ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಬರ್ತ್‌ಡೇಗೆ ಸ್ನೇಹಿತರ ಜೊತೆ ಮ್ಯಾಗಿ ಪಾರ್ಟಿ; ಬಾಲಕನ ಮುಗ್ದತೆಗೆ ನೆಟ್ಟಿಗರು ಫಿದಾ

ಕೂಡಿಟ್ಟ 100 ರೂ. ಮ್ಯಾಗಿ ಬರ್ತ್‌ಡೇ ಪಾರ್ಟಿ: ಹೃದಯ ಗೆದ್ದ ಬಾಲಕನ ವಿಡಿಯೊ

Viral Video: ಜಾರ್ಖಂಡ್ ಬಾಲಕ‌ನ ಸರಳ ಬರ್ತ್‌ಡೇ ಪಾರ್ಟಿಗೆ ಇಡೀ ದೇಶದ ಜನರೇ ಫಿದಾ ಆಗಿದ್ದಾರೆ. ರೆಸ್ಟೋರೆಂಟ್, ಪಬ್ ಎಂದು ಬರ್ತ್ ಡೇ ಆಚರಿಸಿಕೊಳ್ಳುವವರ ಮಧ್ಯೆ ಈ ಬಾಲಕ ತನ್ನ ಸ್ನೇಹಿತರಿಗೆ ಮ್ಯಾಗಿ ಪಾರ್ಟಿಯನ್ನು ನೀಡುವ ಮೂಲಕ ಮನಗೆದಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡ್ರೈವಿಂಗ್ ಮಾಡುತ್ತಲೇ 20 ನಿಮಿಷ ನಿದ್ದೆಗೆ ಜಾರಿದ ಉಬರ್‌ ಚಾಲಕ; ಭಯಾನಕ ವಿಡಿಯೋ ವೈರಲ್‌

ಪ್ರಯಾಣದ ಸಂದರ್ಭದಲ್ಲಿ ನಿದ್ರಿಸಿದ ಚಾಲಕ: ವಿಡಿಯೊ ವೈರಲ್

Viral News: ಇಲ್ಲೊಬ್ಬ ಉಬರ್ ಚಾಲಕನು ಪ್ರಯಾಣಿಕರನ್ನು ಕೂರಿಸಿಕೊಂಡೆ ನಿದ್ರೆಗೆ ಜಾರಿದ ಘಟನೆಯೊಂದು ನಡೆದಿದೆ. ಕಾರು ಸುಮಾರು 20 ನಿಮಿಷದ ವರೆಗೆ ತಾನಾಗಿಯೇ ಚಲಿಸಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಕೇದಾರನಾಥ ದೇವಾಲಯದ ಟೆಂಟ್‌ ಒಳಗೇ ಮದ್ಯಪಾನ! ವೈರಲ್‌ ಆಯ್ತು ಕಿಡಿಗೇಡಿಗಳ ಕೃತ್ಯ

ಕೇದರನಾಥ ದೇವಾಲಯದ ಬಳಿ ಎಣ್ಣೆ ಪಾರ್ಟಿ: ವಿಡಿಯೊ ನೋಡಿ ಭಕ್ತರ ಆಕ್ರೋಶ

Viral Video: ಕೇದಾರನಾಥ ದೇವಾಲಯದ ಸಮೀಪ ಇರುವ ಟೆಂಟ್ ಒಳಗೆ ಹಲವಾರು ಯಾತ್ರಿಕರು ಜೊತೆ ಸೇರಿ ಮದ್ಯಪಾನ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಪವಿತ್ರ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರ ವರ್ತನೆಯ ಬಗ್ಗೆ ಭಕ್ತರು ಮತ್ತು ನೆಟಿಜನ್‌ಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

ಒಂದೇ ವೀಲ್‌ನ ಸೈಕಲ್‌ನಲ್ಲೇ ಕೇರಳದಿಂದ ನೇಪಾಳಕ್ಕೆ ಪ್ರಯಾಣ; ಬಾಲಕನ ಬ್ಯಾಲೆನ್ಸ್ ಸ್ಕಿಲ್‌ಗೆ ನೆಟ್ಟಿಗರು ಫಿದಾ!

ಕೇರಳದಿಂದ ನೇಪಾಳಕ್ಕೆ ಒಂದೇ ಚಕ್ರದ ಸೈಕಲ್‌ನಲ್ಲಿ ಪ್ರಯಾಣಿಸಿದ ಬಾಲಕ!

Viral Video: ಕೇರಳದಿಂದ ನೇಪಾಳಕ್ಕೆ ಒಂದೇ ಚಕ್ರದ ಸೈಕಲ್‌ನಲ್ಲಿ ಬಾಲಕನೊಬ್ಬ ಪ್ರಯಾಣ ಬೆಳೆಸಿದ್ದಾನೆ. ಸದ್ಯ ಇದರ ವಿಡಿಯೊ ಭಾರೀ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಬಾಲಕನು ಕೇವಲ ಒಂದೇ ಚಕ್ರದ ಸೈಕಲ್ ಏರಿ ಸುದೀರ್ಘ ಪ್ರಯಾಣ ಬೆಳೆಸಿದ್ದಾನೆ. ಈತನ ಧೈರ್ಯ ಹಾಗೂ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ

ಫಾಲೋವರ್ಸ್ ಹೆಚ್ಚಿಸಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ

ಸಾಮಾಜಿಕ ಮಾಧ್ಯಮದಲ್ಲಿ ಈಗ ಜಿರಳೆ ಜನತಾ ಪಕ್ಷದ್ದೇ ಕಾರುಬಾರು. ಮೇ 16 ರಿಂದ ಸುದ್ದಿ ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಇನ್ಸ್ಟಾಗ್ರಾಮ್ ಖಾತೆಯು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುವ ರಾಜಕೀಯ ವೇದಿಕೆ ಎಂದು ಇದನ್ನು ಗುರುತಿಸಲಾಗಿದ್ದು, ಕೇವಲ 5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಗಳನ್ನು ಪಡೆದಿದೆ. ಈ ಮೂಲಕ ಅದು ಬಿಜೆಪಿಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ.

''ಒಂದೇ ಒಂದು ಗುಂಡಿ ಇಲ್ಲ! ಬೆಂಗಳೂರಿಗಿಂತ ಹೈದರಾಬಾದ್ ರಸ್ತೆಗಳೇ ಪರ್ಫೆಕ್ಟ್," ವಿದೇಶಿ ಪ್ರವಾಸಿಗ ಹೇಳಿದ್ದೇನು?

ಬೆಂಗಳೂರಿಗಿಂತ ಹೈದರಾಬಾದ್ ರಸ್ತೆ ಬೆಸ್ಟ್ ಎಂದ ಕೆನಡಾ ಪ್ರಜೆ: ಹೇಳಿದ್ದೇನು?

Viral Video: ಭಾರತದ ಪ್ರಮುಖ ನಗರವಾದ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಆಗಾಗ ಪೈಪೋಟಿ ಆಗುತ್ತಲೇ ಇರುತ್ತವೆ‌ , ಈ ಬಾರಿ ಕೆನಡಾದ ಪ್ರವಾಸಿಹೈದರಾಬಾದ್‌ನ ರಸ್ತೆಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಬೆಂಗಳೂರಿನ ರಸ್ತೆಗಳ ಸ್ಥಿತಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿಹೊಂದುತ್ತಿದ್ದರೂ ಇನ್ನೂ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳಲ್ಲಿ ಯಾಕೆ ಮುಂದಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಮೆಲೋಡಿ ಚಾಕೊಲೇಟ್‌ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್‌; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ

ಹಿಂದಿಯಲ್ಲಿ ಮಾತನಾಡಿದ ಜಾರ್ಜಿಯಾ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇಟಲಿ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ವರ್ಣಿಸಲು ಅವರು ಹಿಂದಿ ಪದಗುಚ್ಛವನ್ನು ಬಳಸಿದ್ದು, ಅನೇಕರನ್ನು ಅಚ್ಚರಿಗೊಳಿಸಿದೆ.

ಅಂಗಡಿಗೆ ದಿನನಿತ್ಯ ಆಗಮಿಸುವ ದನಕ್ಕೆ ಬಿಸಿ ಬಿಸಿ ದೋಸೆ ಆತಿಥ್ಯ: ಹೃದಯ ಗೆದ್ದ ವಿಡಿಯೊ ಇಲ್ಲಿದೆ

ಹಸುವಿಗೆ ತಾಜಾ ದೋಸೆ ಬಡಿಸುವ ಬೀದಿ ಬದಿ ವ್ಯಾಪಾರಿ: ವಿಡಿಯೊ ಇಲ್ಲಿದೆ

Viral Video: ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಭಾಂದವ್ಯ ಸಾರುವ ಕ್ಯೂಟ್ ದೃಶ್ಯ, ಪ್ರಾಣಿಗಳ ಸ್ಪಂದಿಸುವ ವರ್ತನೆಗಳು ಗಮನ ಸೆಳೆಯುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ದೃಶ್ಯ ಜಾರ್ಖಂಡ್‌ನ ಬೀದಿಬದಿಯ ಅಂಗಡಿಯೊಂದರಲ್ಲಿ ಕಂಡು ಬಂದಿದೆ. ಅಂಗಡಿ ಮಾಲಕ ದನವೊಂದಕ್ಕೆ ಬಿಸಿ ಬಿಸಿ ದೋಸೆ ನೀಡಿ ಸತ್ಕರಿಸುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಹಾಡ ಹಗಲೇ 4 ವರ್ಷದ ಮಗುವಿನ ಅಪಹರಣ: ದುಷ್ಕರ್ಮಿಗಳ ವಿರುದ್ಧ ಅಜ್ಜ-ಅಜ್ಜಿಯ ದಿಟ್ಟ ಹೋರಾಟ

ಹಗಲಿನಲ್ಲೇ 4 ವರ್ಷದ ಬಾಲಕಿಯ ಕಿಡ್ನಾಪ್

Viral News: ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹಗಲು ಸಮಯದಲ್ಲೇ 4 ವರ್ಷದ ಹೆಣ್ಣು ಮಗುವೊಂದನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಿದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿ ತನ್ನ ಅಜ್ಜನೊಂದಿಗೆ ಸ್ಕೂಟರ್‌ನಲ್ಲಿ ಮನೆಯ ಹೊರಗೆ ಕುಳಿತಿದ್ದಾಗ ಘಟನೆ ಸಂಭವಿಸಿದೆ. ಅಜ್ಜಿ ಗೇಟ್ ತೆರೆಯಲು ಹೋದಾಗ ಬೈಕ್‌ನಲ್ಲಿ ಬಂದ ಇಬ್ಬರು ಪುರುಷರು ಇದ್ದಕ್ಕಿದ್ದಂತೆ ಮನೆಯ ಬಳಿಗೆ ಧಾವಿಸಿದರು. ಮಗುವನ್ನು ರಕ್ಷಿಸಲು ವೃದ್ಧ ಅಜ್ಜ ಮತ್ತು ಅಜ್ಜಿ ತಮ್ಮ ಪ್ರಾಣದ ಹಂಗು ತೊರೆದು ದುಷ್ಕರ್ಮಿಗಳ ವಿರುದ್ಧ ಹೊರಾಡಿದ್ದಾರೆ.

ಪ್ರೇಮಿಗಾಗಿ ತಂದೆ ಸ್ಕೂಟರ್‌ ಕದ್ದು, ಮಕ್ಕಳನ್ನು ಬಸ್‌ನಲ್ಲೇ ಬಿಟ್ಟು ಓಡಿ ಹೋದ ಪಾಪಿ ತಾಯಿ

ಇಬ್ಬರ ಮಕ್ಕಳನ್ನು ಅನಾಥವಾಗಿಸಿ ಪ್ರೇಮಿಯೊಂದಿಗೆ ಓಡಿಹೋದ ತಾಯಿ

Viral News: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ ತನ್ನ ಮಕ್ಕಳನ್ನು ಚಲಿಸುವ ಬಸ್‌ನಲ್ಲಿಯೇ ಬಿಟ್ಟುಈ ಕೃತ್ಯ ಎಸಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

‘Melodi’ Effect: ಮೋದಿ-ಮೆಲೋನಿ ಭೇಟಿ ನಂತರ ಬ್ಲಿಂಕ್‌ಇಟ್‌, ಝೆಪ್ಟೊಗಳಲ್ಲಿ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

ಮೋದಿ-ಮೆಲೋನಿ ಭೇಟಿ ನಂತರ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

Modi-Meloni Meeting: ಪ್ರಧಾನಿ ನರೇಂದ್ರ ಮೋದಿ ರೋಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಟಾಫಿ (ಚಾಕೊಲೇಟ್‌) ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೀಡಿದ ಕೆಲವೇ ಗಂಟೆಗಳಲ್ಲಿ, ಇದರ ಮಾರಾಟದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಮೆಲೋಡಿ ಟಾಫಿ, ಪಾರ್ಲೆ ಪ್ರಾಡಕ್ಟ್ಸ್‌ನಿಂದ ತಯಾರಿಸಲ್ಪಟ್ಟ ಒಂದು ಕ್ಯಾರಮೆಲ್ ಕ್ಯಾಂಡಿ.

ರೋಮ್‌ನಲ್ಲಿ ಪ್ರಧಾನಿ ಮೋದಿಯೊಂದಿಗೆ ಜಾರ್ಜಿಯಾ ಮೆಲೋನಿ ಸೆಲ್ಫಿ ವೈರಲ್

ಜಾರ್ಜಿಯಾ ಮೆಲೋನಿ ಜೊತೆ ಪ್ರಧಾನಿ ಮೋದಿ ಸೆಲ್ಫಿ ವೈರಲ್

ರೋಮ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಅವರು ಆತ್ಮೀಯವಾಗಿ ಸ್ವಾಗತಿಸುತ್ತಿರುವುದು, ಮಾತುಕತೆ ನಡೆಸುತ್ತಿರುವುದು, ಭೋಜನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಬರ್ತ್ ಡೇ ಕೇಕ್ ಕತ್ತರಿಸಲು ಬರೋಬ್ಬರಿ 9,000 ರುಪಾಯಿ ಚಾರ್ಜ್: ದುಬಾರಿ ಮೊತ್ತದ ವಿಧಿಸಿದ ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರು ಗರಂ

ಕೇಕ್ ಕಟ್ ಮಾಡಲು 9,000 ರುಪಾಯಿ: ರೆಸ್ಟೋರೆಂಟ್‌ ವಿರುದ್ಧ ನೆಟ್ಟಿಗರು ಕಿಡಿ

Viral News: ಲಾಸ್ ಏಂಜಲೀಸ್‌ನ ಗ್ರಾಹಕರೊಬ್ಬರಿಂದ ಐಷಾರಾಮಿ ರೆಸ್ಟೋರೆಂಟ್‌ 9,000 ರುಪಾಯಿ ʼಕೇಕ್ ಕತ್ತರಿಸಿದʼ ಶುಲ್ಕವನ್ನು ಪಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆವರ್ಲಿ ಹಿಲ್ಸ್‌ನ ಪ್ರತಿಷ್ಠಿತ ‘ಪೋಜಾ’ ರೆಸ್ಟೋರೆಂಟ್‌ಗೆ ಗ್ರಾಹಕರೊಬ್ಬರು ಹುಟ್ಟುಹಬ್ಬದ ಆಚರಣೆಗಾಗಿ ಹೊರಗಿನಿಂದ ಕೇಕ್ ತರಿಸಿ ಕಟ್‌ ಮಾಡಿದ್ದಾರೆ. ಇದಕ್ಕಾಗಿ 9,000 ರುಪಾಯಿ ಚಾರ್ಜ್‌ ಮಾಡಲಾಗಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೊಡಿʼ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ; ವಿಡಿಯೊ ವೈರಲ್‌

ಮೆಲೋನಿಗೆ ‘ಮೆಲೊಡಿ’ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ

ಇಟಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೊಡಿ’ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ‘ಮೋದಿ’ ಮತ್ತು ‘ಮೆಲೋನಿ’ ಹೆಸರಿನ ಸಂಯೋಜನೆಯಾದ ‘ಮೆಲೊಡಿ’ ಪದ ಮತ್ತೆ ವೈರಲ್ ಆಗಿದ್ದು, ಇಬ್ಬರು ನಾಯಕರು ರೋಮ್‌ನ ಕೊಲೊಸಿಯಮ್‌ನಲ್ಲಿ ಮಾತುಕತೆ ನಡೆಸಿದ ಕ್ಷಣಗಳೂ ಗಮನ ಸೆಳೆದಿವೆ. ಭಾರತ-ಇಟಲಿ ಸ್ನೇಹ ಹಾಗೂ ರಕ್ಷಣಾ, ತಂತ್ರಜ್ಞಾನ, ಹಸಿರು ಇಂಧನ ಸಹಕಾರಕ್ಕೆ ಈ ಭೇಟಿ ಮತ್ತಷ್ಟು ಬಲ ನೀಡಲಿದೆ ಎಂದು ತಿಳಿಸಲಾಗಿದೆ.

25 ಲಕ್ಷ ರೂ. ಸಂಬಳದ ಕಾರ್ಪೊರೇಟ್ ಉದ್ಯಮಕ್ಕೆ ಗುಡ್ ಬೈ ಹೇಳಿದ 29 ವರ್ಷದ ಟೆಕ್ಕಿ: ಕಾರಣವೇನು ಗೊತ್ತಾ?

25 ಲಕ್ಷ ರೂ. ಸಂಬಳದ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ ಯುವಕ!

Viral News: 25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ 29 ವರ್ಷದ ಟೆಕ್ಕಿಯೊಬ್ಬರು ಕೆಲಸಕ್ಕೆ ರಿಸೈನ್ ಮಾಡಿದ ಘಟನೆ ಯೊಂದು ನಡೆದಿದೆ. 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನಿರಂತರ ಕೆಲಸದ ಒತ್ತಡಕ್ಕೆ ಮಣಿದು 25 ಲಕ್ಷ ರೂ ಸಂಬಳದ ಕೆಲಸವನ್ನು ತ್ಯಜಿಸುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ತಮಿಳುನಾಡು ಸಿಎಂ ವಿಜಯ್ ಕೊಠಡಿಯೊಳಗೆ ವಿಡಿಯೊ ಚಿತ್ರೀಕರಣ: ಹುಟ್ಟಿಕೊಳ್ತು ಹೊಸ ವಿವಾದ

ತಮಿಳುನಾಡು ಸಿಎಂ ವಿಜಯ್ ಕೊಠಡಿಯೊಳಗೆ ವಿಡಿಯೊ ಚಿತ್ರೀಕರಣ

specially-abled community meets Vijay: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಕೊಠಡಿಯಲ್ಲಿ ವಿಶೇಷಚೇತನ ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ಸೆಲ್ಫಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಶೇಷಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ನಿಯೋಗವು ತಮಿಳುನಾಡು ಸಚಿವಾಲಯದಲ್ಲಿ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿತ್ತು.

ಬೆಂಗಳೂರಿನಲ್ಲಿ 3BHK ಫ್ಲಾಟ್  ಬೆಲೆ ಇಷ್ಟೊಂದಾ? ರೇಟ್ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!

ಬೆಂಗಳೂರಿನ ದುಬಾರಿ ಬಾಡಿಗೆ ಮೊತ್ತ ಕೇಳಿ ದಂಗಾದ ನೆಟ್ಟಿಗರು; ಹೇಳಿದ್ದೇನು?

Viral News: ಬೆಂಗಳೂರಿ‌ನ ಅಪಾರ್ಟ್‌ಮೆಂಟ್‌ ಒಂದರ ಬೆಲೆ ಕೇಳಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಮಿಲ್ಲರ್ಸ್ ರೋಡ್ ನಲ್ಲಿರುವ 3BHK ಫ್ಲಾಟ್ ಒಂದರ ಬೆಲೆ ಬರೋಬ್ಬರಿ 6.5 ಕೋಟಿ ರೂಪಾಯಿ ಎಂದು ತಿಳಿದು ಮಧ್ಯಮ ವರ್ಗದ ಜನರು ಶಾಕ್ ಗೆ ಒಳಗಾಗಿದ್ದಾರೆ. ಮೆಟ್ರೋ ನಗರಗಳಲ್ಲಿ ಮನೆ ಹೊಂದುವುದು ಮಧ್ಯಮ ವರ್ಗದ ಖರೀದಿದಾರರಿಗೆ ಅಸಾಧ್ಯವಾಗುತ್ತಿದೆಯೇ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ...

ಪ್ರಮಾಣ ವಚನ ಸಮಾರಂಭದಲ್ಲಿ ವಂದೇ ಮಾತರಂ ಪಠಣ: ಕೇರಳದಲ್ಲಿ ವಿವಾದ

ಕೇರಳದಲ್ಲಿ ವಿವಾದವೆಬ್ಬಿಸಿದ ವಂದೇ ಮಾತರಂ ಪಠಣ

ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಈಗ ವಿವಾದವನ್ನು ಎಬ್ಬಿಸಿದೆ. ಇದು ಎಡಪಂಥೀಯರು ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಎಡಪಂಥೀಯರು ಟೀಕಿಸಿದ್ದರೆ, ಬಿಜೆಪಿ ಇದು ತಪ್ಪು ಎಂದು ಹೇಳಿದೆ.

ನಾರ್ವೆ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ ಪ್ರಧಾನಿ ಮೋದಿ; ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆ

ನಾರ್ವೆ ಪತ್ರಕರ್ತೆ ಪ್ರಶ್ನೆಗೆ ಉತ್ತರಿಸದ ಪ್ರಧಾನಿ ಮೋದಿ; ಮುಂದೇನಾಯ್ತು?

ನಾರ್ವೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉತ್ತರಿಸದೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ನಾರ್ವೆಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಲು ಮುಂದಾದರು. ಆದರೆ ಪ್ರಧಾನಿ ಮೋದಿ ಇದಕ್ಕೆ ಉತ್ತರಿಸದೇ ಹೋಗಿದ್ದರಿಂದ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದು ಹಂಚಿಕೊಂಡಿದ್ದು, ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿ ಪೊಲೀಸರ ಅತಿಥಿಯಾದ ಯುವಕ: ಸರಿಯಾಗಿ ಬುದ್ಧಿ ಕಲಿಸಿ ಎಂದ ನೆಟ್ಟಿಗರು

ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿ ಪೊಲೀಸರ ಅತಿಥಿಯಾದ ಯುವಕ

Viral Video: ಯುವಕನೊಬ್ಬ ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ತನ್ನ ಬೈಕ್‌ಗೆ ಕಾನೂನು ಬಾಹಿರವಾಗಿ ಭಾರೀ ಶಬ್ದದ ರೈಲಿನ ಹಾರ್ನ್ ಬಳಸಿ ಪ್ರಯಾಣಿಕರಲ್ಲಿ ಅತಂಕ ಹುಟ್ಟಿಸಿದ್ದಾನೆ. ಸದ್ಯ ಈ ವಿಚಾರ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮರೆಯಾದ ಮಾನವೀಯತೆ: ಒಡಿಶಾದಲ್ಲಿ ಸಾರ್ವಜನಿಕರೆದುರೇ ಯುವ ದಂಪತಿ ಮೇಲೆ ಭೀಕರ ಹಲ್ಲೆ

ಯುವ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

Viral Video: ಯುವ ದಂಪತಿಯ ಮೇಲೆ ದುಷ್ಕರ್ಮಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ದಂಪತಿಯನ್ನು ಅಟ್ಟಾಡಿಸಿ ಕ್ರೂರವಾಗಿ ಥಳಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಆಶಿಶ್ ಸಾಹು ಮತ್ತು ಮುಖೇಶ್ ಸಾಹು ಸೇರಿ ಐದಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೀಗೂ ನಡೆಯುತ್ತೆ ವಂಚನೆ: ಭಾರಿ ಬೆಲೆ ತೆತ್ತು ಖರೀದಿಸಿದ ಗ್ಯಾಸ್ ಸಿಲಿಂಡರ್‌ನಲ್ಲಿ ತುಂಬಿತ್ತು ಬರೀ ನೀರು!

ಸಿಲಿಂಡರ್‌ ಒಳಗೆ ಗ್ಯಾಸ್ ಬದಲು ನೀರು: ಮೀರತ್‌ನಲ್ಲಿ ಬಯಲಾಯ್ತು ವಂಚನೆ

Viral Video: ಉತ್ತರ ಪ್ರದೇಶದ ಬೀದಿ ಬದಿಯ ವ್ಯಾಪಾರಿಯೊಬ್ಬರು ಖರೀದಿಸಿದ ಸಿಲಿಂಡರ್ ಕಂಡು ದಂಗಾಗಿ ಹೋಗಿದ್ದಾರೆ. ಸಿಲಿಂಡರ್‌ನಿಂದ ಗ್ಯಾಸ್ ಬದಲಿಗೆ ನೀರು ಸುರಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗ್ಯಾಸ್ ವಿಚಾರದಲ್ಲೂ ಇಂತಹ ವಂಚನೆ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಒಳಗೆ ಗ್ಯಾಸ್ ತುಂಬಿಸುವ ಬದಲಿಗೆ ನೀರನ್ನು ತುಂಬಿಸಿ ಇಡಲಾಗಿದೆ.

ಜೈಲಿನಿಂದ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ಜೈಕಾರ, ಭರ್ಜರಿ ರೋಡ್ ಶೋ: ಇಂಥ ಜನಗಳು ಎಲ್ಲಿ ಸಿಕ್ತಾರೆ? ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಅತ್ಯಾಚಾರ ಆರೋಪಿ ಜೈಲಿನಿಂದ ಬಿಡುಗಡೆಯಾದಾಗ ಜೈಕಾರ, ರೋಡ್ ಶೋ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅತ್ಯಾಚಾರ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ನಾಚಿಗೆಗೇಡಿನ ದೃಶ್ಯ ಕಂಡಬಂತು. ಆತನಿಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಭರ್ಜರಿ ರೋಡ್‌ಶೋ ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅಮೆರಿಕ ಪ್ರವಾಸಿಗರ ಹುಚ್ಚಾಟ; ಪಂಚ್ ಕೋತಿಯ ಆವರಣಕ್ಕೆ ಅಕ್ರಮವಾಗಿ ನುಗ್ಗಿ ವಿಡಿಯೊ ಮಾಡಲು ಯತ್ನ

ಪಂಚ್ ಕೋತಿಯ ವಿಡಿಯೊ ಮಾಡಲು ಹೋಗಿ ಜೈಲು ಸೇರಿದ ಪ್ರವಾಸಿಗರು

Viral Video: ಲೈಕ್ಸ್ ಹಾಗೂ ವೀವ್ಸ್‌ಗಾಗಿ ವಿಡಿಯೊ ಮಾಡಲು ಹೋಗಿ ಇಬ್ಬರು ಪ್ರವಾಸಿಗರು ಜೈಲು ಸೇರುವಂತಾಗಿದೆ. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ವೈರಲ್ ಕೋತಿ ಪಂಚ್‌ನ ಆವರಣಕ್ಕೆ ನುಗ್ಗಿದ ಇಬ್ಬರು ಅಮೆರಿಕ ಪ್ರವಾಸಿಗರನ್ನು ಜಪಾನ್‌ ಪೊಲೀಸರು ಬಂದಿದ್ದಾರೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Loading...