ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿದೇಶ

ಹಸೀನಾರನ್ನೂ ವಾಪಸ್ ಕಳುಹಿಸಿ: ಬಾಂಗ್ಲಾದೇಶ ಕ್ರಿಕೆಟರ್ ವಿರುದ್ಧದ ಬಿಸಿಸಿಐ ಕ್ರಮಕ್ಕೆ ಅಸಾದುದ್ದೀನ್ ಓವೈಸಿ ಕಿಡಿ

ಹಸೀನಾರನ್ನೂ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಓವೈಸಿ

AIMIM chief Asaduddin Owaisi: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿದ್ದಾರೆ. ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಸಹ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

Road Accident: ಭೀಕರ ಅಪಘಾತ; ಅಮೆರಿಕದಲ್ಲಿ ಆಂಧ್ರ ಮೂಲದ ದಂಪತಿ ಸಾವು, ಮಕ್ಕಳು ಅನಾಥ

ಅಮೆರಿಕದಲ್ಲಿ ಆಂಧ್ರ ಮೂಲದ ದಂಪತಿ ಸಾವು, ಮಕ್ಕಳು ಅನಾಥ

ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದು, ತುರ್ತು ರಕ್ಷಣಾ ತಂಡವು ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದೆ.

ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಶಕ್ಕೆ ಪಡೆದ ವೇಳೆ ಕ್ಯೂಬಾದ 32 ನಾಗರಿಕರ ಹತ್ಯೆ

ನಿಕೋಲಸ್ ಮಡುರೊ ವಶಕ್ಕೆ ಪಡೆಯುವ ವೇಳೆ 32 ನಾಗರಿಕರ ಹತ್ಯೆ

32 civilians killed: ವೆನಿಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ಅಮೆರಿಕ ವಶಕ್ಕೆ ಪಡೆಯುವ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 32 ನಾಗರಿಕರು ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಸರ್ಕಾರ ಹೇಳಿಕೆ ನೀಡಿದೆ. ಮೃತರ ಗೌರವಾರ್ಥ ಜನವರಿ 5 ಮತ್ತು 6ರಂದು ಶೋಕಾಚರಣೆ ನಡೆಯಲಿದೆ ಎಂದು ಹವಾನಾ ತಿಳಿಸಿದೆ.

ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ; ಮಾಜಿ ಗೆಳೆಯನೇ ಹತ್ಯೆ ಮಾಡಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ

Crime News: ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಭಾರಿ ಆಘಾತಕ್ಕೆ ಕಾರಣವಾಗಿದೆ. ಈ ಹತ್ಯೆಯ ಹಿಂದೆ ಆಕೆಯ ಮಾಜಿ ಗೆಳೆಯನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆತ ಅಪರಾಧ ಎಸಗಿ ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಅಧ್ಯಕ್ಷ; ಭಾರತದೊಂದಿಗೆ ಮಡುರೊಗಿರುವ ನಂಟೇನು?

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಅಧ್ಯಕ್ಷ

ಅಮೆರಿಕದ ವಶದಲ್ಲಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಕುರಿತು ಸಾಕಷ್ಟು ಆಸಕ್ತಿದಾಯಕ ಅಂಶಗಳು ಈಗ ತೆರೆದುಕೊಳ್ಳುತ್ತಿವೆ. ಮಡುರೊರ ಪುಟ್ಟಪರ್ತಿಯ ದಿವಂಗತ ಭಾರತೀಯ ದೇವಮಾನವ ಶ್ರೀ ಸತ್ಯಬಾಬಾ ಅವರ ಭಕ್ತರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ರಷ್ಯಾದಿಂದ ತೈಲ ಖರೀಸಿದರೆ ಮತ್ತಷ್ಟು ಸುಂಕ; ಮತ್ತೆ ಭಾರತಕ್ಕೆ ಬೆದರಿಕೆ ಹಾಕಿದ ಟ್ರಂಪ್‌

ರಷ್ಯಾದಿಂದ ತೈಲ ಖರೀಸಿದರೆ ಮತ್ತಷ್ಟು ಸುಂಕ; ಟ್ರಂಪ್‌ ಎಚ್ಚರಿಕೆ

ರಷ್ಯಾದೊಂದಿಗೆ ತೈಲ ಒಪ್ಪಂದವನ್ನು ಕೊನೆಗೊಳಿಸದಿದ್ದರೆ, ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ತನ್ನ ಅಸ್ತಿತ್ವದಲ್ಲಿರುವ ಸುಂಕವನ್ನು ಹೆಚ್ಚಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಈ ಹಿಂದೆ ಟ್ರಂಪ್‌ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತದೆ. ಮೋದಿ ನನಗೆ ಭರವಸೆ ನೀಡಿದ್ದಾರೆ ಎಂದಿದ್ದರು.

ವೆನೆಜುವೆಲಾ ಜತೆ ನಾವಿದ್ದೇವೆ; ಅಮೆರಿಕದ ವಿರುದ್ಧ ನಿಂತ ಭಾರತ

ವೆನೆಜುವೆಲಾ ಮೇಲಿನ ದಾಳಿಗೆ ಭಾರತ ಕಳವಳ

ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಭಾರತ ಇದಕ್ಕೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ ಸೇನಾ ಪಡೆಗಳು ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು.

ನಿಮ್ಮ ಗತಿಯೂ ಇದೇ ಆಗಬಹುದು ಹುಶಾರ್‌! ;  ಕೊಲಂಬಿಯಾ ಅಧ್ಯಕ್ಷರಿಗೆ ನೇರ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಕೊಲಂಬಿಯಾ ಮೇಲೂ ದಾಳಿ ಮಾಡುತ್ತ ಅಮೆರಿಕ ?

ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿದ ಬಳಿಕ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಲಂಬಿಯಾದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ. ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿತ್ತು.

ಅಮೆರಿಕದ ಸೆರೆಯಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಮೊದಲ ಫೋಟೋ ರಿಲೀಸ್‌ ಮಾಡಿದ ಟ್ರಂಪ್‌!

ಸೆರೆಯಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಫೋಟೋ ರಿಲೀಸ್‌ ಮಾಡಿದ ಟ್ರಂಪ್‌!

ಅಮೆರಿಕದ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೊವನ್ನು ಡೊನಾಲ್ಡ್‌ ಟ್ರಂಪ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ನಂತರ ಅಮೆರಿಕದ ತೈಲ ಕಂಪನಿಗಳು ವೆನೆಜುವೆಲಾಕ್ಕೆ ತೆರಳಿ ಅದರ ಬೃಹತ್ ಕಚ್ಚಾ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಾಗಿ ಟ್ರಂಪ್‌ ಹೇಳಿದ್ದಾರೆ.

ವೆನೆಜುವೆಲಾದ ಮೇಲೆ ಅಮೆರಿಕ ಸೇನೆ ದಾಳಿ ನಡೆಸಲು ಕಾರಣವೇನು?

ವೆನೆಜುವೆಲಾದ ಮೇಲೆ ಯುಎಸ್ ದಾಳಿಗೆ ಕಾರಣ ?

ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಆರೋಪಿಸುತ್ತಲೇ ಇರುವ ಅಮೆರಿಕ ಶನಿವಾರ ನೇರವಾಗಿ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ವೆನೆಜುವೆಲಾದ ಮೇಲೆ ಅಮೆರಿಕ ಸೇನೆ ಏಕಾಏಕಿ ದಾಳಿ ನಡೆಸಲು ಕಾರಣವೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಹೀಗೊಬ್ಬ ಪ್ರಾಮಾಣಿಕ ಕಳ್ಳ! ಗಿಟಾರ್ ಕದ್ದು ಕ್ಷಮೆ ಕೇಳಿ ಹಿಂದಿರುಗಿಸಿದ ವ್ಯಕ್ತಿ: ಭಾರಿ ವೈರಲ್ ಆಗ್ತಿದೆ ಈ ಪೋಸ್ಟ್

ಕದ್ದು ಗಿಟಾರ್ ವಾಪಸ್ ಮಾಡಿದ ವ್ಯಕ್ತಿ: ವೈರಲ್ ಪೋಸ್ಟ್‌ನಲ್ಲಿ ಏನಿದೆ?

Viral News: ಅಮೆರಿಕದ ನ್ಯೂಜೆರ್ಸಿಯ ವಿಂಟೇಜ್ ಗಿಟಾರ್ ಅಂಗಡಿಯಲ್ಲಿ ದುಬಾರಿ ಮೊತ್ತದ ಗಿಟಾರ್ ಕಳ್ಳತನ ಮಾಡಿದ್ದ ವ್ಯಕ್ತಿಯೊಬ್ಬರು ಸ್ವಲ್ಪ ದಿನದ ಬಳಿಕ ಮತ್ತೆ ಅದನ್ನು ಅಂಗಡಿ ಮಾಲಿಕನಿಗೆ ಹಿಂದಿರುಗಿಸಿದ ವಿಚಿತ್ರ ಘಟನೆ ನಡೆದಿದೆ. ಆತನು ಎರಡು ಮ್ಯಾಂಡೋಲಿನ್‌ ಗಿಟಾರ್‌ಗಳನ್ನು ಕದ್ದಿದ್ದು ಕೆಲವು ದಿನಗಳ ನಂತರ ಅದನ್ನು ಅಂಗಡಿಯ ಹೊರಗೆ ಇಟ್ಟು ಕದ್ದಿದ್ದಕ್ಕೆ ಅಂಗಡಿ ಮಾಲಿಕನಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ.

ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ; ಜನವರಿ 2ರಿಂದಲೇ ಜಾರಿಗೆ ಬಂತು ಹೊಸ ಕಾನೂನು

ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ

New criminal code: ಇಂಡೋನೇಷ್ಯಾದ ಹೊಸ ಕ್ರಿಮಿನಲ್ ಕೋಡ್ ಜನವರಿ 2ರಿಂದ ಜಾರಿಯಾಗಿದ್ದು, ವಿವಾಹ ಪೂರ್ವ ಲೈಂಗಿಕ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಪರಾಧ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಕಾನೂನು ಜನರ ಹಕ್ಕುಗಳು ಹಾಗೂ ಮಾತಿನ ಸ್ವಾತಂತ್ರ್ಯ ಮೇಲೆ ಪರಿಣಾಮ ಬೀರಬಹುದೆಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ಶನಿವಾರ ರಾತ್ರಿ ಆಕಾಶವನ್ನು ಬೆಳಗಿಸಲಿದೆ ವೂಲ್ಫ್ ಸೂಪರ್‌ಮೂನ್; ಹಾಗೆಂದರೇನು? ಇಲ್ಲಿದೆ ಮಾಹಿತಿ

ಶನಿವಾರ ರಾತ್ರಿ ಆಕಾಶವನ್ನು ಬೆಳಗಿಸಲಿದೆ ವೂಲ್ಫ್ ಸೂಪರ್‌ಮೂನ್

Wolf Supermoon: ಶನಿವಾರ ರಾತ್ರಿ ಆಕಾಶವನ್ನು ವೂಲ್ಫ್ ಸೂಪರ್‌ಮೂನ್ ಬೆಳಗಲಿದೆ. ಇದು ಸಾಮಾನ್ಯ ಪೂರ್ಣಚಂದ್ರಕ್ಕಿಂತ ಸ್ವಲ್ಪ ದೊಡ್ಡದು ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಲಿದೆ. ಜನವರಿಯ ಈ ವಿಶೇಷ ಚಂದ್ರನ ಬೆಳಕು ಮತ್ತು ಅದರ ವೈಶಿಷ್ಟ್ಯಗಳ ಕುರಿತು ಇಲ್ಲಿದೆ ಪ್ರಮುಖ ಮಾಹಿತಿ.

ವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನು ಸೆರೆ ಹಿಡಿದ ಅಮೆರಿಕ ಸೇನೆ; ಸೋಶಿಯಲ್‌ ಮೀಡಿಯದಲ್ಲಿ ಟ್ರಂಪ್‌ ಪೋಸ್ಟ್‌

ವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನು ಸೆರೆ ಹಿಡಿದ ಅಮೆರಿಕ ಸೇನೆ

Venezuela President: ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಜೊತೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಗೆ ಕಳುಹಿಸಲಾಯಿತು.

ವೆನೆಜುವೆಲಾದ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ಟ್ರಂಪ್‌ ಹೇಳಿದ್ದೇನು?

ವೆನೆಜುವೆಲಾದ ಮೇಲೆ ಅಮೆರಿಕದಿಂದ ವೈವಾನಿಕ ದಾಳಿ

ಅಮೆರಿಕ ಹಾಗೂ ವೆನೆಜುವೆಲಾದ ನಡುವೆ ಯುದ್ಧ ಪ್ರಾರಂಭವಾಗುವಂತೆ ತೋರುತ್ತಿದೆ. ಶನಿವಾರ ಮುಂಜಾನೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನ ಕೆಲವು ಕಡೆ ಸ್ಫೋಟ ಸಂಭವಿಸಿದೆ. ಮಿಲಿಟರಿ ನೆಲೆಯ ಬಳಿ ದಾಳಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜಧಾನಿಯ ಹಲವಾರು ಭಾಗಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ನಿವಾಸಿಗಳು ಹೇಳಿದ್ದಾರೆ.

"ಅವನನ್ನು ಜೀವಂತವಾಗಿ ಸುಟ್ಟು ಹಾಕಿದೆವು': ಹಿಂದೂ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದು ನಾನೇ ಎಂದ ಬಾಂಗ್ಲಾ ಯುವಕ!

ಹಿಂದೂ ಪೊಲೀಸ್ ಅಧಿಕಾರಿ ಕೊಲೆ ಕುರಿತು ಹೇಳಿಕೆ ನೀಡಿದ ಬಾಂಗ್ಲಾ ಯುವಕ

ಬಾಂಗ್ಲಾದೇಶದ ಯುವಕನೊಬ್ಬ ಜುಲೈ 2024 ರ ದಂಗೆಯ ಸಮಯದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಬಗ್ಗೆ ಹೆಮ್ಮೆಪಡುತ್ತಾ ಕಾನೂನು ಜಾರಿ ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ.

ತಪ್ಪಿದ ಭಾರೀ ದುರಂತ;  ರನ್‌ ವೇಯಿಂದ ಜಾರಿದ  55 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ

ರನ್‌ ವೇಯಿಂದ ಜಾರಿದ 55 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ

ನೇಪಾಳದ ಭದ್ರಾಪುರದಲ್ಲಿ ಇಂದು ಲ್ಯಾಂಡಿಂಗ್ ಮಾಡುವಾಗ ಬುದ್ಧ ಏರ್‌ನ ಟರ್ಬೊಪ್ರೊಪ್ ಪ್ರಯಾಣಿಕ ವಿಮಾನವು ರನ್‌ವೇಯಿಂದ ಜಾರಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನವು 51 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ತಿಳಿದು ಬಂದಿದೆ.

ಯೆಮೆನ್‌ ಆಸ್ಪತ್ರೆಯ ಮೇಲೆ ಸೌದಿ ವೈಮಾನಿಕ ದಾಳಿ; 20 ಕ್ಕೂ ಅಧಿಕ ಸಾವು, ಹಲವರಿಗೆ ಗಾಯ

ಯೆಮೆನ್‌ ಆಸ್ಪತ್ರೆಯ ಮೇಲೆ ಸೌದಿ ವೈಮಾನಿಕ ದಾಳಿ; 20 ಕ್ಕೂ ಅಧಿಕ ಸಾವು

ಯೆಮೆನ್‌ನ ಆಗ್ನೇಯ ತೈಲ ಸಮೃದ್ಧ ಪ್ರಾಂತ್ಯವಾದ ಹದ್ರಾಮೌಟ್‌ನ ಅನೇಕ ಸ್ಥಳಗಳ ಮೇಲೆ ಸೌದಿ ಯುದ್ಧ ವಿಮಾನಗಳು ಶುಕ್ರವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ತಿಳಿಸಿವೆ.

ಸ್ವಿಸ್‌ ಬಾರ್‌ ಅಗ್ನಿ ಅವಘಡ; ಬೆಂಕಿ ಹೊತ್ತಿಕೊಳ್ಳಲು ಕಾರಣ ಇದೇನಾ?

ಧಗಧಗನೇ ಹೊತ್ತಿ ಉರಿದ ರೆಸಾರ್ಟ್‌: ಸಾವಿನ ಸಂಖ್ಯೆ 47ಕ್ಕೆ ಏರಿಕೆ

Resort engulfed in flames: ಸ್ವಿಸ್‌ನ ಸ್ಕೀ ರೆಸಾರ್ಟ್‌ ಬಾರ್‌ನಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವುಗಳ ಸಂಖ್ಯೆ 47ಕ್ಕೆ ಏರಿಕೆಯಾಗಿದ್ದು, ಈ ಘಟನೆಗೆ ಫ್ಲ್ಯಾಶ್ ಓವರ್ ಎನ್ನುವ ಅಕಸ್ಮಾತ್ ಉರಿಯುವ ಘಟನೆಯೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ಪತ್ರ ಬರೆದ ಮೇಯರ್ ಮಮ್ದಾನಿ; ಹೇಳಿದ್ದೇನು?

ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ನ್ಯೂಯಾರ್ಕ್ ಮೇಯರ್ ಪತ್ರ

New York City Mayor Mamdani: ಭಾರತದ ಜೈಲಿನಲ್ಲಿ ಇರುವ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಖಾಲಿದ್ ಹೇಳಿದ ಕಹಿತನ ಕುರಿತು ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

Iran protests: ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ದೇಶದ ಆರ್ಥಿಕ ಕುಸಿತ, ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ಯುವಜನರನ್ನು ಬೀದಿಗಿಳಿಯುವಂತೆ ಮಾಡಿವೆ. ಡಿಸೆಂಬರ್‌ನಲ್ಲಿ ಬೆಲೆಯೇರಿಕೆ ಪ್ರಮಾಣ ಅಧಿಕೃತವಾಗಿ 42.5 ಶೇಕಡಕ್ಕೆ ಏರಿಕೆಯಾಗಿದೆ. ಭಾನುವಾರ ಸರ್ಕಾರ ದೇಶಿ ಕರೆನ್ಸಿಯ ತೀವ್ರ ಕುಸಿತವನ್ನು ನಿಭಾಯಿಸಿದ ರೀತಿ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವುದರೊಂದಿಗೆ ಈ ಪ್ರತಿಭಟನೆಗಳು ಆರಂಭವಾದವು.

ಪಾಕಿಸ್ತಾನದಲ್ಲಿ ಶಿಕ್ಷೆ ಪೂರ್ಣಗೊಳಿಸಿದರೂ 167 ಭಾರತೀಯರಿಗೆ ಬಿಡುಗಡೆ ಭಾಗ್ಯವಿಲ್ಲ

ಪಾಕ್​ನಲ್ಲಿ ಶಿಕ್ಷೆ ಅವಧಿ ಮುಗಿದರೂ ಬಿಡುಗಡೆಯಾಗದ ಭಾರತೀಯರು

ಜೈಲಿನಿಂದ ಬಿಡುಗಡೆಗಾಗಿ ಕಾಯುತ್ತಿದ್ದ ಭಾರತೀಯರ ಮೀನುಗಾರರು ಪಾಕಿಸ್ತಾನದ ವಿಳಂಬದ ಕಾರಣಕ್ಕೆ ಶಿಕ್ಷೆಯ ಅವಧಿ ಮುಗಿದರೂ ಸೆರೆಮನೆಯಲ್ಲಿಯೇ ಉಳಿಯುವ ಪರಿಸ್ಥಿತಿ ಎದುರಾಗಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್‌ ನಲ್ಲಿ ಏಕಕಾಲಕ್ಕೆ ಪರಸ್ಪರ ವಶದಲ್ಲಿರುವ ನಾಗರಿಕ ಕೈದಿಗಳು ಹಾಗೂ ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ತ್ರಿವಳಿಗಳ ಹೆಸರು ಎ, ಬಿ, ಸಿ; ಈ ನಾಮಕರಣದ ಹಿಂದಿದೆ ಅಚ್ಚರಿಯ ಸಂಗತಿ

ಈ ತ್ರಿವಳಿಗಳ ಹೆಸರು ಎ, ಬಿ, ಸಿ; ಯಾಕಾಗಿ ಈ ನಾಮಕರಣ?

A, B, and C: ಕೆನಡಾದ ಟೊರೊಂಟೊದಲ್ಲಿ ಹುಟ್ಟಿದ ತ್ರಿವಳಿ ಸಹೋದರರಿಗೆ ಪೋಷಕರು ಸರಳ ಹೆಸರನ್ನಿಟ್ಟಿದ್ದಾರೆ. ಮಕ್ಕಳನ್ನು ಪರಸ್ಪರ ಗುರುತಿಸಲು ಸುಲಭವಾಗುವಂತೆ ಹೆಸರಿನ ಮಧ್ಯೆ ಎ, ಬಿ, ಸಿ ಎಂದು ಹೆಸರನ್ನಿಟ್ಟಿದ್ದಾರೆ. ಅದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಹೊಸ ವರ್ಷಕ್ಕೆ ಕಾಲಿಟ್ಟರೂ ಬದಲಾಗದ ಪಾಕಿಸ್ತಾನ; ಭಾರತದ ವಾಯುನೆಲೆ ಮೇಲೆ ದಾಳಿ ಮಾಡಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ ಶತ್ರು ರಾಷ್ಟ್ರ

ಭಾರತದ ವಾಯುನೆಲೆ ಮೇಲೆ ದಾಳಿ ಮಾಡಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ ಪಾಕ್

ಹೊಸ ವರ್ಷ ಆರಂಭವಾಗಿದ್ದರೂ, ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಿದೆ. ಕಳೆದ ವರ್ಷ ಭಾರತದ ವಾಯುನೆಲೆ ಮೇಲೆ ದಾಳಿ ನಡೆಸಿದ್ದೆಂದು ಕೆಲ ಪಾಕಿಸ್ತಾನಿ ಸೋಶಿಯಲ್‌ ಮೀಡಿಯಾ ಖಾತೆಗಳು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು. ಆದರೆ ಈ ಹೇಳಿಕೆಗಳನ್ನು ಸುಳ್ಳೆಂದು ಸಾಬೀತಾಗಿದೆ.

Loading...