ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಸಾವಿರಾರು ಕಿಲೋ ಮೀಟರ್ ನಡೆದು ಮಾಲೀಕನ ಮನೆ ತಲುಪಿದ ನಾಯಿ; ಶ್ವಾನದ ನಿಷ್ಠೆಗೆ ಮನಸೋತ ನೆಟ್ಟಿಗರು

ಮನೆ ತಪ್ಪಿದ ನಾಯಿ ಮಾಲೀಕನ ಮನೆ ಸೇರಿದ್ದು ಹೇಗೆ?

Viral News: ನಾಯಿಗಳಿಗೆ ನಾವು ಪ್ರೀತಿ ತೋರಿಸಿದರೆ ಅವು ಸಹಾಯವನ್ನು ನೆನಪಿಸಿ ದುಪ್ಪಟ್ಟು ಪ್ರೀತಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದು ಹೋದ ನಾಯಿಯೊಂದು ಕಿಲೊ ಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ನಡೆದು ಮಾಲೀಕನ ಮನೆ ತಲುಪಿದ ಘಟನೆಯೊಂದು ನಡೆದಿದೆ. ಒರೆಗಾನ್‌ನಲ್ಲಿ ತನ್ನ ಮಾಲೀಕರೊಂದಿಗೆ ಮತ್ತೆ ಒಂದಾಗಲು ಬಾಬಿ ಎಂಬ ನಾಯಿ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಪ್ರಯಾಣಿಸಿದ್ದು ಇಡೀ ಜಗತ್ತನ್ನೆ ಆಶ್ಚರ್ಯ ಪಡುವಂತೆ ಮಾಡಿದೆ.‌ ಸದ್ಯ ಇದರ ಸುದ್ದಿ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗಿದೆ.

Fact Check: ಬಿಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳದಿಂದ ಪಲಾಯನ ಮಾಡುತ್ತಿರುವ ವಲಸಿಗರು ! ವೈರಲ್‌ ವಿಡಿಯೊದ ಸತ್ಯಾಸತ್ಯತೆ ಏನು?

ವಿಡಿಯೋ ವೈರಲ್: ಪಶ್ಚಿಮ ಬಂಗಾಳದಿಂದ ವಲಸಿಗರು ಪಲಾಯನ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಲಸಿಗರು ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಪರಿಶೀಲನೆ ವೇಳೆ ಇದೊಂದು ಸುಳ್ಳು ವರದಿ ಎನ್ನುವುದು ದೃಢಪಟ್ಟಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ, ಇದರ ಅಸಲಿಯತ್ತೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಸತತ 7 ಗಂಟೆಗಳ ಕಾರ್ಯಾಚರಣೆ: ಕಲ್ಲುಗಳ ನಡುವೆ ಸಿಲುಕಿದ್ದ ಬಾಲಕನ ರಕ್ಷಣೆ

ಕಲ್ಲುಗಳ ನಡುವೆ ಸಿಲುಕಿದ್ದ ಬಾಲಕನ ರಕ್ಷಣೆ

ಜೇನು ತುಪ್ಪ ಸಂಗ್ರಹಿಸಲು ಹೋಗಿ ಕಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ ಬಾಲಕನನ್ನು ಸತತ 7 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಒಡಿಶಾದ ನಯಾಗಢ ಜಿಲ್ಲೆಯ ಕಾನಿಪಾದ ಕಾಡಿನಲ್ಲಿ ಜೇನುತುಪ್ಪ ಸಂಗ್ರಹಿಸುವಾಗ ಬೃಹತ್ ಬಂಡೆಗಳ ನಡುವೆ ಬಾಲಕ ಸಿಕ್ಕಿ ಹಾಕಿಕೊಂಡಿದ್ದನು. ಬಾಲಕನನ್ನು ರಕ್ಷಿಸಿದ ತಂಡದ ಕಾರ್ಯವನ್ನು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶ್ಲಾಘಿಸಿದ್ದಾರೆ.

ಬೆಂಗಳೂರಿನ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ; ವಿಡಿಯೊ ವೈರಲ್‌

ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

Bengaluru News: ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕೊಲೆ ಮಾಡಲು ಪತಿ ಯತ್ನಿಸಿದ ವೇಳೆ, ಆತನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್

ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್

Yuzvendra Chahal: ಐಪಿಎಲ್‌ ಆರಂಭಿಕ ಹಂತದಲ್ಲಿ ಯಜುವೇಂದ್ರ ಚಾಹಲ್‌, ಕಾರು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಮಾತ್ರವಲ್ಲದೆ ಸಿಗರೇಟ್ ಅನ್ನು ರಸ್ತೆಯಲ್ಲಿ ಎಸೆಯುವು ವೀಡಿಯೊದಲ್ಲಿ ಸೆರೆಯಾಗಿತ್ತು.

ಶಾಸಕಿ ದೂರ ತಳ್ಳಿದರೂ ಪದೇ ಪದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್‌ ನಾಯಕ; ವಿಡಿಯೊ ಇಲ್ಲಿದೆ

ಶಾಸಕಿ ದೂರ ತಳ್ಳಿದರೂ ಪದೇ ಪದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್‌ ನಾಯಕ

Viral Video: ನೂತನ ಶಾಸಕಿಯನ್ನು ಅಭಿನಂದಿಸಿ ಕಾಂಗ್ರೆಸ್‌ ಹಿರಿಯ ನಾಯಕ ತಬ್ಬಿಕೊಳ್ಳಲು ಮುಂದಾಗಿದ್ದು, ಆಕೆ ನಿರಾಕರಿಸಿರುವ ಘಟನೆ ಕೇರಳಂನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಇದೀಗ ಹರಿದಾಡುತ್ತಿದೆ. ಕಾಂಗ್ರೆಸ್‌ ನಾಯಕ ವರ್ತನೆಗೆ ಹಲವರು ಕಿಡಿ ಕಾರಿದ್ದಾರೆ.

ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆಗಳಲ್ಲಿ ಈಜಿ ಇತಿಹಾಸ ಬರೆದ ಬೆಂಗಳೂರಿನ ದಂಪತಿ

ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಬೆಂಗಳೂರಿನ ದಂಪತಿ

Swimming Challenge: ಶ್ರೀಲಂಕಾದಿಂದ ಭಾರತದವರೆಗಿನ ರಾಮಸೇತು ಮಾರ್ಗವಾಗಿ ಈಜುವ ಮೂಲಕ ಬೆಂಗಳೂರಿನ ದಂಪತಿ ಹೊಸ ಇತಿಹಾಸ ಬರೆದಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಸಾಧನೆ ಮಾಡಿದವರು. ಇವರು ಹಿಂದೂ ಮಹಾಸಾಗರದಲ್ಲಿ ಸುಮಾರು 32 ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ.

ಅಂತ್ಯಕ್ರಿಯೆ ನಡೆಯುವಾಗಲೇ ಯುವಕನಿಗೆ ಬಂತು ಜೀವ  ; ಪವಾಡಕ್ಕೆ ಗ್ರಾಮಸ್ಥರು ಶಾಕ್‌!

ಅಂತ್ಯಕ್ರಿಯೆ ನಡೆಯುವಾಗ ಎದ್ದು ಕುಳಿತ 'ಮೃತ' ವ್ಯಕ್ತಿ

Viral News: ಮೃತ ವ್ಯಕ್ತಿ ಎದ್ದು ಕುಳಿತರೇ ಹೇಗಿರಬೇಡ? ನಿಜಕ್ಕೂ ಊಹಿಸಲು ಅಸಾಧ್ಯ..ಆದರೆ ಇಂತಹ ಪವಾಡ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. 20 ವರ್ಷದ ಯುವಕನೊಬ್ಬ ವೈದ್ಯರೇ ಮೃತ ಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಆದರೆ ಯುವಕ ಅಂತ್ಯಕ್ರಿಯೆ ವೇಳೆ ಜೀವಂತ ಇರುವುದು ತಿಳಿದು ಬಂದಿದೆ. ಈ ಘಟನೆ ಇಡೀ ಕುಟುಂಬವನ್ನೇ ಅಚ್ಚರಿ ಗೊಳಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

15 ರೂ. ಬಾಳೆಹಣ್ಣಿಗೆ 1,515 ರೂ ಪಾವತಿ: ಹಣ ವಾಪಸ್‌ ಪಾವತಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ!

UPI ನಲ್ಲಿ ತಪ್ಪಾಗಿ ಹಣ ಪಾವತಿ: ವ್ಯಾಪಾರಿ ಪ್ರಾಮಾಣಿಕತೆ ನೆಟ್ಟಿಗರು ಫಿದಾ

Viral News: ಇಂದು ಸಾಮಾನ್ಯ ವಸ್ತು ಖರೀದಿಯಿಂದ ಬ್ಯಾಂಕಿಂಗ್ ಚಟುವಟಿಕೆವರೆಗೂ ಹಲವಾರು ಕೆಲಸಗಳು ಅಪ್ಲಿಕೇಶನ್ ಗಳ ಮೂಲಕವೇ ನಡೆಯುತ್ತಿದೆ. ಆದರೆ ಕೆಲವೊಮ್ಮೆ ಈ ಅಪ್ಲಿಕೇಶನ್ ನಲ್ಲಿ ಎಡವಟ್ಟುಗಳು ಕೂಡ ಉಂಟಾಗಬಹುದು. ತಪ್ಪಾಗಿ ಯಾರಿಗೋ ಹಣ ಕಳುಹಿಸುವುದು, ಅಥವಾ ಹೆಚ್ಚು ಹಣ ಟ್ರಾನ್ಸ್ ಪರ್ ಮಾಡುವುದು ಹೀಗೆ..ಆದರೆ ಈ ಎಡವಟ್ಟನ್ನು ಸರಿಪಡಿಸಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಇಂಡಿಗೋ ವಿಮಾನದಲ್ಲಿ 'ಜೈ ಶ್ರೀರಾಮ್' ಘೋಷಣೆ; ವಿಡಿಯೋ ನೋಡಿ

ಇಂಡಿಗೋ ವಿಮಾನದೊಳಗೆ ಜೈ ಶ್ರೀ ರಾಮ್ ಘೋಷಿಸಿದ ಪ್ರಯಾಣಿಕರು!

Viral Video: ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಹೊರಬರುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೊ ಮಾಡುತ್ತಾ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಆತನ ಸುತ್ತಲೂ ಕುಳಿತಿದ್ದ ಇತರ ಪ್ರಯಾಣಿಕರು ಬೆಂಬಲವನ್ನು ಸೂಚಿಸಿದ್ದಾರೆ.

60 ವರ್ಷಗಳಿಂದ ಮಹಿಳೆಯ ಮೆದುಳಿನಲ್ಲಿತ್ತು ಗುಂಡು; ಇಷ್ಟು ವರ್ಷಗಳ ಬಳಿಕ ಗೊತ್ತಾಗಿದ್ದು ಹೇಗೆ?

ಮೆದುಳಿನಲ್ಲಿ ಗುಂಡು ಇದ್ದರೂ 60 ವರ್ಷದವರೆಗೆ ಬದುಕಿದ ಚೀನಾದ ಮಹಿಳೆ

Viral News: ಮಹಿಳೆಯೊಬ್ಬರ ಮೆದುಳಿನೊಳಗೆ ಹಲವು ದಶಕಗಳಿಂದ ಗುಂಡೊಂದು ಪತ್ತೆಯಾಗಿದ್ದು ಇದರ ಅರಿವೇ ಅವರಿಗೆ ಇರಲಿಲ್ಲ. ತನಗೆ ಈ ವಿಚಾರ ತಿಳಿಯದೆಯೆ ಮಹಿಳೆ ಬದುಕುತ್ತಿದ್ದರು. ಮಹಿಳೆಯನ್ನು ಹುನಾನ್ ಪ್ರಾಂತ್ಯದ 67 ವರ್ಷ ವಯಸ್ಸಿನ ಶ್ರೀಮತಿ ಝಾವೋ ಎಂದು ಗುರುತಿಸಲಾಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರನ್ನು ಅಚ್ಚರಿ ಪಡಿಸಿದೆ.

ಕಳ್ಳರಿಗೇ ಉಲ್ಟಾ ಹೊಡೆದ ಪ್ಲಾನ್: ಚಿನ್ನ, ಹಣ ದೋಚಲು ಹೋಗಿ ಲಾಕ್ ಆದ ಖದೀಮರು!

ಒಡಿಶಾದಲ್ಲಿ ಕಳ್ಳತನ ಮಾಡಲು ಹೋಗಿ ಲಾಕ್ ಆದ ಖದೀಮರು!

Viral News: ಒಡಿಶಾದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿದ್ದು ಕಳ್ಳರ ಪ್ಲಾನೇ ಉಲ್ಟಾ ಹೊಡೆದಿದೆ. ಒಡಿಶಾದ ಬಸಂತಿ ಕಾಲೋನಿಯಲ್ಲಿ ರಾತ್ರಿ ನಡೆದ ಕಳ್ಳತನ ಪ್ರಯತ್ನದ ಸಮಯದಲ್ಲಿ ಮನೆಯೊಳಗೆ ಸಿಲುಕಿಕೊಂಡ ಇಬ್ಬರು ಕಳ್ಳರು ಪೊಲೀಸರಿಂದಲೇ ಸಹಾಯ ಕೋರಿದ್ದಾರೆ. ಕಳ್ಳರೇ ಪೊಲೀಸರಿಗೆ ಸಹಾಯ ಕೇಳಿ ನಮ್ಮನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾರೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಗಣಿತದಲ್ಲಿ ಕಡಿಮೆ ಅಂಕ, ತಮಿಳಿನಲ್ಲಿ ಟಾಪರ್: ದಳಪತಿ ವಿಜಯ್ 10ನೇ ತರಗತಿ ಅಂಕಪಟ್ಟಿ ವೈರಲ್

ದಳಪತಿ ವಿಜಯ್ 10ನೇ ತರಗತಿಯಲ್ಲಿ ಪಡೆದ ಅಂಕವೆಷ್ಟು ಗೊತ್ತಾ?

ದಳಪತಿ ವಿಜಯ್ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ'ತಮಿಳಗ ವೆಟ್ರಿ ಕಳಗಂ'(TVK) ಪಕ್ಷದ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಆ ಮೂಲಕ ಚಿತ್ರರಂಗದ ಬಲಿಕ ರಾಜಕೀಯದಲ್ಲೂ ಮಿಂಚಿದ್ದಾರೆ. ಇದೀಗ ವಿಜಯ್ ಅವರ ಹತ್ತನೆ ತರಗತಿಯ ಅಂಕ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಮನೆಯ ಬಾಡಿಗೆ ದರ ಸಿಕ್ಕಾಪಟ್ಟೆ ಏರಿಕೆ; ಅಮೆರಿಕನ್ ಮಹಿಳೆಯಿಂದ ಆಕ್ರೋಶ

ಬೆಂಗಳೂರಿನಲ್ಲಿ ಮನೆಯ ಬಾಡಿಗೆ ದರ ಏರಿಕೆ ಬಗ್ಗೆ ಕಿಡಿಕಾರಿದ ಅಮೆರಿಕನ್ ಮಹಿಳೆ

Viral Video: ಅಮೆರಿಕ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ‌ ಬಾಡಿಗೆ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆಯೊಂದು ನಡೆದಿದೆ.‌ ಇಲ್ಲಿನ‌ ಬಾಡಿಗೆ ವ್ಯವಸ್ಥೆ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದು ಮುಂದಿನ ದಿನದಲ್ಲಿಈ ದರ ದುಪ್ಪಟ್ಟು ಆಗಬಹುದು ಎಂದು ಕಿಡಿಕಾರಿದ್ದಾರೆ.

ʼಸಾರ್ವಜನಿಕ ಸ್ಥಳದಲ್ಲಿ ಸಭ್ಯತೆಯಿರಲಿʼ; ರಸ್ತೆಯಲ್ಲಿ ರೀಲ್ಸ್‌ ಮಾಡುತ್ತಿದ್ದ ಯುವತಿಯರಿಗೆ ತರಾಟೆ

ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಗೆ ಅಡ್ಡಿ ಪಡಿಸಿದ ಮಹಿಳೆಯರು: ವಿಡಿಯೊ ವೈರಲ್

Viral Video: ಇತ್ತೀಚೆಗೆ ಇನ್‌ಫ್ಲುಯೆನ್ಸರ್ ಮಹೇಕ್ ಚೌಹಾಣ್ ಹಾಗೂ ಅವರ ಗೆಳತಿಯರು ರಸ್ತೆ ಬದಿಯೊಂದರಲ್ಲಿ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೆಲವು ಹಿರಿಯ ಮಹಿಳೆಯರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ನೃತ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಶಾಪಿಂಗ್ ಮಾಲ್‌ನಲ್ಲಿ 'ಜೈ ಶ್ರೀ ರಾಮ್' ಹಾಡು: ಗ್ರಾಹಕರ ಎದುರೇ ಸ್ಪೀಕರ್ ಹಿಡಿದು ಓಡಾಡಿದ ವ್ಯಕ್ತಿ!

ಶಾಪಿಂಗ್ ಮಾಲ್‌ನಲ್ಲಿ ಸ್ಪೀಕರ್ ಹಿಡಿದು ಓಡಾಡಿದ ವ್ಯಕ್ತಿ: ನೆಟ್ಟಿಗರು ಕಿಡಿ

Viral Video: ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಸ್ಪೀಕರ್ ಹಿಡಿದು ಓಡಾಡಿದ್ದಾನೆ. "ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೇಗಾ" ಎಂದು ಸ್ಪೀಕರ್ ನಲ್ಲಿ ಹಾಡು ಪ್ಲೇ ಮಾಡುತ್ತಾ ಮಾಲ್ ನಲ್ಲಿ ಓಡಾಡಿದ್ದಾನೆ. ಈ ದೃಶ್ಯವನ್ನು ಕಂಡು ಅಲ್ಲಿಗೆ ಬಂದ ಗ್ರಾಹಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪರ- ವಿರೋಧದ ಚರ್ಚೆ ನಡೆಯುತ್ತಿದೆ..

ಕುಡಿದ ಮತ್ತಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಭೀಕರ ಹಲ್ಲೆ; ವಿಡಿಯೋ ವೈರಲ್‌

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ: ವಿಡಿಯೊ ವೈರಲ್

Viral Video: ಮಲಾಡ್‌ನ ಮಾಲ್ವಾನಿಯಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೂ ಹಗಲು ಹೊತ್ತಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ‌. ಸದ್ಯ ನಗರದಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ಮೊದಲು ಮಹಿಳೆ ಮತ್ತು ವ್ಯಕ್ತಿಗೆ ಮಾತಿನ ಚಕಮಕಿ ನಡೆದಿದ್ದು ಕೆಲವೇ ಕ್ಷಣಗಳಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಹಿಂಸಾತ್ಮಕವಾಗಿ ತಿರುಗಿ ಮಹಿಳೆಯ ಮೇಲೆ ದಾಳಿ ಮಾಡುತ್ತಾನೆ.

ಪಕ್ಷದ ಕಚೇರಿ ಮೇಲೆ ಬುಲ್ಡೋಜರ್ ದಾಳಿ: ಬಿಜೆಪಿ ವಿರುದ್ಧ ಟಿಎಂಸಿ ಆರೋಪ

ಟಿಎಂಸಿ ಕಚೇರಿ ಮೇಲೆ ಬಿಜೆಪಿ ದಾಳಿ: ವೈರಲ್ ವಿಡಿಯೋ

ಪಶ್ಚಿಮ ಬಂಗಾಳದ ಚುನಾವಣೆ ಬಳಿಕ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಹಲವಾರು ಆರೋಪಗಳನ್ನು ಮಾಡಿದ್ದು, ಇದೀಗ ಪಕ್ಷದ ಕಚೇರಿ ಮೇಲೆ ಬಿಜೆಪಿ ಯು ಬುಲ್ಡೋಜರ್ ನಿಂದ ದಾಳಿ ನಡೆಸಿದೆ. ಇದಕ್ಕಾಗಿ ಕೇಂದ್ರದಿಂದಲೇ ಆದೇಶ ಬಂದಿದೆ ಎಂದು ಹೇಳಿದೆ. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೋಮು ಸೌಹಾರ್ದತೆ ಎಂದರೆ ಇದು; ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ ಮೆರವಣಿಗೆಗೆ ದಾರಿ ಕೊಡಲು ವಿಜಯೋತ್ಸವವನ್ನೇ ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರು

ಅಂತ್ಯಕ್ರಿಯೆಗೆ ದಾರಿ ಕೊಡಲು ವಿಜಯೋತ್ಸವ ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರು

Viral Video: ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯನ್ನು ಛಿದ್ರ ಮಾಡುವ ಮೂಲಕ ಬಿಜೆಪಿ ಈ ಬಾರಿ ಸರ್ಕಾರ ರಚಿಸಲು ಮುಂದಾಗಿದ್ದು, ಹೊಸ ಇತಿಹಾಸ ಬರೆದಿದೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮಾದರಿ ಘಟನೆಯೊಂದು ನಡೆದಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಆನ್‌ಲೈನ್ ವಹಿವಾಟಿನಲ್ಲಿ ತಪ್ಪಾಗಿ 10 ಸಾವಿರ ರುಪಾಯಿ ಪಾವತಿ: ಪ್ರಯಾಣಿಕನಿಗೆ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಉಬರ್ ಚಾಲಕ

ತಪ್ಪಾಗಿ 10 ಸಾವಿರ ರುಪಾಯಿ ವರ್ಗಾವಣೆ: ಪ್ರಾಮಾಣಿಕತೆ ಮೆರೆದ ಉಬರ್ ಚಾಲಕ!

Viral News: ಒಡಿಶಾದ ಉಬರ್ ಚಾಲಕರೊಬ್ಬರು ತೋರಿದ ಪ್ರಮಾಣಿಕತೆ ಎಲ್ಲರ ಮನ ಗೆದ್ದಿದೆ. ಒಡಿಶಾದ ಉದ್ಯೋಗಿಯೊಬ್ಬರು ತಪ್ಪಾಗಿ 10,000 ರುಪಾಯಿಯನ್ನು ಉಬರ್ ಚಾಲಕನಿಗೆ ವರ್ಗಾಯಿಸಿದ್ದರು. ಅವರನ್ನು ಪತ್ತೆಹಚ್ಚಿ ಪೂರ್ಣ ಮೊತ್ತವನ್ನು ಚಾಲಕ ಹಿಂತಿರುಗಿಸಿದ್ದಾರೆ.‌ ಇವರ ಪ್ರಾಮಾಣಿಕ ವ್ಯಕ್ತಿತ್ವ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅರಳಿದ ಕಮಲ: ಖಾಕಿ ಪಡೆಗಳಿಂದಲೂ ಭರ್ಜರಿ ಸಂಭ್ರಮಾಚರಣೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು: ಕುಣಿದ ಪೊಲೀಸರು

Viral Video: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೋಟೆಯನ್ನು ಛಿದ್ರ ಮಾಡುವ ಮೂಲಕ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಬಿಜೆಪಿ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಪೊಲೀಸ್ ಅಧಿಕಾರಿಗಳು ಸಂಭ್ರಮಾಚರಿಸುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸ್ ಠಾಣೆಯ ಹೊರಗೆ ಪೊಲೀಸರು "ಜೈ ಶ್ರೀ ರಾಮ್" ಮತ್ತು "ಹರ್ ಹರ್ ಮಹಾದೇವ್" ಎಂದು ಕೂಗುತ್ತಾ ಹೆಜ್ಜೆ ಹಾಕಿದ್ದಾರೆ.

ಸಿಎಂ ಆಗುವ ಸುಳಿವು 2024ರಲ್ಲೇ ನೀಡಿದ್ದ ದಳಪತಿ ವಿಜಯ್: 'TN CM 2026' ನಂಬರ್ ಪ್ಲೇಟ್‌ನ ಕಾರ್‌ ಚಲಾಯಿಸುವ ದೃಶ್ಯ ವೈರಲ್

ಸಿಎಂ ಆಗುವ ಸುಳಿವು 2024ರ ಚಿತ್ರದಲ್ಲೇ ನೀಡಿದ್ದ ದಳಪತಿ ವಿಜಯ್

ತಮಿಳುನಾಡಿನ ರಾಜಕೀಯದಲ್ಲಿ ದೀರ್ಘಕಾಲ ಪ್ರಭಾವ ಬೀರಿದ್ದ ಡಿಎಂಕೆ ಭದ್ರಕೋಟೆಯನ್ನು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಭೇದಿಸಿ ಐತಿಹಾಸಿಕ ಸಾಧನೆ ಮಾಡಿದೆ. 2024ರಲ್ಲಿ ಪ್ರಾರಂಭವಾದ ಈ ಪಕ್ಷವು 2026ರ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2024ರಲ್ಲಿ ತೆರೆಕಂಡ ವಿಜಯ್ ಅವರ ‘GOAT’ ಚಿತ್ರದ ದೃಶ್ಯ ಈಗ ನಿಜವಾಗಿರುವುದು ವಿಶೇಷ. ಬಹುಮತಕ್ಕೆ ಸ್ವಲ್ಪ ಕೊರತೆ ಇದ್ದರೂ, ಕಾಂಗ್ರೆಸ್ ಸೇರಿ ಇತರ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಸಾಧ್ಯತೆ ಹೆಚ್ಚಿದೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ವಿಜಯ್ ಅವರ ಈ ಯಶಸ್ಸು ದಕ್ಷಿಣ ಭಾರತದ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ

ಮದುವೆ ಮಂಟಪದಲ್ಲೇ ಪಿತೃಪ್ರಧಾನ ಪದ್ಧತಿ ಖಂಡಿಸಿದ ವಧು

Viral News: ಮದುವೆಯೊಂದರಲ್ಲಿ ಪಿತೃ ಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭ ದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನೋಯ್ಡಾ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಪಾಳಮೋಕ್ಷ ಮಾಡಿ ದೌರ್ಜನ್ಯ!

ನೋಯ್ಡಾದಲ್ಲಿ ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್: ನೆಟ್ಟಿಗರು ಕಿಡಿ

Viral Video: ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿಡಿಯೊವೊಂದು ವೈರಲ್ ಆಗಿದ್ದು ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ನಡೆಸಿದೆ. ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಗೆ ಸರಿಯಾಗಿ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ..

Loading...