ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

31 ವರ್ಷದ ಜ್ಯೋತಿರಾದಿತ್ಯ ಸಿಂದ್ಯಾ ಪುತ್ರನ ಕಾಲಿಗೆರಗಿದ 73 ವರ್ಷದ ಬಿಜೆಪಿ ಶಾಸಕ; ವಿಡಿಯೊ ವೈರಲ್‌

ತಮಗಿಂತ 42 ವರ್ಷ ಕಿರಿಯನ ಕಾಲಿಗೆರಗಿದ ಬಿಜೆಪಿ ಶಾಸಕ

ಮಧ್ಯ ಪ್ರದೇಶದ ಶಿವಪುರಿಯ ಬಿಜೆಪಿ ಶಾಸಕ, 73 ವರ್ಷದ ದೇವೇಂದ್ರ ಕುಮಾರ್‌ ಜೈನ್‌ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಅವರ ಪುತ್ರ 31 ವರ್ಷದ ಮಹಾಆರ್ಯಮನ್ ಸಿಂದ್ಯಾ ಅವರ ಕಾಲಿಗೆ ಎರಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಜೆಟ್ ಫ್ರೆಂಡ್ಲಿ ಟ್ರಿಪ್ ಹೆಸರಿನಲ್ಲಿ ಬಾಂಗ್ಲಾದೇಶದಲ್ಲಿ ನರಕ‌ ಅನುಭವಿಸಿದ ವಿದೇಶಿ ಮಹಿಳೆ: ಲಾಡ್ಜ್‌ ಎಷ್ಟು ಕೆಟ್ಟದಾಗಿದೆ ನೋಡಿ

ಬಾಂಗ್ಲಾದೇಶ ಟ್ರಿಪ್‌ನಲ್ಲಿ ನರಕ‌ ಅನುಭವಿಸಿದ ವಿದೇಶಿ ಯುವತಿ

Viral Video: ಕಡಿಮೆ ಖರ್ಚಿನಲ್ಲಿ ಪ್ರಪಂಚ ಸುತ್ತಬೇಕು ಎಂದು ಬಾಂಗ್ಲಾದೇಶದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ನೆದರ್‌ಲ್ಯಾಂಡ್ಸ್‌ನ ಮಹಿಳೆಗೆ ಮರೆಯಲಾಗದ ಕಹಿ ಅನುಭವ ಆಗಿದೆ. ತಾನು ಇದುವರೆಗೆ ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಇದು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಬೀದಿ ನಾಯಿಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಾಲಕಿಯ ಮೇಲೆ ಶ್ವಾನ ದಾಳಿ; ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ

Street dog attacks: ಯಾವುದೇ ಪ್ರಚೋದನೆಯಿಲ್ಲದೆ ಬೀದಿ ನಾಯಿಯು ಪುಟ್ಟ ಬಾಲಕಿಯ ಮೇಲೆ ದಾಳಿ ನಡೆಸಿರುವ ಆಘಾತಕಾರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸ್ ಠಾಣೆ ಪ್ರದೇಶದ ಇಕ್ಬಾಲ್ ಗನ್ ಹೌಸ್ ಬಳಿ ಈ ಘಟನೆ ನಡೆದಿದೆ.

ಪೊಲೀಸರ ಎದುರೇ ಯುವಕರ ಅಪಾಯಕಾರಿ ವ್ಹೀಲಿಂಗ್‌: ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ

ಮೈಸೂರಿನಲ್ಲಿ ಪೊಲೀಸರ ಮುಂದೆಯೇ ಯುವಕರ ವ್ಹೀಲಿಂಗ್‌

Viral Video: ಮೈಸೂರಿನ ಜನ ನಿಬಿಡ ರಸ್ತೆಯಲ್ಲೇ ಯುವಕರ ಗುಂಪೊಂದು ಪುಂಡಾಟಿಕೆ ಮೆರೆದಿದ್ದು, ಪೊಲೀಸರ ಎದುರೇ ವ್ಹೀಲಿಂಗ್‌ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ವಾಹನಗಳು ಹತ್ತಿರದಲ್ಲಿಯೇ ಇದ್ದಾಗಲೂ ಯುವಕರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಟಿಕೆ ಮಾರುತ್ತಿದ್ದ ತಂದೆಯ ಕಾಲನ್ನು ತಬ್ಬಿ ಹಿಡಿದು ನಿದ್ರಿಸಿದ ಬಾಲಕ: ಕಣ್ಣಂಚು ಒದ್ದೆಯಾಗಿಸುವ ವಿಡಿಯೊ ಇಲ್ಲಿದೆ

ಬಡತನದ ಹೋರಾಟ: ತಂದೆಯ ಕಾಲುಗಳನ್ನೇ ಅಪ್ಪಿ ಮಲಗಿದ ಪುಟ್ಟ ಬಾಲಕ!

Viral Video: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಮಾರುಕಟ್ಟೆಯ ಜನಸಂದಣಿಯಲ್ಲಿ ವ್ಯಾಪಾರಕ್ಕಾಗಿ ಕೂಗುತ್ತಿರುವ ತಂದೆ, ಇವೆಲ್ಲದರ ನಡುವೆ ಪುಟ್ಟ ಮಗುವೊಂದು ತಂದೆಯ ಕಾಲನ್ನೇ ಗಟ್ಟಿಯಾಗಿ ಹಿಡಿದಿಟ್ಟು ರಸ್ತೆಯಲ್ಲೇ ಮಲಗಿರುವ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತಿದೆ.

Viral News: ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!

ಮಗುವಿನ ಶಾಲಾ ಬ್ಯಾಗ್ ಬರೋಬ್ಬರಿ 4.5 ಕೆ.ಜಿ! ತಂದೆಯ ಪೋಸ್ಟ್ ವೈರಲ್!

ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಗು ಒಂದು ಬರೋಬ್ಬರಿ 4.5 ಕೆಜಿ ತೂಕದ ಶಾಲಾ ಚೀಲವನ್ನು ಹೊತ್ತೊಯ್ಯಬೇಕಾಗಿದೆ ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಘಟನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದಿದೆ. ತಮ್ಮ ಮಗ 4.5 ಕೆಜಿ ತೂಕದ ಶಾಲಾ ಚೀಲ ಮತ್ತು ಟಿಫಿನ್ ಅನ್ನು ಹೊತ್ತೊಯ್ಯುತ್ತಾನೆ ಎಂದು ಮಗುವಿನ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಸದ್ಯ ವೈರಲ್ ಆಗುತ್ತಿದೆ.

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ಬಿಹಾರದ ವೈದ್ಯೆ ನುಸ್ರತ್ ಪರ್ವೀನ್

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ವೈದ್ಯೆ

hijab controversy: ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಹಿಜಾಬ್ ತೆಗೆಯಲ್ಪಟ್ಟ ಘಟನೆ ವಿವಾದಕ್ಕೆ ಕಾರಣವಾಗಿದ್ದ ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರು, ಆ ಘಟನೆಯ 23 ದಿನಗಳ ನಂತರ ಬುಧವಾರ ಬಿಹಾರದಲ್ಲಿ ತಮ್ಮ ಹುದ್ದೆಗೆ ಸೇರ್ಪಡೆಗೊಂಡಿದ್ದಾರೆ.

ವಾಯುಮಾಲಿನ್ಯಕ್ಕೆ ಬೇಸತ್ತು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ: ವಿಡಿಯೋ ವೈರಲ್!

ಮೈದಾನ ಬಿಟ್ಟು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ! ವಿಡಿಯೋ ವೈರಲ್

Viral Video: ಸಾಮಾನ್ಯವಾಗಿ ಜಾಗಿಂಗ್ ಮಾಡುವವರು, ಪಾರ್ಕ್ , ರೋಡ್ ಸೈಡ್ ನಲ್ಲಿ ಹೋಗು ವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕನು ಶಾಪಿಂಗ್ ಮಾಲ್ ಒಳಗೆ ಜಾಗಿಂಗ್ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ‌. ಮುಂಬೈನ ಹವಾಮಾನ ವೈಪರೀತ್ಯಗಳಿಂದ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದ ಹಿನ್ನೆಲೆ ಶಾಪಿಂಗ್ ಮಾಲ್ ನಲ್ಲಿ ಜಾಗಿಂಗ್ ಮಾಡು ವುದು ಉತ್ತಮ ಎಂದು ಆ ಯುವಕ ತಿಳಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಪ್ರಾಣದ ಹಂಗು ತೊರೆದು ವಿದ್ಯುತ್ ತಂತಿಯಲ್ಲಿ ಸಿಲುಕಿದ ಪಕ್ಷಿಯನ್ನು ರಕ್ಷಿಸಿದ ಯುವಕ: ಮನ ಗೆದ್ದ ವಿಡಿಯೊ ಇಲ್ಲಿದೆ

ಜೀವವನ್ನೇ ಪಣಕ್ಕಿಟ್ಟು ಹಕ್ಕಿಯನ್ನು ರಕ್ಷಿಸಲು ಮುಂದಾದ ಯುವಕ

Viral Video: ಯುವಕನೊಬ್ಬ ತನ್ನ ಜೀವದ ಹಂಗನ್ನೇ ತೊರೆದು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಯುವಕನ ಈ ಮಾನವೀಯ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಹೌದು, ವಿದ್ಯುತ್ ತಂತಿಯಲ್ಲಿ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಪಕ್ಷಿಯನ್ನು ಯುವಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಲು ಮುಂದಾಗಿರುವ ಈ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ.

10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ; ಪಿತೃಪ್ರಭುತ್ವದ ಹಕ್ಕು ನಿರಾಕರಿಸಿದ ತಂದೆ!

10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Woman gives birth son after 10 daughters: 37 ವರ್ಷದ ಮಹಿಳೆಯೊಬ್ಬರು ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣವು ದೇಶದ ಕೆಲವು ಭಾಗಗಳಲ್ಲಿ ಇನ್ನೂ ಮುಂದುವರಿದಿರುವ ಗಂಡು ಮಕ್ಕಳ ಮೇಲಿನ ಆದ್ಯತೆ ಮತ್ತು ತಾಯಿಯ ಆರೋಗ್ಯದ ಕುರಿತು ಗಂಭೀರ ಕಳವಳಗಳನ್ನು ಮತ್ತೆ ಮುಂದಿಟ್ಟಿದೆ.

ಮಧ್ಯರಾತ್ರಿ ಬಾಲ್ಕನಿಯಲ್ಲಿ ಲಾಕ್ ಆದ ಯುವಕರ ರಕ್ಷಣೆಗೆ ಬಂದ ಬ್ಲಿಂಕ್‌ಇಟ್ ಡೆಲಿವರಿ ಬಾಯ್

ಲಾಕ್ ಆದ ಯುವಕರನ್ನು ರಕ್ಷಿಸಿದ ಡೆಲಿವರಿ ಬಾಯ್

ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವಕರ ಗುಂಪೊಂದು ಅಜಾಗರೂಕತೆಯಿಂದ ತಮ್ಮದೇ ಮನೆಯ ಬಾಲ್ಕನಿಯಲ್ಲಿ ಲಾಕ್ ಆಗಿ ಇಡೀ ರಾತ್ರಿ ಸಿಲುಕಿಕೊಂಡಿದ್ದಾರೆ. ಬಳಿಕ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ ಬಂದು ರಕ್ಷಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ದೃಷ್ಟಿಗೊಂಬೆಯಾಗಿ ಬಳಸುತ್ತಿರೋ ದಪ್ಪ ಕಣ್ಣಿನ ಮಹಿಳೆ ಯಾರೆಂದು ಗುರುತಿಸಿದ ನೆಟ್ಟಿಗರು!

ದೃಷ್ಟಿಗೊಂಬೆಯಂತೆ ಬಳಸುತ್ತಿರೋ ದಪ್ಪ ಕಣ್ಣಿನ ಮಹಿಳೆ ಯಾರು ಗೊತ್ತಾ?

ದಪ್ಪ ದಪ್ಪ ಕಣ್ಣುಗಳಿಂದ ಹೆದರಿಸುವಂತೆ ನೋಡುವ ಮಹಿಳೆ ಫೋಟೊವನ್ನು ಬೆಂಗಳೂರು ಸೇರಿ ಸುತ್ತಮುತ್ತಲ ಭಾಗಗಳಲ್ಲಿ ದೃಷ್ಟಿಗೊಂಬೆಯಂತೆ ಬಳಸಲಾಗಿದೆ. ಈ ಮಹಿಳೆ ಯಾರು ಎಂಬ ಕುತೂಹಲ ಜನರಲ್ಲಿ ಮೂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಫೋಟೊದಲ್ಲಿನ ಮಹಿಳೆ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದೆ.

ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ ಕರೆ; ಅನುಮಾನಾಸ್ಪದ ಬ್ಯಾಗ್ ಬರಿಕೈಯಲ್ಲೇ ಹಿಡಿದು ಹೊರಟ ಪೊಲೀಸ್ ಅಧಿಕಾರಿ

ಅನುಮಾನಾಸ್ಪದ ಚೀಲ ಬರಿಕೈಯಲ್ಲೇ ಹಿಡಿದುಕೊಂಡು ಹೋದ ಪೊಲೀಸ್

Bomb threat: ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಪ್ಲಾಟ್‌ಫಾರ್ಮ್‌ನಲ್ಲಿದ್ದ ಅನುಮಾನಾಸ್ಪದ ಚೀಲವನ್ನು ಪೊಲೀಸ್ ಅಧಿಕಾರಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪ್ರಯಾಣಿಕರು ಭಯ ಭೀತರಾದರು. ಎಲ್ಲರನ್ನೂ ದೂರ ಹೋಗುವಂತೆ ಹೇಳಿದ ಅಧಿಕಾರಿ, ಚೀಲವನ್ನು ಕೋಲಿನ ಮೂಲಕ ತಳ್ಳುತ್ತಾ ದೂರ ತೆಗೆದುಕೊಂಡು ಹೋಗಿದ್ದಾರೆ.

ತನ್ನದೇ ಹುಟ್ಟುಹಬ್ಬ ಮರೆತ ಯೋಧ; ಕರೆ ಮಾಡಿ ಶುಭಾಶಯ ತಿಳಿಸಿದ ಮಗಳು: ಹೃದಯಸ್ಪರ್ಶಿ ವಿಡಿಯೊ ನೋಡಿ

ಮಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದಾಗ ಯೋಧ ಹೇಳಿದ್ದೇನು?

Viral Video: ಮಗಳು ಕರೆ ಮಾಡಿ ಶುಭಾಶಯ ತಿಳಿಸಿದಾಗಲೇ ಯೋಧರೊಬ್ಬರಿಗೆ ಇವತ್ತು ತಮ್ಮ ಹುಟ್ಟುಹಬ್ಬ ಎನ್ನುವುದು ನೆನಪಿಗೆ ಬಂದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಕರಗಿದೆ. ದೇಶಕ್ಕೋಸ್ಕರ ಜೀವವನ್ನೇ ತ್ಯಾಗ ಮಾಡುವ ಸೈನಿಕರು ತಮ್ಮ ವಿಶೇಷ ದಿನವನ್ನೇ ಮರೆತುಬಿಟ್ಟಿರುತ್ತಾರೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಕಾರು ಅಪಘಾತ; ಭಯಾನಕ ವಿಡಿಯೊ ಇಲ್ಲಿದೆ

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತ

ಹರಿಯಾಣದ ನುಹ್ ಸಮೀಪದ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಪಕ್ಕದತ್ತ ಜಾರಿ ಬಿದ್ದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಹೆದ್ದಾರಿಯಿಂದ ಜಾರಿದ ಬಳಿಕ ಕಾರು ಬದಿಯ ಖಾಲಿ ಪ್ರದೇಶದಲ್ಲಿ ನಿಂತಿರುವುದೂ ದೃಶ್ಯಗಳಲ್ಲಿ ದಾಖಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿರುವುದು ಮೊಬೈಲ್ ಕ್ಯಾಮರದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಈ ದುರ್ಘಟನೆಗೆ ಅತೀಯಾದ ವೇಗವೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ತಾಯಿಗೆ ಹುಷಾರಿಲ್ಲ ರಜೆ ಬೇಕು ಅಂದಿದ್ದಕ್ಕೆ ಮ್ಯಾನೇಜರ್ ಹೇಳಿದ್ದೇನು?

ತಾಯಿ ಆರೈಕೆಗೆ ರಜೆ ನೀಡದ ಮ್ಯಾನೇಜರ್; ಉದ್ಯೋಗಿ ರಾಜೀನಾಮೆ

Employee resignation: ತಾಯಿಯ ಆರೋಗ್ಯ ಸರಿಯಿಲ್ಲವೆಂದು ರಜೆ ಕೇಳಿದ್ದ ಉದ್ಯೋಗಿಗೆ, ಅವರನ್ನು ಆಶ್ರಯ ಗೃಹದಲ್ಲಿ ಇರಿಸಿ ಎಂದು ಮ್ಯಾನೇಜರ್ ಹೇಳಿದ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಕೆಲಸದ ಸ್ಥಳದಲ್ಲಿನ ಅಮಾನವೀಯ ವರ್ತನೆಯಿಂದ ಬೇಸತ್ತ ಉದ್ಯೋಗಿ ರಾಜೀನಾಮೆ ನೀಡಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೈದರಾಬಾದ್‌ ವಿಮಾನ ನಿಲ್ದಾಣದ ಆಹಾರ ಮಳಿಗೆಯ ಜೀರಾ ರೈಸ್‌ನಲ್ಲಿ ಜಿರಳೆ ಪತ್ತೆ

ವಿಮಾನ ನಿಲ್ದಾಣದ ಆಹಾರ ಮಳಿಗೆಯ ಜೀರಾ ರೈಸ್‌ನಲ್ಲಿ ಜಿರಳೆ ಪತ್ತೆ

Viral Video: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಆಹಾರ ಮಳಿಗೆಯಲ್ಲಿ ಜಿರಳೆ ಪತ್ತೆಯಾಗಿರುವ ದೃಶ್ಯ ಕಂಡು ಬಂದಿದೆ. ಸದ್ಯ ಈ ಘಟನೆಯೂ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ. ವಿಮಾನ ನಿಲ್ದಾಣದ ಒಳಗಿರುವ ಪ್ರಸಿದ್ಧ 'ನಿಲೋಫರ್' ಹೋಟೆಲ್ ಒಂದರಲ್ಲಿ ಜೀರಾ ರೈಸ್ ಮೇಲೆ ಜಿರಳೆ ಹರಿದಾಡಿದ್ದು ಈ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದುಬಾರಿ ಕಾರಿನ ಮೇಲೆಲ್ಲ ಗೀಚಿ ಕಿಡಿಗೇಡಿಗಳ ಅಟ್ಟಹಾಸ; ವೈರಲ್ ವಿಡಿಯೊ ಕಂಡು ನೆಟ್ಟಿಗರ ಆಕ್ರೋಶ

ದುಬಾರಿ ಕಾರನ್ನು ದ್ವಂಸಗೊಳಿಸಿದ ದುಷ್ಕರ್ಮಿ: ವಿಡಿಯೊ ವೈರಲ್

Viral Video: ಮನುಷ್ಯನ ಅಸೂಯೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಅಂದರೆ ತಾನು ಬೆಳೆಯಬಾರದು, ಬೇರೆಯವರನ್ನು ಬೆಳೆಸಬಾರದು ಎನ್ನುವ ಮಟ್ಟಕ್ಕೆ ತಲುಪಿದೆ‌. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊ ಇದಕ್ಕೆ ಉತ್ತಮ ಉದಾಹರಣೆ. ವ್ಯಕ್ತಿಯೊಬ್ಬರ ಕಾರನ್ನು ಕಿಡಿಗೇಡಿಗಳು ಅತಿ ಕ್ರೂರವಾಗಿ ಧ್ವಂಸಗೊಳಿಸಿದ ಘಟನೆ ನಡೆದಿದೆ. ಸದ್ಯ ಈ ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಟೆಗೆ 100 ಕಿ.ಮೀ. ವೇಗದಲ್ಲಿ ಕಾರ್‌ ಓಡಿಸುತ್ತ ನಿದ್ರಿಸಿದ ಚಾಲಕ; ವಿಡಿಯೊ ವೈರಲ್

ಕಾರ್‌ ವೇಗವಾಗಿ ಚಲಾಯಿಸುತ್ತ ನಿದ್ರಿಸಿದ ಚಾಲಕ

Viral Video: ವೇಗವಾಗಿ ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕ ನಿದ್ರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೋ, ಇಲ್ಲಿ ಹಿಂದಿ ಮಾತನಾಡು; ವಿದ್ಯಾರ್ಥಿಗೆ ಕಾಲೇಜು ವಾರ್ಡನ್‌ ಧಮ್ಕಿ, ವಿಡಿಯೊ ವೈರಲ್‌

ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೋ, ಇಲ್ಲಿ ಹಿಂದಿ ಮಾತನಾಡು; ವಾರ್ಡನ್‌ ಧಮ್ಕಿ

Bengaluru AMC College: ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಎಎಂಸಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು, ವಾರ್ಡನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾರ್ಡನ್‌ನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಕ್ಯಾಬ್‌ ಚಾಲಕನ ನಡೆಗೆ ನೆಟ್ಟಿಗರು ಫಿದಾ

ಮತ್ತಿನಲ್ಲಿದ್ದ ಯುವತಿಯನ್ನು ಮನೆಗೆ ತಲುಪಿಸಿದ ಕ್ಯಾಬ್‌: ವಿಡಿಯೊ ವೈರಲ್

Viral Video: ಇತ್ತೀಚೆಗೆ ಟ್ಯಾಕ್ಸಿ,ಕ್ಯಾಬ್‌ ಚಾಲಕರು ಪ್ರಯಾಣಿಕರ ಜತೆ ಅಸಭ್ಯವಾಗಿ ನಡೆದು ಕೊಳ್ಳುತ್ತಾರೆ, ಅಜಾಗರೂಕತೆಯಿಂದ ವಾಹನ ಚಾಲಾಯಿಸುತ್ತಾರೆ ಮತ್ತು ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅದಕ್ಕೆ ತದ್ವಿರುದ್ಧ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕುಡಿದ ನಶೆಯಲ್ಲಿದ್ದ ಯುವತಿಯನ್ನು ಸುರಕ್ಷಿತವಾಗಿ ಕ್ಯಾಬ್ ಚಾಲಕನೋರ್ವ ಮನೆಗೆ ತಲುಪಿಸಿದ್ದು, ಆತನ ಮಾನವೀಯತೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.

Viral Video: ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ?  ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ವಿಡಿಯೋ ವೈರಲ್‌

ಟೊಮೆಟೊ, ಮುಳ್ಳು ಸೌತೆ, ಕ್ಯಾರೆಟ್ , ಬ್ರಿಟ್ರೋಟ್ ಅನ್ನು ಸಲಾಡ್ ರೀತಿಯಲ್ಲಿ ತಿನ್ನುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಹಸಿ ಬದನೆಕಾಯಿ,ಕ್ಯಾಬೇಜ್, ಹಸಿ ಶುಂಠಿಯನ್ನು ಸೇವಿಸಿದ್ದ ಘಟನೆ ಮುಂಬೈ ಲೋಕಲ್ ರೈಲಿನಲ್ಲಿ ನಡೆದಿದೆ. ರೈಲಿನಲ್ಲಿ ಕುಳಿತುಕೊಂಡು ಈ ತರಕಾರಿಗಳನ್ನು ಆತ ಸೇವಿಸುತ್ತಿದ್ದರೆ ಉಳಿದವರು ಆತನನ್ನು ಅಚ್ಚರಿಯಿಂದ ಕಂಡಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕುಡಿದು ವಾಹನ ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದ ಆಟೋರಿಕ್ಷಾ ಚಾಲಕ; ಸತ್ತ ಹಾವು ಹಿಡಿದು ಪೊಲೀಸರಿಗೆ ಬೆದರಿಕೆ, ವಿಡಿಯೊ ವೈರಲ್

ಸತ್ತ ಹಾವು ಹಿಡಿದುಕೊಂಡು ಸಂಚಾರಿ ಪೊಲೀಸರಿಗೆ ಬೆದರಿಕೆ

ಕುಡಿದು ವಾಹನ ಚಲಾಯಿಸುತ್ತಿದ್ದ ಆಟೋರಿಕ್ಷಾ ಚಾಲಕನೊಬ್ಬನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ವಶಕ್ಕೆ ಪಡೆಯುತ್ತಿದ್ಧಂತೆ ಆತ ಸತ್ತ ಹಾವನ್ನು ಹಿಡಿದುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೊ ವೈರಲ್‌ ಆಗಿದೆ.

ಸಮುದ್ರದಲ್ಲಿ 3 ತಿಂಗಳಿದ್ದರೂ ಹಾಳಾಗದ ಜೆಬಿಎಲ್ ಸ್ಪೀಕರ್: ಗುಣಮಟ್ಟಕ್ಕೆ ಮನಸೋತ ನೆಟ್ಟಿಗರು

ಸಮುದ್ರದಲ್ಲಿ ಮೂರು ತಿಂಗಳು ತೇಲಿದ್ರೂ ಹಾಳಾಗದ ಜೆಬಿಎಲ್ ಸ್ಪೀಕರ್

Viral Video: ಸಮುದ್ರ ತೀರದಲ್ಲಿ ತಿಂಗಳುಗಟ್ಟಲೆ ಬಿದ್ದ ಉಪಕರಣವೊಂದು ಮತ್ತೆ ಕೆಲಸ ಮಾಡುವ ಮೂಲಕ ಎಲ್ಲರನ್ನೂ ದಂಗಾಗಿಸಿದೆ.‌ ಜೆಬಿಎಲ್ (JBL) ಬ್ಲೂಟೂತ್ ಸ್ಪೀಕರ್ ಮೂರು ತಿಂಗಳ ಕಾಲ ಸಮುದ್ರದಲ್ಲಿ ತೇಲುತ್ತಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸಿದೆ. ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ.

Loading...