ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

ಕನ್ನಡಿಗ ʻಎನ್‌ಕೌಂಟರ್‌ ದಯಾನಾಯಕ್‌ʼ ಬಯೋಪಿಕ್‌ ಮಾಡಲು ಮುಂದಾದ ನಿರ್ದೇಶಕ ರಾಮ್ ಗೋಪಾಲ್ ವರ್ಮ

RGV ನಿರ್ದೇಶನದಲ್ಲಿ ʻಎನ್‌ಕೌಂಟರ್ ಸ್ಪೆಷಲಿಸ್ಟ್ʼ ದಯಾ ನಾಯಕ್ ಬಯೋಪಿಕ್?

ಮುಂಬೈ ಭೂಗತ ಲೋಕದ ಕ್ರೈಮ್ ಥ್ರಿಲ್ಲರ್ ಚಿತ್ರಗಳ ಮಾಂತ್ರಿಕ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಪ್ರಸಿದ್ಧ ಎನ್‌ಕೌಂಟರ್ ಸ್ಪೆಷಲಿಸ್ಟ್ ಕನ್ನಡಿಗ ದಯಾ ನಾಯಕ್ ಅವರ ಬಯೋಪಿಕ್ ನಿರ್ದೇಶಿಸಲು ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಈ ಚಿತ್ರವನ್ನು ಆರ್‌ಜಿವಿ ಅವರ ಸೂಪರ್ ಹಿಟ್ 'ಕಂಪನಿ' ಸಿನಿಮ್ಯಾಟಿಕ್ ಯೂನಿವರ್ಸ್ ಜೊತೆ ಲಿಂಕ್ ಮಾಡುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.

Photos: ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ; ನಾಯಕಿಯರಾಗಿ ಕೀರ್ತಿ‌ ಸುರೇಶ್ - ಕೃತಿ ಶೆಟ್ಟಿ

ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ

ತೆಲುಗು ಚಿತ್ರರಂಗದ 'ಹಿಟ್ ಮಿಷನ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಅನಿಲ್ ರವಿಪುಡಿ ಅವರ ಮತ್ತೊಂದು ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಈ ಚಿತ್ರದಲ್ಲಿ 'ವಿಕ್ಟರಿ' ವೆಂಕಟೇಶ್ ಹಾಗೂ ನಂದಮೂರಿ ಕಲ್ಯಾಣ್ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಪ್ರಮುಖ ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್ ಅವರು ಚಿತ್ರದ ಚಿತ್ರಕಥೆಯನ್ನು (ಸ್ಕ್ರಿಪ್ಟ್) ನಿರ್ದೇಶಕ ಅನಿಲ್ ರವಿಪುಡಿ ಹಾಗೂ ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಒಳಗೊಂಡ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರೆ, ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಹಿರಿಯ ನಿರ್ದೇಶಕ-ನಿರ್ಮಾಪಕ ಕೆ. ರಾಘವೇಂದ್ರ ರಾವ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.

ʻಕಾಂತಾರʼ ರೀತಿಯಲ್ಲೇ 2 ಪಾರ್ಟ್‌ಗಳಲ್ಲಿ ಬರಲಿದೆ ರಿಷಬ್‌ ಶೆಟ್ಟಿಯ ಹೊಸ ಸಿನಿಮಾ; ಇದರ ಬಜೆಟ್‌ 500 ಕೋಟಿ!

ರಿಷಬ್ ಶೆಟ್ಟಿ ನಟನೆಯ 'ಛತ್ರಪತಿ ಶಿವಾಜಿ ಮಹಾರಾಜ್' ಬಗ್ಗೆ ಬಿಗ್‌ ಅಪ್ಡೇಟ್!‌

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗಲಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಐತಿಹಾಸಿಕ ಚಿತ್ರದ ಮೊದಲ ಭಾಗ 2028ರಲ್ಲಿ ಹಾಗೂ ಎರಡನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆಯಂತೆ.

ʻಕೂಲಿʼ ನಂತರ ಮತ್ತೊಂದು ತಮಿಳು ಸಿನಿಮಾದಲ್ಲಿ ʻರಿಯಲ್‌ ಸ್ಟಾರ್‌ʼ ಉಪೇಂದ್ರ; ಈ ಚಿತ್ರಕ್ಕೆ‌ ನಿರ್ದೇಶಕ ಸಿದ್ದಲಿಂಗಯ್ಯ ಮೊಮ್ಮಗ ಹೀರೋ

ʻಕೂಲಿʼ ಬೆನ್ನಲ್ಲೇ ಮತ್ತೊಂದು ತಮಿಳು ‌ಚಿತ್ರಕ್ಕೆ ಉಪೇಂದ್ರ ಗ್ರೀನ್‌ಸಿಗ್ನಲ್

'ರಿಯಲ್ ಸ್ಟಾರ್' ಉಪೇಂದ್ರ ಅವರು ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕಿದ್ದಾರೆ. ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ 'ಸ್ಟೋನ್ ಬೆಂಚ್' ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ವಿನಯ್ ರಾಜ್‌ಕುಮಾರ್  ನಟನೆಯ ʻಗ್ರಾಮಾಯಣʼ ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆ; ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ ನಟ ʻಲೂಸ್‌ ಮಾದʼ ಯೋಗಿ

ವಿನಯ್ ರಾಜ್‌ಕುಮಾರ್ ಅಭಿನಯದ ʻಗ್ರಾಮಾಯಣʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್

ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಗ್ರಾಮೀಣ ಸೊಗಡಿನ ಬಹುನಿರೀಕ್ಷಿತ 'ಗ್ರಾಮಾಯಣ' ಸಿನಿಮಾ ಇದೇ ಜುಲೈ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ 5ನೇ ಲಿರಿಕಲ್ ಸಾಂಗ್ ‘ಏನೇ ಹೇಳು ಕುಸುಮ’ ಬಿಡುಗಡೆ ಮಾಡಿ ಚಿತ್ರತಂಡ ಈ ಪ್ರಕಟಣೆ ನೀಡಿದೆ.

ಜೀ ಕನ್ನಡದಲ್ಲಿ ʻಡಾರ್ಲಿಂಗ್‌ʼ ಕೃಷ್ಣ ನಟನೆಯ ʻಲವ್ ಮಾಕ್‌ಟೇಲ್ 3ʼ ಪ್ರೀಮಿಯರ್; ಇದು ತಂದೆ - ಮಗಳ ಭಾವನಾತ್ಮಕ ಕಥೆ ಇರುವ ಸಿನಿಮಾ

ʻಲವ್ ಮಾಕ್‌ಟೇಲ್ 3ʼ ಸಿನಿಮಾದ ಕಿರುತೆರೆ ಪ್ರೀಮಿಯರ್ ದಿನಾಂಕ ಘೋಷಣೆ

'ಲವ್ ಮಾಕ್‌ಟೇಲ್ 3' ಸಿನಿಮಾವು ಇದೇ ಜೂನ್ 21ರ ಭಾನುವಾರ ಸಂಜೆ 4.30ಕ್ಕೆ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಥಮ ಬಾರಿಗೆ ಪ್ರಸಾರವಾಗಲಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ದತ್ತು ಮಗಳು ನಿಧಿಯನ್ನು ಉಳಿಸಿಕೊಳ್ಳಲು ತಂದೆ ಆದಿ ಕಾನೂನು ಹಾಗೂ ಸಮಾಜದ ವಿರುದ್ಧ ನಡೆಸುವ ಭಾವನಾತ್ಮಕ ಹೋರಾಟದ ಕಥೆಯಿದೆ.

Pawan Kalyan: ಅಭಿಮಾನಿಯ ಈ ಆಸೆ ಈಡೇರಿಸಿದ ಪವನ್ ಕಲ್ಯಾಣ್; ಭಾರೀ ಮೆಚ್ಚುಗೆ

ಅಭಿಮಾನಿಯ ಈ ಆಸೆ ಈಡೇರಿಸಿದ ಪವನ್ ಕಲ್ಯಾಣ್; ಭಾರೀ ಮೆಚ್ಚುಗೆ

Pawan Kalyan: ತೆಲಂಗಾಣದ ಹನಮಕೊಂಡದ ಜಿಲ್ಲೆಯ ಹನುಮಾನ್ ನಗರದ ನಿವಾಸಿ 17 ವರ್ಷದ ನಿರಂಜನ್ ಮಾರಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ ಈತ. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಎನ್ನುವ ಆಸೆಯನ್ನು ನಿರಂಜನ್ ವ್ಯಕ್ತಪಡಿಸುತ್ತಿದ್ದರು. ಈ ವಿಷಯ ತಿಳಿದು ಪವನ್ ಆತನ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಕಳೆದರು.

Actress Roopika: ಹಸೆಮಣೆ ಏರಲು ಸಜ್ಜಾದ  'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ; ಹುಡುಗ ಯಾರು?

ಹಸೆಮಣೆ ಏರಲು ಸಜ್ಜಾದ 'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ

Actress Roopika: ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ರೀತಿಯ ಕಿರುತೆರೆ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ರೂಪಿಕಾ ಬಣ್ಣ ಹಚ್ಚಿದ್ದರು. 'ಚೆಲುವಿನ ಚಿಲಿಪಿಲಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.ತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

Samantha Ruth Prabhu: ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

Samantha Ruth Prabhu: ವಿಜಯ್ ಮತ್ತು ಸಮಂತಾ ರುತ್ ಪ್ರಭು ಅವರು ‘ಕತ್ತಿ’, ‘ಥೇರಿ’ ಮತ್ತು ‘ಮೆರ್ಸಲ್’ಸೇರಿದಂತೆ ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ, ವರ್ಷಗಳ ನಂತರ, ಈ ಜೋಡಿ ಮತ್ತೆ ಒಂದಾಗಿದೆ. ಬುಧವಾರ (ಜೂನ್ 17) ಚೆನ್ನೈನಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಬಗ್ಗೆ ದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದಾರೆ.

Drishyam Movie: 'ದೃಶ್ಯಂ 3' ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ದೃಶ್ಯಂ 3 ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

Drishyam Movie: . ಮೊದಲ ಎರಡು ಆವೃತ್ತಿಗಳನ್ನು ರೀಮೇಕ್ ಮಾಡಲಾಗಿದ್ದರೂ, ಮೂರನೆಯದನ್ನು ರೀಮೇಕ್ ಮಾಡಲಾಗಿಲ್ಲ. ಕುತೂಹಲಕಾರಿಯಾಗಿ, ಚಿತ್ರದ ಬಗ್ಗೆ ವಿವಾದವೊಂದು ಹರಡಿತ್ತು, ಮೊದಲ ಆವೃತ್ತಿಯ ರಿಮೇಕ್ ಅನ್ನು ನಿರ್ದೇಶಿಸಿದ ನಿರ್ದೇಶಕಿ ಶ್ರೀ ಪ್ರಿಯಾ, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿ, ಚಿತ್ರದ ತೆಲುಗು ಹಕ್ಕುಗಳನ್ನು ತಾನು ಹೊಂದಿರುವುದಾಗಿ ಹೇಳಿಕೊಂಡರು.

Alpha Trailer: ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಸಿನಿಮಾದ ಟ್ರೇಲರ್ ಔಟ್‌!

ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಟ್ರೇಲರ್ ಔಟ್‌

Alpha Trailer: ನಟಿ ಆಲಿಯಾ ಭಟ್ (Alia Bhat) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಲ್ಫಾ’ ಸಿನಿಮಾದ ಟ್ರೇಲರ್ ನೋಡಿ ಅಭಿಮಾನಿಗಳಿಗೆ ಈಗ ಖುಷಿ ಆಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಅಭಿನಯಿಸಿದ್ದಾರೆ ಎಂಬುದು ಟ್ರೇಲರ್ ಮೂಲಕ ಬಹಿರಂಗ ಆಗಿದೆ.ಶಿವ್ ರಾವೈಲ್ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಆಲ್ಫಾ ಚಿತ್ರದಲ್ಲಿ ಆಲಿಯಾ ಭಟ್, ಶಾರ್ವರಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Kannada New Movie: `ನಂದಗೋಕುಲ' ಸೀರಿಯಲ್ ನಟನ ʼಕಾಲಘಟ್ಟʼ ಚಿತ್ರ ರಿಲೀಸ್ ಯಾವಾಗ?

`ನಂದಗೋಕುಲ' ಸೀರಿಯಲ್ ನಟನ ʼಕಾಲಘಟ್ಟʼ ಚಿತ್ರ ರಿಲೀಸ್ ಯಾವಾಗ?

Kannada New Movie: ಕೆ ಪ್ರಕಾಶ್ ಅಂಬಳೆ ಈಗ ಕಾಲಘಟ್ಟ ಎಂಬ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೇ ತಿಂಗಳ 19ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಕುರಿತ ಸುದ್ದಿ ಗೋಷ್ಠಿ ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.‌ ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

Khushbu Sundar: ಟ್ರಾನ್ಸ್ ವ್ಯಕ್ತಿ ಅಂತ ಖುಷ್ಬು ಸುಂದರ್‌ ಮಗಳಿಗೆ ಟ್ರೋಲ್‌;  ಆನಂದಿತಾ ಖಡಕ್‌ ರಿಯಾಕ್ಷನ್‌

ಟ್ರಾನ್ಸ್ ವ್ಯಕ್ತಿ ಅಂತ ಖುಷ್ಬು ಸುಂದರ್‌ ಮಗಳಿಗೆ ಟ್ರೋಲ್‌!

Anandita: ನಿರ್ಮಾಪಕ-ನಟ ಸುಂದರ್ ಸಿ ಅವರ ಪುತ್ರಿಯರಾದ ಅವಂತಿಕಾ ಮತ್ತು ಆನಂದಿತಾ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಮುಂಬರುವ ತಮಿಳು ಚಿತ್ರ ಡಬಲ್ ಆಕ್ಯುಪೆನ್ಸಿಯಲ್ಲಿ ಸೃಜನಶೀಲ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದ ಅವರ ಕಿರಿಯ ಮಗಳು ಆನಂದಿತಾ,'ಟ್ರಾನ್ಸ್ ಪರ್ಸನ್' ಎಂದು ಕರೆಯಲ್ಪಟ್ಟ ಬಗ್ಗೆ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ತನ್ನನ್ನು ಯಾವ ರೀತಿ ಟ್ರೋಲ್‌ (Troll) ಮಾಡುತ್ತಿದ್ದರು ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ಗಂಭೀರ ನರಗಳ ಸಮಸ್ಯೆಯಿಂದ ಬಳಲುತ್ತಿರುವ ಗಾಯಕ ಸೋನು ನಿಗಮ್; ಇಂಥ ಪರಿಸ್ಥಿತಿಯಲ್ಲೂ ಮುಂಬೈ ಲೈವ್ ಕಾನ್ಸರ್ಟ್‌ಗೆ ಸಜ್ಜು!

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗಾಯಕ ಸೋನು ನಿಗಮ್!

ಖ್ಯಾತ ಗಾಯಕ ಸೋನು ನಿಗಮ್ ಅವರು 'ಪಿಂಚ್ಡ್ ನರ್ವ್' (ನರಗಳ ಮೇಲಿನ ಒತ್ತಡ) ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈ-ಡೋಸ್ ಮಾತ್ರೆಗಳಿಂದಾಗಿ ಅವರ ಧ್ವನಿಯಲ್ಲಿ ಏರುಪೇರಾಗಿದ್ದರೂ, ಮುಂಬೈನಲ್ಲಿ ನಿಗದಿಯಾಗಿರುವ ಬೃಹತ್ ಲೈವ್ ಕಾನ್ಸರ್ಟ್‌ನಲ್ಲಿ ಹಾಡುವುದಾಗಿ ಅಭಿಮಾನಿಗಳಿಗಾಗಿ ಭರವಸೆ ನೀಡಿದ್ದಾರೆ.

Aamir Khan: ಇದೆಂಥಾ ಸಂಬಂಧವಯ್ಯಾ? ಮಾಜಿ-ಹಾಲಿ ಪತ್ನಿಯರ ಜೊತೆ ಆಮೀರ್​ ಖಾನ್ ಫುಲ್​  ಜಾಲಿ ಜಾಲಿ

ಮಾಜಿ-ಹಾಲಿ ಪತ್ನಿಯರ ಜೊತೆ ಆಮೀರ್​ ಖಾನ್ ಫುಲ್​ ಜಾಲಿ ಜಾಲಿ

Aamir Khan: ಕುತೂಹಲಕಾರಿ ಸಂಗತಿಯೆಂದರೆ ಅವರು ಇಬ್ಬರು ಮಾಜಿ ಪತ್ನಿಯರು ಮತ್ತು ಅವರ ಪ್ರಸ್ತುತ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಮಿರ್ ಖಾನ್ ಚಾಲಕನ ಬಳಿ ಮುಂದಿನ ಸೀಟಿನಲ್ಲಿದ್ದರು. ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಹಿಂದಿನ ಸೀಟಿನಲ್ಲಿದ್ದರು. ಅವರೊಂದಿಗೆ ಅವರ ಪ್ರಸ್ತುತ ಗೆಳತಿ ಗೌರಿ ಸ್ಪ್ರಾಟ್ ಕೂಡ ಇದ್ದರು.

ಕೋಮಲ್‌ - ಸೋನಲ್‌ ನಟನೆಯ ʻರೋಲೆಕ್ಸ್ʼ ಚಿತ್ರಕ್ಕೆ ವಿನೋದ್‌ ಪ್ರಭಾಕರ್‌ ಎಂಟ್ರಿ; ಸ್ಪೆಷಲ್‌ ರೋಲ್‌ನಲ್ಲಿ ʻಮರಿ ಟೈಗರ್‌ʼ ಮಿಂಚಿಂಗ್‌

ʻರೋಲೆಕ್ಸ್ʼ ಅಡ್ಡಕ್ಕೆ ವಿನೋದ್ ಪ್ರಭಾಕರ್ ಎಂಟ್ರಿ; ಕೋಮಲ್‌ಗೆ ಮರಿ ಟೈಗರ್ ಬಲ

ನಟ ಕೋಮಲ್ ಕುಮಾರ್ ಹಾಗೂ ಸೋನಲ್ ಮೊಂಥೆರೋ ಕಾಂಬಿನೇಷನ್‌ನ ‘ರೋಲೆಕ್ಸ್’ ಚಿತ್ರಕ್ಕೆ ‘ಮರಿ ಟೈಗರ್’ ವಿನೋದ್ ಪ್ರಭಾಕರ್ ವಿಶೇಷ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ, ಅಂಬಟಿ ಮಧು ಮೋಹನಕೃಷ್ಣ ನಿರ್ಮಾಣದ ಈ ಕಾಮಿಡಿ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.

ಟ್ವಿಟರ್‌ನಲ್ಲಿ ದುಡ್ಡು ಕೇಳಿದ ವ್ಯಕ್ತಿಗೆ 50 ಸಾವಿರ ಕೊಟ್ಟ ಜಿ.ವಿ. ಪ್ರಕಾಶ್ ಕುಮಾರ್; ಮೋಸ ಹೋದರೂ ಸಹಾಯ ನಿಲ್ಲಿಸದ ಸಂಗೀತ ನಿರ್ದೇಶಕ

ಕಷ್ಟ ಎಂದವನಿಗೆ ಹಿಂದೆಮುಂದೆ ನೋಡದೆ 50 ಸಾವಿರ ನೀಡಿದ G V Prakash Kumar

ಬಹುಭಾಷಾ ಸಂಗೀತ ನಿರ್ದೇಶಕ ಮತ್ತು ನಟ ಜಿ. ವಿ. ಪ್ರಕಾಶ್ ಕುಮಾರ್ ಅವರು ಈ ಹಿಂದೆ ಆನ್‌ಲೈನ್ ವಂಚಕನಿಂದ 20 ಸಾವಿರ ರೂ. ಕಳೆದುಕೊಂಡು ಮೋಸ ಹೋಗಿದ್ದ ಕಹಿ ಅನುಭವವನ್ನು ಮರೆತು, ತುರ್ತು ಸರ್ಜರಿಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತಕ್ಷಣವೇ 50,000 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ.

ʻಲವ್ ಸೀಸನ್ಸ್ʼ ಚಿತ್ರದ ಹಾಡುಗಳಿಗೆ ಸಖತ್‌ ರೆಸ್ಪಾನ್ಸ್;‌ ಕೆ. ಕಲ್ಯಾಣ್‌ ಜೊತೆ ಖುಷಿ ಹಂಚಿಕೊಂಡ ಚಿತ್ರತಂಡ

ಜುಲೈ 3ಕ್ಕೆ ‘ಲವ್ ಸೀಸನ್ಸ್’ ಧಮಾಕಾ; ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್

ರಂಗಭೂಮಿ ಪ್ರತಿಭೆಗಳ ಸಂಗಮವಾಗಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಇದೇ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಮೂರು ಹಾಡುಗಳು ಈಗಾಗಲೇ ಭಾರಿ ಯಶಸ್ಸು ಕಂಡಿದ್ದು, ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿದೆ.

ತನ್ನದೇ ಗರಡಿಯ ಹುಡುಗನಿಗೆ ಹೀರೋ ಪಟ್ಟ ನೀಡಿದ ‘ಸಿಂಪಲ್’ ಸುನಿ; ಗಮನ ಸೆಳೆಯುತ್ತಿದೆ ‘ಮೋಡ ಕವಿದ ವಾತಾವರಣ’ ಟೀಸರ್!

ʻಸಿಂಪಲ್ʼ ಸುನಿ ಗರಡಿಯ ಹುಡುಗನಿಗೆ ಒಲಿದ ಅದೃಷ್ಟ; ಹೀರೋ ಆದ ಶೀಲಮ್

‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಖ್ಯಾತ ನಿರ್ದೇಶಕ ʻಸಿಂಪಲ್ʼ ಸುನಿ ಅವರು ಜೂನ್ 26 ರಂದು ವಿಭಿನ್ನ ಸೈಂಟಿಫಿಕ್ ಫಿಕ್ಷನ್ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ 'ಹೀರೋ ಟೀಸರ್' ಭಾರಿ ಗಮನ ಸೆಳೆಯುತ್ತಿದ್ದು, ಸುನಿ ಗರಡಿಯ ಪ್ರತಿಭೆ ಶೀಲಮ್ ಈ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ʻಬಿಗ್‌ ಬಾಸ್‌ʼ ವಿನ್ನರ್‌ ಹನುಮಂತ ಲಮಾಣಿಗೂ ಬಂದಿತ್ತು ಸಿನಿಮಾ ಹೀರೋ ಆಫರ್! ʻನಟನೆ ನನಗಲ್ಲʼ ಅಂದಿದ್ದೇಕೆ ಗಾಯಕ?

ʻಬಿಗ್‌ ಬಾಸ್‌ʼ ವಿನ್ನರ್ ಹನುಮಂತ ಹೀರೋ ಆಗಲ್ಲ ಅಂದಿದ್ದೇಕೆ? ಇಲ್ಲಿದೆ ಕಾರಣ!

ಬಿಗ್‌ ಬಾಸ್‌ ವಿನ್ನರ್ ಆಗಿದ್ದರೂ ಹನುಮಂತ ಲಮಾಣಿ ಸರಳತೆ ಬಿಟ್ಟಿಲ್ಲ. ಬಿಗ್‌ಬಾಸ್ ಗೆದ್ದ ಬಳಿಕ ಬಂದ 2-3 ಹೀರೋ ಆಫರ್‌ಗಳನ್ನು ಅವರು ನಯವಾಗಿ ತಿರಸ್ಕರಿಸಿದ್ದಾರೆ. ದೊಡ್ಡ ಸ್ಟಾರ್‌ಗಳ ಚಿತ್ರಗಳೇ ಓಡದ ಈ ಕಾಲದಲ್ಲಿ, ಕೇವಲ ತಮ್ಮ ಹೆಸರಿನಿಂದ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬುದು ಅವರ ಕಾಳಜಿ.

ʻಕಂಡೋರ ಚಿತೆಯಲ್ಲಿ ಬಿಸಿ ಕಾಯಿಸಿಕೊಳ್ಳುವುದು ಜೀವನ ಅಲ್ಲʼ; ಟ್ರೋಲ್‌ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್‌ ತಿರುಗೇಟು

Jodi No.1: ಟ್ರೋ‌ಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ ಗೀತಾ ಭಾರತಿ ಭಟ್

ಜೀ ಕನ್ನಡ ವಾಹಿನಿಯ 'ಜೋಡಿ ನಂ. 1' ಶೋನಲ್ಲಿ ಪತಿ ರಾಜಾರಾಮ್ ಭಟ್ ಜೊತೆಗಿನ ಮಾತುಕತೆಯನ್ನು ಜಗಳ ಹಾಗೂ ಟಿಆರ್‌ಪಿ ಗಿಮಿಕ್ ಎಂದು ಬಿಂಬಿಸಿ ಟ್ರೋಲ್ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.

ಪತಿಗೆ ಡಿವೋರ್ಸ್‌ ಕೊಟ್ಟ ಬಳಿಕ ಪುನಃ ಚಿತ್ರರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ; ಆದ್ರೆ, ಈ ಬಾರಿ ಸಿನಿಮಾ ಮಾಡ್ತಿಲ್ಲ!

ವಿಚ್ಛೇದನದ ಬಳಿಕ ಪುನಃ ಸಿನಿಮಾರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ

ಉದ್ಯಮಿ ಸೋಹೈಲ್ ಕಥುರಿಯಾ ಜೊತೆಗಿನ 4 ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ವಿಚ್ಛೇದನ ನೀಡಿರುವ ನಟಿ ಹನ್ಸಿಕಾ ಮೋಟ್ವಾನಿ, ವೈಯಕ್ತಿಕ ಆಘಾತಗಳಿಂದ ಹೊರಬಂದು ಬಣ್ಣದ ಲೋಕಕ್ಕೆ ಪವರ್‌ಫುಲ್ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವೀಣ್ ಸತ್ತಾರು ನಿರ್ದೇಶನದ 'ಗಲ್ಲಿ' ಎಂಬ ರೋಚಕ ಕ್ರೈಮ್ ವೆಬ್ ಸರಣಿಯ ಮೂಲಕ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು; ಅಡೆತಡೆಗಳನ್ನು ದಾಟಿ ದಿವಾನ್ ಮನೆ ಸೇರಲಿದ್ದಾಳೆ ಮಿಂಚು!

Amruthadhaare Serial: ಮಗಳೆಂಬ ಮುಗಿಲು ಈಗ ಮಡಿಲು ಸೇರೋ ಹೊತ್ತು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ರೌಡಿಗಳನ್ನು ಸೆದೆಬಡಿದು ಮಗಳನ್ನು ಭೂಮಿ ಮಡಿಲಿಗೆ ಹಾಕಿದ್ದಾನೆ ಗೌತಮ್‌. ಜೈದೇವ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ. ಆದರೆ ಈ ಬಾರಿಯಾದರೂ ಈ ಹಿನ್ನೆಡೆ ಕಥೆಯ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಾ..? ಅಥವಾ ಬೇರೆ ಯಾವುದಾದರೂ ಐಡಿಯಾ ನಿರ್ದೇಶಕರಿಗೆ ಹೊಳೆದು ಧಾರಾವಾಹಿಯ ಕಥೆ ಮತ್ತೆ ಮುಂದುವರೆಯುತ್ತಾ..?ಅನ್ನೋದು ವೀಕ್ಷಕಕರ ಪ್ರಶ್ನೆ.

Actor Doddanna: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೊಡ್ಡಣ್ಣ ದೂರು

Actor Doddanna: ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ಹಂಚಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ವದಂತಿ ಹರಡಿದವರ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ ನಟ ದೊಡ್ಡಣ್ಣ.

Loading...