ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಪುಸ್ತಕ ಖರೀದಿ ವಿಚಾರಕ್ಕೆ ಪೋಷಕರ ವಿರುದ್ಧ ಕಿರುಚಾಡಿದ ಪ್ರಾಂಶುಪಾಲೆ: ಇದೇನಾ ನೀವು ಕಲಿಸುವ ಸಂಸ್ಕಾರ ಎಂದು ಪ್ರಶ್ನಿಸಿದ ನೆಟ್ಟಿಗರು

ಪೋಷಕರಿಗೆ ಬೆದರಿಕೆ ಹಾಕಿದ ಶಾಲಾ ಪ್ರಾಂಶುಪಾಲೆ

Viral Video: ಶಾಲಾ ಪ್ರಾಂಶುಪಾಲೆಯೊಬ್ಬರು ಪೋಷಕರ ಮೇಲೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಶಾಲಾ ಪುಸ್ತಕ ಖರೀದಿ ವಿಚಾರವಾಗಿ ಮಗುವಿನ ಪೋಷಕರೊಬ್ಬರಿಗೆ ಶಿಕ್ಷಕಿ ಮನಬಂದಂತೆ ಬೈದಿದ್ದಾರೆ. ಸದ್ಯ ಈ ದೃಶ್ಯ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಗರಿಕ ಪ್ರಜ್ಞೆ ಮರೆತು ದೆಹಲಿ–ಬ್ಯಾಂಕಾಕ್ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು

ವಿಮಾನದಲ್ಲಿ ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು: ವಿಡಿಯೊವೈರಲ್‌

Viral Video: ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಗಲಾಟೆಯ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರಯಾಣಿಕರಿಬ್ಬರು ಭೀಕರವಾಗಿ ಹೊಡೆದಾಡಿಕೊಂಡಿದ್ದಾರೆ. ಮೊದಲಿಗೆ ಇಬ್ಬರಲ್ಲಿ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು ಮತ್ತೆ ಪರಿಸ್ಥಿತಿ ಉಲ್ಬಣಗೊಂಡಿದೆ.

"ಮರೆಯಾದ ಮಾನವೀಯತೆ": ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಾರದೆ ಜ್ಯೂಸ್ ಬಾಟಲಿ ದೋಚಿದ ಸಾರ್ವಜನಿಕರು

ಗಾಯಗೊಂಡ ಚಾಲಕನ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿದ ಸ್ಥಳೀಯರು

Viral Video: ಅಪಘಾತಕ್ಕೀಡಾದ ಚಾಲಕನ ಸಹಾಯಕ್ಕೆ ಧಾವಿಸದೇ ಜನರು ಜ್ಯೂಸ್ ಬಾಟಲಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್‌ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಚಾಲಕ ಗಾಯಗೊಂಡಿದ್ದು, ಅಲ್ಲಿನ ಜನ ಮಾತ್ರ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗದು ವಿತ್‌ಡ್ರಾ ಮಾಡಲು ಸಹೋದರಿಯ ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ತಂದ ವ್ಯಕ್ತಿ; ಒಡಿಶಾದಲ್ಲಿ ಮನಕಲಕುವ ಘಟನೆ

ಸಹೋದರಿಯ ಅಸ್ಥಿಪಂಜರವನ್ನು ಅಗೆದು ಬ್ಯಾಂಕಿಗೆ ತಂದ ವ್ಯಕ್ತಿ

Sister's Skeleton: ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ ಮೂರು ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿ, ಆಕೆಯ ಖಾತೆಯಿಂದ 19,300 ರುಪಾಯಿ ಪಡೆಯಲು ಮುಂದಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಅರಣ್ಯ ರಕ್ಷಣೆಗಾಗಿ ಜೆಸಿಬಿಯನ್ನೇ ಅಡ್ಡಗಟ್ಟಿದ ಗಜರಾಜ: ಇಲ್ಲಿದೆ ನೋಡಿ ಭಯಾನಕ ವಿಡಿಯೊ!

ಕಾಡನ್ನು ಉಳಿಸಿಕೊಳ್ಳಲು ಒಂಟಿ ಆನೆಯ ಹೋರಾಟ: ವಿಡಿಯೊ ನೋಡಿ!

Viral Video: ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ಮಾಡಿರುವ ಘಟನೆ ನಡೆದಿದೆ. ಆನೆಯೊಂದು ಬೃಹತ್ ಜೆಸಿಬಿ ಅಗೆಯುವ ಯಂತ್ರದ ಮುಂದೆ ನಿಂತು, ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಗೂಗಲ್ ಕ್ಯಾಂಪಸ್‌ನಲ್ಲಿ ತಾತನೊಂದಿಗೆ ಸಮಯ ಕಳೆದ ಮೊಮ್ಮಗ

Viral Video: ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ತೋರಿಸಿಕೊಟ್ಟಿದ್ದಾನೆ.

ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ತೀವ್ರ ಹಲ್ಲೆ: ವಿಡಿಯೊ ವೈರಲ್

ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಭಾರತೀಯ ಯುವಕನ ಮೇಲೆ ಹಲ್ಲೆ

Viral Video: ಭಾರತೀಯ ಯುವಕನ ಮೇಲೆ ಥೈಲ್ಯಾಂಡ್‌ನ ಪುಕೆಟ್‌ನಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವೈರಲ್ ವಿಡಿಯೊದಲ್ಲಿ ಜಿತೇಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ರೆಸ್ಟೋರೆಂಟ್‌ನೊಳಗೆ ಸಿಬ್ಬಂದಿ ಥಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ.

"ಫೀಸ್ ಕಟ್ಟಲು ಕೆಲಸ ಬೇಕು, ಕೆಲಸ ಮಾಡಲು ಕಾಲೇಜು ಹೋಗ್ಲೇಬೇಕು": ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

ಕೆಲಸ-ಶಿಕ್ಷಣ ನಡುವೆ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

Viral News: ಕಲಿಕೆಯ ಹಂಬಲದ ನಡುವೆ ವಿದ್ಯಾರ್ಥಿಯೊಬ್ಬಳು ಶಿಕ್ಷಣ ಮತ್ತು ಉದ್ಯೋಗ ಎರಡನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುವುದನ್ನು ತಿಳಿಸಿದ್ದಾಳೆ. ಕೆನಡಾಕ್ಕೆ ಹೋಗಿ ಕೆಲಸ ಮಾಡುವ, ಹೊಸ ದೇಶದಲ್ಲಿ ತಮ್ಮ ಅತ್ಯುತ್ತಮ ಜೀವನವನ್ನು ನಡೆಸುವ ಕನಸು ಯಾರು ಹೊಂದಿರುವುದಿಲ್ಲ? ಹೇಳಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿ ಜ್ಯೋತಿ ಖರಾಯತ್ ವಿದೇಶದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾಳೆ.

ಪೋಷಕರ ಬೇಜವಾಬ್ದಾರಿಯ ಪರಮಾವಧಿ: ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ: ವಿಡಿಯೊ ನೋಡಿ ನೆಟ್ಟಿಗರು ಕಿಡಿಕಿಡಿ

Viral Video: ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಲು ಎಷ್ಟೇ ಕ್ರಮ ಕೈಗೊಂಡರೂ ಹಲವಾರು ಇದನ್ನು ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಸ್ಕೂಟರ್ ನಲ್ಲಿ ಆರು ಮಕ್ಕಳು ಪ್ರಯಾಣ ಮಾಡಿದ್ದಾರೆ. ಈ ಆಘಾತಕಾರಿ ದೃಶ್ಯವು ಬೆಳಿಗ್ಗೆ 10:45 ರ ಸುಮಾರಿಗೆ ಪಾದರಾಯನಪುರ ಮುಖ್ಯ ರಸ್ತೆಯಲ್ಲಿ ಗೋರಿಪಾಳ್ಯ ಬಳಿ, ಟೋಟಲ್ ಎಂಜಿನಿಯರ್ ಆಟೋ ಗ್ಯಾಸ್ ಎದುರು ಸಂಭವಿಸಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ವಿಶ್ವದ ಅತೀ ದೊಡ್ಡ ಇಟಾಲಿಯನ್ ತಿರಾಮಿಸು ಇದು; ವಂದೇ ಭಾರತ್‌ ರೈಲಿಗಿಂತ ಉದ್ದ ಈ ಖಾದ್ಯ

3,000 ಮೊಟ್ಟೆಗಳಿಂದ ತಯಾರಿಸಲ್ಪಟ್ಟ ವಿಶ್ವದ ಅತಿ ಉದ್ದದ ತಿರಾಮಿಸು

Viral Video: ತಂದೂರಿ ಐಸ್ ಕ್ರೀಂ, ಹಣ್ಣುಗಳ ಮೊಮೊಸ್ ಹೀಗೆ ಹಲವು ವಿಚಿತ್ರ ಖಾದ್ಯಗಳು ಹಲವರನ್ನು ಅಚ್ಚರಿಗೊಳಿಸಿದೆ. ಇದೀಗ ರೈಲಿಗಿಂತಲೂ ಉದ್ದದ ತಿರಾಮಿಸು ಎಂಬ ಇಟಾಲಿಯನ್ ಸಿಹಿ ತಿಂಡಿಯ ವಿಡಿಯೊವೊಂದು ವೈರಲ್ ಆಗಿದೆ. 100ಕ್ಕೂ ಹೆಚ್ಚು ಬಾಣಸಿಗರು ಸೇರಿ ಈ ಖಾದ್ಯವನ್ನು ತಯಾರಿಸಿದ್ದಾರೆ.

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ; ಮೃತರ ಕೊನೆಯ ಆಸೆಯನ್ನು ವಿಶಿಷ್ಟವಾಗಿ ಪೂರೈಸಿದ ಕುಟುಂಬಸ್ಥರು

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ

Viral News: ತಮ್ಮ ಪ್ರೀತಿ ಪಾತ್ರರ ಅಂತ್ಯಕ್ರಿಯೆ ವೇಳೆ ಕುಟುಂಬವೊಂದು ಬಾರ್ ಡ್ಯಾನ್ಸರ್ಸ್ ಅನ್ನು ಕರೆಸಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಅಂತ್ಯಕ್ರಿಯೆಯು ಎಲ್ಲರನ್ನು ಬೆರಗುಗೊಳಿಸಿದೆ. ಮೃತರ ಕೊನೆಯ ಆಸೆಯನ್ನು ಪೂರೈಸಲು, ಕುಟುಂಬವು ಬಾರ್ ನೃತ್ಯಗಾರರನ್ನು ಆಹ್ವಾನಿಸಿತು ಎಂದು ಮೂಲಗಳು ತಿಳಿಸಿವೆ.

ಬೀಚ್‌ಗಳಲ್ಲಿ ಕಸದ ರಾಶಿ ನೋಡಿ ವಿದೇಶಿ ಪ್ರವಾಸಿಗ ಕಿಡಿ ಕಿಡಿ; ಭಾರತೀಯರಲ್ಲಿನ ಶಿಸ್ತಿನ ಕೊರತೆ ಬಗ್ಗೆ ಕಳವಳ

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಬಗ್ಗೆ ವಿದೇಶಿ ಪ್ರವಾಸಿಗ ಆಕ್ರೋಶ

Viral Video: ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಅಜಾಗರೂಕತೆಯಿಂದ ವರ್ತಿಸಿ ಕಸ ಹಾಕುವುದಕ್ಕೆ ವಿದೇಶಿ ಬ್ಲಾಗರ್ ಒಬ್ಬರು ಕಿಡಿಕಾರಿದ್ದಾರೆ. ಜನರು ಯಾಕೆ ಬುದ್ದಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈದ್ಯರ ಗ್ಲೌಸ್‌ ಗಟ್ಟಿಯಾಗಿ ಹಿಡಿದ ಆಗ ತಾನೇ ಹುಟ್ಟಿದ ಶಿಶು: ಗಮನ ಸೆಳೆದ ದೃಶ್ಯ ಇಲ್ಲಿದೆ

ವೈದ್ಯರ ಗ್ಲೌಸ್‌ ಹಿಡಿದ ನವಜಾತ ಶಿಶು: ಇಲ್ಲಿದೆ ಕ್ಯೂಟ್ ವಿಡಿಯೊ

Viral News: ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಅಮ್ಮನ ಲಾಲನೆ ಪಾಲನೆಗಾಗಿ ಕಾಯುತ್ತಿರುತ್ತದೆ‌. ಆದರೆ ಇಲ್ಲೊಂದು ಮಗು ವೈದ್ಯರ ಗ್ಲೌಸ್‌ ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಕ್ಷಣದಲ್ಲಿ ಆ ಮಗು ವೈದ್ಯರ ಗ್ಲೌಸ್‌ ಬಿಡದೆ ಹಿಡಿದಿರುವ ಅಪರೂಪದ ದೃಶ್ಯ ಎಲ್ಲರ ಮನ ಗೆದ್ದಿದೆ‌.

ದಿನಸಿ ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ಇದು ಕ್ಯೂಟ್‌ ದರೋಡೆ ಎಂದ ನೆಟ್ಟಿಗರು

ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ವಿಡಿಯೊ ವೈರಲ್

Viral Video: ಆನೆವೊಂದು ಅಂಗಡಿಯೊಂದಕ್ಕೆ ನುಗ್ಗಿ ತನಗೆ ಬೇಕಾದ ತಿಂಡಿ ಸವಿದು ಆರಾಮವಾಗಿ ನಡೆದುಹೋಗುತ್ತಿರುವ ಘಟನೆವೊಂದು ನಡೆದಿದೆ. ಆನೆ ತನ್ನ ಸೊಂಡಿಲನ್ನು ಬಳಸಿ, ಕಪಾಟಿನಿಂದ ತಿಂಡಿ ಎಗರಿಸಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ನಗು ತರಿಸಿದೆ.

ನಗರಗಳಿಗಿಂತಲೂ ಹೆಚ್ಚು ಸೌಕರ್ಯ ಇರುವ ಭಾರತದ ಸ್ಮಾರ್ಟ್ ಹಳ್ಳಿಗಳು: ಎಲ್ಲಿವೆ ಗೊತ್ತಾ?

ನಗರ ಪ್ರದೇಶಕ್ಕಿಂತಲೂ ಹೆಚ್ಚಿನ ಸೌಲಭ್ಯ ಇರುವ ಹಳ್ಳಿಗಳು ಯಾವುವು ಗೊತ್ತೆ?

Viral News: ಸಾಮಾನ್ಯವಾಗಿ 'ಸ್ಮಾರ್ಟ್ ಸಿಟಿ' ಎಂದಾಗ ಅತೀ ಎತ್ತರದ ಕಟ್ಟಡಗಳು, ಮೂಲಭೂತ ಸೌಕರ್ಯಗಳು ಇವೆಲ್ಲವು ಕಣ್ಣ ಮುಂದೆ ಬರುತ್ತವೆ.‌ ಆದರೆ ಭಾರತದ ಕೆಲವೊಂದು ಹಳ್ಳಿಗಳು ನಗರಗಳನ್ನೇ ಮೀರಿಸುವಂತೆ ಹೊಸ ಪಥದಲ್ಲಿ ಸಾಗುತ್ತಿವೆ. ಡಿಜಿಟಲ್ ವ್ಯವಹಾರ, ಸೌರಶಕ್ತಿಯಿಂದ ಹಿಡಿದು ಸುಗಮ ಮೂಲಭೂತ ಸೌಕರ್ಯಗಳೊಂದಿಗೆ ಭಾರತೀಯ ಈ ಹಳ್ಳಿಗಳು ಸ್ಮಾರ್ಟ್ ಆಗಿ ಕಾಣುತ್ತಿದೆ. ಯಾವುವು ಆ ಹಳ್ಳಿಗಳು?

ʼʼಐಸ್‌ ಕ್ರೀಂ ಬೇಕ ಅಣ್ಣ?ʼʼ:  ಸುಡುವ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

ರಸ್ತೆಬದಿಯ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಹಾಗೂ ಬೈಕ್ ರೈಡರ್ ಒಬ್ಬರು ರಸ್ತೆ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸುವ ಮೂಲಕ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ;  ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌ ಬಂಧನ

ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮುಖ್ಯಸ್ಥ ಕಾಶ್ ಪಟೇಲ್ ಅವರನ್ನು ಬಂಧಿಸಲಾಗಿದೆ. ಸ್ನೇಹಿತರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರೊಂದಿಗೆ ಅವರು ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ತಾನು ಬಂಧನಕ್ಕೆ ಒಳಗಾಗಿದ್ದೆ ಎಂದು ಅವರು ತಿಳಿಸಿದ್ದಾರೆ.

ಮನೆಯ ಗೇಟ್‌ಗೆ ಕಟ್ಟಿದ ನಾಯಿಗೆ ದೊಣ್ಣೆಯಿಂದ ಹೊಡೆದ ಅಪ್ಪ-ಮಗ; ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆ

ಕಟ್ಟಿರುವ ನಾಯಿಯನ್ನು ಥಳಿಸಿದ ದುಷ್ಕರ್ಮಿಗಳು

ಮನೆಯ ಗೇಟ್ ಗೆ ಕಟ್ಟಿದ್ದ ನಾಯಿಗೆ ಚಿತ್ರಹಿಂಸೆ ನೀಡಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ.

ಬಿಸಿಲಿಗೆ ತತ್ತರಿಸಿದ್ದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ; ವಿಡಿಯೋ ನೋಡಿದ್ರೆ ಹೃದಯ ತುಂಬಿ ಬರುತ್ತೆ

ಬಿಸಿಲ ಬೇಗೆಗೆ ಬೆಂದು ಹೋದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ

Viral Video: ದೆಹಲಿಯ ಅಂಗಡಿ ಮಾಲೀಕರೊಬ್ಬರು ಮಾನವೀಯತೆ ಮೆರೆದಿರುವ ದೃಶ್ಯ ಕಂಡು ಬಂದಿದೆ. ಅಂಗಡಿ ಮಾಲೀಕನು ತನ್ನ ಅಂಗಡಿಯೊಳಗೆಯೇ ಬೀದಿ ನಾಯಿಗಳಿಗೆ ಆಶ್ರಯ ಪಡೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಹೊಸ ಬಂಗಲೆಯನ್ನು "ಶೀಶ್ ಮಹಲ್ 2" ಎಂದು ಕರೆದ ಬಿಜೆಪಿ; ಆಪ್ ಕೆಂಡಾಮಂಡಲ

"ಶೀಶ್ ಮಹಲ್ 2" ಬಿಜೆಪಿ- ಆಪ್ ನಡುವೆ ವಾಗ್ವಾದ

ಸಂಸದ ರಾಘವ್ ಚಡ್ಡಾ ಅವರು ಬಿಜೆಪಿ ಸೇರಿದ ಬಳಿಕ ಆಪ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಆರಂಭವಾಗಿದೆ. ದೆಹಲಿ ಉಪಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಹೊಸ ಬಂಗಲೆಯ ಚಿತ್ರವನ್ನು ಹಂಚಿಕೊಂಡಿದ್ದು, ಇದನ್ನು ಬಿಜೆಪಿ "ಶೀಶ್ ಮಹಲ್ 2" ಎಂದು ಕರೆದಿದೆ. ಇದರಿಂದ ಕೆರಳಿದ ಆಪ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಎಲ್ಲರೆದುರೇ ಯುವಕ-ಯುವತಿಯ ರೊಮ್ಯಾನ್ಸ್; ಮಣಿಪಾಲದಲ್ಲಿ ಕಂಡುಬಂದ ದೃಶ್ಯಕ್ಕೆ ನೆಟ್ಟಿಗರು ಕಿಡಿಕಿಡಿ

ಸಾರ್ವಜನಿಕ ಸ್ಥಳದಲ್ಲೇ ಯುವಕ-ಯುವತಿಯ ರೊಮ್ಯಾನ್ಸ್: ವಿಡಿಯೊ ವೈರಲ್‌

Viral Video: ಕೆಲ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರೇಮಿಗಳು ಮೈಮರೆತು ಚುಂಬಿಸುವುದು, ರೈಲಿನಲ್ಲಿ ಪರಸ್ವರ ಅಪ್ಪಿಕೊಳ್ಳುವುದು ಹೀಗೆ ನಾನಾ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ಮಣಿಪಾಲದಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿಯೇ ರೊಮ್ಯಾನ್ಸ್‌ ಮಾಡಿದೆ.

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು; ಕಾಗದ ಪತ್ರ, ಲಾಕರ್‌ ಕೀ ಗತಿ ಏನು?

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು

Agra Bank Collapse: ಗುಡಿಸಲಿಗೆ ಬೆಂಕಿ ಬಿದ್ದಾಗ ಅದರಿಂದಲೇ ಬೀಡಿ ಹಚ್ಚಿಕೊಂಡರು ಎನ್ನುವ ಮಾತಿದೆ. ಅಂದರೆ ಒಬ್ಬರು ಕಷ್ಟದಲ್ಲಿದ್ದಾಗ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುವವರ ಕುರಿತು ಹೇಳುವ ಮಾತು ಇದು. ಈ ವಿಚಾರ ಈಗ್ಯಾಕೆ ಎಂದರೆ ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ ಕುಸಿದು ಬಿದ್ದುದ್ದು, ಜನರು ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಪ್ರವಾಸಿಗರೇ ಎಚ್ಚರ! ಗೋವಾದಲ್ಲಿ 'ಗಿಫ್ಟ್ ಕೂಪನ್' ಹೆಸರಲ್ಲಿ ನಡೆಯುತ್ತಿದೆ ಮಹಾಮೋಸ: ಏನಿದು ಪ್ರಕರಣ?

ಗೋವಾದಲ್ಲಿ ಗಿಫ್ಟ್ ಕೂಪನ್ ಹೆಸರಿನಲ್ಲಿ ಪ್ರವಾಸಿಗರಿಗೆ ವಂಚನೆ

Viral Video: ಗೋವಾದಲ್ಲಿ ಪ್ರವಾಸಿಗರಿಗೆ ಗಿಫ್ಟ್ ಕೂಪನ್ ಹೆಸರಲ್ಲಿ ವಚನೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಸ್ಥಳೀಯರು ಈ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಗರಣವನ್ನು ಸಾರ್ವಜನಿಕರು ಬಹಿರಂಗಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

''ಭೂಮಿ ಸ್ಥಿರವಾಗಿದೆʼʼ ಎನ್ನುವ ಮೂಲಕ ವಿಜ್ಞಾನಕ್ಕೇ ಸವಾಲೆಸಿದ ಮುಸ್ಲಿಂ ವಿದ್ವಾಂಸ; ಮಕ್ಕಳನ್ನು ತಪ್ಪು ದಾರಿಗೆಳೆಯಬೇಡಿ ಎಂದ ನೆಟ್ಟಿಗರು

ಭೂಮಿ ಸ್ಥಿರವಾಗಿದೆ; ವಿಜ್ಞಾನ ಸುಳ್ಳು ಎಂದ ಮುಸ್ಲಿಂ ವಿದ್ವಾಂಸ

Viral Video: ವಸ್ತು ಪ್ರದರ್ಶನ, ವಿಜ್ಞಾನ ಮಾಡೆಲ್ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮುಂದಾಗುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಮುಸ್ಲಿಂ ವಿದ್ವಾಂಸವೊಬ್ಬರು ವಿದ್ಯಾರ್ಥಿಗಳಿಗೆ "ವಿಜ್ಞಾನ ಸುಳ್ಳು, ಭೂಮಿ ಚಲಿ ಸುವುದಿಲ್ಲ" ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Loading...