ಪಲಕ್ ತಿವಾರಿಯ ಪಿಂಕ್ ಸೀರೆಗೆ ಫಾಲೋವರ್ಸ್ ಫಿದಾ
Palak Tiwari: ಬಾಲಿವುಡ್ನ ಯುವ ನಟಿ ಪಲಕ್ ತಿವಾರಿ ಉಟ್ಟಿದ್ದ ಪಿಂಕ್ ಸೀರೆಗೆ ಫಾಲೋವರ್ಸ್ ಫಿದಾ ಆಗಿದ್ದಾರೆ. ಅಷ್ಟು ಮಾತ್ರವಲ್ಲ, ಈ ವೆಡ್ಡಿಂಗ್ ಸೀಸನ್ನಲ್ಲಿ ಈ ಸೀರೆಯ ರಿಪ್ಲಿಕಾಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ.
ಸಾಮಾನ್ಯವಾಗಿ ಯಾವುದೇ ಪೂಜೆ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಶಂಖವನ್ನು ಊದಲಾಗುತ್ತದೆ. ಶಂಖದಿಂದ ಬರುವ ಶಬ್ದವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎನ್ನುವುದನ್ನು ಪೂರ್ವಜರು ಕಂಡುಕೊಂಡಿದ್ದರು. ಇದು ಧಾರ್ಮಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕ ಮಹತ್ವವನ್ನೂ ಹೊಂದಿದ್ದು, ಹಲವು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗಲಿದೆ ಎಂದು ತಿಳಿಸಿದ್ದಾರೆ ಪ್ರೊ.ಸುತ್ತೂರು ಮಾಲಿನಿ.
ಕೆಲಸದ ಒತ್ತಡ ಮತ್ತು ಆಹಾರ ಪದ್ದತಿಯಿಂದ ಸದಾ ಸುಸ್ತು ಮತ್ತು ಆಯಾಸ ಅನುಭವಿಸುವುದು ಸಾಮಾನ್ಯ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯಿಂದಲೂ ಆಗಿರಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಅಥವಾ ವಿಟಮಿನ್ಸ್ಗಳಾದ ಬಿ12 ಮತ್ತು ಬಿ9ನಂತಹ ಪೋಷಕಾಂಶಗಳು ಕಡಿಮೆಯಾದಾಗ ಈ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇದನ್ನು ನಿವಾರಿಸಲು ಸರಿಯಾದ ಆಹಾರ ಕ್ರಮ ಪಾಲಿಸದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
Health Tips: ನೀರಿನ ಸೇವನೆಯು ಜೀರ್ಣಕ್ರಿಯೆ, ಪೋಷಕಾಂಶಗಳ ಅಭಿವೃದ್ಧಿ ಮತ್ತು ರಕ್ತ ಪರಿಚಲನೆ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳನ್ನು ಬೆಂಬಲಿಸುವಂತೆ ಮಾಡುತ್ತದೆ. ಹಾಗಾದರೆ ನೀರನ್ನು ಯಾವ ಪ್ರಮಾಣದಲ್ಲಿ ಕುಡಿಯಬೇಕು? ನೀರು ಕುಡಿಯುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಎನ್ನುವುದರ ಕುರಿತು ಡಯಟಿಷಿಯನ್ ಅನಿತಾ ಮಾಹಿತಿ ನೀಡಿದ್ದಾರೆ.
ಸೋಮಾರಿತನದಿಂದ ಕೂತಿದ್ದರೆ ದುಡಿಮೆ ಕಡಿಮೆಯಾಗಿ ಕೊನೆಗೆ ಏನೂ ಇಲ್ಲವಾಗುತ್ತದೆ ಎನ್ನುವ ಗಾದೆ ಮಾತು ಸತ್ಯವೇ. ಆದರೆ ಸದಾ ವ್ಯಸ್ತವಾಗಿರುವ ಬದುಕಿನಲ್ಲಿ ಎಂದಾದರೂ ಒಂದು ದಿನ ಸೋಮಾರಿಯಾಗಿರುವುದು ಅಗತ್ಯ ಎನ್ನುತ್ತವೆ ಅಧ್ಯಯನಗಳು. ಕೆಲಸವಿಲ್ಲದೆ ಸೋಮಾರಿಯಾಗಿ ಇರಕೂಡದು ಎನ್ನುವಂಥ ಎಚ್ಚರಿಕೆಗಳ ನಡುವೆ ʻಸೋಮಾರಿ ದಿನʼದಂಥ ಆಲಸಿತನದ ಉಪದೇಶ ಮಾಡುತ್ತಿರುವುದಕ್ಕೆ ನಗು ಬಂದರೂ ಆಕ್ಷೇಪವಿಲ್ಲ. ಆದರೂ ಅಪರೂಪಕ್ಕೊಮ್ಮೆ ಆಲಸಿಯಾಗಿರುವುದು ಅಗತ್ಯವಂತೆ. ಅದಕ್ಕೆ ಕಾರಣಗಳೂ ಉಂಟು!
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೇ ದೃಷ್ಟಿ ದೋಷ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ 40-50 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಂಡುಬರುವ ಕಣ್ಣಿನ ಸಮಸ್ಯೆಗಳು ಈಗ ಪುಟ್ಟ ಮಕ್ಕಳಲ್ಲಿಯೇ ಸಾಮಾನ್ಯವಾಗಿವೆ. ಖ್ಯಾತ ಆಯುರ್ವೇದ ತಜ್ಞ ಮಲ್ಲಿಕಾರ್ಜುನ ಡಂಬಳ್ ಅವರ ಪ್ರಕಾರ, ದೇಹದ ‘ಆಲೋಚಕ ಪಿತ್ತ’ ಅಥವಾ ತೇಜಸ್ಸು ಕುಂದುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಪೌಷ್ಟಿಕ ಆಹಾರದ ಕೊರತೆ ಮತ್ತು ಜೀರ್ಣಾಂಗ ಸಮಸ್ಯೆಗಳೂ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ.
ಸೂಪರ್ ಡ್ಯೂಪರ್ ಹಿಟ್ ಸೀರಿಯಲ್ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿಯ ಪ್ರಿ ಡ್ರೇಪ್ಡ್ ಸೀರೆ ಗೌನ್ ಮಹಿಳೆಯರನ್ನು ಸೆಳೆದಿದೆ. ರೂಪಾಲಿ ಗಂಗೂಲಿ ಉಟ್ಟಿರುವ ಪಾರ್ಟಿವೇರ್ ಪ್ರಿ ಡ್ರೇಪ್ಡ್ ಸೀರೆ ಡಾರ್ಕ್ ಶೇಡ್ನದ್ದಾಗಿದ್ದು, ಕತ್ತಲೆಯಲ್ಲೂ ಮಿನುಗುವ ಸಿಕ್ವೀನ್ಸ್ ಡಿಸೈನ್ ಹೊಂದಿದೆ. ಇದ್ಯಾವ ಬಗೆಯ ವಿಶೇಷ ಸೀರೆ ಗೌನ್? ಇಲ್ಲಿದೆ ವಿವರ.
Health Tips: ಡಯಾಬಿಟಿಸ್ ಎನ್ನುವುದು ಇಂದು ಸಾಮಾನ್ಯವಾಗಿದೆ. ಹಾಗಂತ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಬಿಟಿಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಡಯಾಬಿಟಿಸ್ ನಿಯಂತ್ರಣದಲ್ಲಿಡಲು ಎಷ್ಟು ಬಾರಿ ಟೆಸ್ಟ್ ಮಾಡಿಸಬೇಕು? ಎನ್ನುವ ಬಗ್ಗೆ ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ನಲ್ಲಿ ಡಾ. ಸುಮನ್ ಮಾಹಿತಿ ನೀಡಿದ್ದಾರೆ.
ವಾಸ್ತು ನಂಬಿಕೆಗಳ ಪ್ರಕಾರ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ, ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದರಿಂದ ಪತಿ–ಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನೆಯ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಈ ಚಿತ್ರವನ್ನು ಹಾಕಬಾರದು ಎಂದು ಸಲಹೆ ನೀಡಲಾಗುತ್ತದೆ. ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಇದೆ.
Brahmimuhurtha: ಬ್ರಾಹ್ಮಿ ಮುಹೂರ್ತ ಎಂದರೆ ಸಾಮಾನ್ಯವಾಗಿ ಬೆಳಗ್ಗೆ 4ರಿಂದ 5ರವರೆಗಿನ ಸಮಯ. ಅಂದರೆ ಸೂರ್ಯೋದಯಕ್ಕೂ ಮುನ್ನ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯದಲ್ಲಿ ಒಂದಷ್ಟು ಧನಾ ತ್ಮಕ ಬದಲಾವಣೆ ಗಳು ಉಂಟಾಗುತ್ತವೆ. ವೈಜ್ಞಾನಿಕವಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಆಗುವುದರ ಜತೆಗೆ ಒಂದಷ್ಟು ಧನಾತ್ಮಕ ಶಕ್ತಿಯ ಆಕರ್ಷಣೆಯು ಆಗುತ್ತದೆ. ಈ ಕುರಿತಾದ ವಿವರ ಇಲ್ಲಿದೆ.
Health Tips: ಸಾಮಾನ್ಯವಾಗಿ ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆ್ಯಸಿಡಿಟಿ ಮತ್ತು ಎದೆಯುರಿಯ ಸಮಸ್ಯೆ ಬಂದಾಗ ಬಾಯಿಯಲ್ಲಿ ಹುಳಿ ರುಚಿಬಂದು ಹೊಟ್ಟೆ ಕಟ್ಟಿದ ಅನುಭವ ಆಗುತ್ತದೆ. ನಮ್ಮ ಬದಲಾದ ಜೀವನ ಶೈಲಿ, ಮಸಾಲೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾದರೆ ಈ ಸಮಸ್ಯೆಗೆ ಸುಲಭ ಪರಿಹಾರ ಏನು? ಆ್ಯಸಿಡಿಟಿಯಿಂದ ಕಾಡುವ ಎದೆ ನೋವನ್ನು ಹೇಗೆ ಕಂಡುಹಿಡಿಯುವುದು? ಎನ್ನುವ ಸಂಗತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಡಯಟಿಷಿಯನ್ ಅನಿತಾ ವಿವರಿಸಿದ್ದಾರೆ.
ಸ್ಟೈಪ್ಸ್ ಸೀರೆಯನ್ನು ಅತ್ಯಾಕರ್ಷಕವಾಗಿ ಉಡಬೇಕೇ! ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ಗಳು. ನಟಿ ಅನಲಾ ಸುಶ್ಮಿತಾ ಉಟ್ಟಿರುವ ಸ್ಟೈಲಿಂಗ್ ಸೇರಿದಂತೆ ಇನ್ನೆರಡು ಸಿಂಪಲ್ ಡ್ರೇಪಿಂಗ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.