ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Alpha Trailer: ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಸಿನಿಮಾದ ಟ್ರೇಲರ್ ಔಟ್‌!

ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಟ್ರೇಲರ್ ಔಟ್‌

Alpha Trailer: ನಟಿ ಆಲಿಯಾ ಭಟ್ (Alia Bhat) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಸಿನಿಮಾದ ಟ್ರೇಲರ್ ನೋಡಿ ಅಭಿಮಾನಿಗಳಿಗೆ ಈಗ ಖುಷಿ ಆಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಅಭಿನಯಿಸಿದ್ದಾರೆ ಎಂಬುದು ಟ್ರೇಲರ್ ಮೂಲಕ ಬಹಿರಂಗ ಆಗಿದೆ.ಶಿವ್ ರಾವೈಲ್ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಆಲ್ಫಾ ಚಿತ್ರದಲ್ಲಿ ಆಲಿಯಾ ಭಟ್, ಶಾರ್ವರಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Kannada New Movie: `ನಂದಗೋಕುಲ' ಸೀರಿಯಲ್ ನಟನ ʼಕಾಲಘಟ್ಟʼ ಚಿತ್ರ ರಿಲೀಸ್ ಯಾವಾಗ?

`ನಂದಗೋಕುಲ' ಸೀರಿಯಲ್ ನಟನ ʼಕಾಲಘಟ್ಟʼ ಚಿತ್ರ ರಿಲೀಸ್ ಯಾವಾಗ?

Kannada New Movie: ಕೆ ಪ್ರಕಾಶ್ ಅಂಬಳೆ ಈಗ ಕಾಲಘಟ್ಟ ಎಂಬ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೇ ತಿಂಗಳ 19ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಕುರಿತ ಸುದ್ದಿ ಗೋಷ್ಠಿ ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.‌ ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

Khushbu Sundar: ಟ್ರಾನ್ಸ್ ವ್ಯಕ್ತಿ ಅಂತ ಖುಷ್ಬು ಸುಂದರ್‌ ಮಗಳಿಗೆ ಟ್ರೋಲ್‌;  ಆನಂದಿತಾ ಖಡಕ್‌ ರಿಯಾಕ್ಷನ್‌

ಟ್ರಾನ್ಸ್ ವ್ಯಕ್ತಿ ಅಂತ ಖುಷ್ಬು ಸುಂದರ್‌ ಮಗಳಿಗೆ ಟ್ರೋಲ್‌!

Anandita: ನಿರ್ಮಾಪಕ-ನಟ ಸುಂದರ್ ಸಿ ಅವರ ಪುತ್ರಿಯರಾದ ಅವಂತಿಕಾ ಮತ್ತು ಆನಂದಿತಾ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಮುಂಬರುವ ತಮಿಳು ಚಿತ್ರ ಡಬಲ್ ಆಕ್ಯುಪೆನ್ಸಿಯಲ್ಲಿ ಸೃಜನಶೀಲ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದ ಅವರ ಕಿರಿಯ ಮಗಳು ಆನಂದಿತಾ,'ಟ್ರಾನ್ಸ್ ಪರ್ಸನ್' ಎಂದು ಕರೆಯಲ್ಪಟ್ಟ ಬಗ್ಗೆ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ತನ್ನನ್ನು ಯಾವ ರೀತಿ ಟ್ರೋಲ್‌ (Troll) ಮಾಡುತ್ತಿದ್ದರು ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ಗಂಭೀರ ನರಗಳ ಸಮಸ್ಯೆಯಿಂದ ಬಳಲುತ್ತಿರುವ ಗಾಯಕ ಸೋನು ನಿಗಮ್; ಇಂಥ ಪರಿಸ್ಥಿತಿಯಲ್ಲೂ ಮುಂಬೈ ಲೈವ್ ಕಾನ್ಸರ್ಟ್‌ಗೆ ಸಜ್ಜು!

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗಾಯಕ ಸೋನು ನಿಗಮ್!

ಖ್ಯಾತ ಗಾಯಕ ಸೋನು ನಿಗಮ್ ಅವರು 'ಪಿಂಚ್ಡ್ ನರ್ವ್' (ನರಗಳ ಮೇಲಿನ ಒತ್ತಡ) ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈ-ಡೋಸ್ ಮಾತ್ರೆಗಳಿಂದಾಗಿ ಅವರ ಧ್ವನಿಯಲ್ಲಿ ಏರುಪೇರಾಗಿದ್ದರೂ, ಮುಂಬೈನಲ್ಲಿ ನಿಗದಿಯಾಗಿರುವ ಬೃಹತ್ ಲೈವ್ ಕಾನ್ಸರ್ಟ್‌ನಲ್ಲಿ ಹಾಡುವುದಾಗಿ ಅಭಿಮಾನಿಗಳಿಗಾಗಿ ಭರವಸೆ ನೀಡಿದ್ದಾರೆ.

Aamir Khan: ಇದೆಂಥಾ ಸಂಬಂಧವಯ್ಯಾ? ಮಾಜಿ-ಹಾಲಿ ಪತ್ನಿಯರ ಜೊತೆ ಆಮೀರ್​ ಖಾನ್ ಫುಲ್​  ಜಾಲಿ ಜಾಲಿ

ಮಾಜಿ-ಹಾಲಿ ಪತ್ನಿಯರ ಜೊತೆ ಆಮೀರ್​ ಖಾನ್ ಫುಲ್​ ಜಾಲಿ ಜಾಲಿ

Aamir Khan: ಕುತೂಹಲಕಾರಿ ಸಂಗತಿಯೆಂದರೆ ಅವರು ಇಬ್ಬರು ಮಾಜಿ ಪತ್ನಿಯರು ಮತ್ತು ಅವರ ಪ್ರಸ್ತುತ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಮಿರ್ ಖಾನ್ ಚಾಲಕನ ಬಳಿ ಮುಂದಿನ ಸೀಟಿನಲ್ಲಿದ್ದರು. ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಹಿಂದಿನ ಸೀಟಿನಲ್ಲಿದ್ದರು. ಅವರೊಂದಿಗೆ ಅವರ ಪ್ರಸ್ತುತ ಗೆಳತಿ ಗೌರಿ ಸ್ಪ್ರಾಟ್ ಕೂಡ ಇದ್ದರು.

ಕೋಮಲ್‌ - ಸೋನಲ್‌ ನಟನೆಯ ʻರೋಲೆಕ್ಸ್ʼ ಚಿತ್ರಕ್ಕೆ ವಿನೋದ್‌ ಪ್ರಭಾಕರ್‌ ಎಂಟ್ರಿ; ಸ್ಪೆಷಲ್‌ ರೋಲ್‌ನಲ್ಲಿ ʻಮರಿ ಟೈಗರ್‌ʼ ಮಿಂಚಿಂಗ್‌

ʻರೋಲೆಕ್ಸ್ʼ ಅಡ್ಡಕ್ಕೆ ವಿನೋದ್ ಪ್ರಭಾಕರ್ ಎಂಟ್ರಿ; ಕೋಮಲ್‌ಗೆ ಮರಿ ಟೈಗರ್ ಬಲ

ನಟ ಕೋಮಲ್ ಕುಮಾರ್ ಹಾಗೂ ಸೋನಲ್ ಮೊಂಥೆರೋ ಕಾಂಬಿನೇಷನ್‌ನ ‘ರೋಲೆಕ್ಸ್’ ಚಿತ್ರಕ್ಕೆ ‘ಮರಿ ಟೈಗರ್’ ವಿನೋದ್ ಪ್ರಭಾಕರ್ ವಿಶೇಷ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ, ಅಂಬಟಿ ಮಧು ಮೋಹನಕೃಷ್ಣ ನಿರ್ಮಾಣದ ಈ ಕಾಮಿಡಿ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.

ಟ್ವಿಟರ್‌ನಲ್ಲಿ ದುಡ್ಡು ಕೇಳಿದ ವ್ಯಕ್ತಿಗೆ 50 ಸಾವಿರ ಕೊಟ್ಟ ಜಿ.ವಿ. ಪ್ರಕಾಶ್ ಕುಮಾರ್; ಮೋಸ ಹೋದರೂ ಸಹಾಯ ನಿಲ್ಲಿಸದ ಸಂಗೀತ ನಿರ್ದೇಶಕ

ಕಷ್ಟ ಎಂದವನಿಗೆ ಹಿಂದೆಮುಂದೆ ನೋಡದೆ 50 ಸಾವಿರ ನೀಡಿದ G V Prakash Kumar

ಬಹುಭಾಷಾ ಸಂಗೀತ ನಿರ್ದೇಶಕ ಮತ್ತು ನಟ ಜಿ. ವಿ. ಪ್ರಕಾಶ್ ಕುಮಾರ್ ಅವರು ಈ ಹಿಂದೆ ಆನ್‌ಲೈನ್ ವಂಚಕನಿಂದ 20 ಸಾವಿರ ರೂ. ಕಳೆದುಕೊಂಡು ಮೋಸ ಹೋಗಿದ್ದ ಕಹಿ ಅನುಭವವನ್ನು ಮರೆತು, ತುರ್ತು ಸರ್ಜರಿಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತಕ್ಷಣವೇ 50,000 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ.

ʻಲವ್ ಸೀಸನ್ಸ್ʼ ಚಿತ್ರದ ಹಾಡುಗಳಿಗೆ ಸಖತ್‌ ರೆಸ್ಪಾನ್ಸ್;‌ ಕೆ. ಕಲ್ಯಾಣ್‌ ಜೊತೆ ಖುಷಿ ಹಂಚಿಕೊಂಡ ಚಿತ್ರತಂಡ

ಜುಲೈ 3ಕ್ಕೆ ‘ಲವ್ ಸೀಸನ್ಸ್’ ಧಮಾಕಾ; ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್

ರಂಗಭೂಮಿ ಪ್ರತಿಭೆಗಳ ಸಂಗಮವಾಗಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಇದೇ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಮೂರು ಹಾಡುಗಳು ಈಗಾಗಲೇ ಭಾರಿ ಯಶಸ್ಸು ಕಂಡಿದ್ದು, ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿದೆ.

ತನ್ನದೇ ಗರಡಿಯ ಹುಡುಗನಿಗೆ ಹೀರೋ ಪಟ್ಟ ನೀಡಿದ ‘ಸಿಂಪಲ್’ ಸುನಿ; ಗಮನ ಸೆಳೆಯುತ್ತಿದೆ ‘ಮೋಡ ಕವಿದ ವಾತಾವರಣ’ ಟೀಸರ್!

ʻಸಿಂಪಲ್ʼ ಸುನಿ ಗರಡಿಯ ಹುಡುಗನಿಗೆ ಒಲಿದ ಅದೃಷ್ಟ; ಹೀರೋ ಆದ ಶೀಲಮ್

‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಖ್ಯಾತ ನಿರ್ದೇಶಕ ʻಸಿಂಪಲ್ʼ ಸುನಿ ಅವರು ಜೂನ್ 26 ರಂದು ವಿಭಿನ್ನ ಸೈಂಟಿಫಿಕ್ ಫಿಕ್ಷನ್ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ 'ಹೀರೋ ಟೀಸರ್' ಭಾರಿ ಗಮನ ಸೆಳೆಯುತ್ತಿದ್ದು, ಸುನಿ ಗರಡಿಯ ಪ್ರತಿಭೆ ಶೀಲಮ್ ಈ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ʻಬಿಗ್‌ ಬಾಸ್‌ʼ ವಿನ್ನರ್‌ ಹನುಮಂತ ಲಮಾಣಿಗೂ ಬಂದಿತ್ತು ಸಿನಿಮಾ ಹೀರೋ ಆಫರ್! ʻನಟನೆ ನನಗಲ್ಲʼ ಅಂದಿದ್ದೇಕೆ ಗಾಯಕ?

ʻಬಿಗ್‌ ಬಾಸ್‌ʼ ವಿನ್ನರ್ ಹನುಮಂತ ಹೀರೋ ಆಗಲ್ಲ ಅಂದಿದ್ದೇಕೆ? ಇಲ್ಲಿದೆ ಕಾರಣ!

ಬಿಗ್‌ ಬಾಸ್‌ ವಿನ್ನರ್ ಆಗಿದ್ದರೂ ಹನುಮಂತ ಲಮಾಣಿ ಸರಳತೆ ಬಿಟ್ಟಿಲ್ಲ. ಬಿಗ್‌ಬಾಸ್ ಗೆದ್ದ ಬಳಿಕ ಬಂದ 2-3 ಹೀರೋ ಆಫರ್‌ಗಳನ್ನು ಅವರು ನಯವಾಗಿ ತಿರಸ್ಕರಿಸಿದ್ದಾರೆ. ದೊಡ್ಡ ಸ್ಟಾರ್‌ಗಳ ಚಿತ್ರಗಳೇ ಓಡದ ಈ ಕಾಲದಲ್ಲಿ, ಕೇವಲ ತಮ್ಮ ಹೆಸರಿನಿಂದ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬುದು ಅವರ ಕಾಳಜಿ.

ʻಕಂಡೋರ ಚಿತೆಯಲ್ಲಿ ಬಿಸಿ ಕಾಯಿಸಿಕೊಳ್ಳುವುದು ಜೀವನ ಅಲ್ಲʼ; ಟ್ರೋಲ್‌ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್‌ ತಿರುಗೇಟು

Jodi No.1: ಟ್ರೋ‌ಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ ಗೀತಾ ಭಾರತಿ ಭಟ್

ಜೀ ಕನ್ನಡ ವಾಹಿನಿಯ 'ಜೋಡಿ ನಂ. 1' ಶೋನಲ್ಲಿ ಪತಿ ರಾಜಾರಾಮ್ ಭಟ್ ಜೊತೆಗಿನ ಮಾತುಕತೆಯನ್ನು ಜಗಳ ಹಾಗೂ ಟಿಆರ್‌ಪಿ ಗಿಮಿಕ್ ಎಂದು ಬಿಂಬಿಸಿ ಟ್ರೋಲ್ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.

ಪತಿಗೆ ಡಿವೋರ್ಸ್‌ ಕೊಟ್ಟ ಬಳಿಕ ಪುನಃ ಚಿತ್ರರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ; ಆದ್ರೆ, ಈ ಬಾರಿ ಸಿನಿಮಾ ಮಾಡ್ತಿಲ್ಲ!

ವಿಚ್ಛೇದನದ ಬಳಿಕ ಪುನಃ ಸಿನಿಮಾರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ

ಉದ್ಯಮಿ ಸೋಹೈಲ್ ಕಥುರಿಯಾ ಜೊತೆಗಿನ 4 ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ವಿಚ್ಛೇದನ ನೀಡಿರುವ ನಟಿ ಹನ್ಸಿಕಾ ಮೋಟ್ವಾನಿ, ವೈಯಕ್ತಿಕ ಆಘಾತಗಳಿಂದ ಹೊರಬಂದು ಬಣ್ಣದ ಲೋಕಕ್ಕೆ ಪವರ್‌ಫುಲ್ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವೀಣ್ ಸತ್ತಾರು ನಿರ್ದೇಶನದ 'ಗಲ್ಲಿ' ಎಂಬ ರೋಚಕ ಕ್ರೈಮ್ ವೆಬ್ ಸರಣಿಯ ಮೂಲಕ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು; ಅಡೆತಡೆಗಳನ್ನು ದಾಟಿ ದಿವಾನ್ ಮನೆ ಸೇರಲಿದ್ದಾಳೆ ಮಿಂಚು!

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ರೌಡಿಗಳನ್ನು ಸೆದೆಬಡಿದು ಮಗಳನ್ನು ಭೂಮಿ ಮಡಿಲಿಗೆ ಹಾಕಿದ್ದಾನೆ ಗೌತಮ್‌. ಜೈದೇವ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ಆದರೆ ಈ ಬಾರಿಯಾದರೂ ಈ ಹಿನ್ನೆಡೆ ಕಥೆಯ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಾ..? ಅಥವಾ ಬೇರೆ ಯಾವುದಾದರೂ ಐಡಿಯಾ ನಿರ್ದೇಶಕರಿಗೆ ಹೊಳೆದು ಧಾರಾವಾಹಿಯ ಕಥೆ ಮತ್ತೆ ಮುಂದುವರೆಯುತ್ತಾ..?ಅನ್ನೋದು ವೀಕ್ಷಕಕರ ಪ್ರಶ್ನೆ.

Actor Doddanna: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

Actor Doddanna: ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ಹಂಚಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ವದಂತಿ ಹರಡಿದವರ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ ನಟ ದೊಡ್ಡಣ್ಣ.

Geetha Wadeyar: ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ

ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ

Geetha Wadeyar: ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳಿಂದ ಪವನ್ ಒಡೆಯರ್ ಜೊತೆಯಲ್ಲಿ ಬೆಂಗಳೂರು ನಲ್ಲೇ ತಾಯಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಂದು ಕುಣಿಗಲ್ ನಲ್ಲಿ (Kunigal) ಅಂತ್ಯ ಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

Sanvi Sudeep: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಈಗಾಗಲೇ ಗಾಯಕಿಯಾಗಿ ಚಿತ್ರಂಗ ಪ್ರವೇಶಿಸಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಗಣೇಶನ ಟ್ಯಾಟೂ ಹಾಕಿಸಿಕೊಂರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು; ತಮಿಳು ನಿರ್ಮಾಪಕನ ಜತೆ ʼನವಗ್ರಹʼ ನಟಿ ಕಲ್ಯಾಣ?

ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು

Sharmiela Mandre: ʼಕಣ್‌ ಕಣ್ಣ ಸಲಿಗೆʼ ಎಂದಿದ್ದ ಕನ್ನಡದ ಸ್ಟಾರ್‌ ನಟಿ ಶರ್ಮಿಳಾ ಮಾಂಡ್ರೆ ಇದೀಗ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನುವ ಮಾತು ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ತಮಿಳು ನಿರ್ಮಾಪಕ ಸುಧನ್‌ ಸುದರ್ಶನ್‌ ಅವರೊಂದಿಗೆ ಶರ್ಮಿಳಾ ಸಪ್ತಪದಿ ತಿಳಿಯಲಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ.

Cocktail 2: ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ, ಕೃತಿ: ‘ಕಾಕ್‌ಟೇಲ್ 2’ ಸಿನಿಮಾಕ್ಕೆ ಭರ್ಜರಿ ಪ್ರಚಾರ

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ!

Rashmika: ಬಾಲಿವುಡ್​ ಸೂಪರ್ ಸ್ಟಾರ್​​ಗಳಾದ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಕಾಕ್‌ಟೇಲ್ 2 ಇದೇ ಜೂನ್ 19ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಭರದ ಪ್ರಚಾರ ಮುಂದುವರಿದಿದೆ. ‘ಕಾಕ್‌ಟೇಲ್ 2’ ಪ್ರಚಾರಕ್ಕಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ (Presidency University) ಕ್ಯಾಂಪಸ್‌ಗೆ ಬಂದಿದ್ದರು.

Darshan Movie: ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

Darshan: ಸತತ 35 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್‌ ಲಿಸ್ಟ್‌ ಸೇರಿತ್ತು. ಸಂದರ್ಶನವೊಂದರಲ್ಲಿ ಓಂ ಪ್ರಕಾಶ್‌ ರಾವ್‌ ಅವರು ಹಂಚಿಕೊಂಡಿರುವ ಮಾಹಿತಿಯಂತೆ, ಸಿನಿಮಾ ಅಂದಿನ ದಿನಗಳಲ್ಲೇ ಸುಮಾರು 18 ರಿಂದ 22 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿತ್ತು.

ವಿಜಯ್ ದೇವರಕೊಂಡ - ರಶ್ಮಿಕಾ ನಟನೆಯ ‘ರಣಬಾಲಿ’ ಚಿತ್ರಕ್ಕೆ ಬರಗಾಲದ ರಾಕ್ಷಸನಾಗಿ ಬಂದ ʻದಿ ಮಮ್ಮಿʼ ಖ್ಯಾತಿಯ ಹಾಲಿವುಡ್‌ ನಟ ಆರ್ನಾಲ್ಡ್ ವೋಸ್ಲೂ

ವಿರೋಶ್‌ ಜೋಡಿಯ ‘ರಣಬಾಲಿ’ ಚಿತ್ರದಲ್ಲಿ ʻದಿ ಮಮ್ಮಿʼ ನಟ ಆರ್ನಾಲ್ಡ್ ವೋಸ್ಲೂ!

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ರಣಬಾಲಿ' ಚಿತ್ರಕ್ಕೆ 'ದಿ ಮಮ್ಮಿ' ಖ್ಯಾತಿಯ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಖಳನಾಯಕನಾಗಿ ಸೇರ್ಪಡೆಯಾಗಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ಅವರು ಬ್ರಿಟಿಷ್ ಅಧಿಕಾರಿ 'ಸರ್ ಥಿಯೋಡರ್ ಹೆಕ್ಟರ್' ಎಂಬ ಪಾತ್ರ ಮಾಡುತ್ತಿದ್ದಾರೆ.

Karan Johar: ಈ ಸೌತ್‌ ಮೂವಿಯ ನಿರ್ಮಾಣಕ್ಕಿಳಿದ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

ಈ ಸೌತ್‌ ಮೂವಿಯ ನಿರ್ಮಾಣಕ್ಕಿಳಿದ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

Dharma Production: ಈ ಚಿತ್ರವನ್ನು ಕರಣ್ ಜೋಹರ್, ಆದರ್ ಪೂನಾವಲ್ಲ, ಅಪೂರ್ವ ಮೆಹ್ತಾ ಮತ್ತು ಸುಪ್ರಿಯಾ ಮೆನನ್ ನಿರ್ಮಿಸಲಿದ್ದಾರೆ. 19 ನೇ ಶತಮಾನದ ಕೇರಳದ ಹಿನ್ನೆಲೆಯಲ್ಲಿ ಮತ್ತು ಈ ಪ್ರದೇಶದ ಶ್ರೀಮಂತ ಜಾನಪದ ಮತ್ತು ಸಾಂಸ್ಕೃತಿಕ ಪುರಾಣಗಳಿಂದ ರಚಿಸಲಾದ ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಧರ್ಮ ಪ್ರೊಡಕ್ಷನ್ಸ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಜೊತೆ ಕೈಜೋಡಿಸುತ್ತಿದೆ.

ಸದ್ದಿಲ್ಲದೇ ಬಂಪರ್‌ ನ್ಯೂಸ್‌ ಕೊಟ್ಟ ʻಬಿಗ್‌ ಬಾಸ್‌ʼ ವಿನ್ನರ್‌ ಗಿಲ್ಲಿ ನಟ; ಹೊಸ ಸಿನಿಮಾಕ್ಕೆ ಸಾಥ್‌ ನೀಡಿದ ʻಟಾಕ್ಸಿಕ್ʼ, ʻಜನ ನಾಯಗನ್‌ʼ ನಿರ್ಮಾಪಕರು

Bigg boss ಗಿಲ್ಲಿ ನಟನಿಗೆ ಒಲಿದ ಅದೃಷ್ಟ; ಸಿಕ್ತು Toxic ನಿರ್ಮಾಪಕರ ಬೆಂಬಲ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ವಿಜೇತ ‘ಗಿಲ್ಲಿ ನಟ’ (ನಟರಾಜ್) ಹೀರೋ ಆಗಿ ಚಿತ್ರರಂಗಕ್ಕೆ ಭರ್ಜರಿ ಪ್ರಮೋಷನ್ ಪಡೆದಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ಖ್ಯಾತಿಯ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದೆ. ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಲಿರುವ ಈ ಔಟ್ ಅಂಡ್ ಔಟ್ ಕಾಮಿಡಿ ಚಿತ್ರದ ಅದ್ಧೂರಿ ಮುಹೂರ್ತವು ಜೂನ್ 21ರಂದು ನೆರವೇರಲಿದೆ.

Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ಮೂವಿ

Samantha Ruth Prabhu: ‘ಮಾ ಇಂಟಿ ಬಂಗಾರಂ’ ಆ್ಯಕ್ಷನ್ ಕಾಮಿಡಿ ಸಿನಿಮಾ ಈ ಚಿತ್ರದ ಥಿಯೇಟರಿಕಲ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ ಎಂದು ವರದಿ ಆಗಿದೆ. ಕನ್ನಡದ ದಿಗಂತ್ ಮಂಚಾಲೆ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾ ಇಂಟಿ ಬಂಗಾರಂ" ಚಿತ್ರವನ್ನು ರಾಜ್ ನಿರ್ಮಿಸಿದ್ದಾರೆ, ನಂದಿನಿ ನಿರ್ದೇಶಿಸಿದ್ದಾರೆ ಮತ್ತು ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಅಡಿಯಲ್ಲಿ ರಾಜ್, ಸಮಂತಾ ಮತ್ತು ಹಿಮಾಂಕ್ ನಿರ್ಮಿಸಿದ್ದಾರೆ.

‘ಬಾಸ್’ ಚಿತ್ರದ ರಿಲೀಸ್‌ಗೆ ಮತ್ತೆ ಕಾನೂನು ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ - ವಿಜಯಲಕ್ಷ್ಮೀ!

ʻಬಾಸ್‌ʼ ಸಿನಿಮಾಗೆ ಮತ್ತೆ ಕಾನೂನು ಸಂಕಷ್ಟ! ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ತನುಷ್‌ ಶಿವಣ್ಣ ನಟನೆಯ ‘ಬಾಸ್’ ಸಿನಿಮಾಗೆ ಕೊನೆ ಕ್ಷಣದಲ್ಲಿ ಕಾನೂನು ಸಂಕಷ್ಟ ಎದುರಾಗಿದೆ. ಚಿತ್ರದ ಬಿಡುಗಡೆಗೆ ಇದ್ದ ತಡೆಯಾಜ್ಞೆಯನ್ನು ಸಿವಿಲ್ ನ್ಯಾಯಾಲಯ ರದ್ದು ಮಾಡಿತ್ತು. ಅದನ್ನು ಪ್ರಶ್ನಿಸಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದಂಪತಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.

Loading...