ಪಾಪ್ ಸ್ಟಾರ್ ಶಕೀರಾ ಫ್ಯಾಷನ್ಗೆ ಜೈ ಎಂದ ಜೆನ್ ಜಿ ಫ್ಯಾನ್ಸ್!
ಪಾಪ್ ಸ್ಟಾರ್ ಶಕೀರಾ ಮಾಡಿದ್ದೇ ಫ್ಯಾಷನ್! ಈ ಬಾರಿ ಅವರು ಧರಿಸಿದ್ಧ ಫಂಕಿ ಲುಕ್ ನೀಡುವ ಕಾರ್ಸೆಟ್- ಪ್ಯಾಂಟ್ ಫ್ಯಾಷನ್ಗೆ ಜೆನ್ ಜಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದ್ಯಾವ ಫ್ಯಾಷನ್? ಈ ಕುರಿತ ಡಿಟೇಲ್ಸ್ ಇಲ್ಲಿದೆ.
Madhuri Dixit: ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಉಟ್ಟಿದ್ದ ರೆಡ್ ಕಲರ್ನ ಪಟೋಲಾ ಇಕ್ಕತ್ ಬಾಂದನಿ ಸೀರೆ ಯಾರ್ಯಾರಿಗೆಲ್ಲಾ ಇಷ್ಟವಾಗಿದೆ? ಈ ಡಿಸೈನರ್ ಸೀರೆಯಲ್ಲಿ ನೀವೂ ಕೂಡ ಮಾಧುರಿಯಂತೆಯೇ ಕಾಣಿಸಬೇಕೆಂದುಕೊಂಡಿದ್ದೀರಾ! ಹಾಗಾದಲ್ಲಿ ಈ 5 ಸಿಂಪಲ್ ಸ್ಟೈಲಿಂಗ್ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಗುರುವಾರವನ್ನು ಭಗವಾನ್ ವಿಷ್ಣುವಿನ ಆರಾಧನೆಗೆ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿ ತುಪ್ಪದ ದೀಪ ಬೆಳಗಿಸುವುದು, ಮಂತ್ರ ಜಪಿಸುವುದು, ತುಳಸಿ ಹಾಗೂ ಅರಿಶಿನ ಅರ್ಪಿಸುವುದು ಮತ್ತು ಬಾಳೆ ಗಿಡವನ್ನು ಪೂಜಿಸುವುದು ಶುಭಕರ. ಇದರಿಂದ ವಿಷ್ಣು ಹಾಗೂ ಲಕ್ಷ್ಮಿಯ ಅನುಗ್ರಹ, ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿಶೇಷ. ವಾಸ್ತು ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಲಕ್ಷ್ಮೀ ಗಣಪತಿ, ಸ್ಪಟಿಕ, ಕವಡೆ ಮತ್ತು ಕಮಲದ ಬೀಜಗಳನ್ನು ಮನೆಗೆ ತಂದು ಪೂಜೆಯಲ್ಲಿ ಬಳಸುವುದರಿಂದ ಸಕಾರಾತ್ಮಕತೆ, ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಕಮಲದ ಬೀಜವನ್ನು ಗಣೇಶನ ಮೂರ್ತಿಯ ಬಲಭಾಗದಲ್ಲಿ ಪೂರ್ವ ದಿಕ್ಕಿಗೆ ಇರಿಸಿ ಪೂಜಿಸುವುದು ಶುಭಕರವೆಂದು ಹೇಳಲಾಗುತ್ತದೆ.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಟ್ರಲ್ ಬ್ಯೂಟಿ ಪೇಜೆಂಟ್ ಯಶಸ್ವಿಯಾಗಿ ನಡೆಯಿತು. ಆಸ್ಟ್ರಲ್ ಮಿಸೆಸ್ ಇಂಡಿಯಾ, ಮಿಸ್ ಇಂಡಿಯಾ, ಮಿಸ್ ಟೀನ್ ಸೇರಿದಂತೆ ನಾನಾ ವಿಭಾಗಗಳಿಗಾಗಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ಭಾಗವಹಿಸಿದ್ದ ಮಾಡೆಲ್ಗಳು ನಾನಾ ರೌಂಡ್ಗಳಲ್ಲಿ ರ್ಯಾಂಪ್ ವಾಕ್ ಮಾಡಿದರು. ಒಂದೊಂದು ರೌಂಡ್ಗಳಲ್ಲೂ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಈ ಬ್ಯೂಟಿ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯ ವಿವರ ಇಲ್ಲಿದೆ.
ಶನಿವಾರವನ್ನು ಶನಿದೇವರ ಆರಾಧನೆಗೆ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಕರ್ಮಫಲದಾತ ಎಂದು ನಂಬಲಾಗುವ ಶನಿದೇವರ ಅನುಗ್ರಹಕ್ಕಾಗಿ ಈ ದಿನ ಭಕ್ತಿಯಿಂದ ಮಂತ್ರಗಳನ್ನು ಜಪಿಸುವ ಪದ್ಧತಿಯಿದೆ. ಶನಿ ಮೂಲ ಮಂತ್ರ, ಶನಿ ಸ್ತೋತ್ರ, ಶನಿ ಗಾಯತ್ರಿ ಮಂತ್ರ ಸೇರಿದಂತೆ ನಾಲ್ಕು ಪ್ರಮುಖ ಮಂತ್ರಗಳನ್ನು ಶನಿವಾರ ಪಠಿಸಬಹುದು. ಮಂತ್ರಜಪದ ಜೊತೆಗೆ ದಾನ-ಧರ್ಮ ಮತ್ತು ಸತ್ಕಾರ್ಯಗಳನ್ನು ಮಾಡುವುದಕ್ಕೂ ಧಾರ್ಮಿಕವಾಗಿ ಮಹತ್ವವಿದೆ.
Work Out On An Empty Stomach: ಮುಂಜಾನೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕೇ? ಅಥವಾ ಬೆಳಗ್ಗೆ ಏನಾದರೂ ತಿಂಡಿ ಸೇವಿಸಿ ವ್ಯಾಯಾಮ ಮಾಡಬಹುದೇ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಖಾಲಿ ಹೊಟ್ಟೆಯಲ್ಲಿ ಕಸರತ್ತು ಮಾಡುವುದರಿಂದ ಶರೀರದಲ್ಲಿರುವ ಅನಗತ್ಯ ಕೊಬ್ಬು ಬೇಗನೆ ಕರಗಿ ತೂಕ ಇಳಿಸಬಹುದು ಎನ್ನುವ ನಂಬಿಕೆ ಹಲವರಲ್ಲಿದೆ. ಇದೀಗ ವೈದ್ಯಕೀಯ ತಜ್ಞರೊಬ್ಬರು ಈ ಬಗ್ಗೆ ಸಲಹೆ ನೀಡಿದ್ದಾರೆ.
Transparent Sarees: ಪಾರದರ್ಶಕ ಸೀರೆಯುಟ್ಟು ಸೆಲೆಬ್ರಿಟಿಗಳಂತೆ ಕಾಣಲು ಬಯಸುತ್ತೀರಾ! ಆದರೂ ಅದು ಸಾಧ್ಯವಾಗುತ್ತಿಲ್ಲವೇ? ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್ ಹಾಗೂ ಆಯ್ಕೆ ಮಾಡುವ ವಿಧಾನವನ್ನು ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್. ಇನ್ನು, ಪಾರದರ್ಶಕ ಸೀರೆಗಳನ್ನು ಕೇವಲ ಕೊಂಡು ಹೇಗೇ ಬೇಕೋ ಹಾಗೆ ಉಟ್ಟರೇ ಸಾಲದು. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡುವುದು ಉತ್ತಮ. ಇಲ್ಲವಾದಲ್ಲಿ ಮುಜುಗರಕ್ಕೆ ಈಡಾಗಬೇಕಾದಿತು! ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್.
Mental Health: ಇತ್ತೀಚಿನ ದಿನಗಳಲ್ಲಿ ಜೆನ್ ಝೀಗಳಲ್ಲಿ ಮಾನಸಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಭಯ, ಖಿನ್ನತೆ, ಆತಂಕ. ಮುಂದಿನ ಹತ್ತು ವರ್ಷಗಳಲ್ಲಿ ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯವೇ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳು ಯಾವುದು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ನೀಡಿರುವ ಮಾಹಿತಿ ಇಲ್ಲಿದೆ.
Health Tips: ಪ್ರತಿದಿನ ತಾಜಾ ಹಣ್ಣುಗಳ ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಪೋಷಕಾಂಶಗಳು ಹಣ್ಣಿನಲ್ಲಿ ಸಮೃದ್ಧವಾಗಿವೆ. ಆದರೆ ತಜ್ಞರ ಪ್ರಕಾರ, ನಮಗೆ ಇಷ್ಟ ಬಂದಂತೆ ನಾವು ಹಣ್ಣುಗಳನ್ನು ಸೇವಿಸುವಂತಿಲ್ಲ. ಯಾವಾಗ ಮತ್ತು ಹೇಗೆ ಹಣ್ಣುಗಳನ್ನು ತಿನ್ನುತ್ತೇವೆ ಎಂಬುದು ಮುಖ್ಯ.
ಗೌರಿ ಹಬ್ಬದ ಸೀರೆ ಶಾಪಿಂಗ್ ಈಗಾಗಲೇ ಎಲ್ಲೆಡೆ ಭರದಿಂದ ಸಾಗಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಬಗೆಬಗೆಯ ಸೀರೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗೌರಿ ಹಬ್ಬದ ಸೆಲೆಬ್ರೆಷನ್ಗೆ ಟ್ರೆಂಡಿಯಾಗಿರುವ ಸೀರೆ ಖರೀದಿಗೆ ತೆರಳುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್. ಈ ಕುರಿತಂತೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಪ್ರತಿಭಾ ಸಂಶಿಮಠ್ ನೇತೃತ್ವದ ಮಿಸೆಸ್ ಇಂಡಿಯಾ ಆಸ್ಟ್ರಲ್ ಬ್ಯೂಟಿ ಪೇಜೆಂಟ್ ಯಶಸ್ವಿಯಾಗಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಈ ಬ್ಯೂಟಿ ಪೇಜೆಂಟ್ ಮೂಲಕ ನೂರಾರು ಮಾಡೆಲ್ಗಳು ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಕುರಿತಂತೆ ಅವರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಬಿಗ್ಬಾಸ್ ಸೀಸನ್13ರ ವೇದಿಕೆಯಲ್ಲಿ ಸುದೀಪ್ ಧರಿಸಿದ್ದ ಬ್ಲ್ಯಾಕ್ ಶೇಡ್ನ ವೆಲ್ವೆಟ್ ಡಿಸೈನರ್ ಜಾಕೆಟ್ ಸದ್ಯ ಹೈ ಫ್ಯಾಷನ್ ಲಿಸ್ಟ್ಗೆ ಸೇರ್ಪಡೆಯಾಗಿದೆ. ಅಂದಹಾಗೆ, ಸುದೀಪ್ರ ಈ ಅತ್ಯಾಕರ್ಷಕ ಔಟ್ಫಿಟ್ ಸೃಷ್ಟಿಕರ್ತ ಬೇರ್ಯಾರು ಅಲ್ಲ! ಎಂದಿನಂತೆ ಪ್ರತಿ ಬಾರಿಯೂ ಡಿಸೈನ್ ಮಾಡುವ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್. ಈ ಕುರಿತ ಡಿಟೇಲ್ಸ್ ಇಲ್ಲಿದೆ.
Gen Z: ಕಣ್ಣುರಿ, ಕತ್ತುನೋವು ಸೇರಿ ಜೆನ್ ಝೀಗಳನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಮುಖ್ಯವಾಗಿ ಸಣ್ಣ ವಯಸ್ಸಿಗೇ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.