ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರೈಂ

ಒಂದು ಕಾಗದ ಚೂರಿನಿಂದ ಕೊಲೆ ಪ್ರಕರಣ ಭೇದಿಸಿದ ಸ್ನಿಫರ್ ನಾಯಿ

ಕೊಲೆ ಪ್ರಕರಣ ಭೇದಿಸಿದ ಸ್ನಿಫರ್ ನಾಯಿ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಗ್ರಾಮಸ್ಥರನ್ನೆಲ್ಲ ಬೆಚ್ಚಿ ಬೀಳಿಸಿತ್ತು. 70 ವರ್ಷದ ರೈತನೊಬ್ಬನ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಯಾವುದೇ ಕುರುಹುಗಳಿಲ್ಲದ ಈ ಕೊಲೆ ಪ್ರಕರಣವನ್ನು ಭೇದಿಸಿದ ಸ್ನಿಫರ್ ನಾಯಿ ಈಗ ಹೀರೋ ಎಂದು ಗುರುತಿಸಿಕೊಂಡಿದೆ. ಕಾಗದದ ಚಿಕ್ಕ ತುಂಡಿನಿಂದ ಬೆನ್ನು ಹತ್ತಿದ ನಾಯಿ ಕೊಲೆ ಪ್ರಕರಣ ಭೇದಿಸಿದ್ದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Viral video: ರಾಕ್ಷಸಿಯಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತೆಯ ಇನ್ನೊಂದು ವಿಡಿಯೊ ಬಯಲು

ರಾಕ್ಷಸಿಯಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತೆಯ ಇನ್ನೊಂದು ವಿಡಿಯೊ ಬಯಲು

ಸುಜಾತಾ ಹಂಡಿ ವ್ಯಕ್ತಿಯೊಬ್ಬರ ಮೇಲೆ ಮೃಗೀಯ ವರ್ತನೆ ತೋರಿದ್ದ 3 ವರ್ಷಗಳ ಹಳೆಯ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಈಕೆ ರಾಕ್ಷಸಿಯಂತೆ ವರ್ತಿಸುತ್ತಿರುವುದು ಕಂಡುಬಂದಿದೆ. ಯುವಕನೊಬ್ಬನನ್ನು ರೂಮಿನಲ್ಲಿ ಕೂಡಿ ಹಾಕಿ ಸುಜಾತ ಹಂಡಿ ಬೆಲ್ಟ್ ಹಿಡಿದು ಆತನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾಳೆ.

Boiler Blast: ಬೈಲಹೊಂಗಲ ಸಕ್ಕರೆ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಬೈಲಹೊಂಗಲ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸಿಡಿದು ಕುದಿಯುವ ಕಬ್ಬಿನ ಹಾಲು ಮೈಮೇಲೆ ಬಿದ್ದು 8 ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇದುವರೆಗೆ 7 ಮಂದಿ ಮೃತಪಟ್ಟಿದ್ದಾರೆ. ಒಬ್ಬನನ್ನು ಹೊರತುಪಡಿಸಿ ಯಾರಿಗೂ ಪರಿಹಾರ ದೊರೆತಿಲ್ಲ, ಪೊಲೀಸರೂ ಕಠಿಣ ಕ್ರಮ ಕೈಗೊಂಡಿಲ್ಲ.

2 ಕೋಟಿ ರುಪಾಯಿ ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹೃದಯಾಘಾತದ ನಾಟಕವಾಡಿದ ಮಹಿಳೆ

ಪ್ರಿಯಕರನೊಂದಿಗೆ ಸೇರಿ ಪತಿಗೆ ಮುಹೂರ್ತ ಇಟ್ಟ ಪತ್ನಿ

ಪ್ರಿಯಕರನ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಬೋರ್ಗಂ (ಕೆ) ಗ್ರಾಮದ ಮಕ್ಳೂರು ಪ್ರದೇಶದ ನಿವಾಸಿಯಾದ ಪಾಳ್ನಾಟಿ ರಮೇಶ್ ಹತ್ಯೆಯಾದ ವ್ಯಕ್ತಿ. ಹಣದಾಸೆಗಾಗಿ ಈ ದುಷ್ಕೃತ್ಯ ಎಸಗಿದ್ದು, 2 ಕೋಟಿ ರುಪಾಯಿ ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹೃದಯಾಘಾತದ ನಾಟಕವಾಡಿದ್ದಾಳೆ.

ನಕಲಿ ದಾಖಲೆ ಬಳಸಿ 30 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಶಿಕ್ಷಕಿಯಾಗಿದ್ದ ಪಾಕಿಸ್ತಾನಿ ಮಹಿಳೆ; ಸಿಕ್ಕಿಬಿದ್ದಿದ್ದು ಹೇಗೆ?

ಉತ್ತರಪ್ರದೇಶದ ಶಾಲೆಯಲ್ಲಿ ಪಾಕಿಸ್ತಾನಿ ಶಿಕ್ಷಕಿ

ನಕಲಿ ದಾಖಲೆ ಬಳಸಿ ಪಾಕಿಸ್ತಾನಿ ಮಹಿಳೆಯೊಬ್ಬರು ಉತ್ತರಪ್ರದೇಶದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ. ಶಿಕ್ಷಕಿಯನ್ನು ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಮರೆಮಾಡಿದ್ದಕ್ಕಾಗಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೀರೆಯಿಂದ ಬಯಲಾಯ್ತು ನಿಗೂಢ ಕೊಲೆಯ ರಹಸ್ಯ; ಇಲ್ಲಿದೆ ತನಿಖೆಯ ಇಂಚಿಂಚು ಮಾಹಿತಿ

ನಿಗೂಢ ಅಸ್ಥಿಪಂಜರದ ರಹಸ್ಯ ಬೇಧಿಸಿದ ಸೀರೆ

ಮಹಿಳೆಯ ಕೊಲೆಯ ಪ್ರಕರಣವೊಂದನ್ನು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಶಂಕಿತ ಅಸ್ಥಿಪಂಜರವನ್ನು ಗುರುತಿಸಲು ಒಂದು ಸೀರೆ ಮಹತ್ವದ ಸುಳಿವಾಗಿ ಪರಿಣಮಿಸಿದೆ. ಅಸ್ಥಿಪಂಜರದ ಬಳಿ ಪತ್ತೆಯಾದ ಸೀರೆಯ ಲಕ್ಷಣಗಳು ಮತ್ತು ವಿವರಗಳು ಮಹಿಳೆಯ ಗುರುತು ದೃಢಪಡಿಸಲು ಸಹಾಯ ಮಾಡಿದ್ದು, ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿವೆ.

ಲಕ್ಷ ಲಕ್ಷ ಹೊತ್ತೊಯ್ಯುತ್ತಿದ್ದ ಭಿಕ್ಷುಕ ಅಪಘಾತದಲ್ಲಿ ಸಾವು, ಈತನ ಬಳಿ ಇದ್ದ ಹಣವೆಷ್ಟು ಗೊತ್ತೇ?

ಲಕ್ಷಾಧಿಪತಿಯಾಗಿದ್ದ ಭಿಕ್ಷುಕ ಅಪಘಾತದಲ್ಲಿ ಸಾವು

ನಿಷೇಧಿತ 2,000 ರೂ. ನೋಟುಗಳು, ವಿದೇಶಿ ಕರೆನ್ಸಿಗಳು ಸೇರಿದಂತೆ 4 ಲಕ್ಷ ರೂ. ಗೂ ಅಧಿಕ ಹಣ ಆಲಪ್ಪುಳದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಿಕ್ಷುಕನಲ್ಲಿ ಪತ್ತೆಯಾಗಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಪ್ರದೇಶದಲ್ಲಿ ಆತ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಅಪಘಾತದ ಬಳಿಕ ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಚಲಿಸುವ ಕಾರಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ಪೊಲೀಸ್ ಅಧಿಕಾರಿಯಿಂದಲೇ ರಾಕ್ಷಸಿ ಕೃತ್ಯ

ಪೊಲೀಸ್ ಅಧಿಕಾರಿಯಿಂದಲೇ ಬಾಲಕಿ ಮೇಲೆ ಅತ್ಯಾಚಾರ

physical assaulted: ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಅಧಿಕಾರಿಯೇ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ಈ ಭೀಕರ ಅಪರಾಧದಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chitradurga News: ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ಘಟನೆ ನಡೆದಿದೆ. ಮದುವೆ ವಿಚಾರಕ್ಕೆ ತಂದೆಯೊಂದಿಗೆ ಪುತ್ರ ನಿತ್ಯ ಜಗಳ ಮಾಡುತ್ತಿದ್ದ. ಆದರೆ, ಮದುವೆ ಮಾಡಿಸಲು ಒಪ್ಪದ ಹಿನ್ನೆಲೆಯಲ್ಲಿ ಮಲಗಿದ್ದ ವೇಳೆ ತಂದೆ ತಲೆಗೆ ರಾಡ್‌ನಿಂದ ಹೊಡೆದು ಪುತ್ರ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನ ಕಾರು ಚಾಲಕನಿಗೆ ಇರಿದ ನಾಲ್ವರು ಆರೋಪಿಗಳ ಸೆರೆ

ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನ ಚಾಲಕನಿಗೆ ಇರಿದ ನಾಲ್ವರು ಆರೋಪಿಗಳ ಸೆರೆ

ಕಾರು ಚಾಲಕ ಬಸವಂತ ಕಡಲೇಕರ್ ಸ್ನೇಹಿತ ಮದನ್ ಈ ಕುರಿತು ದೂರು ನೀಡಿದ್ದರು. ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಮದನ್ ನೀಡಿದ ದೂರಿನ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ತಿಳಿಸಿದರು. ಜನವರಿ 6ರಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರು ಚಾಲಕ ಬಸವಂತಗೆ ಚಾಕು ಇರಿದು ಎಸ್ಕೇಪ್ ಆಗಿದ್ದರು.

Self Harming: ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಪೇದೆಗಳ ಆತ್ಮಹತ್ಯೆ, ಠಾಣೆಯಲ್ಲೇ ನೇಣು ಹಾಕಿಕೊಂಡ ಕಾನ್‌ಸ್ಟೇಬಲ್

ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಪೇದೆಗಳ ಆತ್ಮಹತ್ಯೆ

ರಾಜ್ಯದಲ್ಲಿ ಇಬ್ಬರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮೊಹಮ್ಮದ್ ಝಕ್ರಿಯ ಎಂಬ ಸಂಚಾರಿ ಪೊಲೀಸ್‌ ಪೇದೆ (police constable) ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮದ್ದೂರಿನಲ್ಲಿ (Madduru) ರಮೇಶ್‌ ಎಂಬವರು ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ತೆಗೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದ ಶೂಟರ್ ಮೇಲೆ ಅತ್ಯಾಚಾರ ಆರೋಪ; ರಾಷ್ಟ್ರೀಯ ತರಬೇತುದಾರ ಅಮಾನತು

ಶೂಟರ್ ಮೇಲೆ ಅತ್ಯಾಚಾರ ಆರೋಪ; ರಾಷ್ಟ್ರೀಯ ತರಬೇತುದಾರ ಅಮಾನತು

coach Ankush Bharadwaj: ಭಾರದ್ವಾಜ್ ವಿರುದ್ಧ ಪೊಲೀಸರು ಫರಿದಾಬಾದ್‌ನ ಎನ್‌ಐಟಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Self Harming: ಹೆಂಡತಿ ಇದ್ದರೂ ತಂಗಿಯ ಸಂಗ ಬೆಳೆಸಿದ ಅಣ್ಣ, ಸಂಬಂಧ ದುರಂತದಲ್ಲಿ ಕೊನೆ

ಹೆಂಡತಿ ಇದ್ದರೂ ತಂಗಿಯ ಸಂಗ ಬೆಳೆಸಿದ ಅಣ್ಣ, ಸಂಬಂಧ ದುರಂತದಲ್ಲಿ ಕೊನೆ

ರಾಮಲಕ್ಷ್ಮಿ ಹಾಗೂ ಕೃಷ್ಣ ಸಂಬಂಧದಲ್ಲಿ ಅಣ್ಣ ತಂಗಿ ಆಗಿದ್ದಾರೆ. ಆದರೆ ಇವರಿಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಗಂಡ ಹೆಂಡತಿ ಅಂತ ಹೇಳಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ನಿನ್ನೆ ಮನೆಯಲ್ಲಿ ರಾಮಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.

Self Harming: ಇನ್ನೊಬ್ಬ ಪೇದೆಯಿಂದ ಕಿರುಕುಳ, ಪೊಲೀಸ್‌ ಪೇದೆ ಆತ್ಮಹತ್ಯೆ

ಇನ್ನೊಬ್ಬ ಪೇದೆಯಿಂದ ಕಿರುಕುಳ, ಪೊಲೀಸ್‌ ಪೇದೆ ಆತ್ಮಹತ್ಯೆ

ಮೃತರ ಪತ್ನಿ ಪುಷ್ಪಲತಾ ಎಂಬವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ರಮೇಶ್ ಅವರಿಗೆ ಪೇದೆಯಾದ ಮಹೇಶ್ ಎಂಬವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಎಷ್ಟೋ ಬಾರಿ ಗಲಾಟೆ ಕೂಡಾ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ಬಂದಿದ್ದ ಬೆಂಗಳೂರಿನ ಯುವಕ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಬೆಂಗಳೂರಿನಲ್ಲಿ 16ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

Student suicide in Bengaluru: ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ 26 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ವಾಪಸ್ ಆದ ಬೆನ್ನಲ್ಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಸ್ತೆ ಅಪಘಾತದ ಬಳಿಕ ಕಾರಿನಲ್ಲಿದ್ದ ಮಾದಕ ದ್ರವ್ಯ ಪತ್ತೆ: ಬರೇಲಿ ಹಿಂಸಾಚಾರ ಆರೋಪಿಯ ಮಗನ ಬಂಧನ

ಬರೇಲಿ ಹಿಂಸಾಚಾರ ಆರೋಪಿಯ ಮಗನ ಬಂಧನ

Drugs seized: ಲಖನೌ–ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದ ವೇಳೆ ಕಾರಿನಿಂದ ಮಾದಕ ದ್ರವ್ಯ ಮತ್ತು ಸಿರಿಂಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ಬರೇಲಿ ಹಿಂಸಾಚಾರದ ಆರೋಪಿಯ ಪುತ್ರ ಫರ್ಮಾನ್ ರಜಾ ಖಾನ್‍ನನ್ನು ಈ ಸಂಬಂಧ ಮಂಗಳವಾರ ತಡರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು; ಕಡಿಮೆ ಬೆಲೆಯ ಸ್ಫೋಟಕ, ಡ್ರೋನ್ ತಯಾರಿಸಿದ ಭಯೋತ್ಪಾದಕರು

ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು

Republic Day threat: ಗಣರಾಜ್ಯೋತ್ಸವ ದಿನದ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಯೋತ್ಪಾದನಾ ಅಪಾಯದ ಬಗ್ಗೆ ಕೇಂದ್ರ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಕಡಿಮೆ ವೆಚ್ಚದ ಸ್ಫೋಟಕಗಳು, ಡ್ರೋನ್‌ಗಳು ಮತ್ತು ಹೊಸ ತಲೆಮಾರಿನ ಐಇಡಿ‌ಗಳು ಬಳಸಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Physical Assault: ಕ್ಯಾಬ್ ಚಾಲಕನಿಗೆ ಬಾಡಿಗೆ ನೀಡದೆ ಸುಳ್ಳು ಕಿರುಕುಳದ ಆರೋಪ ಹೊರಿಸಿದ ಮಹಿಳೆ!

ಕ್ಯಾಬ್ ಬಾಡಿಗೆ ವಿವಾದ; ಚಾಲಕನ ಮೇಲೆ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ

ಗುರುಗ್ರಾಮ್‌ ನಲ್ಲಿ ಅಚ್ಚರಿ ಮೂಡಿಸುವ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳು ಹಲವು ಗಂಟೆಗಳ ಕಾಲ ಕ್ಯಾಬ್‌ನಲ್ಲಿ ಸಂಚರಿಸಿದ ಬಳಿಕ ಬಾಡಿಗೆ ಹಣ ಪಾವತಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ಪ್ರಕರಣದಲ್ಲಿ ನುಹ್‌ ಜಿಲ್ಲೆಯ ಧಾನಾ ಗ್ರಾಮದ ನಿವಾಸಿ ಜಿಯಾವುದ್ದೀನ್‌ ಸಂತ್ರಸ್ತ ಚಾಲಕನಾಗಿದ್ದಾನೆ.

Ballari Firing: ಬಳ್ಳಾರಿ ಗಲಾಟೆಗೆ ಇನ್ನೊಂದು ತಲೆದಂಡ, ಐಜಿ ವರ್ತಿಕಾ ಕಟಿಯಾರ್‌ ವರ್ಗ

ಬಳ್ಳಾರಿ ಗಲಾಟೆಗೆ ಇನ್ನೊಂದು ತಲೆದಂಡ, ಐಜಿ ವರ್ತಿಕಾ ಕಟಿಯಾರ್‌ ವರ್ಗ

ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್‌ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ- ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್‌ ಅವರನ್ನ ಸರ್ಕಾರ ವರ್ಗಾವಣೆಗೊಳಿಸಿದೆ.

Crime News: ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತದೆಯೆಂಬ ದುರಾಸೆಯಿಂದ ಈ ತಂದೆ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ. ಆಕೆಯ ಅಜ್ಜಿ ಕೂಡ ಈ ಕೃತ್ಯಕ್ಕೆ ಸಹಕರಿಸಿದ್ದಾಳೆ. ಇವರಿಬ್ಬರೂ ಹಾಗೂ ಇವರಿಂದ ಬಾಲಕಿಯನ್ನು ಪಡೆದುಕೊಂಡ ಮಾಂಸ ದಂಧೆ ಕಿಂಗ್‌ಪಿನ್‌ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಈ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ವಿದ್ಯಾರ್ಥಿನಿಗೆ ನಮಾಜ್ ಮಾಡಲು ಒತ್ತಾಯ; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ, ಪೊಲೀಸರಿಂದ ತನಿಖೆ

ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿನಿಗೆ ನಮಾಜ್ ಮಾಡಲು ಒತ್ತಾಯ

Student forced to offer namaz: ಮಹಾರಾಷ್ಟ್ರದ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ಶಂಕಿತ ರ‍್ಯಾಗಿಂಗ್‌ಗೆ ಸಂಬಂಧಿಸಿದ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ವಿದ್ಯಾರ್ಥಿನಿಯೊಬ್ಬಳು ಸಹಪಾಠಿಯನ್ನು ನಮಾಜ್ ಮಾಡಲು ಒತ್ತಾಯಿಸಿದ್ದಾಳೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣವು ಉದ್ವಿಗ್ನತೆಗೆ ಕಾರಣವಾಗಿದೆ.

ಅಮೃತಸರ ಗ್ರಾಮದ ಮುಖ್ಯಸ್ಥನ ಕೊಲೆ ಆರೋಪಿಗೆ ಗುಂಡೇಟು; ಎನ್‍ಕೌಂಟರ್‌ನಲ್ಲಿ ಹತ್ಯೆ

ಅಮೃತಸರ ಗ್ರಾಮದ ಮುಖ್ಯಸ್ಥನ ಕೊಲೆ ಆರೋಪಿಗೆ ಗುಂಡೇಟು

Crime News: ಅಮೃತಸರ ಜಿಲ್ಲೆಯ ಗ್ರಾಮ ಮುಖ್ಯಸ್ಥನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪೊಲೀಸ್ ಎನ್‍ಕೌಂಟರ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ. ಭಿಖಿವಿಂಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಆರೋಪಿ ಅಲ್ಲಿ ಇರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ತರಣ್ ತರಣ್ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್ ವಿರೋಧಿ ಕಾರ್ಯಪಡೆ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದವು.

ಮಸೀದಿಯಲ್ಲಿ ಚಾಕುವಿನಿಂದ ಇರಿದು ಕಾಂಗ್ರೆಸ್ ಉಪಾಧ್ಯಕ್ಷನ ಹತ್ಯೆ; ಆರೋಪಿ ಬಂಧನ

ಹಳೆಯ ದ್ವೇಷ; ಚಾಕುವಿನಿಂದ ಇರಿದು ಕಾಂಗ್ರೆಸ್ ಉಪಾಧ್ಯಕ್ಷನ ಹತ್ಯೆ

Hidayatullah Patel: ದಾಳಿಕೋರ ಹರಿತವಾದ ಆಯುಧವನ್ನು ಬಳಸಿ ಪಟೇಲ್ ಅವರ ಕುತ್ತಿಗೆ ಮತ್ತು ಎದೆಯ ಮೇಲೆ ಗಂಭೀರ ಗಾಯಗಳನ್ನು ಉಂಟುಮಾಡಿದ್ದು, ಇದರಿಂದಾಗಿ ತೀವ್ರ ರಕ್ತಸ್ರಾವವಾಗಿದೆ ಎಂದು ಅವರು ಹೇಳಿದ್ದಾರೆ. ಹಳೆಯ ದ್ವೇಷದಿಂದ ಈ ಹಲ್ಲೆ ನಡೆದಿದೆ ಎಂದು ನಂಬಲಾಗಿದೆ.

Self Hraming: ಮದುವೆಯಾಗಲು ಒಪ್ಪದ ಯುವತಿ, ಪುರೋಹಿತ ಆತ್ಮಹತ್ಯೆ

ಮದುವೆಯಾಗಲು ಒಪ್ಪದ ಯುವತಿ, ಪುರೋಹಿತ ಆತ್ಮಹತ್ಯೆ

ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧವನ್ನು ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಾಯ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

Loading...