ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರೈಂ

Cyber Crime: ನಕಲಿ KYC ಬಳಸಿ ಬ್ಯಾಂಕ್‌ ಖಾತೆ ಹ್ಯಾಕ್‌; 55 ಲಕ್ಷ ರೂ ಕಳೆದುಕೊಂಡ ಸಂಸದ

ಸೈಬರ್‌ ಕ್ರೈಂ 55 ಲಕ್ಷ ರೂ ಕಳೆದುಕೊಂಡ ಸಂಸದ

ಆನ್‌ಲೈನ್ ಹಣಕಾಸು ವಂಚನೆಯ ಪ್ರಕರಣದಲ್ಲಿ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ನಾಲ್ಕು ಬಾರಿ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ನಿಷ್ಕ್ರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಗೆ ಸೈಬರ್ ಅಪರಾಧಿಗಳು ನಕಲಿ ದಾಖಲೆಗಳನ್ನು ಬಳಸಿ 55 ಲಕ್ಷ ರೂ.ಗಳಿಷ್ಟು ಹಣವನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ.

Crime News: ಅಬ್ಬಾ... ಎಂಥಾ ಘೋರ ಘಟನೆ! ಸಲಿಂಗ ಪ್ರೇಮಕ್ಕೆ 5ತಿಂಗಳ ಮಗುವನ್ನೇ ಕೊಂದ ಪಾಪಿ ತಾಯಿ

ಸಲಿಂಗ ಪ್ರೇಮಕ್ಕೆ 5ತಿಂಗಳ ಮಗುವನ್ನೇ ಕೊಂದ ಪಾಪಿ ತಾಯಿ

5-Month-Old Baby Killed: ಐದು ತಿಂಗಳ ಮಗುವನ್ನು ಸಲಿಂಗ ಜೋಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ನವೆಂಬರ್ 2ರಂದು ನಡೆದಿದೆ. ಮಗುವಿನ ತಾಯಿ ಹಾಗೂ ಆಕೆಯ ಜೊತೆಗಾತಿ ಸೇರಿ ಶಿಶುವನ್ನು ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

1993 Mumbai Blast: ಮುಂಬೈ ಸರಣಿ ಸ್ಪೋಟದ ಆರೋಪಿ ಟೈಗರ್ ಮೆಮನ್ ಆಸ್ತಿ ಹರಾಜು!

ಮುಂಬೈ ಸ್ಪೋಟದ ಆರೋಪಿ ಆಸ್ತಿಗಳು ಹರಾಜು!

Tiger Memon: 1993ರ ಮಾರ್ಚ್ 12ರಂದು ನಡೆದ ಮುಂಬೈ ವಿವಿಧ ಭಾಗಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟೈಗರ್ ಮೆಮನ್ ಮತ್ತು ಆತನ ಕುಟುಂಬಕ್ಕೆ ಸೇರಿದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಆಸ್ತಿ ಮುಟ್ಟುಗೋಲು ಪ್ರಾಧಿಕಾರದ ವಿಶೇಷ ಟಿಎಡಿಎ ನ್ಯಾಯಾಲಯವು ಇದನ್ನು ಶೀಘ್ರದಲ್ಲೇ ಹರಾಜು ಹಾಕುವ ಸಾಧ್ಯತೆ ಇದೆ.

Bomb Threat: ಖ್ಯಾತ ನಟನ ಮನೆಗೆ ಬಾಂಬ್‌ ಬೆದರಿಕೆ; ಹೈ ಅಲರ್ಟ್‌ ಘೋಷಣೆ

ಖ್ಯಾತ ನಟನ ಮನೆಗೆ ಬಾಂಬ್‌ ಬೆದರಿಕೆ

ತಮಿಳು ನಟ ಅರುಣ್ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಸದ್ಯ ಪೊಲೀಸರು ಅವರ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಎಚ್ಚರಿಕೆಯ ನಂತರ, ಬಾಂಬ್ ಪತ್ತೆ ದಳವು ಪೊಲೀಸರೊಂದಿಗೆ ತ್ವರಿತವಾಗಿ ಸ್ಥಳಕ್ಕೆ ತಲುಪಿ ಆವರಣದ ವಿವರವಾದ ಪರಿಶೀಲನೆ ನಡೆಸಿತು. ಇಲ್ಲಿಯವರೆಗೆ ಯಾವುದೇ ಸ್ಫೋಟಕ ಸಾಧನ ಪತ್ತೆಯಾಗಿಲ್ಲ.

Drugs seize: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಪತ್ತೆ, ನಾಲ್ವರ ಸೆರೆ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 53 ಕೋಟಿ ರು. ಡ್ರಗ್ಸ್ ಪತ್ತೆ, ನಾಲ್ವರ ಸೆರೆ

Drugs seize in kempegowda airport: ವಿದೇಶದಿಂದ ಬರುವ ವೇಳೆ ಬ್ಯಾಗ್‌ಗಳಲ್ಲಿ ಹೈಡ್ರೋ ಗಾಂಜಾವನ್ನು ಅಡಗಿಸಿ ತಂದಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಗ್‌ನಂತೆ ಕಾಣುತ್ತಿತ್ತು. ಆದರೆ ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ ಸೇರಿ ಕೆಲ ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ಡ್ರಗ್ಸ್ ಮಾಫಿಯಾ ಸದಸ್ಯರು ತಯಾರಿಸುತ್ತಾರೆ. ಆನ್‌ಲೈನ್ ಮೂಲಕವೇ ಆ ಗಾಂಜಾವನ್ನು ತರಿಸಿಕೊಳ್ಳುತ್ತಾರೆ. ಇದರ ಬೆಲೆ1 ಕೆಜಿ 1 ಕೋಟಿ ರು. ಇದೆ.

Physical Assault: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಪ್ರಿಯಕರ ಮತ್ತವನ ಗೆಳೆಯನಿಂದಲೇ ಬಾಲಕಿ ಮೇಲೆ ಅತ್ಯಾಚಾರ

ಪ್ರಿಯಕರ ಮತ್ತವನ ಗೆಳೆಯನಿಂದಲೇ ಬಾಲಕಿ ಮೇಲೆ ಅತ್ಯಾಚಾರ

ಕಾರ್ಖಾನೆಯಲ್ಲಿ ಕೆಲಸ ಮಾಡುವ ತಾಯಿ, ವಿಮಲ್ ತನ್ನ ಮಗಳಿಗೆ ಆಗ್ರಾ ಎಕ್ಸ್‌ಪ್ರೆಸ್‌ವೇ ಬಳಿ ವಾಸಿಸುತ್ತಿರುವುದಾಗಿ ಹೇಳಿದ್ದರು. ಅಕ್ಟೋಬರ್ 10 ರಂದು ವಿಮಲ್ ಆಹ್ವಾನಿಸಿದ ನಂತರ ಹುಡುಗಿ ರಾತ್ರಿ 10:00 ಗಂಟೆಗೆ ಮನೆಯಿಂದ ಹೊರಟುಹೋಗಿದ್ದಳು ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ. ಆರೋಪಿಗಳು ಸರದಿಯಂತೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

Ragging Case: ಸೈನಿಕ ಶಾಲೆಯ ವಿದ್ಯಾರ್ಥಿ ಶವವಾಗಿ ಪತ್ತೆ; ರ‍್ಯಾಗಿಂಗ್ ಎಂದು ದೂರು ದಾಖಲಿಸಿದ ಕುಟುಂಬ

ಸೈನಿಕ ಶಾಲೆಯ ವಿದ್ಯಾರ್ಥಿ ಶವವಾಗಿ ಪತ್ತೆ!

ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಸೈನಿಕ್ ಶಾಲೆಯಲ್ಲಿ 7 ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಕೆಲವು ದಿನಗಳ ನಂತರ, ಆತನ ಸಹೋದರಿ, ಆತನ ಸಾವಿಗೆ ಹಿಂದಿನ ರಾತ್ರಿ ಹಿರಿಯ ವಿದ್ಯಾರ್ಥಿಗಳು ಆತನನ್ನು ಹಿಂಸಿಸಿ, ಬೆದರಿಸಿದ್ದರು ಎಂದು ಆರೋಪಿಸಿದ್ದಾರೆ.

Bomb threat: ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ : ಮಹಿಳಾ ಟೆಕ್ಕಿ ಆರೆಸ್ಟ್

ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ: ಭಗ್ನಪ್ರೇಮಿ ಮಹಿಳಾ ಟೆಕ್ಕಿ ಸೆರೆ

Bengaluru Crime news: ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ರೆನೆ ಜೋಶಿಲ್ದಾ ಎನ್ನುವ ಮಹಿಳಾ ಟೆಕ್ಕಿಯನ್ನು ಆರೆಸ್ಟ್ ಮಾಡಿದ್ದಾರೆ. ಈಕೆ ಬೆಂಗಳೂರಿನ ಶಾಲೆಗಳಿಗೆ, ಜೊತೆಗೆ ಚೆನ್ನೈ, ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾಳೆ.

Zameer Ahmed: ಜೋಳದ ವ್ಯಾಪಾರಿಗೆ ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

Complaint against Zameer Ahmed: ವಂಚನೆ ಮಾಡಿದ ವ್ಯಕ್ತಿಯ ಪರವಾಗಿ ಜಮೀರ್ ಅಹ್ಮದ್ ನಿಂತಿರುವ ಆರೋಪ ಕೇಳಿ ಬಂದಿತ್ತು. ಹೈದರಾಬಾದ್ ವ್ಯಕ್ತಿಗೆ ಸಹಕರಿಸುವಂತೆ ಪೊಲೀಸ್‌ ಅಧಿಕಾರಿಗೆ ಜಮೀರ್ ಅಹ್ಮದ್ ಫೋನ್ ಕರೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೂರು ನೀಡಿದ್ದಾರೆ.

Kidnap attempt: ಕಿಡ್ನಾಪರ್ಸ್‌ಗೆ ಚಳ್ಳೆಹಣ್ಣು ತಿನ್ನಿಸಿ ಬಾಲಕಿ ಗ್ರೇಟ್‌ ಎಸ್ಕೇಪ್‌!

ಪೊಲೀಸ್ ಠಾಣೆಯ ಬಳಿಯೇ ಬಾಲಕಿ ಕಿಡ್ನಾಪ್‌ಗೆ ಯತ್ನ

Kidnap attempt near police station: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಧೈರ್ಯಶಾಲಿ ಹದಿಹರೆಯದ ಬಾಲಕಿಯೊಬ್ಬಳು ತನ್ನ ಅಪಹರಣ ಯತ್ನವನ್ನು ವಿಫಲಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯ ಹತ್ತಿರವೇ ಈ ಘಟನೆ ನಡೆದಿದ್ದು, ಆಘಾತ ತಂದಿದೆ. ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿಯನ್ನು ಬಲವಂತವಾಗಿ ಎಳೆದು ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಬಾಲಕಿ ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾಳೆ.

WhatsApp RTO challan scam: ವಾಟ್ಸ್ಯಾಪ್‌ನಲ್ಲಿ ಹೊಸ ವಂಚನೆ, ಆರ್‌ಟಿಒ ಚಲನ್‌ ಹೆಸರಿನಲ್ಲಿ ಧೋಖಾ

ವಾಟ್ಸ್ಯಾಪ್‌ನಲ್ಲಿ ಹೊಸ ವಂಚನೆ, ಆರ್‌ಟಿಒ ಚಲನ್‌ ಹೆಸರಿನಲ್ಲಿ ಧೋಖಾ

RTO challan scam:‌ ನಿಮಗೆ ಬರುವ ಈ ಫೈಲ್ ಅನ್ನು ತೆರೆದ ಕೂಡಲೇ ನಿಮ್ಮ ಫೋನ್‌ಗೆ ಮಾಲ್‌ವೇರ್‌ ಅಪಾಯ ಸಂಭವಿಸಬಹುದು. ಈ ಸಂದೇಶ ಸಾಮಾನ್ಯವಾಗಿ RTO E Challan.apk ಅಥವಾ Mparivahan.apk ಹೆಸರಿನ ಫೈಲ್ ಅನ್ನು ಹೊಂದಿರುತ್ತದೆ. ನೀವು ಅದನ್ನು ತೆರೆದ ನಂತರ, ಒಳಗೆ ಅಡಗಿರುವ ಮಾಲ್‌ವೇರ್ ಹ್ಯಾಕರ್‌ಗಳಿಗೆ ನಿಮ್ಮ ಸಾಧನಕ್ಕೆ ರಿಮೋಟ್ ಪ್ರವೇಶವನ್ನು ನೀಡುತ್ತದೆ. ಇದರಿಂದ ಸೈಬರ್ ಅಪರಾಧಿಗಳಿಗೆ ನಿಮ್ಮ ವೈಯಕ್ತಿಕ ಡೇಟಾ, ಬ್ಯಾಂಕ್ ವಿವರಗಳಿಗೆ ಪ್ರವೇಶ ಸಿಗುತ್ತದೆ. ಅವನ್ನು ಅವರು ಕದಿಯಬಹುದು. ನಿಮ್ಮ ಇತರ WhatsApp ಸಂಪರ್ಕಗಳಿಗೆ ಇದೇ ವಂಚನೆ ಸಂದೇಶವನ್ನು ಕಳುಹಿಸಲು ನಿಮ್ಮ ಸಂಖ್ಯೆಯನ್ನು ಸಹ ಬಳಸಬಹುದು.

Plane Crash: 25 ಜನರಿದ್ಧ ಸರಕು ವಿಮಾನ ಪತನ- ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ- ಇಲ್ಲಿದೆ ಭಯಾನಕ ವಿಡಿಯೊ

ಕಾರ್ಗೋ ವಿಮಾನ ಪತನ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ

Cargo plane crash: ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುಗೆ ಹೊರಟಿದ್ದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ನ ಯುಪಿಎಸ್ ಸರಕು ವಿಮಾನ ಮಂಗಳವಾರ ಸಂಜೆ ಅಪಘಾಕ್ಕೀಡಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ವಿಮಾನ ದುರಂತದಿಂದ ಹಲವಾರು ಕಟ್ಟಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದು ಸುಮಾರು 8 ಕಿ.ಮೀ. ವ್ಯಾಪಿಸಿದ್ದು, ಇದನ್ನು ನಿಯಂತ್ರಿಸಲು ಲೂಯಿಸ್‌ವಿಲ್ಲೆ ಮೆಟ್ರೋ ತುರ್ತು ಸೇವಾ ಸಿಬ್ಬಂದಿಗೆ ಸಾಕಷ್ಟು ಸಮಯ ಬೇಕಾಯಿತು. ಆದರೂ ಕೆಲವೆಡೆ ಬುಧವಾರ ಬೆಳಗಿನವರೆಗೂ ಬೆಂಕಿ ಹೊತ್ತಿ ಉರಿಯುತ್ತಿತ್ತು ಎನ್ನಲಾಗಿದೆ.

POCSO case: ಮಾತು ಬಾರದ ವಿದ್ಯಾರ್ಥಿನಿಗೆ ಶಿಕ್ಷಕನ ಲೈಂಗಿಕ ಕಿರುಕುಳ, 13 ವರ್ಷದ ಬಳಿಕ ಬಯಲು

ಮೂಕ ವಿದ್ಯಾರ್ಥಿನಿಗೆ ಶಿಕ್ಷಕನ ಲೈಂಗಿಕ ಕಿರುಕುಳ, 13 ವರ್ಷ ಬಳಿಕ ಬಯಲು

Harassment: ವಿದ್ಯಾರ್ಥಿನಿಗೆ ಮಾತನಾಡಲು ಬರದಿದ್ದರಿಂದ ಇದನ್ನೇ ಆರೋಪಿ ಲಾಭವಾಗಿ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಳ್ಳೇಗಾಲದಲ್ಲಿ 2012-2013ನೇ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವೇಳೆ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಕಳೆದ 1 ವಾರದ ಹಿಂದೆ ಶಾಲೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಸಂತ್ರಸ್ತೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಬಳಿಕ ಸಂತ್ರಸ್ತೆ ಕೊಟ್ಟ ಮಾಹಿತಿ ಮೇರೆಗೆ ಶಾಲೆಯ ಸಿಇಒ ದೂರು ನೀಡಿದ್ದು, ಇದೀಗ ಕೊಳ್ಳೇಗಾಲ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Mangaluru News: ದಾಂಪತ್ಯ ಕಲಹ; ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ತಂದೆಯ ರಕ್ಷಣೆ

ದಾಂಪತ್ಯ ಕಲಹ; ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ತಂದೆಯ ರಕ್ಷಣೆ

Self Harming: ಮಂಗಳೂರಿನ ಪಣಂಬೂರು ಬೀಚ್ ಬಳಿ ಪುಟ್ಟ ಮಗಳ ಜತೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಸುತ್ತಮುತ್ತಲು ಜನ, ಪೊಲೀಸರು ಇರುವುದನ್ನು ಗಮನಿಸಿ ಆತ ಮನೆಗೆ ತೆರಳಿದ್ದ. ಸಂಶಯದಿಂದ ಮನೆಗೆ ತೆರಳಿದಾಗ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಂದೆ ಮತ್ತು ಮಗಳನ್ನು ಪೊಲೀಸರು ರಕ್ಷಿಸಿದ್ದಾರೆ.

Doctor Murder Case: ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ನಾಲ್ಕೈದು ಮಹಿಳೆಯರಿಗೆ ಮೆಸೇಜ್‌ ಕಳುಹಿಸಿದ್ದ ವೈದ್ಯ!

ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ವೈದ್ಯ ಮೆಸೇಜ್‌!

Dr Kritika Reddy Murder Case: ಪತ್ನಿ ಕೃತಿಕಾ ಕೊಲೆ ಬಳಿಕ ವೈದ್ಯ ಮಹೇಂದ್ರ ರೆಡ್ಡಿ, ತನ್ನ ಪ್ರಪೋಸಲ್ ತಿರಸ್ಕರಿಸಿದ್ದ ಮಹಿಳೆಯರಿಗೆ ಮೆಸೇಜ್‌ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಡೇಟಾವನ್ನು ಪರಿಶೀಲಿಸಿದಾಗ ವೈದ್ಯನ ಕುರಿತ ಹಲವು ವಿಚಾರ ಬೆಳಕಿಗೆ ಬಂದಿದೆ.

Murder Case: ಆನೇಕಲ್‌ನಲ್ಲಿ ಪ್ರಾವಿಜನ್‌ ಸ್ಟೋರ್‌ ಮಾಲಿಕನ ಕತ್ತು ಕೊಯ್ದು ಹತ್ಯೆ

ಆನೇಕಲ್‌ನಲ್ಲಿ ಪ್ರಾವಿಜನ್‌ ಸ್ಟೋರ್‌ ಮಾಲಿಕನ ಕತ್ತು ಕೊಯ್ದು ಹತ್ಯೆ

Bengaluru Crime news: ಕೊಲೆ ನಡೆದ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್​ ಈ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು 112ಗೆ ಫೋನ್​ ಬಂದಿತ್ತು. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿಯೊಬ್ಬರು ಇದನ್ನು ನೋಡಿದ್ದಾರೆ. ಕೂಡಲೇ ಆರೋಪಿಯನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದರು.

Crime News: ಟ್ಯೂಶನ್‌ ಮುಗಿಸಿ ಮನೆಗೆ ಬರ್ತಿದ್ದ ಬಾಲಕಿ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ; ರಣಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಬಾಲಕಿ ಮೇಲೆ ಡೆಡ್ಲಿ ಅಟ್ಯಾಕ್‌! ಭೀಕರ ದೃಶ್ಯ ಇಲ್ಲಿದೆ ನೋಡಿ

17-Year-Old Girl Shot: ಹರಿಯಾಣದ ಫರೀದಾಬಾದ್‌ನಲ್ಲಿ 17 ವರ್ಷದ ಬಾಲಕಿಯನ್ನು ಅವಳ ಟ್ಯೂಷನ್‌ಮೇಟ್ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಬಾಲ್ಲಭಗಢದ ಶ್ಯಾಮ್ ಕಾಲೋನಿಯಲ್ಲಿನ ತನ್ನ ಮನೆಯ ಸಮೀಪವಿದ್ದಾಗಲೇ ಈ ದಾಳಿ ನಡೆದಿದೆ. ವರದಿಗಳ ಪ್ರಕಾರ, ಸಂಜೆ ಸುಮಾರು 5 ಗಂಟೆಯ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿಯು ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

physical assault Case: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌... ಮೂವರು ಕಾಮುಕರ ಮೇಲೆ ಫೈರಿಂಗ್‌

ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌; ಆರೋಪಿಗಳಿಗೆ ಗುಂಡೇಟು

Coimbatore physical assault Case: ತಮಿಳುನಾಡಿನ ಕೊಯಮತ್ತೂರಿನ ವಿಮಾನ ನಿಲ್ದಾಣದ ಸಮೀಪ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಇದೀಗ ರಾಜಕೀಯ ಸ್ವರೂರ ಪಡೆದುಕೊಂಡಿದ್ದು, ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ ನಡೆಸಿದೆ.

Pavithra Gowda: ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪವಿತ್ರಾ ಗೌಡ; ಕಾರಣವೇನು?

ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪವಿತ್ರಾ ಗೌಡ; ಕಾರಣವೇನು?

Supreme Court: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ ಆಗಿದ್ದಾರೆ. ಎ1 ಪವಿತ್ರಾ ಗೌಡ, ಎ2 ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮತ್ತೆ ಎಲ್ಲಾ ಆರೋಪಿಗಳನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಇದೀಗ ಎ1 ಆರೋಪಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ (ನವೆಂಬರ್ 6, 2025) ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದ್ದು, ಇದರಿಂದ ಪ್ರಕರಣಕ್ಕೆ ಹೊಸ ತಿರುವು ಬರಬಹುದು.

Physical Harassment: ಮೇಡಂ... ಎಂದು ಕರೆದು ಹಸ್ತ ಮೈಥುನ; ವಾಕಿಂಗ್‌ ಹೋಗಿದ್ದ ಮಹಿಳೆಗೆ ಕಿರುಕುಳ

ವಾಕಿಂಗ್‌ ಹೋಗಿದ್ದ ಮಹಿಳೆಗೆ ಕಿರುಕುಳ

Woman was allegedly harassed : 33 ವರ್ಷದ ಮಹಿಳೆ ತನ್ನ ನಾಯಿಯೊಂದಿಗೆ ದಿನನಿತ್ಯದ ಬೆಳಗಿನ ವಾಕಿಂಗ್‌ ಮಾಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯ ಬಳಿಗೆ ಬಂದು "ಮೇಡಂ" ಎಂದು ಕರೆದಿದ್ದಾನೆ. ಆಕೆ ತಿರುಗಿ ನೋಡಿದಾಗ, ಆ ವ್ಯಕ್ತಿ ಆಕೆಯ ಎದುರು ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Physical Abuse: ಕಾಮುಕನ ಅಟ್ಟಹಾಸ; ಗುಪ್ತಾಂಗದ ವಿಡಿಯೊ ಕಳಿಸಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ

ಗುಪ್ತಾಂಗದ ವಿಡಿಯೊ ಕಳಿಸಿ ಸೀರಿಯಲ್ ನಟಿಗೆ ಟಾರ್ಚರ್‌

Physical harassment: ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಮೊದಲು ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆದರೆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ.

Assault Case: ಮಹಿಳೆಯ ಖಾಸಗಿ ಅಂಗಕ್ಕೆ ಹಲ್ಲೆ ದೂರು, ವರ್ತೂರು ಪೊಲೀಸರ ಮೇಲೆ ಪ.ಬಂಗಾಳ ಸಿಎಂ ಕಚೇರಿ ಅಸಮಾಧಾನ

ಮಹಿಳೆಯ ಖಾಸಗಿ ಅಂಗಕ್ಕೆ ಹಲ್ಲೆ, ವರ್ತೂರು ಪೊಲೀಸರ ಮೇಲೆ ದೂರು

Bengaluru: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸುಂದರಿ ಬೀಬಿ ಮನೆ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹಣ ಬಿದ್ದಿರುವುದನ್ನು ತೆಗೆದುಕೊಂಡು ಮನೆ ಮಾಲೀಕರಿಗೆ ಕೊಡಲು ಹೋಗಿದ್ದಾರೆ. ಇದನ್ನ ಸಿಸಿಟಿವಿಯಲ್ಲಿ ಗಮನಿಸಿದ ಅಪಾರ್ಟ್ಮೆಂಟ್‌ ಫ್ಲ್ಯಾಟ್‌ನ ಮಾಲೀಕರು ಬೀಬಿ ಮೇಲೆ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಠಾಣೆಯಲ್ಲಿ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Physical Assault: ಕುಟುಂಬದ ಮೇಲಿನ ದ್ವೇಷಕ್ಕೆ ಬಾಲಕಿ ಮೇಲೆ ಅತ್ಯಾಚಾರ? ಕತ್ತು ಸೀಳಿ ಸ್ಥಿತಿಯಲ್ಲಿ ಸಿಕ್ತು ಶವ

ಕುಟುಂಬದ ಮೇಲಿನ ದ್ವೇಷಕ್ಕೆ ಬಾಲಕಿ ಮೇಲೆ ಅತ್ಯಾಚಾರ?

Crime News: ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಇಂದು ಶವವಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ. ಆಕೆಯ ಸಹೋದರ ಮೂವರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಬಾಲಕಿ ಕುಟುಂಬ ದೂರು ನೀಡಿತ್ತು. ಇಂದು, ಆಕೆಯ ಶವ ಆಕೆಯ ಮನೆಯ ಸಮೀಪದ ತೋಟದಲ್ಲಿ ಪತ್ತೆಯಾಗಿದೆ. ಹದಿಹರೆಯದ ಬಾಲಕಿಯ ದೇಹದ ಮೇಲಿನ ಗಾಯಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ವಿಪಕ್ಷಗಳು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿಯ ಪ್ರಕಾರ, ಉತ್ತರ ಪ್ರದೇಶವು ಸುಮಾರು 58.6 ರಷ್ಟು ಕಡಿಮೆ ಅಪರಾಧ ಪ್ರಮಾಣವನ್ನು ಕಾಯ್ದುಕೊಂಡಿದೆ.

Animal Cruelty: ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!  ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!

viral video: ಕೆಲವರ ಕ್ರೌರ್ಯಕ್ಕೆ ಕಾರಣ ಊಹಿಸಲೂ ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ರುಜುವಾತು ಆಗಿದೆ. ಆ ಮನೆ ಮಾಲೀಕರು ತಾವು ಇಲ್ಲದಾಗ ತಮ್ಮ ನಾಯಿ ಮರಿಯನ್ನು ನೋಡಿಕೊಳ್ಳಲಿ ಎಂದು ಒಬ್ಬಾಕೆ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಾಕಲೆಂದು ಬಂದವಳೇ ಆ ನಾಯಿ ಮರಿಗೆ ಯಮಸ್ವರೂಪಿಯಾಗಿದ್ದಾಳೆ. ಅದೂ ಆಕೆ ನಾಯಿ ಮರಿ ಮೇಲೆ ತೋರಿದ್ದು ಅಂತಿಂಥಾ ಕ್ರೌರ್ಯವಲ್ಲ. ಲಿಫ್ಟ್‌ ಒಳಗೆ ನಾಯಿಮರಿಯನ್ನು ಅದರ ಕೊರಳಿಗೆ ಕಟ್ಟಿದ ಬೆಲ್ಟ್‌ನಿಂದಲೇ ಎತ್ತಿ ಬಟ್ಟೆ ಕುಕ್ಕಿದಂತೆ ಕುಕ್ಕಿ ಕೊಂದುಹಾಕಿದ್ದಾಳೆ. ನಂತರ ನಾಯಿ ಮರೆ ಹೇಗೆ ಸತ್ತಿತು ಎಂದು ತನಗೆ ಗೊತ್ತೇ ಇಲ್ಲ ಎಂದು ನಾಟಕ ಆಡಿದ್ದಾಳೆ.

Loading...