ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ: ಪೋಷಕರ ವಯಸ್ಸಿನ ಬಗ್ಗೆ ಇಂಟರ್‌ನೆಟ್‌ನಲ್ಲಿ ಜೋರಾಯ್ತು ಚರ್ಚೆ

ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ

Viral Video: ಆಂಧ್ರ ಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಐವಿಎಫ್ ತಂತ್ರಜ್ಞಾನ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕೆಲವು ದಶಕಗಳ ನಂತರ ಮಹಿಳೆ ಮಗು ಪಡೆದಿದ್ದು ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದರೆ ಈ ವಯಸ್ಸಿನಲ್ಲೂ ಪೋಷಕರಾಗುತ್ತಿರುವ ಬಗ್ಗೆ ಜನರು ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Viral Video: ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ

ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ

Viral News: ಕೇರಳಂನ ಕೂತ್ತಟ್ಟು ಕುಲಂ-ಪಿರಾವೋಮ್ ರಸ್ತೆಯ ಕಕ್ಕೂರ್ ಬಳಿ 35 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಮದುವೆ ಸಮಾರಂಭವೊಂದಕ್ಕೆ ಸಂಬಂಧಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ಸವಾರನೊಬ್ಬ ಇಂಡಿಕೇಟರ್ ಹಾಕದೆ ಏಕಾಏಕಾಕಿ ತಿರುವು ಪಡೆದಿದ್ದು, ಸವಾರನನ್ನು ಉಳಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಆನ್‌ಲೈನ್‌ ಫುಡ್‌ ಡೆಲಿವರಿ ವಿಚಾರಕ್ಕೆ ವಾಗ್ವಾದ; ಸೆಕ್ಯುರಿಟಿ ಗಾರ್ಡ್‌ ಮೇಲೆ ಮಹಿಳೆಯಿಂದ ಹಲ್ಲೆ: ವಿಡಿಯೊ ವೈರಲ್‌

ಸೆಕ್ಯುರಿಟಿ ಗಾರ್ಡ್‌ ಮೇಲೆ ದೌರ್ಜನ್ಯ: ಮಹಿಳೆ ವರ್ತನೆ ವಿರುದ್ಧ ಕಿಡಿ

Viral Video: ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್‌ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್‌ನಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ಮಹಿಳೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ ನಂತರ ಈ ಘರ್ಷಣೆ ಪ್ರಾರಂಭವಾಗಿದೆ. ಡೆಲಿವರಿ ಸಿಬ್ಬಂದಿಯನ್ನು ಭದ್ರತಾ ಸಿಬ್ಬಂದಿ ಗೇಟ್‌ನಲ್ಲಿ ತಡೆದಿದ್ದಾರೆ ಎನ್ನುವ ಕಾರಣಕ್ಕೆ ಜಗಳ ಭುಗಿಲೆದ್ದಿದೆ.

'ಡ್ಯಾಡೀಸ್‌ ಹೋಮ್' ಡೈಲಾಗ್ ಬಳಸಿ ಪೊಲೀಸ್ ವಾಹನದಲ್ಲಿ ಕುಳಿತು ರೀಲ್ಸ್ ಮಾಡಿದ ಯುವಕ; ಮುಂದೇನಾಯ್ತು ನೀವೇ ನೋಡಿ

ಪೊಲೀಸ್ ವಾಹನ ಬಳಸಿ ಯುವಕನ ರೀಲ್ಸ್: ವಿಡಿಯೊ ವೈರಲ್‌

Viral Video: ಇಲ್ಲೊಬ್ಬ ಯುವಕ ಪೊಲೀಸ್ ವಾಹನ ಏರಿ ರೀಲ್ಸ್ ಮಾಡಿದ್ದಾನೆ. ಈತನಿಗೆ ಪೊಲೀಸ್ ವಾಹನ ಬಳಸಲು ಅವಕಾಶ ನೀಡಿದವರು ಯಾರೆಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸದ್ಯ ಸಾರ್ವಜನಿಕ ಭದ್ರತೆ ಮತ್ತು ಪೋಲಿಸ್ ವಾಹನದ ನಿಯಂತ್ರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ‌.

ಬಿಜೆಪಿ ಮೇಯರ್ ಆಯೋಜಿಸಿದ್ದ ರಾಖಿ ಹಬ್ಬದ ಕಾರ್ಯಕ್ರಮದಲ್ಲಿ ಸೀರೆಗಾಗಿ ನೀರೆಯರ ಪೈಪೋಟಿ: ನೂಕು ನುಗ್ಗಲಿಂದ ಮೂರ್ಛೆ ತಪ್ಪಿದ ಮಹಿಳೆಯರು

ಸೀರೆಗಾಗಿ ಪೈಪೋಟಿ: ಮೂರ್ಛೆ ತಪ್ಪಿದ ಮಹಿಳೆಯರು

Saree Scramble at Rakhi Event: ಉತ್ತರ ಪ್ರದೇಶದ ರೇಲಿಯಲ್ಲಿ ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸೀರೆ ವಿತರಿಸುವ ವೇಳೆ 20,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರಿಂದ ಅನೇಕರು ಮೂರ್ಛೆ ತಪ್ಪಿರುವ ಘಟನೆ ನಡೆದಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಕ್ಕಾಗಿ ಜನಸಮೂಹ ಜಮಾಯಿಸಿತ್ತು.

ರೈಲ್ವೆ ಹಳಿಗಳ ನಡುವೆ ಸಿಲುಕಿಕೊಂಡ ಒಂಟೆ: ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ರೈಲ್ವೆ ಹಳಿಯಲ್ಲಿ ಸಿಲುಕಿದ ಒಂಟೆ: ರಕ್ಷಣಾ ಕಾರ್ಯಾಚರಣೆ ವಿಡಿಯೊ ವೈರಲ್

Viral News: ರೈಲ್ವೆ ಸೇತುವೆ ಹಳಿಯ ನಡುವೆ ಒಂಟೆಯೊಂದು ಸಿಲುಕಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಹಳಿಯಲ್ಲಿ ಒಂಟೆ ಇರುವುದನ್ನು ಗಮನಿಸಿದ ಪೈಲಟ್ ತಕ್ಷಣ ಬ್ರೇಕ್ ಹಾಕಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದರಿಂದಾಗಿ ರೈಲ್ವೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವು ಎಕ್ಸ್‌ಪ್ರೆಸ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು.

ಸಾಹಸ ಮಾಡಲು ಹೋಗಿ 12ನೇ ಮಹಡಿಯಲ್ಲಿ ಸಿಲುಕಿಕೊಂಡ ಡೋಗೇಶ್ ಭಾಯ್: ವಿಡಿಯೊ ವೈರಲ್

12ನೇ ಮಹಡಿಯಲ್ಲಿ ಸಿಲುಕಿದ ಶ್ವಾನ: ರಕ್ಷಿಸಿದ ಅಗ್ನಿಶಾಮಕ ತಂಡ

Viral Video: ನಾಯಿಯೊಂದು ತನ್ನ ಪಾಡಿಗೆ ತಾನು ಆಟವಾಡುತ್ತ ಸಾಹಸ ಮಾಡಲು ಹೋಗಿ ಕಟ್ಟಡವೊಂದರಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಹುಮಹಡಿ ಕಟ್ಟಡದ 12 ಮಹಡಿಯಲ್ಲಿ ನಾಯಿ ಸಿಲುಕಿಕೊಂಡಿದೆ. ಪಕ್ಕದ ಬಿಲ್ಡಿಂಗ್ ನಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

ತಮಿಳುನಾಡು ವಿಧಾನಸಭೆಯಲ್ಲಿ ಅಪರೂಪದ ಪ್ರಸಂಗ: ಸಿಎಂ ಕುರ್ಚಿ ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತ ವಿಜಯ್

ಸಿಎಂಗೆ ಮೀಸಲಾದ ಆಸನ ತೊರೆದು ಸಚಿವರ ಜತೆ ಕುಳಿತ ವಿಜಯ್

CM Vijay: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ವಿಧಾನಸಭೆಯಲ್ಲಿ ತಮ್ಮ ಆಸನವನ್ನು ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತು ಗಮನ ಸೆಳೆದಿದ್ದಾರೆ. ಸಚಿವರಾದ ಕೆ.ಎ. ಸೆಂಗೊಟ್ಟಯ್ಯನ್ ಮತ್ತು ಆಧವ್ ಅರ್ಜುನ ಅವರ ನಡುವೆ ಕುಳಿತ ವಿಜಯ್ ಅವರ ಅಪರೂಪದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಕ್ಯುರಿಟಿ ಗಾರ್ಡ್ ಜತೆ ರಕ್ಷಾ ಬಂಧನ ಹಬ್ಬ ಆಚರಿಸಿದ ಪುಟ್ಟ ಬಾಲಕಿ: ಮುದ್ದಾದ ವಿಡಿಯೊ ವೈರಲ್

ಸೆಕ್ಯುರಿಟಿ ಗಾಎಡ್‌ಗೆ ರಾಖಿ ಕಟ್ಟಿದ ಪುಟ್ಟ ಕಂದಮ್ಮ: ಕ್ಯೂಟ್ ವಿಡಿಯೊ ನೋಡಿ

Raksha Bandhan: ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ ಜೋರಾಗಿದೆ. ತನ್ನ ಅಣ್ಣ,ತಮ್ಮಂದಿರಿಗೆ ರಾಖಿ ಕಟ್ಟಲು ಸಹೋದರಿಯರು ಕಾತುರರಾಗಿದ್ದಾರೆ. ಈ ನಡುವೆ ನವ ದೆಹಲಿಯ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುವ ಬಾಲಕಿ ಭದ್ರತಾ ಸಿಬ್ಬಂದಿ ಜೊತೆ ರಾಖಿ ಹಬ್ಬವನ್ನು ಸಂಭ್ರಮಿಸಿದ್ದಾಳೆ. ತನ್ನ ಕುಟುಂಬ ವನ್ನು ದಿನವಿಡೀ ರಕ್ಷಣೆ ಮಾಡುವ ಭದ್ರತಾ ಸಿಬ್ಬಂದಿಯೊಂದಿಗೆ ಈ ದಿನವನ್ನು ಕಳೆದಿದ್ದಾಳೆ.

ನೇಪಾಳದಲ್ಲಿ ಭೀಕರ ಜಲಪ್ರಳಯ: ನೀರಿನ ಸೆಳೆತಕ್ಕೆ ಪ್ರವಾಹದಲ್ಲಿ ಕೊಚ್ಚಿ ಹೋದ ಆನೆಗಳ ಹಿಂಡು!

ನೇಪಾಳ ಪ್ರವಾಹ: ಕೊಚ್ಚಿ ಹೋಗುತ್ತಿದ್ದ ಆನೆಗಳ ರಕ್ಷಣೆ

Viral News: ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳನ್ನು ಆವರಿಸಿಕೊಂಡಿದೆ. ಈ ಭೀಕರ ಪ್ರವಾಹಕ್ಕೆ ನೇಪಾಳದ ಹಲವು ಗ್ರಾಮಗಳು ಕೊಚ್ಚಿ ಹೋಗಿದ್ದು ಜನವಸತಿ ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲ ಸಮಾಧಿಯಾಗಿವೆ. ಇದೀಗ ನೇಪಾಳದಿಂದ ಕೊಚ್ಚಿಬಂದು ಉತ್ತರ ಪ್ರದೇಶದ ಬಹ್ರೈಚ್‌ ಬಳಿಯ ಧುರೀಣ ನದಿಯಲ್ಲಿ ಪರ ದಾಡುತ್ತಿದ್ದ ಐದು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

ಟಾರ್ಗೆಟ್ ತಲುಪಿಲ್ಲ ಎಂದು 200 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಮ್ಯಾನೇಜರ್: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುವತಿ

ಟಾರ್ಗೆಟ್ ತಲುಪದ ಕಾರಣ ಯುವತಿಗೆ ಬಸ್ಕಿ ತೆಗೆಯುವ ಶಿಕ್ಷೆ ನೀಡಿದ ಮ್ಯಾನೇಜರ್

Viral News: ಖಾಸಗಿ ಕಂಪನಿಯೊಂದರಲ್ಲಿ ಅಮಾನವೀಯವಾಗಿ ನಡೆಸಿಕೊಂಡ ಘಟನೆಯೊಂದು ನಡೆದಿದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಸಾಲ ಒದಗಿಸುವ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ನೀಡಿದ ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎನ್ನುವ ಕಾರಣಕ್ಕೆ ಮ್ಯಾನೇಜರ್‌ ಯುವ ಉದ್ಯೋಗಿಗೆ ಶಿಕ್ಷೆ ನೀಡಿದ್ದು, ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ದೈನಂದಿನ ಕೆಲಸದ ಗುರಿಗಳನ್ನು ತಲುಪಿಲ್ಲ ಎನ್ನುವ ಕಾರಣಕ್ಕೆ 200 ಸ್ಕ್ವಾಟ್‌ (ಬಸ್ಕಿ) ಮಾಡುವ ಶಿಕ್ಷೆಯನ್ನು ಮ್ಯಾನೇಜರ್ ನೀಡಿದ್ದ.

Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

ನೇಪಾಳ ಪ್ರವಾಹ: ಮೃತ ಮಹಿಳೆಯ ಚಿನ್ನದ ಓಲೆ ಕದ್ದ ಖದೀಮರು

Viral Video: ತೀವ್ರ ಪ್ರವಾಹದ ಹೊಡೆತಕ್ಕೆ ಸಿಲುಕಿ ನೇಪಾಳ ತತ್ತರಿಸಿದ್ದು, ಈ ಮಧ್ಯೆ ನಡೆದ ಅಮಾನುಷ ಘಟನೆ ನೆಟ್ಟಿಗರನ್ನು ಕಂಗಾಲಾಗುವಂತೆ ಮಾಡಿದೆ. ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯ ಮೃತದೇಹದಿಂದ ಚಿನ್ನದ ಓಲೆಯನ್ನು ಕಳವು ಮಾಡುವ ದೃಶ್ಯವೊಂದು ವೈರಲ್ ಆಗಿದೆ. ಈ ಸ್ಥಿತಿಯಲ್ಲೂ ಕಟುಕರ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಪಾಳದಲ್ಲಿ ದಿಢೀರ್ ಪ್ರವಾಹ: ಹೆಲಿಕಾಪ್ಟರ್ ಮೂಲಕ ಯುವಕನ ಪ್ರಾಣ ಉಳಿಸಿದ ಯೋಧರು; ರೋಚಕ ಕಾರ್ಯಾಚರಣೆಯ ವಿಡಿಯೊ ಇಲ್ಲಿದೆ

ನೇಪಾಳ ಪ್ರವಾಹ: ಯುವಕನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ಯೋಧ

Nepal Floods: ನೇಪಾಳದ ಭೋಟೆ ಕೋಶಿ ನದಿಯ ತೀರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದ ಮಧ್ಯೆ ಸಿಲುಕಿಕೊಂಡ ಯುವಕನೊಬ್ಬನನ್ನು ಹೆಲಿಕಾಪ್ಟರ್ ಮೂಲಕ ಯೋಧರೊಬ್ಬರು ರಕ್ಷಿಸಿದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಒಂದು ಮಗು ತೋಳಿನಲ್ಲಿ, ಮತ್ತೊಂದು ಮಗು ಕೈಯಲ್ಲಿ; ಇಬ್ಬರು ಮಕ್ಕಳೊಂದಿಗೆ ಜನಗಣತಿ ಕರ್ತವ್ಯ ನಿರ್ವಹಿಸುವ ಶಿಕ್ಷಕಿಯ ವಿಡಿಯೊ ವೈರಲ್‌

ಪುಟ್ಟ ಮಕ್ಕಳೊಂದಿಗೆ ಗಣತಿ ಕರ್ತವ್ಯಕ್ಕೆ ಹಾಜರಾದ ಶಿಕ್ಷಕಿ: ವಿಡಿಯೊ ವೈರಲ್

Viral Video: ಅಸ್ಸಾಂನ ಶಾಲಾ ಶಿಕ್ಷಕಿಯೊಬ್ಬರು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಜನಗಣತಿ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ವಿಡಿಯೊದಲ್ಲಿ ಮಕ್ಕಳು ತಮ್ಮ ತಾಯಿ ಕ್ಷೇತ್ರ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅವರೊಂದಿಗೆ ತೆರಳುವುದನ್ನು ತೋರಿಸುತ್ತದೆ.

ಉದ್ಯಾವನದಲ್ಲಿ ಆಮೆಯ ಮೇಲೆ ನಿಂತು ವಿಕೃತಿ ಮೆರೆದ ಮಹಿಳೆ: ಹುಚ್ಚಾಟದ ವಿಡಿಯೊ ವೈರಲ್‌

ಪಾರ್ಕ್‌ನಲ್ಲಿ ಆಮೆಯ ಮೇಲೆ ನಿಂತು ವಿಕೃತಿ ಮೆರೆದ ಮಹಿಳೆ

Viral News: ಇತರ ಜೀವಿಗಳ ಬಗ್ಗೆ ಗಮನ ಕೊಡದೆ ತಮಗೆ ಬೇಕಾದಂತೆ ವರ್ತಿಸುವ ಘಟನೆಗಳು ಆಗಾಗ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರವಾಸಿ ತಾಣವೊಂದರಲ್ಲಿ ಮಹಿಳೆಯೊಬ್ಬಳು ಜೀವಂತ ಆಮೆಯ ಬೆನ್ನಿನ ಮೇಲೆ ನಿಂತು ವಿಕೃತಿ ಮೆರೆದಿದ್ದಾಳೆ. ಅದಕ್ಕೂ ನೋವಾಗುತ್ತದೆ ಎಂದು ಒಂಚೂರು ಮರುಕಪಟ್ಟಿಲ್ಲ. ಈ ಘಟನೆ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಭಾರಿ ಮಳೆಗೆ ಗುರುಗ್ರಾಮದ ರಸ್ತೆ ಮಧ್ಯೆ ಬೃಹತ್‌ ಹೊಂಡ ಸೃಷ್ಟಿ; ಕಳಪೆ  ಕಾಮಗಾರಿಗೆ ಸ್ಥಳೀಯರು ಕಿಡಿ

ಗುರುಗ್ರಾಮದಲ್ಲಿ ಕುಸಿದ ರಸ್ತೆ: ಬೃಹತ್ ಗುಂಡಿ ಕಂಡು ಸ್ಥಳೀಯರ ಆತಂಕ

Viral Video: ದೆಹಲಿ-ಗುರುಗ್ರಾಮ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನ ವಾಹನಗಳು ಕೆಟ್ಟಿವೆ. ಕಚೇರಿಯಿಂದ ಮನೆಗೆ ಹೊರಟ ಉದ್ಯೋಗಿಗಳು, ಮಕ್ಕಳು ಹೆದ್ದಾರಿಯಲ್ಲೇ ಸಿಲುಕಿಕೊಂಡು ಪರದಾಡುವಂತಾಯಿತು. ರಸ್ತೆ ಮೇಲೆ ಗಂಟೆ ಗಟ್ಟಲೆ ಸಿಲುಕಿ ಜನ ಹೈರಾಣರಾಗಿದ್ದಾರೆ. ಇದೀಗ ಪ್ರಸಿದ್ಧ ಇಫ್ಕೋ ಚೌಕ್ ರಸ್ತೆಯ ಬಳಿ ಭಾರೀ ಮಳೆಯ ನಂತರ ಬೃಹತ್ ಗಾತ್ರದ ಗುಂಡಿಯೊಂದು ಕಾಣಿಸಿಕೊಂಡಿದೆ.

ಮಧ್ಯ ರಸ್ತೆಯಲ್ಲೇ ಕಾರು ನಿಲ್ಲಿಸಿ ಗಾಢ ನಿದ್ದೆಗೆ ಜಾರಿದ ʼಕುಂಭಕರ್ಣʼ: ಎಚ್ಚರಿಸಲು ಹರಸಾಹಸ ಪಟ್ಟ ಸ್ಥಳೀಯರು

ರಸ್ತೆ ಮಧ್ಯೆ ನಿದ್ರೆಗೆ ಜಾರಿದ ಚಾಲಕ: ಕುಂಭ ಕರ್ಣನಿಗೆ ಹೋಲಿಸಿದ ನೆಟ್ಟಿಗರು

Viral News: ಇಲ್ಲೊಬ್ಬ ಚಾಲಕ ನಿದ್ದೆ ಬಂದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಇದು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಜನರು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆತ ಎಷ್ಟು ಗಾಢ ನಿದ್ದೆಗೆ ಜಾರಿದ್ದಾನೆ ಎಂದರೆ ಜನರು ಕೂಗಿದರೂ ಎಚ್ಚರಗೊಂಡಿಲ್ಲ. ಕೇರಳಂನ ಕೋಟಯಂ ಜಿಲ್ಲೆಯ ಅತಿರಂಪುಳ ಪಲ್ಲಿ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.‌ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದ್ದು ಭಾರೀ ವೈರಲ್ ಆಗಿದೆ.

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿ ವಿಕೃತಿ ಮೆರೆದ ಪಾಪಿ: ಹುಚ್ಚಾಟದ ವಿಡಿಯೊ ವೈರಲ್‌

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿದ ಪಾಪಿ

Viral News: ಇಲ್ಲೊಬ್ಬ ವ್ಯಕ್ತಿ ವೈರಲ್ ಆಗುವ ಉದ್ದೇಶದಿಂದ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಜೀವಂತವಾಗಿ ಸೈಕಲ್‌ಗೆ ಕಟ್ಟಿ ರೀಲ್ಸ್‌ ಮಾಡಿದ್ದಾನೆ. ನಂತರ ಅದು ಮೃತಪಟ್ಟ ಬಳಿಕ ಮತ್ತೊಂದು ವಿಡಿಯೊ ಮಾಡಿದ್ದಾನೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕರ ಇನ್ನೋವಾ ಕಾರ್‌ ತೊಳೆದ ಅಗ್ನಿಶಾಮಕ ದಳ ಸಿಬ್ಬಂದಿ: ವಿಡಿಯೊ ವೈರಲ್, ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಶಾಸಕರ ಇನ್ನೋವಾ ಕಾರ್‌ ತೊಳೆದ ಅಗ್ನಿಶಾಮಕ ದಳ

MLA's Innova Washed by Fire Department: ಮಧ್ಯ ಪ್ರದೇಶದ ಬಿಜೆಪಿ ಶಾಸಕ ರಾಮ್ನಿವಾಸ್ ಶಾ ಅವರ ಟೊಯೋಟಾ ಇನ್ನೋವಾ ಕಾರನ್ನು ತೊಳೆಯಲು ಅಗ್ನಿಶಾಮಕ ದಳದ ವಾಹನ ಬಳಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜತೆಗೆ ಇದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ: ಟ್ರಾಫಿಕ್‌ ಕಿರಿಕಿರಿಯಿಂದ ವಾಹನ ಸಿಗದೆ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

ಗುರುಗ್ರಾಮದಲ್ಲಿ ವಾಹನ ಸಿಗದೆ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

Viral News: ಐಷಾರಾಮಿ ವಸತಿ ಕೇಂದ್ರ ಹರಿಯಾಣದ ಗುರುಗ್ರಾಮದಲ್ಲಿ ತೀವ್ರ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕಚೇರಿಯಿಂದ ಮನೆಗೆ ಹಿಂತಿರುಗಲು ವಾಹನ ಸಿಗದೆ ಉದ್ಯೋಗಿಗಳು ಪರದಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳು ರಸ್ತೆ ಮಧ್ಯೆ ಗಂಟೆಗಟ್ಟಲೆ ಸಿಲುಕಿಕೊಂಡವು. ಈ ನಡುವೆ ಯುವತಿಯೊಬ್ಬಳು ಸಂಚಾರ ದಟ್ಟಣೆಯಿಂದಾಗಿ 8 ಕಿ.ಮೀ. ದೂರವನ್ನು ಬರೋಬ್ಬರಿ 2.5 ಗಂಟೆಗಳ ಕಾಲ ನಡೆದೇ ಮನೆ ತಲುಪಿದ ವಿಡಿಯೊವೊಂದು ವೈರಲ್ ಆಗಿದೆ.

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಟ್ರಾಫಿಕ್ ಜಾಮ್: ಕ್ಯಾಬ್‌ ರೂಫ್‌ನಲ್ಲಿ ಕುಳಿತು ಕೆಲಸ ಮಾಡಿದ ಉದ್ಯೋಗಿ

ಗುರುಗ್ರಾಮದಲ್ಲಿ ಕ್ಯಾಬ್‌ ರೂಫ್‌ನಲ್ಲಿ ಕುಳಿತು ಕೆಲಸ ಮಾಡಿದ ಉದ್ಯೋಗಿ

Viral Video: ಹರಿಯಾಣದ ಗುರುಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವಸ್ತ್ಯವಾಗಿದೆ. ನೀರಿನ ಮಧ್ಯೆಯೇ ವಾಹನಗಳೆಲ್ಲ ಸ್ಥಗಿತಗೊಂಡವು. ಈ ವೇಳೆ ಕಾರೊಂದು ಕೆಟ್ಟು ಹೋದಾಗ ಉದ್ಯೋಗಿಯೊಬ್ಬರು ಟ್ಯಾಕ್ಸಿಯ ಛಾವಣಿಯನ್ನೇ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಕಚೇರಿಗೆ ತಲುಪಲು ಸಾಧ್ಯವಿಲ್ಲವೆಂದು ಅರಿತ ಆತ, ತಕ್ಷಣವೇ ಅಲ್ಲಿಂದಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.

Viral Video: ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್‌ ಕೂಡ ಮಾಡಬಹುದು

ಬ್ಯಾಂಕಾಕ್ ಟ್ಯಾಕ್ಸಿಯಲ್ಲಿದೆ ಪ್ರಯಾಣಿಕರಿಗೆ ಬೇಕಾದ ವಿಶೇಷ ಸೌಲಭ್ಯ; ಏನದು?

Viral News: ಬ್ಯಾಂಕಾಕ್‌ನ ಟ್ಯಾಕ್ಸಿ ಸೌಲಭ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ ಪ್ರಯಾಣಕ್ಕಾಗಿ ಇದು ಖ್ಯಾತಿ ಪಡೆದಿದ್ದಲ್ಲ. ಬದಲಾಗಿ ಸಣ್ಣ ಮಿನಿ ಮಾರ್ಟ್ ರೀತಿಯಲ್ಲೇ ದಿನನಿತ್ಯದ ಅಗತ್ಯ ವಸ್ತು ಇದರಲ್ಲಿದೆ. ವಿಶೇಷವೆಂದರೆ ಪ್ರಯಾಣಿಕರು ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದು.

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಆಭರಣ ನಾಪತ್ತೆ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿದ್ದ ಕಳ್ಳನನ್ನು ನೋಡಿ ಹೌಹಾರಿದ ಅಧಿಕಾರಿಗಳು

ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರ ಆಭರಣ ನಾಪತ್ತೆ; ಕಳ್ಳ ಯಾರು ಗೊತ್ತೆ?

Jewellery Missing from Patient: ಸರ್ಕಾರಿ ಆಸ್ಪತ್ರೆಯಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿ ತಂದಿದೆ. ಯಾಕೆಂದರೆ ಆ ಆಭರಣಗಳನ್ನು ಕದ್ದಿದ್ದು ಯಾವುದೇ ಕಳ್ಳನಲ್ಲ, ಬದಲಿಗೆ ಶ್ವಾನ! ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಭಾರತದಲ್ಲಿ ರಣ ಭೀಕರ ಮಳೆ; ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ: ರಸ್ತೆಯಲ್ಲೇ ಗಂಟೆಗಟ್ಟಲೆ ಪರದಾಡಿದ ಶಾಲಾ ಮಕ್ಕಳು

ಗುರುಗ್ರಾಮದಲ್ಲಿ ಭಾರಿ ಮಳೆ: ರಸ್ತೆಯಲ್ಲೇ ಸಿಲುಕಿದ ಶಾಲಾ ಮಕ್ಕಳು

Viral News: ಐಷಾರಾಮಿ ವಸತಿ ಕೇಂದ್ರವಾದ ಹರಿಯಾಣದ ಗುರುಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ತೀವ್ರವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳೇ ಜಲವೃತಗೊಂಡಿವೆ. ರಸ್ತೆಯಲ್ಲಿಯೇ ವಾಹನಗಳು ಸಿಲುಕಿದ್ದು ಉದ್ಯೋಗಿಗಳು, ಶಾಲಾ ಮಕ್ಕಳು ಗಂಟೆಗಟ್ಟಲೆ ಪರದಾಡಿದ್ದಾರೆ. ನೀರು ಹೆಚ್ಚಾದ ಕಾರಣ ಚಾಲಕರು ಮತ್ತು ಅಟೆಂಡರ್‌ಗಳು ಬಸ್ ಮೇಲೇರಿ ಕುಳಿತುಕೊಂಡಿರುವ ದೃಶ್ಯ ವೈರಲ್‌ ಆಗಿದೆ.

Loading...