ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ಬಸವಕಲ್ಯಾಣದಲ್ಲಿ ಬಸವೇಶ್ವರರ ರಥೋತ್ಸವದ ವೇಳೆ ಘೋರ ದುರಂತ; ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ಬಸವಕಲ್ಯಾಣದಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

Bidar News: ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ವೇಳೆ ಭೀಕರ ಅವಘಡ ಸಂಭವಿಸಿದೆ. ರಥ ಎಳೆಯುವ ವೇಳೆ ಆಯಾ ತಪ್ಪಿ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಧನರಾಜ ಚಾಕೂರೆ (65) ಮೃತಪಟ್ಟಿದ್ದಾರೆ.

"ನನ್ನಲ್ಲಿ ದೈವಿಕ ಶಕ್ತಿಯಿದೆ, ನೀನು ವಿರೋಧಿಸಲು ಸಾಧ್ಯವಿಲ್ಲ": ನಾಸಿಕ್‌ನ ಮತ್ತೊಬ್ಬ ಸ್ವಘೋಷಿತ ದೇವ ಮಾನವ ಭೋಂದು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣ

ಭೋಂದು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಆಧ್ಯಾತ್ಮಿಕ ಚಿಕಿತ್ಸೆಯ ಹೆಸರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ನಾಸಿಕ್‌ನ ಸ್ವಯಂಘೋಷಿತ ದೇವಮಾನವನ ಭೋಂದು ಬಾಬಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಹೇಶ್‌ಗಿರಿ ಬಾಬಾ ಅಲಿಯಾಸ್ ಮಹೇಶ್ ದಿಲೀಪ್ ಕಾಕ್ಡೆ ಎಂದೂ ಕರೆಯಲ್ಪಡುವ ಈತನ ವಿರುದ್ಧ ರಾಜ್ಯದ ಮಾಟಮಂತ್ರ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

Self Harming: ಶೇರ್ ಮಾರ್ಕೇಟ್ ನಲ್ಲಿ ನಷ್ಟ: ಯುವಕ ನೇಣಿಗೆ ಶರಣು

ಶೇರ್ ಮಾರ್ಕೇಟ್ ನಲ್ಲಿ ನಷ್ಟ: ಯುವಕ ನೇಣಿಗೆ ಶರಣು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಯುವಕನೋರ್ವ ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಆಘಾತದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿದ್ಧಾಪುರದ ಹರ್ಷವರ್ಧನ್ (22)ನೇಣಿಗೆ ಶರಣಾದ ಯುವಕ. ಸಿದ್ದಾಪುರದ ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡ ಯುವಕ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

"ಗರ್ಭಪಾತದ ನಂತರ ದರ್ಗಾಗೆ ಭೇಟಿ ನೀಡಲು ಹೇಳಿದ”; TCS ಮತಾಂತರ ಜಾಲದ ಕರಾಳತೆ ಬಿಚ್ಚಿಟ್ಟ ಮತ್ತೋರ್ವ ಸಂತ್ರಸ್ತೆ

“ನನ್ನ ಎದೆಯತ್ತ ದಿಟ್ಟಿಸಿ ನೋಡಿದ, ದರ್ಗಾಗೆ ಭೇಟಿ ನೀಡಲು ಹೇಳಿದ”

TCS assault case: ಟಿಸಿಎಸ್ನ ಆರನೇ ಸಂತ್ರಸ್ತೆಯಾಗಿರುವ ಹಿರಿಯ ಉದ್ಯೋಗಿನಿಯೊಬ್ಬರು, ಮೇಲ್ದರ್ಜೆಯ ಅಧಿಕಾರಿಗಳು ದೂರುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ, ಆರೋಪಿಗಳಲ್ಲಿ ಒಬ್ಬರು ಅವರ ಗರ್ಭಪಾತದ ಕುರಿತು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ.

ಐಆರ್‌ಎಸ್ ಅಧಿಕಾರಿಯ ಪುತ್ರಿ ಅತ್ಯಾಚಾರ, ಕೊಲೆ;  2.5 ಲಕ್ಷ ರೂ. ದೋಚಿದ ಆರೋಪಿ, ತನಿಖೆಯಲ್ಲಿ ಬಯಲಾಗಿದ್ದೇನು?

ದಕ್ಷಿಣ ದೆಹಲಿಯಲ್ಲಿ ಭೀಕರ ಕೃತ್ಯ; ಐಆರ್‌ಎಸ್ ಅಧಿಕಾರಿ ಪುತ್ರಿಯ ಹತ್ಯೆ

ದಕ್ಷಿಣ ದೆಹಲಿಯಲ್ಲಿ 19 ವರ್ಷದ ಹಳೆಯ ಮನೆ ಕೆಲಸಗಾರ ರಾಹುಲ್ ಮೀನಾ, ಐಆರ್‌ಎಸ್ ಅಧಿಕಾರಿಯ 22 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿ ₹2.5 ಲಕ್ಷ ಹಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್ ಗೇಮ್ ವ್ಯಸನದಿಂದ ಸಾಲ ಮಾಡಿದ್ದ ಕಾರಣದಿಂದ ಕೆಲಸದಿಂದ ವಜಾಗೊಂಡಿದ್ದ ಎಂದು ಇತರೆ ಸಿಬ್ಬಂದಿಗಳು ಪೊಲೀಸರಿಗೆ ತಿಳಿಸಿದ್ದಾರೆ.

Physical Abuse: ಅಮೆರಿಕದ ಮಹಿಳೆ ಮೇಲೆ ದೌರ್ಜನ್ಯ, ಕೊಡಗಿನ ಹೋಂಸ್ಟೇ ಪರವಾನಗಿ ರದ್ದು, ಇಬ್ಬರ ಬಂಧನ

ಅಮೆರಿಕದ ಮಹಿಳೆ ಮೇಲೆ ದೌರ್ಜನ್ಯ, ಕೊಡಗಿನ ಹೋಂಸ್ಟೇ ಪರವಾನಗಿ ರದ್ದು

ಲೈಂಗಿಕ ದೌರ್ಜನ್ಯ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.

ಎರಡು ದಿನಗಳಲ್ಲಿ 2 ಅತ್ಯಾಚಾರ, ಒಂದು ಕೊಲೆ;  ಮಾಜಿ  IRS ಅಧಿಕಾರಿ ಮಗಳನ್ನು ಕೊಂದ  ಮನೆಕೆಲಸದವ!

ಎರಡು ದಿನಗಳಲ್ಲಿ 2 ಅತ್ಯಾಚಾರ, ಒಂದು ಕೊಲೆಗೈದ ಮಾಜಿ ಮನೆಕೆಲಸದಾತ

Crime News: 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ಆಗ್ನೇಯ ದೆಹಲಿಯ ಕೈಲಾಶ್ ಪೂರ್ವದಲ್ಲಿರುವ ತಮ್ಮ ಮನೆಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕಾ ಪ್ರದೇಶದ ಹೋಟೆಲ್ ಒಂದರಿಂದ 19 ವರ್ಷದ ಮಾಜಿ ಮನೆಕೆಲಸದಾತ ರಾಹುಲ್ ಎಂಬಾತನನ್ನು ಬಂಧಿಸಲಾಗಿದೆ.

Body Found: ದೇವನಹಳ್ಳಿಯ ಐಫೋನ್‌ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

ದೇವನಹಳ್ಳಿ ಐಫೋನ್‌ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶು ಶವ ಪತ್ತೆ

ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಹೊರಬಂದಿದ್ದ ನವಜಾತ ಶಿಶುವನ್ನು ಗಾಬರಿಯಲ್ಲಿ ತಾಯಿಯೇ ಕೊಂದು ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗುತ್ತಿದೆ. ಮದುವೆಯಾಗದೇ ಗರ್ಭಿಣಿಯಾಗಿದ್ದರಿಂದ ಮಹಿಳೆ ಭಯಗೊಂಡು ಮಗುವಿನ ಜೀವ ತೆಗೆದಿದ್ದಾಳೆ ಎಂದು ತಿಳಿದುಬಂದಿದ್ದು, ಪೊಲೀಸರು ಈಕೆಯನ್ನು ಪತ್ತೆ ಹಚ್ಚಿದ್ದಾರೆ.

ಸರ್ಕಾರ ಬದಲಾದರೂ ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ; ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ!

ಬಾಂಗ್ಲಾದೇಶದ ಸದರ್ ಉಪಜಿಲಾದ ಗುಡ್ಡಗಾಡು ಪ್ರದೇಶದಲ್ಲಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ನಯನ್ ದಾಸ್ (35) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಹಿಂದೂ ಹತ್ಯೆಯ ಘಟನೆ ಇದಾಗಿದೆ.

ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಬೊಲೆರೊ ಬೆಂಕಿಗೆ ಆಹುತಿ; 11 ಮಂದಿ ದುರ್ಮರಣ

ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊ ಬೆಂಕಿಗೆ ಆಹುತಿ

Road Accident: ಟ್ರಕ್ ನಿಯಂತ್ರಣ ತಪ್ಪಿ ಬಹು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಎರಡು ಟ್ರಕ್‌ಗಳ ನಡುವೆ ಸಿಲುಕಿಕೊಂಡ ಆಲ್ಟೊ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ, ಹಲವಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ಕಾರು ಕೂಡ ಡಿಕ್ಕಿ ಹೊಡೆದಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿತು.

Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಪತ್ನಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಪತಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಸಂಭವಿಸಿದ ಕೊಲೆ- ಆತ್ಮಹತ್ಯೆ ಎನ್ನಲಾಗುತ್ತಿದೆಯಾದರೂ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

ಅಣ್ಣನ ತರ ಎನ್ನುತ್ತಿದ್ದವಳು ಅವನ ಜತೆಯೇ ಓಡಿ ಹೋದಳು; ಬೆಂಗಳೂರಿನಲ್ಲಿ ಜಿಮ್ ಟ್ರೈನರ್‌ ಕಣ್ಣೀರು

ಅಣ್ಣನ ತರ ಎನ್ನುತ್ತಿದ್ದವಳು ಅವನ ಜತೆಯೇ ಓಡಿ ಹೋದಳು!; ಗಂಡ ಕಣ್ಣೀರು

ಬೆಂಗಳೂರಿನ ​ಜಿಮ್ ಟ್ರೈನರ್ ನಿತೇಶ್ ಯುವತಿಯೊಬ್ಬಳನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಈಗ ಇವರ ಜೀವನಕ್ಕೆ ಬೆಸ್ಟ್ ಫ್ರೆಂಡ್ ವಿಲನ್‌ ಆಗಿದ್ದಾನೆ. ಗಂಡನ ಸ್ನೇಹಿತನ ಜತೆಯೇ ಮಹಿಳೆ ಪರಾರಿಯಾಗಿದ್ದು, ನ್ಯಾಯಕ್ಕಾಗಿ ಪತಿ ಕಣ್ಣೀರಿಟ್ಟಿದ್ದಾರೆ.

Ranya Rao case: ಚಿನ್ನ ಕಳ್ಳಸಾಗಣೆ ಪ್ರಕರಣ; ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರನ್ಯಾ ರಾವ್‌ ರಿಲೀಸ್‌

ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರನ್ಯಾ ರಾವ್‌ ರಿಲೀಸ್‌

ದುಬೈನಿಂದ 14.2 ಕೆ.ಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಕಾಫಿಫೋಸಾ 3(1) ಸೆಕ್ಷನ್ ಅಡಿಯಲ್ಲಿ ಬಂಧನವಾಗಿದ್ದರಿಂದ ಜಾಮೀನು ಲಭಿಸಿದ್ದರೂ ಕಳೆದ ಒಂದು ವರ್ಷದಿಂದ ನಟಿ ಜೈಲಿನಲ್ಲೇ ಇರಬೇಕಾಗಿತ್ತು. ಇದೀಗ ನಟಿ ರನ್ಯಾ ರಾವ್, ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Belagavi News: ಮನೆಯಲ್ಲಿ ಸೀರೆ ಬಿಟ್ಟು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ!

ಮನೆಯಲ್ಲಿ ಸೀರೆ ಬಿಟ್ಟು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ!

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ದಂಪತಿ ನಡುವೆ ನೈಟಿ ಧರಿಸುವ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಪತಿಯ ತೀವ್ರ ವಿರೋಧದ ನಡುವೆಯೂ ನೈಟಿ ಧರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಗಂಡ ಬೆಂಕಿ ಹಚ್ಚಿದ್ದಾನೆ.

ಆರ್‌ಎಸ್‌ಎಸ್‌ ಜತೆ ನಂಟು ಹೊಂದಿರುವ ರಾಜಕಾರಣಿಗಳ ವಿರುದ್ಧ ಸಂಚು: ಇಬ್ಬರು ಭಯೋತ್ಪಾದಕರ ಬಂಧನ

ಗುಜರಾತ್‌ನಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

RSS linked politicians: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಮತ್ತು ಆರ್‌ಎಸ್‌ಎಸ್‌ ಜತೆ ನಂಟು ಹೊಂದಿರುವ ರಾಜಕಾರಣಿಗಳ ವಿರುದ್ಧ ದಾಳಿ ಮಾಡಲು ಯೋಜಿಸಿದ್ದ ಆರೋಪದ ಮೇಲೆ ಇಬ್ಬರು ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ದೇಶವನ್ನು ಬೆಚ್ಚಿ ಬೀಳಿಸಿದ ಮತ್ತೊಂದು ʼನೀಲಿ ಡ್ರಮ್' ಕೊಲೆ ಪ್ರಕರಣ: ಮುಸ್ಕಾನ್‌ನನ್ನು  ಗಲ್ಲಿಗೇರಿಸಿ ಎಂದು ನ್ಯಾಯಾಲಯದಲ್ಲಿ ಗೋಗೆರೆದ ಸೌರಭ್ ರಜಪೂತ್ ತಾಯಿ

'ನೀಲಿ ಡ್ರಮ್' ಕೊಲೆ ಪ್ರಕರಣ: ಅಪರಾಧಿಯನ್ನು ಗಲ್ಲಿಗೇರಿಸಲು ಒತ್ತಾಯ

2025ರಲ್ಲಿ ನಡೆದ 'ನೀಲಿ ಡ್ರಮ್' ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೌರಭ್ ರಜಪೂತ್ ಪತ್ನಿ ಮುಸ್ಕಾನ್ ರಜಪೂತ್ ಅನ್ನು ಗಲ್ಲಿಗೇರಿಸುವಂತೆ ಸೌರಭ್ ತಾಯಿ ನ್ಯಾಯಾಲಯದಲ್ಲಿ ಗೋಗೆರೆದ ಘಟನೆ ನಡೆದಿದೆ. ಪ್ರಕರಣದ ಕುರಿತು ವಿಚಾರಣೆಗೆ ಹಾಜರಾದ ಅವರು, ಈ ಸಂದರ್ಭದಲ್ಲಿ ಮಗನನ್ನು ನೆನೆದು ಭಾವುಕರಾಗಿ ಕಣ್ಣೀರು ಸುರಿಸಿದರು.

Victoria Hospital: ಮರ್ಮಾಂಗದ ಸರ್ಜರಿ ಬಳಿಕ ಹೊಲಿಗೆ ಹಾಕೋದನ್ನೇ ಮರೆತ್ರು; ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು!

ಮರ್ಮಾಂಗದ ಸರ್ಜರಿ ಬಳಿಕ ಹೊಲಿಗೆ ಹಾಕೋದನ್ನೇ ಮರೆತ ವೈದ್ಯರು; ರೋಗಿ ಸಾವು!

Bengaluru News: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ರೋಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಮರ್ಮಾಂಗದ ಶಸ್ತ್ರಚಿಕಿತ್ಸೆ ಬಳಿಕ ಹೊಲಿಗೆ ಹಾಕದ ಹಿನ್ನೆಲೆಯಲ್ಲಿ ರೋಗಿಯೊಬ್ಬರು ನೋವಿನಿಂದ ನರಳಾಡಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಟುಂಬಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

2006ರ ಮಾಲೆಗಾಂವ್ ಸ್ಫೋಟ ಪ್ರಕರಣ: 2 ದಶಕಗಳ ಬಳಿಕ ನಾಲ್ವರು ಆರೋಪಿಗಳ ಖುಲಾಸೆ

ಮಾಲೆಗಾಂವ್ ಸ್ಫೋಟ ಪ್ರಕರಣ: ಆರೋಪಿಗಳ ಖುಲಾಸೆ

ಬರೋಬ್ಬರಿ ಎರಡು ದಶಕಗಳ ಬಳಿಕ ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ಖುಲಾಸೆಗೊಳಿಸುತ್ತಿರುವುದಾಗಿ ಬಾಂಬೆ ಹೈಕೋರ್ಟ್ ತಿಳಿಸಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಒಟ್ಟು 37 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Ranya Rao Case: ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು; ಒಂದು ವರ್ಷದ ಬಳಿಕ ಜೈಲಿನಿಂದ ಬಿಡುಗಡೆ ಭಾಗ್ಯ

ನಟಿ ರನ್ಯಾರಾವ್‌ಗೆ ಬಿಗ್ ರಿಲೀಫ್; ಕೋರ್ಟ್‌ನಿಂದ ಜಾಮೀನು ಮಂಜೂರು

gold smuggling case: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿ, ಕಳೆದೊಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಅವರಿಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಸಂಜೆ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೂ ದೇವರ ಅವಹೇಳನ, ಮೈಮುಟ್ಟಿ ಕಿರುಕುಳ; ಬಗೆದಷ್ಟೂ ಹೊರ ಬೀಳುತ್ತಿದೆ ನಾಸಿಕ್‌ನ ಟಿಸಿಎಸ್ ಕಂಪನಿಯ ಕರ್ಮಕಾಂಡ

ಟಿಸಿಎಸ್‌ ಕಚೇರಿಯ ಕರಾಳತೆ ಬಿಚ್ಚಿಟ್ಟ ಸಂತ್ರಸ್ತರು

TCS Nashik Case: ನಾಸಿಕ್‌ನ ಟಿಸಿಎಸ್‌ ಕಂಪನಿಯಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತೆಯರ ಪೈಕಿ ಓರ್ವ ಮಹಿಳೆ ತಾವು ಅನುಭವಿಸಿದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸಂತ್ರಸ್ತರು ನೀಡಿದ ದೂರುಗಳ ಆಧಾರದ ಮೇಲೆ ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಇಂದೋರ್‌ನ ಉದ್ಯಮಿ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಪೊಲೀಸರು

ಉದ್ಯಮಿಯ ಮನೆಗೆ ಕನ್ನ ಹಾಕಿದ ಪೊಲೀಸರು

ಉದ್ಯಮಿಯೊಬ್ಬರ ಮನೆಯಿಂದ ಪೊಲೀಸರೇ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ. ವಾರೆಂಟ್ ಸಂಬಂಧಿಸಿ ದಾಳಿ ನಡೆಸಿದಾಗ ಪೊಲೀಸರು ಸುಮಾರು 35 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

Physical Abuse: ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lover murder case: 4.5 ಲಕ್ಷದ ಬೈಕ್‌ ಕೊಡಿಸಿದ ಪ್ರೇಯಸಿಯೇ ಕೈಕಾಲು ಕಟ್ಟಿಹಾಕಿ, ಬೆಂಕಿ ಹಚ್ಚಿ ಪ್ರಿಯಕರನ ಕೊಂದಳೇಕೆ?

4.5 ಲಕ್ಷದ ಬೈಕ್‌ ಕೊಡಿಸಹೊರಟ ಪ್ರೇಯಸಿಯೇ ಬೆಂಕಿ ಹಚ್ಚಿ ಕೊಂದಳೇಕೆ?

ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎನ್ನಲಾಗಿದೆ.

Shivamogga Trial Blast Case: ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ; ಅಪರಾಧಿ ಅರಾಫತ್ ಅಲಿಗೆ 6 ವರ್ಷ ಜೈಲು ಶಿಕ್ಷೆ

ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ; ಅರಾಫತ್ ಅಲಿಗೆ 6 ವರ್ಷ ಜೈಲು

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯನ್ನು ಎನ್ಐಎ ಅಧಿಕಾರಿಗಳು ದೆಹಲಿಯಲ್ಲಿ 2023ರಲ್ಲಿ ಬಂಧಿಸಿದ್ದರು. ಈತ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದೀಗ ಈತನಿಗೆ 6 ವರ್ಷ ಜೈಲು ಶಿಕ್ಷೆ, 47 ಸಾವಿರ ರೂ. ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

Loading...