ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ವರ್ಕ್‌ ಫ್ರಮ್‌ ಹೋಮ್‌ ಅಲ್ಲ, ವರ್ಕ್‌ ಫ್ರಮ್‌ ಕ್ಯಾಮಲ್‌! ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಆಫೀಸ್‌ನ ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾದ ಉದ್ಯೋಗಿ

ಒಂಟೆ ಮೇಲೆ ಕುಳಿತು ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾದ ಉದ್ಯೋಗಿ

Viral Video: ಉದ್ಯೋಗಿಗಳು ಆಫೀಸ್‌ಗೆ ತೆರಳುವ ಬದಲು ಮನೆಯಿಂದಲೇ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಏರ್‌ಪೋರ್ಟ್‌ನಲ್ಲಿ, ಬೈಕ್‌ನಲ್ಲಿ ಅಥವಾ ಮರದ ಕೆಳಗೆ ಕುಳಿತು ಆಫೀಸ್ ಕೆಲಸ ಮಾಡುವ ವಿಡಿಯೊ ಬಹಳಷ್ಟು ವೈರಲ್ ಆಗಿವೆ. ಇವೆಲ್ಲ ಬಿಡಿ, ಇದೀಗ ಇಲ್ಲೊಬ್ಬ ವ್ಯಕ್ತಿ ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಆಫೀಸ್‌ ಕೆಲಸ ಮಾಡಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಾಯುಪಡೆ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಯತ್ನ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ: ಇಬ್ಬರು ಅರೆಸ್ಟ್

Viral Video: ನಾಗಪುರದ ಭಾರತೀಯ ವಾಯುಪಡೆ ಅಧಿಕಾರಿಯ ಪತ್ನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಾದಕ ವಸ್ತು ನೀಡಿ ತಮ್ಮ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿದಿದೆ.

ಟೆಕ್ನಾಲಜಿ ಬಳಸುವಲ್ಲಿ ಬೆಂಗಳೂರಿನ ಆಟೋ ಚಾಲಕರು ಯಾರಿಗೂ ಕಡಿಮೆ ಇಲ್ಲ: ಸ್ಮಾರ್ಟ್‌ ವಾಚ್‌ನಲ್ಲೇ ಕ್ಯೂಆರ್ ಕೋಡ್ ತೋರಿಸಿ ಹಣ ಪಡೆದ ಡ್ರೈವರ್‌!

ಸ್ಮಾರ್ಟ್‌ ವಾಚ್‌ನಲ್ಲಿ QR ಕೋಡ್ ತೋರಿಸಿ ಹಣ ಪಡೆದ ರಿಕ್ಷಾ ಚಾಲಕ

Viral News: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗಮನ ಸೆಳೆದ ಬೆಂಗಳೂರು ಐಟಿ ಕಂಪನಿ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೂ ಜನಪ್ರಿಯ. ಐಟಿ ಉದ್ಯೋಗಿಗಳಿಂದ ಹಿಡಿದು ಜನ ಸಾಮಾನ್ಯರೂ ಇಲ್ಲಿ ಆಧುನಿಕ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕನೊಬ್ಬ ಡಿಜಿಟಲ್ ಪೇಮೆಂಟ್‌ಗೆ ಸೂಪರ್ ಐಡಿಯಾ ಬಳಸಿದ್ದಾರೆ. ಸದ್ಯ ಅವರ ಟ್ರಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸತ್ತು ಹೋದ ಮರಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕೋತಿ; ದೃಶ್ಯ ನೋಡಿದ್ರೆ ಕರುಳು ಹಿಂಡುತ್ತೆ

ಸತ್ತ ಮರಿಯನ್ನು ಬಿಟ್ಟುಕೊಡಲಾಗದೇ ಕಣ್ಣೀರಿಟ್ಟ ತಾಯಿ ಕೋತಿ!

Viral News: ಯಾವತ್ತಿದ್ದರೂ ತಾಯಿ ತನ್ನ ಮಕ್ಕಳ ಖುಷಿಯಲ್ಲೆ ಪಾಲು ಪಡೆಯುತ್ತಿರುತ್ತಾಳೆ..ಇದೀಗ ತಾಯಿಯ ಪ್ರೀತಿಗೆ ಯಾರು ಸರಿಸಾಟಿ ಇಲ್ಲ ಎಂಬಂತ ದೃಶ್ಯ ವೊಂದು ಭಾರೀ ವೈರಲ್ ಆಗುತ್ತಿದೆ. ಹೌದು ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಸತ್ತ ಮರಿ ಕೋತಿಯನ್ನು ಎದೆಗಪ್ಪಿಕೊಂಡು ತಾಯಿ ಕೋತಿ ಕಣ್ಣೀರು ಹಾಕಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ...

'ಪಂದ್ಯ ಮುಗಿಯಿತು, ಈಗ ನೀನು...'; ವೈಭವ್ ಸೂರ್ಯವಂಶಿ ಕೋಪಕ್ಕೆ ಇದುವೇ ಕಾರಣ!

ಲಂಕಾ ಆಟಗಾರನ ವಿರುದ್ಧದ ಸೂರ್ಯವಂಶಿ ಕೋಪಕ್ಕೆ ಇದುವೇ ಕಾರಣ

Vaibhav Sooryavanshi: ಸೂಪರ್‌ ಓವರ್‌ನಲ್ಲಿ ಅರ್ಷದ್‌ ಅವರು ದುಬಾರಿಯಾಗಿ 16 ರನ್ ನೀಡಿದರು. ಲಂಕಾ ಪರ ಮಥುಲನ್ ಅವರು ಒತ್ತಡದಲ್ಲೂ ಸಂಯಮ ವಹಿಸಿ ಬೌಲಿಂಗ್‌ ಮಾಡಿದರಲ್ಲದೇ, ವೈಭವ್ ಮತ್ತು ಸೂರ್ಯಾಂಶ್ ಅಬ್ಬರಿಸದಂತೆ ನೋಡಿಕೊಂಡರು. ಇವರಿಬ್ಬರು 9 ರನ್‌ಗಳನ್ನಷ್ಟೇ ಗಳಿಸಲು ಶಕ್ತರಾದರು.

Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!

ಚಯಾಪಚಯ ಕ್ರಿಯೆ ಹೆಚ್ಚಿಸಲು ಈ ಅಭ್ಯಾಸ ಬೆಳಿಸಿಕೊಳ್ಳಿ!

ಶಕ್ತಿಯ ಮಟ್ಟ ಹೆಚ್ಚಿಸಲು, ತೂಕ ನಿರ್ವಹಣೆ ಮಾಡಿಕೊಳ್ಳಲು ಫಿಟ್‌ನೆಸ್‌ನಲ್ಲಿ ಸೂಕ್ಷ್ಮ ಬದಲಾವಣೆ ಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ..ಸರಿಯಾದ ಜೀವನಶೈಲಿಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುವ ಮೂಲಕ ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಡಲು ಮತ್ತು ದೀರ್ಘ ಕಾಲೀನ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮನೆಯಲ್ಲೂ ಕೆಲಸ ಮಾಡುವ ಪತಿಯ ವರ್ತನೆಗೆ ಬೇಸತ್ತು ಆಫೀಸ್‌ಗೆ ಎಂಟ್ರಿ ಕೊಟ್ಟ ಪತ್ನಿ: ಬಾಸ್‌ನಿಂದ ಬಯಲಾಯ್ತು ಮಧ್ಯರಾತ್ರಿಯ ಮೀಟಿಂಗ್ ರಹಸ್ಯ

ʼʼಪತಿ ಎಲ್ಲಿದ್ದಾರೆ ಈಗಲೇ ಕರೆಸಿ": ಬಾಸ್ ಎದುರು ಪತ್ನಿಯ ರಂಪಾಟ

Viral Video: ಸಣ್ಣ ಪುಟ್ಟ ವಿಚಾರಗಳಿಗೆ ಡಿವೋರ್ಸ್, ಜಗಳ ಎಂದು ದಾಂಪತ್ಯ ಜೀವನವನ್ನೇ ಕೊನೆಗೊಳಿಸುವವರು ಅನೇಕರು ಇದ್ದಾರೆ. ಇದೀಗ ನವವಿವಾಹಿತ ಮಹಿಳೆಯೊಬ್ಬಳು ಪತಿಯ ಕಚೇರಿಗೆ ನುಗ್ಗಿ ರಂಪಾಟ ಮಾಡಿರುವ ಘಟನೆ ವರದಿಯಾಗಿದೆ. ಮಹಿಳೆ ತನ್ನ ಪತಿಯ ಆಫೀಸ್‌ ಒಳ ಹೊಕ್ಕಿ ಆತನ ಬಾಸ್ ವಿರುದ್ಧವೇ ಜಗಳ ತೆಗೆದಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

Viral News: ಅಮೆರಿಕದಲ್ಲಿ ರಕ್ತ ಪರೀಕ್ಷೆಗೆ 1.9 ಲಕ್ಷ ರುಪಾಯಿ, ಭಾರತದಲ್ಲಿ 2,800 ರುಪಾಯಿ; ಭಾರತೀಯ ವ್ಯಕ್ತಿಯ ಪೋಸ್ಟ್‌ ವೈರಲ್‌

ಅಮೆರಿಕದ ಆರೋಗ್ಯ ವೆಚ್ಚ ಬಗ್ಗೆ ಕಿಡಿಕಾರಿದ ಭಾರತೀಯ ಹೇಳಿದ್ದೇನು?

ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಒಂದು ದೊಡ್ಡ ವಂಚನೆ. ಇಲ್ಲಿ ಆರೋಗ್ಯ ಸೇವೆಗೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

Viral Video: ವಿದೇಶಿಗರಲ್ಲೂ ನಾಗರಿಕ ಪ್ರಜ್ಞೆ ಮರೆಯಾಗಿದೆ; ನೋಯ್ಡಾದ ಅಪಾರ್ಟ್‌ಮೆಂಟ್ ಸ್ವಿಮ್ಮಿಂಗ್‌ ಪೂಲ್ ಬಳಿ ಪ್ರವಾಸಿಗರಿಂದ ಗಾಂಜಾ ಸೇವನೆ

ನೋಯ್ಡಾದ ಸ್ವಿಮ್ಮಿಂಗ್‌ ಪೂಲ್ ಬಳಿ ವಿದೇಶಿ ಮಹಿಳೆಯರಿಂದ ಗಾಂಜಾ ಸೇವನೆ

Viral Video: ಉತ್ತರ ಪ್ರದೇಶದಲ್ಲಿ ವಿದೇಶಿಗರೇ ನಿಯಮ ಗಾಳಿಗೆ ತೂರಿದ ಘಟನೆಯೊಂದು ಕಂಡು ಬಂದಿದೆ. ಈಜುಕೊಳದ ಬಳಿ ವಿದೇಶಿ ಮಹಿಳೆಯರ ಗುಂಪು ಗಾಂಜಾ ಸೇವಿಸುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವಿದೇಶಿ ಪ್ರಜೆಗಳಿಗೆ ಈಗ ನಾಗರಿಕ ಪ್ರಜ್ಞೆ ಇಲ್ಲವೆ? ಅಥವಾ ಕಾನೂನು ಅನ್ವಯಿಸುವುದಿಲ್ಲವೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Viral News: ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ; ಭೇಟಿ ನೀಡುವಂತೆ ಪ್ರವಾಸಿಗರಿಗೆ ಆನಂದ್ ಮಹೀಂದ್ರಾ ಕರೆ

ಕೇರಳಕ್ಕೂ ಟಕ್ಕರ್ ಕೊಡುವ ಹೊನ್ನಾವರ ಹಿನ್ನೀರು

Anand Mahindra: ಉದ್ಯಮಿ ಆನಂದ್ ಮಹೀಂದ್ರಾ ತಮ್ಮ #SundayWanderer ಪೋಸ್ಟ್‌ನಲ್ಲಿ ಉತ್ತರ ಕನ್ನಡದ ಹೊನ್ನಾವರ ಹಿನ್ನೀರಿನ ಅದ್ಭುತ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕೇರಳಂನ ಹಿನ್ನೀರಿಗೆ ಸಮಾನವಾಗಿ ಪ್ರಕೃತಿ ಸೊಬಗು ಹೊಂದಿರುವ ಈ ಪ್ರದೇಶವು ಮಂಗ್ರೋವ್ ಕಾಡುಗಳು, ಪ್ರಶಾಂತ ಜಲಮಾರ್ಗಗಳು ಮತ್ತು ಜೀವವೈವಿಧ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಪ್ರತಿಭಟನೆ ವೇಳೆ ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದಿಪ್ಕೆಗೆ ಧರ್ಮದೇಟು; ಜನರ ಮಧ್ಯೆಯೇ ಕಪಾಳಮೋಕ್ಷ: ವಿಡಿಯೊ ವೈರಲ್‌

ಪ್ರತಿಭಟನೆ ವೇಳೆ ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದಿಪ್ಕೆಗೆ ಧರ್ಮದೇಟು

Cockroach Janta Party: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಕ್ರೋಚ್‌ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್‌ ದಿಪ್ಕೆ ಇದೀಗ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

Mysuru Pub Fire: ಮೈಸೂರು ಪಬ್‌ ಅಗ್ನಿ ಅವಘಡದಲ್ಲಿ ಸ್ಯಾಂಡಲ್‌ವುಡ್‌ ನಟನಿಗೆ ತೀವ್ರ ಗಾಯ; ಜಿಗಿದು ಪ್ರಾಣ ರಕ್ಷಿಸಿಕೊಳ್ಳಲು ಯತ್ನಿಸಿದ ಗ್ರಾಹಕರು! video

ಮೈಸೂರು ಪಬ್‌ ಅಗ್ನಿ ಅವಘಡದಲ್ಲಿ ಸ್ಯಾಂಡಲ್‌ವುಡ್‌ ನಟನಿಗೆ ತೀವ್ರ ಗಾಯ

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಫಾಕ್ಸ್​ ಡೆನ್​​ ಪಬ್​​​​ ಅನ್ನು ಆಫ್ರಿಕನ್ ಸ್ಟೈಲ್​ನಲ್ಲಿ ನಿರ್ಮಾಣ ಮಾಡಲಾಗಿತ್ತು. ಹುಲ್ಲು, ಗೋಣಿ ತಾಟು, ವುಡ್ ಹೆಚ್ಚಾಗಿ ಬಳಸಿ ನಿರ್ಮಾಣವಾಗಿತ್ತು. ದಟ್ಟವಾಗಿ ಬೆಂಕಿ ಹೊತ್ತಿ ಉರಿಯಲು ಇದೇ ಕಾರಣ ಎನ್ನಲಾಗಿದೆ. ದುರಂತದಲ್ಲಿ ಇಬ್ಬರು, ಮೃತಪಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ.

Viral News: 'ʼಕಾರಲ್ಲಿ 4 ಕಿ.ಮೀ. ಕ್ರಮಿಸಲು 35 ನಿಮಿಷ'ʼ; ಸೋಷಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ ಬೆಂಗಳೂರು ಟ್ರಾಫಿಕ್‌

ವಾಕಿಂಗ್‌ಗಿಂತ ನಿಧಾನ ಸಂಚಾರ; ಬೆಂಗಳೂರು ಟ್ರಾಫಿಕ್‌ ಬಗ್ಗೆ ಮತ್ತೊಂದು ದೂರು

Bengaluru Traffic: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ದಿನ ನಿತ್ಯ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಯುವಕನೊಬ್ಬ ಬೆಂಗಳೂರಿನಲ್ಲಿ ಕೇವಲ 4 ಕಿಲೋ ಮೀಟರ್ ದೂರ ಕ್ರಮಿಸಲು 35 ನಿಮಿಷ ತೆಗೆದುಕೊಂಡಿರುವ ಬಗ್ಗೆ ತಿಳಿಸಿದ್ದಾನೆ. ಇದು ನಾವು ವಾಕಿಂಗ್ ಹೋಗುವ ವೇಗಕ್ಕಿಂತಲೂ ಕಡಿಮೆ ಎಂದು ಉಲ್ಲೇಖಿಸಿದ್ದಾನೆ.

ಹಾಲನ್ನು ತಾಜಾವಾಗಿ ಇರಿಸಲು ಪಾತ್ರೆಯೊಳಗೆ ಜೀವಂತ ಕಪ್ಪೆ ಬಿಡುತ್ತಿದ್ದರು! ಫ್ರಿಜ್‌ ಕಂಡುಹಿಡಿಯುವ ಮೊದಲು ಜನಪ್ರಿಯವಾಗಿದ್ದ ಈ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?

ಹಾಲು ಕೆಡದಂತೆ ಪಾತ್ರೆಗೆ ಜೀವಂತ ಕಪ್ಪೆ ಬಿಡುತ್ತಿದ್ದ ದೇಶ ಯಾವುದು ಗೊತ್ತೆ?

Viral News: ಬಹಳ ಹಿಂದೆ ರಷ್ಯಾದ ಹಳ್ಳಿಯಲ್ಲಿ ಹಾಲು ಕೆಡದಂತಿರಲು ವಿಚಿತ್ರ ಪದ್ದತಿ ಅಳವಡಿಸಲಾಗಿತ್ತು ಎಂದರೆ ನೀವು ನಂಬುತ್ತೀರಾ‌? ಹೌದು ರಷ್ಯಾ ಮತ್ತು ಫಿನ್‌ಲ್ಯಾಂಡ್‌ನ ಹಳ್ಳಿಗಳಲ್ಲಿ ಹಾಲಿನ ಪಾತ್ರೆಗೆ ಜೀವಂತ ಕಪ್ಪೆಯನ್ನು ಬಿಡುವ ಮೂಲಕ ತಾಜಾವಾಗಿ ಇರಿಸುತ್ತಿದ್ದರು. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ಲೇ ಸ್ಕೂಲ್‌ನಲ್ಲಿ ಪುಟ್ಟ ಕಂದಮ್ಮಗಳಿಗೆ ಮನಬಂದಂತೆ ಹೊಡೆದ ಶಿಕ್ಷಕ: ವಿಡಿಯೋ ನೋಡಿದ್ರೆ ಕರುಳು ಚುರ್‌ ಎನ್ನುತ್ತೆ

ಪುಟ್ಟ ಮಕ್ಕಳ ಮೇಲೆ ಶಿಕ್ಷಕನ ದರ್ಪ: ವಿಡಿಯೊ ವೈರಲ್

Viral Video; ಜಾರ್ಖಂಡ್‌ನ ಪಲಾಮು ಜಿಲ್ಲೆಯ ಜಾಪ್ಲಾದಲ್ಲಿರುವ 'ಲಕ್ಷ್ಮಿ ಶಿಶು ವಾಟಿಕಾ ಪ್ಲೇ ಸ್ಕೂಲ್' ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು ಪೋಷಕರನ್ನೇ ಆತಂಕಕ್ಕೆ ತಳ್ಳಿದೆ.‌ ಶಾಲೆಯ ಪ್ರಾಂಶು ಪಾಲರೊಬ್ಬರು ಪುಟ್ಟ ಮಕ್ಕಳ ಕೆನ್ನೆಗೆ ಹೊಡೆದು ಸರಿಯಾಗಿ ಥಳಿಸುತ್ತಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ.

ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಾಂಕ ಪಾಟೀಲ್‌; ವಿಡಿಯೊ ವೈರಲ್‌

ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಾಂಕ ಪಾಟೀಲ್‌; ವಿಡಿಯೊ ವೈರಲ್‌

Shreyanka Patil: ಎಡಗೈ ಸ್ಪಿನ್ನರ್ ಶ್ರೀ ಚರಣಿ ಎಸೆದ ಹದಿನೈದನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಪಾಕ್‌ನ ರಮೀನ್ ಶಮೀಮ್ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಬಾರಿಸಿದರು. ಈ ವೇಳೆ ಶ್ರೇಯಾಂಕ ಡೈವಿಂಗ್‌ ಮೂಲ ಕ್ಯಾಚ್ ಪಡೆದರು. ಈ ಕ್ಯಾಚ್ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಮಾತ್ರವಲ್ಲದೆ ಕಾಮೆಂಟ್ರಿ ಮಾಡುತ್ತಿದ್ದವರೂ ಕೂಡ ಸುಂದರವಾಗಿ ವರ್ಣಿಸಿದರು.

ಹಗ್ಗ ಜೋಡಿಸಲು ಮರೆತ ಸಿಬ್ಬಂದಿ; ರೋಪ್ ಜಂಪಿಂಗ್‌ನಿಂದ ಜಿಗಿದ 21 ವರ್ಷದ ಯುವತಿ ಸಾವು: ಅವಘಡದ ವಿಡಿಯೊ ವೈರಲ್‌

ರೋಪ್ ಜಂಪಿಂಗ್‌ನಿಂದ ಜಿಗಿದ 21 ವರ್ಷದ ಯುವತಿ ಸಾವು

Rope Jumping Death: ರೋಪ್ ಜಂಪಿಂಗ್ ವೇಳೆ ಆಯೋಜಕರು ಸುರಕ್ಷತಾ ಹಾರ್ನೆಸ್ ಅನ್ನು ಮುಖ್ಯ ಹಗ್ಗಕ್ಕೆ ಸರಿಯಾಗಿ ಜೋಡಿಸಲು ಮರೆತಿದ್ದರಿಂದ ಕಳುಹಿಸಿದ್ದರಿಂದ ಸುಮಾರು 40 ಮೀಟರ್ (130 ಅಡಿ) ಎತ್ತರದಿಂದ ಕೆಳಗೆ ಬಿದ್ದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಬ್ರೆಜಿಲ್‌ನ ಸಾಂಪೌಲೊ ರಾಜ್ಯದ ಲಿಮೈರಾ ನಗರದಲ್ಲಿ ದುರ್ಘಟನೆ ನಡೆದಿದೆ.

ತಮ್ಮಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಮಗಳನ್ನು ನಡುರಸ್ತೆಯಲ್ಲೇ ಥಳಿಸಿದ ಪೋಷಕರು

ಪ್ರೇಮ ವಿವಾಹವಾಗಿದ್ದಕ್ಕೆ ನಡುರಸ್ತೆಯಲ್ಲೇ ಥಳಿಸಿದ ಪೋಷಕರು

ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಮಗಳ ಮೇಲೆ ಅಮಾನುಷವಾಗಿ ಹೆತ್ತವರು ಹಲ್ಲೆ ನಡೆಸಿದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದಿದೆ. ಸ್ವಂತ ಇಚ್ಛೆಯಿಂದ ಮದುವೆಯಾದ ಯುವತಿಯನ್ನು ಆಕೆಯ ಪೋಷಕರು ಕೂದಲಿನಿಂದ ಎಳೆದು, ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ

ವಾರಾಣಸಿ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಮಹಿಳೆ: ವಿಡಿಯೊ ವೈರಲ್

Viral News: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಹಿಳೆಯೊಬ್ಬಳು ಕೋರ್ಟ್‌ನಲ್ಲಿ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಮಹಿಳೆ, ʼʼಇಂದು ನಾನು ಜಿಲ್ಲಾ ನ್ಯಾಯಾಧೀಶೆʼʼ ಎಂದು ಹೇಳಿಕೊಂಡಿದ್ದಾಳೆ. ಮಹಿಳೆಯ ಈ ನಡೆಯನ್ನು ಕಂಡು ಅಲ್ಲಿದ್ದ ವಕೀಲರು ಅಚ್ಚರಿ ಪಟ್ಟಿದ್ದಾರೆ.‌ ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ಮೈ ಜುಮ್ಮೆನಿಸುವ ದೃಶ್ಯ; ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ

ಲಂಡನ್‌ ಕಟ್ಟಡದಿಂದ ಬಿದ್ದ ಮಗುವಿನ ಜೀವ ಉಳಿಸಿದ ಭಾರತೀಯ

ಭಾರತೀಯ ವ್ಯಕ್ತಿಯೊಬ್ಬರು ಕ್ರಿಕೆಟ್ ಆಟದ ಸ್ಕಿಲ್ ಬಳಸಿ ಮಗುವಿನ ಪ್ರಾಣ ಉಳಿಸಿದ ಘಟನೆಯೊಂದು ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದಿದೆ. 3 ವರ್ಷದ ಹೆಣ್ಣು ಮಗುವೊಂದು ಕಟ್ಟಡದ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿ ಕ್ರಿಕೆಟ್ ಕೌಶಲ್ಯ ಬಳಸಿ ಮಗುವನ್ನು ಕ್ಯಾಚ್ ಹಿಡಿದಿದ್ದಾನೆ. ಸದ್ಯ ಈ ರೋಮಾಂಚನಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೆಲಸಕ್ಕಲ್ಲ, ಮಾವಿನ ಹಣ್ಣಿನ ರುಚಿ ಸವಿಯಲು ಸಂಜೆ 4 ಗಂಟೆಗೆ ಆಫೀಸ್‌ಗೆ ಎಂಟ್ರಿ ಕೊಟ್ಟ ಉದ್ಯೋಗಿ

ಮ್ಯಾಂಗೋ ಫೆಸ್ಟಿವಲ್‌ಗಾಗಿ 4 ಗಂಟೆಗೆ ಕಚೇರಿಗೆ ಆಗಮಿಸಿದ ಗೂಗಲ್ ಉದ್ಯೋಗಿ

Viral Video: ಗೂಗಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಉದ್ಯೋಗಿಯೊಬ್ಬರು ಸಂಜೆ 4 ಗಂಟೆಗೆ ಕಚೇರಿಗೆ ಧಾವಿಸಿದ್ದಾರೆ. ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯೂ ಮಾವಿನ ಹಣ್ಣಿನ ಹಬ್ಬ ಆಯೋಜಿಸಲಾಗಿತ್ತು. ಉದ್ಯೋಗಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಲು ತಮ್ಮ ಕಚೇರಿಗೆ ಸಂಜೆ ಭೇಟಿ ನೀಡಿದ್ದಾರೆ.

ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ ಯುವಕ: ಕಾರ್ಪೊರೇಟ್ ಒತ್ತಡದ ಕುರಿತು ಜನ ಹೇಳೋದೇನು?

ಬೈಕ್ ಟ್ಯಾಂಕ್ ಮೇಲೆ ಲ್ಯಾಪ್‌ಟಾಪ್ ಆನ್ ಇಟ್ಟು ಚಲಾಯಿಸಿದ ಹೈದರಾಬಾದ್ ಸವಾರ

Viral News: ಹೈದರಾಬಾದ್‌ ನ ಕಾರಿಡಾರ್‌ನ ಹೈಟೆಕ್ಸ್ ಕಮಾನ್ ಸಿಗ್ನಲ್ ಬಳಿ ಯುವಕನೊಬ್ಬ ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ್ದಾನೆ. ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯ ರೆಕಾರ್ಡ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿ ಸುಸ್ತೋ ಸುಸ್ತು! ಸ್ಟಾರ್ಟ್‌ಅಪ್ ಓನರ್‌ ರಿಯಾಕ್ಷನ್‌ ಹೇಗಿತ್ತು?

ಬೆಂಗಳೂರಿನ ಬಾಡಿಗೆ ದರ ಕೇಳಿ ದಂಗಾದ ಸ್ಟಾರ್ಟ್‌ಅಪ್ ಸಂಸ್ಥಾಪಕ!

Viral News: ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಬೆಂಗಳೂರಿನ ಬಾಡಿಗೆ ವೆಚ್ಚದ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್ ಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಹಂಚಿಕೊಂಡಿದ್ದು ತನಗೆ ನಿಜಕ್ಕೂ ಶಾಕ್ ಆಯಿತು. ತಿಂಗಳಿಗೆ 2.75 ಲಕ್ಷ ರೂ., 3.1 ಲಕ್ಷ ರೂ. ಹಾಗೂ ಅದಕ್ಕಿಂತಲೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಹಕ್ಕಿಯ ಮೊಟ್ಟೆಗಳಿಂದ ಮಳೆ ಮುನ್ಸೂಚನೆ ಗೊತ್ತಾಗುತ್ತಾ? : ಮಧ್ಯಪ್ರದೇಶದ ರೈತರ ವಿಶಿಷ್ಟ ನಂಬಿಕೆ ಏನಿದು?

ಹಕ್ಕಿಯ ಮೊಟ್ಟೆಯಿಂದ ಮಳೆಯ ಸೂಚನೆ: ಮಧ್ಯಪ್ರದೇಶದ ರೈತರ ವಿಶೇಷ ನಂಬಿಕೆ!

Viral News: ಇಂದಿನ ಆಧುನಿಕ ಯುಗದಲ್ಲಿ ಮಳೆಯ ಮುನ್ಸೂಚನೆ ಅರಿತುಕೊಳ್ಳಲು ನಾವು ಮೊಬೈಲ್ ಆ್ಯಪ್ ಅಥವಾ ಹವಾಮಾನ ಇಲಾಖೆಯ ವದಿಗಳನ್ನು ಅವಲಂಬಿಸಿ ಇರುತ್ತೇವೆ.‌ ಆದರೆ ಮಧ್ಯಪ್ರದೇಶದ ಹಳ್ಳಿಯಲ್ಲಿ ರೈತರು ಇಂದಿಗೂ ಮಳೆಯನ್ನು ಅಂದಾಜಿಸಲು ಸಣ್ಣ ಹಕ್ಕಿಗಳ ಮೊಟ್ಟೆಯನ್ನು ಗಮನಿಸಿ ಮಳೆಯ ಮುನ್ಸೂಚನೆಯನ್ನು ಅರಿಯುತ್ತಾರೆ. ಸದ್ಯ ಈ ವಿಚಾರ ಕೇಳಿ ನೆಟ್ಟಿಗರೇ ಆಶ್ಚರ್ಯ ಪಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Loading...