ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Mouni Roy: ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

Mouni Roy: ಪತಿ ಸೂರಜ್ ನಂಬಿಯಾರ್ (Suraj Nambiar) ಅವರಿಂದ ಬೇರ್ಪಡುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ ಕೆಲವೇ ದಿನಗಳ ನಂತರ , ನಟಿ ಮೌನಿ ರಾಯ್ 79 ನೇ ‘ಕಾನ್ ಫಿಲ್ಮ್ ಫೆಸ್ಟಿವಲ್’ ರೆಡ್ ಕಾರ್ಪೆಟ್ ಮೇಲೆ ಮಿಂಚಲು ಫ್ರಾನ್ಸ್‌ಗೆ ಹಾರಿದ್ದಾರೆ.

ಗಣೇಶ ಚತುರ್ಥಿಯ ರಜೆ ಮೇಲೆ ಕಣ್ಣಿಟ್ಟ ರಜನಿಕಾಂತ್‌ ನಟನೆಯ ʻಜೈಲರ್‌ 2ʼ; ಆಗಸ್ಟ್‌ನಲ್ಲೇ ದರ್ಶನ ನೀಡಲಿದೆಯಾ ʻಟಾಕ್ಸಿಕ್‌ʼ? ‌

ಗಣೇಶ ಹಬ್ಬಕ್ಕೆ ʻಜೈಲರ್ 2ʼ ಧಮಾಕಾ; ಆಗಸ್ಟ್‌ನಲ್ಲೇ ಬರಲಿದೆಯಾ ʻಟಾಕ್ಸಿಕ್ʼ?

ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರವನ್ನು ಗಣೇಶ ಚತುರ್ಥಿಯ ಲಾಂಗ್ ವೀಕೆಂಡ್ ಸದುಪಯೋಗಪಡಿಸಿಕೊಳ್ಳಲು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲು ಸನ್ ಪಿಕ್ಚರ್ಸ್ ನಿರ್ಧರಿಸಿದೆ. ಇತ್ತ ಜೂನ್‌ನಿಂದ ಮುಂದೂಡಲ್ಪಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಗಸ್ಟ್‌ನಲ್ಲಿ ತೆರೆಕಾಣುವ ಮುನ್ಸೂಚನೆ ಸಿಕ್ಕಿದೆ.

OTT This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸೌತ್‌ ಸಿನಿಮಾಗಳಿವು!

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸೌತ್‌ ಸಿನಿಮಾಗಳಿವು!

OTT This Week: ಮಲಯಾಳಂನ ರೊಮ್ಯಾಂಟಿಕ್ ಹಾಸ್ಯ ಮಧುವಿಧುದಿಂದ ಹಿಡಿದು ತಮಿಳು ಹಾರರ್ ಚಲನಚಿತ್ರ ಸೈತಾನ್ ದಿ ಡಾರ್ಕ್ ವರೆಗೆ, ಅಮೆಜಾನ್ ಪ್ರೈಮ್ ವಿಡಿಯೋ, ಸನ್ NXT , ಆಹಾ ವಿಡಿಯೋ ಸೇರಿದಂತೆ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.ಯಾವುದೆಲ್ಲ ಅವು?

ಪಂಜಾಬಿ ಗಾಯಕಿ ಇಂದರ್ ಕೌರ್ ಕಾಲುವೆಯಲ್ಲಿ ಶವವಾಗಿ ಪತ್ತೆ; ಮದುವೆ ಪ್ರಪೋಸಲ್‌ ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿದ್ನಾ ಪಾಪಿ?

ಮದುವೆ ತಿರಸ್ಕರಿಸಿದ್ದಕ್ಕೆ ಗಾಯಕಿ ಇಂದರ್ ಹತ್ಯೆ! ಕೆನಡಾದಿಂದ ಬಂದ ಹಂತಕ?

ಅಪಹರಣಕ್ಕೊಳಗಾಗಿದ್ದ ಪಂಜಾಬ್‌ನ ಉದಯೋನ್ಮುಖ ಗಾಯಕಿ ಇಂದರ್ ಕೌರ್, ಇದೀಗ ಭೀಕರವಾಗಿ ಕೊಲೆಯಾಗಿದ್ದಾರೆ. ಕೆನಡಾದಿಂದ ಬಂದಿದ್ದ ಸುಖ್ವಿಂದರ್ ಸಿಂಗ್ ಎಂಬಾತ ಆಕೆಯನ್ನು ಕಿಡ್ನಾಪ್ ಮಾಡಿ, ಹತ್ಯೆಗೈದು ಮೃತದೇಹವನ್ನು ನೀಲೋನ್ ಕಾಲುವೆಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Maryade Ramanna: ಕಿರುತೆರೆಗೆ 'ಮರ್ಯಾದೆ ರಾಮಣ್ಣ' ಎಂಟ್ರಿ ಫಿಕ್ಸ್‌; ಈ ಸೀರಿಯಲ್‌ ಅಂತ್ಯ!

ಕಿರುತೆರೆಗೆ 'ಮರ್ಯಾದೆ ರಾಮಣ್ಣ' ಎಂಟ್ರಿ ಫಿಕ್ಸ್‌; ಈ ಸೀರಿಯಲ್‌ ಅಂತ್ಯ!

Maryade Ramanna: ರಾಮಣ್ಣ ಅವತಾರದಲ್ಲಿ ಮತ್ತೆ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಬರುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ರಾಮಣ್ಣ ಅಮ್ಮನಾಗಿ ವೀಣಾಸುಂದರ್ ನಟಿಸುತ್ತಿದ್ದಾರೆ. ಇವರೊಂದಿಗೆ ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ಬಳಗವೇ ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ.

ʻಕಮಲ್‌ ಹಾಸನ್‌ ಮಗಳುʼ ಎಂಬ ಸತ್ಯವನ್ನೇ ಮುಚ್ಚಿಟ್ಟಿದ್ದ ನಟಿ ಶ್ರುತಿ ಹಾಸನ್!‌ ಇದಕ್ಕೆ ಕಾರಣವೇನು ಗೊತ್ತಾ?

ʻನನ್ ಹೆಸರು ಪೂಜಾʼ; ಕಮಲ್ ಹಾಸನ್ ಮಗಳೆಂಬ ಸತ್ಯ ಮುಚ್ಚಿಟ್ಟಿದ್ದ ನಟಿ ಶ್ರುತಿ

ನಟಿ ಶ್ರುತಿ ಹಾಸನ್ ತಮ್ಮ ಬಾಲ್ಯದಲ್ಲಿ ಸ್ವಂತ ಗುರುತನ್ನು ಸೃಷ್ಟಿಸಿಕೊಳ್ಳಲು ತಂದೆ ಕಮಲ್ ಹಾಸನ್ ಅವರ ಹೆಸರನ್ನು ಮರೆಮಾಚುತ್ತಿದ್ದರು. ಸಾರ್ವಜನಿಕವಾಗಿ ಸಿಗುತ್ತಿದ್ದ ಅತಿಯಾದ ಪ್ರಚಾರದಿಂದ ಬೇಸತ್ತು, ತಾವು ಡಾಕ್ಟರ್‌ ಒಬ್ಬರ ಮಗಳು, ನನ್ನ ಹೆಸರು ‘ಪೂಜಾ ರಾಮಚಂದ್ರನ್’ ಎಂದು ಸುಳ್ಳು ಹೇಳುತ್ತಿದ್ದರಂತೆ ಅವರು.

ದರ್ಶನ್ ಜೊತೆ ಮುಖಾಮುಖಿ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ- ಪುತ್ರ ವಿನೀಶ್

ನಟ ದರ್ಶನ್‌ ಜೊತೆ ಮುಖಾಮುಖಿ ಭೇಟಿಗೆ ಮಗನೊಂದಿಗೆ ಬಂದ ಪತ್ನಿ ವಿಜಯಲಕ್ಷ್ಮಿ

ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಇಂದು 23ನೇ ವಿವಾಹ ವಾರ್ಷಿಕೋತ್ಸವ. ಅದರ ಅಂಗವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಮುಖಾಮುಖಿ ಭೇಟಿ ಆಗಲಿದ್ದಾರೆ. ಇದೇ ವೇಳೆ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ಡಿಜಿಪಿ ಅಲೋಕ್‌ ಕುಮಾರ್‌ ತಳ್ಳಿಹಾಕಿದ್ದಾರೆ.

Addiction Movie: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರ ಕೃಷ್ಣ ಅರಸ್‌ ಮೊಮ್ಮಗನಿಗೆ ಸಾಥ್‌ ನೀಡಿದ ರಾಘವೇಂದ್ರ ರಾಜ್‌ಕುಮಾರ್

ಸುಂದರ ಕೃಷ್ಣ ಅರಸ್ ಮೊಮ್ಮಗನ 'ಅಡಿಕ್ಷನ್' ಚಿತ್ರಕ್ಕೆ ಸಾಥ್ ನೀಡಿದ ರಾಘಣ್ಣ

ಸ್ಯಾಂಡಲ್‌ವುಡ್‌ನ ಲೆಜೆಂಡ್ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ವಿಧು ಅಭಿನಯದ ‘ಅಡಿಕ್ಷನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ. ಅಜಯ್ ಕುಮಾರ್ ನಿರ್ದೇಶನದ ಮತ್ತು ಬೃಂದಾ ಜಯರಾಮ್ ನಿರ್ಮಾಣದ ಈ ಚಿತ್ರವು ಮಕ್ಕಳಲ್ಲಿನ ಮೊಬೈಲ್ ಚಟದ ನೈಜ ಘಟನೆಗಳನ್ನು ಆಧರಿಸಿದೆ.

Suriya: 'ಇಸೈಜ್ಞಾನಿ' ಇಳಯರಾಜಾಗೆ ಬಹಿರಂಗವಾಗಿ ಕ್ಷಮೆ ಕೇಳಿದ ʻಕರುಪ್ಪುʼ ಟೀಮ್;‌ ಅಷ್ಟಕ್ಕೂ ಚಿತ್ರತಂಡ ಮಾಡಿದ ಎಡವಟ್ಟೇನು?

ಇಳಯರಾಜಾಗೆ ಕ್ಷಮೆ ಕೇಳಿದ ‌ʻಕರುಪ್ಪುʼ ಟೀಮ್; ಅಷ್ಟಕ್ಕೂ ಮಾಡಿದ ತಪ್ಪೇನು?

ಬಾಕ್ಸ್ ಆಫೀಸ್‌ನಲ್ಲಿ ಮೂರೇ ದಿನಕ್ಕೆ 147 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ನಟ ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರತಂಡವು ಸಂಗೀತ ಮಾಂತ್ರಿಕ ಇಳಯರಾಜಾ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಚಿತ್ರದಲ್ಲಿ ಇಳಯರಾಜಾ ಅವರ ಕಾಪಿರೈಟ್ಸ್ ಕಾನೂನು ವಿಚಾರವನ್ನು ವ್ಯಂಗ್ಯ ಮಾಡಿದ್ದ ಸಂಭಾಷಣೆಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ರಿಗಿಂತ ಮುಂಚೆ ʻವಿಜಯ್‌ ಸಿಎಂ ಆಗ್ತಾರೆʼ ಎಂದಿದ್ದ GOAT ನಿರ್ದೇಶಕ ವೆಂಕಟ್‌ ಪ್ರಭು; ದಳಪತಿಗೆ ಸಿಕ್ತು ಸ್ಪೆಷಲ್ ನಂಬರ್ ಪ್ಲೇಟ್ ಗಿಫ್ಟ್

ವಿಜಯ್ CM ಆಗ್ತಾರೆ ಅಂತ 2 ವರ್ಷ ಮುಂಚೆಯೇ ಭವಿಷ್ಯ ನುಡಿದಿದ್ದ ನಿರ್ದೇಶಕ!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ದಳಪತಿ ವಿಜಯ್ ಅವರನ್ನು 'GOAT' ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಭೇಟಿಯಾಗಿ ಶುಭ ಕೋರಿದ್ದಾರೆ. GOAT ಸಿನಿಮಾದ ದೃಶ್ಯವೊಂದರಲ್ಲಿ ‘TN07 CM 2026’ ನಂಬರ್ ಪ್ಲೇಟ್ ಕಾರು ಬಳಸುವ ಮೂಲಕ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವೆಂಕಟ್ ಪ್ರಭು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.

ಗ್ಯಾಂಗ್‌ಸ್ಟರ್ ಕಥೆಯೊಂದಿಗೆ ಬಂದ ಅರವಿಂದ್ ಕೌಶಿಕ್: ನಿರೀಕ್ಷೆ ಮೂಡಿಸಿದ ‘ಕಂಟ್ರಿ ಮೇಡ್ - ಭಾಗ 2’ ಟೀಸರ್!

'ಕಂಟ್ರಿ ಮೇಡ್ - ಭಾಗ 2' ಟೀಸರ್‌ನಲ್ಲಿ ಗ್ಯಾಂಗ್‌ಸ್ಟರ್ ಅಬ್ಬರ!

'ಅರ್ಧಂಬರ್ಧ ಪ್ರೇಮಕಥೆ' ಖ್ಯಾತಿಯ ಅರವಿಂದ್ ಕೌಶಿಕ್ ಇದೀಗ ಚೊಚ್ಚಲ ಬಾರಿಗೆ ರಗಡ್ ಶೈಲಿಯ ಗ್ಯಾಂಗ್‍ಸ್ಟರ್ ಕಥಾಹಂದರ ಹೊಂದಿರುವ ‘ಕಂಟ್ರಿ ಮೇಡ್‍ - ಭಾಗ 2’ ಚಿತ್ರದೊಂದಿಗೆ ಬಂದಿದ್ದು, ಇದರ ಖಡಕ್ ಟೀಸರ್ ಬಿಡುಗಡೆಯಾಗಿದೆ. ಪಾವಗಡದ ನೈಜ ವ್ಯಕ್ತಿಗಳ ಪ್ರೇರಣೆಯಿಂದ ಸೃಷ್ಟಿಯಾದ ವಿಶಿಷ್ಟ ಪಾತ್ರಗಳ ಸುತ್ತ ಈ ಸಿನಿಮಾ ಹೆಣೆಯಲ್ಪಟ್ಟಿದೆ.

ಪ್ರೈವೆಟ್‌ ಜೆಟ್‌ಗೆ ಬೇಡಿಕೆ ಇಡುವ ನಟರ ಮಧ್ಯೆ  ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಕಮಲ್‌ ಹಾಸನ್‌; ಪ್ರಶಂಸಿದ ʻಕಲ್ಕಿʼ ನಿರ್ಮಾಪಕರು!

ಪ್ರೈವೇಟ್ ಜೆಟ್ ಕೇಳೋ ನಟರ ನಡುವೆ ಎಕಾನಮಿ ಕ್ಲಾಸ್‌ನಲ್ಲಿ ಕಮಲ್ ಹಾಸನ್ ಜರ್ನಿ

ಚಿತ್ರರಂಗದಲ್ಲಿ ನಟರ ಐಷಾರಾಮಿ ವೆಚ್ಚಗಳನ್ನು ಕಡಿತಗೊಳಿಸಿ, ನಿರ್ಮಾಣ ಬಜೆಟ್ ಅನ್ನು ಸಿನಿಮಾದ ಗುಣಮಟ್ಟಕ್ಕೆ ಬಳಸಬೇಕೆಂದು ಕರೆ ನೀಡಿದ್ದ ನಟ ಕಮಲ್ ಹಾಸನ್, ತಾವೇ ಮೊದಲು ಅದನ್ನು ಪಾಲಿಸಿ ಮಾದರಿಯಾಗಿದ್ದಾರೆ. 'ಕಲ್ಕಿ 2' ಚಿತ್ರದ ಹೈದರಾಬಾದ್ ಶೂಟಿಂಗ್‌ಗಾಗಿ ಅವರು ಪ್ರೈವೇಟ್ ಜೆಟ್ ಹಾಗೂ ಬಿಸಿನೆಸ್ ಕ್ಲಾಸ್ ಸೌಕರ್ಯಗಳನ್ನು ಬದಿಗಿಟ್ಟು, ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

Govinda: ಭದ್ರತಾ ಸಿಬ್ಬಂದಿ ಮತ್ತು ಪಾಪರಾಜಿ ನಡುವೆ ವಾಗ್ವಾದ; ಕ್ಷಮೆಯಾಚಿಸಿದ ನಟ ಗೋವಿಂದ

ಪಾಪರಾಜಿ ನಡುವೆ ವಾಗ್ವಾದ; ಕ್ಷಮೆಯಾಚಿಸಿದ ನಟ ಗೋವಿಂದ

Govinda: ಬಾಲಿವುಡ್ ನಟ ಗೋವಿಂದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಿಂದ ಹೊರಡುವಾಗ, ಅಭಿಮಾನಿಗಳು ಮತ್ತು ಪಾಪರಾಜಿಗಳು ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸುತ್ತಲೂ ಜಮಾಯಿಸಿದರು. ಗೊಂದಲದ ನಡುವೆ, ಅವರ ಭದ್ರತಾ ಸಿಬ್ಬಂದಿಯೊಬ್ಬರು ಪಾಪರಾಜಿಯನ್ನು ತಳ್ಳಿದ್ದಾರೆ. ಆದಾಗ್ಯೂ, ಗೋವಿಂದ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದರು. ತಮ್ಮ ಕಾರಿಗೆ ಹೋಗುವ ಮೊದಲು ಕ್ಷಮೆಯಾಚಿಸಿದ್ದಾರೆ.

Amruthadhaare Serial: ಗೌತಮ್‌ ಅಖಾಡಕ್ಕೆ ಜೈದೇವ್‌ ವೈಲ್ಡ್‌ ಕಾರ್ಡ್‌ ಎಂಟ್ರಿ! ಮಿಂಚು ಕಥೆ ಏನು?

ಗೌತಮ್‌ ಅಖಾಡಕ್ಕೆ ಜೈದೇವ್‌ ವೈಲ್ಡ್‌ ಕಾರ್ಡ್‌ ಎಂಟ್ರಿ!

Amruthadhaare Serial: ಇತ್ತೀಚೆಗೆ ನಡೆದ ಘಟನೆಯಿಂದ ಅಖಿಲಾಂಡೇಶ್ವರಿ ಸಹಾಯ ಗೌತಮ್‌ ಸಿಕ್ಕಿದೆ. ಈಗ ಅಖಿಲಾಂಡೇಶ್ವರಿಗೆ ಕಳೆದು ಹೋದ ಮಗುವಿನ ಬಗ್ಗೆ ಸುಳಿವೂ ಸಿಕ್ಕಿದೆ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡಿದ್ದಾರೆ. ಗೌತಮ್‌ ಮೀಟಿಂಗ್‌ ಅಲ್ಲಿ ಇದ್ದ ಕಾರಣ ಕಾಲ್‌ ರಿಸೀವ್‌ ಮಾಡಿಲ್ಲ, ಹೀಗಾಗಿ ಶಕುನಿ ಮಾಮ ಕಾಲ್‌ ಸ್ವೀಕರಿಸಿ, ಅಖಿಲಾಂಡೇಶ್ವರಿ ಕೊಟ್ಟ ಅಡ್ರೆಸ್‌ ಅನ್ನು ಬರೆದುಕೊಂಡಿದ್ದಾನೆ. ಆದರೆ ಈ ವಿಚಾರ ಜೈದೇವ್‌ಗೆ ಗೊತ್ತಾಗಿದೆ.

Ram Charan: ಅತ್ಯಂತ ಸ್ಫೂರ್ತಿದಾಯಕ ಚಿತ್ರ ʻಪೆದ್ದಿʼ! ರಾಮ್‌ ಚರಣ್‌ ಹೇಳಿದ್ದೇನು?

ಅತ್ಯಂತ ಸ್ಫೂರ್ತಿದಾಯಕ ಚಿತ್ರ ʻಪೆದ್ದಿʼ! ರಾಮ್‌ ಚರಣ್‌ ಹೇಳಿದ್ದೇನು?

Ram Charan: ಪೆದ್ದಿ ಚಿತ್ರವನ್ನು ಬುಚಿ ಬಾಬು ಸನಾ ಬರೆದು ನಿರ್ದೇಶಿಸಿದ್ದಾರೆ ಮತ್ತು ರಾಮ್ ಚರಣ್, ಜಾನ್ವಿ ಕಪೂರ್, ಶಿವ ರಾಜ್‌ಕುಮಾರ್, ದಿವ್ಯೇಂದು, ಜಗಪತಿ ಬಾಬು ಸೇರಿದಂತೆ ಇತರರು ನಟಿಸಿದ್ದಾರೆ. ಈ ಚಿತ್ರ ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಿದ್ದಾರೆ. ಕೇವಲ ನಾಯಕನ ಮಾಸ್ ಎಲಿಮೆಂಟ್‌ಗಳನ್ನು ಮಾತ್ರವಲ್ಲದೇ, ಕಥೆಯಲ್ಲಿರುವ ಭಾವನಾತ್ಮಕ ಆಳವನ್ನೂ ಕೂಡ ಅವರು ಈ ಟ್ರೇಲರ್​​ನಲ್ಲಿ ತೋರಿಸಿದ್ದಾರೆ.

Actor Darshan: ವಿವಾಹ ವಾರ್ಷಿಕೋತ್ಸವ;  ವಿಜಯಲಕ್ಷ್ಮಿ ದರ್ಶನ್‌ ಭಾವುಕ!

Actor Darshan: ವಿವಾಹ ವಾರ್ಷಿಕೋತ್ಸವ; ವಿಜಯಲಕ್ಷ್ಮಿ ದರ್ಶನ್‌ ಭಾವುಕ!

Actor Darshan: ನಟ ದರ್ಶನ್​ ಇನ್ನೂ ಒಂದು ವರ್ಷದ ಕಾಲ ಜೈಲಿನಿಂದ ಹೊರಗೆ ಬರುವ ಸಾಧ್ಯತೆಯೇ ಇಲ್ಲ ಎನ್ನಲಾಗಿದ್ದು, 1 ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಜಯಲಕ್ಷ್ಮಿ ಅವರು ಕೂಡಾ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿ ಗೆ(Vijayalakshmi Darshan) ಇಂದು (ಮೇ 19) 23ನೇ ವಿವಾಹ ವಾರ್ಷಿಕೋತ್ಸವದ (Marriage) ಸಂಭ್ರಮ. ಹೀಗಿರುವಾಗ ಗಂಡನ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಭಾರತದ ಅತಿ ಕಿರಿಯ ಥಿಯೇಟ್ರಿಕಲ್ ಮಾಯಾಜಾಲ ಕಲಾವಿದನ ಮರುಪ್ರವೇಶ – ಅಮ್ಮ ಮತ್ತು ಮಗನ ‘MAAgic’ ಥಿಯೇಟ್ರಿಕಲ್ ಮ್ಯಾಜಿಕ್ ಶೋ

ಅಮ್ಮ ಮತ್ತು ಮಗನ ‘MAAgic’ ಥಿಯೇಟ್ರಿಕಲ್ ಮ್ಯಾಜಿಕ್ ಶೋ

ಭಾರತದಲ್ಲಿ ವಿರಳವಾಗಿ ಕಾಣಸಿಗುವ ಕಥಾಹಂದರ ಆಧಾರಿತ ಥಿಯೇಟ್ರಿಕಲ್ ಮ್ಯಾಜಿಕ್ ಶೋ ಇದಾ ಗಿದೆ. 75 ನಿಮಿಷಗಳ ಈ ಪ್ರದರ್ಶನವು ಕಥೆ, ಭಾವನೆಗಳು ಮತ್ತು ಪ್ರತಿಯೊಂದು ಭಾರತೀಯ ಮನೆಯೊ ಳಗಿನ ಕಾಣದ ಮ್ಯಾಜಿಕ್ ಅನ್ನು ವೇದಿಕೆಗೆ ತರುತ್ತದೆ.ರಾಷ್ಟ್ರೀಯ ಪ್ರಶಸ್ತಿ ವಿಜೇತ 15 ವರ್ಷದ ಲೇಖಕ ಮತ್ತು ಇಲ್ಯೂಷನಿಸ್ಟ್ ಜಯಂತ್ ಪಟ್ವಾರಿ, ಈಗಾಗಲೇ 200ಕ್ಕೂ ಹೆಚ್ಚು ಮನಮೋಹಕ ಮ್ಯಾಜಿಕ್ ಶೋಗಳನ್ನು ನೀಡಿರುವ ಅವರು, ತಮ್ಮ ತಾಯಿ ಮೋನಿಕಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳ ಲಿದ್ದಾರೆ.

Keerthy Suresh: ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

Keerthy Suresh: ಸರ್ಜರಿ ವದಂತಿಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನದ ಮಾತುಗಳನ್ನು ಹೊರಹಾಕಿದ್ದಾರೆ. ಸದಾ ಸೌಮ್ಯವಾಗಿ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ತಮಗಾದ ದೈಹಿಕ ಮತ್ತು ಮಾನಸಿಕ ಹಿನ್ನಡೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.ಕೀರ್ತಿ ಹಲವು ವರ್ಷಗಳಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Mahakali Movie: ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

Mahakali Movie: ಮಹಾಕಾಳಿ ಚಿತ್ರವನ್ನ ಮಹಿಳಾ ಸೂಪರ್ ಹೀರೋ ಚಿತ್ರ ಅಂತಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಈ ಸಿನಿಮಾದ ಸ್ಟೋರಿಯನ್ನ ಪ್ರಶಾಂತ್ ವರ್ಮಾ ಬರೆದಿದ್ದಾರೆ. ಹನುಮಾನ್ ಚಿತ್ರದ ಮೂಲಕವೇ ಹೆಸರಾದ ಪ್ರಶಾಂತ್ ವರ್ಮಾ, ಈ ಒಂದು ಚಿತ್ರದ ಕಥೆ ಬರೆದು ಡೈರೆಕ್ಷನ್ ಹೊಣೆಯನ್ನ ಪೂಜಾ ಅಪರ್ಣಾ ಕೊಲ್ಲೂರು ಅವರಿಗೆ ಕೊಟ್ಟಿದ್ದಾರೆ.

ʻಖುಷಿಯಿಂದ ನೆಮ್ಮದಿಯಾಗಿರುವ ಸಂಸಾರವನ್ನು ದೇವರು ನಾಶ ಮಾಡುತ್ತಾನೆʼ; ದಿಲೀಪ್‌ ರಾಜ್‌ ಪತ್ನಿಯ ನೋವಿನ ಪೋಸ್ಟ್‌!

ʻದೇವರಿದ್ದಾನೆ, ಹುಷಾರಾಗಿರಿʼ; ದಿಲೀಪ್ ಪತ್ನಿ ಇಂಥ ಎಚ್ಚರಿಕೆ ನೀಡಿದ್ದೇಕೆ?

ನಟ ಮತ್ತು ನಿರ್ಮಾಪಕ ದಿವಂಗತ ದಿಲೀಪ್ ರಾಜ್ ಅವರ ಅಕಾಲಿಕ ಮರಣದ ಆಘಾತದಿಂದ ಅವರ ಕುಟುಂಬ ಇಂದಿಗೂ ಹೊರಬಂದಿಲ್ಲ. ಪತ್ನಿ ಶ್ರೀವಿದ್ಯಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸದಾ ನಗುತ್ತಾ ಖುಷಿಯಿಂದ ಇರುವ ಸಂಸಾರದ ಮೇಲೆ ದೇವರ ಕಣ್ಣು ಬೀಳುತ್ತದ, ದೇವರು ಅಂತಹ ಕುಟುಂಬವನ್ನು ನಾಶ ಮಾಡುತ್ತಾನೆ ಎಂದು ನೋವನ್ನು ಹೊರಹಾಕಿದ್ದಾರೆ.

Peddi Trailer Review: ಕ್ರಾಸ್‌ಓವರ್ ಅಥ್ಲೀಟ್ ಆಗಿ ಧೂಳೆಬ್ಬಿಸಿದ ʻಗ್ಲೋಬಲ್ ಸ್ಟಾರ್ʼ ರಾಮ್ ಚರಣ್; ಗುರುವಾಗಿ ಬಂದ ಶಿವಣ್ಣ!

ʻಪೆದ್ದಿʼ ಟ್ರೇಲರ್ ಧಮಾಕಾ; ರಾಮ್ ಚರಣ್‌ಗೆ ಗುರುವಾಗಿ ಬಂದ ಶಿವರಾಜ್‌ಕುಮಾರ್‌

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ 'ಪೆದ್ದಿ' ಚಿತ್ರದ ರಗಡ್ ಟ್ರೇಲರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ರಾಮ್ ಚರಣ್ ಕ್ರಾಸ್‌ಓವರ್ ಅಥ್ಲೀಟ್ ಆಗಿ ಕಾಣಿಸಿಕೊಂಡರೆ, ಶಿವರಾಜ್‌ಕುಮಾರ್ ಕುಸ್ತಿ ಹೇಳಿಕೊಡುವ ಪವರ್‌ಫುಲ್ ಗುರು 'ಗೌರ್ ನಾಯ್ಡು' ಪಾತ್ರದಲ್ಲಿ ಅಬ್ಬರಿಸಿದ್ದಾರೆ.

Rashmika Mandanna: ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಎರಡನೇ ಸಿನಿಮಾ. ಹೋಮಿ ಅಡಜಾನಿಯಾ ನಿರ್ದೇಶನದ ಮೊದಲ ಕಾಕ್‌ಟೈಲ್ 2012 ರಲ್ಲಿ ಬಿಡುಗಡೆಯಾಯಿತು ಮತ್ತು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

MBBS ಪಾಸ್‌ ಮಾಡಿ ಡಾಕ್ಟರ್‌ ಆದ ಶ್ರೀಲೀಲಾ ಮುಂದೇನು ಮಾಡ್ತಾರೆ? ಅಮ್ಮನಿಂದಲೇ ಸಿಕ್ತು ಹೊಸ ಅಪ್ಡೇಟ್‌!

MBBS ಮುಗಿಸಿದ ನಟಿ ಶ್ರೀಲೀಲಾ ಈಗೇನ್‌ ಮಾಡ್ತಿದ್ದಾರೆ? ತಾಯಿ ಹೇಳಿದ್ರು ಸತ್ಯ

ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿರುವ ನಟಿ ಶ್ರೀಲೀಲಾ ಜೂನ್‌ನಲ್ಲಿ ನಡೆಯಲಿರುವ ನೀಟ್-ಪಿಜಿ ಪರೀಕ್ಷೆಯ ಉನ್ನತ ಶಿಕ್ಷಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಷಯವನ್ನು ಅವರ ತಾಯಿ ಡಾ. ಸ್ವರ್ಣಲತಾ ಖಚಿತಪಡಿಸಿದ್ದಾರೆ. ಇತ್ತೀಚಿನ ಚಿತ್ರಗಳ ಸೋಲಿನಿಂದಾಗಿ ಹೊಸ ಸಿನಿಮಾಗಳಿಂದ ದೂರವಿರುವ ಶ್ರೀಲೀಲಾ, ಸದ್ಯ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿದ್ದಾರಂತೆ.

‌Love Punch: ಸಖತ್‌ ಬೋಲ್ಡ್‌ ಅವತಾರ ತಾಳಿದ ನಟಿ ಮೌನ ಗುಡ್ಡೆಮನೆ; ಇದು ದಿಲೀಪ್‌ ರಾಜ್‌ ನಿರ್ದೇಶನದ ಮೈಕ್ರೋ ಸೀರೀಸ್‌!

ಚಾರು‌ ಇಮೇಜ್ ಬದಲಿಸಿದ ಮೌನ ಗುಡ್ಡೆಮನೆ; ಬಿಕಿನಿ ಅವತಾರಕ್ಕೆ ಫ್ಯಾನ್ಸ್ ಫಿದಾ

'ರಾಮಾಚಾರಿ' ಧಾರಾವಾಹಿ ಖ್ಯಾತಿಯ ನಟಿ ಮೌನ ಗುಡ್ಡೆಮನೆ ತಮ್ಮ ಇಮೇಜ್ ಬದಲಿಸಿ, 'ಲವ್ ಪಂಚ್' ಮೈಕ್ರೋ ಸರಣಿಯಲ್ಲಿ ಸಖತ್‌ ಬೋಲ್ಡ್ & ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ನಟ ದಿಲೀಪ್ ರಾಜ್ ಆಕ್ಷನ್ ಕಟ್ ಹೇಳಿರುವ ಮೈಕ್ರೋ ಸರಣಿ ಸದ್ಯ ಜೀ-5ನ ಬುಲೆಟ್‌ ಆಪ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Loading...