ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Bigg Boss Kannada 12: ಸುದೀಪ್‌ ಮುಂದೆ ಈ ವೀಕೆಂಡ್‌ನಲ್ಲಿ ಅಶ್ವಿನಿ ಡೈಲಾಗ್‌ ಹೇಗಿರತ್ತೆ? ಹಾಗಾದ್ರೆ ಒಮ್ಮೆ ʻಗಿಲ್ಲಿ' ಮಾತು ಕೇಳಿಬಿಡಿ!

ವೀಕೆಂಡ್‌ನಲ್ಲಿ ಅಶ್ವಿನಿ ಡೈಲಾಗ್‌ ಹೇಗಿರತ್ತೆ? ʻಗಿಲ್ಲಿ' ಮಾತು ಕೇಳಿಬಿಡಿ

Bigg Boss Kannada 12: ಅಶ್ವಿನಿ ಅವರು ತಾವು ಕುಡಿದ ಕಪ್​ನ ತೊಳೆಯದೆ ಇಟ್ಟಿದ್ದರು. ಇದನ್ನು ಕ್ಲೀನ್ ಮಾಡುವಂತೆ ಅಶ್ವಿನಿಗೆ ರಘು ಅವರು ಸೂಚಿಸಿದರು. ಆದರೆ, ಇದನ್ನು ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ಅಶ್ವಿನಿ ಹಾಗೂ ರಘು ಮಧ್ಯೆ ಗಲಾಟೆ ಮಿತಮೀರಿತು. ಅಶ್ವಿನಿ ಅವರು ತಮಗೆ ಅವಮಾನ ಆಗಿದೆ ಎಂದು ಆರೋಪಿಸಿದರು. ಇಬ್ಬರ ಮಧ್ಯೆ ವಾಗ್ವಾದ ಜೋರಾಗುತ್ತದೆ. ಮನೆಯಿಂದ ಆಚೆ ಹೋಗ್ತೀನಿ ಅಂತ ಕೂಗಾಡ್ತಾರೆ. ಇತ್ತ ಗಿಲ್ಲಿ ಅವರು ರಘು ಹಾಗೂ ರಿಷಾ ಬಳಿ, ಸುದೀಪ್‌ ಅವರೊಂದಿಗೆ ಅಶ್ವಿನಿ ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ಇಮಿಟೇಟ್‌ ಮಾಡಿ ತೋರಿಸಿದ್ದಾರೆ.

Bigg Boss Kannada 12: ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಗೆದ್ದ ಗಿಲ್ಲಿ! ಅಶ್ವಿನಿಗೆ ಹೀನಾಯ ಸೋಲು

ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಗೆದ್ದ ಗಿಲ್ಲಿ! ಅಶ್ವಿನಿಗೆ ಹೀನಾಯ ಸೋಲು

Gilli Bigg Boss Kannada: ಕಾವ್ಯ ಹಾಗೂ ಸ್ಪಂದನಾ ಉಸ್ತುವಾರಿಗಳಾಗಿದ್ದರೆ, ತಂಡದ ನಾಯಕರುಗಳಾದ ಅಶ್ವಿನಿ ಹಾಗೂ ಗಿಲ್ಲಿ ಆಡಬೇಕಿತ್ತು. ಈ ಹಿಂದೆ ಅಶ್ವಿನಿ ತಂಡ ಎರಡು ಬಾರಿ ವಿನ್‌ ಆದ್ರೆ, ಈ ವಾರ ಗಿಲ್ಲಿ ತಂಡದ ಮೊದಲ ಗೆಲುವು ಇದಾಗಿತ್ತು. ಈ ಗೆಲುವು ತಂದು ಕೊಟ್ಟಿದ್ದೇ ಗಿಲ್ಲಿ. ಅಷ್ಟೇ ಅಲ್ಲ ರಕ್ಷಿತಾ ಅವರು ಕೂಡ ಸಖತ್‌ ಆಕ್ಟಿವ್‌ ಆಗಿ ಆಡಿದ್ದರು.

Varanasi title dispute: ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್‌ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?

ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್‌ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?

Rajamouli Varanasi Title: ನವೆಂಬರ್ 15, 2025 ರ ಶನಿವಾರ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಗ್ಲೋಬ್‌ಟ್ರೋಟರ್ ಫಸ್ಟ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌ಎಸ್ ರಾಜಮೌಳಿ ತಂಡವು 'ವಾರಣಾಸಿ' ಎಂಬ ಶೀರ್ಷಿಕೆ ಬಳಸಿದ್ದು ವಿವಾದಕ್ಕೆ ಕಾರಣವಾಯಿತು. ರಾಜಮೌಳಿ ಅವರು ಸಿನಿಮಾದ ಟೈಟಲ್ ಬದಲಿಸಬೇಕಾದ ಪರಿಸ್ಥಿತಿ ಬಂದರೆ ಸಾಕಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗಲಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡದಾದ ಈವೆಂಟ್ ಮಾಡಲಾಗಿತ್ತು. ಶೀರ್ಷಿಕೆ ವಿವಾದದ ಜೊತೆಗೆ, ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಮಾಡಿದ ಹೇಳಿಕೆಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.

Miss Universe 2025: ಕ್ಯಾಟ್​ವಾಕ್​ನಲ್ಲೇ ಕುಸಿದು ಬಿದ್ದ ಸುಂದರಿ; ಮಿಸ್ ಯೂನಿವರ್ಸ್ ಸ್ಪರ್ಧೆ ವೇಳೆ ನಡೆಯಿತು ದೊಡ್ಡ ಅನಾಹುತ

Miss Universe 2025: ಕ್ಯಾಟ್​ವಾಕ್​ನಲ್ಲೇ ಕುಸಿದು ಬಿದ್ದ ಸುಂದರಿ

Jamaica Gabrielle Henry: ಈ ವರ್ಷ ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿ ( Thailand's Impact Arena in Pak Kret) 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಸೇರಿದಂತೆ ಪ್ರಪಂಚದಾದ್ಯಂತದ 100 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಜಮೈಕಾ ಹೆನ್ರಿ ಅವರು ಕ್ಯಾಟ್​ವಾಕ್​ ಮಾಡುವಾಗ ವೇದಿಕೆಯಿಂದ ಕುಸಿದುಬಿದ್ದಿದ್ದಾರೆ. ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಹೆಜ್ಜೆ ಇಡುತ್ತಿದ್ದಾಗ ಆಕಸ್ಮಿಕವಾಗಿ ವೇದಿಕೆಯ ಅಂಚಿಗೆ ಕಾಲಿಟ್ಟಿದ್ದರಿಂದ ಬಿದ್ದು ಬಿಟ್ಟಿದ್ದಾರೆ. ಹೆನ್ರಿ ಅವರನ್ನು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ. ಏಟು ಸ್ವಲ್ಪ ಹೆಚ್ಚಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Congratulations Brother Review: ಹೊಸತನ ಎಳೆಯೊಂದಿಗೆ ರಂಜಿಸುವ ಈ ಕಾಲದ ಲವ್‌ ಸ್ಟೋರಿ

ರಕ್ಷಿತ್‌ ನಟನೆಯ ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾ ರಿವ್ಯೂ

Congratulations Brother Kannada Movie: ಪ್ರತಾಪ್‌ ಗಂಧರ್ವ್‌ ನಿರ್ದೇಶನ ಮಾಡಿರುವ, ರಕ್ಷಿತ್‌ ನಾಗ್, ಸಂಜನಾ ದಾಸ್‌, ಅನುಷಾ ಮುಖ್ಯಭೂಮಿಕೆಯಲ್ಲಿರುವ ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾವು ನವೆಂಬರ್‌ 21ರಂದು ತೆರೆಗೆ ಬರಲಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ, ಓದಿ.

'ಕಾಂತಾರ' ಬಳಿಕ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ಆರ್ಭಟ; ಮೊದಲ ಹಾಡು ರಿಲೀಸ್

'ಕೊರಗಜ್ಜ' ಚಿತ್ರದ ‌ʻಗುಳಿಗʼ ಸಾಂಗ್ ರಿಲೀಸ್!

Koragajja Movie Song: 'ಕಾಂತಾರ' ಸಿನಿಮಾದ ನಂತರ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ದೈವದ ಬಗ್ಗೆ ಹೇಳಲಾಗಿದೆ. ಸದ್ಯ ಈ ಪಂಜುರ್ಲಿ ಗುಳಿಗ ದೈವದ ಮೇಲೆ ಬರೆದ ಹಾಡೊಂದನ್ನು ಬಾಲಿವುಡ್ ಹೆಸರಾಂತ ಗಾಯಕ ಜಾವೇದ್ ಆಲಿ ಅವರು ಹಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈ ಹಾಡು ಈಗ ರಿಲೀಸ್‌ ಆಗಿದೆ.

Sonam Kapoor : 2ನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

2ನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

Sonam Kapoor Second Pregnancy: ಬಾಲಿವುಡ್​​​ ನಟಿ ಸೋನಮ್ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸ್ಟೈಲಿಶ್ ಫೋಟೋಗಳ ಸರಣಿಯೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡರು.ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಸೋನಮ್ ಕೂಡ ಒಬ್ಬರು. ಅಂತರರಾಷ್ಟ್ರೀಯ ಮಟ್ಟದ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ.

OTT Release This Week: ಸಿನಿ ಪ್ರಿಯರಿಗೆ ಹಬ್ಬ; ʻದಿ ಫ್ಯಾಮಿಲಿ ಮ್ಯಾನ್‌ 3ʼ ಜೊತೆ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು, ಕನ್ನಡ ಚಿತ್ರವೂ ಇದೆ

ʻದಿ ಫ್ಯಾಮಿಲಿ ಮ್ಯಾನ್‌ 3ʼ ಜೊತೆ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು​!

OTT Movies: . ಪ್ರತಿ ವಾರ ಹೊಸ ಹೊಸ ಸರಣಿಗಳು ಬರುವುದರಿಂದ ವೀಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿರುತ್ತದೆ. ಕೆಲವು ವಾರ ಸಪ್ಪೆ ಎನಿಸಿದರೆ ಇನ್ನೂ ಕೆಲವು ವಾರ ಸಾಕಷ್ಟು ಸಿನಿಮಾಗಳು ಒಟ್ಟಾಗಿ ಬರುತ್ತವೆ. ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ. ರಾಜಕೀಯ ಥ್ರಿಲ್ಲರ್‌ಗಳು, ಐತಿಹಾಸಿಕ ಕಥೆಗಳು ಮತ್ತು ಭಾವನಾತ್ಮಕ ಪ್ರೇಮಕಥೆಗಳ ಸಿನಿಮಾಗಳು ಇವೆ. ತಮಿಳು ಚಿತ್ರರಂಗದಲ್ಲಿ ಬಹಳ ಚರ್ಚೆ ಹುಟ್ಟಾಕ್ಕಿದ್ದ 'ಬೈಸನ್'ಹಾಗೂ 'ದಿ ಫ್ಯಾಮಿಲಿಮ್ಯಾನ್ ಸೀಸನ್- 3' ವೆಬ್ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿದೆ.

Rudra Avatara Movie: ಶಶಿಕುಮಾರ್‌ ಪಾದಪೂಜೆ ಮಾಡಿದ್ದಕ್ಕೆ ನಟಿ ತಾರಾ ಅನುರಾಧ ಎಂಎಲ್‌ಸಿ ಆಗಿದ್ರಂತೆ! ಏನಿದು ಹೊಸ ವಿಷ್ಯ?

ನಟ ಶಶಿಕುಮಾರ್‌ ಪಾದಪೂಜೆ ಮಾಡಿದ್ದಕ್ಕೆ ತಾರಾ ಎಂಎಲ್‌ಸಿ ಆಗಿದ್ದು ನಿಜವೇ?

Rudra Avatara Kannada Movie: ಶಶಿಕುಮಾರ್‌ ಮತ್ತು ತಾರಾ ಅನುರಾಧ ಅವರು ಈವರೆಗೂ 26 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶಶಿಕುಮಾರ್‌ ಅವರಿಗೆ ಪಾದಪೂಜೆ ಮಾಡಿದ್ದರಿಂದ ತಾರಾ ಅವರು ಎಂಎಲ್‌ಸಿ ಆದ್ರಂತೆ! ಈ ಆಸಕ್ತಿಕರ ವಿಚಾರವನ್ನು ಕೂಡ ತಾರಾ ಹಂಚಿಕೊಂಡಿದ್ದಾರೆ. ಸದ್ಯ ಇವರಿಬ್ಬರು ರುದ್ರ ಅವತಾರ ಸಿನಿಮಾದಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ.

BBK 12: ಗಿಲ್ಲಿ ನಟ ಕೆಲ ಸ್ಪರ್ಧಿಗಳ ಮೇಲೆ ಏಕವಚನ ಪದ ಬಳಕೆ ಮಾಡೋದ್ಯಾಕೆ? ಅಸಲಿ ವಿಚಾರ ಹೊರಬಿತ್ತು!

BBK 12: ಕೆಲ ಸ್ಪರ್ಧಿಗಳಿಗೆ 'ಗಿಲ್ಲಿ ನಟ' ಬೇಕೆಂದೇ ಗೌರವ ಕೊಡುವುದಿಲ್ಲವೇ?

Bigg Boss Kannada 12 Gilli Nata: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಗೌರವದ ವಿಚಾರವಾಗಿ ದೊಡ್ಡ ಜಗಳವಾಗಿದೆ. ತಮಗೆ ಗೌರವ ಕೊಡುತ್ತಿಲ್ಲ ಎಂದು ಅಶ್ವಿನಿ ಗೌಡ ಗರಂ ಆಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಾವೇಕೆ ಏಕವಚನ ಬಳಸುತ್ತೇನೆ ಎಂದು ಗಿಲ್ಲಿ ನಟ ಕೂಡ ತಿರುಗೇಟು ನೀಡಿದ್ದಾರೆ.

The Devil: ದರ್ಶನ್‌ ಅನುಪಸ್ಥಿತಿಯಲ್ಲಿ ಅಖಾಡಕ್ಕಿಳಿದ ವಿಜಯಲಕ್ಷ್ಮೀ; ʻಡೆವಿಲ್ʼ ಫ್ಯಾನ್ಸ್‌ಗೆ ನೀಡಿದ ಸಂದೇಶವೇನು?

ದರ್ಶನ್‌ ಪರವಾಗಿ The Devil ಸಿನಿಮಾ ಪ್ರಚಾರಕ್ಕಿಳಿದ ಪತ್ನಿ ವಿಜಯಲಕ್ಷ್ಮೀ

The Devil Movie Release Date: 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ ʻದಿ ಡೆವಿಲ್ʼ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮೀ ಅವರು ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಅವರ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿರುವ ವಿಜಯಲಕ್ಷ್ಮೀ, ʻಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳ್ಳಬೇಡಿʼ ಎಂದಿದ್ದಾರೆ.

Dheekshith Shetty: ದಿಢೀರ್‌ ಅಂತ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಟೀಮ್‌ನಿಂದ ಹೊಸ ಅಪ್‌ಡೇಟ್;‌ ದೀಕ್ಷಿತ್‌ ಶೆಟ್ಟಿ ಸಿನಿಮಾ ಯಾವಾಗ ಬರತ್ತೆ?

ದೀಕ್ಷಿತ್‌ ಶೆಟ್ಟಿ Bank Of Bhagyalakshmi ಸಿನಿಮಾದಿಂದ ಬಿಗ್‌ ಅಪ್ಡೇಟ್!‌

Bank Of Bhagyalakshmi Kannada Movie: ನಟ ದೀಕ್ಷಿತ್‌ ಶೆಟ್ಟಿ ಅಭಿನಯದ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಸಿನಿಮಾವು ನವೆಂಬರ್‌ 21ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಚಿತ್ರತಂಡವು ಕೊನೇ ಕ್ಷಣದಲ್ಲಿ ಬಿಡುಗಡೆಯನ್ನು ಮುಂದೂಡಿದೆ. ಈ ಬಗ್ಗೆ ಕ್ಷಮೆ ಯಾಚಿಸಿರುವ ನಿರ್ಮಾಪಕ ಎಚ್ ಕೆ ಪ್ರಕಾಶ್, ಹೊಸ ರಿಲೀಸ್‌ ಡೇಟ್‌ ಅನ್ನು ಘೋಷಿಸಿದ್ದಾರೆ.

Radheyaa Review: ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿಬೀಳುವ ʻರಾಧೇಯʼ!

Radheyaa Review: ಅಜಯ್‌ ರಾವ್‌ ನಟನೆಯ ʻರಾಧೇಯʼ ಸಿನಿಮಾ ವಿಮರ್ಶೆ

Radheyaa Movie Review And Rating: ಅಜಯ್‌ ರಾವ್‌, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ ಅಭಿನಯದ ʻರಾಧೇಯʼ ಸಿನಿಮಾವು ಟ್ರೇಲರ್‌ ಮೂಲಕವೇ ಎಲ್ಲರ ಗಮನಸೆಳೆದಿತ್ತು. ಈ ಚಿತ್ರವೀಗ ತೆರೆಕಂಡಿದೆ. ಹಾಗಾದರೆ, ಈ ಚಿತ್ರ ಹೇಗಿದೆ? ಇಲ್ಲಿದೆ ಮಾಹಿತಿ.

666 Operation Dream Theatre: 6 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ʻಕನ್ನಡತಿʼ ಪ್ರಿಯಾಂಕಾ ಮೋಹನ್!

ಶಿವಣ್ಣ - ಧನಂಜಯ್ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಪ್ರಿಯಾಂಕಾ ಮೋಹನ್!

Actress Priyanka Mohan: ಆರು ವರ್ಷಗಳ ಸುದೀರ್ಘ ವಿರಾಮದ ನಂತರ ʻಕನ್ನಡತಿʼ ಪ್ರಿಯಾಂಕಾ ಮೋಹನ್, ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

Andhra King Taluka Trailer: ಉಪೇಂದ್ರ ಈಗ ‘ಆಂಧ್ರ ಕಿಂಗ್’; ಟಾಲಿವುಡ್‌ನಲ್ಲಿ ʻರಿಯಲ್‌ ಸ್ಟಾರ್‌ʼ ಹವಾ ಜೋರು!

ಉಪೇಂದ್ರ ಈಗ ‘ಆಂಧ್ರ ಕಿಂಗ್’; ʻರಿಯಲ್‌ ಸ್ಟಾರ್‌ʼ ಹವಾ ಜೋರು!

Upendra: ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕತೆ. ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು ಒಂಬತ್ತನೇ ಸಿನಿಮಾ. ತೆಲುಗು ಚಿತ್ರಂಗದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Amruthadhaare Serial: ಮಿಂಚು, ಅಪ್ಪು ಜೊತೆ ಮಗು ಆದ ಗೌತಮ್‌ ! ಆಕಾಶ್‌ಗೆ 'ಅಪ್ಪ' ಅಂದ್ರೆನೇ ಆಕಾಶ

ಮಿಂಚು, ಅಪ್ಪು ಜೊತೆ ಮಗು ಆದ ಗೌತಮ್‌ ! ಆಕಾಶ್‌ಗೆ 'ಅಪ್ಪ' ಅಂದ್ರೆನೇ ಆಕಾಶ

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಗೌತಮ್‌ ಜೊತೆಗೆ ದತ್ತು ಮಗಳು ಮಿಂಚು ಇದ್ದಾಳೆ. ಮಿಂಚು ಭೂಮಿಕಾ ಟೀಚರ್‌ ಆಗಿರುವ ಸ್ಕೂಲ್‌ಗೇ ಸೇರಿದ್ದಾಳೆ. ಗೌತಮ್‌ ಆ ಹುಡುಗಿಯನ್ನ ಕಾಪಾಡಿದ್ದು, ದತ್ತು ತೆಗೆದುಕೊಳ್ಳಲು ಮುಂದಾಗಿರುವ ಬಗ್ಗೆ ಕೇಳಿ ಭೂಮಿಕಾಗೆ ಗೌತಮ್‌ ಮೇಲಿನ ಗೌರವ-ಪ್ರೀತಿ ಇನ್ನಷ್ಟು ಹೆಚ್ಚಾಗಿದೆ.

Bigg Boss Kannada 12: ಅಶ್ವಿನಿಯವರನ್ನ ಮಾತಿನಲ್ಲೇ ತಿವಿದ ಗಿಲ್ಲಿ; ಟಾಸ್ಕ್ ಮಾಸ್ಟರ್ ಅಂತ ಧ್ರುವಂತ್‌ ಪ್ರೂವ್‌!

ಧ್ರುವಂತ್‌ ವಿಚಾರಕ್ಕೆ ಅಶ್ವಿನಿಯವರನ್ನ ಮಾತಿನಲ್ಲೇ ತಿವಿದ ಗಿಲ್ಲಿ!

BBK 12: ಮೊದಲಿಗೆ ಅಶ್ವಿನಿ ಅವರು ಗೇಮ್‌ವೊಂದಕ್ಕೆ ಧನುಷ್‌ ಅವರನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ರು. ಆದರೆ ಇದಕ್ಕೆ ಧ್ರುವಂತ್‌ ಅವರು ಒಪ್ಪಲಿಲ್ಲ. ಬೇರೆಯವರಿಗೂ ಚಾನ್ಸ್‌ ಕೊಡಿ ಎಂದು ಕೂಗಾಡಲು ಶುರು ಮಾಡಿದರು. ಈ ಬಗ್ಗೆಯೇ ಅಶ್ವಿನಿ ಹಾಗೂ ಧ್ರುವಂತ್‌ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಅಶ್ವಿನಿ ವಿರುದ್ಧವೇ ಧ್ರುವಂತ್‌ ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಆಟ ಆಡಿ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ. ಧ್ರುವಂತ್‌ ಇಲ್ಲ ಅಂದಿದ್ರೆ ಸೋಲು ನಿಮ್ಮದೇ ಅನ್ನೋ ಅರ್ಥದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರನ್ನ ಹೀಯಾಳಿಸಿದರು.

Bigg Boss Kannada 12: ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ

ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ

BBK 12: ಈ ಹಿಂದೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿ, ಅಶ್ವಿನಿ ಅವರು ನೋವಲ್ಲಿ ಕಣ್ಣಿರಿಟ್ಟಿದ್ದರು. ಇದೀಗ ಕ್ಯಾಪ್ಟನ್‌ ರಘು ಅವರು ಕೂಡ ಅಶ್ವಿನಿ ಅವರಿಗೆ ಏಕವಚನ ಬಳಕೆ ಮಾಡಿದ್ದು, ಇನ್ನಷ್ಟು ನೋವು ತರಿಸಿದೆ ಅಶ್ವಿನಿ ಅವರಿಗೆ. ಹೀಗಾಗಿ ಊಟ ಬಿಟ್ಟು ಕೂತಿದ್ದಾರೆ. ಮನೆಯವರು ಎಷ್ಟೇ ರಿಕ್ವೆಸ್ಟ್‌ ಮಾಡಿದರೂ ನಾನು ಊಟ ಮಾಡಲ್ಲ ಅಂತ ಕೂತಿದ್ದಾರೆ ಅಶ್ವಿನಿ ಗೌಡ. ಇನ್ನು ಧನುಷ್‌ ಹಾಗೂ ಅಭಿ ಅವರು ಅಶ್ವಿನಿ ಅವರನ್ನು ಸಮಧಾನ ಪಡಿಸಲು ನೋಡಿದರು. ಆದರೆ ಅತ್ತ ರಘು, ಅವರಿಗೆ ರಕ್ಷಿತಾ ಕೂಡ ಕನ್ವಿನ್ಸ್‌ ಮಾಡಲು ನೋಡಿದ್ದಾರೆ .

Bigg Boss Kannada 12:  ಗಿಲ್ಲಿ ವರ್ತನೆ ಕಂಡು ಕಾವ್ಯ ಕಣ್ಣೀರು! ಕಾವು ಮುನಿಸಿಗೆ ಕಾರಣವೇನು?

ಗಿಲ್ಲಿ ವರ್ತನೆ ಕಂಡು ಕಾವ್ಯ ಕಣ್ಣೀರು! ಕಾವು ಮುನಿಸಿಗೆ ಕಾರಣವೇನು?

BBK: ಬಿಗ್‌ ಬಾಸ್‌ ಶುರುವಾದ ಆರಂಭದಲ್ಲಿ ಗಿಲ್ಲಿ ತಮ್ಮ ತಮಾಷೆ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದರು. ರಕ್ಷಿತಾ ಇನ್ನೂ ಕೆಲವರ ಪರವಾಗಿ ಸ್ಟ್ಯಾಂಡ್ ತೆಗೆದುಕೊಂಡಿದ್ದರು. ಕಿಚ್ಚನಿಂದ ಚಪ್ಪಾಳೆ ಸಹ ತೆಗೆದುಕೊಂಡರು. ಆದರೀಗ ಗಿಲ್ಲಿ ಅವರ ಟ್ರ್ಯಾಕ್‌ ಬದಲಾಗಿದೆ.ಟಾಸ್ಕ್ ನಡೆಯುವಾಗ ಗೆಳೆಯರಾದ ಧನುಶ್ ಮತ್ತು ಅಭಿ ಮೇಲೂ ಗಿಲ್ಲಿ ಜಗಳ ಮಾಡಿದರು. ಇಬ್ಬರೂ ಸೇರಿ ಸಮಾಧಾನದಿಂದಲೇ ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೂ ಗಿಲ್ಲಿ ವಾದ ಮುಂದುವರಿಸಿದರು.

Rashmika Mandanna: ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಬೇರೆ ಆಯ್ಕೆ ಇರಲಿಲ್ಲ; ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಆರೋಪ

ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ ಎಂದ ರಶ್ಮಿಕಾ ಮಂದಣ್ಣ

Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ತಮ್ಮ ಹಿಂದಿನ ರಿಲೇಶಿನ್‌ಶಿಪ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಅಂತವರನ್ನ ಮೊದಲು ಆಯ್ಕೆ ಮಾಡಿ ಎಂದು ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್​​​ನಲ್ಲಿ ಇದ್ದೆ ಎಂದು ಪರೋಕ್ಷವಾಗಿ ರಕ್ಷಿತ್‌ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದೆ ತಾವಿದ್ದ ರಿಲೇಷನ್​​ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

BBK 12: ʻನಾವೇನ್‌ ಕೋತಿಗಳಾ? ಕೈಗೊಂಬೆ ಅಲ್ಲ ನಾನುʼ; ಒಂದೇ ಟೀಮ್‌ನಲ್ಲಿದ್ರು ಅಶ್ವಿನಿ ಗೌಡ ಮೇಲೆ ಧ್ರುವಂತ್‌ ರಾಂಗ್!‌

BBK 12: ಅಶ್ವಿನಿ ಗೌಡ ಮೇಲೆ ಏಕಾಏಕಿ ರಾಂಗ್‌ ಆದ ಧ್ರುವಂತ್!‌ ಕಾರಣವೇನು?

Bigg Boss Kannada 12 Dhruvanth: ಅಶ್ವಿನಿ ಗೌಡ ಮತ್ತು ಅವರ ತಂಡದ ಸದಸ್ಯ ಧ್ರುವಂತ್ ನಡುವೆ ಆಟದ ಆಯ್ಕೆಗೆ ಸಂಬಂಧಿಸಿದಂತೆ ಭಾರಿ ಮಾತಿನ ಚಕಮಕಿ ನಡೆಯಿತು. ಧನುಷ್ ಬದಲು ತನಗೆ ಅವಕಾಶ ನೀಡುವಂತೆ ಅಶ್ವಿನಿಗೆ ಧ್ರುವಂತ್ ಒತ್ತಾಯಿಸಿದರು. "ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ, ನಾನು ನಿಮ್ಮ ಕೈಗೊಂಬೆ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಏನಾಯಿತು? ಈ ಸ್ಟೋರಿ ಓದಿ.

ತಮಿಳು Saregamapa ಶೋನಲ್ಲಿ ಕನ್ನಡತಿಯ ಹವಾ! ಫಿನಾಲೆ ತಲುಪಿದ ಗಾಯಕಿ ಶಿವಾನಿ ನವೀನ್‌

ತಮಿಳು Saregamapa ಶೋನಲ್ಲಿ ಫಿನಾಲೆ ತಲುಪಿದ ʻಕನ್ನಡತಿʼ ಶಿವಾನಿ

Saregamapa Seniors Season 5 Finale: ಚಿಕ್ಕಮಗಳೂರಿನ ಪ್ರತಿಭೆ ಶಿವಾನಿ ನವೀನ್‌ ಅವರು ತಮಿಳಿನ 'ಸರಿಗಮಪ ಸೀನಿಯರ್ಸ್ ಸೀಸನ್ 5' ಫಿನಾಲೆ ತಲುಪಿದ್ದಾರೆ. ಈಗಾಗಲೇ ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ 19' ಶೋನಲ್ಲಿ ರನ್ನರ್ ಅಪ್ ಆಗಿದ್ದ ಶಿವಾನಿ, ತಮ್ಮ ವಿಶಿಷ್ಟ ಕಂಠಸಿರಿಯಿಂದ ತಮಿಳು ವೀಕ್ಷಕರ ಮನ ಗೆದ್ದಿದ್ದಾರೆ.

ʻರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯʼ; ಭೇಟಿಯಾದ ಡಿವೈನ್‌ ಸ್ಟಾರ್‌ಗೆ DCM ಡಿಕೆ ಶಿವಕುಮಾರ್‌ ಮೆಚ್ಚುಗೆ

DCM ಡಿಕೆ ಶಿವಕುಮಾರ್‌ರನ್ನು ಭೇಟಿಯಾದ ರಿಷಬ್‌ ಶೆಟ್ಟಿ; ಕಾರಣವೇನು?

Rishab Shetty Meets DCM DK Shivakumar: ನಟ ನಿರ್ದೇಶಕ ರಿಷಬ್‌ ಶೆಟ್ಟಿ ಅವರು 'ಕಾಂತಾರ: ಚಾಪ್ಟರ್‌ 1' ಯಶಸ್ಸಿನ ನಂತರ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್‌ ಅವರು "ನೆಲಮೂಲದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ರಿಷಬ್‌ ಅವರ ಕಾರ್ಯವೈಖರಿ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Nayana: ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ನಯನಾ ವಿರುದ್ಧ ಕಲಬುರಗಿಯಲ್ಲಿ  FIR ದಾಖಲು; ಅಷ್ಟಕ್ಕೂ ಆಗಿದ್ದೇನು?

ʻಕಾಮಿಡಿ ಕಿಲಾಡಿಗಳುʼ ನಯನಾ ವಿರುದ್ಧ FIR ದಾಖಲು!

Comedy Khiladigalu Nayana Atrocity Case: ಕಲಬುರಗಿಯ ಸಬ್‌ಅರ್ಬನ್‌ ಪೊಲೀಸ್ ಠಾಣೆಯಲ್ಲಿ ನಟಿ ನಯನಾ ವಿರುದ್ಧ ದಲಿತ ಸೇನೆಯು ದೂರು ದಾಖಲಿಸಿದೆ. ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಯನಾ ಅವರು ದಲಿತ ಸಮುದಾಯವನ್ನು ಉದ್ದೇಶಿಸಿ ಅವಾಚ್ಯ ಮತ್ತು ನಿಷೇಧಿತ ಪದಗಳನ್ನು ಬಳಸಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Loading...