ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮಾನವೀಯತೆ ಇನ್ನೂ ಬದುಕಿದೆ; ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ​ಜೊಮ್ಯಾಟೊ ಡೆಲಿವರಿ ಬಾಯ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ

ಜೊಮ್ಯಾಟೊ ಬಾಯ್ ಕಷ್ಟಕ್ಕೆ ಸ್ಪಂದಿಸಿದ ಗ್ರಾಹಕ

Viral News: ಸಾಮಾನ್ಯವಾಗಿ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ಬಾಯ್‌ಯಿಂದ ಖರೀದಿಸುವುದು ಗ್ರಾಹಕರ ಕೆಲಸ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಆರ್ಡರ್ ಮಾಡಿದ ವಸ್ತು ಪಡೆದಿದ್ದು ಮಾತ್ರವಲ್ಲದೆ ಡೆಲಿವರಿ ಬಾಯ್ ಮನಸ್ಥಿತಿ ಅರ್ಥೈಸಿಕೊಂಡು ನೆರವಾಗಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ 95,000 ರುಪಾಯಿಯ ಸ್ಯಾಮ್‌ಸಂಗ್ ಟ್ಯಾಬ್ ಆರ್ಡರ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಹರಿದು ಹೋದ ಹಳೆಯ ಬುಕ್! ವಿಡಿಯೊ ನೋಡಿ

ಟ್ಯಾಬ್ ಆರ್ಡರ್‌ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಪುಸ್ತಕ!

Viral Video: ಕೆಲವೊಮ್ಮೆ ಇ ಕಾರ್ಮಸ್ ವೆಬ್‌ಸೈಟ್‌ಗಳಲ್ಲಿ ನಾವು ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೆ ಯಾವುದೇ ವಸ್ತು ಡೆಲಿವರಿ ಆಗುತ್ತದೆ. ಇದೀಗ ಗ್ರಾಹಕರೊಬ್ಬರಿಗೆ ಇದೇ ರೀತಿಯ ಅನುಭವವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 95,000 ರುಪಾಯಿ ಮೌಲ್ಯದ ಪ್ರೀಮಿಯಂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಅನ್ನು ಆರ್ಡರ್ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ಯಾಕ್ ಒಳಗೆ ಬಂದಿದ್ದು ಹರಿದು ಹೋದ ಹಳೆಯ ಬುಕ್ ಇತ್ತು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಮೊಬೈಲ್ ಕದಿಯಲು ಹೋಗಿ ತಗಲಾಕೊಂಡ ಖದೀಮ! ಚಲಿಸುವ ರೈಲಿನ ಕಿಟಕಿಯ ಹೊರಗೆ 9 ಕಿಲೋ ಮೀಟರ್‌ ನೇತಾಡಿದ ವಿಡಿಯೊ ವೈರಲ್

ಚಲಿಸುವ ರೈಲಿನಲ್ಲಿ ಫೋನ್ ಕಸಿಯಲು ಹೋದ ಕಳ್ಳನ ಫಜೀತಿ ವೈರಲ್‌

Viral Video: ಮೊಬೈಲ್ ಕಳವು ಮಾಡಲು ಹೋಗಿದ್ದ ಖದೀಮನೊಬ್ಬ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ. ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚಲಿಸುವ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕರ ಮೊಬೈಲ್ ಕದಿಯಲು ಯತ್ನಿಸಿದ್ದಾನೆ. ಆದರೆ ಪ್ರಯಾಣಿಕರು ಆತನನ್ನು ಬಿಡದೆ ಸುಮಾರು 9 ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯಿಂದ ಹೊರಗಡೆ ನೇತಾಡಿಸಿಕೊಂಡೆ ಕರೆದೊಯ್ದಿದ್ದಾರೆ.

ಇದ್ರೆ ಇಂಥ ಫ್ರೆಂಡ್‌ ಇರ್ಬೆಕಪ್ಪ; ಬಾಲ್ಯದ ಗೆಳೆಯನಿಗೆ 28 ಕೋಟಿ ರುಪಾಯಿ ಆಸ್ತಿ ದಾನ ಮಾಡಿದ 19 ವರ್ಷದ ವಿದ್ಯಾರ್ಥಿ

ಬಾಲ್ಯದ ಗೆಳೆಯನಿಗೆ ಆಸ್ತಿ ವಿಲ್ ಮಾಡಿಸಿದ 19 ವರ್ಷದ ವಿದ್ಯಾರ್ಥಿ

Viral News: ಚೀನಾದ ಲಿ ಎಂಬ ವಿದ್ಯಾರ್ಥಿ ಇತ್ತೀಚೆಗೆ ತನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಗಳನ್ನು (ಸುಮಾರು 28.1 ಕೋಟಿ ರುಪಾಯಿ) ಕಾನೂನುಬದ್ಧವಾಗಿ ತನ್ನ ಕುಟುಂಬದ ಬದಲು ಬಾಲ್ಯದ ಗೆಳೆಯನಿಗೆ ಬಿಟ್ಟುಕೊಟ್ಟಿದ್ದಾನೆ. ಇದರಲ್ಲಿ ಲಕ್ಷಾಂತರ ಯುವಾನ್ ಮೌಲ್ಯದ ಫ್ಲಾಟ್ ಮತ್ತು ಉಳಿತಾಯ ಹಣವೂ ಸೇರಿದೆ.

ಜ್ಯುವೆಲ್ಲರಿ ಶಾಪ್‌ನಲ್ಲಿ ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಶಿಕ್ಷಕಿ: ಬೆಚ್ಚಿಬೀಳಿಸುವ ದೃಶ್ಯ ವೈರಲ್

ಆಭರಣ ಅಂಗಡಿಯಲ್ಲಿ ನೀರಿನ ಬದಲಾಗಿ ಆ್ಯಸಿಡ್ ಕುಡಿದ ಮಹಿಳೆ

Viral Video: ಆಭರಣ ಅಂಗಡಿಗೆ ಭೇಟಿ ನೀಡಿದ್ದ ಶಿಕ್ಷಕಿಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಪ್ರಕರಣವೊಂದು ದಾಖಲಾಗಿದ್ದು ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯೂ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶುಕ್ರವಾರ ಸಂಜೆ ಹಾಪುರದ ಅರ್ಜುನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ತನ್ನ ತಾಯಿಯೊಂದಿಗೆ ಹತ್ತಿರದ ಆಭರಣ ಅಂಗಡಿಗೆ ಭೇಟಿ ನೀಡಿದ್ದಾಗ ಸಂಭವಿಸಿದೆ.

Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ​ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ

ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಯ ಕಾಲು ಹಿಡಿದ ಹುಚ್ಚು ಪ್ರೇಮಿ

ಮಹಾರಾಷ್ಟ್ರದ ಮುಂಬೈಯ ಬೊರಿವಲಿ ರೈಲು ನಿಲ್ದಾಣದಲ್ಲಿ ಯುವಕನ ಅತಿರೇಕದ ವರ್ತನೆ ಕಂಡು ಜನ ಕಿಡಿಕಾರಿದ್ದಾರೆ. ವಿಡಿಯೊದಲ್ಲಿ ಯುವಕನೊಬ್ಬ ಪ್ಲಾಟ್‌ಫಾರ್ಮ್ ಮೇಲೆ ಮಲಗಿ, ಯುವತಿಯೊಬ್ಬಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಯುವತಿ ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಪದೇ ಪದೆ ಪ್ರಯತ್ನಿಸಿದ್ದಾಳೆ. ಇದರ ಹೊರತಾಗಿಯೂ, ಆತ ಆಕೆಯ ಕಾಲನ್ನು ಬಿಟ್ಟಿಲ್ಲ.

"ಇಲ್ಲಿ ಬದುಕುವುದು ಸುಲಭವಲ್ಲ": ವಿದೇಶದಲ್ಲಿ ವಾಸ್ತವ್ಯ ಹೂಡಬೇಕೆಂದು ಕನಸು ಕಾಣುವವರ ಕಣ್ತೆರೆಸುವ ಅಮೆರಿಕದಲ್ಲಿ 10 ವರ್ಷ ಕಳೆದ ಭಾರತೀಯ ವ್ಯಕ್ತಿಯ ಅನುಭವ

ಅಮೆರಿಕದ ದುಬಾರಿ ಜೀವನ ಶೈಲಿಯ ಬಗ್ಗೆ ಬೇಸರ ಹೊರಹಾಕಿದ ಭಾರತೀಯ

Viral Video: ವಿದೇಶದಲ್ಲಿ ಕೆಲಸ ಮಾಡುವುದು ಹೊರಗಿನಿಂದ ಕಾಣುವಷ್ಟು ಸುಲಭವಲ್ಲ ಎಂದು ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹತ್ತು ವರ್ಷಗಳನ್ನು ಕಳೆದ ಅವರು ಅಲ್ಲಿ ಯಶಸ್ಸನ್ನು ಬೆನ್ನಟ್ಟುವ ಕಠಿಣ ಪರಿಶ್ರಮ ಹೇಗಿದೆ ಎಂದು ವಿವರಿಸಿದ್ದಾರೆ.

ರಣರಂಗವಾದ ಮದುವೆ ಮನೆ; ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ: 12 ಮಂದಿಗೆ ಗಾಯ-ವಿಡಿಯೊ ಇಲ್ಲಿದೆ

ಮದುವೆ ಮನೆಯಲ್ಲಿ ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ

Wedding Feast Turns Violent: ಮಧ್ಯಾಹ್ನದ ಮದುವೆ ಮನೆ ಊಟಕ್ಕೆ ಮಟನ್‌ ಖಾದ್ಯ ಮಾಡುವುದಾಗಿ ವಧುವಿನ ಕಡೆಯವರು ಮಾತು ಕೊಟ್ಟಿದ್ದರು. ಆದರೆ ಮಟನ್ ಬದಲಿಗೆ ಚಿಕನ್‌ ಖಾದ್ಯ ಬಡಿಸಲಾಯಿತು. ಇದರಿಂದ ಕೋಪಗೊಂಡ ವರನ ಕಡೆಯವರು ಗಲಾಟೆ ನಡೆಸಿದರು. ಕ್ಷಣಾರ್ಧದಲ್ಲೇ ಮದುವೆ ಮನೆ ರಣರಂಗದಂತಾಯ್ತು.

ಸಾರ್ಕ್ ವಿಚಾರ ಸಂಕಿರಣದಲ್ಲಿ ತಪ್ಪಾದ ನಕ್ಷೆ ಪ್ರದರ್ಶನಕ್ಕೆ ಭಾರತ ಆಕ್ಷೇಪ

ಢಾಕಾದಲ್ಲಿ ತಪ್ಪಾದ ದೇಶದ ನಕ್ಷೆ ಪ್ರದರ್ಶನ: ಭಾರತ ಆಕ್ಷೇಪ

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತೀಯ ರಾಯಭಾರಿ ಪೂಜಾ ಕುಮಾರಿ ಝಾ ಹೇಳಿದ್ದಾರೆ. ಢಾಕಾದಲ್ಲಿ ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಚಿತ್ರಿಸುವ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ರೈಲಿನ ಎಸಿ ಕೋಚನ್ನೇ ಪರ್ಸನಲ್ ಬಾರ್ ಮಾಡಿಕೊಂಡ ಯುವಕರು: ಕಿಡಿಗೇಡಿಗಳ ವಿಡಿಯೋ ವೈರಲ್‌

ಎಸಿ ಕೋಚ್‌ನಲ್ಲಿ ಎಣ್ಣೆ ಪಾರ್ಟಿ ಮಾಡಿದ ಯುವಕರು: ನೆಟ್ಟಿಗರು ಕಿಡಿ

Viral Video: ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಬಸ್, ರೈಲ್ವೆಯ ಕೋಚ್‌ಗಳಲ್ಲಿ ಜನದಟ್ಟಣೆ, ಅಶಿಸ್ತಿನ ವರ್ತನೆ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಯುವಕರ ಗುಂಪೊಂದು ಎಸಿ ಕೋಚ್ ವೊಂದನ್ನು ಪರ್ಸನಲ್ ಬಾರ್ ಆಗಿ ಪರಿವರ್ತಿಸಿದ ವಿಡಿಯೊವೊಂದು ವೈರಲ್ ಆಗಿದೆ.

ಹಿಟ್-ಅಂಡ್-ರನ್ ಪ್ರಕರಣ: ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್ ಚಾಲಕ

ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾದ ಮಹೀಂದ್ರಾ ಥಾರ್ ಚಾಲಕ

Viral Video: ಹರಿಯಾಣ ನೋಂದಣಿಯ ಮಹೀಂದ್ರಾ ಥಾರ್ ಕಾರೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಮುಂಬೈನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ...

ಮುಂಬೈನಲ್ಲಿ ಜಲಾವೃತಗೊಂಡ ರೈಲು ಹಳಿಗಳ ಮೇಲೆ ಮೀನುಗಳ ಈಜಾಟ: ವಿಡಿಯೊ ವೈರಲ್

ಮುಂಬೈನಲ್ಲಿ ಮಳೆಯ ಆರ್ಭಟ: ರೈಲ್ವೆ ಹಳಿಗಳ ಮೇಲೆಯೇ ಮೀನುಗಳ ಈಜಾಟ!

Viral Video: ರೈಲ್ವೆ ಹಳಿಗಳ ನಡುವೆ ಸಂಗ್ರಹವಾಗಿದ್ದ ಮಳೆನೀರಿನ ಮೂಲಕ ಹಲವಾರು ಮೀನುಗಳು ಓಡಾಡುತ್ತಿವೆ. ಈ ಅಸಾಮಾನ್ಯ ಕ್ಲಿಪ್ ವೀಕ್ಷಕರನ್ನು ರಂಜಿಸಿದ್ದು ಆಶ್ಚರ್ಯಚಕಿತಗೊಳಿಸಿದೆ.. ಭಾರೀ ಮಳೆಯಿಂದ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಮುಳುಗಿ ಹೋಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು. ಆದರೆ ಮೀನುಗಳು ಈ ನಿಂತ ನೀರಿನಲ್ಲಿ ಈಜಡುತ್ತಾ ಓಡಾಡುತ್ತಿವೆ..

ಭಾರತದ ಕಂಪನಿಯಲ್ಲಿ ಆಕರ್ಷಕ ಪ್ಯಾಕೇಜ್ ಇದ್ದರೂ ಅಮೆರಿಕ ಬಿಟ್ಟು ಬರದ ಭಾರತೀಯ ಯುವತಿಯರು: ಕಾರಣವೇನು?

ಭಾರತದ ಜಾಬ್ ಆಫರ್ ನಿರಾಕರಿಸಿ ಯುಎಸ್‌ನಲ್ಲಿ ಬದುಕಲು ಇಚ್ಚಿಸಿದ ಯುವತಿಯರು

Viral Video: ಹೆಚ್ಚಿನವರು ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಆಕರ್ಷಕ ವೇತನ ವಿಚಾರವಾಗಿ ಮಾತ್ರವಲ್ಲದೆ ಅಲ್ಲಿನ ಜೀವನ ಶೈಲಿ, ಹಾಗೂ ಕೆಲಸದ ವಾತಾವರಣ ಕೂಡ ಕೆಲವರನ್ನು ಆಕರ್ಷಣೆ ಮಾಡುತ್ತದೆ. ಇದೀಗ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ ಮಹಿಳೆ ಯರು ತಮ್ಮ ಕೆಲಸದ ಆಯ್ಕೆ ವಿದೇಶದಲ್ಲಿ ಯಾಕೆ ಅನ್ನೋದನ್ನು ಅಚ್ಚರಿಯ ಕೆಲವು ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..

500 ರೂ.ನೀಡಿ ಲೈಂಗಿಕ ಕ್ರಿಯೆಗೆ ಆಮಿಷ ಒಡ್ಡಿದ ಆಟೋ ಚಾಲಕ: ವಿಡಿಯೊ ಶೇರ್ ಮಾಡಿ ಆಕ್ರೋಶ ಹೊರ ಹಾಕಿದ ಯುವತಿ

ಹಗಲು ಸಮಯದಲ್ಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋಚಾಲಕ

Viral Video: ಮಹಿಳೆಯರಿಗೆ ಅಸುರಕ್ಷಿತ ಉಂಟು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಪ್ರಯಾಣದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ದಿನಕ್ಕೊಂದು ವರದಿ ಕೇಳಿ ಬರುತ್ತಲೇ ಇದೆ. ಈ ನಡುವೆ ವಿಶಾಖಪಟ್ಟಣದ ಪೆಂದುರ್ತಿ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಹಗಲು ಹೊತ್ತಿನಲ್ಲೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಯುವತಿ ಕೃತ್ಯವನ್ನು ರೆಕಾರ್ಡ್ ಮಾಡಿ ವಿಡಿಯೊ ಶೇರ್ ಮಾಡಿದ್ದಾಳೆ.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಿದ ಆನೆ! ಏನಿದು ವೈರಲ್‌ ವಿಡಿಯೋದ ಅಸಲಿಯತ್ತು?

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ರಕ್ಷಿಸಿದ ಆನೆ! ವಿಡಿಯೊ ನೋಡಿ

Viral Video: ತೀವ್ರ ಪ್ರವಾಹದ ನಡುವೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಲು ದೈತ್ಯ ಆಕಾರದ ಆನೆಯು ಪ್ರವಾಹದಲ್ಲಿಯೂ ನೀರಿಗೆ ಇಳಿಯುವುದನ್ನು ತೋರಿಸಲಾಗಿದೆ. ಆನೇಕರು ಈ ವಿಡಿಯೊ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ...

"ಇಲ್ಲಿನ ಸಾಮಾನ್ಯ ರೈಲೂ ಸಹ ಇಷ್ಟು ಕ್ಲೀನ್‌ ಆಗಿರುತ್ತೆ"! ದಕ್ಷಿಣದ ಜನರ ನಾಗರಿಕ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ!

ತಮಿಳುನಾಡಿನ ಪ್ಯಾಸೆಂಜರ್ ರೈಲಿನ ಸ್ವಚ್ಛತೆಗೆ ಮೆಚ್ಚುಗೆ ನೀಡಿದ ಪ್ರಯಾಣಿಕ

Viral Video; ಸಾಮಾನ್ಯ ಪ್ಯಾಸೆಂಜರ್ ರೈಲೊಂದರ ಸ್ವಚ್ಛತೆಯನ್ನು ಶ್ಲಾಘಿಸಿ ಪ್ರಯಾಣಿಸಿದ ಆರ್. ಗೌರವ್ ಎಂಬವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಶೌಚಾಲಯಗಳು, ವಾಶ್ ಬೇಸಿನ್ ಮತ್ತು ರೈಲಿನ ನೆಲ, ಹಾಗೆಯೇ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿವೆ ಎಂದು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ‌.

ಕ್ಯಾಬ್‌ನಲ್ಲಿ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣಿಕನಿಗೆ ಕ್ಲಾಸ್! ಅರ್ಧದಲ್ಲೇ ಪ್ರಯಾಣ ಕ್ಯಾನ್ಸಲ್ ಮಾಡಿದ ಚಾಲಕ!

ಕಾರಿನೊಳಗೆ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣವೇ ಕ್ಯಾನ್ಸಲ್ ಮಾಡಿದ ಚಾಲಕ!

Viral News: ಪ್ರಯಾಣಿಕನೊಬ್ಬ ಕ್ಯಾಬ್ ನಲ್ಲಿ ಸಿಗರೇಟ್ ಹಚ್ಚಿದ್ದಾನೆ ಎಂಬ ಕಾರಣಕ್ಕೆ ಚಾಲಕ ಆಕ್ರೋಶ ಗೊಂಡಿದ್ದು ತನ್ನ ಕಾರಿನಲ್ಲಿ ಧೂಮಪಾನ ಮಾಡಲು ಅವಕಾಶ ಇಲ್ಲ ಎಂದು ಕಿಡಿಕಾರಿದ್ದಾನೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

80ರ ಹರೆಯದಲ್ಲೂ ಪತ್ನಿಯ ಆರೋಗ್ಯದ ವೆಚ್ಚಕ್ಕೆ  ಟ್ಯಾಕ್ಸಿ ಓಡಿಸುವ ವೃದ್ಧ; ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ

ಅನಾರೋಗ್ಯ ಪೀಡಿತ ಪತ್ನಿಗಾಗಿ ಟ್ಯಾಕ್ಸಿ ಓಡಿಸುವ 80ರ ವೃದ್ಧ! ವಿಡಿಯೊ ನೋಡಿ

Viral News: ವಯಸ್ಸು 80 ದಾಟಿದರೂ, ದೇಹದಲ್ಲಿ ಶಕ್ತಿ ಕುಂದಿದ್ದರೂ ತಮ್ಮ ಪತ್ನಿಯ ರಕ್ಷಣೆಗಾಗಿ ಟ್ಯಾಕ್ಸಿ ಓಡಿಸುವ ಮೂಲಕ ಈ ವೃದ್ಧ ವ್ಯಕ್ತಿ ಹೋರಾಡುತ್ತಿದ್ದಾರೆ. ತಮ್ಮ 67 ವರ್ಷದ ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದು ಅವರನ್ನು ಸಾಕಲು ಟ್ಯಾಕ್ಸಿ ಪ್ರಯಾಣ ಆರಂಭ ಮಾಡಿದ್ದಾರೆ. ಇವರ ಈ ಹೃದಯ ಸ್ಪರ್ಶಿ ಕಥೆ ಕೇಳಿ ನೆಟ್ಟಿಗರು ನಿಜಕ್ಕೂ ಸ್ಪೂರ್ತಿದಾಯಕ ಎಂದಿದ್ದಾರೆ.

ಪ್ರವಾಹ ಬಂದರೂ ಉದ್ಯೋಗಿಗೆ ವರ್ಕ್ ಫ್ರಮ್ ಹೋಮ್ ನಿರಾಕರಿಸಿದ ಮ್ಯಾನೇಜರ್: ಇಂಟರ್‌ನೆಟ್‌ನಲ್ಲಿ ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌!

ಪುಣೆ ಉದ್ಯೋಗಿಯ WFH ವಿನಂತಿಯನ್ನು ತಿರಸ್ಕರಿಸಿದ ಮ್ಯಾನೇಜರ್!

Viral News: ಭಾರೀ ಮಳೆಯ ಕಾರಣದಿಂದ ಪುಣಿಯ ಹಲವು ಸ್ಥಳಗಳಲ್ಲಿ ಜಲವೃತಗೊಂಡು ರೋಡ್ ಬ್ಲಾಕ್ ಆಗಿತ್ತು. ಹೀಗಾಗಿ ಕಂಪನಿಯೂ ಸುರಕ್ಷತೆಗೆ ಆಧ್ಯತೆ ನೀಡಿ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಉದ್ಯೋಗಿಯೊಬ್ಬರು ಕೇಳಿದ್ದರು. ಆದರೆ ಮ್ಯಾನೇಜರ್ ಈ ವಿನಂತಿ ಯನ್ನು ತಿರಸ್ಕರಿಸಿ ಆಫೀಸಿಗೆ ಬರುವಂತೆ ಒತ್ತಾಯಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಛೇ ಇದೆಂಥಾ ವರ್ತನೆ": ಟ್ರೈನ್‌ನಲ್ಲಿ ಅಸ್ವಸ್ಥ ವೃದ್ಧನಿಗೆ ಸೀಟು ನಿರಾಕರಿಸಿ ವಾಂತಿ ಮಾಡಿದ್ದಕ್ಕೆ ಕಪಾಳಮೋಕ್ಷ ಮಾಡಿದ ಯುವತಿ!

ಅಸ್ವಸ್ಥ ವ್ಯಕ್ತಿಗೆ ಸೀಟು ನಿರಾಕರಿಸಿ ಕಪಾಳಮೋಕ್ಷ ಮಾಡಿದ ಯುವತಿ

Viral News: ಶಿಕ್ಷಣ ಗಿಟ್ಟಿಸಿಕೊಂಡ ಯುವಕ- ಯುವತಿಯರೇ ಕನಿಷ್ಠ ಸಹಾನುಭೂತಿ ಇಲ್ಲದಂತೆ ವರ್ತಿಸುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿ ಲೋಕಲ್ ರೈಲಿನಲ್ಲಿ ಅಸ್ವಸ್ಥರಾಗಿದ್ದ ವೃದ್ಧರೊಬ್ಬರು ಯುವತಿಯ ಬಳಿ ಸೀಟು ಕೇಳಿದ್ದು ಆಕೆ ನಿರಾಕರಣೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ವಾಂತಿ ಮಾಡಿದ್ದಾರೆಂದು ಕಪಾಳಮೋಕ್ಷ ಮಾಡಿದ್ದಾಳೆ‌. ಈ ಪೋಸ್ಟ್ ನೋಡಿದ ಅನೇಕರು ಯುವತಿಯ ವರ್ತನೆ ಕುರಿತು ಕಿಡಿಕಾರಿದ್ದಾರೆ.

ಅನಾರೋಗ್ಯವಿದೆ ಎಂದರೂ ಸರಿಯಾದ ಕಾರಣ ಕೊಟ್ಟು ರಜೆ ಹಾಕಿ ಎಂದ HR; ಕಂಪೆನಿಯ ನಿಯಮ ಕಂಡು ಉದ್ಯೋಗಿ ಶಾಕ್‌!

ಅನಾರೋಗ್ಯ ರಜೆಗೂ ಕಟ್ಟುನಿಟ್ಟಿನ ಕಾರಣ ಕೇಳಿದ ಹೆಚ್ ಆರ್: ನೆಟ್ಟಿಗರು ಆಕ್ರೋಶ

Viral News: ಆರೋಗ್ಯ ತೊಂದರೆ ಎಂದಾಗ ರಜೆಯೂ ಅನಿವಾರ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ಉದ್ಯೋಗಿ ತಮಗೆ ಹುಷಾರಿಲ್ಲ ಎಂದು ಎಚ್ ಆರ್ ಗೆ ಸಂದೇಶ ಕಳುಹಿಸಿದಾಗ ಅವರ ಪ್ರತಿಕ್ರಿಯೆ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿ ಮೂಲದ ಉದ್ಯೋಗಿಯೂ ಎಚ್ ಆರ್ ನ ರೆಸ್ಪಾನ್ಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಭಾರೀ ಚರ್ಚೆಯಾಗುತ್ತಿದೆ.

ನಿಯಂತ್ರಣ ಕಳೆದುಕೊಂಡ ನಿಲ್ಲಿಸಿದ್ದ ಕಾರು: ಪ್ರವಾಸಿಗರ ಕಣ್ಮುಂದೆಯೇ ಇಳಿಜಾರಿನ ಪ್ರಪಾತಕ್ಕೆ ಉರುಳಿದ ಭಯಾನಕ ದೃಶ್ಯ ವೈರಲ್‌

ಇಳಿಜಾರು ಪ್ರಪಾತಕ್ಕೆ ಉರುಳಿದ ಕಾರು! ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು

Viral Video: ಪ್ರವಾಸಿ ಸ್ಥಳಕ್ಕೆ ಹೋಗುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳಷ್ಟು ಅಗತ್ಯ..ಇದೀಗ ಜಮ್ಮು ಮತ್ತು ಕಾಶ್ಮೀರದ ಖ್ಯಾತ ಗುರೇಜ್ ಕಣಿವೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರು ಕಾರಿನಿಂದ ಇಳಿದ ಕೆಲವೇ ಕ್ಷಣದಲ್ಲಿ ಕಾರು ಪ್ರಪಾತಕ್ಕೆ ಬಿದ್ದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್, ಕಾರು ಬಿದ್ದಾಗ ಅದರೊಳಗೆ ಯಾರೂ ಇರಲಿಲ್ಲ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...

ನದಿಯಲ್ಲಿ ತೇಲಿಕೊಂಡು ಬಂದಿದ್ದು ದೊಡ್ಡ ಮೀನುಗಳಲ್ಲ ಅಡುಗೆ ಅನಿಲದ ಸಿಲಿಂಡರ್‌ಗಳು! ವಿಡಿಯೊ ನೋಡಿ

ನೀರಿನಲ್ಲಿ ತೇಲಿ ಬಂದ ಅಡುಗೆ ಅನಿಲದ ಸಿಲಿಂಡರ್‌ಗಳು !

ನದಿ ನೀರಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಗಳು ಹರಿದು ಬಂದರೆ ಹೇಗಿರಬಹುದು... ಎಂದಾದರೂ ಯೋಚಿಸಿದ್ದೀರಾ ? ಆದರೆ ಈ ಘಟನೆ ಈಗ ಮಹಾರಾಷ್ಟ್ರದಲ್ಲಿ ನಡೆದಿದೆ. ಭಾರಿ ಮಳೆಯಿಂದಾಗಿ ಹೆಚ್ ಪಿಸಿಎಲ್ ಸ್ಥಾವರದೊಳಗೆ ಪ್ರವಾಹ ನೀರು ನುಗ್ಗಿದ್ದು ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳನ್ನು ನದಿಯಲ್ಲಿ ಹೊತ್ತೊಯ್ದಿದೆ. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೋತರೂ ಬುದ್ಧಿ ಕಲಿಯದ ದೀದಿ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್‌

ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ

Mamata Banerjee: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಿಎಂಸಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದಿದ್ದು, ವಿಡಿಯೊ ವೈರಲ್‌ ಆಗಿದೆ.

Loading...