ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಅದ್ದೂರಿ ಮದುವೆಗೆ ಬ್ರೇಕ್ ಹಾಕಿ ಅನಾಥ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ದಂಪತಿ; ನೆಟ್ಟಿಗರು ಭಾವುಕ

ಅದ್ಧೂರಿ ಮದುವೆ ಬದಲು ಅನಾಥ ಮಕ್ಕಳಿಗೆ ಆಸರೆಯಾದ ದಂಪತಿ

Viral Video: ಲಕ್ಷಾಂತರ ರುಪಾಯಿ ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವುದು ಸದ್ಯದ ಟ್ರೆಂಡ್. ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದು ಎಲ್ಲರಿಗೂ ಮಾದರಿಯಂತಿದೆ. ನವ ಜೋಡಿ ಅದ್ಧೂರಿ ಮದುವೆ ಆಚರಣೆಯ ಬದಲಿಗೆ 11 ಬಡ ಮತ್ತು ಅನಾಥ ಮಕ್ಕಳನ್ನು ದತ್ತು ಪಡೆಯುವ ಮೂಲಕ ಮೆಚ್ಚುಗೆ ಗಳಿಸಿದೆ.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್‌ ಎಳೆದೊಯ್ದ ಚಾಲಕ

ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನಿಂದ ಬುಲೆಟ್ ಸವಾರನಿಗೆ ಡಿಕ್ಕಿ

Viral Video: ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದ ವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ವೀಸಾ ಸಂದರ್ಶನಕ್ಕಾಗಿ ದಾಖಲೆ ಮರೆತ ಮಹಿಳೆಗೆ ನೆರವಾದ ಬ್ಲಿಂಕ್‌ಇಟ್‌; ಸಾಲಿನಲ್ಲಿ ನಿಂತಿದ್ದಾಗಲೇ ಸಿಕ್ತು ಪ್ರಿಂಟ್‌ಔಟ್‌

ದಾಖಲೆ ಮರೆತ ಮಹಿಳೆಗೆ ಪ್ರಿಂಟ್ಔಟ್‌ ತಲುಪಿಸಿದ ಬ್ಲಿಂಕಿಟ್

Viral News: ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ ಬಳಕೆ ಹೆಚ್ಚಾಗುತ್ತಿದೆ. ಈ ಅನ್‌ಲೈನ್ ಶಾಪಿಂಗ್‌ ತಾಣಗಳು ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಮಾಡುವುದಕ್ಕೆ ಸೀಮಿತವಾಗಿಲ್ಲ, ಕಷ್ಟದ ಸಮಯದಲ್ಲಿ ದಾಖಲೆಗಳನ್ನು ಒದಗಿಸುವ ಮೂಲಕವೂ ನೆರವಾಗುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಇತ್ತೀಚೆಗೆ ದಾಖೆಲೆ ಮರೆತು ಅಮೆರಿಕ ವೀಸಾದ ಸಂದರ್ಶನಕ್ಕೆ ತೆರಳಿದ ಮಹಿಳೆಗೆ ಅದರ ಪ್ರಿಂಟ್‌ಔಟ್‌ ಒದಗಿಸುವ ಮೂಲಕ ಬ್ಲಿಂಕ್‌ಇಟ್‌ ನೆರವಾಗಿದೆ.

Viral Video: ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು! ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಪ್ರಧಾನಿ ಸ್ವಾಗತಿಸಲು ಅಳವಡಿಸಿದ್ದ ಹೂಕುಂಡ ಕದ್ದೊಯ್ದ ಜನ

ಉತ್ತರ ಪ್ರದೇಶದ ಲಖನೌ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಅಲಂಕಾರಕ್ಕಾಗಿ ರಸ್ತೆ ಬದಿ ಅಳವಡಿಸಿದ್ದ ಹೂ ಕುಂಡಗಳನ್ನು ಸಾರ್ವಜನಿಕರು ಕದ್ದೊಯ್ದ ಘಟನೆ ನಡೆದಿದ್ದು, ಈ ವಿಡಿಯೊ ವೈರಲ್‌ ಆಗಿದೆ. ನೂರಾರು ಅಲಂಕಾರಿಕ ಹೂವಿನ ಕುಂಡಗಳನ್ನು ರಸ್ತೆ ಬದಿ ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ಈ ಹೂವಿನ ಕುಂಡವನ್ನು ಮನೆಗೆ ಕದ್ದೊಯ್ದಿದ್ದಾರೆ.

ಹಿಂದೂಗಳ ಹತ್ಯೆಗೆ ಆಕ್ರೋಶ: ರಸ್ತೆ, ಸಾರ್ವಜನಿಕ ಶೌಚಾಲಯಕ್ಕೆ ಬಾಂಗ್ಲಾ ಧ್ವಜ ಅಂಟಿಸಿ ಪ್ರತಿಭಟನೆ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ!

ಬಾಂಗ್ಲಾದೇಶದಲ್ಲಿ ಹಿಂದೂ ಯುವ ನಾಯಕನಾದ ದೀಪು ಚಂದ್ರ ದಾಸ್ ಅವರನ್ನು ಕ್ರೂರವಾಹಿ ಹತ್ಯೆ ಮಾಡಲಾಗಿದ್ದು ಅದನ್ನು ಖಂಡಿಸಿ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಹತ್ಯೆ ಬಗ್ಗೆ ಕೋಪಗೊಂಡ ಯುವಕರ ತಂಡವು ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಮತ್ತು ಧ್ವಜಗಳನ್ನು ತುಳಿದ ಘಟನೆ ಛತ್ರಸಾಲ್ ಚೌಕದಲ್ಲಿ ನಡೆದಿದೆ. ಹತ್ಯೆ ಮಾಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯುವಕರ ತಂಡವು ಪ್ರತಿಭಟನೆ ನಡೆಸಿದೆ.‌

ಆಯುಷ್ಯ ಗಟ್ಟಿ ಇದ್ದರೆ ಯಮನೂ ಸುಮ್ಮನಾಗುತ್ತಾನೆ; ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ವ್ಯಕ್ತಿ

10ನೇ ಮಹಡಿಯಿಂದ ಬಿದ್ದ ವ್ಯಕ್ತಿ ಪವಾಡ ಸದೃಶವಾಗಿ ಪಾರು

Viral Video: ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ತನಗೆ ಅರಿವಿಲ್ಲದೆ ಅವರು ಬೀಳುತ್ತಿದ್ದಂತೆ 8ನೇ ಮಹಡಿಯ ಕಿಟಕಿಯ ಹೊರಗೆ ಅಳವ ಡಿಸಲಾದ ಲೋಹದ ಗ್ರಿಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೊ ವೈರಲ್ ಆಗಿದೆ.

ಮುಂಬೈ ತಂಡದಲ್ಲಿ ತದ್ರೂಪಿ ರೋಹಿತ್ ಶರ್ಮಾ ಕಂಡು ಆಶ್ಚರ್ಯಚಕಿತರಾದ ನೆಟ್ಟಿಗರು

ಮುಂಬೈ ತಂಡದಲ್ಲಿ ತದ್ರೂಪಿ ರೋಹಿತ್; ಯಾರು ಈ ಹಾರ್ದಿಕ್ ತಾಮೋರೆ?

Rohit Sharma's lookalike: 28 ವರ್ಷದ ಹಾರ್ದಿಕ್ ಜಿತೇಂದ್ರ ತಮೋರೆ ಮುಂಬೈ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದು, ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಟೋಬರ್ 20, 1997 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ ತಮೋರೆ, ಕಳೆದ ಕೆಲವು ಋತುಗಳಲ್ಲಿ ಮುಂಬೈನ ಎಲ್ಲಾ ಮಾದರಿಗಳ ಹಿರಿಯರ ತಂಡದ ಭಾಗವಾಗಿದ್ದಾರೆ.

ಶಾಂತವಾಗಿ ಕುಳಿತು ಭಜನೆಯಲ್ಲಿ ಮಗ್ನನಾದ ʼಡಾಗೇಶ್‌ ಭಾಯಿʼ: ಶ್ವಾನದ ಭಕ್ತಿಗೆ ನೆಟ್ಟಿಗರ ಬಹುಪರಾಕ್

ಭಜನೆಯನ್ನು ಆಲಿಸಿ ಎಲ್ಲರ ಮನಗೆದ್ದ ನಾಯಿ: ಕ್ಯೂಟ್ ವಿಡಿಯೊ ಇಲ್ಲಿದೆ

Viral Video: ಶ್ವಾನವೊಂದು ಭಕ್ತಿ ಮತ್ತು ಸಂಗೀತಕ್ಕೆ ಮನಸೋತಿದ್ದು ಶಾಂತವಾಗಿ ಕುಳಿತು ಭಜನೆಯನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸತ್ಸಂಗವೊಂದರಲ್ಲಿ ಮಹಿಳೆಯ ಪಕ್ಕದಲ್ಲಿ ಶ್ವಾನ ಕೂತಿದ್ದು ಭಜನೆಯನ್ನು ಭಾರಿ ಗಂಭೀರವಾಗಿ ಆಲಿಸುತ್ತಿರುವುದು ಕಂಡುಬಂದಿದೆ‌.‌ ಈ ಶ್ವಾನಕ್ಕೆ ನೆಟ್ಟಿಗರು ಡಾಗೇಶ್‌ ಎಂದು ಹೆಸರಿಟ್ಟಿದ್ದಾರೆ.

Men Will Be Men: ಬರ್ತ್‌ಡೇ ದಿನ ಮೊದಲು ಬೆಸ್ಟ್ ಫ್ರೆಂಡ್‌ಗೆ ಕೇಕ್ ತಿನ್ನಿಸಿದ ಪ್ರಿಯತಮೆ; ಕೋಪದಿಂದ ಎಲ್ಲವನ್ನೂ ಧ್ವಂಸ ಮಾಡಿದ ಪ್ರಿಯತಮ

ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸಿದ ಯುವತಿ: ಪ್ರಿಯತಮ ಕಿಡಿಕಿಡಿ

Viral Video: ಯುವಕನೊಬ್ಬ ತನ್ನ ಪ್ರಿಯತೆಮೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲು ಮುಂದಾಗಿದ್ದಾನೆ. ಬಣ್ಣ ಬಣ್ಣದ ಬಲೂನ್‌ಗಳು, ವಿದ್ಯುತ್ ಆಲಂಕಾರಗಳು ಹಾಗೂ ಕೇಕ್‌ನೊಂದಿಗೆ ಸತ್‌ಪ್ರೈಸ್‌ ನೀಡಿದ್ದಾನೆ. ಆದರೆ ಈ ಸಂಭ್ರಮದ ಮಧ್ಯೆ ನಡೆದ ಒಂದು ಘಟನೆ ಇಡೀ ಖುಷಿಯನ್ನೇ ಹಾಳು ಮಾಡಿದೆ. ಯುವತಿಯು ಕೇಕ್ ಕತ್ತರಿಸಿದ ನಂತರ, ತನ್ನ ಪಕ್ಕದಲ್ಲಿ ನಿಂತಿದ್ದ ಆತ್ಮೀಯ ಗೆಳೆಯನಿಗೆ ಮೊದಲು ಕೇಕ್‌ ಅನ್ನು ತಿನ್ನಿಸಿದ್ದು ಈ ಅನಾಹುತಕ್ಕೆ ಕಾರಣ.

ಚುಮುಚುಮು ಚಳಿಗೆ ಬಿಸಿಬಿಸಿ ಕಾಫಿ ಸಪ್ಲೈ ಮಾಡುವ ವಾಕಿಂಗ್ ಶಾಪ್: ಗಮನ ಸೆಳೆದ ಯುವಕನ ಹೊಸ ಐಡಿಯಾ

ವಾಕಿಂಗ್ ಕಾಫಿ ಶಾಪ್: ಯುವಕನ ಹೊಸ ಐಡಿಯಾ ವೈರಲ್‌

ಟೀ, ಕಾಫಿಗೆ ಅಡಿಕ್ಟ್ ಆಗಿರುವವರು ಅದನ್ನು ಪದೇ ಪದೆ ಸೇವಿಸುತ್ತಲೇ ಇರುತ್ತಾರೆ. ಅದರಲ್ಲೂ ಈ ಚಳಿ ವಾತಾವರಣಕ್ಕೆ ಬಿಸಿ ಬಿಸಿ ಪಾನೀಯ ಸಿಕ್ಕರೆ ಕೆಲವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ. ಆದರೆ ಕೆಲವೊಮ್ಮೆ ಟೀ ಅಥವಾ ಕಾಫಿ ಇಲ್ಲದೆ ತಲೆ ನೋವು ಉಂಟಾದಾಗ ಹತ್ತಿರದಲ್ಲಿ ಯಾವ ಅಂಗಡಿ ಇಲ್ಲದಾಗ ಉಂಟಾಗುವ ನಿರಾಸೆ ಹೇಳತೀರದು. ಇದಕ್ಕಿಗ ಹೊಸ ಐಡಿಯಾ ಒಂದನ್ನು ಯುವಕನೊಬ್ಬ ಕಂಡು ಹಿಡಿದಿದ್ದಾನೆ. ಓಡಾಡಿಕೊಂಡೆ ಕಾಫಿ ತಯಾರಿಸಿ ವಿತರಿಸುತ್ತಿದ್ದಾನೆ. ಆತ ತನ್ನ ಮೈತುಂಬ ಕಪ್‌ ಅಳವಡಿಸಿಕೊಂಡಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಗಂಟಲಿಗೆ ಪೆನ್ಸಿಲ್ ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು; ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ

ಯುಕೆಜಿ ವಿದ್ಯಾರ್ಥಿಯ ಬಲಿ ಪಡೆದ ಪೆನ್ಸಿಲ್‌

ಯುಕೆಜಿ ವಿದ್ಯಾರ್ಥಿಯು ಪೆನ್ಸಿಲ್‌ನಿಂದ ಅಕಾಲಿಕ ಮರಣ ಹೊಂದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಭವಿಷ್ಯದ ಕನಸು ಕಂಡು ಹೆತ್ತವರ ಕಣ್ಣೆದುರು ಬಾಳಿ ಬದುಕ ಬೇಕಿದ್ದ ಈ ಬಾಲಕನ ಸಾವು ಶಾಲಾ ಆಡಳಿತ ಮಂಡಳಿಗೆ, ಪೋಷಕರಿಗೆ ಆಘಾತ ತಂದಿದೆ.

ಮರವೇರಿ ಕೊಹ್ಲಿಯ ಶತಕ ಕಣ್ತುಂಬಿಕೊಂಡ ಅಭಿಮಾನಿ!

ಲಾರಿ, ಮರವೇರಿ ಕೊಹ್ಲಿಯ ಬ್ಯಾಟಿಂಗ್‌ ಕಣ್ತುಂಬಿಕೊಂಡ ಅಭಿಮಾನಿ!

Virat Kohli fans: ಮೈದಾನದ ಸುತ್ತ ಇರುವ ಎತ್ತರದ ಕಂಪೌಂಡ್‌ ಹಿಂದೆ ನಿಂತು ಇಣುಕಿದರು. ರಸ್ತೆ ಬದಿ ನಿಂತ ಲಾರಿ, ಮರಗಳನ್ನು ಹತ್ತಿ ಕೊಹ್ಲಿಯನ್ನು ನೋಡುವ ಸಾಹಸ ಮಾಡಿದರು. ಇದೆಲ್ಲದರ ನಡುವೆ ವಿರಾಟ್ ಶತಕ ದಾಖಲಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳ ಗಡಿ ದಾಟಿದ ಸಾಧನೆಯೂ ಮಾಡಿದರು.

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಯ ಮೇಲೆ ಪತ್ನಿಯಿಂದ ಹಲ್ಲೆ: ವಿಡಿಯೊ ವೈರಲ್

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಗೆ ಪತ್ನಿಯಿಂದ ಹಲ್ಲೆ

Viral Video: ವ್ಯಕ್ತಿಯೊಬ್ಬ ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿಯು ಪತಿ ಹಾಗೂ ಆತ ಮದುವೆ ಆಗಬೇಕಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಾಹೋರ್‌ನಲ್ಲಿ ನಡೆದಿದೆ. ಸಾಹೋರ್ ಕಲೆಕ್ಟರ್ ಕಚೇರಿಯಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬದವರು ಜಗಳ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಸಾರ್ವಜನಿಕರ ಮುಂದೆ ಗದರಿಸಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಹದಿಹರೆಯದ ಬಾಲಕ; ಮಂಡಿಯೂರಿ ಕ್ಷಮೆಯಾಚಿಸಿದ ತಂದೆ

ಪುತ್ರನ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ ತಂದೆ

Viral News: ಸಾರ್ವಜನಿಕ ಸ್ಥಳದಲ್ಲಿ ಗದರಿಸಿದ ಘಟನೆ ಮನಸ್ಸಿಗೆ ನೋವು ತಂದ ಹಿನ್ನೆಲೆಯಲ್ಲಿ ಹದಿಹರೆಯದ ಬಾಲಕನೊಬ್ಬ ತಂದೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತಂದೆ, ತನ್ನ ಪುತ್ರನ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಅವಾಂತರ; ರೈಲ್ವೇ ಹಳಿಯಲ್ಲಿ ಆಟೋ ನಿಲ್ಲಿಸಿದ ಚಾಲಕ: ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಅಸ್ತವ್ಯಸ್ತ

ರೈಲ್ವೇ ಹಳಿಯಲ್ಲಿ ಆಟೋ ನಿಲ್ಲಿಸಿದ ಚಾಲಕ

Viral News: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಆಟೋವನ್ನು ರೈಲ್ವೆ ಹಳಿಯಲ್ಲಿ ನಿಲ್ಲಿಸಿದ್ದಾನೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

ಒಂದೇ ಬೈಕ್‍ನಲ್ಲಿ ಐವರ ಸವಾರಿ; ವಿಡಿಯೊ ವೈರಲ್ ಬೆನ್ನಲ್ಲೇ ಪೊಲೀಸರಿಂದ 31,000 ರುಪಾಯಿ ದಂಡ

ಒಂದೇ ಬೈಕ್‍ನಲ್ಲಿ ಐವರು ಸವಾರಿ; ವಿಡಿಯೊ ವೈರಲ್

5 riders in a single bike: ಒಂದೇ ಬೈಕ್‌ನಲ್ಲಿ ಐವರು ಮಂದಿ ಸವಾರಿ ಮಾಡಿರುವ ಘಟನೆಯ ವಿಡಿಯೊ ವೈರಲ್ ಆದ ನಂತರ, ಪೊಲೀಸರು ಕಾನೂನು ಉಲ್ಲಂಘನೆಗಾಗಿ 31,000 ರುಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಾಪುರದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಘಟನೆ ನಡೆದಿದೆ.

ರೋಗಿ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌; ನಿಜಕ್ಕೂ ಗಲಾಟೆ ಆರಂಭಿಸಿದ್ದು ಯಾರು? ಅಂದು ನಡೆದಿದ್ದೇನು?

ರೋಗಿಗೆ ಹೊಡೆದ ಆರೋಪಕ್ಕೆ ವೈದ್ಯರ ಸ್ಪಷ್ಟನೆ

Viral Video: ಹಿಮಾಚಲ ಪ್ರದೇಶದ ಶಿಮ್ಲಾದ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ರೋಗಿಯ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣ ಭಾರಿ ಸದ್ದು ಮಾಡಿತ್ತು. ವೈದ್ಯನದ್ದೇ ತಪ್ಪು, ಅವರು ರೋಗಿಗೆ ಚಿಕಿತ್ಸೆ ನೀಡುವ ಬದಲು ಮನಬಂದಂತೆ ಥಳಿಸಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಘಟನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದದ್ದನ್ನು ಮನಗಂಡ ವೈದ್ಯರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಂದು ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾರೆ.

ವಿವಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಪ್ರಶ್ನೆ; ಪ್ರೊಫೆಸರ್ ಸಸ್ಪೆಂಡ್

ವಿವಿ ಪರೀಕ್ಷೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಪ್ರಶ್ನೆ

controversial question: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಮುಸ್ಲಿಮರ ಬಗ್ಗೆ ಕೇಳಿರುವ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪ್ರಶ್ನೆಪತ್ರಿಕೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ಮಧ್ಯೆಯೇ ಪಟಾಕಿ ಹಚ್ಚಿದ ಉದ್ಯಮಿ: ಪ್ರಶ್ನಿಸಿದವರ ಮೇಲೆ ರೇಗಾಡಿ ಧಿಮಾಕು

ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ತಡೆದು ಪಟಾಕಿ ಸಿಡಿಸಿದ ಉದ್ಯಮಿ

Viral Video: ಸಾರ್ವಜನಿಕ ರಸ್ತೆಯನ್ನು ತನ್ನ ಆಸ್ತಿಯಂತೆ ಬಳಸಿಕೊಂಡು ಮಗನ ಬರ್ತ್‌ಡೇ ಆಚರಿಸಿದ ವಿಡಿಯೊವೊಂದು ವೈರಲ್ ಆಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಮಗನ ಹುಟ್ಟುಹಬ್ಬ ಆಚರಿಸಿದ ಸೂರತ್‌ ಉದ್ಯಮಿಯ ವರ್ತನೆಯ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಅಂದು ಕೋಟಿ ವ್ಯವಹಾರ ನಡೆಸಿದ್ದ ಉದ್ಯಮಿ ಇಂದು ಡ್ರೈವರ್: ಕಣ್ಣೀರು ತರಿಸುವಂತಿದೆ ಇವರ ಕಥೆ!

ಕೋಟಿ ವ್ಯವಹಾರ ನಡೆಸಿದ ಉದ್ಯಮಿ ಈಗ ಚಾಲಕ: ಏನಾಗಿತ್ತು ಇವರ ಬದುಕಿನಲ್ಲಿ?

Viral News: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಜೀವನದ ದಿಕ್ಕೆ ಬದಲಾಯಿತು ಎಂದು ವ್ಯಕ್ತಿಯೋರ್ವ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೋಟಿ ಕೋಟಿ ಹಣಕಾಸಿನ ವ್ಯವ ಹಾರ ಮಾಡುತ್ತಿದ್ದ ಉದ್ಯಮಿಯಾಗಿದ್ದ ತಾನು ಈಗ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಲದಲ್ಲಿ ಐಶಾರಾಮಿ ಜೀವನ ಕಂಡಿದ್ದ ತನಗೆ ಈಗ ನಿತ್ಯ ಜೀವನ ತಳ್ಳಲು ಕಷ್ಟ ಪಡು ವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Viral Video: ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ಡೇಂಜರಸ್‌ ವಿಡಿಯೋ ವೈರಲ್‌

ಶಾಲಾ ಬಸ್ಸಿನಲ್ಲಿ ನೇತಾಡುತ್ತಿರುವ ಮಕ್ಕಳು: ಭಯಾನಕ ವಿಡಿಯೊ ವೈರಲ್

ಶಾಲಾ ಬಸ್ಸಿನಲ್ಲಿ ಮಕ್ಕಳು ನೇತಾಡುತ್ತ ಪ್ರಯಾಣಿಸುತ್ತಿರುವ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಕ್ಕಳ ಸುರಕ್ಷತೆಯನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಬಸ್ಸೊಂದರಲ್ಲಿ ಮಕ್ಕಳು ನೇತಾಡುತ್ತಾ ಪ್ರಯಾಣಿಸುತ್ತಿರುವ ದೃಶ್ಯ ಕಂಡು ಬಂದಿದೆ.‌ ಈ ಘಟನೆ ರಾಜಸ್ಥಾನದ ಸಲೂಂಬರ್‌ನಿಂದ ಧರಿಯಾ ವಾದ್ ಮಾರ್ಗದಲ್ಲಿ ಕಂಡುಬಂದಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು? ಇಲ್ಲಿದೆ ಭಯಾನಕ ವಿಡಿಯೊ

ರೈಲಿನಿಂದ ಬಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಉದ್ಯೋಗಿ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯನ್ನು ರೈಲ್ವೇ ಉದ್ಯೋಗಿ ರಕ್ಷಿಸಿದ ಘಟನೆ ತಮಿಳುನಾಡಿನ ಚೆನ್ನೈನ ತಾಂಬರಂ ನಿಲ್ದಾಣದಲ್ಲಿ ನಡೆದಿದೆ. ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಮಹಿಳೆ ಸಿಲುಕಿಕೊಂಡಿದ್ದು, ಇದನ್ನು ನೋಡಿ ತ್ವರಿತವಾಗಿ ಸ್ಪಂದಿಸಿದ ರೈಲ್ವೇ ಉದ್ಯೋಗಿಯ ಆಕೆಯನ್ನು ರಕ್ಷಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಜೀವನ ಶೈಲಿಗೆ ಮನಸೋತ ರಷ್ಯಾ ಕುಟುಂಬ: ಇಲ್ಲಿನ ಜನರ ನಗುವೇ ನಮಗೆ ಆಸ್ತಿ ಎಂದು ಗುಣಗಾನ

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ರಷ್ಯಾ ಕುಟುಂಬ ಹೇಳಿದ್ದೇನು?

Viral Video: ಸಾಮಾನ್ಯವಾಗಿ ವಿದೇಶಿಯರು ಭಾರತವನ್ನು ಪ್ರವಾಸಿ ತಾಣವಾಗಿ ಇಷ್ಟ ಪಡುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ಸವಿದು ಪ್ರವಾಸಿಗರಾಗಿ ಬಂದು ಹೋಗುತ್ತಾರೆ. ಆದರೆ ಕಂಟೆಟ್ ಕ್ರಿಯೇಟರ್ ಯಾನಾ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಅವರು ಇಲ್ಲಿನ ಜನ ಜೀವನವನ್ನು ಹಾಡಿ ಹೊಗಳಿದ್ದಾರೆ.

ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ! ಮಂಗಳೂರಿನ ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ

ಭಾರಿ ವೈರಲ್ ಆಗ್ತಿದೆ ಮಂಗಳೂರಿನ ಆಲ್ಟೋ ಕಾರಿನ ಬರಹ: ಅಂತದೇನಿದೆ?

Viral Video: ಜನರು ತಮ್ಮ ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವು ಗಮನಿಸಿರಬಹುದು. ಅನೇಕ ಟ್ರಕ್‌, ಆಟೋ ಮತ್ತು ಬಸ್‌ಗಳಲ್ಲಿ ಬರೆದಿರುವ ಫನ್‌ ಸಾಲುಗಳು ಟ್ರಾಫಿಕ್‌ನಲ್ಲಿ ಕಾಯುತ್ತಿರುವ ಜನರನ್ನು ನಗಿಸಿದ ಉದಾಹರಣೆ ಇದೆ. ಇದೀಗ ಮಂಗಳೂರು ನೋಂದಣಿಯ ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆದಿರುವ ಸಾಲು ನೆಟ್ಟಿಗರ ಗಮನ ಸೆಳೆದಿದೆ.

Loading...