ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Superstar Rajinikanth: ರಜನಿಕಾಂತ್ ಸಹೋದರನಿಗೆ ಹೃದಯಾಘಾತ; ಚೆನ್ನೈನಿಂದ ಬೆಂಗಳೂರಿಗೆ ಓಡೋಡಿ ಬಂದ ಸೂಪರ್‌ ಸ್ಟಾರ್‌

ರಜನಿಕಾಂತ್ ಸಹೋದರನಿಗೆ ಹೃದಯಾಘಾತ

ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಹಿರಿಯ ಸಹೋದರನಿಗೆ (Rajinikanth Brother) ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಹೃದಯಾಘಾತಕ್ಕೆ (Heart Attack) ಒಳಗಾಗಿದ್ದಾರೆ. ಖುದ್ದು ರಜನಿಕಾಂತ್‌ ಅವರೇ ಆಸ್ಪತ್ರಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಕಿಚ್ಚನ ರೌದ್ರಾವತಾರ

ಮಾರ್ಕ್‌ ಟೀಸರ್ (Mark teaser) ಹೇಗೆ ಇರುತ್ತದೆ ಎಂಬ ನಿರೀಕ್ಷೆ ಫ್ಯಾನ್ಸ್‌ಗೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪವರ್ ಪ್ಯಾಕ್ಡ್ ಆಕ್ಷನ್ ಟೀಸರ್ ನೋಡಿ ಕಿಚ್ಚನ ಬಳಗ ಸಂತಸಗೊಂಡಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyan) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸುದೀಪ್ (Sudeep) ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್‌ ಕಂಡು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

Prithviraj Sukumaran: SS ರಾಜಮೌಳಿ  ಚಿತ್ರದಲ್ಲಿ ʻಕುಂಭʼನಾದ ಪೃಥ್ವಿರಾಜ್ ಸುಕುಮಾರನ್; ಪೋಸ್ಟರ್ ಔಟ್‌

SS ರಾಜಮೌಳಿ ಚಿತ್ರದಲ್ಲಿ ʻಕುಂಭʼನಾದ ಪೃಥ್ವಿರಾಜ್ ಸುಕುಮಾರನ್

ಮಹೇಶ್ ಬಾಬು - ರಾಜಮೌಳಿ (Rajamouli) ಕಾಂಬಿನೇಷನ್‌ನ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ನಟಿಸುತ್ತಿದ್ದು, ಅವರಿಲ್ಲಿ 'ಕುಂಭ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಚಿತ್ರದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ .ವೀಲ್‌ಚೇರ್‌ನಲ್ಲಿ ಕುಳಿತು ರೋಬೋಟಿಕ್ ಬೆಂಬಲದೊಂದಿಗೆ ಶಕ್ತಿಶಾಲಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

Jana Nayagan : ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌; ಹೊಸ ಪೋಸ್ಟರ್ ಔಟ್‌, ರಿಲೀಸ್‌ ಯಾವಾಗ?

‘ಜನ ನಾಯಗನ್’ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌; ರಿಲೀಸ್‌ ಯಾವಾಗ?

ಇತ್ತೀಚಿನ ಕರೂರ್ (Karoor) ಕಾಲ್ತುಳಿತ ಘಟನೆಯ ನಂತರ ಬಿಡುಗಡೆಯನ್ನು ಮುಂದೂಡಬಹುದು ಎಂಬ ಊಹಾಪೋಹಗಳ ನಡುವೆ ಈ ಅಪ್‌ಡೇಟ್‌ ಬಂದಿದೆ. ರಿಲೀಸ್ ಆದ ಬಳಿಕ ಅಮೆಜಾನ್ ಪ್ರೈಮ್ (Amazon Prime) ವಿಡಿಯೊ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ವಿಜಯ್ (Thalapathy Vijay) ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Production) ನಿರ್ಮಾಣ ಮಾಡುತ್ತಿದೆ.

Mahanati Season2: ಗೆಲುವಿನ ಟ್ರೋಫಿಗಾಗಿ 5 ಫೈನಲಿಸ್ಟ್‌ಗಳ ಸಾರ್ಥಕ ಯಾನ! ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ಕಿರೀಟ?

Mahanati Season2: ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ ಕಿರೀಟ?

ಇದೇ ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ನಡೆಯಲಿದೆ. ಇದರ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮಹಾನಟಿ ಸೀಸನ್ 1 ಅತ್ಯಂತ ಯಶಸ್ವಿ ಆಗಿದ್ದು ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸಿನೆಮಾ ಹಾಗೂ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿವೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದಾರೆ.

Star Kids Born On November: ನವೆಂಬರ್‌ನಲ್ಲಿ ಜನಿಸಿದ ಬಾಲಿವುಡ್‌ನ ಸ್ಟಾರ್ ಕಿಡ್ಸ್ ಇವರೇ: ಇಲ್ಲಿದೆ ಫೋಟೋಸ್

ನವೆಂಬರ್‌ನಲ್ಲಿ ಜನಿಸಿದ ಸ್ಟಾರ್ ಮಕ್ಕಳು ಇವರೇ ನೋಡಿ!

Star Kids Born On November: ನಟಿ ಕತ್ರಿನಾ ಕೈಫ್ ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಕ್ಷಣಗಳ ಬಗ್ಗೆ ದಂಪತಿಗಳಿಬ್ಬರು ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ನವೆಂಬರ್ ತಿಂಗಳು ಸೆಲೆಬ್ರಿಟಿಗಳಿಗೆ ಬಹಳ ವಿಶೇಷ ವಾದ ತಿಂಗಳು ಆಗಿದ್ದು ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಇದೇ ತಿಂಗಳಿನಲ್ಲಿ ಜನಿಸಿದ್ದಾರೆ.

Bigg Boss Kannada 12: ಧ್ರುವಂತ್‌ರ ಆ ಒಂದು ಮಾತಿಗೆ ಕಾವ್ಯ ಕೆಂಡ! ಆವಾಜ್ ಹಾಕಿದ ಗಿಲ್ಲಿ

ಧ್ರುವಂತ್‌ರ ಆ ಒಂದು ಮಾತಿಗೆ ಕಾವ್ಯ ಕೆಂಡ! ಆವಾಜ್ ಹಾಕಿದ ಗಿಲ್ಲಿ

ಈ ವಾರ ಧ್ರುವಂತ್‌ (Dhruvanth) ಹಾಗೂ ರಿಷಾ (Risha) ಅವರು ಗಿಲ್ಲಿ ಅವರ ಹೆಸರನ್ನು ಹೇಳಿ ಕಳಪೆ ನೀಡಿದರು. ರಿಷಾ ಕೂಡ ಯಾವಾಗಲೂ ಗಿಲ್ಲಿ ಅವರಿಗೆ ಕಾವು ಕಾವು ಅಂತ ಇರ್ತಾರೆ. ಅವರ ಹೆಸರು ಇಲ್ಲದೇ ಇವರಿಗೆ ಆಗೋದೆ ಇಲ್ವಾ ಅಂತ ಹೇಳಿದ್ದಾರೆ. ನಿನ್ನೆ ಕೂಡ ಅವರ ಸ್ನೇಹ ಟಾಸ್ಕ್‌ ಮೂಲಕ ಪ್ರೂವ್‌ ಆಗಿದೆ. ಆದರೀಗ ಇಡೀ ಮನೆ ಈ ಜೋಡಿ ಕಂಡು ಅಸೂಹೆ ಪಡುವಂತಾಗಿದೆ. ಹೌದು ಧ್ರುವಂತ್‌ (Dhruvant) ಅವರು ಸದ್ಯ ಗಿಲ್ಲಿ (Gilli) ಮೇಲೆ ಟಾರ್ಗೆಟ್‌ ಮಾಡುವಂತಿದೆ. ಅಷ್ಟೇ ಅಲ್ಲ ಕಳಪೆ ಕೊಡುವಾಗ ಗಿಲ್ಲಿ ಹೆಸರು ಹೇಳಿದ್ದಾರೆ.

Kamal Haasan: ಬರೋಬ್ಬರಿ ಏಳು ಬಾರಿ ಆಸ್ಕರ್‌ಗೆ ನಾಮಿನೇಟ್‌ ಆಗಿದ್ದ ಆ ನಟ ಯಾರು ಗೊತ್ತಾ?

ಏಳು ಬಾರಿ ಆಸ್ಕರ್‌ ನಾಮಿನೇಟ್‌ ಆಗಿದ್ದ ಆ ನಟ ಯಾರು?

Kamal Haasan Birthday: ಭಾರತದ ನಟರೊಬ್ಬರು ಬರೋಬ್ಬರಿ 7 ಸಲ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಕ ರಾಗಿದ್ದಾರೆ‌. ಸೂಪರ್ ಸ್ಟಾರ್ ಗಳ ಜೊತೆಗೂ ಇವರು ಅಭಿನಯಿಸಿದ್ದು ಬಹುಭಾಷೆಯಲ್ಲಿ ಸಿನಿಮಾ ಮಾಡಿ ಪ್ರಸಿದ್ಧರಾಗಿದ್ದಾರೆ. ಹೀಗೆಂದಾಗ ಬಹುತೇಕರಿಗೆ ರಜನೀಕಾಂತ್, ಮೋಹನ್ ಲಾಲ್, ಶಾರುಖ್ ಖಾನ್, ಚಿರಂಜೀವಿ ಸೇರಿದಂತೆ ಅನೇಕರ ಹೆಸರು ನಮಗೆ ನೆನಪಾಗುತ್ತದೆ. ಆದರೆ ನಟ ಕಮಲ್ ಹಾಸನ್ ಅವರು ಇಂತಹ ಮೇರು ನಟರನ್ನು ಕೂಡ ಮೀರಿಸಿ ಸಿನಿಮಾ ಕ್ಷೇತ್ರದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ‌.

Koragajja Movie: ವಿಶೇಷ ಭದ್ರತೆಗೆ ʼಕೊರಗಜ್ಜʼ ಚಿತ್ರತಂಡ ಮನವಿ; ಗೃಹ ಸಚಿವ ಡಾ.ಜಿ. ಪರಮೇಶ್ವರ್‌ರಿಂದ ಸಕಾರಾತ್ಮಕ ಸ್ಪಂದನೆ

ವಿಶೇಷ ಭದ್ರತೆಗೆ ʼಕೊರಗಜ್ಜʼ ಚಿತ್ರತಂಡ ಮನವಿ

Sandalwood News: ಸುಧೀರ್ ಅತ್ತಾವರ್ ನಿರ್ದೇಶನದ ʼಕೊರಗಜ್ಜʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳ 11ರಂದು ಮಂಗಳೂರಿನಲ್ಲಿ ನಡೆಯಲಿರುವ ಅಖಿಲಭಾರತ ಮಟ್ಟದ ʼಕೊರಗಜ್ಜʼ ಚಿತ್ರದ ಪತ್ರಿಕಾಗೋಷ್ಠಿ ಹಾಗೂ ಅಂದೇ ಸಂಜೆ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಲಿರುವ ಪತ್ರಕರ್ತರ ಮತ್ತು ಸಾವಿರಾರು ಜನರ ಹಾಗೂ ಸಿನಿಮಾ ತಾರೆಯರ ಸಮ್ಮುಖದಲ್ಲಿ ನಡೆಯಲಿರುವ ಕೊರಗಜ್ಜ ದೈವದ ಅದ್ದೂರಿ ಕೋಲಸೇವೆಯ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಚಿತ್ರತಂಡ ಚರ್ಚಿಸಿತು. ಈ ಕುರಿತ ವಿವರ ಇಲ್ಲಿದೆ.

Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

Sandalwood News: ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ʼಉಡಾಳʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದ ʼಉಡಾಳʼ ಚಿತ್ರವು ಇದೇ ನವೆಂಬರ್ 14 ಚಿತ್ರ ತೆರೆಗೆ ಬರಲಿದೆ. ನಗಿಸುವುದು ಅಷ್ಟು ಸುಲಭವಲ್ಲ. ನಗು ಬರುವುದು ಅಷ್ಟು ಸುಲಭವಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಜನ ಕಲಾವಿದರ ತಂಡವನ್ನಿಟ್ಟುಕೊಂಡು ʼಉಡಾಳʼ ಚಿತ್ರದ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದ್ದಾನೆ ಎಂದು ನಿರ್ಮಾಪಕ ಯೋಗರಾಜ್ ಭಟ್ ತಿಳಿಸಿದ್ದಾರೆ.

Katrina Kaif: ಕತ್ರಿನಾ-ವಿಕ್ಕಿ ದಂಪತಿಗೆ ಗಂಡು ಮಗು ಜನನ- ಸ್ಪೆಶಲ್‌ ಪೋಸ್ಟ್ ವೈರಲ್

ಬಾಲಿವುಡ್ ನಟಿ ಕತ್ರಿನಾ ಕೈಫ್ -ನಟ ವಿಕ್ಕಿ ಕೌಶಲ್ ದಂಪತಿಗೆ ಗಂಡು ಮಗು ಜನನ!

Katrina Kaif become mother to baby boy: ನಟಿ ಕತ್ರಿನಾ ಕೈಫ್ ಅವರು ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಇವರ ಬದುಕಲ್ಲಿ ಮೊದಲ ಮಗುವಿನ ಆಗಮನವಾಗಿದ್ದು ಈ ಸಂತಸದ ಕ್ಷಣಗಳ ಬಗ್ಗೆ ದಂಪತಿ ಗಳಿಬ್ಬರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಗಂಡು ಮಗುವಿನ ಜನನ ವಾಗಿದೆ. ಬಹುದಿನಗಳ ಕನಸು ನನಸಾಗಿದೆ ಎಂಬರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳು ದಂಪತಿಗಳಿಗೆ ಶುಭಕೋರಿದ್ದಾರೆ.

Kannada Serial TRP: ʻಅಣ್ಣಯ್ಯʼನ ಅಬ್ಬರ ಜೋರು; ಟಾಪ್ 5 ಸೀರಿಯಲ್‌ಗಳು ಇವೇನೆ!

ʻಅಣ್ಣಯ್ಯʼನ ಅಬ್ಬರ ಜೋರು; ಟಾಪ್ 5 ಸೀರಿಯಲ್‌ಗಳು ಇವೇನೆ!

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಆದರೀಗ ವೀಕ್ಷಕರು ಊಹಿಸಿರೋ ಧಾರಾವಾಹಿ ನಂಬರ್‌ 1 ಟಿಆರ್‌ಪಿಯಲ್ಲಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್​ಪಿ ಹೆಚ್ಚಲು ಕಾರಣ ಆಗಿದೆ. ಅಣ್ಣಯ್ಯ ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.

Harish Rai death: ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹರೀಶ್‌ ರಾಯ್‌ ಅಂತ್ಯಕ್ರಿಯೆ

ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹರೀಶ್‌ ರಾಯ್‌ ಅಂತ್ಯಕ್ರಿಯೆ

Harish Rai funeral: ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದ ಹರೀಶ್‌ ರಾಯ್ ಅವರು ಬಳಿಕ ಅಲ್ಲಿಂದ ಮುಂಬಯಿಗೆ ಓಡಿಹೋಗಿದ್ದರು. ನಂತರ ಬೆಂಗಳೂರಿಗೆ ಬಂದು ಕನ್ನಡ ಚಿತ್ರೋದ್ಯಮಕ್ಕೆ ಸೇರಿಕೊಂಡಿದ್ದರು. ಹರೀಶ್‌ ಅವರ ಬಂಧುಬಾಧವರು ಇಲ್ಲಿದ್ದಾರೆ. ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ಉಡುಪಿಗೆ ಕೊಂಡೊಯ್ಯಲಾಗಿತ್ತು. ಇಂದು ಉಡುಪಿಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿತು.

Ekka OTT: ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ ಫಿಕ್ಸ್‌;  OTTಗೆ ಎಂಟ್ರಿ ಕೊಡ್ತಿದೆ ʻಎಕ್ಕʼ ಸಿನಿಮಾ, ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಎಂಟ್ರಿ ಕೊಡ್ತಿದೆ ʻಎಕ್ಕʼ ಸಿನಿಮಾ, ಸ್ಟ್ರೀಮಿಂಗ್‌ ಎಲ್ಲಿ?

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ (Jayanna Films) ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ʼಎಕ್ಕʼ ಸಿನಿಮಾಗೆ ರೋಹಿತ್‌ (Rohit Padaki) ಪದಕಿ ಆಕ್ಷನ್‌ ಕಟ್‌ (Action Cut) ಹೇಳಿದ್ದಾರೆ. ನಾಯಕ ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಆರಂಭಿಕ ವರದಿಗಳು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಚತುರ್ಥಿಯ ಆಸುಪಾಸಿನಲ್ಲಿ OTT ಬಿಡುಗಡೆಯನ್ನು ಸೂಚಿಸಿದ್ದರೂ, ಆ ಸಮಯದಲ್ಲಿ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿಲ್ಲ. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Rashmika Mandanna: ಫ್ಯಾನ್ಸ್‌ ಹೃದಯ ಗೆದ್ದ ನ್ಯಾಶನಲ್‌ ಕ್ರಶ್‌ ಅಭಿನಯ! ದೀಕ್ಷಿತ್, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್‌' ಮೂವಿ ನೋಡಿದವರು ಹೇಳಿದಿಷ್ಟು

ದೀಕ್ಷಿತ್, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್‌' ಮೂವಿ ನೋಡಿದವರು ಹೇಳಿದಿಷ್ಟು

'ದಿ ಗರ್ಲ್‌ಫ್ರೆಂಡ್' (The Girlfriend) ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್‌ 7) ಬಿಡುಗಡೆಯಾಗಿದೆ (Release). ಮೊದಲ ದಿನ ಮತ್ತು ಮೊದಲ ಪ್ರದರ್ಶನಕ್ಕೆ ಹಾಜರಾದ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ (Allu Arvind) ಅವರ ನಿರೂಪಣೆಯಲ್ಲಿ ನಿರ್ಮಿಸಿವೆ.

Bigg Boss Kannada 12: ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್‌! ಸಾಥ್‌ ಕೊಟ್ಟ ಅಶ್ವಿನಿ ಗೌಡ

ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್‌! ಸಾಥ್‌ ಕೊಟ್ಟ ಅಶ್ವಿನಿ ಗೌಡ

ಹೊಸ ಪ್ರೋಮೋದಲ್ಲಿ (New Promo) ಮೊದಲಿಗೆ ಅಶ್ವಿನಿ (BBK) ಅವರು ಗಿಲ್ಲಿ ಬಗ್ಗೆ ವ್ಯಂಗ್ಯ ಮಾಡಿದರು. ಬಳಿಕ ಧ್ರುವಂತ್‌ ಅವರು ಮನೆಯ ಕೆಲವು ಸದಸ್ಯರ ಮುಂದೆ, ಕಾಮಿಡಿ ಬೇರೆ, ಮನೆಯ ಕೆಲವರ ಮುಂದೆ ಚೀಪ್‌ ಮಾಡೋದು ಬೇರೆ ಎಂದು ಅಬ್ಬರಿಸಿದ್ದಾರೆ. ಇನ್ನು ರಿಷಿಕಾ ಕೂಡ ಗಿಲ್ಲಿಗೆ ನಾಜೂಕು ಕಲಿತಿಕೋ ಎಂದೂ ಹೇಳಿದ್ದಾರೆ. . ನಿನ್ನೆಯ ಎಪಿಸೋಡ್‌ನಲ್ಲಿ ಕೂಡ ಧ್ರುವಂತ್‌ ಅವರ ವರ್ತನೆ ನಗ್ಗೆ ವೀಕ್ಷಕರು ಕೆಂಡವಾಗಿದ್ದಾರೆ, ಇದೀಗ ಗಿಲ್ಲಿಯನ್ನ (Gilli) ನೇರವಾಗಿ ಟಾರ್ಗೆಟ್‌ ಮಾಡಿದ್ದಾರೆ ಧ್ರುವಂತ್‌. ಅಷ್ಟೇ ಅಲ್ಲ ಅಶ್ವಿನಿ ಅವರು ಸಾಥ್‌ ಕೊಟ್ಟಿದ್ದಾರೆ.

Bigg Boss Kannada : ಧ್ರುವಂತ್‌ ನಡವಳಿಕೆಗೆ ಛೀಮಾರಿ! ರಕ್ಷಿತಾ ಬೆನ್ನಿಗೆ ಚೂರಿ ಹಾಕಿದ್ರಾ? ವೀಕ್ಷಕರು ಗರಂ

ಧ್ರುವಂತ್‌ ನಡವಳಿಕೆಗೆ ಛೀಮಾರಿ! ರಕ್ಷಿತಾ ಬೆನ್ನಿಗೆ ಚೂರಿ ಹಾಕಿದ್ರಾ?

ಸದ್ಯ ಫ್ಯಾಮಿಲಿಗಳಿಂದ ಪತ್ರಗಳು (Family Letter) ಮನೆಯೊಳಗೆ ಬರುತ್ತಿದೆ. ಅದೇ ರೀತಿ ಈಗ ರಕ್ಷಿತಾ ಹಾಗೂ ರಾಶಿಕಾ (Rakshita Rashika) ಅವರಿಗೂ ಮನೆಯವರಿಂದ ಪತ್ರ ಬಂದಿದೆ. ಆದರೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಇಟ್ಟಿದ್ದಾರೆ. ಮನೆಯವರ ಒಮ್ಮತ ನಿರ್ಧಾರ ಮಾಡಿ, ಒಬ್ಬರಿಗೆ ಲೆಟರ್‌ ನೀಡುವಂತೆ ಆದೇಶಿಸಿದೆ. ಇದರಲ್ಲಿ ಅಶ್ವಿನಿ ಗೌಡ ಅವರು ಮತ್ತೆ ರಕ್ಷಿತಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ. ಬಹುತೇಕರು ರಕ್ಷಿತಾ ಅವರಿಗೆ ಲೆಟರ್‌ ವಿಚಾರವಾಗಿ ಸಮಾಧಾನ ಮಾಡಿದರೆ, ಧ್ರುವಂತ್‌ ಅವರು ದೂರ ನಿಂತು ನೋಡುತ್ತಲೇ ಇದ್ದರು.

Bigg Boss Kannada 12: ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ

ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ

ಬಿಗ್‌ಬಾಸ್‌ನಲ್ಲಿ (Bigg Boss Kannada 12) ಈ ವಾರ ಟಾಸ್ಕ್‌ಗಳಿಲ್ಲ. ಹೀಗಾಗಿ ಮನೆಯಿಂದ ಪತ್ರದ ಮೂಲಕ ನಾಮಿನೇಷನ್‌ನಿಂದ ಪಾರಾಗಬೇಕು. ಬಿಗ್‌ ಬಾಸ್‌ ಕಾವ್ಯ ಮತ್ತು ಗಿಲ್ಲಿಗೆ ಒಂದು ಟ್ವಿಸ್ಟ್‌ ಕೊಟ್ಟಿದ್ದರು.ಬಿಗ್‌ಬಾಸ್‌ ಗಿಲ್ಲಿಯ ಎದುರು ಕಾವ್ಯ ಮನೆಯಿಂದ ಬಂದ ಪತ್ರವನ್ನೂ ಕಾವ್ಯಳ ಎದುರು ಗಿಲ್ಲಿ ಮನೆಯಿಂದ ಬಂದ ಪತ್ರವನ್ನೂ ಇಟ್ಟಿದ್ದಾರೆ.ಗಿಲ್ಲಿಗೆ ಕಾವ್ಯ ತನ್ನ ಮೇಲೆ ಇಟ್ಟಿರೋ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ತವಕವಾದರೆ, ಕಾವ್ಯ (Gillio Kavya ) ತಾನೇನು ಮಾಡಲಿ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದರು.

BBK 12: ಹಾಕೋ ಬನಿಯನ್‌ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್‌ ಸತೀಶ್‌ ಆರೋಪ

BBK 12: ಎಲ್ಲರನ್ನ ಗಿಲ್ಲಿ ತುಳಿತಿದ್ರು ಎಂದು ಡಾಗ್‌ ಸತೀಶ್‌ ಆರೋಪ

ಡಾಗ್‌ ಸತೀಶ್‌ ʻಬಿಗ್‌ ಬಾಸ್ ಕನ್ನಡ ಸೀಸನ್‌ 12ʼರಿಂದ ಎಲಿಮಿನೇಟ್‌ ಆಗಿ ಮೂರು ವಾರಗಳೇ ಕಳೆದಿವೆ. ಮಾಧ್ಯಮಗಳ ಮುಂದೆ ಹೊಸ ಹೊಸ ಸ್ಟೇಟ್‌ಮೆಂಟ್‌ ನೀಡುತ್ತಿದ್ದಾರೆ. ಗಿಲ್ಲಿ ನಟನ ಮೇಲೆ ಹೊಸ ಆರೋಪ ಮಾಡಿದ್ದಾರೆ. ಈ ಮುಂಚೆ ಕೂಡ ಗಿಲ್ಲಿ(Gilli)ಅವರ ಬಟ್ಟೆ ವಿಚಾರಕ್ಕೆ ಅಶ್ವಿನಿ ಗೌಡ ಅವರು ಟಾಂಗ್‌ ಕೊಟ್ಟಿದ್ದರು. ಅದಕ್ಕೆ ಸುದೀಪ್‌ (Sudeep) ಕೂಡ ಸಖತ್‌ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಆದರೀಗ ಡಾಗ್‌ ಸತೀಶ್‌ (Dog Satish) ಅವರು ಹೊಸ ಆರೋಪವನ್ನು ಮಾಡಿದ್ದಾರೆ.

Rashmika And Vijay: ಕೊಡಗಿನ ಕುವರಿ ರಶ್ಮಿಕ ಮದುವೆ ದಿನಾಂಕ ಫಿಕ್ಸ್‌; ವಿವಾಹ ನಡೆಯುವ ಪ್ಲೇಸ್‌ ಎಲ್ಲಿ ಗೊತ್ತಾ?

ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆ ಡೇಟ್‌ ರಿವೀಲ್‌!

Rashmika And Vijay: ಟಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಬ್ಬರಾಗಿದ್ದಾರೆ. ಸದ್ಯ ಈ ಜೋಡಿ ಶೀಘ್ರದಲ್ಲೆ ಮದುವೆಯಾಗಲಿದೆ ಎನ್ನುವ ಸುದ್ದಿ ಹಬ್ಬಿದೆ.‌ ನಾಲ್ಕು ತಿಂಗಳ ಹಿಂದೆ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇದೀಗ ಮದುವೆ ದಿನಾಂಕ ಕೂಡ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ

Yash: ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ನಟನ ಪುತ್ರನಿಗೆ ಹಣ ಸಹಾಯ ಮಾಡಿದ ರಾಕಿಂಗ್‌ ಸ್ಟಾರ್‌

ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ರಾಕಿಂಗ್‌ ಸ್ಟಾರ್‌ ಯಶ್

ಹರೀಶ್ ರಾಯ್ ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ (KGF Movie) ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ (Cancer) ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಯಶ್‌ ಅವರು ಚಾಚಾ ಹರೀಶ್ ರಾಯ್ (Harish Rai) ಅಂತಿಮ ದರ್ಶನ ಪಡೆದಿದ್ದಾರೆ.

Twinkle Khanna: ಇಂದಿನ ಯುವ ಪೀಳಿಗೆಗೆ ಸಂಗಾತಿಯನ್ನ ಚೇಂಜ್‌ ಮಾಡೋದು ಬಟ್ಟೆ ಬದಲಿಸಿದಷ್ಟೇ ಸುಲಭ; ಟ್ವಿಂಕಲ್ ಖನ್ನಾ

ಇಂದಿನ ಯುವ ಪೀಳಿಗೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ನಟಿ ಟ್ವಿಂಕಲ್ ಖನ್ನಾ!

"ಟು ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್" ಇತ್ತೀಚಿನ ಸಂಚಿಕೆಯಲ್ಲಿ,ಫರಾ ಖಾನ್ ಮತ್ತು ಅನನ್ಯಾ ಪಾಂಡೆ ಅವರ ಕಾರ್ಯಕ್ರಮದಲ್ಲಿ ಅತಿಥಿಗಳಾದರು. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯಮಯ ರೀತಿಯಲ್ಲಿ ಚರ್ಚಿಸಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಸಂಬಂಧಗಳು ಮತ್ತು ವ್ಯವಹಾರಗಳ ಕುರಿತು ಚರ್ಚೆ ನಡೆದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಕಾರ್ಯಕ್ರಮವು ಇಂತಹ ವಿವಾದಾತ್ಮಕ ವಿಷಯವನ್ನು ಚರ್ಚಿಸುತ್ತಿರೋದು ಇದೇ ಮೊದಲಲ್ಲ. ಮದುವೆ, ಸಂಬಂಧಗಳಿಂದ ಹಿಡಿದು ವಿವಾಹೇತರ ಸಂಬಂಧಗಳವರೆಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

BBK 12:  ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ

ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಯಾರ ಕೈ ಸೇರಲಿದೆ ಪತ್ರ?

ಮೊದಲಿಂದಲೂ ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಮೊದಲಿಗೆ ಅತ್ಯಂತ ಸ್ನೇಹಿತರಾಗಿ ಇದ್ದವರು ಅಶ್ವಿನಿ ಹಾಗೂ ಜಾಹ್ನವಿ. ‘ಬಿಗ್ ಬಾಸ್’ ನೀಡಿದ ಒಂದೇ ಒಂದು ಟಾಸ್ಕ್‌ನಿಂದಾಗಿ (Task) ಇಬ್ಬರ ಮಧ್ಯೆ ಸ್ನೇಹ ಸಂಬಂಧ ಮುರಿದುಬಿದ್ದಿತ್ತು.ಇದೀಗ ಜಾಹ್ನವಿ ಹಾಗೂ ಅಶ್ವಿನಿ (Ashwini Gowda) ಅವರಿಗೂ ಪತ್ರ ಬಂದು ಮುಟ್ಟಿದೆ. ಇಬ್ಬರೂ ತಮ್ಮ ಮಕ್ಕಳ ಪತ್ರವನ್ನು ಓದುವ ತವಕದಲ್ಲಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಮನೆಯ ಪತ್ರಗಳನ್ನು ಓದಿ ನಾಮಿನೇಶನ್‌ನಿಂದ ಪಾರಾಗುವ ಟ್ವಿಸ್ಟ್‌ ಕೊಟ್ಟಿದ್ದಾರೆ.

Shree Gandhada gudi: ‘ಶ್ರೀ ಗಂಧದಗುಡಿ’ ಧಾರಾವಾಹಿಗೆ ಎಂಟ್ರಿ ಕೊಟ್ಟೇ ಬಿಟ್ರು ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ!

‘ಶ್ರೀ ಗಂಧದಗುಡಿ’ ಧಾರಾವಾಹಿಗೆ ಎಂಟ್ರಿ ಕೊಟ್ಟೇ ಬಿಟ್ರು ಪ್ರಸಿದ್ಧ ಪೋಷಕ ನಟ!

ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಮಹಾರಾಷ್ಟ್ರ ಮೂಲದ ರವಿಕಾಳೆ (Ravi kaale) ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ತಮ್ಮ ಖಡಕ್ ನಟನೆಯ ಮೂಲಕ ಗುರುತಿಸಿಕೊಂಡಿರುವ ಇವರು ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ (Shree Gandhadagudi Serial) ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

Loading...