ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಅಜಾಗರೂಕತೆಯಿಂದ ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಯುವಕ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

ಹಾವು ಹಿಡಿಯಲು ಹೋಗಿ ಪೇಚಿಗೆ ಸಿಲುಕಿದ ಯುವಕ: ಭಯಾನಕ ವಿಡಿಯೊ

Viral Video: ಯುವಕನೊಬ್ಬ ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಈ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರಕ್ಷಣಾತ್ಮಕ ಸಾಧನ ಅಥವಾ ವೃತ್ತಿಪರ ಬೆಂಬಲವಿಲ್ಲದೆ ಮನೆಯೊಳಗೆ ಇದ್ದ ಹಾವನ್ನು ಯುವಕನೊಬ್ಬ ಸೆರೆ ಹಿಡಿಯಲು ಪ್ರಯತ್ನಿಸಿದ್ದಾನೆ.

84ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ: ಅಜ್ಜಿಯ ಆಸೆ ಈಡೇರಿಸಿದ ಮೊಮ್ಮಗ: ಹೃದಯಸ್ಪರ್ಶಿ ಕ್ಷಣ ಇಲ್ಲಿದೆ

ಅಜ್ಜಿಯ ವಿಮಾನ ಪ್ರಯಾಣದ ಆಸೆ ಈಡೇರಿಸಿದ ಮೊಮ್ಮಗ: ವಿಡಿಯೊ ವೈರಲ್

Viral Video: ವೃದ್ಧೆಯೊಬ್ಬರು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಹೃದಯ ಗೆದ್ದಿದೆ. 84ನೇ ವಯಸ್ಸಿನಲ್ಲಿ ಅಜ್ಜಿಯ ಮೊದಲ ಬಾರಿಗೆ ವಿಮಾನ ಪ್ರಯಾಣದ ಅನುಭವ ಪಡೆದಿದ್ದು, ಅಜ್ಜಿಯ ಆಸೆಯನ್ನು ಈಡೇರಿಸಲು ಮೊಮ್ಮಗ ಸಾಥ್ ನೀಡಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಲಕ್ಷಗಟ್ಟಲೆ ಆದಾಯ ತರುವ ಕಾರ್ಪೊರೇಟ್ ಉದ್ಯೋಗ ತ್ಯಜಿಸಿ ನೂರಾರು ಬೀದಿನಾಯಿಗಳಿಗೆ ಆಶ್ರಯದಾತನಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

ನೂರಾರು ಬೀದಿ ನಾಯಿಗಳಿಗೆ ಆಸರೆಯಾದ ಬೆಂಗಳೂರಿನ ಎಂಜಿನಿಯರ್

Viral News: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಯುವಕ ಈಗ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ಇದೀಗ ಅವರ ವೃತ್ತಿ ತೊರೆದು ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅನುಕೂಲಕಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಬಹುದಾದ ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳಿವೆ. ಅಲ್ಲದೆ ಬೀದಿ ನಾಯಿಗಳ ಸುರಕ್ಷತೆಗಾಗಿ ಬೇಲಿಗಳನ್ನು ಅಳವಡಿಸಲಾಗಿದೆ.

ಹಳದಿ ಶಾಸ್ತ್ರದ ವೇಳೆ ಬೆಂಕಿ ದುರಂತ: ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ

ಬೆಂಕಿ ಅವಘಡದಿಂದ ವಧು ಸುಟ್ಟು ಹೋದರೂ ಆಸ್ಪತ್ರೆಯಲ್ಲೇ ವರಿಸಿದ ವರ

Viral Video: ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ 12 ಮಂದಿ ಬೆಂಕಿಯ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಧು ಸೇರಿ ಒಟ್ಟು 12 ಜನರು ತೀವ್ರವಾಗಿ ಸುಟ್ಟು ಹೋಗಿದ್ದಾರೆ. ಹಳದಿ ಸಾಸ್ತ್ರದ ವೇಳೆ ಈ ಘಟನೆ ನಡೆದಿದ್ದು, ವರ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ್ದಾನೆ.

ʼʼಝಲ್ಮುರಿ ಇಲ್ಲಿಗೂ ತಲುಪಿದೆಯೇ?ʼʼ ನೆದರ್‌ಲ್ಯಾಂಡ್ಸ್‌ನಲ್ಲೂ ಪ್ರತಿಧ್ವನಿಸಿತು ಪ್ರಧಾನಿ ಮೋದಿ ಬಂಗಾಳ ಚುನಾವಣಾ ಹಾಸ್ಯ

ಮೋದಿ ‘ಝಲ್ಮುರಿ’ ಮಾತಿಗೆ ಹೇಗ್‌ನಲ್ಲಿ ಭಾರಿ ಚಪ್ಪಾಳೆ

PM Modi Netherlands Visit: ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ವೇಳೆ ಜನಪ್ರಿಯವಾದ ತಮ್ಮ ಝಲ್ಮುರಿ ಹೇಳಿಕೆಯನ್ನು ಹಾಸ್ಯವಾಗಿ ಪುನರುಚ್ಚರಿಸಿದರು. ಸಭಿಕರ ಚಪ್ಪಾಳೆ ಮತ್ತು ನಗುವಿನ ನಡುವೆ ಮೋದಿ ಅವರ ಈ ಮಾತು ವಿದೇಶದಲ್ಲೂ ಭಾರತೀಯ ರಾಜಕೀಯದ ನೆನಪುಗಳನ್ನು ಜೀವಂತಗೊಳಿಸಿತು.

Viral Video: ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್‌

ಬರೇಲಿಯ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಆಕಾಶಕ್ಕೆ ಹಾರಿದ ವ್ಯಕ್ತಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಭೀಕರ ಬಿರುಗಾಳಿ ಹಾಗೂ ಮಳೆಯ ಆರ್ಭಟಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಗಾಳಿ ಹಾಗೂ ಮಳೆಯ ತೀವ್ರತೆಗೆ ಶೆಡ್‌ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಆಕಾಶಕ್ಕೆ ಹಾರಿ ಹೋಗಿದ್ದಾನೆ. ಈ ಭಯಾನಕ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತದಲ್ಲಿನ ಪ್ರಯಾಣ ಸುರಕ್ಷತೆ, ಸ್ವಚ್ಛತೆ ಬಗ್ಗೆ ಸಿಹಿ-ಕಹಿ ಅನುಭವ ಶೇರ್ ಮಾಡಿದ ಸಿಂಗಾಪುರ ಯುವತಿ; ಹೇಳಿದ್ದೇನು?

ಭಾರತದ ಪ್ರಯಾಣದ ಅನುಭವ ಹಂಚಿಕೊಂಡ ಸಿಂಗಾಪುರ ಯುವತಿ

Viral Video: ಸಿಂಗಾಪುರದ ಯುವತಿಯೊಬ್ಬರು ಭಾರತದಲ್ಲಿ ಎದುರಾದ ಸಿಹಿ ಹಾಗೂ ಕಹಿ ಅನುಭವ ಎರಡನ್ನು ಹಂಚಿಕೊಂಡಿದ್ದಾರೆ. ಅವರು ಉತ್ತರ ಭಾರತದ ಪ್ರವಾಸದ ವೇಳೆ ತಾಜ್ ಮಹಲ್, ಹವಾ ಮಹಲ್ ಹಾಗೂ ಕೆಂಪು ಕೋಟೆ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.‌ ಉತ್ತರ ಭಾರತದ ಮೂಲಕ ಪ್ರಯಾಣಿಸುವ ತನ್ನ ಮೊದಲ ಅನಿಸಿಕೆಗಳನ್ನು ವಿವರಿಸುತ್ತ, ಅನುಭವವು ತೀವ್ರ ಅಸ್ತವ್ಯಸ್ತವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಪುತ್ರ ಶೇಕಡ 55ರಷ್ಟು ಅಂಕ ಗಳಿಸಿದ್ದಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕುಟುಂಬ; ಇನ್ನು ಡಿಸ್ಟಿಂಕ್ಷನ್‌ ಅಂಕ ಬಂದಿದ್ರೆ ಏನಾಗ್ತಿತ್ತು ಎಂದು ಕಾಲೆಳೆದ ನೆಟ್ಟಿಗರು

ಕಡಿಮೆ ಅಂಕ ಗಳಿಸಿದರೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಮುಂಬೈ ಕುಟುಂಬ

Viral Video: ಮುಂಬೈಯ ಕುಟುಂಬವೊಂದು ತಮ್ಮ ಮಗ ಕಡಿಮೆ ಅಂಕ ಪಡೆದರೂ ಸಂಭ್ರಮಿಸುವ ಮೂಲಕ ಜನರ ಹೃದಯ ಗೆದ್ದಿದೆ. ಮಗ ಪರೀಕ್ಷೆಯಲ್ಲಿ ಶೇಕಡ 55ರಷ್ಟು ಅಂಕಗಳನ್ನು ಗಳಿಸಿದರೂ ಅಂಕ ಪಟ್ಟಿ ಆಕಾರದ ಕೇಕ್‌ ತರಿಸಿ ಅದನ್ನು ಕಟ್‌ ಮಾಡುವ ಮೂಲಕ ಯಶಸ್ಸನ್ನು ಕೊಂಡಾಡಿದೆ. ಕಡಿಮೆ ಅಂಕ ಪಡೆದಿದ್ದರೂ ಪೋಷಕರು ಬೆಂಬಲ ವ್ಯಕ್ತಪಡಿಸಿರುವ ರೀತಿ ಅನೇಕರನ್ನು ಭಾವುಕರನ್ನಾಗಿಸಿತು.

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ ತಕ್ಕ ಪಾಠ: ಅಟ್ಟಾಡಿಸಿ ಹೊಡೆದ ಸ್ಥಳೀಯರು

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಪಾಠ ಕಲಿಸಿದ ಸ್ಥಳೀಯರು

Viral Vide: ಕಾಮುಕ ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಆರೋಪಿಯನ್ನು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಔಪಚಾರಿಕ ದೂರು ದಾಖಲಿಸಲಾಗಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮರುದಿನವೇ ಸಾರ್ವಜನಿಕರು ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ..

ಕ್ಷುಲ್ಲಕ ವಿಚಾರಕ್ಕೆ ಯುವತಿಯ ಕಪಾಳಕ್ಕೆ ಬಾರಿಸಿದ ಯುವಕ; ಹಲ್ಲೆ ವಿಡಿಯೋ ವೈರಲ್‌

ಯುವತಿಯ ಕೆನ್ನೆಗೆ ಬಾರಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಯುವಕ

Viral Video: ಲಿಫ್ಟ್ ವಿಚಾರವಾಗಿ ನಡೆದ ಸಣ್ಣ ಮಾತಿನ ಚಕಮಕಿಯಿಂದ ಯುವಕನೊಬ್ಬ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುಣೆಯ ವಸತಿ ಕಟ್ಟಡ ವೊಂದರಲ್ಲಿ ಈ ಘಟನೆ ನಡೆದಿದ್ದು ಲಿಫ್ಟ್ ಬಳಿ ಮಹಿಳೆ ಮತ್ತು ಯುವಕನ ನಡುವೆ ನಡೆದ ಸಣ್ಣ ವಾಗ್ವಾದವು ದೈಹಿಕ ವಾಗ್ವಾದವಾಗಿ ಉಲ್ಬಣಗೊಂಡಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಎನರ್ಜಿ ಡ್ರಿಂಕ್‌ ಕ್ಯಾನ್‌ನಲ್ಲಿ ಸತ್ತ ಇಲಿ ಪತ್ತೆ: ವಿಡಿಯೊ ನೋಡಿ ಕಿಡಿಕಾರಿದ ನೆಟ್ಟಿಗರು!

ಎನರ್ಜಿ ಡ್ರಿಂಕ್‌ ಒಳಗೆ ತೇಲುತ್ತಿರುವ ಸತ್ತ ಇಲಿ: ವಿಡಿಯೊ ನೋಡಿ!

Viral Video; ಎನರ್ಜಿ ಡ್ರಿಂಕ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದ್ದು ಮಹಿಳೆಯೊಬ್ಬರಿಗೆ ಮರೆಯಲಾಗದ ಅನುಭವ ವಾಗಿದೆ.. ಪಾನೀಯದೊಳಗೆ ಇಲಿಯೊಂದು ತೆಲುತ್ತಿರುವುದು ಕಂಡು ಮಹಿಳೆ ದಂಗಾಗಿ ಹೋಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಹಾಗೂ ಕಳಪೆ ಆಹಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...

ಭಜನಾ ಗಾಯಕನ ಮೇಲೆ ಹಣದ ಮಳೆಯನ್ನೇ ಸುರಿಸಿದ ಭಕ್ತರು: ಕಂತೆ ಕಂತೆ ನೋಟಿನ ವಿಡಿಯೋ ವೈರಲ್‌

ಭಜನಾ ಗಾಯಕನ ಮೇಲೆ ಹಣ ಸುರಿದ ಭಕ್ತರು: ವಿಡಿಯೊ ಇಲ್ಲಿದೆ!

Viral Video: ಪ್ರಸಿದ್ಧ ಗಾಯಕ ಕವಿರಾಜ್ ಜಿಗ್ಣೇಶ್ ಅವರು ಭಕ್ತಿ ಗೀತೆಗಳನ್ನು ಹಾಡುತ್ತಿದ್ದಾಗ ಭಕ್ತರು ಅವರ ಮೇಲೆ ನೋಟು ಗಳ ಅಟ್ಟಿಯನ್ನೇ ಮೈ ಮೇಲೆ ಸುರಿದಿದ್ದಾರೆ. ಗಾಯಕರು ನೋಟುಗಳ ರಾಶಿಯ ಹತ್ತಿರವೇ ಹಾಡು ಹಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ‌. ದೃಶ್ಯ ನೋಡಿದ ಅನೇಕರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ನಡೀತು ಸಿನಿಮೀಯ ದೃಶ್ಯ: ವಿದೇಶಿ ಮಹಿಳೆಯ ದುಪ್ಪಟ್ಟಾಗಾಗಿ ರೈಲ್ವೆ ಹಳಿ ಮೇಲೆ ಜಿಗಿದ ಯುವಕ!

ಮಹಿಳೆಯ ದುಪ್ಪಟ್ಟಾ ರಕ್ಷಣೆಗಾಗಿ ರೈಲ್ವೆ ಹಳಿ ಮೇಲೆ ಜಿಗಿದ ಯುವಕ!

Viral Video; ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ವಿದೇಶಿ ಪ್ರವಾಸಿಗೆ ಭಾರತೀಯ ಯುವಕನೊಬ್ಬ ನೆರವಾಗಿದ್ದು ಯುವಕನ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿದೇಶಿ ಪ್ರವಾಸಿಯೊಬ್ಬರ ದುಪ್ಪಟ್ಟಾವೊಂದು ರೈಲಿನ ಹಳಿ ಮೇಲೆ ಬಿದ್ದಿದ್ದು ತಕ್ಷಣವೇ ಯುವಕನೊಬ್ಬ ನೆರವಾಗಿ ದುಪ್ಪಟ್ಟ ವಾಪಸ್ಸು ನೀಡಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಶೌಚಾಲಯದ ಫ್ಲಶ್ ಒತ್ತುತ್ತಿದ್ದಂತೆ ಪ್ರತ್ಯಕ್ಷವಾದ ಕಾಳಿಂಗ ಸರ್ಪ: ಭಯಾನಕ ವಿಡಿಯೊ ವೈರಲ್

ರೆಸಾರ್ಟ್‌ ನ ಶೌಚಾಲಯದ ಒಳಗೆ ಕಾಳಿಂಗ ಸರ್ಪ ಪ್ರತ್ಯಕ್ಷ: ವಿಡಿಯೊ ವೈರಲ್

Viral News: ಇಲ್ಲೊಂದು ಸ್ನೇಹಿತರ ಗುಂಪು ರೆಸಾರ್ಟ್ ಗೆಂದು ತೆರಳಿದಾಗ ಅಲ್ಲಿ ನಡೆದ ಘಟನೆ ಜೀವನ ಪೂರ್ತಿ ಮರೆಯಲಾಗದಂತೆ ಮಾಡಿದೆ. ಹೌದು ಶೌಚಾಲಯದೊಳಗೆ ಕಾಳಿಂಗ ಸರ್ಪ ವೊಂದು ಪ್ರತ್ಯಕ್ಷ ವಾಗಿದ್ದು ಶೌಚಾಲಯದ ಫ್ಲಶ್ ಒತ್ತುತ್ತಿದ್ದಂತೆ ಹಾವು ಹೆಡೆ ಬಿಚ್ಚಿ ನಿಂತಿದೆ. ಈ ದೃಶ್ಯ ಕಂಡ ಅನೇಕರು ಇದೀಗ ಬೆಚ್ಚಿ ಬಿದ್ದಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಶಿಕ್ಷಕ: ಭಯಾನಕ ವಿಡಿಯೋ ವೈರಲ್‌

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಅಸ್ಸಾಂನ ಶಿಕ್ಷಕ!

Viral News: ಅಸ್ಸಾಂನ ಚರೈಡಿಯೋ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ತರಗತಿಯೊಳಗೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿದೆ. ಈ ದೌರ್ಜನ್ಯದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಶಿಕ್ಷಕನ‌ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನವಜಾತ ಶಿಶುವಿಗೆ ಉಸಿರು ನೀಡಿ ಪ್ರಾಣ ಉಳಿಸಿದ ವೈದ್ಯೆ; ನೆಟ್ಟಿಗರಿಂದ ಭಾರೀ ಪ್ರಶಂಸೆ!

ನವಜಾತ ಶಿಶುವಿಗೆ ಆರೈಕೆ ಮಾಡಿ ಸಮಯ ಪ್ರಜ್ಞೆ ಮೆರೆದ ವೈದ್ಯೆ!

Viral Video: ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯತೆ ಮೆರೆದಿರುವ ಘಟನೆಯೊಂದು ಸಹರಾನ್ ಪುರದಲ್ಲಿ ನಡೆದಿದೆ‌. ಮಹಿಳಾ ವೈದ್ಯರೊಬ್ಬರು ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುವನ್ನು ಉಳಿಸಲು ಬಾಯಿಯಿಂದ ಬಾಯಿ ಕೊಟ್ಟು ಉಸಿರಾಟ ನೀಡಿದ ಘಟನೆಯೊಂದು ನಡೆದಿದೆ‌. ಸದ್ಯ ವೈದ್ಯರ ಸಮಯ ಪ್ರಜ್ಞೆ ಯಿಂದ ಮಗುವಿನ ಪ್ರಾಣ ಉಳಿದಿದ್ದು ನೆಟ್ಟಿಗರು ವೈದ್ಯರ ಪ್ರಮಾಣಿಕತೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

ಮಗುವನ್ನು ರಕ್ಷಿಸಲು ಹೋಗಿ ಜೇನುನೊಣಗಳ ದಾಳಿಗೆ ತುತ್ತಾದ ನ್ಯಾಯಾಧೀಶೆ!  ಭಯಾನಕ ವಿಡಿಯೋ ವೈರಲ್‌

ಜೇನುನೊಣಗಳ ದಾಳಿಗೆ ಸಾವನ್ನಪ್ಪಿದ ಮೆಕ್ಸಿಕೋದ ನ್ಯಾಯಾಧೀಶೆ!

ಮೆಕ್ಸಿಕೋದ ಗ್ವಾಡಾಲುಪೆ ಕ್ರೀಡಾಂಗಣದಲ್ಲಿ ದಿಢೀರನೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತನ್ನ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋದ ನ್ಯಾಯಾಧೀಶೆ ವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಗುವನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಅವರ ದೇಹವನ್ನು ಜೇನುನೊಣಗಳು ತುಂಬಿ ಕೊಂಡಿದ್ದು ಅವುಗಳ ದಾಳಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಆತಂಕಕಾರಿ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ನೋಡ ನೋಡುತ್ತಲೇ  ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್‌

ನೋಡ ನೋಡುತ್ತಲೇ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಉತ್ತರ ಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ದೃಶ್ಯವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುವಂತಿದೆ.

ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್‌ ಕೊಹ್ಲಿ; ಮೈದಾನದಲ್ಲೇ ಮೆಚ್ಚುಗೆ

ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್‌ ಕೊಹ್ಲಿ

IPL 2026: ಈ ಅದ್ಭುತ ಕ್ಯಾಚ್‌ ಕಂಡ ವಿರಾಟ್‌ ಕೊಹ್ಲಿ ನೇರವಾಗಿ ಪಾಂಡೆ ಬಳಿ ಬಂದು ಅವರನ್ನು ಶ್ಲಾಘಿಸಿದರು. ಪಾಂಡೆಯ ಈ ಕ್ಯಾಚ್‌ ಮತ್ತು ಕೊಹ್ಲಿಯ ಮೆಚ್ಚುಗೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಈ ಪ್ರಸಿದ್ಧ ದೇವಸ್ಥಾನದಲ್ಲಿ ಭಕ್ತರಿಗೆ ನಾಣ್ಯಗಳೇ ಪ್ರಸಾದ: ವಿಡಿಯೋ ನೋಡಿ!

ಈ ದೇವಾಲಯದಲ್ಲಿ ನಾಣ್ಯಗಳೇ ದೇವರಿಗೆ ಪ್ರಸಾದ

Viral Video: ತಮಿಳುನಾಡಿನ ಈ ದೇವಾಲಯದಲ್ಲಿ ಮಾತ್ರ ಹಣವನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ದರ್ಶನಕ್ಕಾಗಿ ಸಾಲಿನಲ್ಲಿ ಹಲವಾರು ಜನರು ನಿಂತಿರುವ ದೃಶ್ಯ ಕಂಡು ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶ್ರೀ ವರಮ್ ತರುಮ್ ಮಾಳಿಗೈಪರೈ ಕರುಪ್ಪಸಾಮಿ ದೇವಾಲಯದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಈ ಆಚರಣೆ ನಡೆದಿದೆ..

ಗಿರ್ ಸಫಾರಿಯಲ್ಲಿ ಭಯಾನಕ ದೃಶ್ಯ: ಪ್ರವಾಸಿಗರ ಜೀಪ್ ಹತ್ತಿರವೇ ಸಿಂಹಿಣಿಯ ಭರ್ಜರಿ ಬೇಟೆ!

ಸಫಾರಿಗಾಗಿ ಬಂದ ಪ್ರವಾಸಿಗರ ಮುಂದೆಯೇ ಹಸುವನ್ನು ಬೇಟೆಯಾಡಿದ ಸಿಂಹಿಣಿ

Viral Video: ಗುಜರಾತ್ ನ ಗಿರ್ ಸಫಾರಿಯಲ್ಲಿ ಮೈ ನಡುಗಿಸುವಂತಹ ಘಟನೆಯೊಂದು ನಡೆದಿದೆ. ಸಫಾರಿಗಾಗಿ ಬಂದ ಪ್ರವಾಸಿಗರ ಮುಂದೆಯೇ ಹಸುವನ್ನು ಸಿಂಹಿಣಿಯೊಂದು ಬೇಟೆಯಾಡಿದೆ. ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

2027ರ ಒಳಗೆ ಅಮೆರಿಕ ನಾಶ, ಟ್ರಂಪ್ ಕೊನೆಯ ಅಧ್ಯಕ್ಷ: ಅಘಾತಕಾರಿ ಭವಿಷ್ಯ ನುಡಿದ ಜ್ಯೋತಿಷಿ

ಟ್ರಂಪ್ ‘ಕೊನೆಯ ಅಮೆರಿಕದ ಅಧ್ಯಕ್ಷ’; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Viral Video: ಮಧ್ಯ ಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ಯುದ್ದ ಸಂಭವಿಸಲಿದೆ ಎಂದು ಅನೇಕ ಜ್ಯೋತಿಷ್ಯರು ಈ ಹಿಂದೆ ಭವಿಷ್ಯ ನುಡಿದಿದ್ದರು‌‌. ಇದೀಗ ಡೊನಾಲ್ಡ್ ಟ್ರಂಪ್, ಭಾರತ, ಬಿಹಾರ, ಬಂಗಾಳ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯದ ಬಗ್ಗೆ ಜ್ಯೋತಿಷಿ ರೀನಾ ಶರ್ಮಾ ಈ ಹಿಂದೆ ನೀಡಿರುವ ಭವಿಷ್ಯ ವಾಣಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

96ನೇ ವಯಸ್ಸಿನಲ್ಲೂ ಶಾಲೆಗೆ ಸೇರಿ ದಾಖಲೆ ಬರೆದ ಅಜ್ಜಿ! ನೂರಕ್ಕೆ 98 ಅಂಕ ಪಡೆಯುವ ಮೂಲಕ‌ ಸಾಧನೆ!

ಸಾಧನೆಗೆ ವಯಸ್ಸಿನ ಹಂಗಿಲ್ಲ: 96 ನೇ ವಯಸ್ಸಿನಲ್ಲಿ 98 ಅಂಕ ಪಡೆದ ಅಜ್ಜಿ

Viral News: ಕೇರಳದ ಕಾರ್ತ್ಯಾಯಿನಿ ಅಮ್ಮ ಶಾಲೆಯನ್ನು ತೊರೆದ ಸುಮಾರು ಎಂಟು ದಶಕಗಳ ನಂತರ ಮತ್ತೆ ಶಿಕ್ಷಣ ಪಡೆದಿದ್ದು ಭಾರತದ ಅತ್ಯಂತ ಹಿರಿಯ ಸಾಕ್ಷರತಾ ಸಾಧಕರಲ್ಲಿ ಒಬ್ಬರಾಗಿದ್ದಾರೆ. 96 ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದ ಇವರು ನೂರಕ್ಕೆ 98 ಅಂಕ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ...

ಗರ್ಭಿಣಿಯರು ಮತ್ತು ರೋಗಿಗಳಿಗೆ ಉಚಿತ ಸೇವೆ: ಆಟೋ ಚಾಲಕನ ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ!

ಗರ್ಭಿಣಿಯರಿಗೆ ಉಚಿತವಾಗಿ ಆಟೋ ಸೇವೆ ನೀಡುವ ಚಾಲಕ: ನೆಟ್ಟಿಗರಿಂದ ಮೆಚ್ಚುಗೆ

Viral News: ಆಟೋ ಚಾಲಕರೊಬ್ಬರು ಮಾನವೀಯ ಕೆಲಸ ಎಲ್ಲರಿಗೂ ಸ್ಪೂರ್ತಿಯಾಗಿದೆ .ಒಡಿಶಾದ ಬೆಹ್ರಾಂಪುರ ನಗರದ 42 ವರ್ಷದ ಆಟೋ ಚಾಲಕ ಗಗನ್ ಪಾತ್ರಾ ಅವರು ಗರ್ಭಿಣಿಯರು ಮತ್ತು ರೋಗಿ ಗಳಿಗೆ ಉಚಿತವಾಗಿ ಆಟೋ ಸೇವೆಯನ್ನು ನೀಡುತ್ತಿದ್ದು ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತ ವಾಗುತ್ತಿದೆ.

Loading...