ಇಫ್ತಾರ್ ಕೂಟ ಆಯೋಜಿಸಿದ್ದವರ ಬಂಧನ
ಇಫ್ತಾರ್ ಕೂಟದ ಬಳಿಕ ಯುವಕರ ಗುಂಪೊಂದು ದೋಣಿಯಲ್ಲಿ ಬಂದು ವಾರಣಾಸಿಯ ಗಂಗಾ ನದಿಗೆ ಮಾಂಸದ ತ್ಯಾಜ್ಯಗಳನ್ನು ಎಸೆದು ಹೋಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು 14 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.