ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಹನುಮಾನ್ ಮಂದಿರದಲ್ಲಿ ಸುತ್ತು ಹಾಕಿದ  ಶ್ವಾನಕ್ಕೆ ಭಕ್ತರಿಂದ ಪೂಜೆ; ನಾಯಿ ನಿಜವಾಗಿಯೂ ಭಕ್ತಿಯಿಂದ ಪ್ರದಕ್ಷಿಣೆ ಬಂದಿತ್ತೆ? ತಜ್ಞರು ಹೇಳೋದೇನು?

ಹನುಮಾನ್ ಮಂದಿರದಲ್ಲಿ ಸುತ್ತು ಹಾಕಿದ ಶ್ವಾನಕ್ಕೆ ಭಕ್ತರಿಂದ ಪೂಜೆ

ಉತ್ತರ ಪ್ರದೇಶದ ನಗಿನಾ ತಾಲೂಕಿನ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಾಲಯದಲ್ಲಿ, ಆರೋಗ್ಯ ಸಮಸ್ಯೆಯಿಂದ ದೇವರ ಮೂರ್ತಿಗಳ ಸುತ್ತ ವೃತ್ತಾಕಾರವಾಗಿ ಚಲಿಸುತ್ತಿದ್ದ ಶ್ವಾನವನ್ನು ಕೆಲ ಭಕ್ತರು ದೈವಿಕ ಸಂಕೇತವೆಂದು ಭಾವಿಸಿ ಪೂಜೆ-ಪುನಸ್ಕಾರ ನಡೆಸಿದ್ದಾರೆ. ಈ ಘಟನೆಯ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಂಧಶ್ರದ್ಧೆ–ವೈಜ್ಞಾನಿಕ ದೃಷ್ಟಿಕೋನ ಕುರಿತು ಭಾರಿ ಚರ್ಚೆಗೆ ಕಾರಣವಾಗಿದೆ.

ಅರುಣಾಚಲ ಪ್ರದೇಶದ ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿದ ಕೇರಳ ಪ್ರವಾಸಿಗರು; ಮೈ ಜುಂ ಎನಿಸುವ ವಿಡಿಯೊ ವೈರಲ್‌

ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿದ ಕೇರಳ ಪ್ರವಾಸಿಗರು

Drown: ಅರುಣಾಚಲ ಪ್ರದೇಶಕ್ಕೆ ತೆರಳಿದ ಇಬ್ಬರು ಕೇರಳ ಮೂಲದ ಪ್ರವಾಸಿಗರು ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿ ಮೃತಟಪಟ್ಟಿರುವ ಘಟನೆ ತವಾಂಗ್‌ ಜಿಲ್ಲೆಯಲ್ಲಿ ನಡೆದಿದೆ. ಸದ್ಯ 1 ಮೃತದೇಹ ಲಭ್ಯವಾಗಿದೆ. ಸೆಲಾ ಸರೋವರದಲ್ಲಿಈ ಘಟನೆ ನಡೆದಿದೆ. ಸದ್ಯ ಪ್ರವಾಸಿಗರು ಸರೋವರದಲ್ಲಿ ಮುಳುಗುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯಕ್ಕೂ ಮುನ್ನ ಉಜ್ಜಯಿನಿ ದೇವಾಲಯಕ್ಕೆ ಭೇಟಿ ನೀಡಿದ ಕೊಹ್ಲಿ

ಉಜ್ಜಯಿನಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕೊಹ್ಲಿ

IND vs NZ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಕೊಹ್ಲಿ ದೇವಾಲಯದ ಒಳಗೆ 'ಜೈ ಶ್ರೀ ಮಹಾಕಾಲ್' ಎಂದು ಜಪಿಸುವ ಮೂಲಕ ಸರ್ವಶಕ್ತ ಶಿವನನ್ನು ಸ್ತುತಿಸುತ್ತಾ ಪುರೋಹಿತರ ಜೊತೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು.

ಹತ್ತು ನಿಮಿಷದ ಡೆಲಿವರಿಗಾಗಿ ಪ್ರಾಣದ ಹಂಗು ತೊರೆದು ಸ್ಕೇಟಿಂಗ್ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್!

ಅಪಾಯಕಾರಿ ಸ್ಕೇಟಿಂಗ್ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್!

Viral Video: ಉತ್ತರ ಪ್ರದೇಶದ ಮುಜಾ ಫರ್‌ ನಗರದಲ್ಲಿ ಬ್ಲಿಂಕಿಟ್ ಕಂಪನಿಯ ಡೆಲಿವರಿ ಬಾಯ್ ಒಬ್ಬರು ಜೀವನ ನಿರ್ವಹಣೆಗಾಗಿ ಪಡುವ ಕಷ್ಟ ಎಲ್ಲರ ಕಣ್ಣು ತೆರೆಸಿದೆ. ವಾಹನಗಳ ದಟ್ಟಣೆ ನಡುವೆಯೇ ಡೆಲಿವರಿ ಬಾಯ್ ರೋಲರ್ ಸ್ಕೇಟ್ಸ್ ಧರಿಸಿ ವೇಗವಾಗಿ ಗ್ರಾಹಕರಿಗೆ ಆಹಾರ ತಲುಪಿಸು ತ್ತಿರುವ ದೃಶ್ಯ ಭಾರೀ ವೈರಲ್ ಆಗಿದೆ.

ಹಿಂದೂ ಯುವತಿಗೆ ಹಿಜಾಬ್ ಧರಿಸುವಂತೆ ಮುಸ್ಲಿಂ ಗೆಳತಿಯರ ಒತ್ತಾಯ; ಕೆಂಗಣ್ಣಿಗೆ ಗುರಿಯಾಯ್ತು ಈ ವಿಡಿಯೋ

ಮುಸ್ಲಿಂ ಮಹಿಳಾ ಸ್ನೇಹಿತರಿಂದ ಹಿಂದೂ ಹುಡುಗಿಗೆ ಹಿಜಾಬ್ ಧರಿಸಲು ಬಲವಂತ

Viral Video: ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಸ್ಲಿಂ ಮಹಿಳಾ ಸ್ನೇಹಿತರಿಂದ ಹಿಂದೂ ಹುಡುಗಿಗೆ ಹಿಜಾಬ್ ಧರಿಸಲು ಬಲವಂತ ಮಾಡಿರುವ ಘಟನೆ ಕಂಡು ಬಂದಿದ್ದು ನೆಟ್ಟಿಗರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಸತ್ತು ಮಲಗಿದ ಎಚ್‌ಐವಿ ಸೋಂಕಿತ ತಾಯಿಯ ಮೃತ ದೇಹದ ಬಳಿ ಕುಳಿತು ಬಾಲಕನ ಗೋಳಾಟ! ಕರುಳು ಚುರ್‌ ಎನ್ನುತ್ತೆ ಈ ದೃಶ್ಯ

ಎಚ್‌ಐವಿಗೆ ತಾಯಿ ಬಲಿ – ಮೃತದೇಹದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕಿದ ಬಾಲಕ!

‌Viral Video: ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ನೋಡುಗರ ಕಣ್ಣು ತೇವ ಆಗುವಂತೆ ಮಾಡಿದೆ. ಎಚ್‌ಐವಿ ಸೋಂಕಿತ ತಾಯಿಯ ಮೃತ ದೇಹದ ಪಕ್ಕದಲ್ಲಿ ಕುಳಿತ 10 ವರ್ಷದ ಬಾಲಕ ಕಣ್ಣೀರಿಡುತ್ತಿರುವ ವಿಡಿಯೊ ಭಾರೀ ವೈರಲ್ ಆಗಿದ್ದು ಕರುಳುಹಿಂಡುವಂತಿದೆ.

ರೀಲ್ಸ್‌  ಹುಚ್ಚಾಟಕ್ಕೆ ಕಾರ್‌ ಸ್ಟಂಟ್‌; ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಬಿದ್ದ ದಂಡವೆಷ್ಟು ಗೊತ್ತಾ?

ಯುವಕನ ರೀಲ್ಸ್ ಹುಚ್ಚಾಟ್ಟಕ್ಕೆ‌ ಡಬಲ್ ಮೊತ್ತದ ದಂಡ ವಿಧಿಸಿದ ಪೊಲೀಸರು!

Viral Video: ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ರೀಲ್ಸ್ ಕ್ರೇಜ್ ಗೆ ಅವನೇ ದಂಡ ಕಟ್ಟುವ ಪರಿಸ್ಥಿತಿ ಒದಗಿ ಬಂದಿದೆ. ವಿದ್ಯಾರ್ಥಿಯು 2002 ರ ಹೋಂಡಾ ಸಿಟಿ ಕಾರನ್ನು ರೂ. 70,000 ಗೆ ಖರೀದಿ ಸಿದ್ದು ಇದೆ ಹಳೆಯ ಕಾರಿಗೆ ಬೆಂಗಳೂರು ಪೊಲೀಸರು ಬರೋಬ್ಬರಿ 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ..ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ.

Viral News: ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ, ಎಲ್ಲಿದೆ ಈ ಕಂಟ್ರಿ?

ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ!

ಲಾಟ್ವಿಯಾ ದೇಶದಲ್ಲಿ ಗಂಭೀರ ಲಿಂಗ ಅಸಮತೋಲನ ಉಂಟಾಗಿದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವ ಕಾರಣ ಕೆಲ ಮಹಿಳೆಯರು ಮನೆ ಕೆಲಸಗಳಿಗೆ ತಾತ್ಕಾಲಿಕವಾಗಿ “ಗಂಡನನ್ನು ಬಾಡಿಗೆಗೆ” ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಯುರೋಸ್ಟಾಟ್ ಮಾಹಿತಿ ಪ್ರಕಾರ, ಲಾಟ್ವಿಯಾದಲ್ಲಿ ಮಹಿಳೆಯರು ಪುರುಷರಿಗಿಂತ 15.5% ಹೆಚ್ಚು ಇದ್ದು, ಇದು ಯುರೋಪಿಯನ್ ಯೂನಿಯನ್‌ನ ಸರಾಸರಿಗಿಂತ ಹೆಚ್ಚಿನದು. ವರ್ಲ್ಡ್ ಅಟ್ಲಾಸ್ ವರದಿ ಪ್ರಕಾರ, 65 ವರ್ಷ ಮೇಲ್ಪಟ್ಟ ವಯೋವರ್ಗದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.

ಗೆಳತಿಯ ಬರ್ತ್‌ಡೇಗಾಗಿ 26 ಕಿ.ಮೀ ಓಡಿದ ಬೆಂಗಳೂರಿನ ಯುವಕ! ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

ತನ್ನ ಗೆಳತಿಯ 26 ನೇ ಹುಟ್ಟುಹಬ್ಬಕ್ಕೆ 26 ಕಿ.ಮೀ ಓಡಿ ಗಮನ ಸೆಳೆದ ಯುವಕ!

Viral Video: ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸಂಗಾತಿಯ ಈ ವಿಶೇಷ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ತನ್ನ ಗೆಳತಿಯ 26 ನೇ ಹುಟ್ಟುಹಬ್ಬದ ನೆನಪಿಗಾಗಿ 26 ಕಿಲೋ ಮೀಟರ್ ಓಡುವ ಮೂಲಕ ಸಾಹಸ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

viral video: ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ

ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ

Bangladesh Unrest: ಈಗಾಗಲೇ ಬಾಂಗ್ಲಾದಲ್ಲಿ ಹಲವು ಹಿಂದೂಗಳನ್ನು ಬೆಂಕಿ ಹಚ್ಚಿ ಹತ್ಯೆಗೈದ ಘಟನೆಗಳು ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮತ್ತು ಹಿಂದೂ ವಿಧವಾ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ರವೆಸಗಿದ ಹೀನ ಘಟನೆಗಳು ನಡೆದಿತ್ತು.

ಪ್ರಯಾಗ್‌ರಾಜ್‌ನಲ್ಲಿ 5 ಕೋಟಿ ರುಪಾಯಿ ಮೌಲ್ಯದ ಚಿನ್ನ ಧರಿಸಿದ ಗೂಗಲ್ ಗೋಲ್ಡನ್ ಬಾಬಾನದ್ದೇ ಹವಾ: ಸೆಲ್ಫಿಗಾಗಿ ಮುಗಿಬಿದ್ದ ಜನ

5 ಕೋಟಿ ರುಪಾಯಿ ಮೌಲ್ಯದ ಚಿನ್ನ ಧರಿಸುವ 'ಗೋಲ್ಡನ್ ಬಾಬಾ' ಯಾರು?

Viral News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಆರಂಭವಾಗಿದೆ. ಈ ಮೇಳದಲ್ಲಿ ತಪಸ್ವಿಯೊಬ್ಬರು ಗಮನ ಸೆಳೆದಿದ್ದಾರೆ. ಲಕ್ಷಾಂತರ ಸಾಧುಗಳ ನಡುವೆ 'ಗೂಗಲ್ ಗೋಲ್ಡನ್ ಬಾಬಾ' ಎಂದು ಖ್ಯಾತ ಪಡೆದಿರುವ ಇವರು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಳಿಯನಿಗೆ ರಾಜಾತಿಥ್ಯ ತೋರಿದ ಅತ್ತೆ-ಮಾವ: ಸಂಕ್ರಾಂತಿ ಹಬ್ಬಕ್ಕೆ 158 ಬಗೆಯ ಖಾದ್ಯ ತಯಾರಿಸಿ ಉಣಬಡಿಸಿದ ಕುಟುಂಬ!

ಅಳಿಯನಿಗೆ 158 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದ ಅತ್ತೆ: ವಿಡಿಯೋ ವೈರಲ್

Viral Video: ಆಂಧ್ರ ಕುಟುಂಬವು ಅಳಿಯನಿಗೆ 158 ಬಗೆಯ ರುಚಿಕರವಾದ ತಿನಿಸುಗಳೊಂದಿಗೆ ಅದ್ಧೂರಿ ಸಂಕ್ರಾಂತಿ ಹಬ್ಬವನ್ನು ಏರ್ಪಡಿಸಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು ಭರ್ಜರಿ ಔತಣ ಕೂಟವನ್ನು ಏರ್ಪಡಿಸಿದ್ದಾರೆ.ಅಳಿಯ ಶ್ರೀದತ್ತ ಅವರಿಗೆ ಬರೋಬ್ಬರಿ 158 ಬಗೆಯ ಖಾದ್ಯಗಳನ್ನು ಉಣಬಡಿಸುವ ಮೂಲಕ ಈ ಕುಟುಂಬ ಸುದ್ದಿಯಾಗಿದ್ದು ಇದರ ವಿಡಿಯೊ ಭಾರೀ ವೈರಲ್ ಆಗಿದೆ.

3 ದಿನ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿದ ಶ್ವಾನ! ಇದೊಂದು ಅದ್ಭುತವೋ, ಮಾನಸಿಕ ಕಾಯಿಲೆಯೋ? ತಲೆ ಕೆರೆದುಕೊಂಡ ನೆಟ್ಟಿಗರು

ಹನುಮಂತನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ಶ್ವಾನ

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ದೇವಾಲಯದೊಳಗೆ ಬೀದಿ ನಾಯಿಯೊಂದು ಮೂರು ದಿನಗಳ ಕಾಲ ದೇವರ ಮೂರ್ತಿಗಳ ಸುತ್ತ ಪ್ರದಕ್ಷಿಣೆ ಹಾಕಿದ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

50 ವರ್ಷಗಳಿಂದ ನಿದ್ದೆಯೆ ಮಾಡಿಲ್ಲವಂತೆ ಈ ವ್ಯಕ್ತಿ! ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದ ಪ್ರಕರಣ!

50 ವರ್ಷಗಳಿಂದ ನಿದ್ದೆಯೇ ಮಾಡದೇ ವೈದ್ಯರನ್ನು ಬೆಚ್ಚಿಬೀಳಿಸಿದ ವ್ಯಕ್ತಿ!.

Viral News: ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಲ್ಲಿ ಒಂದೇ ಒಂದು ಕ್ಷಣವೂ ನಿದ್ದೆ ಮಾಡಿಲ್ಲ, ಆದರೆ ಸಾಮಾನ್ಯ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ವೈದ್ಯಲೋಕಕ್ಕೆ ಸವಾಲು ಹಾಕಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..

ಚಲಿಸುವ ಆಟೋದ ಮೇಲೆ ಕುಳಿತು ಡಾಗೇಶ್‌ ಭಾಯ್‌ ಸವಾರಿ: ಭಾರೀ ವೈರಲ್ ಆಗ್ತಿದೆ ಈ ವಿಡಿಯೊ!

ವೇಗವಾಗಿ ಚಲಿಸುವ ರಿಕ್ಷಾದ ಟಾಪ್ ಮೇಲೆ ಕುಳಿತ ಬೀದಿನಾಯಿ: ವಿಡಿಯೊ ವೈರಲ್!

Viral Video: ಮುಂಬೈನ ರಸ್ತೆಯೊಂದರಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ನೆಟ್ಟಿಗರ ಕಣ್ಣು ಅರಳಿಸಿದೆ. ವೇಗವಾಗಿ ಚಲಿಸುವ ರಿಕ್ಷಾದ ಛಾವಣಿಯ ಮೇಲೆ ಬೀದಿ ನಾಯಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಈಗ ಭಾರಿ ಸಂಚಲನ ಸೃಷ್ಟಿಸಿದೆ. ಸುತ್ತಲೂ ವಾಹನಗಳು ಇದ್ದರೂ, ಆಟೋ ವೇಗವಾಗಿ ಚಲಿಸುತ್ತಿದ್ದರೂ ಸಹ, ಈ ಶ್ವಾನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೆ ಸವಾರಿ ಮಾಡುತ್ತಿದೆ.

ಆಸ್ಪತ್ರೆಯ ಆಕ್ಸಿಜನ್ ಪೈಪ್ ಮೇಲೆಯೇ ಇಲಿಗಳ ಓಡಾಟ: ಬೆಚ್ಚಿಬೀಳಿಸುವ ದೃಶ್ಯ ಇಲ್ಲಿದೆ!

ಆಸ್ಪತ್ರೆಯೊಳಗೆ ರಾಜರೋಷವಾಗಿ ಇಲಿಗಳ ಓಡಾಟ; ವಿಡಿಯೊ ವೈರಲ್!

Viral Video: ಉತ್ತರ ಪ್ರದೇಶದ ಗೊಂಡಾದ ಬಾಬು ಈಶ್ವರ್ ಶರಣ್ ಆಸ್ಪತ್ರೆಯ ವಾರ್ಡ್‌ನೊಳಗೆ ಇಲಿಗಳು ಓಡಾಡುತ್ತಿರುವ ಘಟನೆ ಕಂಡು ಬಂದಿದ್ದು‌ ರೋಗಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆ ಗಳನ್ನು ಹುಟ್ಟುಹಾಕಿದೆ. ಆಸ್ವತ್ರೆಯ ವಾರ್ಡ್‌ನಲ್ಲಿ ರೋಗಿಗಳು ಮಲಗಿದ್ದಾಗಲೇ ಅವರ ತಲೆಯ ಮೇಲಿರುವ ಆಕ್ಸಿಜನ್ ಪೈಪ್‌ಗಳ ಮೇಲೆ ಇಲಿಗಳು ರಾಜ ಗಾಂಭಿರ್ಯವಾಗಿ ಓಡಾಡುತ್ತಿವೆ.

ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದು ಗೆಳತಿ ಜತೆ ಗಾಳಿಪಟ ಹಾರಿಸಿದ ಪಾಂಡ್ಯ; ವಿಡಿಯೊ ವೈರಲ್

ಮಹೀಕಾ ಶರ್ಮಾ ಜತೆ ಗಾಳಿಪಟ ಹಾರಿಸಿದ ಪಾಂಡ್ಯ; ವಿಡಿಯೊ ವೈರಲ್

Hardik Pandya: ಸೆಂಟರ್ ಆಫ್ ಎಕ್ಸಲೆನ್ಸ್ ತಂಡವು 10 ಓವರ್‌ಗಳ ಪೂರ್ಣ ಸ್ಪೆಲ್ ಅನ್ನು ಸ್ಥಿರವಾಗಿ ಬೌಲಿಂಗ್ ಮಾಡಲು ಅನುಮತಿ ನೀಡದ ಕಾರಣ, ಆಲ್‌ರೌಂಡರ್ ಅವರನ್ನು ನ್ಯೂಜಿಲೆಂಡ್ ಸರಣಿಗೆ ಭಾರತದ ಏಕದಿನ ತಂಡದಿಂದ ಹೊರಗಿಡಲಾಯಿತು. ಪಾಂಡ್ಯ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಕೋಟಾವನ್ನು ಬೌಲಿಂಗ್ ಮಾಡಿದ್ದರೂ, ತಂಡದ ಆಡಳಿತವು 50 ಓವರ್‌ಗಳ ಸ್ವರೂಪದಲ್ಲಿ ಅವರನ್ನು ಅಪಾಯಕ್ಕೆ ಸಿಲುಕಿಸದಿರಲು ನಿರ್ಧರಿಸಿತು.

ಫ್ರಾನ್ಸ್‌ಗಿಂತ ಭಾರತ ಯಾಕೆ ಉತ್ತಮ? ಫ್ರೆಂಚ್ ಯುವತಿಯ ಮನಗೆದ್ದ 5 ವಿಚಾರಗಳು

ಭಾರತವನ್ನು ಈ ವಿಚಾರಗಳಿಗಾಗಿ ಹೊಗಳಿದ ವಿದೇಶಿ ಮಹಿಳೆ

Viral Video: ಭಾರತದಲ್ಲಿ ನೆಲೆಸಿರುವ ಫ್ರೆಲ್ಡಾವೇ ಎಂಬ ಫ್ರೆಂಚ್ ಮೂಲದ ಯುವತಿ ಭಾರತದ ಬಗ್ಗೆ ಹಲವು ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ತನ್ನ ದೇಶ ಫ್ರಾನ್ಸ್‌ಗಿಂತಲೂ ಭಾರತ ಯಾವ ವಿಷಯಗಳಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.

ದೆಹಲಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆ: ನೆಟ್ಟಿಗರಿಂದ ಆಕ್ರೋಶ

ದೆಹಲಿ ಶಾಲೆಯಲ್ಲಿ ಇಸ್ಲಾಮಿಕ್ ಪಾರ್ಥನೆ: ನೆಟ್ಟಿಗರಿಂದ ವಿರೋಧ

Viral Video: ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆ ಹೇಳಿಸುತ್ತಿರುವ ಘಟನೆಯೊಂದು ದೆಹಲಿಯ ಶಾಲೆಯೊಂದರಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ತರಗತಿಯ ಒಳಗೆ ಮಕ್ಕಳು ಇಸ್ಲಾಮಿಕ್ ಧರ್ಮದ ಶ್ಲೋಕಗಳನ್ನು ಪಠಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಭಾರತದ ಶೈಕ್ಷಣಿಕ ವ್ಯವಸ್ಥೆಯ ಉಲ್ಲಂಘನೆ ಮಾಡಿದಂತೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಟಿವಿ ಇಲ್ಲ, ಫೋನ್ ಇಲ್ಲ: 42 ದಿನಗಳವರೆಗೆ ಸಂಪೂರ್ಣ ಮೌನವಾಗಲಿದೆ ಈ 9 ಹಳ್ಳಿಗಳು; ಕಾರಣವೇನು?

42 ದಿನ ಸಂಪೂರ್ಣ ಸ್ತಬ್ಧವಾಗಲಿದೆ 9 ಹಳ್ಳಿಗಳು

Manali Rituals: ಹಿಮಾಚಲ ಪ್ರದೇಶದ ಮನಾಲಿಯ ಒಂಭತ್ತು ಹಳ್ಳಿಗಳಲ್ಲಿ 42 ದಿನ ಸಂಪೂರ್ಣ ಮೌನ ವೃತ ಪಾಲಿಸಲಾಗುತ್ತಿದೆ. ಈ ಸಮಯದಲ್ಲಿ ಟಿವಿ, ಮೊಬೈಲ್ ಫೋನ್ ಮತ್ತು ಇತರ ಶಬ್ಧಮೂಲಗಳನ್ನು ನಿಷೇಧಿಸಲಾಗಿದೆ. ಸ್ಥಳೀಯ ದೇವತೆಗಳ ಆದೇಶ ಮತ್ತು ಪ್ರಾಚೀನ ಪರಂಪರೆಯನ್ನು ಮುಂದುವರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹಿಟ್ಲರ್ ಹೆಸರನ್ನು ಹಾರ್ದಿಕ್ ಎಂದು ಬದಲಾಯಿಸಿದ ಯುವಕ: ಸೋಶಿಯಲ್ ಮೀಡಿಯಾದಲ್ಲಿ ನಗೆ ಚಟಾಕಿ

ಹಿಟ್ಲರ್ ಹೆಸರನ್ನು ಬದಲಾಯಿಸಿಕೊಂಡ ಯುವಕ: ಕಾಲೆಳೆದ ನೆಟ್ಟಿಗರು

Viral News: ಹರಿಯಾಣದ ಗುರುಗ್ರಾಮದ ಯುವಕನೊಬ್ಬ ತಮ್ಮ ವೈಯಕ್ತಿಕ ಕಾರಣದಿಂದ ಹೆಸರು ಬದಲಾಯಿಸಿಕೊಂಡಿರುವುದು ಈಗ ಭಾರಿ ಸುದ್ದಿಯಲ್ಲಿದೆ. ಈ ಯುವಕನ ಹೆಸರು ಹಿಟ್ಲರ್ ಆಗಿದ್ದು ಅದನ್ನು ಹಾರ್ದಿಕ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ.‌ ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ಲಂಡನ್‍ನಲ್ಲಿ ಮುಸ್ಲಿಂ ವ್ಯಕ್ತಿಯಿಂದ ಅಪಹರಿಸಲ್ಪಟ್ಟ ಹದಿಹರೆಯದ ಬಾಲಕಿಯನ್ನು ರಕ್ಷಿಸಿದ ಸಿಖ್‌ ಸಮುದಾಯ

ಮುಸ್ಲಿಂ ವ್ಯಕ್ತಿಯಿಂದ ಅಪಹರಿಸಲ್ಪಟ್ಟ ಹದಿಹರೆಯದ ಬಾಲಕಿಯ ರಕ್ಷಣೆ

London Sikh Rescue: ಇಂಗ್ಲೆಂಡ್‌ನ ಪಶ್ಚಿಮ ಲಂಡನ್‌ನಲ್ಲಿ ನಡೆದ ಘಟನೆಯೊಂದು ಜಗತ್ತಿನ ಗಮನ ಸೆಳೆದಿದೆ. ಮುಸ್ಲಿಂ ವ್ಯಕ್ತಿಯಿಂದ ಅಪಹರಿಸಲ್ಪಟ್ಟಿದ್ದ ಹದಿಹರೆಯದ ಬಾಲಕಿಯನ್ನು ಸಿಖ್ ಸಮುದಾಯದವರು ರಕ್ಷಿಸಿದ್ದಾರೆ. ಲಂಡನ್‍ನಲ್ಲಿ ನಡೆದ ಈ ಘಟನೆ, ಬಾಲಕಿಯರ ಸುರಕ್ಷತೆ ಮತ್ತು ಗ್ರೂಮಿಂಗ್ ಪ್ರಕರಣಗಳ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಪನೀರ್‌ನಿಂದಾಗಿ ಅಮೆರಿಕದಲ್ಲಿ 1.8 ಕೋಟಿ ರುಪಾಯಿ ಗಳಿಸಿದ ಭಾರತೀಯ ವಿದ್ಯಾರ್ಥಿಗಳು; ಏನಿದು ಸ್ಟೋರಿ? ಇಲ್ಲಿದೆ ವಿವರ

ಅಮೆರಿಕದಲ್ಲಿ ಭಾರತೀಯರಿಗೆ 1.8 ಕೋಟಿ ರುಪಾಯಿ ತಂದುಕೊಟ್ಟ ಪನೀರ್‌

Food discrimination: ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯನಲ್ಲಿ ಭಾರತೀಯ ಆಹಾರ ಪಾಲಕ್ ಪನೀರ್ ಖಾದ್ಯವನ್ನು ವಾಸನೆ ಎಂದು ಕರೆದು, ತಾರತಮ್ಯ ತೋರಿದ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಿದೆ. ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಊರ್ಮಿ ಭಟ್ಟಾಚಾರ್ಯರು ಕೋರ್ಟ್‌ನಲ್ಲಿ ಜಯಗಳಿಸಿದ್ದು ಅವರಿಗೆ 1.8 ಕೋಟಿ ರುಪಾಯಿ ಪರಿಹಾರ ಸಿಕ್ಕಿದೆ.

ರಾಂಗ್ ನಂಬರ್‌ನಿಂದ ಹುಟ್ಟಿದ ಪ್ರೀತಿ: 35 ವರ್ಷದ ಯುವಕನನ್ನು ವರಿಸಿದ 60ರ ಮಹಿಳೆ

60 ವರ್ಷದ ಮಹಿಳೆಯನ್ನು ವರಿಸಿದ 35ರ ಯುವಕ

ಬಿಹಾರದ ಬಂಕಾ ಜಿಲ್ಲೆಯಲ್ಲಿ ಅಪರೂಪದ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. 60 ವರ್ಷದ ಮಹಿಳೆಯೊಬ್ಬಳು ತನ್ನ ಅರ್ಧದಷ್ಟು ವಯಸ್ಸಿನ - 35 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Loading...