ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮುಂಬೈ ಕಡಲತೀರದಲ್ಲಿ 1.5 ಟನ್ ಕಸವನನ್ನು ಸಂಗ್ರಹಿಸಿದ ಪರಿಸರ ಪ್ರೇಮಿ ಲಿಸ್ಬನ್ ಫೆರಾವ್ ತಂಡ: ನೆಟ್ಟಿಗರಿಂದ ಪ್ರಶಂಸೆ!

ಮುಂಬೈ ಬೀಚ್‌ನಲ್ಲಿ 1.5 ಟನ್ ತ್ಯಾಜ್ಯ ವಿಲೇವಾರಿ ಮಾಡಿದ ಪರಿಸರ ಪ್ರೇಮಿಗಳು!

Viral Video: ಪರಿಸರವಾದಿ ಲಿಸ್ಬನ್ ಫೆರಾವೊ ಎಂಬವರು ಕಡಲತೀರ ಸ್ವಚ್ಛತೆಯ ಅಭಿಯಾನ ಮೂಲಕ ಬರೋಬ್ಬರಿ 1.5 ಟನ್ ಕಸವನ್ನು ಹೊರತೆಗೆದಿದ್ದಾರೆ. ಇದು ಮುಂಬೈನ ತೀರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಡಲತೀರದ ಅಡಿಯಲ್ಲಿ ಹೂತುಹೋಗಿದ್ದು ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯುವತಿಯರಿಗೆ ಚುಡಾಯಿಸಿದ ಕಿಡಿಗೇಡಿಗಳಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ಏನು ಗೊತ್ತಾ? ಸ್ಟೋರಿ ಓದಿ ಶಾಕ್‌ ಆಗ್ತೀರಾ

ಯುವತಿಯರಿಗೆ ಅಸಭ್ಯ ಕಮೆಂಟ್: ಕಿಡಿಗೇಡಿಗೆ ತಕ್ಕ ಶಿಕ್ಷೆ ನೀಡಿದ ಗ್ರಾಮಸ್ಥರು

Viral Video: ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳೆಂದು ಹೇಳಲಾಗುವ ಇಬ್ಬರು ಯುವಕರು ಸಂಚಾರಿಸುವಾಗ ರಸ್ತೆಯಲ್ಲಿ ಕಂಡ ಸ್ಥಳೀಯ ಯುವತಿಯರನ್ನು ನೋಡಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ.ಇದರಿಂದ ಆಕ್ರೋಶಗೊಂಡ ಯುವತಿಯರು ಹಾಗೂ ಸ್ಥಳೀಯರು ಸೇರಿ ತಕ್ಕ ಶಿಕ್ಷೆ ನೀಡಿದ್ದಾರೆ.

ಚಲಿಸುವ ರೈಲಿನಡಿ ಹಾರಲು ಹೋದ ಯುವಕ: ಪ್ರಾಣದ ಹಂಗು ತೊರೆದು ಕಾಪಾಡಿದ ಮಹಿಳಾ ಕಾನ್‌ಸ್ಟೆಬಲ್!

ಚಲಿಸುವ ರೈಲಿನ ಅಡಿಗೆ ನುಗ್ಗಿದ ಯುವಕ- ಸಾಹಸ ಮೆರೆದ ಕಾನ್‌ಸ್ಟೆಬಲ್!

Viral Video: ಯುವಕನೊಬ್ಬ ಲೋಕಲ್ ರೈಲಿನ ಅಡಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ರಾತ್ರಿ 10:54 ರ ಸುಮಾರಿಗೆ ನಡೆದಿದ್ದು ಕಾರ್ಯ‌ಚರಣೆ ದೃಶ್ಯ ಭಾರೀ ವೈರಲ್ ಆಗಿದೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಶಹಬಾಸ್ ಎನ್ನುತ್ತಿದ್ದಾರೆ.

ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಆದ ಪ್ರಾಧ್ಯಾಪಕಿ: "ನೀವೇ ಮುರ್ಖರು" ಎಂದು ಕಾಲೆಳೆದ ನೆಟ್ಟಿಗರು!

ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಶೇರ್ ಮಾಡಿ ಟ್ರೋಲ್ ಗೆ ಒಳಗಾದ ಪ್ರಾಧ್ಯಾಪಕಿ

Viral News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಗೆ ಒಳಗಾದ ಘಟನೆಯೊಂದು ನಡೆದಿದೆ. ತಾವು ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ಹೇಳಿಕೊಂಡ ಅರ್ಪಿತಾ ಚಟರ್ಜಿ ಎಂಬವರು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹೈಲೈಟ್ ಮಾಡಿದ್ದು ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ತಾನು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿಕೊಂಡರೂ ಈ ಸಣ್ಣ ಪೋಸ್ಟ್‌ ನಲ್ಲೇ ಬರೋಬ್ಬರಿ 6 ರಿಂದ 7 ಭೀಕರ ವ್ಯಾಕರಣ ತಪ್ಪುಗಳಿದ್ದವು‌.

ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ

ಪ್ರಧಾನಿ ಕ್ಷಮೆಯಾಚಿಸಿದ ಬಾಲಕಿಯ ತಾಯಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆ ಯಾಚಿಸಿದ್ದ ಬಾಲಕಿಯ ತಾಯಿ ಈಗ ಮೊದಲ ರಿಯಾಕ್ಷನ್ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಳು. ಇದೀಗ ಆಕೆಯ ತಾಯಿ, ಪ್ರಧಾನಿಯವರು ತನ್ನ ಮಗಳಿಗೆ ಜೀವದಾನ ಮಾಡಿದ್ದಾರೆ ಎಂದಿದ್ದಾರೆ.

"ಆದಾಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಜೀವನಶೈಲಿ ಬದಲಾಯಿಸಬೇಕಾಗಿಲ್ಲ": ಬೆಂಗಳೂರು ಯುವತಿಯ ಸಲಹೆಗೆ ನೆಟ್ಟಿಗರು ಫಿದಾ

ದುಬಾರಿ ಜೀವನ ಶೈಲಿ ನಿಯಂತ್ರಿಸುವ ಬಗ್ಗೆ ಯುವತಿಯ ಸಲಹೆ ಏನು?

Viral Video: 7 ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಿಮ್ರಿಧಿ ಮಖಿಜಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದರಲ್ಲಿ ತಮ್ಮ ಅನಿಸಿಕೆ ಶೇರ್ ಮಾಡಿದ್ದಾರೆ. ನಗರದಲ್ಲಿ ಅವರು ಗಮನಿಸಿದ ಹಲವು ಖರ್ಚಿನ ಬಗ್ಗೆ ಅವರು ಮಾತನಾಡಿದ್ದು, ʼʼಸಿಟಿಗೆ ಬಂದಿದ್ದೇವೆ, ಒಳ್ಳೆಯ ಕೆಲಸ ಸಿಕ್ಕಿದೆ ಅಂದಾಕ್ಷಣ ನಮ್ಮ ಜೀವನಶೈಲಿ ಬದಲಾಯಿಸಬೇಕಾಗಿಲ್ಲʼʼ ಎಂದು ಸಲಹೆ ನೀಡಿದ್ದಾರೆ.

52 ವರ್ಷಗಳ ನಂತರ ಹೆಣ್ಣು ಮಗು ಜನನ; ಆಸ್ಪತ್ರೆಯಲ್ಲೇ ಸಂಭ್ರಮಿಸಿದ ಇಂದೋರ್ ಕುಟುಂಬ: ಭಾವುಕ ಕ್ಷಣದ ವಿಡಿಯೊ ನೋಡಿ

52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಇಂದೋರ್ ಕುಟುಂಬ

Viral Video: ಮಧ್ಯ ಪ್ರದೇಶದ ಇಂದೋರ್‌ನ ಕುಟುಂಬವೊಂದು 52 ವರ್ಷದ ಬಳಿಕ ಹೆಣ್ಣು ಮಗುವೊಂದನ್ನು ಬರಮಾಡಿಕೊಂಡಿದೆ. ಐದು ದಶಕಗಳ ಕಾಲ ಕೇವಲ ಗಂಡು ಮಕ್ಕಳನ್ನೇ ಕಂಡಿದ್ದ ಈ ಕುಟುಂಬಕ್ಕೆ ಕೊನೆಗೂ ಲಕ್ಷ್ಮೀಯ ರೂಪದಲ್ಲಿ ಹೆಣ್ಣು ಮಗುವಿನ ಆಗಮನವಾಗಿದೆ. ಆಸ್ಪತ್ರೆಯಲ್ಲೇ ಕುಟುಂಬ ಸಂಭ್ರಮಾಚರಿಸಿದ್ದು, ಈ ಖುಷಿಯ ಕ್ಷಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ.

ಬಿಹಾರದಲ್ಲೊಬ್ಬ ಬಾಹುಬಲಿ; ಗದ್ದೆಯಲ್ಲಿ ಸಿಕ್ಕ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ: ವಿಡಿಯೊ ವೈರಲ್‌

ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ

Viral video: ಬಿಹಾರದ ಸುಪೌಲ್ ಜಿಲ್ಲೆಯ ಹೊಲದಲ್ಲಿ ಸಿಕ್ಕ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದ ಬಳಿಕ, ಯುವಕನೊಬ್ಬ ಅದನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ಘಟನೆ ವೈರಲ್ ಆಗಿದೆ. ಬಳಿಕ ಅರಣ್ಯ ಇಲಾಖೆ ಮೊಸಳೆಯನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿ ಕೋಸಿ ನದಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ವನ್ಯಜೀವಿಗಳು ಕಂಡುಬಂದರೆ ಸಾರ್ವಜನಿಕರು ಸ್ವತಃ ಹಿಡಿಯಲು ಮುಂದಾಗದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಸ್ತೆ, ಹಾಸ್ಟೆಲ್ ಬಳಿಕ ಇದೀಗ ಬಾತ್‌ರೂಂಗೂ ನುಗ್ಗಿದ ಮೊಸಳೆ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ಬಾತ್‌ರೂಂನಲ್ಲಿ 7 ಅಡಿ ಉದ್ದದ ಮೊಸಳೆ ಪತ್ತೆ: ಇಲ್ಲಿದೆ ವಿಡಿಯೊ

Crocodile Found in a house: ಮನೆಯೊಂದರ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆ ಪತ್ತೆಯಾದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮೊಸಳೆ ಬಾಲಾಭಾಯಿ ಚೌಹಾಣ್ ಎಂಬುವವರ ಮನೆಯ ಬಾತ್‌ರೂಂಗೆ ಪ್ರವೇಶಿಸಿತ್ತು. ಕೂಡಲೇ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡವು ಅದನ್ನು ರಕ್ಷಿಸಿದೆ.

ಪಾಕ್‌ ಆಟಗಾರ್ತಿಯನ್ನು ಅಪ್ಪಿಕೊಂಡ ಭಾರತದ ಜೆಮಿಮಾ ರೋಡ್ರಿಗಸ್‌; ವಿಡಿಯೊ ವೈರಲ್‌

ಪಾಕ್‌ ಆಟಗಾರ್ತಿಯನ್ನು ಅಪ್ಪಿಕೊಂಡ ಜೆಮಿಮಾ ರೋಡ್ರಿಗಸ್‌

Jemimah Rodrigues: ಪಂದ್ಯದ ಬಗ್ಗೆ ಹೇಳುವುದಾದರೆ ಸದರ್ನ್ ಬ್ರೇವ್ ಪರ ಆಡುವ ರೊಡ್ರಿಗಸ್ 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರೆ, ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪರ ಫಾತಿಮಾ ನಿರಾಶಾದಾಯಕ ಪ್ರದರ್ಶನ ನೀಡಿದರು. ಸದರ್ನ್ ಬ್ರೇವ್ ಪಂದ್ಯವನ್ನು 24 ರನ್‌ಗಳಿಂದ ಗೆದ್ದುಕೊಂಡಿತು.

ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ; ಆದರೂ ನನ್ನನ್ನು ಕ್ಷಮಿಸಿಬಿಡಿ: ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ ಮಾಡಿರುವ ತಪ್ಪೇನು?

ನನಗೆ ಕೇವಲ 15 ವರ್ಷ. ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ, ಆದರೂ ನನ್ನನ್ನು ಕ್ಷಮಿಸಿ ಎಂದು ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಕೇಳಿದ್ದಾಳೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಾಳೆ.

ಯುಪಿಐ ವೈಫಲ್ಯ: ರಸ್ತೆ ಮಧ್ಯೆಯೇ ಪ್ರಯಾಣಿಕನನ್ನು ಬಸ್ಸಿನಿಂದ ಇಳಿಸಿದ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಆಕ್ರೋಶ!

ಯುಪಿಐ ವಿಳಂಬ: ಪ್ರಯಾಣಿಕನನ್ನು ರಸ್ತೆ ಮಧ್ಯೆಯೆ ಇಳಿಸಿದ ಕಂಡಕ್ಟರ್!

Viral News: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ವೊಬ್ಬ ಯುಪಿಐ ಪಾವತಿ ವೈಫಲ್ಯದ ವಿಚಾರವಾಗಿ ಪ್ರಯಾಣಿಕನ್ನು ಅರ್ಧದಾರಿಯಲ್ಲೆ ಇಳಿಸಿದ ಘಟನೆಯೊಂದು ಕಂಡು ಬಂದಿದೆ. ಸಂತ್ರಸ್ತ ಪ್ರಯಾಣಿಕನು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಬೇಸರ ಹೊರ ಹಾಕಿದ್ದಾರೆ.

ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಭಕ್ತನನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿ: ಎದೆ ಝಲ್‌ ಎನಿಸುವ ವಿಡಿಯೋ ವೈರಲ್‌

ಹರಿದ್ವಾರದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಿದ SDRF ಸಿಬ್ಬಂದಿ

Viral Video: ಗಂಗಾ ನದಿಯ ಭೋರ್ಗರೆಯುವ ಪ್ರವಾಹದಲ್ಲಿ ಭಕ್ತನೊಬ್ಬ ಕೊಚ್ಚಿ ಹೋಗಿದ್ದು ಎಸ್‌ಡಿ ಆರ್‌ಎಫ್ ತಂಡ ಕೂಡಲೆ ಸಮಯ ಪ್ರಜ್ಞೆ ಮೆರೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ SDRF ಕಾನ್ಸ್‌ಟೇಬಲ್ ನಿತೇಶ್ ಖೇತ್ವಾಲ್ ತಕ್ಷಣ ಹಿಂಜರಿಕೆ ಮಾಡದೇ ನದಿಗೆ ಹಾರಿದ್ದು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ದೃಶ್ಯ ಭಾರೀ ವೈರಲ್ ಆಗುತ್ತಿದೆ.

ಜೆಪ್ಟೊ ಸಿಬ್ಬಂದಿಯಿಂದ ಕಿರುಕುಳ: ಒಬ್ಬಂಟಿ ಮಹಿಳೆ ಕಂಡು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಡೆಲಿವರಿ ಬಾಯ್

ಮಹಿಳೆಗೆ ಕಿರುಕುಳ ನೀಡಿದ ಜೆಪ್ಟೊ ಡೆಲಿವರಿ ಬಾಯ್: ನೆಟ್ಟಿಗರ ಆಕ್ರೋಶ!

Viral Video: ಆರ್ಡರ್ ತಲುಪಿಸಲು ಬಂದ ಜೆಪ್ಟೊ ಸಂಸ್ಥೆಯ ಡೆಲಿವರಿ ಏಜೆಂಟ್ ಮಹಿಳೆಯೊಬ್ಬರು ಒಬ್ಬಂಟಿ ಇರುವಾಗ ಒಳಗೆ ಬರಲು ಪಟ್ಟು ಹಿಡಿದಿದ್ದಾನೆ. ವೀಡಿಯೊ ಶೇರ್ ಮಾಡಿದ ಮಹಿಳೆ ಜೆಪ್ಟೋ ಏಜೆಂಟ್ ಕುಡಿಯಲು ನೀರು ಕೇಳಿದ ನಂತರ ಪದೇ ಪದೇ ತನ್ನ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪರ ಪುರುಷನೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸಿದ ಪತ್ನಿ: ಸಾರ್ವಜನಿಕವಾಗಿಯೇ ಗೂಸಾ ನೀಡಿದ ಗಂಡ!

ಬಾಯ್ ಫ್ರೆಂಡ್ ಜೊತೆ ಪ್ರಯಾಣ: ಪತಿಯಿಂದ ಸಾರ್ವಜನಿಕವಾಗಿ ಹಲ್ಲೆ

Viral Video: ಅನೈತಿಕ ಸಂಬಂಧದ ವಿಚಾರಗಳು ಇತ್ತೀಚೆಗೆ ಹಾಟ್ ಟಾಪಿಕ್ ನಲ್ಲಿದೆ‌. ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಡಿಯೊಗಳು ದಿನ ನಿತ್ಯ ವೈರಲ್ ಆಗುತ್ತಿದೆ‌. ಇದೀಗ ಇಂದೋರ್ ನಲ್ಲಿ ಮತ್ತೊಬ್ಬ ಪುರುಷನ ಜೊತೆ ಪತ್ನಿ ಹೋಗುತ್ತಿರುವುದನ್ನು ಗಮನಿಸಿದ ಪತಿಯೊಬ್ಬ ರಸ್ತೆಯಲ್ಲೇ ಆಕೆಯನ್ನು ತಡೆದು ಬೆಲ್ಟ್ ನಿಂದ ಹೊಡೆದಿದ್ದಾನೆ. ಸಾರ್ವಜನಿಕವಾಗಿ ಪತ್ನಿಯ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿದ ವಿಡಿಯೊ ಭಾರೀ ವೈರಲ್ ಆಗುತ್ತಿದೆ.

ವೃದ್ಧಾಶ್ರಮದಲ್ಲಿ ಅಘಾತಕಾರಿ ಘಟನೆ: ವೃದ್ಧೆಯರ ಮೇಲೆ ಮನಬಂದಂತೆ ಥಳಿಸಿದ 14 ವರ್ಷದ ಬಾಲಕ!

ವೃದ್ಧಾಶ್ರಮದಲ್ಲಿ 14 ವರ್ಷದ ಬಾಲಕನಿಂದ ವೃದ್ಧೆಯರ ಮೇಲೆ ಹಲ್ಲೆ!

Viral Video: ವೃದ್ಧಾಶ್ರಮದಲ್ಲಿ ವೃದ್ಧ ಮಹಿಳೆಯರ ಮೇಲೆ ಹದಿಹರೆಯದ ಬಾಲಕನೊಬ್ಬ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಇಂದೋರ್‌ನಲ್ಲಿ ನಡೆದಿದೆ. ಮರದ ಕೋಲಿನಿಂದ ಬಾಲಕನು ಮನ ಬಂದಂತೆ ಥಳಿಸಿದ್ದಾನೆ. ಈ ಘಟನೆಯೂ ಮಾರಿಮಾತಾ ನೀರಿನ ಟ್ಯಾಂಕ್ ಬಳಿಯ ಮಹಾರಾಣಾ ಪ್ರತಾಪ್ ವೆಲ್ಫೇರ್ ಸೊಸೈಟಿಯ ವೃದ್ಧಾಶ್ರಮದಲ್ಲಿ ನಡೆದಿದೆ.

ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್‌ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ

ರೈತರ ಪ್ರತಿಭಟನೆ ವೇಳೆ ಧೈರ್ಯ ತೋರಿದ ಎಸಿಪಿ ಮೋನಿಕಾ ಶುಕ್ಲಾ

Viral Video: ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ರೈತರ ಪ್ರತಿಭಟನೆ ವೇಳೆ ಬಸ್‌ ಮುಂದೆ ನಿಂತು ಪ್ರತಿಭಟನಾಕಾರರನ್ನು ತಡೆದ ಎಸಿಪಿ ಮೋನಿಕಾ ಶುಕ್ಲಾ ಅವರ ವಿಡಿಯೊ ವೈರಲ್ ಆಗಿದೆ. ಕರ್ತವ್ಯ ನಿರ್ವಹಣೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರತಿಭಟನಾಕಾರರನ್ನು ಸಂಯಮದಿಂದಲೇ ನಿಭಾಯಿಸಬೇಕು ಎಂದು ಅವರು ಹೇಳಿದ್ದಾರೆ.

ಧಮ್‌ ಮಾರೋ ಧಮ್:‌ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಧೂಮಪಾನ; ದೆಹಲಿ ಪ್ರವಾಸಿಗರನ್ನು ತರಾಟೆಗೆ ತಗೆದುಕೊಂಡ ಸ್ಥಳೀಯರು

ಲೋಹಗಢ ಕೋಟೆಯಲ್ಲಿ ಧಮ್‌ ಎಳೆದ ಪ್ರವಾಸಿಗರ ವಿರುದ್ಧ ಆಕ್ರೋಶ

Viral Video: ಐತಿಹಾಸಿಕ ಸ್ಥಳದಲ್ಲೇ ಪ್ರವಾಸಿಗರ ಗುಂಪೊಂದು ಧೂಮಪಾನ ಮಾಡಿದ್ದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರ ನಾಗರಿಕ ಪ್ರಜ್ಞೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಧೂಮಪಾನ ನಿಷೇಧ ಎಂದು ತಿಳಿದಿದ್ದರೂ ಕ್ಯಾರೇ ಎನ್ನದೆ ಈ ಕೃತ್ಯ ಎಸಗಿದ್ದಾರೆ.

ಪೊಲೀಸರ ಕೈಯಿಂದ ತಪ್ಪಿಸಿದ ಸರಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಸೆಕ್ಯುರಿಟಿ ಗಾರ್ಡ್‌; ವಿಡಿಯೊ ವೈರಲ್‌

ಸರಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಸೆಕ್ಯುರಿಟಿ ಗಾರ್ಡ್‌

Viral Video: ಉತ್ತರ ಪ್ರದೇಶದ ಅಲಿಗಢದಲ್ಲಿ ಸರಕಳ್ಳನನ್ನು ಸೆಕ್ಯುರಿಟಿ ಗಾರ್ಡ್‌ ಸೆರೆ ಹಿಡಿದ ಘಟನೆ ನಡೆದಿದೆ. ಅಪರಾಧಿ ನೋಯ್ಡಾದ 'ಪೂರ್ವಾಂಚಲ್ ರಾಯಲ್ ಸಿಟಿ' ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಪೊಲೀಸರ ಕಣ್ಣು ತಪ್ಪಿಸಿ ನೋಯ್ಡಾದ ಪೂರ್ವಾಂಚಲ್ ರಾಯಲ್ ಸಿಟಿಯಲ್ಲಿ ಓಡಾಡುತ್ತಿದ್ದ.

ʼʼಅಮಾನವೀಯʼʼ: ವಿಐಪಿ ಸಂಚಾರಕ್ಕಾಗಿ ಮಳೆಗೆ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದ ಸಾರ್ವಜನಿಕರನ್ನು ಓಡಿಸಿದ ಪೊಲೀಸರು

ವಿಐಪಿ ಪ್ರಯಾಣಕ್ಕಾಗಿ ಸಾರ್ವಜನಿಕರನ್ನು ಮಳೆಯಲ್ಲಿ ನೆನೆಯಿಸಿದ ಪೊಲೀಸರು

Viral Video: ವಿಐಪಿ ಸಂಚಾರಕ್ಕಾಗಿ ಬಸ್ ನಿಲ್ದಾಣದೊಳಗೆ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ಪೊಲೀಸರು ಗದರಿಸಿ ಓಡಿಸಿದ ಘಟನೆಯೊಂದು ನಡೆದಿದೆ. ರಾಜಸ್ಥಾನದ ಜೈಪುರದಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರಯಾಣಿಕರು ಜೆಎಲ್‌ಎನ್ ಮಾರ್ಗದಲ್ಲಿರುವ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಅದೇ ಮಾರ್ಗದಲ್ಲಿ ವಿಐಪಿ ವಾಹನ ಸಾಗಬೇಕಿದ್ದರಿಂದ ಮಳೆಯ ನಡುವೆಯೂ ಸಾರ್ವಜನಿಕರನ್ನು ಬೈದು ಓಡಿಸಿದ್ದಾರೆ.

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದಾಗ ಎದುರಿಸಿದ ಸಂಕಷ್ಟಗಳೇನು? ವೈರಲ್‌ ಆದ ಪೋಸ್ಟ್‌ನಲ್ಲೇನಿದೆ?

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದು ಎದುರಿಸಿದ ಸಂಕಷ್ಟಗಳೇನು?

Viral Video: ಸುಮಾರು 11 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದ ಕುಟುಂಬವೊಂದು ಮರಳಿ ಹೈದರಾಬಾದ್‌ ಗೆ ಬಂದಿದೆ. ಆದರೆ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಶೇರ್ ಮಾಡಿಕೊಂಡಿದ್ದು ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಎದುರಾದ ಕೆಲವು ಕಷ್ಟಗಳನ್ನು ಮಹಿಳೆಯೊಬ್ಬರು ವಿವರಿಸಿದ್ದಾರೆ.

ದೇವರಿಗೆ ಕ್ಷಮೆಯಾಚಿಸಿ ಹುಂಡಿ ಕಳ್ಳತನ ಮಾಡಿದ ಖದೀಮರು: ವಿಡಿಯೊ ವೈರಲ್

ದೇವರ ಬಳಿ ಕ್ಷಮೆ ಕೇಳಿ ಹುಂಡಿ ಕದ್ದ ಕಳ್ಳರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ!

Viral Video: ದೇವರ ಮುಂದೆ ಕ್ಷಮೆ ಕೇಳಿನಂತರ ದೇವಸ್ಥಾನದ ಹುಂಡಿ ಒಡೆದು ಹಣ ದೋಚಿರುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ಕ್ಷಣಗಳ ನಂತರ, ಖದೀಮರು ಕಾಣಿಕೆ ಪೆಟ್ಟಿಗೆಯನ್ನು ಒಡೆದು ಹಣವನ್ನು ಖಾಲಿ ಮಾಡಿ ಪರಾರಿಯಾಗಿದ್ದಾರೆ.

ಬಾಲಿವುಡ್‌ ಹಾಡನ್ನೂ ಮೀರಿಸುವ ದೃಶ್ಯ ಕಾವ್ಯ: ವರ್ಷಧಾರೆಯ ನಡುವೆ ವಿಶ್ವದ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು; ಅದ್ಭುತ ವಿಡಿಯೊ ನೋಡಿ

ಮಂಜಿನ ನಡುವೆ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು

Viral Video: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಗಾರು ಮಳೆಯ ನಡುವೆ ವಂದೇ ಭಾರತ್ ರೈಲು ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯ ಮೇಲೆ ಹಾದುಹೋಗುವ ದೃಶ್ಯ ಭಾರಿ ವೈರಲ್ ಆಗಿದೆ. ಮಳೆಯ ಸುರುತ್ತಿರುವ ಹಿನ್ನೆಲೆಯಲ್ಲಿ ದಟ್ಟ ಮಂಜು ಆವರಿಸಿದ್ದು, ಮೋಡವನ್ನು ಸೀಳಿಕೊಂಡು ಸಾಗುವಂತೆ ಭಾಸವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ರೈಲು ಹಾದುಹೋಗುವ ದೃಶ್ಯ ನೋಡಿ ನೆಟ್ಟಿಗರು ʼಇದೇ ಸ್ವರ್ಗʼ ಎಂದು ಬಣ್ಣಿಸಿದ್ದಾರೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ರಷ್ಯಾದಲ್ಲಿರುವ ಯುವಕನ ವಿರುದ್ಧ ಬಿಹಾರದಲ್ಲಿ ಪ್ರಕರಣ? ವಿಡಿಯೊ ವೈರಲ್

NEET Protest: ರಷ್ಯಾದಲ್ಲಿ ನಾಲ್ಕು ತಿಂಗಳಿಂದ ವಾಸವಾಗಿರುವುದಾಗಿ ಹೇಳಿರುವ ಬಿಹಾರದ ಯುವಕ ಮೊಹಮ್ಮದ್ ಸದಾಕತ್, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

Loading...