ಬುಧವಾರ ಕಪ್ಪು ಬಟ್ಟೆ ಧರಿಸಿದರೆ ಏನಾಗುತ್ತದೆ ಗೊತ್ತಾ?
ಹಿಂದೂ ಸಂಪ್ರದಾಯದಲ್ಲಿ ಬುಧವಾರವನ್ನು ವಿಘ್ನಹರ್ತೃ ಶ್ರೀ ಗಣೇಶನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಈ ದಿನ ಬುಧ ಗ್ರಹದ ಪ್ರಭಾವ ಹೆಚ್ಚಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬುದ್ಧಿವಂತಿಕೆ, ಮಾತಿನ ಶಕ್ತಿ ಮತ್ತು ವಿವೇಚನೆಗೆ ಕಾರಣನಾದ ಬುಧ ಗ್ರಹವನ್ನು ಶಾಂತಗೊಳಿಸಲು ಭಕ್ತರು ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ. ಆದರೆ ಬುಧವಾರ ಕೆಲವು ಕೆಲಸಗಳನ್ನು ಮಾಡುವುದನ್ನು ಅಶುಭ ಎಂದು ನಂಬಲಾಗುತ್ತದೆ.