ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ʼʼಐಪಿಎಲ್‌ಗೆ ಅಡ್ಡಿಪಡಿಸಿತ್ತು ಕಾಂಗ್ರೆಸ್‌ʼʼ: ದಾವೂದ್ ಇಬ್ರಾಹಿಂ, ಕ್ರಿಕೆಟ್‌, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಲಲಿತ್ ಮೋದಿ

ಸ್ಫೋಟಕ ಹೇಳಿಕೆ ನೀಡಿದ ಲಲಿತ್ ಮೋದಿ

Lalit Modi Makes Explosive Claims: ಐಪಿಎಲ್‌ ಆರಂಭಿಸಿದ್ದ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೇಶ ತೊರೆದ ಲಲಿತ್ ಮೋದಿ ವೃತ್ತಿ ಜೀವನದ ದೊಡ್ಡ ವಿವಾದಗಳ ಕುರಿತು ಮತ್ತೆ ಮಾತನಾಡಿದ್ದಾರೆ. ದಾವೂದ್ ಇಬ್ರಾಹಿಂನ ತಂಡವು ತನ್ನನ್ನು ಗುರಿಯಾಗಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಅಕ್ರಮ ಬೆಟ್ಟಿಂಗ್ ಮತ್ತು ಪಂದ್ಯ ಫಿಕ್ಸಿಂಗ್ ಜಾಲಗಳನ್ನು ಭೂಗತ ಜಾಲಗಳೊಂದಿಗಿನ ಸಂಘರ್ಷಕ್ಕೆ ಕಾರಣವಾಯಿತು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ  ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ: ವ್ಲಾಡಿಮಿರ್ ಪುಟಿನ್

ಪ್ರಧಾನಿ ಮೋದಿ ಮೇಲೆ ಒತ್ತಡ ಸರಿಯಲ್ಲ ಎಂದ ವ್ಲಾಡಿಮಿರ್ ಪುಟಿನ್

ರಷ್ಯಾದೊಂದಿಗೆ ಭಾರತದ ಪಾಲುದಾರಿಕೆಯನ್ನು ಶ್ಲಾಘಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ ಎಂದು ತಿಳಿಸಿದ್ದಾರೆ. ನವದೆಹಲಿಯು ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

"ಮೋದಿ ನನ್ನ ಆತ್ಮೀಯ ಸ್ನೇಹಿತ"; ಭಾರತ-ಯುಎಸ್​​ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್‌ ಕೊಟ್ರು ಗುಡ್‌ ನ್ಯೂಸ್‌

ಭಾರತ-ಯುಎಸ್​​ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್‌ ಕೊಟ್ರು ಗುಡ್‌ನ್ಯೂಸ್‌

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಮೋದಿ ಅವರನ್ನು ನನ್ನ ಉತ್ತಮ ಸ್ನೇಹಿತ, ನನಗೆ ಪ್ರಧಾನಿ ಮೋದಿ ಇಷ್ಟ’ ಎಂದು ಕರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಕೂಡ ಮಹತ್ವದ ಮಾಹಿತಿ ನೀಡಿದ್ದಾರೆ.

ದೀರ್ಘಾವಧಿಯ ಇಂಧನ ಸಹಭಾಗಿತ್ವಕ್ಕೆ ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಇಂಧನ ಸಹಭಾಗಿತ್ವ ಕುರಿತು ಭಾರತ-ವೆನೆಜುವೆಲಾ ಚರ್ಚೆ

PM Modi-Venezuela's Interim President talks: ದೀರ್ಘಾವಧಿಯ ಇಂಧನ ಸಹಭಾಗಿತ್ವ, ಔಷಧೋದ್ಯಮ ಹಾಗೂ ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಮಾತುಕತೆ ನಡೆಸಿದರು.

ಎವರೆಸ್ಟ್ ಶಿಖರದಲ್ಲಿ 6 ದಿನ ನಾಪತ್ತೆಯಾಗಿದ್ದ ಗೈಡ್‌ ವಾಪಸ್; ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ ಕುಟುಂಬಕ್ಕೆ ಬಿಗ್‌ ಸರ್‌ಪ್ರೈಸ್‌

ಎವರೆಸ್ಟ್ ಶಿಖರದಲ್ಲಿ ನಾಪತ್ತೆಯಾಗಿದ್ದ ಗೈಡ್‌ ವಾಪಸ್

Mountaineering Guide: ಮೌಂಟ್ ಎವರೆಸ್ಟ್‌ನಲ್ಲಿ ನಾಪತ್ತೆಯಾದ ಆರು ದಿನಗಳ ನಂತರ ನೇಪಾಳಿ ಪರ್ವತಾರೋಹಣ ಮಾರ್ಗದರ್ಶಿ ದಾವಾ ಶೆರ್ಪಾ ಜೀವಂತವಾಗಿ ಮರಳಿದ್ದಾರೆ. ಶೆರ್ಪಾ ಅವರಿಗಾಗಿ ಹುಡುಕಾಟ ನಡೆಸಿ ಭರವಸೆ ಕಳೆದುಕೊಂಡ ತಂಡವು ಅವರು ಮೃತಪಟ್ಟಿರಬಹುದೆಂದು ಭಾವಿಸಿತ್ತು. ಅವರ ಕುಟುಂಬ ಅಂತ್ಯಕ್ರಿಯೆ ಸಮಾರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಿತ್ತು.

''ಕತಾರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ'': ರಾಯಭಾರಿ ವಿಪುಲ್ ಕರೆ

ಕೆಎಸ್‌ಕ್ಯು ವತಿಯಿಂದ ಭಾರತದ ರಾಯಭಾರಿ ವಿಪುಲ್ ಭೇಟಿ

ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್ʼ (ಕೆಎಸ್‌ಕ್ಯು) ಸಂಸ್ಥೆಯ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯು, ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಇತ್ತೀಚೆಗೆ ಭಾರತದ ರಾಯಭಾರಿ ವಿಪುಲ್ ಅವರನ್ನು ರಾಯಭಾರ ಕಚೇರಿಯಲ್ಲಿ ಭೇಟಿ ಮಾಡಿತು.

ದಕ್ಷಿಣ ಆಫ್ರಿಕಾಕ್ಕೆ ಅಡಿಗಾಸ್‌ ಯಾತ್ರಾ ಸೊಬಗಿನ ಯಾತ್ರೆ

ಅಡಿಗಾಸ್‌ ಯಾತ್ರಾದಿಂದ ದಕ್ಷಿಣ ಆಫ್ರಿಕಾಕಕ್ಕೆ ಪ್ರವಾಸ

Adigas Yatra: ದಕ್ಷಿಣ ಆಫ್ರಿಕಾ ಎಂದರೆ ಪ್ರಕೃತಿ ಸೌಂದರ್ಯ ಕಣ್ಣಮುಂದೆ ಬರುತ್ತದೆ. ಇಲ್ಲಿನ ವನ್ಯಜೀವಿ ಸಂಪತ್ತು ಮತ್ತು ಶ್ರೀಮಂತ ಸಂಸ್ಕೃತಿಯಿಂದಲೂ ಜಾಗತಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಗೆ ಪ್ರವಾಸ ಹೋಗಬೇಕು ಎನ್ನುವುದು ಎಲ್ಲರ ಕನಸು. ಅಡಿಗಾಸ್‌ ಯಾತ್ರಾದಿಂದ ಈ ಕನಸು ಸುಲಭವಾಗಿ ನೆರವೇರುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ಭಾರತ–ಅಮೆರಿಕ ಕೃಷಿ ಸಹಕಾರಕ್ಕೆ ಹೊಸ ಚೈತನ್ಯ: ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾಣಿ ನೇತೃತ್ವದ ಸಂವಾದಕ್ಕೆ USIBC ಮೆಚ್ಚುಗೆ

ಭಾರತ–ಅಮೆರಿಕ ಕೃಷಿ ಸಹಕಾರಕ್ಕೆ ಹೊಸ ಚೈತನ್ಯ

ವಾಷಿಂಗ್ಟನ್ನಲ್ಲಿ ನಡೆದ ಈ ಸಭೆಯಲ್ಲಿ ಕೃಷಿ ನವೋದ್ಯಮ, ಸುಸ್ಥಿರ ಕೃಷಿ ಅಭಿವೃದ್ಧಿ, ಆಹಾರ ಮತ್ತು ಪೌಷ್ಟಿಕ ಭದ್ರತೆ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ರೈತರ ಸಮೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ರೈತರಿಗೆ ತಾಂತ್ರಿಕ ನೆರವು ಒದಗಿಸುವ ವಿಷಯಗಳಿಗೂ ಆದ್ಯತೆ ನೀಡಲಾಯಿತು.

ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಕುವೈತ್‌, ಬಹ್ರೇನ್‌ನಲ್ಲಿ ಹೈ ಅಲರ್ಟ್

ಕ್ವೆಶ್ಮ್ ದ್ವೀಪದ ಮೇಲಿನ ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ

ಕ್ವೆಶ್ಮ್ ದ್ವೀಪದ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ದಾಳಿಯನ್ನು ತಡೆದಿರುವುದಾಗಿ ತಿಳಿಸಿದ್ದು, ಬಹ್ರೇನ್‌ನಲ್ಲಿ ಸೈರನ್ ಮೊಳಗಿಸಲಾಗಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಗಲ್ಫ್ ಉದ್ವಿಗ್ನತೆ ಮಧ್ಯೆ ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

ಕುವೈತ್ ಮೇಲೆ ಇರಾನ್ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

Iran Launches Drone and Missile Attack: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಘಟನೆಯಲ್ಲಿ ಕನಿಷ್ಠ 63 ಜನರು ಗಾಯಗೊಂಡಿದ್ದಾರೆ.

ವ್ಯಾಪಾರ ಒಪ್ಪಂದದ ನಡುವೆ ಭಾರತಕ್ಕೆ ಸುಂಕ ಬೆದರಿಕೆಯೊಡ್ಡಿದ ಅಮೆರಿಕ

ಭಾರತಕ್ಕೆ ಮತ್ತೆ ಅಮೆರಿಕದಿಂದ ಸುಂಕ ಬೆದರಿಕೆ

ವ್ಯಾಪಾರ ಒಪ್ಪಂದದ ಮಾತುಕತೆ ನಡುವೆ ಅಮೆರಿಕ ಭಾರತಕ್ಕೆ ಹೊಸ ಸುಂಕ ಬೆದರಿಕೆಯೊಡ್ಡಿದೆ. ಕಳೆದ ಬಾರಿ ರಷ್ಯಾದಿಂದ ಕಚ್ಚಾ ತೈಲ ಆಮದಿಗೆ ಸಂಬಂಧಿಸಿ ನಿರಂತರ ಸುಂಕ ಬೆದರಿಕೆ ಹಾಕುತ್ತಿದ್ದ ಅಮೆರಿಕವು ಇರಾನ್ ನೊಂದಿಗೆ ಸಂಘರ್ಷ ಆರಂಭಿಸಿದ ಮೇಲೆ ಬಹುತೇಕ ಸುಮ್ಮನಾಗಿತ್ತು. ಆದರೆ ಇದೀಗ ಮತ್ತೆ ಹೊಸ ರೀತಿಯ ಸುಂಕ ಬೆದರಿಕೆಯನ್ನು ಒಡ್ಡಿದೆ.

''ಮೊಜ್ತಾಬಾ ಖಮೇನಿ ಜೀವಂತವಾಗಿದ್ದಾರೆ”: ಇರಾನ್ ಸುಪ್ರೀಂ ಲೀಡರ್ ಬಗ್ಗೆ ಅಮೆರಿಕ ಹೇಳಿದ್ದೇನು?

ಇರಾನ್ ಸುಪ್ರೀಂ ಲೀಡರ್ ಬಗ್ಗೆ ಅಮೆರಿಕ ಹೇಳಿದ್ದೇನು?

Mojtaba Khamenei Is Alive: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆ. ದೇಶದ ಆಡಳಿತ ಮತ್ತು ರಾಜಕೀಯ ವ್ಯವಹಾರಗಳಲ್ಲಿ ದಿನೇ ದಿನೆ ಹೆಚ್ಚು ಸಕ್ರಿಯರಾಗುತ್ತಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.

‘ʼ600-700 ಮಂದಿಯಿಂದ ಅತ್ಯಾಚಾರ’ʼ: ಬ್ರಿಟನ್ ಸಂಸತ್ತಿನಲ್ಲಿ ಸಂತ್ರಸ್ತೆಯರ ಆಘಾತಕಾರಿ ಸಾಕ್ಷ್ಯ ಬಹಿರಂಗ

ಗ್ರೂಮಿಂಗ್ ಗ್ಯಾಂಗ್ ಕರಾಳ ಮುಖ ಬಯಲು

ಬ್ರಿಟನ್ ಸಂಸದ ರುಪರ್ಟ್ ಲೋವ್ ಅವರು ಸಂಸತ್ತಿನಲ್ಲಿ ಗ್ರೂಮಿಂಗ್ ಗ್ಯಾಂಗ್ ಪ್ರಕರಣದ ಸಂತ್ರಸ್ತೆಯರ ಆಘಾತಕಾರಿ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ಸಂತ್ರಸ್ತೆ ಮೂರು ವರ್ಷಗಳಲ್ಲಿ 600-700 ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಹೇಳಿದ್ದಾಳೆ. ಈ ಪ್ರಕರಣಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಸಂಸ್ಥೆಗಳ ವೈಫಲ್ಯದ ಕುರಿತು ಮತ್ತೆ ಗಂಭೀರ ಚರ್ಚೆಗೆ ಕಾರಣವಾಗಿವೆ.

ಹೊರ್ಮುಜ್ ಬಿಕ್ಕಟ್ಟಿನ ನಡುವೆ ರಸಗೊಬ್ಬರ ಪೂರೈಕೆಗೆ ಭಾರತದ ಹೊಸ ಸಮುದ್ರ ಮಾರ್ಗ ಯೋಜನೆ; ಏನಿದು ಕೇಂದ್ರದ ಕಾರ್ಯತಂತ್ರ?

ಗಲ್ಫ್ ಉದ್ವಿಗ್ನತೆ ನಡುವೆ ಭಾರತದ ಕೃಷಿಗೆ ರಸಗೊಬ್ಬರ ಭದ್ರತೆಯ ಸವಾಲು

ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ರಸಗೊಬ್ಬರ ಪೂರೈಕೆ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಮೇಲೆ ಭಾರತ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ಸೌದಿ ಅರೇಬಿಯಾದ ಯಾನ್ಬು ಬಂದರನ್ನು ಬಳಸಿಕೊಂಡು ಹೊರ್ಮುಜ್ ಜಲಸಂಧಿಯನ್ನು ತಪ್ಪಿಸುವ ಪರ್ಯಾಯ ಸಾಗಣೆ ಮಾರ್ಗವನ್ನು ಭಾರತ ಪರಿಶೀಲಿಸುತ್ತಿದೆ. ಈ ಕ್ರಮವು ಕೃಷಿ ಉತ್ಪಾದನೆ ಹಾಗೂ ಆಹಾರ ಭದ್ರತೆಯನ್ನು ಕಾಪಾಡುವ ಉದ್ದೇಶ ಹೊಂದಿದೆ.

114 ರಫೇಲ್ ಜೆಟ್‌ ಖರೀದಿಗೆ ಮುಂದಾದ ಭಾರತ: ಫ್ರಾನ್ಸ್‌ನೊಂದಿಗೆ 3.25 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ

ಫ್ರಾನ್ಸ್‌ನೊಂದಿಗೆ ಬೃಹತ್ ರಕ್ಷಣಾ ಒಪ್ಪಂದಕ್ಕೆ ಭಾರತ ಸಿದ್ಧತೆ

ಭಾರತೀಯ ಸೇನೆಯ ಬಲ ಹೆಚ್ಚಿಸಲು ಇದೀಗ ಫ್ರಾನ್ಸ್‌ನೊಂದಿಗೆ ಬೃಹತ್ ಒಪ್ಪಂದಕ್ಕೆ ಭಾರತ ಮುಂದಾಗಿದೆ. 3.25 ಲಕ್ಷ ಕೋಟಿ ರೂಪಾಯಿಗಳ ಈ ಒಪ್ಪಂದದಲ್ಲಿ ಒಟ್ಟು 114 ರಫೇಲ್ ಜೆಟ್‌ಗಳನ್ನು ಪಡೆಯಲು ಭಾರತ ಸಿದ್ಧತೆ ನಡೆಸುತ್ತಿದೆ. ಈ ಒಪ್ಪಂದವು ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಟ್ರಂಪ್‌- ನೆತನ್ಯಾಹು ಮಧ್ಯೆ ಬಿರುಕು? ಇಸ್ರೇಲ್‌ ಪ್ರಧಾನಿಯನ್ನು ಹುಚ್ಚ ಎಂದ್ರಾ ಅಮೆರಿಕ ಅಧ್ಯಕ್ಷ?

ಇಸ್ರೇಲ್‌ ಪ್ರಧಾನಿಯನ್ನು ಹುಚ್ಚ ಎಂದ್ರಾ ಅಮೆರಿಕ ಅಧ್ಯಕ್ಷ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಇತ್ತೀಚಿನ ಫೋನ್ ಸಂಭಾಷಣೆ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಲೆಬನಾನ್‌ನಲ್ಲಿ ಇಸ್ರೇಲ್ ಮಿಲಿಟರಿ ಕ್ರಮದ ಬಗ್ಗೆ ತೀವ್ರ ಕೋಪಗೊಂಡಿದ್ದರು ಮತ್ತು ನೆತನ್ಯಾಹು ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂದು ವರದಿಯಾಗಿದೆ.

ಬ್ಲೂಟೂತ್‌ ಹೆಸರಿನಿಂದ ಹರಡಿದ ‘ಬಾಂಬ್’ ಭೀತಿ: ಅಮೆರಿಕಕ್ಕೆ ವಾಪಸ್ ಬಂದ ಸ್ಪೇನ್‌ಗೆ ಹೊರಟ ವಿಮಾನ

ಬ್ಲೂಟೂತ್‌ನಿಂದಾಗಿ ಸ್ಪೇನ್‌ಗೆ ಹೊರಟ ವಿಮಾನ ಅಮೆರಿಕಕ್ಕೆ ವಾಪಸ್‌

ಬ್ಲೂಟೂತ್ ಸಾಧನಕ್ಕೆ ‘ಬಾಂಬ್’ ಎಂದು ಹೆಸರಿಟ್ಟಿದ್ದ ಕಾರಣ ಸ್ಪೇನ್‌ಗೆ ತೆರಳುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನ ಭದ್ರತಾ ಮುನ್ನೆಚ್ಚರಿಕಾ ಕ್ರಮವಾಗಿ ಅಮೆರಿಕದ ನ್ಯೂಜೆರ್ಸಿಗೆ ವಾಪಸ್ ಆಗಿದೆ. ಬಳಿಕ ನಡೆದ ತಪಾಸಣೆಯಲ್ಲಿ 16 ವರ್ಷದ ಬಾಲಕನ ಫಿಟ್‌ಬಿಟ್ ಸಾಧನದ ಹೆಸರೆಂದು ಗೊತ್ತಾಗಿ ಆತಂಕ ನಿವಾರಣೆಯಾಯಿತು. ಘಟನೆ ಕುರಿತು ಎಫ್‌ಬಿಐ ತನಿಖೆ ಆರಂಭಿಸಿದೆ.

ಅಮೆರಿಕದಲ್ಲಿ ಹೆಲಿಕಾಪ್ಟರ್ ಅಪಘಾತ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಮೂಲದ ಪೈಲಟ್ ಸಾವು

ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ದುರಂತ; ವರ ಸಾವು

ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಕೇರಳ ಮೂಲದ, 26 ವರ್ಷದ ಡೆಲ್ಟಾ ಏರ್‌ಲೈನ್ಸ್ ಪೈಲಟ್ ಡೇವ್‌ ಫಿಜಿ ಮೃತಪಟ್ಟಿದ್ದಾರೆ. ದುರಂತ ಎಂದರೆ ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲಷ್ಟೆ ಇವರ ಮದುವೆಯಾಗಿತ್ತು. ಹನಿಮೂನ್‌ಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಪತ್ನಿ ಜೆಸ್ನಿ ಗಂಭೀರವಾಗಿ ಗಾಯಗೊಂಡು ಬದುಕುಳಿದಿದ್ದಾರೆ. ಹವಾಮಾನ ಸಮಸ್ಯೆ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಲೆಬನಾನ್‌ನ 900 ವರ್ಷಗಳಷ್ಟು ಹಳೆಯ ಹಿಜ್ಬೊಲ್ಲಾ ಭದ್ರಕೋಟೆಯನ್ನು ವಶಕ್ಕೆ ಪಡೆದ ಇಸ್ರೇಲ್

ಹಿಜ್ಬೊಲ್ಲಾ ಭದ್ರಕೋಟೆಯನ್ನು ವಶಕ್ಕೆ ಪಡೆದ ಇಸ್ರೇಲ್

ಅತ್ಯಂತ ಪುರಾತನ ಮತ್ತು ಸುಮಾರು 900 ವರ್ಷಗಳಷ್ಟು ಹಳೆಯದಾದ ಲೆಬನಾನ್‌ನಲ್ಲಿರುವ ಕೋಟೆಯನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇದು ಹಿಜ್ಬೊಲ್ಲಾ ಭದ್ರಕೋಟೆ ಎಂದೇ ಖ್ಯಾತಿ ಪಡೆದಿದೆ. ದಕ್ಷಿಣ ಲೆಬನಾನ್‌ನಲ್ಲಿರುವ ಬ್ಯೂಫೋರ್ಟ್ ಕ್ಯಾಸಲ್ ಮತ್ತು ಅದರ ಪರ್ವತವನ್ನು ಇಸ್ರೇಲಿ ಪಡೆಗಳು ಭಾನುವಾರ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿದೆ.

ಭಾರತದೊಂದಿಗಿನ ಗಡಿ ಸಮಸ್ಯೆ ರಾಜತಾಂತ್ರಿಕತೆಯ ಮೂಲಕ ಪರಿಹರಿಸಲಾಗುವುದುʼʼ: ನೇಪಾಳ ಪ್ರಧಾನಿ

ಭಾರತದೊಂದಿಗಿನ ಗಡಿ ಸಮಸ್ಯೆ ಬಗ್ಗೆ ನೇಪಾಳ ಪ್ರಧಾನಿ ಹೇಳಿದ್ದೇನು?

Border Dispute with India: ಭಾರತದೊಂದಿಗಿನ ಗಡಿ ವಿವಾದಗಳನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂದು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಹೇಳಿದರು. ಲಿಪುಲೇಖ್-ಲಿಂಪಿಯಾಧುರ ಪ್ರದೇಶದ ಮೇಲಿನ ನೇಪಾಳದ ಹಕ್ಕು ಕುರಿತು ಮಾತನಾಡಿದ ಅವರು, ವಿವಾದದ ಮೂಲ ಬ್ರಿಟಿಷ್ ಭಾರತದ ಕಾಲಕ್ಕೆ ಸಂಬಂಧಿಸಿದೆ ಎಂದು ವಾದಿಸಿದರು.

ಯುದ್ಧ ಆರಂಭಿಸುವ ಎಲ್ಲ ಸಾಮರ್ಥ್ಯ ಅಮೆರಿಕಕ್ಕೆ ಇದೆ, ಡೊನಾಲ್ಡ್ ಟ್ರಂಪ್ ಒಪ್ಪಿದರೆ ಮಾತ್ರ ಸಂಘರ್ಷ ಕೊನೆಯಾಗುವುದು ಎಂದ ಆಪ್ತ

ಇರಾನ್ ಯುದ್ಧ ಮತ್ತೆ ಆರಂಭವಾಗಬಹುದು: ಟ್ರಂಪ್ ಆಪ್ತರಿಂದ ಎಚ್ಚರಿಕೆ

ಇರಾನ್ ಜೊತೆಗಿನ ಅಮೆರಿಕ ಸಂಘರ್ಷ ಇನ್ನೂ ಕೊನೆಯಾದಂತೆ ಕಂಡು ಬರುತ್ತಿಲ್ಲ. ಯಾಕೆಂದರೆ ಪೆಂಟಗನ್ ಮುಖ್ಯಸ್ಥರು ಈ ಕುರಿತು ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗಸಭೆಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್ನೂ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ.

ʼʼಆಪರೇಷನ್ ಸಿಂದೂರ್ 2.0ಗೆ ಭಾರತ ಸಿದ್ಧʼʼ: ಉಗ್ರರ ವಿರುದ್ಧ ಮತ್ತೊಂದು ಹೋರಾಟದ ಸೂಚನೆ ನೀಡಿದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ʼʼಆಪರೇಷನ್ ಸಿಂದೂರ್ 2.0ಗೆ ಭಾರತ ಸಿದ್ಧ ಎಂದ ಸೇನಾ ಮುಖ್ಯಸ್ಥ

ಪಾಕಿಸ್ತಾನದ ಭಯೋತ್ಪಾದಕತೆಯ ವಿರುದ್ಧ ಸೆಟೆದು ನಿಂತಿರುವ ಭಾರತ ಇದೀಗ ಆಪರೇಷನ್ ಸಿಂದೂರ್ 2.0ಗೆ ಸಿದ್ಧವಾಗಿದೆ. ಈ ಮೂಲಕ ಭವಿಷ್ಯದ ಯಾವುದೇ ಯುದ್ಧಕ್ಕೂ ಭಾರತದ ಮೂರು ಸೇನೆಯನ್ನು ಸಂಪೂರ್ಣ ಸಜ್ಜುಗೊಳಿಸಿರುವುದಾಗಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದು, ಆಪರೇಷನ್ ಸಿಂದೂರ್ ಅನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ತಾಜ್ ಮಹಲ್, ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಟ್ರಂಪ್ ಪುತ್ರಿ ಟಿಫಾನಿ

ಪತಿಯೊಂದಿಗೆ ಟ್ರಂಪ್ ಪುತ್ರಿ ಟಿಫಾನಿ ಭಾರತ ಪ್ರವಾಸ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫಾನಿ ಟ್ರಂಪ್ ಅವರು ಪತಿ ಮೈಕೆಲ್ ಬುವೊಲೊಸ್ ಮತ್ತು ಕೆಲವು ಸ್ನೇಹಿತರೊಂದಿಗೆ ಭಾರತ ಪ್ರವಾಸ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಅವರು ತಾಜ್ ಮಹಲ್, ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಮುಂದುವರಿದ ಭಾರತೀಯ ಹಡಗುಗಳ ಸಂಚಾರ: ಇದು ಹೇಗೆ? ರಹಸ್ಯ ಕಾರ್ಯತಂತ್ರ ಬಿಚ್ಚಿಟ್ಟ ಕೇಂದ್ರ

ಹೊರ್ಮುಜ್ ಜಲಸಂಧಿ; ಉದ್ವಿಗ್ನತೆ ನಡುವೆಯೂ ಭಾರತದ 13 ಹಡಗುಗಳ ಸಂಚಾರ

Strait of Hormuz: ಇರಾನ್-ಒಮಾನ್ ನಡುವಿನ ಹೊರ್ಮುಜ್ ಜಲಸಂಧಿಯಲ್ಲಿ ಯುದ್ಧೋನ್ಮಾದ ಪರಿಸ್ಥಿತಿ ಮುಂದುವರಿದಿದ್ದರೂ ಭಾರತದ 13 ಹಡಗುಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಕಚ್ಚಾ ತೈಲ, ಎಲ್‌ಪಿಜಿ ಹಾಗೂ ಇತರ ಅಗತ್ಯ ಸರಕುಗಳ ಸಾಗಣೆಗೆ ಭಾರತ ವಿಶೇಷ ಆದ್ಯತೆ ನೀಡಿದ್ದು, ವಿದೇಶಾಂಗ ಸಚಿವಾಲಯದ ಸಮನ್ವಯದ ಮೂಲಕ ಇಂಧನ ಪೂರೈಕೆಯನ್ನು ಸುರಕ್ಷಿತವಾಗಿಡಲು ಕ್ರಮ ಕೈಗೊಂಡಿದೆ.

Loading...