ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಹಲವು ವರ್ಷಗಳ ಬಳಿಕ ಗಂಗೂಲಿ-ಶಾರುಖ್​ ಭೇಟಿ; ಎಲ್ಲಿ?, ಯಾವಾಗ?

ಗಂಗೂಲಿ-ಶಾರುಖ್​ ಭೇಟಿ; ಹೃದಯಸ್ಪರ್ಶಿ ವಿಡಿಯೊ ವೈರಲ್‌

Shah Rukh Khan meets Sourav Ganguly: 2008 ರಲ್ಲಿ ಕೆಕೆಆರ್ ತಂಡದ ಉದ್ಘಾಟನಾ ವರ್ಷದಲ್ಲಿ ಸೌರವ್ ಗಂಗೂಲಿ ನಾಯಕರಾಗಿದ್ದರು. 2009 ರಲ್ಲಿ ನಾಯಕತ್ವ ತ್ಯಜಿಸಿ 2010 ರ ತನಕ ಕೆಕೆಆರ್‌ ಪರ ಆಡಿದ್ದರು. ಕೆಕೆಆರ್‌ ಬಿಟ್ಟ ಬಳಿಕ ಗಂಗೂಲಿ ಫ್ರಾಂಚೈಸಿ ಜತೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಹಲವು ಬಾರಿ ಬಹಿರಂಗವಾಗಿಯೇ ಫ್ರಾಂಚೈಸಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು.

IIT Baba: ಬೆಂಗಳೂರಿನ ಇಂಜಿನಿಯರ್‌ನ ಮದುವೆಯಾದ ಐಐಟಿ ಬಾಬಾ

ಬೆಂಗಳೂರಿನ ಇಂಜಿನಿಯರ್‌ನ ಮದುವೆಯಾದ ಐಐಟಿ ಬಾಬಾ

ಅಭಯ್ ಸಿಂಗ್ ಅವರು ಇಂಜಿನಿಯರಿಂಗ್ ಪದವೀಧರೆಯಾದ ಪ್ರೀತಿಕಾ ಎಂಬವರನ್ನು ಮದುವೆಯಾಗಿದ್ದಾರೆ. ಈ ಮದುವೆಯು ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಶಿವರಾತ್ರಿಯಂದು ಶಾಸ್ತ್ರೋಕ್ತವಾಗಿ ನಡೆದಿದ್ದು, ಫೆಬ್ರವರಿ 19 ರಂದು ಇವರು ಕೋರ್ಟ್ ಮ್ಯಾರೇಜ್ ಕೂಡ ಮಾಡಿಕೊಂಡಿದ್ದಾರೆ.

KKR vs PBKS: ಕೆಕೆಆರ್ ಪ್ರದರ್ಶನದ ಬಗ್ಗೆ ಮಾಲಿಕ ಶಾರುಖ್ ಖಾನ್ ಅಸಮಾಧಾನ; ಸಿಇಒ ವೆಂಕಿ ಜತೆಗಿನ ಚರ್ಚೆಯ ವಿಡಿಯೊ ವೈರಲ್‌

ಕೆಕೆಆರ್ ಪ್ರದರ್ಶನದ ಬಗ್ಗೆ ಮಾಲಿಕ ಶಾರುಖ್ ಖಾನ್ ಅಸಮಾಧಾನ?

Shah Rukh Khan Unhappy: ಮೊದಲ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿತು. ಸ್ಪಿನ್ನರ್‌ಗಳಾದ ಸುನೀಲ್ ನರೇನ್, ವರುಣ್ ಚಕ್ರವರ್ತಿ ಕೈಬಿಟ್ಟಿತು.

14 ದಿನಗಳಲ್ಲಿ ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡ ದಿವ್ಯಾ ಸಿಂಗ್‌

ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ

ಉತ್ತರ ಪ್ರದೇಶದ ದಿವ್ಯಾ ಸಿಂಗ್ ಅವರು ಕಠ್ಮಂಡುವಿನಿಂದ 14 ದಿನಗಳಲ್ಲಿ 17,560 ಅಡಿ ಎತ್ತರದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಸೈಕಲ್ ಮೂಲಕ ತಲುಪಿ ಇತಿಹಾಸ ನಿರ್ಮಿಸಿದ್ದಾರೆ. ಮೈನಸ್ ತಾಪಮಾನ, ಕಡಿಮೆ ಆಮ್ಲಜನಕ ಮತ್ತು ಕಠಿಣ ಪರ್ವತ ಮಾರ್ಗಗಳ ನಡುವೆಯೂ ಈ ಸಾಧನೆ ಮಾಡಿದ ಅವರು ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

"ನಿಮ್ಮ ಬ್ಲೌಸ್ ಹರಿದುಕೊಳ್ಳಿ"; ಚುನಾವಣಾ ಪ್ರತಿಸ್ಪರ್ಧಿಗಳನ್ನು ಮಣಿಸಲು ಮಹಿಳೆಯರನ್ನು ಬಳಸಿ ಎಂದ ಕಾಂಗ್ರೆಸ್ ನಾಯಕ!

ಪ್ರತಿಸ್ಪರ್ಧಿ ಮಣಿಸಲು ಮಹಿಳೆಯರನ್ನು ಬಳಸುವಂತೆ ಹೇಳಿದ ಕಾಂಗ್ರೆಸ್ ನಾಯಕ!

ಕೇರಳಂನಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಇಡುಕ್ಕಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಸಿಪಿ ಮ್ಯಾಥ್ಯೂ ಅವರು ಪಕ್ಷದ ಕಾರ್ಯಕರ್ತರನ್ನು ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಲು ಮಹಿಳೆಯರ ಬಳಿ ಹೇಳುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ.

ವಿಚ್ಛೇದಿತ ಮಗಳಿಗೆ ಹಾರ ಹಾಕಿ ಮನೆಗೆ ಸ್ವಾಗತ ಮಾಡಿದ ನಿವೃತ ನ್ಯಾಯಾಧೀಶ; ವಿಡಿಯೋ ನೋಡಿ

ವಿಚ್ಛೇದಿತ ಮಗಳಿಗೆ ಹಾರ ಹಾಕಿ ಮನೆಗೆ ಸ್ವಾಗತ ಮಾಡಿದ ನಿವೃತ ನ್ಯಾಯಾಧೀಶ

ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿ ವಿಚ್ಛೇದನವಾದರೆ ವಿಷಯವು ಬಹಿರಂಗವಾಗದಂತೆ ಕಾಯ್ದುಕೊಳ್ಳಲು ಯತ್ನಿಸುವ ಜನರ ನಡುವೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಮನೆಗೆ ಬಂದ ಮಗಳಿಗೆ ಹಾರ ಹಾಕಿ ಅವರು ಸಂಭ್ರಮಿಸಿದರು.

ವಿರಾಟ್‌ ಕೊಹ್ಲಿಯ "ನೋ-ಲುಕ್ ಸಿಕ್ಸರ್‌" ಕಂಡು ಫಿದಾ ಆದ ಪತ್ನಿ ಅನುಷ್ಕಾ; ವಿಡಿಯೊ ವೈರಲ್‌

ವಿರಾಟ್‌ ಕೊಹ್ಲಿಯ "ನೋ-ಲುಕ್ ಸಿಕ್ಸರ್‌"ಗೆ ಮನಸೋತ ಅನುಷ್ಕಾ ಶರ್ಮ

Virat Kohli's No-Look Six: ಖಲೀಲ್ ಅಹ್ಮದ್ ಅವರ ಸ್ಲೆಡ್ಜಿಂಗ್‌ನಿಂದ ಕೋಪಗೊಂಡ ವಿರಾಟ್ ಕೊಹ್ಲಿ, ಮುಂದಿನ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ "ನೋ-ಲುಕ್" ಸಿಕ್ಸ್ ಬಾರಿಸುವ ಮೂಲಕ ಬಲವಾದ ಉತ್ತರ ನೀಡಿದರು. ಕೊಹ್ಲಿಯ ಈ ಸಿಕ್ಸರ್‌ ಕಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.

ಯುದ್ಧದ ಫೋಟೊ ಪೋಸ್ಟ್ ಮಾಡಿದ 25 ವರ್ಷದ ಫ್ಲೈಟ್ ಅಟೆಂಡರ್‌ ಬಂಧನ

ದುಬೈನಲ್ಲಿ ಯುದ್ಧದ ಫೋಟೋ ಶೇರ್ ಮಾಡಿದ್ದಕ್ಕೆ ಫ್ಲೈಟ್ ಸಿಬ್ಬಂದಿಯ ಬಂಧನ!

ಯುದ್ಧದ ದಾಳಿಯ ಫೋಟೋ ಶೇರ್ ಮಾಡಿದ ಪರಿಣಾಮ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಿರುವ ಘಟನೆಯೊಂದು ನಡೆದಿದೆ. ಯುಎಇಯಲ್ಲಿ ಸ್ಥಳೀಯ ವಿಮಾನಯಾನ ಸಂಸ್ಥೆ ಯಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ 25 ವರ್ಷದ ಬ್ರಿಟಿಷ್ ಫ್ಲೈಟ್ ಅಟೆಂಡೆಂಟ್ ಅನ್ನು ಪೊಲೀಸರು ಬಂಧಿಸಿದ್ದಾರೆ..

6ನೇ ಬಾರಿ ವಿವಾಹ! 25 ವರ್ಷದ ಪ್ರಿಯತಮನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 55ರ ಮಹಿಳೆ; ಬರೋಬ್ಬರಿ 68 ಕೋಟಿ ರುಪಾಯಿ ವರದಕ್ಷಿಣೆ

25 ವರ್ಷದ ಯುವಕನನ್ನು ಮದುವೆಯಾದ 55ರ ಮಹಿಳೆ; 68 ಕೋಟಿ ರು. ವರದಕ್ಷಿಣೆ

55 ವರ್ಷದ ಮಹಿಳೆಯೊಬ್ಬಳು 25 ವರ್ಷದ ಯುವಕನನ್ನು ಮದುವೆಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಉದ್ಯಮಿಯಾಗಿರುವ ಮಹಿಳೆಯು, 68 ಕೋಟಿ ರುಪಾಯಿ ವರದಕ್ಷಿಣೆ ನೀಡಿ ವಿವಾಹವಾಗಿದ್ದಾಳೆ. 55 ವರ್ಷದ ಯು ವೆನ್ಹಾಂಗ್, ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಡೇಲಿಯನ್‌ನಲ್ಲಿ ಜನಿಸಿದಳು. ಯುವಕನನ್ನು ಮದುವೆಯಾಗುವ ಮುನ್ನ ಆಕೆ ಅದಾಗಲೇ 5 ಮದುವೆಯಾಗಿದ್ದಳು.

ಬಾಹ್ಯಾಕಾಶದಿಂದ ಆಕರ್ಷಿಸಿದ ಭೂಮಿಯ ಅದ್ಭುತ ನೋಟಕ್ಕೆ ನೆಟ್ಟಿಗರು ಫಿದಾ!

ಬಾಹ್ಯಾಕಾಶದಿಂದ ಕಂಡು ಬಂದ ಭೂಮಿಯ ಅದ್ಭುತ ನೋಟ!

Viral News: ಗಗನ ಯಾತ್ರಿಗಳು ಚಂದ್ರನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 50ವರ್ಷಗಳ ಬಳಿಕ ಮಾನವರು ಮತ್ತೆ ಚಂದ್ರನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ಭೂಮಿಯ ಅದ್ಭುತ ಹೈ-ರೆಸ ಲ್ಯೂಶನ್ ಚಿತ್ರವನ್ನು ನಾಸಾ ಇದೀಗ ಹಂಚಿಕೊಂಡಿದೆ . ''ನಮ್ಮ ಭೂಮಿ.. ಇದೇ ನಾವು!" ಎಂಬ ಶೀರ್ಷಿಕೆಯೊಂದಿಗೆ ನಾಸಾ ಫೋಟೋವನ್ನು ಪೋಸ್ಟ್ ಮಾಡಿದೆ...

ಮೀನುಗಾರಿಕೆ ನಡೆಸುತ್ತಿದ್ದಾಗ ಗಂಟಲಿನಲ್ಲಿ ಜೀವಂತ ಮೀನು ಸಿಲುಕಿ ವ್ಯಕ್ತಿ ದುರ್ಮರಣ

ಗಂಟಲಿನಲ್ಲಿ ಜೀವಂತ ಮೀನು ಸಿಲುಕಿ ವ್ಯಕ್ತಿ ದುರ್ಮರಣ

fish got stuck in throat: ಮೀನು ಹಿಡಿಯುತ್ತಿದ್ದಾಗ ಜೀವಂತ ಮೀನೊಂದು ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೀನು ಹಿಡಿಯಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹಿಡಿದಿದ್ದ ಮೀನು ಕೈತಪ್ಪುತ್ತೆ ಎಂದು ಬಾಯಲ್ಲಿ ಇಟ್ಟುಕೊಂಡಿದ್ದ.

ತಾಜ್ ಮಹಲ್ ನೋಡಲು ನ್ಯೂಯಾರ್ಕ್‌ ಯುವಕನಿಂದ  24 ಗಂಟೆಗಳ ಭಾರತ ಪ್ರವಾಸ; ವಿಡಿಯೊ ವೈರಲ್‌

ತಾಜ್ ಮಹಲ್ ವೀಕ್ಷಿಸಿ ಒಂದೇ ದಿನದಲ್ಲಿ ಹೊರಟ ನ್ಯೂಯಾರ್ಕ್ ಇನ್​ಫ್ಲುಯೆನ್ಸರ್‌

Viral Video: ಅಮೆರಿಕದ ಯುವಕ ನ್ಯೂಯಾರ್ಕ್‌ನಿಂದ ಭಾರತಕ್ಕೆ ಕೇವಲ ಒಂದು ದಿನದ ಮಟ್ಟಿಗೆ ತಾಜ್ ಮಹಲ್ ವೀಕ್ಷಿಸಲು ಆಗಮಿಸಿದ ವಿಡಿಯೊ ವೈರಲ್ ಆಗಿದೆ. ಕೆವಿನ್ ಡ್ರೋನಿಯಾಕ್ ಎಂಬ ಟ್ರಾವೆಲ್ ಇನ್​ಫ್ಲುಯೆನ್ಸರ್‌ ತಾಜ್ ಮಹಲ್ ವೀಕ್ಷಿಸುವ ಏಕೈಕ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ್ದಾರೆ.

ದೆಹಲಿ ಬೀದಿಯಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ವೈರಲ್ ವಿಡಿಯೊದ ಅಸಲಿಯತ್ತೇನು?

ಕಿರುಕುಳ ನೀಡಿದ ವ್ಯಕ್ತಿಯನ್ನು ಬೆನ್ನಟ್ಟಿದ ವಿದೇಶಿ ಮಹಿಳೆಯರು

Viral Video: ಇತ್ತೀಚೆಗೆ ರಾಜಸ್ಥಾನದ ಜಲ್ ಮಹಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಪುರುಷರ ಗುಂಪೊಂದು ಕಿರುಕುಳ ಎಸಗಿ ಅನುಮತಿ ಇಲ್ಲದೆ ಹೆಗಲ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಈ ನಡುವೆ ದೆಹಲಿಯಲ್ಲಿ ವಿದೇಶಿ ಮಹಿಳೆಯರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ, ಇದರಿಂದ ಮಹಿಳೆಯರು ಭಯ ಪಡದೆ ಅವನನ್ನು ಅಟ್ಟಾಡಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು?

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು  ಬಿಟ್ಟು ಹೋದ ತಾಯಿ: ಸಿಬ್ಬಂದಿ ಮಾಡಿದ್ದೇನು?

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು ಬಿಟ್ಟು ಹೋದ ತಾಯಿ

Viral News: ಚೀನಾದ ಹೆನಾನ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹೆತ್ತ ತಾಯಿಯೇ ತನ್ನ ಮಗುವನ್ನು ಹೋಟೆಲ್ ರೂಮಿನಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ‌. ಆದರೆ ಹೋಟೆಲ್ ಸಿಬ್ಬಂದಿ ಆ ಮಗುವನ್ನು ಅನಾಥವಾಗಿ ಬಿಡದೇ ತಾವೇ ಪ್ರೀತಿಯಿಂದ ಸಾಕಿ ಸಲಹಿದ್ದಾರೆ.

ಒಂದು ಪೀಸ್ ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ: ಒಂದೇ ಒಂದು ಬಾಲ್ಯದ ಫೋಟೊದಿಂದ ಬರೋಬ್ಬರಿ 33 ವರ್ಷಗಳ ನಂತರ ಒಂದಾದ ಒಡಹುಟ್ಟಿದವರು

ಬಾಲ್ಯದ ಫೋಟೊ ಮೂಲಕ ತಮ್ಮನನ್ನು ಪತ್ತೆ ಹಚ್ಚಿದ ಅಕ್ಕ

Viral News: ಒಂದು ತುಂಡು ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ 33ವರ್ಷಗಳ ನಂತರ ಒಂದಾದ ಘಟನೆ ನಡೆದಿದೆ. ಕೇವಲ ಒಂದು ಫೋಟೋ ಇಟ್ಟುಕೊಂಡು ತಮ್ಮನನ್ನು ಅಕ್ಕ ಪತ್ತೆ ಹಚ್ಚಿದ್ದಾಳೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಗೊಂಬೆಯ ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ಯುದ್ಧ ಪೀಡಿತ ಗಾಜಾದಲ್ಲಿನ ಈ ವಿಡಿಯೊ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದೇಕೆ?

ಗೊಂಬೆಯ ಅಣಕು ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ವಿಡಿಯೊ ವೈರಲ್‌

Gaza War: ಗಾಜಾದಲ್ಲಿನ ಪುಟ್ಟ ಮಕ್ಕಳು ತಮ್ಮ ಆಟದ ಗೊಂಬೆಯ ಅಣಕು ಶವ ಸಂಸ್ಕಾರ ನಡೆಸಿದ್ದಾರೆ. ಚಿಂತೆಯಿಲ್ಲದೆ ಆತವಾಡಬೇಕಾದ ಅವರ ಮನಸ್ಸಿನ ಮೇಲೆ ಯುದ್ಧ ಬೀರಿದ ಪರಿಣಾಮ ಇದು ಎನ್ನುವುದು ತಜ್ಞರ ಅಭಿಪ್ರಾಯ. ಇದೇ ಕಾರಣಕ್ಕೆ ಇಡೀ ಜಗತ್ತೇ ಈ ವಿಡಿಯೊವನ್ನು ಆತಂಕದಿಂದ ನೋಡುತ್ತಿದೆ.

ಕಾರು ಡಿಕ್ಕಿ ಹೊಡೆದ ಕೆಲವೇ ಸೆಕೆಂಡುಗಳಲ್ಲಿ ಎದ್ದು ನಿಂತ ಬಾಲಕ‌: ಭಯಾನಕ ವಿಡಿಯೊ!

ಮಗುವಿನ ಮೇಲೆ ಹರಿದ ಕಾರು; ಪ‍ವಾಡ ಸದೃಶವಾಗಿ ಪಾರು

Viral Video: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರೊಂದು ಹರಿದು ಹೋಗಿದ್ದು ಮಗು ಪವಾಡ ಸದೃಶವಾಗಿ ಪಾರಾಗಿದೆ. ಇದರ ಸಿಸಿ ಟಿವಿ ದೃಶ್ಯ ಸೆರೆಯಾಗಿದ್ದು ನಿಜಕ್ಕೂ ಅಚ್ಚರಿ ಮೂಡಿ ಸುವಂತಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕೆಲವೇ ಸೆಕೆಂಡುಗಳ ನಂತರ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಏನೂ ಆಗಿಲ್ಲ ಎಂಬಂತೆ ಮಗು ಎದ್ದು ನಿಂತಿದೆ..

‌PSL 2026: ಮೊಯಿನ್‌ ಅಲಿ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ವಾರ್ನರ್‌; ವಿಡಿಯೊ ವೈರಲ್

ಮೊಯಿನ್‌ ಅಲಿ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ವಾರ್ನರ್‌

David Warner: ವಾರ್ನರ್ ಮೊಯಿನ್ ಅಲಿ ಜೊತೆ ಅಸಮಾಧಾನಗೊಂಡಿದ್ದಕ್ಕೆ ನಿಜವಾದ ಕಾರಣ ಇನ್ನೂ ತಿಳಿದಿಲ್ಲವಾದರೂ, ಪಂದ್ಯದ ನಿರ್ಣಾಯಕ ಕ್ಷಣದಲ್ಲಿ ಅವರ ವಿಕೆಟ್ ಪತನಗೊಂಡದ್ದು ಕಾರಣವಾಗಿರಬಹುದು. ಕರಾಚಿ ಕಿಂಗ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ ಐದು ರನ್‌ಗಳು ಬೇಕಾಗಿದ್ದವು, ಆದರೆ ಮೊದಲ ಎಸೆತದಲ್ಲಿ ಮೊಯಿನ್ ಅಲಿ ವಿಕೆಟ್‌ ಕಳೆದುಕೊಂಡರು.

ಇರಾಕ್‌ನಲ್ಲಿ ಇರಾನ್‌ನ ಶಹೀದ್ ಡ್ರೋನ್ ಹಿಂಬಾಲಿಸಿದ  ಅಮೆರಿಕದ ಎಫ್ -15 ಜೆಟ್ ವಿಡಿಯೊ ವೈರಲ್

ಇರಾನ್ ಡ್ರೋನ್ ಅನ್ನು ಹಿಂಬಾಲಿಸಿದ ಅಮೆರಿಕದ ಜೆಟ್

ಇರಾನ್‌ನ ಡ್ರೋನ್ ಅನ್ನು ಅಮೆರಿಕದ ಜೆಟ್ ಹಿಂಬಾಲಿಸಿದ ಘಟನೆ ಇರಾಕ್‌ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇರಾನ್‌ನ ಶಹೀದ್ ಡ್ರೋನ್ ಅನ್ನು ಅಮೆರಿಕದ ಎಫ್ -15 ಜೆಟ್ ಹಿಂಬಾಲಿಸಿಕೊಂಡು ಹೋಗಿದೆ. ಡ್ರೋನ್ ಅನ್ನು ಗಾಳಿಯಲ್ಲಿ ಗುರಿಯಾಗಿಸಲು ಜೆಟ್ ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

ನರ್ಸರಿ ಫೀಸ್‌ 3.7 ಲಕ್ಷ ರುಪಾಯಿ! ಪದವಿ ಶಿಕ್ಷಣಕ್ಕೆ ಇಷ್ಟು ಖರ್ಚಾಗಿರಲಿಲ್ಲ ಎಂದ ನೆಟ್ಟಿಗರು

ದುಬಾರಿ ಶಿಕ್ಷಣ: ಮಗುವಿನ ನರ್ಸರಿ ಫೀಸ್ ಕೇಳಿ ದಂಗಾದ ನೆಟ್ಟಿಗರು

Viral News: ಹರಿಯಾಣದ ಗುರುಗ್ರಾಮ್‌ನ ನರ್ಸರಿ ಶಾಲೆಯ ಶುಲ್ಕದ ವಿವರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಮಗುವಿನ ನರ್ಸರಿ ಅಡ್ಮಿಷನ್‌ ಶುಲ್ಕ 1.24 ಲಕ್ಷ ರುಪಾಯಿ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಆನ್‌ಲೈನ್‌ನಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ವಿಮಾನದಲ್ಲಿ ನಟಿಗೆ ಕಿರುಕುಳ: ಪ್ರಯಾಣಿಕನ ಅಸಭ್ಯ ವರ್ತನೆ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ

ವಿಮಾನದಲ್ಲಿ ನಟಿಗೆ ಸಹಪ್ರಯಾಣಿಕನಿಂದ ಕಿರುಕುಳ

Viral Video: ವಿಮಾನ ಪ್ರಯಾಣದ ವೇಳೆ ನಟಿ ಜತೆ ಸಹಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ನಟಿ ಹಾಗೂ ಕಂಟೆಂಟ್ ಕ್ರಿಯೆಟರ್ ಉರ್ವಿ ಕೊಠಾರಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಚಾರ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಹುಟ್ಟು ಹಾಕಿದೆ.

ಕುಡಿತದ ಮತ್ತಿನಲ್ಲಿ ಬೀದಿನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ; ಮುಂಬೈಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಪಾಠ ಕಲಿಸಿದ ಸಾರ್ವಜನಿಕರು

Viral Video: ಮಹಾರಾಷ್ಟ್ರದ ಮುಂಬೈಯಲ್ಲಿ ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ನಾಯಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ. ಸದ್ಯ ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಪುಟ್ಟ ನಾಯಿ ಮರಿಯನ್ನು ಗಂಗೆಯಲ್ಲಿ ಮುಳುಗಿಸಿದ ವ್ಯಕ್ತಿ: ಮೂರ್ಖತನದ ಕೆಲಸ ಎಂದ ನೆಟ್ಟಿಗರು

ಪುಟ್ಟ ನಾಯಿ ಮರಿಯನ್ನು ಗಂಗಾ ನದಿಯಲ್ಲಿ ಮುಳುಗಿಸಿದ ವ್ಯಕ್ತಿ

Viral Video: ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ತಮ್ಮ ಪಾಪ- ಕರ್ಮಗಳನ್ನು ಹೋಗಲಾಡಿಸಲು ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ನಂಬಿಕೆಯನ್ನು ಪ್ರಾಣಿಯ ಮೇಲೆ ಹೇರಿದ್ದಾನೆ. ಪುಟ್ಟ ನಾಯಿ ಮರಿಯನ್ನು ನದಿಯಲ್ಲಿ ಹಲವು ಬಾರಿ ಮುಳುಗಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಬರೋಬ್ಬರಿ 167 ಕೋಟಿ ರುಪಾಯಿಗೆ ಮಾರಾಟವಾಯ್ತು ರಾಜಾ ರವಿ ವರ್ಮ ಕಲಾಕೃತಿ; ದಾಖಲೆ ಬರೆದ ಯಶೋದಾ-ಕೃಷ್ಣ ಪೇಟಿಂಗ್‌

ʼಯಶೋದಾ-ಕೃಷ್ಣʼ ಅತ್ಯಂತ ದುಬಾರಿ ಭಾರತೀಯ ಕಲಾಕೃತಿ

ರಾಜಾ ರವಿ ವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ಚಿತ್ರವು 167 ಕೋಟಿ ರುಪಾಯಿಗೆ ಮಾರಾಟವಾಗಿ, ಹರಾಜಿನಲ್ಲಿ ಅತಿ ದುಬಾರಿ ಭಾರತೀಯ ಕಲಾಕೃತಿಯಾಗಿ ದಾಖಲೆ ನಿರ್ಮಿಸಿದೆ. ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಖ್ಯಾತ ಉದ್ಯಮಿ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕರೂ ಆದ ಸೈರಸ್ ಎಸ್. ಪೂನವಾಲಾ ಖರೀದಿಸಿದ್ದಾರೆ.

Loading...