ಮಂಗಳವಾರ ಈ ಮಂತ್ರಗಳನ್ನು ಜಪಿಸಿದರೆ ಜೀವನದಲ್ಲಿ ಸಮೃದ್ಧಿ ಖಚಿತ
ಮಂಗಳವಾರ ಆಂಜನೇಯ ಸ್ವಾಮಿ ಹಾಗೂ ಮಂಗಳದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ ಗಣೇಶ ಮತ್ತು ಮಂಗಳದೇವರ ಮಂತ್ರಗಳನ್ನು ಜಪಿಸುವುದರಿಂದ ಮನಸ್ಸಿನ ಶಾಂತಿ, ಕುಟುಂಬ ಸೌಹಾರ್ದತೆ, ವ್ಯವಹಾರದಲ್ಲಿ ಅಭಿವೃದ್ಧಿ ಹಾಗೂ ಸಾಲಮುಕ್ತಿಯಂತಹ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಮಂಗಳ ದೋಷ ನಿವಾರಣೆ ಹಾಗೂ ವಿವಾಹ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೂ ಮಂಗಳವಾರದ ಜ್ಯೋತಿಷ್ಯ ಕ್ರಮಗಳು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.