ಹನುಮಾನ್ ಮಂದಿರದಲ್ಲಿ ಸುತ್ತು ಹಾಕಿದ ಶ್ವಾನಕ್ಕೆ ಭಕ್ತರಿಂದ ಪೂಜೆ
ಉತ್ತರ ಪ್ರದೇಶದ ನಗಿನಾ ತಾಲೂಕಿನ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಾಲಯದಲ್ಲಿ, ಆರೋಗ್ಯ ಸಮಸ್ಯೆಯಿಂದ ದೇವರ ಮೂರ್ತಿಗಳ ಸುತ್ತ ವೃತ್ತಾಕಾರವಾಗಿ ಚಲಿಸುತ್ತಿದ್ದ ಶ್ವಾನವನ್ನು ಕೆಲ ಭಕ್ತರು ದೈವಿಕ ಸಂಕೇತವೆಂದು ಭಾವಿಸಿ ಪೂಜೆ-ಪುನಸ್ಕಾರ ನಡೆಸಿದ್ದಾರೆ. ಈ ಘಟನೆಯ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಂಧಶ್ರದ್ಧೆ–ವೈಜ್ಞಾನಿಕ ದೃಷ್ಟಿಕೋನ ಕುರಿತು ಭಾರಿ ಚರ್ಚೆಗೆ ಕಾರಣವಾಗಿದೆ.