ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೈಫ್‌ಸ್ಟೈಲ್‌

Vastu Tips: ಮನೆಯಲ್ಲಿ ಕೀಲಿಕೈ ಎಲ್ಲಿಡಬೇಕು ಗೊತ್ತಾ? ವಾಸ್ತುಗೆ ವಿರುದ್ಧವಾಗಿ ಈ ತಪ್ಪುಗಳನ್ನು ಮಾಡಬೇಡಿ!

ಮನೆಯಲ್ಲಿ ಕೀಲಿಗಳನ್ನು ಇಲ್ಲಿ ಇಟ್ಟರೆ ಅದೃಷ್ಟ ಹೆಚ್ಚುತ್ತದೆ!

ಮನೆಯಲ್ಲಿ ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಬಹಳ ಮುಖ್ಯ. ತಪ್ಪು ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಬಹುದು, ಸರಿಯಾದ ಸ್ಥಳದಲ್ಲಿ ಇಟ್ಟರೆ ಸಕಾರಾತ್ಮಕ ಶಕ್ತಿ ಮತ್ತು ಸುರಕ್ಷತೆ ಹೆಚ್ಚುತ್ತದೆ. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ ಕೀಲಿಗಳನ್ನು ಎಲ್ಲಿಡಬೇಕು, ಯಾವ ದಿಕ್ಕುಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

Astro Tips: ಜೀವನದಲ್ಲಿ ಯಶಸ್ಸು ಬೇಕಾ? ತಾವರೆಯಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತೆ

ಕಮಲದಿಂದ ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮೀ ಕೃಪೆ ಖಚಿತ

ಕಮಲ ಹೂವಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದ್ದು, ಲಕ್ಷ್ಮೀ ದೇವಿ ಕೃಪೆಯ ಸಂಕೇತ ಎನಿಸಿಕೊಂಡಿದೆ. ಶುಕ್ರವಾರ, ಬುಧವಾರ ಮತ್ತು ಏಕಾದಶಿಯಂದು ಕಮಲದಿಂದ ಪೂಜೆ ಮಾಡಿದರೆ ಧನಲಾಭ, ಸಂತಾನ ಭಾಗ್ಯ, ಕುಟುಂಬ ಶಾಂತಿ ಮತ್ತು ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯ ಪ್ರಕಾರ ಕಮಲದ ಹೂವಿನಿಂದ ಯಾವೆಲ್ಲ ದೋಷ ನಿವಾರಣೆಯಾಗಬಹುದು ಎಂಬುದನ್ನು ನೋಡೋಣ.

ಬೇಸಗೆಯಲ್ಲಿ ಆಯಾಸವೇ? ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

Summer health tips: ಬೇಸಗೆಯಲ್ಲಿ ಆಯಾಸ ಕಾಡುವುದು ಮಾಮೂಲಿ. ಬರೀ ನೀರನ್ನೇ ಕುಡಿಯುತ್ತ ಹೋದರೆ ಹೊಟ್ಟೆ ತುಂಬಿದಂತಾಗಿ, ಏನನ್ನೂ ತಿನ್ನಲಾಗದೆ ಪೌಷ್ಟಿಕಾಂಶಗಳ ಕೊರತೆಯಾಗಿ ನಿಶ್ಶಕ್ತಿ ಕಾಡಬಹುದು. ಬೇಸಗೆಯುದ್ದಕ್ಕೂ ಬರೀ ನೀರನ್ನೇ ಕುಡಿಯುತ್ತಾ ಕಳೆಯುವುದು ಸಾಧ್ಯವಿಲ್ಲವಲ್ಲ. ಹಾಗಾದರೆ ದೇಹಕ್ಕೆ ದೊರೆಯುವ ನೀರಿನಂಶವನ್ನು ಹೆಚ್ಚಿಸಲು ಏನು ಮಾಡಬೇಕು?

Nita Ambani: ಚಿನ್ನದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

ಚಿನ್ನದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

NMACC Anniversary: ಮುಂಬೈನಲ್ಲಿ ನಡೆದ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ (ಎನ್‌ಎಂಎಸಿಸಿ) ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೊನ್ನಿನ ಪ್ರಭೆಯಂತೆ ಮಿಂಚುವ ಈ ಚಂದದ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ನೀತಾ ಅಂಬಾನಿ ಕಂಗೊಳಿಸಿದ್ದಾರೆ.

ಮೊಸರು, ಲಸ್ಸಿ, ಮಜ್ಜಿಗೆ: ಬೇಸಿಗೆಯಲ್ಲಿ ಯಾರು ಹಿತವರು ಈ ಮೂವರೊಳಗೆ?

ಮೊಸರು, ಲಸ್ಸಿ, ಮಜ್ಜಿಗೆ- ಯಾವುದು ದೇಹಕ್ಕೆ ಉತ್ತಮ?

Health Tips: ಬಿಸಿಲು ಮೇಲೇರಿದ ಹೊತ್ತಿನಲ್ಲಿ, ದೇಹದ ಉಷ್ಣತೆಯೂ ನೆತ್ತಿಗೇರಿದ ಹೊತ್ತಿನಲ್ಲಿ ಒಂದೊಂದು ಲೋಟ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಹೊಟ್ಟೆಗಿಳಿಸಿದರೆ ಜೀವಕ್ಕೆ ತಂಪೆನಿಸುವುದು ಹೌದು. ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಅವುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೂ ಒಂದೇ ಅಲ್ಲ. ಹಾಗಾದರೆ ಏನು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳಲ್ಲಿ?

ಏಪ್ರಿಲ್‌ 5 ವಿಕಟ ಸಂಕಷ್ಟ ಚತುರ್ಥಿ; ವ್ರತದ ಮಹತ್ವ, ಪೂಜೆ ವಿಧಾನ, ಪಾಲಿಸಬೇಕಾದ ನಿಯಮಗಳು ಇಲ್ಲಿದೆ

ವಿಕಟ ಸಂಕಷ್ಟ ಚತುರ್ಥಿ ಏಕೆ ಆಚರಿಸಬೇಕು?

Vikata Sankashti Chaturthi 2026: ಚೈತ್ರ ಮಾಸದಲ್ಲಿ ಬರುವ ವಿಕಟ ಸಂಕಷ್ಟ ಚತುರ್ಥಿ ಗಣೇಶನ ವಿಶೇಷ ರೂಪಕ್ಕೆ ಸಮರ್ಪಿತವಾಗಿದೆ. ಈ ದಿನ ಉಪವಾಸ ಮತ್ತು ಪೂಜೆ ಮಾಡುವುದರಿಂದ ಜೀವನದ ಅಡೆತಡೆಗಳು, ಸಾಲ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Lekana Hegde interview: ಇಲ್ಲಿದೆ, ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು!

ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು

Miss universe Karnataka 2026: ಮಿಸ್‌ ಯೂನಿವರ್ಸ್ ಕರ್ನಾಟಕ 2026 ಕಿರೀಟ ಗೆದ್ದ ನಂತರ ಲೇಖನಾ ಹೆಗ್ಡೆ ಮೊತ್ತ ಮೊದಲ ಸಂದರ್ಶನ ವಿಶ್ವವಾಣಿ ನ್ಯೂಸ್‌ಗೆ ನೀಡಿದ್ದು, ಅವರ ಮೊದಲ ಫ್ಯಾಷನ್‌ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲವೇ?: ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಗೋಡಂಬಿ ಸೇವನೆ ಆರೋಗ್ಯಕ್ಕೆ ಒಳಿತೇ?

Health Tips: ಭಾರತೀಯ ಅಡುಗೆಮನೆಗಳಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ರುಚಿಗೆಂದೇ ಹಾಕುವ ಮುಖ್ಯ ವಸ್ತುಗಳಲ್ಲಿ ಗೋಡಂಬಿ ಅಥವಾ ಗೇರುಬೀಜ ಸಹ ಒಂದು. ಯಾವುದೇ ಬಗೆಯ ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತ-ಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.

Vastu Tips: ಮನೆಗೆ ಶುಭ ತರೋ ಲಿವಿಂಗ್ ರೂಮ್ ವಾಸ್ತು ಹೇಗಿರಬೇಕು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಈ ವಾಸ್ತು ಟಿಪ್ಸ್ ಪಾಲಿಸಿದರೆ ಮನೆಗೆ ಬರುತ್ತದೆ ಶುಭ- ಲಾಭ

ಲಿವಿಂಗ್ ರೂಮ್ ಮನೆಯ ಪ್ರಮುಖ ಭಾಗವಾಗಿದ್ದು, ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಧನಾತ್ಮಕ ಶಕ್ತಿ ಹೆಚ್ಚಾಗಿ, ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳಲ್ಲಿ ಉತ್ತಮ ಪರಿಣಾಮ ಕಾಣಬಹುದು. ಹಾಗಾಗಿ ನಾವಿಂದು ವಾಸ್ತು ಶಾಸ್ತ್ರದ ಸಲಹೆಯಂತೆ ಲಿವಿಂಗ್ ರೂಮ್ ಹೇಗಿರಬೇಕು, ಯಾವ ರೀತಿಯ ವ್ಯವಸ್ಥೆ ಉತ್ತಮ, ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಯಾವ ವಾಸ್ತು ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದೇವೆ.

Astro Tips: ಶನಿವಾರ ಈ ತಪ್ಪುಗಳನ್ನು ಮಾಡಿ ಹನುಮಂತನ ಕೋಪಕ್ಕೆ ಕಾರಣವಾಗಬೇಡಿ!

ಶನಿವಾರ ಈ ಕೆಲಸಗಳನ್ನು ಮಾಡಬಾರದು ಯಾಕೆ ಗೊತ್ತಾ?

ಶನಿವಾರ ಹನುಮಂತನಿಗೆ ಸಮರ್ಪಿತ ಪವಿತ್ರ ದಿನ. ಈ ದಿನಗಳಲ್ಲಿ ಕೆಲವು ತಪ್ಪುಗಳನ್ನು ತಪ್ಪಿಸಿ, ಕೆಲ ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಶನಿವಾರ ಯಾವ ಕೆಲಸಗಳನ್ನು ಮಾಡಬಾರದು? ತಪ್ಪಾಗಿ ಮಾಡಿದರೆ ಅದರ ಪರಿಣಾಮ ಏನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟ್ರಾಬೆರಿ ಚೀಸ್‌ಕೇಕ್ ಫಿಲ್ಲಿಂಗ್‌ನೊಂದಿಗೆ ಚಾಕೊಲೇಟ್ ಶೆಲ್ ಈಸ್ಟರ್ ಮೊಟ್ಟೆಗಳು

ಸ್ಟ್ರಾಬೆರಿ ಚೀಸ್‌ಕೇಕ್ ಫಿಲ್ಲಿಂಗ್‌ನೊಂದಿಗೆ ಚಾಕೊಲೇಟ್ ಶೆಲ್

ಸ್ಟ್ರಾಬೆರಿ ಚೀಸ್‌ಕೇಕ್ ಫಿಲ್ಲಿಂಗ್‌ನೊಂದಿಗೆ ಚಾಕೊಲೇಟ್ ಶೆಲ್ ಈಸ್ಟರ್ ಮೊಟ್ಟೆಗಳು. ಡಿ ಪ್ರಕಾಶ್ ಕುಮಾರ್, ಎಕ್ಸಿಕ್ಯೂಟಿವ್ ಶೆಫ್, ವುಡ್‌ರೋಸ್ ಕ್ಲಬ್ ಬೈ ಬ್ರಿಗೇಡ್. ಪರಂಪರೆಯ ಹೆಚ್ಚಿನ ಸಕ್ಕರೆ ಇರುವ ಮಿಠಾಯಿಗಳ ಬದಲು, ಸಕ್ಕರೆರಹಿತ ಮಿಲ್ಕ್ ಚಾಕೊಲೇಟ್ ಮತ್ತು ಹಗುರವಾದ ರಿಕೋಟಾ ಚೀಸ್ ಬಳಸಿ ತಯಾರಿಸಿದ ಈ ಆರೋಗ್ಯಕರ ಈಸ್ಟರ್ ರೆಸಿಪಿಯನ್ನು ಸವಿದು, ರುಚಿ ಮತ್ತು ಆರೋಗ್ಯದ ಸಮತೋಲನವನ್ನು ಆನಂದಿಸಿ.

ಕಷ್ಟಗಳು ನಮಗೆ ಹೆಚ್ಚು ಕಾಡುತ್ತೆ ಎಂದು ಅನ್ನಿಸೋದ್ಯಾಕೆ? ಈ ಮನಸ್ಥಿತಿ ಬದಲಿಸೋದು ಹೇಗೆ? Video

ಕಷ್ಟದ ಸಂದರ್ಭವನ್ನು ಎದುರಿಸುವುದು ಹೇಗೆ?

ಸಾಕಷ್ಟು ಜನರು ಕಷ್ಟಗಳನ್ನು ಎದುರಿಸಿದ ನಂತರ ತಮ್ಮ ಜೀವನ ಕಷ್ಟದಿಂದಲೇ ಕೂಡಿದೆ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಿರುವಾಗ ನಾವು ಹೇಗೆ ಮಾನಸಿಕ ಸ್ಥಿರತೆಯನ್ನು ಬದಲಿಸಿಕೊಳ್ಳಬೇಕು? ಎದುರಾದ ಸನ್ನಿವೇಶವನ್ನು ಹೇಗೆ ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಮನೋ ಶಾಸ್ತ್ರಜ್ಞ ಡಾ. ನವೀನ್‌ ನೆಲ್ಲಂಗಲ ತಿಳಿಸಿದ್ದಾರೆ.

ಜೀವನದ ಕಷ್ಟ ಉರುಳಿಸುವ ಶಕ್ತಿ ಉರುಳು ಸೇವೆಗಿದೆ! ಅದು ಹೇಗೆ ನೋಡಿ

ಉರುಳು ಸೇವೆ ಮಾಡುವುದರಿಂದ ಆರೋಗ್ಯ ಲಾಭಗಳೇನು?

Health Tips: ಜನರು ಭಕ್ತಿಯಿಂದ ಉರುಳು ಸೇವೆ ಮಾಡುತ್ತಾರೆ. ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು, ಆರೋಗ್ಯ ವೃದ್ಧಿಗೆ, ಅಂದು ಕೊಂಡ ಕೆಲಸ ಕಾರ್ಯಗಳನ್ನು ಪೂರೈಸಲು ಉರುಳು ಸೇವೆಯನ್ನು ತನ್ನ ಇಷ್ಟದ ದೇವರಿಗೆ ಸಮರ್ಪಿಸುತ್ತಾರೆ. ಇದು ದೈಹಿಕವಾಗಿ ಆರೋಗ್ಯ ವೃದ್ದಿ ಮಾಡುವುದಲ್ಲದೆ ಮಾನಸಿಕವಾಗಿಯೂ ಹಲವು ಆರೋಗ್ಯ ಲಾಭ ಹೊಂದಿದೆ. ಈ ಸೇವೆಯಿಂದ ವ್ಯಕ್ತಿಯಲ್ಲಿ ಯಾವೆಲ್ಲ ಬದಲಾವಣೆ ಕಂಡುಬರುತ್ತದೆ ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

Health Tips: ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?

ಮೂಗಿನಲ್ಲಿ ರಕ್ತ ಬರುತ್ತಿದ್ದೆಯೇ? ಕಾರಣವೇನು?

ಮೂಗಿನಲ್ಲಿ ರಕ್ತ ಬರುವುದು ಬಹಳಷ್ಟು ಜನರಿಗೆ ಒಂದಲ್ಲ ಒಂದು ಬಾರಿ ಆಗಿರಬಹುದಾದ ಸಮಸ್ಯೆ. ಇದೇನು ಅಂಥ ಗಂಭೀರ ಸಮಸ್ಯೆ ಅಲ್ಲವಾದರೂ, ಆಗುತ್ತಿರುವುದೇಕೆ ಎನ್ನುವುದನ್ನು ತಿಳಿದು ಕೊಳ್ಳುವುದು ಮುಖ್ಯ. ಅದರಲ್ಲೂ ಬೇಸಗೆಯ ದಿನಗಳಲ್ಲಿ ಹೀಗಾಗುವುದಕ್ಕೆ ಕಾರಣಗಳೇನು ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

Chanakya Nit: ಈ ಕೆಲಸಗಳನ್ನ ಏಕಾಂತದಲ್ಲಿ ಮಾತ್ರ ಮಾಡಬೇಕು ಎನ್ನುತ್ತಾರೆ ಚಾಣಕ್ಯ!

ಏಕಾಂತವೇ ಯಶಸ್ಸಿನ ಮಂತ್ರ ಎನ್ನುತ್ತಾರೆ ಚಾಣಕ್ಯ

ಚಾಣಕ್ಯರ ಪ್ರಕಾರ, ಏಕಾಂತವು ಮನಸ್ಸಿಗೆ ಸ್ಪಷ್ಟತೆ ನೀಡುವುದಷ್ಟೇ ಅಲ್ಲ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಹಾಗಾಗಿ ಕೆಲ ವಿಷಯಗಳನ್ನು ಏಕಾಂತದಲ್ಲಿ ಮಾಡುವುದು ಉತ್ತಮ ಎಂಬುದು ಅವರ ಸಲಹೆ. ಹಾಗಾದ್ರೆ, ಚಾಣಕ್ಯರು ಸೂಚಿಸಿದಂತೆ ಯಾವ ಕಾರ್ಯಗಳನ್ನು ಏಕಾಂತದಲ್ಲಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

Astro Tips: ತುಳಸಿ ಗಿಡ ನೀಡುವ ಈ ಸೂಚನೆಗಳು ಶುಭವೇ? ಅಶುಭವೇ? ಇಲ್ಲಿದೆ ಸಂಪೂರ್ಣ ಮಾಹಿತಿ!

ತುಳಸಿ ಗಿಡ ಹೇಳುವ ಭವಿಷ್ಯ ರಹಸ್ಯ!

ಸನಾತನ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ದೈವಿಕ ಶಕ್ತಿಯನ್ನು ಹೊಂದಿದ ಈ ತುಳಸಿ ಸಸ್ಯವು ಕೇವಲ ಪೂಜೆಗೆ ಮಾತ್ರ ಸೀಮಿತವಾಗದೆ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ದೋಷಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ ಎಂಬ ನಂಬಿಕೆ ಇದೆ.

Vastu Tips: ಈ ದಿಕ್ಕಿನಲ್ಲಿ ಮಲಗಿದ್ರೆ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುತ್ತದೆ ವಾಸ್ತು ಶಾಸ್ತ್ರ

ಸುಖ ನಿದ್ರೆಗೆ ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ, ನಾವು ತಲೆಯನ್ನು ಯಾವ ದಿಕ್ಕಿನಲ್ಲಿ ಇಟ್ಟು ಮಲಗುತ್ತೇವೆ ಎಂಬುದು ನಮ್ಮ ಆರೋಗ್ಯ, ಮನಶಾಂತಿ ಮತ್ತು ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ಮಲಗಿದರೆ ಉತ್ತಮ ನಿದ್ರೆ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.

ಮಿಸ್‌ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌

ಮಿಸ್‌ ಯೂನಿವರ್ಸ್ ಕರ್ನಾಟಕ; ವಿಶ್ವವಾಣಿ ಟಿವಿ ಡಿಜಿಟಲ್‌ ಪಾರ್ಟ್‌ನರ್‌

Ms Universe Karnataka 2026: ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಏಪ್ರಿಲ್‌ 3ರಂದು ನಡೆಯಲಿರುವ ಮಿಸ್‌ ಯೂನಿವರ್ಸ್ ಕರ್ನಾಟಕದ ರಿಜಿನಲ್‌ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌ ಆಗಿ ಕೈ ಜೋಡಿಸಿದೆ.

Astro Tips: ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ!

ಗುರುವಾರ ತಪ್ಪದೇ ಈ ದೇವರ ಪೂಜೆ ಮಾಡಿ

ಗುರುವಾರವು ವಿಷ್ಣು ಮತ್ತು ಬೃಹಸ್ಪತಿ ಪೂಜೆಗೆ ಮಹತ್ವವಾದ ದಿನ. ಈ ದಿನ ಕೆಲವು ಸರಳ ಆಚರಣೆಗಳನ್ನು ಅನುಸರಿಸಿದರೆ ಅದೃಷ್ಟ, ಸಮೃದ್ಧಿ ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಗುರುವಾರದಂದು ಅದೃಷ್ಟವನ್ನು ಆಕರ್ಷಿಸಲು ನಾವು ಏನು ಮಾಡಬೇಕು..? ಯಾವ ಆಚರಣೆಗಳನ್ನು ಅನುಸರಿಸಿದರೆ ಶುಭಫಲ ದೊರೆಯುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ಕೆಲವರು ನಿದ್ದೆಯಲ್ಲಿ ನಡೆಯುವುದಕ್ಕೆ ಕಾರಣಗಳೇನು?

ನಿದ್ದೆಗಣ್ಣಲ್ಲಿ ಮಾತಾಡುವುದು, ನಡೆದಾಡುವುದು ಇತ್ಯಾದಿ ಯಾವುದೇ ಚಟುವಟಿಕೆಯನ್ನು ಮಾಡಿದರೂ ಅದು ಮಾಡುವವರ ನಿಯಂತ್ರಣ ಮೀರಿ ಮಾಡುವುದು ಎನ್ನುವ ಅರ್ಥದಲ್ಲಿ ಅದನ್ನು ನೋಡುವುದು ಸಹಜ. ಆದರೆ ನಿದ್ದೆಯಲ್ಲಿ ಕೆಲವರು ನಡೆಯುವುದೇಕೆ, ಇದನ್ನು ಸರಿ ಪಡಿಸುವುದಕ್ಕೇನು ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Star Fashion 2026: ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ ಕರಿಷ್ಮಾ ಕಪೂರ್‌

ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ ಕರಿಷ್ಮಾ ಕಪೂರ್‌

ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌ ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡಿದ್ದಾರೆ. ಸದ್ಯ ಟ್ರೆಂಡಿಯಾಗಿರುವ ಪ್ಲಾಸ್ಟರ್‌ ಸ್ಕರ್ಟ್ ಹಾಗೂ ಲ್ಯಾಂಡ್‌ ಸ್ಕೇಪ್‌ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಲುಕ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Star Fashion 2026: ಯುವತಿಯರನ್ನು ಸೆಳೆದ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಸೀಕ್ರೆಟ್ಸ್

ಯುವತಿಯರನ್ನು ಸೆಳೆದ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಸೀಕ್ರೆಟ್ಸ್

ಡೆನಿಮ್‌ ಪೆಪ್ಲಮ್‌ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಜೆನ್‌ ಜಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಸದ್ಯ ಹುಡುಗಿಯರ ಫೇವರೇಟ್‌ ಲಿಸ್ಟ್‌ಗೆ ಸೇರಿರುವ ಈ ಔಟ್‌ಫಿಟ್‌ ಬಗ್ಗೆ ಸ್ಟೈಲಿಸ್ಟ್‌ಗಳು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಬೆವರಿನ ದುರ್ಗಂಧ ತೊಲಗಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಬೆವರಿನ ದುರ್ಗಂಧಕ್ಕೆ ಪರಿಹಾರವೇನು?

Body Sweat: ಅತಿಯಾಗಿ ಬೆವರಿದಾಗ ದೇಹವು ದುರ್ಗಂಧ ಬೀರಲು ಆರಂಭಿಸುತ್ತದೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಕಾಣುವ ಈ ಸಮಸ್ಯೆಯು ಕೆಲವೊಮ್ಮೆ ನಮ್ಮ ಆತ್ಮ ವಿಶ್ವಾಸಕ್ಕೂ ಬಾಧೆ ತರುತ್ತದೆ, ಒಮ್ಮೊಮ್ಮೆ ಮುಜುಗರವನ್ನೂ ತರುತ್ತದೆ. ಕೆಲವು ಸರಳ ಬದಲಾವಣೆಗಳು ಮತ್ತು ಸುಲಭ ಕ್ರಮಗಳಿಂದ ದೇಹದ ಬೆವರಿನ ವಾಸನೆಯ ಸಮಸ್ಯೆಯನ್ನು ತಹಬಂದಿಗೆ ತರಬಹುದು.

Astro Tips: ಧ್ಯಾನಕ್ಕೆ ಯಾವ ಜಪಮಾಲೆ ಸೂಕ್ತ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ

ಯಾವ ದೇವರಿಗೆ ಯಾವ ಜಪಮಾಲೆ ಸೂಕ್ತ?

ಸನಾತನ ಧರ್ಮದಲ್ಲಿ ಧ್ಯಾನ ಮತ್ತು ಮಂತ್ರಜಪಕ್ಕೆ ಜಪಮಾಲೆಯ ಮಹತ್ವ ಅಪಾರವಾಗಿದೆ. ವಿಭಿನ್ನ ದೇವತೆಗಳಿಗೆ ವಿಭಿನ್ನ ಮಾಲೆಗಳು ಸೂಕ್ತವಾಗಿದ್ದು, ಸರಿಯಾದ ಮಾಲೆಯೊಂದಿಗೆ ಜಪ ಮಾಡಿದರೆ ಏಕಾಗ್ರತೆ, ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿ ಹೆಚ್ಚುತ್ತದೆ. ತುಳಸಿ, ರುದ್ರಾಕ್ಷಿ, ಸ್ಫಟಿಕ, ಚಂದನ, ಹವಳ ಮತ್ತು ಅರಿಶಿನ ಮಾಲೆಗಳ ವಿಶೇಷತೆ ಮತ್ತು ಅವುಗಳ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ.

Loading...