ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್‌ ಬ್ಯಾನರ್‌ ಸಹಯೋಗದಲ್ಲಿ ಚಾರ್ಮಿ ಕೌರ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ.

Dharmendra Punjabi Films OTT: ಬಾಲಿವುಡ್‌ ಹೀಮ್ಯಾನ್‌ನ ಬೆಸ್ಟ್  ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

ನಟ ಧರ್ಮೇಂದ್ರ ಬೆಸ್ಟ್ ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

Bollywood Actor: ಧರ್ಮೇಂದ್ರ ಆರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದರು. ಈ ನಟ 1960 ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರಾದರು. ನಟ ಸೋಮವಾರ, ನವೆಂಬರ್ 24, 2025 ರಂದು ನಿಧನರಾದರು. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅವರು ಲೆಕ್ಕವಿಲ್ಲದಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಅತ್ಯುತ್ತಮ ಪಂಜಾಬಿ ಚಲನಚಿತ್ರಗಳನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ  ಶುಭ ಹಾರೈಸಿದ ಸುಮಲತಾ ಅಂಬರೀಷ್

ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

Sumalatha Ambareesh: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡಿದ್ದಾರೆ. ಇದೀಗ ದರ್ಶನ್​ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರ್ತಿದೆ. ಅಂಬರೀಷ್ ಅವರ ಪುಣ್ಯಸ್ಮರಣೆ ದಿನ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು.

Bigg Boss Kannada 12:  ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

Rakshitha Shetty: ಈ ವಾರ ಬಿಗ್‌ ಬಾಸ್‌ ರಣರಂಗವಾಗಿದೆ. ನಾಮಿನೇಷನ್‌ ಪ್ರಕ್ರಿಯೆ ಜೋರಾಗಿದೆ. ಅದರಲ್ಲೂ ಗಿಲ್ಲಿ ಅವರನ್ನೇ ರಕ್ಷಿತಾ ಅವರು ನಾಮಿನೇಟ್‌ ಮಾಡಿದ್ದಾರೆ. ಗ್ರೂಪಿಸಮ್‌ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್‌ , ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್‌ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ.

The Raja Saab: 'ಪ್ಯಾನ್‌ ಇಂಡಿಯಾ ಸ್ಟಾರ್‌' ಪ್ರಭಾಸ್‌ಗಾಗಿ ರೆಬೆಲ್‌ ಸಾಂಗ್‌ ಹಾಡಿದ 'ಕನ್ನಡಿಗ' ಸಂಜಿತ್ ಹೆಗ್ಡೆ; ಹಾಡು ಕೇಳಿದ್ಮೇಲೆ ‌'ಡಾರ್ಲಿಂಗ್‌' ಫ್ಯಾನ್ಸ್‌ ಥ್ರಿಲ್

ಪ್ರಭಾಸ್ 'ರೆಬೆಲ್ ಸಾಬ್' ಹಾಡಿಗೆ ಕನ್ನಡದ ಸಂಜಿತ್ ಹೆಗ್ಡೆ ಧ್ವನಿ

Rebel Saab Song: ಪ್ರಭಾಸ್ ನಟನೆಯ ಬಹುನಿರೀಕ್ಷಿತ `ದಿ ರಾಜಾ ಸಾಬ್' ಸಿನಿಮಾದ ಮೊದಲ ಹಾಡು 'ರೆಬೆಲ್‌ ಸಾಬ್‌' ಬಿಡುಗಡೆಯಾಗಿದೆ. ಇದು ಪಕ್ಕಾ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿದ್ದು, ಪ್ರಭಾಸ್ ಸಖತ್ ಸ್ಟೈಲಿಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಕನ್ನಡ ಮತ್ತು ಮೂಲ ತೆಲುಗು ವರ್ಷನ್‌ಗಳಿಗೆ ಕನ್ನಡಿಗ ಸಂಜಿತ್ ಹೆಗ್ಡೆ ದ್ವನಿ ನೀಡಿರುವುದು ವಿಶೇಷ.

19ನೇ ವಯಸ್ಸಿನಲ್ಲಿ ಮೊದಲ ಮದುವೆ, 45ಕ್ಕೆ ಸ್ಟಾರ್‌ ನಟಿ ಜೊತೆ 2ನೇ ಕಲ್ಯಾಣ; ಇದು ಧರ್ಮೇಂದ್ರ ಮ್ಯಾರೇಜ್‌ ಸ್ಟೋರಿ!

ಮೊದಲ ಪತ್ನಿಗೆ ಡಿವೋರ್ಸ್‌ ನೀಡದೆಯೇ 2ನೇ ಮದುವೆಯಾಗಿದ್ದ ಧರ್ಮೇಂದ್ರ!

Dharmendra Marriage Story: ಬಾಲಿವುಡ್‌ನ 'ಹೀಮ್ಯಾನ್' ಧರ್ಮೇಂದ್ರ ಅವರು ತಮ್ಮ ವೈಯಕ್ತಿಕ ಬದುಕಿನಿಂದ ಗಮನ ಸೆಳೆದವರು. 1954ರಲ್ಲಿ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. 1980ರಲ್ಲಿ ನಟಿ ಹೇಮಾ ಮಾಲಿನಿ ಅವರೊಂದಿಗೆ ವಿಚ್ಛೇದನವಿಲ್ಲದೆ, ಎರಡನೇ ಕಲ್ಯಾಣ ಮಾಡಿಕೊಂಡರು. ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರಿಂದ ಒಟ್ಟು ಆರು ಮಕ್ಕಳಿದ್ದಾರೆ.

Actor Dharmendra: ಧರ್ಮೇಂದ್ರ ಯುಗಾಂತ್ಯ- ದಿಗ್ಗಜ ನಟನ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

ನಟ ಧರ್ಮೇಂದ್ರ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

Dharmendra passes away: ಭಾರತೀಯ ಚಿತ್ರರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ಸಿನಿಮಾ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.

Dharmendra Death: ʻಇಕ್ಕೀಸ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌, 90ನೇ ಹುಟ್ಟುಹಬ್ಬದ ತಯಾರಿ; ಎಲ್ಲವನ್ನು ಅರ್ಧಕ್ಕೆ ಬಿಟ್ಟು ಹೊರಟ ಧರ್ಮೇಂದ್ರ!

90ನೇ ಹುಟ್ಟುಹಬ್ಬ ಆಚರಣೆಗೂ ಮುನ್ನ ಅಗಲಿದ 'ಹೀಮ್ಯಾನ್' ಧರ್ಮೇಂದ್ರ!

Veteran Actor Dharmendra Death: ಬಾಲಿವುಡ್‌ನ ಹೀಮ್ಯಾನ್ ಧರ್ಮೇಂದ್ರ ಅವರು ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ 15 ದಿನ ಬಾಕಿ ಇರುವಾಗ ವಿಧಿವಶರಾಗಿದ್ದಾರೆ. ಕಾಕತಾಳೀಯವೆಂಬಂತೆ, ಅವರ ಕೊನೆಯ ಚಿತ್ರ 'ಇಕ್ಕೀಸ್‌'ನ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ (ನವೆಂಬರ್ 24) ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರ ಅಗಲಿಕೆಯಿಂದ ಡಿಯೋಲ್ ಕುಟುಂಬ ಮತ್ತು ಕೋಟ್ಯಂತರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

Dharmendra Passes away: ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

Actor Dharmendra: 1975ರ ಐಕಾನಿಕ್ ಚಲನಚಿತ್ರ ಶೋಲೇ ಚಿತ್ರೀಕರಣದ ಸಮಯದಲ್ಲಿ ನಟ ಧರ್ಮೇಂದ್ರ ಅವರು ತಮ್ಮ ಸಹನಟಿ ಹೇಮಾ ಮಾಲಿನಿಯವರೊಂದಿಗೆ ಹೆಚ್ಚು ಸಮಯ ಕಳೆಯಲು ಒಂದು ವಿನೋದಭರಿತ ಐಡಿಯಾ ಮಾಡಿದ್ದರು. ರೊಮ್ಯಾಂಟಿಕ್‌ ದೃಶ್ಯವನ್ನು ಮರುಚಿತ್ರೀಕರಿಸಲು, ಅವರು ಸೆಟ್‌ನ ಸ್ಪಾಟ್‌ಬಾಯ್ಸ್‌ಗಳಿಗೆ ತಲಾ ರೂ. 20 ನೀಡಿ ಉದ್ದೇಶಪೂರ್ವಕವಾಗಿ ಶೂಟಿಂಗ್‌ ವೇಳೆ ತಪ್ಪು ಮಾಡುವಂತೆ ಹೇಳಿದ್ದರಂತೆ.

Actor Dharmendra: ಬಾಲಿವುಡ್ ʻಹೀ ಮ್ಯಾನ್‌ʼ ಸಿನಿ ಜರ್ನಿ ಹೇಗಿತ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

ಧರ್ಮೇಂದ್ರ ಸಿನಿ ಜರ್ನಿ ಹೇಗಿತ್ತು ಗೊತ್ತಾ?

Bollywood Actor Dharmendra Dies At 89: ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟಾಗುವಂತೆ ಮಾಡಿದೆ.ಕೆಲವು ದಿನಗಳ ಹಿಂದೆಯಷ್ಟೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಬಳಿಕ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

Dharmendra: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ನಿಧನ

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ನಿಧನ

ಬಾಲಿವುಡ್‌ ಹೀ ಮ್ಯಾನ್‌ ಖ್ಯಾತಿಯ ಹಿರಿಯ ನಟ ಧರ್ಮೇಂದ್ರ ಮೃತಪಟ್ಟಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರ. ಕೆಲವು ದಿನಗಳ ಹಿಂದೆ 89 ವರ್ಷದ ಧರ್ಮೇಂದ್ರ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರು ಚೇತರಿಸಿಕೊಂಡು ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಯಿಂದ ಡಿಸ್‌ಚಾರ್ಚ್‌ ಆಗಿದ್ದರು.

Dance Karnataka Dance: ಅಪ್ಪು ಸಾಂಗ್‌ಗೆ ʻಬಿಂದಾಸ್‌ʼ ಆಗಿ ಸ್ಟೆಪ್‌ ಹಾಕಿದ 41 ವರ್ಷದ ಶ್ರೀದೇವಿ; ಇವ್ರ ಹಿನ್ನೆಲೆ ಏನು? ಯಾವ ಊರಿನವರು?

DKD ಶೋನಲ್ಲಿ ಹೆಜ್ಜೆ ಹಾಕಿದ ಗೃಹಿಣಿ ಶ್ರೀದೇವಿ ಯಾರು? ಇವ್ರ ಹಿನ್ನೆಲೆ ಏನು?

Dance Karnataka Dance 2025: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನಲ್ಲಿ 41 ವರ್ಷದ ಗೃಹಿಣಿ ಶ್ರೀದೇವಿ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಮೂಲದ ಮೂರು ಮಕ್ಕಳ ತಾಯಿ ಶ್ರೀದೇವಿ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಬಿಂದಾಸ್‌ ಸಿನಿಮಾದ ಥರ ಥರ ಒಂಥರಾ ಹಾಡಿಗೆ ಡ್ಯಾನ್ಸ್‌ ಮಾಡಿ, ಸೈ ಎನಿಸಿಕೊಂಡಿದ್ದಾರೆ.

Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಜಗ್ಗೇಶ್‌; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ

ಡಾ. ರಾಜ್‌ಕುಮಾರ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ನಟ ಜಗ್ಗೇಶ್‌

‌Dr Rajkumar: ನಟ ಜಗ್ಗೇಶ್‌ ಅವರು ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಜೊತೆಗಿನ 1992ರಲ್ಲಿನ ಅಪರೂಪದ ಫೋಟೋಗಳು ಇದಾಗಿದ್ದು, ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರು ಈ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

Saregamapa Tamil winner :  ತಮಿಳು ಸರಿಗಮಪ ವೇದಿಕೆ ಮೇಲೆ ಮೋಡಿ ಮಾಡಿದ ಕನ್ನಡತಿ ಶಿವಾನಿ ನವೀನ್‌ಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

ತಮಿಳು ಸರಿಗಮಪ ವೇದಿಕೆ ಮೇಲೆ ಮಿಂಚಿದ ಶಿವಾನಿಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

Shivani Naveen: 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್‌ನಲ್ಲಿ ತಮಿಳಿನ 'ವಾಗೈ ಸೂಡ ವಾ' ಸಿನಿಮಾದ 'ಪೋರಾನೇ ಪೋರಾನೇ' ಹಾಡನ್ನು ಶಿವಾನಿ ಹಾಡಿದ್ದರು.

Bigg Boss Kannada 12: ಡಾಗ್‌ ಸತೀಶ್‌ 80 ಸಾವಿರ ರೂಪಾಯಿ ಶರ್ಟ್‌ನ್ನ ಸ್ಪಂದನಾ ಹಾಳು ಮಾಡಿದ್ದು ಹೌದಾ? ಏನಪ್ಪಾ ಮ್ಯಾಟ್ರು ?

ಡಾಗ್‌ ಸತೀಶ್‌ ದುಬಾರಿ ಶರ್ಟ್‌ನ್ನ ಸ್ಪಂದನಾ ಹಾಳು ಮಾಡಿದ್ದು ಹೌದಾ?

Spandana : ಡಾಗ್ ಸತೀಶ್ ಬಿಗ್ ಬಾಸ್ ಮನೆಯೊಳಗೆ ಇರುವಾಗ ಅವರು ಸ್ಪಂದನಾಗೆ ಒಂದು ದುಬಾರಿ ಶರ್ಟ್‌ ಕೊಟ್ಟಿದ್ದರು. ಆ ಶರ್ಟ್‌ ಅನ್ನು ಸ್ಪಂದನಾ ಹಾಳು ಮಾಡಿ ಕೊಟ್ಟಿದ್ದಾರೆಂದು ಎಂದು ಆರೋಪಿಸಿದ್ದಾರೆ. ಡಾಗ್‌ ಸತೀಶ್‌ ಅವರು ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿರೋದು ಗೊತ್ತೇ ಇದೆ. ಆದರೆ ಹೊರಗೆ ಹಲವು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಒಳಗಡೆ ಮಾತ್ರ ಅಲ್ಲ, ಹೊರಗಡೆನೂ ಫೇಮಸ್‌ ಆಗಿದ್ದಾರೆ ಡಾಗ್‌ ಸತೀಶ್‌.

Bigg Boss Kannada 12: ಗಿಲ್ಲಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದ ಕಾವು! ಬೆಸ್ಟ್‌ ಫ್ರೆಂಡ್‌ ಬಗ್ಗೆ ಕಾವ್ಯಾ ತಪ್ಪು ತಿಳಿದುಕೊಂಡಿದ್ದಾರಾ?

ಗಿಲ್ಲಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದ ಕಾವು!

Kavya Shaiva: ಗಿಲ್ಲಿ ಅವರು ಎಷ್ಟೇ ಕಾಮಿಡಿ ಮಾಡಿದರೂ, ಟಾಸ್ಕ್‌ ಅಂತ ಬಂದಾಗ ಎಲ್ಲಿಯೂ ಡೈವರ್ಟ್‌ ಆಗಿಲ್ಲ. ಹಲವು ಬಾರಿ ಸ್ಪರ್ಧಿಗಳು, ಗಿಲ್ಲಿ ಅವರು ಕಾವ್ಯ ಅನ್ನೋ ಕಾರ್ಡ್‌ ಬಳಕೆ ಮಾಡ್ತಾರೆ ಎಂದು ಆರೋಪಿಸಿದ್ದರು. ಆದರೆ ಗಿಲ್ಲಿ ಹಾಗಲ್ಲ ಎಂದು ಎಷ್ಟೋ ಬಾರಿ ಆಟದ ಮೂಲಕ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ. . ಶನಿವಾರದ ಸಂಚಿಕೆಯಲ್ಲಿ ಗಿಲ್ಲಿ ಅವರು ಕಾವ್ಯ ಅವರು ಲೀಡರ್‌ ಅಲ್ಲ, ಫಾಲೋವರ್‌ ಎಂದು ಹೇಳಿದ್ದರು. ಇದು ಕಾವ್ಯ ಅವರಿಗೆ ಬೇಸರ ತರಿಸಿದೆ. ಸಂಚಿಕೆ ಆದ ಮೇಲೆಯೂ ಈ ಬಗ್ಗೆ ಗಿಲ್ಲಿ ಅವರ ಬಳಿ ಚರ್ಚಿಸಿದ್ದಾರೆ. ಆದರೆ ಭಾನುವಾರ, ಗಿಲ್ಲಿ, ಕಾವ್ಯಾ ಅವರನ್ನು ಸಲುಗೆಯಾಗಿ ತೆಗೆದುಕೊಂಡಿದ್ದಾರೆ’ ಎಂಬ ಹೇಳಿಕೆಗೆ ಕಾವ್ಯ ಹೌದು ಎಂದು ಹೇಳಿದ್ದಾರೆ.

Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ರಕ್ಷಿತಾ! ಅಶ್ವಿನಿ, ಜಾಹ್ನವಿ ಫೇಕ್‌ ಅಂದು ಅಬ್ಬರಿಸಿದ ಧ್ರುವಂತ್‌

ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ರಕ್ಷಿತಾ! ಅಶ್ವಿನಿ ಫೇಕ್‌ ಎಂದ ಧ್ರುವಂತ್‌

Ashwini Gowda: ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್‌ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್‌ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್‌ ಲೀಡ್‌ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ. ಗ್ರೂಪಿಸಮ್‌ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್‌, ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಅಶ್ವಿನಿ ಹಾಗೂ ಜಾಹ್ನವಿ ಮೇಲೆ ಕಿರುಚಾಡಿದ್ದಾರೆ ಧ್ರುವಂತ್‌.

Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ;  ಕಣ್ಣೀರಿಟ್ಟ ಅಶ್ವಿನಿ ಗೌಡ

`ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ'; ಕಣ್ಣೀರಿಟ್ಟ ಅಶ್ವಿನಿ

Ashwini Gowda: ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಜೊತೆ ಜಾಹ್ನವಿಗೂ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮನೆಯ ರೂಲ್ಸ್‌ನ ಪದೇಪದೇ ಬ್ರೇಕ್‌ ಮಾಡಿದ್ದರಿಂದ ಈಗಾಗಲೇ ಬಿಗ್‌ ಬಾಸ್‌ ಶಿಕ್ಷೆಯನ್ನು ಕೂಡ ನೀಡಿದ್ದರು. ಅಷ್ಟೇ ಅಲ್ಲ ಅಶ್ವಿನಿ ಮಾತನಾಡಿರುವ ಆಡಿಯೋ ಕೂಡ ಪ್ಲೇ ಮಾಡಿಸಿದ್ರು. ಇದರಿಂದ ಬಹಳಷ್ಟು ಕುಗ್ಗಿ ಹೋಗಿರುವಂತಿದೆ ಅಶ್ವಿನಿ. ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ ಈ ಆಟ ನನಗೆ ಅಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Bigg Boss Kannada 12: ಬಿಗ್​ಬಾಸ್ ಮನೆಯಿಂದ ರಿಷಾ ಔಟ್

Bigg Boss Kannada 12: ಬಿಗ್​ಬಾಸ್ ಮನೆಯಿಂದ ರಿಷಾ ಔಟ್

Risha Bigg Boss Kannada : ರಿಷಾ ಆಟ ಅಂತ ಬಂದರೆ ಅಷ್ಟಾಗಿ ಸಾಮರ್ಥ್ಯ ತೋರಿಸಿಲ್ಲ. ಬಂದ ದಿನದಿಂದಲೇ ಎಲ್ಲರ ಮೇಲೆ ರಿಷಾ ಅವರ ಕಿರುಚಾಟ ಜೋರಾಯ್ತು. ಅದರಲ್ಲು ಮಸಿ ಬಳಿಯುವ ಟಾಸ್ಕ್‌ನಲ್ಲಿ ಅನೇಕ ಸ್ಪರ್ಧಿಗಳು ಅವರಿಗೆ ಮಸಿ ಬಳಿದರು. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದರು. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಿಂದ ರಿಷಾ ಔಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ, ಅಭಿಷೇಕ್‌ ಶ್ರೀಕಾಂತ್‌ ಅವರು ಈ ವಾರ ನಾಮಿನೇಟ್‌ ಆಗಿದ್ದರು.

The Pet Detective On OTT:  ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ!

Anupama Parameswaran: ನಿರ್ದೇಶಕ ಪ್ರಾಣೀಶ್ ವಿಜಯನ್ ಈ ಕಥೆಯನ್ನು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಇದರಲ್ಲಿರೋ ಸನ್ನಿವೇಶಗಳು ವರ್ಣರಂಜಿತ ಪಾತ್ರಗಳಿಂದ ತುಂಬಿದೆ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಸ್ಯ ಹಾಗೂ ಆಕ್ಷನ್‌ಗೆ ಹೆಸರುವಾಸಿಯಾದ ಈ ಚಿತ್ರವು ಒಟಿಟಿ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. 'ದಿ ಪೆಟ್ ಡಿಟೆಕ್ಟಿವ್' ಕಥಾಹಂದರ ಮತ್ತು ಉತ್ತಮ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದೆ.

Loading...