ಬೆಟ್ಟದಿಂದ ಬಿದ್ದು ಮೂವರ ಸಾವು ಪ್ರಕರಣ: ಕಾರಣ ವಿವರಿಸಿದ ಸಂಬಂಧಿಕರು
Maharashtra cliff accident: ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ತಂದೆ, ತಾಯಿ ಮತ್ತು ಪುತ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಂದಿದೆ. ಐಫೋನ್ ಇಎಂಐ ವಿಚಾರವಾಗಿ ಪುತ್ರ ಕುನಾಲ್ ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿತ್ತು. ಆದರೆ ಇದು ಸುಳ್ಳು, ಇದೊಂದು ವದಂತಿಯಷ್ಟೇ ಎಂದು ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಹೇಳಿದ್ದಾರೆ. ಅವರು ಸಾವಿನ ನಿಜವಾದ ಕಾರಣ ವಿವರಿಸಿದ್ದಾರೆ.