ಗೃಹ ಸಚಿವ ಪರಮೇಶ್ವರ್ಗೆ ʼಬೆಟ್ಟಿಂಗ್ʼ ಸಂಕಷ್ಟ; ತನಿಖೆಗೆ ಕೋರ್ಟ್ ಆದೇಶ
ತುಮಕೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್ ಕಟ್ಟುವ ಹೇಳಿಕೆ ನೀಡಿದ್ದರಿಂದ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸಂಕಷ್ಟ ಎದುರಾಗಿದೆ. ಈ ಕುರಿತು ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಬೆಂಗಳೂರಿನ ಕೋರ್ಟ್ ಆದೇಶ ಹೊರಡಿಸಿದೆ.