ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್‌

ಉಚಿತ ಆಹಾರಕ್ಕಾಗಿ ಬೆಂಗಳೂರಿನ ರೆಸ್ಟೊರೆಂಟ್ ನಲ್ಲಿ ಮುಗಿಬಿದ್ದ ಜನ!

Viral Video: ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಉಚಿತ ಆಹಾರದ ಆಫರ್ ನೀಡಿದ್ದಕ್ಕೆ ಜನ ತುಂಬಿಹೋಗಿರುವ ಘಟನೆಯೊಂದು ನಡೆದಿದೆ‌. ರೆಸ್ಟೋರೆಂಟ್‌ ನಲ್ಲಿ 'ಉಚಿತ ಆಹಾರ'ಕ್ಕಾಗಿ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ವೈರಲ್ ಆಗಿದೆ..

ಸಂದರ್ಶನಕ್ಕೆ 40 ನಿಮಿಷ ಕಾಯಿಸಿ ಕ್ಷಮೆ ಕೇಳದ ಸಂಸ್ಥಾಪಕ; ಕೆಲಸವನ್ನೇ ತಿರಸ್ಕರಿಸಿದ ಬೆಂಗಳೂರು ಉದ್ಯಮಿ!

ಸಂಸ್ಥಾಪಕನ ನಡೆ ಕಂಡು ಕೆಲಸದ ಆಫರ್ ತಿರಸ್ಕಾರ ಮಾಡಿದ ಖ್ಯಾತ ಉದ್ಯಮಿ!

Viral News: ಇಲ್ಲೊಬ್ಬ ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು ಕಂಪನಿಯ ಸಿಇಒ 40 ನಿಮಿಷದ ವರೆಗೆ ಕಾಯಿಸಿದ ಘಟನೆ ನಡೆದಿದೆ. ಇಷ್ಟು ಸಮಯದವರೆಗೂ ಕಾಯಿಸಿದರೂ ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ ಇರುವ ಕಾರಣ ಕೆಲಸದ ಆಫರ್ ಅನ್ನೇ ಇವರು ನಿರಾಕರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬಡತನವಿದ್ದರೂ ನಗು ಮಾಸಿಲ್ಲ! ಬೆಳಿಗ್ಗೆ ರ‍್ಯಾಪಿಡೋ ರೈಡರ್‌, ಬಳಿಕ ಆಫೀಸ್‌, ಈ ವ್ಯಕ್ತಿಯ ಕಥೆ ಕೇಳಿದ್ರೆ ಮನಸ್ಸು ಮರುಗುವುದು ಗ್ಯಾರಂಟಿ

ಜೀವನ ನಿಭಾಯಿಸಲು ರ‍್ಯಾಪಿಡೋ ಜೊತೆಗೆ ಆಫೀಸ್‌ ಕೆಲಸ: ಪೋಸ್ಟ್ ನಲ್ಲಿ ಏನಿದೆ?

Viral News: ಕೆಲವೊಬ್ಬರು ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಳ್ಳುತ್ತಾರೆ.ಇದೆಲ್ಲದರ ನಡುವೆ ಜೀವನದಲ್ಲಿ ಬಹಳಷ್ಟು ನೊಂದಿದ್ದರೂ ನಗುತ್ತಾ ಬದುಕು ಸಾಗಿಸುವ ಅನೇಕ ಜನರನ್ನು ನಾವು ನೋಡಿ ರುತ್ತೇವೆ.ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ನಡೆದ ಈ ಘಟನೆಯೂ ಎಲ್ಲರ ಕಣ್ಣಲ್ಲಿ ನೀರು ತರಿಸು ವಂತೆ ಮಾಡಿದೆ. ಇಲ್ಲೊಬ್ಬರು ದಿನದ ಜೀವನ ಸಾಗಿಸಲು ರ‍್ಯಾಪಿಡೋ ಓಡಿಸಿ, ಮತ್ತೆ ಆಫೀಸ್ ಕೆಲಸಕ್ಕೆ ತೆರಳುವ ವ್ಯಕ್ತಿಯ ಜೀವನಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಮ, ಸೀತೆ, ಕೃಷ್ಣನಿಗೆ ಅವಮಾನ: ವಿಡಿಯೋ ತೆಗೆದುಹಾಕಲು ಧ್ರುವ ರಥೀಗೆ 15 ದಿನಗಳ ಗಡುವು

ಆಕ್ಷೇಪಾರ್ಹ ವಿಡಿಯೋ ತೆಗೆಯಲು ಧ್ರುವ ರಥೀಗೆ 15 ದಿನಗಳ ಗಡುವು

ಹಿಂದೂ ದೇವರಾದ ಶ್ರೀರಾಮ, ಸೀತೆ, ಶ್ರೀಕೃಷ್ಣ ಮಾಂಸಾಹಾರ, ಮದ್ಯ ಸೇವಿಸಿದ್ದಾರೆ ಎನ್ನುವ ವೀಡಿಯೊವನ್ನು ಯೂಟ್ಯೂಬರ್ ಧ್ರುವ ರಥೀ ಹಂಚಿಕೊಂಡಿದ್ದು, ಇದನ್ನು ತೆಗೆದು ಹಾಕಲು ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಶುಕ್ರವಾರ 15 ದಿನಗಳಲ್ಲಿ ವೀಡಿಯೊ ತೆಗೆದು ಹಾಕಲು ಆದೇಶಿಸಿದೆ.

ರಸ್ತೆ ಮಧ್ಯೆ ನೀರಿನಿಂದ ತುಂಬಿಹೋಗಿದ್ದ ಗುಂಡಿಗೆ ಬಿದ್ದ ಬೈಕ್; ದಂಪತಿಗೆ ಗಂಭೀರ ಗಾಯ!

ಗುಜರಾತ್ ನಲ್ಲಿ ಗುಂಡಿಗೆ ಬಿದ್ದ ದಂಪತಿಗಳ ಬೈಕ್: ವಿಡಿಯೊ ವೈರಲ್

Viral Video: ಗುಜರಾತ್ ನ ಜುನಾಗಢ್ ನಲ್ಲಿ ಭಾರಿ ಮಳೆಯ ಪ್ರಭಾವದಿಂದ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿ ರಸ್ತೆಯ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ‌. ಈ ದೃಶ್ಯವು ರಸ್ತೆ ಸುರಕ್ಷತೆ ಮತ್ತು ನಾಗರಿಕ ಮೂಲಸೌಕರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ...

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ಮರಳಿದ ಕುಟುಂಬ: ಈ ನಡೆಗೆ ಕಾರಣ ಏನೆಂದು ಸತ್ಯ ಬಿಚ್ಚಿಟ್ಟ ವ್ಯಕ್ತಿ!

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ವಾಪಸ್ಸಾದ ಕುಟುಂಬ: ಕಾರಣವೇನು?

Viral Video: ಜರ್ಮನಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದ ಭಾರತೀಯ ಕುಟುಂಬ ವೊಂದು ಕೊನೆಗೂ ಭಾರತದಲ್ಲೇ ಬದುಕು ಸಾಗಿಸುವ ಇಚ್ಚೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ‌. ಯಾವುದೇ ಒತ್ತಡ,ಅಥವಾ ಅಸಮಾಧಾನದಿಂದ ಜರ್ಮನಿ ತ್ಯಜಿಸಿಲ್ಲ,ಕೇವಲ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ...

ಚಲಿಸುವ ಲೋಕಲ್ ರೈಲಿನ ಮೇಲೆ ಕಲ್ಲು ಎಸೆದ ಮಹಿಳೆ! ಚಾಲಕನ ಕ್ಯಾಬಿನ್ ಗ್ಲಾಸ್ ಗೆ ಹಾನಿ!

ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ಎಸೆದು ಕ್ಯಾಬಿನ್ ಪುಡಿಪುಡಿ ಮಾಡಿದ ಮಹಿಳೆ

Viral News: ಚಲಿಸುತ್ತಿದ್ದ ಲೋಕಲ್ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು, ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿನ ಮುಂಭಾಗಕ್ಕೆ ದೊಡ್ಡ ಕಲ್ಲನ್ನು ಎಸೆದಿರುವ ದೃಶ್ಯವೊಂದು ಕಂಡು ಬಂದಿದೆ. ಈ ಘಟನೆಯು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಮಹಿಳೆ ಯಾಕೆ ಈ ರೀತಿಯಾಗಿ ವರ್ತಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಚಲಿಸುತ್ತಿದ್ದ KSRTC ಯಿಂದ ಜಿಗಿದು ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಉಳಿಸಿದ ನರ್ಸ್‌ಗಳು

ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಉಳಿಸಿದ ನರ್ಸ್‌ಗಳು

ಟ್ರಾಫಿಕ್‌ನಲ್ಲಿ ನಿಂತಿದ್ದ ವ್ಯಕ್ತಿಗೆ ಏಕಾಏಕಿ ಹೃದಯಾಘಾತವಾಗಿದ್ದು, ನರ್ಸಿಂಗ್‌ ವಿದ್ಯಾರ್ಥಿನಿಯರಿಬ್ಬರ ಸಮಯಪ್ರಜ್ಞೆಯಿಂದಾಗಿ ವ್ಯಕ್ತಿಯ ಪ್ರಾಣ ಉಳಿದಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಮತ್ತು ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್, 43 ವರ್ಷದ ವ್ಯಕ್ತಿಗೆ ಸಿಪಿಆರ್‌ ನೀಡಿದ್ದಾರೆ.

ಇಡೀ ಕೆಫೆಯನ್ನೇ  ಧ್ವಂಸಗೊಳಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: ಅಧಿಕಾರಿಯ ವರ್ತನೆಗೆ ನೆಟ್ಟಿಗರು ಕಿಡಿ!

ಕೆಫೆಗೆ ನುಗ್ಗಿ ದರ್ಪ ತೋರಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: ವಿಡಿಯೊ ವೈರಲ್

Viral Video: ಪೋಲೀಸ್ ಅಧಿಕಾರಿಯೊಬ್ಬ ಕೆಫೆಯೊಂದಕ್ಕೆ ನುಗ್ಗಿ ಗ್ರಾಹಕರ ಮೇಲೆ ದರ್ಪ ತೋರಿಸಿ ದ್ದಾನೆ. ಕೆಫೆಯೊಂದಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಕನ್ನಡಕವನ್ನು ಒಡೆದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಕೆಫೆಯ ಸಿಬ್ಬಂದಿಯನ್ನು ನಿಂದಿಸಿ ಗ್ರಾಹಕರನ್ನು ಬೆದರಿಸಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ..

15 ರೂಪಾಯಿ ಬ್ಲಿಂಕಿಟ್ ಆರ್ಡರ್ ಮೇಲೆ 500 ರೂಪಾಯಿ ಟಿಪ್ಸ್ ನೀಡಿದ ಯುವತಿ! ಡೆಲಿವರಿ ಬಾಯ್ ಹೇಳಿದ್ದೇನು?

15 ರೂಪಾಯಿಯ ಆರ್ಡರ್‌ಗೆ 500 ರೂಪಾಯಿ ಟಿಪ್ಸ್ ನೀಡಿದ ಮಹಿಳೆ

Viral Video: ಯುವತಿಯೊಬ್ಬಳು ಡೆಲಿವರಿ ಬಾಯ್ ಮುಖದಲ್ಲಿ ಮಂದಹಾಸ ಬೀರಿಸಿದ್ದು ಟಿಪ್ಸ್ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಕೇವಲ ಹದಿನೈದು ರೂಪಾಯಿ ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದ್ದು ಆದರೆ ತಲುಪಿಸಲು ಬಂದ ಡೆಲಿವರಿ ಬಾಯ್ ಗೆ 500 ರೂಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಡೆಲಿವರಿ ಬಾಯ್ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಭಾರೀ ಟ್ರೆಂಡ್‌ ಆಯ್ತು "How to kill men; ಯುವತಿ ಕೈಯಲ್ಲಿ ಪುಸ್ತಕ ಕಂಡ ಜನರು ಹೇಳಿದ್ದೇನು?

ಮೆಟ್ರೋದಲ್ಲಿ 'ಹೌ ಟು ಕಿಲ್ ಮೆನ್' ಎಂಬ ಪುಸ್ತಕ ಓದುತ್ತಿದ್ದ ಮಹಿಳೆ!

Viral News: ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿಚಿತ್ರ ಶೀರ್ಷಿಕೆಯ ಪುಸ್ತಕ ಹಿಡಿದು ಓದುತ್ತಿರುವ ದೃಶ್ಯ ವೊಂದು ವೈರಲ್ ಆಗಿದೆ."ಪುರುಷರನ್ನು ಕೊಲ್ಲುವುದು ಹೇಗೆ" ಎಂಬ ಪುಸ್ತಕವನ್ನು ಮಹಿಳೆ ಓದುತ್ತಿದ್ದರು‌. ಸಾಮಾನ್ಯ ಪ್ರಯಾಣದ ನಡುವೆ ಮಹಿಳೆ ಇಂತಹ ಶೀರ್ಷಿಕೆಯುಳ್ಳ ಪುಸ್ತಕ ಓದುತ್ತಿರುವುದು ಕಂಡು ಸಹ ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ..

ಬದುಕಿದ ಬಡ ಜೀವ;  ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

Viral Video: ಪ್ರಯಾಣಿಕರು ಚಲಿಸುತ್ತಿದ್ದ ರೈಲಿನ ಎಂಜಿನ್‌ನೊಳಗೆ ಸಿಲುಕಿದ್ದ ನವಿಲನ್ನು ರಕ್ಷಣೆ ಮಾಡಿದ ಘಟನೆಯೂ ಮಹಾರಾಷ್ಟ್ರದ ಶೇಗಾಂವ್ ನಲ್ಲಿ ನಡೆದಿದೆ. ನರಳಾಡುತ್ತಿದ್ದ ನವಿಲನ್ನು ರೈಲ್ವೆ ಸಿಬ್ಬಂದಿ, ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ಸ್ಥಳೀಯರು ಸೇರಿ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ..

ನಾನೇ  ಮದುಮಗ ಎಂದರೂ ಕಂಪನಿಯಲ್ಲಿ ಸಿಗದ ರಜೆ; ಸಿಇಒಗೆ ಶಾಕ್‌ ಕೊಟ್ಟ ಉದ್ಯೋಗಿ ಮಾಡಿದ್ದೇನು?

ಮದುವೆಗೆ ರಜೆ ನಿರಾಕರಿಸಿದಕ್ಕೆ ಸಿಇಒಗೆ ಇಮೇಲ್ ಮಾಡಿ ಕೆಲಸ ಬಿಟ್ಟ ಉದ್ಯೋಗಿ

Viral News: ಮದುವೆಗೆ ರಜೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಆತ ಕಂಪನಿಯ ಸಿಇಒಗೆ ರಾಜೀನಾಮೆ ಪತ್ರ ಬರೆದಿದ್ದು ಇದರಲ್ಲಿ ಬರೆದಿರುವ ಸಾಲುಗಳು ಮಾತ್ರ ಎಲ್ಲರನ್ನು ಅಚ್ಚರಿಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್‌, Video

ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ಹಾಕಿ ಹೆದರಿಸಿದ ಸಿಬ್ಬಂದಿ!

ಬೆಂಗಳೂರಿನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್​ಫೀಲ್ಡ್​​ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅಳುವ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿದ್ದಾರೆ.

"ನಮ್ಮ ನಡುವೆ ಧರ್ಮದ ಹಂಗಿಲ್ಲ": ಪಾಕಿಸ್ತಾನಿ ಸ್ನೇಹಿತನನ್ನು ಪರಿಚಯಿಸಿ ಟ್ರೋಲ್ ಆದ ಭಾರತೀಯ ವಿದ್ಯಾರ್ಥಿನಿ ಹೇಳಿದ್ದೇನು?

ಪಾಕಿಸ್ತಾನಿ ಸ್ನೇಹಿತನನ್ನು ರೀಲ್ಸ್‌ನಲ್ಲಿ ಪರಿಚಯಿಸಿದ ವಿದ್ಯಾರ್ಥಿನಿ

Viral Video: ಕಝಾಕಿಸ್ತಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ತನ್ನ ರೀಲ್ಸ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಯುವತಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ. ಕೆಲವರು ಇದನ್ನು ಲವ್ ಜಿಹಾದ್. ಇಷ್ಟಾದರೂ ಹಿಂದೂಗಳಿಗೆ ಬುದ್ದಿ ಬರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಕ್ಸ್ತ್ ಸೆನ್ಸ್‌ನಿಂದ ಪಾರಾದ ಶ್ವಾನ; ಲಿವಿಂಗ್ ರೂಂ ಚಾವಣಿ ಕುಸಿಯುವ ಕೆಲವೇ ಕ್ಷಣಗಳ ಮುನ್ನ ಹೊರಗೋಡಿದ ಬುದ್ದಿವಂತ ನಾಯಿ

ಚಾವಣಿ ಕುಸಿತದ ಮುನ್ಸೂಚನೆ ಅರಿತು ಪ್ರಾಣ ಉಳಿಸಿಕೊಂಡ ಶ್ವಾನ: ವಿಡಿಯೊ ನೋಡಿ

Viral Video: ಸಾಕು ನಾಯಿಯೊಂದು ತನ್ನ ಅದ್ಬುತ ಸಿಕ್ಸ್ತ್ ಸೆನ್ಸ್‌ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಲಿವಿಂಗ್ ರೂಂನ ಚಾವಣಿಯೊಂದು ದಿಢೀರನೆ ಕುಸಿದು ಬೀಳುವ ಸೂಚನೆ ಸಿಕ್ಕ ತಕ್ಷಣ ಈ ಸಾಕು ನಾಯಿ ಅಲ್ಲಿಂದ ಓಡಿ ಹೋಗಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೂ ಮೊಟ್ಟೆ ದಾಳಿ: ವಿಡಿಯೊ ವೈರಲ್‌

ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ, ಬದನೆಕಾಯಿ ಎಸೆತ

Eggs Thrown at Mahua Moitra: ಇತ್ತೀಚೆಗೆ ಪಶ್ವಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಮೇಲಿನ ಹಲ್ಲೆಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಸಂಸದೆ ಮಹುವಾ ಮೊಯಿತ್ರಾ ಈ ರೀತಿಯ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಟಿಎಂಸಿ ನಾಯಕರ ವಿರುದ್ಧ ಸರಣಿ ಮೊಟ್ಟೆ ಎಸೆತದ ಘಟನೆಗಳ ಕುರಿತು ಕೋಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದಿನವೇ ಮಹುವಾ ಮೊಯಿತ್ರಾ ಅವರ ಮೇಲೆ ದಾಳಿ ನಡೆದಿದೆ.

'ʼನಾನು ಸ್ಕೂಲ್ ಸ್ಟೂಡೆಂಟ್ ಅಲ್ಲʼ': ಸಿಕ್‌ ಲೀವ್‌ಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ರಜೆ ವಿಚಾರವಾಗಿ ಮ್ಯಾನೇಜರ್‌ಗೆ ಖಡಕ್ ರಿಪ್ಲೈ ಕೊಟ್ಟ ಜೆನ್‌ ಝೀ ಉದ್ಯೋಗಿ

Viral News: ಆಫೀಸ್ ಒತ್ತಡ, ಕೆಲಸದ ಟಾರ್ಗೆಟ್, ರಜೆಯ ವಿಚಾರವಾಗಿ ನೊಂದು ಕೆಲಸ ತ್ಯಜಿಸಿದ ಅನೇಕರು ಇದ್ದಾರೆ. ಇದೀಗ ಜ್ವರ ಬಂದ ಹಿನ್ನಲೆಯಲ್ಲಿ ರಜೆ ಕೇಳಿದ ಜೆನ್‌ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ಒಬ್ಬರ ವಾಟ್ಸ್‌ಆ್ಯಪ್ ಚಾಟ್‌ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ರಜೆ ನೀಡಲು ಸತಾಯಿಸಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಯುವ ಉದ್ಯೋಗಿ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ್ದಾಳೆ. ಈ ಚಾಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ಆಕ್ರೋಶ ಹೊರ ಹಾಕಿದ್ದಾರೆ.

'ʼಅಯೋಧ್ಯೆ ದೇಣಿಗೆ ಕಳ್ಳರಿಗೆ ಕ್ಯಾನ್ಸರ್ ಬರಲಿದೆʼ': ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕನ ಹೇಳಿಕೆ

ಅಯೋಧ್ಯೆ ದೇಣಿಗೆ ದುರುಪಯೋಗ: ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಕದ್ದವರಿಗೆ ಕ್ಯಾನ್ಸರ್ ಬರಲಿದೆ ಎಂದು ಬಿಜೆಪಿ ಶಾಸಕರೊಬ್ಬರು ನೀಡಿದ ಹೇಳಿಕೆ ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೌರವಾನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅನಿಲ್ ಸಿಂಗ್ ಈ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘರ್‌ ವಾಪಸಿ: ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್; ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವ ವಿಡಿಯೊ ವೈರಲ್

ಇಸ್ಲಾಂನಿಂದ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಉದ್ಯಮಿ ಪುತ್ರ ಆಯುಷ್ ಮಲಿಕ್

Viral Video: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 'ಮೊಹಮ್ಮದ್ ಅಲಿ' ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಪ್ರಸಿದ್ಧ ಉದ್ಯಮಿಯ ಪುತ್ರ ಆಯುಷ್ ಮಲಿಕ್ ಈಗ ಮತ್ತೆ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಆಯುಷ್ ಮಲಿಕ್ ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

ಫೋಟೋ ತೆಗೆಯುವ ವಿಚಾರಕ್ಕೆ ಗಲಾಟೆ: ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಗುದ್ದಾಟ!

ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಜಗಳ: ನಾಲ್ವರ ಬಂಧನ!

Viral Video: ರಾಜಧಾನಿಯ ಅತ್ಯಂತ ಬಿಗಿ ಭದ್ರತೆಯ ಸ್ಥಳವಾಗಿರುವ ವಿಧಾನ ಸೌಧದ ಮುಂಭಾಗದಲ್ಲೇ ಅಘಾತಕಾರಿ ಘಟನೆಯೊಂದು ಕಂಡುಬಂದಿದೆ. ನೇಪಾಳ ಮೂಲದ ಯುವಕರ ಗುಂಪಿನ ನಡುವೆ ಭೀಕರ ಜಗಳ ನಡೆದಿದ್ದು ಇದರಲ್ಲಿ ಭಾಗಿಯಾದ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ...

ಟ್ರಾಫಿಕ್, ದುಬಾರಿ ಬಾಡಿಗೆ ಅಂತ ದಿನಾ ಬೈಕೊಂಡ್ರು ಜನ ಬೆಂಗಳೂರು ಯಾಕೆ ಬಿಟ್ಟು ಹೋಗಲ್ಲ? ಸತ್ಯ ಬಿಚ್ಚಿಟ್ಟ ಯುವಕ!

ದಿನ ಬೈದ್ರೂ ಜನ ಬೆಂಗಳೂರು ಬಿಟ್ಟು ಯಾಕೆ ಹೋಗಲ್ಲ? ಅನುಭವ ಬಿಚ್ಚಿಟ್ಟ ಟೆಕ್ಕಿ

Viral Video: ಉದ್ಯೋಗ ಅರಸಿ ಬರುವ ಯುವಕ- ಯುವತಿಯರು ಬೆಂಗಳೂರು ಬಿಟ್ಟು ಹೋಗಲು ಇಚ್ಚೆ ಪಡುವುದಿಲ್ಲ. ಟ್ರಾಫಿಕ್, ಬಾಡಿಗೆ ದರ ದುಪ್ಪಟ್ಟು ಆದಾಗಲೂ ಯುವಕರು ಇಲ್ಲಿನ ಕಷ್ಟಗಳನ್ನು ಸಹಿಸಿ ಕೊಂಡು ಇಲ್ಲೇ ನೆಲೆಸುತ್ತಾರೆ..ಯಾಕೆ ಬೆಂಗಳೂರು ಬಿಟ್ಟು ಹೋಗಲು ಜನ ಇಷ್ಟ ಪಡುವುದಿಲ್ಲ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ಪೋಸ್ಟ್ ಶೇರ್ ಮಾಡಿದ್ದು ಭಾರೀ ವೈರಲ್ ಆಗಿದೆ...

ಮಾತು ಬಾರದಿದ್ದರೂ ಹೃದಯ ಗೆದ್ದ ಇಂಡಿಗೋ ಉದ್ಯೋಗಿ: ಹೃದಯಸ್ಪರ್ಶಿ ವಿಡಿಯೊ ಶೇರ್ ಮಾಡಿದ ಪ್ರಯಾಣಿಕ!

ಮಾತು ಬಾರದಿದ್ದರೂ ಪ್ರಯಾಣಿಕರ ಮನಗೆದ್ದ ಇಂಡಿಗೋ ಉದ್ಯೋಗಿ! ವಿಡಿಯೊ ನೋಡಿ

Viral News: ಒಬ್ಬರ ಮನಸ್ಸನ್ನು ಅರ್ಥೈಸಿಕೊಳ್ಳಲು ಕೇವಲ ಮಾತುಗಳು ಮಾತ್ರ ಮುಖ್ಯವಲ್ಲ.. ಅವರ ಭಾವನೆಗಳು ಹಾಗೂ ಒಳ್ಳೆಯ ಮನಸ್ಸು ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ತೋರಿಸಿಕೊಟ್ಟಿದೆ. ಇಂಡಿಗೋದ ಬ್ಯಾಗೇಜ್ ಚೆಕ್-ಇನ್ ಸಿಬ್ಬಂದಿಯೊಬ್ಬರಿಗೆ ಮಾತು ಬರೋದಿಲ್ಲ. ಆದರೆ ಆತ್ಮವಿಶ್ವಾಸ ದಿಂದ ಪ್ರಯಾಣಿಕರಿಗೆ ನಗುವಿನೊಂದಿಗೆ ಸ್ವಾಗತಾರ್ಹ ಮಾಡುತ್ತಾರೆ. ಕೇವಲ ಕೈಸಜ್ಞೆಗಳು ಮತ್ತು ಮುಖದ ಭಾವನೆಗಳ ಮೂಲಕವೇ ಅವರು ಪ್ರಯಾಣಿಕರಿಗೆ ನೆರವು ನೀಡುತ್ತಿದ್ದಾರೆ.

ಕರಗಿದ ರಸ್ತೆಯ ಡಾಮರು, ಬಾಗಿದ ರೈಲು ಹಳಿ...; ದಾಖಲೆ ಪ್ರಮಾಣದ ತಾಪಮಾನಕ್ಕೆ ಯುರೋಪ್‌ ತತ್ತರ: 1,300ಕ್ಕೂ ಹೆಚ್ಚು ಸಾವು

ಯುರೋಪ್‌ನಲ್ಲಿ ದಾಖಲೆ ಬಿಸಿಗಾಳಿ; ಜನ ಜೀವನ ತತ್ತರ: ವಿಡಿಯೊ ವೈರಲ್‌

ಯುರೋಪ್‌ನಲ್ಲಿ ದಾಖಲೆ ಮಟ್ಟದ ಬಿಸಿಗಾಳಿ ಆತಂಕ ಸೃಷ್ಟಿಸಿದೆ. ಹಲವು ದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ರಸ್ತೆಗಳು ಕರಗುವುದು, ಟ್ರಾಮ್‌ ಹಳಿಗಳು ಬಾಗುವುದು ಸೇರಿದಂತೆ ಹಲವು ಅಸಾಮಾನ್ಯ ಘಟನೆಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಜೂನ್‌ 21ರಿಂದ ಬಿಸಿಗಾಳಿಗೆ ಸಂಬಂಧಿಸಿದಂತೆ 1,300ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ದಾಖಲಾಗಿವೆ. ಫ್ರಾನ್ಸ್‌ನಲ್ಲಿ ಮುಳುಗಿ ಸಾಯುವ ಪ್ರಕರಣಗಳೂ ಹೆಚ್ಚಾಗಿದ್ದು, ಹಲವೆಡೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

Loading...