ವೆಡ್ಡಿಂಗ್ ಫ್ಯಾಷನ್ಗೆ ಲಗ್ಗೆ ಇಟ್ಟ ನೆಟ್ ಲೆಹೆಂಗಾ
ಈ ಬಾರಿಯ ವೆಡ್ಡಿಂಗ್ ಫ್ಯಾಷನ್ನಲ್ಲಿ ಪಾಸ್ಟೆಲ್ ಶೇಡ್ನ ನೆಟ್ ಲೆಹೆಂಗಾ ಸೂಪರ್ ಹಿಟ್ ಆಗಿವೆ. ಇದಕ್ಕೆ ಪೂರಕ ಎಂಬಂತೆ ಗಾಯಕಿ ಆಕೃತಿ ಕಕ್ಕರ್ ಧರಿಸಿದ ಈ ಲೆಹೆಂಗಾ ಇದೀಗ ವೈರಲ್ ಆಗಿದೆ. ಇದ್ಯಾವ ಬಗೆಯ ಲೆಹೆಂಗಾ. ಇಲ್ಲಿದೆ ವಿವರ.
ಸೂಪರ್ ಡ್ಯೂಪರ್ ಹಿಟ್ ಸೀರಿಯಲ್ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿಯ ಪ್ರಿ ಡ್ರೇಪ್ಡ್ ಸೀರೆ ಗೌನ್ ಮಹಿಳೆಯರನ್ನು ಸೆಳೆದಿದೆ. ರೂಪಾಲಿ ಗಂಗೂಲಿ ಉಟ್ಟಿರುವ ಪಾರ್ಟಿವೇರ್ ಪ್ರಿ ಡ್ರೇಪ್ಡ್ ಸೀರೆ ಡಾರ್ಕ್ ಶೇಡ್ನದ್ದಾಗಿದ್ದು, ಕತ್ತಲೆಯಲ್ಲೂ ಮಿನುಗುವ ಸಿಕ್ವೀನ್ಸ್ ಡಿಸೈನ್ ಹೊಂದಿದೆ. ಇದ್ಯಾವ ಬಗೆಯ ವಿಶೇಷ ಸೀರೆ ಗೌನ್? ಇಲ್ಲಿದೆ ವಿವರ.
Health Tips: ಡಯಾಬಿಟಿಸ್ ಎನ್ನುವುದು ಇಂದು ಸಾಮಾನ್ಯವಾಗಿದೆ. ಹಾಗಂತ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಬಿಟಿಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಡಯಾಬಿಟಿಸ್ ನಿಯಂತ್ರಣದಲ್ಲಿಡಲು ಎಷ್ಟು ಬಾರಿ ಟೆಸ್ಟ್ ಮಾಡಿಸಬೇಕು? ಎನ್ನುವ ಬಗ್ಗೆ ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ನಲ್ಲಿ ಡಾ. ಸುಮನ್ ಮಾಹಿತಿ ನೀಡಿದ್ದಾರೆ.
ವಾಸ್ತು ನಂಬಿಕೆಗಳ ಪ್ರಕಾರ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ, ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದರಿಂದ ಪತಿ–ಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನೆಯ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಈ ಚಿತ್ರವನ್ನು ಹಾಕಬಾರದು ಎಂದು ಸಲಹೆ ನೀಡಲಾಗುತ್ತದೆ. ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಇದೆ.
Brahmimuhurtha: ಬ್ರಾಹ್ಮಿ ಮುಹೂರ್ತ ಎಂದರೆ ಸಾಮಾನ್ಯವಾಗಿ ಬೆಳಗ್ಗೆ 4ರಿಂದ 5ರವರೆಗಿನ ಸಮಯ. ಅಂದರೆ ಸೂರ್ಯೋದಯಕ್ಕೂ ಮುನ್ನ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯದಲ್ಲಿ ಒಂದಷ್ಟು ಧನಾ ತ್ಮಕ ಬದಲಾವಣೆ ಗಳು ಉಂಟಾಗುತ್ತವೆ. ವೈಜ್ಞಾನಿಕವಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಆಗುವುದರ ಜತೆಗೆ ಒಂದಷ್ಟು ಧನಾತ್ಮಕ ಶಕ್ತಿಯ ಆಕರ್ಷಣೆಯು ಆಗುತ್ತದೆ. ಈ ಕುರಿತಾದ ವಿವರ ಇಲ್ಲಿದೆ.
Health Tips: ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆ್ಯಸಿಡಿಟಿ ಮತ್ತು ಎದೆಯುರಿಯ ಸಮಸ್ಯೆ ಬಂದಾಗ ಬಾಯಿಯಲ್ಲಿ ಹುಳಿ ರುಚಿಬಂದು ಹೊಟ್ಟೆ ಕಟ್ಟಿದ ಅನುಭವ ಆಗುತ್ತದೆ. ನಮ್ಮ ಬದಲಾದ ಜೀವನ ಶೈಲಿ, ಮಸಾಲೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾದರೆ ಈ ಸಮಸ್ಯೆಗೆ ಸುಲಭ ಪರಿಹಾರ ಏನು? ಆ್ಯಸಿಡಿಟಿಯಿಂದ ಕಾಡುವ ಎದೆ ನೋವನ್ನು ಹೇಗೆ ಕಂಡುಹಿಡಿಯುವುದು? ಎನ್ನುವ ಸಂಗತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಡಯಟಿಷಿಯನ್ ಅನಿತಾ ವಿವರಿಸಿದ್ದಾರೆ.
ಸ್ಟೈಪ್ಸ್ ಸೀರೆಯನ್ನು ಅತ್ಯಾಕರ್ಷಕವಾಗಿ ಉಡಬೇಕೇ! ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ಗಳು. ನಟಿ ಅನಲಾ ಸುಶ್ಮಿತಾ ಉಟ್ಟಿರುವ ಸ್ಟೈಲಿಂಗ್ ಸೇರಿದಂತೆ ಇನ್ನೆರಡು ಸಿಂಪಲ್ ಡ್ರೇಪಿಂಗ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
Relationship Tips: ಇತ್ತೀಚೆಗೆ ಸಣ್ಣ ಪುಟ್ಟ ಕಾರಣಗಳಿಗಾಗಿ ದಾಂಪತ್ಯ ಜೀವನ ಅನ್ನೋದು ಕೊನೆಗೊಳ್ಳುತ್ತಿದೆ. ಸಂಗಾತಿಯು ಪರಿಪೂರ್ಣವಾಗಿಲ್ಲ, ತಮ್ಮ ಬಯಕೆಗಳನ್ನು ಈಡೇರಿಸಿಲ್ಲ, ವೃತ್ತಿಜೀವನದ ಒತ್ತಡ ಹೀಗೆ ನಾನಾ ಕಾರಣದಿಂದ ಡಿವೊರ್ಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಎಷ್ಟೇ ವರ್ಷದ ಪ್ರೀತಿ ಇದ್ದರೂ ದಾಂಪತ್ಯದಲ್ಲಿ ವಿರಸ ಬರುವುದು ಇದೆ. ಹಾಗಾದರೆ ದಾಂಪತ್ಯದಲ್ಲಿ ಸಂಗಾತಿ ಜತೆಗೆ ಜಗಳ ಆಗುವುದು ಯಾವ ಕಾರಣಕ್ಕೆ? ಎಷ್ಟೇ ಪ್ರೀತಿ ಇದ್ದರೂ ಹೊಂದಾಣಿಕೆಯಾಗಲ್ಲ ಯಾಕೆ? ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.
Health Tips: ಅಡುಗೆ ಎಣ್ಣೆಗಳನ್ನು ಮಿಶ್ರ ಮಾಡಿ ಬಳಸಬಹುದೆ? ಇದು ಸದ್ಯ ಹಲವರು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸಮರ್ಪಕವಾಗಿ ಮಿಶ್ರ ಮಾಡಿದರೆ ತೊಂದರೆಯೇನಿಲ್ಲ. ಅಂದರೆ ಯಾವ ಎಣ್ಣೆಯ ಗುಣ ಏನು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಿಶ್ರ ಮಾಡಿದರೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಆಹಾರ ತಜ್ಞರು.
Maha Shivaratri: ಮಹಾ ಶಿವರಾತ್ರಿಯಂದು ಮಹಾದೇವನಿಗೆ ಪ್ರಿಯವಾದ ತಂಬಿಟ್ಟು ನೈವೇದ್ಯವನ್ನು ಭಕ್ತರು ವಿಶೇಷವಾಗಿ ತಯಾರಿಸುತ್ತಾರೆ. ಅಕ್ಕಿ, ಬೆಲ್ಲ, ಎಳ್ಳು, ಹುರಿಗಡಲೆ, ಕಡಲೆಬೀಜ ಮೊದಲಾದ ಪದಾರ್ಥಗಳಿಂದ ಈ ಸಾಂಪ್ರದಾಯಿಕ ಸಿಹಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸರಿಯಾದ ವಿಧಾನದಲ್ಲಿ ತಯಾರಿಸಿದ ತಂಬಿಟ್ಟು ಶಿವನ ಪೂಜೆಯಲ್ಲಿ ಪ್ರಮುಖ ನೈವೇದ್ಯ ಎನಿಸಿಕೊಂಡಿದೆ.
Maha Shivaratri: ಮಹಾಶಿವರಾತ್ರಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಆಧ್ಯಾತ್ಮಿಕ ಪರ್ವ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಈ ಹಬ್ಬವು ಉಪವಾಸ, ಜಾಗರಣೆ ಮತ್ತು ಶಿವಪೂಜೆಯ ಮೂಲಕ ಮನಸ್ಸಿನ ಶುದ್ಧೀಕರಣಕ್ಕೆ ದಾರಿ ತೋರಿಸುತ್ತದೆ. ಶಿವ–ಪಾರ್ವತಿ ವಿವಾಹ ಹಾಗೂ ಹಾಲಾಹಲ ವಿಷಪಾನದ ಪೌರಾಣಿಕ ಹಿನ್ನೆಲೆಯೊಂದಿಗೆ, ಭಕ್ತರು ನಾಲ್ಕು ಯಾಮಗಳ ಪೂಜೆಯಲ್ಲಿ ಭಾಗವಹಿಸಿ ಶಿವನ ಕೃಪೆ ಪಡೆಯುತ್ತಾರೆ.
Chardham Yatra: ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಬೆಂಗಳೂರಿನ ಅಡಿಗಾಸ್ ಯಾತ್ರಾ ಸಂಸ್ಥೆಯು ಇದೀಗ ಚಾರ್ ಧಾಮ್ ಯಾತ್ರೆ ಹಮ್ಮಿಕೊಂಡಿದೆ. ಈ ಟೂರ್ ಪ್ಯಾಕೇಜ್ನಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಕುರಿತ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.
ಆಡು ಮಾತಿನಲ್ಲಿ ಹಿಪ್ಪಲಿ ಎಂದೇ ಕರೆಸಿಕೊಳ್ಳುವ ಇದು ಆಯುರ್ವೇದದಲ್ಲಿ ಮಾತ್ರವಲ್ಲ, ಶತಮಾನಗಳಿಂದ ಪರಂಪರಾಗತ ಔಷಧಿಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ. ನೋಡುವುದಕ್ಕೆ ಕರಿ ಕಾಳು ಮೆಣಸನ್ನು ಪೋಣಿಸಿ ಇರಿಸಿದಂತೆ ಕಾಣುವ ಬೆರಳುದ್ದದ ಹಿಪ್ಪಲಿ, ಸೂಪರ್ಫುಡ್ ಎಂಬ ಹಣೆಪಟ್ಟಿಯನ್ನೂ ಗಳಿಸಿದೆ. ಹಲವು ಬಗೆಯಲ್ಲಿ ಔಷಧೀಯ ಉಪಯೋಗಗಳನ್ನು ಹೊಂದಿರುವ ಇದರ ಉಪಯೋಗಗಳು ಏನೇನು?
ಇತ್ತೀಚೆಗೆ ರಿಲೀಸ್ ಆದ ತೆಲುಗಿನ ʼದಿ ರಾಜಾಸಾಬ್ʼ ಚಿತ್ರದಲ್ಲಿ ಪ್ರಭಾಸ್ ಜತೆಗೆ ಮಿಂಚಿದ ನಟಿ ನಿಧಿ ಅಗರ್ವಾಲ್ ಗ್ಲಾಮರಸ್ ಲುಕ್ ನೀಡುವ ಶೀರ್ ಸೀರೆಯ ಮೋಹಪಾಶಕ್ಕೆ ಒಳಗಾಗಿದ್ದಾರೆ. ಏನಿದು ಶೀರ್ ಸೀರೆ? ನೀವು ಅವರಂತೆ ಕಾಣಿಸಲು ಪಾಲಿಸಬೇಕಾದ್ದೇನು? ಈ ಕುರಿತಂತೆ ಫ್ಯಾಷನಿಸ್ಟಾಗಳು ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.