ನೋಯ್ಡಾ ಹಿಂಸಾಚಾರ ಪ್ರಮುಖ ಆರೋಪಿ ಬಂಧನ
ವೇತನ ಸಂಬಂಧಿಸಿ ನೋಯ್ಡಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಮಾಸ್ಟರ್ ಮೈಂಡ್ ತಮಿಳುನಾಡಿನ ವ್ಯಕ್ತಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಶನಿವಾರ ಬಂಧಿಸಿದೆ. ಪ್ರತಿಭಟನೆ ಸಂದರ್ಭದಲ್ಲಿ ಆತ ನೋಯ್ಡಾದಲ್ಲಿ ಇದ್ದನು. ಪ್ರತಿಭಟನಾಕಾರರನ್ನು ಒಗ್ಗೂಡಿಸಲು ಕ್ಯೂಆರ್ ಕೋಡ್, ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದನು ಎಂದು ಆರೋಪಿಸಲಾಗಿದೆ.