ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Viral Video: ʼʼಥೂ...ಎಷ್ಟು ಚೀಪ್‌ ಅನ್ನಿಸ್ತು ಎಂದ್ರೆ...ʼʼ; ಕಾರಿನಲ್ಲಿ ಊಟ ಮಾಡಿ ತಟ್ಟೆ ರಸ್ತೆಗೆ ಎಸೆದ ಕುಟುಂಬ

ದೆಹಲಿಯಲ್ಲಿ ರಸ್ತೆಗೆ ಕಸ ಎಸೆದ ಕುಟುಂಬ ತರಾಟೆಗೆ ತೆಗೆದುಕೊಂಡ ಯುವಕ

ಜನರು ತಮ್ಮ ಮನೆ, ಸ್ಥಳ ಇತ್ಯಾದಿಯನ್ನು ಸ್ವಚ್ಛವಾಗಿಡಲು ಬಯಸುತ್ತಾರೆ. ಆದರೆ ಸಾರ್ವಜನಿಕ ಸ್ಥಳವನ್ನು ಕಸದ ತೊಟ್ಟಿಯಂತೆ ನೋಡುತ್ತಿದ್ದಾರೆ. ಕ್ಲಿಪ್‌ನಲ್ಲಿ, ಘಟನೆಯನ್ನು ಚಿತ್ರೀಕರಿಸಿದ ಯುವಕನು ಕುಟುಂಬವು ತಮ್ಮ ಕಾರ್‌ನಲ್ಲಿ ಆಹಾರವನ್ನು ತಿಂದು ಮುಗಿಸಿ ನಂತರ ಬಳಸಿದ ಕಾಗದದ ತಟ್ಟೆಗಳನ್ನು ರಸ್ತೆಗೆ ಎಸೆದಿದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ ಯುವಕ ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುತ್ತ ಅವರು ತಮ್ಮ ಕಾರನ್ನು ಸ್ವಚ್ಛವಾಗಿಡಲು ಬಯಸಿದ್ದಾರೆ ಎಂದು ಕಿಡಿಕಾರಿದ್ದಾನೆ.

Viral Video: ಬಿಕಾನೆರ್ ಎಕ್ಸ್‌ಪ್ರೆಸ್‌ ರೈಲಿನ  ಎಸಿ ಕೋಚ್‌ನಲ್ಲಿ ನೀರು ಸೋರಿಕೆ; ಪ್ರಯಾಣಿಕರಿಗೆ 'ಶವರ್ ವ್ಯವಸ್ಥೆ' ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಬಿಕಾನೆರ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನೊಳಗೆ ನೀರು ಸೋರಿಕೆ: ವಿಡಿಯೊ ವೈರಲ್

Bikaner Express: ಮಧ್ಯ ಪ್ರದೇಶದ ಬಿಕಾನೆರ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್ ಬುಕ್ ಮಾಡಿದ ಪ್ರಯಾಣಿಕರಿಗೆ ಶಾಕ್ ಕಾದಿದ್ದು, ರೈಲಿನೊಳಗಡೆ ನೀರು ಸೋರಿಕೆಯಾಗಿ ಕಂಗಾಲಾಗಿದ್ದಾರೆ. ರೈಲಿನ ಶೌಚಾಲಯದ ಹೊರಗಿನ ಸ್ಥಳ ಹಾಗೂ ಇಡೀ ಬೋಗಿ ನೀರಿನಿಂದ ತುಂಬಿ ಹೋಗಿರುವ ದೃಶ್ಯ ವೈರಲ್ ಆಗಿದೆ.

ʼʼಇದ್ರೆ ನೆಮ್ದಿಯಾಗಿರ್ಬೇಕುʼʼ: ವೇತನಕ್ಕಿಂತ ಮಾನಸಿಕ ಶಾಂತಿ ಮುಖ್ಯ ಎಂದು ಸಿಂಗಾಪುರದ ಹೈ-ಪೇಯಿಂಗ್ ಜಾಬ್ ತೊರೆದು ಬೆಂಗಳೂರಿಗೆ ಬಂದ ಯುವಕ

ಸಿಂಗಾಪುರದ ಉತ್ತಮ ಪ್ಯಾಕೇಜ್ ಜಾಬ್ ತೊರೆದು ಬೆಂಗಳೂರಿಗೆ ಬಂದ ಯುವಕ

Viral Video: ಸಿಂಗಾಪುರದ ಪ್ರತಿಷ್ಠಿತ ಕಂಪನಿಯ ಜಾಬ್ ಬಿಟ್ಟು ನೆಮ್ಮದಿ ಅರಸಿ ಬೆಂಗಳೂರಿಗೆ ಮರಳಿದ ಯುವಕನೊಬ್ಬನ ಕಥೆ ಇದು. ಸಾಧನೆ ಎಂದರೆ ಕೇವಲ ಹಣ, ವಿದೇಶಿ ವಾಸ ಮಾತ್ರವಲ್ಲ, ವೈಯಕ್ತಿಕ ಖುಷಿಯೂ ಮುಖ್ಯ ಎಂದು ಹೈ - ಪೇಯಿಂಗ್ ಜಾಬ್ ತೊರೆದು ಬೆಂಗಳೂರಿಗೆ ವಾಪಸ್ಸು ಬಂದಿದ್ದಾನೆ. ಸದ್ಯ ಯುವಕನ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Viral Video: ಬೆಂಗಳೂರಿನ ಕಟ್ಟಡದ ​ಬಾಲ್ಕನಿಯಲ್ಲಿ ಓಪನ್ ಟಾಯ್ಲೆಟ್; ಮನೆಯ ಮಾಲಕ ಪ್ರಕೃತಿ ಪ್ರೇಮಿಯಾಗಿರಬೇಕೆಂದು ಕಾಲೆಳೆದ ನೆಟ್ಟಿಗರು

ಬೆಂಗಳೂರಿನ ವಿಚಿತ್ರ ಓಪನ್ ಟಾಯ್ಲೆಟ್‌ ಕಂಡು ದಂಗಾದ ನೆಟ್ಟಿಗರು

ಬೆಂಗಳೂರಿನ ಮನೆಯೊಂದರ ಬಾಲ್ಕನಿಯಲ್ಲಿರುವ ಓಪನ್‌ ಶೌಚಾಲಯದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ಶೌಚಾಲಯ ಓಪನ್ ಪ್ಲೇಸ್‌ನಲ್ಲಿದ್ದರೂ ಇದನ್ನು ಬಳಸುತ್ತಿದ್ದಾರೆ ಎಂದು ಯುವತಿಯೊಬ್ಬಳು ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಉಬರ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ಜಗಳ: ಮಹಿಳೆಗೆ ಬಿಸಿ ಕಾಫಿ ಎರಚಿದ ಡ್ರೈವರ್!

ರೈಡ್ ಕ್ಯಾನ್ಸಲ್ ವಿವಾದ: ಮಹಿಳೆಯ ಮೇಲೆ ಬಿಸಿ ಕಾಫಿ ಎರಚಿದ ಚಾಲಕ!

Viral Video: ರೈಡ್ ಕ್ಯಾನ್ಸಲ್ ಮಾಡುವ ವಿಚಾರವಾಗಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ಭೀಕರ ಜಗಳವೊಂದು ನಡೆದಿದೆ. ಚಾಲಕ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಣೆ ಮಾಡಿದ್ದು ಸವಾರಿಯನ್ನು ತಾವೇ ರದ್ದುಗೊಳಿಸುವಂತೆ ಕೇಳಿದ್ದಾನೆ. ಈ ಸಂದರ್ಭದಲ್ಲಿ ಅವರ ನಡುವೆ ವಿವಾದ ಪ್ರಾರಂಭವಾಗಿದ್ದು ತಾರರಕ್ಕೆ ಹೋಗಿದೆ...

ಉನ್ನತ ವ್ಯಾಸಂಗ ಇಲ್ಲದೆ ಡಿಪ್ಲೊಮಾ ಓದಿ 5,000 ಸಂಬಳದಿಂದ 70 ಲಕ್ಷದ ಪ್ಯಾಕೇಜ್‌ಗಳಿಸಿದ ಬೆಂಗಳೂರು ಯುವಕ! ಸಾಧ್ಯವಾಗಿದ್ದು ಹೇಗೆ?

ಡಿಗ್ರಿ ಇಲ್ಲದಿದ್ರೂ ಸಾಧಿಸಿದ ಬೆಂಗಳೂರು ಯುವಕ: 5 ಸಾವಿರದ ಸಂಬಳ ಈಗ 45 ಲಕ್ಷ

Viral News: ಬೆಂಗಳೂರಿನ ಯುವಕನೊಬ್ಬ ಉನ್ನತ ಪದವಿ ಇಲ್ಲದಿದ್ದರೂ ಯಶಸ್ಸಿನ ಶಿಖರ ಏರಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಕಾಮರ್ಸ್ ಸ್ಟ್ರೀಮ್‌ನಲ್ಲಿ ದ್ವಿತೀಯ ಪಿಯುಸಿ ಓದು ಮುಗಿಸಿದ್ದ ಇವರು ಕೇವಲ 3 ವರ್ಷಗಳ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಪೂರ್ಣ ಗೊಳಿಸದ್ದರು. ಬಿಇ ಅಥವಾ ಬಿಸಿಎ ನಂತಹ ಯಾವುದೇ ಉನ್ನತ ಶಿಕ್ಷಣ ಮಾಡದಿದ್ದರೂ ಇಂದು ವಾರ್ಷಿಕ 45 ಲಕ್ಷ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸದ್ಯ ಇವರ ಈ ಕೆಲಸದ ಹಾರ್ಡ್ ವರ್ಕಿಂಗ್ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಬೋಟ್‌ನಿಂದ ತಾಯಿಯ ಐಫೋನ್‌ ಅನ್ನು ನೀರಿಗೆ ಎಸೆದ ಮಗು; ಮುಂದೇನಾಯ್ತು ವಿಡಿಯೋ ನೋಡಿ

ದೋಣಿ ವಿಹಾರದಲ್ಲಿ ತಾಯಿಯ ಐಫೋನ್ ಸರೋವರಕ್ಕೆ ಎಸೆದ ಮಗು: ವಿಡಿಯೊ ವೈರಲ್

Viral Video: ಇಲ್ಲೊಂದು ಕುಟುಂಬ ಖುಷಿಯಿಂದ ಬೋಟ್ ಪ್ರವಾಸ ಮಾಡುವಾಗ ಅಘಾತವಾಗಿ ಮಾರ್ಪಟ್ಟಿದೆ. ಚಿಕ್ಕ ಮಗುವೊಂದು ಅನಿರೀಕ್ಷಿತವಾಗಿ ತನ್ನ ಕೈಯಲ್ಲಿಂದ ಐಫೋನ್ ಅನ್ನು ಸರೋವರಕ್ಕೆ ಎಸೆದಿದ್ದು ಇದರ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ಮಕ್ಕಳಿಗೆ ಮೊಬೈಲ್ ಬಳಕೆ ಮಾಡಲು ಕೊಡುವವರಿಗೆ ಇಂದು ತಕ್ಕ ಪಾಠ ಎಂದು ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ...

ಬೆಂಗಳೂರಿನಲ್ಲಿರುವ  ಗರ್ಲ್‌ಫ್ರೆಂಡ್‌ನ ತಿಂಗಳ ಖರ್ಚು 1.09 ಲಕ್ಷ ರೂ. ! ಲೆಕ್ಕ ನೋಡಿ ಗಣಿತವೇ ಮರೆತುಹೋಯ್ತು ಎಂದ ಯುವಕ!

ಗರ್ಲ್‌ಫ್ರೆಂಡ್‌ನ ತಿಂಗಳ 1.09 ಲಕ್ಷ ಖರ್ಚು ನೋಡಿ ದಂಗಾದ ಯುವಕ!

Viral News: ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿ ಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ಅವನೇ ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾನೆ...

ಇದು ಭಕ್ತಿ ಅಥವಾ ಪಿಕ್ನಿಕ್? ತುಂಗನಾಥ ದೇಗುಲದ ಬಳಿ ಮಾದಕ ದ್ರವ್ಯ ಸೇವಿಸಿದ ಪ್ರವಾಸಿಗರು! ಅರ್ಚಕರಿಂದ ಆಕ್ರೋಶ!

ತುಂಗನಾಥ ಧಾರ್ಮಿಕ ಸ್ಥಳವನ್ನು ಪಿಕ್ನಿಕ್ ತಾಣವಾಗಿ ಮಾಡಿದ ಪ್ರವಾಸಿಗರು!

Viral Video: ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

Viral Video: ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನ ವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸ ರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ..

ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್‌

ಬಿಸಿಲಿನ ತಾಪ ತಡೆದುಕೊಳ್ಳಲು ಮುಂಬೈನ ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ಜನ!

Viral Video: ಮುಂಬೈ ನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!

ಪ್ಲಾಸ್ಟಿಕ್ ಡಂಪ್‌ನಲ್ಲಿ ಆಹಾರ ಹುಡುಕಿದ ಕಾಡಾನೆ: ವಿಡಿಯೊ ವೈರಲ್

Viral Video: ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...

Viral Video; ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಯಾಬ್ ಚಾಲಕನೊಬ್ಬ ವಿಶೇಷ ಚೇತನ ಮಹಿಳೆಯೊಬ್ಬರ ವ್ಹೀಲ್‌ ಚೇರ್ ಇಟ್ಟುಕೊಳ್ಳಲು ನಿರಾಕರಿಸಿದ್ದು, ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿಷ್ಠಾ ದೇವೇಶ್ವರ್ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ವರ್ಷಕ್ಕೆ 70 ಲಕ್ಷ ನೀಡಿದ್ರೂ ತಪ್ಪದ ಸಂಕಷ್ಟ: ಕುಡಿಯುವ ನೀರಿನ‌ ಕೊರತೆ ಬಗ್ಗೆ ಬೇಸರ ಹೊರಹಾಕಿದ ಜನ

ಟ್ಯಾಂಕರ್‌ಗೆ 70 ಲಕ್ಷ ನೀಡಿದ್ರೂ ಕೆಸರು ನೀರು: ಪುಣೆ ನಿವಾಸಿ ಹೇಳಿದ್ದೇನು?

Viral Post: ಪುಣೆಯಲ್ಲಿ ದುಬಾರಿ ವೆಚ್ಚದ ಕಟ್ಟಡ, ಫ್ಲ್ಯಾಟ್ ಗಳನ್ನು ನಿರ್ಮಿಸಿದರೂ ಅಗತ್ಯವಾದ ಶುದ್ಧ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಘಟನೆ ಕಂಡು ಬಂದಿದೆ. ಇಲ್ಲಿನ ನಿವಾಸಿಗಳು ವರ್ಷಕ್ಕೆ 70 ಲಕ್ಷ ಹಣವನ್ನು ಖಾಸಗಿ ಟ್ಯಾಂಕರ್ ಗಾಗಿ ಖರ್ಚು ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ...

82 ವರ್ಷವಾದರೂ ಕುಗ್ಗದ ಜೀವನೋತ್ಸಾಹ: ಬೀದಿ ಬದಿಯಲ್ಲಿ ದಿನಕ್ಕೆ 12 ಗಂಟೆ ತಿಂಡಿ ಮಾರಿ ಬದುಕು ಸಾಗಿಸುವ ಮನ್ಸುಖ್ ಕಾಕಾ!

ಮುಂಬೈ ಬೀದಿಯಲ್ಲಿ ತಿಂಡಿ ಪ್ಯಾಕೇಟ್ ಮಾರಿ ಬದುಕು ಸಾಗಿಸುವ 82ರ ವೃದ್ಧ!

Viral Video; ಶ್ರಮ ಪಡಬೇಕು ಎನ್ನುವ ಛಲ ಇದ್ದರೆ ಯಾವುದರದಲ್ಲೂ ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೋವಿಡ್-19 ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, 82 ವರ್ಷದ ಮನ್ಸುಖ್ ಕಾಕಾ ಮುಂಬೈನ ರಸ್ತೆಯಲ್ಲಿ ತಿಂಡಿ ಪ್ಯಾಕೇಟ್ ಮಾರಾಟ ಮಾಡುವ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ವಂತ ಕಾಲಲ್ಲಿ ದುಡಿಯಬೇಕು,ಇತರರಿಗೆ ಅವಲಂಬಿತ ಆಗಬಾರದು ಎಂದು 82 ವರ್ಷದ ಮನ್ಸುಖ್ ಕಾಕಾ ಅವರೇ ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಸದ್ಯ ಇವರ ಜೀವನಗಾಥೆಗೆ ಎಲ್ಲರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ...

ರಾತ್ರಿ 9 ಗಂಟೆಯಾದ್ರೂ ಈ ದೇಶದಲ್ಲಿ ಕತ್ತಲಾಗುವುದೇ ಇಲ್ಲ; ಸೂರ್ಯ ಮುಳುಗದ ನಾಡಿನ ಕುರಿತು ಭಾರತೀಯ ಹೇಳಿದ್ದೇನು?

9 ಗಂಟೆ ಆದ್ರೂ ಮುಳುಗದ ಸೂರ್ಯ! ಡೆನ್ಮಾರ್ಕ್ ‘ಹಗಲು’ ಕಂಡು ಬೆರಗಾದ ಯುವಕ

Viral Video: ಡೆನ್ಮಾರ್ಕ್‌ನಲ್ಲಿ ವಾಸಿಸುವ ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ದೈನಂದಿನ ಪ್ರಕ್ರಿಯೆ ಕಂಡು ಅವರೇ ಶಾಕ್ ಆಗಿ ಹೋಗಿದ್ದಾರೆ. ರಾತ್ರಿ 9 ಗಂಟೆಯಾದರೂ ಸೂರ್ಯ ಮುಳಗದೇ ಇರುವುದನ್ನು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ‌. ಡೆನ್ಮಾರ್ಕ್‌ನ ವಿಚಿತ್ರ ‘ಹಗಲು’ ಕಂಡು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ...

ರೀಲ್ಸ್‌ ಹುಚ್ಚಿಗೆ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರು: ಕ್ರಮ ಕೈಗೊಳ್ಳಲು ಪ್ರಾಣಿ ಪ್ರಿಯರ ಆಕ್ರೋಶ!

ಒಡಿಶಾದಲ್ಲಿ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಅತಿರೇಕದ ವರ್ತನೆ ತೋರುವುದು, ಹೀಗೆ ಟೀಕೆ ವ್ಯಕ್ತ ಪಡಿಸುವ ಅನೇಕ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಒಡಿಶಾದ ಮಯೂರ್ ಭಂಜ್ ನ ಸಿಮಿಲಿಪಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಯುವಕರ ಗುಂಪೊಂದು ರೀಲ್ಸ್ ಗಾಗಿ ಕಾಡಾನೆಗಳ ಮೇಲೆ ತೀವ್ರ ಕಿರುಕುಳ ಎಸಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವಿರುದ್ಧ ಕಿಡಿಕಾರಿದ್ದಾರೆ...

ಬೆನ್ನ ಮೇಲೆ ಪತ್ನಿ, ಮನದಲ್ಲಿ ನೋವು: ಸರ್ಕಾರಿ ಸೌಲಭ್ಯಕ್ಕಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಕುಟುಂಬ

ಪತ್ನಿಯನ್ನು ಬೆನ್ನ ಮೇಲೆ ಹೊತ್ತು ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿ

ಮಧ್ಯಪ್ರದೇಶದ ಪನ್ನಾದಲ್ಲಿ ವ್ಯಕ್ತಿಯೊಬ್ಬರು ನಡೆಯಲು ಅಸಮರ್ಥಳಾದ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಸಾರ್ವಜನಿಕ ಅಹವಾಲು ಸಭೆಗೆ ಹಾಜರಾಗಿ, ಕಳೆದ 10 ವರ್ಷಗಳಿಂದ ರೇಷನ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಂದ ತಮ್ಮ ಕುಟುಂಬ ವಂಚಿತವಾಗಿದೆ ಎಂದು ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿದರು. ಪ್ರಕರಣದ ಪರಿಶೀಲನೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ 6 ವರ್ಷದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ; ವಿಡಿಯೋ ವೈರಲ್‌

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ

Viral Video: ಫ್ಲೋರಿಡಾದ ಈಜುಕೊಳದಲ್ಲಿ ಆರು ವರ್ಷದ ಮಗುವೊಂದು ಪ್ರಜ್ಞೆ ತಪ್ಪಿ ತೇಲುತ್ತಿದ್ದಂತೆ ICE ಅಧಿಕಾರಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ್ದಾರೆ. ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ ಫೋರ್ಸ್‌ಮೆಂಟ್ (ICE) ಅಧಿಕಾರಿ ಪ್ರಾಣ ಉಳಿಸಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ ಆಗಿದೆ. ನೀರಿನ ಮೇಲೆ ಮಗು ತೇಲುತ್ತಿರುವುದನ್ನ ಕಂಡ ಅವರು ಒಂದು ಕ್ಷಣವೂ ತಡಮಾಡದೆ ಧರಿಸಿದ್ದ ಬಟ್ಟೆಯಲ್ಲೇ ನೇರವಾಗಿ ನೀರಿಗೆ ಜಿಗಿದಿದ್ದಾರೆ..

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ಆದಾಯ ಕೇಳಿ ಖ್ಯಾತ ಉದ್ಯಮಿಗೆ ಅಚ್ಚರಿ

25,000 ರುಪಾಯಿ ಜಾಬ್ ತೊರೆದು ಯಶಸ್ವಿ ಕ್ಯಾಬ್ ಚಾಲಕನಾದ ಯುವಕ

Viral News: ಪ್ರತಿಷ್ಠಿತ ಕಂಪನಿಯಲ್ಲಿ ಶಿಕ್ಷಣವಂತರಿಗೆ ಉದ್ಯೋಗ ಸಿಕ್ಕರೂ ಒತ್ತಡ, ಬಿಡುವಿಲ್ಲದ ಅವಧಿಯಿಂದ ಬೇಸತ್ತು ಕೆಲಸ ತೊರೆದ ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಿಂಗಳಿಗೆ 25 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗಿ ಯಶಸ್ಸು ಗಳಿಸಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?

ವೃದ್ಧನ ಪ್ರಾಣ ಉಳಿಸಿದ ಬೆನ್ನಲ್ಲೇ ಯುವಕನಿಂದ ಕಪಾಳಮೋಕ್ಷ

ಸಮುದ್ರದ ಅಲೆಯಲ್ಲಿ ವೃದ್ಧನೊಬ್ಬ ಸಿಲುಕಿಕೊಂಡಿದ್ದು ಸ್ಥಳೀಯರು ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಸ್ಥಳೀಯ ಯುವಕರು ನೀರಿಗೆ ಹಾರಿ ಅವರನ್ನು ಮರಳಿ ಕರೆತರಲು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಆದರೆ ದಡಕ್ಕೆ ಬರುತ್ತಿದ್ದಂತೆ ರಕ್ಷಕನೊಬ್ಬ ವೃದ್ಧನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ನಡೆಯುತ್ತಿದೆ.

Viral Video: ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ರೈಲಿನ ಶೌಚಾಲಯದಲ್ಲಿ ಕುಳಿತು ಟಿಕೆಟ್ ಇಲ್ಲದೆ ಪ್ರಯಾಣ

ರೈಲಿನಲ್ಲಿ ಜನ ಸಾಗರವೇ ತುಂಬಿರುತ್ತದೆ. ಆದರೆ ಇದೀಗ ಕಾಯ್ದಿರಿಸಿದ ಬೋಗಿಯಲ್ಲೂ ಟಿಕೆಟ್ ರಹಿತವಾಗಿ ಪ್ರಯಾಣಿಸಿದವರ ವಿಡಿಯೊವೊಂದು ವೈರಲ್ ಆಗಿದೆ. ಟಿಕೆಟ್ ಪಡೆಯದ ಹಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಯೊಳಗೆ ಪ್ರವೇಶಿಸಿ ವಾಶ್ ರೂಮ್‌ಗಳ ಸುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಉಳಿದ ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ನೀನಾ-ನಾನಾ? ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ ಚಾಲಕನಿಗೆ ದಾರಿ ಬಿಡದೆ ವಾಪಸ್‌ ಕಳುಹಿಸಿದ ಬೈಕ್ ಸವಾರ

ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ತಡೆದ ಬೈಕ್ ಸವಾರ

Viral Video: ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ವಾಹನಗಳು ಬಂದು ನಿಂತರೆ ಸಾಕು. ನಾವೇ ದಾರಿ ಬಿಟ್ಟು ಕೊಡುತ್ತೇವೆ. ಆದರೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬೈಕ್‌ ಸವಾರ ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ಗೆ ದಾರಿ ಬಿಟ್ಟು ಕೊಡದೆ ನಿಯಮ ಉಲ್ಲಂಘಿಸಿರುವ ಬಗ್ಗೆ ಪ್ರಶ್ನಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ʼʼತಂದೆ ಬಂದಿದ್ದೇನೆ, ನೋಡುʼʼ: ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು ಅಸುನೀಗಿದ ಮಗನ ಮೃತದೇಹದ ಮುಂದೆ ತಂದೆಯ ಆಕ್ರಂದನ

ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು 21 ವರ್ಷದ ಯುವಕ ಸಾವು

ಉತ್ತರ ಪ್ರದೇಶದ ವೃಂದಾವನದ ಇಸ್ಕಾನ್‌ ದೇವಸ್ಥಾನದಲ್ಲಿ ಭೀಕರ ದುರಂತವೊಂದು ನಡೆದಿದ್ದು, ವಾಟರ್‌ ಸ್ಪ್ರೇ ಕೂಲರ್‌ನಿಂದ ವಿದ್ಯುತ್‌ ಪ್ರವಹಿಸಿ 21 ವರ್ಷದ ಯುವ ಮೃತಪಟ್ಟಿದ್ದಾನೆ. ಮೃತನನ್ನು ಮಧ್ಯ ಪ್ರದೇಶದ ಛತ್ರಾಪುರದಿಂದ ಆಗಮಿಸಿದ ಅಭಿಜ್ಞಾನ್‌ ಗುಪ್ತ ಎಂದು ಗುರುತಿಸಲಾಗಿದೆ. ಆತನ ಮೃತದೇಹದ ಮುಂದೆ ತಂದೆ ಗೋಳಾಡುತ್ತಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ.

Loading...