ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ರಣರಂಗವಾದ ಮದುವೆ ಮನೆ; ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ: 12 ಮಂದಿಗೆ ಗಾಯ-ವಿಡಿಯೊ ಇಲ್ಲಿದೆ

ಮದುವೆ ಮನೆಯಲ್ಲಿ ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ

Wedding Feast Turns Violent: ಮಧ್ಯಾಹ್ನದ ಮದುವೆ ಮನೆ ಊಟಕ್ಕೆ ಮಟನ್‌ ಖಾದ್ಯ ಮಾಡುವುದಾಗಿ ವಧುವಿನ ಕಡೆಯವರು ಮಾತು ಕೊಟ್ಟಿದ್ದರು. ಆದರೆ ಮಟನ್ ಬದಲಿಗೆ ಚಿಕನ್‌ ಖಾದ್ಯ ಬಡಿಸಲಾಯಿತು. ಇದರಿಂದ ಕೋಪಗೊಂಡ ವರನ ಕಡೆಯವರು ಗಲಾಟೆ ನಡೆಸಿದರು. ಕ್ಷಣಾರ್ಧದಲ್ಲೇ ಮದುವೆ ಮನೆ ರಣರಂಗದಂತಾಯ್ತು.

ಸಾರ್ಕ್ ವಿಚಾರ ಸಂಕಿರಣದಲ್ಲಿ ತಪ್ಪಾದ ನಕ್ಷೆ ಪ್ರದರ್ಶನಕ್ಕೆ ಭಾರತ ಆಕ್ಷೇಪ

ಢಾಕಾದಲ್ಲಿ ತಪ್ಪಾದ ದೇಶದ ನಕ್ಷೆ ಪ್ರದರ್ಶನ: ಭಾರತ ಆಕ್ಷೇಪ

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತೀಯ ರಾಯಭಾರಿ ಪೂಜಾ ಕುಮಾರಿ ಝಾ ಹೇಳಿದ್ದಾರೆ. ಢಾಕಾದಲ್ಲಿ ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಚಿತ್ರಿಸುವ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ರೈಲಿನ ಎಸಿ ಕೋಚನ್ನೇ ಪರ್ಸನಲ್ ಬಾರ್ ಮಾಡಿಕೊಂಡ ಯುವಕರು: ಕಿಡಿಗೇಡಿಗಳ ವಿಡಿಯೋ ವೈರಲ್‌

ಎಸಿ ಕೋಚ್‌ನಲ್ಲಿ ಎಣ್ಣೆ ಪಾರ್ಟಿ ಮಾಡಿದ ಯುವಕರು: ನೆಟ್ಟಿಗರು ಕಿಡಿ

Viral Video: ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಬಸ್, ರೈಲ್ವೆಯ ಕೋಚ್‌ಗಳಲ್ಲಿ ಜನದಟ್ಟಣೆ, ಅಶಿಸ್ತಿನ ವರ್ತನೆ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಯುವಕರ ಗುಂಪೊಂದು ಎಸಿ ಕೋಚ್ ವೊಂದನ್ನು ಪರ್ಸನಲ್ ಬಾರ್ ಆಗಿ ಪರಿವರ್ತಿಸಿದ ವಿಡಿಯೊವೊಂದು ವೈರಲ್ ಆಗಿದೆ.

ಹಿಟ್-ಅಂಡ್-ರನ್ ಪ್ರಕರಣ: ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್ ಚಾಲಕ

ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾದ ಮಹೀಂದ್ರಾ ಥಾರ್ ಚಾಲಕ

Viral Video: ಹರಿಯಾಣ ನೋಂದಣಿಯ ಮಹೀಂದ್ರಾ ಥಾರ್ ಕಾರೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಮುಂಬೈನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ...

ಮುಂಬೈನಲ್ಲಿ ಜಲಾವೃತಗೊಂಡ ರೈಲು ಹಳಿಗಳ ಮೇಲೆ ಮೀನುಗಳ ಈಜಾಟ: ವಿಡಿಯೊ ವೈರಲ್

ಮುಂಬೈನಲ್ಲಿ ಮಳೆಯ ಆರ್ಭಟ: ರೈಲ್ವೆ ಹಳಿಗಳ ಮೇಲೆಯೇ ಮೀನುಗಳ ಈಜಾಟ!

Viral Video: ರೈಲ್ವೆ ಹಳಿಗಳ ನಡುವೆ ಸಂಗ್ರಹವಾಗಿದ್ದ ಮಳೆನೀರಿನ ಮೂಲಕ ಹಲವಾರು ಮೀನುಗಳು ಓಡಾಡುತ್ತಿವೆ. ಈ ಅಸಾಮಾನ್ಯ ಕ್ಲಿಪ್ ವೀಕ್ಷಕರನ್ನು ರಂಜಿಸಿದ್ದು ಆಶ್ಚರ್ಯಚಕಿತಗೊಳಿಸಿದೆ.. ಭಾರೀ ಮಳೆಯಿಂದ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಮುಳುಗಿ ಹೋಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು. ಆದರೆ ಮೀನುಗಳು ಈ ನಿಂತ ನೀರಿನಲ್ಲಿ ಈಜಡುತ್ತಾ ಓಡಾಡುತ್ತಿವೆ..

ಭಾರತದ ಕಂಪನಿಯಲ್ಲಿ ಆಕರ್ಷಕ ಪ್ಯಾಕೇಜ್ ಇದ್ದರೂ ಅಮೆರಿಕ ಬಿಟ್ಟು ಬರದ ಭಾರತೀಯ ಯುವತಿಯರು: ಕಾರಣವೇನು?

ಭಾರತದ ಜಾಬ್ ಆಫರ್ ನಿರಾಕರಿಸಿ ಯುಎಸ್‌ನಲ್ಲಿ ಬದುಕಲು ಇಚ್ಚಿಸಿದ ಯುವತಿಯರು

Viral Video: ಹೆಚ್ಚಿನವರು ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಆಕರ್ಷಕ ವೇತನ ವಿಚಾರವಾಗಿ ಮಾತ್ರವಲ್ಲದೆ ಅಲ್ಲಿನ ಜೀವನ ಶೈಲಿ, ಹಾಗೂ ಕೆಲಸದ ವಾತಾವರಣ ಕೂಡ ಕೆಲವರನ್ನು ಆಕರ್ಷಣೆ ಮಾಡುತ್ತದೆ. ಇದೀಗ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ ಮಹಿಳೆ ಯರು ತಮ್ಮ ಕೆಲಸದ ಆಯ್ಕೆ ವಿದೇಶದಲ್ಲಿ ಯಾಕೆ ಅನ್ನೋದನ್ನು ಅಚ್ಚರಿಯ ಕೆಲವು ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..

500 ರೂ.ನೀಡಿ ಲೈಂಗಿಕ ಕ್ರಿಯೆಗೆ ಆಮಿಷ ಒಡ್ಡಿದ ಆಟೋ ಚಾಲಕ: ವಿಡಿಯೊ ಶೇರ್ ಮಾಡಿ ಆಕ್ರೋಶ ಹೊರ ಹಾಕಿದ ಯುವತಿ

ಹಗಲು ಸಮಯದಲ್ಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋಚಾಲಕ

Viral Video: ಮಹಿಳೆಯರಿಗೆ ಅಸುರಕ್ಷಿತ ಉಂಟು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಪ್ರಯಾಣದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ದಿನಕ್ಕೊಂದು ವರದಿ ಕೇಳಿ ಬರುತ್ತಲೇ ಇದೆ. ಈ ನಡುವೆ ವಿಶಾಖಪಟ್ಟಣದ ಪೆಂದುರ್ತಿ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಹಗಲು ಹೊತ್ತಿನಲ್ಲೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಯುವತಿ ಕೃತ್ಯವನ್ನು ರೆಕಾರ್ಡ್ ಮಾಡಿ ವಿಡಿಯೊ ಶೇರ್ ಮಾಡಿದ್ದಾಳೆ.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಿದ ಆನೆ! ಏನಿದು ವೈರಲ್‌ ವಿಡಿಯೋದ ಅಸಲಿಯತ್ತು?

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ರಕ್ಷಿಸಿದ ಆನೆ! ವಿಡಿಯೊ ನೋಡಿ

Viral Video: ತೀವ್ರ ಪ್ರವಾಹದ ನಡುವೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಲು ದೈತ್ಯ ಆಕಾರದ ಆನೆಯು ಪ್ರವಾಹದಲ್ಲಿಯೂ ನೀರಿಗೆ ಇಳಿಯುವುದನ್ನು ತೋರಿಸಲಾಗಿದೆ. ಆನೇಕರು ಈ ವಿಡಿಯೊ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ...

"ಇಲ್ಲಿನ ಸಾಮಾನ್ಯ ರೈಲೂ ಸಹ ಇಷ್ಟು ಕ್ಲೀನ್‌ ಆಗಿರುತ್ತೆ"! ದಕ್ಷಿಣದ ಜನರ ನಾಗರಿಕ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ!

ತಮಿಳುನಾಡಿನ ಪ್ಯಾಸೆಂಜರ್ ರೈಲಿನ ಸ್ವಚ್ಛತೆಗೆ ಮೆಚ್ಚುಗೆ ನೀಡಿದ ಪ್ರಯಾಣಿಕ

Viral Video; ಸಾಮಾನ್ಯ ಪ್ಯಾಸೆಂಜರ್ ರೈಲೊಂದರ ಸ್ವಚ್ಛತೆಯನ್ನು ಶ್ಲಾಘಿಸಿ ಪ್ರಯಾಣಿಸಿದ ಆರ್. ಗೌರವ್ ಎಂಬವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಶೌಚಾಲಯಗಳು, ವಾಶ್ ಬೇಸಿನ್ ಮತ್ತು ರೈಲಿನ ನೆಲ, ಹಾಗೆಯೇ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿವೆ ಎಂದು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ‌.

ಕ್ಯಾಬ್‌ನಲ್ಲಿ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣಿಕನಿಗೆ ಕ್ಲಾಸ್! ಅರ್ಧದಲ್ಲೇ ಪ್ರಯಾಣ ಕ್ಯಾನ್ಸಲ್ ಮಾಡಿದ ಚಾಲಕ!

ಕಾರಿನೊಳಗೆ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣವೇ ಕ್ಯಾನ್ಸಲ್ ಮಾಡಿದ ಚಾಲಕ!

Viral News: ಪ್ರಯಾಣಿಕನೊಬ್ಬ ಕ್ಯಾಬ್ ನಲ್ಲಿ ಸಿಗರೇಟ್ ಹಚ್ಚಿದ್ದಾನೆ ಎಂಬ ಕಾರಣಕ್ಕೆ ಚಾಲಕ ಆಕ್ರೋಶ ಗೊಂಡಿದ್ದು ತನ್ನ ಕಾರಿನಲ್ಲಿ ಧೂಮಪಾನ ಮಾಡಲು ಅವಕಾಶ ಇಲ್ಲ ಎಂದು ಕಿಡಿಕಾರಿದ್ದಾನೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

80ರ ಹರೆಯದಲ್ಲೂ ಪತ್ನಿಯ ಆರೋಗ್ಯದ ವೆಚ್ಚಕ್ಕೆ  ಟ್ಯಾಕ್ಸಿ ಓಡಿಸುವ ವೃದ್ಧ; ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ

ಅನಾರೋಗ್ಯ ಪೀಡಿತ ಪತ್ನಿಗಾಗಿ ಟ್ಯಾಕ್ಸಿ ಓಡಿಸುವ 80ರ ವೃದ್ಧ! ವಿಡಿಯೊ ನೋಡಿ

Viral News: ವಯಸ್ಸು 80 ದಾಟಿದರೂ, ದೇಹದಲ್ಲಿ ಶಕ್ತಿ ಕುಂದಿದ್ದರೂ ತಮ್ಮ ಪತ್ನಿಯ ರಕ್ಷಣೆಗಾಗಿ ಟ್ಯಾಕ್ಸಿ ಓಡಿಸುವ ಮೂಲಕ ಈ ವೃದ್ಧ ವ್ಯಕ್ತಿ ಹೋರಾಡುತ್ತಿದ್ದಾರೆ. ತಮ್ಮ 67 ವರ್ಷದ ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದು ಅವರನ್ನು ಸಾಕಲು ಟ್ಯಾಕ್ಸಿ ಪ್ರಯಾಣ ಆರಂಭ ಮಾಡಿದ್ದಾರೆ. ಇವರ ಈ ಹೃದಯ ಸ್ಪರ್ಶಿ ಕಥೆ ಕೇಳಿ ನೆಟ್ಟಿಗರು ನಿಜಕ್ಕೂ ಸ್ಪೂರ್ತಿದಾಯಕ ಎಂದಿದ್ದಾರೆ.

ಪ್ರವಾಹ ಬಂದರೂ ಉದ್ಯೋಗಿಗೆ ವರ್ಕ್ ಫ್ರಮ್ ಹೋಮ್ ನಿರಾಕರಿಸಿದ ಮ್ಯಾನೇಜರ್: ಇಂಟರ್‌ನೆಟ್‌ನಲ್ಲಿ ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌!

ಪುಣೆ ಉದ್ಯೋಗಿಯ WFH ವಿನಂತಿಯನ್ನು ತಿರಸ್ಕರಿಸಿದ ಮ್ಯಾನೇಜರ್!

Viral News: ಭಾರೀ ಮಳೆಯ ಕಾರಣದಿಂದ ಪುಣಿಯ ಹಲವು ಸ್ಥಳಗಳಲ್ಲಿ ಜಲವೃತಗೊಂಡು ರೋಡ್ ಬ್ಲಾಕ್ ಆಗಿತ್ತು. ಹೀಗಾಗಿ ಕಂಪನಿಯೂ ಸುರಕ್ಷತೆಗೆ ಆಧ್ಯತೆ ನೀಡಿ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಉದ್ಯೋಗಿಯೊಬ್ಬರು ಕೇಳಿದ್ದರು. ಆದರೆ ಮ್ಯಾನೇಜರ್ ಈ ವಿನಂತಿ ಯನ್ನು ತಿರಸ್ಕರಿಸಿ ಆಫೀಸಿಗೆ ಬರುವಂತೆ ಒತ್ತಾಯಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಛೇ ಇದೆಂಥಾ ವರ್ತನೆ": ಟ್ರೈನ್‌ನಲ್ಲಿ ಅಸ್ವಸ್ಥ ವೃದ್ಧನಿಗೆ ಸೀಟು ನಿರಾಕರಿಸಿ ವಾಂತಿ ಮಾಡಿದ್ದಕ್ಕೆ ಕಪಾಳಮೋಕ್ಷ ಮಾಡಿದ ಯುವತಿ!

ಅಸ್ವಸ್ಥ ವ್ಯಕ್ತಿಗೆ ಸೀಟು ನಿರಾಕರಿಸಿ ಕಪಾಳಮೋಕ್ಷ ಮಾಡಿದ ಯುವತಿ

Viral News: ಶಿಕ್ಷಣ ಗಿಟ್ಟಿಸಿಕೊಂಡ ಯುವಕ- ಯುವತಿಯರೇ ಕನಿಷ್ಠ ಸಹಾನುಭೂತಿ ಇಲ್ಲದಂತೆ ವರ್ತಿಸುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿ ಲೋಕಲ್ ರೈಲಿನಲ್ಲಿ ಅಸ್ವಸ್ಥರಾಗಿದ್ದ ವೃದ್ಧರೊಬ್ಬರು ಯುವತಿಯ ಬಳಿ ಸೀಟು ಕೇಳಿದ್ದು ಆಕೆ ನಿರಾಕರಣೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ವಾಂತಿ ಮಾಡಿದ್ದಾರೆಂದು ಕಪಾಳಮೋಕ್ಷ ಮಾಡಿದ್ದಾಳೆ‌. ಈ ಪೋಸ್ಟ್ ನೋಡಿದ ಅನೇಕರು ಯುವತಿಯ ವರ್ತನೆ ಕುರಿತು ಕಿಡಿಕಾರಿದ್ದಾರೆ.

ಅನಾರೋಗ್ಯವಿದೆ ಎಂದರೂ ಸರಿಯಾದ ಕಾರಣ ಕೊಟ್ಟು ರಜೆ ಹಾಕಿ ಎಂದ HR; ಕಂಪೆನಿಯ ನಿಯಮ ಕಂಡು ಉದ್ಯೋಗಿ ಶಾಕ್‌!

ಅನಾರೋಗ್ಯ ರಜೆಗೂ ಕಟ್ಟುನಿಟ್ಟಿನ ಕಾರಣ ಕೇಳಿದ ಹೆಚ್ ಆರ್: ನೆಟ್ಟಿಗರು ಆಕ್ರೋಶ

Viral News: ಆರೋಗ್ಯ ತೊಂದರೆ ಎಂದಾಗ ರಜೆಯೂ ಅನಿವಾರ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ಉದ್ಯೋಗಿ ತಮಗೆ ಹುಷಾರಿಲ್ಲ ಎಂದು ಎಚ್ ಆರ್ ಗೆ ಸಂದೇಶ ಕಳುಹಿಸಿದಾಗ ಅವರ ಪ್ರತಿಕ್ರಿಯೆ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿ ಮೂಲದ ಉದ್ಯೋಗಿಯೂ ಎಚ್ ಆರ್ ನ ರೆಸ್ಪಾನ್ಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಭಾರೀ ಚರ್ಚೆಯಾಗುತ್ತಿದೆ.

ನಿಯಂತ್ರಣ ಕಳೆದುಕೊಂಡ ನಿಲ್ಲಿಸಿದ್ದ ಕಾರು: ಪ್ರವಾಸಿಗರ ಕಣ್ಮುಂದೆಯೇ ಇಳಿಜಾರಿನ ಪ್ರಪಾತಕ್ಕೆ ಉರುಳಿದ ಭಯಾನಕ ದೃಶ್ಯ ವೈರಲ್‌

ಇಳಿಜಾರು ಪ್ರಪಾತಕ್ಕೆ ಉರುಳಿದ ಕಾರು! ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು

Viral Video: ಪ್ರವಾಸಿ ಸ್ಥಳಕ್ಕೆ ಹೋಗುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳಷ್ಟು ಅಗತ್ಯ..ಇದೀಗ ಜಮ್ಮು ಮತ್ತು ಕಾಶ್ಮೀರದ ಖ್ಯಾತ ಗುರೇಜ್ ಕಣಿವೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರು ಕಾರಿನಿಂದ ಇಳಿದ ಕೆಲವೇ ಕ್ಷಣದಲ್ಲಿ ಕಾರು ಪ್ರಪಾತಕ್ಕೆ ಬಿದ್ದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್, ಕಾರು ಬಿದ್ದಾಗ ಅದರೊಳಗೆ ಯಾರೂ ಇರಲಿಲ್ಲ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...

ನದಿಯಲ್ಲಿ ತೇಲಿಕೊಂಡು ಬಂದಿದ್ದು ದೊಡ್ಡ ಮೀನುಗಳಲ್ಲ ಅಡುಗೆ ಅನಿಲದ ಸಿಲಿಂಡರ್‌ಗಳು! ವಿಡಿಯೊ ನೋಡಿ

ನೀರಿನಲ್ಲಿ ತೇಲಿ ಬಂದ ಅಡುಗೆ ಅನಿಲದ ಸಿಲಿಂಡರ್‌ಗಳು !

ನದಿ ನೀರಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಗಳು ಹರಿದು ಬಂದರೆ ಹೇಗಿರಬಹುದು... ಎಂದಾದರೂ ಯೋಚಿಸಿದ್ದೀರಾ ? ಆದರೆ ಈ ಘಟನೆ ಈಗ ಮಹಾರಾಷ್ಟ್ರದಲ್ಲಿ ನಡೆದಿದೆ. ಭಾರಿ ಮಳೆಯಿಂದಾಗಿ ಹೆಚ್ ಪಿಸಿಎಲ್ ಸ್ಥಾವರದೊಳಗೆ ಪ್ರವಾಹ ನೀರು ನುಗ್ಗಿದ್ದು ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳನ್ನು ನದಿಯಲ್ಲಿ ಹೊತ್ತೊಯ್ದಿದೆ. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೋತರೂ ಬುದ್ಧಿ ಕಲಿಯದ ದೀದಿ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್‌

ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ

Mamata Banerjee: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಿಎಂಸಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದಿದ್ದು, ವಿಡಿಯೊ ವೈರಲ್‌ ಆಗಿದೆ.

ಬಲೂನ್, ಹೂವುಗಳಿಂದ ರೈಲು ಬೋಗಿಯ ಅಲಂಕಾರ; ಹನಿಮೂನ್ ಸ್ಪಾಟ್‌ನಂತೆ ಬದಲಾದ ಎಸಿ ಕ್ಯಾಬಿನ್

ಹನಿಮೂನ್ ಸ್ಪಾಟ್ ಆಗಿ ಅಲಂಕೃತಗೊಂಡ ರೈಲು ಬೋಗಿ

Viral Video: ರೈಲಿನ ಎಸಿ ಕೋಚ್‌ ಅನ್ನು ದಂಪತಿ ಐಷಾರಾಮಿ ಹನಿಮೂನ್ ಸೆಟ್ ಅಪ್‌ನಂತೆ ಆಲಂಕರಿಸಿದ ದೃಶ್ಯವೊಂದು ವೈರಲ್ ಆಗಿದೆ. ವಿವಿಧ ಬಣ್ಣದ ಬಲೂನ್‌, ಹೂವಿನ ಹ್ಯಾಂಗಿಂಗ್‌, ಮೇಣದ ಬತ್ತಿ, ಗುಲಾಬಿ ದಳಗಳಿಂದ ಕೋಚ್ ಅನ್ನು ಅಲಂಕರಿಸಲಾಗಿದೆ‌. ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Viral Video: ''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಪ್ರವಾಹದ ನಡುವೆ ಪ್ರಾಣದ ಹಂಗು ತೊರೆದು ಕಾರ್‌ ಉಳಿಸಿಕೊಂಡ ಮಾಲಕ

ವ್ಯಕ್ತಿಯೊಬ್ಬರು ತೀವ್ರ ಪ್ರವಾಹದ ನಡುವೆ ಕಾರನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ ವಿಡಿಯೊ ವೈರಲ್ ಆಗುತ್ತಿದೆ. ಅತಿಯಾದ ನೀರಿನ ರಭಸದ ನಡುವೆ ತನ್ನ ಪ್ರಾಣವನ್ನು ಲೆಕ್ಕಿಸದೆ ಕಾರನ್ನು ರಕ್ಷಿಸಲು ಅವರು ಮುಂದಾಗಿದ್ದಾರೆ. ಈ ದೃಶ್ಯವು ಆತನಿಗಿದ್ದ ಕಾರಿನ ಮೇಲಿನ ಪ್ರೀತಿಯನ್ನು ಎದ್ದು ತೋರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಮಹಾರಾಷ್ಟ್ರದ ಭೀಕರ ಮಳೆ ನಡುವೆ ಸ್ಪೈಡರ್‌ಮ್ಯಾನ್ ಪ್ರತ್ಯಕ್ಷ; ಟ್ರಾಫಿಕ್ ನಿಯಂತ್ರಿಸಿ ವಾಹನ ಸವಾರರಿಗೆ ನೆರವು: ವಿಡಿಯೊ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಜನರ ನೆರವಿಗೆ ಧಾವಿಸಿದ ಸ್ಪೈಡರ್‌ಮ್ಯಾನ್

Viral Video: ಮಹಾರಾಷ್ಟ್ರದ ಭಿವಂಡಿಯಲ್ಲಿ ಭಾರಿ ಮಳೆಯಿಂದ ರಸ್ತೆ ಎಲ್ಲ ತೋಡಿನಂತಾಗಿದ್ದು, ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಹೀಗಾಗಿ ಶಾದಾಬ್ ಎಂಬ ಯುವಕ ಸ್ಪೈಡರ್‌ಮ್ಯಾನ್ ವೇಷ ಧರಿಸಿ ಟ್ರಾಫಿಕ್ ನಿಯಂತ್ರಿಸಿ, ರಸ್ತೆ ಮೇಲಿನ ನೀರು ತೆರವುಗೊಳಿಸಿ ಸಾರ್ವಜನಿಕರಿಗೆ ನೆರವಾಗಿದ್ದಾನೆ. ಆತನ ಸೇವೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಕೃತಿಯೊಂದಿಗೆ ಚೆಲ್ಲಾಟವಾಡೋ ಮುನ್ನ ಎಚ್ಚರ: ಜಲಪಾತದಲ್ಲಿ ದಿಢೀರ್ ಪ್ರವಾಹ ಹೆಚ್ಚಿ ಪ್ರವಾಸಿಗರು ಕೊಚ್ಚಿಹೋಗುವ ದೃಶ್ಯ ವೈರಲ್‌

ಜಲಪಾತದಲ್ಲಿ ದಿಢೀರ್ ಹೆಚ್ಚಿದ ನೀರಿನ ಹರಿವು! ಕೊಚ್ಚಿಹೋದ ಪ್ರವಾಸಿಗರು

Viral Video: ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಮೀಪದ ಮಾರ್ಕೊನಹಳ್ಳಿ ಅಣೆಕಟ್ಟಿನಲ್ಲಿ ನಡೆದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಂದ್ರಿ ಸರೋವರದ ಬಳಿಯ ಜಲಪಾತಕ್ಕೆ ತೆರಳಿದ್ದ ಪ್ರವಾಸಿಗರಿಗೆ ಕಹಿ ಅನುಭವ ಎದುರಾಗಿದೆ. ಜಲಪಾತದಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿದ್ದು ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಪರದಾಡಿದ ದೃಶ್ಯ ವೈರಲ್‌ ಆಗಿದೆ.

Tumkur Accident: ಲಾರಿ ಹರಿದರೂ ಪವಾಡಸದೃಶ ರೀತಿಯಲ್ಲಿ ವಿದ್ಯಾರ್ಥಿನಿ ಪಾರು; ಇಲ್ಲಿದೆ ಎದೆ ಝಲ್ ಎನಿಸೋ Video!

ಲಾರಿ ಹರಿದರೂ ಪವಾಡಸದೃಶ ರೀತಿಯಲ್ಲಿ ಪಾರಾದ ವಿದ್ಯಾರ್ಥಿನಿ; Video

ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಭೀಕರ ನಡೆದಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು,ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರಿ ಪ್ರವಾಹ, ರಸ್ತೆ ಸಂಪರ್ಕ ಕಡಿತ; ಮರದ ಬಾಗಿಲನ್ನೇ ಸ್ಟ್ರೆಚರ್‌ನಂತೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

ಬಾಗಿಲು ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

Maharashtra Flood: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಆಗಿ ಬಾಗಿಲನ್ನು ಗ್ರಾಮಸ್ಥರು ಬಳಸಿರುವ ಮನಮಿಡಿಯುವ ಘಟನೆ ನಡೆದಿದೆ. ಬೇರೆ ದಾರಿ ಕಾಣದೆ ಮನೆಯ ಬಾಗಿಲನ್ನೇ ತಾತ್ಕಾಲಿಕ ಸ್ಟ್ರೆಚರ್ ಆಗಿ ಪರಿವರ್ತಿಸಲಾಗಿದೆ.

Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ಅಪ್ರಾಪ್ತ ಬಾಲಕಿಗೆ ಕಿರುಕುಳ: ಕ್ರಮ ಕೈಗೊಳ್ಳಲು ನೆಟ್ಟಿಗರ ಆಗ್ರಹ

ಕಾನ್ಪುರದ ಬಾರ್ರಾ-2 ಪ್ರದೇಶದಲ್ಲಿ ನೆರೆಮನೆಯ ಯುವಕ ನಿರಂತರವಾಗಿ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿರುವ ಬಗ್ಗೆ ಬಾಲಕಿ ಆರೋಪಿಸಿದ್ದಾಳೆ. ವೈರಲ್ ಆದ ವೀಡಿಯೊದಲ್ಲಿ, ಬಾಲಕಿ ತನ್ನನ್ನು ಬರ್ರಾ-2 ನಿವಾಸಿ ಭೂಮಿ ಸಿಂಗ್ ರಾಥೋಡ್ ಎಂದು ಗುರುತಿಸಿಕೊಂಡಿದ್ದು ತಾನು ದಿನ ನಿತ್ಯವೂ ನಿರಂತರ ಭಯದಲ್ಲಿ ಬದುಕುವಂತೆ ಮಾಡಿದ ಹಲವಾರು ಘಟನೆಗಳನ್ನು ವಿವರಿಸಿದ್ದಾಳೆ..

Loading...