ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ʻಜನ ನಾಯಗನ್‌ʼ ಅಲ್ಲ, ʻಈ ಸೂಪರ್‌ ಹಿಟ್‌ʼ ಸಿನಿಮಾದೊಂದಿಗೆ ʻದಳಪತಿʼ ವಿಜಯ್‌ ವೃತ್ತಿ ಬದುಕು ಮುಕ್ತಾಯವಾಗಬೇಕಿತ್ತು! ಏನಿದು ಹೊಸ ವಿಷ್ಯ?

ವಿಜಯ್ ಕೊನೆಯ ಸಿನಿಮಾ ಆಗ್ಬೇಕಿತ್ತು ʻಕರುಪ್ಪುʼ! ಸತ್ಯ‌ ಹೇಳಿದ RJ ಬಾಲಾಜಿ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಚಿತ್ರರಂಗ ತೊರೆಯುವ ಮುನ್ನ ತಿರಸ್ಕರಿಸಿದ್ದ ‘ಕರುಪ್ಪು’ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಸಿ ಅಬ್ಬರಿಸುತ್ತಿದೆ. ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾವಾಗಬೇಕಿತ್ತು ಎಂದು ನಿರ್ದೇಶಕ ಆರ್‌.ಜೆ. ಬಾಲಾಜಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

‌Mohanlal: ಏಳೇ ದಿನಕ್ಕೆ 200 ಕೋಟಿ ರೂ. ಬಾಚಿಕೊಂಡ ʻದೃಶ್ಯಂ 3ʼ ಸಿನಿಮಾ; ನಿರ್ಮಾಪಕರಿಗೆ ಲಾಭವೋ ಲಾಭ!

Drishyam 3: ಏಳೇ ದಿನಕ್ಕೆ 200 ಕೋಟಿ ರೂ. ಲೂಟಿ ಮಾಡಿದ ಜಾರ್ಜ್‌ಕುಟ್ಟಿ

ಮೋಹನ್‌ಲಾಲ್ ನಟನೆಯ ಮತ್ತು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ 3' ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲೂ 11 ಕೋಟಿ ರೂ. ಬಾಚಿರುವ ಈ ಕ್ರೈಮ್ ಥ್ರಿಲ್ಲರ್, 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.

Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

Amruthadhaare : ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌?

Amruthadhaare Serial : ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಮಹಿಮಾ ಮಗು ಕಳೆದುಕೊಂಡ ನೋವಲ್ಲೇ ಇದ್ದಾಳೆ, ಮಿಂಚು ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ, ಇದನ್ನು ಗಮನಿಸಿದ ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ.

South OTT Releases This Week: ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

South OTT Releases This Week: ಮಲಯಾಳಂನ ರೊಮ್ಯಾಂಟಿಕ್ ಹಾಸ್ಯ ಸುಖಮನೋ ಸುಖಮನ್‌ನಿಂದ ಹಿಡಿದು ತಮಿಳು ಹೀಸ್ಟ್ ಥ್ರಿಲ್ಲರ್ ಕರವರೆಗೆ ಬರಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್ , ಆಹಾ ಮತ್ತು Zee5 ನಂತಹ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳು ಈ ವಾರ ಪ್ರೇಕ್ಷಕರಿಗಾಗಿ ಫುಲ್ ಮೀಲ್ಸ್ ನೀಡಲಿದೆ.

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ;  ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ!

Crazy Star Ravichandran: . ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು.ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Sushmita Sen: ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್ ಮುಕ್ತ ಮಾತು

ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್

Sushmita Sen: ತಮ್ಮ ಮಗಳು ರೆನೀಯನ್ನು (Renee) ದತ್ತು ಪಡೆದ ನಂತರ ಸುಶ್ಮಿತಾ ಸೇನ್ (Sushmita Sen) ಎನೆಲ್ಲ ಹೋರಾಟಗಳನ್ನು ಎದುರಿಸಿದರು ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂಟಿ ತಾಯ್ತನವನ್ನು ಇನ್ನೂ ಅಸಾಂಪ್ರದಾಯಿಕವೆಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಈ ನಿರ್ಧಾರವು ಚಲನಚಿತ್ರೋದ್ಯಮದಿಂದ ತೀವ್ರ ಟೀಕೆಗೆ ಗುರಿಯಾಯಿತು ಎಂದು ಬಹಿರಂಗಪಡಿಸಿದ್ದಾರೆ.

Shamita Shetty: ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

Shamita Shetty: ಸಹೋದರಿ, ನಟಿ ಶಿಲ್ಪಾ ಶೆಟ್ಟಿ (shilpa shetty) (50) ಈಗಾಗಲೇ 14 ವರ್ಷದ ಮಗನ ತಾಯಿಯಾಗಿದ್ದರೂ ಸಹ, ಶಮಿತಾ ಮದುವೆಯಾಗಲು ಬಯಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ಅಪಹಾಸ್ಯ ಮಾಡಿದವರನ್ನು, ಟ್ರೋಲ್‌ (Troll) ಮಾಡಿದವರಿಗೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

Urvashi Rautela:   ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ  ರೌಟೇಲಾ ಗರಂ!

Urvashi Rautela: ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ ರೌಟೇಲಾ ಗರಂ!

Urvashi Rautela: ಅಭಿಮಾನಿಗಳಿಂದ ನಿರ್ಮಿತವಾದ, ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರವೊಂದು ನಟಿಯನ್ನು ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ , ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ನಟಿಯರೊಂದಿಗೆ ಹೋಲಿಸಿದ್ದಕ್ಕೆ ಅವರು ಈಗ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಹಾಸ್ಯ ನಟ ಮೂಗು ಸುರೇಶ್; ಇದು ತಂದೆ-ಮಗನ ಬಾಂಧವ್ಯದ ಕಥೆ

ʻಕ್ಷಮೆಯಿರಲಿ ತಂದೆʼ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ ನಟ ಮೂಗು ಸುರೇಶ್

ಮೂರು ದಶಕಗಳ ಕಾಲ ಹಾಸ್ಯ ನಟನಾಗಿ ರಂಜಿಸಿದ ಎಂ.ಎನ್. ಸುರೇಶ್ (ಮೂಗು ಸುರೇಶ್), ಇದೀಗ ಚೊಚ್ಚಲ ಬಾರಿಗೆ 'ಕ್ಷಮೆಯಿರಲಿ ತಂದೆ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೇರೆಯವರ ಹಣವನ್ನು ರಿಸ್ಕ್‌ಗೆ ಒಡ್ಡದೆ, ತಮ್ಮ ಜೀವನದ ಇಡೀ ಗಳಿಕೆಯನ್ನೇ ಹೂಡಿಕೆ ಮಾಡಿ ಈ ಸಿನಿಮಾವನ್ನು ಅವರು ಮಾಡಿದ್ದಾರೆ.

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್; ಫ್ಯಾನ್ಸ್‌ ಊಹಿಸಿದ್ದೇನು?

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್

Lokesh Kanagaraj : ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಲೋಕೇಶ್ ಅವರು ವಿಜಯ್ ಅವರ ಎರಡು ಚಿತ್ರಗಳಾದ ಮಾಸ್ಟರ್ (2021) ಮತ್ತು ಲಿಯೋ (2023) ಗಳನ್ನು ನಿರ್ದೇಶಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದ್ದವು.

ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ

ʻಮಹಾಲಕ್ಷ್ಮೀ ಮದುವೆ‌ʼ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ ಅಮೂಲ್ಯ ಗೌಡ

ಮಧ್ಯಮ ವರ್ಗದ ವಿಭಿನ್ನ ಪ್ರೇಮಕಥೆಯುಳ್ಳ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯು ಉದಯ ಟಿವಿಯಲ್ಲಿ ಜೂನ್ 1 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ನಟಿ ಅಮೂಲ್ಯ ಗೌಡ ‘ಮಹಾಲಕ್ಷ್ಮೀ’ ಪಾತ್ರದ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.

Anik Dutta: ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

Anik Dutta: ಕೋಲ್ಕತ್ತಾದ ಹಿಂದುಸ್ತಾನ್ ಪಾರ್ಕ್‌ನಲ್ಲಿರುವ ಅನಿಕ್ ದತ್ತಾ ಅವರ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅನಿಕ್ ದತ್ತಾ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗರಿಯಾಹತ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ (Police Investigation) ಆರಂಭಿಸಿದ್ದಾರೆ.

‌BGMI ಗೇಮ್‌ ಜೊತೆ ಕೈಜೋಡಿಸಿದ ʻರಾಕಿಂಗ್‌ ಸ್ಟಾರ್‌ʼ ಯಶ್‌; ಬಿಡುಗಡೆಗೂ ಮುನ್ನವೇ ಗೇಮಿಂಗ್ ಲೋಕದಲ್ಲಿ ‘ಟಾಕ್ಸಿಕ್’ ಅಬ್ಬರ!

BGMI ಅಖಾಡಕ್ಕೆ ʻರಾಯʼ ಎಂಟ್ರಿ; ಯಶ್ ಖಡಕ್ ಧ್ವನಿಗೆ ಗೇಮಿಂಗ್ ಲೋಕ ಶೇಕ್!

ಭಾರತದ ಜನಪ್ರಿಯ ಮೊಬೈಲ್ ಗೇಮ್ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ (BGMI) ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಜೊತೆ ಕೈಜೋಡಿಸಿ ಗೇಮಿಂಗ್ ಇತಿಹಾಸದಲ್ಲೇ ಬೃಹತ್ ಸಹಯೋಗ ಘೋಷಿಸಿದೆ. ಹೊಸ 4.4 ಅಪ್ಡೇಟ್‌ನಲ್ಲಿ 'ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್' ಲಭ್ಯವಾಗಲಿದ್ದು, ಜೂನ್ 2 ರಿಂದ ಆಟಗಾರರು ಯಶ್ ಅವರ ಖಡಕ್ ಕನ್ನಡ ಮತ್ತು ಹಿಂದಿ ಧ್ವನಿಯನ್ನು ಬಳಸಬಹುದು.

ಬೆಂಗಳೂರಿಗೆ ಬಂತು 'ಜಂಗಲ್ ಬುಕ್' ಕಾಡು: 'ದಿ ಗ್ಯಾಲೇರಿಯಾ ಮಾಲ್'ನಲ್ಲಿ ಮಕ್ಕಳಿಗಾಗಿ ಭರ್ಜರಿ ಬೇಸಿಗೆ ಸಂಭ್ರಮ

ಬೆಂಗಳೂರಿಗೆ ಬಂತು 'ಜಂಗಲ್ ಬುಕ್' ಕಾಡು; ಮಕ್ಕಳಿಗಾಗಿ ಬೇಸಿಗೆ ಸಂಭ್ರಮ

ಮಕ್ಕಳ ಅಚ್ಚುಮೆಚ್ಚಿನ ಕಾಲ್ಪನಿಕ ಕಥೆ 'ಜಂಗಲ್ ಬುಕ್' ಇದೀಗ ಬೆಂಗಳೂರಿನ ಯಲಹಂಕದಲ್ಲಿರುವ 'ದಿ ಗ್ಯಾಲೇರಿಯಾ ಮಾಲ್' ನಲ್ಲಿ ಜೀವಂತವಾಗಿ ಮೈದಳೆದಿದೆ. ಮೇ 8ರಿಂದ ಜೂನ್ 7 ರವರೆಗೆ ಇಡೀ ಮಾಲ್ ಕಾಡಿನ ರೂಪದಲ್ಲಿ ಕಂಗೊಳಿಸಲಿದ್ದು, ಮಕ್ಕಳಿಗಾಗಿ ಭರಪೂರ ಮನರಂಜನೆ ಮತ್ತು ಕಲಿಕೆಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

3 ವರ್ಷಗಳ ನಂತರ ತೆರೆಮೇಲೆ ಮೋಡಿ ಮಾಡಲು ಬರ್ತಿದ್ದಾರೆ‌ ನಟಿ ಸಮಂತಾ; ಗೆಲುವಿನ ಚಿನ್ನ ತರಲಿದೆಯಾ ʻಮಾ ಇಂಟಿ ಬಂಗಾರಂʼ?

'ಮಾ ಇಂಟಿ ಬಂಗಾರಂ' ಟ್ರೇಲರ್‌ ರಿಲೀಸ್; ಖಳರನ್ನು ಚಚ್ಚಿ ಹಾಕಿದ ಸಮಂತಾ

ನಟಿ ಸಮಂತಾ ಮೂರು ವರ್ಷಗಳ ಸುದೀರ್ಘ ಬಿಡುವಿನ ನಂತರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಮಾಸ್ ಫ್ಯಾಮಿಲಿ ಎಂಟರ್‌ಟೇನರ್‌ನಲ್ಲಿ ಸಮಂತಾ ಸೀರೆ ಧರಿಸಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.

ಆರೇ ದಿನಕ್ಕೆ ʻಆಡುಜೀವಿತಂʼ ದಾಖಲೆ ಧೂಳೀಪಟ ಮಾಡಿದ ʻದೃಶ್ಯಂ 3ʼ; ಬಾಕ್ಸ್‌ ಆಫೀಸ್‌ನಲ್ಲಿ ಮೋಹನ್‌ಲಾಲ್ ಮ್ಯಾಜಿಕ್‌!

Mohanlal: 200 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ ʻದೃಶ್ಯಂ 3ʼ

ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಕೇವಲ 6 ದಿನಗಳಲ್ಲೇ ವಿಶ್ವಾದ್ಯಂತ 170.32 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ‘ಆಡುಜೀವಿತಂ’ ಚಿತ್ರದ ಲೈಫ್‌ಟೈಮ್ ದಾಖಲೆಯನ್ನು ಹಿಂದಿಕ್ಕಿದೆ.

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‌ ಆಗಿದ್ದ ರಜನಿಕಾಂತ್‌ಗೆ ಸಿಗ್ತಿದ್ದ ಸಂಬಳ ಎಷ್ಟು? ವೈರಲ್‌ ಆಯ್ತು 55 ವರ್ಷ ಹಿಂದಿನ ಬಿಟಿಎಸ್‌ ಐಡಿ ಕಾರ್ಡ್‌!

55 ವರ್ಷ ಹಿಂದಿನ ರಜನಿಕಾಂತ್ ಬಸ್‌ ಕಂಡಕ್ಟರ್‌ ಐಡಿ ಕಾರ್ಡ್ ವೈರಲ್!

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು 1971ರಲ್ಲಿ ಬೆಂಗಳೂರಿನ ಬಿಟಿಎಸ್ ರೂಟ್ ನಂಬರ್ 10A ಬಸ್‌ನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಹೆಸರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಲದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

'ಡಾನ್ 3' ವಿವಾದ: ʻನಟ ರಣವೀರ್ ಸಿಂಗ್‌ರನ್ನು ಬ್ಯಾನ್‌ ಮಾಡಿಲ್ಲ, ಆದ್ರೆ..ʼ; FWICE ಕೊಟ್ಟ ಸ್ಪಷ್ಟನೆ ಏನು?

ʻರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ಆದ್ರೆ..ʼ; ಡಾನ್‌ 3 ವಿವಾದಕ್ಕೆ ಟ್ವಿಸ್ಟ್

'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿದ್ದಕ್ಕಾಗಿ ಅವರ ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿದೆ ಎಂಬ ವದಂತಿಗಳನ್ನು FWICE ತಳ್ಳಿಹಾಕಿದೆ. ಸಂಸ್ಥೆಯ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಸ್ಪಷ್ಟನೆ ನೀಡಿ, ತಮಗೆ ಬ್ಯಾನ್ ಮಾಡುವ ಅಧಿಕಾರವಿಲ್ಲದ ಕಾರಣ ಕೇವಲ 'ಅಸಹಕಾರ' ನಿರ್ದೇಶನ ಹೊರಡಿಸಿದ್ದೇವೆ ತಿಳಿಸಿದ್ದಾರೆ.

‘ಲೋ ನವೀನ’ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ; ದೊಡ್ಮನೆಯಿಂದ ಸಿಕ್ಕ ಪ್ರಶಂಸೆಗೆ ಚಿತ್ರತಂಡ ಫುಲ್ ಖುಷ್!

ʻಲೋ ನವೀನʼ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಂಸೆ

ವಿಶಿಷ್ಟ ಕಥಾಹಂದರದ ಮೂಲಕ ಗಮನಸೆಳೆಯುತ್ತಿರುವ 'ಲೋ ನವೀನ' ಸಿನಿಮಾಗೆ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಅವರು, ನೈಜ ಜಗತ್ತಿನ ಸರಳ ಕಥೆ ಹಾಗೂ ಮಂಡ್ಯ ಶೈಲಿಯ ಭಾಷಾ ಸೊಗಡಿಗೆ ಫಿದಾ ಆಗಿ ತಂಡದ ನಿರೂಪಣೆಯನ್ನು ಕೊಂಡಾಡಿದ್ದಾರೆ.

Bhagyalakshmi Kannada Serial: ಭಾಗ್ಯಲಕ್ಷ್ಮಿ ಸೀರಿಯಲ್ ಅಂತ್ಯ​: ನಟಿ ಸುಷ್ಮಾ ರಾವ್​ ಭಾವುಕ ಪೋಸ್ಟ್!

ಭಾಗ್ಯಲಕ್ಷ್ಮಿ ಸೀರಿಯಲ್ ಅಂತ್ಯ​: ನಟಿ ಸುಷ್ಮಾ ರಾವ್​ ಭಾವುಕ ಪೋಸ್ಟ್!

Bhagyalakshmi Kannada Serial: ಕಳೆದ ಮೂರುವರೆ ವರ್ಷಗಳಿಂದ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಕನ್ನಡ ವೀಕ್ಷಕರನ್ನ ರಂಜಿಸುತ್ತಿದೆ. ಇದೀಗ ಜನಮೆಚ್ಚಿದ ಕಥೆ ‘ಭಾಗ್ಯಲಕ್ಷ್ಮೀ’ ಅಂತ್ಯವಾಗಲಿದೆ. ನಾಯಕಿ ಸುಷ್ಮಾ ಕೆ. ರಾವ್ ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

Krishi Thapanda: ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಸುದ್ದಿಯಾಗಿದ್ದವು. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

Krishi Thapanda: ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ  ಭಾವುಕ ಪೋಸ್ಟ್!

ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ ಭಾವುಕ ಪೋಸ್ಟ್!

Krishi Thapanda: ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್​ಶಿಪ್, ಬ್ರೇಕಪ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.ಈ ಕುರಿತು ನಟಿ ಪೋಸ್ಟ್‌ ಹಂಚಿಕೊಂಡಿದ್ದು ಹೀಗೆ.

Amruthadhaare Serial: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ; ಧನ್ಯವಾದ ಹೇಳಿದ ಶಕುಂತಲಾ!

Amruthadhaare: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ!

Amruthadhaare Serial: ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಶಕುಂತಲಾ ಆ ಬಳಿಕ ಗೌತಮ್‌ ಹಾಗೂ ಭೂಮಿಗೆ ಧನ್ಯವಾದ ಹೇಳಿದ್ದಾಳೆ.ಅತ್ತ ಮನೆಯವರೆಲ್ಲರೂ ಸಮಾಧಾನ ಮಾಡಿದ್ದರೂ ಮಹಿಮಾ ಕೇಳುವ ಸ್ಥಿತಿಯಲ್ಲಿ ಇಲ್ಲ.

‘ದೇವಿ ಮಹಾತ್ಮೆ’ ಆಡಿಯೋ ಹಕ್ಕುಗಳನ್ನು ಖರೀದಿಸಿದ ʻಹೊಂಬಾಳೆ‌ ಫಿಲ್ಮ್ಸ್ʼ; ರಂಗಾಯಣ ರಘು ನಟನೆಯ ಚಿತ್ರಕ್ಕೆ ಸಿಕ್ತು ಆನೆಬಲ!

ʻದೇವಿ ಮಹಾತ್ಮೆʼ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಲ; ಆಡಿಯೋ ರೈಟ್ಸ್‌ ಸೇಲ್‌

‘ಕೆಜಿಎಫ್’, ‘ಕಾಂತಾರ’ ಮುಂತಾದ ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಅಡಿಯಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರುವ ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

Loading...