ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಇಂಧನ ಕೊರತೆಯ ವದಂತಿ: 20 ಲೀಟರ್ ನೀರಿನ ಕ್ಯಾನಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ವ್ಯಕ್ತಿ; ವೈರಲ್ ವಿಡಿಯೊ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಪೆಟ್ರೋಲ್ ಅಭಾವ ಭೀತಿ: ನೀರಿನ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿ

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆದಲ್ಲಿ ಭಾರತದಲ್ಲಿ ಪೆಟ್ರೋಲ್ ಅಭಾವ ಉಂಟಾಗಬಹುದು ಎಂಬ ವದಂತಿಗಳ ನಡುವೆ ತಮಿಳುನಾಡಿನ ವಿಲ್ಲುಪುರಂ ಪೆಟ್ರೋಲ್ ಪಂಪ್‌ನಲ್ಲಿ ವ್ಯಕ್ತಿಯೊಬ್ಬ 20 ಲೀಟರ್ ನೀರಿನ ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆತಂಕದ ಖರೀದಿ ನಡೆಯುತ್ತಿರುವ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿ ಮತ್ತು ನಿಯಮ ವಿರೋಧಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ದೆಹಲಿಯ ರಸ್ತೆ ಬದಿ ಅಸ್ಥಿಪಂಜರ ಪತ್ತೆ: ಆಘಾತಕಾರಿ ವಿಡಿಯೊ ವೈರಲ್

ದೆಹಲಿಯಲ್ಲಿ ಕಸದ ರಾಶಿಯಲ್ಲಿ ಅಸ್ಥಿಪಂಜರ ಪತ್ತೆ

Viral Video: ದೆಹಲಿಯಲ್ಲಿ ಕಸದ ರಾಶಿಯನ್ನು ವಿಲೇವಾರಿ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. ಈ ಅನುಮಾನಾಸ್ಪದ ಅವಶೇಷಗಳು ಕಂಡು ಬಂದ ತಕ್ಷಣ ತಂಡವು ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿದೆ. ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಶತಮಾನಗಳ ಹಿಂದೆಯೇ ಭಾರತದಲ್ಲಿತ್ತು ಟೆಲಿಸ್ಕೋಪ್‌ ಬಳಕೆ; ಕರ್ನಾಟಕದ ದೇಗುಲದಲ್ಲಿ ಸಿಕ್ತು ಇದಕ್ಕೆ ಸಾಕ್ಷಿ

ಟೆಲಿಸ್ಕೋಪ್‌ ಕಂಡುಹಿಡಿದಿದ್ದು ಭಾರತೀಯರು; ಇಲ್ಲಿದೆ ಸಾಕ್ಷಿ

Viral Video: ಕರ್ನಾಟಕದ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯ ದೃಶ್ಯ ಮತ್ತೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾದ ಪ್ರಯಾಣಿಕನೊಬ್ಬ ಟೆಲಿಸ್ಕೋಪ್‌ (ದೂರದರ್ಶಕ) ಅನ್ನು ಭಾರತದಲ್ಲಿ ಮೊದಲು ಕಂಡು ಹಿಡಿಯಲಾಗಿತ್ತು ಎಂದು ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯನ್ನು ತೋರಿಸಿದ್ದಾರೆ.

ಎಸಿ ಕ್ಯಾಬ್‌ನಲ್ಲಿ ಪ್ರಯಾಣಿಸಿ ಬಾಡಿಗೆ ನೀಡಲು ನಿರಾಕರಿಸಿದ ಮಹಿಳೆ: ಚಾಲಕನ ಶರ್ಟ್ ಹಿಡಿದೆಳೆದು ಹೈಡ್ರಾಮಾ

ಕ್ಯಾಬ್ ಚಾಲಕನ ಶರ್ಟ್ ಹಿಡಿದು ಎಳೆದಾಡಿದ ಮಹಿಳೆ

Viral Video: ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಶರ್ಟ್ ಹಿಡಿದು ರಸ್ತೆಯಲ್ಲಿ ಹೈಡ್ರಾಮಾ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ನೋಯ್ಡಾದಿಂದ ಪ್ರಯಾಣಿಸಿದ ಮಹಿಳೆಗೆ ಇಳಿಯುವ ಸ್ಥಳ ಬಂದಾಗ 600 ರೂಪಾಯಿ ಪಾವತಿಸಲು ಚಾಲಕ ಹೇಳಿದ್ದಾನೆ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ.

LPG Cylinder Theft: ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು, ವಿಡಿಯೊ ವೈರಲ್‌!

ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; 2 ಕಡೆ ಕಳವು, ವಿಡಿಯೊ ವೈರಲ್‌!

LPG Cylinder Shortage: ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗಿದೆ. ದರ ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ. ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್‌ ಕಳ್ಳತನ ಪ್ರಕರಣ ನಡೆದಿವೆ.

ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಪತ್ತೆ! ಬೆಚ್ಚಿಬಿದ್ದ ಗ್ರಾಹಕ

ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು!

Viral Video: ಝೊಮೆಟೊ, ಸ್ವಿಗ್ಗಿ ಮುಂತಾದ ಆಹಾರ ವಿತರಿಸುವ ಆನ್‌ಲೈನ್ ಆ್ಯಪ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಝೊಮೆಟೊದಲ್ಲಿ ಆರ್ಡರ್‌ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಕಂಡು ಕಂಡುಬಂದಿದ್ದು, ಬೆಚ್ಚಿ ಬಿದ್ದಿದ್ದಾನೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಪ್ರಚಾರ ಬಯಸದೆ ರಸ್ತೆ ಬದಿಯ ಗಿಡಗಳಿಗೆ ನಿತ್ಯ ನೀರುಣಿಸುವ ಪರಿಸರ ಪ್ರೇಮಿ: ವಿಡಿಯೊ ನೋಡಿ

ರಸ್ತೆ ಬದಿ ಗಿಡಕ್ಕೆ ನೀರುಣಿಸುವ ವ್ಯಕ್ತಿ: ನಿಸ್ವಾರ್ಥ ಕಾರ್ಯಕ್ಕೆ ಮೆಚ್ಚುಗೆ

Viral Video: ಇಲ್ಲೊಬ್ಬ ವ್ಯಕ್ತಿ ಯಾವುದೇ ಪ್ರಚಾರ ಬಯಸದೇ ಪರಿಸರ ರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಸ್ವಾರ್ಥ ಬಯಸದೆ ರಸ್ತೆ ಬದಿಯ ಗಿಡಗಳಿಗೆ ದಿನನಿತ್ಯ ನೀರು ಹಾಕುವ ಈ ವ್ಯಕ್ತಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು; ಬಿಲ್‌ ನೋಡಿದ ಗ್ರಾಹಕರು ಶಾಕ್!

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಹೊರಿಸಿದ ಹೊಟೆಲ್‌ಗಳು

LPG Crisis: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಈಗಾಗಲೇ ಹಲವು ಹೊಟೆಲ್‌ಗಳು ಬಂದ್‌ ಆಗಿದ್ದು, ಇನ್ನೂ ಕೆಲವು ಹೊಟೆಗಳು ತಮ್ಮ ಮೆನುವನ್ನು ಕಡಿತಗೊಳಿಸುತ್ತಿದೆ. ಬಿಲ್‌ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರೆಸ್ಟೋರೆಂಟ್ ಬಂದ್; ಮಾಲಕನ ಭಾವನಾತ್ಮಕ ಪೋಸ್ಟ್

ಎಲ್‌ಪಿಜಿ ಕೊರತೆ: ಬೆಂಗಳೂರಿನಲ್ಲಿ‌ ಇತ್ತೀಚೆಗೆ ತೆರೆದ ರೆಸ್ಟೋರೆಂಟ್ ಬಂದ್

Viral Post: ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸದಾಗಿ ರೆಸ್ಟೋರೆಂಟ್ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆಯಿಂದಾಗಿ ಕೆಲವೇ ದಿನಗಳಲ್ಲಿ ಹೋಟೆಲ್‌ನ ಬಾಗಿಲು ಮುಚ್ಚುವಂತಾಗಿದೆ.

Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಎಲ್‌ಪಿಜಿ ಕೊರತೆ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು ಹೋಟೆಲ್ ಉದ್ಯಮ ಹಾಗೂ ವಿವಿಧ ವ್ಯವಹಾರಗಳಿಗೆ ಭಾರಿ ನಷ್ಟ ಉಂಟಾಗಿದೆ. ಈ ನಡುವೆ ಜ್ಯೋತಿಷಿ ಒಬ್ಬರು ಐದು ತಿಂಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿರುವ ಪೋಸ್ಟ್ ವೈರಲ್ ಆಗಿದೆ.

ನೋಡ ನೋಡುತ್ತಿದ್ದಂತೆ ಬಾಂಬ್‌ನಂತೆ ಸಿಡಿಯಿತು ಚಾರ್ಜ್‌ಗೆ ಇಟ್ಟ ಮೊಬೈಲ್: ಕೂದಲೆಳೆ ಅಂತರದಲ್ಲಿ ಬಾಲಕಿ ಪಾರು

ಚಾರ್ಜ್ ಗಿಟ್ಟ ಮೊಬೈಲ್ ಸ್ಪೋಟ: ಭಯಾನಕ ದೃಶ್ಯ ವೈರಲ್

Viral Video: ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇವಳೆಂಥಾ ತಾಯಿ?! ಡಿಕ್ಕಿ ಒಳಗೆ ಮಗುವನ್ನು  ಮಲಗಿಸಿ ಸ್ಕೂಟಿ ಚಲಾಯಿಸಿದ ಮಹಿಳೆ

ಡಿಕ್ಕಿಯೊಳಗೆ ಮಗುವನ್ನು ಮಲಗಿಸಿ ಸ್ಕೂಟರ್ ಚಲಾಯಿಸಿದ ಮಹಿಳೆ

Viral Video: ಮಹಿಳೆಯೊಬ್ಬಳು ತನ್ನ ಮಗುವನ್ನು ಸ್ಕೂಟರ್‌ನ ಡಿಕ್ಕಿ ಒಳಗೆ ಮಲಗಿಸಿ ಸೀಟ್ ಬಂದ್ ಮಾಡಿ ಪ್ರಯಾಣಿಸಿದ ದೃಶ್ಯ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸದ್ಯ ಮಹಿಳೆಯ ಈ ವರ್ತನೆ ಕಂಡು ಅನೇಕರು ಕಿಡಿಕಾರಿದ್ದಾರೆ. ಮಗುವಿನ ಸುರಕ್ಷತೆಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ವ್ಯಕ್ತಿಯ ಬದಲು ನಾಯಿ ಫೋಟೋ: ಉದ್ಯೋಗಾಕಾಂಕ್ಷಿ ಶಾಕ್

ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಾಯಿ ಫೋಟೋ!

dog photo on admit card: ನೇಮಕಾತಿ ಪರೀಕ್ಷೆಗೆ ಒಬ್ಬ ವ್ಯಕ್ತಿಗೆ ನೀಡಲಾದ ಪ್ರವೇಶ ಪತ್ರದಲ್ಲಿ ಅವರ ಫೋಟೋ ಬದಲು ನಾಯಿಯ ಫೋಟೋ ಮುದ್ರಿತವಾಗಿದೆ. ಮಾರ್ಚ್ 15 ರಂದು ನಿಗದಿಯಾಗಿದ್ದ ಪ್ರಾಥಮಿಕ ಪರೀಕ್ಷೆಗೆ ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಾಗ, ಪ್ರವೇಶ ಪತ್ರದಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನದ ಫೋಟೋ ಮುದ್ರಿತವಾಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು.

"ಮಾನವೀಯತೆ ಮರೆಯಾಗಿಲ್ಲ"- ಕ್ಯಾಬ್ ನಲ್ಲೇ ಬಿಟ್ಟು ಹೋದ ಗ್ರಾಹಕನ ಪರ್ಸ್ ತಲುಪಿಸಿದ ಚಾಲಕ!

ಗ್ರಾಹಕನ ವ್ಯಾಲೆಟ್ ತಲುಪಿಸಿದ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

Viral Post: ಕೇವಲ ಆಧುನಿಕ ಸೌಕರ್ಯಗಳಿಗೆ ಬೆಂಗಳೂರು ಪ್ರಸಿದ್ಧಿಯಾಗಿಲ್ಲ ಮಾನವೀಯತೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬರು‌ ಕಳೆದುಹೋದ ಪರ್ಸ್ ನ್ನು ಹಿಂತಿರುಗಿಸಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಲೆಟ್ ಒಳಗೆ ಐಡಿ ಕಾರ್ಡ್ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಕಂಡುಕೊಂಡು ಗ್ರಾಹಕರನ್ನು ಸಂಪರ್ಕ ಮಾಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ದೆವ್ವ ಕಂಡ ಬಾಲಕ ಮಾಡಿದ್ದೇನು? ವಿಡಿಯೋ ನೋಡಿ

ರೆಸ್ಟೋರೆಂಟ್‌ನಲ್ಲಿ ದೆವ್ವ ಕಂಡ ಬಾಲಕ ಮಾಡಿದ್ದೇನು?

Viral Video: ವಾರಣಾಸಿಯ ಭಯಾನಕ ಥೀಮ್ ಹೊಂದಿರುವ ರೆಸ್ಟೋರೆಂಟ್‌ನಲ್ಲಿ ವಿಚಿತ್ರವಾದ ದೃಶ್ಯ ವೊಂದು ಕಂಡು ಬಂದಿದೆ. ಈ ರೆಸ್ಟೋರೆಂಟ್‌ನಲ್ಲಿ ಅಸ್ಥಿಪಂಜರದಂತಹ ಭಯಾನಕ ವೇಷ ಹಾಕಿ ಕೊಂಡಿದ್ದ ಕಲಾವಿದನೊಬ್ಬ ಕಂಡು ಬಂದಿದ್ದು ಕುಟುಂಬದ ಜೊತೆ ಆಗಮಿಸಿದ್ದ ಮಗುವೊಂದು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದೆ. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದೆ.

ಬಾಹ್ಯಾಕಾಶದಿಂದ ಅದ್ಭುತವಾಗಿ ಕಂಗೊಳಿಸಿದ ಭಾರತ; ಅಪರೂಪದ ಫೋಟೋ ವೈರಲ್

ಬಾಹ್ಯಾಕಾಶದಿಂದ ಮೂಡಿಬಂದ ಭಾರತದ ಸುಂದರ ನೋಟ: ಫೋಟೋ ನೋಡಿ

Viral Post: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸುಂದರವಾದ ಭಾರತದ ರಾತ್ರಿಯ ನೋಟವನ್ನು ಹಂಚಿಕೊಂಡಿದೆ. ಚಿತ್ರವು ಭೂಮಿಯಾದ್ಯಂತ ಹರಡಿರುವ ಪ್ರಕಾಶಮಾನವಾದ ದೀಪಗಳ ಗಳೊಂದಿಗೆ ಭಾರತದ ವಿಶಾಲ ನೋಟವನ್ನು ತೋರಿಸುತ್ತದೆ. ಅರೇಬಿಯನ್ ಸಮುದ್ರದ ಮೇಲಿಂದ ಹಿಮಾಲಯದವರೆಗೆ ಬಾಹ್ಯಾಕಾಶ ನಿಲ್ದಾಣವು ಸಂಚರಿಸುವಾಗ ಈ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ.

ಯಾರೂ ಸಹಾಯ ಮಾಡದಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ನೆರವಾದ ಯೋಧ; ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಯೋಧ ಎಲ್ಲಿದ್ದರೂ ಯೋಧನೇ; ರೈಲು ನಿಲ್ದಾಣದಲ್ಲಿ ಯುವತಿಗೆ ನೆರವಾದ ಸೈನಿಕ

Indian Army soldier helps woman: ತನ್ನ ಫೋನ್ ಬ್ಯಾಟರಿ ಬಹುತೇಕ ಖಾಲಿಯಾಗಿದ್ದ ವೇಳೆ, ತಾಯಿ-ತಂದೆಗೆ ಸ್ಥಳದ ಮಾಹಿತಿ ಕಳುಹಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಏನು ಮಾಡುವುದು ಎಂದು ಯುವತಿಯೊಬ್ಬರು ಚಡಪಡಿಸುತ್ತಿದ್ದಾಗ, ಸೈನಿಕರೊಬ್ಬರು ನೆರವಾಗಿದ್ದಾರೆ. ಈ ಬಗ್ಗೆ ಯುವತಿಯು ಇನ್‌ಸ್ಟಾಗ್ರಾಮ್‌ನಲ್ಲಿ ವಿವರಿಸಿದ್ದು ಹೀಗೆ...

ಮಾನವೀಯತೆ ಇನ್ನೂ ಮರೆಯಾಗಿಲ್ಲ; ಹಸಿವಿನಿಂದ ಕಣ್ಣೀರಿಟ್ಟ ಡೆಲಿವರಿ ಬಾಯ್‌ಗೆ ಆಹಾರ ನೀಡಿದ ಗ್ರಾಹಕರು

ಡೆಲಿವರಿ ಬಾಯ್‌ಗೆ ಆಹಾರ ನೀಡಿ ಉಪಚರಿಸಿದ ಗ್ರಾಹಕರು: ವಿಡಿಯೊ ನೋಡಿ

Viral Video: ಸಂಕಷ್ಟ ಎದುರಿಸುತ್ತಿರುವ ಡೆಲಿವರಿ ಬಾಯ್‌ಗೆ ಯುವಕರು ಉಪಚರಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಹಾರವನ್ನು ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ತಮ್ಮ ಜತೆ ಊಟಕ್ಕೆ ಕರೆದಿದ್ದು, ಈ ಸಂದರ್ಭದಲ್ಲಿ ಅವರು ಭಾವುಕರಾಗಿದ್ದಾರೆ. ಊಟ ಮಾಡುತ್ತ ಕಣ್ಣೀರು ಸುರಿಸಿದ ಆ ಡೆಲಿವರಿ ರೈಡರ್, ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ರೈಲಿನಲ್ಲಿ ವಿದೇಶಿ  ಮಹಿಳೆಗೆ ಕಿರುಕುಳ: ಶೌಚಾಲಯದವರೆಗೂ ಹಿಂಬಾಲಿಸಿ ಬಾಗಿಲು ತೆರೆಯಲು ಯತ್ನಿಸಿದ ಕಾಮುಕರು!

ರೈಲಿನಲ್ಲಿ ಕಾಮುಕರ ಕಿರುಕುಳ: ಕಹಿ ಅನುಭವ ಬಿಚ್ಚಿಟ್ಟ ವಿದೇಶಿ ಮಹಿಳೆ

Viral Video: ದಿನ ನಿತ್ಯ ಮಹಿಳೆಯರ ಕಿರುಕುಳಕ್ಕೆ ಸಂಬಂಧ ಪಟ್ಟ ಪ್ರಕರಣಗಳು ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವಾಸ ಬಂದಿದ್ದ ಪೋರ್ಚುಗೀಸ್ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ರೈಲಿನಲ್ಲಿಯೇ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯಕ್ಕೆ ತೆರಳು ವಾಗಲೂ ಹಿಂಬಾಲಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆಕೆ ತನ್ನ ವೀಡಿಯೊದಲ್ಲಿ ಕೆಲವು ದೃಶ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ...

ಮದುವೆ ಮನೆಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿದ್ದಲ್ಲದೆ ಹಾಸ್ಟೆಲ್‌ಗೂ ನುಗ್ಗಿದ ಕಿಡಿಗೇಡಿಗಳು: ಕ್ಯಾಮರಾದಲ್ಲಿ ನೀಚ ಕೃತ್ಯ ಸೆರೆ

ಮದುವೆ ಮನೆಯಲ್ಲಿ ಯುವತಿಗೆ ಕಿರುಕುಳ: ನೆಟ್ಟಿಗರು ಕಿಡಿಕಿಡಿ

Viral Video: ಮದುವೆ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ ಇಬ್ಬರು ಯುವಕರು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಆಮಂತ್ರಣವಿಲ್ಲದ ಮದುವೆಗೆ ತೆರಳಿ ಅಲ್ಲಿದ್ದ ಯುವತಿಯೊಬ್ಬಳನ್ನು ಆಕೆಯ ಹಾಸ್ಟೆಲ್‌ವರೆಗೆ ಬೆನ್ನಟ್ಟಿ ಕಿರುಕುಳ ನೀಡಿದ್ದಾರೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೀರಿನೊಳಗೂ ಮಹಿಳೆಯರಿಗೆ ರಕ್ಷಣೆ ಇಲ್ಲ: ಸ್ಕೂಬಾ ಡೈವಿಂಗ್‌ ವೇಳೆ ಯುವತಿಗೆ ಕಿರುಕುಳ

ಯುವತಿಯ ಮೇಲೆ ಸ್ಕೂಬಾ ಡೈವಿಂಗ್ ತರಬೇತುದಾರನಿಂದ ಅಸಭ್ಯ ವರ್ತನೆ

Viral Video: ಒಂಟಿಯಾಗಿ ತೆರಳುವ ಮಹಿಳೆಯರಿಗೆ ಎಲ್ಲೂ ರಕ್ಷಣೆ ಇಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈಜಿಪ್ಟ್ ಪ್ರವಾಸಕ್ಕಾಗಿ ಒಬ್ಬಂಟಿಯಾಗಿ ತೆರಳಿದ್ದ ಯುವತಿಯೊಬ್ಬಳು ತಾನು ಕಿರುಕುಳ ಅನುಭವಿಸಿರುವ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ‌. ಈಜಿಪ್ಟ್‌ಗೆ ಪ್ರವಾಸ ಹೋಗಿದ್ದ ಯುವತಿಗೆ ಸ್ಕೂಬಾ ಡೈವಿಂಗ್ ಕಲಿಸುವಾಗ ಅಲ್ಲಿನ ತರಬೇತುದಾರ ಅಸಭ್ಯವಾಗಿ ವರ್ತಿಸಿದ್ದಾನೆ.

ʼಕೌನ್ ಬನೇಗಾ ಕರೋಡ್‌ಪತಿʼಯಲ್ಲಿ ಕೋಟಿ ರುಪಾಯಿ ಗೆದ್ದ ಬಾಲಕ ಈಗ ಐಪಿಎಸ್ ಅಧಿಕಾರಿ: ಯಾರಿವರು?

ಕೆಬಿಸಿ ಜೂನಿಯರ್ ವಿಜೇತ ಬಾಲಕ ಈಗ ಐಪಿಎಸ್ ಅಧಿಕಾರಿ

Kaun Banega Crorepati: 2001ರಲ್ಲಿ ರವಿ ಮೋಹನ್ ಸೈನಿ ಎನ್ನುವ ಬಾಲಕ 14 ವರ್ಷ ವಯಸ್ಸಿನವನಾಗಿದ್ದಾಗ ಕೆಬಿಸಿ ಜೂನಿಯರ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಜೂನಿಯರ್ ಶೋನಲ್ಲಿ ಅವರು 1 ಕೋಟಿ ರುಪಾಯಿ ಗೆದ್ದು ದೇಶದ ಗಮನ ಸೆಳೆದಿದ್ದರು. ಈಗ ಅವರು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ದುಬೈಯಲ್ಲಿ ಸಿಲುಕಿದ 200ಕ್ಕೂ ಹೆಚ್ಚು ಭಾರತೀಯರಿಗೆ ಆಶ್ರಯ ನೀಡಿದ ಉದ್ಯಮಿ: ಆನಂದ್ ಮಹೀಂದ್ರಾ ಮೆಚ್ಚುಗೆ

ದುಬೈಯಲ್ಲಿ ಭಾರತೀಯರಿಗೆ ಆಶ್ರಯ ಒದಗಿಸಿದ ಭಾರತೀಯ ಉದ್ಯಮಿ

Viral Video: ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಸಹಾಯಹಸ್ತ ನೀಡುವ ಮೂಲಕ ಯುಎಇ ಮೂಲದ ಭಾರತೀಯ ಉದ್ಯಮಿ ಧೀರಜ್ ಜೈನ್ ಗಮನ ಸೆಳೆದಿದ್ದಾರೆ. ಧೀರಜ್ ಜೈನ್ 200ಕ್ಕೂ ಹೆಚ್ಚು ಭಾರತೀಯರಿಗೆ ಉಚಿತ ಆಶ್ರಯ ಮತ್ತು ಊಟವನ್ನು ಒದಗಿಸಿದ್ದಾರೆ. ಸದ್ಯ ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಬ್ಯಾಟಿಂಗ್ ನೀಡದ್ದಕ್ಕೆ ಸಹ ಆಟಗಾರರ ಮೇಲೆ ಬರ್ಬರ ಹಲ್ಲೆ ನಡೆಸಿದ ಯುವಕ: ವಿಡಿಯೋ ವೈರಲ್

ಬ್ಯಾಟಿಂಗ್ ನೀಡದ್ದಕ್ಕೆ ಆಕ್ರೋಶಗೊಂಡು ಆಟಗಾರರ ಮೇಲೆ ಹಲ್ಲೆ ನಡೆಸಿದ ಯುವಕ

Viral Video: ನೇಪಾಳದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರರ ನಡುವೆ ನಡೆದ ಜಗಳದಿಂದ ಕ್ರಿಕೆಟ್ ಪಂದ್ಯವೇ ಅಸ್ತವ್ಯಸ್ತವಾಗಿದೆ. ಯುವಕನೊಬ್ಬ ತನ್ನ ಸಹ ಆಟಗಾರನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ. ತನಗೆ ಆಟ ಆಡಲು ಬ್ಯಾಟಿಂಗ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇತರ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...