ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Amruthadhaare Serial: ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯಾಯ್ತು; ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!

ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!

Amruthadhaare Kannada serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಅಂತೂ ಮಲ್ಲಿ ವಿವಾಹದ ಬಗ್ಗೆ ಗೌತಮ್‌ ಚರ್ಚೆ ಮಾಡಿದ್ದಾನೆ. ಪೈಲ್ವಾನ್‌ ಸುನಿಯನ್ನು ಮನೆಗೆ ಕರೆಸಿ ಗೌತಮ್‌ ಮಾತಾಡಿದ್ದೂ ಆಗಿದೆ. ಜೊತೆಗೆ ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯೂ ಆಗಿದೆ. ಇದರ ಜೊತೆಗೆ ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಗಿದೆ. ಅಪೇಕ್ಷಾ ಈ ಬಗ್ಗೆ ಭೂಮಿ ಜೊತೆಗೆ ಚರ್ಚೆ ಮಾಡ್ತಾಳಾ?

Toxic: ರಾಯನ ಅಖಾಡಕ್ಕೆ ಎಂಟ್ರಿ ಕೊಟ್ಟ ಮಾಲಿವುಡ್‌ನ ಸುದೇವ್‌ - ಬಾಲಿವುಡ್‌ನ ಅಕ್ಷಯ್ ಒಬೆರಾಯ್! ಇವರ ಪಾತ್ರಗಳೇನು?

ʻಟಾಕ್ಸಿಕ್‌ʼ ಅಖಾಡಕ್ಕೆ ಅಕ್ಷಯ್ ಒಬೆರಾಯ್ - ಸುದೇವ್ ನಾಯರ್ ಎಂಟ್ರಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಚಿತ್ರಕ್ಕೆ ಬಾಲಿವುಡ್‌ನ ಅಕ್ಷಯ್ ಒಬೆರಾಯ್ 'ಟೋನಿ'ಯಾಗಿ ಮತ್ತು ಮಾಲಿವುಡ್‌ನ ಸುದೇವ್ ನಾಯರ್ 'ಕರ್ಮಡಿ'ಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ರೆಟ್ರೋ ಹಾಗೂ ರಗಡ್ ಲುಕ್ ವೈರಲ್ ಆಗಿವೆ. ಯಶ್ ನಟನೆಯ ಈ ಚಿತ್ರ ಮಾರ್ಚ್ 19ರಂದು ತೆರೆಕಾಣಲಿದೆ.

Virosh Wedding: ಬರುವ ಸೊಸೆ ಹೀಗಿರಬೇಕು! ವಿಜಯ್ ದೇವರಕೊಂಡ ಪೋಷಕರ ಕಂಡೀಷನ್ ಏನಿತ್ತು?

ಬರುವ ಸೊಸೆ ಹೀಗಿರಬೇಕು! ವಿಜಯ್ ದೇವರಕೊಂಡ ಪೋಷಕರ ಕಂಡೀಷನ್ ಏನಿತ್ತು?

Rashmika Vijay: 'ವಿರೋಷ್' ವಿವಾಹ (Virosh Marriage) ಅಧಿಕೃತವಾಗಿ ಅನೌನ್ಸ್‌ ಆಗಿದ್ದಾಗಿನಿಂದ ಅಭಿಮಾನಿಗಳು ಹಳೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹುಡುಕಿ ವೈರಲ್‌ ಮಾಡುತ್ತಿದ್ದಾರೆ. ವಿವಾಹಕ್ಕೂಮೊದಲು ಈ ಜೋಡಿ ಹಲವು ವರ್ಷಗಳ ಮೊದಲು ಪರಸ್ಪರ ಪರಿಚಿತರಾಗಿದ್ದಾರೆ. ವಿಜಯ್ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ತಮ್ಮ ಕನಸಿನ ಸೊಸೆ ಬಗ್ಗೆಈ ಹಿಂದೆ ಮಾತನಾಡಿರುವ ವಿಡಿಯೋವನ್ನು ಫ್ಯಾನ್ಸ್‌ ಹಂಚಿಕೊಂಡಿದ್ದಾರೆ.

ನಿಮ್ಮಲ್ಲಿ ಕಥೆ ಇದ್ಯಾ? ನೀವು ನಿರ್ದೇಶಕರಾಗಬೇಕಾ? ನಿಮಗಾಗಿ ಬರ್ತಿದೆ ʻಜೀ ಕಿರುಚಿತ್ರ ಸ್ಪರ್ಧೆʼ; ತೀರ್ಪುಗಾರರು ಹೇಳಿದ್ದೇನು?

7 ಭಾಷೆಗಳಲ್ಲಿ ಜೀ ಕಿರುಚಿತ್ರ ಸ್ಪರ್ಧೆ; ಪ್ರತಿಭಾವಂತರಿಗೆ ಭರ್ಜರಿ ಚಾನ್ಸ್!

Zee Short Film Contest: ಭಾರತದಾದ್ಯಂತ ಇರುವ ಉದಯೋನ್ಮುಖ ನಿರ್ದೇಶಕರಿಗೆ ತಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಲು ಜೀ ಸಂಸ್ಥೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುತ್ತಿದೆ. ಕನ್ನಡ ಸೇರಿದಂತೆ ಏಳು ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಸ್ಪರ್ಧೆಗೆ ಘಟಾನುಘಟಿ ನಿರ್ದೇಶಕರು ತೀರ್ಪುಗಾರರಾಗಿದ್ದಾರೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಭವಿಷ್ಯದಲ್ಲಿ ಜೀ ಸಂಸ್ಥೆಯೊಟ್ಟಿಗೆ ಕೆಲಸ ಮಾಡುವ ಸುವರ್ಣಾವಕಾಶವೂ ಸಿಗಲಿದೆ.

Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ? ವಿಧಿ ಆಟದ ಮುಂದೆ `ಮುದ್ದು ಸೊಸೆʼ ಸೋಲುತ್ತಾಳಾ?

Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ?

Muddu Sose kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ 'ಮುದ್ದುಸೊಸೆ' ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ.

Actor Darshan: ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್!

ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್!

Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದು, ಅವರಿಗೆ ನ್ಯಾಯಾಲಯದಿಂದ ಸಣ್ಣ ರಿಲೀಫ್ ಸಿಕ್ಕಿದೆ. ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತುಗೊಳಿಸಿದ್ದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅಮಾನತುಗೊಂಡಿದ್ದ ಗನ್ ಲೈಸೆನ್ಸ್​ಗೆ ಹೈಕೋರ್ಟ್ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ.

ʻಧುರಂಧರ್‌ 2ʼ ಚಿತ್ರಕ್ಕಿಂತ ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ʻಟಾಕ್ಸಿಕ್‌ʼ ಒಂದು ಹೆಜ್ಜೆ ಮುಂದು; ಯಾಕೆ ಗೊತ್ತಾ?

Yash: 'ಧುರಂಧರ್ 2' ಹಿಂದಿಕ್ಕಿ ಮುನ್ನುಗ್ಗುತ್ತಿರುವ 'ಟಾಕ್ಸಿಕ್'!

Toxic vs Dhurandhar 2: ಮಾರ್ಚ್ 19ರಂದು ಟಾಕ್ಸಿಕ್‌ ಮತ್ತು ಧುರಂಧರ್‌ 2 ಒಟ್ಟಿಗೆ ತೆರೆಗೆ ಬರುತ್ತಿವೆ. ಆದರೆ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕಿಂತ ಯಶ್ ಅವರ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಐಎಂಡಿಬಿ ರೇಟಿಂಗ್, ಆಡಿಯೋ ಹಕ್ಕುಗಳ ದಾಖಲೆ ಹಾಗೂ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಟಾಕ್ಸಿಕ್ ಸಿನಿಮಾ ಮುಂದಿದೆ.

ಯಾವ ಸಿನಿಮಾಗೂ ಕಮ್ಮಿ ಇಲ್ಲ ರಶ್ಮಿಕಾ ಮಂದಣ್ಣ ರಿಯಲ್‌ ಲೈಫ್‌ ಜರ್ನಿ; ಕಳೆದ 10 ವರ್ಷಗಳಲ್ಲಿ ಏನೇನ್‌ ಆಯ್ತು ನೋಡಿ!

ʻಕೊಡಗಿನ ಕುವರಿʼ ರಶ್ಮಿಕಾ ಮಂದಣ್ಣ ಬದುಕಿನ ಕಳೆದ 10 ವರ್ಷಗಳು ಹೇಗಿದ್ದವು?

Rashmika Mandanna Journey: ರಶ್ಮಿಕಾ ಮಂದಣ್ಣ ಅವರ ಬದುಕು ಕಳೆದ 10 ವರ್ಷಗಳಲ್ಲಿ ಯಾವುದೇ ಸಿನಿಮಾ ಕಥೆಗೂ ಕಮ್ಮಿ ಇಲ್ಲದಂತೆ ಸಾಗಿದೆ. 'ಕಿರಿಕ್ ಪಾರ್ಟಿ' ಮೂಲಕ 20ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ, ಸಕ್ಸಸ್, ನಿಶ್ಚಿತಾರ್ಥದ ಬ್ರೇಕಪ್ ಮತ್ತು ಟ್ರೋಲ್‌ಗಳಂತಹ ಹಲವು ಏರಿಳಿತಗಳನ್ನು ಎದುರಿಸಿದರು. ಇದೀಗ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ʻಟಾಕ್ಸಿಕ್‌ʼ ಚಿತ್ರದ ಮಲಯಾಳಂ ವರ್ಷನ್‌ ಹಕ್ಕುಗಳು ಯಾರ ಪಾಲಾಯ್ತು? ಯಶ್‌ ಸಿನಿಮಾ ಸಿಕ್ಕಿದ್ದಕ್ಕೆ ಕೇರಳ ವಿತರಕರು ಫುಲ್‌ ಖುಷ್

‌Toxic: ಕೇರಳದಲ್ಲಿ ಯಶ್ ಅಬ್ಬರ: ಮಲಯಾಳಂ ವಿತರಣಾ ಹಕ್ಕು ಯಾರಿಗೆ ಸಿಕ್ತು?

Toxic Malayalam Rights: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕೇರಳ ವಿತರಣಾ ಹಕ್ಕುಗಳನ್ನು E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ತವರು ರಾಜ್ಯವಾದ ಕೇರಳದಲ್ಲಿ ಸುಮಾರು 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

Rashmika Vijay Wedding: ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ! ಜೋಡಿ ಲುಕ್‌ ಕಂಡು ಫ್ಯಾನ್ಸ್‌ ಖುಷ್‌

ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ!

Rashmika Vijay Wedding: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ವಿವಾಹವಾಗಲಿದ್ದಾರೆ. ಫೆಬ್ರವರಿ 23 ರಂದು, ಇಬ್ಬರೂ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ವಿವಾಹ ಪೂರ್ವ ವಿವಾಹ ಸಮಾರಂಭಗಳು ಮತ್ತು ಅವರ ಅದ್ಧೂರಿ ವಿವಾಹಕ್ಕಾಗಿ ಉದಯಪುರಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ‌ಸಿಗುತ್ತಾ?

Annayya Kannada Serial: ಪರಶು ಮುಖವಾಡ ಬಯಲಾಗುತ್ತಾ?

Annayya Kannada Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ದೊಡ್ಡ ತಂಗಿ ರತ್ನ ಮದುವೆ ಸಂಭ್ರಮ ಜೋರಾಗಿದೆ. ಆದರೆ ಪರಶು ಹಾಗೂ ವೀರಭದ್ರ ಮಾಡುತ್ತಿರುವ ಮೋಸದ ಬಗ್ಗೆ ಇನ್ನೂ ಅಣ್ಣನಿಗೆ ಅರಿವಿಲ್ಲ.ಈಗ ಮತ್ತೊಂದು ಕುತೂಹಲ ಟ್ವಿಸ್ಟ್‌ ಎದುರಾಗಿದೆ. ರತ್ನ ಹಾಗೂ ಪರಶು ಮದುವೆ ದಿನವೇ ಪರಶುನನ್ನು ಓಡಿ ತಬ್ಬಿಕೊಂಡಿದ್ದಾನೆ ಚಿಕ್ಕ ಮಗು. ಹೀಗಾಗಿ ಪರಶುಗೆ ಈಗಾಗಲೇ ಮದುವೆ ಆಗಿದೆಯಾ? ಅನ್ನೋದೇ ಟ್ವಿಸ್ಟ್.‌

Krishna Rukku Serial: ಎಲ್ಲವನ್ನ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು? ಪ್ರೋಮೋಗೆ ವೀಕ್ಷಕರ ಮೆಚ್ಚುಗೆ

Krishna Rukku: ಕಷ್ಟ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು?

Krishna Rukku Kannada Serial: ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು. ಅಕ್ಷಯ್‌ ನಾಯಕ್‌ ಮತ್ತು ನಟಿ ಮೌನ ಗುಡ್ಡೆಮನೆ ಅಭಿನಯಿಸುತ್ತಿರುವ ‘ಕೃಷ್ಣ ರುಕ್ಕು’ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಮೊದಲು ಪ್ರೋಮೋದಲ್ಲಿ ಕೃಷ್ಣ(ಅಕ್ಷಯ್‌) ಒಂದ್‌ ಕೈಯಲ್ಲಿ ಅಮ್ಮನ ಫೋಟೋ, ಮತ್ತೊಂದ್ದು ಕೈಯಲ್ಲಿ ಡ್ರಿಂಕ್ಸ್‌ ಬಾಟಲ್‌ ಹಿಡಿದು ನಶೆಯಲ್ಲಿ ತೇಲಾಡುವ ದೃಶ್ಯ ಇದೆ. ಈಗ ಎರಡನೇ ಪ್ರೋಮೋದಲ್ಲಿ ಒಟ್ಟಾರೆ ಸೀರಿಯಲ್‌ ಕಥೆ ಏನು ಎಂಬುದು ರಿವೀಲ್‌ ಆಗಿದೆ.

Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್​​ಜಿವಿ? ಗರಂ ಆದ್ರು ಕನ್ನಡಿಗರು

‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್​​ಜಿವಿ?

RGV makes his choice: ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಆದಿತ್ಯ ಧರ್ ಅವರ ಬ್ಲಾಕ್‌ಬಸ್ಟರ್ ಸ್ಪೈ ಥ್ರಿಲ್ಲರ್ ಚಿತ್ರ ಧುರಂಧರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ , ಇದರಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ, ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗಿನಿಂದ ಚಿತ್ರಕ್ಕೆ ಅವರ ನಿರಂತರ ಬೆಂಬಲವನ್ನು ಎತ್ತಿ ತೋರಿಸಿದ್ದಾರೆ.

Rashmika Vijay Wedding: ವಿಜಯ್‌ ದೇವರಕೊಂಡ ಜೊತೆ ಹಸೆಮಣೆ ಏರಲಿರುವ ರಶ್ಮಿಕಾ ಮಂದಣ್ಣ; ಅಧಿಕೃತ ಘೋಷಣೆ

ವಿಜಯ್‌ ದೇವರಕೊಂಡ ಜೊತೆ ಹಸೆಮಣೆ ಏರಲಿರುವ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೊನೆಗೂ ಅಧಿಕೃತವಾಗಿ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ. ಸಾಕಷ್ಟು ವದಂತಿಗಳು ಮತ್ತು ಉಹಾಪೋಹಗಳ ನಡುವೆ ರಶ್ಮಿಕಾ ಪೋಸ್ಟ್‌ ಮುಖಾಂತರ ಎಲ್ಲ ಅಂತೆ ಕಂತೆಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಇದೀಗ ಜೋಡಿಯ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹವನ್ನು ಅಧಿಕೃತವಾಗಿ "ದಿ ವೆಡ್ಡಿಂಗ್ ಆಫ್ ವಿರೋಶ್" ಎಂದು ಕರೆದುಕೊಂಡಿದ್ದಾರೆ.

Maa Inti Bangaram: ಸಮಂತಾ- ದೂದ್ ಪೇಡಾ ದಿಗಂತ್‌ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್‌ ಡೇಟ್‌ ಅನೌನ್ಸ್‌

ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್‌ ಡೇಟ್‌ ಅನೌನ್ಸ್‌

Samantha: ನಟಿ ಸಮಂತಾ ರುತ್ ಪ್ರಭು ತಮ್ಮ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಿದ್ದಾರೆ. ಟೀಸರ್ ಮೂಲಕ ಸಖತ್‌ ಸುದ್ದಿ ಮಾಡಿದ್ದ ಮೂವಿ, ಇಂದು ಬಿಡುಗಡೆ ದಿನಾಂಕದ ಅಪ್‌ಡೇಟ್‌ ಪೋಸ್ಟರ್‌ ಜೊತೆ ಶೇರ್‌ ಮಾಡಿಕೊಂಡಿದೆ. ನಂದಿನಿ ರೆಡ್ಡಿ ನಿರ್ದೇಶನ ಈ ಸಿನಿಮಾಕ್ಕಿದೆ.

ʻಜೈ ಶ್ರೀ ರಾಮ..ʼ ಎನ್ನುತ್ತಾ ಅಂಜನಾದ್ರಿ ಬೆಟ್ಟದಲ್ಲಿ ʻಜೈ ಹನುಮಾನ್‌ʼ ಸಿನಿಮಾ ಆರಂಭಿಸಿದ ರಿಷಬ್‌ ಶೆಟ್ಟಿ; ಇಲ್ಲಿವೆ ಮುಹೂರ್ತದ ಫೋಟೋಗಳು

Photos: 'ಜೈ ಶ್ರೀರಾಮ್' ಎನ್ನುತ್ತಾ 'ಜೈ ಹನುಮಾನ್' ಶುರು ಮಾಡಿದ ರಿಷಬ್!

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯದ ʻಜೈ ಹನುಮಾನ್ʼ‌ ಸಿನಿಮಾಕ್ಕೆ ಕೊಪ್ಪಳದ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಟ ರಿಷಬ್‌ ಶೆಟ್ಟಿ, "ಜೈ ಶ್ರೀ ರಾಮ.. ಹನುಮಂತನ ದೈವಿಕ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್...‌ ಈ ಪವಿತ್ರ ಪ್ರಯಾಣವನ್ನು ಪ್ರಾರಂಭಿಸುವುದು ನನ್ನ ಹೃದಯವನ್ನು ಅಪಾರ ಕೃತಜ್ಞತೆ ಮತ್ತು ಜವಾಬ್ದಾರಿಯಿಂದ ತುಂಬಿಸಿದೆ" ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ ನೋಡಿ.

Maryaade Ramanna serial: ಅಖಾಡದಲ್ಲಿ ಪಂದ್ಯ ಗೆಲ್ಲೋ ರಾಮಣ್ಣ, ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ?

Maryaade Ramanna: ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ ರಾಮಣ್ಣ?

Maryaade Ramanna serial: ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಯೊಂದು ಬರುತ್ತಿದೆ. ಅದುವೇ ‘ಮರ್ಯಾದೆ ರಾಮಣ್ಣ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಪೈಲ್ವಾನ್‌ ಕುರಿತ ಕಥೆ ಹೊಂದಿದ್ದು, ಎರಡನೇ ಪ್ರೋಮೋ ರಿಲೀಸ್‌ ಆಗಿದೆ. ಹಠಮಾರಿ ನಾಯಕ ಮತ್ತು ಮೃದು ಸ್ವಭಾವದ ನಾಯಕಿಯ ನಡುವಿನ ಜಟಾಪಟಿ ಇದೆ. ಈ ಧಾರಾವಾಹಿಯಲ್ಲಿ ನಾಯಕ ಚೇತನ್‌ ಚಂದ್ರ .

ʻಜನ ನಾಯಗನ್‌ʼ ಸಿನಿಮಾ ನೋಡಲು ಇನ್ನೂ 4 ತಿಂಗಳು ಕಾಯಬೇಕು? ಇದು ಸುದ್ದಿ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಖುಷಿ ನೀಡುತ್ತಾ?

ʻಜನ ನಾಯಗನ್‌ʼ ಸದ್ಯಕ್ಕೆ ರಿಲೀಸ್‌ ಆಗೋದಿಲ್ವಾ? ಚಿತ್ರತಂಡದ ಪ್ಲ್ಯಾನ್‌ ಏನು?

Jana Nayagan Movie: ತಮಿಳಿನ ಜನ ನಾಯಗನ್‌ ಸಿನಿಮಾದ ಬಿಡುಗಡೆಗೆ ತಡವಾಗುತ್ತಿರುವುದರಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಜನವರಿಯಲ್ಲಿ ಬರಬೇಕಿದ್ದ ವಿಜಯ್ ಅವರ ಈ ಕೊನೆಯ ಸಿನಿಮಾ ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ರಿಲೀಸ್ ಆಗುವ ಸಾಧ್ಯತೆಯಿದೆ.

Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್‌

Amruthadhaare: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್!

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೇಡಿಯ ದರ್ಪಕ್ಕೆ ಗೌತಮ್ ದಿವಾನ್ ಸಿಡಿದ್ದೆದ್ದಿದ್ದಾನೆ. ಜೈದೇವ್‌ ಮಾಡಿರುವ , ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಮಲ್ಲಿ ವಿರುದ್ಧ ಸುನಿಯನ್ನು ಎತ್ತಿಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸಾಲದೇ ಗೌತಮ್‌ನಿಂದ ಆಸ್ತಿಯನ್ನ ಪೂರ್ತಿ ಕಬಳಿಸಿದರೂ ಇನ್ನೂ ತನ್ನ ಹಳೆ ಬುದ್ಧಿಯನ್ನು ಬಿಡುತ್ತಿಲ್ಲ. ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ.

Actor Darshan: ದರ್ಶನ್ ಲಾಕ್ ಆಗಬಾರದಿತ್ತು, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

ದರ್ಶನ್ ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

killer venkatesh: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದವರು ಕಿಲ್ಲರ್‌ ವೆಂಕಟೇಶ್‌ . ಹಿರಿಯ ಪತ್ರಕರ್ತರಾದ ಗಣೇಶ್‌ ಕಾಸರಗೋಡು ಅವರು ಕಿಲ್ಲರ್‌ ವೆಂಕಟೇಶ್‌ ಅವರನ್ನ ಹುಡುಕಿಕೊಂಡು ತುಮಕೂರಿಗೆ ಹೋಗಿದ್ದರು. ಅಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿಸಿದ್ದರು. ಕಿಲ್ಲರ್‌ ವೆಂಕಟೇಶ್‌ ಅವರು ತಮ್ಮ ಆರೋಗ್ಯ ಸ್ಥಿತಿ, ಸಿನಿ ಜೀವನ, ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ತೆರೆಮೇಲೆ ಬರ್ತಿದ್ದಾರೆ ʻಭೀಮಾತೀರದ ಹಂತಕರುʼ; ರವಿ ಬೆಳಗೆರೆ ಪಾತ್ರ ಮಾಡಲಿದ್ದಾರೆ ಪುತ್ರಿ ಭಾವನಾ

ತೆರೆಮೇಲೆ ಮತ್ತೆ ರಕ್ತಚರಿತ್ರೆ; 2 ಭಾಗಗಳಲ್ಲಿ ಬರಲಿದೆ 'ಭೀಮಾತೀರದ ಹಂತಕರು'

Bheematheerada Hantakaru movie: ರವಿ ಬೆಳಗೆರೆ ಅವರ ʻಭೀಮಾತೀರದ ಹಂತಕರುʼ ಕೃತಿ ಆಧಾರಿತವಾಗಿ ಎರಡು ಭಾಗಗಳಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ 90ರ ದಶಕದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ರಕ್ತಚರಿತ್ರೆಗೆ ಕಬಡ್ಡಿ ನರೇಂದ್ರ ಬಾಬು ಸಿನಿಮಾರೂಪ ನೀಡುತ್ತಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ತೆಲುಗು ನಿರ್ಮಾಪಕರನ್ನು ಕರೆತಂದ ರಿಷಬ್‌ ಶೆಟ್ಟಿ; ʻಜೈ ಹನುಮಾನ್‌ʼ ಬಗ್ಗೆ ʻಡಿವೈನ್‌ ಸ್ಟಾರ್‌ʼ ಹೇಳಿದ್ದೇನು?

ಅಂಜನಾದ್ರಿ ಬೆಟ್ಟಕ್ಕೆ ಟಾಲಿವುಡ್‌ ನಿರ್ಮಾಪಕರನ್ನು ಕರೆತಂದ ರಿಷಬ್ ಶೆಟ್ಟಿ!

Jai Hanuman Movie: ರಿಷಬ್‌ ಶೆಟ್ಟಿ ಅವರ ಜೈ ಹನುಮಾನ್‌ ಚಿತ್ರದ ಮುಹೂರ್ತವು ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಆಸೆಯಂತೆ ಹನುಮಂತನ ಜನ್ಮಸ್ಥಳದಲ್ಲೇ ಈ ಕಾರ್ಯಕ್ರಮ ನಡೆದಿದ್ದು, ಇದು ಹನುಮನಿಗೆ ಮಾಡುವ ಸೇವೆ ಎಂದಿದ್ದಾರೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂ. ಎಂ. ಕೀರವಾಣಿ ಅವರ ಸಂಗೀತ ನಿರ್ದೇಶನವಿದೆ.

'ಟಾಕ್ಸಿಕ್ʼ ಸಿನಿಮಾಕ್ಕೆ ರವಿ ಬಸ್ರೂರು ಒಬ್ರೇ ಮ್ಯೂಸಿಕ್‌ ಡೈರೆಕ್ಟರ್‌ ಅಲ್ಲ! ಹಾಡುಗಳ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಮಾಹಿತಿ

ಭಾರಿ ಮೊತ್ತಕ್ಕೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಖರೀದಿಸಿದ ಜೀ ಮ್ಯೂಸಿಕ್!

Yash Toxic Movie Updates: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾದ ಚಿತ್ರದ ಆಡಿಯೋ ಹಕ್ಕುಗಳನ್ನು 'ಜೀ ಮ್ಯೂಸಿಕ್ ಕಂಪನಿ' ಬೃಹತ್ ಮೊತ್ತಕ್ಕೆ ಖರೀದಿಸಿದೆ. ಕೇವಲ ರವಿ ಬಸ್ರೂರ್ ಮಾತ್ರವಲ್ಲದೆ ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ ಸೇರಿದಂತೆ ಘಟಾನುಘಟಿ ಸಂಗೀತ ನಿರ್ದೇಶಕರು ಟಾಕ್ಸಿಕ್ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ವಿಶೇಷ.

ಅಂಜನಾದ್ರಿ ಬೆಟ್ಟದಲ್ಲಿ ಶುರುವಾಯ್ತು ರಿಷಬ್‌ ಶೆಟ್ಟಿ ಹೊಸ ಸಿನಿಮಾ; ʻಜೈ ಹನುಮಾನ್‌ʼ ಚಿತ್ರಕ್ಕೆ ಅದ್ದೂರಿ ಮುಹೂರ್ತ

Rishab Shetty: ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ

Jai Hanuman Movie: ರಿಷಬ್‌ ಶೆಟ್ಟಿ ಅವರ ಜೈ ಹನುಮಾನ್‌ ಸಿನಿಮಾದ ಮುಹೂರ್ತವು ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಇಂದು (ಫೆ.22) ಅದ್ದೂರಿಯಾಗಿ ನೆರವೇರಿತು. 'ಕಾಂತಾರ'ದ ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ.

Loading...