ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈರಲ್‌

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ ಬ್ರಷ್ ನೀಡಿದ ಬಾಲಕಿ: ಕ್ಯೂಟ್ ವಿಡಿಯೊ ಇಲ್ಲಿದೆ

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ಬ್ರಷ್ ನೀಡಿ ಮನಗೆದ್ದ ಪುಟ್ಟ ಬಾಲಕಿ

Viral Video: ದುರ್ಗಾ ದೇವಿಯ ಬಗ್ಗೆ ಪುಟ್ಟ ಹುಡುಗಿಯ ಮುಗ್ಧ ಭಕ್ತಿಯನ್ನು ತೋರಿಸುವ ವಿಡಿಯೊ ಗಮನ ಸೆಳೆದಿದೆ. ಈ ಲಕಿ ತಾನು ಪಡೆಯುವ ಎಲ್ಲವನ್ನೂ ಮೊದಲು ಮಾತಾ ರಾಣಿಗೆ (ದೇವಿ) ನೀಡುವ ಅಭ್ಯಾಸಹೊಂದಿದ್ದಾಳೆ. ಬಾಲಕಿಗೆ ಹೊಸದಾಗಿ ಟೂತ್‌ಬ್ರಷ್ ಮತ್ತು ಟೂತ್‌ಪೇಸ್ಟ್ ತಂದು ಕೊಟ್ಟಾಗ, ಅವಳು ತಕ್ಷಣ ಪೂಜಾ ಕೋಣೆಗೆ ಹೋಗಿ ದೇವಿಯ ವಿಗ್ರಹದ ಎದುರು ಇಟ್ಟಿದ್ದಾಳೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮತ್ತೊಂದು ಫೈಟರ್ ಜೆಟ್ ಎಫ್-15 ಪತನ: ವಿಡಿಯೊ ವೈರಲ್

ಅಮೆರಿಕದ ಮತ್ತೊಂದು ಫೈಟರ್ ಜೆಟ್ ಪತನ

ಅಮೆರಿಕದ ಮತ್ತೊಂದು ಫೈಟರ್ ಜೆಟ್ ಪತನವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಮಾನದಲ್ಲಿ ಹೊಗೆ ಆವರಿಸಿಕೊಂಡು ಬೆಂಕಿ ಕಾಣಿಸಿಕೊಂಡು ಧರೆಗೆ ಉರುಳಿರುವ ದೃಶ್ಯಗಳು ವೈರಲ್ ಆಗಿವೆ. ಪೈಲೆಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಜಿಗಿದಿದ್ದಾರೆ ಎನ್ನಲಾಗಿದೆ. ಅಮೆರಿಕದ ಫೈಟರ್ ಜೆಟ್ ಮೇಲೆ ತಾನು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ.

ಬೆಂಗಳೂರು ಅಲ್ಲ! ದೇಶದಲ್ಲೇ ಮೊದಲು ವಿದ್ಯುತ್ ಸಂಪರ್ಕ ಸಿಕ್ಕಿದ್ದು ಕರ್ನಾಟಕದ ಈ ನಗರಕ್ಕೆ

ಬೆಂಗಳೂರಿಗಿಂತ ಮೊದಲೇ ವಿದ್ಯುತ್ ಸಂಪರ್ಕ ಅಳವಡಿಸಿದ ಜಿಲ್ಲೆ ಗೊತ್ತಾ?

Viral News: ಭಾರತದ ವಿದ್ಯುತ್ ಇತಿಹಾಸದ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಬೆಂಗಳೂರಿನ ಬಗ್ಗೆಯೇ ಮಾತನಾಡುತ್ತಾರೆ. ಬೆಂಗಳೂರಿನ ಬೀದಿಗಳು ವಿದ್ಯುತ್‌ ದೀಪದಿಂದ ಬೆಳಗುವ ಮೂರು ವರ್ಷಗಳ ಮೊದಲೇ ಕರ್ನಾಟಕದ ಮತ್ತೊಂದು ಜಿಲ್ಲೆ ವಿದ್ಯುತ್‌ ಸಂಪರ್ಕ ಹೊಂದಿತ್ತು. ವಿಶೇಷ ಎಂದರೆ ದೇಶದಲ್ಲೇ ಮೊದಲು ವಿದ್ಯುತ್‌ ಸಂಪರ್ಕ ಪಡೆದ ಈ ಜಿಲ್ಲೆ ಯಾವುದು ಗೊತ್ತೆ?

ಬಾಲಕನ ತಟ್ಟೆಯಲ್ಲಿದ್ದ ರಸಗುಲ್ಲಾ ಕಸಿದ ವ್ಯಕ್ತಿ: ಛೀಮಾರಿ ಹಾಕಿದ ನೆಟ್ಟಿಗರು

ಮಗುವಿನ ತಟ್ಟೆಯಿಂದ ರಸಗುಲ್ಲಾ ಕಿತ್ತುಕೊಂಡ ವ್ಯಕ್ತಿ: ಕಣ್ಣೀರು ಹಾಕಿದ ಬಾಲಕ

Viral Video: ಮದುವೆ ಸಮಾರಂಭವೊಂದರಲ್ಲಿ ಬಾಲಕನೊಬ್ಬ ರಸಗುಲ್ಲಾ ಸವಿಯುತ್ತಿದ್ದಾಗ ವ್ಯಕ್ತಿಯೊಬ್ಬ ಕಿತ್ತುಕೊಂಡು ತಿಂದಿದ್ದಾನೆ. ಇದರಿಂದ ಬೇಸೆತ್ತ ಮಗು ಕಣ್ಣೀರಿಟ್ಟಿದೆ. ಆರಂಭದಲ್ಲಿ ನಗೆಪಾಟಲಿಗೆ ಈಡಾದ ಘಟನೆಯಂತೆ ಕಂಡರೂ ಮಗುವಿಗೆ ದುಃಖದ ಕ್ಷಣವಾಗಿ ಪರಿಣಮಿಸಿದೆ.‌ ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ವ್ಯಕ್ತಿಯ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

50 ಗಂಟೆಯ ಶಿಫ್ಟ್ ಮುಗಿಸಿ ಬಂದ ವೈದ್ಯೆಗೆ ಅತ್ತೆಯಿಂದ ಆರತಿಯ ಸ್ವಾಗತ: ವಿಡಿಯೊ ವೈರಲ್

50 ಗಂಟೆ ಕೆಲಸ ಮುಗಿಸಿ ಮನೆಗೆ ಬಂದ ಸೊಸೆಗೆ ಅತ್ತೆಯ ಭರ್ಜರಿ ಸ್ವಾಗತ

Viral Video: ಪ್ಲಾಸ್ಟಿಕ್ ಸರ್ಜನ್ ಒಬ್ಬರು 50 ಗಂಟೆಯವರೆಗೆ ಕರ್ತವ್ಯ ಮಾಡಿರುವ ಸುದ್ದಿ ವೈರಲ್ ಆಗಿದೆ. ಡಾ. ಸೌಮ್ಯ ಗುಪ್ತಾ ಪ್ಲಾಸ್ಟಿಕ್ ಸರ್ಜನ್ ಆಗಿದ್ದು, ಸತತ 50 ಗಂಟೆಗಳವರೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಾಗ ಅವರ ಅತ್ತೆ ಪ್ರೀತಿಯಿಂದ ಸ್ವಾಗತಿಸಿದ ವಿಡಿಯೊ ಜನರ ಮನಗೆದ್ದಿದೆ.

ಕೊಲ್ಹಾಪುರದ ದೇವಾಲಯದಲ್ಲಿ ದೇವಿಯ ಎದುರೇ ಪುರೋಹಿತರಿಂದ ಭಕ್ತರ ಮೇಲೆ ಹಲ್ಲೆ; ವಿಡಿಯೊ ವೈರಲ್‌

ದೇವಿಯ ಎದುರೇ ಭಕ್ತರ ಮೇಲೆ ಹಲ್ಲೆ ಮಾಡಿದ ಪುರೋಹಿತರು

ಮನಸ್ಸಿನ ಶಾಂತಿ ಕಂಡುಕೊಳ್ಳುವ ಸಲುವಾಗಿ ಜನರು ದೇವಾಲಯಕ್ಕೆ ಹೋಗುತ್ತಾರೆ. ಆದರೆ ಅಲ್ಲೇ ಅವರ ಮೇಲೆ ಹಲ್ಲೆ ನಡೆದರೆ ಅವರು ಇನ್ನೆಲ್ಲಿಗೆ ಹೋಗಬೇಕು? ಇಂತಹ ಒಂದು ಘಟನೆ ಮಹಾರಾಷ್ಟ್ರದ ಕೊಲ್ಹಾಪುರದದಲ್ಲಿ ನಡೆದಿದೆ. ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ಬೆಳಗ್ಗೆ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಮೇಲೆ ಪುರೋಹಿತರು ಹಲ್ಲೆ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಗಮನ ಸೆಳೆದ ಜರ್ಮನಿಯ ಪುಟಾಣಿ ಅಂಜನೇಯ: ವಿಡಿಯೊ ನೋಡಿ

ಅಯೋಧ್ಯೆಯಲ್ಲಿ ರಾಮನ ಜಪ ಮಾಡಿದ ಜರ್ಮನಿಯ ಪುಟಾಣಿ ಬಾಲಕ

Viral Video: ಜರ್ಮನಿಯ ಬಾಲಕನೊಬ್ಬ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾನೆ. ಬಿಳಿ ಬಣ್ಣದ ಉಡುಪು ಧರಿಸಿ ಹಣೆ ತುಂಬಾ ಕುಂಕುಮ ಧರಿಸಿ ಬಾಲಕ ಭಕ್ತಿಯಲ್ಲಿ ಮುಳುಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಿದೇಶದಲ್ಲಿ ನಿಯಮ ಉಲ್ಲಂಘಿಸಿದ ಭಾರತೀಯ ಪ್ರವಾಸಿಗರು; ನಮ್ಮ ಮಾನ ತೆಗೆಯಬೇಡಿ ಎಂದು ಕೈಮುಗಿದ ನೆಟ್ಟಿಗರು

ವಿದೇಶದಲ್ಲಿ ಭಾರತೀಯ ಪ್ರವಾಸಿಗರ ಬೇಜವಾಬ್ದಾರಿಯ ವರ್ತನೆ

Viral Video: ಬ್ರೆಜಿಲ್ ಮತ್ತು ಅರ್ಜೆಂಟೀನಾ ಗಡಿಯಲ್ಲಿರುವ ಇಗುವಾಜು ಜಲಪಾತದಲ್ಲಿ ಭಾರತೀಯ ಪ್ರವಾಸಿಗರ ವರ್ತನೆ ಬಗ್ಗೆ ದೂರುಗಳು ಕೇಳಿಬಂದಿವೆ. ಭಾರತೀಯ ಪ್ರವಾಸಿಗರು ಇಲ್ಲಿನ ಸ್ಥಳದ ನಿಯಮಗಳನ್ನು ಉಲ್ಲಂಘಿಸಿ ಇತರ ಪ್ರವಾಸಿಗರಿಗೆ ತೊಂದರೆ ನೀಡಿದ್ದಾರೆ. ಅವರ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಅಪಘಾತದ ನಂತರವೂ ತಾಳ್ಮೆಯಿಂದ ವರ್ತಿಸಿದ ಬೆಂಗಳೂರಿನ ಕಾರು ಚಾಲಕ: ಮಾನವೀಯತೆ ಇತರರಿಗೂ ಮಾದರಿ ಎಂದ ನೆಟ್ಟಿಗರು

ಬೆಂಗಳೂರು ಕಾರು ಮಾಲೀಕನ ತಾಳ್ಮೆಗೆ ನೆಟ್ಟಿಗರು ಫಿದಾ

Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತವೊಂದು ನಡೆದಿದ್ದು, ಅದಾದ ಬಳಿಕ ಅಪಘಾತಕ್ಕೀಡಾ ಕಾರು ಚಾಲಕ ತೋರಿಸಿದ ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಸವಾರಿ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದ್ದ. ಅದಾಗ್ಯೂ ಚಾಲಕನು ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡುವ ಬದಲು ತಾಳ್ಮೆಯಿಂದಲೇ ವರ್ತಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿ ಮಡಿಲಲ್ಲಿ ಆಟವಾಡಿದ ಮಗು ಯಾರು? ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಪುಟಾಣಿಯ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ

ಪ್ರಧಾನಿ ಮೋದಿಯ ಹೊಸ ಸ್ನೇಹಿತ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಗುವಿನೊಂದಿಗೆ ಆಟವಾಡುವ ಚಿತ್ರವೊಂದನ್ನು ಹಂಚಿಕೊಂಡರು. ಇದು ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಯಾರ ಮಗುವಿದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲಯಾಳಂ ನಟ-ರಾಜಕಾರಣಿ ಕೃಷ್ಣಕುಮಾರ್ ಅವರ ಮೊಮ್ಮಗನೊಂದಿಗೆ ಆಟವಾಡುವುದನ್ನು ತೋರಿಸಲಾಗಿದೆ.

ಲಂಡನ್‌ನಲ್ಲೂ ಭಾರತೀಯ ಆಟೋ ರಿಕ್ಷಾ ಪತ್ತೆ: ʼʼಗೇಮ್‌ ಓವರ್‌ʼʼ ಎಂದ ನೆಟ್ಟಿಗರು

ಲಂಡನ್ ಟ್ರಾಫಿಕ್‌ ನಡುವೆ ಭಾರತೀಯ ಆಟೋ ರಿಕ್ಷಾ ಪ್ರತ್ಯಕ್ಷ: ವಿಡಿಯೊ ವೈರಲ್

Viral Video: ಲಂಡನ್ ಅಂದಾಕ್ಷಣ ಅಲ್ಲಿನ ಐಷಾರಾಮಿ ಕಾರು, ಡಬಲ್ ಡೆಕ್ಕರ್ ಬಸ್ ಇತ್ಯಾದಿ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇತ್ತೀಚೆಗೆ ಕಪ್ಪು-ಹಳದಿ ಬಣ್ಣದ ಭಾರತೀಯ ಆಟೋ-ರಿಕ್ಷಾ ಟ್ರಾಫಿಕ್ ನಡುವೆ ಸಾಗುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ತಂಪು ಪಾನೀಯದ ಟ್ರಕ್ ಪಲ್ಟಿ: ಗಾಯಗೊಂಡ ಚಾಲಕನನ್ನು ನಿರ್ಲಕ್ಷಿಸಿ ವಸ್ತುಗಳನ್ನು ದೋಚಲು ಮುಂದಾದ ಜನ

ಜ್ಯೂಸ್ ಬಾಟಲಿಯ ಟ್ರಕ್ ಅಪಘಾತ: ಕೊಂಡೊಯ್ಯಲು ಮುಗಿಬಿದ್ದ ಜನ!

Viral Video: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಂಪು ಪಾನೀಯದ ಟ್ರಕ್ ವೊಂದು ಅಪಘಾತವಾಗಿದ್ದು ಜ್ಯೂಸ್ ಬಾಟಲಿಯನ್ನು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಚಾಲಕ ಹಾಗೂ ಕ್ಲೀನರ್ ಗೆ ತೀವ್ರ ಗಾಯಗಳಾಗಿದ್ದು ಜನ ಇವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಾಟಲಿಗಳನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರ ಮನಸ್ಥಿತಿ ಬಗ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ ಲ್ಯಾಂಬೋರ್ಗಿನಿ ಸ್ಟಂಟ್: ವಿಡಿಯೊ ವೈರಲ್

ಅಪಾಯಕಾರಿ ಸ್ಟಂಟ್: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ಎಂ.ಜಿ. ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಸಾರ್ವಜನಿಕರ ಸಂಚಾರ ಮಧ್ಯೆಯೇ ಅಪಾಯಕಾರಿ ಡ್ರಿಫ್ಟಿಂಗ್ ನಡೆಸಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಹೆಚ್ಚಾಗಿದೆ.

ಈದ್‌ ಆಚರಣೆ ವೇಳೆ ಕೋರ್ಮು ಸೌಹಾರ್ದತೆ; ಪಾರ್ಥನೆ ಸಲ್ಲಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂ ಸಹೋದರರು

ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂ ಸಹೋದರರು

Viral Video: ರಾಜಸ್ಥಾನದ ಜೈಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್ ಉಲ್-ಫಿತರ್‌ನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಹಿಂದೂಗಳು ಅವರ ಮೇಲೆ ಹೂವಿನ ಪಕಳೆ ಎಸೆಯುವ ಮೂಲಕ ಗಮನ ಸೆಳೆದರು. ಹಿಂದೂ-ಮುಸ್ಲಿಂ ಏಕತಾ ಸಮಿತಿಯ ನೇತೃತ್ವದಲ್ಲಿ ಈ ಅಪರೂಪದ ಸಂಗಮ ನಡೆಯಿತು.

Zameer Ahmed Khan: ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಅಪ್ಪನ ಹಾಸ್ಯ ಪ್ರಸಂಗ ನೆನೆದ ಮಗ ಝೈದ್‌ ಖಾನ್‌

ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಯಾಕೆ ಗೊತ್ತಾ?

ಟ್ರಾವೆಲ್​ ಬಿಜಿನೆಸ್‌ನಲ್ಲಿ ನಡೆಯುತ್ತಿದ್ದ ಮೋಸವನ್ನು ಪತ್ತೆಹಚ್ಚಲು ಸಚಿವ ಜಮೀರ್‌ ಅಹ್ಮದ್‌ ಬುರ್ಖಾ ಹಾಕಿಕೊಂಡು ಬಸ್‌ ಏರಿದ್ದರಂತೆ. ಆಗ ಏನು ಮಾಡಿದ್ದರು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಜಮೀರ್‌ ಅಹ್ಮದ್‌ ಅವರ ಪುತ್ರ ಝೈದ್‌ ಖಾನ್‌ ಮಾತನಾಡಿದ್ದಾರೆ.

"ಅಪ್ಪನ ಸಕ್ಕರೆ ಸೇವನೆ ಕಡಿಮೆ ಮಾಡಿಸಿ" ಪ್ರಧಾನಿಗೆ ಮನವಿ ಮಾಡಿದ ಯುವಕ; ಮೋದಿ ಪ್ರತಿಕ್ರಿಯೆ ಏನಿತ್ತು?

"ಅಪ್ಪನ ಸಕ್ಕರೆ ಸೇವನೆ ಕಡಿಮೆ ಮಾಡಿಸಿ" ಪ್ರಧಾನಿಗೆ ಮನವಿ ಮಾಡಿದ ಯುವಕ

ಇನ್ಫ್ಲುಯೆನ್ಸರ್ ಯುವರಾಜ್ ದುವಾ ತಮ್ಮ ತಂದೆಯ ಸಕ್ಕರೆ ಸೇವನೆ ಕಡಿಮೆ ಮಾಡಲು ಪ್ರಧಾನಿ ಮೋದಿಗೆ ಮನವಿ ಮಾಡಿದ ವೀಡಿಯೊಗೆ ಸ್ವತಃ ಮೋದಿಯವರೇ ಪ್ರತಿಕ್ರಿಯಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ

ತರಕಾರಿ ಮಾರುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ, ಐಷಾರಾಮಿ ಮನೆಗಳ ಮಾಲಕ; ಈ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಯುವಕ ಇಂದು ನೂರಾರು ಕೋಟಿ ರು. ಒಡೆಯ

Viral News: ತರಕಾರಿ ಮಾರುತ್ತಿದ್ದ ಯುವಕನೊಬ್ಬ ಇಂದು ಭಾರತ, ವಿದೇಶ ಸೇರಿ ಹಲವೆಡೆ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕಷ್ಟದ ಜೀವನದಿಂದ ಹಿಡಿದು ಆರ್ಥಿಕ ಯಶಸ್ಸಿನವರೆಗಿನ ಈ ವ್ಯಕ್ತಿಯ ಪ್ರಯಾಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಬಾಲಕ ಯಾರು ಎಂಬ ಕುತೂಹಲ ನಿಮಗೆ ಇರಬಹುದು. ಅವರೇ ಚಾರ್ಟರ್ಡ್ ಅಕೌಂಟೆಂಟ್ (CA) ಅಭಿಷೇಕ್ ಆರ್. ವೈಶ್ಯ ಆಗಿದ್ದಾರೆ. ಅವರ ಸಾಹಸಗಾಥೆಯ ವಿವರ ಇಲ್ಲಿದೆ.

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡ್ತಿದ್ದ ಯುವತಿಗೆ ಬುದ್ಧಿವಾದ ಹೇಳಿದ ಅಜ್ಜಿ; ವಿಡಿಯೊ ವೈರಲ್‌

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡುತ್ತಿದ್ದ ಯುವತಿಗೆ ಅಜ್ಜಿಯಿಂದ ಕ್ಲಾಸ್

ಬೆಂಗಳೂರು ಮೂಲದ ಯುವತಿ ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್‌ ಮಾಡುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಅಜ್ಜಿ ನೋಡಿದ್ದಾರೆ. ಯುವತಿಯ ಉಡುಗೆ ತೊಡುಗೆ ನೋಡಿದ ಅಜ್ಜಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಾವು ನಿತ್ಯ ಬಳಸುವ ಪ್ಲಾಸ್ಟಿಕ್‌ ಕವರ್‌ನಂತಹ ಬ್ಯಾಗ್‌ಗೆ 1.5 ಲಕ್ಷ ರುಪಾಯಿ! ಕಸದ ಚೀಲ ಎಂದ ನೆಟ್ಟಿಗರು

1.5 ಲಕ್ಷ ರುಪಾಯಿಯ ಬ್ಯಾಗ್: ಕಸದ ಚೀಲ ಎಂದು ಹಾಸ್ಯ ಮಾಡಿದ ನೆಟ್ಟಿಗರು

Viral Video: ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಲು ಹೆಚ್ಚಿನವರು ಆಸಕ್ತಿ ವಹಿಸುತ್ತಿದ್ದು, ಎಷ್ಟೇ ದುಬಾರಿಯಾದರೂ ಖರೀದಿಸುತ್ತಾರೆ. ಇದೀಗ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್‌ ಬಲೆನ್ಸಿಯಾಗ ವಿನ್ಯಾಸ ಮಾಡಿರುವ ಬ್ಯಾಗ್ ಭಾರಿ ವೈರಲ್ ಆಗಿದೆ. ಇದರ ಮೊತ್ತ ದುಬಾರಿಯಾಗಿದ್ದರೂ ನೋಡಲು ಮಾತ್ರ ಕಸದ ಚೀಲದಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಅತ್ಯಾಚಾರ ಆರೋಪಿ ಜ್ಯೋತಿಷಿಯೊಂದಿಗೆ ಕಾಣಿಸಿಕೊಂಡ ಮಹಾರಾಷ್ಟ್ರದ ಮಹಿಳಾ ಅಧಿಕಾರಿ; ಫೋಟೊ ವೈರಲ್

ಅತ್ಯಾಚಾರ ಆರೋಪಿಯ ಜತೆ ಮಹಿಳಾ ಆಯೋಗದ ಅಧ್ಯಕ್ಷೆ; ಫೋಟೊ ವೈರಲ್

ಅತ್ಯಾಚಾರ ಆರೋಪಿಯೊಂದಿಗೆ ಕಾಣಿಸಿಕೊಂಡ ಫೋಟೊ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಅಶೋಕ್ ಖರತ್ ಜತೆಗಿರುವ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ತಲೆಯ ಮೇಲೆ ಇಟ್ಟಿಗೆ ಹೊತ್ತು ಡ್ಯಾನ್ಸ್: ಕಾರ್ಮಿಕ ಮಹಿಳೆಯ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

ತಲೆಯ ಮೇಲೆ ಇಟ್ಟಿಗೆ ಹೊತ್ತು ಮಹಿಳೆಯ ಡ್ಯಾನ್ಸ್‌: ವಿಡಿಯೊ ನೋಡಿ

Viral Video: ಮಹಿಳಾ ಕಾರ್ಮಿಕರೊಬ್ಬರು ಶ್ರಮ ವಹಿಸಿ ದುಡಿಯುತ್ತಿದ್ದರೂ ತನ್ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ‌. ತಲೆಯ ಮೇಲೆ ಇಟ್ಟಿಗೆಗಳನ್ನು ಸಮತೋಲನಗೊಳಿಸುತ್ತ ಮಹಿಳೆ ಅದ್ಭುತ ನೃತ್ಯ ಮಾಡಿದ್ದಾರೆ. ಅವರು ವೇಗವಾಗಿ ನೃತ್ಯ ಮಾಡಿದ್ದರೂ ತಲೆಯ ಮೇಲಿರುವ ಇಟ್ಟಿಗೆಗಳು ಅಲುಗಾಡದೆ ತಟಸ್ಥವಾಗಿದ್ದವು.

ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ; ವಿಡಿಯೊ ನೋಡಿ

ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ: ವಿಡಿಯೊ ವೈರಲ್

Viral Video: ಕೇರಳಂನಲ್ಲಿ ಬಾಲಕನು ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನವನ್ನು ರಸ್ತೆ ದಾಟಿಸಿದ್ದು, ‍ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಯೂ ಜನದಟ್ಟಣೆಯಿಂದ ಕೂಡಿದ್ದು, ಅಪಾಯಕಾರಿಯಾಗಿದ್ದರೂ, ಬಾಲಕ ಇತರ ವಾಹನಗಳನ್ನು ನಿಯಂತ್ರಿಸಿ ನಾಯಿ ಸುರಕ್ಷಿತವಾಗಿ ದಾಟಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ದೇಶಕ್ಕೆ ತೈಲ ಬಿಕ್ಕಟ್ಟು ತಟ್ಟಿದರೂ ಕೇರಳದ ಈ ಕುಟುಂಬ ನಿರಾಳ: ನೀರಿಗಾಗಿ ಕೊರೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

ಕುಡಿಯುವ ನೀರಿಗಾಗಿ ಅಗೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

Viral News: ಕೇರಳದ ಕುಟುಂಬವೊಂದಕ್ಕೆ ಕೊಳವೆಬಾವಿಯಿಂದಾಗಿ ಉಚಿತವಾಗಿ ಅಡುಗೆ ಅನಿಲ ದೊರೆಯುತ್ತಿದೆ. ಹೌದು, ಕುಡಿಯುವ ನೀರಿಗಾಗಿ ಹಣ ವ್ಯಯಿಸಿ ತೋಡಿದ ಬಾವಿಯಲ್ಲಿ ಮಿಥೇನ್‌ ಪತ್ತೆಯಾಗಿದ್ದು, ಅಡುಗೆ ಅನಿಲದ ಸಮಸ್ಯೆ ನೀಗಿದೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ಉಳಿತಾಯವಾಗುತ್ತಿದೆ.

ನಾನು ಇನ್ನೂ ಬದುಕಿದ್ದೇನೆ: ಸಾವಿನ ವದಂತಿಗೆ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ

ನಾನು ಜೀವಂತವಾಗಿದ್ದೇನೆ: ಬೆಂಜಮಿನ್ ನೆತನ್ಯಾಹು

ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಿರುವ ತಮ್ಮ ಸಾವಿನ ವಿಡಿಯೊ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಎಐ ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿದರು.

Loading...