ಹೊಸ ಕಾರಿನೊಂದಿಗೆ ಪೂಜೆಗೆ ಬಂದವನ ಬರ್ಬರ ಕೊಲೆ, ಕಾರಿಗೂ ಬೆಂಕಿ
ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಮೃತ ದುರ್ದೈವಿ. ಈ ಘಟನೆಯ ಕ್ರೌರ್ಯ ಕಂಡು ಕನ್ನೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮೃತನ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿಯೇ ಕೊಲೆಗೈದ ಆರೋಪಿ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.