ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

"ನನ್ನ ಮಗಳು ನಾಗಿಣಿ ಆಗಿದ್ದಾಳೆ"; ಯುವತಿಯ ಕಣ್ಮರೆ ಬಗ್ಗೆ ಪೊಲೀಸರಲ್ಲಿ ದೂರು, ಕೊನೆಗೆ ಆಗಿದ್ದೇನು?

ನನ್ನ ಮಗಳು ನಾಗಿಣಿ ಆಗಿದ್ದಾಳೆ ಎಂದ ತಂದೆ!

Young woman turned into a Nagin: ತಮ್ಮ ಮಗಳು ನಾಗಿಣಿಯಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ ಕುಟುಂಬಸ್ಥರು ಯುವತಿಯೊಬ್ಬಳ ಕಣ್ಮರೆ ಪ್ರಕರಣವನ್ನು ಪೊಲೀಸರಿಗೆ ದೂರು ನೀಡಿದ್ದಾರೆ. ಶೇಷನಾಗ ದೇವಾಲಯಕ್ಕೆ ಭೇಟಿ ನೀಡಿದ ನಂತರ ಅವಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಆಕೆಯ ನಾಪತ್ತೆ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅವಧಿ ಮೀರಿದ ಆಹಾರಗಳ ಬಳಕೆ;  ವಿಷಕಾರಿ ಎಣ್ಣೆಯ ಅಂಶ ಪತ್ತೆ!

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅವಧಿ ಮೀರಿದ ಆಹಾರಗಳ ಬಳಕೆ!

Viral Video: ಜೈಪುರದ ಗೌರವ್ ಟವರ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನಲ್ಲಿ ಸುರಕ್ಷಿತ ಮಾನ ದಂಡಗಳನ್ನು ಪಾಲಿಸದೆ ಇರುವುದು ಕಂಡು ಬಂದಿದೆ. ಆಹಾರವನ್ನು ಹುರಿಯಲು ಬಳಸುವ ಅಡುಗೆ ಎಣ್ಣೆ ಸುರಕ್ಷಿತ ಬಳಕೆಯ ಮಿತಿಗಳನ್ನು ಮೀರಿದೆ ಎಂದು ತಪಾಸಣೆಯಲ್ಲಿ ತಿಳಿದುಬಂದಿದೆ. ಇದು ಜನರ ಆರೋಗ್ಯದ ಬಗ್ಗೆ ಕಳವಳವನ್ನು ಉಂಟು ಮಾಡಿದೆ.

ಇಸ್ಕಾನ್ ದೇವಸ್ಥಾನಕ್ಕೆ ಟ್ಯಾಕ್ಸಿ ಬುಕ್ ಮಾಡಿ ಚಾಲಕನಿಗೆ ಗ್ರಾಹಕ ಕಳುಹಿಸಿದ ಮೆಸೇಜ್‌ ಏನು ಗೊತ್ತಾ?

ಟ್ಯಾಕ್ಸಿ ಬುಕ್ ಮಾಡಿ ಅಶ್ಲೀಲ ಮೆಸೇಜ್: ಆಘಾತಕ್ಕೆ ಒಳಗಾದ ಚಾಲಕ!

Viral News: ಸಾರಿಗೆ ಮತ್ತು ಟ್ಯಾಕ್ಸಿ ಸೇವೆಗಳಲ್ಲಿ ಚಾಲಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿರುವ ಘಟನೆ ಯೊಂದು ನಡೆದಿದೆ. ಗುರುಗ್ರಾಮ್‌ನಲ್ಲಿ ದೇವಸ್ಥಾನಕ್ಕೆ ಟ್ಯಾಕ್ಸಿ ಬುಕ್ ಮಾಡಿದ ಗ್ರಾಹಕನೊಬ್ಬ ಅಶ್ಲೀಲ ಸಂದೇಶ ಕಳಿಸಿದ್ದು ಇದನ್ನು ಕೇಳಿ ಚಾಲಕನೇ ಶಾಕ್ ಆಗಿದ್ದಾನೆ. ಈ ಬಗ್ಗೆ ಆತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.

ಕಂಪನಿ ಕೆಲಸ ತೊರೆದು ಫಲೂದಾ ಮಾರಾಟ ಮಾಡಿದ ಬೆಂಗಳೂರಿನ ಈ ವ್ಯಕ್ತಿ ಇಂದು 18ಕ್ಕೂ ಹೆಚ್ಚು ಮಳಿಗೆಗಳ ಒಡೆಯ!

ಕಂಪನಿ ಕೆಲಸ ತೊರೆದು ಫಲೂದಾ ಮಾರಾಟ ಮಾಡಿದ ವ್ಯಕ್ತಿ ಇಂದು ಕೋಟ್ಯಾಧಿಪತಿ!

Viral News: ಇಲ್ಲೊಬ್ಬರು ಕೈತುಂಬಾ ಸಂಬಳ ನೀಡುತ್ತಿದ್ದ ಕಾರ್ಪೊರೇಟ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸಲು ಹೊರಟಿದ್ದು ಡಬಲ್ ಪಟ್ಟು ಲಾಭ ಗಳಿಸುತ್ತಿದ್ದಾರೆ. ಪ್ರದೀಪ್ ಕಣ್ಣನ್ ಎನ್ನುವ ವ್ಯಕ್ತಿ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ಯಶಸ್ವಿ ಉದ್ಯಮಿಯಾಗಿ ಮಿಂಚಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌.

ಅಡುಗೆಮನೆಯ 'ಲವಂಗ'ಕ್ಕೂ ಈ ಭಾರತದ ಈ  ದ್ವೀಪಕ್ಕೂ ಇದೆ ರಹಸ್ಯಕರ ನಂಟು!

ಜಂಜಿಬಾರ್ ದ್ವೀಪಕ್ಕಿದೆ ಲವಂಗದ ನಂಟು; ಇಲ್ಲಿದೆ ಇದರ ರಹಸ್ಯ

ಮಸಾಲೆ ಪದಾರ್ಥಗಳು ನಮ್ಮ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಐತಿಹಾಸಿಕವಾಗಿಯೂ ಗುರುತಿಸಿಕೊಂಡಿದೆ. ಹೌದು ಈ ಒಂದು ದ್ವೀಪವು ಮಸಾಲೆ ಪದಾರ್ಥ ಜೊತೆ ಎಷ್ಟು ನಿಕಟ ಸಂಬಂಧ ಹೊಂದಿದೆಯೆಂದರೆ ಅದು ಶಾಶ್ವತವಾದ ಜಾಗತಿಕ ಗುರುತನ್ನು ಗಳಿಸಿಕೊಂಡಿದೆ. ಜಂಜಿಬಾರ್ (Zanzibar) ದ್ವೀಪವನ್ನು ಇಂದಿಗೂ 'ಲವಂಗದ ದ್ವೀಪ' ಎಂದೇ ಕರೆಯಲಾಗುತ್ತದೆ.

ಆಸ್ಟ್ರೇಲಿಯಾದಿಂದ ಊರಿಗೆ ಬಂದವ 'ದೇಸಿ ತುಪ್ಪ' ಕಳ್ಳತನ ಮಾಡಿ ಸಿಕ್ಕಿಬಿದ್ದ; ವೈರಲ್‌ ಆಗ್ತಿರೋ ವಿಡಿಯೋ ನೋಡಿ

ಹರಿಯಾಣ ಸೂಪರ್ ಮಾರ್ಟ್‌ನಲ್ಲಿ ದೇಸಿ ತುಪ್ಪ ಕಳ್ಳತನ ಮಾಡಿದ ವ್ಯಕ್ತಿ!

Viral Video: ಆಸ್ಟ್ರೇಲಿಯಾದಿಂದ ಬಂದ ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ತುಪ್ಪ ಮತ್ತು ಜೇನುತುಪ್ಪದ ಬಾಟಲಿಗಳನ್ನು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ವ್ಯಕ್ತಿಯನ್ನು ಮೋತಿ ನಗರದ ನಿವಾಸಿ ಅಶ್ವಿನಿ ಅಲಿಯಾಸ್ ಆಶು ಭಾಟಿಯಾ ಎಂದು ಗುರುತಿಸಲಾಗಿದೆ. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಸುಚಿತ್ರಾ ತಾಳಕ್ಕೆ ತಕ್ಕಂತೆ ಕುಣಿದ ಜ್ಯೋತಿಷಿ ಕಮಲಾಕರ್‌ ಭಟ್‌; ಯಕ್ಷಗಾನ ನೃತ್ಯದ ವಿಡಿಯೊ ವೈರಲ್‌

ಸುಚಿತ್ರಾ ಮುಂದೆ ಜ್ಯೋತಿಷಿ ಕಮಲಾಕರ್‌ ಭಟ್‌ ಡ್ಯಾನ್ಸ್‌; ವಿಡಿಯೊ ವೈರಲ್‌

ಕೊಲೆ ಪ್ರಕರಣದಲ್ಲಿ ಜೈಲುಪಾಲಾಗುತ್ತಿದ್ದಂತೆಯೇ ಸುಚಿತ್ರಾ, ಕಮಲಾಕರ್‌ ಭಟ್‌ ಆಡಿಯೊ, ವಿಡಿಯೊಗಳು ಒಂದೊಂದೆ ಹೊರಬರುತ್ತಿವೆ. ಅದರಲ್ಲೂ ಸುಚಿತ್ರಾ ಮುಂದೆ ಕಮಲಾಕರ್ ಭಟ್ ನೃತ್ಯ ಮಾಡಿರುವುದು ಇದೀಗ ವೈರಲ್‌ ಆಗಿದೆ. ತನ್ನ ಮೈಮಾಟದಿಂದ ಜ್ಯೋತಿಷಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಸುಚಿತ್ರಾ, ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ್ದಾಳೆ.

ಮನಕಲಕುವ ಘಟನೆ; ಪಾರ್ಕ್‌ನಲ್ಲಿ ವಿಶೇಷ ಚೇತನ ಮಗುವಿಗೆ ಉಯ್ಯಾಲೆ ನಿರಾಕರಣೆ ಮಾಡಿದ ಸಿಬ್ಬಂದಿ!

ವಿಶೇಷ ಚೇತನ ಮಗುವಿಗೆ ದೆಹಲಿ ಪಾರ್ಕ್‌ನಲ್ಲಿ ಪ್ರವೇಶ ನಿರಾಕರಣೆ!

Viral Video: ವಿಶೇಷ ಚೇತನ ಮಗುವೊಂದಕ್ಕೆ ಉಯ್ಯಾಲೆ ಆಡಲು ಅವಕಾಶ ನಿರಾಕರಣೆ ಮಾಡಿದ ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಗುವಿನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮಾಜದಲ್ಲಿ ಇನ್ನೂ ತಾರತಮ್ಯ ಮಾಡುವ ಪರಿಪಾಠ ಕಮ್ಮಿಯಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Viral Video: ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ಇತ್ತೀಚೆಗೆ ಸರಿಯಾದ ಆಯ್ಕೆಯ ಹುಡುಗ/ಹುಡುಗಿ ಸಿಕ್ಕಿಲ್ಲ ಎಂದು ಮದುವೆ ಗೋಜಿಗೆ ಹೋಗದವರು ಇದ್ದಾರೆ. ಆದರೆ ಇಲ್ಲೊಬ್ಬ ಯುವತಿ 'ಜೀವನ ಸಂಗಾತಿ'ಯನ್ನು ಹುಡುಕುವ ಬಗ್ಗೆ ನೀಡಿರುವ ಹೇಳಿಕೆ ಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವನದಲ್ಲಿ ಕಠಿಣ ಪ್ರಯತ್ನ ಮುಖ್ಯ ಆದರೆ ಯಾವಾಗಲೂ ಸಾಂಪ್ರದಾಯಿಕ ಅರ್ಥದಲ್ಲಿ ಅಲ್ಲ. ಒಳ್ಳೆಯ ಮತ್ತು ಶ್ರೀಮಂತ ಹುಡುಗನನ್ನು ಹುಡುಕಲು ಸರಿಯಾದ ಸಿದ್ಧತೆ ಮತ್ತು ಅರಿವು ಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ..

ತಾಯಿ ಇಲ್ಲದ  ಮಗಳಿಗಾಗಿ ಆಟೋವನ್ನೇ ಮನೆಯನ್ನಾಗಿ ಬದಲಾಯಿಸಿದ ತಂದೆ: ದೃಶ್ಯ ಕಂಡು ನೆಟ್ಟಿಗರು ಭಾವುಕ!

ಮಗಳಿಗಾಗಿ ಆಟೋ ರಿಕ್ಷಾವನ್ನು ಮಿನಿ ರೂಮ್ ಆಗಿ ಪರಿವರ್ತಿಸಿದ ತಂದೆ!

ತನ್ನ ಹೆಂಡತಿಯನ್ನುಕಳೆದುಕೊಂಡ‌ ಚಿಕ್ಕ ಮಗಳನ್ನು ಒಂಟಿಯಾಗಿ ಬೆಳೆಸುತ್ತಿರುವ ಆಟೋ-ರಿಕ್ಷಾ ಚಾಲಕನ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯ ಅಗಲಿಕೆಯ ನಂತರ ತನ್ನ ಪುಟ್ಟ ಮಗಳನ್ನು ಬೆಳೆಸಲು ತಂದೆ ಮಾಡುತ್ತಿರುವ ಜವಾಬ್ದಾರಿಯ ಕೆಲಸ ನೆಟ್ಟಿಗರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ.ಸದ್ಯ ಇದರ ವಿಡಿಯೊ ವೈರಲ್ ಆಗಿದೆ.

ಕುಡಿದ ಮತ್ತಿನಲ್ಲಿ ರೋಗಿಯ ಪ್ರಿಸ್ಕ್ರಿಪ್ಷನ್ ಹರಿದು ಹಾಕಿ ಗಲಾಟೆ ಮಾಡಿದ ಸರ್ಕಾರಿ ಆಸ್ಪತ್ರೆ ವೈದ್ಯ; ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಅವಾಂತರ: ಪ್ರಿಸ್ಕ್ರಿಪ್ಷನ್ ಹರಿದು ಹಾಕಿದ ವೈದ್ಯ!

Viral Video: ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವೈದ್ಯನೊಬ್ಬ ಪ್ರಿಸ್ಕ್ರಿಪ್ಷನ್ ಬರೆದು ಆತನೇ ಹರಿದು ಹಾಕಿರುವ ಘಟನೆಯೊಂದು ನಡೆದಿದೆ. ಮಾಹಿತಿಯ ಪ್ರಕಾರ, ತುರ್ತು ಕರ್ತವ್ಯ ದಲ್ಲಿರುವಾಗಲೇ‌ ಕುಡಿದು ತೂರಾಡುತ್ತಿದ್ದಲ್ಲದೆ‌ ರೋಗಿಯೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಡಿಯೊ ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ಸೇವೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವ್ಯಾಲೆಂಟೈನ್ಸ್ ಡೇ ಶಾಪಿಂಗ್ ವೇಳೆ ಸಿಕ್ಕಿಬಿದ್ದ ಪತಿರಾಯ: ಮಾಲ್‌ನಲ್ಲಿ ಜುಟ್ಟು ಹಿಡಿದು ಕಿತ್ತಾಡಿದ ಪ್ರೇಯಸಿ- ಪತ್ನಿ, ವಿಡಿಯೋ ನೋಡಿ

ಶಾಪಿಂಗ್ ಮಾಲ್ ನಲ್ಲಿ ಪ್ರೇಯಸಿಯ ಜೊತೆ ಸಿಕ್ಕಿಬಿದ್ದ ಪತಿ!

Viral Video: ಹೆಚ್ಚಿನ ಯುವಕ- ಯುವತಿಯರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿಗಳ ದಿನಚರಣೆ ಪ್ರಯುಕ್ತ ಪ್ರೇಯಸಿಯನ್ನು ಮಾಲ್‌ಗೆ ಕರೆತಂದಿದ್ದಾನೆ. ಆದರೆ ಅಲ್ಲಿಯೇ ಆತನ ಪತ್ನಿ ಎದುರಾದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು ದೊಡ್ಡ ಹೈಡ್ರಾಮಾವೇ ನಡೆದಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಆದಾಯವನ್ನು ಮೀರಿಸಿದ ಲಾಂಡ್ರಿ ಅಂಗಡಿ ಆದಾಯ;  ತಿಂಗಳಿಗೆ ಎಷ್ಟು ದುಡೀತಾರೆ ಗೊತ್ತಾ?

ಡ್ರೈ ಕ್ಲೀನರ್ ನ ಪ್ರತಿ ತಿಂಗಳ ಆದಾಯ ಕೇಳಿ ಶಾಕ್ ಆದ ಮಹಿಳೆ!

Viral News: ಸಾಮಾನ್ಯವಾಗಿ ಜಾಬ್ ಅಂದಾಗ ಪ್ರತಿಷ್ಟಿತ ಕಂಪನಿ, ನೋಡಲು ಸುಂದರವಾಗಿ ಇರುವ ಆಫೀಸ್ ಹೀಗೆ ಸುಸಜ್ಜಿತ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಗಳನ್ನೇ ಉತ್ತಮ ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕಷ್ಟ ಪಟ್ಟರೆ ಒಂದು ಸಣ್ಣ ಇಸ್ತ್ರಿ ಅಂಗಡಿಯೂ ಸಹ ಕಂಪನಿ‌ ಉದ್ಯೋಗಕ್ಕಿಂತ ಹೆಚ್ಚು ಲಾಭ ನೀಡಬಲ್ಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿ ದೂರ ಆಗಿರುವ ಸುದ್ದಿ ದಿನನಿತ್ಯ ಕೇಳಿಬರುತ್ತಲೆ ಇದೆ.‌ ಇದಕ್ಕೆ ಸಾಕ್ಷಿ ಎಂಬಂತೆ ಹಲವು‌ ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದ ಜೋಡಿವೊಂದು ಕೇವಲ 'ಲಿಂಗ ತಾರತಮ್ಯ'ದ ವಿಚಾರವಾಗಿ ವಿಚ್ಛೇದನದ ಹೊಸ್ತಿಲು ತಲುಪಿದೆ. ಅತ್ತೆಯೂ ಅನಾರೋಗ್ಯಕ್ಕೆ ಒಳ ಗಾಗಿದ್ದು ಕೆಲಸ ಬಿಟ್ಟು ಮನೆಯಲ್ಲಿರಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.

ಲುಂಗಿ ಡ್ಯಾನ್ಸ್‌.. ಲುಂಗಿ ಡ್ಯಾನ್ಸ್‌; ಮದುವೆಯಲ್ಲಿ ಪಂಚೆಯುಟ್ಟು ಭರ್ಜರಿ ಸ್ಟೆಪ್ಸ್ ಹಾಕಿದ ಇಟಲಿ ಪ್ರವಾಸಿಗರು! ವಿಡಿಯೋ ನೋಡಿ  ‌

ಭಾರತೀಯ ಮದುವೆಯಲ್ಲಿ ಇಟಾಲಿಯನ್ ಅತಿಥಿಗಳ‌ ಭರ್ಜರಿ ಡ್ಯಾನ್ಸ್!

Viral Video: ಭಾರತೀಯ ಮದುವೆಯಲ್ಲಿ ಹಿಟ್ ಟ್ರ್ಯಾಕ್ ಲುಂಗಿ ಡ್ಯಾನ್ಸ್‌ ಗೆ ಇಟಾಲಿಯನ್ ಅತಿಥಿಗಳ ಗುಂಪೊಂದು ಭರ್ಜರಿ ನೃತ್ಯ ಮಾಡಿದೆ. ಸಾಂಪ್ರದಾಯಿಕ ಲುಂಗಿಗಳನ್ನು ಧರಿಸಿ, ಅವರು ತಮ್ಮ ಉತ್ಸಾಹ ಭರಿತ ನೃತ್ಯದ ಮೂಲಕ‌ ಎಲ್ಲರನ್ನು ಅಚ್ಚರಿಗೊಳಿಸಿದರು. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

ಬುರ್ಖಾ ಧರಿಸಿ ಮಹಿಳಾ ಬೋಗಿ ಪ್ರವೇಶ ಮಾಡಿದ ವ್ಯಕ್ತಿ: ಅನುಮಾನಾಸ್ಪದ ನಡವಳಿಕೆ ಕಂಡು ಬೆಚ್ಚಿಬಿದ್ದ ಮಹಿಳೆಯರು!

ಮುಂಬೈ ಲೋಕಲ್ಸ್ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸಿದ ವ್ಯಕ್ತಿ!

Viral Video: ಮುಂಬೈನ ಲೈಫ್‌ಲೈನ್ ಲೋಕಲ್ ಟ್ರೈನ್‌ನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಘಾಟ್‌ಕೋಪರ್ ಬಳಿಯ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬ ಪ್ರವೇಶಿ ಸಿದ್ದು, ಆತಂಕ ಮೂಡಿಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಮಾನಹಾನಿ ಪಿತೂರಿಯಿಂದ ಖಿನ್ನತೆಯಲ್ಲಿದ್ದೇನೆ: ತೇಜ್ ಪ್ರತಾಪ್

ಖಿನ್ನತೆಯಲ್ಲಿದ್ದೇನೆ ಎಂದ ತೇಜ್ ಪ್ರತಾಪ್

ತೇಜ್ ಪ್ರತಾಪ್ ಯಾದವ್ ಸಂಬಂಧ ಹೊಂದಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ಸುಳ್ಳು ಎಂದು ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಅಲ್ಲದೇ ತಾನು ಖಿನ್ನತೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ಮುಸ್ಲಿಮರಿಗೆ ಬಂದೂಕು ತೋರಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಡಿಯೊ ವೈರಲ್; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮುಸ್ಲಿಮರಿಗೆ ಬಂದೂಕು ತೋರಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

ಮುಸ್ಲಿಂ ಸಮುದಾಯದ ಮೇಲೆ ಬಂದೂಕು ಹಿಡಿದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದೆ. ಅಸ್ಸಾಂನ ಬಿಜೆಪಿ ಖಾತೆಯಿಂದ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಗೆಳತಿಯೊಂದಿಗಿದ್ದ ಮಗನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ ಮಾಡಿದ್ದೇನು ಗೊತ್ತಾ?

ಗೆಳತಿಯೊಂದಿಗಿದ್ದ ಮಗನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ

Metro station incident: ಮೆಟ್ರೋ ನಿಲ್ದಾಣದಲ್ಲಿ ಗೆಳತಿಯೊಂದಿಗಿದ್ದ ಮಗನನ್ನು ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಎಲ್ಲರ ಗಮನ ಸೆಳೆದಿದೆ. ಅಲ್ಲಿ ತಾಯಿ ತೆಗೆದುಕೊಂಡ ಅನಿರೀಕ್ಷಿತ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಇದು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ.

ಸೂರಜ್‌ಕುಂಡ್ ಜಾತ್ರೆಯಲ್ಲಿ ತುಂಡಾಗಿ ಬಿದ್ದ ಉಯ್ಯಾಲೆ; ಎದೆ ಝಲ್ ಎನಿಸುವ ವಿಡಿಯೋ ವೈರಲ್‌

ಸೂರಜ್‌ಕುಂಡ್ ದುರಂತ; ಸಾಮಾಜಿಕ ಜಾಲತಾಣದಲ್ಲಿ ಭೀಕರ ದೃಶ್ಯ ವೈರಲ್

ಸೂರಜ್‌ಕುಂಡ್ ಜಾತ್ರೆಯಲ್ಲಿ ಉಯ್ಯಾಲೆ ಮಧ್ಯದಲ್ಲೇ ತುಂಡಾಗಿ ಬಿದ್ದ ಘಟನೆ ಸಂಭವಿಸಿದ್ದು, ಈ ದುರಂತ ಘಟನೆಯ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿದೆ. ಅಪಘಾತದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಕಣ್ಣೀರಿನೊಂದಿಗೆ ಶಾಲೆಗೆ ವಿದಾಯ ಹೇಳುವ ಬದಲು ರೋಡ್‌ನಲ್ಲಿ ಅಪಾಯಕಾರಿ ಸ್ಟಂಟ್ ಪ್ರದರ್ಶನ; ಇದು ಜೆನ್ ಝಡ್ ಕಾಲ!

ಕಣ್ಣೀರಿನೊಂದಿಗೆ ಶಾಲೆಗೆ ವಿದಾಯ ಹೇಳುವ ಬದಲು ಅಪಾಯಕಾರಿ ಸ್ಟಂಟ್

Dangerous stunt: ಶಾಲೆಗೆ ಭಾವನಾತ್ಮಕವಾಗಿ ವಿದಾಯ ಹೇಳುವ ಬದಲು, ಕೆಲ ವಿದ್ಯಾರ್ಥಿಗಳು ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ನಡತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.

ಹೋಟೆಲ್‌ನಲ್ಲಿ ಉಳಿದ ಮಾಂಸಾಹಾರ ಮರುಬಳಕೆ: ವಿಡಿಯೊದಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ದೃಶ್ಯ

ಆಘಾತಕಾರಿ ಘಟನೆ: ಉಳಿದ ಮಾಂಸ ಮರುಬಳಕೆ ಮಾಡಿದ ಹೋಟೆಲ್‌ ಮಾಲಕ

ಉಳಿದಿದ್ದ ಚಿಕನ್, ಮಟನ್ ತುಂಡುಗಳನ್ನು ನೀರಿನಲ್ಲಿ ತೊಳೆದು ಅವುಗಳನ್ನು ಮತ್ತೆ‌ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಆಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಮಲೇಷ್ಯಾದ ನಾಸಿ ಕಂದರ್ ರೆಸ್ಟೋರೆಂಟ್‌ನ ಸಿಬ್ಬಂದಿ ಕೋಳಿ, ಮಟನ್ ಮಾಂಸಗಳನ್ನು ತೊಳೆದು ಮರುಬಳಕೆಗಾಗಿ ಟ್ರೇಗಳಲ್ಲಿ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಅಶ್ಲೀಲ ವಿಡಿಯೊ ನೋಡುವಾಗ ತನ್ನದೇ ಖಾಸಗಿ ವಿಡಿಯೊ ಕಂಡು ಬೆಚ್ಚಿಬಿದ್ದ ಯುವಕ

ಆನ್‌ಲೈನ್‌ನಲ್ಲಿ ತನ್ನದೇ ಖಾಸಗಿ ವಿಡಿಯೊ ಕಂಡು ಬೆಚ್ಚಿಬಿದ್ದ ಯುವಕ

ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಹುಡುಕುತ್ತಿದ್ದ ಯುವಕನೊಬ್ಬ ಭಯಾನಕ ಅನುಭವಕ್ಕೆ ಸಾಕ್ಷಿಯಾಗಿದ್ದಾನೆ. ತಾನು ಮತ್ತು ತನ್ನ ಗೆಳತಿಯ ಖಾಸಗಿ ಕ್ಷಣಗಳನ್ನು ಕಂಡು ಆತ ಬೆಚ್ಚಿಬಿದ್ದಿದ್ದಾನೆ. 2023ರಲ್ಲಿ ದಕ್ಷಿಣ ಚೀನಾದ ಶೆನ್ಜೆನ್ ನಗರದ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ದೃಶ್ಯಗಳು ರಹಸ್ಯವಾಗಿ ದಾಖಲಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಆನ್‌ಲೈನ್ ಗೌಪ್ಯತೆ ಮತ್ತು ಸೈಬರ್ ಭದ್ರತೆ ಕುರಿತ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಕಿಕ್ಕಿರಿದ ಟ್ರಾಫಿಕ್ ನಡುವೆ ಡೋಗೇಶ್ ಭಾಯ್ ದರ್ಬಾರ್: ಚಲಿಸುವ ಆಟೋ ಮೇಲೆ ರಾಜನಂತೆ ಸವಾರಿ!  ವಿಡಿಯೋ ನೋಡಿ

ಆಟೋ ರಿಕ್ಷಾದ ಮೇಲೆ ಡೋಗೇಶ್ ಭಾಯ್ ದರ್ಬಾರ್: ವಿಡಿಯೊ ವೈರಲ್!

Viral Video: ಡೋಗೇಶ್ ಭಾಯ್ ದರ್ಬಾರ್ ನ ದೃಶ್ಯವೊಂದು ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ಪುಣೆಯ ದಾಂಗೆ ಚೌಕ್ ಬಳಿ ಆಟೋ ರಿಕ್ಷಾದ ಮೇಲ್ಛಾವಣಿಯ ಮೇಲೆ ನಾಯಿಯೊಂದು ಅತ್ಯಂತ ಗತ್ತಿನಿಂದ ಸವಾರಿ ಮಾಡಿದ್ದು ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಚಲಿಸುವ ಆಟೋದ ಮೇಲೆ ಶಾಂತವಾಗಿ ಕುಳಿತಿರುವ ನಾಯಿ ವೀಕ್ಷಕರನ್ನು ರಂಜಿಸಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...