ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ರೀಲ್ಸ್‌ಗೆ ಲೈಕ್‌ ಮಾಡುತ್ತಲೇ 40 ವರ್ಷದ ಆಂಟಿಯನ್ನು ಪಟಾಯಿಸಿದ 14ರ ಬಾಲಕ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ

14ರ ಬಾಲಕನ ಪ್ರೀತಿಯಲ್ಲಿ ಬಿದ್ದ 4 ಮಕ್ಕಳ ತಾಯಿ

Viral News: ಉತ್ತರ ಪ್ರದೇಶದ ಮಹಾರಾಜ್‌ಗಂಜನ್‌ನ 4 ಮಕ್ಕಳ ತಾಯಿ, 40 ವರ್ಷದ ಮಹಿಳೆ ತಮಿಳುನಾಡಿನ 14 ವರ್ಷದ ಬಾಲಕನನ್ನು ಪ್ರೀತಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದೇಶದ ಗಮನ ಸೆಳೆದಿದೆ.

ಅಪಾಯ ಎಂದು ಗೊತ್ತಿದ್ದೂ ಪ್ರವಾಸಿಗರ ಹುಚ್ಚಾಟ: ವಿಡಿಯೊ ವೈರಲ್

ಪ್ರವಾಸಿ ಸ್ಥಳದಲ್ಲಿ ಯುವಕರ ಮಿತಿಮೀರಿದ ವರ್ತನೆ: ವಿಡಿಯೊ ವೈರಲ್

Viral Video: ಹಿಮಾಚಲ ಪ್ರದೇಶದ ಪಾಗಲ್ ನಾಲಾ ನದಿ ತೀರದಲ್ಲಿ ಪ್ರವಾಸಿಗರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹರಿಯುವ ನೀರಿನ ಬಳಿ‌ ಮರಳು ಮತ್ತು ಕೆಸರಿನಿಂದ ಕೂಡಿದ ಪ್ರದೇಶಗಳಲ್ಲಿ ಎಸ್‌ಯುವಿ ಕಾರ್‌, ಬೈಕ್‌ ಚಲಾಯಿಸುತ್ತಿರುವ ದೃಶ್ಯ ವೈರಲ್‌ ಆಗಿದೆ.

ಇನ್ಮುಂದೆ ಇಂಧನ ಬೆಲೆ ಏರಿಕೆಯ ಚಿಂತೆಯೇ ಬೇಡ; ಭಾರತದಲ್ಲಿ ತಯಾರಾಯ್ತು ಪೆಟ್ರೋಲ್ ಇಲ್ಲದೆ ಚಲಿಸುವ ಬೈಕ್

ಪೆಟ್ರೋಲ್ ರಹಿತ ಬೈಕ್ ನಿರ್ಮಿಸಿ ಮನ ಗೆದ್ದ ಒಡಿಶಾದ ಯುವಕ

Viral Video: ಪೆಟ್ರೋಲ್ ಇಲ್ಲದೆ ಚಲಿಸಬಲ್ಲ ವಿಶೇಷ ಬೈಕ್‌ ಅನ್ನು ಒಡಿಶಾದ ಯುವಕನೊಬ್ಬ ಆವಿಷ್ಕರಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇಂಧನ ಕೊರತೆ, ಬೆಲೆ ಏರಿಕೆಯ ಸಮಸ್ಯೆಯಿಂದ ಪಾರಾಗಲಕು ಈ ಆವಿಷ್ಕಾರ ನೆರವಾಗಲಿದೆ ಎನ್ನುವ ನಿರೀಕ್ಷೆ ಮೂಡಿದೆ.

ಆಟೋ ಓಡಿಸಿ ಬದುಕು ಸಾಗಿಸುವ ಬೆಂಗಳೂರಿನ ಮಹಿಳೆ: ಚಾಲಕಿಯ ಧೈರ್ಯಕ್ಕೆ ಸಲಾಂ

ಬೆಂಗಳೂರು ಆಟೋ ಚಾಲಕಿಯ ಧೈರ್ಯಕ್ಕೆ ಅಮೆಜಾನ್ ಸಿಬ್ಬಂದಿ ಫಿದಾ

Viral News: ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ತಮಗೆ ಸಾಧ್ಯವಾದ ಕೆಲಸ ಮಾಡಿ ಜೀವನ ನಿಭಾಯಿಸುವ ಅನೇಕ ಮಹಿಳೆಯರಿದ್ದಾರೆ. ಅದರಂತೆ ಬೆಂಗಳೂರಿನ ಮಹಿಳೆಯೊಬ್ಬರು ಆಟೋ ಚಲಾಯಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಆಟೋ ಚಾಲಕಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಆಟೋ ಚಾಲಕಿಯ ಕಥೆಯನ್ನು ಅಮೆಜಾನ್ ಉದ್ಯೋಗಿಯೊಬ್ಬರು ಶೇರ್ ಮಾಡಿದ್ದಾರೆ.

ಮಾನವೀಯತೆಯನ್ನೇ ಮರೆತ ಜನ: ಟ್ರಕ್ ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸುವ ಬದಲು ಮೇಕೆ ಹೊತ್ತೊಯ್ದ ಸ್ಥಳೀಯರು

ಅಪಘಾತದಲ್ಲಿ ಗಾಯಾಳುಗಳಿಗೆ ನೆರವಾಗುವ ಬದಲು ಮೇಕೆ ದೋಚಿದ ಜನ

Viral Video: ಮೇಕೆ ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಸ್ಥಳೀಯರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾರೆ. ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ರಸ್ತೆಯಲ್ಲಿ ಬಿದ್ದಿದ್ದ ಮೇಕೆಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ನಿರ್ಮಿಸಲು ಆಗದಿದ್ದರೆ ಹೆಲಿಕಾಪ್ಟರ್ ಕೊಡಿ: ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದ ಛತ್ತೀಸ್‌ಗಢ ಗ್ರಾಮಸ್ಥರು

ರಸ್ತೆ ನಿರ್ಮಿಸಲು ಆಗದಿದ್ದರೆ ಹೆಲಿಕಾಪ್ಟರ್ ಕೊಡಿ ಎಂದ ಗ್ರಾಮಸ್ಥರು

Chhattisgarh villagers write to Amit Shah: ದೇಶದ ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಇನ್ನೂ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಇಲ್ಲೊಂದೆಡೆ ಗ್ರಾಮಸ್ಥರು ಕೇಂದ್ರ ಸರ್ಕಾರಕ್ಕೆ ವಿಶಿಷ್ಟ ಬೇಡಿಕೆಯನ್ನಿಟ್ಟಿದ್ದಾರೆ. ತಮಗೆ ಉತ್ತಮ ರಸ್ತೆ ನಿರ್ಮಿಸಿ ಕೊಡಲು ಸಾಧ್ಯವಾಗದಿದ್ದರೆ, ಹೆಲಿಕಾಪ್ಟರ್‌ಗಳನ್ನು ಕೊಡಿ ಎಂದು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ನಿವಾಸಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಸಂಪೂರ್ಣ ಗ್ರಾಮಕ್ಕೆ ವಿಮೆ ಮಾಡಿಸಿ ಹಸೆಮಣೆ ಏರಿದ ಮಹಾರಾಷ್ಟ್ರದ ಯುವಕ; ಇದು ದೇಶಕ್ಕೇ ಮಾದರಿಯಾದ ಮದುವೆ

ಮದುವೆಯಂದು ಸಂಪೂರ್ಣ ಗ್ರಾಮಕ್ಕೆ ವಿಮೆ ರಕ್ಷಣೆ ಕೊಡಿಸಿದ ವರ

ಗ್ರಾಮದ ಸುಮಾರು 3,500 ಮಂದಿಗೆ ಅಪಘಾತ ರಕ್ಷಣೆ ವಿಮೆ ಮಾಡಿ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ಹಸೆಮಣೆ ಏರಿದ್ದಾನೆ. ಇದು ಈಗ ದೇಶದ ಗಮನ ಸೆಳೆದಿದೆ. ಯುವಕ ಹಾಗೂ ಆತನ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ವಿವಾಹ ಸಮಾರಂಭದಲ್ಲಿ ವಧು ವರರು ವಿಮೆ ಪತ್ರವನ್ನು ಗ್ರಾಮಸ್ಥರಿಗೆ ಉಡುಗೊರೆಯಾಗಿ ನೀಡಿದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡ ​ಝೊಮ್ಯಾಟೊ ಡೆಲಿವರಿ ಬಾಯ್; ಕಠಿಣ ಪರಿಶ್ರಮಕ್ಕೆ ಸಿಕ್ಕಿತು ಪ್ರತಿಫಲ!

ದೆಹಲಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಡೆಲಿವರಿ ಬಾಯ್

Viral News: ಶ್ರಮ ಪಟ್ಟರೆ ಯಶಸ್ಸು ಅನ್ನೋದು ಖಂಡಿತ...ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದ ಡೆಲಿವರಿ ಬಾಯ್ ಯೊಬ್ಬರು ಇದೀಗ ಕಷ್ಟ ಮೀರಿ ಗೆಲುವು ಸಾಧಿಸಿದ್ದಾರೆ. ಒಂದು ಕಾಲದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೊಮಾಟೊಗೆ ಆಹಾರವನ್ನು ವಿತರಿಸುತ್ತಿದ್ದ ಹರಿಯಾಣದ ವ್ಯಕ್ತಿಯೊಬ್ಬ ಆರ್ಥಿಕ ತೊಂದರೆಗಳನ್ನು ಎದುರಿಸಿ ಈಗ ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ಒಂದಾದ FMS ದೆಹಲಿ (Faculty of Management Studies) ಸೇರ್ಪಡೆಯಾಗಿ ಸಾಧನೆ ಗೈದಿದ್ದಾರೆ. ಇವರ ಶ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

13 ದಿನಗಳಲ್ಲಿ 3 ಬಾರಿ ಎವರೆಸ್ಟ್ ಏರಿ ಸಾಧನೆಗೈದ ಯುವತಿ: ವಿಶ್ವದಾಖಲೆಯ ದಿನ ನೆನೆದು ಭಾವುಕ!

13 ದಿನಗಳಲ್ಲಿ ಮೂರು ಬಾರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ

Viral News: ಶ್ರಮ ಪಟ್ಟರೇ ಅಸಾಧ್ಯ ಎನಿಸುವುದನ್ನು ಸಾಧ್ಯವಾಗಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಯುವತಿಯೊಬ್ಬರು ಕೇವಲ 13 ದಿನಗಳ ಸಮಯದಲ್ಲಿ ಮೂರು ಬಾರಿ ಎವರೆಸ್ಟ್ ಶಿಖರ ವನ್ನು ಏರಿ ವಿಶ್ವ ದಾಖಲೆ ಮಾಡಿದ್ದಾರೆ. ಪೂರ್ಣಿಮಾ ಶ್ರೇಷ್ಠ ಎನ್ನುವ ಯುವತಿ ಈ ಸಾಧನೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ...

ಮಧ್ಯ ರಾತ್ರಿ ಆಕಾಶದಿಂದ ಕಂಡ ಭಾರತ-ಪಾಕ್ ಗಡಿಯ ಅದ್ಬುತ ದೃಶ್ಯ: ಇಂಡಿಗೋ ಪೈಲಟ್ ಶೇರ್ ಮಾಡಿದ ವಿಡಿಯೊ ವೈರಲ್

ಭಾರತ-ಪಾಕಿಸ್ತಾನ ಗಡಿಯ ಅಪರೂಪದ ದೃಶ್ಯ ಶೇರ್ ಮಾಡಿದ ಇಂಡಿಗೋ ಪೈಲೆಟ್

Viral News: ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿರೇಖೆಯ ಮಧ್ಯೆ ಸೈನಿಕರು ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದಾ ಯುದ್ಧ, ಉದ್ವಿಗ್ನತೆಯಿಂದಲೇ ಸುದ್ದಿಯಾಗುವ ಈ ಗಡಿ ಮಧ್ಯ ರಾತ್ರಿಯ ವೇಳೆ ಆಕಾಶದಿಂದ ಎಷ್ಟು ಅದ್ಭುತವಾಗಿ ಕಾಣುತ್ತದೆ ಎಂಬುದನ್ನು ಪೈಲೆಟ್ ಒಬ್ಬರು ಶೇರ್ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಯುವತಿಯ ಮೊಬೈಲ್ ಮಿಸ್ಸಿಂಗ್: 15 ನಿಮಿಷದಲ್ಲಿ ಪತ್ತೆಹಚ್ಚಿದ CISF ಸಿಬ್ಬಂದಿ

ಕಳೆದುಹೋದ ಫೋನ್ 15 ನಿಮಿಷದಲ್ಲೇ ಪತ್ತೆ ಹಚ್ಚಿದ ಸಿಬ್ಬಂದಿ

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ಯುವತಿಯ ಮೊಬೈಲ್ ಅನ್ನು ಅಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ CISF ಸಿಬ್ಬಂದಿ ಹದಿನೈದು ನಿಮಿಷದಲ್ಲಿ ಹುಡುಕಿ ಕೊಟ್ಟಿದ್ದಾರೆ. ಯುವತಿ ಸಿಬ್ಬಂದಿಯ ಕರ್ತವ್ಯ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಈ ಸುದ್ದಿ ವೈರಲ್‌ ಆಗಿದೆ.

ಆಂಬುಲೆನ್ಸ್‌ ಸಿಗದೆ ಮೃತದೇಹ 4 ಕಿಲೋ ಮೀಟರ್ ಹೆಗಲ ಮೇಲೆ ಹೊತ್ತೊಯ್ದ ತೆಲಂಗಾಣದ ಕುಟುಂಬ

ಆಂಬುಲೆನ್ಸ್‌ ಸಿಗದೆ 4 ಕಿ.ಮೀ. ಮೃತದೇಹ ಹೊತ್ತೊಯ್ದ ಕುಟುಂಬ

ತೆಲಂಗಾಣದ ಭದ್ರಾಚಲಂನಲ್ಲಿ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್‌ ಒದಗಿಸಲು ವಿಫಲವಾದ ಕಾರಣ, ಕುಟುಂಬಸ್ಥರು ತಮ್ಮ ಸಂಬಂಧಿಯ ಮೃತದೇಹವನ್ನು ಸುಮಾರು ನಾಲ್ಕು ಕಿಲೋ ಮೀಟರ್ ದೂರ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಆಡಳಿತ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

10 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಹತ್ಯೆ ಪ್ರಕರಣದ ಪತ್ರಿಕಾಗೋಷ್ಠಿಯಲ್ಲಿ ನಕ್ಕ ಪೊಲೀಸ್‌ ಅಧಿಕಾರಿಗಳು; ವಿಡಿಯೊ ವೈರಲ್‌, ಭಾರಿ ಆಕ್ರೋಶ

ಹತ್ಯೆ ಪ್ರಕರಣದ ಪತ್ರಿಕಾಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್‌

Viral Video: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಪೊಲೀಸ್‌ ಅಧಿಕಾರಿಗಳಿಬ್ಬರು ನಗುತ್ತಿರುವ ವಿಡಿಯೊ ವೈರಲ್‌ ಆಗಿದೆ. ಮಹಿಳಾ ಪೊಲೀಸ್‌ ಅಧಿಕಾರಿ ಆರ್.ವಿ. ರಮ್ಯಾ ಭಾರತಿ ಕೈಯ ನೈಲ್‌ ಪಾಲಿಷ್‌ ನೋಡಿ ಜೋರಾಗಿ ನಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

Fact Check: ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಬೆಂಬಲ ಸೂಚಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್? ವೈರಲ್‌ ನ್ಯೂಸ್‌ನ ಅಸಲಿಯತ್ತೇನು?

ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಭಾರತ ಬೆಂಬಲ?

ಪಾಕಿಸ್ತಾನ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಭಾರತ ಬೆಂಬಲ ನೀಡುತ್ತಿದೆ. ಇದನ್ನು ಸ್ವತಃ ಭಾರತದ ರಕ್ಷಣಾ ಸಚಿವರೇ ಹೇಳಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ನಕಲಿ ವಿಡಿಯೋ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್ ಚೆಕ್ ವಿಭಾಗವು ಸೋಮವಾರ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಜತೆ ಸಾಲಿನಲ್ಲಿ ನಿಂತು ಶಾಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದಿ ನಾಯಿ: ಕ್ಯೂಟ್ ವಿಡಿಯೊ ಇಲ್ಲಿದೆ

ಶಾಲಾ ಪ್ರಾರ್ಥನೆಯಲ್ಲಿ ಬೀದಿ ನಾಯಿಯೂ ಭಾಗಿ: ಅಪರೂಪದ ವಿಡಿಯೊ ವೈರಲ್‌

Viral News: ಸಿಕ್ಕಿಂನ ಶಾಲೆಯೊಂದರಲ್ಲಿ ಎಲ್ಲರ ಗಮನ ಸೆಳೆಯುವ ದೃಶ್ಯವೊಂದು ಕಂಡು ಬಂದಿದೆ. ಬೀದಿ ನಾಯಿಯೊಂದು ಶಾಲಾ ಪ್ರಾರ್ಥನ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು ಮಕ್ಕಳ ಸಾಲಿನಲ್ಲಿ ಅದು ಕೂಡ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತು ಪಾಲ್ಗೊಂಡಿದೆ. ಸದ್ಯ ಈ ಕ್ಯೂಟ್ ವಿಡಿಯೊ ಭಾರಿ ಗಮನ ಸೆಳೆದಿದೆ.

ಕಾರ್‌ನಿಂದ ಕಸ ಎಸೆದ ಪ್ರವಾಸಿಗರು; ರಸ್ತೆ ಮಧ್ಯದಲ್ಲೇ ತಡೆದು ಕಸ ವಾಪಸ್ ಕೊಟ್ಟ ಸಾಮಾಜಿಕ ಕಾರ್ಯಕರ್ತ!

ಕಸ ಎಸೆದ ಪ್ರವಾಸಿಗರಿಗೆ ತಕ್ಕ ಶಿಕ್ಷೆ ನೀಡಿದ ಸಾಮಾಜಿಕ ಕಾರ್ಯಕರ್ತ

Viral Video: ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡದೇ ಇರುವುದು, ಜವಾಬ್ದಾರಿತನದಿಂದ ವರ್ತಿಸದೇ ಇರುವುದು ಹೀಗೆ ನಾನಾ ದೂರುಗಳು ಕೇಳಿ ಬರುತ್ತಲೇ ಇವೆ. ಅದರಲ್ಲೂ ಪ್ರವಾಸಿ ಸ್ಥಳದಲ್ಲಿ ಕೆಲ ಪ್ರಯಾಣಿಕರು ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಸ್ಸೂರಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರ್ ನಿಂದ ಪ್ಲಾಸ್ಟಿಕ್ ಕಸವನ್ನು ರಸ್ತೆಗೆ ಎಸೆದ ಪ್ರವಾಸಿಗರೊಬ್ಬರನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ತಡೆದು ಬುದ್ದಿ ಮಾತು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ...

ಕೇವಲ 149 ರೂ ಕೊಟ್ಟರೆ ಸಾಕು, ನಿಮ್ಮ ಶಾಪಿಂಗ್ ಬ್ಯಾಗ್ ಹೊರಲು ಕ್ಯಾರಿಮ್ಯಾನ್ ರೆಡಿ! ಏನಿದು ದೆಹಲಿಯ ಹೊಸ ಸೇವೆ!

ದೆಹಲಿಯ ಶಾಪಿಂಗ್ ಮಾಲ್‌ನಲ್ಲಿ ಸಹಾಯ ಮಾಡಲು ಕ್ಯಾರಿಮ್ಯಾನ್

Viral News: ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಡ್ರೆಸ್ ಖರೀದಿಸಲು ಹೆಚ್ಚಿನವರು ಆಸಕ್ತಿ ವಹಿ ಸುತ್ತಾರೆ.. ಶಾಪಿಂಗ್ ಏನೋ ಖುಷಿ...ಆದ್ರೆ ಭಾರವಾದ ಬ್ಯಾಗ್ ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ..ಇದಕ್ಕಾಗಿ ದೆಹಲಿಯಲ್ಲಿ ಸುಲಭವಾದ ಪರಿಹಾರ ಕ್ರಮವೊಂದನ್ನು ಜಾರಿ ಮಾಡಲಾಗಿದೆ. ದೆಹಲಿಯ ಪ್ರಸಿದ್ಧ ಲಜಪತ್ ನಗರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೆರವಾಗಲು ‘ಕ್ಯಾರಿಮ್ಯಾನ್’ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕಾರ್ಪೊರೇಟ್ ಕೆಲಸವನ್ನೇ ತೊರೆದ ವ್ಯಕ್ತಿ; ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ!

ಕಾರ್ಪೊರೇಟ್ ಕೆಲಸ ತ್ಯಜಿಸಿ ಬಡ ಮಕ್ಕಳಿಗೆ ನೆರವಾದ ಹೈದರಾಬಾದ್ ವ್ಯಕ್ತಿ!

Viral News: ಹೈದರಾಬಾದ್ ವಿಯಾಪುರದ ನಿವಾಸಿಯೊಬ್ಬರು ತನ್ನ ಕಾರ್ಪೊರೇಟ್ ಕೆಲಸ ಬಿಟ್ಟು ಬಡ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದಾರೆ. ಕೈ ತುಂಬಾ ಬರುತ್ತಿದ್ದ ಸಂಬಳ ಬಿಟ್ಟು ಇದೀಗ ಇದೀಗ ಸಾವಿ ರಾರು ಬಡ ಮಕ್ಕಳ ಜೀವನವನ್ನು ಬೆಳಗಿಸುತ್ತಿದ್ದಾರೆ. ಸದ್ಯ ಇವರ ಮಾನವೀಯ ಕೆಲಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ...

ಹೃದಯ ವಿದ್ರಾವಕ ದೃಶ್ಯ; 1,500 ರುಪಾಯಿ ಪಿಂಚಣಿ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು 9 ಕಿ.ಮೀ. ನಡೆದ ಮಹಿಳೆ

ವೃದ್ಧ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ನಡೆದ ಮಹಿಳೆ

Woman Carries Mother-in-Law: ಮಹಿಳೆಯೊಬ್ಬಳು ಬ್ಯಾಂಕಿನಿಂದ ಪಿಂಚಣಿ ಹಣವನ್ನು ಪಡೆಯುವ ಸಲುವಾಗಿ, ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸುಡುವ ಬಿಸಿಲು, ಕಾಡಿನ ಹಾದಿ, ಕಲ್ಲು-ಮುಳ್ಳುಗಳು, ಬಂಡೆಗಳು ಮತ್ತು ನದಿಗಳನ್ನು ಅತ್ತೆಯನ್ನು ಹೊತ್ತುಕೊಂಡೇ ಸಾಗಿದ್ದಾರೆ.

ಪೌರ ಕಾರ್ಮಿಕರಿಗೆ ಚಹಾ, ಬಿಸ್ಕೆಟ್ ಕೊಟ್ಟು ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಆನ್‌ಲೈನ್‌ನಲ್ಲಿ ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಮಾಡುವ ಸಣ್ಣದೊಂದು ಸಹಾಯ, ತೋರುವ ಕೊಂಚ ಪ್ರೀತಿ, ಕರುಣೆ ಕೂಡ ಕೆಲವೊಬ್ಬರ ಪಾಲಿಗೆ ದೇವರಾಗಿ ಬಂದರೇನೋ ಎಂದೆನಿಸುವಂತೆ ಮಾಡುತ್ತದೆ. ನಿಸ್ವಾರ್ಥವಾಗಿ ಮಾಡುವ ಇಂತಹ ಕಾರ್ಯಗಳೇ ಮಾನವೀಯತೆಯ ಬಹುದೊಡ್ಡ ಉದಾಹರಣೆಗಳಾಗಿ ಕಾಣುತ್ತವೆ. ಹೀಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸಣ್ಣ ಕಾರ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹಗಲಿನಲ್ಲೇ ಮಹಿಳೆಯರಿದ್ದ ಆಟೋ ಬೆನ್ನಟ್ಟಿದ ಬೆತ್ತಲೆ ಕಾಮುಕರು! ಸಂತ್ರಸ್ತೆ ಹೇಳಿದ್ದೇನು?

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರನ್ನು ಬೆನ್ನಟ್ಟಿದ ಕಾಮುಕರು

Viral News: ಮಹಿಳೆರ ಕಿರುಕುಳ, ಅತ್ಯಾಚಾರದಂತ ಘಟನೆಗಳು ವರದಿಯಾಗುತ್ತಲೇ ಇವೆ‌. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ‌. ಮೂವರು ಮಹಿಳೆಯರು ಪ್ರಯಾಣ ಮಾಡುತ್ತಿದ್ದ ಆಟೋ ರೀಕ್ಷಾವನ್ನು ಕಾರಿನಲ್ಲಿ ಬಂದ ಮೂವರು ವಿಕೃತರು ಬೆನ್ನಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಯುವಕರು ಸಂಪೂರ್ಣ ಬೆತ್ತಲಾಗಿದ್ದರು ಎಂದು ತಿಳಿದು ಬಂದಿದೆ.

ಬಾಲ್ಯದ ಮುಗ್ಧತೆ ಕಸಿಯುವ ಯತ್ನ: ಬಾಲಕಿಯ ಮೀತಿ ಮೀರಿದ ಡ್ಯಾನ್ಸ್ ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

ಮಕ್ಕಳಿಗೆ ಈ ನೃತ್ಯ ಸೂಕ್ತವಲ್ಲ: ಮಿತಿ ಮೀರಿದ ಡ್ಯಾನ್ಸ್ ಗೆ ನೆಟ್ಟಿಗರು ಕಿಡಿ

Viral Video: ಇಲ್ಲೊಬ್ಬ ಬಾಲಕಿಯೂ ತನ್ನ ವಯಸ್ಸಿಗೂ ಮೀರಿ ನೃತ್ಯ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧದ ಚರ್ಚೆ ಉಂಟಾಗಿದೆ."ಮಿನಿ ಮಾಧುರಿ" ಎಂದು ಕರೆಯಲ್ಪಡುವ ಅತ್ಯಂತ ಜನಪ್ರಿಯ ಬಾಲ ನರ್ತಕಿ ಬರ್ಕತ್ ಅರೋರಾ ಅವರ ವೀಡಿಯೊವೊಂದು ವೈರಲ್ ಆಗಿದ್ದು ಇಷ್ಟು ಸಣ್ಣ ವಯಸ್ಸಿಗೆ ಇಂತಹ ನೃತ್ಯ ಬೇಕಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ...

ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ; ವಿಡಿಯೊ ವೈರಲ್

ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ

man dresses as a cockroach: ವ್ಯಕ್ತಿಯೊಬ್ಬರು ಯಮುನೆಯ ಮಾಲಿನ್ಯದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿರಳೆ ವೇಷಭೂಷಣ ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಈ ರೀತಿ ವಿಲಕ್ಷಣ ವೇಷ ತೊಟ್ಟು ಗಮನಸೆಳೆದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ 15 ಬೀದಿ ನಾಯಿಗಳಿಂದ ದಾಳಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗುಂಪು ದಾಳಿ: ವಿಡಿಯೊ ವೈರಲ್

Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮೀತಿ ಮೀರಿ ಹೋಗಿದೆ. ಸಾರ್ವಜನಿಕ ರಲ್ಲಿ ಇದು ತೀವ್ರ ಆತಂಕವನ್ನು ಕೂಡ ಮೂಡಿಸಿದೆ. ಇದೀಗ ಬೆಂಗಳೂರಿನ ರಾಮಮೂರ್ತಿ ನಗರದ ಬಳಿಯ ಹೊಯ್ಸಳ ನಗರದಲ್ಲಿ 15 ಕ್ಕೂ ಹೆಚ್ಚು ಬೀದಿ ನಾಯಿಗಳ ಗುಂಪೊಂದು ವಿದ್ಯಾರ್ಥಿನಿಯ ಮೇಲೆ ಹಠಾತ್ತನೆ ದಾಳಿಯನ್ನು ಮಾಡಿವೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಗಮಿಸಿ ನಾಯಿಯನ್ನು ಓಡಿಸಿದ್ದಾರೆ.

Loading...