ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವನ್ನು ಟೀಕಿಸಿದ ಅನುರಾಧಾ ಪೌಡ್ವಾಲ್
ಭಾರತವನ್ನು ವಿಶ್ವ ಗುರು ಎಂದು ಹೇಳುವುದನ್ನು ನಿಲ್ಲಿಸಿ. ದೇಶಾದ್ಯಂತ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಕೆಲವು ವರ್ಷಗಳ ಹಿಂದೆ ನಾನು ಕೂಡ ನಮ್ಮ ದೇಶ ವಿಶ್ವ ಗುರು ಆಗುತ್ತದೆ ಎಂದು ಬಲವಾಗಿ ನಂಬಿದೆ. ಆದರೆ ಈಗ ಅದು ಸುಳ್ಳಾಗುತ್ತಿದೆ ಎಂದು ಗಾಯಕಿ ಅನುರಾಧಾ ಪೌಡ್ವಾಲ್ ಹೇಳಿದರು. ಶುಭಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ನಲ್ಲಿ ಅವರು ಮಾತನಾಡಿದರು.