ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕ್ರೈಂ
Self Harming: ಬೆಳಗಾವಿಯ ಹಾಸ್ಟೆಲ್‌ನಲ್ಲಿ ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಬೆಳಗಾವಿಯ ಹಾಸ್ಟೆಲ್‌ನಲ್ಲಿ ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Self Harming: ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದಿದೆ. ಶಿಲ್ಪಾ ಯರಮಸನಾಳ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.‌

Rare Lizards Seized: 60 ಲಕ್ಷ ರೂ. ಮೌಲ್ಯದ ಅಪರೂಪದ ಹಲ್ಲಿಗಳ ಕಳ್ಳ ಸಾಗಣೆ! ಅಸ್ಸಾಂನಲ್ಲಿ ಸಿಕ್ಕಿಬಿದ್ದ ಕಿಡಿಗೇಡಿಗಳು

ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಈಶಾನ್ಯ ರಾಜ್ಯಗಳಲ್ಲಿ ಅತ್ಯಂತ ಅಪರೂಪವಾಗಿ ಟೋಕೇ ಗೆಕ್ಕೊ ಹಲ್ಲಿಗಳು ಕಾಣ ಸಿಗುತ್ತವೆ. ಈ ಹಲ್ಲಿಗಳ ವಿಶಿಷ್ಟ ಗುಣ ಲಕ್ಷಣ, ಔಷಧೀಯ ಗುಣ ಹಾಗೂ ಅಲಭ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಕಳ್ಳ ಸಾಗಣೆ ಕೂಡಾ ಹೆಚ್ಚಾಗಿದೆ. ಆರೋಪಿಗಳು ಚಿಲ್ಲರೆ ಮೊತ್ತಕ್ಕೆ ಹಲ್ಲಿಗಳನ್ನು ಖರೀದಿಸಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾರೆ.

Tahawwur Rana: ಮುಂಬೈ ದಾಳಿಯಲ್ಲಿ ದುಬೈ ವ್ಯಕ್ತಿಯ ಕೈವಾಡ?

ಮುಂಬೈ ದಾಳಿ: ರಾಣಾ ವಿಚಾರಣೆಯಿಂದ ಪತ್ತೆಯಾಗುವನೇ ದುಬೈ ವ್ಯಕ್ತಿ?

ಮುಂಬೈ ತಾಜ್ ಹೊಟೇಲ್ ಭಯೋತ್ಪಾದಕ ದಾಳಿ ನಡೆದು 15 ವರ್ಷಗಳ ಅನಂತರ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ತಹಾವ್ವುರ್‌ ರಾಣಾನನ್ನು ವಿಚಾರಣೆಗಾಗಿ ಅಮೆರಿಕದಿಂದ ಭಾರತಕ್ಕೆ ಕರೆ ತರಲಾಗಿದೆ. 26/11 ಮುಂಬೈ ಭಯೋತ್ಪಾದಕ ದಾಳಿಗೂ ಮೊದಲು ರಾಣಾ ದುಬೈನಲ್ಲಿ ಭೇಟಿಯಾಗಿದ್ದ ಎನ್ನಲಾದ ವ್ಯಕ್ತಿಯ ಹುಡುಕಾಟವನ್ನು ಈಗ ಭಯೋತ್ಪಾದನಾ ನಿಗ್ರಹ ಸಂಸ್ಥೆ (ಎನ್ಐಎ) ಈಗ ಆರಂಭಿಸಿದೆ. ರಾಣಾ ಭೇಟಿಯಾಗಿದ್ದ ದುಬೈ ವ್ಯಕ್ತಿಗೆ ಮುಂಬೈ ದಾಳಿ ಸಂಚಿನ ಕುರಿತು ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗುತ್ತಿದೆ.

Basanagouda Patil Yatnal: ಯತ್ನಾಳ್‌ ಹತ್ಯೆಗೆ ಸಂಚು; ಆಡಿಯೋ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ವೈರಲ್‌!

ಯತ್ನಾಳ್‌ ಹತ್ಯೆಗೆ ಸಂಚು; ಮತ್ತೊಂದು ಸ್ಫೋಟಕ ವಿಡಿಯೋ ವೈರಲ್‌!

Murder conspiracy: ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಮಾಡಿದ್ದು, ಬಿಜಾಪುರ ಫೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದಾನೆ. ನಮ್ಮ ಪ್ರವಾದಿಯನ್ನು ಟೀಕಿಸಿರುವುದನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಮರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು ವಿಡಿಯೋದಲ್ಲಿ ಯುವಕ ಹೇಳಿದ್ದಾನೆ.

Sameer M D: ಸೌಜನ್ಯ ಪ್ರಕರಣ; ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ

Sameer M D: ನ್ಯಾಯಾಲಯವು ಯೂಟ್ಯೂಬರ್‌ಗೆ ನೋಟೀಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಅಲ್ಲದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೊ ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಆದೇಶ ನೀಡಿದ್ದಾರೆ.

Tahawwur Rana: ಮುಂಬೈ ದಾಳಿ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದನಂತೆ ರಾಣಾ

ಮುಂಬೈ ದಾಳಿ ಉಗ್ರರಿಗೆ 'ನಿಶಾನ್-ಎ-ಹೈದರ್' ನೀಡಿ ಎಂದಿದ್ದ ರಾಣಾ

Tahawwur Rana: ಮುಂಬೈ ಮೇಲೆ ದಾಳಿ ಮಾಡಿದ್ದ ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ)ದ ಭಯೋತ್ಪಾದಕರಿಗೆ ಪಾಕಿಸ್ತಾನದ ಅತ್ಯುನ್ನತ ಗೌರವವಾದ 'ನಿಶಾನ್-ಎ-ಹೈದರ್' ನೀಡಬೇಕೆಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್‌ ರಾಣಾ ಬಯಸಿದ್ದರು ಎಂದು ಅಮೆರಿಕ ನ್ಯಾಯ ಇಲಾಖೆ ಹೇಳಿದೆ.

Self Harming: ಪತಿ ಕಿರುಕುಳ; ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ!

ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

Self Harming: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ಘಟನೆ ನಡೆದಿದೆ. ಪತಿ ನಿತ್ಯ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತನ ಹಿಂಸೆಗೆ ಮನನೊಂದು ಪತ್ನಿ, ಪುಟ್ಟ ಮಗಳೊಂದಿಗೆ ಸೇರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Narendra Modi: ದೇಶವನ್ನೇ ಬೆಚ್ಚಿ ಬೀಳಿಸಿದ ಗ್ಯಾಂಗ್‌ರೇಪ್‌ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನಿ ಮೋದಿ ಆದೇಶ

ವಾರಾಣಸಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ

Varanasi physical Abuse Case: ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆದೇಶಿಸಿದ್ದಾರೆ. 19 ವರ್ಷದ ಯುವತಿಯ ಮೇಲೆ ಮೇಲೆ ಆರು ದಿನಗಳ ಕಾಲ 23 ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಶುಕ್ರವಾರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಬಂದಿದ್ದ ಪ್ರಧಾನಿ ಮೋದಿ ಈ ಘಟನೆ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ವಿವರ ಪಡೆದರು.

Physical Abuse: ಛೇ... ಎಂಥಾ ಹೀನ ಕೃತ್ಯ! ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಗುವಿನ ಮೇಲೆ ಅತ್ಯಾಚಾರ

ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಗುವಿನ ಮೇಲೆ ಅತ್ಯಾಚಾರ

ಪ್ರೇಯಸಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಕುಪಿತಗೊಂಡ ಪ್ರಿಯಕರ ಆಕೆಯ ಒಂದೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ( Physical Abuse) ನಡೆಸಿರುವ ಘಟನೆ ತಮಿಳುನಾಡಿನ (tamilnadu) ನಮಕ್ಕಲ್ ( Namakkal) ಜಿಲ್ಲೆಯಲ್ಲಿ ಏಪ್ರಿಲ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಲ್ಲಿಪಾಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ 33 ವರ್ಷದ ಒಡಿಶಾ ಮೂಲದ ವಲಸೆ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.

Crime News: ಅತ್ಯಾಚಾರ, ಗುಂಡಿನ ದಾಳಿ ಆರೋಪ- ತನಿಖೆಯಲ್ಲಿ ಬಯಲಾಯಿತು ಕಿʻಲೇಡಿʼಯ ಖತರ್ನಾಕ್‌ ಪ್ಲಾನ್‌

ಹನಿಟ್ರ್ಯಾಪ್‌ಗೆ ಈಕೆ ಮಾಡಿದ ಖತರ್ನಾಕ್‌ ಪ್ಲ್ಯಾನ್‌ ಏನ್‌ ಗೊತ್ತಾ?

Crime News: ಹಣದಾಸೆಗಾಗಿ ರಾಜಕಾರಣಿಯ ಮಗ ತನ್ನನ್ನು ಅತ್ಯಾಚಾರದ ಮಾಡಿ ಗುಂಡು ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದ್ರೆ ತನಿಖೆ ವೇಳೆ ನಿಜಾಂಶ ಬಯಲಾಗಿದ್ದು, ಇದು ಮಹಿಳೆ ಕಟ್ಟಿದ್ದ ಕಟ್ಟು ಕಥೆ ಎಂದು ತಿಳಿದು ಬಂದಿದೆ. ಪೊಲೀಸರನ್ನು ನಂಬಿಸಲು ತನ್ನ ದೇಹದೊಳಗೆ ಶಸ್ತ್ರ ಚಿಕೆತ್ಸೆ ಮೂಲಕ ಆ ಮಹಿಳೆ ಗುಂಡು ಸೇರಿಸಿಕೊಂಡಿದ್ದು, ಈ ಘಟನೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Helicopter crash:  ನದಿಗೆ ಬಿದ್ದ ಹೆಲಿಕಾಪ್ಟರ್: ಸೀಮೆನ್ಸ್‌ ಸಿಇಒ ಸೇರಿ ಆರು ಮಂದಿ ಸಾವು

ನದಿಗೆ ಹೆಲಿಕಾಪ್ಟರ್ ಬಿದ್ದು 6 ಮಂದಿ ಸಾವು

ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಸ್ಟಿನ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಇದರಲ್ಲಿದ್ದ ಪೈಲೆಟ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಆಕಾಶದಲ್ಲಿಯೇ ಮುರಿದು ನದಿಗೆ ಬಿದ್ದಿದೆ.

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ! ಲವ್ ಮಾಡಿದ ಹುಡುಗಿಗೆ ಇದೆಂಥಾ ಶಿಕ್ಷೆ?

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ!

ಮಗಳು ಅನ್ಯ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆಕ್ರೋಶಗೊಂಡ ತಂದೆಯೊಬ್ಬ ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮುಖೇಶ್ ಸಿಂಗ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ.

Self Harming: ಪತ್ನಿಯ ಅಕಾಲಿಕ ಸಾವಿನ ನೋವು; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿಯ ಅಕಾಲಿಕ ಸಾವು; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

Davanagere News: ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಅಕಾಲಿಕ ಸಾವಿನಿಂದ ಆಘಾತಕ್ಕೊಳಗಾಗಿ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಉದಯ್‌ (35) ಈ ಕೃತ್ಯ ಎಸಗಿದಾತ. ಮಕ್ಕಳಾದ ಸಿಂಧುಶ್ರೀ (4), ಶ್ರೀಜಯ್‌ (3) ಮೃತರು.

Tahawwur Rana: ಮುಂಬೈ ದಾಳಿಯಲ್ಲಿ ತಹವ್ವುರ್ ರಾಣಾ ಪಾತ್ರ ಬೆಳಕಿಗೆ ಬಂದಿದ್ದು ಹೇಗೆ?

ಮುಂಬೈ ದಾಳಿ ಸಂಚಿಗೂ ಮುನ್ನ ನಡೆದಿದ್ದು ಏನು?

Tahawwur Rana: ಮುಂಬೈ ತಾಜ್ ಹೊಟೇಲ್ ಮೇಲಿನ ದಾಳಿಯಲ್ಲಿ ತಹವ್ವುರ್ ಹುಸೇನ್ ರಾಣಾ ಭಾಗಿಯಾಗಿರುವುದು ಆತನ ಬಾಲ್ಯದ ಸ್ನೇಹಿತ ಮತ್ತು ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಇದು ನಡೆದಿದ್ದು 2016 ರಲ್ಲಿ.

Bus Accident: ಚಿಕ್ಕಮಗಳೂರಲ್ಲಿ ಭಾರಿ ಮಳೆ; ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Bus Accident: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಜಲದುರ್ಗಾ ಬಳಿ ಅಪಘಾತ ನಡೆದಿದೆ. ಭಾರಿ ಮಳೆಯಿಂದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮನೆಯ ಮೇಲೆ ಬಿದ್ದು 30 ಅಡಿ ಪ್ರಪಾತಕ್ಕೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

Chikkaballapur News: ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ಬುಧವಾರ ಬೆಳಗಿನ ಜಾವಾ ಸುಮಾರು ೬ ಗಂಟೆ ಸಮಯದಲ್ಲಿ ಕುರಿಗಳನ್ನು ಮಾಲೀಕ ಮನೆಯಿಂದ ಗ್ರಾಮದ ಪಕ್ಕದ ಕೊಟ್ಟಿಗೆಗೆ ಸ್ಥಳಾಂತರ ಮಾಡಿದ್ದು, ತನ್ನ ದಿನನಿತ್ಯ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ ೧೦ ಗಂಟೆಗೆ ಕುರಿಗಳನ್ನು ಹೊಲದಲ್ಲಿ ಮೇಯಿಸಲು ಕರೆದುಕೊಂಡು ಹೋಗಲು ಹೋಗಿ ನೋಡಿದರೆ ಸುಮಾರು ೫,೬, ಬೀದಿ ನಾಯಿಗಳು ಕೊಟ್ಟಿಗೆಯಲ್ಲಿ ಕುರಿಗಳನ್ನು ಅಟ್ಟಾಡಿಸುತ್ತಿದ್ದುವು

Chkkaballapur Crime: ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು, ಮೃತದೇಹ ಪತ್ತೆ

ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು, ಮೃತ ದೇಹ ಪತ್ತೆ

ಬಾಲಕ ತನ್ನ ನೆಂಟರ ಜೊತೆಯೊಂದಿಗೆ ಮುರುಗ ಮಲ್ಲ ದರ್ಗಾ ಗೆ ಬಂದಿದ್ದು ಮಧ್ಯಾಹ್ನದ ವೇಳೆ ಕಲ್ಯಾಣಿಯಲ್ಲಿ ಸ್ನಾನ ಮಾಡಕ್ಕೆ ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ

MBBS Student Death: ಎಂಬಿಬಿಎಸ್ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿ ನೇಣಿಗೆ ಶರಣು

ಎಂಬಿಬಿಎಸ್ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿ ನೇಣಿಗೆ ಶರಣು

ಮೃತ ದುರ್ದೈವಿ ಹೇಮಂತ್ ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಎನ್ನಲಾಗಿದೆ. ಈತನ ತಾಯಿ ವೈದ್ಯರಾಗಿದ್ದು ಅವರ ಜೊತೆ ವಿಯಟ್ನಾಂ ದೇಶದ ಪ್ರವಾಸ ಮುಗಿಸಿ ಮನೆಗೆ ಬುಧವಾರವೇ ಮನೆಗೆ  ಬಂದಿದ್ದ ಎನ್ನಲಾಗಿದೆ.

Jitan Ram Manjhi: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆಗೈದ ಪತಿ; ಕಾರಣವೇನು?

ಸಚಿವ ಜಿತಿನ್‌ ರಾಮ್‌ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಪತಿ

Sushma Devi: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ ಅವರ ಮೊಮ್ಮಗಳು, 32 ವರ್ಷದ ಸುಷ್ಮಾ ದೇವಿ ಅವರನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬುಧವಾರ (ಏ. 9) ನಡೆದಿದೆ. ಬಿಹಾರ ಗಯಾದ ಅತ್ರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Physical Abuse: ರಾಜ್ಯದಲ್ಲಿ ಮತ್ತೊಂದು ನೀಚ ಕೃತ್ಯ; ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿ ಮಾಡಿದ ಪಾಪಿ ತಂದೆ!

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿ ಮಾಡಿದ ಪಾಪಿ ತಂದೆ!

Physical Abuse: ಗದಗ ಜಿಲ್ಲೆಯ ಮುಳಗುಂದದಲ್ಲಿ ನೀಚ ಕೃತ್ಯ ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ಪೊಲೀಸ್‌ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದರಿಂದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Fraud Case: ʼಲಕ್ಕಿ ಭಾಸ್ಕರ್ʼ ಚಿತ್ರದ ಮಾದರಿಯಲ್ಲಿ ವಂಚನೆ; ಕೋಟಿ ಕೋಟಿ ರೂ. ದೋಚಿ ಸಿಕ್ಕಿಬಿದ್ದ ಬ್ಯಾಂಕ್‌ ಮ್ಯಾನೇಜರ್‌

ಕೋಟಿ ಕೋಟಿ ರೂ. ದೋಚಿ ಸಿಕ್ಕಿಬಿದ್ದ ಬ್ಯಾಂಕ್‌ ಮ್ಯಾನೇಜರ್‌

Raichur News: ʼಲಕ್ಕಿ ಭಾಸ್ಕರ್‌ʼ ಸಿನಿಮಾದಂತೆ ಕೋಟಿ ಕೋಟಿ ರೂ. ವಂಚಿಸಿದ್ದ ಬ್ಯಾಂಕ್​ಮ್ಯಾನೇಜರ್‌ನನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆತನಿಗೆ ನೆರವಾದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಕಂಬಿ ಎಣಿಸುವಂತಾಗಿದೆ. ನರೇಂದ್ರ ರೆಡ್ಡಿ ಮತ್ತು ಅರುಣಾ ದೇವಿ ಬಂಧಿತರು.

Agra Murder: ಕಂಬಳಿಯಲ್ಲಿ ಸಿಕ್ತು ತಾಯಿ ಮಗಳ ಕೊಳೆತ ಶವ!

ಕಂಬಳಿಯಲ್ಲಿ ಸಿಕ್ತು ತಾಯಿ ಮಗಳ ಕೊಳೆತ ಶವ!

ಆಗ್ರಾದ ಜಗದೀಶಪುರದಲ್ಲಿ ಬೀಗ ಹಾಕಿದ ಮನೆಯೊಳಗೆ ಮಹಿಳೆ (40) ಮತ್ತು ಆಕೆಯ ಮಗಳು (9) ಅವರ ಕೊಳೆತ ಶವಗಳು ಕಂಬಳಿಯಲ್ಲಿ ಸುತ್ತಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಪತ್ತೆಯಾಗಿರುವ ಮೃತದೇಹಗಳು ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಹಳೆಯದಾಗಿರಬಹುದು ಎಂದು ಊಹಿಸಲಾಗಿದೆ.

Tahawwur Rana: ತಹವ್ವುರ್‌ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ? ಇಲ್ಲಿದೆ ಡಿಟೇಲ್ಸ್‌!

ತಹವ್ವುರ್‌ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ?

ತಹವ್ವುರ್‌ ರಾಣಾ(Tahawwur Rana) ಕೆಲವೇ ಕೆಲವು ಗಂಟೆಗಳಲ್ಲಿ ಭಾರತಕ್ಕೆ ಬಂದಿಳಿಯಲಿದ್ದು, ಬಳಿಕ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗಿದೆ. ತಹವ್ವುರ್‌ ರಾಣಾ ಶರಣಾಗತಿಗೆ ವಾರಂಟ್ ಜಾರಿಯಾಗಿದ್ದು ಬಹು-ಏಜೆನ್ಸಿ ತಂಡವು ಶೀಘ್ರದಲ್ಲೇ ಆತನನ್ನು ಕರೆದುಕೊಂಡು ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

2nd PUC Result 2025: ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದ್ರೂ ಕಡಿಮೆಯಾಯ್ತು ಎಂದು ವಿದ್ಯಾರ್ಥಿ ಆತ್ಮಹತ್ಯೆ!

ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದ್ರೂ ವಿದ್ಯಾರ್ಥಿ ಆತ್ಮಹತ್ಯೆ!

2nd PUC Result 2025: ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಘಟನೆ ನಡೆದಿದೆ. ಎಸ್​ಎಸ್​ಎಲ್​ಸಿಯಲ್ಲಿ ವಿದ್ಯಾರ್ಥಿ ಶೇ. 98 ಅಂಕ ಪಡೆದಿದ್ದ. ಆದರೆ, ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದಿದೆ. ಇದರಿಂದ ತಾನು ನಿರೀಕ್ಷಿಸಿದಷ್ಟು ಮಾರ್ಕ್ಸ್‌ ಬರಲಿಲ್ಲ ಎಂದು ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.