ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೈಂ

ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್‌; ಐಫೋನ್‌ ಇಎಂಐ ಬಗ್ಗೆ ಸಂಬಂಧಿಕರಿಂದ ಶಾಕಿಂಗ್‌ ವಿಚಾರ ಬಯಲು

ಬೆಟ್ಟದಿಂದ ಬಿದ್ದು ಮೂವರ ಸಾವು ಪ್ರಕರಣ: ಕಾರಣ ವಿವರಿಸಿದ ಸಂಬಂಧಿಕರು

Maharashtra cliff accident: ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ತಂದೆ, ತಾಯಿ ಮತ್ತು ಪುತ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಂದಿದೆ. ಐಫೋನ್‌ ಇಎಂಐ ವಿಚಾರವಾಗಿ ಪುತ್ರ ಕುನಾಲ್‌ ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿತ್ತು. ಆದರೆ ಇದು ಸುಳ್ಳು, ಇದೊಂದು ವದಂತಿಯಷ್ಟೇ ಎಂದು ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಹೇಳಿದ್ದಾರೆ. ಅವರು ಸಾವಿನ ನಿಜವಾದ ಕಾರಣ ವಿವರಿಸಿದ್ದಾರೆ.

ಚಂಡೀಗಢದಲ್ಲಿ ಭಾರಿ ಉಗ್ರ ಸಂಚು ವಿಫಲ; 5 ಕೆಜಿ ಸ್ಫೋಟಕದೊಂದಿಗೆ ಮೂವರು ಉಗ್ರರ ಬಂಧನ

5 ಕೆಜಿ ಸ್ಫೋಟಕ ಪತ್ತೆ: ಚಂಡೀಗಢದಲ್ಲಿ ದಾಳಿಯ ಭಾರಿ ಸಂಚು ವಿಫಲ

BKI Terror Suspects: ಹರಿಯಾಣದ ಚಂಡೀಗಢದಲ್ಲಿ ಸಂಭವಿಸಬಹುದಾಗಿದ್ದ ಉಗ್ರ ದಾಳಿಯ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದು, ಬಿಕೆಐ ಸಂಪರ್ಕ ಹೊಂದಿರುವ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 5 ಕೆಜಿ ಜಿಲೆಟಿನ್ ಸ್ಫೋಟಕ, ಡಿಟೋನೇಟರ್, ರಿಮೋಟ್ ವ್ಯವಸ್ಥೆ, ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡು ಎಕ್ಸ್‌ಪ್ರೆಸ್‌ನಲ್ಲಿ ಕೊಳೆತ ಮೃತದೇಹದ ಅವಶೇಷ ಪತ್ತೆ: ಆರೋಪಿಗಳ ತಲಾಶ್‌ಗೆ ಒಡಿಶಾಕ್ಕೆ ತೆರಳಿದ ವಿಶೇಷ ಪೊಲೀಸ್ ತಂಡ

ತಮಿಳುನಾಡು ಎಕ್ಸ್‌ಪ್ರೆಸ್ ಕೊಲೆ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್‌

Chennai Horror: ಉತ್ತರ ಪ್ರದೇಶದ ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ತಮಿಳುನಾಡು ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯ ಕೆಂಪು ಟ್ರಾಲಿ ಬ್ಯಾಗ್‌ನಲ್ಲಿ ಕೊಳೆತ ಮಾನವ ದೇಹದ ಅವಶೇಷಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ತಲೆಮರೆಸಿಕೊಂಡಿರುವ ಪುರುಷ ಮತ್ತು ಮಹಿಳಾ ಆರೋಪಿಗಳನ್ನು ಬಂಧಿಸಲು ಮೂರು ವಿಶೇಷ ಪೊಲೀಸ್ ತಂಡಗಳು ಮೊಬೈಲ್ ಸಿಗ್ನಲ್ ಆಧರಿಸಿ ಒಡಿಶಾಗೆ ತೆರಳಿವೆ.

Chikkamagaluru Eid Milad controversy: ಚಿಕ್ಕಮಗಳೂರಿನಲ್ಲಿ ಪಾಕ್‌ ಪರ ಹಾಡು ಬಳಸಿ ವಿಡಿಯೊ ಪೋಸ್ಟ್;‌ ಎಫ್‌ಐಆರ್‌ ದಾಖಲು

ಚಿಕ್ಕಮಗಳೂರಿನಲ್ಲಿ ಪಾಕ್‌ ಪರ ಹಾಡು ಬಳಸಿ ವಿಡಿಯೊ;‌ ಎಫ್‌ಐಆರ್‌ ದಾಖಲು

Chikkamagaluru News: ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಸ್ಲಿಂ ಯುವಕರು ವಿಡಿಯೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಟಿಪ್ಪು ಸುಲ್ತಾನ್​ ಕಟೌಟ್​ ರೀಲ್ಸ್​​ಗೆ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಹಾಡನ್ನು ಹಾಕಿರೋದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಒಂದೇ ಕುಟುಂಬದ ನಾಲ್ವರನ್ನು ಕೊಂದು ಶವದ ಎದುರೇ ಡ್ರಗ್ಸ್‌ ಪಾರ್ಟಿ ಮಾಡಿದ ಹಂತಕರು; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ

ಒಂದೇ ಕುಟುಂಬದ ನಾಲ್ವರನ್ನು ಕೊಂದು ಡ್ರಗ್ಸ್‌ ಸೇವಿಸಿದ ಹಂತಕರು

ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಿವೃತ್ತ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ನಂತರ ಆರೋಪಿಗಳು ಅದೇ ಮನೆಯಲ್ಲಿ ಡ್ರಗ್ಸ್ ಸೇವಿಸಿ, ಸ್ನಾನ ಮಾಡಿ, ಆಹಾರ ಸೇವಿಸಿರುವ ಬೆಚ್ಚಿಬೀಳಿಸುವ ಸತ್ಯ ತನಿಖೆಯಲ್ಲಿ ಹೊರಬಿದ್ದಿದೆ.

ಗಂಡನನ್ನು ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದ ಪತ್ನಿ; ಮನೆ ಮಾಲೀಕನಿಗೆ ಕಂಡ ಭೀಕರ ದೃಶ್ಯವೇನು?

ಗಂಡನನ್ನು ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದ ಪತ್ನಿ

Murder Case: ಹರಿಯಾಣದ ಕುರುಕ್ಷೇತ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು, ಹೊಟ್ಟೆ ಸೀಳಿ ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ಟೆರೆಸ್‌ನಿಂದ ಹಾರಿದ್ದಾರೆ.

MLA Abhay Patil Car Accident: ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತ

ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತ

ದೆಹಲಿಯ ಐ.ಪಿ ಎಸ್ಟೇಟ್ ರಸ್ತೆಯಲ್ಲಿ ಭಾನುವಾರ ರಾತ್ರಿ 9:30 ಕ್ಕೆ ಇನ್ನೋವಾ ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಇನ್ನೋವಾ ಕಾರಿನಲ್ಲಿದ್ದ ಕಿರಾರಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಅನಿಲ್ ಝಾ ಮತ್ತು ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇದ್ದರು.

ಐಫೋನ್‌ ಇಎಂಐ ಮಾತ್ರವಲ್ಲ...ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಯ ಇನ್ನಷ್ಟು ಬೆಚ್ಚಿ ಬೀಳಿಸುವ ಅಂಶ ಬಹಿರಂಗ; ಹಿಂದೆಯೂ ಜೀವ ಕಳೆದುಕೊಳ್ಳಲು ಹೋಗಿದ್ದೇಕೆ ಕುನಾಲ್‌?

ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಗೆ ಟ್ವಿಸ್ಟ್‌

iPhone EMI: ಐಫೋನ್‌ ಹಠಕ್ಕೆ ಬಿದ್ದು ಮಹಾರಾಷ್ಟ್ರದ ಸಂಭಾಜಿ ನಗರ ಜಿಲ್ಲೆಯ ಬೆಟ್ಟದಿಂದ ಜಿಗಿದು ಸಾವಿಗೀಡಾಗಿ, ಹೆತ್ತವರ ಸಾವಿಗೂ ಕಾರಣನಾದ ಕುನಾಲ್‌ ಎಂಬ ಜೆನ್‌ ಝೀಯ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಸಹೋದರನ ಮರಣದ ನಂತರ ನಡೆದ ಕೌಟುಂಬಿಕ ಕಲಹ ಮತ್ತು ಪೋಷಕರ ನಡುವಿನ ಬಿಕ್ಕಟ್ಟೂ ಇದಕ್ಕೆ ಕಾರಣ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಹತ್ಯೆ; ನಿವೃತ್ತ ಶಿಕ್ಷಕ ಸೇರಿ ಕುಟುಂಬದ ನಾಲ್ವರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆ

ಬಾಂಗ್ಲಾದೇಶದಲ್ಲಿ ನಾಲ್ವರು ಹಿಂದೂಗಳು ಹತ್ಯೆ; ಕಾರಣ ನಿಗೂಢ

Bangladesh Horror: ಬಾಂಗ್ಲಾದೇಶದಲ್ಲಿ ನಾಲ್ವರು ಹಿಂದೂಗಳ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ರಂಗ್‌ಪುರದಲ್ಲಿರುವ ದಸ್‌ಪಾರಾದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ನಿವೃತ್ತ ಶಿಕ್ಷಕ ಗಣಪತಿ ಚಕ್ರಬರ್ತಿ (65), ಪತ್ನಿ ಪ್ರೀತಿಲತಾ ಚಕ್ರಬರ್ತಿ (50) ಮತ್ತು ಅವರ ಪುತ್ರಿ ಅಗಾಮಿ ಚಕ್ರಬರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಮ್‌ ಚಕ್ರಬರ್ತಿ (12) ಎಂದು ಗುರುತಿಸಲಾಗಿದೆ.

Shahapur Accident: ಶಹಾಪುರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ; ಮೂವರು ಕೂಲಿ ಕಾರ್ಮಿಕರ ದುರ್ಮರಣ

ಶಹಾಪುರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿಯಾಗಿ ಮೂವರ ಸಾವು

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದೆ. ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡು ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

3 ತಿಂಗಳ ಗರ್ಭಿಣಿಯಾಗಿದ್ದ ರಕ್ಷಣಾ ಸಚಿವಾಲಯದ ಸಿಬ್ಬಂದಿ ಶವವಾಗಿ ಪತ್ತೆ; ಅತ್ತೆ- ಮಾವನ ವಿರುದ್ಧ ಕೇಸ್‌

3 ತಿಂಗಳ ಗರ್ಭಿಣಿಯಾಗಿದ್ದ ರಕ್ಷಣಾ ಸಚಿವಾಲಯದ ಸಿಬ್ಬಂದಿ ಶವವಾಗಿ ಪತ್ತೆ

ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮೂರು ತಿಂಗಳ ಗರ್ಭಿಣಿಯೊಬ್ಬರು ಆಗಸ್ಟ್ 21 ರಂದು ದೆಹಲಿಯ ದ್ವಾರಕಾದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮತ್ತು ಅತ್ತೆ ಮಾವ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತರ ಕುಟುಂಬ ಆರೋಪಿಸಿದೆ.

ಬೆಂಗಳೂರಿನ ನಡು ರಸ್ತೆಯಲ್ಲಿಯೇ ಮೆಡಿಕಲ್ ಶಾಪ್ ಓನರ್‌ ಕೊಲೆ; ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?

ರಾಜ್ಯ ರಾಜಧಾನಿಯ ನಡು ರಸ್ತೆಯಲ್ಲಿಯೇ ಮೆಡಿಕಲ್ ಶಾಪ್ ಮಾಲೀಕನ ಕೊಲೆ

Bengaluru Murder Case: ಮೆಡಿಕಲ್ ಶಾಪ್ ನಡೆಸ್ತಿದ್ದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಮಡಿವಾಳದ ಅಂಡರ್‌ಪಾಸ್‌ ಸಮೀಪ ನಿನ್ನೆ ರಾತ್ರಿ ನಡೆದಿದೆ. ಮಂಗಮ್ಮನ ಪಾಳ್ಯದ ಸುಹೇಲ್‌ ಮೃತ ವ್ಯಕ್ತಿಯಾಗಿದ್ದು, ರಾತ್ರಿ 10 ಗಂಟೆಗೆ ಮಡಿವಾಳದಿಂದ ಕೊರಮಂಗಲ ಕಡೆ ಹೊರಟಿದ್ದ ಸುಹೇಲ್​​ನನ್ನು ಮುಖ್ಯ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದ್ದು ನಾವೇ ಎಂದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್; ಬಿಡುಗಡೆಯಾಗಿರುವ ಆಡಿಯೋದಲ್ಲಿ ಆತ ಹೇಳಿದ್ದೇನು ?

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕಾರಣವೇನು?

Hardeep Singh Nijjar Murder case: 2023ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಯುವಕರ ಶೋಷಣೆ, ಮಾದಕ ದ್ರವ್ಯ ಮಾರಾಟ ಕಾರಣವೆಂದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೇಳಿದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಉತ್ತರ ಅಮೆರಿಕಾದಾದ್ಯಂತ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯುವಕರನ್ನು ಬಳಸುತ್ತಿದ್ದನು ಎಂದು ಹೇಳಿದ್ದಾನೆ.

ಬೆಟ್ಟದ ಅಂಚಿನಲ್ಲಿ ನಿಂತ ಮಗ ಈಚೆ ಬರುವಂತೆ ಕೈ ಮುಗಿದು ಬೇಡಿದ ತಾಯಿ; ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ ಮೂವರು ಪ್ರತಾಪಕ್ಕೆ ಬಿದ್ದು ಬಲಿಯಾಗುವ ಮುನ್ನ ಆಗಿದ್ದೇನು? ಇಲ್ಲಿದೆ ಇಂಚಿಂಚು ಮಾಹಿತಿ

ಐಫೋನ್ EMI ಜಗಳ; ಒಂದೇ ಕುಟುಂಬದ ಮೂವರ ದಾರುಣ ಸಾವು

Maharashtra Tragedy: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ EMI ಪಾವತಿ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದ ಬಳಿಕ 19 ವರ್ಷದ ಮಗ ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ತಂದೆ-ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದು, ಕೆಲವೇ ಕ್ಷಣಗಳ ಬಳಿಕ ತಾಯಿಯೂ ಸಾವನ್ನಪ್ಪಿದ್ದಾರೆ.

Elephant Attack: ಕೊಡಗಿನ ಹೋಂ ಸ್ಟೇಗೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

ಕೊಡಗಿನ ಹೋಂ ಸ್ಟೇಗೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

Kodagu News: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಘಟನೆ ನಡೆದಿದೆ. ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕಾಡಾನೆ ದಾಳಿಯಿಂದ ದುರ್ಘಟನೆ ಸಂಭವಿಸಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

8 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

8 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ತಾಲ್ಲೂಕಿನ ಹೊಸಹುಡ್ಯ ಗ್ರಾಮದ ವ್ಯಾಪ್ತಿಯಲ್ಲಿ ಲಕ್ಕಹಳ್ಳಿ ಗೇಟ್ ಬಳಿ ಅಬಕಾರಿ ಇಲಾಖೆ ಅಧಿಕಾರಿ ಎಂ. ಅರುಣ್ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ 232 ಎಂ.ಡಿ.ಎಂ.ಎ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಶಿಡ್ಲಘಟ್ಟದ ಸೈಯದ್ ನಯೀಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ

ಬದನೆಕಾಯಿ ಖಾದ್ಯ-ರೊಟ್ಟಿ ಸೇವಿಸಿ 9 ತಿಂಗಳ ಮಗು ಸೇರಿ ಮೂವರು ಸಹೋದರಿಯರ ದುರ್ಮರಣ; ಸಾವಿನ ಸುತ್ತ ಅನುಮಾನದ ಹುತ್ತ

ಬದನೆಕಾಯಿ ಖಾದ್ಯ-ರೊಟ್ಟಿ ಸೇವಿಸಿ ಮಗು ಸೇರಿ ಮೂವರು ಸಹೋದರಿಯರು ಸಾವು

Food Poisoning: ಒಂಭತ್ತು ತಿಂಗಳ ಮಗು ಸೇರಿ ಮೂವರು ಅಪ್ರಾಪ್ತ ಸಹೋದರಿಯರು ಬೈಂಗನ್ ಭರ್ತಾ (ಹಿಸುಕಿದ ಬದನೆಕಾಯಿ) ಮತ್ತು ರೊಟ್ಟಿ ತಿಂದು ಮೃತಪಟ್ಟಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸದೆ ಕುಟುಂಬವು ಮೃತದೇಹವನ್ನು ಹೂಳಿದೆ ಎಂದು ಪೊಲೀಸರಿಗೆ ಅಧಿಕಾರಿಗಳು ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪತ್ನಿ, ಸಹೋದರಿ ಕೊಂದು ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಈ ಕಾರಣಕ್ಕೆ ನಡೆಯಿತಾ ಅಮಾನುಷ ಕೃತ್ಯ?

ಪತ್ನಿ, ಸಹೋದರಿ ಕೊಂದು ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

Lucknow Double Murder Case: ಉತ್ತರ ಪ್ರದೇಶದ ಲಖನೌವನ್ನು ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ಪತ್ನಿ 1 ಕೋಟಿ ರುಪಾಯಿ ಬೇಡಿಕೆ ಇಟ್ಟಿದ್ದರಿಂದ ಬ್ಯಾಂಕ್‌ ಉದ್ಯೋಗಿ ಮಾನಸ್ ವಾಜಪೇಯಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ತುಮಕೂರಿನಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆ ಸುಟ್ಟು ಹಾಕಿದ ಮೂವರ ಬಂಧನ

ತುಮಕೂರು: ಚಿರತೆ ಸುಟ್ಟ ಮೂವರ ಬಂಧನ

leopard burning case: ಅಕ್ರಮವಾಗಿ ನಿರ್ಮಿಸಿದ್ದ ತಂತಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಚಿರತೆಯನ್ನು ಸುಟ್ಟು ಹಾಕಿದ ಮೂವರನ್ನು ಬಂಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ರಾಗಿ ಬೆಳೆಯನ್ನು ಉಳಿಸುವ ಸಲುವಾಗಿ ಗೌರಗೊಂಡನಹಳ್ಳಿ ಗ್ರಾಮದ ಕೆಲವು ರೈತರು ಗದ್ದೆಯ ಸುತ್ತಲೂ ಅಕ್ರಮವಾಗಿ ತಂತಿ ಬಲೆಯನ್ನು ಹಾಕಿದ್ದರು. ಇದರಲ್ಲಿ ಚಿರತೆಯೊಂದು ಸಿಕ್ಕಿ ಹಾಕಿಕೊಂಡಿತ್ತು.

ಪತ್ನಿಯನ್ನು ಮರಳಿ ಕರೆತರಲು ನರಬಲಿ! ವ್ಯಕ್ತಿಯ ತಲೆ ಕಡಿದು ದೇವರ ಕೋಣೆಯಲ್ಲಿ ಹೂತು ಹಾಕಿದ ಪಾಪಿ: ಮಾನವೀಯತೆ ತಲೆ ತಗ್ಗಿಸುವ ಘಟನೆ

ಪತ್ನಿಯನ್ನು ಮರಳಿ ಕರೆತರಲು ವ್ಯಕ್ತಿಯ ನರಬಲಿ!

Odisha Horror: ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಯನ್ನು ಮರಳಿ ಪಡೆಯಲು ನರಬಲಿ ನೀಡಿರುವ ಆಘಾತಕಾರಿ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿ ತನ್ನ ಪೂಜಾ ಕೋಣೆಯಲ್ಲಿ ತಲೆಯನ್ನು ಹೂತು ಹಾಕಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಕೇವಲ 200 ರೂ.ಗಾಗಿ ಮಂಗಳಮುಖಿಯ ಭೀಕರ ಕೊಲೆ; ಆರೋಪಿ ಬಂಧನ

ಕೇವಲ 200 ರೂ.ಗಾಗಿ ಮಂಗಳಮುಖಿಯ ಭೀಕರ ಕೊಲೆ; ಆರೋಪಿ ಬಂಧನ

Bengaluru Murder: ಬೆಂಗಳೂರಿನ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕೊಲೆ ನಡೆದಿದೆ. ಮದ್ಯಪಾನ ಮಾಡಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ.​ ಸ್ಥಳದಲ್ಲಿದ್ದ ಮಂಗಳಮುಖಿ ಬಳಿ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ಹಣ ನೀಡಲು ನಿರಾಕರಿಸಿದಾಗ ಆರೋಪಿಯು ಡ್ರ್ಯಾಗರ್‌ನಿಂದ ಇರಿದು ಮಂಗಳಮುಖಿಯನ್ನು ಕೊಲೆ ಮಾಡಿದ್ದಾನೆ.

Vijayapura Tragedy: ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ರಕ್ಷಿಸಲು ಹೋದ ತಂದೆಯೂ ನಾಪತ್ತೆ!

ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ತಂದೆಯೂ ನಾಪತ್ತೆ!

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ದುರಂತ ನಡೆದಿದೆ. ಮೊದಲಿಗೆ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ತಂದೆಯೂ ನಾಪತ್ತೆಯಾಗಿದ್ದಾರೆ. ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ತಂದೆ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಆರ್ಕೆಸ್ಟ್ರಾ ಪ್ರೇಕ್ಷಕರ ಮಧ್ಯೆ ನುಗ್ಗಿದ ಬಸ್: ಐವರು ಸಾವು, ಇಬ್ಬರು ಗಂಭೀರ; ಛಾತಿ ಸಮಾರಂಭದ ವೇಳೆ ಭೀಕರ ದುರಂತ

ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ನುಗ್ಗಿದ ಬಸ್: ಐವರ ಸಾವು

ಮಗು ಜನಿಸಿದ ಆರನೇ ದಿನ ನಡೆಸುವ ಛಾತಿ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದೊಳಗೆ ವೇಗವಾಗಿ ಬಂದ ಬಸ್ ನುಗ್ಗಿದ್ದು, ಐವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರದ ಪಶ್ಚಿಮ ಚಂಪಾರಣ್‌ನ ಲೌರಿಯಾ ಬಳಿಯ ಹಳ್ಳಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ 15 ದಿನಗಳ ಹಿಂದೆ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ, ಇದೀಗ ಅದೇ ಹಾಸ್ಟೆಲ್‌ನಲ್ಲಿ ಎಂಟೆಕ್ ವಿದ್ಯಾರ್ಥಿ ಆತ್ಮಹತ್ಯೆ

ಎಂಟೆಕ್ ವಿದ್ಯಾರ್ಥಿ ಆತ್ಮಹತ್ಯೆ, ಸಾವಿನ ಸುತ್ತ ಹಲವು ಅನುಮಾನ

MTech student dies by self-harming: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ತನ್ನ ಹಾಸ್ಟೆಲ್ ಕೋಣೆಯಲ್ಲಿ 22 ವರ್ಷದ ಪ್ರಥಮ ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ರಿಜಿಸ್ಟ್ರಾರ್ ಪ್ರೊ. ಡಿ. ನಾಗೇಶ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

Loading...