ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ
Health Tips: ಕೂದಲು ಉದುರುವ ಸಮಸ್ಯೆಗೆ ಯಾವಾಗಲೂ ಸಪ್ಲಿಮೆಂಟ್ಗಳ ಅಗತ್ಯವಿಲ್ಲ ಎಂದು ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ತಿಳಿಸಿದ್ದಾರೆ. ಸೂರ್ಯಕಾಂತಿ ಬೀಜ, ನುಗ್ಗೆ ಸೊಪ್ಪಿನ ಪುಡಿ, ಪನೀರ್, ನೆಲ್ಲಿಕಾಯಿ, ಅಗಸೆ ಬೀಜ ಹಾಗೂ ಮೊಸರು ಸೇವಿಸುವುದರಿಂದ ಕೂದಲಿನ ಆರೋಗ್ಯವನ್ನು ನೈಸರ್ಗಿಕವಾಗಿ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಸಮಸ್ಯೆ ತೀವ್ರವಾಗಿದ್ದರೆ ವೈದ್ಯರ ಸಲಹೆ ಪಡೆದು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.