ಗಣೇಶ ಚತುರ್ಥಿಯಂದು ಮನೆಗೆ ತರಬೇಕಾದ 4 ಶುಭ ವಸ್ತುಗಳು
ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿಶೇಷ. ವಾಸ್ತು ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಲಕ್ಷ್ಮೀ ಗಣಪತಿ, ಸ್ಪಟಿಕ, ಕವಡೆ ಮತ್ತು ಕಮಲದ ಬೀಜಗಳನ್ನು ಮನೆಗೆ ತಂದು ಪೂಜೆಯಲ್ಲಿ ಬಳಸುವುದರಿಂದ ಸಕಾರಾತ್ಮಕತೆ, ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಕಮಲದ ಬೀಜವನ್ನು ಗಣೇಶನ ಮೂರ್ತಿಯ ಬಲಭಾಗದಲ್ಲಿ ಪೂರ್ವ ದಿಕ್ಕಿಗೆ ಇರಿಸಿ ಪೂಜಿಸುವುದು ಶುಭಕರವೆಂದು ಹೇಳಲಾಗುತ್ತದೆ.