ಮಂಟಪದಲ್ಲಿಯೇ ವಧು-ವರರ ಚುಂಬನ: ವಿಡಿಯೊ ವೈರಲ್
Viral Video: ಬಂಗಾಳಿ ನವಜೋಡಿಯೊಂದು ಮದುವೆ ಮಂಟಪದಲ್ಲೇ ಮುತ್ತಿಕ್ಕಿರುವ ವಿಡಿಯೊ ವೈರಲ್ ಆಗಿದ್ದು, ನೋಡುಗರಿಗೆ ಮುಜುಗರ ಉಂಟು ಮಾಡಿದೆ. ನವಜೋಡಿ 32 ಸೆಕೆಂಡುಗಳ ಕಾಲ ಚುಂಬಿಸಿದೆ. ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.
Viral Video: ಪೊಲೀಸರ ಗುಂಪೊಂದು ಕಾರಿನ ಗ್ಲಾಸ್ ಅನ್ನು ಒಡೆಯುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ಶ್ರೀ ವಿಜಯಪುರದ ಸೀಶೋರ್ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಪೊಲೀಸರು ಒಡೆಯುತ್ತಿದ್ದರು. ಈ ದೃಶ್ಯ ನೋಡಿದ ಅನೇಕರು ಪೊಲೀಸರ ಬಗ್ಗೆ ಕಿಡಿಕಾರಿದ್ದರು. ಕೊನೆಗೂ ಈ ವಿಡಿಯೊದ ಅಸಲಿ ಸತ್ಯ ಹೊರಬಿದ್ದಿದೆ.
Viral Video: ಬಾಲಕನೊಬ್ಬನ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಮೊಗದಲ್ಲೊಮ್ಮೆ ನಗು ತರಿಸುವಂತೆ ಮಾಡಿದೆ. ಶಾಲಾ ಸಮ ವಸ್ತ್ರವನ್ನು ಧರಿಸಿದ ಬಾಲಕ ಶಾಲೆಯ ಬ್ಯಾಗ್ ಧರಿಸಿಯೇ ಮದುವೆಯ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿರುವುದು ಕಂಡು ಬಂದಿದೆ. ಬಾಲಕ ಶಾಲೆಯಿಂದ ಬರುತ್ತಲೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹೋಮ್ ವರ್ಕ್, ಪರೀಕ್ಷೆ ಅಂತ ಭಯವಿಲ್ಲದೆ ಡ್ಯಾನ್ಸ್ ನಲ್ಲಿ ಮಗ್ನವಾಗಿದ್ದಾನೆ.
Viral Video: ಸ್ವಂತ ಉದ್ಯಮದಲ್ಲಿ ಲಾಭಗಳಿಸುವ ಟ್ರಿಕ್ಸ್ ಗೊತ್ತಿದ್ದರೆ ದುಪ್ಪಟ್ಟು ಹಣ ಮಾಡಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಂಬೈ ನಲ್ಲಿ ಆಟೋ ಚಾಲಕನೊಬ್ಬ ಖರ್ಚುಗಳನ್ನು ವ್ಯಯಿಸಿ ದಿನಕ್ಕೆ 2,500 ರೂಪಾಯಿ ಲಾಭ ಗಳಿಸುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಅನೇಕ ಉದ್ಯೋಗಿಗಳು ಇದೇ ಉದ್ಯಮ ಬೆಸ್ಟ್ ಆಯ್ಕೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Viral Video: ಸರಪಳಿ ಕಟ್ಟಿ ಬೈಕ್ ನ ಹಿಂದೆ ಎಳೆದೊಯ್ಯುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಕೆಲವೊಮ್ಮೆ ಜನರ ಕಠೋರ ಮನಸ್ಥಿತಿ ಹೇಗೆ ಕೌರ್ಯ ಎಸಗುತ್ತವೆ ಎನ್ನುವುದಕ್ಕೆ ಇದೇ ದೃಶ್ಯ ಸಾಕ್ಷಿ ಯಾಗಿದೆ. ಪಶ್ಚಿಮ ಬಂಗಾಳದ ಕಲ್ಯಾಣಿ ಎಕ್ಸ್ಪ್ರೆಸ್ವೇನಲ್ಲಿ ಈ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಈ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hurried celebration: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ ಎಂದು ಸಂಭ್ರಮಿಸಿದ ಯುವತಿಯೊಬ್ಬಳು ಬಳಿಕ ಕ್ಷಮೆಯಾಚಿಸಿದ್ದಾಳೆ. ಬಹಳ ಆತುರದಿಂದ ತಾನು ಉತ್ತೀರ್ಣಳಾಗಿದ್ದೇನೆ ಎಂದು ನಂಬಿದ ಯುವತಿ ಹಾಗೂ ಕುಟುಂಬಸ್ಥರು ತಮ್ಮ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಮಾಧ್ಯಮಗಳು ಕೂಡ ಪಿಯೂನ್ ಪುತ್ರಿ ತೇರ್ಗಡೆ ಹೊಂದಿದ ಬಗ್ಗೆ ಸುದ್ದಿ ಬಿತ್ತರಿಸಿದ್ದವು.
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆದಲ್ಲಿ ಭಾರತದಲ್ಲಿ ಪೆಟ್ರೋಲ್ ಅಭಾವ ಉಂಟಾಗಬಹುದು ಎಂಬ ವದಂತಿಗಳ ನಡುವೆ ತಮಿಳುನಾಡಿನ ವಿಲ್ಲುಪುರಂ ಪೆಟ್ರೋಲ್ ಪಂಪ್ನಲ್ಲಿ ವ್ಯಕ್ತಿಯೊಬ್ಬ 20 ಲೀಟರ್ ನೀರಿನ ಕ್ಯಾನ್ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆತಂಕದ ಖರೀದಿ ನಡೆಯುತ್ತಿರುವ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಕಂಟೇನರ್ನಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿ ಮತ್ತು ನಿಯಮ ವಿರೋಧಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Viral Video: ಕರ್ನಾಟಕದ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯ ದೃಶ್ಯ ಮತ್ತೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾದ ಪ್ರಯಾಣಿಕನೊಬ್ಬ ಟೆಲಿಸ್ಕೋಪ್ (ದೂರದರ್ಶಕ) ಅನ್ನು ಭಾರತದಲ್ಲಿ ಮೊದಲು ಕಂಡು ಹಿಡಿಯಲಾಗಿತ್ತು ಎಂದು ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯನ್ನು ತೋರಿಸಿದ್ದಾರೆ.
LPG Cylinder Shortage: ವಾಣಿಜ್ಯ ಎಲ್ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗಿದೆ. ದರ ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ. ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್ ಕಳ್ಳತನ ಪ್ರಕರಣ ನಡೆದಿವೆ.
Viral Video: ಝೊಮೆಟೊ, ಸ್ವಿಗ್ಗಿ ಮುಂತಾದ ಆಹಾರ ವಿತರಿಸುವ ಆನ್ಲೈನ್ ಆ್ಯಪ್ಗಳ ಜನಪ್ರಿಯತೆ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಝೊಮೆಟೊದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಕಂಡು ಕಂಡುಬಂದಿದ್ದು, ಬೆಚ್ಚಿ ಬಿದ್ದಿದ್ದಾನೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.
LPG Crisis: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಈಗಾಗಲೇ ಹಲವು ಹೊಟೆಲ್ಗಳು ಬಂದ್ ಆಗಿದ್ದು, ಇನ್ನೂ ಕೆಲವು ಹೊಟೆಗಳು ತಮ್ಮ ಮೆನುವನ್ನು ಕಡಿತಗೊಳಿಸುತ್ತಿದೆ. ಬಿಲ್ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್ನಲ್ಲಿ ಗ್ಯಾಸ್ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ.
Viral Post: ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಹೊಸದಾಗಿ ರೆಸ್ಟೋರೆಂಟ್ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಸಮಸ್ಯೆಯಿಂದಾಗಿ ಕೆಲವೇ ದಿನಗಳಲ್ಲಿ ಹೋಟೆಲ್ನ ಬಾಗಿಲು ಮುಚ್ಚುವಂತಾಗಿದೆ.
Viral Video: ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
dog photo on admit card: ನೇಮಕಾತಿ ಪರೀಕ್ಷೆಗೆ ಒಬ್ಬ ವ್ಯಕ್ತಿಗೆ ನೀಡಲಾದ ಪ್ರವೇಶ ಪತ್ರದಲ್ಲಿ ಅವರ ಫೋಟೋ ಬದಲು ನಾಯಿಯ ಫೋಟೋ ಮುದ್ರಿತವಾಗಿದೆ. ಮಾರ್ಚ್ 15 ರಂದು ನಿಗದಿಯಾಗಿದ್ದ ಪ್ರಾಥಮಿಕ ಪರೀಕ್ಷೆಗೆ ತನ್ನ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಾಗ, ಪ್ರವೇಶ ಪತ್ರದಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನದ ಫೋಟೋ ಮುದ್ರಿತವಾಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು.
Viral Post: ಕೇವಲ ಆಧುನಿಕ ಸೌಕರ್ಯಗಳಿಗೆ ಬೆಂಗಳೂರು ಪ್ರಸಿದ್ಧಿಯಾಗಿಲ್ಲ ಮಾನವೀಯತೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬರು ಕಳೆದುಹೋದ ಪರ್ಸ್ ನ್ನು ಹಿಂತಿರುಗಿಸಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಲೆಟ್ ಒಳಗೆ ಐಡಿ ಕಾರ್ಡ್ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಕಂಡುಕೊಂಡು ಗ್ರಾಹಕರನ್ನು ಸಂಪರ್ಕ ಮಾಡಿದ್ದಾರೆ.
Viral Video: ವಾರಣಾಸಿಯ ಭಯಾನಕ ಥೀಮ್ ಹೊಂದಿರುವ ರೆಸ್ಟೋರೆಂಟ್ನಲ್ಲಿ ವಿಚಿತ್ರವಾದ ದೃಶ್ಯ ವೊಂದು ಕಂಡು ಬಂದಿದೆ. ಈ ರೆಸ್ಟೋರೆಂಟ್ನಲ್ಲಿ ಅಸ್ಥಿಪಂಜರದಂತಹ ಭಯಾನಕ ವೇಷ ಹಾಕಿ ಕೊಂಡಿದ್ದ ಕಲಾವಿದನೊಬ್ಬ ಕಂಡು ಬಂದಿದ್ದು ಕುಟುಂಬದ ಜೊತೆ ಆಗಮಿಸಿದ್ದ ಮಗುವೊಂದು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದೆ. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದೆ.