ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

‘ತಾರಕ್ ಮೆಹ್ತಾ’ ಸೀರಿಯಲ್ ನೋಡುತ್ತ ಕ್ಯಾಬ್‌ ಚಲಾಯಿಸಿ ಚಾಲಕ; ಪ್ರಶ್ನಿಸಿದ ಪ್ರಯಾಣಿಕನಿಗೇ ಧಮ್ಕಿ

ಡ್ರೈವಿಂಗ್‌ ವೇಳೆ ಸೀರಿಯಲ್ ನೋಡುತ್ತ ಕ್ಯಾಬ್‌ ಓಡಿಸಿದ ಚಾಲಕ

Viral News: ಕ್ಯಾಬ್‌ ಚಾಲಕನೊಬ್ಬ ಸೀರಿಯಲ್ ನೋಡುತ್ತ ಡ್ರೈವಿಂಗ್ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕ ಆತಂಕಕ್ಕೆ ಒಳಗಾಗಿದ್ದಾರೆ.

ಫ್ರಾನ್ಸ್‌ನ ಐಫೆಲ್ ಟವರ್ ಎದುರು ಭಾರತೀಯ ಯುವತಿಯರ ‘ಸೀರೆ ವಾಕ್’; ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ ಎಂದು ಉದ್ಘರಿಸಿದ ನೆಟ್ಟಿಗರು

ಐಫೆಲ್ ಟವರ್ ಬಳಿ ಭಾರತೀಯ ಮಹಿಳೆಯರ ರ‍್ಯಾಂಪ್ ವಾಕ್: ವಿಡಿಯೊ ನೋಡಿ

Viral Video: ಭಾರತೀಯ ಮಹಿಳೆಯರ ವಿಡಿಯೊವೊಂದು ಗಮನ ಸೆಳೆದಿದೆ. ಮಹಿಳೆಯರ ‌ಗುಂಪು ಫ್ರಾನ್ಸ್‌ನ ಐಫೆಲ್ ಟವರ್ ಎದುರು ಸೀರೆ ಉಟ್ಟು ರ‍್ಯಾಂಪ್ ವಾಕ್ ಮಾಡಿದ್ದು ಮೆಚ್ಚುಗೆ ಗಳಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನೃತ್ಯ ಮಾಡುವ ಬದಲು ಇಂತಹ ದೃಶ್ಯಗಳೇ ಬೆಸ್ಟ್ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಕಸದಿಂದ ತುಂಬಿ ಹೋದ ಕೇದಾರನಾಥ: ಹಿಮಾಲಯದ ರಕ್ಷಣೆಗೆ ಪ್ರತಿ ಯಾತ್ರಿಕ 1 ಕೆಜಿ ಕಸ ಮರಳಿ ಕೊಂಡೊಯ್ಯಲು ಮನವಿ

ಕೇದಾರನಾಥ ತ್ಯಾಜ್ಯ ವಿಲೇವಾರಿಗೆ ಸಹಕರಿಸಲು ಯಾತ್ರಿಕರಿಗೆ ಮನವಿ

Viral News: ಉತ್ತರಾಖಂಡದ ಕೇದಾರನಾಥಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು, ಕೇವಲ 40 ದಿನಗಳಲ್ಲಿ 10 ಲಕ್ಷ ನೋಂದಾಯಿತ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮಿತಿ ಮೀರುತ್ತಿರುವ ಕಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೀಲಿಂಗ್ ಹಿಮಾಲಯಸ್‌ನ ಸಂಸ್ಥಾಪಕ ಪ್ರದೀಪ್ ಸಾಂಗ್ವಾನ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರತಿಯೊಬ್ಬರೂ ಸುಮಾರು 1 ಕೆಜಿ ಕಸ ಅಲ್ಲಿಂದ ಸಾಗಿಸಬೇಕು ಎಂದು ಕರೆ ನೀಡಿದ್ದಾರೆ.

ನಾಗರಿಕ ಪ್ರಜ್ಞೆಯ ಕೊರತೆ: ಕ್ಯೂ ತಪ್ಪಿಸಿದವರಿಗೆ ಲಾಠಿ ರುಚಿ ತೋರಿಸಿದ ರೈಲ್ವೆ ಪೊಲೀಸ್

ರೈಲು ನಿಲ್ದಾಣದಲ್ಲಿ ರೂಲ್ಸ್ ಬ್ರೇಕ್: ಲಾಠಿ ರುಚಿ ತೋರಿಸಿದ ಪೊಲೀಸ್

Viral News: ಇತ್ತೀಚೆಗೆ ಭಾರತೀಯರ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ದಿನಕ್ಕೊಂದು ದೂರು ಕೇಳಿ ಬರುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದೇ ಇರುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ. ಇದರ ನಡುವೆಯೇ ರೈಲು ನಿಲ್ದಾಣವೊಂದರಲ್ಲಿ ಶಿಸ್ತು ಮರೆತು ಕೆಲವು ಪ್ರಯಾಣಿಕರು ಮನ ಬಂದಂತೆ ವರ್ತಿಸಿದ್ದಾರೆ. ಇವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಮೆಟ್ರೋದ ಸೀಟಿನ ಮೇಲೆ ಕಾಲಿಟ್ಟು ಕುಳಿತ ಯುವಕ; ಸಹ ಪ್ರಯಾಣಿಕರು ಮಾಡಿದ್ದೇನು? ವಿಡಿಯೋ ನೋಡಿ

ಮೆಟ್ರೋದ ಸೀಟಿನ ಮೇಲೆ ಕಾಲಿಟ್ಟು ಕುಳಿತ ಯುವಕ: ಸಹ ಪ್ರಯಾಣಿಕರಿಂದ ಛೀಮಾರಿ

Viral Video: ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಎರಡು ಸೀಟುಗಳನ್ನು ಆಕ್ರಮಿಸಿಕೊಂಡು ಸೀಟಿನ ಮೇಲೆಯೆ ಕಾಲಿಟ್ಟು ಕುಳಿತಿದ್ದಾನೆ‌.ಇದರಿಂದ ಸಹ ಪ್ರಯಾಣಿಕರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೈದರಾಬಾದ್ ಮೆಟ್ರೋದ ದೃಶ್ಯ ಇದಾಗಿದ್ದು ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಶಿಷ್ಟಾಚಾರದ ಕುರಿತು ಚರ್ಚೆಗೆ ಕಾರಣವಾಗಿದೆ. ಯುವಕನೊಬ್ಬ ಸಹಪ್ರಯಾಣಿಕನಿಗೆ ತೊಂದರೆಯಾಗುವಂತೆ ಸೀಟಿನ ಮೇಲೆ ಕಾಲಿಟ್ಟು ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ಯಾಂಟ್ ಮೇಲೆ ಕುಳಿತ ನೂರಾರು ಜೇನುನೊಣಗಳ ಹಿಂಡು: 30 ನಿಮಿಷ ಕದಲದೆ ನಿಂತ ಯುವಕನ ಧೈರ್ಯಕ್ಕೆ ನೆಟ್ಟಿಗರು ಫಿದಾ!

ಜೇನು ನೋಣಗಳು ಮುತ್ತಿಗೆ: ತಾಳ್ಮೆಯಿಂದ ಗೆದ್ದು ಅಪಾಯದಿಂದ ಪಾರಾದ ಯುವಕ

Viral News: ಇದೀಗ ಯುವಕನ ಪ್ಯಾಂಟ್ ನ ಹಿಂಭಾಗ ದಲ್ಲಿ ಸಾವಿರಾರು ಜೇನು ನೋಣಗಳು ಮುತ್ತಿಗೆ ಹಾಕಿದ ಘಟನೆಯೊಂದು ಕಂಡುಬಂದಿದೆ. ಆತನು ಈ ಸನ್ನಿವೇಶವನ್ನು ಬಹಳ ತಾಳ್ಮೆಯಿಂದ ಪರಿಹರಿಸಿ ಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕನು ಬರೋಬ್ಬರಿ 30 ನಿಮಿಷವರೆಗೆ ಒಂದು ಚೂರು ಕದಲದೆ ಪಾರಾಗಿದ್ದಾನೆ. ಸದ್ಯ ಈ ವಿಚಿತ್ರ ಘಟನೆಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ...

ತಿಂಗಳಿಗೆ 2 ಲಕ್ಷ ರುಪಾಯಿ ಗಳಿಕೆ: ಎಂಜಿನಿಯರಿಂಗ್ ಮುಗಿಸಿ ಕ್ಯಾಬ್ ಬ್ಯುಸಿನೆಸ್‌ನಲ್ಲಿ ಯಶಸ್ಸು ಕಂಡ ಚಾಲಕ

ಎಂಜಿನಿಯರಿಂಗ್ ಮುಗಿಸಿದರೂ ಕೈ ಹಿಡಿದಿದ್ದು ಕ್ಯಾಬ್ ಬ್ಯುಸಿನೆಸ್‌

Viral News: ಪ್ರಯತ್ನ ಪಟ್ಟರೆ ಸ್ವಂತ ಉದ್ಯಮದಲ್ಲೂ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಈ ಯುವಕನ ಸಾಧನೆಯೇ ಸಾಕ್ಷಿ. ಎಂಜಿನಿಯರ್ ಮುಗಿಸಿದ ಯುವಕ ಆಫೀಸ್ ಕೆಲಸ ಆಯ್ದುಕೊಳ್ಳದೆ ಕ್ಯಾಬ್ ಬ್ಯುಸಿನೆಸ್‌ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೇವಲ ಒಂದು ಕಾರಿನಿಂದ ಈ ಉದ್ಯೋಗ ಆರಂಭ ಮಾಡಿದ ಅವರು ಇಂದು ತಿಂಗಳಿಗೆ 2 ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ಪ್ರವಾಸಿ ತಾಣದಲ್ಲಿ ವಿದೇಶಿಗನಿಂದ ಸ್ವಚ್ಛತಾ ಅಭಿಯಾನ; ನೋಡಿ ಕಲಿಯಿರಿ ಎಂದ ನೆಟ್ಟಿಗರು

ಪ್ರವಾಸಿ ತಾಣ ಸ್ವಚ್ಛಗೊಳಿಸಿದ ವಿದೇಶಿ ವ್ಯಕ್ತಿ

Viral News: ಉತ್ತರಾಖಂಡ ಚಾರಣದ ಹಾದಿಯಲ್ಲಿ ವಿದೇಶಿ ಪ್ರವಾಸಿಯೊಬ್ಬರು ಪ್ಲಾಸ್ಟಿಕ್, ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಇದು ಭಾರತೀಯರ ವರ್ತನೆ, ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಅನೇಕರು ಸ್ವಚ್ಛತೆ ಪಾಲಿಸದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿ ಮೆಟ್ರೋ ನೆನೆದು ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯ ಭಾವುಕ ಪೋಸ್ಟ್

ದೆಹಲಿ ಮೆಟ್ರೋ ಸೌಕರ್ಯ ಬಗ್ಗೆ ವಿದ್ಯಾರ್ಥಿನಿ ಭಾವುಕ

Viral News: ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಭಾರತದ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನಗೆ ದೆಹಲಿಯ ಮೆಟ್ರೋ ಸೌಲಭ್ಯದ ಬೆಲೆ ಈಗ ಅರಿವು ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ಪ್ರವಾಸಿಗರ ಅಸಭ್ಯ ವರ್ತನೆ: ಚೀನಾದ ಮಹಾಗೋಡೆಯ ಮೇಲೆ ನೃತ್ಯ ಮಾಡಿ ಹುಚ್ಚಾಟ

ವಿದೇಶದಲ್ಲಿ ನಾಗರಿಕ ಪ್ರಜ್ಞೆ ಮರೆತ ಭಾರತೀಯರು

Viral News: ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನಿಂದ ವರ್ತಿಸಿಸದೆ ಹುಚ್ಚಾಟ ಮೆರೆಯುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಗುಂಪೊಂದು ಚೀನಾದ ಪ್ರಸಿದ್ಧ ಮಹಾ ಗೋಡೆಯ ಮೇಲೆ 'ಚೋಗಾಡಾ' ಹಾಡಿಗೆ ಗರ್ಬಾ ನೃತ್ಯ ಮಾಡಿದೆ. ಅನೇಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದೇ ರೀತಿ ಪ್ರವಾಸಿ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ ಅನೇಕ ದೃಶ್ಯಗಳು ವೈರಲ್ ಆಗಿವೆ.

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್: ವ್ಯಾಪಾರಿಗಳ ದೂರಿನ ಮೇರೆಗೆ ಉತ್ತರ ಪ್ರದೇಶ ಪೇದೆ ಸಸ್ಪೆಂಡ್‌

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್ ಸಸ್ಪೆಂಡ್‌

Police Constable Suspended: ಗೋಲ್ಗಪ್ಪ, ಐಸ್‌ಕ್ರೀಂ ಉಚಿತವಾಗಿ ತಿಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯದಲ್ಲಿರುವಾಗ ಪಿಆರ್‌ವಿ ವಾಹನದ ಚಾಲಕ ಐಸ್‌ಕ್ರೀಂ ಸೇವಿಸುತ್ತಿರುವ ವಿಡಿಯೊವನ್ನು ವ್ಯಾಪಾರಿಗಳ ಸಂಘದ ಸದಸ್ಯರು ರೆಕಾರ್ಡ್ ಮಾಡಿದ ಬಳಿಕ ವಿವಾದ ಪ್ರಾರಂಭವಾಯಿತು.

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ತಾಯಿಯ ಶ್ರದ್ಧಾದ ದಿನ ರಾತ್ರಿಯಿಡೀ ಅಶ್ಲೀಲ ನೃತ್ಯ

Viral News: ಬಿಹಾರದ ಬೇಗುಸರಾಯ್ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ವಿಚಿತ್ರವಾಗಿ ತಾಯಿಯ ಶ್ರಾದ್ಧ ನಡೆಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ರಾತ್ರಿಯಿಡೀ ಅಶ್ಲೀಲ ನೃತ್ಯ ಮಾಡುವ ಮೂಲಕ ಆಚರಿಸಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀವು ಆರ್‌ಸಿಬಿ ಜರ್ಸಿ ನೋಡಿರಬಹುದು; ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಬ್ಲೌಸ್ ಡಿಸೈನ್ ಏನದ್ರೂ ನೋಡಿದ್ದೀರಾ?

ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ಟ್ರೆಂಡ್ ಕ್ರಿಯೇಟ್ ಮಾಡಿದ ಮಹಿಳೆ

Viral Video: ಗುಜರಾತ್ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿ ಗೆದ್ದು ಫ್ಯಾನ್ಸ್‌ ಸಸಂಭ್ರಮ ಹೆಚ್ಚಿಸಿದೆ. ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರ ಭಾವಚಿತ್ರ‌ ಹಿಡಿದು, ನಗರದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಐಪಿಎಲ್ ಕ್ರೇಜ್ ಮೈದಾನಕ್ಕೆ ಸೀಮಿತವಾಗಿಲ್ಲ; ಅದು ಈಗ ಫ್ಯಾಷನ್ ಲೊಕಕ್ಕೂ ಲಗ್ಗೆ ಇಟ್ಟಿದೆ.

ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ; ಮನ ನೊಂದು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

Muslim Youth Converts to Hinduism: ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ ನೀಡುವ ಪದ್ಧತಿಯಿಂದ ನೊಂದ ಯುವಕನೋರ್ವ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸರ್ವೇ ಭವಂತು ಸುಖಿನಃ ತತ್ವದಿಂದ ಪ್ರಭಾವಿತನಾಗಿರುವುದಾಗಿ ತಿಳಿಸಿದ್ದಾರೆ.

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್‌

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

IPL 2026 final: ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್‌ (32) ಮತ್ತು ವಿರಾಟ್‌ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್‌ ಮೂಲಕ ಈ ಜೋಡಿ 62ರನ್‌ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.

ಸಾಕು ಬೆಕ್ಕಿಗೆ ಭರ್ಜರಿ ಹುಟ್ಟುಹಬ್ಬ: ಮುಂಬೈ ಯುವಕನ ನಡೆಗೆ ಎಲ್ಲೆಡೆ ಮೆಚ್ಚುಗೆ

ಸಾಕುಬೆಕ್ಕಿಗೆ ಅದ್ಧೂರಿ ಬರ್ತ್‌ಡೇ ಪಾರ್ಟಿ ಕೊಟ್ಟ ಯುವಕ: ಇಲ್ಲಿದೆ ವಿಡಿಯೊ

Viral News: ಇತ್ತೀಚೆಗೆ ಪ್ರಾಣಿಗಳ ಹುಟ್ಟುಹಬ್ಬ ಆಚರಣೆ ಟ್ರೆಂಡ್ ಆಗಿ ಬಿಟ್ಟಿದೆ. ಮಹಾರಾಷ್ಟ್ರದ ಮುಂಬೈಯ ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಮುದ್ದಿನ ಬೆಕ್ಕುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ. ಈ ದೃಶ್ಯ ಸಾಕುಪ್ರಾಣಿಯ ಹುಟ್ಟುಹಬ್ಬದಂತೆ ಇರಲಿಲ್ಲ. ಬದಲಾಗಿ ದೊಡ್ಡ ಮಟ್ಟದ ಉತ್ಸವದಂತೆ ಕಾಣುತ್ತಿತ್ತು.ಈ ಆಚರಣೆಯಲ್ಲಿ ಕೇಕ್ ಕತ್ತರಿಸುವುದು, ಸಂಗೀತ, ನೃತ್ಯ ಮತ್ತು ಅತಿಥಿಗಳಿಗೆ ಭರ್ಜರಿ ಆತಿಥ್ಯವಿತ್ತು.

Fact Check: ಭಾರತೀಯ ಅಂಚೆಯಿಂದ ಉಡುಗೊರೆ; ಈ ಸುದ್ದಿ ನಿಜವೇ? ಕೇಂದ್ರ ನೀಡಿದ ಎಚ್ಚರಿಕೆ ಏನು?

ಡಾಕ್ ಸೇವಾ ಉಡುಗೊರೆ; ಏನಿದು ವೈರಲ್ ಸುದ್ದಿ?

ಭಾರತೀಯ ಅಂಚೆ ಇಲಾಖೆಯಿಂದ ಉಡುಗೊರೆ, ಬಹುಮಾನಗಳನ್ನು ನೀಡಲಾಗುತ್ತಿದೆ ಎನ್ನುವ ಸುದ್ದಿಗಳು ವೈರಲ್ ಆಗುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ತನಿಖೆ ನಡೆಸಿದ್ದು, ಇದೊಂದು ಸುಳ್ಳು ಸುದ್ದಿ ಎನ್ನುವ ಸ್ಪಷ್ಟನೆಯನ್ನು ನೀಡಿದೆ. ಭಾರತೀಯ ಅಂಚೆಯು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದ್ದು, ಜನರು ಇಂತಹ ಸುಳ್ಳು ಸುದ್ದಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಿದೆ.

25 ಲಕ್ಷ ರುಪಾಯಿ ಸಂಬಳದ ಜಾಬ್‌ ಆಫರ್‌ ತಿರಸ್ಕರಿಸಿ ಓಲಾ ಚಾಲಕನಾದ ಯುವಕ; ಮೂರೇ ವರ್ಷದಲ್ಲಿ 5 ಕಾರ್‌ಗಳ ಒಡೆಯ

ಓಲಾ ಚಾಲಕನಾಗಲು 25 ಲಕ್ಷ ರು. ಸಂಬಳದ ಆಫರ್ ತಿರಸ್ಕರಿಸಿದ ಎಂಬಿಎ ಪದವೀಧರ!

Viral News: ಉದ್ಯೋಗದಲ್ಲಿ ಟಾರ್ಗೆಟ್, ಒತ್ತಡ, ಕಿರಿಕಿರಿಯಿಂದಾಗಿ ಲಕ್ಷ ಗಟ್ಟಲೆ ಸಂಬಳ ಇದ್ದರೂ ಬಿಟ್ಟು ಬಂದವರಿದ್ದಾರೆ. ಇದೀಗ ಯುವಕನೊಬ್ಬ 25 ಲಕ್ಷ ರುಪಾಯಿ ಸಂಬಳದ ಆಫರ್ ಬಿಟ್ಟು ಓಲಾ ಚಾಲಕನಾಗಿದ್ದಾನೆ. ಕಾರ್ಪೋರೇಟ್ ಜೀವನದಿಂದ ದೂರವಾದ ಯುವಕನ ಬಗ್ಗೆ ಸಚಿನ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆತನಿಗೆ ಕಾರ್ಪೋರೇಟ್‌ ಜೀವನದಲ್ಲಿ ಸಮಾಧಾನವಿರಲಿಲ್ಲ. ಹೀಗಾಗಿ ಹಠಾತ್ತನೆ ಆ ಕೆಲಸದ ಆಫರ್ ಬಿಟ್ಟು, ಓಲಾ ಟ್ಯಾಕ್ಸಿ ಚಾಲಕನಾಗಲು ನಿರ್ಧರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿದ್ದ ವಿಷ ಸರ್ಪ; ಮುಂದಾಗಿದ್ದು ಅಚ್ಚರಿ

ಪಾರ್ಶ್ವವಾಯು ಪೀಡಿತ ವ್ಯಕ್ತಿ ಕೈಗೆ ಸುತ್ತಿಕೊಂಡ ವಿಷ ಸರ್ಪ: ಮುಂದೇನಾಯ್ತು?

Viral Video: ಸರ್ಪವೊಂದು ಕೋಣೆಯೊಳಗೆ ನುಗ್ಗಿ ಸುಮಾರು ನಾಲ್ಕು ಗಂಟೆಯವರೆಗೆ ವೃದ್ಧನ ಮಂಚದ ಮೇಲೆ ಸಮಯ ಕಳೆದಿದೆ. ಅಲ್ಲದೆ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕೈಗೆ ಸುತ್ತಿ ಹಾಕಿ ಕುಳಿತಿದೆ.‌ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ

ವಕೀಲರ ಕೈಯಲ್ಲಿದ್ದ ಹಣದ ಬ್ಯಾಗ್‌ ಕಿತ್ತ ಕೋತಿ; ಮುಂದಾಗಿದ್ದೇನು?

Viral Video: ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

DK Shivakumar: ನಮ್ಮ ತಂದೆ ರಾಜ್ಯದ ಸಿಎಂ ಆಗಬೇಕು, ಯಾಕೆ ಗೊತ್ತಾ?; ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಭಾವುಕ ಮಾತಿನ ವಿಡಿಯೊ ವೈರಲ್‌!

ನಮ್ಮ ತಂದೆ ಸಿಎಂ ಆಗಬೇಕು; ಡಿಕೆಶಿ ಪುತ್ರಿಯ ಭಾವುಕ ವಿಡಿಯೊ ವೈರಲ್‌!

ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಪುತ್ರಿ ಐಶ್ವರ್ಯ ಅವರು ಭಾನುವಾರ ಒಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ "ಕಂಗ್ರಾಜುಲೇಷನ್ಸ್ ಅಪ್ಪಾ ಎಂದು ವಿಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಹಿಂದೆ ಐಶ್ವರ್ಯಾ ಅವರು ತಂದೆ ಬಗ್ಗೆ ಮಾತನಾಡಿರುವ ವಿಡಿಯೊ ಸದ್ಯ ವೈರಲ್‌ ಆಗುತ್ತಿದೆ.

ʼʼನೆಮ್ಮದಿಯೇ ಮುಖ್ಯʼʼ: 9 ವರ್ಷ ಐಟಿ ಮ್ಯಾನೇಜರ್ ಆಗಿದ್ದ ಮಹಿಳೆ ಈಗ ಆಟೋ ಚಾಲಕಿ

ಕಾರ್ಪೋರೇಷನ್‌ ಕೆಲಸ ತ್ಯಜಿಸಿ ಆಟೋ ಓಡಿಸುತ್ತಿರುವ ಮಹಿಳೆ: ವಿಡಿಯೊ ವೈರಲ್

Viral Video: ಒಂಬತ್ತು ವರ್ಷಗಳವರೆಗೆ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದೀಗ ಆಟೋ ಚಾಲಕಿಯಾಗಿ ಹೊಸ ವೃತ್ತಿ ಆರಂಭಿಸಿದ್ದಾರೆ. ಐಟಿ ಕೆಲಸದಲ್ಲಿನ ಅತಿಯಾದ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ನೊಂದು ಪ್ರತಿಷ್ಠಿತ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೆಲಸಕ್ಕೆ ಅಪ್ಲೈ ಮಾಡಿದ್ದು 2005ರಲ್ಲಿ; ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ರಿಟೈರ್ಡ್‌ ಆಗುವಾಗ!

ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಸೇರಿದ್ದು ಅಪ್ಲೈ ಮಾಡಿದ 21 ವರ್ಷಗಳ ಬಳಿಕ!

ಸರ್ಕಾರಿ ಕೆಲಸ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ? ಅಂತಹ ಕೆಲಸ ಸಿಕ್ಕರೆ ಕುಟುಂಬಕ್ಕೆ ಬಹಳ ಸಂತೋಷದ ಕ್ಷಣವಾಗಿರುತ್ತದೆ. ಕೇರಳಂನ ಈ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿರುವುದು ನಿರಾಸೆ ತಂದಿದೆ. ಅರೆ... ಇದೇನಿದು ಎಲ್ಲರೂ ಸರ್ಕಾರಿ ಕೆಲಸ ಅಂದ್ರೆ ಹಾತೊರೆಯುತ್ತಾರೆ ಅಂಥದ್ರಲ್ಲಿ ಇವರದ್ದೇನು ವರಸೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ...

ಬೆಂಗಳೂರಿನಲ್ಲಿ ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಸಿಟಿ ಬಿಟ್ಟು ಹೋಗಲ್ಲ ಯಾಕೆ? ಬಿಹಾರಿ ಯುವಕನ ಗಮನ ಸೆಳೆದ ವಿಡಿಯೊ!

ಜನರನ್ನು ಆಕರ್ಷಿಸುವ ಬೆಂಗಳೂರಿನ ಬಗ್ಗೆ ಯುವಕ ಹೇಳಿದ್ದೇನು?

Viral News: ಬೆಂಗಳೂರು ನಗರಕ್ಕೆ ತೆರಳುವ ಅನೇಕ ಜನರು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ

Loading...