ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ʼʼಭಾರತ ಎಂದರೆ ಇದುʼʼ: ಗ್ರಾಮೀಣ ಭಾರತದ ವಿಶೇಷ ಆತಿಥ್ಯಕ್ಕೆ ಮನಸೋತ ನೆದರ್‌ಲ್ಯಾಂಡ್ಸ್‌ ಮಹಿಳೆ; ವಿಡಿಯೊ ನೋಡಿ

ಅಸ್ಸಾಂ ಹಳ್ಳಿಗರ ಪ್ರೀತಿ ಕಂಡು ಬೆರಗಾದ ವಿದೇಶಿ ಮಹಿಳೆ ಹೇಳಿದ್ದೇನು?

Viral Video: ನೆದರ್‌ಲ್ಯಾಂಡ್ಸ್‌ನಿಂದ ಒಬ್ಬಂಟಿಯಾಗಿ ಆಗಮಿಸಿದ ವಿದೇಶಿ ಮಹಿಳೆಯೊಬ್ಬರು ಭಾರತದ ಆತಿಥ್ಯವನ್ನು ಕೊಂಡಾಡಿದ್ದಾರೆ. ಅಸ್ಸಾಂನ ಹಳ್ಳಿಯಲ್ಲಿ ಜನರು ನೀಡಿದ ಔದಾರ್ಯದ ಕ್ಷಣವನ್ನು ಅವರು ಹಂಚಿಕೊಂಡಿದ್ದು, ತನ್ನ ಪರಿಚಯವೇ ಇಲ್ಲದೆ ಇದ್ದರೂ ಮನೆಯವರಂತೆ ಸತ್ಕರಿಸಿದ್ದಾರೆ ಎಂದು ಭಾವುಕರಾಗಿದ್ದಾರೆ.

ತಾಳಿ ಕಟ್ಟುವ ಶುಭವೇಳೆ ಹೈಡ್ರಾಮಾ: ಗಂಡನ 2ನೇ ಮದುವೆಗೆ ಆಗಮಿಸಿದ ಮೊದಲ ಪತ್ನಿ; ಮುಂದೆ ನಡೆದಿದ್ದು ಯಾರೂ ಊಹಿಸದ ಘಟನೆ

2ನೇ ಮದುವೆ ಆಗಲು ಸಿದ್ದತೆಯಲ್ಲಿದ್ದ ಪತಿಗೆ ಬಿಗ್ ಶಾಕ್ ಕೊಟ್ಟ ಮೊದಲನೇ ಪತ್ನಿ

Viral Video: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಭಾರಿ ಸುದ್ದಿಯಲ್ಲಿದೆ. ತನ್ನ ಪತಿಗೆ ಎರಡನೇ ಮದುವೆಯಾಗುತ್ತಿದೆ ಎಂದು ತಿಳಿದ ಪತ್ನಿ ಪೊಲೀಸರೊಂದಿಗೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ನೀಡಿ ವಧು- ವರ ಇಬ್ಬರಿಗೂ ಅಚ್ಚರಿ ಮೂಡಿಸಿದ್ದಾಳೆ.

ಕುಡಿತದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ: ಕಾನ್‌ಸ್ಟೆಬಲ್ ಲಾಠಿ ಕಸಿದು ಥಳಿಸಿದ ವ್ಯಕ್ತಿ!

ಲಾಠಿ ಕಸಿದು ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ ಕುಡುಕ: ವಿಡಿಯೊ ವೈರಲ್

Viral Video: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೈಲಿದ್ದ ಲಾಠಿಯನ್ನೇ ಕಸಿದುಕೊಂಡು ಮನ ಬಂದಂತೆ ಥಳಿಸಿರುವ ಘಟನೆಯೊಂದು ಕಂಡು ಬಂದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಖಡಕ್‌ಪಾಡಾ ಪೊಲೀಸರು ಬಂಧಿಸಿದ್ದಾರೆ.

ಉದ್ಘಾಟನೆಯಾಗಿ 12 ದಿನಕ್ಕೆ ಬಿರುಕು ಬಿಟ್ಟ 4,200 ಕೋಟಿ ರೂ. ವೆಚ್ಚದ ಎಕ್ಸ್‌ಪ್ರೆಸ್‌ವೇ ; ಯೋಗಿ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ

ಉದ್ಘಾಟನೆಯಾಗಿ 12 ದಿನಕ್ಕೆ ಬಿರುಕು ಬಿಟ್ಟ ಎಕ್ಸ್‌ಪ್ರೆಸ್‌ವೇ

ಉತ್ತರ ಪ್ರದೇಶದ ಲಕ್ನೋ-ಕಾನ್ಪುರ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿ ಎರಡು ವಾರ ಕಳೆಯುವ ಮೊದಲೇ ಬಿರುಕು ಬಿಟ್ಟಿದೆ ಎಂದು ತಿಳಿದು ಬಂದಿದೆ. ಮಳೆಯಿಂದಾಗಿ ಎಕ್ಸ್‌ಪ್ರೆಸ್‌ವೇಯ ಒಂದು ಭಾಗದಲ್ಲಿ ಈಗ ಬಿರುಕುಗಳು ಕಾಣಿಸಿಕೊಂಡಿದ್ದು, ನಿರ್ಮಾಣದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ ಆಯೋಜಿಸಿದ ಕಾಕ್ರೋಚ್ ಜನತಾ ಪಾರ್ಟಿ!

ಶಿಕ್ಷಣ ಸಚಿವ ರಾಜೀನಾಮೆ! CJPಯ ದುಬಾರಿ ಪಾರ್ಟಿಗೆ ಭಾರಿ ಆಕ್ರೋಶ!

Viral Video: NEET ಪರೀಕ್ಷೆಯ ಪತ್ರಿಕೆ ಸೋರಿಕೆ ವಿವಾದ ಬೆನ್ನಲ್ಲೇ ದೇಶದೆಲ್ಲೆಡೆ ಪ್ರತಿಭಟನೆ ಕಿಚ್ಚು ಹರಡಿತ್ತು. ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರ ಮುಖ್ಯ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಾಗಿತ್ತು. ಇದೀಗ ಪ್ರಮುಖ ಬೇಡಿಕೆಯಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಯನ್ನು ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಹೋಟೆಲ್‌ ಒಂದರಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರು ವಿಜಯೋತ್ಸವ ಆಚರಿಸುತ್ತಿರುವ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ..

ʼʼಅಮ್ಮಾ ಏಳಮ್ಮʼʼ: ಮೃತ ತಾಯಿ ಆನೆಯನ್ನು ಎಬ್ಬಿಸಲು ಮರಿಯಾನೆಯ ಪ್ರಯತ್ನ; ಕೊಡಗಿನಲ್ಲೊಂದು ಹೃದಯ ವಿದ್ರಾವಕ ಘಟನೆ

ಮೃತ ತಾಯಿ ಆನೆಯನ್ನು ಎಬ್ಬಿಸಲು ಮರಿಯಾನೆಯ ಪ್ರಯತ್ನ; ವಿಡಿಯೊ ವೈರಲ್‌

Viral Video: ಕೊಡಗು ಜಿಲ್ಲೆಯ ಅಮ್ಮತಿ ಸಮೀಪದ ಆನಂದಪುರದ ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ತಾಯಿ ಆನೆಯೊಂದು ಮೃತಪಟ್ಟಿದ್ದು, ಮರಿಯಾನೆ ಅದನ್ನು ಎಬ್ಬಿಸಲು ಯತ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಆನೆ ಮರಿಯ ಗೋಳಾಟವು ಇದೀಗ ಪ್ರಾಣಿಪ್ರಿಯರ ಹೃದಯ ತಟ್ಟಿದೆ.

ಕುಟ್ಟಿಪುರಂ ಬಳಿ ಖಾಸಗಿ ಬಸ್ ಅಪಘಾತ: ಓರ್ವ ಸಾವು, 26 ಮಂದಿಗೆ ಗಾಯ!

ಕೇರಳದಲ್ಲಿ ಖಾಸಗಿ ಬಸ್ ಅಪಘಾತ: ಓರ್ವ ಸಾವು, 26 ಮಂದಿಗೆ ಗಾಯ!

Viral Video: ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ‌. ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಹಲವಾರು ವಾಹನ ಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು 26 ಮಂದಿ ಗಾಯಗೊಂಡಿದ್ದಾರೆ‌.

ʼʼಇಂತಹ ಸೌಲಭ್ಯ ಯುರೋಪ್‌ನಲ್ಲೂ ಇಲ್ಲʼʼ: ಭಾರತದ 438 ರುಪಾಯಿ ಏಸಿ ಸ್ಲೀಪರ್ ಬಸ್‌ಗೆ ಬ್ರಿಟನ್ ಯುವಕ ಫಿದಾ; ವಿಡಿಯೊ ವೈರಲ್

ಭಾರತದ ಸ್ಲೀಪರ್ ಬಸ್‌ನ ಗುಣಮಟ್ಟ ಕಂಡು ವಿದೇಶಿ ಪ್ರವಾಸಿಗ ಫಿದಾ

Viral Video: ದೆಹಲಿಯಿಂದ ಜೈಪುರಕ್ಕೆ ಏಳು ಗಂಟೆ ಕಾಲ ಸ್ಲೀಪರ್ ಏಸಿ ಬಸ್‌ನಲ್ಲಿ ಪ್ರಯಾಣಿಸಿದ ವಿದೇಶಿ ಪ್ರವಾಸಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಈ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಈ ಸ್ಲೀಪರ್ ಬಸ್‌ ಯುರೋಪಿನ ಸಾರಿಗೆ ವ್ಯವಸ್ಥೆಯನ್ನೇ ಮೀರಿಸುತ್ತಿದೆ. ಇದು ಭಾರತದ ಅತ್ಯುತ್ತಮ ಸಾರಿಗೆ ಅನುಭವಗಳಲ್ಲಿ ಒಂದು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.

ಅಮೆರಿಕದಲ್ಲಿ ಬಿಂದಿ ಧರಿಸಿದ್ದಕ್ಕಾಗಿ ಭಾರತೀಯ ಮೂಲದ ವೈದ್ಯೆಗೆ ಜನಾಂಗೀಯ ನಿಂದನೆ: ವಿಡಿಯೊ ಮೂಲಕ ತಿರುಗೇಟು ನೀಡಿದ ಮಹಿಳೆ

ಬಿಂದಿ ಧರಿಸಿದ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯೆಗೆ ನಿಂದನೆ

Viral Video: ಬಿಂದಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲಕ ವೈದ್ಯೆಗೆ ನಿಂದಿಸಿರುವ ಘಟನೆ ನಡೆದಿದೆ. ಈ ವೈದ್ಯೆ ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರೂ ಭಾರತೀಯ ವಿರೋಧಿ ನಡೆಯನ್ನು ಕಂಡು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ. ಬಿಂದಿ ಧರಿಸಿದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡೀಗೆಡಿಗಳು 'ಗೋ ಬ್ಯಾಕ್ ಟು ಇಂಡಿಯಾ' ಎಂಬ ನಿಂದನೆಯ ಪದ ಬಳಸಿದ್ದಾರೆ.

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಕಪಾಳಮೋಕ್ಷ ಮಾಡಿದ ಚಾಲಕ; ವಿಡಿಯೊ ವೈರಲ್‌

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಪಾಠ ಕಲಿಸಿದ ಬಸ್‌ ಚಾಲಕ

Viral News: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನಲ್ಲಿ ಮಹಿಳೆ ಜತೆ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ‌. ಬಸ್ ಚಾಲಕನಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಆತನಿಗೆ ಕಪಾಳಮೋಕ್ಷ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಜೆಪಿ ಪ್ರತಿಭಟನಾಕಾರರು ಗಲಾಟೆ ಮಾಡುತ್ತಿದ್ದರೂ ತಾಳ್ಮೆಯಿಂದ ನಿಂತ ಮಾಧ್ಯಮ ಪ್ರತಿನಿಧಿ; ವಿಡಿಯೊ ವೈರಲ್‌ ಆಗುತ್ತಿದ್ದಂತೆ ಕ್ಷಮೆ ಕೋರಿದ ಹೋರಾಟಗಾರರು

ಪ್ರತಿಭಟನಾಕಾರ ಗಲಾಟೆ ನಡುವೆ ತಾಳ್ಮೆಯಿಂದ ನಿಂತ ಮಾಧ್ಯಮ ಪ್ರತಿನಿಧಿ

CJP: ಮಹಾರಾಷ್ಟ್ರದ ಮುಂಬೈಯಲ್ಲಿ ನಡೆಯುತ್ತಿದ್ದ ಕಾಕ್ರೋಚ್‌ ಜನತಾ ಪಾರ್ಟಿಯ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಅವಮಾನ ಮಾಡಿದ ವೈರಲ್‌ ಆಗುತ್ತಿದ್ದಂತೆ ಭಾರಿ ಆಕ್ರೋಸ ವ್ಯಕ್ತವಾಗಿದೆ. ಇದೀಗ ಪ್ರತಿಭಟನಾಕಾರರು ವರದಿಗಾರರ ಬಳಿ ಕ್ಷಮೆ ಕೋರಿದ್ದಾರೆ.

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌ ; ವಿಡಿಯೋ ನೋಡಿ

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌

Viral Video: ಕೇರಳದ ಕಾಲೇಜಿನ ವಿದ್ಯಾರ್ಥಿಗಳು ತಮ್ಮನ್ನು ಕೇರ್ ಟೇಕರ್ ಮಾಡುತ್ತಿದ್ದ ವಾಚ್ ಮ್ಯಾನ್ ಗೆ ನೆನಪಿನಲ್ಲಿ ಉಳಿಯುವಂತಹ ಸುಂದರ ಗಿಫ್ಟ್ ವೊಂದನ್ನು ನೀಡುವ ಮೂಲಕ ಅವರನ್ನು ಭಾವಕರನ್ನಾಗಿಸಿದ್ದಾರೆ. ವಿದ್ಯಾರ್ಥಿಗಳು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಕಾಲೇಜು ಕೇರ್‌ ಟೇಕರ್‌ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸುರಕ್ಷತೆ ಎಲ್ಲಿದೆ? ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದ ಫಸ್ಟ್ ಕ್ಲಾಸ್ ಎಸಿ ರೈಲಿಗೆ ನುಗ್ಗಿ ಪ್ರಯಾಣಿಕರ 1.10 ಲಕ್ಷ ದೋಚಿದ ಕಳ್ಳರು!

ಎಸಿ ಕೋಚ್ ಗೆ ನುಗ್ಗಿ ಹಣ ದೋಚಿದ ಕಳ್ಳರು: ಸುರಕ್ಷತೆ ಬಗ್ಗೆ ಕಿಡಿ

Viral News: ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬವೊಂದರ ಲಗೇಜ್ ಕಳ್ಳತನವಾಗಿದ್ದು 1,10,000 ರೂ. ನಗದನ್ನು ಕಳ್ಳತನ ಮಾಡಲಾಗಿದೆ. ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಮುಖ್ಯ ಉದ್ದೇಶ ಸುರಕ್ಷತೆ, ಆದರೆ ಇಲ್ಲೂ ಹೀಗಾಗಿದೆ ಎಂದು ಪ್ರಯಾಣಿಕರೊಬ್ಬರು ಪೋಸ್ಟ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಇದು ಕೇವಲ ಆರಂಭ.. ಸಿಜೆಪಿ ಇನ್ನೂ ಬಹಳ ದೂರ ಸಾಗಬೇಕಿದೆ: ಪ್ರತಿಭಟನೆ ಕೊನೆಗೊಂಡ ಬಳಿಕ ಮೊದಲ ವಿಡಿಯೋ ಸಂದೇಶ ಹಂಚಿಕೊಂಡ ಅಭಿಜೀತ್ ದಿಪ್ಕೆ

ಪ್ರತಿಭಟನೆ ಮುಕ್ತಾಯದ ಬಳಿಕ ಅಭಿಜೀತ್ ದಿಪ್ಕೆ ಹೇಳಿದ್ದೇನು?

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಕಳೆದ 37 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಕೊನೆಗೊಂಡಿದ್ದು, ಇದರ ಬಳಿಕ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಬೆಂಬಲಿಗರಿಗೆ ಧನ್ಯವಾದ ಹೇಳಿದ್ದು, ಕೇಂದ್ರ ಸರ್ಕಾರದ ಭರವಸೆಯ ಕಾರಣದಿಂದ ಅಂತಿಮವಾಗಿ ತನಗೆ ಈಗ ವಿಶ್ರಾಂತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ನಡು-ರಸ್ತೆಯಲ್ಲಿಯೇ ಮಹಿಳೆಯನ್ನು ಇಳಿಸಿ ಅವಾಚ್ಯ ಪದಗಳಿಂದ ನಿಂದಿಸಿದ Rapido ಚಾಲಕ! ದೂರಿನ ಬೆನ್ನಲ್ಲೇ ಡ್ರೈವರ್‌ ಅಮಾನತು

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ Rapido ಚಾಲಕ: ವರ್ತನೆ ವಿರುದ್ಧ ಕಿಡಿ!

Viral News: Rapido ಚಾಲಕೊಬ್ಬ ಮಹಿಳೆಯ ಜೊತೆ ಉದ್ಧಟತನ ಮೆರೆದಿದ್ದು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾನೆ. ಜಾನ್ವಿ ಚೌಧರಿ ಎಂದು ಗುರುತಿಸಲ್ಪಟ್ಟ ಮಹಿಳೆ, ಸವಾರಿಯ ಸಮಯದಲ್ಲಿ ಏನಾಯಿತು ಎಂದು ವಿವರಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಚಾಲಕನು ಆ್ಯಪ್‌ನ ನಕ್ಷೆಯಲ್ಲಿ ತೋರಿಸಿದ ಮಾರ್ಗದಲ್ಲಿ ಹೋಗಲು ನಿರಾಕರಿಸಿದ್ದು ನಿರ್ಜನ ಪ್ರದೇಶದಲ್ಲಿ ತನ್ನನ್ನು ಕರೆದೊಯ್ದಿದ್ದಾನೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ. ದೂರಿನ ಬಳಿಕ ಇದೀಗ ರ‍್ಯಾಪಿಡೊ ಚಾಲಕನನ್ನು ಅಮಾನತುಗೊಳಿಸಿದೆ.

SBI ಬ್ರಾಂಚ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕರುಣಾನಿಧಿ ಮೊಮ್ಮಗಳು; ವಿಡಿಯೋ ವೈರಲ್‌

SBI ಬ್ರಾಂಚ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕರುಣಾನಿಧಿ ಮೊಮ್ಮಗಳು

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗಳು ಕಾಯಲ್ವಿಳಿ, ಲಿಫ್ಟ್ ಅಸಮರ್ಪಕ ಕಾರ್ಯದ ಬಗ್ಗೆ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ವ್ಯವಸ್ಥಾಪಕರಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿ ಹೋರಾಟದ ವೇಳೆ ಸಿಯಾ ಗೋಯಲ್‌ಗೇನು ಕೆಲಸ? ಪುಣೆ ಪ್ರತಿಭಟನೆಯಲ್ಲಿ ಹಂತಕಿ ಪೋಸ್ಟರ್‌ ಹಿಡಿದು ಧರ್ಮೇಂದ್ರ ಪ್ರಧಾನ್‌ಗೆ ಬೆದರಿಕೆ ಹಾಕಿ ಉದ್ಧಟತನ

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಿಯಾ ಗೋಯಲ್ ಪೋಸ್ಟರ್‌ ವೈರಲ್

Viral Vidro: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಿಯಾ ಗೋಯಲ್ ಹೆಸರಿನ ವ್ಯಂಗ್ಯಾತ್ಮಕ ಪೋಸ್ಟರ್‌ ವೈರಲ್ ಆಗಿದೆ. ಪರೀಕ್ಷಾ ಅಕ್ರಮ, ಶಿಕ್ಷಣ ಸುಧಾರಣೆ ಹಾಗೂ ನಿರುದ್ಯೋಗದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾವಿ ಪತಿ ಹಂತಕಿಯ ಫೋಟೊ ಗಮನ ಸೆಳೆಯಿತು.

ಉಚಿತ ಟ್ಯೂಷನ್ ನೀಡುವುದಾಗಿ ಹೇಳಿ ಲೈಂಗಿಕ ಕಿರುಕುಳ: ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು

ಮೊಟ್ಟೆಯಿಂದ ಹೊಡೆದು ಶೂ ಹಾರ ಹಾಕಿ ಉಪನ್ಯಾಸಕನ ಮೆರವಣಿಗೆ

ವಿದ್ಯಾರ್ಥಿನಿಯೊಬ್ಬಳಿಗೆ ಉಚಿತ ಟ್ಯೂಷನ್ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಗೋಬರ್ದಂಗ ಹಿಂದೂ ಕಾಲೇಜಿನ ಅತಿಥಿ ಉಪನ್ಯಾಸಕನ ವಿರುದ್ಧ ಗೋಬರ್ದಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಂಧಿಸಲಾಗಿದೆ.

Nelamangala News: ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ಕ್ಯಾಮೆರಾ ನೋಡ್ತಿದ್ದಂಗೆ ಕಾಲ್ಕಿತ್ತ ಅಧಿಕಾರಿಗಳು! Watch Video

ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ವಿಡಿಯೊ ವೈರಲ್!

ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಸಿದ್ದರಬೆಟ್ಟದಲ್ಲಿ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ತೋಡಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳೀಯರು ವಿಡಿಯೊ ಮಾಡುತ್ತಿದ್ದಂತೆ ಸ್ಥಳದಿಂದ ಅಧಿಕಾರಿಗಳು ಪರಾರಿಯಾಗಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕ ಕಾರಣವಾಗಿದೆ.

ಅಭಿಜಿತ್ ದೀಪ್ಕೆಗೆ ಟೈಫಾಯ್ಡ್; ಸಿಜೆಪಿ ನೇತೃತ್ವದ ಪ್ರತಿಭಟನೆ ಮುಂದುವರಿಯುವುದೇ?

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಟೈಫಾಯ್ಡ್ ಪತ್ತೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ. ಇದು ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿರುವ ಅವರು ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಒಂದೇ ಯುವಕನ ಜೊತೆ ಮದುವೆಯಾದ ಮೂವರು ಸಹೋದರಿಯರು! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಒಬ್ಬನೇ ಯುವಕನನ್ನು ವರಿಸಿದ ಮೂವರು ಸೋದರಿಯರು! ಕಾರಣವೇನು ಗೊತ್ತಾ?

Viral Video: ಈ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಚರ್ಚೆಗೆ ಒಳಪಟ್ಟ ವಿಚಾರವಾಗಿದೆ. ಅಪ್ರಾಪ್ತ ಯುವಕನನ್ನು ವರಿಸಿದ ಮಹಿಳೆ, ವೃದ್ದನನ್ನು ಪ್ರೀತಿಸಿದ ಯುವತಿ ಹೀಗೆ ಇಂತಹ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು ಮೂವರು ಸ್ವಂತ ಅಕ್ಕ-ತಂಗಿಯರು ಒಬ್ಬ ಯುವಕನನ್ನೇ ಮದುವೆಯಾಗಿದ್ದಾರೆ. ಒಬ್ಬರಿಗೊಬ್ಬರು ದೂರವಾಗಿ ಇರಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ಹೆಜ್ಜೆ ಇಟ್ಟಿದ್ದಾರೆ.

ಮಳೆ ಬರ್ತಿದೆ ವರ್ಕ್‌ ಫ್ರಾಂ ಹೋಂ ಕೊಡಿ ಎಂದ ಉದ್ಯೋಗಿಗೆ ಕಂಪನಿ ಹೇಳಿದ್ದೇನು? ವೈರಲ್‌ ಆಯ್ತು ಪೋಸ್ಟ್‌

ತೀವ್ರವಾದ ಮಳೆಯಲ್ಲೂ WFH ನಿರಾಕರಣೆ ಮಾಡಿದ ಐಟಿ ಕಂಪನಿ: ಉದ್ಯೋಗಿ ಬೇಸರ

Viral News: ಗುಜರಾತ್ ನಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ನಡುವೆಯೂ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನಿರಾಕರಣೆ ಮಾಡಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆಯ ಅಭಾವದಿಂದ ಅಸ್ತ ವ್ಯಸ್ತಗೊಂಡಿದ್ದು ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್‌ಗಳಿಂದಾಗಿ ಸಾವಿರಾರು ಜನರಿಗೆ ದೈನಂದಿನ ಪ್ರಯಾಣ ಕಷ್ಟಕರವಾಗಿದೆ. ಇದಕ್ಕಾಗಿ ಕಂಪನಿಯ ಬಹಳಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೇಳಿದ್ದು ಮ್ಯಾನೇಜರ್ ಇದನ್ನು ನಿರಾಕರಣೆ ಮಾಡಿದ್ದಾರೆ.

ತುಂಬಿ ಹರಿಯುತ್ತಿರುವ ಅಪಾಯಕಾರಿ ನದಿಯಲ್ಲಿ ಯುವಕರ ಹುಚ್ಚಾಟ: ವಿಡಿಯೊ ಶೇರ್ ಮಾಡಿ ಎಚ್ಚರಿಕೆ ನೀಡಿದ ಪೊಲೀಸ್!

ತುಂಬಿ ಹರಿಯುವ ನದಿಗೆ ಜಿಗಿದ ಯುವಕರು; ವಿಡಿಯೋ ನೋಡಿ

Viral Video: ಯುವಕರ ಗುಂಪೊಂದು ತೀವ್ರವಾಗಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವಿಡಿಯೊ ವೈರಲ್ ಆಗಿದ್ದು ನೀರಿನ ರಭಸದ ಪ್ರವಾಹದಲ್ಲಿ ಪ್ರಾಣದ ಭಯ ಇಲ್ಲದೆ ಈಜಾಡುತ್ತಿದ್ದಾರೆ. ಈ ದೃಶ್ಯ ಎಷ್ಟು ಅಪಾಯಕಾರಿ ಇತ್ತು ಅಂದ್ರೆ ಪರಿಣಿತ ಈಜುಗಾರರೂ ಸಹ ಇಂತಹ ರಭಸದ ಪ್ರವಾಹದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಈ ವಿಡಿಯೋವನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ಪ್ರವಾಸಿಗರಿಗೆ ನೀಡಿದ್ದಾರೆ‌.

ಮೋದಿ ಅನುಮತಿ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆಗೆ ಸೇನಾಧಿಕಾರಿ ಆದೇಶ  ? ಏನಿದು ವೈರಲ್‌ ಸುದ್ದಿ

ಮೋದಿ ಆದೇಶದ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆ?

NEET Exam Protest: ನೀಟ್‌ ಪರೀಕ್ಷೆಯ ಅಕ್ರಮದ ಕುರಿತು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಕಡೆ ಲಾಠಿ ಚಾರ್ಜ್‌ ನಡೆಸಲಾಗಿದೆ. ಪ್ರತಿಭಟನಾಕಾರರು ದೆಹಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಸರ್ಕಾರ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಭದ್ರತಾ ಪಡೆಗಳನ್ನು ನಿಯೋಜಿಸಿದೆ.

Loading...