ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ತಿಂಗಳಿಗೆ 2 ಲಕ್ಷ ರುಪಾಯಿ ಗಳಿಕೆ: ಎಂಜಿನಿಯರಿಂಗ್ ಮುಗಿಸಿ ಕ್ಯಾಬ್ ಬ್ಯುಸಿನೆಸ್‌ನಲ್ಲಿ ಯಶಸ್ಸು ಕಂಡ ಚಾಲಕ

ಎಂಜಿನಿಯರಿಂಗ್ ಮುಗಿಸಿದರೂ ಕೈ ಹಿಡಿದಿದ್ದು ಕ್ಯಾಬ್ ಬ್ಯುಸಿನೆಸ್‌

Viral News: ಪ್ರಯತ್ನ ಪಟ್ಟರೆ ಸ್ವಂತ ಉದ್ಯಮದಲ್ಲೂ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಈ ಯುವಕನ ಸಾಧನೆಯೇ ಸಾಕ್ಷಿ. ಎಂಜಿನಿಯರ್ ಮುಗಿಸಿದ ಯುವಕ ಆಫೀಸ್ ಕೆಲಸ ಆಯ್ದುಕೊಳ್ಳದೆ ಕ್ಯಾಬ್ ಬ್ಯುಸಿನೆಸ್‌ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೇವಲ ಒಂದು ಕಾರಿನಿಂದ ಈ ಉದ್ಯೋಗ ಆರಂಭ ಮಾಡಿದ ಅವರು ಇಂದು ತಿಂಗಳಿಗೆ 2 ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ಪ್ರವಾಸಿ ತಾಣದಲ್ಲಿ ವಿದೇಶಿಗನಿಂದ ಸ್ವಚ್ಛತಾ ಅಭಿಯಾನ; ನೋಡಿ ಕಲಿಯಿರಿ ಎಂದ ನೆಟ್ಟಿಗರು

ಪ್ರವಾಸಿ ತಾಣ ಸ್ವಚ್ಛಗೊಳಿಸಿದ ವಿದೇಶಿ ವ್ಯಕ್ತಿ

Viral News: ಉತ್ತರಾಖಂಡ ಚಾರಣದ ಹಾದಿಯಲ್ಲಿ ವಿದೇಶಿ ಪ್ರವಾಸಿಯೊಬ್ಬರು ಪ್ಲಾಸ್ಟಿಕ್, ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಇದು ಭಾರತೀಯರ ವರ್ತನೆ, ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಅನೇಕರು ಸ್ವಚ್ಛತೆ ಪಾಲಿಸದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿ ಮೆಟ್ರೋ ನೆನೆದು ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯ ಭಾವುಕ ಪೋಸ್ಟ್

ದೆಹಲಿ ಮೆಟ್ರೋ ಸೌಕರ್ಯ ಬಗ್ಗೆ ವಿದ್ಯಾರ್ಥಿನಿ ಭಾವುಕ

Viral News: ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಭಾರತದ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನಗೆ ದೆಹಲಿಯ ಮೆಟ್ರೋ ಸೌಲಭ್ಯದ ಬೆಲೆ ಈಗ ಅರಿವು ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ಪ್ರವಾಸಿಗರ ಅಸಭ್ಯ ವರ್ತನೆ: ಚೀನಾದ ಮಹಾಗೋಡೆಯ ಮೇಲೆ ನೃತ್ಯ ಮಾಡಿ ಹುಚ್ಚಾಟ

ವಿದೇಶದಲ್ಲಿ ನಾಗರಿಕ ಪ್ರಜ್ಞೆ ಮರೆತ ಭಾರತೀಯರು

Viral News: ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನಿಂದ ವರ್ತಿಸಿಸದೆ ಹುಚ್ಚಾಟ ಮೆರೆಯುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಗುಂಪೊಂದು ಚೀನಾದ ಪ್ರಸಿದ್ಧ ಮಹಾ ಗೋಡೆಯ ಮೇಲೆ 'ಚೋಗಾಡಾ' ಹಾಡಿಗೆ ಗರ್ಬಾ ನೃತ್ಯ ಮಾಡಿದೆ. ಅನೇಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದೇ ರೀತಿ ಪ್ರವಾಸಿ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ ಅನೇಕ ದೃಶ್ಯಗಳು ವೈರಲ್ ಆಗಿವೆ.

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್: ವ್ಯಾಪಾರಿಗಳ ದೂರಿನ ಮೇರೆಗೆ ಉತ್ತರ ಪ್ರದೇಶ ಪೇದೆ ಸಸ್ಪೆಂಡ್‌

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್ ಸಸ್ಪೆಂಡ್‌

Police Constable Suspended: ಗೋಲ್ಗಪ್ಪ, ಐಸ್‌ಕ್ರೀಂ ಉಚಿತವಾಗಿ ತಿಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯದಲ್ಲಿರುವಾಗ ಪಿಆರ್‌ವಿ ವಾಹನದ ಚಾಲಕ ಐಸ್‌ಕ್ರೀಂ ಸೇವಿಸುತ್ತಿರುವ ವಿಡಿಯೊವನ್ನು ವ್ಯಾಪಾರಿಗಳ ಸಂಘದ ಸದಸ್ಯರು ರೆಕಾರ್ಡ್ ಮಾಡಿದ ಬಳಿಕ ವಿವಾದ ಪ್ರಾರಂಭವಾಯಿತು.

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ತಾಯಿಯ ಶ್ರದ್ಧಾದ ದಿನ ರಾತ್ರಿಯಿಡೀ ಅಶ್ಲೀಲ ನೃತ್ಯ

Viral News: ಬಿಹಾರದ ಬೇಗುಸರಾಯ್ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ವಿಚಿತ್ರವಾಗಿ ತಾಯಿಯ ಶ್ರಾದ್ಧ ನಡೆಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ರಾತ್ರಿಯಿಡೀ ಅಶ್ಲೀಲ ನೃತ್ಯ ಮಾಡುವ ಮೂಲಕ ಆಚರಿಸಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀವು ಆರ್‌ಸಿಬಿ ಜರ್ಸಿ ನೋಡಿರಬಹುದು; ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಬ್ಲೌಸ್ ಡಿಸೈನ್ ಏನದ್ರೂ ನೋಡಿದ್ದೀರಾ?

ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ಟ್ರೆಂಡ್ ಕ್ರಿಯೇಟ್ ಮಾಡಿದ ಮಹಿಳೆ

Viral Video: ಗುಜರಾತ್ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿ ಗೆದ್ದು ಫ್ಯಾನ್ಸ್‌ ಸಸಂಭ್ರಮ ಹೆಚ್ಚಿಸಿದೆ. ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರ ಭಾವಚಿತ್ರ‌ ಹಿಡಿದು, ನಗರದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಐಪಿಎಲ್ ಕ್ರೇಜ್ ಮೈದಾನಕ್ಕೆ ಸೀಮಿತವಾಗಿಲ್ಲ; ಅದು ಈಗ ಫ್ಯಾಷನ್ ಲೊಕಕ್ಕೂ ಲಗ್ಗೆ ಇಟ್ಟಿದೆ.

ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ; ಮನ ನೊಂದು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

Muslim Youth Converts to Hinduism: ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ ನೀಡುವ ಪದ್ಧತಿಯಿಂದ ನೊಂದ ಯುವಕನೋರ್ವ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸರ್ವೇ ಭವಂತು ಸುಖಿನಃ ತತ್ವದಿಂದ ಪ್ರಭಾವಿತನಾಗಿರುವುದಾಗಿ ತಿಳಿಸಿದ್ದಾರೆ.

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್‌

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

IPL 2026 final: ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್‌ (32) ಮತ್ತು ವಿರಾಟ್‌ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್‌ ಮೂಲಕ ಈ ಜೋಡಿ 62ರನ್‌ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.

ಸಾಕು ಬೆಕ್ಕಿಗೆ ಭರ್ಜರಿ ಹುಟ್ಟುಹಬ್ಬ: ಮುಂಬೈ ಯುವಕನ ನಡೆಗೆ ಎಲ್ಲೆಡೆ ಮೆಚ್ಚುಗೆ

ಸಾಕುಬೆಕ್ಕಿಗೆ ಅದ್ಧೂರಿ ಬರ್ತ್‌ಡೇ ಪಾರ್ಟಿ ಕೊಟ್ಟ ಯುವಕ: ಇಲ್ಲಿದೆ ವಿಡಿಯೊ

Viral News: ಇತ್ತೀಚೆಗೆ ಪ್ರಾಣಿಗಳ ಹುಟ್ಟುಹಬ್ಬ ಆಚರಣೆ ಟ್ರೆಂಡ್ ಆಗಿ ಬಿಟ್ಟಿದೆ. ಮಹಾರಾಷ್ಟ್ರದ ಮುಂಬೈಯ ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಮುದ್ದಿನ ಬೆಕ್ಕುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ. ಈ ದೃಶ್ಯ ಸಾಕುಪ್ರಾಣಿಯ ಹುಟ್ಟುಹಬ್ಬದಂತೆ ಇರಲಿಲ್ಲ. ಬದಲಾಗಿ ದೊಡ್ಡ ಮಟ್ಟದ ಉತ್ಸವದಂತೆ ಕಾಣುತ್ತಿತ್ತು.ಈ ಆಚರಣೆಯಲ್ಲಿ ಕೇಕ್ ಕತ್ತರಿಸುವುದು, ಸಂಗೀತ, ನೃತ್ಯ ಮತ್ತು ಅತಿಥಿಗಳಿಗೆ ಭರ್ಜರಿ ಆತಿಥ್ಯವಿತ್ತು.

Fact Check: ಭಾರತೀಯ ಅಂಚೆಯಿಂದ ಉಡುಗೊರೆ; ಈ ಸುದ್ದಿ ನಿಜವೇ? ಕೇಂದ್ರ ನೀಡಿದ ಎಚ್ಚರಿಕೆ ಏನು?

ಡಾಕ್ ಸೇವಾ ಉಡುಗೊರೆ; ಏನಿದು ವೈರಲ್ ಸುದ್ದಿ?

ಭಾರತೀಯ ಅಂಚೆ ಇಲಾಖೆಯಿಂದ ಉಡುಗೊರೆ, ಬಹುಮಾನಗಳನ್ನು ನೀಡಲಾಗುತ್ತಿದೆ ಎನ್ನುವ ಸುದ್ದಿಗಳು ವೈರಲ್ ಆಗುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ತನಿಖೆ ನಡೆಸಿದ್ದು, ಇದೊಂದು ಸುಳ್ಳು ಸುದ್ದಿ ಎನ್ನುವ ಸ್ಪಷ್ಟನೆಯನ್ನು ನೀಡಿದೆ. ಭಾರತೀಯ ಅಂಚೆಯು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದ್ದು, ಜನರು ಇಂತಹ ಸುಳ್ಳು ಸುದ್ದಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಿದೆ.

25 ಲಕ್ಷ ರುಪಾಯಿ ಸಂಬಳದ ಜಾಬ್‌ ಆಫರ್‌ ತಿರಸ್ಕರಿಸಿ ಓಲಾ ಚಾಲಕನಾದ ಯುವಕ; ಮೂರೇ ವರ್ಷದಲ್ಲಿ 5 ಕಾರ್‌ಗಳ ಒಡೆಯ

ಓಲಾ ಚಾಲಕನಾಗಲು 25 ಲಕ್ಷ ರು. ಸಂಬಳದ ಆಫರ್ ತಿರಸ್ಕರಿಸಿದ ಎಂಬಿಎ ಪದವೀಧರ!

Viral News: ಉದ್ಯೋಗದಲ್ಲಿ ಟಾರ್ಗೆಟ್, ಒತ್ತಡ, ಕಿರಿಕಿರಿಯಿಂದಾಗಿ ಲಕ್ಷ ಗಟ್ಟಲೆ ಸಂಬಳ ಇದ್ದರೂ ಬಿಟ್ಟು ಬಂದವರಿದ್ದಾರೆ. ಇದೀಗ ಯುವಕನೊಬ್ಬ 25 ಲಕ್ಷ ರುಪಾಯಿ ಸಂಬಳದ ಆಫರ್ ಬಿಟ್ಟು ಓಲಾ ಚಾಲಕನಾಗಿದ್ದಾನೆ. ಕಾರ್ಪೋರೇಟ್ ಜೀವನದಿಂದ ದೂರವಾದ ಯುವಕನ ಬಗ್ಗೆ ಸಚಿನ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆತನಿಗೆ ಕಾರ್ಪೋರೇಟ್‌ ಜೀವನದಲ್ಲಿ ಸಮಾಧಾನವಿರಲಿಲ್ಲ. ಹೀಗಾಗಿ ಹಠಾತ್ತನೆ ಆ ಕೆಲಸದ ಆಫರ್ ಬಿಟ್ಟು, ಓಲಾ ಟ್ಯಾಕ್ಸಿ ಚಾಲಕನಾಗಲು ನಿರ್ಧರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿದ್ದ ವಿಷ ಸರ್ಪ; ಮುಂದಾಗಿದ್ದು ಅಚ್ಚರಿ

ಪಾರ್ಶ್ವವಾಯು ಪೀಡಿತ ವ್ಯಕ್ತಿ ಕೈಗೆ ಸುತ್ತಿಕೊಂಡ ವಿಷ ಸರ್ಪ: ಮುಂದೇನಾಯ್ತು?

Viral Video: ಸರ್ಪವೊಂದು ಕೋಣೆಯೊಳಗೆ ನುಗ್ಗಿ ಸುಮಾರು ನಾಲ್ಕು ಗಂಟೆಯವರೆಗೆ ವೃದ್ಧನ ಮಂಚದ ಮೇಲೆ ಸಮಯ ಕಳೆದಿದೆ. ಅಲ್ಲದೆ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕೈಗೆ ಸುತ್ತಿ ಹಾಕಿ ಕುಳಿತಿದೆ.‌ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ

ವಕೀಲರ ಕೈಯಲ್ಲಿದ್ದ ಹಣದ ಬ್ಯಾಗ್‌ ಕಿತ್ತ ಕೋತಿ; ಮುಂದಾಗಿದ್ದೇನು?

Viral Video: ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

DK Shivakumar: ನಮ್ಮ ತಂದೆ ರಾಜ್ಯದ ಸಿಎಂ ಆಗಬೇಕು, ಯಾಕೆ ಗೊತ್ತಾ?; ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಭಾವುಕ ಮಾತಿನ ವಿಡಿಯೊ ವೈರಲ್‌!

ನಮ್ಮ ತಂದೆ ಸಿಎಂ ಆಗಬೇಕು; ಡಿಕೆಶಿ ಪುತ್ರಿಯ ಭಾವುಕ ವಿಡಿಯೊ ವೈರಲ್‌!

ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಪುತ್ರಿ ಐಶ್ವರ್ಯ ಅವರು ಭಾನುವಾರ ಒಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ "ಕಂಗ್ರಾಜುಲೇಷನ್ಸ್ ಅಪ್ಪಾ ಎಂದು ವಿಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಹಿಂದೆ ಐಶ್ವರ್ಯಾ ಅವರು ತಂದೆ ಬಗ್ಗೆ ಮಾತನಾಡಿರುವ ವಿಡಿಯೊ ಸದ್ಯ ವೈರಲ್‌ ಆಗುತ್ತಿದೆ.

ʼʼನೆಮ್ಮದಿಯೇ ಮುಖ್ಯʼʼ: 9 ವರ್ಷ ಐಟಿ ಮ್ಯಾನೇಜರ್ ಆಗಿದ್ದ ಮಹಿಳೆ ಈಗ ಆಟೋ ಚಾಲಕಿ

ಕಾರ್ಪೋರೇಷನ್‌ ಕೆಲಸ ತ್ಯಜಿಸಿ ಆಟೋ ಓಡಿಸುತ್ತಿರುವ ಮಹಿಳೆ: ವಿಡಿಯೊ ವೈರಲ್

Viral Video: ಒಂಬತ್ತು ವರ್ಷಗಳವರೆಗೆ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದೀಗ ಆಟೋ ಚಾಲಕಿಯಾಗಿ ಹೊಸ ವೃತ್ತಿ ಆರಂಭಿಸಿದ್ದಾರೆ. ಐಟಿ ಕೆಲಸದಲ್ಲಿನ ಅತಿಯಾದ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ನೊಂದು ಪ್ರತಿಷ್ಠಿತ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೆಲಸಕ್ಕೆ ಅಪ್ಲೈ ಮಾಡಿದ್ದು 2005ರಲ್ಲಿ; ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ರಿಟೈರ್ಡ್‌ ಆಗುವಾಗ!

ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ಅಪ್ಲೈ ಮಾಡಿದ 21 ವರ್ಷಗಳ ಬಳಿಕ!

ಸರ್ಕಾರಿ ಕೆಲಸ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ? ಅಂತಹ ಕೆಲಸ ಸಿಕ್ಕರೆ ಕುಟುಂಬಕ್ಕೆ ಬಹಳ ಸಂತೋಷದ ಕ್ಷಣವಾಗಿರುತ್ತದೆ. ಕೇರಳಂನ ಈ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿರುವುದು ನಿರಾಸೆ ತಂದಿದೆ. ಅರೆ... ಇದೇನಿದು ಎಲ್ಲರೂ ಸರ್ಕಾರಿ ಕೆಲಸ ಅಂದ್ರೆ ಹಾತೊರೆಯುತ್ತಾರೆ ಅಂಥದ್ರಲ್ಲಿ ಇವರದ್ದೇನು ವರಸೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ...

ಬೆಂಗಳೂರಿನಲ್ಲಿ ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಸಿಟಿ ಬಿಟ್ಟು ಹೋಗಲ್ಲ ಯಾಕೆ? ಬಿಹಾರಿ ಯುವಕನ ಗಮನ ಸೆಳೆದ ವಿಡಿಯೊ!

ಜನರನ್ನು ಆಕರ್ಷಿಸುವ ಬೆಂಗಳೂರಿನ ಬಗ್ಗೆ ಯುವಕ ಹೇಳಿದ್ದೇನು?

Viral News: ಬೆಂಗಳೂರು ನಗರಕ್ಕೆ ತೆರಳುವ ಅನೇಕ ಜನರು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ನರಕ ತೋರಿಸಿದ ಪೊಲೀಸರು; ಒಂದು ಹನಿ ನೀರಿಗಾಗಿ ಅಂಗಾಲಾಚಿದ ರಾಕ್ಷಸ

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ಗುಂಡೇಟು

Firozabad Horror: ಉತ್ತರ ಪ್ರದೇಶದ ಫಿರೋಝಾಬಾದ್‌ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಬಾಲಕನನ್ನು ವಿರಾಜ್‌ ಎಂಬಾತ ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದಿರುವ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಲೆ ಮರೆಸಿಕೊಂಡಿರುವ ವಿರಾಜ್‌ನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

'ಈತನನ್ನು ತಕ್ಷಣವೇ ಬಂಧಿಸಿ': ನೆರೆಮನೆಯ ವಿಡಿಯೋ ಮಾಡಲು ಅಪಾಯಕಾರಿ ಸಾಹಸಕ್ಕೆ ಮುಂದಾದ ವೃದ್ಧ!

ನೆರೆ ಮನೆಯ ವಿಡಿಯೊ ಮಾಡಲು ಪ್ರಾಣವನ್ನೇ ಪಣಕ್ಕಿಟ್ಟ ವೃದ್ಧ; ವಿಡಿಯೊ ವೈರಲ್

Viral Video: ವೃದ್ಧನೊಬ್ಬ ಪಕ್ಕದ ಮನೆಯ ವಿಡಿಯೊ ಚಿತ್ರೀಕರಣ ಮಾಡಲು ಅಪಾರ್ಟ್‌ಮೆಂಟ್‌ನ ಕಿಟಕಿಯ ಕಿರಿದಾದ ಅಂಚಿನ ಮೇಲೆ ಕುಳಿತು ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ತನ್ನ ಜೀವವನ್ನೆ ಅಪಾಯಕ್ಕೆ ತಳ್ಳಿಕೊಂಡಿರುವ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇಂತಹ ಸಾಹಸ ಬೇಕೇ? ಎಂದು ಹಲವಾರು ಟೀಕೆ ಮಾಡಿದ್ದಾರೆ...

ನದಿಯಂತಾದ ರಸ್ತೆಯಲ್ಲಿ ಸಿಲುಕಿದ್ದ ದಿವ್ಯಾಂಗ ಯುವಕನನ್ನು ರಕ್ಷಿಸಿದ  ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್

ಮಳೆಯಲ್ಲಿದ್ದ ದಿವ್ಯಾಂಗ ಯುವಕನನ್ನು ರಕ್ಷಿಸಿದ ಬೆಂಗಳೂರು ಪೊಲೀಸ್

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ, ಜಲಾವೃತ ರಸ್ತೆಯಲ್ಲಿ ಸಿಲುಕಿದ್ದ ಅಂಗವಿಕಲ ವ್ಯಕ್ತಿರೊಬ್ಬರನ್ನ ಪೊಲೀಸ್‌ ಕಾನ್ಸ್‌ಟೆಬಲ್‌ ಒಬ್ಬರು ಹೆಗಲ ಮೇಲೆ ಹೊತ್ತು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

10 ಕಿ.ಮೀ. ಗೆ 700 ರೂ.; ಬೆಂಗಳೂರು ಕ್ಯಾಬ್ ಗಳಿಂದ ಹಗಲು ದರೋಡೆ ಎಂದ ಮಹಿಳೆ

ಬೆಂಗಳೂರಿನ ಕ್ಯಾಬ್ ದರ ಕೇಳಿ ಮಹಿಳೆ ಶಾಕ್

10 ಕಿ.ಮೀ. ಗಿಂತಲೂ ಕಡಿಮೆ ದೂರ ಪ್ರಯಾಣಿಸಲು ಮಹಿಳೆಯೊಬ್ಬರು ಕ್ಯಾಬ್ ಗೆ 700 ರೂ. ಪಾವತಿ ಮಾಡಿದ್ದಾರೆ. ಬಳಿಕ ಇದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದು, ಇದರಿಂದ ಅನೇಕರು ಶಾಕ್ ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ದರ ಈಗ ಚರ್ಚೆಯನ್ನು ಉಂಟು ಮಾಡಿದೆ. ಅನೇಕರು ಇದು ಹಗಲು ದರೋಡೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದು ಅಪರೂಪದ ಗಜ ಪ್ರೇಮ ಪ್ರಸಂಗ; ಉತ್ತರಾಖಂಡದಲ್ಲಿ ಕಾಡಾನೆಗಳೊಂದಿಗೆ ʼಓಡಿ ಹೋದʼ ಕರ್ನಾಟಕದ ಸಾಕಾನೆಗಳು!

ಉತ್ತರಾಖಂಡದಲ್ಲಿ ಕಾಡಾನೆಗಳೊಂದಿಗೆ ಪರಾರಿಯಾದ ಸಾಕಾನೆಗಳು!

Kumki Elephants: ಕರ್ನಾಟಕದಿಂದ ಉತ್ತರಾಖಂಡಕ್ಕೆ ಹಸ್ತಾಂತರಿಸಲಾಗಿದ್ದ 2 ಕುಮ್ಕಿ ಹೆಣ್ಣಾನೆಗಳು ಕಾಡಾನೆ ಹಿಂದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ವಿದ್ಯಾಮಾನ ಜರುಗಿದೆ. ಕಾಡು ಗಸ್ತು ತಿರುಗುವ ಉದ್ದೇಶದಿಂದ ಇಲ್ಲಿಗೆ ಕರ್ನಾಟಕದಿಂದ 2 ಹೆಣ್ಣಾನೆಗಳನ್ನು ಕರೆತರಲಾಗಿತ್ತು. ಇದೀಗ ಇವು ʼಓಡಿ ಹೋಗಿದ್ದುʼ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ.

ʼʼಕಾಯಿಲೆ ಹರಡಲು ಇದೇ ರಹದಾರಿʼʼ: ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರನ ವಿಡಿಯೊ ವೈರಲ್

ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರ; ವಿಡಿಯೊ ವೈರಲ್‌

Vendor Washes Fruits in Drain Water: ಬೀದಿಬದಿ ಮಾರಾಟಗಾರನೊಬ್ಬ ಚರಂಡಿಯ ಕೊಳಕು ನೀರಿನಲ್ಲಿ ಹಣ್ಣು ತೊಳೆಯುತ್ತಿರುವ ವಿಡಿಯೊವೊಂದು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಹಣ್ಣುಗಳನ್ನು ಜೋಡಿಸುವ ಮೊದಲು ಚರಂಡಿ ನೀರಿನಲ್ಲಿ ತೊಳೆಯುತ್ತಿರುವುನ್ನು ವಿಡಿಯೊದಲ್ಲಿ ಕಾಣಬಹುದು.

Loading...