ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ರಕ್ಷಿತಾ! ಅಶ್ವಿನಿ, ಜಾಹ್ನವಿ ಫೇಕ್‌ ಅಂದು ಅಬ್ಬರಿಸಿದ ಧ್ರುವಂತ್‌

ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ರಕ್ಷಿತಾ! ಅಶ್ವಿನಿ ಫೇಕ್‌ ಎಂದ ಧ್ರುವಂತ್‌

Ashwini Gowda: ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್‌ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್‌ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್‌ ಲೀಡ್‌ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ. ಗ್ರೂಪಿಸಮ್‌ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್‌, ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಅಶ್ವಿನಿ ಹಾಗೂ ಜಾಹ್ನವಿ ಮೇಲೆ ಕಿರುಚಾಡಿದ್ದಾರೆ ಧ್ರುವಂತ್‌.

Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ;  ಕಣ್ಣೀರಿಟ್ಟ ಅಶ್ವಿನಿ ಗೌಡ

`ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ'; ಕಣ್ಣೀರಿಟ್ಟ ಅಶ್ವಿನಿ

Ashwini Gowda: ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಜೊತೆ ಜಾಹ್ನವಿಗೂ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮನೆಯ ರೂಲ್ಸ್‌ನ ಪದೇಪದೇ ಬ್ರೇಕ್‌ ಮಾಡಿದ್ದರಿಂದ ಈಗಾಗಲೇ ಬಿಗ್‌ ಬಾಸ್‌ ಶಿಕ್ಷೆಯನ್ನು ಕೂಡ ನೀಡಿದ್ದರು. ಅಷ್ಟೇ ಅಲ್ಲ ಅಶ್ವಿನಿ ಮಾತನಾಡಿರುವ ಆಡಿಯೋ ಕೂಡ ಪ್ಲೇ ಮಾಡಿಸಿದ್ರು. ಇದರಿಂದ ಬಹಳಷ್ಟು ಕುಗ್ಗಿ ಹೋಗಿರುವಂತಿದೆ ಅಶ್ವಿನಿ. ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ ಈ ಆಟ ನನಗೆ ಅಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Bigg Boss Kannada 12: ಬಿಗ್​ಬಾಸ್ ಮನೆಯಿಂದ ರಿಷಾ ಔಟ್

Bigg Boss Kannada 12: ಬಿಗ್​ಬಾಸ್ ಮನೆಯಿಂದ ರಿಷಾ ಔಟ್

Risha Bigg Boss Kannada : ರಿಷಾ ಆಟ ಅಂತ ಬಂದರೆ ಅಷ್ಟಾಗಿ ಸಾಮರ್ಥ್ಯ ತೋರಿಸಿಲ್ಲ. ಬಂದ ದಿನದಿಂದಲೇ ಎಲ್ಲರ ಮೇಲೆ ರಿಷಾ ಅವರ ಕಿರುಚಾಟ ಜೋರಾಯ್ತು. ಅದರಲ್ಲು ಮಸಿ ಬಳಿಯುವ ಟಾಸ್ಕ್‌ನಲ್ಲಿ ಅನೇಕ ಸ್ಪರ್ಧಿಗಳು ಅವರಿಗೆ ಮಸಿ ಬಳಿದರು. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದರು. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಿಂದ ರಿಷಾ ಔಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ, ಅಭಿಷೇಕ್‌ ಶ್ರೀಕಾಂತ್‌ ಅವರು ಈ ವಾರ ನಾಮಿನೇಟ್‌ ಆಗಿದ್ದರು.

The Pet Detective On OTT:  ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ!

Anupama Parameswaran: ನಿರ್ದೇಶಕ ಪ್ರಾಣೀಶ್ ವಿಜಯನ್ ಈ ಕಥೆಯನ್ನು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಇದರಲ್ಲಿರೋ ಸನ್ನಿವೇಶಗಳು ವರ್ಣರಂಜಿತ ಪಾತ್ರಗಳಿಂದ ತುಂಬಿದೆ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಸ್ಯ ಹಾಗೂ ಆಕ್ಷನ್‌ಗೆ ಹೆಸರುವಾಸಿಯಾದ ಈ ಚಿತ್ರವು ಒಟಿಟಿ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. 'ದಿ ಪೆಟ್ ಡಿಟೆಕ್ಟಿವ್' ಕಥಾಹಂದರ ಮತ್ತು ಉತ್ತಮ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದೆ.

'ಅಪರಿಚಿತೆ' ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಮಾಜಿ ಸಿಎಂ ಸದಾನಂದ ಗೌಡ; ಪುತ್ರ ರೋಹಿತ್‌ ಜೊತೆ ನಟಿಸಿ ಖುಷಿಪಟ್ಟ ಶ್ರೀನಾಥ್‌

'ಅಪರಿಚಿತೆ' ಚಿತ್ರದಲ್ಲಿ ಪುತ್ರ ರೋಹಿತ್‌ ಜೊತೆ ನಟಿಸಿದ ಶ್ರೀನಾಥ್

Aparichite Kannada Movie Trailer: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ʻಅಪರಿಚಿತೆʼ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದ್ದಾರೆ. 'ತಾಯವ್ವ' ಖ್ಯಾತಿಯ ಗೀತಪ್ರಿಯ ಅವರು ಈ ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶ್ರೀನಾಥ್ ಹಾಗೂ ಅವರ ಪುತ್ರ ರೋಹಿತ್ ಒಟ್ಟಿಗೆ ಬಣ್ಣ ಹಚ್ಚಿರುವುದು ವಿಶೇಷ.

Annayya Serial: ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗೇ ಹೋಯ್ತು! ಅಂತೂ ಸತ್ಯ ದರ್ಶನ

ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗೇ ಹೋಯ್ತು!

Annayya serial: ಇಷ್ಟೂ ದಿನ ಪಾರು, ಅತ್ತೆಯನ್ನ ಹುಡುಕುವ ಪ್ರಯತ್ನದಲ್ಲಿ ಇದ್ದಳು. ಅಂತೂ ಕಾದಿದ್ದಕ್ಕೂ ಫಲ ಸಿಕ್ಕಿದೆ. ಶಿವು ಮೈಮೇಲೆ ದೇವರು ಬಂದಿದೆ. ದೇವಿ ಸೀದಾ ಶಿವು ಅಮ್ಮ ಇರೋ ಕಡೆ ಬಂದಿದೆ. ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗಿದೆ. ಈ ಧಾರಾವಾಹಿಯಲ್ಲಿ ಸದ್ಯ ಗುಂಡಮ್ಮ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಕ್ಯೂಟ್‌ ಆಗಿ ಚಟಪಟ ಅಂತ ಮಾತಾಡೋ ಈ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ತುಂಬ ಕುತೂಹಲ. ಶಿವಣ್ಣನ ಮೂರನೇ ತಂಗಿಯಾಗಿ ಗುಂಡಮ್ಮ ರಶ್ಮಿ ಪಾತ್ರವನ್ನು ಅಪೇಕ್ಷಾ ಶ್ರೀನಾಥ್‌ ನಿರ್ವಹಸಿದ್ದಾರೆ.

Sri Gandhada Gudi Serial: ʻಬಿಗ್‌ ಬಾಸ್‌ʼನಿಂದ ಎಲಿಮಿನೇಟ್‌ ಆಗಿದ್ದ ಮಂಜು ಭಾಷಿಣಿ ಈಗ ಕಿರುತೆರೆಗೆ ಎಂಟ್ರಿ

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು ಭಾಷಿಣಿ

Manju Bhashini In Sri Gandhada Gudi Serial: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಿಂದ ಹೊರಬಂದ ಬಳಿಕ, ಕಲರ್ಸ್‌ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀ ಗಂಧದ ಗುಡಿ'ಗೆ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ. ಇವರು ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

ʻನಾಯಿ ಇದೆ ಎಚ್ಚರಿಕೆʼ ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ

Nayi Ide Eccharike Movie: ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ 'ನಾಯಿ ಇದೆ ಎಚ್ಚರಿಕೆ' ಸಿನಿಮಾ ನವೆಂಬರ್ 28 ರಂದು ಬಿಡುಗಡೆಯಾಗುತ್ತಿದೆ. ಡಾ. ಲೀಲಾಮೋಹನ್ ಪಿವಿಆರ್ ನಾಯಕರಾಗಿರುವ ಈ ಚಿತ್ರವನ್ನು ಕಲಿ ಗೌಡ ನಿರ್ದೇಶಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ, ಜೊಂಬಿ (Zombie) ಜಾನರ್‌ನಲ್ಲಿ ಮೂಡಿಬಂದಿದೆ.

BBK 12: ಮಿಸ್ಟೇಕ್‌ ಮಾಡಿದ ಸ್ಪರ್ಧಿಗಳಿಗೆ ಹೊಸ ಅಧಿಕಾರ ಕೊಟ್ಟ ʻಕಿಚ್ಚʼ ಸುದೀಪ್;‌ ಇದು ಜಾರಿಯಾಗುತ್ತಾ?

Bigg Boss 12: ಸ್ಪರ್ಧಿಗಳಿಗೆ ʻಕಿಚ್ಚʼ ಸುದೀಪ್‌ ಕೊಟ್ಟ ಹೊಸ ಅಧಿಕಾರ ಏನು?

BBK 12 Ashwini Gowda: ಬಿಗ್ ಬಾಸ್ ಮನೆಯಲ್ಲಿ ಏಕವಚನ ಬಳಕೆಯಿಂದ ದೊಡ್ಡ ಜಗಳಗಳು ನಡೆಯುತ್ತಿದ್ದ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿರ್ದಿಷ್ಟವಾಗಿ ಅಶ್ವಿನಿ ಗೌಡ ಅವರ ಸುದೀಪ್ ಪ್ರಶ್ನೆ ಮಾಡಿದ್ದಾರೆ. "ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ ಕಿಚ್ಚ ಸುದೀಪ್‌ ಸ್ಪರ್ಧಿಗಳು ಹೊಸ ಅಧಿಕಾರವನ್ನು ಕೊಟ್ಟಿದ್ದಾರೆ.

BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್‌ ನಾನ್‌ಸ್ಟಾಪ್‌ ನಗು!

ವೀಕ್ಷಕರ ಆಸೆ ಈಡೇರಿಸಿದ ಗಿಲ್ಲಿ; ಸುದೀಪ್ ಮುಂದೆ ಮರುಕಳಿಸಿದ ವೈರಲ್ ದೃಶ್ಯ

Bigg Boss Kannada 12 Gilli Nata Comedy: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರಂತೆಯೇ ಗಿಲ್ಲಿ ನಟ ಅವರು ಅನುಕರಣೆ ಮಾಡಿದ್ದರು. ಇದನ್ನು ನೋಡಿದ್ದ ವೀಕ್ಷಕರು ಸಖತ್‌ ಎಂಜಾಯ್‌ ಮಾಡಿದ್ದರು. ಇದೀಗ Super Sunday With Kiccha Sudeep ಸಂಚಿಕೆಯಲ್ಲಿ 'ಕಿಚ್ಚ' ಸುದೀಪ್ ಅವರು ಎದುರು ಕೂಡ ಗಿಲ್ಲಿ ನಟ ಈ ಮಿಮಿಕ್ರಿಯನ್ನು ಮಾಡಿ ತೋರಿಸಿದ್ದಾರೆ. ಅಂದಹಾಗೆ, ಇದು ವೀಕ್ಷಕರ ಆಶಯವಾಗಿತ್ತು.

‌BBK 12: ʻನಗಾಡ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?ʼ; ಅದೊಂದು ತಪ್ಪಿಗಾಗಿ ಅಶ್ವಿನಿ - ಜಾಹ್ನವಿಗೆ ಕಿಚ್ಚನ ಸಖತ್‌ ಕ್ಲಾಸ್!

BBK 12: ಜಾಹ್ನವಿ ಮೇಲೆ ಸುದೀಪ್‌ ಸಿಕ್ಕಾಪಟ್ಟೆ ಗರಂ!

Bigg Boss Kannada 12 Kichcha Sudeep: ಈ ವಾರದ 'ಕಿಚ್ಚನ ಪಂಚಾಯತಿ'ಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಸುದೀಪ್ ಸಖತ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಪದೇಪದೇ ಪಿಸುದನಿಯಲ್ಲಿ ಮಾತಾಡಿ ರೂಲ್ಸ್‌ ಬ್ರೇಕ್‌ ಮಾಡಿ, ಶಿಕ್ಷೆ ಅನುಭವಿಸಿದ ಮೇಲೆಯೂ ನಕ್ಕಿದ್ದಕ್ಕೆ ಜಾಹ್ನವಿಗೆ ಕಿಚ್ಚ ಗರಂ ಆದರು. "ರೂಲ್ಸ್‌ ಬ್ರೇಕ್‌ ಮಾಡಿ ನಗ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?" ಎಂದು ಪ್ರಶ್ನಿಸಿದರು.

Bigg Boss Kannada 12:  ಗಿಲ್ಲಿ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದ ಕಾವ್ಯ;  ಬೆಸ್ಟ್‌ ಫ್ರೆಂಡ್‌ ವಿರುದ್ಧ ತಿರುಗಿ ಬಿದ್ದಿದ್ದೇಕೆ ಕಾವು?

ಗಿಲ್ಲಿ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದ ಕಾವು!

Gilli Nata: ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಯಾರು ಮಾಡುತ್ತಿದ್ದಾರೆ? ಎಂದು ಸುದೀಪ್‌ ಪ್ರಶ್ನೆ ಇಟ್ಟರು. ಈಗ ಸುದೀಪ್‌ ಅವರ ಮುಂದೆ ಗಿಲ್ಲಿ ವಿರುದ್ಧವೇ ಕಾವ್ಯ ಆರೋಪ ಮಾಡಿದ್ದಾರೆ. ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಕಾವ್ಯ ಹೇಳಿದ್ದಾರೆ. ಈ ಪ್ರೋಮೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

IFFI 2025: IFFI ಪ್ರೀಮಿಯರ್‌ನಲ್ಲಿ ಕನ್ನಡದ 'ರುಧಿರ್ವನ' ಸಿನಿಮಾ ಹೌಸ್ ಫುಲ್!

IFFI ಪ್ರೀಮಿಯರ್‌ನಲ್ಲಿ ಕನ್ನಡದ 'ರುಧಿರ್ವನ' ಸಿನಿಮಾ ಹೌಸ್ ಫುಲ್!

IFFI : ರುಧಿರ್ವನ ಸಿನಿಮಾದಲ್ಲಿ ಪವನಾ ಗೌಡ, ಭೀಮ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಅವಿನಾಶ್‌ ರೈ, ಅರ್ಜುನ್‌ ಕಜೆ, ಅಪೂರ್ವ ತಾರಾಬಳಗದಲ್ಲಿದ್ದಾರೆ. ಇದೊಂದು ಹಾರರ್‌ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ.

Shah Rukh Khan: ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

ದೇಶ ಕಾಪಾಡುವ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

Global Peace Honours 2025: ಶಾರುಖ್‌ ಅವರು ಭಾವಪೂರ್ಣ ಭಾಷಣ ಮಾಡಿದರು. ನಟ ಭಾರತೀಯ ಸೈನಿಕರ ಚೈತನ್ಯ ಮತ್ತು ಶೌರ್ಯಕ್ಕೆ ನಮನ ಸಲ್ಲಿಸಿದರು .ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

Bigg Boss Kannada 12: ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ! ಗಿಲ್ಲಿ ಹೇಳಿದ್ದೇನು?

ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ!

Ashwini Gowda: ಅಶ್ವಿನಿ ಹಾಗೂ ಜಾಹ್ನವಿ ಅವರು ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದರು. ಈ ವಿಚಾರವನ್ನ ಕಿಚ್ಚ ಸುದೀಪ್‌ ಹೇಳಿದ್ದಾರೆ. ಆ ಬಗ್ಗೆ ಪ್ರಶ್ನೆ ಬಂದಾಗ, ಗಿಲ್ಲಿ ಅವರು , ʻಆ ರೂಮ್‌ನಲ್ಲಿ ನಾವು ಮಲಗಿದ್ದೆವು. ಸಖತ್‌ ನೆಗೆಟಿವ್‌ ಎನರ್ಜಿ ಎಂದಿದ್ದಾರೆ. ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದರು. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್‌ ಬಾಸ್‌ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದರು. ಜಾಹ್ನವಿ ಅವರು ಅಶ್ವಿನಿ ಅವರಿಗೆ ದೃಷ್ಟಿ ತೆಗೆಯುತ್ತಾ, ಗಿಲ್ಲಿ ಕಣ್ಣು, ರಘು ಕಣ್ಣು, ರಾಶಿಕಾ, ರಿಷಾ ಕಣ್ಣು , ಬಿಗ್‌ ಬಾಸ್‌ ಮನೆಯವರ ಎಲ್ಲ ಕಣ್ಣು ಹೋಗಲಿ ಅಂತ ದೃಷ್ಟಿ ತೆಗೆದಿದ್ದರು.

Bigg Boss Kannada 12: ಆತ್ಮೀಯರಾದ ಅಶ್ವಿನಿ ಅವರೇ ಸೇಫ್‌ ಆಗಬೇಕು ಎಂದ ಗಿಲ್ಲಿ! ಕಾರಣ ಏನು?

ಆತ್ಮೀಯರಾದ ಅಶ್ವಿನಿ ಅವರೇ ಸೇಫ್‌ ಆಗಬೇಕು ಎಂದ ಗಿಲ್ಲಿ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಹಾಗೂ ಗಿಲ್ಲಿ ಗಲಾಟೆ ಎಷ್ಟೋ ಬಾರಿ ಮಿತಿ ಮೀರಿದೆ. ಆದರೂ ಗಿಲ್ಲಿ ಅವರು ಸಾಕಷ್ಟು ಬಾರಿ ಅಶ್ವಿನಿ ಅವರನ್ನು ಬಿಟ್ಟು ಕೊಡಲ್ಲ. ಆಟ ಆಡುವಾಗ, ಅಶ್ವಿನಿ ಅವರನ್ನೇ ಟಾರ್ಗೆಟ್‌ ಮಾಡುತ್ತ ಆಡ್ತಾರೆ. ಅದು ಅವರಿಗೆ ಸಾಕಷ್ಟು ಬಾರಿ ಪ್ಲಸ್‌ ಕೂಡ ಆಗಿದೆ. ಆದರೀಗ ನಾಮಿನೇಷನ್‌ ಸಮಯದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರು ಸೇಫ್‌ ಆಗಬೇಕು ಎಂದಿದ್ದಾರೆ. ಗಿಲ್ಲಿ ಹೇಳಿದ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

Bigg Boss Kannada 12: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!

ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!

Ashwini Gowda: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ಅಶ್ವಿನಿ ಅವರು ಜಗಳ ಮಾಡೋ ಭರದಲ್ಲಿ ಇಡೀ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದರು. ಉಪವಾಸ ಕೂಡ ಮಾಡಿದರು. ತಮಗೆ ಅವಮಾನ ಆಗಿದೆ ಎಂದರು. ಈ ಬಗ್ಗೆ ಕಿಚ್ಚ ಖಡಕ್‌ ಆಗಿ ಮಾತನಾಡಿದ್ದಾರೆ. ಅಶ್ವಿನಿ ಆಡಿಯೋ ಒಟ್ಟು ಮಾಡಿ ಹಾಕಿ ಮಾತಿನಲ್ಲೇ ಲಾಕ್ ಮಾಡಿದ್ದಾರೆ ಕಿಚ್ಚ.

Bigg Boss Kannada 12: ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!

ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!

Rakshitha Shetty: ಈ ವಾರ ಕಿಚ್ಚ, ರಕ್ಷಿತಾ ಆಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿ, ಈ ಹಿಂದೆ ಕೆಲವೊಮ್ಮೆ ಅನಗತ್ಯ ವಿಚಾರಗಳಿಗೆ ನಾನು ಪ್ರಾಮುಖ್ಯತೆ ಕೊಟ್ಟು ತಪ್ಪು ಮಾಡಿದ್ದೆ. ಆದರೆ ನೀವು ಹೇಳಿದ ಮೇಲೆ ಮನವರಿಕೆ ಆಯ್ತು ಎಂದಿದ್ದಾರೆ. ಕಿಚ್ಚ ಸುದೀಪ್‌ ಅವರು ರಕ್ಷಿತಾ ಅವರ ಆಟದ ಕುರಿತಾಗಿಯೂ ಹೊಗಳಿದ್ದಾರೆ.

SS Rajamouli : ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ರಾಮ್ ಗೋಪಾಲ್ ವರ್ಮಾ!  ಏನ್ ಹೇಳಿದ್ರು?

ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ರಾಮ್ ಗೋಪಾಲ್ ವರ್ಮಾ! ಏನ್ ಹೇಳಿದ್ರು?

SS Rajamouli : ವಾರಣಾಸಿ ಗ್ಲೋಬ್ ಟ್ರಾಟರ್ ಕಾರ್ಯಕ್ರಮದ ಸಂದರ್ಭದಲ್ಲಿ ದೇವರ ಬಗ್ಗೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮಾಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಆ ಬಳಿಕ ರಾಜಮೌಳಿ ಅವರು ವಿವಾದದ ಮಧ್ಯದಲ್ಲಿ ಸಿಲುಕಿದರು. ರಾಜಮೌಳಿವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈಗ ರಾಮ್ ಗೋಪಾಲ್ ವರ್ಮಾ ರಾಜಮೌಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

Oscars 2026: ಆಸ್ಕರ್​​ಗೆ ಎಂಟ್ರಿ ಕೊಟ್ಟ ಮಹಾವತಾರ ನರಸಿಂಹ! ಆನಿಮೇಟೆಡ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಹೊಂಬಾಳೆ ಸ್ಪರ್ಧೆ

Oscars 2026: ಆಸ್ಕರ್​​ಗೆ ಎಂಟ್ರಿ ಕೊಟ್ಟ ಮಹಾವತಾರ ನರಸಿಂಹ!

Mahavatar Narsimha : ಜುಲೈ 25, 2025 ರಂದು ಬಿಡುಗಡೆಯಾದ 'ಮಹಾವತಾರ ನರಸಿಂಹ' ಚಿತ್ರವು 50 ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಕಲೆಕ್ಷನ್ ಸಾಧಿಸಿತು. ಈ ಚಿತ್ರವು OTT ಯಲ್ಲಿಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಅನಿಮೇಷನ್ ಚಲನಚಿತ್ರವಾಗಿದೆ . ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತು. ಇದೀಗ 2026ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಸಲ್ಲಿಸಲ್ಪಟ್ಟಿದ್ದ ಅಶ್ವಿನ್ ಕುಮಾರ್ ನಿರ್ದೇಶನದ 2D ಮತ್ತು 3D ಅನಿಮೇಟೆಡ್ ಚಿತ್ರವನ್ನು ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದ ಅಡಿಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

Nadubettu Appanna:  "ನಡುಬೆಟ್ಟು ಅಪ್ಪಣ್ಣ" ಚಿತ್ರಕ್ಕೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ

ಅರೆ ಭಾಷೆಯ "ನಡುಬೆಟ್ಟು ಅಪ್ಪಣ್ಣ'' ಸಿನಿಮಾದಿಂದ ಬಿಗ್‌ ಅಪ್‌ಡೇಟ್‌

Anupama Sharadhi: ಮೂಲತಃ ಗಾಯಕಿಯಾಗಿರುವ ಅನುಪಮ ಶರಧಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಅವರು ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ನಟರಾಜ್ ಹೊನ್ನವಳ್ಳಿ "ನಡುಬೆಟ್ಟು ಅಪ್ಪಣ್ಣ"ನಾಗಿ ಅಭಿನಯಿಸಿದ್ದಾರೆ. ಸುಮತಿ, ನಿಶಾಂತ್, ಜಗನ್ನಾಥ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಜೀವನ್ ಸುಳ್ಯ ಕೆರೆಮೂಲೆ, ಲಾಲಿತ್ಯ ಮುಂತಾದವರು ಅಭಿನಯಿಸಿದ್ದಾರೆ.

Bigg Boss Kannada 12: ಎಮೋಷನಲ್ ಬ್ಲಾಕ್​​ಮೇಲ್ ಮಾಡ್ತೀದ್ದೀರಾ? ಊಟ ಬಿಟ್ಟಿದ್ದು ಯಾಕೆ? ಅಶ್ವಿನಿಗೆ ಕಿಚ್ಚನ ಕ್ಲಾಸ್‌

ಎಮೋಷನಲ್ ಬ್ಲಾಕ್​​ಮೇಲ್ ಮಾಡ್ತೀದ್ದೀರಾ? ಅಶ್ವಿನಿಗೆ ಕಿಚ್ಚನ ನೇರ ಪ್ರಶ್ನೆ

Ashwini Gowda: ಈ ವಾರ ಬಿಗ್‌ ಬಾಸ್‌ ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಅಶ್ವಿನಿ ಅವರನ್ನ ಗರಂ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಯಾಕೆ ಊಟ ಬಿಟ್ಟಿರಿ ಅನ್ನೋದೇ ಅರ್ಥ ಆಗಿಲ್ಲ. ಮುಖಕ್ಕೆ ಹೊಡೆಯುವ ರೀತಿ ಎಲ್ಲ ಇವತ್ತು ಹೇಳುವೆ ಎಂದು ಗರಂ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್‌. ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ಇನ್ನು ಈ ಮನೆಯಲ್ಲಿ ವುಮನ್‌ ಕಾರ್ಡ್‌ ಬೇಡ ಎಂದು ಅಶ್ವಿನಿಗೆ ಖಡಕ್‌ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್‌.

Nandamuri Balakrishna : ಶಿವಣ್ಣನನ್ನು ನೋಡಿಯೇ ಲುಕ್‌ ಕಾಪಿ ಮಾಡ್ದೆ! ಬಾಲಯ್ಯ ಹೇಳಿದ್ದು ಯಾವ ಸಿನಿಮಾ ಬಗ್ಗೆ?

ಶಿವಣ್ಣನನ್ನು ನೋಡಿಯೇ ಲುಕ್‌ ಕಾಪಿ ಮಾಡ್ದೆ ಎಂದ ಬಾಲಯ್ಯ! ಯಾವ ಸಿನಿಮಾ?

Shiva Rajkumar: ಈ ಸಿನಿಮಾದ ಟ್ರೇಲರ್ ಲಾಂಚ್ ಈ ವೆಂಟ್ ನವೆಂಬರ್ 21ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಬಾಲಯ್ಯ ಅವರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡು ಭಾವುಕರಾದರು. ಇದಲ್ಲದೆ, ಬಾಲಕೃಷ್ಣ ಅವರೊಂದಿಗಿನ ಬಹುತಾರಾಗಣದ ಬಗ್ಗೆ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Mark Movie: ಕಿಚ್ಚ ಸುದೀಪ್‌ ʻಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ; ಗ್ರಾಹಕರಿಗೆ ಇರೋ ವಿಶೇಷ ಆಫರ್ ಏನು?

ʻಮಾರ್ಕ್' ಜೊತೆ ಏರ್‌ಟೆಲ್ ಒಪ್ಪಂದ; ಗ್ರಾಹಕರಿಗೆ ಇರೋ ವಿಶೇಷ ಆಫರ್ ಏನು?

Sudeep: ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು. . ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ಅ ಭಿನಯದ 'ಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.

Loading...