ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ವಿಶ್ವದ ಅತೀ ದೊಡ್ಡ ಇಟಾಲಿಯನ್ ತಿರಾಮಿಸು ಇದು; ವಂದೇ ಭಾರತ್‌ ರೈಲಿಗಿಂತ ಉದ್ದ ಈ ಖಾದ್ಯ

3,000 ಮೊಟ್ಟೆಗಳಿಂದ ತಯಾರಿಸಲ್ಪಟ್ಟ ವಿಶ್ವದ ಅತಿ ಉದ್ದದ ತಿರಾಮಿಸು

Viral Video: ತಂದೂರಿ ಐಸ್ ಕ್ರೀಂ, ಹಣ್ಣುಗಳ ಮೊಮೊಸ್ ಹೀಗೆ ಹಲವು ವಿಚಿತ್ರ ಖಾದ್ಯಗಳು ಹಲವರನ್ನು ಅಚ್ಚರಿಗೊಳಿಸಿದೆ. ಇದೀಗ ರೈಲಿಗಿಂತಲೂ ಉದ್ದದ ತಿರಾಮಿಸು ಎಂಬ ಇಟಾಲಿಯನ್ ಸಿಹಿ ತಿಂಡಿಯ ವಿಡಿಯೊವೊಂದು ವೈರಲ್ ಆಗಿದೆ. 100ಕ್ಕೂ ಹೆಚ್ಚು ಬಾಣಸಿಗರು ಸೇರಿ ಈ ಖಾದ್ಯವನ್ನು ತಯಾರಿಸಿದ್ದಾರೆ.

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ; ಮೃತರ ಕೊನೆಯ ಆಸೆಯನ್ನು ವಿಶಿಷ್ಟವಾಗಿ ಪೂರೈಸಿದ ಕುಟುಂಬಸ್ಥರು

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ

Viral News: ತಮ್ಮ ಪ್ರೀತಿ ಪಾತ್ರರ ಅಂತ್ಯಕ್ರಿಯೆ ವೇಳೆ ಕುಟುಂಬವೊಂದು ಬಾರ್ ಡ್ಯಾನ್ಸರ್ಸ್ ಅನ್ನು ಕರೆಸಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಅಂತ್ಯಕ್ರಿಯೆಯು ಎಲ್ಲರನ್ನು ಬೆರಗುಗೊಳಿಸಿದೆ. ಮೃತರ ಕೊನೆಯ ಆಸೆಯನ್ನು ಪೂರೈಸಲು, ಕುಟುಂಬವು ಬಾರ್ ನೃತ್ಯಗಾರರನ್ನು ಆಹ್ವಾನಿಸಿತು ಎಂದು ಮೂಲಗಳು ತಿಳಿಸಿವೆ.

ಬೀಚ್‌ಗಳಲ್ಲಿ ಕಸದ ರಾಶಿ ನೋಡಿ ವಿದೇಶಿ ಪ್ರವಾಸಿಗ ಕಿಡಿ ಕಿಡಿ; ಭಾರತೀಯರಲ್ಲಿನ ಶಿಸ್ತಿನ ಕೊರತೆ ಬಗ್ಗೆ ಕಳವಳ

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಬಗ್ಗೆ ವಿದೇಶಿ ಪ್ರವಾಸಿಗ ಆಕ್ರೋಶ

Viral Video: ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಅಜಾಗರೂಕತೆಯಿಂದ ವರ್ತಿಸಿ ಕಸ ಹಾಕುವುದಕ್ಕೆ ವಿದೇಶಿ ಬ್ಲಾಗರ್ ಒಬ್ಬರು ಕಿಡಿಕಾರಿದ್ದಾರೆ. ಜನರು ಯಾಕೆ ಬುದ್ದಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈದ್ಯರ ಗ್ಲೌಸ್‌ ಗಟ್ಟಿಯಾಗಿ ಹಿಡಿದ ಆಗ ತಾನೇ ಹುಟ್ಟಿದ ಶಿಶು: ಗಮನ ಸೆಳೆದ ದೃಶ್ಯ ಇಲ್ಲಿದೆ

ವೈದ್ಯರ ಗ್ಲೌಸ್‌ ಹಿಡಿದ ನವಜಾತ ಶಿಶು: ಇಲ್ಲಿದೆ ಕ್ಯೂಟ್ ವಿಡಿಯೊ

Viral News: ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಅಮ್ಮನ ಲಾಲನೆ ಪಾಲನೆಗಾಗಿ ಕಾಯುತ್ತಿರುತ್ತದೆ‌. ಆದರೆ ಇಲ್ಲೊಂದು ಮಗು ವೈದ್ಯರ ಗ್ಲೌಸ್‌ ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಕ್ಷಣದಲ್ಲಿ ಆ ಮಗು ವೈದ್ಯರ ಗ್ಲೌಸ್‌ ಬಿಡದೆ ಹಿಡಿದಿರುವ ಅಪರೂಪದ ದೃಶ್ಯ ಎಲ್ಲರ ಮನ ಗೆದ್ದಿದೆ‌.

ದಿನಸಿ ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ಇದು ಕ್ಯೂಟ್‌ ದರೋಡೆ ಎಂದ ನೆಟ್ಟಿಗರು

ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ವಿಡಿಯೊ ವೈರಲ್

Viral Video: ಆನೆವೊಂದು ಅಂಗಡಿಯೊಂದಕ್ಕೆ ನುಗ್ಗಿ ತನಗೆ ಬೇಕಾದ ತಿಂಡಿ ಸವಿದು ಆರಾಮವಾಗಿ ನಡೆದುಹೋಗುತ್ತಿರುವ ಘಟನೆವೊಂದು ನಡೆದಿದೆ. ಆನೆ ತನ್ನ ಸೊಂಡಿಲನ್ನು ಬಳಸಿ, ಕಪಾಟಿನಿಂದ ತಿಂಡಿ ಎಗರಿಸಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ನಗು ತರಿಸಿದೆ.

ನಗರಗಳಿಗಿಂತಲೂ ಹೆಚ್ಚು ಸೌಕರ್ಯ ಇರುವ ಭಾರತದ ಸ್ಮಾರ್ಟ್ ಹಳ್ಳಿಗಳು: ಎಲ್ಲಿವೆ ಗೊತ್ತಾ?

ನಗರ ಪ್ರದೇಶಕ್ಕಿಂತಲೂ ಹೆಚ್ಚಿನ ಸೌಲಭ್ಯ ಇರುವ ಹಳ್ಳಿಗಳು ಯಾವುವು ಗೊತ್ತೆ?

Viral News: ಸಾಮಾನ್ಯವಾಗಿ 'ಸ್ಮಾರ್ಟ್ ಸಿಟಿ' ಎಂದಾಗ ಅತೀ ಎತ್ತರದ ಕಟ್ಟಡಗಳು, ಮೂಲಭೂತ ಸೌಕರ್ಯಗಳು ಇವೆಲ್ಲವು ಕಣ್ಣ ಮುಂದೆ ಬರುತ್ತವೆ.‌ ಆದರೆ ಭಾರತದ ಕೆಲವೊಂದು ಹಳ್ಳಿಗಳು ನಗರಗಳನ್ನೇ ಮೀರಿಸುವಂತೆ ಹೊಸ ಪಥದಲ್ಲಿ ಸಾಗುತ್ತಿವೆ. ಡಿಜಿಟಲ್ ವ್ಯವಹಾರ, ಸೌರಶಕ್ತಿಯಿಂದ ಹಿಡಿದು ಸುಗಮ ಮೂಲಭೂತ ಸೌಕರ್ಯಗಳೊಂದಿಗೆ ಭಾರತೀಯ ಈ ಹಳ್ಳಿಗಳು ಸ್ಮಾರ್ಟ್ ಆಗಿ ಕಾಣುತ್ತಿದೆ. ಯಾವುವು ಆ ಹಳ್ಳಿಗಳು?

ʼʼಐಸ್‌ ಕ್ರೀಂ ಬೇಕ ಅಣ್ಣ?ʼʼ:  ಸುಡುವ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

ರಸ್ತೆಬದಿಯ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಹಾಗೂ ಬೈಕ್ ರೈಡರ್ ಒಬ್ಬರು ರಸ್ತೆ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸುವ ಮೂಲಕ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ;  ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌ ಬಂಧನ

ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮುಖ್ಯಸ್ಥ ಕಾಶ್ ಪಟೇಲ್ ಅವರನ್ನು ಬಂಧಿಸಲಾಗಿದೆ. ಸ್ನೇಹಿತರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರೊಂದಿಗೆ ಅವರು ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ತಾನು ಬಂಧನಕ್ಕೆ ಒಳಗಾಗಿದ್ದೆ ಎಂದು ಅವರು ತಿಳಿಸಿದ್ದಾರೆ.

ಮನೆಯ ಗೇಟ್‌ಗೆ ಕಟ್ಟಿದ ನಾಯಿಗೆ ದೊಣ್ಣೆಯಿಂದ ಹೊಡೆದ ಅಪ್ಪ-ಮಗ; ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆ

ಕಟ್ಟಿರುವ ನಾಯಿಯನ್ನು ಥಳಿಸಿದ ದುಷ್ಕರ್ಮಿಗಳು

ಮನೆಯ ಗೇಟ್ ಗೆ ಕಟ್ಟಿದ್ದ ನಾಯಿಗೆ ಚಿತ್ರಹಿಂಸೆ ನೀಡಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ.

ಬಿಸಿಲಿಗೆ ತತ್ತರಿಸಿದ್ದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ; ವಿಡಿಯೋ ನೋಡಿದ್ರೆ ಹೃದಯ ತುಂಬಿ ಬರುತ್ತೆ

ಬಿಸಿಲ ಬೇಗೆಗೆ ಬೆಂದು ಹೋದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ

Viral Video: ದೆಹಲಿಯ ಅಂಗಡಿ ಮಾಲೀಕರೊಬ್ಬರು ಮಾನವೀಯತೆ ಮೆರೆದಿರುವ ದೃಶ್ಯ ಕಂಡು ಬಂದಿದೆ. ಅಂಗಡಿ ಮಾಲೀಕನು ತನ್ನ ಅಂಗಡಿಯೊಳಗೆಯೇ ಬೀದಿ ನಾಯಿಗಳಿಗೆ ಆಶ್ರಯ ಪಡೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಹೊಸ ಬಂಗಲೆಯನ್ನು "ಶೀಶ್ ಮಹಲ್ 2" ಎಂದು ಕರೆದ ಬಿಜೆಪಿ; ಆಪ್ ಕೆಂಡಾಮಂಡಲ

"ಶೀಶ್ ಮಹಲ್ 2" ಬಿಜೆಪಿ- ಆಪ್ ನಡುವೆ ವಾಗ್ವಾದ

ಸಂಸದ ರಾಘವ್ ಚಡ್ಡಾ ಅವರು ಬಿಜೆಪಿ ಸೇರಿದ ಬಳಿಕ ಆಪ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಆರಂಭವಾಗಿದೆ. ದೆಹಲಿ ಉಪಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಹೊಸ ಬಂಗಲೆಯ ಚಿತ್ರವನ್ನು ಹಂಚಿಕೊಂಡಿದ್ದು, ಇದನ್ನು ಬಿಜೆಪಿ "ಶೀಶ್ ಮಹಲ್ 2" ಎಂದು ಕರೆದಿದೆ. ಇದರಿಂದ ಕೆರಳಿದ ಆಪ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಎಲ್ಲರೆದುರೇ ಯುವಕ-ಯುವತಿಯ ರೊಮ್ಯಾನ್ಸ್; ಮಣಿಪಾಲದಲ್ಲಿ ಕಂಡುಬಂದ ದೃಶ್ಯಕ್ಕೆ ನೆಟ್ಟಿಗರು ಕಿಡಿಕಿಡಿ

ಸಾರ್ವಜನಿಕ ಸ್ಥಳದಲ್ಲೇ ಯುವಕ-ಯುವತಿಯ ರೊಮ್ಯಾನ್ಸ್: ವಿಡಿಯೊ ವೈರಲ್‌

Viral Video: ಕೆಲ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರೇಮಿಗಳು ಮೈಮರೆತು ಚುಂಬಿಸುವುದು, ರೈಲಿನಲ್ಲಿ ಪರಸ್ವರ ಅಪ್ಪಿಕೊಳ್ಳುವುದು ಹೀಗೆ ನಾನಾ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ಮಣಿಪಾಲದಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿಯೇ ರೊಮ್ಯಾನ್ಸ್‌ ಮಾಡಿದೆ.

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು; ಕಾಗದ ಪತ್ರ, ಲಾಕರ್‌ ಕೀ ಗತಿ ಏನು?

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು

Agra Bank Collapse: ಗುಡಿಸಲಿಗೆ ಬೆಂಕಿ ಬಿದ್ದಾಗ ಅದರಿಂದಲೇ ಬೀಡಿ ಹಚ್ಚಿಕೊಂಡರು ಎನ್ನುವ ಮಾತಿದೆ. ಅಂದರೆ ಒಬ್ಬರು ಕಷ್ಟದಲ್ಲಿದ್ದಾಗ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುವವರ ಕುರಿತು ಹೇಳುವ ಮಾತು ಇದು. ಈ ವಿಚಾರ ಈಗ್ಯಾಕೆ ಎಂದರೆ ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ ಕುಸಿದು ಬಿದ್ದುದ್ದು, ಜನರು ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಪ್ರವಾಸಿಗರೇ ಎಚ್ಚರ! ಗೋವಾದಲ್ಲಿ 'ಗಿಫ್ಟ್ ಕೂಪನ್' ಹೆಸರಲ್ಲಿ ನಡೆಯುತ್ತಿದೆ ಮಹಾಮೋಸ: ಏನಿದು ಪ್ರಕರಣ?

ಗೋವಾದಲ್ಲಿ ಗಿಫ್ಟ್ ಕೂಪನ್ ಹೆಸರಿನಲ್ಲಿ ಪ್ರವಾಸಿಗರಿಗೆ ವಂಚನೆ

Viral Video: ಗೋವಾದಲ್ಲಿ ಪ್ರವಾಸಿಗರಿಗೆ ಗಿಫ್ಟ್ ಕೂಪನ್ ಹೆಸರಲ್ಲಿ ವಚನೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಸ್ಥಳೀಯರು ಈ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಗರಣವನ್ನು ಸಾರ್ವಜನಿಕರು ಬಹಿರಂಗಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

''ಭೂಮಿ ಸ್ಥಿರವಾಗಿದೆʼʼ ಎನ್ನುವ ಮೂಲಕ ವಿಜ್ಞಾನಕ್ಕೇ ಸವಾಲೆಸಿದ ಮುಸ್ಲಿಂ ವಿದ್ವಾಂಸ; ಮಕ್ಕಳನ್ನು ತಪ್ಪು ದಾರಿಗೆಳೆಯಬೇಡಿ ಎಂದ ನೆಟ್ಟಿಗರು

ಭೂಮಿ ಸ್ಥಿರವಾಗಿದೆ; ವಿಜ್ಞಾನ ಸುಳ್ಳು ಎಂದ ಮುಸ್ಲಿಂ ವಿದ್ವಾಂಸ

Viral Video: ವಸ್ತು ಪ್ರದರ್ಶನ, ವಿಜ್ಞಾನ ಮಾಡೆಲ್ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮುಂದಾಗುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಮುಸ್ಲಿಂ ವಿದ್ವಾಂಸವೊಬ್ಬರು ವಿದ್ಯಾರ್ಥಿಗಳಿಗೆ "ವಿಜ್ಞಾನ ಸುಳ್ಳು, ಭೂಮಿ ಚಲಿ ಸುವುದಿಲ್ಲ" ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

"ಮನೆಗಳಿಗೆ ಬಾಗಿಲೇ ಇಲ್ಲ, ಕಳ್ಳರು - ದರೋಡೆಕೋರ ಭಯ ಇಲ್ಲ": ಏನಿದು ಈ ಗ್ರಾಮದ ಪದ್ದತಿ?

ಮನೆಗೆ ಬಾಗಿಲು, ಬೀಗವೇ ಇಲ್ಲದ ವಿಶಿಷ್ಟ ಗ್ರಾಮ: ಏನಿದು ಇಲ್ಲಿನ ವಿಶೇಷತೆ?

Viral News: ಇತ್ತೀಚೆಗೆ ಅಪರಿಚಿತ ವ್ಯಕ್ತಿ, ಅಥವಾ ಕಳ್ಳರ ಭಯದಿಂದ ಮನೆಯ ಸುತ್ತ ಮುತ್ತ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸುತ್ತಾರೆ. ಆದರೆ ಈ ಒಂದು ಗ್ರಾಮದ ವಿಶೇಷತೆ ಕಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಹೌದು ಮಹಾರಾಷ್ಟ್ರದ ಈ ಗ್ರಾಮದಲ್ಲಿ ಯಾರು ತಮ್ಮ ಮನೆಗಳಿಗೆ ಬೀಗವೇ ಹಾಕದೇ ಹೊರನಡೆಯುತ್ತಾರೆ‌. ಈ ಗ್ರಾಮದಲ್ಲಿ ಜನರ ನಂಬಿಕೆ ಎಷ್ಟು ಸಾಂಪ್ರದಾಯಿಕವಾಗಿ ಇದೆ ಎಂದರೆ ಮನೆಗಳಿಗೆ ಬಾಗಿಲುಗಳೇ ಇರುವುದಿಲ್ಲ‌..ಈ ಸುದ್ದಿ ಕೇಳಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮದುವೆಯಲ್ಲಿ ಸ್ಟಂಟ್‌ ಮಾಡಲು ಹೋಗಿ ವರನ ಕೈಯಲ್ಲೇ ಸಿಡಿದ ಫೈರ್ ಗನ್ ; ಅಪಾಯಕಾರಿ ವಿಡಿಯೋ ವೈರಲ್‌

ಮದುವೆಯಲ್ಲಿ ಫೈರ್ ಗನ್ ಸಿಡಿಸಿದ ದಂಪತಿಗಳು: ವರನಿಗೆ ಬೆಂಕಿ ತಗುಲಿ ಗಾಯ!

Viral Video: ಅತಿಯಾದ ಪ್ರದರ್ಶನವು ಕೆಲವೊಮ್ಮೆ ಅಪಾಯಕಾರಿ ಉಂಟು ಮಾಡಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವಧು - ವರರು ಇಬ್ಬರು ಮದುವೆ ಸಂಭ್ರಮಕ್ಕೆ ಫೈರ್ ಗನ್ ಬಳಸಿದ್ದು ಅದರ ಕಿಡಿ ಅಪ್ಪಳಿಸಿ ವರನು ಗಾಯಗೊಂಡ ಘಟನೆ ನಡೆದಿದೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಂತಹ ಅಪಾಯಕಾರಿ ಪ್ರದರ್ಶನ ಬೇಕೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ತಂಡ ಬದಲಾದರೂ ಬದಲಾಗದ ಕೊಹ್ಲಿ-ಸಿರಾಜ್‌ ನಡುವಿನ ಸ್ನೇಹ ಬಾಂಧವ್ಯ; ಹೃದಯಸ್ಪರ್ಶಿ ಕ್ಷಣದ ವಿಡಿಯೊ ವೈರಲ್‌

ಕೊಹ್ಲಿ-ಸಿರಾಜ್‌ ನಡುವಿನ ಸ್ನೇಹ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ

Virat Kohli and Mohammed Siraj ಪಂದ್ಯ ಮುಗಿದ ಕೂಡಲೇ ಸಿರಾಜ್ ಕೊಹ್ಲಿ ಬಳಿಗೆ ನಡೆದು ಬಂದು ಅವರನ್ನು ಹಿಂದಿನಿಂದ ಹಿಡಿದು ಅಪ್ಪಿಕೊಂಡರು. ಕೊಹ್ಲಿ ತಿರುಗಿ, ಮುಗುಳ್ನಕ್ಕು, ಮತ್ತೆ ಅಪ್ಪಿಕೊಂಡರು. ಬಳಿಕ ಉಭಯ ಆಟಗಾರರು ಕೆಲ ಹೊತ್ತು ಮಾತುಗಳನ್ನಾಡಿದರು.

ಹಳೆಯ ಡ್ರೈಯರ್ ಖರೀದಿಸಿದ ವ್ಯಕ್ತಿಗೆ ಒಲಿದ ಅದೃಷ್ಟ: ಯಂತ್ರದೊಳಗೆ ಸಿಕ್ಕ ಕಂತೆ- ಕಂತೆ ನೋಟುಗಳು!

ಸೆಕೆಂಡ್ ಹ್ಯಾಂಡ್ ಡ್ರೈಯರ್‌ ನಲ್ಲಿ ರಾಶಿ ಹಣದ ನೋಟು ಪತ್ತೆ: ವಿಡಿಯೊ ವೈರಲ್

Viral Video: ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಡ್ರೈಯರ್ ಖರೀದಿ ಮಾಡಿದ ವ್ಯಕ್ತಿಯೊಬ್ಬರಿಗೆ‌ ಹಣದ ರಾಶಿ ನೋಟುಗಳೇ ಸಿಕ್ಕಿರುವ ಘಟನೆವೊಂದು ಕಂಡು ಬಂದಿದೆ. ಡ್ರೈಯರ್ ಮೆಷಿನ್ ಮೂಲಕ ಯುವಕನು ಲಾಟರಿ ಗೆದ್ದಿದ್ದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಬೆಚ್ಚಿ ಬೀಳಿಸುವ ದೃಶ್ಯ: ರೈಲಿನ ಮೇಲ್ಛಾವಣಿ ಮೇಲೆ ನಿಂತು ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು!

ರೈಲಿನ ಮೇಲ್ಛಾವಣಿಯ ಹೈ-ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

Viral Video: ಯುವಕನೊಬ್ಬ ಸರಕು ಸಾಗಣಿಕ ರೈಲಿನ ಮೇಲೆ ಹತ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆವೊಂದು ನಡೆದಿದೆ. ಬಿಹಾರದ ದರ್ಭಾಂಗದಲ್ಲಿ ಈ ಘಟನೆ ನಡೆದಿದ್ದು ಯುವಕನ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ವಿದ್ಯುತ್ ಆಘಾತದಿಂದಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

''ಮದುವೆಯಾಗುವ ಮುನ್ನ ಎರಡು ಬಾರಿ ಯೋಚಿಸಿ''! ಪತಿಗೆ ಬ್ಯಾಟ್‌ನಿಂದ ಹೊಡೆದ ಪತ್ನಿ, ವಿಡಿಯೋ ವೈರಲ್‌

ಪತ್ನಿಯಿಂದ ಪತಿಗೆ ಬ್ಯಾಟ್‌ನಿಂದ ತೀವ್ರ ಹಲ್ಲೆ; ಕಿಡಿಕಾರಿದ ನೆಟ್ಟಿಗರು!

Viral Video: ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಕ್ಕೆ ದಂಪತಿಗಳು ಡಿವೊರ್ಸ್ ವರೆಗೂ ತಲುಪುವಂತಹ ಪ್ರಕರಣ ಜಾಸ್ತಿಯಾಗುತ್ತಿದೆ. ಪತಿ -ಪತ್ನಿಯ ಮೇಲೆ ಹಲ್ಲೆ, ಪತ್ನಿಯಿಂದ ಮಾನಸಿಕ ಹಿಂಸೆ ಹೀಗೆ ನಾನಾ ಕಾರಣದಿಂದ ನೊಂದಿರುವ ವಿಚಾರ ಸುದ್ದಿಯಾಗುತ್ತಲೇ ಇದೆ.‌ ಈ ನಡುವೆ ಪತ್ನಿಯೂ ಪತಿ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ.‌ ಈ ವಿಡಿಯೊ ನೋಡಿದ ಆನೇಕರು ಆತಂಕವನ್ನು‌ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯ ಪೀಡಿತ ಬೀದಿ ನಾಯಿಯನ್ನು ಸೈಕಲ್‌ ನಲ್ಲಿ ಕೂರಿಸಿ ಚಿಕಿತ್ಸೆ ಕೊಡಿಸಿದ ವ್ಯಕ್ತಿ; ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ

ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ಚಿಕಿತ್ಸೆ ನೀಡಿದ ಮುಂಬೈ ವ್ಯಕ್ತಿ

Viral Video: ಮುಂಬೈ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದ ದೃಶ್ಯ ಎಲ್ಲರ ಹೃದಯ ಗೆದ್ದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೀದಿ ನಾಯಿಯನ್ನು ವ್ಯಕ್ತಿಯೊಬ್ಬರು ಸೈಕಲ್ ನಲ್ಲಿ ಕೂರಿಸಿ ಚಿಕಿತ್ಸೆ ನೀಡಲು ಕರೆದೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

MI vs CSK: ತಂಡದ ಕಳಪೆ ಬ್ಯಾಟಿಂಗ್‌ ಕಂಡು ಪಂದ್ಯದ ಮಧ್ಯೆ ಮೈದಾನ ತೊರೆದ ಆಕಾಶ್ ಅಂಬಾನಿ; ವಿಡಿಯೊ ವೈರಲ್‌

ಪಂದ್ಯದ ಮಧ್ಯೆ ಮೈದಾನ ತೊರೆದ ಆಕಾಶ್ ಅಂಬಾನಿ; ಕಾರಣವೇನು?

IPL 2026: ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ 6 ವಿಕೆಟ್‌ಗೆ 207 ರನ್‌ ಗಳಿಸಿತು. ಸಂಜು ಸ್ಯಾಮ್ಸನ್‌ 54 ಎಸೆತಗಳಲ್ಲಿ ಔಟಾಗದೆ 101 ರನ್‌ ಸಿಡಿಸಿದರು. ಇದು ಅವರ ಸಿಎಸ್‌ಕೆ ಪರ 2ನೇ ಶತಕ. ಉಳಿದಂತೆ ಋತುರಾಜ್‌ 22, ಬ್ರೆವಿಸ್‌ 21 ರನ್‌ ಬಾರಿಸಿದರು.

ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ ಸರಿಯಾಗಿ ಥಳಿಸಿದ ಸೆಕ್ಯೂರಿಟಿ ಗಾರ್ಡ್!

ಮಹಿಳೆಯ ಮೇಲೆ ಹಲ್ಲೆ: ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಗೆ ನೆಟ್ಟಿಗರು ಫಿದಾ

Viral News: ಲಿಫ್ಟ್ ನಲ್ಲಿ ಕಾಮುಕನೊಬ್ಬ ಮಹಿಳೆಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ.‌ ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಅದೇ ಸ್ಥಳದಲ್ಲಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ. ಇದರ ದೃಶ್ಯ ಸೋಷಿ ಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Loading...