ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ದಾಳಿ ವೇಳೆ ಗಾಂಜಾ ಕುಕ್ಕರ್‌ ಒಳಗೆ ಅಡಗಿಸಿಟ್ಟ ʼಬುದ್ಧಿವಂತʼ; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಗಾಂಜಾ ಕುಕ್ಕರ್‌ ಒಳಗೆ ಅಡಗಿಸಿಟ್ಟು ಸಿಕ್ಕಿಬಿದ್ದ ʼಬುದ್ಧಿವಂತʼ

Viral News: ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೇರಳಂನ ತ್ರಿಶ್ಶೂರ್‌ನಲ್ಲಿ ನಡೆದಿದೆ. ಪೊಲೀಸ್‌ ದಾಳಿಗೆ ವೇಳೆಗೆ ಗಾಂಜಾವನ್ನು ಪ್ರೆಷರ್‌ ಕುಕ್ಕರ್‌ಗೆ ಹಾಕಿದ್ದು ಅದರ ವಾಸನೆ ಬರುತ್ತಿದ್ದಂತೆ ಕೃತ್ಯ ಬೆಳಕಿಗೆ ಬಂದಿದೆ.

ರಸ್ತೆ ಬದಿ ಕಸ ಎಸೆದ ವಿಡಿಯೊ ವೈರಲ್‌; ಟ್ರೋಲ್‌ಗೆ ಅಂಜಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಟ್ರೋಲ್‌ಗೆ ಅಂಜಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Viral Littering Video: ರಸ್ತೆ ಕಸ ಎಸೆದಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಟ್ರೋಲ್‌ಗೆ ಆಹಾರವಾದ ನೋವಿನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಗೋವಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು 23 ವರ್ಷದ ಸ್ಯಾಮ್ಯುಯೆಲ್ ಡಿ ಬ್ರಗಾಂಕಾ ಎಂದು ಗುರುತಿಸಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪುಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಂಡ ಬೆಡ್‌ಶೀಟ್‌ನಲ್ಲಿ ಸಿಕ್ತು'ಮೇಡ್ ಇನ್ ಪಾಕಿಸ್ತಾನ್' ಟ್ಯಾಗ್; ತನಿಖೆಗೆ ಆದೇಶ

ಬೆಡ್‌ಶೀಟ್‌ನಲ್ಲಿ ಮೇಡ್ ಇನ್ ಪಾಕಿಸ್ತಾನ ಟ್ಯಾಗ್ ಪತ್ತೆ

Viral News: ಸ್ಥಳೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಖರೀದಿಸಿದ ಬೆಡ್ ಶೀಟ್‌ನಲ್ಲಿ ಮೇಡ್ ಇನ್ ಪಾಕಿಸ್ತಾನ್ ಎಂಬ ಲೇಬಲ್ ಪತ್ತೆಯಾಗಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಹೀಗೆ ಲೇಬಲ್ ಮಾಡಿದ ವಸ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೇಗೆ ಸಿಕ್ಕಿದೆ ಎಂಬುದು ನೆಟ್ಟಿಗರ ಪ್ರಶ್ನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

3 ಮೊಟ್ಟೆಗೆ 500 ರುಪಾಯಿ, ಪರಾಠಕ್ಕೆ 1,100 ರುಪಾಯಿ! ಮುಂಬೈಯ ಫೈವ್ ಸ್ಟಾರ್ ಹೊಟೇಲ್‌ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕ

ಫೈವ್ ಸ್ಟಾರ್ ಹೊಟೇಲ್‌ ದುಬಾರಿ ಬಿಲ್‌ಗೆ ಗ್ರಾಹಕ ಕಂಗಾಲು

Viral News: ಯಾವುದೇ ಫೈವ್ ಸ್ಟಾರ್ ಹೋಟೆಲ್ ಅಂದಾಗ ಸಾಮಾನ್ಯ ಹೊಟೇಲ್‌ಗಿಂತ ಅಧಿಕ ಬಿಲ್‌ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಖಾದ್ಯಗಳಿಗೆ ಎಲ್ಲೆ ಮೀರಿ ಗಗನಚುಂಬಿ ಬೆಲೆ ವಿಧಿಸಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. ಇದೀಗ ಮುಂಬೈಯ ಪ್ರತಿಷ್ಠಿತ ಹೊಟೆಲ್‌ನ ಬಿಲ್‌ ಭಾರಿ ಚರ್ಚೆಗೆ ಕಾರಣವಾಗಿದೆ.

ಪರೀಕ್ಷೆಯ ವೇಳೆ ವಿದ್ಯಾರ್ಥಿಗೆ ನೆರವು ನಿರಾಕರಿಸಿದ ಚಾಟ್‌ಜಿಪಿಟಿ: ಈ ಎಐ ಶಿಸ್ತಿನ ಸಿಪಾಯಿ ಎಂದ ನೆಟ್ಟಿಗರು

ಪರೀಕ್ಷೆ ವೇಳೆ ಉತ್ತರ ನೀಡಲು ನಿರಾಕರಿಸಿದ ಚಾಟ್‌ಜಿಪಿಟಿ

Viral News: ಚಾಟ್‌ಜಿಟಿಪಿ ಎಐ ಮೂಲಕ ಬಳಕೆದಾರರು ತಮ್ಮೆಲ್ಲ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ಪಡೆಯಬಹುದು. ಇದು ನಿಮ್ಮ ವೈಯಕ್ತಿಕ ಸಹಾಯಕನಂತೆ ಕೆಲಸ ಮಾಡುತ್ತದೆ. ಆದರೆ ಇಷ್ಟೆಲ್ಲ ನೆರವು ನೀಡುವ ಚಾಟ್‌ಜಿಟಿಪಿ ಇದೀಗ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ವೇಳೆ ನೆರವು ನೀಡಲು ನಿರಾಕರಿಸಿದೆ. ಇದೀಗ ಬಳಕೆದಾರರು ಎಐಯ ಕರಾಮಕ್ಕಿಗೆ ದಂಗಾಗಿದ್ದಾರೆ.

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆ; ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಬೆಚ್ಚಿಬಿದ್ದ ಯುವಕ: ಹಣ ಬಂದಿದೆಲ್ಲಿಂದ?

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆ

ಬಿಹಾರದ ಗಯಾ ಜಿಲ್ಲೆಯ ಬೋಧಗಯಾ ಸಮೀಪದ ಮಸ್ತಪುರ ಗ್ರಾಮದ ಪ್ಲಂಬರ್‌ ವಿಕಾಶ್ ಕುಮಾರ್ ಅವರ ಬ್ಯಾಂಕ್ ಖಾತೆಯಲ್ಲಿ ಏಕಾಏಕಿ 294 ಕೋಟಿ ರುಪಾಯಿ ಜಮೆಯಾಗಿರುವ ಘಟನೆ ಸಂಚಲನ ಮೂಡಿಸಿದೆ. ಖಾತೆಯಲ್ಲಿ ಕೇವಲ 113 ರುಪಾಯಿ ಉಳಿದಿದ್ದ ವೇಳೆ ಗುರುವಾರ ಬೆಳಗ್ಗೆ ಬ್ಯಾಲೆನ್ಸ್ ಪರಿಶೀಲಿಸಿದಾಗ 94 ಕೋಟಿ ರುಪಾಯಿ ಕಾಣಿಸಿಕೊಂಡಿದ್ದು, ಸಂಜೆ ವೇಳೆಗೆ ಅದು 294 ಕೋಟಿ ರುಪಾಯಿಗೆ ಏರಿದೆ. ಅಚ್ಚರಿಗೊಂಡ ವಿಕಾಶ್ ಕುಮಾರ್ ಗ್ರಾಮ ಮುಖಂಡರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ದಾಖಲೆಗಳು, ಸರ್ವರ್ ಲಾಗ್‌ಗಳು ಮತ್ತು ವಹಿವಾಟು ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಬ್ಯಾಂಕಿನ ತಾಂತ್ರಿಕ ದೋಷವೇ, ಸಾಫ್ಟ್‌ವೇರ್ ಸಮಸ್ಯೆಯೇ ಅಥವಾ ವಂಚನೆಗೆ ಸಂಬಂಧಿಸಿದ ಪ್ರಕರಣವೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಜಿಲೇಬಿಗೆ ‘ಸ್ಟ್ರಾಬೆರಿ ಲಸ್ಸಿ ಕಾಂಬಿನೇಷನ್; ಅಯ್ಯೋ ಇದೆಂಥಾ ವಿಚಿತ್ರ ಕಾಂಬಿನೇಷನ್‌!

ಜಿಲೇಬಿಗೆ ಸ್ಟ್ರಾಬೆರಿ ಲಸ್ಸಿ ಸೇರಿಸಿ ವಿಲಕ್ಷಣ ಖಾದ್ಯ ತಯಾರಿಸಿದ ವ್ಯಕ್ತಿ

Viral News: ಐಸ್ ಕ್ರೀಮ್ ರೋಲ್, ಲಿಚಿ ಮೊಮೊಸ್, ಜಾಮುನ್ ದೋಸೆ ಹೀಗೆ ವಿವಿಧ ಪಾಕ ವಿಧಾನದ ದೃಶ್ಯ ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಹಸಿರು ಬಣ್ಣದ ‘ಮಚ್ಚಾ ಜಿಲೇಬಿ ಮತ್ತು ಗುಲಾಬಿ ಬಣ್ಣದ ‘ಸ್ಟ್ರಾಬೆರಿ ಲಸ್ಸಿಯ ಕಾಂಬಿನೇಷನ್ ದೃಶ್ಯ ವೊಂದು ವೈರಲ್ ಆಗಿದೆ. ಚಿನ್ನದ ಬಣ್ಣ ದಲ್ಲಿ ಸಕ್ಕರೆ ಪಾಕದಿಂದ ಹೊಳೆಯುವ ಜಿಲೇಬಿಯನ್ನು ಜಪಾನಿನ ಪ್ರಸಿದ್ಧ ಹಸಿರು ಚಹಾದ ಪುಡಿಯಾದ 'ಮಚ್ಚಾ' ಬಳಸಿ ಹಸಿರು ಬಣ್ಣಕ್ಕೆ ತಿರುಗಿಸಿದ್ದಾರೆ..ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ‌.

ಅಯೋಧ್ಯೆಯ ಉದ್ಯಾನವನದಲ್ಲಿ ಯುವಜೋಡಿಯ ಖುಲ್ಲಾಂಖುಲ್ಲಾ ವರ್ತನೆ; ಕೇಸರಿ ಉಡುಪು ಧರಿಸಿದ ಯುವಕರಿಂದ ನೈತಿಕತೆಯ ಪಾಠ

ಅಯೋಧ್ಯೆಯ ಪಾರ್ಕ್‌ನಲ್ಲಿ ಯುವ ಜೋಡಿ ಮೇಲೆ ಹಲ್ಲೆ: ವಿಡಿಯೊ ವೈರಲ್

Viral News: ಕೇಸರಿ ಉಡುಪು ಧರಿಸಿದ ಪುರುಷರ ಗುಂಪೊಂದು ಯುವ ಜೋಡಿಯನ್ನು ಅಟ್ಟಾಡಿಸಿ ಹೊಡೆದಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೊದಲ್ಲಿ ಸಂತರ ಉಡುಪಿನಲ್ಲಿರುವ ನಾಲ್ವರು ಪುರುಷರು ಉದ್ಯಾನವನದೊಳಗೆ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಬೆನ್ನಟ್ಟುತ್ತಿರುವುದನ್ನು ಸೆರೆ ಹಿಡಿಯಲಾಗಿದೆ.

ಉತ್ತರ ಪತ್ರಿಕೆಯೇ ನಾಪತ್ತೆ, ಮರುಮೌಲ್ಯಮಾಪನಕ್ಕೆ ಅಡ್ಡಿ: ದ್ವಿತೀಯ ಪಿಯುಸಿ ಸಿಬಿಎಸ್ಇ ವಿದ್ಯಾರ್ಥಿ ಅಳಲು

ಉತ್ತರ ಪತ್ರಿಕೆ ನಾಪತ್ತೆ: ವಿದ್ಯಾರ್ಥಿ ದೂರು

ಮರುಮೌಲ್ಯ ಮಾಪನಕ್ಕೆಂದು ಉತ್ತರ ಪತ್ರಿಕೆಯನ್ನು ಕೇಳಲಾಗಿದ್ದು, ಅದರಲ್ಲಿ ಒಂದು ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಸಿಬಿಎಸ್ಇ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು? ಮುಂಬೈಯಲ್ಲಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನ ವಿಡಿಯೊ ವೈರಲ್

ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ: ನೆಟ್ಟಿಗರ ಆಕ್ರೋಶ

Viral News: ದೇಶದ ಅತ್ಯಂತ ಸುರಕ್ಷತೆ ಹಾಗೂ ಜನಸಂದಣಿ ಸೇರುವ ಮುಖ್ಯ ನಗರ ಮುಂಬೈನಲ್ಲೇ ಮಹಿಳಾ ಪ್ರಯಾಣಿಕರೊಬ್ಬರಿಗೆ ಮರೆಯಲಾಗದ ಘಟನೆ ನಡೆದಿದೆ. ಆಟೋ ಚಾಲಕನು ಮಹಿಳೆ ಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತ ವಾಗಿದೆ.

ಧರ್ಮಶಾಲಾದಲ್ಲಿ ತರಕಾರಿ ಎಸೆದು ವಿದೇಶಿ ಪ್ರವಾಸಿಗನ ರಂಪಾಟ; ನಾಗರಿಕ ಪ್ರಜ್ಞೆಯ ಕಾಳಜಿ ಉಳ್ಳವರು ಈಗ ಎಲ್ಲಿದ್ದಾರೆ ಎಂದು ನೆಟ್ಟಿಗರ ಪ್ರಶ್ನೆ

ಧರ್ಮಶಾಲಾದಲ್ಲಿ ತರಕಾರಿ ಎಸೆದು ಗದ್ದಲ ಸೃಷ್ಟಿಸಿದ ವಿದೇಶಿ ಪ್ರವಾಸಿಗ

Viral News: ವಿದೇಶದ ಪ್ರೇಕ್ಷಣೀಯ ಸ್ಥಳದಲ್ಲಿ ಭಾರತೀಯರು ರೀಲ್ಸ್ ಮಾಡುವುದು, ಸಾಲಿನಲ್ಲಿ ನಿಲ್ಲದೆ ಅಶ್ತಿನಿಂದ ವರ್ತಿಸುವುದು ಹೀಗೆ ಅನೇಕ ಘಟನೆಗಳು ವೈರಲ್‌ ಆಗಿದ್ದವು. ಈ ಬಗ್ಗೆ ಟೀಕೆ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಯು ರಂಪಾಟ ನಡೆಸಿರುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗ ಅನುಚಿತವಾಗಿ ವರ್ತಿಸಿದ್ದಾನೆ. ಈಗ ನಾಗರಿಕ ಪ್ರಜ್ಞೆ ಹೊಂದಿರುವ ವಿದೇಶಿಗರು ಎಲ್ಲಿದ್ದಾರೆ ಎಂದುನೆಟ್ಟಿಗರು ಪ್ರಶ್ನಿಸಿದ್ದಾರೆ.

ಪ್ರವಾಸಿ ಸ್ಥಳದಲ್ಲಿ ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ಕಾಮುಕ: ವಿಡಿಯೊ ವೈರಲ್

ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಯುವಕ

Viral News: ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಾರ್ವಜನಿಕವಾಗಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದು, ಇದರ ಸಿಸಿಟಿವಿ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಯುವಕನ ಬಳಿ ಲಿಫ್ಟ್ ಕೇಳಿ ಮೊಬೈಲ್ ದೋಚಲು ಯತ್ನಿಸಿದ ಕಳ್ಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಮಾಡಿದ್ದೇನು? ವೈರಲಾಯ್ತು ವಿಡಿಯೊ

ಲಿಫ್ಟ್ ಕೇಳುವ ನೆಪದಲ್ಲಿ ಮೊಬೈಲ್‌ ಎಗರಿಸಿ ಸಿಕ್ಕಿಬಿದ್ದ ಕಳ್ಳಿ

Viral News: ಸಹಾಯ ಕೇಳುವ ನೆಪದಲ್ಲೂ ಮೋಸ ಮಾಡುವ ಅನೇಕ‌ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಲಿಫ್ಟ್‌ ಕೇಳುವ ನೆಪದಲ್ಲಿ ಯುವತಿಯೊಬ್ಬಳು ಹೈಡ್ರಾಮ ಮಾಡಿದ್ದಾಳೆ. ಸವಾರೊಬ್ಬನ ಬಳಿ ಲಿಫ್ಟ್ ಕೇಳಿ ಬಳಿಕ ಆತನ ಮೊಬೈಲ್ ಅನ್ನೇ ಕದಿಯಲು ಮುಂದಾಗಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ತಾಜ್ ಮಹಲ್ ಎದುರಿನ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಾನರ ಸೇನೆ; ಬಿಸಿಲ ಬೇಗೆಯಿಂದ ಪಾರಾಗಲು ಕೂಲ್‌ ಐಡಿಯ

ತಾಜ್ ಮಹಲ್ ಬಳಿಯ ಕಾರಂಜಿಯಲ್ಲಿ ಎಂಜಾಯ್ ಮಾಡಿದ ವಾನರ ಸೇನೆ

Viral Video: ನೀರಿನ ಅಭಾವದಿಂದಾಗಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಕೂಡ ತತ್ತರಿಸಿ ಹೋಗಿವೆ.‌ ಸರಿಯಾಗಿ ಆಹಾರವಿಲ್ಲದೆ, ದಣಿವು ನಿವಾರಿಸಿಕೊಳ್ಳಲು ನೀರಿಲ್ಲದೆ ನರಳಾಡುತ್ತಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಬಿಸಿಲಿನ ತಾಪಕ್ಕೆ ಸುಸ್ತಾದ ಮಂಗಗಳು, ನೀರನ್ನು ಹುಡುಕಿಕೊಂಡು ಬಸ್ಸನ್ನು ತಡೆದು ನಿಲ್ಲಿಸಿದ್ದವು. ಇದೀಗ ವಾನರ ಸೇನೆಯೊಂದು ತಾಜ್ ಮಹಲ್‌ ಬಳಿಯ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಿಡಿಯೊ ವೈರಲ್ ಆಗಿದೆ.

ಗೃಹಲಕ್ಷ್ಮಿ ಯೋಜನೆ ರೀತಿ ನಮಗೂ 2000 ರೂ. ಕೊಡಿ; ಸಿಎಂ ಡಿಕೆಶಿಗೆ ಬಾಲಕನ ಮನವಿ, ವಿಡಿಯೊ ವೈರಲ್‌!

ಗೃಹಲಕ್ಷ್ಮಿ ರೀತಿ ನಮಗೂ 2000 ರೂ. ಕೊಡಿ; ಸಿಎಂ ಡಿಕೆಶಿಗೆ ಬಾಲಕನ ಮನವಿ

ವಿದ್ಯಾರ್ಥಿಯರಿಗೆ ನೀಡಿದಂತೆ ನಮಗೂ ಬಸ್‌ ಫ್ರೀ ಮಾಡಿದ್ದಾರೆ. ಅದಕ್ಕೆ ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಧನ್ಯವಾದ ತಿಳಿಸ್ತೀವಿ. ಅದೇ ರೀತಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಿದಂತೆ, ನಮಗೂ ನೀಡಿದರೆ ಅನುಕೂಲವಾಗುತ್ತದೆ ಎಂದು ಬಾಲಕ ಮನವಿ ಮಾಡಿದ್ದಾನೆ.

ಮಗನ ಆರೈಕೆಗಾಗಿ ಕೆಲಸ ಬಿಡಲು ಮುಂದಾದ ಉದ್ಯೋಗಿ: ಮಾಲೀಕನ ಮಾನವೀಯತೆಗೆ ನೆಟ್ಟಿಗರು ಫಿದಾ!

ಮಗನ ಆರೈಕೆಗಾಗಿ ಕೆಲಸ ತ್ಯಜಿಸಿದ ವ್ಯಕ್ತಿ: ಮಾಲೀಕನ ಸ್ಪಂದನೆಗೆ ಮೆಚ್ಚುಗೆ

Viral News: ಕೆಲವೊಮ್ಮೆ ಉತ್ತಮ ಕಂಪನಿಯಲ್ಲಿ ಕೆಲಸ ದೊರೆತರೂ ವೈಯಕ್ತಿಕ ಕಾರಣದಿಂದ ಕೆಲಸ ಬೀಡುವ ಸನ್ನಿವೇಶಗಳು ಬರುತ್ತವೆ. ಇದೀಗ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಯೊಬ್ಬರು ಮಗನ ಅನಾರೋಗ್ಯದ ವಿಚಾರವಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇದನ್ನು ಅರಿತ ಮಾಲೀಕರು ಮಾನವೀಯತೆ ಮೆರೆಯುವ ಮೂಲಕ ಉದ್ಯೋಗಿಯ ರಾಜೀನಾಮೆಯನ್ನೇ ಸ್ವೀಕರಿಸಲು ನಿರಾಕರಿಸಿದ್ದಾರೆ.

'ʼಇದು ಹಿಂದೂ ಸಂಸ್ಕೃತಿಯೇ?": ಪವಿತ್ರ ಸರಸ್ವತಿ ನದಿಗೆ ಕಸ ಎಸೆದ ಪ್ರವಾಸಿಗರು

ಪವಿತ್ರ ಸರಸ್ವತಿ ನದಿ ಮಾಲಿನ್ಯ ಮಾಡಿದ ಪ್ರವಾಸಿಗರು

Viral Video: ನದಿ, ಕೆರೆ ಹಾಗೂ ಸಮುದ್ರದಂತಹ ಜಲಮೂಲಗಳಿಗೆ ಹಾನಿಯಾಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅದಕ್ಕೆ ಸೇರ್ಪಡೆ ಎಂಬಂತೆ ಉತ್ತರಾಖಂಡದ ಬದರಿನಾಥದ ಸಮೀಪವಿರುವ ಪವಿತ್ರ ಸರಸ್ವತಿ ನದಿಗೆ ಪ್ರವಾಸಿಗರು ತ್ಯಾಜ್ಯ ಎಸೆದಿದ್ದಾರೆ. ಅನೇಕರು ಈ ವಿಡಿಯೊ ನೋಡಿ ಇದೇನಾ ಹಿಂದೂ ಸಂಸ್ಕೃತಿ? ಎಂದು ಕಿಡಿಕಾರಿದ್ದಾರೆ.

ಕುಡಿತದ ಮತ್ತಿನಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ವಿಡಿಯೊ ವೈರಲ್

ಕುಡಿದು ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ನೆಟ್ಟಿಗರು ಕಿಡಿ

Viral News: ವೈದ್ಯಕೀಯ ತಪಾಸಣೆ ವೇಳೆ ಪೊಲೀಸರಿಗೆ ಕುಡುಕ ಯುವಕನೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಒಡಿಶಾದ ಖುರ್ದಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ನೀಡುತ್ತಿದ್ದರು. ಅವರ ವರ್ತನೆಯಿಂದ ಕಿರಿಕಿರಿಗೆ ಒಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಈ ಪೈಕಿ ಓರ್ವ ಯುವಕ ಕುಡಿತದ ಮತ್ತಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿದ್ದಾನೆ.

ಟ್ರಾಫಿಕ್‌ನಲ್ಲಿ ಮುರಿದು ಬಿದ್ದ ಪುಟ್ಟ ಬಾಲಕನ ‘ಲವ್ ಸ್ಟೋರಿ’: ಕ್ಯೂಟ್ ಎಕ್ಸ್‌ಪ್ರೆಶನ್‌ ಇಲ್ಲಿದೆ ನೋಡಿ

ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕ-ಬಾಲಕಿಯ ಕ್ಯೂಟ್ ಲವ್: ವಿಡಿಯೊ ನೋಡಿ

Viral Video: ವಾಹನ ದಟ್ಟಣೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಆಗಿರುವ ವಿಡಿಯೊವೊಂದು ಗಮನ ಸೆಳೆಯುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ಕ್ಯೂಟ್ ಎಕ್ಸ್‌ಪ್ರೆಶನ್‌ಗಳ ಮೂಲಕ ಗಮನ ಸೆಳೆದಿದ್ದು ಪುಟ್ಟ ಬಾಲಕನ ಪ್ರೀತಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಜತೆಗೆ ಇದು ಎಐ ರಚಿತ ವಿಡಿಯೊ ಎನ್ನುವ ವಾದವೂ ಕೇಳಿ ಬಂದಿದೆ.

ವಸತಿ ಹಂಚಿಕೆ ಮಾಡುವುದಾಗಿ ಹಣ ಪಡೆದು ವಂಚಿಸಿದ ಟಿಎಂಸಿ ಮುಖಂಡನ ವಿರುದ್ಧ ಆಕ್ರೋಶ; ಮಂಚದ ಕೆಳಗೆ ಅಡಗಿ ಕುಳಿತರೂ ಬಿಡಲಿಲ್ಲ ಜನ

ಮಂಚದ ಕೆಳಗೆ ಅಡಗಿ ಕುಳಿತ ಟಿಎಂಸಿ ನಾಯಕ; ಇಲ್ಲಿದೆ ವಿಡಿಯೊ

TMC Leader hiding under a bed: ಜನಾಕ್ರೋಶಕ್ಕೆ ತುತ್ತಾದ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮಂಚದ ಕೆಳಗೆ ಅಡಗಿ ಕುಳಿತಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಸತಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಜನರು ಮುತ್ತಿಗೆ ಹಾಕಿದಾಗ, ಹೆದರಿದ ಮುಖಂಡ ಅಡಗಿ ಕುಳಿತಿದ್ದಾನೆ.

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಗೆ ಪಿಸ್ತೂಲ್ ತೋರಿಸಿ  ಬೆದರಿಕೆ ಹಾಕಿದ ವ್ಯಕ್ತಿ!

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಯನ್ನೇ ಸಾಯಿಸಲು ಮುಂದಾದ ದುಷ್ಕರ್ಮಿ

Viral News: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಡೀ ಜಗತ್ತೆ ತಲೆಕೆಡಿಸಿಕೊಳ್ಳುವಂತಹ ಘಟನೆ ಯೊಂದು ನಡೆದಿದೆ. ಕೇವಲ ಸೆಂಟ್ರಲ್ ಜೈಲು ಹೇಗಿರುತ್ತೆ ಎನ್ನುವ ಕುತೂಹಲದಿಂದ ವ್ಯಕ್ತಿಯೊಬ್ಬ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಜೈಲಿನೊಳಗೆ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದಲೇ ಈ ಅಪರಾಧ ಮಾಡಿದ್ದೇನೆ ಎಂದು ಈ ಕಿಲಾಡಿ ಹೇಳಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ದೆಹಲಿ ಬೆಂಕಿ ದುರಂತ: ಲಕ್ಷಾಂತರ ರುಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಂತ್ರಸ್ತರ ಜೀವ ರಕ್ಷಣೆಗೆ ಮುಂದಾದ ಸ್ಥಳೀಯ ಅಂಗಡಿ ಮಾಲಕ

ದೆಹಲಿ ಬೆಂಕಿ ದುರಂತದ ಹೀರೋ ಇವರು

ದೆಹಲಿಯಲ್ಲಿ ಬುಧವಾರ ನಡೆದ ಬೆಂಕಿ ದುರಂತದ ವೇಳೆ ಜೀವ ರಕ್ಷಣೆಗಾಗಿ ಸ್ಥಳೀಯ ಅಂಗಡಿ ಮಾಲೀಕರೊಬ್ಬರು ತಮಗಾಗ ಬಹುದಾದ ಲಕ್ಷಾಂತರ ರೂಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಹಾಯಕ್ಕೆ ಮುಂದಾದರು. ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಪರಿಹಾರ ಒದಗಿಸಬೇಕು ಎಂದು ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

"ಇಸ್ಲಾಂ ಸ್ನೇಹಿ ಜಿಮ್":  ಕೇರಳದಲ್ಲಿ ಭುಗಿಲೆದ್ದ  ಭಾರಿ ವಿವಾದ

ಪಾಲಕ್ಕಾಡಿನಲ್ಲಿ ‘ಇಸ್ಲಾಮಿಕ್ ಸ್ನೇಹಿ ಜಿಮ್’ ವಿವಾದ

ಕೇರಳದ ಪಾಲಕ್ಕಾಡಿನಲ್ಲಿ 'ಇಸ್ಲಾಮಿಕ್ ಸ್ನೇಹಿ ಜಿಮ್' ಎಂಬ ಹೆಸರಿನ ಫಿಟ್ನೆಸ್ ಕೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ, ಜೋರಾದ ಸಂಗೀತವಿಲ್ಲದ ವ್ಯವಸ್ಥೆ ಇರುವುದಾಗಿ ಮಾಲೀಕ ನವಾಜ್ ತಿಳಿಸಿದ್ದಾರೆ. ಇದು ಮುಸ್ಲಿಮರಿಗಷ್ಟೇ ಅಲ್ಲ, ಎಲ್ಲ ಧರ್ಮದವರಿಗೂ ಮುಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1BHK ಮನೆಗೆ ಬೆಂಗಳೂರಿನಲ್ಲಿ 45,000 ರೂ ಬಾಡಿಗೆ!  ಟೆಕ್ಕಿ ಹಂಚಿಕೊಂಡ ವಿಶೇಷತೆ ಏನು?

ದುಡಿಯುವ ಅರ್ಧದಷ್ಟು ಭಾಗ ಬಾಡಿಗೆ ಕಟ್ಟುತ್ತಿರುವ ಬೆಂಗಳೂರಿನ ಟೆಕ್ಕಿ!

Viral News: ಸಿಲಿಕಾನ್ ಸಿಟಿಯ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಬಗ್ಗೆ ಹೆಚ್ಚಿನ ಜನರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಇಲ್ಲಿ ಬಾಡಿಗೆ ಹಣ ಪಾವತಿಸುವುದೇ ಒಂದು ತಲೆ ನೋವಾಗಿ ಬಿಟ್ಟಿದೆ. ಉದ್ಯೋಗಿಗಳ ನೆಚ್ಚಿನ ತಾಣ ಹಾಗೂ ಕಚೇರಿಗಳಿಗೆ ಸುಲಭ ಮಾರ್ಗವಾದ ಎಚ್‌ಎಸ್‌ಆರ್ ಲೇಔಟ್ ನಲ್ಲೂ ಬಾಡಿಗೆ ದರ ದುಪ್ಪಟ್ಟು ಆಗಿದೆ ಎಂದು ಕೆಲವರು ದೂರಿದ್ದಾರೆ...

Loading...