ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿದೇಶ

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ, ಮಗನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್?

ಇರಾನ್‌ನ ಸರ್ವೋಚ್ಚ ನಾಯಕನ ಕೊಲ್ಲಲು ಡೊನಾಲ್ಡ್ ಟ್ರಂಪ್‌ಗೆ ಸಲಹೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಕೊಲ್ಲಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆ ನೀಡಲಾಗಿದೆ. ಖಮೇನಿ ಮತ್ತು ಮೊಜ್ತಬಾ ಖಮೇನಿ ಅವರನ್ನು ಗುರಿಯಾಗಿಸಿಕೊಂಡು ಮಿಲಿಟರಿ ನಡೆಸಬಹುದಾದ ಕಾರ್ಯಾಚರಣೆ ಕುರಿತು ಡೊನಾಲ್ಡ್ ಟ್ರಂಪ್‌ಗೆ ಹಿರಿಯ ಸಲಹೆಗಾರರೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ, 28 ಟಿಟಿಪಿ ಸದಸ್ಯರು ಸಾವು

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ, 28 ಟಿಟಿಪಿ ಸದಸ್ಯರು ಸಾವು

ಪಾಕಿಸ್ತಾನವು ಭಾನುವಾರ ಬೆಳಗಿನ ಜಾವ ಅಫ್ಘಾನಿಸ್ತಾನದೊಳಗೆ ಡುರಾಂಡ್ ರೇಖೆಯ ಉದ್ದಕ್ಕೂ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ಶಂಕಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳ ಮೇಲೆ ದಾಳಿ ಮಾಡಿವೆ.

ಸುಪ್ರೀಂ ತಡೆಯ ಬಳಿಕವೂ ಮೊಂಡಾಟ ಬಿಡದ ಡೊನಾಲ್ಡ್‌ ಟ್ರಂಪ್‌; ಸುಂಕ ಶೇಕಡಾ 10ರಿಂದ ಶೇಕಡಾ 15ಕ್ಕೆ ಏರಿಕೆ

ಸುಂಕ ಶೇಕಡಾ 15ಕ್ಕೆ ಏರಿಸಿದ ಡೊನಾಲ್ಡ್‌ ಟ್ರಂಪ್‌

ಇಡೀ ಜಗತ್ತಿನ ಉತ್ಪನ್ನಗಳಿಗೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ್ದು, ಬಹುತೇಕ ಸುಂಕ ರದ್ದುಗೊಳಿಸಿದೆ. ಈ ಮಧ್ಯೆ ಟ್ರಂಪ್‌ ಜಾಗತಿಕ ಸುಂಕವನ್ನು ಶೇಕಡಾ 10ರಿಂದ ಶೇಕಡಾ 15ಕ್ಕೆ ಹೆಚ್ಚಿಸಿದ್ದಾರೆ.

ಮೋದಿ‌ ನಮ್ಮನ್ನು ದೋಚುತ್ತಿದ್ದರು: ಸುಂಕ ರದ್ದುಗೊಂಡ ನಡುವೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಹೊಗಳಿದ ಟ್ರಂಪ್

ಮೋದಿ ಅಮೆರಿಕವನ್ನು ‘ಸುಲಿಗೆ’ ಮಾಡುತ್ತಿದ್ದರು: ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಸಂಬಂಧ “ಅದ್ಭುತ”ವಾಗಿದೆ ಎಂದರೂ, ಪ್ರಧಾನಿ ನರೇಂದ್ರ ಮೋದಿ ಅಮೆರಿಕವನ್ನು “ಸುಲಿಗೆ ಮಾಡುತ್ತಿದ್ದರು” ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್ ಅವರ ಕಠಿಣ ಸುಂಕಗಳನ್ನು ರದ್ದುಗೊಳಿಸಿದ ನಂತರ ಈ ಹೇಳಿಕೆ ಹೊರಬಂದಿದೆ.

ಪಕ್ಷಿಗಳ ಧ್ವನಿ ಮೌನವಾದರೆ, ಮಾನವನ ಬದುಕು ಮಂಕಾಗುತ್ತದೆ

ಪಕ್ಷಿಗಳ ಸಂತತಿ ನಾಶವಾದರೆ ಮಾನವರ ಬದುಕು ನರಕ

ಪಕ್ಷಿಗಳು ಮತು ಕೀಟಗಳು ನಮ್ಮ ಪರಿಸರದ ಅತಿ ಚಿಕ್ಕ ಆದರೆ ಅತ್ಯಂತ ಮಹತ್ವದ ಅಂಶಗಳು. ಅವುಗಳ ಸಂತತಿ ವೇಗವಾಗಿ ಕಡಿಮೆಯಾಗುತ್ತಿದೆ. ಅವುಗಳ ನಾಶವು ಕೇವಲ ಪಕೃತಿಯ ಸಮಸ್ಯೆಯಲ್ಲ, ಅದು ಮಾನವನ ಬದುಕಿನ ಮೇಲೆಯೇ ನೇರ ಪರಿಣಾಮ ಬೀರುತ್ತದೆ. ಈ ಬಗ್ಗೆ ಪಲ್ಲವಿ ಅವರ ವಿಶೇಷ ಬರಹ ಇಲ್ಲಿದೆ.

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದ ಮೇಲೆ ಅಮೆರಿಕ ವಿಧಿಸುವ ಸುಂಕ ಎಷ್ಟು?

ಶೇ. 10 ಅಥವಾ 18 ಭಾರತದ ಮೇಲೆ ಯುಎಸ್ ಸುಂಕ ಎಷ್ಟು?

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಈ ನಡುವೆ ಅವರು ಜಾಗತಿಕವಾಗಿ ಎಲ್ಲರಿಗೂ ಶೇ. 10 ಸುಂಕ ಘೋಷಣೆ ಮಾಡಿದ್ದಾರೆ. ಇದು ಭಾರತಕ್ಕೆ ಅನ್ವಯವಾಗುವುದೇ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ; ತೆರಿಗೆ ವಿರುದ್ಧ ಕೋರ್ಟ್‌ನಲ್ಲಿ ವಾದಿಸಿದ ನೀಲ್ ಕತ್ಯಾಲ್ ಯಾರು?

ಟ್ರಂಪ್ ತೆರಿಗೆ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ

Indian-origin American wins: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ವಿವಾದಾತ್ಮಕ ಸುಂಕಗಳ ವಿರುದ್ಧ ನಡೆದ ಪ್ರಮುಖ ಕಾನೂನು ಹೋರಾಟದಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ನೀಲ್ ಕತ್ಯಾಲ್ ಪ್ರಮುಖ ಪಾತ್ರವಹಿಸಿ ಜಯ ಸಾಧಿಸಿದ್ದಾರೆ. ಈ ಐತಿಹಾಸಿಕ ತೀರ್ಪು ಅಧ್ಯಕ್ಷೀಯ ಅಧಿಕಾರಗಳ ಮಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದರ ಜತೆಗೆ, ಸಂವಿಧಾನದ ಮಹತ್ವವನ್ನು ಎತ್ತಿ ತೋರಿಸಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾ ಹಿರಿಯ ನಾಯಕ ಸೇರಿ 10 ಮಂದಿಯ ಹತ್ಯೆ

ಲೆಬನಾನ್ ಮೇಲೆ ಇಸ್ರೇಲ್ ದಾಳಿ; 10 ಮಂದಿ ಸಾವು

Israel strikes Lebanon: ಲೆಬನಾನ್ ಬೆಕಾ ಕಣಿವೆಯಲ್ಲಿ ನಡೆದ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇತ್ತೀಚಿನ ವಾರಗಳಲ್ಲಿ ಪೂರ್ವ ಲೆಬನಾನ್‍ನಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಒಂದಾಗಿದೆ. ಪೂರ್ವ ಲೆಬನಾನ್‌ನ ಬೆಕಾ ಕಣಿವೆಯ ಭಾಗವಾಗಿರುವ ಬಾಲ್‌ಬೆಕ್ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಕೆಂಪು ಕೋಟೆ ಸೇರಿ ದೆಹಲಿಯ ವಿವಿಧೆಡೆ ಸ್ಫೋಟಕ್ಕೆ ಲಷ್ಕರ್ ಸಂಚು

ದೆಹಲಿಯಲ್ಲಿ ಸ್ಫೋಟಕ್ಕೆ ಲಷ್ಕರ್ ಸಂಚು

ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಫೆಬ್ರವರಿ 6ರಂದು ನಡೆದ ಸ್ಫೋಟಕ್ಕೆ ಪ್ರತೀಕಾರವಾಗಿ ದೆಹಲಿಯ ಕೆಂಪು ಕೋಟೆ ಸೇರಿದಂತೆ ನಗರ ಭಾಗಗಳಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೈಬಾ ಸ್ಫೋಟಕ್ಕೆ ಸಂಚು ರೂಪಿಸಿದೆ. ಭಯೋತ್ಪಾದಕ ಸಂಘಟನೆಯು ಸುಧಾರಿತ ಸ್ಫೋಟಕ ಸಾಧನಗಳಿಂದ ದಾಳಿ ನಡೆಸಲು ಸಂಚು ರೂಪಿಸುತ್ತಿರಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ವ್ಯಾಪಾರ ಒಪ್ಪಂದದಲ್ಲಿ ಬದಲಾವಣೆ ಇಲ್ಲ, ಭಾರತ ಸುಂಕವನ್ನು ಪಾವತಿಸಲೇಬೇಕು: ಡೊನಾಲ್ಡ್ ಟ್ರಂಪ್

ಭಾರತ- ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಬದಲಾವಣೆ ಇಲ್ಲ: ಡೊನಾಲ್ಡ್ ಟ್ರಂಪ್

ಯುಎಸ್‌ನೆ ಸುಪ್ರೀಂ ಕೋರ್ಟ್‌ ಅಮೆರಿಕದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ ಬಳಿಕ ಮೊದಲ ಬಾರಿಗೆ ಭಾರತ ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತಕ್ಕೆ ಏನೂ ಬದಲಾವಣೆ ಇಲ್ಲ. ಭಾರತ ಸುಂಕವನ್ನು ಪಾವತಿಸಲಿದೆ. ನಾವು ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್‌ಗೆ ದೊಡ್ಡ ಶಾಕ್‌! ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಯುಎಸ್‌ ಸುಪ್ರೀಂ ಕೋರ್ಟ್!

ಡೊನಾಲ್ಡ್‌ ಟ್ರಂಪ್‌ರ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಸುಪ್ರೀಂ!

ಜಾಗತಿಕ ಸುಂಕಗಳ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ. ಯುಎಸ್‌ನೆ ಸುಪ್ರೀಂ ಕೋರ್ಟ್‌ ಶುಕ್ರವಾರ, ಅಮೆರಿಕದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಭಾರತಕ್ಕೆ ವಿಧಿಸಿದ್ದ ಶೇ 18 ರಷ್ಟು ಸುಂಕವನ್ನು ಇದೀಗ ತೆಗೆಯಲಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಅಮೆರಿಕ ದೊಡ್ಡಣ್ಣನಿಗೆ ದೊಡ್ಡ ಆಘಾತವಾಗಿದೆ.

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

ಅಕ್ಟೋಬರ್ 29 ರಿಂದ ಡಿಸೆಂಬರ್ 14, 2025 ರವರೆಗೆ ನಡೆದ ಹ್ಯಾಕಥಾನ್‌ನಲ್ಲಿ ಭಾರತ ದಾದ್ಯಂತ 250 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇವು ಆರೋಗ್ಯ ರಕ್ಷಣೆ, ಹಣಕಾಸು, ಐಓಟಿ ಮತ್ತು ಜ್ಞಾನ ನಿರ್ವಹಣೆ ಸೇರಿದಂತೆ ಬಳಕೆಯ ಪ್ರಕರಣಗಳನ್ನು ಪರಿಹರಿಸಿ, GridDB® ಡೇಟಾಬೇಸ್ ಸೇವೆಯ ಬಹುಮುಖವನ್ನು ಪ್ರದರ್ಶಿಸಿದವು

ಮತ್ತೆ ಭಾರತ- ಪಾಕ್‌ ಕದನದ ಕುರಿತು ಡೊನಾಲ್ಡ್‌ ಟ್ರಂಪ್‌ ಹೇಳಿಕೆ; ಈ ಬಾರಿ ಹೇಳಿದ್ದೇನು?

ಭಾರತಕ್ಕೆ ಸುಂಕ ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದೆ: ಡೊನಾಲ್ಡ್ ಟ್ರಂಪ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸೇನೆ ನಡೆಸಿದ ಅಪರೇಷನ್ ಸಿಂದೂರ್ ನಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇತ್ತು. ಆದರೆ ನಾನು ಶೇಕಡಾ 200 ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಯುದ್ಧ ನಿಂತಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ನಮ್ಮನ್ನೇಕೆ ಕೈಬಿಟ್ಟಿರಿ?" ಸಹಾಯಕ್ಕಾಗಿ ಅಂಗಲಾಚುತ್ತಿರುವ ಒತ್ತೆಯಾಳು ಪಾಕ್‌ ಸೈನಿಕರ ವಿಡಿಯೋ ಹರಿಬಿಟ್ಟ BLA

ಸಹಾಯಕ್ಕಾಗಿ ಅಂಗಲಾಚುತ್ತಿರುವ ಪಾಕ್‌ ಸೈನಿಕರ ವಿಡಿಯೋ ಹರಿಬಿಟ್ಟ BLA

ನಡೆಯುತ್ತಿರುವ ದಂಗೆಯ ಮಧ್ಯೆ, ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಸೆರೆಹಿಡಿಯಲಾದ ಹಲವಾರು ಪಾಕಿಸ್ತಾನಿ ಸೈನಿಕರು ತಮ್ಮ ಜೀವಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಬಾಂಗ್ಲಾ ಹಿಂದೂ ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ಪಲಾಯನಕ್ಕೆ ಯತ್ನ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

ಬಾಂಗ್ಲಾದ ಹಿಂದೂ ಪೊಲೀಸ್ ಕೊಲೆ ಪ್ರಕರಣದ ಆರೋಪಿ ದೆಹಲಿಯಲ್ಲಿ ಬಂಧನ

Bangladesh Hindu police officer murder: ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. 2024 ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಆರೋಪಿಯಾಗಿರುವ ವಿದ್ಯಾರ್ಥಿ ನಾಯಕನನ್ನು ಯುರೋಪಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Fact Check: ಭಾರತದ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ನಾಶಪಡಿಸಿದೆ ಎಂದ ಪ್ರಧಾನಿ ಮೋದಿ; ವಿಡಿಯೊ ಅಸಲಿಯತ್ತೇನು?

ವೈರಲ್ ಆಗಿರುವ ಪ್ರಧಾನಿ ಮೋದಿ ಡೀಪ್ ಫೇಕ್ ವಿಡಿಯೊ

ಪಾಕಿಸ್ತಾನವು ಭಾರತದ ರಫೇಲ್ ಜೆಟ್‌ಗಳನ್ನು ನಾಶ ಪಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ ವಿಡಿಯೊಗಳು ಪಾಕಿಸ್ತಾನದ ಪ್ರಚಾರ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಡೀಪ್ ಫೇಕ್ ವಿಡಿಯೊ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಹೇಳಿದೆ. ಈ ವಿಡಿಯೊದಲ್ಲಿ ಫ್ರಾನ್ಸ್‌ನ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿ ಮಾತನಾಡುತ್ತಿರುವುದನ್ನು ಕಾಣಬಹುದು.

ಪಾಕಿಸ್ತಾನಕ್ಕೆ ಏಪ್ರಿಲ್ ಬಳಿಕ ಸಿಗಲಿದೆ ಮತ್ತೊಂದು ಶಾಕ್; ಸಿಂಧೂ ಬಳಿಕ ರಾವಿ ನದಿ ನೀರು ಹರಿವಿಗೆ ತಡೆ

ಶಹಪುರ್ ಕಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣ

ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಪ್ರೋತ್ಸಾಹ ಜಗಜ್ಜಾಹಿರವಾಗಿದ್ದರೂ ಪಾಕಿಸ್ತಾನ ನಾಯಕರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ನಡೆಸಿ ಪಾಕಿಸ್ತಾನದ ಒಳಗೆ ಮತ್ತು ಗಡಿ ಭಾಗದಲ್ಲಿದ್ದ ಹಲವಾರು ಉಗ್ರರ ಕೇಂದ್ರವನ್ನು ಹೊಡೆದುರುಳಿಸಿದರೂ ಅದು ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಭಾರತ ಜಲ ಸಮರವನ್ನು ಪ್ರಾರಂಭಿಸಿತ್ತು. ಸಿಂದೂ ನದಿ ನೀರನ್ನು ನಿಲ್ಲಿಸಿದ ಬಳಿಕ ಇದರ ಮುಂದುವರಿದ ಭಾಗವಾಗಿ ಇದೀಗ ರಾವಿ ನದಿ ನೀರು ತಡೆಗೆ ಸಿದ್ಧತೆ ನಡೆಸಿದೆ.

ಫೆಬ್ರವರಿ 25ರಂದು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ; ಪಿಎಂ ಬೆಂಜಮಿನ್‌ ನೆತನ್ಯಾಹು ಜತೆ ಮಹತ್ವದ ಮಾತುಕತೆ

ಫೆಬ್ರವರಿ 25ರಿಂದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ ಪ್ರವಾಸ

Modi to Visit Israel: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಸ್ರೇಲ್‌ಗೆ ತೆರಳಲಿದ್ದಾರೆ. ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಮಾಹಿತಿ ನೀಡಿದ್ದಾರೆ. ಈ ಭೇಟಿಯು ಭಾರತ–ಇಸ್ರೇಲ್ ನಡುವಿನ ತಂತ್ರಜ್ಞಾನಾತ್ಮಕ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆ ಇದೆ.

ಜಾಗತಿಕವಾಗಿ ಸ್ಥಗಿತಗೊಂಡ ಎಕ್ಸ್: ಲಕ್ಷಾಂತರ ಬಳಕೆದಾರರ ಪರದಾಟ

ತಾಂತ್ರಿಕ ದೋಷ; ವಿಶ್ವಾದ್ಯಂತ ಎಕ್ಸ್ ಸೇವೆ ವ್ಯತ್ಯಯ

ಸಾಮಾಜಿಕ ಜಾಲತಾಣ X ವಿಶ್ವವ್ಯಾಪಿ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಸಾವಿರಾರು ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿ ಮಾಡಿದ್ದಾರೆ. ಲಾಗಿನ್ ಸಮಸ್ಯೆ, ಪೋಸ್ಟ್‌ಗಳು ಲೋಡ್ ಆಗದಿರುವುದು, ಟೈಮ್‌ಲೈನ್ ರಿಫ್ರೆಶ್ ಆಗದಿರುವುದು ಸೇರಿದಂತೆ ಹಲವು ತೊಂದರೆಗಳನ್ನು ಬಳಕೆದಾರರು ಎದುರಿಸುತ್ತಿದ್ದಾರೆ.

ಸೇನೆಯಿಂದ ತಪ್ಪಿಸಿಕೊಳ್ಳಲು ತಲೆ, ಗಡ್ಡ ಬೋಳಿಸಿಕೊಂಡ ಜೈಶ್ ಕಮಾಂಡರ್‌ ಸೈಫುಲ್ಲಾ; ಮಹಿಳೆಯರ ಉಡುಪು, ಬುರ್ಖಾ ಧರಿಸಿ ಓಡಾಟ

ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ವೇಷ ಮಾರಿಸಿಕೊಂಡ ಉಗ್ರ

ಜೈಶ್-ಎ-ಸಂಘಟನೆಯ ಒಬ್ಬ ಕಮಾಂಡರ್ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ರೂಪವನ್ನು ಬದಲಿಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ದಾಡಿಯನ್ನು ಕತ್ತರಿಸಿಕೊಂಡು ಗುರುತಿಸದಂತೆ ತಾನೇ ತಾನು ಮರೆಮಾಚಿಕೊಳ್ಳಲು ಯತ್ನಿಸಿರುವುದಾಗಿ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ಅವನಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.

ನಿಗೂಢವಾಗಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ  ಪಾಲಕರು ಶೀಘ್ರದಲ್ಲೇ ಅಮೆರಿಕಕ್ಕೆ; ತನಿಖೆ ಏನಾಯ್ತು?

ಶೀಘ್ರದಲ್ಲೇ ಅಮೆರಿಕಕ್ಕೆ ತೆರಳಲಿದ್ದಾರೆ ಸಾಕೇತ್‌ ಪಾಲಕರು

Saketh Sreenivasaiah: ಅಮೆರಿಕದ ಕ್ಯಾಲಿಫೋರ್ನಿಯಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಿದ ತುಮಕೂರಿನ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಅವರ ಸಾವನ್ನು ಇನ್ನೂ ಪಾಲಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಿಖೆಯನ್ನು ಗಮನಿಸಲು ಅವರು ಅಮೆರಿಕಕ್ಕೆ ತೆರಳಲು ನಿರ್ಧಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಕಾರ್ಮಿಕನ ಮೃತದೇಹ 120 ದಿನಗಳ ಬಳಿಕ ಭಾರತಕ್ಕೆ; ಕುಟುಂಬಸ್ಥರ ಆಕ್ರೋಶ

ವಿದೇಶದಲ್ಲಿ ಮೃತಪಟ್ಟ ಕಾರ್ಮಿಕನ ಮೃತದೇಹ 120 ದಿನಗಳ ಬಳಿಕ ಸ್ವದೇಶಕ್ಕೆ

Worker’s Body Brought to India: ಸೌದಿ ಅರೇಬಿಯಾಗೆ ಹೊಟ್ಟೆಪಾಡಿಗೆ ತೆರಳಿದ್ದ ಝಾರ್ಖಂಡ್ ಮೂಲದ ಕಾರ್ಮಿಕ ಶವವಾಗಿ ಸ್ವದೇಶಕ್ಕೆ ಮರಳಿದ್ದಾನೆ. ಆತನ ಶವ ಮೃತಪಟ್ಟ 120 ದಿನಗಳ ಬಳಿಕ ಭಾರತಕ್ಕೆ ಮರಳಿದೆ. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಹಾಗೂ ಅಪರಾಧಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಕಾರ್ಮಿಕನಿಗೆ ಗುಂಡೇಟು ಬಿದ್ದು ಮೃತಪಟ್ಟಿದ್ದ.

"ಚಿಪ್ಸ್‌, ಬಿಸ್ಕೆಟ್‌ ತಿಂದೇ ಬದುಕುತ್ತಿದ್ದ"; ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್‌ ಸಾವಿನ ಹಿಂದಿನ ರಹಸ್ಯವೇನು?

ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್‌ ಸಾವಿನ ಹಿಂದಿನ ರಹಸ್ಯವೇನು?

ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾದ 22 ವರ್ಷದ ಕರ್ನಾಟಕ ಮೂಲದ ಸಾಕೇತ್‌ ಶ್ರೀನಿವಾಸಯ್ಯ ಅವರು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಸಾಕೇತ್ ಶ್ರೀನಿವಾಸಯ್ಯ ಅವರ ರೂಮ್‌ಮೇಟ್ ಬನೀತ್ ಸಿದ್ಧ್, "ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಜೀವನ ಎಷ್ಟು ಕಠಿಣ" ಎಂಬುದನ್ನು ಎತ್ತಿ ತೋರಿಸುವ ಭಾವನಾತ್ಮಕ ಪೋಸ್ಟ್ ಅನ್ನು ಹಾಕಿದ್ದಾರೆ.

ಐಡಿ ತೋರಿಸಿ... ಮ್ಯೂನಿಚ್‌ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಡೆದ ಭದ್ರತಾ ಸಿಬ್ಬಂದಿ

ಪಾಕಿಸ್ತಾನ ನಾಯಕನಿಗೆ ಜರ್ಮನಿಯಲ್ಲಿ ಅವಮಾನ

ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರಿ ಅವಮಾನವಾಗಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದು ಐಡಿ ಕೇಳಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಪಾಕಿಸ್ತಾನಕ್ಕೆ ಬಹುದೊಡ್ಡ ಅವಮಾನ ಎಂದು ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

Loading...