ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Srinidhi Bengaluru:‌ “ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ”: ಶ್ರೀನಿಧಿ ಬೆಂಗಳೂರು

ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅತಿಥಿಗಳಾದ ಶ್ರೀನಿಧಿ ಬೆಂಗಳೂರು, ಬರಹಗಾರ ಹಾಗೂ ನಿರ್ದೇಶಕ ‘ಬ್ಲಿಂಕ್’, ‘ಜೆರಾಕ್ಸ್’ ಮತ್ತು ‘ವಿಡಿಯೋ’ ಚಿತ್ರಗಳಿಂದ ಚಿರ ಪರಿಚಿತರಾಗಿದ್ದಾರೆ. ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುತ್ತಾ, “ಒಂದು ಚಿತ್ರವು ಚಿತ್ರಕಥೆಯಿಂದ ಆರಂಭ ವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ” ಎಂದು ಹೇಳಿದರು

Katrina Kaif:  ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

Katrina Kaif: ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

Rashmika Mandanna: ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ಭಾಷೆ ಮತ್ತು ಉಚ್ಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮಾತನಾಡಿದ್ದಾರೆ, ಅನಗತ್ಯ ಟೀಕೆಗಳನ್ನು ನಿರ್ಲಕ್ಷಿಸಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ರಶ್ಮಿಕಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವುದರಿಂದ ಅವರ ವೃತ್ತಿಜೀವನದಲ್ಲಿ ಭಾಷೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಅವರು ಹೇಳಿದರು.

Bigg Boss Kannada 13: ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್‌ ಚಿನ್ನಪ್ಪ?

ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್‌ ಚಿನ್ನಪ್ಪ?

Bigg Boss Kannada 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಸ್ಪರ್ಧಿಗಳ ಗಲಾಟೆ ಜೋರಾಗಿದೆ. ಅದರಲ್ಲೂ ಟಾಸ್ಕ್‌ ಅಂತ ಬಂದರೆ ಉಸ್ತುವಾರಿ ಕೂಡ ಬಹಳ ಮುಖ್ಯ ಟಾಸ್ಕ್‌ನಲ್ಲಿ ವೈಷ್ಣವಿ ವಹಿಸಿದ ಉಸ್ತುವಾರಿ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಪ್ಪು ನಿರ್ಧಾರಗಳನ್ನ ತೆಗೆದುಕೊಂಡ ವೈಷ್ಣವಿ (Vaishnavi) ವಿರುದ್ಧ ಪ್ರೇಕ್ಷಕರು ಸೋಶಿಯಲ್‌ ಮೀಡಿಯಾಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಾತಿಗೆ ಕೋರ್ಟ್ ಗ್ರೀನ್‌ ಸಿಗ್ನಲ್

ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್‌!

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆಯಲ್ಲಿ ನಟ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ಮುಗಿಸಲು ಗಡುವು ವಿಧಿಸಿದ್ದು, ಅಗತ್ಯಬಿದ್ದರೆ ಇನ್-ಕ್ಯಾಮೆರಾ ವಿಚಾರಣೆ ನಡೆಸಲು ಸೂಚಿಸಿದೆ.

`ಧುರಂಧರ್', 'ಹನುಮಾನ್ ಅಂಶ್' ಹಿಂದಿಕ್ಕಿ ಆಸ್ಕರ್‌ ಅಂಗಳಕ್ಕೆ ಜಿಗಿದ ಮರಾಠಿಯ 'ಗೋಂಧಲ್' ಸಿನಿಮಾ; ಏನಿದರ ಕಥೆ?

ಆಸ್ಕರ್ ರೇಸ್‌ನಲ್ಲಿ ʻಧುರಂಧರ್ʼ ಮಣಿಸಿ ಮುನ್ನುಗ್ಗಿದ ಮರಾಠಿಯ ʻಗೋಂಧಲ್ʼ!

Gondhal Marathi Movie: ಮರಾಠಿಯ 'ಗೋಂಧಲ್' ಸಿನಿಮಾ ಭಾರತದ ಪರವಾಗಿ 99ನೇ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಸಂತೋಷ್ ದಾವಖರ್ ನಿರ್ದೇಶನದ ಈ ಸಿನಿಮಾವು ರಣವೀರ್ ಸಿಂಗ್‌ರ 'ಧುರಂಧರ್' ಹಾಗೂ ಭಕ್ತಿಪ್ರಧಾನ 'ಹನುಮಾನ್ ಅಂಶ್' ಚಿತ್ರಗಳನ್ನು ಹಿಂದಿಕ್ಕಿದೆ. ಇಳಯರಾಜಾ ಅವರ ಹಿನ್ನೆಲೆ ಸಂಗೀತವಿರುವ 'ಗೋಂಧಲ್' ಚಿತ್ರವು ಮರಾಠಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.

ʻದಾದಾಸಾಹೇಬ್ ಫಾಲ್ಕೆʼ ಪುರಸ್ಕೃತ ಅನಂತ್‌ ನಾಗ್ ನಟನೆಯಿಂದ ದೂರ ಉಳಿದಿರುವುದೇಕೆ? ಇದು ಅಭಿಮಾನಿಗಳಿಗೆ ಬೇಸರದ ವಿಷ್ಯ

ಬಣ್ಣದ ಲೋಕಕ್ಕೆ ನಟ ಅನಂತ್ ನಾಗ್ ಗುಡ್‌ಬೈ! ಈ ನಿರ್ಧಾರಕ್ಕೆ ಕಾರಣವೇನು?

Ananth Nag: ನಟ ಅನಂತ್‌ ನಾಗ್‌ ಅವರು ನಟನೆಯಿಂದ ದೂರ ಉಳಿಯುವ ನಿರ್ಧಾರವು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಿತ್ರಕಥೆಗಳ ಗುಣಮಟ್ಟದ ಕುಸಿತ, ಚಿತ್ರತಂಡಗಳಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಾಚಾರಗಳಿಂದ ಬೇಸತ್ತು ಅನಂತ್‌ ನಾಗ್‌ ಈ ಮಾತು ಹೇಳಿದ್ದಾರೆ.

Citylights Movie Review: ಮೆಜೆಸ್ಟಿಕ್‌ ಒಳಗಿನ ಅಪರಿಚಿತ ಲೋಕದ ಸತ್ಯ ದರ್ಶನ ಮಾಡಿಸುವ ‌ʻದುನಿಯಾʼ ವಿಜಯ್

ʻದುನಿಯಾʼ ವಿಜಯ್‌ ನಿರ್ದೇಶನದ ʻಸಿಟಿ ಲೈಟ್ಸ್‌ʼ ಹೇಗಿದೆ? ರೇಟಿಂಗ್‌ ಏನು?

City Lights Movie Review: ಬೆಂಗಳೂರಿನ ಮೆಜೆಸ್ಟಿಕ್ ಸುತ್ತಲಿನ ವೇಶ್ಯಾವಾಟಿಕೆ, ರೌಡಿಸಂ ಮತ್ತು ರಾಜಕೀಯ ಜಾಲವನ್ನು ಬಯಲು ಮಾಡುವ ಕಥೆಯನ್ನು ಸಿಟಿ ಲೈಟ್ಸ್‌ ಸಿನಿಮಾ ಹೊಂದಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ಹಳ್ಳಿ ಮುಗ್ಧನಾಗಿ ವಿನಯ್ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಶಕ್ತಿ ತುಂಬಿದೆ.

Bigg Boss kannada 13: ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ಭಯ

ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ನೆನೆದು ಮಂಜುಗೆ ಭಯ

Bigg Boss kannada 13: ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ (Mahakavi Manja) ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಸ್ವತಃ ಮಂಜನೇ ಭಯ ಹೊರ ಹಾಕಿದ್ದಾರೆ. ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ.

Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

Amruthadhaare Serial: ಅಮೃತಧಾರೆ ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್‌ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ ಈಗ ಎಂಟ್ರಿ ಆಗಿದೆ.

Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

Bigg Boss Kannada 13:ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ. ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ.ಕೋ ಪೈಲೆಟ್‌ನಾ ಮನವೊಲಿಸಬೇಕಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಆಸಿಯಾ ಮನವೊಲಿಸಲು ನೋಡಿದರು. ಆದರೆ ಕಿರಣ್‌ ಮಾತ್ರ ಪದೇ ಪದೇ ಟ್ರಿಗರ್‌ ಮಾಡುತ್ತಿದ್ದರು. ಇದೀಗ ಆಸಿಯಾ (Asia) ಅವರು ಕಿರಣ್‌ ಶಾಸ್ತ್ರಿ (kiran shastri) ಮೇಲೆ ಗರಂ ಆಗಿದ್ದಾರೆ. ಮುಚ್ಚೋ ಬಾಯಿ ಅಂತ ಕೂಗಾಡಿದ್ದಾರೆ.

Bigg Boss Kannada 13:  ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

ಮಂಜ ನಡವಳಿಕೆಗೆ ಬೇಸತ್ತು ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಮಂಜನ (mahakavi Manja) ಹಾವಳಿ ಕಿತಾಪತಿ ಜೋರಾಗಿದೆ. ಇದರಿಂದಾಗಿ ಸ್ಪರ್ಧಿಗಳು ಪರದಾಡುವಂತಾಗಿದೆ. ಸ್ಪರ್ಧಿಗಳೆಲ್ಲರೂ ಮಲಗಿರುವಾಗ, ಮಂಜು, ಲಿಖಿತ್‌ ಮತ್ತು ಧನುಷ್‌ ಮನಸಿಗೆ ಬಂದಂತೆ ಅಡುಗೆ ಮಾಡಿ ತಿಂದಿದ್ದಾರೆ. ಇದೇ ವಿಚಾರಕ್ಕೆ ಬೇಸರಗೊಂಡ ಅವಿನಾಶ್‌ ರೇಗಾಡಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ! ಶಾರುಖ್, ಸಲ್ಮಾನ್‌ ಟ್ವೀಟ್‌ ವೈರಲ್‌

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ!

PM Modi: ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ , ಸಲ್ಮಾನ್ ಖಾನ್ , ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಸಿದರು . ನಟರು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುವ ಸಂದೇಶಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ಶ್ಲಾಘಿಸಿದರೆ, ಸಲ್ಮಾನ್ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ಪ್ರಧಾನಿಯನ್ನು "ನರೇಂದ್ರ ಭಾಯ್‌ ಮೋದಿ" ಎಂದು ಹೇಳಿದ್ದಾರೆ.

Vishweshwar Bhat: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

Anant Nag: ಅನಂತ್ ನಾಗ್ ಮತ್ತು ಶಂಕರ್ ನಾಗ್—ಈ ಇಬ್ಬರು ಸಹೋದರರ ಒಡನಾಟ ಕನ್ನಡ ಸಾಂಸ್ಕೃತಿಕ ಲೋಕದ ಅತ್ಯಂತ ಸುಂದರ ಅಧ್ಯಾಯ. ಶಂಕರ್ ಅವರಲ್ಲೊಂದು ಕಾಡಿನ ಬೆಂಕಿಯಂತಹ ತೀವ್ರತೆ, ನಿರಂತರ ಚಲನೆ ಇದ್ದರೆ, ಅನಂತ್ ಅವರಲ್ಲಿ ಹರಿಯುವ ನದಿಯಂತಹ ಪ್ರಶಾಂತತೆ, ತಣ್ಣನೆಯ ಗಾಂಭೀರ್ಯವಿತ್ತು. ಶಂಕರ್ ನಿರ್ದೇಶಿಸಿದ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಕಾಣಿಸಿಕೊಂಡ ಪರಿ ಇಂದಿಗೂ ಮರೆಯಲಾಗದು-ಅನಂತ್‌ ನಾಗ್‌ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್‌ ಅವರು ಬರೆದ ಆತ್ಮೀಯ ಬರಹ ಇಲ್ಲಿದೆ.

Varanasi movie: ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Varanasi movie: ಎಸ್.ಎಸ್. ರಾಜಮೌಳಿ ತಮ್ಮ ಬಹುನಿರೀಕ್ಷಿತ ಚಿತ್ರ ವಾರಣಾಸಿ ಸಿನಿಮಾದ ಪ್ರಮೋಷನ್​​ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಭಾರಿ ಮೊತ್ತವನ್ನು ಅದಕ್ಕಾಗಿ ಖರ್ಚು ಸಹ ಮಾಡಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ವಾರಣಾಸಿ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ ಸಿನಿಮಾ ಎನ್ನಲಾಗುತ್ತಿದೆ.

Kannada New Movie: ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

Kannada New Movie: ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ನಂಬಿಕೆ, ಭಯ ಮತ್ತು ವಿಧಿ ಮುಖಾಮುಖಿಯಾಗುವ ಸಂಕೀರ್ಣ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಭಕ್ತಿ, ಭಾವನೆ ಹಾಗೂ ಹೈ-ವೋಲ್ಟೇಜ್ ರೋಮಾಂಚನವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡಲು ಸಜ್ಜಾಗಿದೆ.

Bigg Boss kannada 13: ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ! Video

ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ!

Bigg Boss kannada 13:ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಇದೀಗ ಸ್ಪರ್ಧಿಗಳು ಪರಸ್ಪರ ಸಂತಸದಲ್ಲಿ ಒಂದಷ್ಟು ಹೊತ್ತು ಕಾಲೆ ಕಳೆದಿದ್ದಾರೆ.ಕಾವ್ಯ ಅವರ ಬಗ್ಗೆ ತಾಂಡವ್ ಅವರು ತಮಾಷೆಯ ಮಾತುಗಳನ್ನಾಡಿದ್ದು, ಇದನ್ನು ಕೇಳಿ ಕಾವ್ಯ ಮುಗುಳು ನಕ್ಕಿದ್ದಾರೆ.

ʻಅನಿಮಲ್‌ʼ, ʻಪೆದ್ದಿʼ ಖ್ಯಾತಿಯ ನಟ ಉಪೇಂದ್ರ ಲಿಮಾಯೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ರಿಷಿ ಎದುರು ಖಳನಾಗಿ ಅಬ್ಬರಿಸಲಿರುವ ಮರಾಠಿ ಸೂಪರ್‌ಸ್ಟಾರ್!

Rishi: ʻಅನಿಮಲ್’ ಖ್ಯಾತಿಯ ಉಪೇಂದ್ರ ಲಿಮಾಯೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ

Upendra Limaye: ‘ಅನಿಮಲ್’ ಹಾಗೂ ‘ಪೆದ್ದಿ’ ಖ್ಯಾತಿಯ ಪ್ರತಿಭಾವಂತ ನಟ ಉಪೇಂದ್ರ ಲಿಮಾಯೆ ಅವರು ಕನ್ನಡದ ರಿಷಿ ಅವರ ಹೊಸ ಚಿತ್ರದಲ್ಲಿ ಅವರು ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಈ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಶಿಷ್ಯ ಕಿಶೋರ್ ಭಾರ್ಗವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಸಂತ್ ಹಂಗೆ ನಿರ್ಮಾಣದ ಈ ಚಿತ್ರದ ಶೂಟಿಂಗ್ ನವೆಂಬರ್‌ನಲ್ಲಿ ಆರಂಭವಾಗಲಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ. ರಾಜ್‌ಕುಮಾರ್ ನಟನೆಯ ʻಜಗ ಮೆಚ್ಚಿದ ಮಗʼ ಸಿನಿಮಾ ರೀ-ರಿಲೀಸ್

ಕಲರ್‌ನಲ್ಲಿ ತೆರೆಗೆ ಬರಲಿದೆ ಡಾ. ರಾಜ್‌ಕುಮಾರ್‌ ನಟನೆಯ ‘ಜಗ ಮೆಚ್ಚಿದ ಮಗ’!

ʻಜಗ ಮೆಚ್ಚಿದ ಮಗʼ ಸಿನಿಮಾವು ಕಲರ್‌ ರೂಪದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಮರುಬಿಡುಗಡೆಯಾಗಲಿದೆ. 1972ರ ಕಪ್ಪು-ಬಿಳುಪಿನ ಸಾಹಸಮಯ ಪೌರಾಣಿಕ ಚಿತ್ರಕ್ಕೆ ಚೆನ್ನೈನ ಪ್ರಸಾದ್ ಲ್ಯಾಬ್ಸ್‌ನಲ್ಲಿ ಒಂದೂವರೆ ವರ್ಷ ಶ್ರಮಿಸಿ ಸಿನಿಮಾಸ್ಕೋಪ್ ಹಾಗೂ 5.1 ಧ್ವನಿ ಅಳವಡಿಸಲಾಗಿದೆ.

Bigg Boss Kannada 13: ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿಯೊಂದಕ್ಕೂ ಜಗಳ ಶುರು ಆಗಿದೆ. ಮೊದಲ ವಾರದಲ್ಲೇ ಮನೆಯ ಕೆಲಸ ವಿಚಾರವಾಗಿ ಜಗಳ ಆಗಿತ್ತು. ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಗಳೂ ಆಯ್ತು. ಇದೀಗ ಮತ್ತೆ ಮನೆ ಕೆಲಸ ವಿಚಾರದಲ್ಲಿ ತಾರತಮ್ಯ ಶುರುವಾದಂತಿದೆ. ಲಿಖಿತ್‌ ಹಾಗೂ ಸಂಗೀತಾ (Sangeetha) ನಡುವೆ ಮಾತಿನ ಚಕಮಕಿ ನಡೆದಿದೆ.

ʻನಾಕು ತಂತಿʼ ಸಿನಿಮಾಕ್ಕಾಗಿ ಒಂದಾದ 'ಬಿಗ್ ಬಾಸ್' ಸಂಗೀತಾ ಭಟ್, ಖುಷಿ ರವಿ, ರೋಶಿನಿ ಪ್ರಕಾಶ್, ಸಿಂಧು ಶ್ರೀನಿವಾಸಮೂರ್ತಿ

ʻನಾಕು ತಂತಿ’ ಚಿತ್ರಕ್ಕಾಗಿ ಒಂದಾದ ಕನ್ನಡದ ನಾಲ್ವರು ಪ್ರತಿಭಾವಂತ ನಟಿಯರು

Naaku Tanti Movie: ʻನಾಕು ತಂತಿʼ ಸಿನಿಮಾ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಾದ ಸಂಗೀತಾ ಭಟ್, ಖುಷಿ ರವಿ, ರೋಷಿಣಿ ಪ್ರಕಾಶ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷ.

Bigg Boss Kannada 13: ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ;  ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!

ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದ ತಾಂಡವ್!

Bigg Boss Kannada 13: ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ವೈಷ್ಣವಿ ಕೌಂಡಿನ್ಯ, ಕಾವ್ಯ ಮೇಲೆ ವಾಗ್ದಾಳಿ ನಡೆಸಿದಲ್ಲದೇ, ತಾಂಡವ್ ರಾಮ್ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ‘ಅಗ್ನಿಪರೀಕ್ಷೆ’ಯಿಂದ ಆಯ್ಕೆ ‘ಬಿಗ್ ಬಾಸ್’ ಮನೆಯೊಳಗೆ ಬಂದ ನಾಲ್ವರ ಪೈಕಿ ಕಿರಣ್ ಶಾಸ್ತ್ರಿ ಬರಬರುತ್ತಲೇ ಪ್ರಥಮ ಪ್ರಸಾದ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ದರು. ಇದೀಗ ತಾಂಡವ್‌ ಸರದಿ.

Amruthadhaare Serial: ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

Amruthadhaare Serial: ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಇದ್ದಳು. ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆ ಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ ಫುಟೇಜ್​ ಚೆಕ್​ ಮಾಡಿಸಿದ್ದಾಳೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ.

ʻಜನ ನಾಯಗನ್‌ʼ ಸಿನಿಮಾದಲ್ಲಿ ನಟಿಸಿ `ಕಾಮನ್‌ಮ್ಯಾನ್‌' ಮುಖವಾಡ ತೊಟ್ಟು ʻಬಿಗ್‌ ಬಾಸ್‌ʼ ಮನೆಗೆ ಧನುಷ್‌ ಮಂಜುನಾಥ್‌ ಬಂದಿದ್ದು ಸರಿಯೇ? ಗರಂ ಆದ ವೀಕ್ಷಕರು!

Bigg Boss 13: ‘ಕಾಮನ್‌ಮ್ಯಾನ್’ ಕೋಟಾ ದುರುಪಯೋಗ! ಧನುಷ್ ಮಾಡಿದ್ದು ಸರಿಯೇ?

Bigg Boss Kannada 13: ‘ಅಗ್ನಿಪರೀಕ್ಷೆ’ ಆಡಿಷನ್ ಮೂಲಕ ಬಿಗ್‌ ಬಾಸ್‌ ಪ್ರವೇಶ ಪಡೆದ 14ನೇ ಸ್ಪರ್ಧಿ ಧನುಷ್ ಮಂಜುನಾಥ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಗಿನ್ನೆಸ್ ದಾಖಲೆ ಸೈಕ್ಲಿಸ್ಟ್ ಧನುಷ್, ‘ಜನ ನಾಯಗನ್’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದರೂ ಕಾಮನ್‌ ಮ್ಯಾನ್ ಕೋಟಾದಡಿ‌ ದೊಡ್ಮನೆ ಪ್ರವೇಶಿಸಿರುವುದು ವಿವಾದ ಸೃಷ್ಟಿಸಿದೆ.

Loading...