ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

ʻಸರ್ಕಾರಿ ನೌಕರಿ ಇಷ್ಟವಿಲ್ಲ, ನಟನೆ ಮೇಲೆಯೇ ಆಸಕ್ತಿʼ; ನಟಿ ನಂದಿನಿ ಆತ್ಮಹತ್ಯೆ ಕಾರಣ ಬಹಿರಂಗ, ಡೆತ್‌ನೋಟ್‌ನಲ್ಲಿ ಏನಿದೆ?

ನಟಿ ನಂದಿನಿ ಡೆತ್‌ನೋಟ್ ಲಭ್ಯ; ಸರ್ಕಾರಿ ಕೆಲಸವೇ ಸಾವಿಗೆ ಕಾರಣವಾಯ್ತಾ?

Actress Nandini CM Death: ನಟಿ ನಂದಿನಿ ಸಿ ಎಂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಡೆತ್‌ ನೋಟ್‌ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ, ತಮಗೆ ಇಷ್ಟವಿಲ್ಲದಿದ್ದರೂ ಸರ್ಕಾರಿ ನೌಕರಿ ಸೇರುವಂತೆ ಇದ್ದ ಒತ್ತಡವೇ ಸಾವಿಗೆ ಪ್ರೇರಣೆ ಎಂದು ಉಲ್ಲೇಖಿಸಲಾಗಿದೆ. ತಂದೆಯ ನಿಧನದ ನಂತರ ಸಿಕ್ಕಿದ್ದ ಅನುಕಂಪದ ಆಧಾರಿತ ಸರ್ಕಾರಿ ಕೆಲಸವನ್ನು ನಿರಾಕರಿಸಿ, ನಟನೆಯಲ್ಲಿ ಮುಂದುವರಿಯಬೇಕೆಂಬ ಉದ್ದೇಶ ಅವರದಾಗಿತ್ತು ಎನ್ನಲಾಗಿದೆ.

Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!

ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್ ; ಮುಹೂರ್ತ ಫಿಕ್ಸ್!

vijay devarakonda : ಟಾಲಿವುಡ್‌ನ ಅತ್ಯಂತ ಕ್ಯೂಟ್‌ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಸುದ್ದಿ ಈಗ ಬಿಸಿ ವಿಷಯವಾಗಿದೆ. ಅಕ್ಟೋಬರ್‌ನಲ್ಲಿಯೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಸೆಲೆಬ್ರಿಟಿ ಜೋಡಿ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿಯನ್ನು ಅವರ ಆಪ್ತ ಮೂಲಗಳು ಬಹಿರಂಗಪಡಿಸಿವೆ. ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ವರದಿಯಾಗಿದೆ.

Raj B Shetty: ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌! ರಿಲೀಸ್‌ ಡೇಟ್‌ ಕೂಡ ಅನೌನ್ಸ್‌

ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌!

Rakkasapuradhol Official Teaser : ‘ಸು ಫ್ರಂ ಸೋ’ ಸಿನಿಮಾ ಇಂಡಸ್ಟ್ರಿ ಹಿಟ್ ಆದ ಬಳಿಕ, ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾವೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಒಂದರ ನಂತರ ಒಂದಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು, ರಾಜ್ ತಮ್ಮದೇ ಆದ ಶೈಲಿಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ವಿಭಿನ್ನ ಅವತಾರ ತಾಳಿದ್ದಾರೆ

Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್‌!

ಗಿಲ್ಲಿ ಪಕ್ಕಾ ಪ್ಲೇಯರ್! ಸೂರಜ್‌ ರಿಯಾಕ್ಷನ್‌ ಏನು?

Gilli Nata: ಸೂರಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಬಿಗ್​ ಬಾಸ್​ನಿಂದ ಎಲಿಮಿನೇಟ್ ಆಗಿ ಆಚೆ ಬಂದಿರುವ ಸೂರಜ್ ಸಿಂಗ್, ವಿಶ್ವವಾಣಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಬಿಗ್​ಬಾಸ್ ಮನೆಯಲ್ಲಿನ ಅನುಭವಗಳನ್ನು ಹಂಚಿಕೊಂಡರು. ಹಾಗೆ ಈ ಸೀಸನ್​ನಲ್ಲಿ ಗಿಲ್ಲಿ ಅವರು ಬಿಗ್​ಬಾಸ್​​​ ಗೆಲ್ಲಬಹುದು ಎಂದಿದ್ದಾರೆ

Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾನೆ ಕಾರಣ;  ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ!

ಮಾಳು ಮನೆಗೆ ಹೋಗೋಕೆ ರಕ್ಷಿತಾನೆ ಕಾರಣ; ಕೂಗಾಡಿದ ಸ್ಪಂದನಾ!

Spandana Rakshitha: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಮನೆಯ ಕ್ಯಾಪ್ಟನ್‌ (Captain) ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್‌ (Nominate) ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್‌ ಮಾಡುವ ಅಧಿಕಾರವನ್ನು ಬಿಗ್ ಬಾಸ್‌ ಗಿಲ್ಲಿಗೆ ನೀಡಲಾಗಿದೆ. ರಕ್ಷಿತಾ ಅವರು ಕಾವ್ಯ (Kavya Shaiva) ಎದುರಾಳಿಯಾಗಿ, "ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಇದೀಗ ಸ್ಪಂದನಾ ಬಗ್ಗೆಯೂ ಹೊಸ ಆರೋಪ ಮಾಡಿದ್ದಾರೆ.

Bigg Boss Kannada 12:  ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ಎದುರು ಅಬ್ಬರಿಸಿದ ಅಶ್ವಿನಿ ಗೌಡ

ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ವಿರುದ್ಧ ಅಶ್ವಿನಿ ಗರಂ

Ashwini Gowda Gilli Nata: ಈ ವಾರ ಗಿಲ್ಲಿ ನಟ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇಷ್ಟೂ ದಿನ ಮನೆಯಲ್ಲಿ ಸೋಮಾರಿತನ ತೋರಿದ್ದ ಗಿಲ್ಲಿ ವಿರುದ್ಧ ಇದೀಗ ಅಶ್ವಿನಿ ಗರಂ ಆಗಿದ್ದಾರೆ. ಈ ಮೊದಲು ಬೇರೆ ಅವರು ಕ್ಯಾಪ್ಟನ್‌ ಆದಾಗ ಕೆಲಸ ಮಾಡಲು ಸೋಮಾರಿತನ ತೋರಿದ್ದ ಗಿಲ್ಲಿ, ಈಗ ಅವರೇ ಕ್ಯಾಪ್ಟನ್ ಆಗಿದ್ದು, ಬೇರೆಯವರು ಸರಿಯಾಗಿ ಕೆಲಸ ಮಾಡದೇ ಇರದ ಕಾರಣ ಗರಂ ಆಗಿದ್ದಾರೆ. ಇನ್ನು ಅಶ್ವಿನಿ ಅವರಿಗೆ ಏಕವಚನ ಬಳಸಿದ್ದಾರೆ. ಇದು ಅಶ್ವಿನಿ ಅವರ ಕೋಪ ನೆತ್ತಿಗೇರಿದೆ.

Ram Charan: ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್‌

ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕೂಗಿದ ಜನ! ಮುಜುಗರಕ್ಕೀಡಾದ ನಟ

Yash: ರಾಮ್ ಚರಣ್ ಅವರ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಜಗಪತಿ ಬಾಬು ಅವರನ್ನು ಅಪ್ಪಲ ಸೂರಿಯಾಗಿ ಪರಿಚಯಿಸಲಾಗಿದೆ,ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ (Direction)ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಪಾಪರಾಜಿಗಳು ರಾಮ್‌ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ಎಂ ದು ಭಾವಿಸಿದ್ದಾರೆ.‌

Actress Nandini: ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ; ಕಾರಣವಾದ್ರೂ ಏನು?

ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ

Actress: ಕನ್ನಡದ ಖ್ಯಾತ ಸೀರಿಯಲ್ ನಟಿ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿಯಲ್ಲಿ ನಟಿಸಿದ್ದರು. ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೂಲತಃ ಕೊಟ್ಟೂರಿನವರಾದ ನಂದಿನಿ ಬೆಂಗಳೂರಿನಲ್ಲಿ ವಾಸವಿದ್ದರು.

ಚೈತ್ರಾ ಆಚಾರ್‌ ಹೊಸ ಸಿನಿಮಾಕ್ಕೆ LSD ಟೈಟಲ್;‌ ಅಮ್ಮನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ ಗಾಯಕಿ ಎಂಡಿ ಪಲ್ಲವಿ

LSD Movie: ನಟಿ ಚೈತ್ರಾ ಆಚಾರ್‌ಗೆ ತಾಯಿಯಾದ ಗಾಯಕಿ ಎಂಡಿ ಪಲ್ಲವಿ!

Chaitra J Achar New Movie: ಚೈತ್ರಾ ಆಚಾರ್‌ ನಟನೆಯ ಹೊಸ ಸಿನಿಮಾಕ್ಕೆ 'LSD' (Laila's Sweet Dream) ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಅವರು ನಟನೆಗೆ ಮರಳಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಈ ಚಿತ್ರವು ತಾಯಿ ಮತ್ತು ಮಗಳ ಬಾಂಧವ್ಯದ ಕಥೆಯನ್ನು ಹೊಂದಿದ್ದು, ಹಿರಿಯ ನಟ ಅವಿನಾಶ್ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌

Prabhas : ನಿರ್ದೇಶಕ ಮಾರುತಿ ಅವರ ಹಾರರ್ ಕಾಮಿಡಿ ಚಿತ್ರ ದಿ ರಾಜಾ ಸಾಬ್ ನ ಹೊಸ ಟ್ರೇಲರ್ ಸೋಮವಾರ ಬಿಡುಗಡೆಯಾಯಿತು. ಪ್ರಭಾಸ್ , ಸಂಜಯ್ ದತ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌ ಕಂಡು ಪ್ರಭಾಸ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸಿನಿಮಾದ ಎರಡನೇ ಟ್ರೇಲರ್​​ನಲ್ಲಿ ಪ್ರಭಾಸ್ ಅವರ ಗೆಟಪ್ ಗಮನ ಸೆಳೆದಿದೆ. ಕಥೆ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದೆ.

Bigg Boss Kannada 12: ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ!  ಬಿಗ್‌ಬಾಸ್‌ ಯಾರೇ ಗೆದ್ರೂ ನಾನು ಒಪ್ಪಲ್ಲ; ಮಾಳು

ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ! ಎಲಿಮಿನೇಷನ್​ ಬಗ್ಗೆ ಮಾಳು ಬೇಸರ

Malu Nipanal: ಬಿಗ್‌ ಬಾಸ್‌ ಮನೆಯಿಂದ ಮಾಳು ನಿಪನಾಳ ಅವರು ಔಟ್‌ ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ ಇದ್ದ ಕಾರಣ ಸೂರಜ್‌ ಬಳಿಕ ಮಾಳು ಎಲಿಮಿನೇಟ್‌ ಆದರು. ಇದೀಗ ಸಂದರ್ಶನಗಳಲ್ಲಿ ಮಾಳು ಅವರು ಗಿಲ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ನಾನು ಹೊರಬಂದಿರುವುದಕ್ಕೆ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ. ಗಿಲ್ಲಿ ಅಲ್ಲ, ಬೇರೆ ಯಾರೇ ಬಿಗ್‌ಬಾಸ್‌ ಗೆದ್ದರೂ ನನಗೆ ಒಪ್ಪಿಗೆ ಇಲ್ಲ ಎಂದಿದ್ದಾರೆ.

Year Ender 2025: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸಂಖ್ಯೆಯ ಸಿನಿಮಾಗಳು ರಿಲೀಸ್;‌ 255ರಲ್ಲಿ ನಿರ್ಮಾಪಕರನ್ನು ಸೇಫ್‌ ಮಾಡಿದ ಚಿತ್ರಗಳೆಷ್ಟು?

2025ರ ಕನ್ನಡ ಸಿನಿಮಾಗಳ ರಿಪೋರ್ಟ್ ಕಾರ್ಡ್! ಗೆಲುವಿನ ಪ್ರಮಾಣ ಎಷ್ಟು?

2025ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಟ್ಟು 255 ಸಿನಿಮಾಗಳು (248 ಥಿಯೇಟರ್ + 7 ಒಟಿಟಿ) ತೆರೆಕಂಡಿವೆ. ಆದರೆ ಈ ಬೃಹತ್ ಸಂಖ್ಯೆಯಲ್ಲಿ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ 10ನ್ನೂ ದಾಟಿಲ್ಲ ಎಂಬುದು ಕಹಿ ಸತ್ಯ. ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ಮತ್ತು ರಾಜ್ ಬಿ ಶೆಟ್ಟಿ ತಂಡದ 'ಸು ಫ್ರಮ್ ಸೋ' ಚಿತ್ರಗಳು ಈ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಾಗಿ ಹೊರಹೊಮ್ಮಿವೆ. ಉಳಿದಂತೆ ಶೇ. 95ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

Thalapathy Vijay: ಚೆನ್ನೈಗಿಂತ ಮೊದಲು ಬೆಂಗಳೂರಿನಲ್ಲಿ ‌ʻಜನ ನಾಯಗನ್‌ʼ ಅಡ್ವಾನ್ಸ್‌ ಬುಕಿಂಗ್ ಶುರು; ಟಿಕೆಟ್‌ ರೇಟ್ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!

ಬೆಂಗಳೂರಿನಲ್ಲಿ 'ಜನ ನಾಯಗನ್' ಬುಕಿಂಗ್ ಓಪನ್! ಟಿಕೆಟ್‌ ದರ ಎಷ್ಟು ಗೊತ್ತಾ?

Thalapathy Vijay's Jana Nayagan: 'ಜನ ನಾಯಗನ್' ಸಿನಿಮಾವು ಜನವರಿ 9ರಂದು ತೆರೆಕಾಣಲಿದ್ದು, ಚೆನ್ನೈಗಿಂತ ಮೊದಲೇ ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಕರ್ನಾಟಕದ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮುಂಜಾನೆ 6:15ರ ಶೋಗಳ ಟಿಕೆಟ್ ದರವು ಸಿನಿಪ್ರಿಯರಿಗೆ ಶಾಕ್‌ ನೀಡಿದೆ.

BBK 12: ಕ್ಯಾಪ್ಟನ್ ಆದಕೂಡಲೇ ವರಸೆ ಬದಲಿಸಿದ್ರಾ ಗಿಲ್ಲಿ ನಟ? ಮನೆಯವರ ಸಿಟ್ಟಿಗೆ ಕಾರಣವಾಯ್ತಾ ಮಾತಿನ ಮಲ್ಲನ ಅದೊಂದು ನಿರ್ಧಾರ?

BBK 12: ಕ್ಯಾಪ್ಟನ್ ಆದ ಮೇಲೆ ಗಿಲ್ಲಿಗೆ ಬಂತಾ 'ಕೊಂಬು'?

Gilli Nata: ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಮೊದಲ ದಿನವೇ ಗಿಲ್ಲಿ ನಟ ಹವಾ ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿ ಧ್ರುವಂತ್ ಮತ್ತು ರಾಶಿಕಾ ಅವರನ್ನು ನಾಮಿನೇಟ್ ಮಾಡಿರುವ ಗಿಲ್ಲಿ ವಿರುದ್ಧ 'ಫೇವರಿಸಂ' ಆರೋಪ ಕೇಳಿಬಂದಿದೆ.

Kiccha Sudeep: 4 ದಿನಗಳಲ್ಲಿ ʻಮಾರ್ಕ್‌ʼ ಬಾಚಿಕೊಂಡ ಹಣವೆಷ್ಟು? ಚಿತ್ರತಂಡದಿಂದಲೇ ಬಂತು ನೋಡಿ ಅಧಿಕೃತ ಮಾಹಿತಿ

ಮೊದಲ ವೀಕೆಂಡ್‌ನಲ್ಲಿ 'ಮಾರ್ಕ್' ಗಳಿಸಿದ್ದೆಷ್ಟು? ಇಲ್ಲಿದೆ ರಿಪೋರ್ಟ್‌

Mark Movie Day 4 Collection: ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ 'ಮಾರ್ಕ್' ಸಿನಿಮಾ 4 ದಿನಗಳಲ್ಲಿ ಎಷ್ಟು ಗಳಿಕೆ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕ್ರಿಸ್‌ಮಸ್ ರಜೆಯ ಲಾಭ ಪಡೆದ ಈ ಚಿತ್ರ, ಕರ್ನಾಟಕದಾದ್ಯಂತ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

33 ವರ್ಷಗಳ ಸಿನಿ ಪಯಣಕ್ಕೆ ನಟ ವಿಜಯ್‌ ವಿದಾಯ; ದಳಪತಿಯ ಕೊನೇ ಸಿನಿಮಾದ ಆಡಿಯೋ ಲಾಂಚ್‌ ಹೇಗಿತ್ತು? ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

Photos: 'ದಳಪತಿ' ವಿಜಯ್‌ ಕೊನೇ ಸಿನಿಮಾದ ಆಡಿಯೋ ಲಾಂಚ್‌ನ ಹೇಗಿತ್ತು?

ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ. ಈ ಅದ್ಭುತ ಕಾರ್ಯಕ್ರಮವು ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ಐತಿಹಾಸಿಕ ಆಡಿಯೋ ಲಾಂಚ್ ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Year Ender 2025: ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್‌ 10 ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ

2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಟಾಪ್‌ 10 ಸಿನಿಮಾಗಳ ಪಟ್ಟಿ

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಉತ್ತಮ ಸಿನಿಮಾಗಳು ತೆರೆಕಂಡು, ಬಾಕ್ಸ್‌ ಆಫೀಸ್‌ನಲ್ಲಿ ಹವಾ ಮಾಡಿವೆ. ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ದೊಡ್ಡಮಟ್ಟದ ಕಮಾಯಿ ಮಾಡುವಲ್ಲಿ ಹಿಂದೆ ಬೀಳಲಿಲ್ಲ ಅನ್ನೋದು ವಿಶೇಷ. ಸದ್ಯ ವಿವಿಧ ಭಾಷೆಗಳಲ್ಲಿ ತೆರೆಕಂಡ ಭಾರತದ ‌ಟಾಪ್‌ 10 ಸಿನಿಮಾಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ. ವರ್ಷಾಂತ್ಯದಲ್ಲಿ ತೆರೆಗೆ ಬಂದ ಧುರಂಧರ್‌ ಸಿನಿಮಾವು ಮೊದಲ ಸ್ಥಾನದಲ್ಲಿ ಇದೆ.

Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು:  ಕೆಳಗೆ ಬಿದ್ದ ದಳಪತಿ ವಿಜಯ್‌

Thalapathy Vijay: ನೂಕುನುಗ್ಗಲಿಗೆ ಕೆಳಗೆ ಬಿದ್ದ ದಳಪತಿ ವಿಜಯ್‌!

Malaysia: ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಭಾನುವಾರ ದಳಪತಿ ವಿಜಯ್ (Thalapathy Vijay) ಮಲೇಷಿಯಾದಿಂದ ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲಿನಲ್ಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು. ಮಲೇಷ್ಯಾದಿಂದ ಹಿಂದಿರುಗಿದ ನಂತರ, ಭಾರಿ ಜನಸಮೂಹದಿಂದ ಸುತ್ತುವರೆದಿದ್ದ ( Falls After Being Mobbed ) ವಿಜಯ್ (Vijay), ನಿರ್ಗಮನ ಪ್ರದೇಶದ ಕಡೆಗೆ ನಡೆದುಕೊಂಡು ಹೋದರು ಮತ್ತು ಕಾರನ್ನು ಹತ್ತುವ ಕೆಲವೇ ಕ್ಷಣಗಳ ಮೊದಲು, ಜನಸಂದಣಿ ಹೆಚ್ಚಾದಾಗ ಎಡವಿ ಬಿದ್ದರು.

Bigg Boss Kannada 12: ಗಿಲ್ಲಿ ಬೇಡ, ಅವರ ಥರ ಇರೋ ಹುಡುಗ ಬೇಕು; ರಕ್ಷಿತಾ ಪುಟ್ಟಿಗೆ ಆಯ್ತು ಕ್ರಶ್‌!

ಗಿಲ್ಲಿ ಬೇಡ, ಅವರ ಥರ ಇರೋ ಹುಡುಗ ಬೇಕು; ರಕ್ಷಿತಾಗೆ ಆಯ್ತು ಕ್ರಶ್‌!

Gilli Rakshitha: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ಜೋಡಿ ಅಂದ್ರೆ ವೀಕ್ಷಕರಿಗೆ ಅತ್ಯಂತ ಮೆಚ್ಚುಗೆ. ಇವರಿಬ್ಬರನ್ನು ಹೊರತು ಪಡಿಸಿ ಗಿಲ್ಲಿ ಜೊತೆ ರಕ್ಷಿತಾ ಕೂಡ ಕ್ಲೋಸ್‌ ಆಗಿದ್ದಾರೆ. ಕೆಲವೊಮ್ಮೆ ಕಾವ್ಯ ವಿಚಾರಕ್ಕೆ ರಕ್ಷಿತಾ ಗರಂ ಆಗೋದು ನೋಡಿ ಪಾಸೆಸಿವ್‌ನೆಸ್‌ ಇದೆ ಅಂತ ನೆಟ್ಟಿಗರು ಕಮೆಂಟ್‌ ಮಾಡಿದ್ದೂ ಉಂಟು. ಇದೀಗ ಅದು ಸತ್ಯವಾದಂತಿದೆ. ಗಿಲ್ಲಿ ರೀತಿಯ ಹುಡುಗ ಬೇಕು, ಆದರೆ ಗಿಲ್ಲಿ ಬೇಡ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.

Suniel Shetty : ಇದೊಂದೇ ಕಾರಣಕ್ಕೆ  40 ಕೋಟಿ ರೂ ಜಾಹೀರಾತು ತಿರಸ್ಕರಿಸಿದ  ಸುನಿಲ್ ಶೆಟ್ಟಿ

ಇದೊಂದೇ ಕಾರಣಕ್ಕೆ 40 ಕೋಟಿ ರೂ ಜಾಹೀರಾತು ತಿರಸ್ಕರಿಸಿದ ಸುನಿಲ್ ಶೆಟ್ಟಿ

Tobacco Brand: ಮೂರು ದಶಕಗಳಿಗೂ ಹೆಚ್ಚಿನ ಕಾಲ ವೃತ್ತಿಜೀವನದೊಂದಿಗೆ, ಸುನಿಲ್ ಶೆಟ್ಟಿ (Suniel Shetty) ಬಹುಮುಖ ನಟನಾಗಿ ಮಾತ್ರವಲ್ಲದೆ ತಮ್ಮ ತತ್ವಗಳಿಂದಲೂ ಖ್ಯಾತಿಯನ್ನು ಗಳಿಸಿದ್ದಾರೆ. ದುಡ್ಡಿಗಿಂತ ನನಗೆ ನನ್ನ ಮೌಲ್ಯ ಮುಖ್ಯ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತಂಬಾಕು ಸಂಬಂಧಿತ ಬ್ರ್ಯಾಂಡ್‌ನ ಜಾಹೀರಾತು ನನ್ನ ಬಳಿ ಬಂದಿತ್ತು ಎಂದು ಹೇಳಿರುವ ಸುನಿಲ್ ಶೆಟ್ಟಿ ಆ ಜಾಹೀರಾತಿಗಾಗಿ ಅವರು ನನಗೆ 40 ಕೋಟಿ ಹಣ ಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ.

Halli Power: ಹಳ್ಳಿ ಪವರ್ ಸೀಸನ್ 1 ವಿನ್ನರ್ ಆದ ರಗಡ್ ರಶ್ಮಿ; ಟ್ರೋಫಿ ಜೊತೆ ಸಿಕ್ಕ ಹಣ ಎಷ್ಟು?

ಹಳ್ಳಿ ಪವರ್ ಸೀಸನ್ 1 ವಿನ್ನರ್ ಆದ ರಗಡ್ ರಶ್ಮಿ

Ragad Rashmi: ಹಳ್ಳಿ ಪವರ್‌ ಒಂದು ವಿಭಿನ್ನ ಶೋ ಆಗಿದ್ದು ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ನ ತ್ಯಜಿಸಿ ಹಳ್ಳಿಗೆ ಬಂದು ಹಳ್ಳಿ ಜೀವನವನ್ನು ಸಾಗಿಸುವುದು ಈ ಟಾಸ್ಕ್‌. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್‌ ಈ ಶೋ ನ ಮತ್ತೊಂದು ಹೈಲೈಟ್ಆ ಗಿತ್ತು. ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಇದ್ದ, ‘ಹಳ್ಳಿ ಪವರ್’ ಶೋ ಈಗ ಪೂರ್ಣಗೊಂಡಿದೆ.

Bigg Boss Kannada 12: ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟ ಗಿಲ್ಲಿ; ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತಿನಿ ಅಂತ ಸವಾಲ್‌!

ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟ ಕ್ಯಾಪ್ಟನ್‌ ಗಿಲ್ಲಿ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಈಗ ಗಿಲ್ಲಿ ನಟ ಕ್ಯಾಪ್ಟನ್‌ ಆಗಿದ್ದಾರೆ. ಗಿಲ್ಲಿ ಈಗ ತಮ್ಮ ರೂಲ್‌ ಶುರು ಮಾಡಿದ್ದಾರೆ. ಆದ್ರೆ ಗಿಲ್ಲಿ ಹೇಳಿದ ಮಾತನ್ನು ಅಶ್ವಿನಿ ಕೇಳುತ್ತಿಲ್ಲ. ಇದರಿಂದಾಗಿ ಇಬ್ಬರ ಮಧ್ಯೆ ವಾದ ವಿವಾದ ನಡೆದಿದೆ. ಅಶ್ವಿನಿ ಅವರಿಗೆ ಮಲಗಲು ಕೂಡ ಬಿಡ್ತಾ ಇಲ್ಲ ಗಿಲ್ಲಿ. ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟಿದ್ದಾರೆ ಗಿಲ್ಲಿ ನಟ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಮಾಳು ನಿಪನಾಳ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಮಾಳು ನಿಪನಾಳ ಔಟ್‌!

Double elimination: ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಬೆನ್ನಲ್ಲೇ ಮಾಳು ನಿಪನಾಳ‌ ಮನೆಯಿಂದ ಔಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿಈ ವಾರ ಡಬಲ್‌ ಎಲಿಮಿನೇಶನ್‌ ಇದೆ ಎಂದು ಬಿಗ್‌ ಬಾಸ್‌ ಈಗಾಗಲೇ ಅನೌನ್ಸ್‌ ಮಾಡಿದ್ದಾರೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೂರಜ್‌ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾಹಾಗೂ ಮಾಳು ಅವರು ಡೇಂಜರ್‌ ಝೋನ್‌ನಲ್ಲಿ ಇದ್ದಿದ್ದರು. ಅದರಂತೆ ಮಾಳು ಔಟ್‌ ಆಗಿದ್ದಾರೆ.

Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ

ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ?

snageetha: ಬಿಗ್‌ ಬಾಸ್‌ ಕನ್ನಡ 10 ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ ಸಖತ್‌ ಗಮನ ಸೆಳೆದ ಜೋಡಿ. ಇಬ್ಬರ ಮಧ್ಯೆ ಜಗಳ ಆಗಿದೆ ಅಂತ ಗುಲ್ಲಾಗಿತ್ತು. ಕಾರ್ತಿಕ್‌ ಹಾಗೂ ಸಂಗೀತಾ ಮಧ್ಯೆ ಜಗಳ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸಂಗೀತಾ ಅವರ ಆಡಿಯೋ ಲಾಂಚ್‌ಗೆ ಕಾರ್ತಿಕ್‌ ಬಂದಿದ್ದಾರೆ. ಸಂಗೀತಾ ಶೃಂಗೇರಿ ಅವರ ಆಲ್ಬಮ್‌ ಸಾಂಗ್‌ ಲಾಂಚ್‌ ಆಗಿದೆ. ಅಲ್ಲಿ ನಮ್ರತಾ ಗೌಡ, ಕಾರ್ತಿಕ್‌ ಮಹೇಶ್‌ ಕೂಡ ಆಗಮಿಸಿದ್ದಾರೆ. ಕಾರ್ತಿಕ್‌ ಅವರು ಸಂಗೀತಾಗೆ ವಿಶ್‌ ಮಾಡಿದ್ದಾರೆ.

Loading...