ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Viral Video: ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ರಜೆ ದಿನ ಕೆಲಸ ಹೇಳಿದ ಮ್ಯಾನೇಜರ್‌ಗೆ ಡೋಂಟ್ ಕೇರ್ ಎಂದ ಯುವತಿ

ಉದ್ಯೋಗಿಗೆ ರಜೆಯ ದಿನದಂದು ಲಾಗಿನ್ ಆಗುವಂತೆ ಮ್ಯಾನೇಜರ್ ಆದೇಶಿಸಿದ್ದು, ಮುಂದೆ ಆಕೆ ಊಹಿಸದ ಬೆಳವಣಿಗೆ ನಡೆದಿದೆ. ಮಹಿಳಾ ಉದ್ಯೋಗಿ ಕೆಲಸ ಮಾಡಲು ನಿರಾಕರಿಸುವ ಮೂಲಕ ತಿರುಗೇಟು ನೀಡಿದ್ದಾಳೆ. ಸದ್ಯ ಈ ವಿಡಿಯೊ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಸೆಳೆದಿದೆ. ಅನೇಕರು ತಮ್ಮ ಕೆಲಸದ ಸ್ಥಳಗಳಲ್ಲಿ ಆದ ಇದೇ ರೀತಿಯ ಅನುಭವ ಶೇರ್ ಮಾಡಿಕೊಂಡಿದ್ದಾರೆ.

ಬಸ್‌ನಲ್ಲಿ ಗುಪ್ತಾಂಗ ತೋರಿಸಿದ ಕಾಮುಕನ ಕೆನ್ನೆಗೆ ಹೊಡೆದ ಯುವತಿ; ವಿಡಿಯೊ ವೈರಲ್

ಬಸ್‌ನಲ್ಲೇ ಅಸಭ್ಯ ವರ್ತನೆ; ಕಾಮುಕನ ಕೆನ್ನೆಗೆ ಹೊಡೆದ ಯುವತಿ

Viral Video: ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ದಿಯೋರಿ ಬಸ್ ನಿಲ್ದಾಣದಲ್ಲಿ ಬಸ್‌ನೊಳಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಯುವತಿ ಸಾರ್ವಜನಿಕರ ಎದುರೇ ಕೆನ್ನೆಗೆ ಬಾರಿಸಿ ತಕ್ಕ ಪಾಠ ಕಲಿಸಿದ್ದಾಳೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸಂತ್ರಸ್ತೆಯಿಂದ ಅಧಿಕೃತ ದೂರು ನೀಡದ ಕಾರಣ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.

Viral Video: "ಅತ್ಯಂತ ಮುರ್ಖತನದ ನಿರ್ಧಾರ"; 1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಮೈಕ್ರೋಸಾಫ್ಟ್ ಕೆಲಸ ಬಿಟ್ಟು ತಪ್ಪು ಮಾಡಿದೆ ಎಂದ ಯುವಕ

ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಚಿನ ಪ್ಯಾಕೇಜ್ ಹೊಂದಿದ ಕೆಲಸ ಸಿಗುವುದೇ ಅಪರೂಪ. ಇಂತಹ ಉದ್ಯೋಗವನ್ನು ಬಿಟ್ಟು ಬರುವ ನಿರ್ಧಾರವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಸ್ವಿಟ್ಜರ್ಲೆಂಡ್‌ನ ಮೈಕ್ರೋಸಾಫ್ಟ್ ಕಂಪನಿಯಲ್ಲಿದ್ದ ಕ್ರಿಶ್ಚಿಯನ್ ಹಾರ್ಮ್ಸ್, ವರ್ಷಕ್ಕೆ ಸುಮಾರು 1.9 ಕೋಟಿ ರುಪಾಯಿ ಸಂಬಳ ಹೊಂದಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಆದರೆ ಇದೀಗ ಈ ನಿರ್ಧಾರ ತೆಗೆದುಕೊಂಡಿದ್ದೇ ತಪ್ಪು ಎಂದು ಪಶ್ಚತಾಪ ಪಡುತ್ತಿದ್ದಾನೆ.

ಮದುವೆ ಬೇಡವೆಂದು ತಲೆ ಬೋಳಿಸಿಕೊಂಡು ಆಕ್ರೋಶ ವ್ಯಕ್ತ ಪಡಿಸಿದ ಜೆನ್‌ ಝೀ ಯುವತಿ: ವಿಡಿಯೊ ವೈರಲ್

ತಾಯಿ ಮದುವೆ ನಿಶ್ಚಯಿಸಿದ್ದಕ್ಕೆ ತಲೆಯನ್ನೇ ಬೋಳಿಸಿಕೊಂಡ ಯುವತಿ

Viral Video: ಒಂದು ನಿರ್ದಿಷ್ಟ ಮದುವೆ ವಯಸ್ಸು ತುಂಬುತ್ತಿದ್ದಂತೆ ಪೋಷಕರು ಮದುವೆ ಮಾಡಲು ಇಚ್ಚಿಸುತ್ತಾರೆ. ಆದರೆ ಇಂದಿನ ಜೆನ್‌ ಝೀ ತಲೆಮಾರಿಗೆ ಬೇಗನೇ ಮದುವೆಯಾಗುವುದ ಇಷ್ಟವಿಲ್ಲ. ಇದೇ ಕಾರಣಕ್ಕೆ ಇಲ್ಲೊಬ್ಬ ಯುವತಿ ತನ್ನ ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕೆಯ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

6 ವರ್ಷದ ಮೊಮ್ಮಗಳಿಗೆ ಚಲಾಯಿಸಲು ಕಾರ್‌ ಬಿಟ್ಟು ಕೊಟ್ಟ ಪೊಲೀಸ್‌ ಅಧಿಕಾರಿ; ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದ ನೆಟ್ಟಿಗರು

ಅಪ್ರಾಪ್ತ ಬಾಲಕಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಪೊಲೀಸ್ ಅಧಿಕಾರಿ

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಜನದಟ್ಟಣೆಯ ರಸ್ತೆಯಲ್ಲಿಯೇ 6 ವರ್ಷದ ಮೊಮ್ಮಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಾರ್‌ ಚಲಾಯಿಸಲು ಅವಕಾಶ ನೀಡಿದ ಘಟನೆ ಬೆಳಕಿಗೆ ಬಂದಿದೆ. ಇದೀಗ ಆ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಮರ್ಸಿಡಿಸ್ ಕಾರ್‌ ಡಿಕ್ಕಿ ಹೊಡೆದು ಬಿದ್ದರೂ ಮರುಕ್ಷಣ ಎದ್ದು ನಡೆದ ಪಾದಾಚಾರಿ; ಅಚ್ಚರಿಯ ವಿಡಿಯೊ ವೈರಲ್‌

ಕಾರ್‌ ಡಿಕ್ಕಿ ಹೊಡೆದರೂ ಎದ್ದು ನಡೆದ ಪಾದಾಚಾರಿ

Viral Video: ಹರಿಯಾಣದ ಚಂಡೀಗಢದ ಐಷಾರಾಮಿ ಪ್ರದೇಶ ಸೆಕ್ಟರ್ 26ರಲ್ಲಿ ಮರ್ಸಿಡಿಸ್ ಕಾರ್ ಚಾಲಕ‌ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ದೃಶ್ಯ ಮೊಬೈಲ್ ವಿಡಿಯೊದಲ್ಲಿ ಸೆರೆಯಾಗಿದೆ. ಧೂಳು ಮತ್ತು ಗುಂಡಿ ತುಂಬಿದ ರಸ್ತೆಯಲ್ಲಿ ಮರ್ಸಿಡಿಸ್ ಕಾರು ಅತೀ ವೇಗವಾಗಿ ಬಂದಿದ್ದು ಇದನ್ನು ಸಾರ್ವ ಜನಿಕರು ಅರ್ಧದಲ್ಲೆ ತಡೆದಿದ್ದಾರೆ. ಆದರೂ ಆತ ಕಾರನ್ನು ರಿವರ್ಸ್ ಚಲಾಯಿಸಿ ಅಲ್ಲಿಯೇ ನಿಂತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಅಚ್ಚರಿ ಎಂದರೆ ಕಾರ್‌ ಡಿಕ್ಕಿಯಾಗಿ ಬಿದ್ದಿದ್ದರೂ ಆತ ಪಾರಾಗಿದ್ದು, ತಕ್ಷಣ ಎದ್ದು ನಡೆದಿದ್ದಾನೆ.

ರಸ್ತೆ ಮಧ್ಯೆ ಬಸ್ ನಿಲ್ಲಿಸಿ 'ಸೇವ್ ಪುರಿ' ಖರೀದಿಸಿದ ಚಾಲಕ; ಟ್ರಾಫಿಕ್ ಜಾಮ್‌ನಿಂದ ಪರದಾಡಿದ ಪ್ರಯಾಣಿಕರು!

ಸೇವ್ ಪುರಿ ಖರೀದಿಸಲು ರಸ್ತೆ ಮಧ್ಯೆ ಬಸ್ ನಿಲ್ಲಿಸಿದ ಚಾಲಕ: ನೆಟ್ಟಿಗರು ಕಿಡಿ

Viral Video: ಬಸ್ ಚಾಲಕನೊಬ್ಬ ರಸ್ತೆ ಮಧ್ಯೆಯೆ ಬಸ್ ನಿಲ್ಲಿಸಿ ಸೆವ್ ಪುರಿ ಖರೀದಿಸಿದ ಘಟನೆಯೊಂದು ನಡೆದಿದೆ. ಚಾಲಕನ. ಬೇಜವ್ದಾರಿ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು‌.

ಕೋಲ್ಕತ್ತಾ ತಲುಪುವಷ್ಟೇ ಸಮಯ ಬೆಂಗಳೂರು ಏರ್‌ಪೋರ್ಟ್ ತಲುಪಲು ಬೇಕಾಯ್ತು: ಸಿಲಿಕಾನ್‌ ಸಿಟಿ ಟ್ರಾಫಿಕ್‌ ಕುರಿತು ಉದ್ಯಮಿ ಹೇಳಿದ್ದೇನು?

ಫ್ಲೈಟ್ ಜರ್ನಿಗಿಂತ ಬೆಂಗಳೂರು ಟ್ರಾಫಿಕ್ ಜರ್ನಿಯೇ ಹೆಚ್ಚು: ಉದ್ಯಮಿ ಬೇಸರ

Viral Video: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ಎಷ್ಟು ಕ್ಲಿಷ್ಟಕರವಾಗಿದೆ ಎಂಬುದನ್ನು ಉದ್ಯಮಿಯೊಬ್ಬರು ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ. ಮನೀಶ್ ಕುಮಾರ್ ಸಿಂಗ್ ಅವರು ಎಚ್‌ಎಸ್‌ಆರ್ ಲೇಔಟ್ ನಿಂದ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಈ ವಿಡಿಯೋ ಮಾಡಿದ್ದಾರೆ..

ಮಾನವೀಯತೆ ಇನ್ನೂ ಬದುಕಿದೆ; ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ​ಜೊಮ್ಯಾಟೊ ಡೆಲಿವರಿ ಬಾಯ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ

ಜೊಮ್ಯಾಟೊ ಬಾಯ್ ಕಷ್ಟಕ್ಕೆ ಸ್ಪಂದಿಸಿದ ಗ್ರಾಹಕ

Viral News: ಸಾಮಾನ್ಯವಾಗಿ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ಬಾಯ್‌ಯಿಂದ ಖರೀದಿಸುವುದು ಗ್ರಾಹಕರ ಕೆಲಸ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಆರ್ಡರ್ ಮಾಡಿದ ವಸ್ತು ಪಡೆದಿದ್ದು ಮಾತ್ರವಲ್ಲದೆ ಡೆಲಿವರಿ ಬಾಯ್ ಮನಸ್ಥಿತಿ ಅರ್ಥೈಸಿಕೊಂಡು ನೆರವಾಗಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ 95,000 ರುಪಾಯಿಯ ಸ್ಯಾಮ್‌ಸಂಗ್ ಟ್ಯಾಬ್ ಆರ್ಡರ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಹರಿದು ಹೋದ ಹಳೆಯ ಬುಕ್! ವಿಡಿಯೊ ನೋಡಿ

ಟ್ಯಾಬ್ ಆರ್ಡರ್‌ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಪುಸ್ತಕ!

Viral Video: ಕೆಲವೊಮ್ಮೆ ಇ ಕಾರ್ಮಸ್ ವೆಬ್‌ಸೈಟ್‌ಗಳಲ್ಲಿ ನಾವು ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೆ ಯಾವುದೇ ವಸ್ತು ಡೆಲಿವರಿ ಆಗುತ್ತದೆ. ಇದೀಗ ಗ್ರಾಹಕರೊಬ್ಬರಿಗೆ ಇದೇ ರೀತಿಯ ಅನುಭವವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 95,000 ರುಪಾಯಿ ಮೌಲ್ಯದ ಪ್ರೀಮಿಯಂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಅನ್ನು ಆರ್ಡರ್ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ಯಾಕ್ ಒಳಗೆ ಬಂದಿದ್ದು ಹರಿದು ಹೋದ ಹಳೆಯ ಬುಕ್ ಇತ್ತು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಮೊಬೈಲ್ ಕದಿಯಲು ಹೋಗಿ ತಗಲಾಕೊಂಡ ಖದೀಮ! ಚಲಿಸುವ ರೈಲಿನ ಕಿಟಕಿಯ ಹೊರಗೆ 9 ಕಿಲೋ ಮೀಟರ್‌ ನೇತಾಡಿದ ವಿಡಿಯೊ ವೈರಲ್

ಚಲಿಸುವ ರೈಲಿನಲ್ಲಿ ಫೋನ್ ಕಸಿಯಲು ಹೋದ ಕಳ್ಳನ ಫಜೀತಿ ವೈರಲ್‌

Viral Video: ಮೊಬೈಲ್ ಕಳವು ಮಾಡಲು ಹೋಗಿದ್ದ ಖದೀಮನೊಬ್ಬ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ. ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚಲಿಸುವ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕರ ಮೊಬೈಲ್ ಕದಿಯಲು ಯತ್ನಿಸಿದ್ದಾನೆ. ಆದರೆ ಪ್ರಯಾಣಿಕರು ಆತನನ್ನು ಬಿಡದೆ ಸುಮಾರು 9 ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯಿಂದ ಹೊರಗಡೆ ನೇತಾಡಿಸಿಕೊಂಡೆ ಕರೆದೊಯ್ದಿದ್ದಾರೆ.

ಇದ್ರೆ ಇಂಥ ಫ್ರೆಂಡ್‌ ಇರ್ಬೆಕಪ್ಪ; ಬಾಲ್ಯದ ಗೆಳೆಯನಿಗೆ 28 ಕೋಟಿ ರುಪಾಯಿ ಆಸ್ತಿ ದಾನ ಮಾಡಿದ 19 ವರ್ಷದ ವಿದ್ಯಾರ್ಥಿ

ಬಾಲ್ಯದ ಗೆಳೆಯನಿಗೆ ಆಸ್ತಿ ವಿಲ್ ಮಾಡಿಸಿದ 19 ವರ್ಷದ ವಿದ್ಯಾರ್ಥಿ

Viral News: ಚೀನಾದ ಲಿ ಎಂಬ ವಿದ್ಯಾರ್ಥಿ ಇತ್ತೀಚೆಗೆ ತನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಗಳನ್ನು (ಸುಮಾರು 28.1 ಕೋಟಿ ರುಪಾಯಿ) ಕಾನೂನುಬದ್ಧವಾಗಿ ತನ್ನ ಕುಟುಂಬದ ಬದಲು ಬಾಲ್ಯದ ಗೆಳೆಯನಿಗೆ ಬಿಟ್ಟುಕೊಟ್ಟಿದ್ದಾನೆ. ಇದರಲ್ಲಿ ಲಕ್ಷಾಂತರ ಯುವಾನ್ ಮೌಲ್ಯದ ಫ್ಲಾಟ್ ಮತ್ತು ಉಳಿತಾಯ ಹಣವೂ ಸೇರಿದೆ.

ಜ್ಯುವೆಲ್ಲರಿ ಶಾಪ್‌ನಲ್ಲಿ ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಶಿಕ್ಷಕಿ: ಬೆಚ್ಚಿಬೀಳಿಸುವ ದೃಶ್ಯ ವೈರಲ್

ಆಭರಣ ಅಂಗಡಿಯಲ್ಲಿ ನೀರಿನ ಬದಲಾಗಿ ಆ್ಯಸಿಡ್ ಕುಡಿದ ಮಹಿಳೆ

Viral Video: ಆಭರಣ ಅಂಗಡಿಗೆ ಭೇಟಿ ನೀಡಿದ್ದ ಶಿಕ್ಷಕಿಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಪ್ರಕರಣವೊಂದು ದಾಖಲಾಗಿದ್ದು ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯೂ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶುಕ್ರವಾರ ಸಂಜೆ ಹಾಪುರದ ಅರ್ಜುನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ತನ್ನ ತಾಯಿಯೊಂದಿಗೆ ಹತ್ತಿರದ ಆಭರಣ ಅಂಗಡಿಗೆ ಭೇಟಿ ನೀಡಿದ್ದಾಗ ಸಂಭವಿಸಿದೆ.

Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ​ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ

ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಯ ಕಾಲು ಹಿಡಿದ ಹುಚ್ಚು ಪ್ರೇಮಿ

ಮಹಾರಾಷ್ಟ್ರದ ಮುಂಬೈಯ ಬೊರಿವಲಿ ರೈಲು ನಿಲ್ದಾಣದಲ್ಲಿ ಯುವಕನ ಅತಿರೇಕದ ವರ್ತನೆ ಕಂಡು ಜನ ಕಿಡಿಕಾರಿದ್ದಾರೆ. ವಿಡಿಯೊದಲ್ಲಿ ಯುವಕನೊಬ್ಬ ಪ್ಲಾಟ್‌ಫಾರ್ಮ್ ಮೇಲೆ ಮಲಗಿ, ಯುವತಿಯೊಬ್ಬಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಯುವತಿ ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಪದೇ ಪದೆ ಪ್ರಯತ್ನಿಸಿದ್ದಾಳೆ. ಇದರ ಹೊರತಾಗಿಯೂ, ಆತ ಆಕೆಯ ಕಾಲನ್ನು ಬಿಟ್ಟಿಲ್ಲ.

"ಇಲ್ಲಿ ಬದುಕುವುದು ಸುಲಭವಲ್ಲ": ವಿದೇಶದಲ್ಲಿ ವಾಸ್ತವ್ಯ ಹೂಡಬೇಕೆಂದು ಕನಸು ಕಾಣುವವರ ಕಣ್ತೆರೆಸುವ ಅಮೆರಿಕದಲ್ಲಿ 10 ವರ್ಷ ಕಳೆದ ಭಾರತೀಯ ವ್ಯಕ್ತಿಯ ಅನುಭವ

ಅಮೆರಿಕದ ದುಬಾರಿ ಜೀವನ ಶೈಲಿಯ ಬಗ್ಗೆ ಬೇಸರ ಹೊರಹಾಕಿದ ಭಾರತೀಯ

Viral Video: ವಿದೇಶದಲ್ಲಿ ಕೆಲಸ ಮಾಡುವುದು ಹೊರಗಿನಿಂದ ಕಾಣುವಷ್ಟು ಸುಲಭವಲ್ಲ ಎಂದು ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹತ್ತು ವರ್ಷಗಳನ್ನು ಕಳೆದ ಅವರು ಅಲ್ಲಿ ಯಶಸ್ಸನ್ನು ಬೆನ್ನಟ್ಟುವ ಕಠಿಣ ಪರಿಶ್ರಮ ಹೇಗಿದೆ ಎಂದು ವಿವರಿಸಿದ್ದಾರೆ.

ರಣರಂಗವಾದ ಮದುವೆ ಮನೆ; ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ: 12 ಮಂದಿಗೆ ಗಾಯ-ವಿಡಿಯೊ ಇಲ್ಲಿದೆ

ಮದುವೆ ಮನೆಯಲ್ಲಿ ಮಟನ್ ಬದಲು ಚಿಕನ್‌ ನೀಡಿದ್ದಕ್ಕೆ ಗಲಾಟೆ

Wedding Feast Turns Violent: ಮಧ್ಯಾಹ್ನದ ಮದುವೆ ಮನೆ ಊಟಕ್ಕೆ ಮಟನ್‌ ಖಾದ್ಯ ಮಾಡುವುದಾಗಿ ವಧುವಿನ ಕಡೆಯವರು ಮಾತು ಕೊಟ್ಟಿದ್ದರು. ಆದರೆ ಮಟನ್ ಬದಲಿಗೆ ಚಿಕನ್‌ ಖಾದ್ಯ ಬಡಿಸಲಾಯಿತು. ಇದರಿಂದ ಕೋಪಗೊಂಡ ವರನ ಕಡೆಯವರು ಗಲಾಟೆ ನಡೆಸಿದರು. ಕ್ಷಣಾರ್ಧದಲ್ಲೇ ಮದುವೆ ಮನೆ ರಣರಂಗದಂತಾಯ್ತು.

ಸಾರ್ಕ್ ವಿಚಾರ ಸಂಕಿರಣದಲ್ಲಿ ತಪ್ಪಾದ ನಕ್ಷೆ ಪ್ರದರ್ಶನಕ್ಕೆ ಭಾರತ ಆಕ್ಷೇಪ

ಢಾಕಾದಲ್ಲಿ ತಪ್ಪಾದ ದೇಶದ ನಕ್ಷೆ ಪ್ರದರ್ಶನ: ಭಾರತ ಆಕ್ಷೇಪ

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತೀಯ ರಾಯಭಾರಿ ಪೂಜಾ ಕುಮಾರಿ ಝಾ ಹೇಳಿದ್ದಾರೆ. ಢಾಕಾದಲ್ಲಿ ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಚಿತ್ರಿಸುವ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ರೈಲಿನ ಎಸಿ ಕೋಚನ್ನೇ ಪರ್ಸನಲ್ ಬಾರ್ ಮಾಡಿಕೊಂಡ ಯುವಕರು: ಕಿಡಿಗೇಡಿಗಳ ವಿಡಿಯೋ ವೈರಲ್‌

ಎಸಿ ಕೋಚ್‌ನಲ್ಲಿ ಎಣ್ಣೆ ಪಾರ್ಟಿ ಮಾಡಿದ ಯುವಕರು: ನೆಟ್ಟಿಗರು ಕಿಡಿ

Viral Video: ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಬಸ್, ರೈಲ್ವೆಯ ಕೋಚ್‌ಗಳಲ್ಲಿ ಜನದಟ್ಟಣೆ, ಅಶಿಸ್ತಿನ ವರ್ತನೆ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಯುವಕರ ಗುಂಪೊಂದು ಎಸಿ ಕೋಚ್ ವೊಂದನ್ನು ಪರ್ಸನಲ್ ಬಾರ್ ಆಗಿ ಪರಿವರ್ತಿಸಿದ ವಿಡಿಯೊವೊಂದು ವೈರಲ್ ಆಗಿದೆ.

ಹಿಟ್-ಅಂಡ್-ರನ್ ಪ್ರಕರಣ: ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್ ಚಾಲಕ

ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾದ ಮಹೀಂದ್ರಾ ಥಾರ್ ಚಾಲಕ

Viral Video: ಹರಿಯಾಣ ನೋಂದಣಿಯ ಮಹೀಂದ್ರಾ ಥಾರ್ ಕಾರೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಮುಂಬೈನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ...

ಮುಂಬೈನಲ್ಲಿ ಜಲಾವೃತಗೊಂಡ ರೈಲು ಹಳಿಗಳ ಮೇಲೆ ಮೀನುಗಳ ಈಜಾಟ: ವಿಡಿಯೊ ವೈರಲ್

ಮುಂಬೈನಲ್ಲಿ ಮಳೆಯ ಆರ್ಭಟ: ರೈಲ್ವೆ ಹಳಿಗಳ ಮೇಲೆಯೇ ಮೀನುಗಳ ಈಜಾಟ!

Viral Video: ರೈಲ್ವೆ ಹಳಿಗಳ ನಡುವೆ ಸಂಗ್ರಹವಾಗಿದ್ದ ಮಳೆನೀರಿನ ಮೂಲಕ ಹಲವಾರು ಮೀನುಗಳು ಓಡಾಡುತ್ತಿವೆ. ಈ ಅಸಾಮಾನ್ಯ ಕ್ಲಿಪ್ ವೀಕ್ಷಕರನ್ನು ರಂಜಿಸಿದ್ದು ಆಶ್ಚರ್ಯಚಕಿತಗೊಳಿಸಿದೆ.. ಭಾರೀ ಮಳೆಯಿಂದ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಮುಳುಗಿ ಹೋಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು. ಆದರೆ ಮೀನುಗಳು ಈ ನಿಂತ ನೀರಿನಲ್ಲಿ ಈಜಡುತ್ತಾ ಓಡಾಡುತ್ತಿವೆ..

ಭಾರತದ ಕಂಪನಿಯಲ್ಲಿ ಆಕರ್ಷಕ ಪ್ಯಾಕೇಜ್ ಇದ್ದರೂ ಅಮೆರಿಕ ಬಿಟ್ಟು ಬರದ ಭಾರತೀಯ ಯುವತಿಯರು: ಕಾರಣವೇನು?

ಭಾರತದ ಜಾಬ್ ಆಫರ್ ನಿರಾಕರಿಸಿ ಯುಎಸ್‌ನಲ್ಲಿ ಬದುಕಲು ಇಚ್ಚಿಸಿದ ಯುವತಿಯರು

Viral Video: ಹೆಚ್ಚಿನವರು ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಆಕರ್ಷಕ ವೇತನ ವಿಚಾರವಾಗಿ ಮಾತ್ರವಲ್ಲದೆ ಅಲ್ಲಿನ ಜೀವನ ಶೈಲಿ, ಹಾಗೂ ಕೆಲಸದ ವಾತಾವರಣ ಕೂಡ ಕೆಲವರನ್ನು ಆಕರ್ಷಣೆ ಮಾಡುತ್ತದೆ. ಇದೀಗ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ ಮಹಿಳೆ ಯರು ತಮ್ಮ ಕೆಲಸದ ಆಯ್ಕೆ ವಿದೇಶದಲ್ಲಿ ಯಾಕೆ ಅನ್ನೋದನ್ನು ಅಚ್ಚರಿಯ ಕೆಲವು ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..

500 ರೂ.ನೀಡಿ ಲೈಂಗಿಕ ಕ್ರಿಯೆಗೆ ಆಮಿಷ ಒಡ್ಡಿದ ಆಟೋ ಚಾಲಕ: ವಿಡಿಯೊ ಶೇರ್ ಮಾಡಿ ಆಕ್ರೋಶ ಹೊರ ಹಾಕಿದ ಯುವತಿ

ಹಗಲು ಸಮಯದಲ್ಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋಚಾಲಕ

Viral Video: ಮಹಿಳೆಯರಿಗೆ ಅಸುರಕ್ಷಿತ ಉಂಟು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಪ್ರಯಾಣದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ದಿನಕ್ಕೊಂದು ವರದಿ ಕೇಳಿ ಬರುತ್ತಲೇ ಇದೆ. ಈ ನಡುವೆ ವಿಶಾಖಪಟ್ಟಣದ ಪೆಂದುರ್ತಿ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಹಗಲು ಹೊತ್ತಿನಲ್ಲೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಯುವತಿ ಕೃತ್ಯವನ್ನು ರೆಕಾರ್ಡ್ ಮಾಡಿ ವಿಡಿಯೊ ಶೇರ್ ಮಾಡಿದ್ದಾಳೆ.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಿದ ಆನೆ! ಏನಿದು ವೈರಲ್‌ ವಿಡಿಯೋದ ಅಸಲಿಯತ್ತು?

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ರಕ್ಷಿಸಿದ ಆನೆ! ವಿಡಿಯೊ ನೋಡಿ

Viral Video: ತೀವ್ರ ಪ್ರವಾಹದ ನಡುವೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಲು ದೈತ್ಯ ಆಕಾರದ ಆನೆಯು ಪ್ರವಾಹದಲ್ಲಿಯೂ ನೀರಿಗೆ ಇಳಿಯುವುದನ್ನು ತೋರಿಸಲಾಗಿದೆ. ಆನೇಕರು ಈ ವಿಡಿಯೊ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ...

"ಇಲ್ಲಿನ ಸಾಮಾನ್ಯ ರೈಲೂ ಸಹ ಇಷ್ಟು ಕ್ಲೀನ್‌ ಆಗಿರುತ್ತೆ"! ದಕ್ಷಿಣದ ಜನರ ನಾಗರಿಕ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ!

ತಮಿಳುನಾಡಿನ ಪ್ಯಾಸೆಂಜರ್ ರೈಲಿನ ಸ್ವಚ್ಛತೆಗೆ ಮೆಚ್ಚುಗೆ ನೀಡಿದ ಪ್ರಯಾಣಿಕ

Viral Video; ಸಾಮಾನ್ಯ ಪ್ಯಾಸೆಂಜರ್ ರೈಲೊಂದರ ಸ್ವಚ್ಛತೆಯನ್ನು ಶ್ಲಾಘಿಸಿ ಪ್ರಯಾಣಿಸಿದ ಆರ್. ಗೌರವ್ ಎಂಬವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಶೌಚಾಲಯಗಳು, ವಾಶ್ ಬೇಸಿನ್ ಮತ್ತು ರೈಲಿನ ನೆಲ, ಹಾಗೆಯೇ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿವೆ ಎಂದು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ‌.

Loading...