ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

RSS ಬರಹ ಇರುವ ಟೀ-ಶರ್ಟ್‌ ಧರಿಸಿ ಅಪಮಾನ- ಕುನಾಲ್‌ ಕಾಮ್ರಾ ಮತ್ತೆ ವಿವಾದ

ಆರ್‌ಎಸ್‌ಎಸ್ ಅನ್ನು ಅಣಕಿಸಿದ್ರಾ ಕುನಾಲ್ ?

ಹಾಸ್ಯ ನಟ ಕುನಾಲ್ ಕಮ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಈಗ ಬಿಜೆಪಿ, ಶಿವಸೇನೆಯಿಂದ ಟೀಕೆಗೆ ಗುರಿಯಾಗಿದೆ. ಈ ಚಿತ್ರದಲ್ಲಿ ಕುನಾಲ್ ಕಮ್ರಾ ಅವರು ಆರ್‌ಎಸ್‌ಎಸ್ ಅನ್ನು ಅಣಕಿಸುವ ಟಿ-ಶರ್ಟ್‌ ಧರಿಸಿದ್ದು, ಇದು ಹೊಸ ವಿವಾದವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

BBK 12: ಟಾಸ್ಕ್‌ ಅಂತ ಗೊತ್ತಿದ್ದರೂ ಅತಿಥಿಗಳ ಜೊತೆ ಗಿಲ್ಲಿ ಹಿಂಗೆ ವರ್ತಿಸುತ್ತಿರುವುದೇಕೆ? ಉಳಿದ ಸ್ಪರ್ಧಿಗಳಿಗೆ ಶುರುವಾಯ್ತು ಪುಕಪುಕ!

Bigg Boss 12: ಯಾರೇ ಇರಲಿ ಯಾರೇ ಬರಲಿ ಗಿಲ್ಲಿ ಕಂಟ್ರೋಲ್‌ಗೆ ಸಿಗುತ್ತಿಲ್ಲ!

BBK 12 Gilli Nata: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್‌ನಲ್ಲಿ ಹೋಟೆಲ್ ಸಿಬ್ಬಂದಿಯಾಗಿ ಪಾತ್ರ ನಿರ್ವಹಿಸುತ್ತಿರುವ ಗಿಲ್ಲಿ ನಟ, ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಆಟವಾಡುತ್ತಿದ್ದಾರೆ. ಅತಿಥಿಗಳಾಗಿ ಬಂದಿರುವ ಹಿಂದಿನ ಸೀಸನ್‌ನ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು ಅವರ ಕಾಲೆ ಎಳೆಯುತ್ತಿದ್ದಾರೆ. ಕ್ಯಾಪ್ಟನ್‌ ಅಭಿಷೇಕ್‌ಗೂ ಕೂಡ ಗಿಲ್ಲಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ʻಅದೃಷ್ಟ ಕೈಕೊಡ್ತು, ಇದು ಯಾವ ಶತ್ರುವಿಗೂ ಬೇಡʼ; ಪತಿ ಅರುಣ್‌ ಸೋಲಿನ ಬಗ್ಗೆ ನಟಿ ರಜಿನಿ ಹೇಳಿದ ಭಾವುಕ ಮಾತುಗಳಿವು

ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಪೋಸ್ಟ್‌

Actress Rajini Husband Arun Venkatesh: ಜಿಮ್ ಕೋಚ್ ಅರುಣ್ ವೆಂಕಟೇಶ್ ಅವರನ್ನು ವಿವಾಹವಾದ 'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಪತಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅನುಭವಿಸಿದ ಸೋಲಿನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಒಂದು ವರ್ಷದ ಸಾವು-ಬದುಕಿನ ಹೋರಾಟ, ಉಪ್ಪು-ಖಾರ ಇಲ್ಲದ ಊಟ, ನಿದ್ದೆ ಇಲ್ಲದ ರಾತ್ರಿಗಳ ನಂತರ ಏನೂ ಇಲ್ಲದೇ ಬರೀಗೈಯಲ್ಲಿ ನಿಲ್ಲುವುದು ಯಾವ ಶತ್ರುವಿಗೂ ಬೇಡ" ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

BBK 12: 'ಮನುಷ್ಯನ ಜಾತಿಗೆ ಸೇರಿದವರು ಒಂದು ಸಲ ಹೇಳಿದ್ರೆ ಅರ್ಥ ಮಾಡ್ಕೋಬೇಕು'; ಗಿಲ್ಲಿ ಮಾತು ರಜತ್‌ಗೆ ಇರಿಟೇಟ್‌ ಮಾಡ್ತಾ?

BBK 12: ʻಇರಿಟೇಟ್‌ ಮಾಡಬೇಡ ಗಿಲ್ಲಿʼ; ರಜತ್ ಕೆಂಡಾಮಂಡಲ!

BBK 12 Gilli Nata: ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದಿರುವ ರಜತ್ ಮತ್ತು ಉಗ್ರಂ ಮಂಜು ಅವರಿಂದ ಮೊದಲ ದಿನವೇ ವಾರ್ನಿಂಗ್ ಪಡೆದಿದ್ದ ಗಿಲ್ಲಿ ನಟ, ತಮ್ಮ 'ಕಾಲೆಳೆಯುವ' ಸ್ವಭಾವವನ್ನು ಮುಂದುವರಿಸಿದ್ದಾರೆ. ಹೊಸ ಪ್ರೋಮೋದಲ್ಲಿ, ಗಾರ್ಡನ್ ಏರಿಯಾದಲ್ಲಿ ಮನರಂಜನೆ ನೀಡುವಾಗ ಗಿಲ್ಲಿ, ಅತಿಥಿಗಳ ಬಗ್ಗೆ "ವ್ಯಾ ಥೂ ಅನ್ನೋ ಥರ ಆಗೋಯ್ತು, ತಿಂದು ದೌಲತ್ತು" ಎಂದಿದ್ದಾರೆ. ಈ ಮಾತಿಗೀಗ ರಜತ್ ಕೋಪಗೊಂಡಿದ್ದಾರೆ.

BBK 12: ನಾಮಿನೇಷನ್‌ ಸಂಕಷ್ಟಕ್ಕೆ ಸಿಲುಕಿದ ಘಟಾನುಘಟಿ ಸ್ಪರ್ಧಿಗಳು; ಈ ವಾರ ಯಾರೇ ಎಲಿಮಿನೇಟ್‌ ಆದರೂ ಅಚ್ಚರಿಯೇ!

Bigg Boss 12: ಈ ವಾರ ಏಳು ಮಂದಿ ನಾಮಿನೇಟ್;‌ ಯಾರಿಗೆ ಸಿಗಲಿದೆ ಗೇಟ್‌ಪಾಸ್?

Bigg Boss Kannada 12 Nomination: 'ಬಿಗ್ ಬಾಸ್' ಮನೆಯ 9ನೇ ವಾರದ ನಾಮಿನೇಷನ್‌ನಲ್ಲಿ ಒಟ್ಟು ಏಳು ಸ್ಪರ್ಧಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ಮಾಳು ನಿಪನಾಳ, ಜಾಹ್ನವಿ, ಧ್ರುವಂತ್ ಹಾಗೂ ಕ್ಯಾಪ್ಟನ್ ಅಭಿಷೇಕ್‌ರಿಂದ ನೇರವಾಗಿ ನಾಮಿನೇಟ್ ಆದ ರಘು ಈ ಪಟ್ಟಿಯಲ್ಲಿದ್ದಾರೆ. ಈ ವಾರ ಯಾರೇ ಎಲಿಮಿನೇಟ್ ಆದರೂ, ಬಿಗ್ ಬಾಸ್ ಆಟದ ಗತಿ ಬದಲಾಗುವುದು ಖಚಿತ.

Mass Jathara OTT Release: ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ, ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ

OTT Movie: ಟಾಲಿವುಡ್‌ ನಟ ಮಾಸ್‌ ಮಾಹಾರಾಜ ರವಿ ತೇಜ ಅಭಿನಯದ ʻಮಾಸ್ ಜಾತರ ಚಿತ್ರʼ ಒಟಿಟಿಗೆ ಎಂಟ್ರಿ ಕೊಡಲಿದೆ. ಸಿನಿಮಾ ರಿಲೀಸ್‌ ಆದ ಮೇಲೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಚಿತ್ರ ಉತ್ತಮ ಪ್ರದರ್ಶನ ನೀಡದಿರಲು ಪ್ರಮುಖ ಕಾರಣವೆಂದರೆ ಬಿಡುಗಡೆಯಾದ ನಂತರ ಅಂತರ್ಜಾಲದಲ್ಲಿ ಸಿಕ್ಕ ನಕಾರಾತ್ಮಕ ವಿಮರ್ಶೆಗಳು. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Amruthadhaare Serial: ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ  ಕಾಪಾಡ್ಕೊಳ್ತಾಳಾ ಮಲ್ಲಿ?

ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ ಕಾಪಾಡ್ಕೊಳ್ತಾಳಾ ಮಲ್ಲಿ?

Kannada Serial: ಅಮೃತಧಾರೆ ಧಾರಾವಾಹಿಯು ಇತ್ತೀಚೆಗ ರೋಚಕ ತಿರುವುಗಳಿರುವ ಸಂಚಿಕೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ಮುಂದಾಗಿದೆ. ಸೀರಿಯಲ್‌ನ ಇತ್ತೀಚಿನ ಪ್ರೋಮೋ ರೋಚಕ ತಿರುವಿನಿಂದ ಕೂಡಿದೆ. ಮಲ್ಲಿ ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಆದರೆ ಮಲ್ಲಿಯನ್ನೆನೋ ಶಕುನಿ ಮಾಮ ತಪ್ಪಿಸಿದ್ದರೂ ಮಕ್ಕಳು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ.

50 ವರ್ಷಗಳ ನಂತರ ʻಚೋಮನ ದುಡಿʼ ಚಿತ್ರವನ್ನು ನೆನಪಿಸಲು ಬಂದ ʻಬಿಚ್ಚುಗತ್ತಿಯ ಬಂಟನ ಬಲ್ಲರೇನʼ

ʻಚೋಮನ ದುಡಿ' ಸಿನಿಮಾವನ್ನು ನೆನಪಿಸಿದ ʻಬಿಚ್ಚುಗತ್ತಿಯ ಬಂಟನ ಬಲ್ಲರೇನʼ

Bicchugatthiya Bantana Ballirena Trailer: ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಕಾದಂಬರಿ ಆಧಾರಿತ 'ಚೋಮನ ದುಡಿ' ಸಿನಿಮಾಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ, ಅದರ ಮುಂದುವರಿದ ಕಥಾಹಂದರ ಹೊಂದಿದ 'ಬಿಚ್ಚುಗತ್ತಿಯ ಬಂಟನ ಬಲ್ಲರೇನ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಂದು 'ಚೋಮನ ದುಡಿ' ಚಿತ್ರದಲ್ಲಿದ್ದ ಹಿರಿಯ ನಟ ಸುಂದರ್ ರಾಜ್ ಈ ಹೊಸ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

Bigg Boss Kannada 12:  ಅಶ್ವಿನಿ ಸೈಲೆಂಟ್‌ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್‌ ಹೇಳಿಕೆಗೆ ಫ್ಯಾನ್ಸ್‌ ಕೆಂಡ

ಅಶ್ವಿನಿ ಸೈಲೆಂಟ್‌ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್‌ ಹೇಳಿದ್ದೇನು?

Dhanush: ಮನೆಯಲ್ಲಿ ಸ್ಪರ್ಧಿಗಳು ಗಿಲ್ಲಿ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ವೀಕೆಂಡ್‌ ಮುಗಿದ ಬಳಿಕ ಗಿಲ್ಲಿ ವಿರುದ್ಧ ಅನೇಕ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಗಿಲ್ಲಿ ಕುಚಿಕು ಕಾವ್ಯ ಬಳಿ ಧನುಷ್‌ ಅವರು ದೂರು ಹೇಳಿದ್ದಾರೆ. ಅಶ್ವಿನಿ ಇದ್ದರೆ ಗಿಲ್ಲಿಗೆ ಮೈಲೇಜ್‌ ಎಂದಿದ್ದಾರೆ. ಸದ್ಯ ಮನೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಈಗ ಬಿಬಿ ರೆಸಾರ್ಟ್‌ ಆಗಿದೆ. ಆ ಮನೆಯೊಳಗೆ ಉಗ್ರಂ ಮಂಜು, ರಜತ್‌, ಮೋಕ್ಷಿತಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮುಂತಾದವರು ಆಗಮಿಸಿದ್ದಾರೆ.

BBK 12: ‌'ಬಿಗ್‌ ಬಾಸ್‌' ಮನೆಯಲ್ಲಿ ರಘುಗೆ ಸಿಕ್ತು ಡಬಲ್‌ ಶಾಕ್‌; ಇದಕ್ಕೆ ಕಾರಣ ಕ್ಯಾಪ್ಟನ್‌ ಅಭಿಷೇಕ್!

Bigg Boss 12: ಅಯ್ಯೋ, ರಘುಗೆ ಶಾಕ್‌ ನೀಡಿದ ಅಭಿಷೇಕ್!‌

BBK 12 Mutant Raghu: 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಅಭಿಷೇಕ್ ತೆಗೆದುಕೊಂಡ ನಿರ್ಧಾರದಿಂದ ಮ್ಯೂಟಂಟ್ ರಘು ಅವರಿಗೆ ಡಬಲ್ ಶಾಕ್ ಎದುರಾಗಿದೆ. ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿದ ಅಭಿಷೇಕ್, ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಅಷ್ಟೇ ಅಲ್ಲದೆ, ರಘು ಅವರು ಬೇರೆಯವರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಕಳೆದುಕೊಂಡರು. ಅಷ್ಟಕ್ಕೂ ಇದಕ್ಕೆ ಕಾರಣವೇನು?

'ಗುಳಿಗಾ ಗುಳಿಗಾ' ಹಾಡಿನಿಂದ ದೈವಕ್ಕೆ ಸಂತೋಷ; 'ಕೊರಗಜ್ಜ' ಚಿತ್ರತಂಡ ಹೇಳಿದ್ದೇನು?

ʻಕೊರಗಜ್ಜʼ ಚಿತ್ರದ ಗುಳಿಗಾ ಹಾಡಿನಿಂದ ದೈವಕ್ಕೆ ಅಪಚಾರ ಆಗಿಲ್ಲ!

Koragajja Movie Song: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಚಿತ್ರದ 'ಗುಳಿಗಾ ಗುಳಿಗಾ' ಹಾಡಿನಿಂದ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂಬ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ನಿರ್ದೇಶಕರು ಕೇರಳದ ಜ್ಯೋತಿಷ್ಯ ವಿಧ್ವಾನ್ ವರುಣ್ ಭಟ್ ಅವರಲ್ಲಿ ಪ್ರಶ್ನೆ ಇಟ್ಟು ಇದಕ್ಕೆ ಸ್ಪಷ್ಟನೆ ಪಡೆದುಕೊಂಡಿದೆ.

BBK 12: ʻಎಷ್ಟರಲ್ಲಿ ಇರಬೇಕೋ, ಅಷ್ಟ್ರಲ್ಲಿರು ಮಗಾʼ ಅಂತ ಗಿಲ್ಲಿಗೆ ಮಾತಿನಲ್ಲೇ ಡಿಚ್ಚಿ ಕೊಟ್ಟ ರಜತ್‌; ಅಂಥ ಡೈಲಾಗ್‌ ಬೇಕಿತ್ತಾ?

BBK 12: ʻಪರ್ಸನಲ್‌ಗೆ ಬಂದ್ರೆʼ; ಗಿಲ್ಲಿಗೆ ʻಉಗ್ರಂʼ ಮಂಜು ಖಡಕ್ ಎಚ್ಚರಿಕೆ!

BBK 12 Gilli Nata: ಬಿಗ್ ಬಾಸ್ ಕನ್ನಡ 12ಕ್ಕೆ ಮಾಜಿ ಸ್ಪರ್ಧಿಗಳಾದ ರಜತ್, ಮಂಜು ಮುಂತಾದವರು ಎಂಟ್ರಿ ನೀಡಿದ್ದಾರೆ. ಆದರೆ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಪ್ರೋಮೋ ನೋಡಿದ್ರೆ ಏನೋ ವಿವಾದ ಶುರುವಾಂತಿದೆ. ಗಿಲ್ಲಿ ನಟ ಅವರ ವ್ಯಂಗ್ಯದ ಮಾತುಗಳಿಂದ ಪರಿಸ್ಥಿತಿ ಬಿಗಡಾಯಿಸಿದಂತೆ ಕಾಣುತ್ತಿದೆ!

Karavali: ಮಲಯಾಳಂ - ತಮಿಳಿನಲ್ಲಿ ಮಿಂಚಿದ ಮೇಲೆ ಕನ್ನಡಕ್ಕೆ ಮರಳಿದ ಸುಶ್ಮಿತಾ ಭಟ್; ಇದಕ್ಕೆ ರಾಜ್‌ ಬಿ ಶೆಟ್ಟಿಯೇ ಕಾರಣ!

ಸೋಶಿಯಲ್‌ ಮೀಡಿಯಾದಲ್ಲಿ ಮಿಂಚಿದ್ದ ಸುಶ್ಮಿತಾ ಭಟ್‌ಗೆ ಬಿಗ್‌ ಚಾನ್ಸ್‌

Sushmita Bhat In Karavali: ಪರಭಾಷೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟಿರುವ ನಟಿ ಸುಶ್ಮಿತಾ ಭಟ್‌, ಇದೀಗ ರಾಜ್ ಬಿ ಶೆಟ್ಟಿ ನಟಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ 'ಕರಾವಳಿ' ಸಿನಿಮಾವನ್ನು ಸೇರಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸುಶ್ಮಿತಾ ಖುಷಿಯಾಗಿದ್ದಾರೆ.

BBK 12: ರಿಷಾ ಗೌಡ ಮಾಡಿದ ಆ ಒಂದು ಕೆಲಸ ಗಿಲ್ಲಿ ಹಾರ್ಟ್‌ನ ಬ್ರೇಕ್‌ ಮಾಡ್ತಾ? ಏನಿದು ಹೊಸ ವಿಷ್ಯ?

ರಿಷಾ ಮೇಲೆ ಗಿಲ್ಲಿಗೆ ಇತ್ತು ಬೇಸರ; ಆ ಒಂದು ಘಟನೆ ಕಾರಣ!

BBK 12 Risha Gowda Interview: ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಿಷಾ ಗೌಡ ಅವರು ಎಲಿಮಿನೇಟ್ ಆಗಿದ್ಧಾರೆ. ಸದ್ಯ ವಿಶ್ವವಾಣಿ ಟಿವಿಗೆ ವಿಶೇಷ ಸಂದರ್ಶನ ನೀಡಿರುವ ಅವರು, ಗಿಲ್ಲಿ ನಟನೊಂದಿಗಿನ ತಮ್ಮ ಒಡನಾಟದ ಕುರಿತು ಮಾತನಾಡಿದ್ದಾರೆ. "ನನ್ನ ಆ ಒಂದು ನಿರ್ಧಾರದಿಂದ ಗಿಲ್ಲಿ ತಮ್ಮನ್ನು ನಂಬಲಿಲ್ಲ" ಎಂದು ರಿಷಾ ಅಭಿಪ್ರಾಯಪಟ್ಟಿದ್ದಾರೆ.

International Emmy Awards 2025: ದಿಲ್ಜಿತ್ ದೊಸಾಂಜ್‌ಗೆ ನಿರಾಸೆ, ʻಅತ್ಯುತ್ತಮ ನಟʼ ಪ್ರಶಸ್ತಿ ಪಡೆಯುವಲ್ಲಿ ವಿಫಲ!

ʻಅತ್ಯುತ್ತಮ ನಟʼ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ದಿಲ್ಜಿತ್‌ಗೆ ನಿರಾಸೆ!

International Emmy Awards 2025: ಎಮ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ್ಯೂಯಾರ್ಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಆದರೆ ಈ ಬಾರಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಿರಾಸೆ ಎದುರಾಗಿದೆ. ಬಾಲಿವುಡ್‌ನ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವು ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಟಿವಿ ಸಿನಿಮಾ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರೂ, ಯಾವುದೇ ಪ್ರಶಸ್ತಿ ಲಭಿಸಲಿಲ್ಲ. ನಟ ದಿಲ್ಜಿತ್ ದೊಸಾಂಜ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕೈತಪ್ಪಿದೆ.

Spirit Movie: ಪ್ರಭಾಸ್ ‘ಸ್ಪಿರಿಟ್‌’ ಸಿನಿಮಾದಲ್ಲಿ ರಣಬೀರ್ ಕಪೂರ್? ಪಾತ್ರ ಏನು?

ಪ್ರಭಾಸ್ ‘ಸ್ಪಿರಿಟ್‌’ ಸಿನಿಮಾದಲ್ಲಿ ರಣಬೀರ್ ಕಪೂರ್? ಪಾತ್ರ ಏನು?

Ranbir Kapoor: ಈಗ, ಸಂದೀಪ್ ವಂಗಾ ಅವರ ಹಿಂದಿನ ನಿರ್ದೇಶನದ ' ಅನಿಮಲ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ' ಸ್ಪಿರಿಟ್' ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಯೊಂದು ಹೊರಬಿದ್ದಿದೆ. ಈಗ ಈ ಚಿತ್ರದ ಬಗ್ಗೆ ಸಿನಿ ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

Bigg Boss Kannada 12: ಸೈಲೆಂಟ್ ಆಗಿರೋ ಅಶ್ವಿನಿ ಗೌಡರನ್ನ ಮತ್ತೆ ಕೆಣುಕಿದ ಗಿಲ್ಲಿ! ಏನಿದು ಅಶ್ವಿನಿ 2.0?

ಸೈಲೆಂಟ್ ಆಗಿರೋ ಅಶ್ವಿನಿ ಗೌಡರನ್ನ ಮತ್ತೆ ಕೆಣುಕಿದ ಗಿಲ್ಲಿ!

Gilli Nata: ನಾಮಿನೇಶನ್‌ ಮೊದಲು ಜಾಹ್ನವಿ ಹಾಗೂ ಅಶ್ವಿನಿ, ಸ್ಪಂದನಾ ಸೊಪ್ಪು ಬಿಡಿಸಿಕೊಂಡು ಕೂತಿದ್ದರು. ಇದನ್ನು ಗಮನಿಸಿದ ಗಿಲ್ಲಿ, 2.0 ಅಂದರೆ ಇದೇನಾ? ಆಟ ಏನು ಕಾಣಿಸ್ತಾ ಇಲ್ಲ ಅನ್ನೋ ಅರ್ಥದಲ್ಲಿ ಜಾಹ್ನವಿ ಹಾಗೂ ಅಶ್ವಿನಿಗೆ ಕಾಲೆಳೆದರು. ಗಿಲ್ಲಿ ಮಾತುಗಳಿಗೆ ಸಖತ್‌ ಟ್ರಿಗರ್‌ ಆಗ ಅಶ್ವಿನಿ ಅವರು, ʻನಿನ್ನನ್ನು ಮೆಚ್ಚಿಸಲು ನಾನು ಇಲ್ಲಿ ಬಂದಿಲ್ಲ. ನನ್ನ ಗೇಮ್‌, ನನ್ನ ಸ್ಟ್ರಾಟಜಿ ಬಗ್ಗೆ ಗೊತ್ತಿದೆ. ನಾನು ನಿನ್ನ ವಿಚಾರಗಳನ್ನು ಮಾತಾಡಿದಾಗ ಪ್ರತಿ ಸಂದರ್ಭದಲ್ಲೂ ಸಮರ್ಥನೆ ಕೊಡಬೇಕು ಅಂತೇನೂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.

Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

ಜಾಹ್ನವಿ ಕುತಂತ್ರ ಫಲಿಸಿತಾ? ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

Gilli Nata: ರೂಮ್‌ನಲ್ಲಿ ಕಾವ್ಯ, ಸ್ಪಂದನಾ, ಗಿಲ್ಲಿ ಎಲ್ಲರೂ ಕುಳಿತುಕೊಂಡು ಆಂಕರಿಂಗ್‌ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಆಗ ಗಿಲ್ಲಿ ಆಂಕರಿಂಗ್‌ ಆಗುವ ಆಸೆ ಬಗ್ಗೆ ವ್ಯಕ್ತಪಡಿಸುತ್ತಾರೆ. ಗಿಲ್ಲಿ ಹಾಗೂ ಕಾವ್ಯ ತಮಾಷೆಯಾಗಿಯೇ ಚರ್ಚೆ ಶುರು ಮಾಡುತ್ತಾರೆ. ಆಗ ಗಿಲ್ಲಿ ತಾವು ಸವಿ ರುಚಿ ಕಾರ್ಯಕ್ರಮಕ್ಕೆ ಆಂಕರಿಂಗ್‌ ಆಗಬೇಕು ಎನ್ನುತ್ತಾರೆ. ಅದಕ್ಕೆ ಕಾವ್ಯ ಅವರು ಸವಿರುಚಿಗೆಲ್ಲ ಬೇಡ ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಜಾಹ್ನವಿ, ಒಂದು ಶೋ ಬಗ್ಗೆ ಕೆಟ್ಟದ್ದಾಗಿ ಹೇಳ್ತಿದ್ದಾರೆ ಎಂದು ಬಿಂಬಿಸಲು ನೋಡಿದ್ದಾರೆ.

Bigg Boss Kannada 12: ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ! ಧ್ರುವಂತ್‌ ಹೊಸ ಆರೋಪ

ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ!

Dhruvanth: ನಿನ್ನೆಯ (ನ.25) ಎಪಿಸೋಡ್‌ನಲ್ಲಿ ಧ್ರುವಂತ್‌ ಅವರು ಜಾಹ್ನವಿ ಹಾಗೂ ಅಶ್ವಿನಿ ವಿರುದ್ಧ ಖಡಕ್‌ ಆಗಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ಗಿಲ್ಲಿ ಬಳಿ ಧ್ರುವಂತ್‌ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ದುಡ್ಡಿಗಾಗಿ ಜಾಹ್ನವಿ ಈ ರೀತಿ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಧ್ರುವಂತ್ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ನಾಮಿನೇಷನ್‌ ವೇಳೆಯೂ ಜಾಹ್ನವಿ ಹಾಗೂ ಅಶ್ವಿನಿ ಅವರನ್ನೇ ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ ಧ್ರುವಂತ್‌.

Bigg Boss Kannada 12:  ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

ಬಿಗ್‌ ಬಾಸ್‌ ಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳದ್ದೇ ದರ್ಬಾರ್‌!

Bigg Boss Kannada : ಬಿಗ್‌ ಬಾಸ್‌ ಹೌಸ್‌ ಈಗ ಬಿಗ್‌ ಬಾಸ್‌ ಪ್ಯಾಲೆಸ್‌ ಆಗಿದೆ. ಮೊದಲಿಗೆ ಹಿಂದಿನ ಸೀಸನ್‌ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ರಜತ್‌ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್‌ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್‌ ಬಾಸ್‌ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

Bigg Boss Kannada 12: `ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು'; ತಿರುಗಿಬಿದ್ದ ವಂಶದ ಕುಡಿಗೆ ಗಿಲ್ಲಿಯ ಖಡಕ್‌ ಉತ್ತರ!

ತಿರುಗಿಬಿದ್ದ ʻವಂಶದ ಕುಡಿʼಗೆ ಗಿಲ್ಲಿಯ ಖಡಕ್‌ ಉತ್ತರ!

Rakshitha shetty: ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಈಗ ಜಾಹ್ನವಿ ಮಾತನ್ನು ನಂಬಿದ ರಕ್ಷಿತಾ ಗಿಲ್ಲಿ ಮಾತನ್ನು ನಂಬಲಿಲ್ಲ.ನೋಡದೇ , ಕೇಳದೇ ಗಿಲ್ಲಿ ಅವರನ್ನ ನಾಮಿನೇಟ್‌ ಮಾಡಿದ್ದಾರೆ. ರಕ್ಷಿತಾ ನಾಮಿನೇಟ್‌ ಆದ ಬಳಿಕ ಗಿಲ್ಲಿ ಕೂಡ ಸಖತ್‌ ಆಗಿಯೇ ಕೌಂಟರ್‌ ಕೊಟ್ಟರು. ಅಷ್ಟು ಬುದ್ಧಿವಂತೆ ಆಗಿದ್ರೆ, ಪ್ರತ್ಯಕ್ಷ ಕಂಡ್ರು ಪ್ರಮಾಣಿಸಿ ನೋಡಬೇಕು. ಈ ವಿಚಾರದಲ್ಲಿ ಸುದೀಪ್‌ ಅವರು ಒಂದು ಹಾಡು ಹೇಳಿದ್ದರು. ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದುʼ ಎಂದು ಉತ್ತರ ಕೊಟ್ಟಿದ್ದಾರೆ ಗಿಲ್ಲಿ.

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

Directed by Puri Jagannath: ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್‌ ಬ್ಯಾನರ್‌ ಸಹಯೋಗದಲ್ಲಿ ಚಾರ್ಮಿ ಕೌರ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ.

Dharmendra Punjabi Films OTT: ಬಾಲಿವುಡ್‌ ಹೀಮ್ಯಾನ್‌ನ ಬೆಸ್ಟ್  ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

ನಟ ಧರ್ಮೇಂದ್ರ ಬೆಸ್ಟ್ ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

Bollywood Actor: ಧರ್ಮೇಂದ್ರ ಆರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದರು. ಈ ನಟ 1960 ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರಾದರು. ನಟ ಸೋಮವಾರ, ನವೆಂಬರ್ 24, 2025 ರಂದು ನಿಧನರಾದರು. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅವರು ಲೆಕ್ಕವಿಲ್ಲದಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಅತ್ಯುತ್ತಮ ಪಂಜಾಬಿ ಚಲನಚಿತ್ರಗಳನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ  ಶುಭ ಹಾರೈಸಿದ ಸುಮಲತಾ ಅಂಬರೀಷ್

ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

Sumalatha Ambareesh: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡಿದ್ದಾರೆ. ಇದೀಗ ದರ್ಶನ್​ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರ್ತಿದೆ. ಅಂಬರೀಷ್ ಅವರ ಪುಣ್ಯಸ್ಮರಣೆ ದಿನ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು.

Loading...