ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಎನರ್ಜಿ ಡ್ರಿಂಕ್‌ ಕ್ಯಾನ್‌ನಲ್ಲಿ ಸತ್ತ ಇಲಿ ಪತ್ತೆ: ವಿಡಿಯೊ ನೋಡಿ ಕಿಡಿಕಾರಿದ ನೆಟ್ಟಿಗರು!

ಎನರ್ಜಿ ಡ್ರಿಂಕ್‌ ಒಳಗೆ ತೇಲುತ್ತಿರುವ ಸತ್ತ ಇಲಿ: ವಿಡಿಯೊ ನೋಡಿ!

Viral Video; ಎನರ್ಜಿ ಡ್ರಿಂಕ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದ್ದು ಮಹಿಳೆಯೊಬ್ಬರಿಗೆ ಮರೆಯಲಾಗದ ಅನುಭವ ವಾಗಿದೆ.. ಪಾನೀಯದೊಳಗೆ ಇಲಿಯೊಂದು ತೆಲುತ್ತಿರುವುದು ಕಂಡು ಮಹಿಳೆ ದಂಗಾಗಿ ಹೋಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಹಾಗೂ ಕಳಪೆ ಆಹಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...

ಭಜನಾ ಗಾಯಕನ ಮೇಲೆ ಹಣದ ಮಳೆಯನ್ನೇ ಸುರಿಸಿದ ಭಕ್ತರು: ಕಂತೆ ಕಂತೆ ನೋಟಿನ ವಿಡಿಯೋ ವೈರಲ್‌

ಭಜನಾ ಗಾಯಕನ ಮೇಲೆ ಹಣ ಸುರಿದ ಭಕ್ತರು: ವಿಡಿಯೊ ಇಲ್ಲಿದೆ!

Viral Video: ಪ್ರಸಿದ್ಧ ಗಾಯಕ ಕವಿರಾಜ್ ಜಿಗ್ಣೇಶ್ ಅವರು ಭಕ್ತಿ ಗೀತೆಗಳನ್ನು ಹಾಡುತ್ತಿದ್ದಾಗ ಭಕ್ತರು ಅವರ ಮೇಲೆ ನೋಟು ಗಳ ಅಟ್ಟಿಯನ್ನೇ ಮೈ ಮೇಲೆ ಸುರಿದಿದ್ದಾರೆ. ಗಾಯಕರು ನೋಟುಗಳ ರಾಶಿಯ ಹತ್ತಿರವೇ ಹಾಡು ಹಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ‌. ದೃಶ್ಯ ನೋಡಿದ ಅನೇಕರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ನಡೀತು ಸಿನಿಮೀಯ ದೃಶ್ಯ: ವಿದೇಶಿ ಮಹಿಳೆಯ ದುಪ್ಪಟ್ಟಾಗಾಗಿ ರೈಲ್ವೆ ಹಳಿ ಮೇಲೆ ಜಿಗಿದ ಯುವಕ!

ಮಹಿಳೆಯ ದುಪ್ಪಟ್ಟಾ ರಕ್ಷಣೆಗಾಗಿ ರೈಲ್ವೆ ಹಳಿ ಮೇಲೆ ಜಿಗಿದ ಯುವಕ!

Viral Video; ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ವಿದೇಶಿ ಪ್ರವಾಸಿಗೆ ಭಾರತೀಯ ಯುವಕನೊಬ್ಬ ನೆರವಾಗಿದ್ದು ಯುವಕನ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿದೇಶಿ ಪ್ರವಾಸಿಯೊಬ್ಬರ ದುಪ್ಪಟ್ಟಾವೊಂದು ರೈಲಿನ ಹಳಿ ಮೇಲೆ ಬಿದ್ದಿದ್ದು ತಕ್ಷಣವೇ ಯುವಕನೊಬ್ಬ ನೆರವಾಗಿ ದುಪ್ಪಟ್ಟ ವಾಪಸ್ಸು ನೀಡಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಶೌಚಾಲಯದ ಫ್ಲಶ್ ಒತ್ತುತ್ತಿದ್ದಂತೆ ಪ್ರತ್ಯಕ್ಷವಾದ ಕಾಳಿಂಗ ಸರ್ಪ: ಭಯಾನಕ ವಿಡಿಯೊ ವೈರಲ್

ರೆಸಾರ್ಟ್‌ ನ ಶೌಚಾಲಯದ ಒಳಗೆ ಕಾಳಿಂಗ ಸರ್ಪ ಪ್ರತ್ಯಕ್ಷ: ವಿಡಿಯೊ ವೈರಲ್

Viral News: ಇಲ್ಲೊಂದು ಸ್ನೇಹಿತರ ಗುಂಪು ರೆಸಾರ್ಟ್ ಗೆಂದು ತೆರಳಿದಾಗ ಅಲ್ಲಿ ನಡೆದ ಘಟನೆ ಜೀವನ ಪೂರ್ತಿ ಮರೆಯಲಾಗದಂತೆ ಮಾಡಿದೆ. ಹೌದು ಶೌಚಾಲಯದೊಳಗೆ ಕಾಳಿಂಗ ಸರ್ಪ ವೊಂದು ಪ್ರತ್ಯಕ್ಷ ವಾಗಿದ್ದು ಶೌಚಾಲಯದ ಫ್ಲಶ್ ಒತ್ತುತ್ತಿದ್ದಂತೆ ಹಾವು ಹೆಡೆ ಬಿಚ್ಚಿ ನಿಂತಿದೆ. ಈ ದೃಶ್ಯ ಕಂಡ ಅನೇಕರು ಇದೀಗ ಬೆಚ್ಚಿ ಬಿದ್ದಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಶಿಕ್ಷಕ: ಭಯಾನಕ ವಿಡಿಯೋ ವೈರಲ್‌

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಅಸ್ಸಾಂನ ಶಿಕ್ಷಕ!

Viral News: ಅಸ್ಸಾಂನ ಚರೈಡಿಯೋ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ತರಗತಿಯೊಳಗೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿದೆ. ಈ ದೌರ್ಜನ್ಯದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಶಿಕ್ಷಕನ‌ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನವಜಾತ ಶಿಶುವಿಗೆ ಉಸಿರು ನೀಡಿ ಪ್ರಾಣ ಉಳಿಸಿದ ವೈದ್ಯೆ; ನೆಟ್ಟಿಗರಿಂದ ಭಾರೀ ಪ್ರಶಂಸೆ!

ನವಜಾತ ಶಿಶುವಿಗೆ ಆರೈಕೆ ಮಾಡಿ ಸಮಯ ಪ್ರಜ್ಞೆ ಮೆರೆದ ವೈದ್ಯೆ!

Viral Video: ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯತೆ ಮೆರೆದಿರುವ ಘಟನೆಯೊಂದು ಸಹರಾನ್ ಪುರದಲ್ಲಿ ನಡೆದಿದೆ‌. ಮಹಿಳಾ ವೈದ್ಯರೊಬ್ಬರು ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುವನ್ನು ಉಳಿಸಲು ಬಾಯಿಯಿಂದ ಬಾಯಿ ಕೊಟ್ಟು ಉಸಿರಾಟ ನೀಡಿದ ಘಟನೆಯೊಂದು ನಡೆದಿದೆ‌. ಸದ್ಯ ವೈದ್ಯರ ಸಮಯ ಪ್ರಜ್ಞೆ ಯಿಂದ ಮಗುವಿನ ಪ್ರಾಣ ಉಳಿದಿದ್ದು ನೆಟ್ಟಿಗರು ವೈದ್ಯರ ಪ್ರಮಾಣಿಕತೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

ಮಗುವನ್ನು ರಕ್ಷಿಸಲು ಹೋಗಿ ಜೇನುನೊಣಗಳ ದಾಳಿಗೆ ತುತ್ತಾದ ನ್ಯಾಯಾಧೀಶೆ!  ಭಯಾನಕ ವಿಡಿಯೋ ವೈರಲ್‌

ಜೇನುನೊಣಗಳ ದಾಳಿಗೆ ಸಾವನ್ನಪ್ಪಿದ ಮೆಕ್ಸಿಕೋದ ನ್ಯಾಯಾಧೀಶೆ!

ಮೆಕ್ಸಿಕೋದ ಗ್ವಾಡಾಲುಪೆ ಕ್ರೀಡಾಂಗಣದಲ್ಲಿ ದಿಢೀರನೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತನ್ನ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋದ ನ್ಯಾಯಾಧೀಶೆ ವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಗುವನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಅವರ ದೇಹವನ್ನು ಜೇನುನೊಣಗಳು ತುಂಬಿ ಕೊಂಡಿದ್ದು ಅವುಗಳ ದಾಳಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಆತಂಕಕಾರಿ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ನೋಡ ನೋಡುತ್ತಲೇ  ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್‌

ನೋಡ ನೋಡುತ್ತಲೇ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಉತ್ತರ ಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ದೃಶ್ಯವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುವಂತಿದೆ.

ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್‌ ಕೊಹ್ಲಿ; ಮೈದಾನದಲ್ಲೇ ಮೆಚ್ಚುಗೆ

ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್‌ ಕೊಹ್ಲಿ

IPL 2026: ಈ ಅದ್ಭುತ ಕ್ಯಾಚ್‌ ಕಂಡ ವಿರಾಟ್‌ ಕೊಹ್ಲಿ ನೇರವಾಗಿ ಪಾಂಡೆ ಬಳಿ ಬಂದು ಅವರನ್ನು ಶ್ಲಾಘಿಸಿದರು. ಪಾಂಡೆಯ ಈ ಕ್ಯಾಚ್‌ ಮತ್ತು ಕೊಹ್ಲಿಯ ಮೆಚ್ಚುಗೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಈ ಪ್ರಸಿದ್ಧ ದೇವಸ್ಥಾನದಲ್ಲಿ ಭಕ್ತರಿಗೆ ನಾಣ್ಯಗಳೇ ಪ್ರಸಾದ: ವಿಡಿಯೋ ನೋಡಿ!

ಈ ದೇವಾಲಯದಲ್ಲಿ ನಾಣ್ಯಗಳೇ ದೇವರಿಗೆ ಪ್ರಸಾದ

Viral Video: ತಮಿಳುನಾಡಿನ ಈ ದೇವಾಲಯದಲ್ಲಿ ಮಾತ್ರ ಹಣವನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ದರ್ಶನಕ್ಕಾಗಿ ಸಾಲಿನಲ್ಲಿ ಹಲವಾರು ಜನರು ನಿಂತಿರುವ ದೃಶ್ಯ ಕಂಡು ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶ್ರೀ ವರಮ್ ತರುಮ್ ಮಾಳಿಗೈಪರೈ ಕರುಪ್ಪಸಾಮಿ ದೇವಾಲಯದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಈ ಆಚರಣೆ ನಡೆದಿದೆ..

ಗಿರ್ ಸಫಾರಿಯಲ್ಲಿ ಭಯಾನಕ ದೃಶ್ಯ: ಪ್ರವಾಸಿಗರ ಜೀಪ್ ಹತ್ತಿರವೇ ಸಿಂಹಿಣಿಯ ಭರ್ಜರಿ ಬೇಟೆ!

ಸಫಾರಿಗಾಗಿ ಬಂದ ಪ್ರವಾಸಿಗರ ಮುಂದೆಯೇ ಹಸುವನ್ನು ಬೇಟೆಯಾಡಿದ ಸಿಂಹಿಣಿ

Viral Video: ಗುಜರಾತ್ ನ ಗಿರ್ ಸಫಾರಿಯಲ್ಲಿ ಮೈ ನಡುಗಿಸುವಂತಹ ಘಟನೆಯೊಂದು ನಡೆದಿದೆ. ಸಫಾರಿಗಾಗಿ ಬಂದ ಪ್ರವಾಸಿಗರ ಮುಂದೆಯೇ ಹಸುವನ್ನು ಸಿಂಹಿಣಿಯೊಂದು ಬೇಟೆಯಾಡಿದೆ. ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

2027ರ ಒಳಗೆ ಅಮೆರಿಕ ನಾಶ, ಟ್ರಂಪ್ ಕೊನೆಯ ಅಧ್ಯಕ್ಷ: ಅಘಾತಕಾರಿ ಭವಿಷ್ಯ ನುಡಿದ ಜ್ಯೋತಿಷಿ

ಟ್ರಂಪ್ ‘ಕೊನೆಯ ಅಮೆರಿಕದ ಅಧ್ಯಕ್ಷ’; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Viral Video: ಮಧ್ಯ ಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ಯುದ್ದ ಸಂಭವಿಸಲಿದೆ ಎಂದು ಅನೇಕ ಜ್ಯೋತಿಷ್ಯರು ಈ ಹಿಂದೆ ಭವಿಷ್ಯ ನುಡಿದಿದ್ದರು‌‌. ಇದೀಗ ಡೊನಾಲ್ಡ್ ಟ್ರಂಪ್, ಭಾರತ, ಬಿಹಾರ, ಬಂಗಾಳ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯದ ಬಗ್ಗೆ ಜ್ಯೋತಿಷಿ ರೀನಾ ಶರ್ಮಾ ಈ ಹಿಂದೆ ನೀಡಿರುವ ಭವಿಷ್ಯ ವಾಣಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

96ನೇ ವಯಸ್ಸಿನಲ್ಲೂ ಶಾಲೆಗೆ ಸೇರಿ ದಾಖಲೆ ಬರೆದ ಅಜ್ಜಿ! ನೂರಕ್ಕೆ 98 ಅಂಕ ಪಡೆಯುವ ಮೂಲಕ‌ ಸಾಧನೆ!

ಸಾಧನೆಗೆ ವಯಸ್ಸಿನ ಹಂಗಿಲ್ಲ: 96 ನೇ ವಯಸ್ಸಿನಲ್ಲಿ 98 ಅಂಕ ಪಡೆದ ಅಜ್ಜಿ

Viral News: ಕೇರಳದ ಕಾರ್ತ್ಯಾಯಿನಿ ಅಮ್ಮ ಶಾಲೆಯನ್ನು ತೊರೆದ ಸುಮಾರು ಎಂಟು ದಶಕಗಳ ನಂತರ ಮತ್ತೆ ಶಿಕ್ಷಣ ಪಡೆದಿದ್ದು ಭಾರತದ ಅತ್ಯಂತ ಹಿರಿಯ ಸಾಕ್ಷರತಾ ಸಾಧಕರಲ್ಲಿ ಒಬ್ಬರಾಗಿದ್ದಾರೆ. 96 ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದ ಇವರು ನೂರಕ್ಕೆ 98 ಅಂಕ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ...

ಗರ್ಭಿಣಿಯರು ಮತ್ತು ರೋಗಿಗಳಿಗೆ ಉಚಿತ ಸೇವೆ: ಆಟೋ ಚಾಲಕನ ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ!

ಗರ್ಭಿಣಿಯರಿಗೆ ಉಚಿತವಾಗಿ ಆಟೋ ಸೇವೆ ನೀಡುವ ಚಾಲಕ: ನೆಟ್ಟಿಗರಿಂದ ಮೆಚ್ಚುಗೆ

Viral News: ಆಟೋ ಚಾಲಕರೊಬ್ಬರು ಮಾನವೀಯ ಕೆಲಸ ಎಲ್ಲರಿಗೂ ಸ್ಪೂರ್ತಿಯಾಗಿದೆ .ಒಡಿಶಾದ ಬೆಹ್ರಾಂಪುರ ನಗರದ 42 ವರ್ಷದ ಆಟೋ ಚಾಲಕ ಗಗನ್ ಪಾತ್ರಾ ಅವರು ಗರ್ಭಿಣಿಯರು ಮತ್ತು ರೋಗಿ ಗಳಿಗೆ ಉಚಿತವಾಗಿ ಆಟೋ ಸೇವೆಯನ್ನು ನೀಡುತ್ತಿದ್ದು ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತ ವಾಗುತ್ತಿದೆ.

ಅತ್ತ ಪ್ರಧಾನಿ ಮೋದಿ ತೈಲ ಬಳಕೆಯ ನಿಯಂತ್ರಣಕ್ಕೆ ಕರೆ ನೀಡಿದರೆ ಇತ್ತ ಬಿಜೆಪಿ ನಾಯಕರಿಂದ 200 ಬೆಂಗಾವಲು ಪಡೆಗಳ ವಾಹನಗಳೊಂದಿಗೆ ಮೆರವಣಿಗೆ!

200 ಬೆಂಗಾವಲು ಪಡೆಗಳ ವಾಹನಗಳೊಂದಿಗೆ ಬಿಜೆಪಿ ನಾಯಕರ ಮೆರವಣಿಗೆ

Narendra Modi: ಇಂಧನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಪಕ್ಷದವರೇ ಪಾಲಿಸುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ಬಿಜೆಪಿ ನಾಯಕರು ನೂರಾರು ಬೆಂಗಾವಲಯ ಪಡೆಗಳ ವಾಹನದೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿ ದುಂದು ವೆಚ್ಚ ಮಾಡಿದ್ದಾರೆ. ಸದ್ಯ ಬಿಜೆಪಿ ನಾಯಕರ ಈ ನಡೆ ದೇಶಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ.

ದೇವಸ್ಥಾನದಿಂದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಲಕ್ಷಣ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವಾಲಯದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಡಿಯೊ ವೈರಲ್

Viral Video: ಆಹಾರ ವಿತರಣಾ ಸಂಸ್ಥೆ ಝೊಮೆಟೊ ಸಮವಸ್ತ್ರ ಧರಿಸಿದ ಡೆಲಿವರಿ ಬಾಯ್ ಒಬ್ಬ ದೇವಸ್ಥಾನದ ನಳ್ಳಿಯನ್ನು ಕದ್ದಿದ್ದಾನೆ. ಇದರ ದೃಶ್ಯವು ಸಿಟಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಆತ ತಡರಾತ್ರಿ ಬೈಕ್‌ನಲ್ಲಿ ದೇವಸ್ಥಾನದ ಬಳಿ ಬಂದು ಕಳವು ಮಾಡಿದ್ದಾನೆ. ಸದ್ಯ ಇದರ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಡುರಸ್ತೆಯಲ್ಲಿಯೇ ನಾಯಿಯನ್ನು ಹೊಡೆದು ಕೊಂದ ಕಿಡಿಗೇಡಿಗಳು; ಮಾನವೀಯತೆಯನ್ನೇ ಮರೆತವರ ಕೃತ್ಯಕ್ಕೆ ಆಕ್ರೋಶ

ಬೀದಿ ನಾಯಿಯನ್ನು ಅಮಾನವೀಯವಾಗಿ ಕೊಂದ ದುಷ್ಕರ್ಮಿಗಳು

Viral Video: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯನ್ನು ಜನರ ಗುಂಪೊಂದು ಅತ್ಯಂತ ಕ್ರೂರವಾಗಿ ಹೊಡೆದು ಕೊಂದಿದೆ. ಕೃತ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರ ಮನಸ್ಥಿತಿ ಹಾಗೂ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಡಬ್ಲ್ಯು ಕಾರು, 1 ಕೋಟಿ ರುಪಾಯಿ ನಗದು; ದುಬಾರಿ ವರದಕ್ಷಿಣೆ ಹಸ್ತಾಂತರದ ವಿಡಿಯೊ ವೈರಲ್

ಕೋಟ್ಯಂತರ ರುಪಾಯಿ ಮೌಲ್ಯದ ವರದಕ್ಷಿಣೆ ವಿತರಣೆ

Viral Video: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಮದುವೆಯ ದೃಶ್ಯವೊಂದು ಎಲ್ಲರನ್ನು ಅಚ್ಚರಿಗೆ ದೂರಿದೆ. ಮದುವೆಯೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆ ನೀಡುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೂತ್ರ ವಿಸರ್ಜನೆ ತಡೆಗೆ ಬಳಸಿದ ಕನ್ನಡಿ ಅಸ್ತ್ರವೂ ವಿಫಲ; ಮೈಸೂರಲ್ಲಿ ಅಳವಡಿಸಿದ ಕನ್ನಡಿ ಎದುರೇ ಮೂತ್ರ: ಇಂತ ಜನಗಳು ಎಲ್ಲಿ ಸಿಗ್ತಾರೆ ಎಂದು ಕಾಲೆಳೆದ ನೆಟ್ಟಿಗರು

ಮೂತ್ರ ವಿಸರ್ಜನೆ ತಡೆಗೆ 'ಕನ್ನಡಿ' ಅಸ್ತ್ರ ಬಳಸಿದರೂ ಹಾವಳಿ ನಿಂತಿಲ್ಲ

Viral Video: ಸ್ವಚ್ಛ ನಗರ ಮೈಸೂರಿನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ವಿಶಿಷ್ಟ ಪ್ರಯೋಗ ಜಾರಿ ಮಾಡಿದೆ. ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆಗೆ ಸ್ಟೇನ್‌ಲೆಸ್ ಸ್ಟೀಲ್ ಕನ್ನಡಿ ಫಲಕ ಅಳವಡಿಸಿದೆ. ಆದರೆ ಈ ಕ್ರಮ ಜಾರಿಗೆ ಬಂದ ಕೆಲವು ದಿನಗಳಲ್ಲೇ ಕನ್ನಡಿಯ ಮುಂದೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವುದು ಕಂಡು ಬಂದಿದೆ.

ಪ್ರಧಾನಿ ಹೆಸರಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೇಳಿದ ಉದ್ಯೋಗಿ: ಇಮೇಲ್ ಮೂಲಕ ಮನವಿ

ಪ್ರಧಾನಿ ಹೆಸರಿನಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೋರಿ ಉದ್ಯೋಗಿಯ ಇಮೇಲ್

Viral News: ಸುಪ್ರಿಯಾ ಎಂಬ ಉದ್ಯೋಗಿ ಎಚ್‌ಆರ್‌ಗೆ ಕಳುಹಿಸಿದ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಇಮೇಲ್‌ನಲ್ಲಿ ಆಕೆ ಉಲ್ಲೇಖಿಸಿದ್ದು ವರ್ಕ್ ಫ್ರಮ್‌ ಹೋಂ ಆಯ್ಕೆ ಕೇಳಿದ್ದಾರೆ.

ಪುಣೆ- ಸುಪೌಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಪುಣೆ- ಸುಪೌಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಜನರಿಂದ ತುಂಬಿದ್ದ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆರ್‌ಪಿಎಫ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ನೆರವಿನಿಂದ ಅವರು ಆಸ್ಪತ್ರೆ ತಲುಪುವ ಮುನ್ನವೇ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೀಲ್ ಮಾಡಿದ ಥಮ್ಸ್ ಅಪ್ ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ; ವಿಡಿಯೋ ನೋಡಿ

ಥಮ್ಸ್ ಅಪ್ ಬಾಟಲಿಯೊಳಗೆ ಸತ್ತ ಹಲ್ಲಿ ಪತ್ತೆ: ನೆಟ್ಟಿಗರ ಆಕ್ರೋಶ

Viral Video; ಇದೀಗ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಇದು ಅನೇಕ ಬಳಕೆದಾರರನ್ನು ಆಘಾತ ಮತ್ತು ಕಳವಳಕ್ಕೆ ಒಳಪಡಿಸಿದೆ. ಆದರೆ ಘಟನೆಯ ನಿಖರವಾದ ಸ್ಥಳ ಇನ್ನು ತಿಳಿದು ಬಂದಿಲ್ಲ. ಬಳಕೆದಾರರು ಕಂಪನಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

'ಕ್ಯಾಂಪ್ ಬರ್ಗರ್’ನಲ್ಲಿ ಜಿರಳೆ ಪತ್ತೆ: ಸಿಬ್ಬಂದಿಯ ದುರಹಂಕಾರ ವರ್ತನೆಗೆ ನೆಟ್ಟಿಗರು ಕಿಡಿ!

'ಬರ್ಗರ್’ನಲ್ಲಿ ಜಿರಳೆ: ಆಹಾರ ಸುರಕ್ಷತೆ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು

Viral Video: ಪುಣೆಯ ಕ್ಯಾಂಪ್ ಬರ್ಗರ್ ಔಟ್ ಲೆಟ್ ನಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಬರ್ಗರ್ ನಲ್ಲಿ ಜಿರಳೆ ಪತ್ತೆಯಾಗಿದೆ. ಇದು ಆಹಾರ ನೈರ್ಮಲ್ಯದ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ. ಆಹಾರ ನೈರ್ಮಲ್ಯ ಮಾನದಂಡಗಳ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ..

Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಭಾರತದ ಗಡಿ ದಾಟುವುದು ಸುಲಭ ಎಂದ ಪಾಕಿಸ್ತಾನ ಪತ್ರಕರ್ತೆ: ವಿಡಿಯೋ ವೈರಲ್

ಭಾರತದ ಗಡಿ ದಾಟಿ ಸುಲಭವಾಗಿ ಹೋಗಿ ಬರಬಹುದು ಎಂದ ಪಾಕಿಸ್ತಾನ ಪತ್ರಕರ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಸೂರ್ ಬಳಿಯ ಗಂಡಾ ಸಿಂಗ್ ಬಳಿ ಭಾರತಕ್ಕೆ ಕಾಲಿಡುವುದು ಸಲಭ ಎಂದು ಪಾಕಿಸ್ತಾನ ಪತ್ರಕರ್ತೆ ಸನಾ ಖಾದಿರ್ ಅವರು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Loading...