ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿ ಪೊಲೀಸರ ಅತಿಥಿಯಾದ ಯುವಕ: ಸರಿಯಾಗಿ ಬುದ್ಧಿ ಕಲಿಸಿ ಎಂದ ನೆಟ್ಟಿಗರು

ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿ ಪೊಲೀಸರ ಅತಿಥಿಯಾದ ಯುವಕ

Viral Video: ಯುವಕನೊಬ್ಬ ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ತನ್ನ ಬೈಕ್‌ಗೆ ಕಾನೂನು ಬಾಹಿರವಾಗಿ ಭಾರೀ ಶಬ್ದದ ರೈಲಿನ ಹಾರ್ನ್ ಬಳಸಿ ಪ್ರಯಾಣಿಕರಲ್ಲಿ ಅತಂಕ ಹುಟ್ಟಿಸಿದ್ದಾನೆ. ಸದ್ಯ ಈ ವಿಚಾರ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮರೆಯಾದ ಮಾನವೀಯತೆ: ಒಡಿಶಾದಲ್ಲಿ ಸಾರ್ವಜನಿಕರೆದುರೇ ಯುವ ದಂಪತಿ ಮೇಲೆ ಭೀಕರ ಹಲ್ಲೆ

ಯುವ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

Viral Video: ಯುವ ದಂಪತಿಯ ಮೇಲೆ ದುಷ್ಕರ್ಮಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ದಂಪತಿಯನ್ನು ಅಟ್ಟಾಡಿಸಿ ಕ್ರೂರವಾಗಿ ಥಳಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಆಶಿಶ್ ಸಾಹು ಮತ್ತು ಮುಖೇಶ್ ಸಾಹು ಸೇರಿ ಐದಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೀಗೂ ನಡೆಯುತ್ತೆ ವಂಚನೆ: ಭಾರಿ ಬೆಲೆ ತೆತ್ತು ಖರೀದಿಸಿದ ಗ್ಯಾಸ್ ಸಿಲಿಂಡರ್‌ನಲ್ಲಿ ತುಂಬಿತ್ತು ಬರೀ ನೀರು!

ಸಿಲಿಂಡರ್‌ ಒಳಗೆ ಗ್ಯಾಸ್ ಬದಲು ನೀರು: ಮೀರತ್‌ನಲ್ಲಿ ಬಯಲಾಯ್ತು ವಂಚನೆ

Viral Video: ಉತ್ತರ ಪ್ರದೇಶದ ಬೀದಿ ಬದಿಯ ವ್ಯಾಪಾರಿಯೊಬ್ಬರು ಖರೀದಿಸಿದ ಸಿಲಿಂಡರ್ ಕಂಡು ದಂಗಾಗಿ ಹೋಗಿದ್ದಾರೆ. ಸಿಲಿಂಡರ್‌ನಿಂದ ಗ್ಯಾಸ್ ಬದಲಿಗೆ ನೀರು ಸುರಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗ್ಯಾಸ್ ವಿಚಾರದಲ್ಲೂ ಇಂತಹ ವಂಚನೆ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಒಳಗೆ ಗ್ಯಾಸ್ ತುಂಬಿಸುವ ಬದಲಿಗೆ ನೀರನ್ನು ತುಂಬಿಸಿ ಇಡಲಾಗಿದೆ.

ಜೈಲಿನಿಂದ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ಜೈಕಾರ, ಭರ್ಜರಿ ರೋಡ್ ಶೋ: ಇಂಥ ಜನಗಳು ಎಲ್ಲಿ ಸಿಕ್ತಾರೆ? ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಅತ್ಯಾಚಾರ ಆರೋಪಿ ಜೈಲಿನಿಂದ ಬಿಡುಗಡೆಯಾದಾಗ ಜೈಕಾರ, ರೋಡ್ ಶೋ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅತ್ಯಾಚಾರ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ನಾಚಿಗೆಗೇಡಿನ ದೃಶ್ಯ ಕಂಡಬಂತು. ಆತನಿಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಭರ್ಜರಿ ರೋಡ್‌ಶೋ ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅಮೆರಿಕ ಪ್ರವಾಸಿಗರ ಹುಚ್ಚಾಟ; ಪಂಚ್ ಕೋತಿಯ ಆವರಣಕ್ಕೆ ಅಕ್ರಮವಾಗಿ ನುಗ್ಗಿ ವಿಡಿಯೊ ಮಾಡಲು ಯತ್ನ

ಪಂಚ್ ಕೋತಿಯ ವಿಡಿಯೊ ಮಾಡಲು ಹೋಗಿ ಜೈಲು ಸೇರಿದ ಪ್ರವಾಸಿಗರು

Viral Video: ಲೈಕ್ಸ್ ಹಾಗೂ ವೀವ್ಸ್‌ಗಾಗಿ ವಿಡಿಯೊ ಮಾಡಲು ಹೋಗಿ ಇಬ್ಬರು ಪ್ರವಾಸಿಗರು ಜೈಲು ಸೇರುವಂತಾಗಿದೆ. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ವೈರಲ್ ಕೋತಿ ಪಂಚ್‌ನ ಆವರಣಕ್ಕೆ ನುಗ್ಗಿದ ಇಬ್ಬರು ಅಮೆರಿಕ ಪ್ರವಾಸಿಗರನ್ನು ಜಪಾನ್‌ ಪೊಲೀಸರು ಬಂದಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ದೇವಾಲಯಗಳಿಗೆ ಚಿನ್ನದ ಬಾಂಡ್‌ ನೀಡುವ ಯೋಜನೆ ಸುಳ್ಳು ಸುದ್ದಿ: ಕೇಂದ್ರದಿಂದ ಸ್ಪಷ್ಟನೆ

ಕೇಂದ್ರದಿಂದ ದೇವಾಲಯಗಳಿಗೆ ಚಿನ್ನದ ಬಾಂಡ್‌ ?

ದೇವಾಲಯ, ಟ್ರಸ್ಟ್ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಚಿನ್ನದ ಬಾಂಡ್ ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಆಧಾರ ರಹಿತ ಸುಳ್ಳುಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಾಗರಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಯಾಗಬಾರದು ಎಂದು ಹೇಳಿದೆ.

ಬಾದಾಮಿ ಗುಹಾಂತರ ದೇವಾಲಯಕ್ಕೆ ಚಪ್ಪಲಿ ಧರಿಸಿ ಬಂದ  ಮುಸ್ಲಿಂ ಯುವತಿ; ಪ್ರವಾಸಿಗರಿಂದ ತರಾಟೆ, ವಿಡಿಯೋ ನೋಡಿ

ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ಮುಸ್ಲಿಂ ಯುವತಿ: ಕಿಡಿಕಾರಿದ ಪ್ರವಾಸಿ

Viral Video: ಬಾದಾಮಿ ಗುಹಾಂತರ ದೇವಾಲಯದ ಒಳಗೆ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಹೋಗಲು ಮುಂದಾಗಿದ್ದು ಹಿಂದು ಪ್ರವಾಸಿಯೊಬ್ಬರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪವಿತ್ರ ಹಾಗೂ ಐತಿಹಾಸಿಕತೆಯನ್ನು ಸಾರುವ ದೇವಾಲಯಕ್ಕೆ ಚಪ್ಪಲಿ ಧರಿಸಿ ಹೋಗುವುದು ಹಿಂದುಗಳ ಭಾವನೆಕ್ಕೆ ಧಕ್ಕೆ ಮಾಡಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶವಾಗಾರದಲ್ಲಿ ಜೀವಂತವಾಗಿ ಎದ್ದ ಕೂತ ಮೃತ ವ್ಯಕ್ತಿ; ಏನಿದು ಪವಾಡ?

ಸತ್ತ ವ್ಯಕ್ತಿಗೆ ಮತ್ತೆ ಜೀವ: ಪೋಲೆಂಡ್ ನ ಗೋರಾದಲ್ಲಿ ಅಚ್ಚರಿಯ ಘಟನೆ

Viral Neews: ಅತೀಯಾಗಿ ಕುಡಿದಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಇದಕ್ಕಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ವಿಚಿತ್ರ ಶಬ್ದ ವೊಂದು ಕೇಳಿ ಬಂದಿದ್ದು ಅಲ್ಲಿದ್ದ ಕಾರ್ಮಿಕರು ಭಯಭೀತರಾಗಿದ್ದರು. ಆದರೆ ಇದನ್ನು ಪರಿಶೀಲನೆ ಮಾಡಿದಾಗ ವ್ಯಕ್ತಿಯೂ ಜೀವಂತವಾಗಿ ಪತ್ತೆಯಾಗಿದ್ದಾನೆ‌..

CSK vs SRH: ಮೈದಾನದಲ್ಲೇ ವಾಗ್ವಾದ ನಡೆಸಿದ ಸಂಜು-ಕ್ಲಾಸೆನ್‌; ವಿಡಿಯೊ ವೈರಲ್‌

ಸ್ಟಂಪಿಂಗ್‌ ಬಳಿಕ ಮೈದಾನದಲ್ಲೇ ವಾಗ್ವಾದ ನಡೆಸಿದ ಸಂಜು-ಕ್ಲಾಸೆನ್‌

Sanju Samson and Heinrich Klaasen: ಕ್ಲಾಸೆನ್‌ ಔಟಾದರೂ ಕಿಶನ್ ತಾಳ್ಮೆಯಿಂದ ಬ್ಯಾಟಿಂಗ್‌ ಕಾಯ್ದುಕೊಂಡು. 19 ನೇ ಓವರ್‌ನಲ್ಲಿ 47 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಆದರೆ, ಅನ್ಶುಲ್ ಕಾಂಬೋಜ್ ಕಿಶನ್ ಅವರನ್ನು ಔಟ್ ಮಾಡುವ ಹೊತ್ತಿಗೆ, ಪಂದ್ಯವು ಆತಿಥೇಯರಿಂದ ದೂರ ಸರಿದಿತ್ತು. ಕೈಯಲ್ಲಿ ಐದು ವಿಕೆಟ್‌ಗಳು ಮತ್ತು ಇನ್ನೂ ಆರು ಎಸೆತಗಳು ಬಾಕಿ ಇರುವಾಗ ಹೈದರಾಬಾದ್‌ ಜಯ ಸಾಧಿಸಿತು.

ರಜನಿಕಾಂತ್ ಶೈಲಿಯಲ್ಲಿ ಶಿಳ್ಳೆ ಹೊಡೆದು ಸಿಎಸ್‌ಕೆ ಅಭಿಮಾನಿಗಳನ್ನು ಅಣಕಿಸಿದ ಇಶಾನ್‌ ಕಿಶನ್‌; ವಿಡಿಯೊ ವೈರಲ್‌

ಶಿಳ್ಳೆ ಹೊಡೆದು ಸಿಎಸ್‌ಕೆ ಅಭಿಮಾನಿಗಳನ್ನು ಅಣಕಿಸಿದ ಇಶಾನ್‌ ಕಿಶನ್‌

IPL 2026: ಹೆನ್ರಿಕ್ ಕ್ಲಾಸೆನ್ ಒತ್ತಡದ ಪರಿಸ್ಥಿತಿಯಲ್ಲೂ ಅದ್ಭುತ ಆಟವಾಡಿದರು ಮತ್ತು 41 ಎಸೆತಗಳಲ್ಲಿ 75 ರನ್‌ಗಳ ಪಾಲುದಾರಿಕೆಯು ಎರಡೂ ತಂಡಗಳ ನಡುವಿನ ವ್ಯತ್ಯಾಸವಾಗಿ ಪರಿಣಮಿಸಿತು. ಸನ್‌ರೈಸರ್ಸ್ ತಂಡವು ಇನ್ನೂ ಆರು ಎಸೆತಗಳು ಬಾಕಿ ಇರುವಾಗಲೇ ಜಯಗಳಿಸಿತು.

"ಮೂಲಭೂತ ಸೌಕರ್ಯ ಇಲ್ಲ, ರಜೆಯೂ ಇಲ್ಲ": 20 ಲಕ್ಷ ರುಪಾಯಿ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ 25ರ ಯುವಕ

ಒತ್ತಡದಿಂದ 20 ಲಕ್ಷ ರು. ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ ಯುವಕ

Viral News: 25 ವರ್ಷದ ಯುವಕನೊಬ್ಬ ಕೆಲಸದ ಹೊರೆ ಹೆಚ್ಚಾಗಿ 20 ಲಕ್ಷ ರುಪಾಯಿ ಪ್ಯಾಕೇಜ್ ಹೊಂದಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾನೆ‌. ಎನ್‌ಐಟಿ ಕುರುಕ್ಷೇತ್ರದ 25 ವರ್ಷದ ಎಂಜಿನಿಯರ್ ಸೌರಭ್ ಮಿತ್ತಲ್, 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರುಪಾಯಿ ಸಂಬಳದೊಂದಿಗೆ ಬಿಪಿಸಿಎಲ್‌ಗೆ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಉದ್ಯೋಗಕ್ಕೆ ಸೇರಿದ್ದ. ಈ ಕೆಲಸವನ್ನು ಪ್ರತಿಷ್ಠಿತವೆಂದು ಪರಿಗಣಿಸಲಾಗುತ್ತದೆ‌. ಆದರೆ ಇದೀಗ ಅತೀವ ಒತ್ತಡ ಹಾಗೂ ಮಾನಸಿಕ ನೆಮ್ಮದಿ ಇಲ್ಲದೆ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ.

''ಮಗಳ ಪ್ರಾಣಕ್ಕಿಂತ ಪ್ರತಿಷ್ಠೆ ಮುಖ್ಯವಾಯ್ತೆ?ʼʼ: ನಿಗೂಢವಾಗಿ ಮೃತಪಟ್ಟ ತ್ವಿಶಾ ವಾಟ್ಸ್‌ಆ್ಯಪ್ ಚಾಟ್‌ ನೋಡಿ ನೆಟ್ಟಿಗರಿಂದ ಕ್ಲಾಸ್‌

ನೋಯ್ಡಾ ಮಹಿಳೆಯ ಆತ್ಮಹತ್ಯೆ ಪ್ರಕರಣ: ನೆಟ್ಟಿಗರು ಕಿಡಿ

Viral News: ನೋಯ್ಡಾ ಮೂಲದ ಯುವತಿ ತ್ವಿಶಾ ಶರ್ಮಾ ಅವರ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆಯಾಗಿ ಕೇವಲ ಐದು ತಿಂಗಳಿಗೆ ಅವರ ಮೃತದೇಹವು ಶವಾಗಾರದಲ್ಲಿದೆ. ಅವರ ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ತ್ವಿಶಾ ನಡೆಸಿದ ಚಾಟ್‌ ವೈರಲ್‌ ಆಗಿದೆ.

"ವಿದೇಶಕ್ಕಿಂತ ಹಳ್ಳಿಯೇ ಸುಂದರ, ‌ತಪ್ಪಿತಸ್ಥ ಭಾವನೆ ಕಾಡುತ್ತಿದೆʼʼ ಎಂದು ಕೇರಳಂ ಯುವಕ ಹೇಳಿದ್ದೇಕೆ?

ಹಳ್ಳಿ ಬದುಕು ತ್ಯಜಿಸಿದ ಬಗ್ಗೆ ಬೇಸರ ಹೊರಹಾಕಿದ ಕೇರಳಂ ಯುವಕ

Viral Video: ಹಳ್ಳಿಯ ಸರಳ ಜೀವನ, ಸ್ವಚ್ಛ ಪರಿಸರ ಇದನ್ನೆಲ್ಲ ಮಿಸ್ ಮಾಡಿಕೊಳ್ಳುವವರು ಬಹುತೇಕ ಮಂದಿ ಇದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಕೇರಳಂ ಕಂಟೆಂಟ್ ಕ್ರಿಯೇಟರ್‌ ಒಬ್ಬರು ಹಳ್ಳಿಯನ್ನು ತೊರೆದು ಬಂದ ಬಗ್ಗೆ ಬೇಸರ ಹೊರ ಹಾಕಿದ್ದಾರೆ‌. ಕೆಲವೊಮ್ಮೆ ವಿದೇಶದಲ್ಲಿ ಕೆಲಸ ಮಾಡಲು ಹಳ್ಳಿ ಬಿಟ್ಟು ಬಂದಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಕಾಡುತ್ತದೆ ಎಂದು ಸೋಷಿಯಲ್ ಮೀಡಿಯಾ ಪೋಸ್‌ನಲ್ಲಿ ಬರೆದಿದ್ದಾರೆ.

ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂವರು ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ದಿಟ್ಟ ಮಹಿಳೆ

ಪ್ರಾಣದ ಹಂಗು ತೊರೆದು ಮೂವರು ಮಕ್ಕಳನ್ನು ರಕ್ಷಿಸಿದ ಮಹಿಳೆ

Fire Incident: ತನ್ನ ಜೀವಕ್ಕೆ ಆಪತ್ತಾದರೂ ಮಕ್ಕಳನ್ನು ತನ್ನ ಉಸಿರಿನ ಕೊನೆತನಕವೂ ತಾಯಿ ಕಾಪಾಡುತ್ತಾಳೆ. ಇದಕ್ಕೆ ಜ್ವಲಂತ ಉದಾಹರಣೆಯೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಂಡು ಬಂದಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂರು ಮಕ್ಕಳನ್ನು ರಕ್ಷಿಸಿದ ಮಹಿಳೆ ಕೊನೆಗೆ ಬೆಂಕಿಗೆ ಬಲಿಯಾಗಿದ್ದಾರೆ.

ಇಂಧನ ಬೆಲೆ ಏರಿಕೆ ಬಿಸಿ ತಪ್ಪಿಸಲು ಹೊಸ ತಂತ್ರ: ಬೈಕ್‌ ಬಿಟ್ಟು ಕುದುರೆ ಏರಿದ ಶಿಕ್ಷಕ; ಇಲ್ಲಿದೆ ವಿಡಿಯೊ

ಬೈಕ್‌ ಬದಲು ಕುದುರೆ ಏರಿದ ಶಿಕ್ಷಕ; ಇಲ್ಲಿದೆ ವಿಡಿಯೊ

Teacher Rides Horse: ಸಾಮಾಜಿಕ ಮಾಧ್ಯಮದಲ್ಲಿ ದಿನನಿತ್ಯ ಹಲವು ವಿಡಿಯೊಗಳು ವೈರಲ್ ಆಗುತ್ತವೆ. ಯಾವ ವಿಡಿಯೊ ಯಾವ ಕಾರಣಕ್ಕಾಗಿ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೊವೊಂದು ಖಂಡಿತಾ ನಿಮಗೆ ಅಚ್ಚರಿ ತರಿಸಬಹುದು. ಇಂಧನ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಬೈಕ್‌ ಬಿಟ್ಟು ಕುದುರೆ ಏರಿದ್ದಾರೆ.

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

ಸಿನಿಮಾ ನೋಡಿ ಕೆಲಸ ತ್ಯಜಿಸಿದ ಯುವತಿ: ಪೋಸ್‌ನಲ್ಲಿ ಹೇಳಿದ್ದೇನು?

ಯುವತಿಯೊಬ್ಬಳು ʼತಮಾಷʼ ಬಾಲಿವುಡ್ ಸಿನಿಮಾ ವೀಕ್ಷಿಸಿ ಕಾರ್ಪೋರೇಟ್ ಕೆಲಸ ತೊರೆದು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ಪೋರೇಟ್ ಉದ್ಯೋಗವನ್ನು ತ್ಯಜಿಸಿದ್ದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ಆಕೆ ಹೇಳಿದ್ದಾಳೆ.

ವಿದ್ಯಾವಂತರಾದರೂ ಬುದ್ಧಿಯಿಲ್ಲ: ಶತಾಬ್ದಿ ರೈಲಿನಲ್ಲಿ ಪ್ರಯಾಣಿಕನ ಅತಿರೇಕದ ವರ್ತನೆ

ಸಾರ್ವಜನಿಕ ಸಾರಿಗೆಯಲ್ಲಿ ನಾಗರಿಕ ಪ್ರಜ್ಞೆಯ ಕೊರತೆ: ಪ್ರಯಾಣಿಕರು ಕಿಡಿ ಕಿಡಿ

Viral News: ರೈಲಿನಲ್ಲಿ ಉಂಟಾದ ಘಟನೆಯೊಂದು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬ ಚಕ್ಕಳಮಕ್ಕಳ ಹಾಕಿ ಕುಳಿತಿದ್ದ. ಈ ಬಗ್ಗೆ ಕಿಡಿಕಾರಿದ ಸಹಪ್ರಯಾಣಿಕರೊಬ್ಬರು ಫೋಟೊ ಸಮೇತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಜಾಗವನ್ನು ಅತಿಕ್ರಮಿಸಿಕೊಂಡು ಚಕ್ಕಳಮಕ್ಕಳ ಹಾಕಿ ಕುಳಿತಿರುವ ಪ್ರಯಾಣಿಕ ಬಗ್ಗೆ ಆಕ್ರೋಶ ಹೊರಹಾಕಿದ್ದು ಭಾರತದಲ್ಲಿ ನಾಗರಿಕ ಪ್ರಜ್ಞೆ ಹಾಗೂ ಶಿಸ್ತಿನ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಫಾರಿ ಜೀಪ್ ಮೇಲೆ ಆಟ್ಯಾಕ್ ಮಾಡಲು ಮುಂದಾದ ಖಡ್ಗಮೃಗ: ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು, ವಿಡಿಯೋ ನೋಡಿ

ಪ್ರವಾಸಿಗರ ಸಫಾರಿ ಜೀಪ್ ಮೇಲೆ ಖಡ್ಗಮೃಗ ದಾಳಿ: ಭಯಾನಕ ವಿಡಿಯೊ!

Viral Video: ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವು ಸಫಾರಿ ಜೀಪಿನ ಮೇಲೆ ದಾಳಿ ಮಾಡಲು ಮುಂದಾಗಿದ್ದು ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

ಪ್ರೇಮಿಯ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

Viral News: ಪ್ರೇಮಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕೆಂದು ಪ್ರೇಯಸಿ ಸುಮಾರು 90 ನಿಮಿಷಗಳ ಹೈವೋಲ್ಟೇಜ್ ಟವರ್ ಮೇಲೆ ಏರಿರುವ ಘಟನೆ ನಡೆದಿದೆ. ಈ ನಾಟಕೀಯ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಕ್ರೀದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡ್ತಿವೆ 'ಡೊನಾಲ್ಡ್ ಟ್ರಂಪ್', 'ನೆತನ್ಯಾಹು' ಎಮ್ಮೆಗಳು!

ಬಕ್ರೀದ್‌ಗೂ ಮುನ್ನ ಸದ್ದು ಮಾಡ್ತಿವೆ 'ಟ್ರಂಪ್', 'ನೆತನ್ಯಾಹು' ಎಮ್ಮೆಗಳು!

Viral News: ವಿಶ್ವದ ಎರಡು ಪ್ರಮುಖ ನಾಯಕರಾದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ಹೋಲುವ ಎರಡು ದೈತ್ಯ ಎಮ್ಮೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ‌. ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಈ ವಿಶೇಷ ವಿನ್ಯಾಸದ ಎಮ್ಮೆಗಳನ್ನು ವೀಕ್ಷಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.

ಅಜಾಗರೂಕತೆಯಿಂದ ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಯುವಕ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

ಹಾವು ಹಿಡಿಯಲು ಹೋಗಿ ಪೇಚಿಗೆ ಸಿಲುಕಿದ ಯುವಕ: ಭಯಾನಕ ವಿಡಿಯೊ

Viral Video: ಯುವಕನೊಬ್ಬ ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಈ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರಕ್ಷಣಾತ್ಮಕ ಸಾಧನ ಅಥವಾ ವೃತ್ತಿಪರ ಬೆಂಬಲವಿಲ್ಲದೆ ಮನೆಯೊಳಗೆ ಇದ್ದ ಹಾವನ್ನು ಯುವಕನೊಬ್ಬ ಸೆರೆ ಹಿಡಿಯಲು ಪ್ರಯತ್ನಿಸಿದ್ದಾನೆ.

84ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ: ಅಜ್ಜಿಯ ಆಸೆ ಈಡೇರಿಸಿದ ಮೊಮ್ಮಗ: ಹೃದಯಸ್ಪರ್ಶಿ ಕ್ಷಣ ಇಲ್ಲಿದೆ

ಅಜ್ಜಿಯ ವಿಮಾನ ಪ್ರಯಾಣದ ಆಸೆ ಈಡೇರಿಸಿದ ಮೊಮ್ಮಗ: ವಿಡಿಯೊ ವೈರಲ್

Viral Video: ವೃದ್ಧೆಯೊಬ್ಬರು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಹೃದಯ ಗೆದ್ದಿದೆ. 84ನೇ ವಯಸ್ಸಿನಲ್ಲಿ ಅಜ್ಜಿಯ ಮೊದಲ ಬಾರಿಗೆ ವಿಮಾನ ಪ್ರಯಾಣದ ಅನುಭವ ಪಡೆದಿದ್ದು, ಅಜ್ಜಿಯ ಆಸೆಯನ್ನು ಈಡೇರಿಸಲು ಮೊಮ್ಮಗ ಸಾಥ್ ನೀಡಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಲಕ್ಷಗಟ್ಟಲೆ ಆದಾಯ ತರುವ ಕಾರ್ಪೊರೇಟ್ ಉದ್ಯೋಗ ತ್ಯಜಿಸಿ ನೂರಾರು ಬೀದಿನಾಯಿಗಳಿಗೆ ಆಶ್ರಯದಾತನಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

ನೂರಾರು ಬೀದಿ ನಾಯಿಗಳಿಗೆ ಆಸರೆಯಾದ ಬೆಂಗಳೂರಿನ ಎಂಜಿನಿಯರ್

Viral News: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಯುವಕ ಈಗ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ಇದೀಗ ಅವರ ವೃತ್ತಿ ತೊರೆದು ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅನುಕೂಲಕಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಬಹುದಾದ ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳಿವೆ. ಅಲ್ಲದೆ ಬೀದಿ ನಾಯಿಗಳ ಸುರಕ್ಷತೆಗಾಗಿ ಬೇಲಿಗಳನ್ನು ಅಳವಡಿಸಲಾಗಿದೆ.

ಹಳದಿ ಶಾಸ್ತ್ರದ ವೇಳೆ ಬೆಂಕಿ ದುರಂತ: ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ

ಬೆಂಕಿ ಅವಘಡದಿಂದ ವಧು ಸುಟ್ಟು ಹೋದರೂ ಆಸ್ಪತ್ರೆಯಲ್ಲೇ ವರಿಸಿದ ವರ

Viral Video: ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ 12 ಮಂದಿ ಬೆಂಕಿಯ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಧು ಸೇರಿ ಒಟ್ಟು 12 ಜನರು ತೀವ್ರವಾಗಿ ಸುಟ್ಟು ಹೋಗಿದ್ದಾರೆ. ಹಳದಿ ಸಾಸ್ತ್ರದ ವೇಳೆ ಈ ಘಟನೆ ನಡೆದಿದ್ದು, ವರ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ್ದಾನೆ.

Loading...