ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Ek Din Movie: ಸಿನಿಮಾ ಸೋಲಿನ ಬಗ್ಗೆ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಹೇಳಿದ್ದೇನು?

ಸಿನಿಮಾ ಸೋಲಿನ ಬಗ್ಗೆ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಹೇಳಿದ್ದೇನು?

Ek Din Movie: ನಟ ಜುನೈದ್ ಖಾನ್ ಮಾತನಾಡಿದ್ದು , ತಂಡದ ನಿರೀಕ್ಷೆಗಳ ಹೊರತಾಗಿಯೂ ಚಿತ್ರವು ಹೆಚ್ಚಿನ ವೀಕ್ಷಕರನ್ನು ತಲುಪಲಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ತಂದೆ, ನಟ-ನಿರ್ಮಾಪಕ ಅಮೀರ್ ಖಾನ್ (Aamir Khan) ಅವರು ಚಿತ್ರದ ಭವಿಷ್ಯದ ಬಗ್ಗೆ ಇನ್ನೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ವಿಜಯ್‌ ನಡೆಗೆ ಬಹುಪರಾಕ್‌ ಹೇಳಿದ ಕಮಲ್‌ ಹಾಸನ್;‌ ʻದಳಪತಿʼ ಹೆಸರು ಹೇಳ್ತಿದ್ದಂತೆ ಕೈಮುಗಿದು ಹೊರಟ ರಜನಿಕಾಂತ್!‌

ವಿಜಯ್‌ಗೆ ಕಮಲ್‌‌ ಹಾಸನ್ ಮೆಚ್ಚುಗೆ; ʻದಳಪತಿʼ ಹೆಸರು ಕೇಳಿ ರಜನಿ‌ ಸೈಲೆಂಟ್!

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನಟ ವಿಜಯ್ ಸಮಾಜಮುಖಿ ನಿರ್ಧಾರ ಕೈಗೊಂಡಿದ್ದಾರೆ. ದೇವಸ್ಥಾನ, ಶಾಲೆ ಹಾಗೂ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ವಿಜಯ್ ಅವರ ಈ ನಡೆಯನ್ನು ನಟ ಕಮಲ್ ಹಾಸನ್ ಮುಕ್ತವಾಗಿ ಶ್ಲಾಘಿಸಿದ್ದಾರೆ.

Alia Bhatt: ಕೇನ್ಸ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ಮಿಂಚಿಂಗ್‌! ಲುಕ್‌ಗೆ ಫಿದಾ ಆದ್ರು ಫ್ಯಾನ್ಸ್‌

ಕೇನ್ಸ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ಮಿಂಚಿಂಗ್‌!

Cannes 2026 look: ಮೇ 12 ರಂದು ಬಿಡುಗಡೆಯಾದ ಹೊಸ ಫೋಟೋಗಳಲ್ಲಿ, ಆಲಿಯಾ ಯಶ್ ಪಾಟೀಲ್ ಅವ ಕಸ್ಟಮ್ ಲ್ಯಾಂಡ್‌ಸ್ಕೇಪ್-ಪ್ರಿಂಟ್ ಬಾಲ್ ಗೌನ್ ಧರಿಸಿರುವುದು ಕಂಡುಬರುತ್ತದೆ, ಚಿನ್ನದ ಸ್ಟಡ್‌ಗಳು ಮತ್ತು ಸ್ಟೇಟ್‌ಮೆಂಟ್ ರಿಂಗ್ ಅನ್ನು ಒಳಗೊಂಡಿದ್ದವು. ಆಲಿಯಾ, ಇವಾ ಲೊಂಗೋರಿಯಾ ಮತ್ತು ವಿಯೋಲಾ ಡೇವಿಸ್‌ರಂತಹ ತಾರೆಯರನ್ನು ಒಳಗೊಂಡಂತೆ ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ.

ʻನಕಾರಾತ್ಮಕತ ಹೇಳಿಕೆ ನೀಡಬೇಡಿʼ; ಸನಾತನ ಧರ್ಮ ನಿರ್ಮೂಲನಾ ಕಿಡಿ ಹೊತ್ತಿಸಿದ ಉದಯನಿಧಿ ಸ್ಟಾಲಿನ್‌ಗೆ ನಟ ಅನಿರುದ್ಧ ತೀವ್ರ ಆಕ್ಷೇಪ

ʻಸನಾತನ ಧರ್ಮ ನಿರ್ಮೂಲನೆ ಮಾಡಬೇಕುʼ ಎಂದ ಉದಯನಿಧಿಗೆ ನಟ ಅನಿರುದ್ಧ ತಿರುಗೇಟು

Udayanidhi Stalin: ತಮಿಳುನಾಡು ವಿಧಾನಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು "ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂಬ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಈ ನಕಾರಾತ್ಮಕ ನಿಲುವಿಗೆ ಸ್ಯಾಂಡಲ್‌ವುಡ್ ನಟ ಅನಿರುದ್ಧ ಜತ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Annayya Serial: ಮನೆಗೆ ಬಂದ ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ!

Annayya Serial: ಮನೆಗೆ ಬಂದ ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ!

Annayya Serial: ಶಾರದಮ್ಮ ರಶ್ಮಿಗೆ ಒಂದೊತ್ತು ಊಟವನ್ನೂ ಹಾಕ್ತಾ ಇಲ್ಲ ಅನ್ನೋ ಕಹಿ ಸತ್ಯವನ್ನು ರಿವೀಲ್‌ ಮಾಡಿದ್ದಾಳೆ. ಇದು ಶಿವು ಕಿವಿಗೆ ಬಿದ್ದಿದೆ. ಈ ಸತ್ಯ ಹೇಳಿ ಶಾಕ್‌ ಗಿದ್ದಾನೆ ಶಿವು. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದ ಮಾದಪ್ಪ. ಅಂತೂ ರಶ್ಮಿಯನ್ನು ಕರೆದುಕೊಂಡು ಹೋಗಿದ್ದಾನೆ ಮಾದಪ್ಪಣ್ಣ.

ʻನಾನು ರಾಮ, ಕೃಷ್ಣನನ್ನು ನೋಡಿಲ್ಲ, ಆದರೆ ಮೋದಿಯವರನ್ನು ನೋಡಿದ್ದೇನೆʼ; ಭಾವುಕರಾದ ತೆಲುಗಿನ ಹಿರಿಯ ನಟ

ʻನಾನು ರಾಮನನ್ನು ನೋಡಿಲ್ಲ, ಆದರೆ ಮೋದಿಯನ್ನು ನೋಡಿದ್ದೇನೆʼ- ತೆಲುಗು ನಟ

ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ಸಾಹಿತಿ ತನಿಕೇಳ್ಳ ಭರಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ಮೋದಿ ಅವರನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಸ್ವಾಮಿ ವಿವೇಕಾನಂದರಿಗೆ ಹೋಲಿಸಿರುವ ಅವರು, ಪ್ರಧಾನಿಯವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದರಿಂದ ತಮ್ಮ ಜನ್ಮ ಸಾರ್ಥಕವಾಯಿತು ಎಂದು ಹೇಳಿದ್ದಾರೆ.

ಕನ್ನಡಕ್ಕೆ ರಿಮೇಕ್‌ ಆಗಲಿದೆಯಾ ʻದೃಶ್ಯಂ 3ʼ ಸಿನಿಮಾ? ಕುತೂಹಲ ಹುಟ್ಟಿಸಿದ ನಿರ್ಮಾಪಕರ ಆ ಒಂದು ನಡೆ!

ʻದೃಶ್ಯಂ 3ʼ ರಿಲೀಸ್‌ಗೆ ಕೌಂಟ್‌ಡೌನ್; ರಿಮೇಕ್‌ನಲ್ಲಿ ರವಿಚಂದ್ರನ್ ನಟನೆ?

ಮಲಯಾಳಂನ ಜನಪ್ರಿಯ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಮೇ 21ರಂದು ಬಿಡುಗಡೆಗೆ ಸಜ್ಜಾಗಿದ್ದು, ಕನ್ನಡ ಆವೃತ್ತಿಯ ಬಗ್ಗೆ ಕುತೂಹಲ ಮೂಡಿಸಿದೆ. ತಮಿಳು ಮತ್ತು ತೆಲುಗಿಗೆ ಸಿನಿಮಾ ಡಬ್ ಆಗುತ್ತಿದ್ದರೂ, ಕನ್ನಡ ಡಬ್ಬಿಂಗ್ ಬಗ್ಗೆ ಮಾಹಿತಿಯಿಲ್ಲದಿರುವುದು ರವಿಚಂದ್ರನ್ ನಟನೆಯಲ್ಲಿ ರಿಮೇಕ್ ಆಗುವ ಮುನ್ಸೂಚನೆ ನೀಡಿದೆ.

Photos: ʻನಾನು ಶಿವನ ಅಚ್ಚುಮೆಚ್ಚಿನ ಮಗು...ʼ; ಒಬ್ಬಂಟಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

Photos: ಏಕಾಂಗಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

ನಟಿ ಕೃತ್ತಿಕಾ ರವೀಂದ್ರ ಅವರಿಗೆ ಪ್ರವಾಸ ಮಾಡುವುದು ಎಂದರೆ, ಅಚ್ಚುಮೆಚ್ಚು. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಅವರು ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ದೇಶದ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಕೃತ್ತಿಕಾ ಅವರು ಈ ಬಾರಿ ಕೇದಾರನಾಥ ಯಾತ್ರೆ ಮಾಡಿದ್ದಾರೆ. "ಕೇದಾರನಾಥಕ್ಕೆ ಒಬ್ಬಳೇ ಟ್ರೆಕ್ (Solo Trek) ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಹಿಂದೆ ಈ ಯಾತ್ರೆಯನ್ನು ಯೋಜಿಸಿದಾಗ ನಾನು ನಿಜಕ್ಕೂ ಹಿಂಜರಿಯುತ್ತಿದ್ದೆ. ಆದರೆ ಆ ಪರಶಿವನ ಮೇಲೆ ನನಗೆ ಅಪಾರ ನಂಬಿಕೆಯಿತ್ತು. ಹೇಗಾದರೂ ಮಾಡಿ ಆತನೇ ನನಗೆ ಎಲ್ಲವನ್ನೂ ಸುಲಭವಾಗಿಸುತ್ತಾನೆ ಎಂದುಕೊಂಡಿದ್ದೆ. ಆತ ಮಾಡಿದ್ದೂ ಕೂಡ ಅದನ್ನೇ.." ಎಂದು ಹೇಳಿರುವ ಕೃತ್ತಿಕಾ ಈ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ʻದಳಪತಿʼ ವಿಜಯ್‌ ಸಿಎಂ ಆಗುತ್ತಿದ್ದಂತೆಯೇ ಬದಲಾಯ್ತು ʻಜನ ನಾಯಗನ್‌ʼ ಚಿತ್ರದ ನಸೀಬು; ಡಿಜಿಟಲ್‌ ಹಕ್ಕುಗಳಿಗಾಗಿ ಮುಗಿಬಿದ್ದ OTT ‌ಪ್ಲಾಟ್‌ಫಾರ್ಮ್ಸ್!

ಬದಲಾಯ್ತು 'ಜನ ನಾಯಗನ್' ನಸೀಬು; ವಿಜಯ್ CM ಆಗುತ್ತಿದ್ದಂತೆ ಭಾರಿ ಡಿಮ್ಯಾಂಡ್

ದಳಪತಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಡಿಜಿಟಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈ ಹಿಂದೆ ಅಮೆಜಾನ್ ಪ್ರೈಮ್ ಒಪ್ಪಂದ ಮುರಿದುಕೊಂಡಿದ್ದರೂ, ಈಗ ಓಟಿಟಿ ಸಂಸ್ಥೆಗಳು ಭಜರ್ರಿ ಹಣ ನೀಡಲು ಪೈಪೋಟಿ ನಡೆಸುತ್ತಿವೆ.

ʻಆಕೆಯ ದೇಹ, ಆಕೆಯ ದೇವರು, ಕೇಳಲು ನೀನ್ಯಾರುʼ; ಬೆನ್ನಿನ ಮೇಲೆ ದೇವರ ಟ್ಯಾಟೂ ಹಾಕಿಸಿಕೊಂಡ‌ ʻಕಿಚ್ಚʼ ಸುದೀಪ್‌ ಪುತ್ರಿ ಸಾನ್ವಿಗೆ ಚಕ್ರವರ್ತಿ ಚಂದ್ರಚೂಡ್ ಬೆಂಬಲ

ʻಆಕೆಯ ದೇಹ, ಆಕೆಯ ದೇವರು, ಕೇಳಲು ನೀನ್ಯಾರುʼ; ಸಾನ್ವಿಗೆ ಚಂದ್ರಚೂಡ್ ಬೆಂಬಲ

ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಮಡಿ-ಮೈಲಿಗೆಯ ಹೆಸರಿನಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಖಡಕ್ ಉತ್ತರ ನೀಡಿದ್ದಾರೆ.

Amruthadhaare Serial: ಜೈಲಿನಿಂದ ರಿಲೀಸ್‌ ಆದ ಜೈದೇವ್‌! ಮಾಸ್ಟರ್‌ ಪ್ಲ್ಯಾನ್‌ ಏನು?

ಜೈಲಿನಿಂದ ರಿಲೀಸ್‌ ಆದ ಜೈದೇವ್‌! ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial:ದಿಯಾ ಜೈದೇವ್‌ನನ್ನು ಆಚೆ ಹಾಕಿದ್ದಾಳೆ. ಪೊಲೀಸರಿಗೆ ಒಪ್ಪಿಸಿದ್ದಳು. ಆದರೀಗ ಜೈದೇವ್‌ ಆಚೆ ಬಂದಿದ್ದಾನೆ. ಮಾವನ ದೆಸೆಯಿಂದ. ಅಷ್ಟೇ ಅಲ್ಲ ದಿಯಾ ಮನೆ ಮುಂದೆ ಮತ್ತೆ ರಂಪಾಟ ಮಾಡಿದ್ದಾಳೆ. ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು.

Drishyam 3: ‘ದೃಶ್ಯಂ 3’ ಹಿಂದಿ ಚಿತ್ರದಲ್ಲಿ ಭಾರೀ ಬದಲಾವಣೆ; ಹೇಗಿರಲಿದೆ?

‘ದೃಶ್ಯಂ 3’ ಹಿಂದಿ ಚಿತ್ರದಲ್ಲಿ ಭಾರೀ ಬದಲಾವಣೆ; ಹೇಗಿರಲಿದೆ?

Drishyam 3: ಹಿಂದಿ ಆವೃತ್ತಿ ದೃಶ್ಯಂ 3 ಅಜಯ್ ದೇವಗನ್ (Abhishek Pathak ) ಅಭಿನಯದ ಈ ಚಿತ್ರ ಅಕ್ಟೋಬರ್ 2, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಅಭಿಷೇಕ್ ಪಾಠಕ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಆದರೆ ಅಜಯ್ ದೇವಗನ್ದೃಶ್ಯಂ 3 ಮೋಹನ್ ಲಾಲ್ ಅವರ ಆವೃತ್ತಿಯಂತೆಯೇ ಇರುತ್ತದೆ, ಅಥವಾ ಬೇರೆ ಇರುತ್ತದೇಯೇ ಅನ್ನೋ ಕುತೂಹಲ.

Mouni Roy : 'ಕೆಜಿಎಫ್‌' ಚೆಲುವೆಯ ದಾಂಪತ್ಯದಲ್ಲಿ ಬಿರುಕು?

Mouni Roy : 'ಕೆಜಿಎಫ್‌' ಚೆಲುವೆಯ ದಾಂಪತ್ಯದಲ್ಲಿ ಬಿರುಕು?

Mouni Roy :ಮೌನಿ ರಾಯ್ ''ಕೆ.ಜಿ.ಎಫ್'' (KGF) ಚಿತ್ರದ ಹಿಂದಿ ವರ್ಷನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದ ನಟಿ. ಮೌನಿ ಮತ್ತು ಸೂರಜ್ ಜನವರಿ 2022 ರಲ್ಲಿ ಮದುವೆಯಾದಾಗಿನಿಂದ ಸಾರ್ವಜನಿಕರ ಗಮನದಲ್ಲಿದ್ದಾರೆ. ದಂಪತಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಒಟ್ಟಿಗೆ ಇರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು, ಪರಸ್ಪರ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು.

Priyanka Chopra: ಮಗಳ ಗಿಫ್ಟ್‌ ಕಂಡು ಭಾವುಕ ಪೋಸ್ಟ್‌ ಶೇರ್‌ ಮಾಡಿದ ಪ್ರಿಯಾಂಕಾ ಚೋಪ್ರಾ !

ಮಗಳ ಗಿಫ್ಟ್‌ ಕಂಡು ಭಾವುಕ ಪೋಸ್ಟ್‌ ಶೇರ್‌ ಮಾಡಿದ ಪ್ರಿಯಾಂಕಾ ಚೋಪ್ರಾ !

Priyanka Chopra: ಈ ವರ್ಷ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕೆಲಸದ ಬದ್ಧತೆಯಿಂದಾಗಿ ಮನೆಯಿಂದ ದೂರವಿದ್ದು ತಾಯಂದಿರ ದಿನವನ್ನು ಆಚರಿಸಿದರು . ಆದಾಗ್ಯೂ, ಅವರು ಮನೆಗೆ ಮರಳಿದಾಗ, ಅವರ ಮಗಳು ಮಾಲತಿ (Malti Marie) ಸಂದರ್ಭವನ್ನು ವಿಶೇಷವಾಗಿಸಿದರು. ಪ್ರಿಯಾಂಕಾ ಇತ್ತೀಚೆಗೆ ಅಭಿಮಾನಿಗಳಿಗೆ ತಮ್ಮ ಪುಟ್ಟ ಮಗಳಿಂದ ಪಡೆದ ಸಿಹಿ ಉಡುಗೊರೆಯ ಒಂದು ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

Balan The Boy:  ʻಕೆವಿಎನ್‌ʼ ಪ್ರೊಡಕ್ಷನ್ಸ್‌ನ ʻಬಾಲನ್‌ ದಿ ಬಾಯ್ʼ ರಿಲೀಸ್‌ ಯಾವಾಗ?

ʻಕೆವಿಎನ್‌ʼ ಪ್ರೊಡಕ್ಷನ್ಸ್‌ನ ʻಬಾಲನ್‌ ದಿ ಬಾಯ್ʼ ರಿಲೀಸ್‌ ಯಾವಾಗ?

Balan The Boy: ಚಿತ್ರಕ್ಕೆ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ಅವರು ಆಕ್ಷನ್ ಕಟ್ ಹೇಳಿದ್ದು, ಹಾಗಾಗಿ ಚಿತ್ರದ ಮೇಲೆ ಸಹಜವಾಗಿಯೇ ಭಾರಿ ನಿರೀಕ್ಷೆಗಳಿವೆ. ಈ ಚಿತ್ರವನ್ನು 'ಆವೇಶಮ್' ಚಿತ್ರಕ್ಕೆ ಹೆಸರುವಾಸಿಯಾಗಿರುವ ಜಿತು ಮಾಧವನ್ ಬರೆದಿದ್ದಾರೆ.

ʻಉಪೇಂದ್ರʼ ಸಿನಿಮಾ ರೀ-ರಿಲೀಸ್‌; ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಸಿಗಲಿದೆ ಕೋಟಿ ರೂಪಾಯಿ ಬಹುಮಾನ!

ʻಉಪೇಂದ್ರʼ ಚಿತ್ರ ನೋಡಿ ಕೋಟ್ಯಧಿಪತಿಯಾಗಿ; ಉಪ್ಪಿ ಫ್ಯಾನ್ಸ್‌ಗೆ‌ ಗಿಫ್ಟ್!

'ಉಪೇಂದ್ರ' ಸಿನಿಮಾವು ಜೂನ್ 4ರಂದು ಮರು-ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರಿಗೆ ಕೋಟಿ ರೂಪಾಯಿ ಗೆಲ್ಲುವ ಸುವರ್ಣಾವಕಾಶವಿದೆ. 'ಇಶ್ ಮೈರಾ' ಕಂಪನಿಯ ಪರಮೇಶ್ವರ್ ಬಿ ಈ ವಿನೂತನ ಕಾನ್ಸೆಪ್ಟ್‌ನ ರೂವಾರಿಯಾಗಿದ್ದಾರೆ. ಚಿತ್ರದ ಪ್ರತಿ ಪ್ರದರ್ಶನದ ನಂತರ ಪ್ರಶ್ನೆಗೆ ಉತ್ತರಿಸುವವರಿಗೆ ಅಂದಿನ ಕಲೆಕ್ಷನ್ ಮೊತ್ತವನ್ನು ನೀಡಲಾಗುತ್ತದೆಯಂತೆ!

ʻಕೃಷ್ಣಾವತಾರಂʼ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ಟ್ಯಾಕ್ಸ್‌ ಫ್ರೀ ಮಾಡಿದ ಸಿಎಂ ಯೋಗಿ ಆದಿತ್ಯನಾಥ್;‌ ಇದು ಕನ್ನಡಿಗರು ನಟಿಸಿರುವ ಸಿನಿಮಾ

ಉತ್ತರ ಪ್ರದೇಶದಲ್ಲಿ 'ಕೃಷ್ಣಾವತಾರಂ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಕೃಷ್ಣಾವತಾರಂ: ಪಾರ್ಟ್ 1' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಲೋಕಭವನದಲ್ಲಿ ಚಿತ್ರ ವೀಕ್ಷಿಸಿದ ಅವರು, ಸನಾತನ ಸಂಸ್ಕೃತಿ ಮತ್ತು ಶ್ರೀಕೃಷ್ಣನ ಜೀವನವನ್ನು ಭವ್ಯವಾಗಿ ಚಿತ್ರಿಸಿರುವುದನ್ನು ಶ್ಲಾಘಿಸಿದರು. ಕನ್ನಡದ ಸುಶ್ಮಿತಾ ಭಟ್ ಮತ್ತು ಜೆಕೆ ಅಂತಹ ಸ್ಯಾಂಡಲ್‌ವುಡ್ ಪ್ರತಿಭೆಗಳು ಈ ಚಿತ್ರದಲ್ಲಿರುವುದು ವಿಶೇಷ.

Priyanka Chopra: ವಾರಣಾಸಿ ಶೂಟಿಂಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ: ಫೋಟೋ ವೈರಲ್‌

ವಾರಣಾಸಿ ಶೂಟಿಂಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ!

Priyanka Chopra: ಚಿತ್ರದ ಇತ್ತೀಚಿನ ಶೆಡ್ಯೂಲ್‌ನಲ್ಲಿ ಭಾಗಿಯಾಗಿರೋದು ಕನ್‌ಫರ್ಮ್‌ ಆಗಿದೆ. ಇತ್ತೀಚೆಗೆ, ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ವಾರಣಾಸಿ ಚಲನಚಿತ್ರ ವೇಳಾಪಟ್ಟಿಯನ್ನು ನೀರಿನ ಕೊರತೆಯ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಳಿಸಲಾಯಿತು. ವಾರಣಾಸಿ 7 ಏಪ್ರಿಲ್ 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು! ತಂಗಿಗೆ ಹಿಂಸೆ ಕೊಟ್ಟವರನ್ನು ಸುಮ್ಮನೆ ಬಿಡ್ತಾನಾ?

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು!

Annayya Serial: ರಶ್ಮಿ ಬದುಕಲ್ಲಿ ಕೇವಲ ಸೀನ ಮಾತ್ರವಲ್ಲ, ಸೀನನ ತಾಯಿಯ ಪಾತ್ರ ಕೂಡ ಇದೆ. ಆಕೆ ರಶ್ಮಿಗೆ ಒಂದೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ರಶ್ಮಿ ಪುನಃ ಅತ್ತೆ ಮನೆಗೆ ವಾಪಸ್‌ ಆದ ಬಳಿಕ ಪಾರು ಶಿವು ತಾಯಿ ಬಳಿ ನಿಟ್ಟುಸಿರು ಬಿಟ್ಟಿದ್ದಳು. ಆದರೆ ಅಸಲಿ ಕಥೆ ಬೇರೆಯೇ ಇದೆ.

ಅವಮಾನ ಎದುರಿಸಿದ ಜಾಗದಲ್ಲೇ ಸನ್ಮಾನ ಪಡೆದ ಸಿಎಂ ವಿಜಯ್‌; 13 ವರ್ಷಗಳ ಹಿಂದೆ ದಳಪತಿಗೆ ಮುಜುಗರಪಡಿಸಿದ್ದ ಜಯಲಲಿತಾ!

ಅವಮಾನವಾದ ಜಾಗದಲ್ಲೇ CM ವಿಜಯ್‌ಗೆ ಸನ್ಮಾನ; 13 ವರ್ಷಗಳ ಹಿಂದೆ ಏನಾಗಿತ್ತು?

ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಇದೇ ಮೈದಾನದಲ್ಲಿ 13 ವರ್ಷಗಳ ಹಿಂದೆ ಜಯಲಲಿತಾ ಸರ್ಕಾರದಿಂದ ನೆಹರೂ ಸ್ಟೇಡಿಯಂನಲ್ಲಿ ವಿಜಯ್‌ಗೆ ಅವಮಾನ ಮಾಡಲಾಗಿತ್ತು. ಇಂದು ಅದೇ ಜಾಗದಲ್ಲಿ ರಾಜ್ಯದ ಸರ್ವೋಚ್ಚ ನಾಯಕನಾಗಿ ಉದಯಿಸಿದ್ದು, ಕಾಲಚಕ್ರದ ರೋಚಕ ತಿರುವಿಗೆ ಸಾಕ್ಷಿ.

ರಜನಿಕಾಂತ್‌ - ಕಮಲ್‌ ಹಾಸನ್‌ ಜೋಡಿಯ ಸಿನಿಮಾಗೆ ತ್ರಿಶಾ ನಾಯಕಿ? ಉದಯನಿಧಿ ಸ್ಟಾಲಿನ್‌ ನಿರ್ಮಾಣದ ಚಿತ್ರಕ್ಕೆ ಬರ್ತಾರಾ ವಿಜಯ್‌ ಫ್ರೆಂಡ್?

ರಜನಿಕಾಂತ್‌ - ಕಮಲ್ ಹಾಸನ್‌ ನಟನೆಯ ಸಿನಿಮಾಗೆ ತ್ರಿಷಾ ಕೃಷ್ಣನ್ ನಾಯಕಿ?

ʻಸೂಪರ್ ಸ್ಟಾರ್ʼ ರಜನಿಕಾಂತ್ ಮತ್ತು ಕಮಲ್ ಹಾಸನ್ ಹಲವು ದಶಕಗಳ ನಂತರ ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ನಿರ್ಮಾಣದ ಈ ಮೆಗಾ ಪ್ರಾಜೆಕ್ಟ್‌ಗೆ ನಾಯಕಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

'ಪಿಚ್ಚರ್' ಚಿತ್ರಕ್ಕಾಗಿ ಗಾಯಕಿಯಾದ ಶಿಲ್ಪಾ ಗಣೇಶ್; ಮೊದಲ ಪ್ರಯತ್ನದಲ್ಲೇ ಕನ್ನಡ-ತುಳು ಹಾಡಿಗೆ ʻಗೋಲ್ಡನ್ ಸ್ಟಾರ್‌ʼ ಪತ್ನಿ ಧ್ವನಿ

'ಪಿಚ್ಚರ್' ಚಿತ್ರಕ್ಕಾಗಿ ಮೊದಲ ಬಾರಿಗೆ ಮೈಕ್ ಹಿಡಿದ ಗಣೇಶ್ ಪತ್ನಿ ಶಿಲ್ಪಾ

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ʻಗೋಲ್ಡನ್ ಮೂವೀಸ್ʼ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ 'ಪಿಚ್ಚರ್' ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 'ಗೋಕುಲದ ರಾಧೆ' ಎಂಬ ಹಾಡನ್ನು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಮೆರೆದಿದ್ದಾರೆ.

Thalapathy Vijay: ʻಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆʼ; ಟ್ರೋಲ್‌ ಮಾಡಿದವರಿಗೆ ನಟಿ ತ್ರಿಷಾ ಕೃಷ್ಣನ್ ತಿರುಗೇಟು

ʻಪ್ರೀತಿಯ ಸದ್ದು ಯಾವಾಗಲೂ ಜೋರುʼ; ಟ್ರೋಲ್‌ ಮಾಡಿದವರಿಗೆ ತ್ರಿಷಾ ತಿರುಗೇಟು

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಟ್ರೋಲ್‌ಗೊಳಗಾದ ನಟಿ ತ್ರಿಷಾ ಕೃಷ್ಣನ್ ಈಗ ತಿರುಗೇಟು ನೀಡಿದ್ದಾರೆ. "ಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯುವ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ಟಾಲಿವುಡ್‌ಗೆ ಆಘಾತ; ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಯುವ ನಟ ಭರತ್ ಕಾಂತ್ - ಛಾಯಾಗ್ರಾಹಕ ತ್ರಿಲೋಕ್

ಅಪಘಾತದಲ್ಲಿ ಪ್ರಾಣಬಿಟ್ಟ ನಟ ಭರತ್‌ಕಾಂತ್‌ - ಛಾಯಾಗ್ರಾಹಕ ಸಾಯಿ ತ್ರಿಲೋಕ್

ಟಾಲಿವುಡ್‌ನ ಉದಯೋನ್ಮುಖ ನಟ ಭರತ್ ಕಾಂತ್ ಮತ್ತು ಯುವ ಛಾಯಾಗ್ರಾಹಕ ಸಾಯಿ ತ್ರಿಲೋಕ್ ಹೈದರಾಬಾದ್ ಹೊರವಲಯದ ಔಟರ್ ರಿಂಗ್ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಭಾನುವಾರ ಮುಂಜಾನೆ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಇವರಿಗೆ 31 ವರ್ಷ ವಯಸ್ಸಾಗಿತ್ತು.

Loading...