ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಮಾತುಕತೆ ವೇಳೆ ಅಮೆರಿಕದ ದಾರಿ ತಪ್ಪಿಸಿದ್ದೇ ಇಸ್ರೇಲ್‌; ನೆತನ್ಯಾಹು ಕರೆ ಮಾಡಿದ್ದರಿಂದ ಮುರಿದು ಬಿತ್ತಾ ಒಪ್ಪಂದ?

ಮಾತುಕತೆ ವೇಳೆ ಅಮೆರಿಕದ ದಾರಿ ತಪ್ಪಿಸಿದ್ದೇ ಇಸ್ರೇಲ್‌; ಇರಾನ್‌ ಆರೋಪ

ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್‌ ಬಹುದೊಡ್ಡ ಆರೋಪವೊಂದನ್ನು ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಮಾಡಿದ ದೂರವಾಣಿ ಕರೆ, ಇರಾನ್-ಅಮೆರಿಕ ಬಿಕ್ಕಟ್ಟಿನಲ್ಲಿ ಮಹತ್ವದ ಪ್ರಗತಿಯಾಗಬಹುದಾಗಿದ್ದ ವಿಷಯವನ್ನು ಹಳಿತಪ್ಪಿಸಿತು ಎಂದು ಟೆಹ್ರಾನ್ ಹೇಳಿಕೊಂಡಿದೆ.

"ಸಾಮಾನ್ಯ ಜ್ಞಾನ ಬಳಸಿ, ರಾಜಕಾರಣಿಯಾಗುವತ್ತ ಗಮನಹರಿಸಬೇಡಿ"; ಪೋಪ್‌ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ

ಪೋಪ್‌ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ!

ಇರಾನ್‌ ಹಾಗೂ ಅಮೆರಿಕದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪೋಪ್ ಲಿಯೋ XIV ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನೀವು ರಾಜಕಾರಣಿಯಾಗಲು ಬರಬೇಡಿ ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ಹಾರ್ಮೊಜ್‌ ದಿಗ್ಬಂಧನ ಬೆದರಿಕೆ; ಅಮೆರಿಕದಲ್ಲಿನ ತೈಲ ಹೆಚ್ಚಳವನ್ನು ಟೀಕಿಸಿದ ಇರಾನ್‌

ಅಮೆರಿಕದಲ್ಲಿನ ತೈಲ ಹೆಚ್ಚಳವನ್ನು ಟೀಕಿಸಿದ ಇರಾನ್‌

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಹೊರಹೋಗುವ ಹಡಗುಗಳನ್ನು ನಿರ್ಬಂಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯನ್ನು ಅಪಹಾಸ್ಯ ಮಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ನೇತೃತ್ವದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ದೀರ್ಘಾವಧಿಯ ಒಪ್ಪಂದದ ಮಾತುಕತೆಗಳು ವಿಫಲವಾದ ಬಳಿಕ ಈ ಹೇಳಿಕೆ ಬಂದಿದೆ.

ಹಾರ್ಮೊಜ್‌ ಜಲಸಂಧಿಯನ್ನು ಅಮೆರಿಕ ನೌಕಾಪಡೆ ಸುತ್ತುವರಿಯಲಿದೆ; ಮಾತುಕತೆ ಬಳಿಕ ಟ್ರಂಪ್‌ ಗುಡುಗು

ಹಾರ್ಮೊಜ್‌ ಜಲಸಂಧಿಯನ್ನು ಅಮೆರಿಕ ನೌಕಾಪಡೆ ಸುತ್ತುವರಿಯಲಿದೆ; ಟ್ರಂಪ್

ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಹಾರ್ಮೊಜ್‌ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುವ ಹಡಗುಗಳನ್ನು ಅಮೆರಿಕದ ನೌಕಾಪಡೆ ತಡೆಯುವುದನ್ನು ಪ್ರಾರಂಭಿಸುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

1 ಬಿಲಿಯನ್ ಡಾಲರ್  ಜೊತೆಗೆ ಅತ್ಯಂತ ಸುಂದರಿ ವಧು ಕೊಡಿ: ಟರ್ಕಿಗೆ ವಿಚಿತ್ರ ಬೇಡಿಕೆಯಿಟ್ಟ ಉಗಾಂಡಾ ಸೇನಾ ಮುಖ್ಯಸ್ಥ

ಸುಂದರಿ ವಧು ಕೊಡಿ ಎಂದ ಉಗಾಂಡಾ ಸೇನಾ ಮುಖ್ಯಸ್ಥ

Uganda’s army chief makes bizarre demand: ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಝಿ ಕೈನೆರುಗಾಬಾ ಅವರು ಟರ್ಕಿಯಿಂದ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. $1 ಬಿಲಿಯನ್ ನೀಡುವಂತೆ ಅವರು ಕೇಳಿದ್ದಾರೆ. ಎರಡನೇ ಬೇಡಿಕೆ, ಬಹುಶಃ ತಮಾಷೆಯಾಗಿ ಹೇಳಿರಬಹುದು. ಅದೇನೆಂದರೆ- ಆ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತಮ್ಮ ಪತ್ನಿಯಾಗಿ ಒಪ್ಪಿಸಬೇಕು ಎಂದು ಹೇಳಿದ್ದಾರೆ.

ಲೆಬನಾನ್‌ ಮತ್ತೆ ಮೇಲೆ ದಾಳಿ; ಇಡೀ ಹಳ್ಳಿಯನ್ನೇ ಸ್ಫೋಟ ಮಾಡಿದ ಇಸ್ರೇಲ್‌!

ಲೆಬನಾನ್‌ ಮೇಲೆ ದಾಳಿ; ಇಡೀ ಹಳ್ಳಿಯನ್ನೇ ಸ್ಫೋಟ ಮಾಡಿದ ಇಸ್ರೇಲ್‌!

ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಒಪ್ಪಂದ ಮುರಿದು ಬಿದ್ದ ಬೆನ್ನಲ್ಲೇ ಲೆಬನಾನ್‌ ಮೇಲೆ ಇಸ್ರೇಲ್‌ ಮತ್ತೆ ತನ್ನ ದಾಳಿಯನ್ನು ಶುರು ಮಾಡಿದೆ. ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿರುವ ಸಂಪೂರ್ಣ ಹಳ್ಳಿಗಳನ್ನು ವ್ಯವಸ್ಥಿತವಾಗಿ ನೆಲಸಮ ಮಾಡಿತು.

ಇಂಧನದ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್‌ ದರವೂ ದುಪ್ಪಟ್ಟು; ಸರ್ಕಾರ ಹೇಳಿದ್ದೇನು?

ಇಂಧನದ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್‌ ದರವೂ ದುಪ್ಪಟ್ಟು

ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ. ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಮಾತುಕತೆ ಯಾವುದೇ ಪ್ರಯೋಜನೆ ನೀಡಿಲ್ಲ. ಇರಾನ್‌ ಈಗಾಗಲೇ ಹಾರ್ಮೊಜ್‌ ಜಲಸಂಧಿಯನ್ನು ಮುಚ್ಚಿದ್ದು, ಜಾಗತಿಕವಾಗಿ ಇಂಧನ ಬೆಲೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಇರಾನ್‌ಗೆ ಶಸ್ತ್ರಾಸ್ತ್ರ ಒದಗಿಸಿದರೆ ಹುಷಾರ್! ಚೀನಾಗೆ ಖಡಕ್‌ ವಾರ್ನಿಂಗ್ ಕೊಟ್ಟ  ಟ್ರಂಪ್

ಇರಾನ್‌ಗೆ ಶಸ್ತ್ರಾಸ್ತ್ರ ಒದಗಿಸಿದರೆ ಹುಷಾರ್! ಚೀನಾಗೆ ಟ್ರಂಪ್‌ ಎಚ್ಚರಿಕೆ

Donald Trump warns China: ಇರಾನ್‌ಗೆ ಚೀನಾ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ಅದು ದೊಡ್ಡ ತೊಂದರೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಈ ಬೆಳವಣಿಗೆ ಸಂಭವಿಸಿದೆ.

ಅಮೆರಿಕದೊಂದಿಗೆ ಮಾತುಕತೆ ವಿಫಲ; ಮುಂದುವರಿಯಲಿದೆ ಹೊರ್ಮುಜ್ ಜಲ ಮಾರ್ಗದ ನಿರ್ಬಂಧ

ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಬದಲಾವಣೆ ಇಲ್ಲ: ಇರಾನ್

ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಕದನ ವಿರಾಮ ಮಾತುಕತೆಯನ್ನು ಯಾವುದೇ ನಿರ್ಣಯ ಕೈಗೊಳ್ಳದೆ ಸ್ಥಗಿತಗೊಳಿಸಿದೆ. ಇದರಬಳಿಕ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟೆಹರಾನ್ ಸ್ಪಷ್ಟಪಡಿಸಿದೆ. ಅಮೆರಿಕದೊಂದಿಗೆ ಮಾತುಕತೆ ಮುಂದುವರಿಸಲಾಗುವುದು. ಒಪ್ಪಂದಕ್ಕೆ ಬರುವವರೆಗೆ ಜಲ ಮಾರ್ಗದ ನಿರ್ಬಂಧ ತೆರವುಗೊಳಿಸಲಾಗುವುದಿಲ್ಲ ಎಂದು ತಿಳಿಸಿದೆ.

ಕದನ ವಿರಾಮ ಮಾತುಕತೆ ವಿಫಲ; ಅಮೆರಿಕದ ಷರತ್ತು ಒಪ್ಪಲು ಸಾಧ್ಯವಿಲ್ಲ ಎಂದ ಟೆಹರಾನ್

ಅಮೆರಿಕದೊಂದಿಗೆ ಮಾತುಕತೆ ವಿಫಲ: ಇರಾನ್

ಯುಎಸ್, ಇಸ್ರೇಲ್ ಮತ್ತು ಇರಾನ್ ಕದನ ವಿರಾಮ ಮಾತುಕತೆ ಮುರಿದು ಬಿದ್ದಿದೆ. ಅಮೆರಿಕ ಇಟ್ಟಿರುವ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಮಾತುಕತೆ ವೇಳೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಅಸಮಂಜಸ ಬೇಡಿಕೆಗಳನ್ನು ಇಟ್ಟಿದೆ ಎಂದು ಹೇಳಿದೆ.

ಕೆಟ್ಟ ಸುದ್ದಿ; ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದಲ್ಲಿ ಭಯೋತ್ಪಾದನಾ ಜಾಲ ವಿಸ್ತರಣೆ; ಬಯಲಾಯಿತು ಪಾಕಿಸ್ತಾನದ ಉಗ್ರರ ಸಂಚು

ಉತ್ತರಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

ಸಾಮಾಜಿಕ ಮಾಧ್ಯಮ ಬಳಕೆಯು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಪಾಕಿಸ್ತಾನದ ಭಯೋತ್ಪಾದಕರು ಭಯೋತ್ಪಾದನೆಯ ಜಾಲವನ್ನು ವಿಸ್ತರಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಈ ಮೂಲಕ ಹಲವು ರಹಸ್ಯವಾಗಿದ್ದ ಮಾಹಿತಿಗಳು ಬೆಳಕಿಗೆ ಬಂದಿದೆ.

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?  ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?

ಉತ್ತರ ಪ್ರದೇಶದ ಕಿಂತೂರು ಗ್ರಾಮವು ಖೊಮೇನಿ ಅವರ ವಂಶದ ಮೂಲವಾಗಿ ಪ್ರಸಿದ್ಧಿ ಪಡೆದಿದೆ. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಭಾರತದಿಂದ ಇರಾನ್‌ಗೆ ವಲಸೆ ಹೋಗಿ ಅಲ್ಲಿ ನೆಲೆಸಿದ ಪರಿಣಾಮ, ಈ ಗ್ರಾಮವು ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಕೊಂಡಿಯಾಗಿ ಇಂದಿಗೂ ಗುರುತಿಸಿಕೊಂಡಿದೆ.

ವಿಮಾನದ ಸೀಟುಗಳಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳು! ಇಸ್ಲಾಮಾಬಾದ್‌ಗೆ  ತೆರಳಿದ ವಿಮಾನದಲ್ಲಿತ್ತು ಕಣ್ಣೀರ ಕಥೆ

ಮಿನಾಬ್ ಸ್ಮರಣೆಯಲ್ಲಿ ಪಾಕ್‌ಗೆ ಹಿಂದಿರುಗಿದ ಇರಾನ್ ನಿಯೋಗ

ಅಮೆರಿಕದೊಂದಿಗೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳಿದ ಇರಾನ್ ನಿಯೋಗ, ಮಿನಾಬ್ ದಾಳಿಯಲ್ಲಿ ಸಾವನ್ನಪ್ಪಿದ ಮಕ್ಕಳ ನೆನಪಿಗಾಗಿ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು ಮತ್ತು ಚಿತ್ರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಜಗತ್ತಿನ ಗಮನ ಸೆಳೆದಿದೆ. ‘Minab168’ ಹೆಸರಿನ ಈ ಸಂಕೇತಾತ್ಮಕ ಕ್ರಮ ಯುದ್ಧದ ಭೀಕರ ಮಾನವೀಯ ನಷ್ಟವನ್ನು ಒತ್ತಿಹೇಳುತ್ತದೆ.

ಇರಾನ್‌ನ ನೂತನ ಸರ್ವೋಚ್ಛ ನಾಯಕನಿಗೆ ಗಂಭೀರ ಗಾಯ; ಮುಖ ವಿರೂಪಗೊಂಡಿದೆ, ಕಾಲುಗಳಿಗೆ ಪೆಟ್ಟು?

ಮೊಜ್ತಬಾ ಖಮೇನಿಗೆ ತೀವ್ರವಾದ, ವಿರೂಪಗೊಂಡ ಗಾಯಗಳಿವೆ: ವರದಿ

Mojtaba Khamenei has suffered injuries: ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಜಂಟಿ ಯುದ್ಧದಲ್ಲಿ ಗಂಭೀರ ಗಾಯಗೊಂಡಿದ್ದ ಇರಾನ್‌ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿಗೆ ತೀವ್ರವಾದ, ವಿರೂಪಗೊಂಡ ಗಾಯಗಳಿವೆ ಎಂದು ವರದಿಯೊಂದು ತಿಳಿಸಿವೆ. ಫೆಬ್ರವರಿ 28 ರಂದು, ಕೇಂದ್ರ ಟೆಹರಾನ್‌ನಲ್ಲಿರುವ ಸುಪ್ರೀಂ ಲೀಡರ್‌ನ ಕಚೇರಿ ಮೇಲೆ ದಾಳಿ ನಡೆದಿತ್ತು.

ಇರಾನ್ ಕದನ ವಿರಾಮದ ನಡುವೆ ದೇಶದ ಇಂಧನ ಭದ್ರತೆ ಕುರಿತ ಮಾತುಕತೆಗಾಗಿ ಯುಎಇಗೆ ತೆರಳಿದ ಜೈಶಂಕರ್

ಕದನ ವಿರಾಮದ ಸಂದರ್ಭದಲ್ಲಿ ಯುಎಇಗೆ ತೆರಳಿದ ಜೈಶಂಕರ್

ಇರಾನ್ ಯುದ್ಧ ಪ್ರಾರಂಭವಾದ ಬಳಿಕ ವಿಶ್ವದಲ್ಲೇ ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟನ್ನು ಎದುರಿಸಿತ್ತು. ಇದರ ಪರಿಣಾಮ ಮುಂದಿನ ಹಲವಾರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ದೇಶದ ಇಂಧನ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಇದೀಗ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದ್ದಾರೆ.

ಮುಟ್ಟುಗೋಲು ಹಾಕಿರುವ ಇರಾನ್‌ ಆಸ್ತಿಗಳನ್ನು ಬಿಡಲು ಅಮೆರಿಕ ಒಪ್ಪಿಗೆ!

ಮುಟ್ಟುಗೋಲು ಹಾಕಿರುವ ಇರಾನ್‌ ಆಸ್ತಿಗಳನ್ನು ಬಿಡಲು ಅಮೆರಿಕ ಒಪ್ಪಿಗೆ!

ಅಮೆರಿಕ ಹಾಗೂ ಇರಾನ್‌ ನಡುವೆ ಶಾಂತಿ ಮಾತುಕತೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿದೆ. ಕತಾರ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಇರಾನಿನ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ಇರಾನಿನ ಮೂಲಗಳು ತಿಳಿಸಿದೆ.

ನಾಳೆ ಪಾಕಿಸ್ತಾನದಲ್ಲಿ ಇರಾನ್‌- ಅಮೆರಿಕ ಶಾಂತಿ ಮಾತುಕತೆ; ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್

ನಾಳೆ ಪಾಕಿಸ್ತಾನದಲ್ಲಿ ಇರಾನ್‌- ಅಮೆರಿಕ ಶಾಂತಿ ಮಾತುಕತೆ

ಇರಾನ್ ಜೊತೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರುವ ಉನ್ನತ ಮಟ್ಟದ ಅಮೇರಿಕನ್ ನಿಯೋಗದ ನೇತೃತ್ವ ವಹಿಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಶುಕ್ರವಾರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಪಾಕಿಸ್ತಾನದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರ ಅನಿವಾರ್ಯತೆಯೇ ಅಥವಾ ಆಯ್ಕೆಯೇ?

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಪಾಕಿಸ್ತಾನದ ಪಾತ್ರವೇನು..?

ಅಮೆರಿಕ-ಇರಾನ್ ನಡುವಿನ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಮಹತ್ವ ಪಡೆದಿದೆ. ಆರ್ಥಿಕ ಸಂಕಷ್ಟ, ತೈಲದ ಅವಲಂಬನೆ ಮತ್ತು ಜಾಗತಿಕ ಒತ್ತಡಗಳಿಂದಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಬೇಕಾದ ಪರಿಸ್ಥಿತಿ ಉಂಟಾಯಿತು. ಈ ಸಂಧಾನವು ರಾಜತಾಂತ್ರಿಕ ಯಶಸ್ಸಾ ಅಥವಾ ಕೇವಲ ರಾಜಕೀಯ ಅವಶ್ಯಕತೆಯ ಫಲವೋ ಎಂಬ ಚರ್ಚೆ ಮುಂದುವರಿದಿದೆ.

ಟ್ರಂಪ್‌ ಮನವಿಗೂ ಕ್ಯಾರೇ ಎನ್ನದ ಇಸ್ರೇಲ್‌; ಲೆಬನಾನ್‌ನ 2 ಪಟ್ಟಣಗಳ ಮೇಲೆ ವೈಮಾನಿಕ ದಾಳಿ

ಲೆಬನಾನ್‌ನ 2 ಪಟ್ಟಣಗಳ ಮೇಲೆ ವೈಮಾನಿಕ ದಾಳಿ ಮಾಡಿದ ಇಸ್ರೇಲ್‌

ಏರ್ಪಟ್ಟಿರುವ ಕದನ ವಿರಾಮದ ಮಧ್ಯೆ ಇಸ್ರೇಲ್‌ ಮತ್ತೆ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇಸ್ರೇಲಿ ಜೆಟ್‌ಗಳು ಕನಿಷ್ಠ ಎರಡು ಲೆಬನಾನ್ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೇಳಿದ ನಂತರ ಸ್ವಲ್ಪ ಸಮಯದ ವಿರಾಮದ ನಂತರ ಹೊಸ ದಾಳಿಗಳು ನಡೆದವು.

'ದುಷ್ಟ ಕ್ಯಾನ್ಸರ್ ಇಸ್ರೇಲ್' ಎಂದ ಪಾಕಿಸ್ತಾನಿ ರಕ್ಷಣಾ ಸಚಿವನಿಗೆ ಇಸ್ರೇಲ್ ತಿರುಗೇಟು

ಪಾಕಿಸ್ತಾನ ವಿರುದ್ಧ ಇಸ್ರೇಲ್ ಕೆಂಡಾಮಂಡಲ

ಇಸ್ರೇಲ್ ಅನ್ನು ದುಷ್ಟ ಕ್ಯಾನ್ಸರ್ ಎಂದು ಕರೆದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರುಗೇಟು ನೀಡಿದ್ದಾರೆ. ಇಸ್ರೇಲ್ ಅನ್ನು ನಿರ್ಮೂಲನೆ ಮಾಡುವ ಅವರ ಹೇಳಿಕೆ ಅತಿರೇಕದ್ದಾಗಿದೆ. ಇದು ಯಾವುದೇ ಸರ್ಕಾರ ಸಹಿಸಬಹುದಾದ ಹೇಳಿಕೆಯಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇಸ್ಲಾಮಾಬಾದ್‌ಗೆ ನಿಯೋಗ; ಇರಾನ್ ಹೇಳಿದ್ದೇನು?

ಇರಾನ್ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ಪ್ರಾರಂಭಿಸಿದ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಎರಡೂ ಪಕ್ಷಗಳು ಕದನ ವಿರಾಮ ಮಾತುಕತೆಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಆಗಮಿಸಿದೆ ಎನ್ನಲಾಗಿದ್ದರೂ ಇದನ್ನು ಇರಾನ್ ನಿರಾಕರಿಸಿದೆ.

ಪ್ರಧಾನಿ ಶೆಹಬಾಜ್ ಷರೀಫ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ? ಅಮೆರಿಕ-ಇರಾನ್ ಕದನ ವಿರಾಮದ ನಂತರ ಪಾಕಿಸ್ತಾನದಲ್ಲಿ ಕೇಳಿಬಂತು ಒತ್ತಾಯ

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ?

Nobel Peace Prize for Shehbaz Sharif?: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೇ ಎಂದು ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಧ್ವನಿಗಳು ಕೇಳಲು ಪ್ರಾರಂಭಿಸಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಇದೇ ರೀತಿ ಮಾತನಾಡುತ್ತಾ, ಪಾಕ್ ಪ್ರಧಾನಿ ಷರೀಫ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಟೆಹರಾನ್ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಇರಾನ್‌- ಅಮೆರಿಕ ಕದನ ವಿರಾಮ ಮಾತುಕತೆ; 2 ದಿನ ಪಾಕಿಸ್ತಾನದಲ್ಲಿ ಸಾರ್ವತ್ರಿಕ ರಜೆ ಘೋಷಣೆ!

ಕದನ ವಿರಾಮ ಮಾತುಕತೆ; 2 ದಿನ ಪಾಕಿಸ್ತಾನದಲ್ಲಿ ಸಾರ್ವತ್ರಿಕ ರಜೆ ಘೋಷಣೆ!

ಏಪ್ರಿಲ್ 10 ರಿಂದ ಆರಂಭವಾಗಲಿರುವ ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ಸುತ್ತಿನ ನೇರ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ ನಡೆಸುತ್ತಿರುವುದರಿಂದ ರಾಜಧಾನಿಯನ್ನು ಬಿಗಿ ಭದ್ರತಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಮಾಧ್ಯಮ ಗುರುವಾರ ವರದಿ ಮಾಡಿದೆ.

Loading...