ಮಾಡರ್ನ್ ಲುಕ್ ನೀಡುವ ಬಿಗ್ ಹೂಪ್ ಇಯರಿಂಗ್ಸ್
ಮಾಡರ್ನ್ ಲುಕ್ ನೀಡುವ ಬಿಗ್ ಹೂಪ್ ಇಯರಿಂಗ್ಸ್ ಮರಳಿ ಮಾನಿನಿಯರ ಕಿವಿಗಳನ್ನು ಅಲಂಕರಿಸುತ್ತಿವೆ. ಕೈಗಳ ಬಳೆಗಳಂತೆ ಕಾಣುವ ಬಿಗ್ ಹೂಪ್ ಇಯರಿಂಗ್ಗಳು ಈ ಸೀಸನ್ನ ಫ್ಯಾಷನ್ ಆಕ್ಸೆಸರೀಸ್ ಟ್ರೆಂಡ್ನಲ್ಲಿ ಸೇರಿವೆ. ಈ ಕುರಿತ ಮಾಹಿತಿ ಇಲ್ಲಿದೆ.
Walking 10,000 Steps: ನಡಿಗೆ ಹೃದಯದ ಆರೋಗ್ಯವನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಪರಿಣಾಮಕಾರಿ ವ್ಯಾಯಾಮ ಎನಿಸಿಕೊಂಡಿದೆ. ಅದರಲ್ಲೂ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಬಹುದು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಹಾಗಾದರೆ ಕೇವಲ 10,000 ಹೆಜ್ಜೆ ನಡೆಯುವುದರಿಂದಲೇ ದೇಹವನ್ನು ಮತ್ತೆ ಫಿಟ್ ಆಗಿಡಬಹುದೆ?
Belt Dresses: ನಾನಾ ಬಗೆಯ ಬೆಲ್ಟ್ ಡ್ರೆಸ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸೀಸನ್ನಲ್ಲಿ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಬೆಲ್ಟ್ನೊಂದಿಗೆ ಬಿಡುಗಡೆಯಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಅದರಲ್ಲೂ ಹೆಚ್ಚು ಪ್ರಚಲಿತದಲ್ಲಿರುವ ಮಾನೋ ಕ್ರೋಮ್ ವರ್ಣದವು ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್ಗಳು ಟೀನೇಜ್ ಹುಡುಗಿಯರನ್ನು ಸೆಳೆದಿವೆ. ಯಾವ್ಯಾವ ಬಗೆಯವು ಟ್ರೆಂಡ್ನಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಮಾಹಿತಿ ನೀಡಿದ್ದಾರೆ.
Fitness Tips: ಬದಲಾದ ಜೀವನ ಶೈಲಿ ಮತ್ತು ಕಳಪೆ ಆಹಾರವು ಇಂದು ತೂಕ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲೂ ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಇದನ್ನು ಕರಗಿಸಲು ಅನೇಕರು ಜಿಮ್, ಡಯಟ್ ಎಂದು ಪರದಾಡುತ್ತಲೇ ಇರುತ್ತಾರೆ. ಯಾಕೆಂದರೆ ಹೊಟ್ಟೆಯ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಊಟದ ನಂತರ ಹತ್ತು ನಿಮಿಷದವರೆಗೆ ನಡೆಯುವ ಮೂಲಕ ಬೊಜ್ಜನ್ನು ಕರಗಿಸಬಹುದು ಎಂದು ಸಲಹೆ ನೀಡಿದ್ದಾರೆ.
ಹಿಂದೂ ಧರ್ಮದಲ್ಲಿ ದೇವರ ಮುಂದೆ ಕಾಲು ಚಾಚಿ ಕುಳಿತುಕೊಳ್ಳುವುದು ಅಶಿಷ್ಟ ಹಾಗೂ ಅಶುಭ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಕಡಿಮೆಯಾಗಬಹುದು ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎನ್ನಲಾಗುತ್ತದೆ. ಪೂಜೆ ಮಾಡುವಾಗ ಆಸನದ ಮೇಲೆ ಕುಳಿತು ಭಕ್ತಿಭಾವದಿಂದ ಆರಾಧನೆ ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ. ತಲೆಯನ್ನು ಮುಚ್ಚಿಕೊಂಡು ಪೂಜೆ ಮಾಡುವುದೂ ಗೌರವ ಮತ್ತು ವಿನಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಆಚರಣೆಗಳು ಭಕ್ತಿ, ಶಿಸ್ತು ಮತ್ತು ಸಂಪ್ರದಾಯದ ಮಹತ್ವವನ್ನು ಪ್ರತಿಬಿಂಬಿಸುತ್ತವೆ.
ಉಡುಗೊರೆ ನೀಡುವುದು ಪ್ರೀತಿ ಮತ್ತು ಗೌರವದ ಸಂಕೇತವಾಗಿದ್ದರೂ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು ಎನ್ನಲಾಗುತ್ತದೆ. ಟವೆಲ್, ಪರ್ಸ್, ಚಾಕು, ದೇವರ ಮೂರ್ತಿಗಳು, ಅಕ್ವೇರಿಯಂ ಹಾಗೂ ಒಣ ಹೂವುಗಳಂತಹ ವಸ್ತುಗಳು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಉಡುಗೊರೆ ಆಯ್ಕೆ ಮಾಡುವಾಗ ಅದರ ಸಂಕೇತಾರ್ಥದ ಬಗ್ಗೆಯೂ ಗಮನ ಹರಿಸುವುದು ಉತ್ತಮ.
ಹಿಂದೂ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಸ್ವಚ್ಛತೆ, ಸಮಯಪಾಲನೆ, ನೀರಿನ ಸಂರಕ್ಷಣೆ, ಪೂಜೆ-ಪುನಸ್ಕಾರ ಮತ್ತು ದೈನಂದಿನ ಶಿಸ್ತು ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸೂರ್ಯೋದಯದ ಬಳಿಕವೂ ಮಲಗುವುದು, ನೀರನ್ನು ವ್ಯರ್ಥ ಮಾಡುವುದು, ಹಾಳಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಮನೆಯ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎನ್ನುವ ನಂಬಿಕೆ ಇದೆ.
Fitness Tips: ಎಷ್ಟೋ ಬಾರಿ ಜಾಹೀರಾತುಗಳು ಹೇಳುವುದಿದೆ-ಒಂದು ತಿಂಗಳಲ್ಲಿ ಫ್ರೆಂಚ್ ಕಲಿಯುವ, ಒಂದು ವಾರದಲ್ಲಿ ಬೆಳ್ಳಗಾಗುವ,ಒಂದು ವಾರದಲ್ಲಿ 5ಕೆ.ಜಿ. ತೂಕ ಕಡಿಮೆ ಮಾಡುವಂಥ ಏನೇನೋ ಆಮಿಷಗಳನ್ನು ಒಡ್ಡಿವುದಿದೆ. ಇಂಥ ಯಾವುದಾದರೂ ಕೆಲಸ ಸರಿಯಾಗುವುದಕ್ಕೆ ಸಾಧ್ಯವೇ ಎಂಬು ದನ್ನು ನಾವು ಮೊದಲು ಯೋಚಿಸಬೇಕು. ಒಂದೇ ವಾರದಲ್ಲಿ ನಾಲ್ಕಾರು ಕೆ.ಜಿ. ತೂಕ ಇಳಿಸುವುದೆಂದರೆ ಮಕ್ಕಳಾಟವೇ? ಅಥವಾ ನಿಜಕ್ಕೂ ಅದನ್ನು ಮಾಡಬಹುದೇ?
Health Tips: ಸರ್ವರೋಗಕ್ಕೂ ಹೊಟ್ಟೆಯೇ ಮೂಲವೆಂಬುದು ಪ್ರಾಚೀನ ತಿಳುವಳಿಕೆ. ಇದಕ್ಕೆ ಪೂರಕವಾಗಿ ಮೇ ತಿಂಗಳ 29ರಂದು ವಿಶ್ವ ಜೀರ್ಣಾಂಗದ ಆರೋಗ್ಯ ದಿನ ಆಚರಿಸಲಾಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗವಂಥ ಅಭ್ಯಾಸಗಳು ಮತ್ತು ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಪಚನಾಂಗಗಳ ಕಾರ್ಯವೈಖರಿಯ ಬಗ್ಗೆ ಅರಿವು ಹೆಚ್ಚಿಸುವುದು ಈ ದಿನದ ಉದ್ದೇಶ. ನಿತ್ಯದ ಆಹಾರಗಳು, ಕುಡಿಯುವ ನೀರು ಸಹ ದೈನಂದಿನ ಬದುಕಿನ ಸ್ವಾಸ್ಥ್ಯ ವೃದ್ಧಿಸುವಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ದಿನದಂದು ಸಾರಲಾಗುತ್ತಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವು ಶುಭ ವಸ್ತುಗಳು ಮತ್ತು ಸಂಕೇತಗಳನ್ನು ನೋಡುವುದು ದಿನವಿಡೀ ಸಕಾರಾತ್ಮಕತೆ, ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ಅಂಗೈ ದರ್ಶನ, ತಾಯಿ-ತಂದೆಯ ಮುಖ, ಹಸುವಿನ ದರ್ಶನ, ಹಕ್ಕಿಗಳ ಕಲರವ, ದೇವಾಲಯದ ಗಂಟೆ ನಾದ ಮತ್ತು ಹಾಲು-ಮೊಸರಿನಂತಹ ವಸ್ತುಗಳು ಲಕ್ಷ್ಮೀ ದೇವಿಯ ಕೃಪೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.
ಸಾಫ್ಟ್ ಹಾಗೂ ಕಂಫರ್ಟಬಲ್ ಆಗಿರುವ ಜಾಮ್ದಾನಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಮೃದುವಾದ ಮಸ್ಲಿನ್ ಫ್ಯಾಬ್ರಿಕ್ ಹೊಂದಿರುವ ಈ ಸೀರೆಗಳು ಉಡಲು ಕಂಫರ್ಟಬಲ್ ಫೀಲ್ ನೀಡುವುದು ಮಾತ್ರವಲ್ಲ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಇದ್ಯಾವ ಬಗೆಯ ಸೀರೆ? ಆಯ್ಕೆ, ನಿರ್ವಹಣೆ ಹಾಗೂ ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಸೀರೆ ಎಕ್ಸ್ಪರ್ಟ್ ಸಿಂಪಲ್ಲಾಗಿ ವಿವರಿಸಿದ್ದಾರೆ.
ಉಪ್ಪು ಕೈಜಾರಿ ನೆಲಕ್ಕೆ ಚೆಲ್ಲಿದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆ ಹಲವು ಸಂಸ್ಕೃತಿಗಳಲ್ಲಿದೆ. ಜ್ಯೋತಿಷ್ಯ ಪ್ರಕಾರ ಇದು ಚಂದ್ರ ಮತ್ತು ಶುಕ್ರ ಗ್ರಹಗಳ ಅಸಮತೋಲನದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇದರ ಹಿಂದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಉಪ್ಪು ಚೆಲ್ಲಿದರೆ ಏನು ಮಾಡಬೇಕು ಎಂಬ ಪರಿಹಾರಗಳನ್ನೂ ಜ್ಯೋತಿಷ್ಯ ಸೂಚಿಸಲಾಗಿದೆ.
Guava benefits: ಸೀಬೆಕಾಯಿಯಲ್ಲಿ ವಿಟಮಿನ್ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆಯಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಸಮತೋಲನವು ಕುಟುಂಬದ ಸಂತೋಷ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಸ್ವಚ್ಛತೆ, ಸರಿಯಾದ ಬಣ್ಣಗಳ ಬಳಕೆ, ಗಾಳಿ-ಬೆಳಕು ಮತ್ತು ಧ್ಯಾನದಂತಹ ಕ್ರಮಗಳ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಧೂಮಪಾನ ಅಥವಾ ತಂಬಾಕು ಚಟಕ್ಕೆ ಅಂಟಿಕೊಂಡಿದ್ದರೆ ಅದರಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಹೆಚ್ಚಿನವರು ಇದರಲ್ಲಿ ಪ್ರಯತ್ನಿಸಿ ಸೋಲುತ್ತಾರೆ. ಇದಕ್ಕೆ ಕಾರಣ ಪ್ರಯತ್ನದ ಕೊರತೆಯಲ್ಲ. ದೇಹದ ಬೆಂಬಲ ದೊರೆಯದೇ ಇರುವುದು. ಆದರೆ ಆಯುರ್ವೇದವು ಅತ್ಯಂತ ಸುಲಭ ವಿಧಾನಗಳ ಮೂಲಕ ತಂಬಾಕಿನ ಚಟದಿಂದ ಮುಕ್ತಿ ದೊರಕಿಸಿಕೊಡುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.