ಹೊಸ ಸರ್ಕಾರ ರಚನೆ ಬಳಿಕ ಮಣಿಪುರದಲ್ಲಿ ಹಿಂಸಾತ್ಮಕವಾದ ಪ್ರತಿಭಟನೆ
ಹೊಸ ಸರ್ಕಾರ ರಚನೆಯಾಗಿ ವಾರ ಕೂಡ ಕಳೆದಿಲ್ಲ. ಅದರೊಳಗೆ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ಮಣಿಪುರದ ರಾಜಧಾನಿ ಇಂಫಾಲ್ನಿಂದ ಮಿಜೋರಾಂನ ಐಜ್ವಾಲ್ಗೆ ಚುರಾಚಂದ್ಪುರ ಮೂಲಕ ಸಂಪರ್ಕಿಸುವ ಹೆದ್ದಾರಿಯನ್ನು ಚುರಾಚಂದ್ಪುರದಲ್ಲಿ ತಡೆದಿರುವ ಪ್ರತಿಭಟನಾಕಾರರು ವಾಹನಗಳಿಗೆ ಹಾನಿ ಮಾಡಿದ್ದಾರೆ. ಹೊಸ ಸರ್ಕಾರಕ್ಕೆ ಮೂವರು ಕುಕಿ-ಝೋ ಶಾಸಕರು ಬೆಂಬಲ ನೀಡಿರುವುದು ಇದಕ್ಕೆ ಕಾರಣವಾಗಿದೆ.