ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

5 ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿದ ನಟಿ ಕೃತಿ ಸನೋನ್; ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ನಟಿ ಕೃತಿ ಸನೋನ್ ಅಂಡಾಣು ಫ್ರೀಜಿಂಗ್ ಮಾಡಿಸಿದ್ದೇಕೆ? ಇಲ್ಲಿದೆ ಉತ್ತರ

ಬಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ತಮ್ಮ 35ನೇ ವಯಸ್ಸಿನಲ್ಲಿ ಸಾಮಾಜಿಕ ಮತ್ತು ವಯಸ್ಸಿನ ಒತ್ತಡಕ್ಕೆ ಮಣಿಯದೆ ಕೆಲವು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. 'ಮಿಮಿ' ಚಿತ್ರದ ಚಿತ್ರೀಕರಣದ ಬಿಡುವಿನಲ್ಲಿ ಈ ಕಠಿಣ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗಿದ್ದ ಅವರು, ಅಂಡಾಣು ಫ್ರೀಜ್ ಮಾಡಿದ್ದಾರೆ. ಆ ಜರ್ನಿ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ʻಕರಾವಳಿʼ ಚಿತ್ರಕ್ಕಾಗಿ ಪ್ರಜ್ವಲ್‌ ದೇವರಾಜ್ ಪಡೆದ ಸಂಭಾವನೆ ಎಷ್ಟು? ಫ್ಯಾನ್ಸ್‌ ಗಲಾಟೆ ಬಗ್ಗೆ ರಾಜ್‌ ಬಿ. ಶೆಟ್ಟಿ ಹೇಳಿದ್ದೇನು?

ಕರಾವಳಿಯಲ್ಲಿ ರಾಜ್‌ ಬಿ. ಶೆಟ್ಟಿ ನಟಿಸಿದ್ದಕ್ಕೆ ಪ್ರಜ್ವಲ್‌ ಬೇಜಾರಾದ್ರಾ?

'ಕರಾವಳಿ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಡೆದ ಅಭಿಮಾನಿಗಳ ಆಕ್ರೋಶದ ಕುರಿತು ನಟ ರಾಜ್ ಬಿ. ಶೆಟ್ಟಿ ಹಾಗೂ ನಿರ್ದೇಶಕ ಗುರುದತ್ ಗಾಣಿಗ ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರಕ್ಕೆ ಈ ಮಧ್ಯೆ ಚಿತ್ರದ ನಟ ಪ್ರಜ್ವಲ್ ದೇವರಾಜ್ ಕಳೆದ ಎರಡು ತಿಂಗಳಿಂದ ಚಿತ್ರತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

Amruthadhaare Serial: ಮನದರಸಿ ಭೂಮಿಗೆ ಗೌತಮ್ ನಲ್ಮೆಯ ಉಡುಗೊರೆ!

Amruthadhaare: ಮನದರಸಿ ಭೂಮಿಗೆ ಗೌತಮ್ ನಲ್ಮೆಯ ಉಡುಗೊರೆ!

Amruthadhaare Serial: ಭೂಮಿಕಾ ಒಲವಿನಧಾರೆಗೆ ಪುಸ್ತಕ ರೂಪ ಕೊಟ್ಟು, ಸರ್‌ಪ್ರೈಸ್ ನೀಡಲು ಗೌತಮ್‌ ನಿರ್ಧಾರ ಮಾಡುತ್ತಾನೆ. ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಹರೀಶ್ ನಾಗರಾಜು, ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.ಅಮೃತಧಾರೆ ಸೀರಿಯಲ್​ನಲ್ಲಿ ಶಕುಂತಲಾ ಮತ್ತು ಜೈದೇವ್​ ಸೇರಿ ಗೌತಮ್-ಭೂಮಿಕಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ.

ʻಕರಾವಳಿʼ ಟ್ರೇಲರ್ ಲಾಂಚ್‌ ವೇಳೆ ಹೈಡ್ರಾಮಾ; ಕೆರಳಿ ಕೆಂಡವಾದ ಪ್ರಜ್ವಲ್ ದೇವರಾಜ್ ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು?

ʻಕರಾವಳಿʼ ಚಿತ್ರದ ಈವೆಂಟ್‌ಗೆ ಪ್ರಜ್ವಲ್‌ಗೆ ಆಹ್ವಾನವಿಲ್ಲ? ಫ್ಯಾನ್ಸ್‌ ಗರಂ

ಬೆಂಗಳೂರಿನ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಭಾರಿ ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ನಾಯಕ ನಟನಿಗೆ ಆಹ್ವಾನ ನೀಡದಿರುವುದು ಮತ್ತು ಚಿತ್ರದಲ್ಲಿ ಅವರ ಪಾತ್ರಕ್ಕೆ ಸ್ವತಃ ಪ್ರಜ್ವಲ್ ಡಬ್ ಮಾಡದಿರುವ ಕಾರಣಕ್ಕೆ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.

Gelathi Gayathri Promo: ವೈಷ್ಣವಿ ಗೌಡ ಹೊಸ ಧಾರಾವಾಹಿ ಪ್ರೋಮೋ ಔಟ್‌!

ವೈಷ್ಣವಿ ಗೌಡ ಹೊಸ ಧಾರಾವಾಹಿ ಪ್ರೋಮೋ ಔಟ್‌!

Gelathi Gayathri Promo: ವೈಷ್ಣವಿ ಗೌಡ ಅವರು ಉದಯ ಟಿವಿಯ ಹೊಸ ಸೀರಿಯಲ್ 'ಗೆಳತಿ ಗಾಯತ್ರಿ' ಮೂಲಕ ಮರಳುತ್ತಿದ್ದಾರೆ. ಸದ್ಯ ವೈಷ್ಣವಿ ಅವರ ಅಭಿಮಾನಿಗಳು ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ. ಪ್ರೋಮೋ ರಿಲೀಸ್‌ ಆಗಿದೆ. ‘ಪಾರ್ವತಿ’ ಎಂಬ ಪಾತ್ರ ಮಾಡುತ್ತಿದ್ದು, ಶ್ರೀಮಂತ ಮನೆಯ ಹೆಣ್ಮಗಳಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಭಾವನಾತ್ಮಕ ಸ್ನೇಹದ ಕಥೆಯಾಗಿದ್ದು, ಇದರಲ್ಲಿ ವೈಷ್ಣವಿ ಅವರು ಎಲ್ಲಾ ಸುಖ-ಸೌಲಭ್ಯಗಳಿದ್ದರೂ ಬಾಲ್ಯದ ಗೆಳತಿಯನ್ನು ಹುಡುಕುವ ಶ್ರೀಮಂತ ಗೃಹಿಣಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಭಾರತದ ಏಕೈಕ ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವದ 16ನೇ ಆವೃತ್ತಿ ಆರಂಭ

ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವದ 16ನೇ ಆವೃತ್ತಿ ಆರಂಭ

ಭಾರತದ ಅತಿ ದೊಡ್ಡ ಮತ್ತು ಏಕೈಕ ಆಸ್ಕರ್-ಮಾನ್ಯತೆ (Oscar-accredited) ಪಡೆದ ಕಿರುಚಿತ್ರೋತ್ಸವ ವಾದ 'ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ' (BISFF), ತನ್ನ 16ನೇ ಆವೃತ್ತಿಯನ್ನು 2026 ರ ಆಗಸ್ಟ್ 14 ರಿಂದ 16 ರವರೆಗೆ (ಆನ್‌ಲೈನ್‌ನಲ್ಲಿ: ಆಗಸ್ಟ್ 06 ರಿಂದ 16) ಬೆಂಗಳೂರಿನ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಿದೆ.

Rishab Shetty: ಡಿವೈನ್‌ ಸ್ಟಾರ್‌ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?

ಡಿವೈನ್‌ ಸ್ಟಾರ್‌ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?

Rishab Shetty: ಸದ್ಯಕ್ಕೆ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ‘ರಂಡಮೂಳಂ’ ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ.

ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾಗೆ ಕಲ್ಯಾಣ; ಪ್ರಿಯಕರ ರೋಹನ್ ಠಕ್ಕರ್ ಜೊತೆ ಅದ್ದೂರಿಯಾಗಿ ನಡೆದ ಮದುವೆ

ಅರ್ಜುನ್ ಕಪೂರ್ ತಂಗಿಗೆ ಕಲ್ಯಾಣ; ಮುಂಬೈನಲ್ಲಿ ಅನ್ಶುಲಾ ಕೈಹಿಡಿದ ರೋಹನ್

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಹಾಗೂ ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಅವರು ತಮ್ಮ ದೀರ್ಘಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯವಾದ ಈ ಜೋಡಿ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.

ಎರಡೇ ದಿನಕ್ಕೆ ಒಟಿಟಿಯಿಂದ ‘ಸತ್ಲುಜ್’ ಡಿಲೀಟ್: ʻಸಿನಿಮಾ ಡೌನ್‌ಲೋಡ್ ಲಿಂಕ್‌ನ ಶೇರ್‌ ಮಾಡಿʼ ಅಂತ ಕರೆಕೊಟ್ಟ ನಟ ದಿಲ್ಜಿತ್ ದೋಸಾಂಜ್

Satluj Controversy: ʻಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ' ಎಂದ ನಟ ದಿಲ್ಜಿತ್

ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ನೈಜ ಜೀವನದ ಕಥೆ ಆಧಾರಿತ, ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರವು ಬಿಡುಗಡೆಯಾದ ಎರಡೇ ದಿನಕ್ಕೆ ಝೀ5 ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ದಿಲ್ಜಿತ್, ಚಿತ್ರದ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

LCU: ಲೋಕೇಶ್ ಕನಕರಾಜ್ ಬಗ್ಗೆ ಹೀಗೊಂದು ವದಂತಿ! ಕೊನೆಗೂ ಸ್ಪಷ್ಟನೆ ಕೊಟ್ಟ ನಿರ್ದೇಶಕ

ಲೋಕೇಶ್ ಕನಕರಾಜ್ ಬಗ್ಗೆ ಹೀಗೊಂದು ವದಂತಿ!

LCU Is NOT Closed: ತಮಿಳು ಚಿತ್ರರಂಗದ ಕೆಲವು ದೊಡ್ಡ ಸಾಹಸ ಚಿತ್ರಗಳನ್ನು ನೀಡಿರುವ ಈ ಚಿತ್ರನಿರ್ಮಾಪಕರು ಈಗ ಡಿಸಿ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರವು ಜುಲೈ 31, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಬಿಡುಗಡೆಯಾಗುವ ಮುನ್ನ, ಲೋಕೇಶ್ ತಮ್ಮ ಅತ್ಯಂತ ಪ್ರೀತಿಯ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್, ಅಂದರೆ LCU ನ (LCU) ಭವಿಷ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳ ಬಗ್ಗೆಯೂ ಮಾತನಾಡಿದ್ದಾರೆ.

Toxic Movie: ಯಶ್ ಬಗ್ಗೆ ಹುಮಾ ಖುರೇಷಿ ಹೇಳಿದ ಸೀಕ್ರೆಟ್‌ ಇದು!

ಯಶ್ ಬಗ್ಗೆ ಹುಮಾ ಖುರೇಷಿ ಹೇಳಿದ ಸೀಕ್ರೆಟ್‌ ಇದು!

Toxic Movie: ಟಾಕ್ಸಿಕ್ ಚಿತ್ರದಲ್ಲಿ ಎಲಿಜಬೆತ್ ಪಾತ್ರವನ್ನು ನಿರ್ವಹಿಸುವ ಹುಮಾ ಖುರೇಷಿ, ಚಿತ್ರದ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಬಗ್ಗೆ ಮಾತನಾಡಿದರು. ಈ ಸಿನಿಮಾ ಎಲ್ಲರ ನಿರೀಕ್ಷೆಗಳನ್ನು ಮೀರಿ ನಿಲ್ಲಲಿದೆ, ಜನರು ಇಂತಹ ಚಿತ್ರವನ್ನು ಹಿಂದೆಂದೂ ನೋಡಿಲ್ಲ ಎಂದು ಹುಮಾ ಹೇಳಿದ್ದಾರೆ. ಆಗಸ್ಟ್ 26 ರಂದು ಸಿನಿಮಾ ಬಿಡುಗಡೆಯಾಗಲಿದೆ.

ʻ12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನ ಶೂಟಿಂಗ್‌ʼ; ʻಪಿನಾಕʼ ಮೇಕಿಂಗ್‌ ಸ್ಟೋರಿ ಬಿಚ್ಚಿಟ್ಟ ʻಗೋಲ್ಡನ್‌ ಸ್ಟಾರ್‌ʼ ಗಣೇಶ್

ʻಗೋಲ್ಡನ್ ಸ್ಟಾರ್ʼ ಗಣೇಶ್‌ ನಟನೆಯ ʻಪಿನಾಕʼ‌ ಸಿನಿಮಾ ಟೀಸರ್ ರಿಲೀಸ್

ʻಗೋಲ್ಡನ್ ಸ್ಟಾರ್ʼ ಗಣೇಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧನಂಜಯ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ 2 ರಂದು ತೆರೆಕಾಣಲಿದೆ.

ಒಟಿಟಿಗೆ ಬಂತು ರಾಮ್ ಚರಣ್ - ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ'; ಯಾವಾಗ? ಎಲ್ಲಿ ಸ್ಟ್ರೀಮಿಂಗ್?

Ram Charan: ಬಾಕ್ಸ್‌ ಆಫೀಸ್‌ ಲೂಟಿ ಮಾಡಿದ ʻಪೆದ್ದಿʼ ಈಗ ಒಟಿಟಿಗೆ ಎಂಟ್ರಿ

ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲು ಸಜ್ಜಾಗಿದೆ. ಜೂನ್ 4 ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 338 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ಇದೀಗ 35 ದಿನಗಳ ನಂತರ ಒಟಿಟಿಗೆ ಈ ಸಿನಿಮಾ ಬರುತ್ತಿದೆ.

Ramayana Movie: ಇದೊಂದು ಕಾರಣಕ್ಕೆ ರಾಮಾಯಣದಲ್ಲಿ ನಟಿಸಿದೆ ಎಂದ ಕಾಜಲ್ ಅಗರ್ವಾಲ್‌!

ಇದೊಂದು ಕಾರಣಕ್ಕೆ ರಾಮಾಯಣದಲ್ಲಿ ನಟಿಸಿದೆ ಎಂದ ಕಾಜಲ್ ಅಗರ್ವಾಲ್‌!

Kajal Aggarwal: ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ನಟಿ ಕಾಜಲ್ , ರಾಮಾಯಣ ಕೇವಲ ಭಾರತೀಯ ಸಿನಿಮಾ ಮಾತ್ರವಲ್ಲ, ವಿಶ್ವದ ಸಿನಿಪ್ರಿಯರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ ದೊಡ್ಡ ಚಿತ್ರವಾಗಿದೆ. ಇಂತಹ ಮಹತ್ವದ ಯೋಜನೆಯ ಭಾಗವಾಗಿರುವುದು ತಮ್ಮ ವೃತ್ತಿಜೀವನದ ವಿಶೇಷ ಅನುಭವಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ʻಪಿನಾಕʼ ಚಿತ್ರದಲ್ಲಿ ʻಗೋಲ್ಡನ್ ಸ್ಟಾರ್ʼ ಗಣೇಶ್‌ ಜೊತೆ ನಟಿಸಿದ ಪುಟಾಣಿ ಮೃದಿನಿ; ಅಮ್ಮ ಸಾರಿಕಾಗೂ ಒಲಿದ ಅದೃಷ್ಟ

ನಟ ಗಣೇಶ್‌ ಜೊತೆ ಬಣ್ಣ ಹಚ್ಚಿದ ಸೋಶಿಯಲ್‌ ಮೀಡಿಯಾದ ʻಸ್ಟಾರ್‌ʼ ಅಮ್ಮ- ಮಗಳು

`ಗೋಲ್ಡನ್ ಸ್ಟಾರ್' ಗಣೇಶ್ ಅಭಿನಯದ 'ಪಿನಾಕ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದ ಮೂಲಕ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಖ್ಯಾತಿಯ ಸಾರಿಕಾ ಮತ್ತು ಅವರ ಪುಟಾಣಿ ಮಗಳು ಮೃದಿನಿ ಬೆಳ್ಳಿಪರದೆಗೆ ಲಗ್ಗೆ ಇಟ್ಟಿದ್ದಾರೆ. ಈ ಚಿತ್ರದಲ್ಲೂ ಗಣೇಶ್ ಅವರಿಗೆ ಅಕ್ಕ ಹಾಗೂ ಅಕ್ಕನ ಮಗಳಾಗಿ ಬಣ್ಣ ಹಚ್ಚಿರುವುದು ವಿಶೇಷ. ಈ ಸಿನಿಮಾ ಅಕ್ಟೋಬರ್ 2 ರಂದು ತೆರೆಕಾಣಲಿದೆ.

ಭೀಮ ಜ್ಯುವೆಲ್ಲರ್ಸ್'ಗೆ ಜಾಹ್ನವಿ ಕಪೂರ್ ಬ್ರ್ಯಾಂಡ್ ರಾಯಭಾರಿ

ಭೀಮ ಜ್ಯುವೆಲ್ಲರ್ಸ್'ಗೆ ಜಾಹ್ನವಿ ಕಪೂರ್ ಬ್ರ್ಯಾಂಡ್ ರಾಯಭಾರಿ

ಭೀಮ ಜ್ಯುವೆಲ್ಲರ್ಸ್ ಜಾಹ್ನವಿ ಕಪೂರ್ ಅವರನ್ನು ಬ್ರ್ಯಾಂಡ್ ರಾಯಭಾರಿಯನ್ನಾಗಿ ಆಗಿ ನೇಮಿಸಿ ಕೊಂಡಿದ್ದು, ಭಾರತದಾದ್ಯಂತ ಗ್ರಾಹಕರೊಂದಿಗೆ ತನ್ನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಿದೆ. ಈ ಸಹಭಾಗಿತ್ವವು ಶತಮಾನದಷ್ಟು ಹಳೆಯದಾದ ಆಭರಣ ಸಂಸ್ಥೆಯು ಪರಂಪರೆ, ಸಂಸ್ಕೃತಿ ಹಾಗೂ ಸಮಕಾಲೀನ ಆಶಯಗಳ ಸಮ್ಮಿಲನದೊಂದಿಗೆ ಹೊಸ ಯುಗದ ರಾಷ್ಟ್ರೀಯ ಬ್ರ್ಯಾಂಡ್ ಆಗಿ ರೂಪಾಂತರಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.

ನಟ ಸುದೀಪ್‌ ವೃತ್ತಿ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಇದೇ ದಿನ! ಜುಲೈ 6ರಂದು ಕಿಚ್ಚನ ಜೀವನದಲ್ಲಿ ಆಗಿದ್ದೇನು?

ನಟ ʻಕಿಚ್ಚʼ ಸುದೀಪ್ ಕೆರಿಯರ್ ಬದಲಿಸಿದ ಜುಲೈ 6; ಏನಿವತ್ತು ಸ್ಪೆಷಲ್?

ʻಅಭಿನಯ ಚಕ್ರವರ್ತಿʼ ನಟ ಸುದೀಪ್ ಅವರ ವೃತ್ತಿಬದುಕಿನಲ್ಲಿ ಜುಲೈ 6 ಅತ್ಯಂತ ಮರೆಯಲಾಗದ ದಿನವಾಗಿದೆ. ಅವರಿಗೆ 'ಕಿಚ್ಚ' ಎಂಬ ಶಾಶ್ವತ ಬಿರುದು ತಂದುಕೊಟ್ಟ 'ಹುಚ್ಚ' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಭರ್ತಿ 25 ವರ್ಷ ತುಂಬಿದ್ದರೆ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದ 'ಈಗ' ಚಿತ್ರಕ್ಕೆ 14 ವರ್ಷ ಪೂರೈಸಿದೆ.

ಕೃಷಿ ತಾಪಂಡ ಗೆಳೆಯ ವೈಶಾಖ್‌ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣವಾಯ್ತಾ? ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದೇನು?

ನಟಿ ಕೃಷಿ ತಾಪಂಡ ಗೆಳೆಯ ವೈಶಾಖ್ ‌ಆತ್ಮಹತ್ಯೆಗೆ ಆರ್ಥಿಕ ಬಿಕ್ಕಟ್ಟು ಕಾರಣ?

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತ ವೈಶಾಖ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್ ನಗರ ಪೊಲೀಸರ ತನಿಖೆ ತೀವ್ರಗೊಂಡಿದೆ. ವೈಶಾಖ್ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಖಿನ್ನತೆಯಿಂದ ಕೃಷಿ ಅವರ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಕಷ್ಟದಲ್ಲಿದ್ದ ಗೆಳೆಯನಿಗೆ ಕೃಷಿ ನಿಯಮಿತವಾಗಿ ಬ್ಯಾಂಕ್ ಮೂಲಕ ಹಣದ ನೆರವು ನೀಡುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿದೆ.

ಮೋಹನ್‌ಲಾಲ್‌ ಮನೆಯಲ್ಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳು; ಅರಣ್ಯಾಧಿಕಾರಿಗಳ ಮುಂದೆ ಶಾಕಿಂಗ್‌ ವಿಚಾರ ಬಯಲು

ʻನನ್ನ ಮನೇಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳಿವೆʼ ಎಂದ ಮೋಹನ್ ಲಾಲ್

Mohanlal Ivory Case: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಕೊಚ್ಚಿ ನಿವಾಸದಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 10 ಆನೆದಂತಗಳು ಹಾಗೂ 45 ಕೆಜಿಗೂ ಅಧಿಕ ತೂಕದ 13 ದಂತದ ಮೂರ್ತಿಗಳು ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ಸ್ವತಃ ಮೋಹನ್‌ಲಾಲ್‌ ಅವರೇ ನೀಡಿದ್ದಾರೆ.

ಜೂ. ಎನ್‌ಟಿಆರ್‌ ಬಾಮೈದನಿಗೆ ನಾಯಕಿಯಾದ ಮೇಘಾ ಶೆಟ್ಟಿ; ಕೆವಿಎನ್‌ ಪ್ರೊಡಕ್ಷನ್ಸ್ ಮೂಲಕ ಟಾಲಿವುಡ್‌ಗೆ ಹಾರಿದ ʻಕನ್ನಡತಿʼ

ತೆಲುಗು ಚಿತ್ರದಲ್ಲಿ ಜೂ. ಎನ್‌ಟಿಆರ್‌ ಬಾಮೈದನಿಗೆ ನಾಯಕಿಯಾದ ಮೇಘಾ ಶೆಟ್ಟಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಈಗ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನ ಹೊಸ ತೆಲುಗು ಚಿತ್ರದ (#NN5) ಮೂಲಕ ಟಾಲಿವುಡ್‌ಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ನಾರ್ನೆ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ.

Diljit Dosanjh: ಒಟಿಟಿಯಲ್ಲಿ ರಿಲೀಸ್ ಮಾಡಿದ ಎರಡನೇ ದಿನಕ್ಕೆ ಈ ಮೂವಿ ಬ್ಯಾನ್‌! ಕಾರಣ ಇದು

ಒಟಿಟಿಯಲ್ಲಿ ರಿಲೀಸ್ ಮಾಡಿದ ಎರಡನೇ ದಿನಕ್ಕೆ ಈ ಮೂವಿ ಬ್ಯಾನ್‌!

Diljit Dosanjh: ಈ ಚಿತ್ರವನ್ನು ಟ್ರೆಹಾನ್, ಅಭಿಷೇಕ್ ಚೌಬೆ ಮತ್ತು ರೋನಿ ಸ್ಕ್ರೂವಾಲಾ ಅವರು ಮ್ಯಾಕ್‌ಗಫಿನ್ ಪಿಕ್ಚರ್ಸ್ ಮತ್ತು ಆರ್‌ಎಸ್‌ವಿಪಿ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಅರ್ಜುನ್ ರಾಂಪಾಲ್, ಕನ್ವಲ್ಜಿತ್ ಸಿಂಗ್, ಸುವಿಂದರ್ ವಿಕ್ಕಿ ಮತ್ತು ಗೀತಿಕಾ ವಿದ್ಯಾ ಓಹ್ಲ್ಯಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tanvi Thakkar: ಖ್ಯಾತ ಕಿರುತೆರೆ ದಂಪತಿ ಬಾಳಲ್ಲಿ ಬಿರುಗಾಳಿ!  ಡಿವೋರ್ಸ್‌ ಘೋಷಿಸಿದ ಜೋಡಿ

ಖ್ಯಾತ ಕಿರುತೆರೆ ದಂಪತಿ ಬಾಳಲ್ಲಿ ಬಿರುಗಾಳಿ! ಡಿವೋರ್ಸ್‌ ಘೋಷಿಸಿದ ಜೋಡಿ

Tanvi Thakkar: ದಂಪತಿ ಇತ್ತೀಚೆಗೆ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. ತನ್ವಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಸುದ್ದಿಯನ್ನು ನೀಡಿದ್ದಾರೆ. ಅವರು ವಿವರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಈ ನಿರ್ಧಾರವನ್ನು ತಮ್ಮ ಜೀವನದ ಅತ್ಯಂತ ಭಾವನಾತ್ಮಕ ಘಟನೆಗಳಲ್ಲಿ ಒಂದೆಂದು ಹೇಳಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಆದಿತ್ಯ ಪರಸ್ಪರ ಮತ್ತು ಅವರ ಕುಟುಂಬಗಳ ಮೇಲಿನ ಗೌರವದಿಂದ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

Krishi Thapanda: ಇದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ! ಕೃಷಿ ತಾಪಂಡ ಪೋಸ್ಟ್‌

ಇದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ! ಕೃಷಿ ತಾಪಂಡ ಪೋಸ್ಟ್‌

Krishi Thapanda: ಕೃಷಿ ತಾಪಂಡ ಮನೆಯಲ್ಲಿ ಅವರ ಸ್ನೇಹಿತ ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮಿ ವೈಶಾಖ್ ಮೃತರು. ಆರ್​ಆರ್​ ನಗರದಲ್ಲಿರುವ ಎಲಿಗೆಂಟ್ ಟೆರೇಸ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿತ್ತು. ವೈಶಾಖ್ ತಂದೆ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ. ಇದಾದ ಬಳಿಕ ನಟಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅತ್ಯಂತ ದುಃಖದಿಂದ ಪೋಸ್ಟ್‌ ಶೇರ್‌ ಮಾಡಿದ್ದಾರೆ.

Dolly Dhananjay: ಮಗನ ಮೊದಲ ಫೋಟೋ ಹಂಚಿಕೊಂಡ ಡಾಲಿ ಧನಂಜಯ್‌

ಮಗನ ಮೊದಲ ಫೋಟೋ ಹಂಚಿಕೊಂಡ ಡಾಲಿ ಧನಂಜಯ್‌

Dolly Dhananjay: 'ಪ್ರತಿಯೊಂದು ಭರವಸೆಯೂ ಪ್ರೀತಿಯಿಂದ ಪ್ರಾರಂಭ' ಎಂದು ಬರೆದು ಮಗನನ್ನು ಎತ್ತಿಕೊಂಡಿರುವ ಫೋಟೊವನ್ನು ಧನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಫೋಟೊದಲ್ಲಿ ಮಗನ ಮುಖ ತೋರಿಸಿಲ್ಲ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಡಾಲಿ ಧನಂಜಯ್ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 'ಮದರ್​ ಪ್ರಾಮಿಸ್​: ಫಾದರ್ ಆಫ್ ಆಲ್​​ ಪ್ರಾಮಿಸಸ್' ಅಂತಹ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು.

Loading...