ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Padayappa Movie: ಸೂಪರ್ ಡೂಪರ್ ಹಿಟ್ ಆಗಿದ್ದ `ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್‌ ಮಾಡಿದ್ದೇಕೆ? ರಜನಿಕಾಂತ್‌ ಹೇಳಿದ್ದೇನು?

`ಪಡಯಪ್ಪ' ಸಿನಿಮಾವನ್ನ ಐಶ್ವರ್ಯಾ ರೈ ರಿಜೆಕ್ಟ್‌ ಮಾಡಿದ್ದೇಕೆ?

Rajinikanth: ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ ತಲೈವ.

Sandhya Arakere: 'ಸು ಫ್ರಮ್ ಸೋ' ಸಿನಿಮಾ ನಟಿ ಸಂಧ್ಯಾ ಅರಕೆರೆಗೆ ಸೀಮಂತ ಸಂಭ್ರಮ; ಇಲ್ಲಿವೆ ನೋಡಿ ಚೆಂದದ ಫೋಟೋಗಳು

Photos: 'ಸು ಫ್ರಮ್ ಸೋ' ಖ್ಯಾತಿಯ ನಟಿ ಸಂಧ್ಯಾ ಅರಕೆರೆಗೆ ಸೀಮಂತ ಸಂಭ್ರಮ

2025ರಲ್ಲಿ ಹೆಚ್ಚು ಗಮನ ಸೆಳೆದ ಸಿನಿಮಾಗಳ ಪೈಕಿ ಜೆ ಪಿ ತುಮಿನಾಡ್ ನಿರ್ದೇಶನದ, ರಾಜ್‌ ಬಿ ಶೆಟ್ಟಿ, ಶನೀಲ್‌ ಗೌತಮ್ ಮುಖ್ಯಭೂಮಿಕೆಯಲ್ಲಿದ್ದ ‘ಸು ಫ್ರಮ್ ಸೋ’ ಕೂಡ ಒಂದು. ಈ ಸಿನಿಮಾದಲ್ಲಿ ರಂಗಭೂಮಿ ಹಿನ್ನೆಲೆಯ ನಟಿ ಸಂಧ್ಯಾ ಅರಕೆರೆ ಅವರು ಭಾನು ಎಂಬ ಪಾತ್ರದಲ್ಲಿ ಸೊಗಸಾಗಿ ನಟಿಸಿ, ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದರು. ಇದೀಗ ನಟಿ ಸಂಧ್ಯಾ ಅರಕೆರೆ ಅವರು ತಾಯಿ ಆಗುತ್ತಿದ್ದಾರೆ. ಶೋಧನ್ ಬಸ್ರೂರ್ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಸಂಧ್ಯಾ ಅರಕೆರೆ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅವರ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

Bhay The Gaurav Tiwari Mystery On OTT:  ನೈಜ ಘಟನೆ ಆಧಾರಿತ ಒಂದೊಳ್ಳೆ ಹಾರರ್ ಮಿಸ್ಟರಿ ವೆಬ್ ಸಿರೀಸ್‌! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಯಲ್ಲಿ ನೈಜ ಘಟನೆ ಆಧಾರಿತ ಒಂದೊಳ್ಳೆ ಹಾರರ್ ಮಿಸ್ಟರಿ ವೆಬ್ ಸಿರೀಸ್‌!

Gaurav Tiwari: 'ಭಯ್- ದಿ ಗೌರವ್ ತಿವಾರಿ ಮಿಸ್ಟರಿ' ಮುಂಬರುವ ಹಾರರ್-ಮಿಸ್ಟರಿ ವೆಬ್ ಸರಣಿಯಾಗಿದ್ದು , ಇದು ಭಾರತದ ಮೊದಲ ಪ್ಯಾರನಾರ್ಮಲ್ ತನಿಖಾಧಿಕಾರಿ ಗೌರವ್ ತಿವಾರಿ ಅವರ ಜೀವನವನ್ನು ಆಧರಿಸಿದೆ. ಗೌರವ್ ತಿವಾರಿ ಪ್ರಸಿದ್ಧ ಪ್ಯಾರನಾರ್ಮಲ್ ತನಿಖಾಧಿಕಾರಿಯಾಗಿದ್ದರು. 2016 ರಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈ ಕಾರಣದಿಂದಾಗಿ, ಗೌರವ್ ತಿವಾರಿ ಅವರ ಸಾವಿನ ರಹಸ್ಯವನ್ನು ಈ ಸರಣಿಯಲ್ಲಿ ಅನ್ವೇಷಿಸಲಾಗಿದೆ. ಅಲ್ಲದೆ, ಕರಣ್ ಠಾಕೂರ್ ಮತ್ತು ಕಲ್ಕಿ ಕೋಚ್ಲಿನ್ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

The Great Indian Kapil Show:  ಮತ್ತೆ ಶುರುವಾಗ್ತಿದೆ ಕಪಿಲ್ ಶರ್ಮಾ ಶೋ! ಮುಖ್ಯ ಅತಿಥಿ ಯಾರು ಗೊತ್ತಾ? ಸ್ಟ್ರೀಮಿಂಗ್‌ ಯಾವಾಗಿನಿಂದ?

ಮತ್ತೆ ಶುರುವಾಗ್ತಿದೆ ಕಪಿಲ್ ಶರ್ಮಾ ಶೋ! ಮುಖ್ಯ ಅತಿಥಿ ಯಾರು ಗೊತ್ತಾ?

Kapil Sharma: ಹಾಸ್ಯನಟ ಕಪಿಲ್ ಶರ್ಮಾ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 4 ರೊಂದಿಗೆ ಮತ್ತೆ ಬಂದಿದ್ದಾರೆ . ಈ ಬಾರಿ, ಮುಂಬರುವ ಸೀಸನ್‌ನಲ್ಲಿ ಪ್ರೇಕ್ಷಕರು ಕಪಿಲ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ನೋಡಲಿದ್ದಾರೆ ಎಂದು ತಯಾರಕರು ಘೋಷಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಹಿಂದಿನ ಸೀಸನ್‌ಗಳಂತೆ, ಸೀಸನ್ 4 ರಲ್ಲಿ ಕೃಷ್ಣ ಅಭಿಷೇಕ್, ಕಿಕು ಶಾರದಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಲಿದ್ದಾರೆ.

2+ Movie: 1 ಹಾಡು, 34 ಭಾಷೆ, 60 ಗಾಯಕರು; ಹೊಸ ದಾಖಲೆ ಬರೆದ ಅಭಿಮನ್‌ ರಾಯ್‌, ಸಾಥ್‌ ನೀಡಿದ ನಟ ಬಾಲಾಜಿ

ಹೊಸ ಸಾಹಸಕ್ಕೆ ಕೈಹಾಕಿದ ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌

Music Director Abhimann Roy: ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರು ʻ2+ʼ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಚಿತ್ರದ ಒಂದು ಹಾಡನ್ನು ಅವರು 34 ಭಾಷೆಗಳಲ್ಲಿ, 60 ಗಾಯಕರ ಧ್ವನಿಯಲ್ಲಿ ಹೊರತಂದಿದ್ದಾರೆ.

Bigg Boss 12: ʻಎಂಥಾ ಒಳ್ಳೇ ಮನ್ಸು ರೀ ಗಿಲ್ಲಿದು..ʼ; ಛೇ, ಕಾವ್ಯಗೆ ನೋವುಂಟು ಮಾಡಿದ್ದಕ್ಕೆ ನೆಚ್ಚಿನ ಊಟವನ್ನೇ ಬಿಟ್ರಾ ಈ ಮಾತಿನ ಮಲ್ಲ?

BBK 12: ಚಿಕನ್‌ - ಮಟನ್ ಸಿಕ್ರೂ ಊಟ ಮಾಡ್ತಿಲ್ಲ ಗಿಲ್ಲಿ ನಟ! ಏನಾಗೋಯ್ತು?

BBK 12: ʻಬಿಗ್‌ ಬಾಸ್‌ʼ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಹೋಗುವ ಚಾನ್ಸ್‌ಗಾಗಿ ಕಾವ್ಯ ಅವರಿಗೆ ನೋವುಂಟು ಮಾಡಿ ಅಳಿಸುವ ಟಾಸ್ಕ್‌ ಅನ್ನು ಗಿಲ್ಲಿ ನಟ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಟಾಸ್ಕ್‌ಗಾಗಿ ಕಾವ್ಯಗೆ "ನೀವು ಫ್ರೀ ಪ್ರಾಡಕ್ಟ್" ಎಂದು ಹೇಳಿ ನೋವು ಮಾಡಿದ ಪಾಶ್ಚಾತ್ತಾಪ ಗಿಲ್ಲಿ ಅವರನ್ನು ಕಾಡುತ್ತಿದೆ. ಇದರಿಂದಾಗಿ ನೆಚ್ಚಿನ ಮಾಂಸಾಹಾರವನ್ನೂ ಗಿಲ್ಲಿ ಸೇವಿಸಿಲ್ಲ.

Actress Malashree: ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ!

ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ!

shirdi sai baba: ನಟಿ ಮಾಲಾಶ್ರೀ ಸಿನಿಮಾದಿಂದ ದೂರವಿದ್ದರೂ, ಹಲವು ರಿಯಾಲಿಟಿ ಶೋಗೆ ಅತಿಥಿಯಾಗಿ ಬರುತ್ತ ಇರ್ತಾರೆ. ಮಾಲಾಶ್ರೀ ಅವರು ತುಂಬಾ ವರ್ಷಗಳಿಂದಲೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಿರಂತರವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಪತಿ, ನಿರ್ಮಾಪಕ ರಾಮು ಅವರು ಕೂಡ ಸಾಯಿಬಾಬಾ ಭಕ್ತರಾಗಿದ್ದರು. ಇದೀಗ ಮಾಲಾಶ್ರೀ ಅವರು ದುಬಾರಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಶಿರಡಿ ಶ್ರೀಸಾಯಿಬಾಬಾಗೆ ಅರ್ಪಿಸಿದ್ದಾರೆ.

Amruthadhaare Serial : ಕಾಣೆಯಾದ ಗೌತಮ್‌ ಅಜ್ಜಿ! ಜಯದೇವ್‌ ಕುತಂತ್ರ, ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

ಕಾಣೆಯಾದ ಗೌತಮ್‌ ಅಜ್ಜಿ! ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

Amruthadhaare :ಭಾಗ್ಯಮ್ಮಗೆ ಮಾತು ಬಂದಾಯ್ತು. ಮಗ ಸೊಸೆಯ ಸಂಸಾರ ಸರಿ ಆಗಬೇಕು ಅನ್ನೋ ಪಣ ತೊಟ್ಟಿದ್ದಾಳೆ. ಜೈದೇವ್‌ಗೆ ಆಸ್ತಿಯದ್ದೇ ಚಿಂತೆ. 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್‌, ಶಕುಂತಲಾ ಎಲ್ಲ ಬ್ಯಾಂಕ್‌ ಅಕೌಂಟ್‌ ಆಸ್ತಿಯನ್ನು ಫ್ರೀಜ್‌ ಮಾಡಲಾಗಿದೆ. ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಆದರೀಗ ಅಜ್ಜಿ ಏಕಾಏಕಿ ಎಲ್ಲಿಯೂ ಕಾಣಿಸುತ್ತಿಲ್ಲ. ಅಜ್ಜಿ ಕಥೆ ಏನಾಯ್ತು?

Anusha Rai: ಪಂಪನ ಕುರಿತ ʻಮಹಾಕವಿʼಸಿನಿಮಾದ ಶೂಟಿಂಗ್‌ ಮುಕ್ತಾಯ; ಕಿಶೋರ್‌ಗೆ ನಾಯಕಿಯಾದ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಅನುಷಾ ರೈ

ʻಮಹಾಕವಿʼ ಚಿತ್ರದಲ್ಲಿ ಕಿಶೋರ್‌ಗೆ ʻಬಿಗ್‌ಬಾಸ್‌ʼ ಖ್ಯಾತಿಯ ಅನುಷಾ ರೈ ನಾಯಕಿ

Mahakavi Movie: ʻಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼರ ಸ್ಪರ್ಧಿ ಅನುಷಾ ರೈ ಅವರು ನಟ ಕಿಶೋರ್‌ಗೆ ನಾಯಕಿಯಾಗಿ ʻಮಹಾಕವಿʼ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪ ಅವರ 25ನೇ ನಿರ್ದೇಶನದ ಈ ಚಿತ್ರದ ಶೂಟಿಂಗ್‌ ಮುಕ್ತಾಯಗೊಂಡಿದೆ.

BBK 12: ʻಬಿಗ್‌ ಬಾಸ್‌ʼ ಕೊಟ್ಟ ಡೀಲ್‌ನ ಸಕ್ಸಸ್‌ಫುಲ್‌ ಆಗಿ ಮುಗಿಸಿದ ಗಿಲ್ಲಿ ನಟ; ಕ್ಯಾಪ್ಟನ್ಸಿ ರೇಸ್‌ಗೆ ಮಾತಿನ ಮಲ್ಲನ ಡೈರೆಕ್ಟ್‌ ಎಂಟ್ರಿ?

BBK12: ವಿಲನ್‌ ಡೀಲ್‌ನ ಉಡಾಯಿಸಿದ ಗಿಲ್ಲಿ; ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ?

Bigg Boss 12: ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ 'ವಿಲನ್‌' ಎರಡು ಟಾಸ್ಕ್‌ಗಳನ್ನ ನೀಡಿದ್ದರು. ಆ ಎರಡೂ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮುಗಿಸಿದರೆ ನೇರವಾಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ನೀಡುವ ಚಾನ್ಸ್‌ ಸಿಗಲಿದೆ. ಸದ್ಯ ಅದರ ಅಪ್‌ಡೇಟ್‌ ಏನು? ಮುಂದೆ ಓದಿ.

Dhurandhar: ರೆಹಮಾನ್ ದಕೈತ್ ಪಾತ್ರದಲ್ಲಿ ಗಮನಸೆಳೆದ ಅಕ್ಷಯ್‌ ಖನ್ನಾ; 15ನೇ ವಯಸ್ಸಿನಲ್ಲಿ ತಾಯಿಯನ್ನೇ ಕೊಂದ ಈತ ಯಾರು?

ʼಧುರಂಧರ್ʼ ಸಿನಿಮಾದ ರಿಯಲ್ ಸ್ಟೋರಿ ಏನಾಗಿತ್ತು ಗೊತ್ತೆ?

ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯದ 'ಧುರಂಧರ್' ಬಾಲಿವುಡ್‌ ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಪಾಕಿಸ್ತಾನದ ಗ್ಯಾಂಗ್‌ಬೆಲ್ಲಿಯಲ್ಲಿ ನಡೆಯುವ ಅರೆ-ಕಾಲ್ಪನಿಕ ಸ್ಪೈ ಥ್ರಿಲ್ಲರ್ ಚಿತ್ರ ಇದಾಗಿದ್ದು, ನೈಜ ಘಟನೆಗಳಿಂದ ಪ್ರಭಾವಿತವಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಿಭಾಯಿಸಿರುವ ರೆಹಮಾನ್ ದಕೈತ್ ಗಮನ ಸೆಳೆಯುತ್ತಿದ್ದು, ಆತನ ಕ್ರೌರ್ಯ ಬೆಚ್ಚಿ ಬೀಳಿಸುವಂತಿದೆ.

Year Ender 2025: ಭಾರತದ ಜನಪ್ರಿಯ ಟಾಪ್‌ 10 ಸಿನಿಮಾಗಳನ್ನು ಘೋಷಿಸಿದ IMDb; ʻಕಾಂತಾರ ಚಾಪ್ಟರ್‌ 1ʼ ಚಿತ್ರಕ್ಕೆ 4ನೇ ಸ್ಥಾನ, ಮೊದಲ ಸ್ಥಾನ ಯಾರಿಗೆ?

2025ರ ಭಾರತದ ಟಾಪ್‌ 10 ಚಿತ್ರಗಳನ್ನ ಘೋಷಿಸಿದ IMDb; ಕಾಂತಾರಗೆ ಯಾವ ಸ್ಥಾನ?

IMDb Most Popular Indian Movies of 2025: ವರ್ಷಾಂತ್ಯದ ಹಿನ್ನೆಲೆಯಲ್ಲಿ ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) 2025ರ ಭಾರತದ ಅತ್ಯಂತ ಜನಪ್ರಿಯ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ʻಮಹಾವತಾರ್ ನರಸಿಂಹʼಕ್ಕೆ 2ನೇ ಸ್ಥಾನ, ಮತ್ತು ʻಕಾಂತಾರ: ಚಾಪ್ಟರ್‌ 1ʼಗೆ 4ನೇ ಸ್ಥಾನ ದೊರೆತಿದೆ.

'ಯಜಮಾನ' ಧಾರಾವಾಹಿಗೆ ಎಂಟ್ರಿ ಕೊಟ್ಟ ನಟಿ ಯಮುನಾ ಶ್ರೀನಿಧಿ; ಯಾವ ಪಾತ್ರ ಮಾಡ್ತಿದ್ದಾರೆ ಗೊತ್ತಾ?

'ಯಜಮಾನ' ಸೀರಿಯಲ್‌ಗೆ ನಟಿ ಯಮುನಾ ಶ್ರೀನಿಧಿ ಎಂಟ್ರಿ

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಯಮುನಾ ಶ್ರೀನಿಧಿ ಅವರು ಕಲರ್ಸ್‌ ಕನ್ನಡದ ಯಶಸ್ವಿ ಧಾರಾವಾಹಿ ʻಯಜಮಾನʼಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ನಿರ್ವಹಿಸಲಿರುವ ಪಾತ್ರದ ಹೆಸರು ಸುಮಿತ್ರಾ. ಈ ಸೀರಿಯಲ್‌ಗೆ ಯಮುನಾ ಶ್ರೀನಿಧಿ ಅವರ ಆಗಮನದಿಂದಾಗಿ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದೆ.

Bigg Boss Kannada 12:  ಸ್ಪಂದನಾಗೆ ರಜತ್‌ ಭರ್ಜರಿ ಕೌಂಟರ್‌! ಅಶ್ವಿನಿಗೆ ಗಿಲ್ಲಿ ಹೇಳಿದ್ದೇನು ಗೊತ್ತಾ?

Bigg Boss Kannada : ಸ್ಪಂದನಾಗೆ ರಜತ್‌ ಭರ್ಜರಿ ಕೌಂಟರ್‌!

Rajath:ಕಳೆದ ಸೀಸನ್ ಸ್ಪರ್ಧಿ ರಜತ್ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅರ್ಧ ಸೀಸನ್ ಮುಗಿದ ಬಳಿಕ ಅವರು ವೈಲ್ಡ್ ಕಾರ್ಡ್ಮೂ ಲಕ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿನ್ನೆಯ ನಾಮಿನೇಶನ್‌ ಪ್ರಕ್ರಿಯೆ ವೇಳೆ ಕೆಟ್ಟ ಪದಗಳನ್ನು ಬಳಿಸಿದ್ದಾರೆ. ನಾಮಿನೇಟ್ ಮಾಡಿದ ಬಳಿಕ ಸ್ಪರ್ಧಿಗಳನ್ನು ನೀರಿಗೆ ತಳ್ಳಬೇಕು. ರಜತ್‌ ಸಡೆ, ವೇಸ್ಟ್ ನನ್ ಮಗ ಈ ರೀತಿಯ ಪದಗಳನ್ನು ಅವರು ಬಳಸಿದ್ದಾರೆ.

Bigg Boss Kannada 12: ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿ, ನೀನು ಫ್ರೀ ಪ್ರಾಡಕ್ಟ್‌! ಗಿಲ್ಲಿ ಮಾತಿಗೆ ಕಾವ್ಯ ಕಣ್ಣೀರು

ʻಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿʼ ! ಗಿಲ್ಲಿ ಮಾತಿಗೆ ಕಾವ್ಯ ಕಣ್ಣೀರು

Kavya and Gilli: ಬಿಗ್‌ ಬಾಸ್‌ ಮನೆಯಲ್ಲಿ ಹೈಲೈಟ್‌ ಆಗಿರೋ ಜೋಡಿ ಅಂದರೆ ಅದುವೇ ಕಾವ್ಯ ಮತ್ತು ಗಿಲ್ಲಿ. ಆದರೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಕಾವ್ಯ-ಗಿಲ್ಲಿ, ರಾಶಿಕಾ-ಸೂರಜ್‌ಗೆ ಕೆಲವೊಂದು ಬುದ್ಧಿ ಮಾತು ಹೇಳಿದ್ದರು. ಅಲ್ಲಿಂದ ಕಾವ್ಯ ಫುಲ್‌ ಚೇಂಜ್‌ ಆಗಿದ್ದಾರೆ. ಅಷ್ಟೇ ಅಲ್ಲ ನಿನ್ನೆ ಕೂಡ ಗಿಲ್ಲಿ ಅವರನ್ನೇ ನಾಮಿನೇಟ್‌ ಮಾಡಿದ್ದಾರೆ ಕಾವ್ಯ.

Bigg Boss Kannada 12: ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್‌! ಗಿಲ್ಲಿ -ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್

ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್‌! ಗಿಲ್ಲಿ -ಕಾವ್ಯ ಗೆಳೆತನಕ್ಕೆ ಟ್ವಿಸ್ಟ್

Gilli Nata: ಬಿಗ್‌ ಬಾಸ್‌ನಲ್ಲಿ ನಿನ್ನೆ (ಡಿ. 9) ನಾಮಿನೇಶನ್‌ ಪ್ರಕ್ರಿಯೆ ನಡೆದಿತ್ತು. ಸ್ಪರ್ಧಿಗಳ ಮಧ್ಯೆ ವಾದ ವಿವಾದಗಳು ನಡೆದಿವೆ. ಮಾರಾಮಾರಿನೂ ಆಗಿದೆ. ವಿಶೇಷ ಅಂದರೆ ಗಿಲ್ಲಿ ಅವರನ್ನು ಕಾವ್ಯ ನಾಮಿನೇಟ್‌ ಕೂಡ ಮಾಡಿದ್ದಾರೆ. ಗಿಲ್ಲಿ ಹಾಗೂ ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್​ನಿಂದ ಗಿಲ್ಲಿ ಮತ್ತು ಅಶ್ವಿನಿಗೆ ಕ್ಯಾಪ್ಟನ್ಸಿ ಅವಕಾಶ ನೀಡಲಿದೆ.

Actor Darshan: ಜೈಲಿನಲ್ಲಿ ಜಗಳ ಆಗಲೇ ಇಲ್ಲ! ದರ್ಶನ್‌ ಪತ್ನಿಯ ವಾದ

ಜೈಲಿನಲ್ಲಿ ಜಗಳ ಆಗಲೇ ಇಲ್ಲ! ದರ್ಶನ್‌ ಪತ್ನಿಯ ವಾದ

The Devil Movie: `ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್‌ ಫ್ಯಾನ್ಸ್‌ಗೆ ಲೆಟರ್‌ ಬರೆದ ಬೆನ್ನಲ್ಲೇ ಇದೀಗ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್‌ ಜೈಲಿನಲ್ಲಿ ಗಲಾಟೆ ಮಾಡಿರೋ ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

Actor Darshan: ನನ್ನ ಪ್ರೀತಿಯ ಸೆಲೆಬ್ರಿಟಿಗಳೇ...ಚಿಂತಿಸಬೇಡಿ, ನಾನು ನಾನಾಗಿಯೇ ಇದ್ದೇನೆ; ಫ್ಯಾನ್ಸ್‌ಗೆ ದರ್ಶನ್‌ ಸುದೀರ್ಘ ಪತ್ರ

`ನಾನು ನಾನಾಗಿಯೇ ಇದ್ದೇನೆ'; ಫ್ಯಾನ್ಸ್‌ಗೆ ದರ್ಶನ್‌ ಸುದೀರ್ಘ ಪತ್ರ

The Devil: ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಲಕ್ಷಾಂತರ ಟಿಕೆಟ್​ ಸೋಲ್ಡ್ ಔಟ್ ಆಗಿವೆ. ಇದರಿಂದಾಗಿ ಭರ್ಜರಿ ಕಲೆಕ್ಷನ್ ಆಗಿದೆ. ಬಿಡುಗಡೆಗೂ ಮೊದಲೇ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಇದೀಗ ದರ್ಶನ್‌ ಫ್ಯಾನ್ಸ್‌ಗೆ ಪತ್ರ ಬರೆದಿದ್ದಾರೆ.

ದಕ್ಷಿಣ ಭಾರತಕ್ಕಾಗಿ 25 ಪ್ರಾಜೆಕ್ಟ್‌ಗಳನ್ನು ಘೋಷಿಸಿದ ಜಿಯೋ ಹಾಟ್‌ಸ್ಟಾರ್‌; 4 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ದೊಡ್ಡ ಪ್ಲ್ಯಾನ್!‌

JioHotstar: ದಕ್ಷಿಣ ಭಾರತದ ಮನರಂಜನಾ ಕ್ಷೇತ್ರಕ್ಕೆ 4000 ಕೋಟಿ ರೂ. ಹೂಡಿಕೆ

JioHotstar: ದಕ್ಷಿಣ ಭಾರತದ ಮನರಂಜನಾ ಕ್ಷೇತ್ರಕ್ಕೆ ಜಿಯೋಹಾಟ್‌ಸ್ಟಾರ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ 4,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜಿಯೋಸ್ಟಾರ್ ಸಂಸ್ಥೆಯು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಒಟ್ಟು 25 ಹೊಸ ಶೋಗಳ ಪಟ್ಟಿಯನ್ನು ಅನಾವರಣಗೊಳಿಸಿದೆ.

Akshaye Khanna: ʻಧುರಂಧರ್‌ʼ ನಂತರ ರಿಷಬ್‌ ಶೆಟ್ಟಿ ನಿರ್ದೇಶಕರ ಜೊತೆಗೆ ಕೈಜೋಡಿಸಿದ ಬಾಲಿವುಡ್‌ ನಟ ಅಕ್ಷಯ್‌ ಖನ್ನಾ! ಫಸ್ಟ್‌ ಲುಕ್‌ ನೋಡಿ ಎಲ್ಲರೂ ಶಾಕ್!‌

ರಿಷಬ್‌ ಶೆಟ್ಟಿ ನಿರ್ದೇಶಕರ ಜೊತೆಗೆ ಕೈಜೋಡಿಸಿದ ನಟ ಅಕ್ಷಯ್‌ ಖನ್ನಾ!

Mahakali: ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಆರ್ ಮಾಧವನ್ ಅಭಿನಯದ 'ಧುರಂಧರ್' ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಅಕ್ಷಯ್ ಖನ್ನ ಅದ್ಭುತವಾಗಿ ನಟಿಸಿದ್ದಾರೆ. ಇದೀಗ ಅಕ್ಷಯ್ ಖನ್ನ ನಟ ಚಿತ್ರ ನಿರ್ಮಾಪಕ ಪ್ರಶಾಂತ್ ವರ್ಮಾ ಅವರ ಮುಂಬರುವ ಚಿತ್ರ ಮಹಾಕಾಳಿಯೊಂದಿಗೆ ತೆಲುಗು ಸಿನಿಮಾಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಲುಕ್‌ ಕೂಡ ಔಟ್‌ ಆಗಿದೆ. ಪಾತ್ರ ಏನು?

Salaga: 'ಸೂರಿ ಅಣ್ಣ' ಸಿನಿಮಾದಲ್ಲಿ ನಟಿಸಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ; ಟೈಟಲ್‌ ಆಯ್ತು ʻಸಲಗʼ ಚಿತ್ರದ ಸೂಪರ್‌ ಹಿಟ್‌ ಹಾಡು!

'ಸೂರಿ ಅಣ್ಣ' ಸಿನಿಮಾದಲ್ಲಿ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ!

Suri Anna Movie: ʻಸಲಗʼ ಸಿನಿಮಾದ ʻಸೂರಿ ಅಣ್ಣʼ ಹಾಡಿನಿಂದ ಫೇಮಸ್‌ ಆದ ದಿನೇಶ್ (ಸೂರಿ ಅಣ್ಣ) ಅವರು ಅದೇ ಹೆಸರಿನ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಖ್ಯಾತಿಯ ಕಾಕ್ರೋಚ್‌ ಸುಧಿ ನಟಿಸಿದ್ದಾರೆ.

Yash Radhika : ಯಶ್‌ ರಾಧಿಕಾ ದಾಂಪತ್ಯಕ್ಕೆ 9 ವರ್ಷ; ರಾಕಿಂಗ್‌ ಸ್ಟಾರ್‌ರನ್ನ ಈ ರೀತಿಯಲ್ಲಿ ನೋಡ್ತಾರಂತೆ ಸಿಂಡ್ರೆಲಾ!

ಯಶ್‌ ರಾಧಿಕಾ ದಾಂಪತ್ಯಕ್ಕೆ 9 ವರ್ಷ; ಕ್ಯೂಟ್‌ ವಿಡಿಯೋ ಪೋಸ್ಟ್‌!

Yash: ಯಶ್​ 2004ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಉತ್ತರಾಯಣ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2005ರಲ್ಲಿ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. . ಯಶ್ ಮತ್ತು ರಾಧಿಕಾ, 2008ರಲ್ಲಿ ರೊಮ್ಯಾಂಟಿಕ್​​ ಡ್ರಾಮಾ 'ಮೊಗ್ಗಿನ ಮನಸು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈಗ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ.

Tamannaah Bhatia:  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ʻಜಯಶ್ರೀʼ! ಹೊಸ ಸಿನಿಮಾ ಪೋಸ್ಟರ್‌ ಔಟ್‌

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ʻಜಯಶ್ರೀʼ! ಸಿನಿಮಾ ಪೋಸ್ಟರ್‌ ಔಟ್‌

Shantaram Second wife: ಡಾ. ಕೋಟ್ನಿಸ್ ಕಿ ಅಮರ್ ಕಹಾನಿ, ಶಕುಂತಲಾ ಮತ್ತು ಇತರ ಚಿತ್ರಗಳಿಗೆ ಹೆಸರುವಾಸಿಯಾದ ಜಯಶ್ರೀ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಅವರು ವಿ. ಶಾಂತಾರಾಮ್ ಅವರ ಎರಡನೇ ಪತ್ನಿಯೂ ಆಗಿದ್ದರು.ಪೋಸ್ಟರ್‌ನಲ್ಲಿ ತಮನ್ನಾ ಭಾಟಿಯಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಡಿದ್ದಾರೆ.

Dhurandhar: ಸೋಮವಾರದ ಪರೀಕ್ಷೆಯಲ್ಲಿ ಪಾಸಾದ ʻಧುರಂಧರ್‌ʼ; ರಣವೀರ್‌ ಸಿಂಗ್‌ ಖಾತೆಗೆ ಬಿತ್ತು ಮತ್ತೊಂದು ಗೆಲುವು! ಈವರೆಗೂ ಎಷ್ಟಾಯ್ತು ಕಲೆಕ್ಷನ್?

Ranveer Singh: ನಾಲ್ಕು ದಿನಗಳಲ್ಲಿ ದಾಖಲೆ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ

Dhurandhar Box Office Collection: ರಣವೀರ್‌ ಸಿಂಗ್‌ ನಟನೆಯ ಬಹುನಿರೀಕ್ಷಿತ ʻಧುರಂಧರ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ಶತಕೋಟಿ ಕ್ಲಬ್‌ಗೆ ಸೇರಿದೆ. ಡಿಸೆಂಬರ್ 5ರಂದು ತೆರೆಕಂಡ ಈ ಚಿತ್ರವು ಸೋಮವಾರದ ಕಲೆಕ್ಷನ್‌ನಲ್ಲಿ 'ಪಾಸ್' ಆಗಿದೆ. ಮೊದಲ ನಾಲ್ಕು ದಿನಗಳಲ್ಲಿ ಭಾರತದಲ್ಲಿ 130.80 ಕೋಟಿ ರೂ. ಗಳಿಕೆ ಕಂಡಿದೆ.

Loading...