ಶರ್ಟ್ ಫ್ಲೋರಲ್ ಸ್ಕರ್ಟ್ ಸೆಟ್ ಮಹಿಮೆ ಅಪಾರ
Shirt Floral Skirt Set: ಶರ್ಟ್ ಫ್ಲೋರಲ್ ಸ್ಕರ್ಟ್ ಸೆಟ್ಗಳು ಇದೀಗ ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿವೆ. ಇದ್ಯಾವ ಬಗೆಯ ಔಟ್ಫಿಟ್? ಏನಿದರ ಸ್ಪೆಷಲಿಟಿ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.
Health Tips: ಸರ್ವರೋಗಕ್ಕೂ ಹೊಟ್ಟೆಯೇ ಮೂಲವೆಂಬುದು ಪ್ರಾಚೀನ ತಿಳುವಳಿಕೆ. ಇದಕ್ಕೆ ಪೂರಕವಾಗಿ ಮೇ ತಿಂಗಳ 29ರಂದು ವಿಶ್ವ ಜೀರ್ಣಾಂಗದ ಆರೋಗ್ಯ ದಿನ ಆಚರಿಸಲಾಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗವಂಥ ಅಭ್ಯಾಸಗಳು ಮತ್ತು ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಪಚನಾಂಗಗಳ ಕಾರ್ಯವೈಖರಿಯ ಬಗ್ಗೆ ಅರಿವು ಹೆಚ್ಚಿಸುವುದು ಈ ದಿನದ ಉದ್ದೇಶ. ನಿತ್ಯದ ಆಹಾರಗಳು, ಕುಡಿಯುವ ನೀರು ಸಹ ದೈನಂದಿನ ಬದುಕಿನ ಸ್ವಾಸ್ಥ್ಯ ವೃದ್ಧಿಸುವಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ದಿನದಂದು ಸಾರಲಾಗುತ್ತಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವು ಶುಭ ವಸ್ತುಗಳು ಮತ್ತು ಸಂಕೇತಗಳನ್ನು ನೋಡುವುದು ದಿನವಿಡೀ ಸಕಾರಾತ್ಮಕತೆ, ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ಅಂಗೈ ದರ್ಶನ, ತಾಯಿ-ತಂದೆಯ ಮುಖ, ಹಸುವಿನ ದರ್ಶನ, ಹಕ್ಕಿಗಳ ಕಲರವ, ದೇವಾಲಯದ ಗಂಟೆ ನಾದ ಮತ್ತು ಹಾಲು-ಮೊಸರಿನಂತಹ ವಸ್ತುಗಳು ಲಕ್ಷ್ಮೀ ದೇವಿಯ ಕೃಪೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.
ಸಾಫ್ಟ್ ಹಾಗೂ ಕಂಫರ್ಟಬಲ್ ಆಗಿರುವ ಜಾಮ್ದಾನಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಮೃದುವಾದ ಮಸ್ಲಿನ್ ಫ್ಯಾಬ್ರಿಕ್ ಹೊಂದಿರುವ ಈ ಸೀರೆಗಳು ಉಡಲು ಕಂಫರ್ಟಬಲ್ ಫೀಲ್ ನೀಡುವುದು ಮಾತ್ರವಲ್ಲ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಇದ್ಯಾವ ಬಗೆಯ ಸೀರೆ? ಆಯ್ಕೆ, ನಿರ್ವಹಣೆ ಹಾಗೂ ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಸೀರೆ ಎಕ್ಸ್ಪರ್ಟ್ ಸಿಂಪಲ್ಲಾಗಿ ವಿವರಿಸಿದ್ದಾರೆ.
ಉಪ್ಪು ಕೈಜಾರಿ ನೆಲಕ್ಕೆ ಚೆಲ್ಲಿದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆ ಹಲವು ಸಂಸ್ಕೃತಿಗಳಲ್ಲಿದೆ. ಜ್ಯೋತಿಷ್ಯ ಪ್ರಕಾರ ಇದು ಚಂದ್ರ ಮತ್ತು ಶುಕ್ರ ಗ್ರಹಗಳ ಅಸಮತೋಲನದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇದರ ಹಿಂದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಉಪ್ಪು ಚೆಲ್ಲಿದರೆ ಏನು ಮಾಡಬೇಕು ಎಂಬ ಪರಿಹಾರಗಳನ್ನೂ ಜ್ಯೋತಿಷ್ಯ ಸೂಚಿಸಲಾಗಿದೆ.
Guava benefits: ಸೀಬೆಕಾಯಿಯಲ್ಲಿ ವಿಟಮಿನ್ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆಯಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಸಮತೋಲನವು ಕುಟುಂಬದ ಸಂತೋಷ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಸ್ವಚ್ಛತೆ, ಸರಿಯಾದ ಬಣ್ಣಗಳ ಬಳಕೆ, ಗಾಳಿ-ಬೆಳಕು ಮತ್ತು ಧ್ಯಾನದಂತಹ ಕ್ರಮಗಳ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಧೂಮಪಾನ ಅಥವಾ ತಂಬಾಕು ಚಟಕ್ಕೆ ಅಂಟಿಕೊಂಡಿದ್ದರೆ ಅದರಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಹೆಚ್ಚಿನವರು ಇದರಲ್ಲಿ ಪ್ರಯತ್ನಿಸಿ ಸೋಲುತ್ತಾರೆ. ಇದಕ್ಕೆ ಕಾರಣ ಪ್ರಯತ್ನದ ಕೊರತೆಯಲ್ಲ. ದೇಹದ ಬೆಂಬಲ ದೊರೆಯದೇ ಇರುವುದು. ಆದರೆ ಆಯುರ್ವೇದವು ಅತ್ಯಂತ ಸುಲಭ ವಿಧಾನಗಳ ಮೂಲಕ ತಂಬಾಕಿನ ಚಟದಿಂದ ಮುಕ್ತಿ ದೊರಕಿಸಿಕೊಡುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.
Flared Floral Dress: ಬಬ್ಲಿ ಲುಕ್ ನೀಡುವಂತಹ ಮಲ್ಟಿ ಕಲರ್ನ ಫ್ಲೇರ್ಡ್ ಫ್ಲೋರಲ್ ಡ್ರೆಸ್ಗಳು ಮತ್ತೊಮ್ಮೆ ಟ್ರೆಂಡಿಯಾಗಿವೆ. ಊಹೆಗೂ ಮೀರಿದ ಡಿಸೈನ್ನಲ್ಲಿ ಈ ಫ್ಲೇರ್ಡ್ ಫ್ಲೋರಲ್ ಡ್ರೆಸ್ಗಳು ಫ್ಯಾಷನ್ಲೋಕದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಜಾರ್ಜೆಟ್, ಅರ್ಗಾನ್ಜಾ, ಸೆಮಿ ಸಿಲ್ಕ್ ಹಾಗೂ ಕ್ರೇಪ್ ಫ್ಯಾಬ್ರಿಕ್ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಯಾವ್ಯಾವ ಡಿಸೈನ್ನವು ಲಗ್ಗೆ ಇಟ್ಟಿವೆ? ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ನಂಬಲಾಗುವುದರಿಂದ ಪ್ರತಿಯೊಂದು ಮನೆಯಲ್ಲೂ ಭಕ್ತಿಯಿಂದ ಪೂಜಿಸಲಾಗುತ್ತದೆ. ಪೂಜೆ, ನೈವೇದ್ಯ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ ತುಳಸಿ ಎಲೆಗಳಿಗೆ ವಿಶೇಷ ಮಹತ್ವವಿದೆ. ಆದರೆ ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸದಿದ್ದರೆ ಅಶುಭ ಫಲಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ.
Health Tips: ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರುತ್ತಿದೆ. ಇದರ ಪರಿಣಾಮ ನಿರ್ಜಲೀಕರಣ, ಹೀಟ್ ಸ್ಟ್ರೋಕ್ನಂತ ಅನೇಕ ಸಮಸ್ಯೆಗಳು ಕಾಣಿಸುತ್ತಿವೆ. ಇನ್ನು ತಾಪಮಾನವು ಸಾಮಾನ್ಯ ದೇಹದ ಉಷ್ಣತೆಯನ್ನು ಮೀರಿದಾಗ, ದೇಹದ ಆಂತರಿಕ ಥರ್ಮೋಸ್ಟಾಟ್ ಹೆಚ್ಚುವರಿ ಶಾಖವನ್ನು ಹೊರಹಾಕಲು ಶ್ರಮಿಸುತ್ತದೆ. ಇದು ಶಾಖದ ಬಳಲಿಕೆ ಮತ್ತು ಕೆಲವು ಸಂದರ್ಭಗಳಲ್ಲಿ ಹೃದಯರಕ್ತನಾಳದ ಒತ್ತಡಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೆಲವೊಂದು ಅಭ್ಯಾಸಗಳನ್ನು ನಾವು ತಪ್ಪಿಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು.
ಮಂಗಳವಾರ ಆಂಜನೇಯ ಸ್ವಾಮಿ ಹಾಗೂ ಮಂಗಳದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ ಗಣೇಶ ಮತ್ತು ಮಂಗಳದೇವರ ಮಂತ್ರಗಳನ್ನು ಜಪಿಸುವುದರಿಂದ ಮನಸ್ಸಿನ ಶಾಂತಿ, ಕುಟುಂಬ ಸೌಹಾರ್ದತೆ, ವ್ಯವಹಾರದಲ್ಲಿ ಅಭಿವೃದ್ಧಿ ಹಾಗೂ ಸಾಲಮುಕ್ತಿಯಂತಹ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಮಂಗಳ ದೋಷ ನಿವಾರಣೆ ಹಾಗೂ ವಿವಾಹ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೂ ಮಂಗಳವಾರದ ಜ್ಯೋತಿಷ್ಯ ಕ್ರಮಗಳು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿಯಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಅನೇಕರಿದ್ದಾರೆ. ಆದರೆ ವಯಸ್ಸನ್ನು ಮೀರಿ ತೂಕ ಹೆಚ್ಚಾದರೆ ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ದೇಹದ ಪ್ರಮುಖ ಗ್ರಂಥಿ ಥೈರಾಯ್ಡ್ ಸಮಸ್ಯೆ ಕೂಡ ಕಾರಣ ಇರಬಹುದು. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹವು ಕಡಿಮೆ ಕ್ಯಾಲೊರಿಗಳನ್ನು ಹೊಂದಿ ತೂಕ ಹೆಚ್ಚಾಗುವುದು, ಆಯಾಸ ಹೆಚ್ಚುವುದು ಮುಂತಾದ ಸಮಸ್ಯೆಗೆ ಕಾರಣವಾಗಬಹುದು.
ಇದುವರೆಗೂ ಬ್ಲ್ಯಾಕ್ ಮತ್ತು ವೈಟ್ ಕಲರ್ಗೆ ಸೀಮಿತವಾಗಿದ್ದ ಸ್ಟ್ರೈಪ್ಡ್ ಡ್ರೆಸ್ ಫ್ಯಾಷನ್ ಇದೀಗ ಕಲರ್ಫುಲ್ ಆಗಿದೆ. ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಮೃಣಾಲ್ ಠಾಕೂರ್ ಧರಿಸಿದ ನೆವ್ವಿ ಬ್ಲ್ಯೂ ಸ್ಟ್ರೈಪ್ಡ್ ಡ್ರೆಸ್ ಸದ್ಯ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಶ್ರಾವಣ ಸೋಮವಾರವು ಶಿವಭಕ್ತರಿಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸ ಆಚರಿಸಿ ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ ಅರ್ಪಿಸುವುದರಿಂದ ಶಿವನ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಮಹಾಮೃತ್ಯುಂಜಯ ಮಂತ್ರ ಜಪದಿಂದ ಆರೋಗ್ಯ, ಮನಶಾಂತಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಭಾನುವಾರ ಸೂರ್ಯದೇವನ ಆರಾಧನೆಗೆ ಅತ್ಯಂತ ಶುಭಕರ ದಿನವೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಸೂರ್ಯೋದಯದ ವೇಳೆ ಅರ್ಘ್ಯ ಅರ್ಪಿಸಿ ವಿಶೇಷ ಮಂತ್ರಗಳನ್ನು ಜಪಿಸಿದರೆ ಆತ್ಮವಿಶ್ವಾಸ, ಆರೋಗ್ಯ, ಗೌರವ ಹಾಗೂ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಉಪವಾಸ, ದಾನಧರ್ಮ, ಕೇಸರಿ ಬಟ್ಟೆ ಧಾರಣೆ ಹಾಗೂ ಸೂರ್ಯ ಮಂತ್ರ ಜಪದ ಮಹತ್ವದ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.