ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಬಿಗ್‌ ಬಾಸ್‌ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

Sudeep: ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್‌ . ಆದರೆ ಇತ್ತೀಚಿನ ಸೀಸನ್​​ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

Kichcha Sudeep: ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ? ಕಿಚ್ಚನ ನೇರ ಮಾತು

ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ?

Darshan Sudeep: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ ಇದೀಗ ಮತ್ತೆ ಸುದೀಪ್‌ ಅವರ ಮುಂದೆ ದರ್ಶನ್‌ ವಿಚಾರವಾಗಿ ಪ್ರಶ್ನೆ ಬಂದಿದೆ.

Kichcha Sudeep: ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ?  ವಾರ್ನ್‌ ಮಾಡೋದು ತಪ್ಪಾ? ; ಕಿಚ್ಚ ಸುದೀಪ್ ಪ್ರಶ್ನೆ

ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ಕಿಚ್ಚ ಸುದೀಪ್ ಪ್ರಶ್ನೆ

Sandalwood: ಹುಬ್ಬಳ್ಳಿಯಲ್ಲಿ ಮಾರ್ಕ್‌ ಸಿನಿಮಾದ ಮಾತನಾಡುವಾಗ ಪೈರಸಿ ಹೆಸರನ್ನು ಉಲ್ಲೇಖ ಮಾಡದೇ ಹೇಳಿದ್ದರಿಂದ ಈ ವಿಚಾರ ದೊಡ್ಡದಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುದೀಪ್‌ ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ ಹೇಳಿಕೆಯನ್ನು ಸಮರ್ಥಿಸಿ ಮತ್ತಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ.

Rowdy Janardhana Teaser: ರಗಡ್‌ ಲುಕ್‌ನಲ್ಲಿ ವಿಜಯ್ ದೇವರಕೊಂಡ;  ‘ರೌಡಿ ಜನಾರ್ಧನ್’ ಟೀಸರ್‌ ಔಟ್‌, ರಶ್ಮಿಕಾ ಹೇಳಿದ್ದೇನು?

ರಗಡ್‌ ಲುಕ್‌ನಲ್ಲಿ ವಿಜಯ್ ದೇವರಕೊಂಡ; ರಶ್ಮಿಕಾ ಹೇಳಿದ್ದೇನು?

Rowdy Janardhana: ವಿಜಯ್ ದೇವರಕೊಂಡ , ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್‌ (ಡಿಸೆಂಬರ್ 23) ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ.'ಕಿಂಗ್‌ಡಮ್' ನಂತರ ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರವು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 'ವಿಡಿ 15' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿದ್ದ ಮುಂಬರುವ ಚಿತ್ರಕ್ಕೆ ಈಗ 'ರೌಡಿ ಜನಾರ್ದನ' ಎಂದು ಹೆಸರಿಡಲಾಗಿದೆ.

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ!

Rashika Shetty: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್‌ ಶುರುವಾಗಿದೆ. ಇದೀಗ ಪ್ರೋಮೋ ಔಟ್‌ ಆಗಿದೆ. ಧನುಷ್‌ , ರಾಶಿಕಾ ಹಾಗೂ ಸೂರಜ್‌ ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ರಾಶಿಕಾ ಶೆಟ್ಟಿ ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ. ಧನುಷ್‌ ಅವರಿಗೂ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ಧನುಷ್‌ ಈಗ ಭಾವುಕರಾಗಿದ್ದಾರೆ.

ಜನವರಿ 29ರಿಂದ ಬೆಂಗಳೂರು ಚಲನಚಿತ್ರೋತ್ಸವ; ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

ಬೆಂಗಳೂರು ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ

Bengaluru International Film Festival: ಬೆಂಗಳೂರಿನಲ್ಲಿ ಜನವರಿ 29ರಿಂದ ಫೆಬ್ರವರಿ 06ರವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿರುವ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.

ʻ45ʼ ಸಿನಿಮಾದ ಕಥೆಯನ್ನು ಅರ್ಜುನ  ಜನ್ಯ ಮೊದಲು ಹೇಳಿದ್ದು ಯಾರಿಗೆ? ಶಿವಣ್ಣನಿಗೆ ಚಿತ್ರತಂಡ ಋಣಿಯಾಗಿರುವುದು ಏಕೆ?

45 Movie: ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಕಾಂಬೋ ನೋಡಲು ಫ್ಯಾನ್ಸ್ ಕಾತರ

Shivarajkumar: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಚಿತ್ರಕ್ಕೆ ಶಿವಣ್ಣ ಅವರ ಬದ್ಧತೆ ಕಂಡು ಚಿತ್ರತಂಡ ಋಣಿಯಾಗಿದೆ. ತೀವ್ರ ಆರೋಗ್ಯ ಸಮಸ್ಯೆಯಿದ್ದರೂ ಚಿತ್ರೀಕರಣ ಮುಗಿಸಿ ನಂತರ ಚಿಕಿತ್ಸೆಗೆ ತೆರಳಿದ ಅವರ ವೃತ್ತಿಪರತೆ ಸಿನಿಮಾದ ಶಕ್ತಿಯಾಗಿದೆ ಎಂದು ಚಿತ್ರತಂಡ ಹೇಳಿದೆ.

Photos: ʻಮಾರ್ಕ್‌ʼ ಸಿನಿಮಾದಲ್ಲಿ ಸುದೀಪ್ ಮಾಸ್‌ ಅವತಾರ; ‌ಕಿಚ್ಚನ ಅಭಿಮಾನಿಗಳು ಫುಲ್‌ ಖುಷ್‌ ಆಗೋದು ಗ್ಯಾರಂಟಿ

Photos: 'ಮಾರ್ಕ್'ನಲ್ಲಿ ಕಿಚ್ಚನ ರುದ್ರಾವತಾರ: ಸುದೀಪ್ ಫ್ಯಾನ್ಸ್ ಫಿದಾ!

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಈಗಾಗಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಚಿತ್ರದ ಕಾಳಿ ಸಾಂಗ್ ಬಿಡುಗಡೆಯಾಗಿದೆ. ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿಗೆ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಗೀತೆಗಿದೆ. ಕಿಚ್ಚ ಕಾಳಿ ಹಾಡಿನಲ್ಲಿ ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ಈಗ ಸಖತ್‌ ವೈರಲ್‌ ಆಗುತ್ತಿದೆ. ಇಲ್ಲಿವೆ ನೋಡಿ ಮೇಕಿಂಗ್‌ ಸ್ಟಿಲ್ಸ್

Rowdy Janardhana: ʻನೋವುಂಡ ವ್ಯಕ್ತಿಯ ಜೀವನಚರಿತ್ರೆʼ ಹೇಳಲು ಬಂದ ವಿಜಯ್‌ ದೇವರಕೊಂಡ; ರಶ್ಮಿಕಾ ಮಂದಣ್ಣ ʻಆಲ್‌ ದಿ ಬೆಸ್ಟ್‌ʼ ಹೇಳಿದ್ದು ಹೀಗೆ

ರೌಡಿಯಾದ ವಿಜಯ್‌ ದೇವರಕೊಂಡ; ರಶ್ಮಿಕಾ ʻಆಲ್‌ ದಿ ಬೆಸ್ಟ್‌ʼ ಹೇಳಿದ್ದು ಹೀಗೆ!

Rowdy Janardhana Update: ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ರವಿ ಕಿರಣ್ ಕೋಲಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ರೌಡಿ ಜನಾರ್ದನ' ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. 1980ರ ದಶಕದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ವಿಜಯ್ ರಕ್ತಸಿಕ್ತ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

BBK 12: ʻಆ ವಿಚಾರದಲ್ಲಿ ಅಶ್ವಿನಿ ಗೌಡ ಎಕ್ಸ್‌ಪರ್ಟ್‌, ರಕ್ಷಿತಾ ಇನ್ನೊಸೆಂಟ್‌ ಕಿಲಾಡಿʼ; ರಜತ್‌ ಹಿಂಗ್ಯಾಕೆ ಹೇಳಿದ್ರು?

Bigg Boss 12: ಆ ಒಬ್ಬ ಸ್ಪರ್ಧಿಗೆ ʼಇನ್ನೋಸೆಂಟ್ ಕಿಲಾಡಿʼ ಎಂದ ರಜತ್!‌

Rajath on Ashwini and Rakshitha: ಬಿಗ್ ಬಾಸ್ ಅತಿಥಿಯಾಗಿ ಮಿಂಚಿದ ರಜತ್, ಅಶ್ವಿನಿ ಗೌಡ ಅವರ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಅವರು ಯಾವುದೇ ವಿಚಾರಕ್ಕಾದರೂ ನೂರಾರು ಆಯಾಮಗಳನ್ನು ನೀಡಿ ಮಾತನಾಡುವ ಶಕ್ತಿ ಹೊಂದಿದ್ದಾರೆ, ಅಂತಹವರಿಂದ ತಾವು ದೂರವಿರುವುದಾಗಿ ರಜತ್ ತಿಳಿಸಿದ್ದಾರೆ.

Amruthadhaare Serial : ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ.

Bigg Boss Kannada 12: ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌, ಗಿಲ್ಲಿ ಫ್ಯಾನ್ಸ್‌ ಖುಷ್‌

ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿಗೆ ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಗಿಲ್ಲಿ ಕಾಮಿಡಿ, ಗಿಲ್ಲಿ ಸ್ಟ್ರಾಟಜಿ ಜೊತೆಗೆ ಗಿಲ್ಲಿ ಆಟ ಆಡುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತೆ. ಇದೀಗ ನಾಮಿನೇಶನ್‌ ವೇಳೆಯೂ ಗಿಲ್ಲಿ ಮಾಸ್ಟರ್ ಪ್ಲಾನ್‌ ಎಲ್ಲರಿಗೂ ಅಚ್ಚರಿ ತಂದಿತು. ಬಿಗ್ ಬಾಸ್ ನೀಡಿದ ಹೊಸ ಅವಕಾಶವನ್ನು ರಾಶಿಕಾ ತಪ್ಪಾಗಿ ಊಹಿಸಿ ನಾಮಿನೇಟ್ ಆದರು.

Ragini Dwivedi:  ಪ್ರಾಣ, ಪ್ರೀತಿ ಕೊಟ್ಟರೂ ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

Sandalwood: ನಟಿ ರಾಗಿಣಿ ದ್ವಿವೇದಿ ಕನ್ನಡದ ತುಪ್ಪದ ಬೆಡಗಿ ಎಂದೇ ಹೆಸರುವಾಸಿ. ರಾಗಿಣಿ ಸಿನಿಮಾರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕನ್ನಡ ಚಿತ್ರರಂಗದ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಕೇಸ್‌ ಆರೋಪದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ರಾಗಿಣಿ ನಿರ್ದೋಷಿ ಎಂಬ ತೀರ್ಪು ಬಂದಿತ್ತು.

Bigg Boss Kannada 12: ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

Gilli Nata: ಬಿಗ್‌ ಬಾಸ್‌ ಸೀಸನ್‌ 12 ಫಿನಾಲೆಗೆ ಕೆಲವೇ ದಿನಗಳು ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ.

Bigg Boss Kannada 12: ಗಿಲ್ಲಿ ವರ್ತನೆಯಿಂದ ಕಾವ್ಯಾಗೆ ಕಿರಿಕಿರಿ ;  ಮುಲಾಜಿಲ್ಲದೇ ಮಾನ, ಮರ್ಯಾದೆ ಇಲ್ಲ ಎಂದ ಕಾವು!

Bigg Boss Kannada 12: ಗಿಲ್ಲಿ ವರ್ತನೆಯಿಂದ ಕಾವ್ಯಾಗೆ ಕಿರಿಕಿರಿ

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ. ಆದರೆ ಗಿಲ್ಲಿ ವರ್ತನೆಯಿಂದಾಗಿ ಬೇಸರ ಹೊರ ಹಾಕಿದ್ದಾರೆ ಕಾವ್ಯ. ಸುದೀಪ್‌ ಈ ಬಗ್ಗೆ ತಿಳಿ ಹೇಳಿದರೂ ಗಿಲ್ಲಿ ಬದಲಾದಂತಿಲ್ಲ.

Keerthy Suresh: ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಮೂವಿ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌! ಸ್ಟ್ರೀಮಿಂಗ್‌ ಎಲ್ಲಿ?

ಕೀರ್ತಿ ಸುರೇಶ್ ‘ರಿವಾಲ್ವರ್ ರೀಟಾ’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Keerthy Suresh : ಥಿಯೇಟ್ರಿಕಲ್ ಪ್ರದರ್ಶನದ ನಂತರ, ಈ ಚಿತ್ರವು ಈಗ OTT ಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಂಥೋನಿ ವರ್ಗೀಸ್ ಪೆಪೆ ಅವರು ನಟಿ ಕೀರ್ತಿ ಸುರೇಶ್ ಅವರೊಂದಿಗೆ ಮೊದಲ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

Year Ender 2025: ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು; ʼಕಾಂತಾರʼ ಚಿತ್ರಕ್ಕೆ ಎಷ್ಟನೇ ಸ್ಥಾನ?

ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು

Google Search: ನಾವು ಅಧಿಕೃತವಾಗಿ 2025ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ.

Shivarajkumar: ಶೀಘ್ರದಲ್ಲೇ ʻಜೈಲರ್‌ 2ʼ ಶೂಟಿಂಗ್‌ಗೆ ಶಿವಣ್ಣ ಹಾಜರ್; ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌ ಕೊಟ್ಟ ʻಹ್ಯಾಟ್ರಿಕ್‌ ಹೀರೋʼ

Jailer 2 Update: ರಜನಿಕಾಂತ್‌ ಜೊತೆ ಶೂಟಿಂಗ್‌ಗೆ ಶಿವಣ್ಣ ರೆಡಿ

Jailer 2 Movie Update: 'ಜೈಲರ್' ಸಿನಿಮಾದಲ್ಲಿನ 'ನರಸಿಂಹ' ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್, ಈಗ 'ಜೈಲರ್ 2' ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಜನವರಿ ಎರಡನೇ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿರುವುದಾಗಿ ಶಿವಣ್ಣ ಖಚಿತಪಡಿಸಿದ್ದಾರೆ.

Drishyam 3 Release Date: ದೃಶ್ಯಂ 3 ರಿಲೀಸ್‌ ಡೇಟ್‌ ಅನೌನ್ಸ್‌; ಮೋಹನ್‌ ಲಾಲ್‌ ಮುಂಚೆಯೇ  ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

ಮೋಹನ್‌ ಲಾಲ್‌ ಮುಂಚೆಯೇ ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

Drishyam: ದೃಶ್ಯಂ 3 ನಿರ್ಮಾಪಕರು ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರದ ಬಿಡುಗಡೆ (Release Date) ದಿನಾಂಕವನ್ನು ಘೋಷಿಸಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ಪಾತ್ರಕ್ಕೆ ಜೀವ ತುಂಬಿದ್ದರು. ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ಆ ಗಿತ್ತು ಚಿತ್ರ.

Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈಗಾಗಲೇ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಜತ್‌ ಹಾಗೂ ಚೈತ್ರಾ ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಎರಡು ವಾರಗಳ ಕಾಲ ವೋಟಿಂಗ್‌ ಲೈನ್‌ ಓಪನ್‌ ಕೂಡ ಇರಲಿಲ್ಲ. ಹೀಗಾಗಿ ಈ ವಾರ ಬಹುತೇಕ ಎರಡು ಸ್ಪರ್ಧಿಗಳು ಆದರೂ ಎಲಿಮಿನೇಟ್‌ ಆಗುತ್ತಾರೆ ಎನ್ನಲಾಗುತ್ತಿದೆ. ಇದೀಗ ನಾಮಿನೇಶನ್‌ ಪ್ರಕ್ರಿಯೆಲ್ಲಿ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

Gilli Nata: ʻಬಿಗ್‌ ಬಾಸ್‌ ಮನೆಯಲ್ಲಿ ದಿ ಡೆವಿಲ್‌ ಸಿನಿಮಾ ಟ್ರೇಲರ್‌ ಪ್ರಸಾರ ಮಾಡಿಲ್ಲವೇಕೆʼ; ಗಿಲ್ಲಿ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

Gilli Nata: ಬಿಗ್ ಬಾಸ್‌ನಲ್ಲಿ 'ಡೆವಿಲ್' ಟ್ರೇಲರ್‌ ಹಾಕದಿರಲು ಇದೇ ಕಾರಣ!

BBK 12 Vs The Devil Controversy: ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಸಿನಿಮಾಗಳ ಪ್ರಚಾರ ನಡೆಯುತ್ತಿದ್ದರೂ, ಗಿಲ್ಲಿ ನಟ ಅಭಿನಯದ 'ದಿ ಡೆವಿಲ್' ಚಿತ್ರದ ಟ್ರೇಲರ್ ಪ್ರಸಾರ ಮಾಡಿರಲಿಲ್ಲ. ಇದು ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ಮೂಡಿಸಿತ್ತು.

ʻಧುರಂಧರ್‌ʼ ಚಿತ್ರದ ಕಲೆಕ್ಷನ್‌ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು; 17 ದಿನಗಳಿಗೆ ಆದ ಗಳಿಕೆ ಇಷ್ಟೊಂದಾ?

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ; 17 ದಿನಕ್ಕೆ ಎಷ್ಟಾಯ್ತು ಕಲೆಕ್ಷನ್?

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ 17 ದಿನಗಳಲ್ಲಿ ವಿಶ್ವಾದ್ಯಂತ 870.36 ಕೋಟಿ ರೂ. ಗಳಿಸುವ ಮೂಲಕ 2025ರ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡ ನೀಡಿದ ಅಧಿಕೃತ ಮಾಹಿತಿಯಂತೆ, ಭಾರತದಲ್ಲಿ ಈ ಚಿತ್ರವು 683.46 ಕೋಟಿ ರೂ. (ಗ್ರಾಸ್) ಹಾಗೂ ವಿದೇಶದಲ್ಲಿ 186.90 ಕೋಟಿ ರೂ. ಗಳಿಸಿದೆ.

ಹಾಲಿವುಡ್‌ನ ‘ಅನಕೊಂಡ’ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದ ಹೊಂಬಾಳೆ ಫಿಲ್ಮ್ಸ್‌

ಹೊಂಬಾಳೆ ಫಿಲ್ಮ್ಸ್‌ ಪಾಲಿಗೆ ಹಾಲಿವುಡ್‌ನ ‘ಅನಕೊಂಡ’ ಚಿತ್ರದ ವಿತರಣಾ ಹಕ್ಕು!

Hombale Films Update: ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಹಾಲಿವುಡ್‌ನ ಬಹುನಿರೀಕ್ಷಿತ ‘ಅನಕೊಂಡ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಲಿದೆ. 1997ರ ಮೂಲ ಚಿತ್ರದ ಮೆಟಾ-ರಿಬೂಟ್ ಆಗಿರುವ ಈ ಸಿನಿಮಾ ಆಕ್ಷನ್-ಕಾಮಿಡಿ ಶೈಲಿಯಲ್ಲಿದ್ದು, ಪಾಲ್ ರಡ್ ಮತ್ತು ಜಾಕ್ ಬ್ಲಾಕ್ ಅಂತಹ ಸ್ಟಾರ್ ನಟರು ಅಭಿನಯಿಸಿದ್ದಾರೆ.

Vrusshabha: ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ ಎಂದ ಡಿಕೆ ಶಿವಕುಮಾರ್; ಬಾಲಿವುಡ್‌ ಮಂದಿಯ ಆ ಮಾತು ಕೇಳಿ ಖುಷಿಯಾಗಿದ್ದ ಡಿಸಿಎಂ!

ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ- DCM ಡಿಕೆ ಶಿವಕುಮಾರ್

Vrusshabha Movie Update: ಮಲಯಾಳಂ ನಟ ಮೋಹನ್‌ಲಾಲ್‌ ಹಾಗೂ ಸಮರ್ಜಿತ್ ಲಂಕೇಶ್ ಅಭಿನಯದ 'ವೃಷಭ' ಚಿತ್ರವು ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಮರ್ಜಿತ್ ಅವರ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. "ವೃಷಭ ಎಂದರೆ ಗೂಳಿ, ಈ ಸಿನಿಮಾ ಗೂಳಿಯಂತೆ ದೇಶಾದ್ಯಂತ ಸದ್ದು ಮಾಡಲಿ" ಎಂದು ಹಾರೈಸಿದ್ದಾರೆ.

Loading...