ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ?

Rashika Shetty: ಈ ವಾರ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್‌ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್‌ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.

Bigg Boss Kannada 12: ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

Rashika Shetty: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಅಂತ ಬಂದಾಗ, ಹುಡುಗರಿಗೂ ಫೈಟ್‌ ಕೊಡ್ತಿರುವ ಕಂಟೆಸ್ಟೆಂಟ್‌ ಅಂದರೆ ರಾಶಿಕಾ ಶೆಟ್ಟಿ . ಅದೆಷ್ಟೊ ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಬಂದರೂ ಕೊನೆಯ ಕ್ಷಣದಲ್ಲಿ ಮಿಸ್‌ ಆಗ್ತಾ ಇತ್ತು. ಆದರೆ ಈ ವಾರ ರಾಶಿಕಾ ಕ್ಯಾಪ್ಟನ್‌ ಆಗಿ ಹೊರ ಹೊಮ್ಮಿದ್ದಾರೆ. ಪ್ರತೀ ಟಾಸ್ಕ್‌ನಲ್ಲೂ ಬೆಸ್ಟ್‌ ಪರ್ಫಾರ್ಮೆನ್ಸ್‌ ಕೊಡ್ತಿರುವ ರಾಶಿಕಾಗೆ ಅದೃಷ್ಟ ಕೈ ಕೊಡ್ತಾ ಇದ್ದರೂ, ಈ ಬಾರಿ ರಾಶಿಕಾ ವಿನ್‌ ಆಗಿದ್ದಾರೆ.

Mammootty:  ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ!

Dominic and the Ladies: ಮಮ್ಮುಟ್ಟಿ ಅಭಿನಯದ ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್ ಜನವರಿ 23, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಥಿಯೇಟ್ರಿಕಲ್ ಪ್ರದರ್ಶನಗೊಂಡ 11 ತಿಂಗಳ ನಂತರ, ಈ ಚಿತ್ರವು OTT ನಲ್ಲಿ ಸ್ಟ್ರೀಮಿಂಗ್ ಆಗಲು ಎಂಟ್ರಿ ಕೊಟ್ಟಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರಕ್ಕೆ ನೀರಜ್ ರಾಜನ್ ಮತ್ತು ಸೂರಜ್ ರಾಜನ್ ಅವರೊಂದಿಗೆ ಕಥೆ ಬರೆದಿದ್ದಾರೆ. ಮಮ್ಮುಟ್ಟಿ ಕಂಪನಿ ಬ್ಯಾನರ್ ಅಡಿಯಲ್ಲಿ ಮಮ್ಮುಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ದರ್ಬುಕ ಶಿವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Kerala Actor Assault Case: ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ; ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ  ಕೋರ್ಟ್‌

ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ! 20 ವರ್ಷ ಕಠಿಣ ಜೈಲು ಶಿಕ್ಷೆ

Pulsar Suni : 2017ರ ಕೇರಳ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರಾದ ಪಲ್ಸರ್ ಸುನಿ ಮತ್ತು ಇತರ ಐದು ಜನರಿಗೆ ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ನಟ ದಿಲೀಪ್ ಕುಮಾರ್ ನಿರ್ದೋಷಿ ಎಂದು ತೀರ್ಪು ಬಂದಿದ್ದು, ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. 2017ರಲ್ಲಿ ನಡೆದ ಘಟನೆಗೆ 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಈಗ ತೀರ್ಪು ಕೊಟ್ಟಿದೆ.

'ಪಡಯಪ್ಪ' ರೀ-ರಿಲೀಸ್: ಬೆಂಗಳೂರಿನಲ್ಲಿ ರಜನಿಕಾಂತ್‌ ಅಭಿಮಾನಿಗಳ ರೆಸ್ಪಾನ್ಸ್‌ ಹೇಗಿದೆ? 25 ವರ್ಷಗಳಾದ್ರೂ ಈ ಸಿನಿಮಾ ಒಟಿಟಿಗೆ ಸೇಲ್‌ ಆಗಿಲ್ಲ ಏಕೆ?

'ಪಡಯಪ್ಪ' ಚಿತ್ರದ ಒಟಿಟಿ ಹಕ್ಕುಗಳನ್ನು ರಜನಿಕಾಂತ್‌ ಸೇಲ್‌ ಮಾಡಿಲ್ಲವೇಕೆ?

Padayappa Re-release: ಸೂಪರ್‌ಸ್ಟಾರ್ ರಜನಿಕಾಂತ್ ಅವರ ವೃತ್ತಿಬದುಕಿನ 50 ನೇ ವರ್ಷದ ಹಿನ್ನೆಲೆಯಲ್ಲಿ, ಅವರ 'ಪಡಯಪ್ಪ' ಸಿನಿಮಾ ಇಂದು (ಡಿ.12) ಮರುಬಿಡುಗಡೆಗೊಂಡಿದೆ. ಅಂದಹಾಗೆ, 26 ವರ್ಷವಾದರೂ ರಜನಿಕಾಂತ್ ಅವರು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾವುದೇ ಒಟಿಟಿಗೆ ಮಾರಿಲ್ಲ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ.

Amruthadhaare Serial: ಜೋಡಿಗಳನ್ನ ಒಂದು ಮಾಡೋಕೆ  ಲವ್ ಮಾಸ್ಟರ್ಸ್ ಹೊಸ ಐಡಿಯಾ!

ಜೋಡಿಗಳನ್ನ ಒಂದು ಮಾಡೋಕೆ ಲವ್ ಮಾಸ್ಟರ್ಸ್ ಹೊಸ ಐಡಿಯಾ!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ದು ರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

Dev Anand: ಬ್ಲಾಕ್‌ ಕೋಟ್‌ ಹಾಕಿದ್ರೆ ಜೈಲು ಎಂದು ಈ ನಟನಿಗೆ ನ್ಯಾಯಲಯವೇ ಎಚ್ಚರಿಕೆ ನೀಡಿತ್ತು! ಅಂಥದ್ದೇನಿದೆ?

ಬಾಲಿವುಡ್ ನಟ ದೇವ್ ಆನಂದ್ ಬ್ಲ್ಯಾಕ್ ಕೋಟ್ ಹಿಂದಿನ ಸ್ಟೋರಿ ಏನು ಗೊತ್ತಾ?

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದೇವಾನಂದ್ ಅವರು ಅನೇಕ ವರ್ಷದಿಂದ ಕಲಾ ಸೇವೆ ನೀಡಿದ್ದಾರೆ. 1958ರಲ್ಲಿ ತೆರೆಕಂಡ ಕಾಲಾ ಪಾನಿ (Kala Pani) ಮತ್ತು 1961ರಲ್ಲಿ ತೆರೆಕಂಡ ಹಮ್ ದೋನೋ (Hum Dono) ಸಿನಿಮಾಗಳಲ್ಲಿ ಬ್ಲ್ಯಾಕ್ ಕೋಟ್ ಧರಿಸಿ ಅದನ್ನೇ ಒಂದು ಫ್ಯಾಷನ್ ಆಗಿ ಅವರು ಮಾರ್ಪ‌ಡಿಸಿದ್ದರು.

Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್‌!

ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌; ಅಶ್ವಿನಿಗೆ ಆವಾಜ್‌!

Ashwini Gowda: ಈ ವಾರ ಮನೆ ವಿಲನ್‌ ಮನೆ ಆಗಿದೆ. ವಿಲನ್‌ ಕೊಟ್ಟ ಟಾಸ್ಕ್‌ಗಳಿಗೂ ಮನೆಮಂದಿ ತತ್ತರಿಸಿ ಹೋಗಿದ್ದಾರೆ. ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್​ ಹಾಕಿದ್ದಾರೆ.

ತಾಯಿ ಬರೆದ ಕಥೆಗೆ ಮಗನೇ ಹೀರೋ; 'ಪ್ರೇಮಿ'ಗಾಗಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ!

Advik: 'ಪ್ರೇಮಿ' ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ

Premi Kannada Movie: ಎಸ್. ಪ್ರದೀಪ್ ವರ್ಮ ನಿರ್ದೇಶನದ 'ಪ್ರೇಮಿ' ಚಿತ್ರದ "ಮನಸ್ಸು ಏನೋ ಕಾಡಿದೆ" ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಅದ್ವಿಕ್ ಈ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ನಟಿ ಸಾತ್ವಿಕಾ (ಶ್ರಾವ್ಯಾ ರಾವ್) ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಕಪಾಲಿ ಟಾಕೀಸ್‌ ಜಾಗದಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ತೆಲುಗು ನಟ ಮಹೇಶ್‌ ಬಾಬು; AMB ಸಿನಿಮಾಸ್‌ ಕರ್ನಾಟಕಕ್ಕೆ ಎಂಟ್ರಿ!

ಗಾಂಧಿನಗರಕ್ಕೆ ಮಹೇಶ್‌ ಬಾಬು ಆಗಮನ; ಕಪಾಲಿ ಟಾಕೀಸ್‌ ಜಾಗದಲ್ಲಿ AMB Cinemas

AMB Cinemas Kapali: ಬೆಂಗಳೂರಿನ ಐತಿಹಾಸಿಕ 'ಕಪಾಲಿ' ಟಾಕೀಸ್‌ ಜಾಗದಲ್ಲಿ ತೆಲುಗು ನಟ ಮಹೇಶ್‌ ಬಾಬು ಅವರ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಆರಂಭವಾಗುತ್ತಿದೆ. ಡಿ.16 ರಂದು ಉದ್ಘಾಟನೆಗೊಳ್ಳಲಿರುವ ಈ ಮಲ್ಟಿಪ್ಲೆಕ್ಸ್ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಎಂಬ ದಾಖಲೆ ಬರೆಯಲಿದೆ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಆರು ದೇಶಗಳಲ್ಲಿ 'ಧುರಂಧರ್‌' ಸಿನಿಮಾ ಬ್ಯಾನ್, ಆದರೂ ಭರ್ಜರಿ ಕಲೆಕ್ಷನ್!‌

Dhurandhar Box Office Collection: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ಆಡಿದೆ. ಆರಂಭಿಕ ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಗಳಿಕೆ ಹೆಚ್ಚಿದೆ. ಕೇವಲ ಏಳು ದಿನಗಳಲ್ಲಿ ಚಿತ್ರವು ಭಾರತ ಮತ್ತು ವಿದೇಶದ ಗಳಿಕೆ ಸೇರಿ ₹300 ಕೋಟಿ ಕ್ಲಬ್ ಸೇರಿದೆ.

Darshan: ಬೆಂಗಳೂರಿನಲ್ಲಿ ʻದಿ ಡೆವಿಲ್ʼ‌ ಚಿತ್ರಕ್ಕೆ ದಾಖಲೆ ಸಂಖ್ಯೆಯ ಶೋಗಳು! ವಿಶ್ವದ್ಯಾಂತ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು? ರಾಜ್ಯಾದ್ಯಂತ ಹೇಗಿದೆ ರೆಸ್ಪಾನ್ಸ್?

The Devil Collection: ದರ್ಶನ್‌ ಚಿತ್ರಕ್ಕೆ ಹೇಗಿದೆ ನೋಡಿ ರೆಸ್ಪಾನ್ಸ್?

The Devil Box Office Collection: 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಅಭಿನಯದ 'ದಿ ಡೆವಿಲ್‌' ಸಿನಿಮಾವು ಡಿಸೆಂಬರ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎರಡು ವರ್ಷಗಳ ಬಳಿಕ ತೆರೆ ಕಂಡಿರುವ ದರ್ಶನ್‌ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಅಂದಾಜು 13.80 ಕೋಟಿ ರೂ. ಕಲೆಕ್ಷನ್ ಆಗಿದೆ.

Photos: ʻಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿ ರಿಷಬ್‌ ಶೆಟ್ಟಿ ಹೇಳಿದ್ದೇನು?

Kantara 1 ಚಿತ್ರದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿದ ರಿಷಬ್‌

ರಿಷಬ್‌ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್‌ 1ʼ ಸಿನಿಮಾವು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ. ಇದೀಗ ಈ ಚಿತ್ರಕ್ಕಾಗಿ ಮಾಡಿದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನು ರಿಷಬ್‌ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. "ಇದು ನಮ್ಮ ಕಥೆಯ ಆತ್ಮವನ್ನು ನಾನು ವರ್ಗಾಯಿಸಿದ ಕ್ಷಣವಾಗಿತ್ತು — ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವವನ್ನು ಕಂಡುಕೊಂಡಾಗ. ನಮ್ಮ ಮೊದಲ ಕಾರ್ಯಾಗಾರ (ವರ್ಕ್‌ಶಾಪ್) ಕೇವಲ ತಾಲೀಮು ಆಗಿರಲಿಲ್ಲ; ಅದು ಕಲ್ಪನೆಗೆ ಭಾವನೆಯನ್ನು ಉಸಿರಾಡುವಿಕೆಯ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲ ನಟರ ಮೇಲೆ ನನ್ನ ಪ್ರೀತಿ ಸದಾ ಇರುತ್ತದೆ" ಎಂದು ರಿಷಬ್‌ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

Nandamuri Balakrishna: 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂದು ಅಬ್ಬರಿಸಿದ ಬಾಲಯ್ಯ; ʻಅಖಂಡ 2ʼ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?‌

Nandamuri Balakrishna speaks about Kannada in Akhanda 2

Akhanda 2 Release: ನಂದಮೂರಿ ಬಾಲಕೃಷ್ಣ ಅವರ 'ಅಖಂಡ 2' ಚಿತ್ರವು ಡಿಸೆಂಬರ್ 12 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ, ಬಾಲಯ್ಯ ಹೇಳಿದ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಡೈಲಾಗ್ ಭಾರೀ ವೈರಲ್ ಆಗಿದೆ. "ಕರ್ನಾಟಕ ನನ್ನ ಸಹೋದರರ ಮನೆ" ಎಂದು ಹೇಳಿ ಶ್ರೀಕೃಷ್ಣದೇವರಾಯ ಮತ್ತು ಡಾ. ರಾಜ್‌ಕುಮಾರ್‌ರನ್ನು ನೆನೆದಿದ್ದಾರೆ ಬಾಲಯ್ಯ.

Actor Darshan: ತಂದೆ -ತಾಯಿ ಕಳೆದುಕೊಂಡ್ರು ದುಃಖ ಇಲ್ಲ, ಆದ್ರೆ ದರ್ಶನ್‌ ಇಲ್ಲ ಅನ್ನೋದೇ ತುಂಬಾ ನೋವು! ಅಭಿಮಾನಿಯ ಹೇಳಿಕೆ

ದರ್ಶನ್ ಅಭಿಮಾನಿಯ ಅಂಧಾಭಿಮಾನ! ವಿಡಿಯೋದಲ್ಲಿ ಏನಿದೆ?

The Devil Movie: ದರ್ಶನ್‌ ಅನುಪಸ್ಥಿಯಲ್ಲಿ ದಿ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ಫ್ಯಾನ್ಸ್‌ ಸಾಥ್‌ ಕೂಡ ಕೊಟ್ಟಿದ್ದಾರೆ. ಮೆಚ್ಚಿನ ನಟ ಜೈಲಿನಲ್ಲಿ ಇದ್ದಾಗ ಫ್ಯಾನ್ಸ್‌ ಆದವರಿಗೆ ಬೇಸರ ಆಗೋದು ಸಹಜ. ಆದರೆ ಅಂಧಾಭಿಮಾನ ತೋರಿದರೆ, ಅತಿಯಾದ ಪ್ರೀತಿಯೂ ವಿಷ ಆಗೇ ಕಾಣುತ್ತದೆ ಅದಕ್ಕೆ ಉದಾಹರಣೆ, ಕೆಲವು ಅಭಿಮಾನಿಗಳ ಹೇಳಿಕೆ.ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ ಅಂತ ಕೆಲವು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗ್ತಿದೆ.

12A Railway Colony OTT : ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ, ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ!

12A Railway Colony OTT: ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದ ಈ ಚಿತ್ರವು ಥಿಯೇಟರ್ ಪ್ರದರ್ಶನವಾದ 20 ದಿನಗಳಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಿದೆ. ನಾನಿ ಕಾಸರಗಡ್ಡ ನಿರ್ದೇಶನದ ಮತ್ತು ಪೋಲಿಮೆರಾ ಖ್ಯಾತಿಯ ಡಾ. ಅನಿಲ್ ವಿಶ್ವನಾಥ್ ಬರೆದ ಕಥೆ ಇದೆ. ಸಾಯಿ ಕುಮಾರ್, ವಿವಾ ಹರ್ಷ, ಗೆಟಪ್ ಶ್ರೀನು, ಸದ್ದಾಂ ಮತ್ತು ಜೀವನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Rajinikanth Birthday: ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ: ನಟ ಧನುಷ್ ಸೇರಿ ಅಭಿಮಾನಿಗಳಿಂದ ಶುಭಾಶಯ

ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ

Dhanush: ಇಂದು (ಡಿಸೆಂಬರ್ 12) ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ಜನುಮದಿನದ ಸಂಭ್ರಮ.75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ತಲೈವಾ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಟನಿಗೆ ಶುಭಾಶಯಗಳು ಹರಿದು ಬರುತ್ತಿವೆ. ಮಾಜಿ ಅಳಿಯ ನಟ ಧನುಷ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಕೂ ಡ ನಟನಿಗೆ ವಿಶ್‌ ಮಾಡಿದ್ದಾರೆ. ಧನುಷ್‌ ಯಾವಾಗಲೂ ರಜನಿಕಾಂತ್ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ‌

Bigg Boss Kannada 12: ವಿಲನ್ ಚಾಲೆಂಜ್​ಗೆ ಗಿರ್ ಅಂತಿದೆ ಕಂಟೆಸ್ಟೆಂಟ್ಸ್ ತಲೆ; ಮಾಳು ಹೊಸ ಲುಕ್ ನೋಡ್ರಪ್ಪ!

ವಿಲನ್ ಚಾಲೆಂಜ್​ಗೆ ಕಂಟೆಸ್ಟೆಂಟ್ಸ್ ತತ್ತರ; ಮಾಳು ಹೊಸ ಲುಕ್ ನೋಡ್ರಪ್ಪ!

malu nipanal: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಈಗ 73 ದಿನಗಳು ಕಳೆದಿವೆ. ಗಿಲ್ಲಿ ನಟ ಅವರು ಸಖತ್ ಮಿಂಚುತ್ತಿದ್ದಾರೆ. ಈ ಬಾರಿ ಅವರೇ ಗೆಲ್ಲುವುದು ಎಂದು ವೀಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇನ್ನು ಮನೆಯಲ್ಲಿ ಆಟದ ಸಲುವಾಗಿ ಎರಡು ಗುಂಪಾಗಿದೆ. ಒಂದು ರಜತ್‌ ಟೀಂನಲ್ಲಿ ಧನುಷ್‌, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದರೆ, ಉಳಿದವರು ಅಶ್ವಿನಿ ಟೀಂ.

The Devil First Day Collection:  ‘ಡೆವಿಲ್’ಅಬ್ಬರ! ಮೊದಲ ದಿನ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ?

‘ಡೆವಿಲ್’ಅಬ್ಬರ! ಮೊದಲ ದಿನ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ?

Box Office Collection:ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಡಿ. 11 ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ನಟ ದರ್ಶನ್ ಅವರು ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ನಿನ್ನೆ ಬಹುತೇಕ ಥಿಯೇಟರ್‌ಗಳು ಹೌಸ್‌ಫುಲ್‌ ಆಗಿದೆ. ಇದೀಗ ಡೆವಿಲ್‌ ಮೊದಲ ದಿನದ ಕಲೆಕ್ಷನ್‌ ಬಗ್ಗೆ ಸಖತ್‌ ಸುದ್ದಿಯಾಗುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ನೀಡುವ sacnilk ಈಗ ಡೆವಿಲ್‌ ಸಿನಿಮಾ ಕಲೆಕ್ಷನ್‌ ಬಗ್ಗೆ ಮಾಹಿತಿ ನೀಡಿದೆ.

ಕಳೆದ ವಾರ ʻಅಖಂಡ 2ʼ, ಈ ವಾರ ʻವಾ ವಾಥಿಯಾರ್ʼ; ಛೇ, ಸ್ಟಾರ್‌ ನಟರ ಸಿನಿಮಾಗಳಿಗೆ ಇದೆಂಥಾ ಅಗ್ನಿಪರೀಕ್ಷೆ? ಹುಸಿಯಾಗುತ್ತಿದೆ ಫ್ಯಾನ್ಸ್‌ ನಿರೀಕ್ಷೆ!

Vaa Vaathiyaar: ಕಾರ್ತಿ ನಟನೆಯ ಹೊಸ ಸಿನಿಮಾಕ್ಕೆ ಬಿಗ್‌ ಶಾಕ್!

Vaa Vaathiyaar Movie: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು ಪೋಸ್ಟ್‌ಪೋನ್‌ ಆಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಳೆದ ವಾರ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಚಿತ್ರದ ಬಿಡುಗಡೆ ತಡೆಯಾಜ್ಞೆ ನೀಡಿತ್ತು. ಇದೀಗ ಕಾರ್ತಿ ನಟನೆಯ 'ವಾ ವಾಥಿಯಾರ್' ಚಿತ್ರದ ಬಿಡುಗಡೆಗೂ ತಡೆಬಿದ್ದಿದೆ.

ʻಮೊದಲು ಅಸಮಾಧಾನ, ಆಮೇಲೆ ಹೊಗಳಿಕೆʼ; ʻಧುರಂಧರ್‌ʼ ಬಗ್ಗೆ ಹೃತಿಕ್‌ ರೋಷನ್‌ ಗೊಂದಲ ಮಾಡಿಕೊಂಡ್ರಾ? ಕೆಲವೇ ಗಂಟೆಗಳಲ್ಲಿ ನಿಲುವು ಬದಲಾಗಿದ್ದೇಕೆ?

Dhurandhar ಸಿನಿಮಾದ ಬಗ್ಗೆ ಹೃತಿಕ್‌ ರೋಷನ್‌ ಗೊಂದಲ ಹೇಳಿಕೆ?

Hrithik Roshan On Dhurandhar: ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನಟ ಹೃತಿಕ್ ರೋಷನ್ ಈ ಸಿನಿಮಾ ನೋಡಿ ಹಾಕಿದ ಪೋಸ್ಟ್‌ಗಳು ಗೊಂದಲ ಸೃಷ್ಟಿಸಿವೆ. ಮೊದಲ ಪೋಸ್ಟ್‌ನಲ್ಲಿ, ಅವರು "ಈ ಚಿತ್ರದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು" ಎಂದು ಬರೆದಿದ್ದರು. ನಂತರ ಮತ್ತೊಂದು ಪೋಸ್ಟ್ ಹಂಚಿಕೊಂಡ ಹೃತಿಕ್ ರೋಷನ್, ಚಿತ್ರತಂಡವನ್ನು ಮುಕ್ತವಾಗಿ ಹೊಗಳಿದ್ದರು.

Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ! ವೇಸ್ಟ್‌ ಅಂತ ಅಂದಿದ್ದ ಗಿಲ್ಲಿಗೆ ಕಾವು ಕೊಟ್ಟೇ ಬಿಟ್ರಾ ಉತ್ತರ?

Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ!

Kavya Shaiva: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ವಿಲನ್‌ದೇ ರೂಲ್ಸ್‌. ವಿಲನ್‌ ಹೇಳಿದಂತೆ ಕೇಳೋದು ಸ್ಪರ್ಧಿಗಳ ಟಾಸ್ಕ್‌ ಆಗಿದೆ. ಇದೀಗ ಬಿಗ್​​ಬಾಸ್​​, ಮನೆ ಮಂದಿಗೆ ಮತ್ತೊಂದು ಕಠಿಣ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಯಾರದರೂ ಒಬ್ಬರು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಹೇರ್‌ ಕಲರ್‌ನ ಒಬ್ಬರು ಹಾಕಿಕೊಳ್ಳಬೇಕು ಅಂತ ಹೇಳಿದೆ ವಿಲನ್.‌

Viral Video: ಶೂಟಿಂಗ್‌ ವೇಳೆ  ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಶೂಟಿಂಗ್ ಸೆಟ್ ನಲ್ಲಿ ಅಕ್ಷಯ್ ಕುಮಾರ್ ಸಾಹಸಮಯ ದೃಶ್ಯ: ವಿಡಿಯೊ ವೈರಲ್!

ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳನ್ನು ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ 2010 ರಲ್ಲಿ ತೆರೆಕಂಡ ಸಾಜಿದ್ ಖಾನ್ ನಿರ್ದೇಶನದ 'ಹೌಸ್‌ಫುಲ್' ಚಿತ್ರದ ಸೆಟ್‌ ನ ದೃಶ್ಯ ವೊಂದು ವೈರಲ್ ಆಗಿದ್ದು ಅಕ್ಷಯ್ ಸಾಹಸಮಯ ದೃಶ್ಯ ದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ವಿಡಿಯೋದಲ್ಲಿ, ಅಕ್ಷಯ್ ಕುಮಾರ್ ಯಾರದೇ ಬೆಂಬಲವಿಲ್ಲದೆ ಗೋಡೆ ಯೊಂದನ್ನು ಅತ್ಯಂತ ಸಲೀಸಾಗಿ ಏರುತ್ತಿ ರುವುದು ಕಂಡುಬರುತ್ತದೆ.

Bigg Boss Kannada 12: ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು? ರಜತ್‌ ಬಾಯಲ್ಲಿ ಒಮ್ಮೆ ಕೇಳಿ ಬಿಡಿ

ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ (Rajath) ಸಾಕಷ್ಟು ಬಾರಿ ಗಿಲ್ಲಿ ಪರ ಬ್ಯಾಟ್‌ ಬೀಸಿದ್ದಾರೆ. ಪ್ರತಿ ವಾರ ಗಿಲ್ಲಿಯನ್ನ ಕೆಲವು ಸ್ಪರ್ಧಿಗಳು ನಾಮಿನೇಟ್‌ ಮಾಡ್ತಾನೆ ಇರ್ತಾರೆ. ಆದರೆ ಕಾರಣ ಕೊಡೋದು ಮಾತ್ರ ಒಂದೇ. ಗಿಲ್ಲಿ ಸೋಮಾರಿ, ಕಾಮಿಡಿ ಮಾಡಿ ಡೌನ್‌ ಮಾಡ್ತಾನೆ ಅಂತ. ಈ ಬಗ್ಗೆ ರಜತ್‌ ಅವರು ಟಾಂಗ್‌ ಕೊಟ್ಟಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ನಾವು ಈಗ ಆಟ ಆಡೋವಷ್ಟು ನೀವ್ಯಾರು ಆಡಿಲ್ಲ ಅಂತ ಪರೋಕ್ಷವಾಗಿಯೇ ಹೇಳಿದ್ದಾರೆ.

Loading...