ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಪತ್ರಕರ್ತೆ ಜತೆ ಅನುಚಿತ ವರ್ತನೆ: ವಿಡಿಯೊ ವೈರಲ್

ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಪತ್ರಕರ್ತೆ ಜತೆ ಅನುಚಿತ ವರ್ತನೆ

Viral Video: ಮಾರ್ಚ್‌ 8ರಂದು ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳ ಜಯ ಗಳಿಸಿ 3ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಸಂಭ್ರಮಾಚರಣೆ ನಡುವೆ ಕ್ರೀಡಾ ಪತ್ರಕರ್ತೆಯೊಬ್ಬರಿಗೆ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ವರದಿ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಕ್ರೀಡಾ ಪತ್ರಕರ್ತೆ ಆರೋಪಿಸಿದ್ದಾರೆ.

10ನೇ ತರಗತಿ ಪರೀಕ್ಷೆ ಮುಗಿಸಿ ಬಂದ ಮಗನಿಗೆ ಥಾರ್ ಎಸ್‌ಯುವಿ ಗಿಫ್ಟ್; ಪೋಷಕರ ಶೋಕಿಗೆ ನೆಟ್ಟಿಗರು ಕಿಡಿಕಿಡಿ

ಮಗ ಪರೀಕ್ಷೆ ಬರೆದ ಖುಷಿಯಲ್ಲಿ ಥಾರ್ ಜೀಪ್‌ ಗಿಫ್ಟ್ ನೀಡಿದ ಪೋಷಕರು

Viral Video: ಮಕ್ಕಳು ಹೆಚ್ಚಿನ ಅಂಕವನ್ನು ಪಡೆದಾಗ ಪೋಷಕರು ಮಕ್ಕಳಿಗೆ ಗಿಫ್ಟ್ ನೀಡುವುದು ಸಾಮಾನ್ಯ. ಆದರೆ ಇಲ್ಲಿ ಮಗ ಪರೀಕ್ಷೆ ಮುಗಿಸಿ ಬಂದಾಗಲೇ ಲಕ್ಷಾಂತರ ರುಪಾಯಿ ಮೌಲ್ಯದ 'ಮಹೀಂದ್ರಾ ಥಾರ್ ರಾಕ್ಸ್' ಜೀಪನ್ನು ಉಡುಗೊರೆಯಾಗಿ ನೀಡಿ ಪೋಷಕರು ಅಚ್ಚರಿ ಮೂಡಿಸಿದ್ದಾರೆ.

ಬಾಡಿಗೆ ದರ ಕೇಳಿ ನೆಟ್ಟಿಗರೇ ಶಾಕ್; 2BHK ಮನೆಗೆ ತಿಂಗಳಿಗೆ 1ಲಕ್ಷ ಬಾಡಿಗೆ ಪಾವತಿಸುತ್ತಿರುವ ಯುವತಿ!

ಮುಂಬೈನಲ್ಲಿ 2BHK ಗೆ 1 ಲಕ್ಷ ರೂ. ಬಾಡಿಗೆ ಪಾವತಿಸುವ ಯುವತಿ: ವಿಡಿಯೊ ನೋಡಿ

Viral Video: ಆಧುನಿಕ ಜೀವನಶೈಲಿ, ಸಾರಿಗೆ, ಮೂಲ ಸೌಕರ್ಯ ಹೀಗೆ ಎಲ್ಲ ವ್ಯವಸ್ಥೆ ನಗರ ಪ್ರದೇಶ ದಲ್ಲಿ ಇರುವುದರಿಂದ ದುಬಾರಿಯಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರು, ಮುಂಬೈ ನಂತಹ ಪ್ರದೇಶದಲ್ಲಿ ಜೀವನ ವೆಚ್ಚ ದರವೇ ದುಪ್ಪಟ್ಟು ಆಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಯುವತಿಯರು ತಮ್ಮ ಬಾಡಿಗೆ ಮನೆಯ ವಿಡಿಯೊ ಶೇರ್ ಮಾಡಿದ್ದು ಇದರ ವೆಚ್ಚ ಎಷ್ಟು ಎಂದು ತಿಳಿಸಿದ್ದಾರೆ. ಈ ಬಾಡಿಗೆ ದರವನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ...

ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ನಿರಾಕರಣೆ; ರಟ್ಟಿನ ಪೆಟ್ಟಿಗೆಯಲ್ಲಿ ಮಗುವಿನ ಶವ ಹೊತ್ತೊಯ್ದ ತಂದೆ

ಆಸ್ಪತ್ರೆ ನಿರ್ಲಕ್ಷ್ಯ ಆರೋಪ: ರಟ್ಟಿನ ಪೆಟ್ಟಿಗೆಯಲ್ಲಿ ಶವ ಹೊತ್ತೊಯ್ದ ತಂದೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಅಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಆರೋಪದ ನಡುವೆ ಮನಕಲಕುವ ಘಟನೆ ನಡೆದಿದೆ. ನವಜಾತ ಮಗು ಮೃತಪಟ್ಟ ನಂತರ, ಗ್ರಾಮಕ್ಕೆ ಮರಳಲು ವಾಹನದ ವ್ಯವಸ್ಥೆ ಸಿಗದ ಕಾರಣ ತಂದೆ ಮಗುವಿನ ಶವವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

ಮಹಿಳಾ ದಿನದಂದು ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ! ವಿಡಿಯೊ ವೈರಲ್

ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ

Viral Video: ಹಿಂದಿನ ಕಾಲದಲ್ಲಿ ಹುಡುಗಿಯರು 18 ವರ್ಷ ವಯಸ್ಸು ಹಾಗೆಯೇ ಹುಡುಗರಿಗೆ 21 ವರ್ಷವನ್ನು ತಲುಪಿದಾಗ ಮದುವೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಹೀಗೆ ನಾನಾ ಕಾರಣದಿಂದ ಯುವ ಜನರು ಹಿಂಜರಿಯುತ್ತಿದ್ದಾರೆ‌. ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಮದುವೆ ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿ ಕೊಂಡಿರುವ ಘಟನೆಯೊಂದು ವರದಿಯಾಗಿದೆ.

ಮೊದಲ ಬಾರಿಗೆ ನವಜಾತ ಶಿಶುವನ್ನು ತನ್ನ ಕೈಗಳಲ್ಲಿ ಹಿಡಿದ ತಂದೆಯ ರಿಯಾಕ್ಷನ್‌ ಹೇಗಿತ್ತು? ವೈರಲ್‌ ಆದ ವಿಡಿಯೋ ನೋಡಿ

ಮೊದಲ ಬಾರಿಗೆ ಮಗುವನ್ನು ಬರಮಾಡಿಕೊಂಡ ತಂದೆ: ಹೃದಯಸ್ಪರ್ಶಿ ವಿಡಿಯೊ!

Viral Video: ತಂದೆಯೂ ತನ್ನ ಕೈಗಳಲ್ಲಿ ಮೊದಲ ಬಾರಿಗೆ ಅಪ್ಪಿಕೊಳ್ಳುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ತಂದೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದಿಡಲು ತಯಾರಿ ನಡೆಸುತ್ತಿರುವುದು, ಉತ್ಸಾಹದ ಹೊರತಾಗಿಯೂ, ಅವರ ಆತಂಕ ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪೂಜೆಯ ಬಳಿಕ ಕೈತಪ್ಪಿ ಹೂವಿನೊಂದಿಗೆ 2 ಲಕ್ಷ ರುಪಾಯಿ ನೋಟನ್ನೂ ನೀರಿಗೆಸೆದು ಎಡವಟ್ಟು ಮಾಡಿಕೊಂಡ ಕುಟುಂಬ; ಬಳಿಕ ನಡೆದದ್ದು ಅಚ್ಚರಿ

ಹೂವಿನೊಂದಿಗೆ 2 ಲಕ್ಷ ರು. ನೋಟನ್ನೂ ನೀರಿಗೆಸೆದ ಕುಟುಂಬ

Viral Video: ಗುಜರಾತ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪೂಜೆಯ ನಂತರ ಕುಟುಂಬವೊಂದು ಆಕಸ್ಮಿಕವಾಗಿ, ಕೈ ತಪ್ಪಿ ಬರೋಬ್ಬರಿ 2 ಲಕ್ಷ ರುಪಾಯಿ ನಗದು ಕಾಲುವೆಗೆ ಎಸೆದಿದೆ. ಬಳಿಕ ಆಗಿದ್ದೇನು? ಹಣ ಮರಳಿ ಸಿಕ್ತಾ? ನಿಮ್ಮ ಕುತೂಹಲ ತಣಿಯಬೇಕಾದರೆ ಈ ಸ್ಟೋರಿ ಓದಿ.

ಇರಾನಿನ ತೈಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ದಾಳಿ: ಬೆಂಕಿಯ ಉಂಡೆ, ದಟ್ಟ ಹೊಗೆ... ಇಲ್ಲಿದೆ ಭಯಾನಕ ವಿಡಿಯೊ

ಇರಾನ್ ಐದು ಇಂಧನ ಡಿಪೋ ಮೇಲೆ ಇಸ್ರೇಲ್ ದಾಳಿಯ ಭಯಾನಕ ವಿಡಿಯೊ

ಇರಾನಿನ ರಾಜಧಾನಿ ಟೆಹರಾನ್ ನ ಐದು ತೈಲ ಡಿಪೋಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇದರಿಂದ ಕಾಣಿಸಿಕೊಂಡ ಬೆಂಕಿಯ ಉಂಡೆಗಳು, ದಟ್ಟ ಹೊಗೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇರಾನಿನ ತೈಲ ಸಂಗ್ರಹಾಗಾರದ ಮೇಲೆ ಯುದ್ಧ ವಿಮಾನಗಳು ಅಪ್ಪಳಿಸಿದ ಬಳಿಕ ಹೇಗಿತ್ತು ಭಯಾನಕ ದೃಶ್ಯಾವಳಿಗಳು ಎಂಬುದನ್ನು ಕಾಣಬಹುದು.

ಬೆಂಗಳೂರು 'ಮಲಯಾಳಿಗಳ ಹಬ್' ಎಂದ ಕೇರಳಿಗರು; ವಿಡಿಯೊ ವೈರಲ್‌, ಕನ್ನಡಿಗರ ಆಕ್ರೋಶ

ಬೆಂಗಳೂರು 'ಮಲಯಾಳಿಗಳ ಹಬ್' ಎಂದ ಕೇರಳಿಗರು; ವಿಡಿಯೊ ವೈರಲ್‌

Viral video: ಈ ವಿಡಿಯೋ ಹಂಚಿಕೊಂಡಿರುವ ಕನ್ನಡಿಗರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಬೇರೆ. ರಾಜ್ಯಗಳಿಂದ ಬಂದು ಇಲ್ಲಿ ನೆಲೆಸುವವರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದನ್ನು ಬಿಟ್ಟು, ಪ್ರದೇಶಗಳ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ನೆರೆಮನೆಯವರ ಮೇಲಿನ ಕೋಪಕ್ಕೆ ಅಮಾಯಕ ನಾಯಿಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಂದ ಮಹಿಳೆ; ನಾರಿ ಅಲ್ಲ ಹೆಮ್ಮಾರಿ ಎಂದ ನೆಟ್ಟಿಗರು

ನಾಯಿ ಮರಿಗಳನ್ನು ಅಮಾನುಷವಾಗಿ ಕೊಂದ ಮಹಿಳೆ: ಭುಗಿಲೆದ್ದ ಆಕ್ರೋಶ

Viral Video: ನೆರೆಮನೆಯೊಂದಿಗೆ ಜಗಳ ಉಂಟಾಯಿತು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು‌ ಗೋಡೆಗೆ ಎರಡು ನಾಯಿ ಮರಿಗಳನ್ನು ಹೊಡೆದು ಕೊಂದೇ ಬಿಟ್ಟಿದ್ದಾಳೆ.‌ ನೆರೆಮನೆಯವರ ಜತೆಗೆ ವೈಯಕ್ತಿಕ ದ್ವೇಷದ ಕಾರಣದಿಂದ ಅಮಾಯಕ ನಾಯಿಮರಿಗಳನ್ನು ಹತ್ಯೆ ಮಾಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ಯ ಪ್ರಿಯರೇ ಕುಡಿಯುವ ಮುನ್ನ ಎಚ್ಚರ; ಬೀಯರ್ ಬಾಟಲಿಯೊಳಗೆ ಜೀವಂತ ಮೀನು ಪತ್ತೆ!

ಬಿಯರ್ ಬಾಟಲಿಯೊಂದಿಗೆ ಮೀನು ಉಚಿತ; ಆಫರ್‌ ಕೇಳಿ ದಂಗಾದ್ರಾ?

Viral Video: ಕಿಂಗ್‌ಫಿಷರ್ ಬಿಯರ್ ಬಾಟಲಿಯೊಳಗೆ ಜೀವಂತ ಮೀನು ಪತ್ತೆಯಾಗಿಯಾಗುವ ಘಟನೆ ನಡೆದಿದೆ. ಮೀನನ್ನು ನೋಡಿ ಬಿಯರ್‌ ಖರೀದಿಸಿದ ಗ್ರಾಹಕ ಶಾಕ್ ಗೆ ಒಳಗಾಗಿದ್ದಾನೆ. ಬಾಟಲಿಯನ್ನು ಓಪನ್ ಮಾಡಿದ ಕೂಡಲೇ, ಆ ವ್ಯಕ್ತಿ ದ್ರವದೊಳಗೆ ಏನೋ ತೆಲುತ್ತಿರುವುದನ್ನು ಗಮನಿಸಿದ್ದಾನೆ. ಸರಿಯಾಗಿ ಗಮನಿಸಿದಾಗ ಬಿಯರ್ ಬಾಟಲಿ ಯೊಳಗೆ ಒಂದು ಸಣ್ಣ ಮೀನು ಈಜುತ್ತಿರುವು ಕಂಡುಬಂದಿದೆ.

ಬೈಕ್ ಸವಾರಿಯಲ್ಲಿ ಹಿಮ್ಮುಖವಾಗಿ ಕುಳಿತು ಆಟದಲ್ಲಿ ಮಗ್ನವಾದ ಮಕ್ಕಳು;  ಸುರಕ್ಷತೆ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು!

ಬೈಕ್ ನಲ್ಲಿ ಹಿಮ್ಮುಖವಾಗಿ ಕೂತು ತಂದೆಯೊಂದಿಗೆ ಪ್ರಯಾಣಿಸಿದ ಮಕ್ಕಳು!

Viral Video: ಬೈಕ್ ವೊಂದರಲ್ಲಿ ಮಕ್ಕಳಿಬ್ಬರು ಹಿಮ್ಮುಖವಾಗಿ ಕುಳಿತು ತಂದೆ ಯೊಂದಿಗೆ ಪ್ರಯಾಣ ಮಾಡಿದ್ದಾರೆ. ಶಾಲಾ ಸಮವಸ್ತ್ರ ಧರಿಸಿದ ಅಕ್ಕ- ತಮ್ಮ ಇಬ್ಬರು ಬೈಕ್ ನಲ್ಲಿ ಕುಳಿತು ತಮ್ಮದೇ ಆಟದಲ್ಲಿ ಮಗ್ನರಾಗಿದ್ದಾರೆ. ಈ ಮಕ್ಕಳ ಮುಗ್ದತೆ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದರೂ ರಸ್ತೆ ಸುರಕ್ಷಿತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Fact Check: ಹೊಸ ಕೇಂದ್ರಾಡಳಿತ ಪ್ರದೇಶ ರಚನೆಗೆ ಸರ್ಕಾರದಿಂದ ಸಿದ್ಧತೆ? ವೈರಲ್‌ ಸುದ್ದಿಯ ಅಸಲಿಯತ್ತೇನು?

ಹೊಸ ಕೇಂದ್ರಾಡಳಿತ ಪ್ರದೇಶ ರಚನೆ ?

ದೇಶದಲ್ಲಿ ಹೊಸ ಕೇಂದ್ರಾಡಳಿತ ಪ್ರದೇಶ ರಚನೆಯಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸರ್ಕಾರದ ಅಧಿಕೃತ ಸತ್ಯ ಪರಿಶೀಲನಾ ಸಂಸ್ಥೆಯಾದ ಮಾಧ್ಯಮ ಮಾಹಿತಿ ಕೇಂದ್ರ ಹೇಳಿದೆ. ಸಿಲಿಗುರಿ ಕಾರಿಡಾರ್ ಬಳಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳನ್ನು ಒಟ್ಟುಗೂಡಿಸಿ ಹೊಸ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು ಯೋಜನೆ ಮಾಡಲಾಗುತ್ತಿದೆ ಎನ್ನುವ ಸುಳ್ಳು ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

ಶಾಲಾ ಅವಧಿಯಲ್ಲಿಯೇ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವೈರಲ್‌ ಆಯ್ತು ವಿಡಿಯೋ

ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಕೊಂಡ ಶಿಕ್ಷಕಿ: ವಿಡಿಯೊ ವೈರಲ್

Viral Video: ಇತ್ತೀಚೆಗಷ್ಟೇ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಶಾಲಾ ವಿದ್ಯಾರ್ಥಿಗಳನ್ನು ಗಾರೆ ಕೆಲಸ ಮಾಡಲು ಶಿಕ್ಷಕರು ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.‌ ಈ ನಡುವೆ ಮುಖ್ಯೋಪಾಧ್ಯಾಯಿನಿಗೆ 5 ನೇ ತರಗತಿಯ ವಿದ್ಯಾರ್ಥಿಗಳು ಮಸಾಜ್ ಮಾಡುತ್ತಿರುವ ದೃಶ್ಯ ವೊಂದು ಸರಕಾರಿ ಶಾಲೆಯಲ್ಲಿ ಕಂಡು ಬಂದಿದ್ದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಲೈವ್ ಸ್ಟ್ರೀಮಿಂಗ್‌ನಲ್ಲೇ ಖ್ಯಾತ  ಬಿಗ್ ಬಾಸ್ ಮಾಜಿ ಸ್ಪರ್ಧಿ ಆತ್ಮಹತ್ಯೆಗೆ ಯತ್ನ!

ಲೈವ್‌ಸ್ಟ್ರೀಮ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ

Anurag Dobhal: ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ವರದಿಯಾಗಿದೆ. ಅವರು ಕಾರು ಡ್ರೈವಿಂಗ್ ಮಾಡುತ್ತ ಇನ್‌ಸ್ಟಾಗ್ರಾಮ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿ ದ್ದಾಗಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾರ್ಚ್ 7ರಂದು ನಡೆದಿದೆ

ಶಾಲೆಯಲ್ಲೇ ಶಿಕ್ಷಕನ ಮೇಲೆ ಹಲ್ಲೆ ಮಾಡಿದ 10ನೇ ತರಗತಿ ವಿದ್ಯಾರ್ಥಿ: ವಿಡಿಯೊ ಇಲ್ಲಿದೆ

ಶಿಕ್ಷಕನ ಮೇಲೆ ಹಲ್ಲೆ ಮಾಡಿದ 10ನೇ ತರಗತಿ ವಿದ್ಯಾರ್ಥಿ

student assault teacher: ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕನಿಗೆ ಹೊಡೆದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಶಾಲಾ ಆವರಣದಲ್ಲಿ ನಡೆದ ವಾಗ್ವಾದದ ಸಂದರ್ಭದಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಶ್ವಾನವನ್ನು ವಾಕಿಂಗ್ ಕರೆದುಕೊಂಡ ಬಂದ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡ ಅಪಾರ್ಟ್‌ಮೆಂಟ್‍ನ ಹಿರಿಯ ನಿವಾಸಿಗಳು; ಬೆಂಗಳೂರಿನಲ್ಲೊಂದು ಅಚ್ಚರಿಯ ಘಟನೆ

ಶ್ವಾನವನ್ನು ವಾಕಿಂಗ್ ಕರೆದುಕೊಂಡ ಬಂದ ವಿಚಾರಕ್ಕೆ ಹೊಡೆದಾಟ

Senior Apartment Residents Clash: ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಸಾಕು ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುವ ವಿಚಾರದಲ್ಲಿ ನಡೆದ ವಾಗ್ವಾದ ಹಿರಿಯ ನಾಗರಿಕರ ನಡುವೆ ಜಗಳಕ್ಕೆ ಕಾರಣವಾಗಿದೆ. ಬೆಂಗಳೂರಿನ ವರ್ತೂರು ಪ್ರದೇಶದ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ಹೋಳಿ ಹೆಸರಲ್ಲಿ ಅನಾಚಾರ; ಚಲಿಸುವ ರೈಲಿನ ಮೇಲೆ ಸಗಣಿ ನೀರು ಎರಚಿದ ಕಿಡಿಗೇಡಿಗಳು

ಹೋಳಿಯಂದು ಚಲಿಸುವ ರೈಲಿಗೆ ಸಗಣಿ ನೀರು ಎರಚಿದ ಕಿಡಿಗೇಡಿಗಳು

Viral Video: ಹೋಳಿ ಹಬ್ಬದ ದಿನ ಬಣ್ಣದ ಹೆಸರಿನಲ್ಲಿ ಹಲವರು ಮಿತಿ ಮೀರಿ ವರ್ತಿಸುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಪುರುಷರ ಗುಂಪೊಂದು ಹಾದುಹೋಗುವ ರೈಲಿಗೆ ಸಗಣಿ ನೀರು ಮತ್ತು ಬಣ್ಣದ ದ್ರವ ಎರಚಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಈ ಘಟನೆ ಆತಂಕ ಮೂಡಿಸಿದೆ.

ಯುವತಿಯ ಅದ್ಭುತ ಕ್ರಿಯೇಟಿವಿ: ಸೋಡಾ ಕ್ಯಾನ್‌ನಲ್ಲಿ ಮೂಡಿಬಂತು ಶಾರುಖ್ ಖಾನ್ ಭಾವಚಿತ್ರ

ಶಾರುಖ್ ಖಾನ್ ಭಾವಚಿತ್ರ ರಚಿಸಲು ಸೋಡಾ ಕ್ಯಾನ್‌ ಬಳಸಿದ ಮಹಿಳೆ

Viral Video: ಇಲ್ಲೊಬ್ಬ ಯುವತಿಯ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದು ನೂರಾರು ವೇಸ್ಟ್ ಸೋಡಾ ಕ್ಯಾನ್ ಬಳಸಿ ಸಂದರ ಕಲಾಕೃತಿ ರಚಿಸಿದ್ದಾರೆ. ಒಂದೊಂದಾಗಿ ಅವರು ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿರುವ ಕ್ಯಾನ್‌ಗಳನ್ನು ಬಳಸಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಸುಂದರ ಚಿತ್ರವನ್ನು ಬಿಡಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.

ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಬಳಕೆ;  ಬೆಂಕಿ ಜ್ವಾಲೆಯಿಂದ ಹೊತ್ತಿ ಉರಿದ ಬೈಕ್!

ಪೆಟ್ರೋಲ್ ತುಂಬಿಸುವಾಗ ಬೈಕ್ ಗೆ ಇದ್ದಕ್ಕಿದ್ದಂತೆ ಬೆಂಕಿ: ಭಯಾನಕ ವಿಡಿಯೊ!

Viral Video: ಪೆಟ್ರೋಲ್ ತುಂಬಿಸು ವಾಗ ಬೈಕ್ ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು ಬೈಕ್ ಕ್ಷಣಾರ್ಧದಲ್ಲಿ ಜ್ವಾಲೆಗೆ ಆಹುತಿಯಾಗಿದೆ. ಬೈಕ್‌ನ ಇಂಧನ ಟ್ಯಾಂಕ್ ಬಳಿ ಕೆಲವೇ ಸೆಕೆಂಡುಗಳಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಪೆಟ್ರೋಲ್ ಪಂಪ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆ ಕ್ಷಣ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ.

ಹೋಳಿ ಹಬ್ಬದಂದು ಮಣ್ಣು ಮಾರಿ ಸಾವಿರಾರು ರೂ. ಸಂಪಾದನೆ ಮಾಡಿದ ವ್ಯಕ್ತಿ: ವಿಡಿಯೊ ವೈರಲ್

ಹೋಳಿ ಹಬ್ಬದಂದು ಮಣ್ಣು ಮಾರಿದ ವ್ಯಕ್ತಿ: ವ್ಯಾಪಾರ ತಂತ್ರಕ್ಕೆ ಮೆಚ್ಚುಗೆ!

Viral Video: ಹೋಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಈ ದಿನ ಮಾರುಕಟ್ಟೆಗೆ ವಿವಿಧ ಬಗೆಯ ಬಣ್ಣಗಳು ಲಗ್ಗೆ ಇಡುತ್ತವೆ. ಆದರೆ, ಬಣ್ಣಗಳ ಆಯ್ಕೆಯ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳ ಮಿಶ್ರಣ ಕೂಡ ಇರಲಿದ್ದು ಬಣ್ಣಗಳನ್ನು ಜಾಗೃತರಾಗಿ ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ. ಅಂತೆಯೇ ಹೋಳಿ ಹಬ್ಬದ ದಿನ ವ್ಯಾಪಾರಿಯೊಬ್ಬರು ಮಣ್ಣನ್ನು ಮಾರಾಟ ಮಾಡುವ ಮೂಲಕ ದಿನಕ್ಕೆ 2, 200 ರೂಪಾಯಿ ಸಂಪಾದನೆ ಮಾಡಿದ್ದಾರೆ.

ಮಾರ್ಚ್ 21ಕ್ಕೆ ಭಾರತ-ಪಾಕಿಸ್ತಾನ ಯುದ್ಧ ಶುರುವಾಗುತ್ತಾ? ಭಾರೀ ವೈರಲ್ ಆಗ್ತಿದೆ ಈ ಜ್ಯೋತಿಷಿಯ ಭವಿಷ್ಯವಾಣಿ!

ಭಾರತ- ಪಾಕಿಸ್ತಾನ‌ ಮುಂದಿನ ದಾಳಿಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

Viral Video: ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಮಾರ್ಚ್ 21, 2026 ರಂದು ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್

ನಾಟೌಟ್‌ಗೆ ಸಂಭ್ರಮಿಸಿದ ಪತ್ನಿಯನ್ನು ತಡೆದ ಧೋನಿ; ವಿಡಿಯೊ ವೈರಲ್

MS Dhoni's Reaction: ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ಜೋರಾಗಿ ನಗುತ್ತಾ ʼಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋʼ ಎಂದು ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬೆಂಗಳೂರಿನ ಈ ಖಿಲಾಡಿ ಜೋಡಿಯನ್ನು ನೋಡಿದ್ದೀರಾ? ಆಟೋ ಚಾಲಕನ ಹೆಗಲ ಮೇಲೆ ಸವಾರಿ ಮಾಡುವ ಗಿಳಿಯನ್ನು ಸ್ಪರ್ಶಿಸಿ ಖುಷಿಪಟ್ಟ ಗ್ರಾಹಕರು

ಸಾಕುಪ್ರಾಣಿ ಗಿಣಿಯೊಂದಿಗೆ ಆಟೋ ಚಾಲಕನ ಸವಾರಿ

Viral Video: ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ತಮ್ಮ ಮುದ್ದಿನ ಹಸಿರು ಗಿಳಿಯೊಂದಿಗೆ ಸವಾರಿ ಮಾಡಿದ ದೃಶ್ಯ ಕಂಡು ಬಂದಿದೆ. ಈ ವಿಡಿಯೊವು ಪ್ರಾಣಿಗಳು ಮತ್ತು ಪಕ್ಷಿಗಳು ದೈನಂದಿನ ಜೀವನಕ್ಕೆ ಸರಳ ಸಂತೋಷವನ್ನು ಹೇಗೆ ತರುತ್ತವೆ ಎಂಬುದಕ್ಕೆ ಸಾಕ್ಷಿ ಎನಿಸಿಕೊಂಡಿದೆ.

Loading...