ಶನಿವಾರ ಉಪ್ಪು, ಕಬ್ಬಿಣ ಖರೀದಿ ಅಶುಭವೇ?
ಶನಿವಾರವನ್ನು ಶನಿದೇವರಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಹಾಗೂ ಪುರಾಣ ನಂಬಿಕೆಗಳ ಪ್ರಕಾರ ಈ ದಿನ ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭ ಎಂದು ಹೇಳಲಾಗುತ್ತದೆ. ಉಪ್ಪು, ಕಪ್ಪು ಎಳ್ಳು, ಕಬ್ಬಿಣದ ವಸ್ತುಗಳು, ಕತ್ತರಿ ಹಾಗೂ ಕಪ್ಪು ಶೂಗಳನ್ನು ಶನಿವಾರ ಮನೆಗೆ ತರಬಾರದು ಎಂಬ ನಂಬಿಕೆ ಇದೆ. ಇವುಗಳನ್ನು ಖರೀದಿಸಿದರೆ ಆರ್ಥಿಕ ಸಂಕಷ್ಟ, ಕಲಹ, ಅಡಚಣೆ ಮತ್ತು ದುರಾದೃಷ್ಟ ಹೆಚ್ಚಾಗಬಹುದು ಎಂದು ಹಿರಿಯರು ಹಾಗೂ ಶಾಸ್ತ್ರಗಳು ಹೇಳುತ್ತವೆ.