ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿದೇಶ

Viral News: ಗರ್ಲ್‌ಫ್ರೆಂಡ್‌ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣವನ್ನೇ ಬಿಟ್ಟ ಯುವಕ

ಪ್ರೇಯಸಿಗಾಗಿ ತೂಕ ಇಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

ವ್ಯಕ್ತಿಯೊಬ್ಬರು ತನ್ನ ಗರ್ಲ್ ಫ್ರೆಂಡ್ ನ ಪೋಷಕರನ್ನು ಮೆಚ್ಚಿಸಲೆಂದು ತೂಕ ಇಳಿಸಲು ಹೋಗಿ ಸಾವನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾ ದೇಶದ ಹೆನಾನ್ ಪ್ರಾಂತ್ಯದ ಕ್ಸಿನ್ಕ್ಸಿ ಯಾಂಗ್ ನಗರದ ನಿವಾಸಿ 36 ವರ್ಷದ ಲೀ ಜಿಯಾಂಗ್ ಎನ್ನುವವರು ಅತಿಯಾದ ಬೊಜ್ಜಿನ ಸಮಸ್ಯೆ ಯಿಂದ ಬಳಲುತ್ತಿದ್ದರು. ಹೀಗಾಗಿ ತಾನು ದೇಹದ ತೂಕವನ್ನು ಇಳಿಸಿಕೊಂಡು, ತನ್ನ ಗೆಳತಿಯ ಪೋಷ ಕರನ್ನು ಮೆಚ್ಚಿಸಬೇಕು ಉದ್ದೇಶಕ್ಕೆ ಆತ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆ ಬಳಿಕ ಆರೋಗ್ಯ ಸಮಸ್ಯೆಯಿಂದ ಆತ ಸಾವನ್ನಪ್ಪಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್‌ ಜೊತೆ ಲಿಂಕ್‌... ಡ್ರಗ್ಸ್‌ ಸರಬರಾಜು...ಭೂಗತ ಪಾತಕಿ ದಾವೂದ್‌  ಸಹಚರ ಗಡಿಪಾರು

ಮಾದಕ ದ್ರವ್ಯದೊಂದಿಗೆ ಬಾಲಿವುಡ್ ನಂಟು ಬಿಚ್ಚಿಟ್ಟ ದುಬೈ ಶೇಖ್

ಬಾಲಿವುಡ್, ರಾಜಕೀಯ ಗಣ್ಯರಿಗೆ ಮಾದಕ ದ್ರವ್ಯ ಸರಬರಾಜು ಆರೋಪದಲ್ಲಿ ದಾವೂದ್ ಇಬ್ರಾಹಿಂನ ಸಹಾಯಕ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ನನ್ನು ದುಬೈನಿಂದ ಗಡಿಪಾರು ಪಡಲಾಗಿದೆ. ಈತನ ವಿಚಾರಣೆ ಸಮಯದಲ್ಲಿ ಹಲವಾರು ಸ್ಪೋಟಕ ಸಂಗತಿಗಳು ಬಹಿರಂಗವಾಗಿವೆ. ಭಾರತದ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರ ಸಲೀಂ ಡೋಲಾ ಬಂಧನದ ಬಳಿಕ ಇದೊಂದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

Sheikh Hasina: ಬಾಂಗ್ಲಾದೇಶದ ರಾಜಕೀಯ ಸ್ಥಿರಗೊಳಿಸಲು ಭಾರತದ ಪಾತ್ರ ಮುಖ್ಯ: ಶೇಖ್ ಹಸೀನಾ

ಬಾಂಗ್ಲಾದೇಶದಲ್ಲೂ ಬರಲಿದೆ ಪಾಕಿಸ್ತಾನ ಮಾದರಿಯ ಆಡಳಿತ

ಬಾಂಗ್ಲಾದೇಶದಲ್ಲೂ ಪಾಕಿಸ್ತಾನ ಮಾದರಿಯ ಆಡಳಿತ ಅನುಷ್ಠಾನಗೊಳ್ಳುತ್ತಿದೆ. ಇದನ್ನು ತಡೆಯುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕಿದೆ. ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಢಾಕಾ ರಾಜಕೀಯ ಅಸ್ಥಿರತೆಯ ಅಪಾಯವನ್ನು ಎದುರಿಸುತ್ತಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಎಚ್ಚರಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಭಾರತ ಬಾಂಗ್ಲಾದೇಶದ ಸ್ಥಿರ ಸ್ನೇಹಿತ ಎಂದು ಹೇಳಿದ್ದಾರೆ.

ಪರ್ಫ್ಯೂಮ್‌ ಉಡುಗೊರೆ ಕೊಡುವಾಗ ಎಷ್ಟು ಹೆಂಡತಿಯರು ಎಂದು ಸಿರಿಯನ್ ಅಧ್ಯಕ್ಷರನ್ನು ಪ್ರಶ್ನಿಸಿದ ಡೊನಾಲ್ಡ್ ಟ್ರಂಪ್

ಸಿರಿಯನ್ ಅಧ್ಯಕ್ಷರಿಗೆ ಎಷ್ಟು ಹೆಂಡತಿಯರು ?

ಶ್ವೇತಭವನದಲ್ಲಿ ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರಿಗೆ ಸುಗಂಧ ದ್ರವ್ಯದ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿಮಗೆಷ್ಟು ಹೆಂಡತಿಯರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಅವರು ಒಬ್ಬಳೇ ಎಂದು ಹೇಳಿದರು. ಆಗ ಅಲ್ಲಿದ್ದವರೆಲ್ಲ ನಕ್ಕರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Viral Video: ಚೀನಾದಲ್ಲಿ ಹೊಸದಾಗಿ ನಿರ್ಮಿಸಿದ ಹಾಂಗ್ಕಿ ಸೇತುವೆ ಕುಸಿತ; ಇಲ್ಲಿದೆ ಎದೆ ನಡುಗಿಸುವ ವಿಡಿಯೊ

ಚೀನಾದಲ್ಲಿ ಹೊಸದಾಗಿ ನಿರ್ಮಿಸಲಾದ ಹಾಂಗ್ಕಿ ಸೇತುವೆ ಕುಸಿತ

Hongqi Bridge collapse: ಚೀನಾದಲ್ಲಿ ನಿರ್ಮಿಸಲಾದ ಹಾಂಗ್ಕಿ ಸೇತುವೆ ಕುಸಿದಿರುವ ಭೀಕರ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ನಿರ್ಮಾಣ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಕಾರಣಗಳ ಬಗ್ಗೆ ತನಿಖೆ ಆರಂಭಗೊಂಡಿದೆ.

Elon Musk: ಗಣೇಶನ ಬಗ್ಗೆ ಗ್ರೋಕ್ ಎಐ ಜೊತೆ ಇದು ಯಾರೆಂದು ಕೇಳಿದ ಎಲಾನ್ ಮಸ್ಕ್; ನೆಟ್ಟಿಗರ ಹೃದಯಗೆದ್ದ ಸಿರಿವಂತ ಉದ್ಯಮಿ

ಭಾರತೀಯರ ಹೃದಯ ಗೆದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್

ಟೆಸ್ಲಾ ಹಾಗೂ ಎಕ್ಸ್ (X) ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಅವರ AI ಚಾಟ್‌ಬಾಟ್ ಗ್ರೋಕ್ ಈಗ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ. ಗಣೇಶನ ಕುರಿತು Grok AI ನಡೆಸಿದ ಸಂಭಾಷಣೆ ಭಾರತೀಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

PM Modi: ಪ್ರಧಾನಿ ಮೋದಿ ಭೂತಾನ್ ಭೇಟಿ: ಅತೀ ಚಿಕ್ಕ ನೆರೆ ರಾಷ್ಟ್ರದ ಜತೆ ಭಾರತದ ಸಂಬಂಧಕ್ಕೆ ಯಾಕಿಷ್ಟು ಆದ್ಯತೆ?

ಭೂತಾನ್ ಪ್ರವಾಸದಲ್ಲಿ ಪಿಎಂ ಮೋದಿ

Pm Modi Bhutan Visit: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ರಾಜ ಜಿಗ್ಮೆ ಸಿಂಘೆ ವಾಂಗ್‌ಚುಕ್ ಅವರ 70ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ದೆಹಲಿಯ ಬಾಂಬ್ ಸ್ಫೋಟದ ನಂತರವೂ ಮೋದಿ ಭೂತಾನ್‌ಗೆ ಭೇಟಿ ನೀಡಿದ್ದಾರೆ.

Delhi Bomb Blast: ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣ- ನೋಟಮ್ ಜಾರಿ ಮಾಡಿದ ಪಾಕಿಸ್ತಾನ...!

ಪಾಕಿಸ್ತಾನದಲ್ಲಿ ರೆಡ್ ಹೈಅಲರ್ಟ್ ಘೋಷಣೆ

Pakistan Issues Notam: ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆಯನ್ನು ಜಾರಿಗೊಳಿಸಲಾಗಿದ್ದು, ರಾಷ್ಟ್ರದ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು. ಇದೀಗ ಸ್ಪೋಟ ಪ್ರಕರಣದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯ ಬೆನ್ನಲ್ಲೇ ತನ್ನ ರಾಷ್ತ್ರದಲ್ಲಿ ನೋಟಮ್ ಜಾರಿಗೊಳಿಸಿದೆ.

Bomb Blast: ಪಾಕಿಸ್ತಾನದ ಕೋರ್ಟ್‌ ಎದುರೇ ಆತ್ಮಾಹುತಿ ಬಾಂಬ್‌ ದಾಳಿ; 12 ಬಲಿ, ಹಲವರಿಗೆ ಗಾಯ

ಪಾಕಿಸ್ತಾನದ ಕೋರ್ಟ್‌ ಎದುರೇ ಆತ್ಮಾಹುತಿ ಬಾಂಬ್‌ ದಾಳಿ

ಪಾಕಿಸ್ತಾನದಲ್ಲಿ ಪ್ರಬಲ ಸ್ಫೋಟವೊಂದು ಸಂಭವಿಸಿದ್ದು, ಇಸ್ಲಾಮಾಬಾದ್ ನ್ಯಾಯಾಂಗ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಸ್ಫೋಟದಲ್ಲಿ ಕಾರೊಂದು ಜಖಂಗೊಂಡಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ವಕೀಲರು ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ.

Delhi bomb Blast: ದೆಹಲಿ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ- ಪ್ರಧಾನಿ ಮೋದಿ ವಾರ್ನಿಂಗ್‌!

ದೆಹಲಿ ಸ್ಫೋಟ ಕೇಸ್‌-ಉಗ್ರರಿಗೆ ಮೋದಿ ಖಡಕ್‌ ವಾರ್ನಿಂಗ್‌!

PM Narendra Modi: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂತಾನ್ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ, ದೆಹಲಿಯ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು. ಘಟನೆಗೆ ಕಾರಣಕರ್ತರಾವರಿಗೆ ತಕ್ಕಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು. ನೆರೆಯ ರಾಷ್ಟ್ರ ಭೂತಾನ್‍ನಲ್ಲಿ (Bhutan) ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ಎರಡು ದಿನಗಳ ಭೇಟಿಗಾಗಿ ಇಂದು ಮುಂಜಾನೆ ಥಿಂಪುಗೆ ಆಗಮಿಸಿದರು.

Indo-American Trade Deal:: ಭಾರತದೊಂದಿಗೆ ನ್ಯಾಯಯುತ ವ್ಯಾಪರ ಒಪ್ಪಂದ ಎಲ್ಲರಿಗೂ ಒಳ್ಳೆಯದೆಂದ ಡೊನಾಲ್ಡ್‌ ಟ್ರಂಪ್‌

ಭಾರತಕ್ಕೆ ಸುಂಕ ಕಡಿತ: ಟ್ರಂಪ್ ಸುಳಿವು

ನವದೆಹಲಿಯೊಂದಿಗೆ ವಾಷಿಂಗ್ಟನ್ ನ ಸುದೀರ್ಘ ವ್ಯಾಪಾರ ಒಪ್ಪಂದ ಮಾತುಕತೆಗಳ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇದೀಗ ಭಾರತಕ್ಕೆ ಸುಂಕ ಕಡಿತ ಮಾಡುವ ಸುಳಿವನ್ನು ಕೊಟ್ಟಿದ್ದಾರೆ. ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದೊಂದಿಗೆ ನ್ಯಾಯಯುತ ವ್ಯಾಪರ ಒಪ್ಪಂದ ಎಲ್ಲರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.

BBC Chief Resign: ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಟ್ರಂಪ್ ಭಾಷಣ ತಿರುಚಿದ ಆರೋಪ: ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳ ತಲೆದಂಡ

ಬಿಬಿಸಿ ಮುಖ್ಯಸ್ಥ ಟಿಮ್‌ ಡೇವಿ ರಾಜೀನಾಮೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಿರುಚಿ ಸಾಕ್ಷ್ಯಚಿತ್ರದಲ್ಲಿ ಪ್ರದರ್ಶಿಸಿದಕ್ಕಾಗಿ ಬಿಬಿಸಿ ಸುದ್ದಿ ಸಂಸ್ಥೆಯ ಮಹಾ ನಿರ್ದೇಶಕರ ತಲೆದಂಡವಾಗಿದೆ. ಅವರು ಮಾಡಿದ ಒಂದು ಎಡವಟ್ಟಿನಿಂದ ವಿವಾದ ಎದ್ದಿದ್ದು, ಇದರ ಬೆನ್ನಲ್ಲೇ ಬಿಬಿಸಿಯ ಮಹಾನಿರ್ದೇಶಕ ಟಿಮ್ ಡೇವಿ ರಾಜೀನಾಮೆ ನೀಡಿದ್ದಾರೆ.

Diljit Dosanjh: ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ; ಮತ್ತೆ ಮತ್ತೆ ಯಾಕ್‌ ಹೀಗಾಗ್ತಿದೆ?

ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ

Life Threats: ಪರ್ತ್‌ ನಂತರ ಇದೀಗ ಜನಪ್ರಿಯ ಗಾಯಕ ದಿಲ್‌ಜಿತ್ ದೋಸಾಂಜ್ ಅವರ ಆಕ್ಲೆಂಡ್ ಶೋಗೂ ಖಲಿಸ್ತಾನಿ ಉಗ್ರಗಾಮಿಗಳಿಂದ ಬೆದರಿಕೆಗಳು ಬಂದಿವೆ. ಅಮೆರಿಕ ಮೂಲದ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ಈ ಬೆದರಿಕೆಗಳು ಬರುತ್ತಿವೆ.

Viral Video: ವಿಮಾನ ಪ್ರಯಾಣದ ವೇಳೆ ನಿಮ್ಮ ‘ಕೋಳಿ ನಿದ್ದೆಗೆ’ ಸಹಕಾರಿ ಈ ಕ್ಯಾಪ್ಸೂಲ್‌

ಏರ್‌ಪೋರ್ಟ್‌ನಲ್ಲಿದೆ ಸ್ಲೀಪಿಂಗ್ ಕ್ಯಾಪ್ಸೂಲ್! ನಿಮಗಿದರ ಬಗ್ಗೆ ಗೊತ್ತೇ?

China News ಚೀನಾದ ಕುನ್ಮಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ತೆಗೆದುಕೊಳ್ಳಲು ಸ್ಲೀಪಿಂಗ್ ಕ್ಯಾಪ್ಸೂಲ್‌ಗಳನ್ನು, ಹಿಡಲಾಗಿದೆ. ಇವು ಪ್ರಯಾಣಿಕರಿಗೆ ಆರಾಮದಾಯಕವಾಗಿ ವಿಶ್ರಾಂತಿ, ನಿದ್ರೆ ಮತ್ತು ರಿಫ್ರೆಶ್ ಆಗುವ ಅವಕಾಶವನ್ನು ನೀಡುತ್ತವೆ. ಈ ಕ್ಯಾಪ್ಸೂಲ್‌ಗಳಲ್ಲಿ ಏರ್‌ಕಂಡೀಷನರ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಟಿವಿ, ಲೈಟಿಂಗ್ ಕಂಟ್ರೋಲ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಪ್ರತಿ ಗಂಟೆಗೆ ನಿಗದಿತ ಶುಲ್ಕ ಪಾವತಿಸಿ ಇವುಗಳನ್ನು ಬಳಸಬಹುದು.

Asim Munir: ಪಾಕಿಸ್ತಾನದ ಸರ್ವಾಧಿಕಾರಿಯಾಗ್ತಾರಾ ಮುನೀರ್?‌ ಸಂವಿಧಾನವೇ ಈತನ ಕೈಕೆಳಗೆ

ಪಾಕಿಸ್ತಾನದ ಸರ್ವಾಧಿಕಾರಿಯಾಗ್ತಾರಾ ಮುನೀರ್?‌

Pakistan: 27ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿರುವ ಪಾಕಿಸ್ತಾನ ಸೆನೆಟ್ ಜನರಲ್ ಅಸಿಮ್ ಮುನೀರ್ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡಲು ನಿರ್ಧರಿಸಿದೆ. ಇದರಿಂದ ಅಸಿಮ್ ಮುನೀರ್ ಇನ್ನು ಮುಂದೆ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಪೂರ್ಣ ಮಿಲಿಟರಿ ಕಮಾಂಡ್ ಆಗಿ ಕಾರ್ಯ ನಿರ್ವಹಿಸಲಿದ್ದು, ಇದರಿಂದ ವಿವಿಧ ಸವಲತ್ತುಗಳನ್ನು ಪಡೆಯಲು ಮಸೂದೆ ಮೂಲಕವೇ ಅಧಿಕಾರ ನೀಡಲಾಗಿದೆ.

Tsunami Alert: ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪ; ಭಾರೀ ಸುನಾಮಿಯ ಎಚ್ಚರಿಕೆ

ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪ; ಸುನಾಮಿಯ ಎಚ್ಚರಿಕೆ

ಹಲವು ವರ್ಷಗಳ ಬಳಿಕ ಜಪಾನ್‌ನಲ್ಲಿ ಮತ್ತೆ ಭಾರೀ ಸುನಮಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಪೆಸಿಫಿಕ್ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಜಪಾನ್ ಭಾನುವಾರ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿರುವ ಪ್ರಕಾರ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ 39.51° N ಅಕ್ಷಾಂಶ ಮತ್ತು 143.38° E ರೇಖಾಂಶದಲ್ಲಿ 30 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

Lawrence Bishnoi gang: ಬಿಷ್ಣೋಯ್ ಗ್ಯಾಂಗ್‌ನ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟರ್‌ಗಳ ಬಂಧನ; ಶೀಘ್ರವೇ ಭಾರತಕ್ಕೆ ಹಸ್ತಾಂತರ ಸಾಧ್ಯತೆ

ಬಿಷ್ಣೋಯ್ ಗ್ಯಾಂಗ್‌ನ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟರ್‌ಗಳ ಬಂಧನ

ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೇಶದ ಇಬ್ಬರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು ಬಂಧಿಸುವಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಯಶಸ್ಸನ್ನು ಸಾಧಿಸಿವೆ. ಹರಿಯಾಣ ಪೊಲೀಸರೂ ಸೇರಿದಂತೆ ಭದ್ರತಾ ಸಂಸ್ಥೆಯ ಅಧಿಕಾರಿಗಳು ಜಾರ್ಜಿಯಾದಲ್ಲಿ ವೆಂಕಟೇಶ್ ಗಾರ್ಗ್ನನ್ನು ಬಂಧಿಸಿದರೆ, ಭಾನು ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಯಿತು.

PM Narendra Modi: ನ.11ರಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ಗೆ

ನ.11ರಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ಗೆ

Narendra Modi Bhutan visit: ಭೂತಾನಿನ ಮಾಜಿ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ 70ನೇ ಜನ್ಮ ದಿನಾಚರಣೆಯ ಆಚರಣೆಯಲ್ಲಿಯೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರು ಥಿಂಪುವಿನ ತಾಶಿಚೋಡ್‌ಜಾಂಗ್‌ನಲ್ಲಿರುವ ಪವಿತ್ರ ಅವಶೇಷಗಳಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಭೂತಾನ್ ಸರ್ಕಾರ ಆಯೋಜಿಸಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ವರ್ಧಿಸುವ ಮತ್ತು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು, ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯವರಿಗೆ ಈ ಸಂದರ್ಭದಲ್ಲಿ ಅವಕಾಶ ಒದಗಲಿದೆ.

ಯುದ್ಧಕ್ಕೆ ಸಿದ್ಧ; ಶಾಂತಿ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಅಫ್ಘಾನಿಸ್ತಾನ

ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ ಅಫ್ಘಾನಿಸ್ತಾನ

Afghanistan-Pakistan: ಇಸ್ತಾಂಬುಲ್‌ನಲ್ಲಿ ಟರ್ಕಿ ಮತ್ತು ಕತಾರ್‌ನ ಮಧ್ಯಸ್ಥಿಕೆಯಲ್ಲಿ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಮುರಿದು ಬಿದ್ದಿದೆ. ಪಾಕಿಸ್ತಾನದ ಅಪ್ರಮಾಣಿಕ ಮತ್ತು ಅಪ್ರಬುದ್ಧ ನಡವಳಿಕೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಜತೆಗೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಮತ್ತೊಮ್ಮೆ ಘೋಷಿಸಿದೆ.

ಉದ್ಯೋಗದ ಆಸೆಗೆ ಬಿದ್ದು ಮ್ಯಾನ್ಮಾರ್‌ನಲ್ಲಿ ಟ್ರ್ಯಾಪ್‌ ಆಗಿದ್ದ 270 ಭಾರತೀಯರ ರಕ್ಷಣೆ

ಮ್ಯಾನ್ಮಾರ್ ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ

Myanmar Cyber Scam: ಮ್ಯಾನ್ಮಾರ್ ನಕಲಿ ಉದ್ಯೋಗ ಹಗರಣದಲ್ಲಿ ವಂಚನೆ ಕೇಂದ್ರಗಳಲ್ಲಿ ಸಿಲುಕಿದ್ದ 270 ಪ್ರಜೆಗಳನ್ನು ಭಾರತ ಸ್ವದೇಶಕ್ಕೆ ಕರೆತಂದಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಮ್ಯಾನ್ಮಾರ್‌ನಲ್ಲಿ ನಕಲಿ ಉದ್ಯೋಗ ಕೊಡುಗೆಗಳಿಗೆ ಬಲಿಯಾಗಿದ್ದ 270 ಭಾರತೀಯ ನಾಗರಿಕರನ್ನು ವಿದೇಶಾಂಗ ಸಚಿವಾಲಯ (MEA) ಯಶಸ್ವಿಯಾಗಿ ರಕ್ಷಿಸಿ ಮರಳಿ ಕರೆತಂದಿದೆ.

ಪಾಕ್‌ ಮೇಲೆ ದಾಳಿ ನಡೆಸಲು ಇಂದಿರಾ ಗಾಂಧಿ ಒಪ್ಪಿರ್ಲಿಲ್ವಾ? ಮಾಜಿ ಸಿಐಎ ಅಧಿಕಾರಿ ಹೇಳಿದ್ದೇನು?

ಪಾಕ್ ಮೇಲಿನ ದಾಳಿಗೆ ಇಂದಿರಾ ಗಾಂಧಿ ಒಪ್ಪಿರ್ಲಿಲ್ವಾ?

Indira Gandhi: ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಅವರು ಬಹಿರಂಗಪಡಿಸಿದ ವರದಿಗಳ ಪ್ರಕಾರ, 1980ರ ದಶಕದಲ್ಲಿ ಭಾರತ ಮತ್ತು ಇಸ್ರೇಲ್ ಪಾಕಿಸ್ತಾನದ ಕಹುಟಾ ಯುರೇನಿಯಂ ಶುದ್ಧೀಕರಣ ಘಟಕ ಮೇಲೆ ಮುನ್ನೆಚ್ಚರಿಕಾ ದಾಳಿ ನಡೆಸಲು ಯೋಜನೆ ರೂಪಿಸಿದ್ದವು. ಆದರೆ, ಅಂದಿನ ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಈ ದಾಳಿಯನ್ನು ಅನುಮೋದಿಸಲಿಲ್ಲ ಎಂದು ಹೇಳಿದ್ದಾರೆ.

Sheikh Hasina: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಜೀವ ಉಳಿಸಿದ್ದು ಭಾರತದಿಂದ ಹೋದ ಒಂದು ಫೋನ್ ಕಾಲ್...!

ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಒಂದು ಕರೆ

Bangladesh: 2024ರಲ್ಲಿ ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ, ಭಾರತದಲ್ಲಿ ಯಾವುದೇ ತೊಂದರೆಯಿಲ್ಲದೇ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇವತ್ತು ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಅವರಿಗೆ ಅಂದು ಭಾರತದ ಒಂದು ಫೋನ್ ಕಾಲ್. ಹಾಗಾದ್ರೆ ಫೋನ್ ಮಾಡಿದ್ದು ಯಾರು..? ಆ ವ್ಯಕ್ತಿ ಕರೆ ಮಾಡಿ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

Nancy Pelosi: ಅಮೆರಿಕ ರಾಜಕೀಯ ರಂಗದಲ್ಲಿ ಇತಿಹಾಸ ಬರೆದ ನ್ಯಾನ್ಸಿ ಪೆಲೋಸಿ ರಾಜಕೀಯ ನಿವೃತಿ ಘೋಷಣೆ

ನ್ಯಾನ್ಸಿ ಪೆಲೋಸಿ ನಿವೃತ್ತಿ ಘೋಷಣೆ

ಅಮೆರಿಕ ರಾಜಕೀಯದಲ್ಲಿ ಒಂದು ಯುಗ ಅಂತ್ಯವಾಗುತ್ತಿದೆ. ನಾಲ್ಕು ದಶಕಗಳ ಕಾಲ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಆಗಿದ್ದ ಮೊದಲ ಮತ್ತು ಏಕೈಕ ಮಹಿಳೆ ನ್ಯಾನ್ಸಿ ಪೆಲೋಸಿ ಅವರು ನಿವೃತ್ತಿಯನ್ನು ಘೋಷಿಸಿದ್ದಾರೆ. 2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Al Qaeda: ಐವರು ಭಾರತೀಯರನ್ನು ಅಪಹರಿಸಿದ ಅಲ್ ಖೈದಾ; ಹೆಚ್ಚಿದ ಆತಂಕ

ಐವರು ಭಾರತೀಯರನ್ನು ಅಪಹರಿಸಿದ ಅಲ್ ಖೈದಾ

ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದಿಂದ ತತ್ತರಿಸಿರುವ ಪಶ್ಚಿಮ ಆಫ್ರಿಕಾದ ದೇಶವಾದ ಮಾಲಿಯಲ್ಲಿ ಬಂದೂಕುಧಾರಿಗಳು ಐವರು ಭಾರತೀಯ ಪ್ರಜೆಗಳನ್ನು ಅಪಹರಿಸಿದ್ದಾರೆ ಎಂದು ಅವರ ಕಂಪನಿ ಮತ್ತು ಭದ್ರತಾ ಮೂಲಗಳು ಶುಕ್ರವಾರ ತಿಳಿಸಿವೆ. ಪಶ್ಚಿಮ ಮಾಲಿಯ ಕೊಬ್ರಿ ಬಳಿ ಗುರುವಾರ ಬಂದೂಕುಧಾರಿಗಳು ಕಾರ್ಮಿಕರನ್ನು ಅಪಹರಿಸಿದ್ದಾರೆ.

Loading...