ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

‘ʼಮಹಿಳೆಯರು ಮನೆಗೇ ಸೀಮಿತವಾಗಿರಬೇಕು’ʼ: ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡ ಅಬೂಬಕರ್ ಮುಸ್ಲಿಯಾರ್

ವಿವಾದಕ್ಕೆ ತಿರುಗಿದ ಮಹಿಳೆಯರ ಕುರಿತ ಮುಸ್ಲಿಯಾರ್ ಹೇಳಿಕೆ

AP Aboobacker Musliyar: ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಗೇ ಸೀಮಿತರಾಗಬೇಕು ಎಂದು ಕೇರಳಂನ ಹಿರಿಯ ಮುಸ್ಲಿಮ್‌ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಸಿಪಿಐ(ಎಂ) ಹಾಗೂ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನಿರ್ಬಂಧಿಸುವ ಪ್ರಯತ್ನವನ್ನು ವಿರೋಧಿಸಿದ್ದಾರೆ.

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಸಾರ್ವಜನಿಕ ರಸ್ತೆಯನ್ನು ಪಿಕ್ನಿಕ್ ಸ್ಪಾಟ್‌ನಂತೆ ಬಳಸಿಕೊಂಡ ಕುಟುಂಬ

Rajasthan expressway: ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತನೆ ತೋರುವ ಅನೇಕ ಘಟನೆಗಳು ವೈರಲ್ ಆಗುತ್ತವೆ. ಎಲ್ಲೆಂದರಲ್ಲಿ ಕಸ ಹಾಕುವುದು, ಪ್ರವಾಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು, ರೀಲ್ಸ್ ಚಿತ್ರೀಕರಣ ಮಾಡುವುದು ಹೀಗೆ ಮನ ಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನ ಎಕ್ಸ್‌ಪ್ರೆಸ್‌ ವೇಯ ಮಧ್ಯದಲ್ಲಿ ಕುಟುಂಬವೊಂದು ಕುಳಿತು ಊಟ ಮಾಡುತ್ತಿರುವ ದೃಶ್ಯ ಕಂಡುಬಂದಿದೆ‌.

ನೇಪಾಳ ಪ್ರವಾಹದ ವೇಳೆ ಕಂಡುಬಂದ ಹೃದಯವಿದ್ರಾವಕ ದೃಶ್ಯ: ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನು ಹುಡುಕುತ್ತ ಹೊರಟ ಬಾಲಕ!

ನೇಪಾಳದಲ್ಲಿ ಪೋಷಕರಿಂದ ಬೇರ್ಪಟ್ಟ ಅಣ್ಣ-ತಂಗಿ: ಕರುಳು ಹಿಂಡುವ ದೃಶ್ಯ

Viral Video: ನೇಪಾಳ ಪ್ರವಾಹದಲ್ಲಿ ಕಂಡು ಬಂದ ಈ ದೃಶ್ಯ ಇಡೀ ಜಗತ್ತನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಪೋಷಕರಿಂದ ಬೇರ್ಪಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಮೇಲೆ ಹೊತ್ತುಕೊಂಡು ತನ್ನವರಿಗಾಗಿ ಹುಡುಕುತ್ತಿರುವ ಕರುಳು ಹಿಂಡುವ ದೃಶ್ಯ ಇದಾಗಿದ್ದು, ನೆಟ್ಟಿಗರು ಈ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ನೇಪಾಳ ಪ್ರವಾಹ: ಮಹಿಳೆಯ ಸೀರೆಯಿಂದ ಉಳಿಯಿತು 21 ಯಾತ್ರಿಕರ ಜೀವ!

ನೇಪಾಳ ನೆರೆ: ತಮಿಳುನಾಡು ಯಾತ್ರಿಕರ ಪ್ರಾಣ ಉಳಿಸಿದ ಸೀರೆ!

Viral Video: ಟಿಬೆಟ್ ಗಡಿಯ ಬಳಿ ಉಂಟಾದ ದಿಢೀರ್ ಪ್ರವಾಹದ ವೇಳೆ ತಮಿಳುನಾಡಿನ ಯಾತ್ರಿಕರ ಗುಂಪೊಂದು ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಅವರು ಪ್ರಾಣ ಉಳಿಸಿಕೊಳ್ಳಲು ಮಹಿಳೆಯೊಬ್ಬರ ಸೀರೆಯನ್ನು ಬಳಸಿದ್ದಾರೆ. ಸೀರೆಯನ್ನು ಹಿಡಿದುಕೊಂಡು ಜಾರುತ್ತಿದ್ದ ಇಳಿಜಾರಿನಿಂದ ಯಾತ್ರಿಕರು ಮೇಲೇರಿದ್ದಾರೆ.

Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!

ಸ್ಮಶಾನದಲ್ಲಿ ಮೃತದೇಹದ ಮಾಂಸ ತಿಂದ ಮಹಿಳೆ: ವಿಡಿಯೊ ವೈರಲ್‌

ಮಹಿಳೆಯೊಬ್ಬಳು ಚಿತಾಗಾರವೊಂದರಿಂದ ಮೃತದೇಹದ ಮಾಂಸವನ್ನು ತಿನ್ನುತ್ತಿರುವ ದೃಶ್ಯವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆ ಮಧ್ಯ ಪ್ರದೇಶದ ಉಜ್ಜಯಿನಿನಲ್ಲಿ ನಡೆದಿದ್ದು ಮಹಿಳೆಯನ್ನು ಕಾಳಿ ನಂದ್ ಗಿರಿ ಎಂದು ಗುರುತಿಸಲಾಗಿದೆ. ಆಕೆ ಉರಿಯುತ್ತಿರುವ ಚಿತೆಯ ಹತ್ತಿರ ನಿಂತು ಮೂಳೆಗಳು ಮತ್ತು ತಲೆಬುರುಡೆಗಾಗಿ ಹುಡುಕುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

Nepal Floods: ಭೀಕರ ಪ್ರವಾಹಕ್ಕೆ ಸುತ್ತಮುತ್ತಲ ಕಟ್ಟಡಗಳೆಲ್ಲ ಕುಸಿದರೂ ಗಟ್ಟಿಯಾಗಿ ಉಳಿದ ಮನೆ; ವೈರಲ್‌ ವಿಡಿಯೊ ಮೂಲಕ ಕಾರಣ ವಿವರಿಸಿದ ತಜ್ಞರು

ಸುತ್ತಲೂ ಪ್ರವಾಹ, ಕುಸಿದ ಕಟ್ಟಡಗಳು; ಈ ಮನೆ ಮಾತ್ರ ಉಳಿದಿದ್ದೇಕೆ?

ನೇಪಾಳದಲ್ಲಿ ಭಾರಿ ನೀರು, ಬಂಡೆ, ಕೆಸರು ಹಾಗೂ ಮರಗಳೊಂದಿಗೆ ಬಂದ ದಿಢೀರ್‌ ಪ್ರವಾಹಕ್ಕೆ ಹಲವು ಕಟ್ಟಡಗಳು ಕುಸಿದರೂ, ಹಸಿರು ಬಣ್ಣದ ಮನೆಯೊಂದು ಸುರಕ್ಷಿತವಾಗಿ ಉಳಿದಿದೆ. ದೃಢವಾಗಿ ಉಳಿದಿದೆ. ಆರ್‌ಸಿಸಿ ಫ್ರೇಮ್, ಬಲಿಷ್ಠ ಕಂಬ–ಬೀಮ್–ಅಡಿಪಾಯದ ಜೋಡಣೆ ಹಾಗೂ ಮುಖ್ಯ ಪ್ರವಾಹದ ಮಾರ್ಗದಿಂದ ಸ್ವಲ್ಪ ದೂರದಲ್ಲಿದ್ದ ಸ್ಥಳ ಈ ಮನೆ ಉಳಿಯಲು ಪ್ರಮುಖ ಕಾರಣ ಎಂದು ತಜ್ಞರು ವಿವರಿಸಿದ್ದಾರೆ.

ಬೆಂಗಳೂರು ಟ್ಯಾಕ್ಸಿ ಚಾಲಕನಿಂದ ಮಹಿಳೆಗೆ ವಂಚನೆ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ!

ಟ್ಯಾಕ್ಸಿ ಹಗರಣ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ ಮಾಡಿದ ಚಾಲಕ

Viral News: ಯುಕೆಯಿಂದ ಭಾರತಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಟ್ಯಾಕ್ಸಿ ಚಾಲಕನು ಕೇವಲ14 ಕಿ.ಲೋ ಮೀಟರ್ ಪ್ರಯಾಣಕ್ಕೆ 4,000 ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ಆಕೆ ಬರೆದುಕೊಂಡಿರುವ ಪೋಸ್ಟ್‌ನಲ್ಲಿ, ಕ್ಯಾಬ್‌ಗೆ ಹೋಗುವ ಮೊದಲು ಚಾಲಕನನ್ನು ಶುಲ್ಕದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ್ದಾಗಿ ಅವರು ಹಂಚಿಕೊಂಡಿದ್ದಾರೆ.

ನೇಪಾಳ ಭೀಕರ ಪ್ರವಾಹದಿಂದ ಶಾಲೆ ಧ್ವಂಸ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

ನೇಪಾಳ ಪ್ರವಾಹ: ಶಾಲೆ ಧ್ವಂಸವಾಗುವ ಮೊದಲೇ ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕ

Nepal floods: ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಶಾಲೆಯ ಶಿಕ್ಷಕರೊಬ್ಬರ ಸಮಯ ಪ್ರಜ್ಞೆಯಿಂದ ಸಾವಿರಾರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಹದ ಭೋರ್ಗೇರೆತಕ್ಕೆ ಶಾಲೆ ಕೊಚ್ಚಿಹೋಗುವ ಮೊದಲೇ 1,643 ಮಕ್ಕಳ ಪ್ರಾಣವನ್ನು ಶಿಕ್ಷಕ ಉಳಿಸಿದ್ದಾರೆ.

ನೇಪಾಳ ಪ್ರವಾಹ; ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ  2 ಗೋಲ್ಡನ್ ರಿಟ್ರೈವರ್‌ ನಾಯಿಗಳು!

ನೇಪಾಳ ಪ್ರವಾಹ; ವೈರಲ್ ಆಗ್ತಿವೆ ಹೃದಯಸ್ಪರ್ಶಿ ವಿಡಿಯೋಗಳು

ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್​ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ.

ನೇಪಾಳ ಪ್ರವಾಹ: ತೇಲಿಬಂದ ಸೇಫ್‌ ಲಾಕರ್ ಒಡೆದು 93 ಲಕ್ಷ ರುಪಾಯಿ ದೋಚಿದ ಖದೀಮರು

ನೇಪಾಳ ಪ್ರವಾಹದ ವೇಳೆಯಲ್ಲೂ 93 ಲಕ್ಷ ರುಪಾಯಿ ಕಳವು

Viral News: ಪ್ರಕೃತಿ ವಿಕೋಪದಿಂದ ತಲೆಯೆತ್ತಲಾಗದ ಸಂದರ್ಭದಲ್ಲೂ ಅಮಾನವೀಯ ಘಟನೆಯೊಂದು ನಡೆದಿದೆ. ತೀವ್ರ ಪ್ರವಾಹದ ನಡುವೆ ಕೊಚ್ಚಿಕೊಂಡು ಬಂದಿದ್ದ ಸೇಫ್ ಲಾಕರ್ ಒಡೆದು 93 ಲಕ್ಷ ರುಪಾಯಿ ಹಣ ದೋಚಿದ್ದಾರೆ‌. ಧಾಡಿಂಗ್‌ನಲ್ಲಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಿದ್ದು, 92.68 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.

60 ಕಿ.ಮೀ. ಓಲಾ ಪ್ರಯಾಣಕ್ಕೆ 5,662 ರುಪಾಯಿ ವಸೂಲಿ ಮಾಡಿದ ಚಾಲಕ: ದುಬಾರಿ ಬಿಲ್‌ ನೋಡಿ ಬೆಚ್ಚಿಬಿದ್ದ ಗ್ರಾಹಕರು

60 ಕಿ.ಮೀ. ಓಲಾ ಪ್ರಯಾಣಕ್ಕೆ ದುಬಾರಿ ಬಿಲ್ ವಿಧಿಸಿದ ಚಾಲಕ

Viral News: ಓಲಾ ಟ್ಯಾಕ್ಸಿ ಚಾಲಕನೊಬ್ಬ 60 ಕಿಲೋ ಮೀಟರ್ ಪ್ರಯಾಣಕ್ಕೆ 5,662 ರುಪಾಯಿ ಬಿಲ್ ನೀಡಿರುವ ಘಟನೆ ನಡೆದಿದೆ. ಪ್ರಯಾಣಿಕರ ಗುಂಪೊಂದು ಬುಕಿಂಗ್ ಮಾಡುವಾಗ ತೋರಿಸಲಾದ ದರ 1,285 ರುಪಾಯಿ ಆಗಿತ್ತು. ಅದಾಗ್ಯೂ, ಅಂತಿಮ ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಅವಧಿ ಮೀರಿದ ಬಿಸ್ಕೇಟ್‌ ಮಾರಾಟ: ಎಫ್‌ಡಿಎ ಅಧಿಕಾರಿಗೆ ಜನರಿಂದ ಘೇರಾವ್, ಬಾಯಿಗೆ ಬಿಸ್ಕೇಟ್‌ ತುರುಕಲು ಯತ್ನ

ಅವಧಿ ಮೀರಿದ ಬಿಸ್ಕೇಟ್‌ ವಿಚಾರಕ್ಕೆ ಗಲಾಟೆ: FDA ಅಧಿಕಾರಿಗೆ ಜನರಿಂದ ತರಾಟೆ

Food and Drug Administration: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿಗೆ ಪರಿಶೀಲನೆಗೆ ತೆರಳಿದ್ದ ಎಫ್‌ಡಿಎ ಅಧಿಕಾರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಅಧಿಕಾರಿಯು ಅಂಗಡಿ ಮಾಲಕನನ್ನು ರಕ್ಷಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಜನರು, ವಶಪಡಿಸಿಕೊಂಡ ಅವಧಿ ಮೀರಿದ ಬಿಸ್ಕೇಟ್‌ ಅನ್ನು ಅವರೇ ತಿನ್ನುವಂತೆ ಒತ್ತಾಯಿಸಿದ್ದಾರೆ. ಕೆಲವರು ಬಿಸ್ಕೇಟ್‌ ಅಧಿಕಾರಿಯ ಬಾಯಿಗೆ ಹಾಕಲು ಯತ್ನಿಸಿದ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

ವಾಹನ ಇದ್ದರೂ ಗಾಯಗೊಂಡ ಮಹಿಳೆಯನ್ನು ಎತ್ತಿಕೊಂಡು ಓಡಿದ ಇನ್ಸ್‌ಪೆಕ್ಟರ್; ಪ್ರಚಾರದ ಹುಚ್ಚು ಎಂದ ನೆಟ್ಟಿಗರು: ವಿಡಿಯೊ ವೈರಲ್‌

ಗಾಯಾಳುವನ್ನು ಎತ್ತಿಕೊಂಡು ಓಡಿದ ಪೊಲೀಸ್ ನಡೆಗೆ ವ್ಯಾಪಕ ಟೀಕೆ

Viral Video: ಪೊಲೀಸ್ ಅಧಿಕಾರಿಯೊಬ್ಬರು ಪ್ರಚಾರದ ಉದ್ದೇಶದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದೆ ಪೊಲೀಸ್ ವಾಹನ ಸಾಲಾಗಿ ಬರುತ್ತಿದ್ದರೂ ಅದನ್ನು ಬಳಸದೆ ಓಡಿಕೊಂಡೆ ಹೋಗಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

“ಇವರು ನನ್ನನ್ನು ಕೊಲ್ಲುತ್ತಾರೆ”: ಹೆರಿಗೆಗೂ ಮುನ್ನ ಹೇಳಿದ್ದ ಮೃತ ಮಹಿಳೆಯ ವಿಡಿಯೊ ವೈರಲ್‌

ಹೆರಿಗೆಯ ನಂತರ ಮಹಿಳೆ, ಮಗು ಸಾವು; ಹಳೆಯ ವಿಡಿಯೊ ಬಹಿರಂಗ

childbirth death: ಹೆರಿಗೆಯ ನಂತರ ಮಹಿಳೆ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜನರು ತನ್ನನ್ನು ಕೊಲ್ಲುತ್ತಾರೆ ಎಂದು ಆಕೆ ಹೇಳಿರುವ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇದೀಗ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಡೆಲಿವರಿ ಬಾಯ್‌ಗೆ ರಾಖಿ ಕಟ್ಟಿದ ಯುವತಿ: ಜೇಬಿನಲಿದ್ದ 50 ರೂ ಉಡುಗೊರೆಯಾಗಿ ನೀಡಿದ ಸಿಬ್ಬಂದಿ! ಹೃದಯಸ್ಪರ್ಶಿ ದೃಶ್ಯ!

ರಾಖಿ ಕಟ್ಟಿದ ಯುವತಿಗೆ 50 ರೂಪಾಯಿ ಉಡುಗೊರೆ ನೀಡಿದ ಡೆಲಿವರಿ ಬಾಯ್!

Viral Video: ಮನೆ ಬಾಗಿಲಿಗೆ ಬಂದ ಡೆಲಿವರಿ ಸಿಬ್ಬಂದಿಗೆ ಯುವತಿಯೊಬ್ಬಳು ರಾಖಿ ಕಟ್ಟಿ ಆತನನ್ನು ಅಣ್ಣನ ಸ್ಥಾನದಲ್ಲಿ ನೋಡಿದ್ದಾಳೆ.‌ ಡೆಲಿವರಿ ಬಾಯ್ ಕೂಡ ಬಹಳ ಖುಷಿಯಿಂದ ತನ್ನ ಕೈಯನ್ನು ಮುಂಭಾಗಕ್ಕೆ ಚಾಚಿ, ಮುಖದಲ್ಲಿ ಮುಗ್ಧ ನಗುವಿನೊಂದಿಗೆ ರಾಖಿ ಕಟ್ಟಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮುಂಬೈನ ಆಟೋ ಚಾಲಕರ ಹರ್ಷೋದ್ಗಾರ: ಮರಾಠಿ ಕಲಿಯಲು ಒಂದು ವರ್ಷ ಕಾಲಾವಕಾಶ ನೀಡಿದ ಸಿಎಂ ಫಡ್ನವೀಸ್!

ಮುಂಬೈ ಚಾಲಕರು ಮರಾಠಿ ಕಲಿಕೆಗೆ ಸಮಯ ವಿಸ್ತರಣೆ ಮಾಡಿದ ಸಿಎಂ ಫಡ್ನವೀಸ್

ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯನ್ನು ಕಡ್ಡಾಯ ಗೊಳಿಸಲಾಗಿದೆ. ಈಗಾಗಲೇ ಮರಾಠಿ ಮಾತನಾಡಲು ಬರದ ಚಾಲಕರಿಗೆ ನೋಟಿಸ್ ಕೂಡ ನೀಡ ಲಾಗಿದ್ದು ಮರಾಠಿ ಕಲಿಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಬಹಳಷ್ಟು ಚಾಲಕರು ಭಾಷೇ ಕಲಿಯಲಾಗದೆ ತಮ್ಮ ಊರಿಗೆ ಮರಳ ಬೇಕಾಯಿತು. ಈ ನಡುವೆ ಮಹಾರಾಷ್ಟ್ರ ಸರ್ಕಾರ ಚಾಲಕರಿಗೆ ದೊಡ್ಡ ರಿಲೀಫ್ ನೀಡಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ: ಪೋಷಕರ ವಯಸ್ಸಿನ ಬಗ್ಗೆ ಇಂಟರ್‌ನೆಟ್‌ನಲ್ಲಿ ಜೋರಾಯ್ತು ಚರ್ಚೆ

ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ

Viral Video: ಆಂಧ್ರ ಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಐವಿಎಫ್ ತಂತ್ರಜ್ಞಾನ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕೆಲವು ದಶಕಗಳ ನಂತರ ಮಹಿಳೆ ಮಗು ಪಡೆದಿದ್ದು ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದರೆ ಈ ವಯಸ್ಸಿನಲ್ಲೂ ಪೋಷಕರಾಗುತ್ತಿರುವ ಬಗ್ಗೆ ಜನರು ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Viral Video: ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ

ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ

Viral News: ಕೇರಳಂನ ಕೂತ್ತಟ್ಟು ಕುಲಂ-ಪಿರಾವೋಮ್ ರಸ್ತೆಯ ಕಕ್ಕೂರ್ ಬಳಿ 35 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಮದುವೆ ಸಮಾರಂಭವೊಂದಕ್ಕೆ ಸಂಬಂಧಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ಸವಾರನೊಬ್ಬ ಇಂಡಿಕೇಟರ್ ಹಾಕದೆ ಏಕಾಏಕಾಕಿ ತಿರುವು ಪಡೆದಿದ್ದು, ಸವಾರನನ್ನು ಉಳಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಆನ್‌ಲೈನ್‌ ಫುಡ್‌ ಡೆಲಿವರಿ ವಿಚಾರಕ್ಕೆ ವಾಗ್ವಾದ; ಸೆಕ್ಯುರಿಟಿ ಗಾರ್ಡ್‌ ಮೇಲೆ ಮಹಿಳೆಯಿಂದ ಹಲ್ಲೆ: ವಿಡಿಯೊ ವೈರಲ್‌

ಸೆಕ್ಯುರಿಟಿ ಗಾರ್ಡ್‌ ಮೇಲೆ ದೌರ್ಜನ್ಯ: ಮಹಿಳೆ ವರ್ತನೆ ವಿರುದ್ಧ ಕಿಡಿ

Viral Video: ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್‌ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್‌ನಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ಮಹಿಳೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ ನಂತರ ಈ ಘರ್ಷಣೆ ಪ್ರಾರಂಭವಾಗಿದೆ. ಡೆಲಿವರಿ ಸಿಬ್ಬಂದಿಯನ್ನು ಭದ್ರತಾ ಸಿಬ್ಬಂದಿ ಗೇಟ್‌ನಲ್ಲಿ ತಡೆದಿದ್ದಾರೆ ಎನ್ನುವ ಕಾರಣಕ್ಕೆ ಜಗಳ ಭುಗಿಲೆದ್ದಿದೆ.

'ಡ್ಯಾಡೀಸ್‌ ಹೋಮ್' ಡೈಲಾಗ್ ಬಳಸಿ ಪೊಲೀಸ್ ವಾಹನದಲ್ಲಿ ಕುಳಿತು ರೀಲ್ಸ್ ಮಾಡಿದ ಯುವಕ; ಮುಂದೇನಾಯ್ತು ನೀವೇ ನೋಡಿ

ಪೊಲೀಸ್ ವಾಹನ ಬಳಸಿ ಯುವಕನ ರೀಲ್ಸ್: ವಿಡಿಯೊ ವೈರಲ್‌

Viral Video: ಇಲ್ಲೊಬ್ಬ ಯುವಕ ಪೊಲೀಸ್ ವಾಹನ ಏರಿ ರೀಲ್ಸ್ ಮಾಡಿದ್ದಾನೆ. ಈತನಿಗೆ ಪೊಲೀಸ್ ವಾಹನ ಬಳಸಲು ಅವಕಾಶ ನೀಡಿದವರು ಯಾರೆಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸದ್ಯ ಸಾರ್ವಜನಿಕ ಭದ್ರತೆ ಮತ್ತು ಪೋಲಿಸ್ ವಾಹನದ ನಿಯಂತ್ರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ‌.

ಬಿಜೆಪಿ ಮೇಯರ್ ಆಯೋಜಿಸಿದ್ದ ರಾಖಿ ಹಬ್ಬದ ಕಾರ್ಯಕ್ರಮದಲ್ಲಿ ಸೀರೆಗಾಗಿ ನೀರೆಯರ ಪೈಪೋಟಿ: ನೂಕು ನುಗ್ಗಲಿಂದ ಮೂರ್ಛೆ ತಪ್ಪಿದ ಮಹಿಳೆಯರು

ಸೀರೆಗಾಗಿ ಪೈಪೋಟಿ: ಮೂರ್ಛೆ ತಪ್ಪಿದ ಮಹಿಳೆಯರು

Saree Scramble at Rakhi Event: ಉತ್ತರ ಪ್ರದೇಶದ ರೇಲಿಯಲ್ಲಿ ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸೀರೆ ವಿತರಿಸುವ ವೇಳೆ 20,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರಿಂದ ಅನೇಕರು ಮೂರ್ಛೆ ತಪ್ಪಿರುವ ಘಟನೆ ನಡೆದಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಕ್ಕಾಗಿ ಜನಸಮೂಹ ಜಮಾಯಿಸಿತ್ತು.

ರೈಲ್ವೆ ಹಳಿಗಳ ನಡುವೆ ಸಿಲುಕಿಕೊಂಡ ಒಂಟೆ: ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ರೈಲ್ವೆ ಹಳಿಯಲ್ಲಿ ಸಿಲುಕಿದ ಒಂಟೆ: ರಕ್ಷಣಾ ಕಾರ್ಯಾಚರಣೆ ವಿಡಿಯೊ ವೈರಲ್

Viral News: ರೈಲ್ವೆ ಸೇತುವೆ ಹಳಿಯ ನಡುವೆ ಒಂಟೆಯೊಂದು ಸಿಲುಕಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಹಳಿಯಲ್ಲಿ ಒಂಟೆ ಇರುವುದನ್ನು ಗಮನಿಸಿದ ಪೈಲಟ್ ತಕ್ಷಣ ಬ್ರೇಕ್ ಹಾಕಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದರಿಂದಾಗಿ ರೈಲ್ವೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವು ಎಕ್ಸ್‌ಪ್ರೆಸ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು.

ಸಾಹಸ ಮಾಡಲು ಹೋಗಿ 12ನೇ ಮಹಡಿಯಲ್ಲಿ ಸಿಲುಕಿಕೊಂಡ ಡೋಗೇಶ್ ಭಾಯ್: ವಿಡಿಯೊ ವೈರಲ್

12ನೇ ಮಹಡಿಯಲ್ಲಿ ಸಿಲುಕಿದ ಶ್ವಾನ: ರಕ್ಷಿಸಿದ ಅಗ್ನಿಶಾಮಕ ತಂಡ

Viral Video: ನಾಯಿಯೊಂದು ತನ್ನ ಪಾಡಿಗೆ ತಾನು ಆಟವಾಡುತ್ತ ಸಾಹಸ ಮಾಡಲು ಹೋಗಿ ಕಟ್ಟಡವೊಂದರಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಹುಮಹಡಿ ಕಟ್ಟಡದ 12 ಮಹಡಿಯಲ್ಲಿ ನಾಯಿ ಸಿಲುಕಿಕೊಂಡಿದೆ. ಪಕ್ಕದ ಬಿಲ್ಡಿಂಗ್ ನಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

ತಮಿಳುನಾಡು ವಿಧಾನಸಭೆಯಲ್ಲಿ ಅಪರೂಪದ ಪ್ರಸಂಗ: ಸಿಎಂ ಕುರ್ಚಿ ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತ ವಿಜಯ್

ಸಿಎಂಗೆ ಮೀಸಲಾದ ಆಸನ ತೊರೆದು ಸಚಿವರ ಜತೆ ಕುಳಿತ ವಿಜಯ್

CM Vijay: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ವಿಧಾನಸಭೆಯಲ್ಲಿ ತಮ್ಮ ಆಸನವನ್ನು ಬಿಟ್ಟು ಸಚಿವರ ಸಾಲಿನಲ್ಲಿ ಕುಳಿತು ಗಮನ ಸೆಳೆದಿದ್ದಾರೆ. ಸಚಿವರಾದ ಕೆ.ಎ. ಸೆಂಗೊಟ್ಟಯ್ಯನ್ ಮತ್ತು ಆಧವ್ ಅರ್ಜುನ ಅವರ ನಡುವೆ ಕುಳಿತ ವಿಜಯ್ ಅವರ ಅಪರೂಪದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Loading...