ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ತಾಜ್ ಮಹಲ್ ನೋಡಲು ನ್ಯೂಯಾರ್ಕ್‌ ಯುವಕನಿಂದ  24 ಗಂಟೆಗಳ ಭಾರತ ಪ್ರವಾಸ; ವಿಡಿಯೊ ವೈರಲ್‌

ತಾಜ್ ಮಹಲ್ ವೀಕ್ಷಿಸಿ ಒಂದೇ ದಿನದಲ್ಲಿ ಹೊರಟ ನ್ಯೂಯಾರ್ಕ್ ಇನ್​ಫ್ಲುಯೆನ್ಸರ್‌

Viral Video: ಅಮೆರಿಕದ ಯುವಕ ನ್ಯೂಯಾರ್ಕ್‌ನಿಂದ ಭಾರತಕ್ಕೆ ಕೇವಲ ಒಂದು ದಿನದ ಮಟ್ಟಿಗೆ ತಾಜ್ ಮಹಲ್ ವೀಕ್ಷಿಸಲು ಆಗಮಿಸಿದ ವಿಡಿಯೊ ವೈರಲ್ ಆಗಿದೆ. ಕೆವಿನ್ ಡ್ರೋನಿಯಾಕ್ ಎಂಬ ಟ್ರಾವೆಲ್ ಇನ್​ಫ್ಲುಯೆನ್ಸರ್‌ ತಾಜ್ ಮಹಲ್ ವೀಕ್ಷಿಸುವ ಏಕೈಕ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ್ದಾರೆ.

ದೆಹಲಿ ಬೀದಿಯಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ವೈರಲ್ ವಿಡಿಯೊದ ಅಸಲಿಯತ್ತೇನು?

ಕಿರುಕುಳ ನೀಡಿದ ವ್ಯಕ್ತಿಯನ್ನು ಬೆನ್ನಟ್ಟಿದ ವಿದೇಶಿ ಮಹಿಳೆಯರು

Viral Video: ಇತ್ತೀಚೆಗೆ ರಾಜಸ್ಥಾನದ ಜಲ್ ಮಹಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಪುರುಷರ ಗುಂಪೊಂದು ಕಿರುಕುಳ ಎಸಗಿ ಅನುಮತಿ ಇಲ್ಲದೆ ಹೆಗಲ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಈ ನಡುವೆ ದೆಹಲಿಯಲ್ಲಿ ವಿದೇಶಿ ಮಹಿಳೆಯರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ, ಇದರಿಂದ ಮಹಿಳೆಯರು ಭಯ ಪಡದೆ ಅವನನ್ನು ಅಟ್ಟಾಡಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು?

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು  ಬಿಟ್ಟು ಹೋದ ತಾಯಿ: ಸಿಬ್ಬಂದಿ ಮಾಡಿದ್ದೇನು?

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು ಬಿಟ್ಟು ಹೋದ ತಾಯಿ

Viral News: ಚೀನಾದ ಹೆನಾನ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹೆತ್ತ ತಾಯಿಯೇ ತನ್ನ ಮಗುವನ್ನು ಹೋಟೆಲ್ ರೂಮಿನಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ‌. ಆದರೆ ಹೋಟೆಲ್ ಸಿಬ್ಬಂದಿ ಆ ಮಗುವನ್ನು ಅನಾಥವಾಗಿ ಬಿಡದೇ ತಾವೇ ಪ್ರೀತಿಯಿಂದ ಸಾಕಿ ಸಲಹಿದ್ದಾರೆ.

ಒಂದು ಪೀಸ್ ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ: ಒಂದೇ ಒಂದು ಬಾಲ್ಯದ ಫೋಟೊದಿಂದ ಬರೋಬ್ಬರಿ 33 ವರ್ಷಗಳ ನಂತರ ಒಂದಾದ ಒಡಹುಟ್ಟಿದವರು

ಬಾಲ್ಯದ ಫೋಟೊ ಮೂಲಕ ತಮ್ಮನನ್ನು ಪತ್ತೆ ಹಚ್ಚಿದ ಅಕ್ಕ

Viral News: ಒಂದು ತುಂಡು ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ 33ವರ್ಷಗಳ ನಂತರ ಒಂದಾದ ಘಟನೆ ನಡೆದಿದೆ. ಕೇವಲ ಒಂದು ಫೋಟೋ ಇಟ್ಟುಕೊಂಡು ತಮ್ಮನನ್ನು ಅಕ್ಕ ಪತ್ತೆ ಹಚ್ಚಿದ್ದಾಳೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಗೊಂಬೆಯ ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ಯುದ್ಧ ಪೀಡಿತ ಗಾಜಾದಲ್ಲಿನ ಈ ವಿಡಿಯೊ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದೇಕೆ?

ಗೊಂಬೆಯ ಅಣಕು ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ವಿಡಿಯೊ ವೈರಲ್‌

Gaza War: ಗಾಜಾದಲ್ಲಿನ ಪುಟ್ಟ ಮಕ್ಕಳು ತಮ್ಮ ಆಟದ ಗೊಂಬೆಯ ಅಣಕು ಶವ ಸಂಸ್ಕಾರ ನಡೆಸಿದ್ದಾರೆ. ಚಿಂತೆಯಿಲ್ಲದೆ ಆತವಾಡಬೇಕಾದ ಅವರ ಮನಸ್ಸಿನ ಮೇಲೆ ಯುದ್ಧ ಬೀರಿದ ಪರಿಣಾಮ ಇದು ಎನ್ನುವುದು ತಜ್ಞರ ಅಭಿಪ್ರಾಯ. ಇದೇ ಕಾರಣಕ್ಕೆ ಇಡೀ ಜಗತ್ತೇ ಈ ವಿಡಿಯೊವನ್ನು ಆತಂಕದಿಂದ ನೋಡುತ್ತಿದೆ.

ಕಾರು ಡಿಕ್ಕಿ ಹೊಡೆದ ಕೆಲವೇ ಸೆಕೆಂಡುಗಳಲ್ಲಿ ಎದ್ದು ನಿಂತ ಬಾಲಕ‌: ಭಯಾನಕ ವಿಡಿಯೊ!

ಮಗುವಿನ ಮೇಲೆ ಹರಿದ ಕಾರು; ಪ‍ವಾಡ ಸದೃಶವಾಗಿ ಪಾರು

Viral Video: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರೊಂದು ಹರಿದು ಹೋಗಿದ್ದು ಮಗು ಪವಾಡ ಸದೃಶವಾಗಿ ಪಾರಾಗಿದೆ. ಇದರ ಸಿಸಿ ಟಿವಿ ದೃಶ್ಯ ಸೆರೆಯಾಗಿದ್ದು ನಿಜಕ್ಕೂ ಅಚ್ಚರಿ ಮೂಡಿ ಸುವಂತಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕೆಲವೇ ಸೆಕೆಂಡುಗಳ ನಂತರ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಏನೂ ಆಗಿಲ್ಲ ಎಂಬಂತೆ ಮಗು ಎದ್ದು ನಿಂತಿದೆ..

‌PSL 2026: ಮೊಯಿನ್‌ ಅಲಿ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ವಾರ್ನರ್‌; ವಿಡಿಯೊ ವೈರಲ್

ಮೊಯಿನ್‌ ಅಲಿ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ವಾರ್ನರ್‌

David Warner: ವಾರ್ನರ್ ಮೊಯಿನ್ ಅಲಿ ಜೊತೆ ಅಸಮಾಧಾನಗೊಂಡಿದ್ದಕ್ಕೆ ನಿಜವಾದ ಕಾರಣ ಇನ್ನೂ ತಿಳಿದಿಲ್ಲವಾದರೂ, ಪಂದ್ಯದ ನಿರ್ಣಾಯಕ ಕ್ಷಣದಲ್ಲಿ ಅವರ ವಿಕೆಟ್ ಪತನಗೊಂಡದ್ದು ಕಾರಣವಾಗಿರಬಹುದು. ಕರಾಚಿ ಕಿಂಗ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ ಐದು ರನ್‌ಗಳು ಬೇಕಾಗಿದ್ದವು, ಆದರೆ ಮೊದಲ ಎಸೆತದಲ್ಲಿ ಮೊಯಿನ್ ಅಲಿ ವಿಕೆಟ್‌ ಕಳೆದುಕೊಂಡರು.

ಇರಾಕ್‌ನಲ್ಲಿ ಇರಾನ್‌ನ ಶಹೀದ್ ಡ್ರೋನ್ ಹಿಂಬಾಲಿಸಿದ  ಅಮೆರಿಕದ ಎಫ್ -15 ಜೆಟ್ ವಿಡಿಯೊ ವೈರಲ್

ಇರಾನ್ ಡ್ರೋನ್ ಅನ್ನು ಹಿಂಬಾಲಿಸಿದ ಅಮೆರಿಕದ ಜೆಟ್

ಇರಾನ್‌ನ ಡ್ರೋನ್ ಅನ್ನು ಅಮೆರಿಕದ ಜೆಟ್ ಹಿಂಬಾಲಿಸಿದ ಘಟನೆ ಇರಾಕ್‌ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇರಾನ್‌ನ ಶಹೀದ್ ಡ್ರೋನ್ ಅನ್ನು ಅಮೆರಿಕದ ಎಫ್ -15 ಜೆಟ್ ಹಿಂಬಾಲಿಸಿಕೊಂಡು ಹೋಗಿದೆ. ಡ್ರೋನ್ ಅನ್ನು ಗಾಳಿಯಲ್ಲಿ ಗುರಿಯಾಗಿಸಲು ಜೆಟ್ ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

ನರ್ಸರಿ ಫೀಸ್‌ 3.7 ಲಕ್ಷ ರುಪಾಯಿ! ಪದವಿ ಶಿಕ್ಷಣಕ್ಕೆ ಇಷ್ಟು ಖರ್ಚಾಗಿರಲಿಲ್ಲ ಎಂದ ನೆಟ್ಟಿಗರು

ದುಬಾರಿ ಶಿಕ್ಷಣ: ಮಗುವಿನ ನರ್ಸರಿ ಫೀಸ್ ಕೇಳಿ ದಂಗಾದ ನೆಟ್ಟಿಗರು

Viral News: ಹರಿಯಾಣದ ಗುರುಗ್ರಾಮ್‌ನ ನರ್ಸರಿ ಶಾಲೆಯ ಶುಲ್ಕದ ವಿವರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಮಗುವಿನ ನರ್ಸರಿ ಅಡ್ಮಿಷನ್‌ ಶುಲ್ಕ 1.24 ಲಕ್ಷ ರುಪಾಯಿ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಆನ್‌ಲೈನ್‌ನಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ವಿಮಾನದಲ್ಲಿ ನಟಿಗೆ ಕಿರುಕುಳ: ಪ್ರಯಾಣಿಕನ ಅಸಭ್ಯ ವರ್ತನೆ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ

ವಿಮಾನದಲ್ಲಿ ನಟಿಗೆ ಸಹಪ್ರಯಾಣಿಕನಿಂದ ಕಿರುಕುಳ

Viral Video: ವಿಮಾನ ಪ್ರಯಾಣದ ವೇಳೆ ನಟಿ ಜತೆ ಸಹಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ನಟಿ ಹಾಗೂ ಕಂಟೆಂಟ್ ಕ್ರಿಯೆಟರ್ ಉರ್ವಿ ಕೊಠಾರಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಚಾರ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಹುಟ್ಟು ಹಾಕಿದೆ.

ಕುಡಿತದ ಮತ್ತಿನಲ್ಲಿ ಬೀದಿನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ; ಮುಂಬೈಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಪಾಠ ಕಲಿಸಿದ ಸಾರ್ವಜನಿಕರು

Viral Video: ಮಹಾರಾಷ್ಟ್ರದ ಮುಂಬೈಯಲ್ಲಿ ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ನಾಯಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ. ಸದ್ಯ ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಪುಟ್ಟ ನಾಯಿ ಮರಿಯನ್ನು ಗಂಗೆಯಲ್ಲಿ ಮುಳುಗಿಸಿದ ವ್ಯಕ್ತಿ: ಮೂರ್ಖತನದ ಕೆಲಸ ಎಂದ ನೆಟ್ಟಿಗರು

ಪುಟ್ಟ ನಾಯಿ ಮರಿಯನ್ನು ಗಂಗಾ ನದಿಯಲ್ಲಿ ಮುಳುಗಿಸಿದ ವ್ಯಕ್ತಿ

Viral Video: ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ತಮ್ಮ ಪಾಪ- ಕರ್ಮಗಳನ್ನು ಹೋಗಲಾಡಿಸಲು ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ನಂಬಿಕೆಯನ್ನು ಪ್ರಾಣಿಯ ಮೇಲೆ ಹೇರಿದ್ದಾನೆ. ಪುಟ್ಟ ನಾಯಿ ಮರಿಯನ್ನು ನದಿಯಲ್ಲಿ ಹಲವು ಬಾರಿ ಮುಳುಗಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಬರೋಬ್ಬರಿ 167 ಕೋಟಿ ರುಪಾಯಿಗೆ ಮಾರಾಟವಾಯ್ತು ರಾಜಾ ರವಿ ವರ್ಮ ಕಲಾಕೃತಿ; ದಾಖಲೆ ಬರೆದ ಯಶೋದಾ-ಕೃಷ್ಣ ಪೇಟಿಂಗ್‌

ʼಯಶೋದಾ-ಕೃಷ್ಣʼ ಅತ್ಯಂತ ದುಬಾರಿ ಭಾರತೀಯ ಕಲಾಕೃತಿ

ರಾಜಾ ರವಿ ವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ಚಿತ್ರವು 167 ಕೋಟಿ ರುಪಾಯಿಗೆ ಮಾರಾಟವಾಗಿ, ಹರಾಜಿನಲ್ಲಿ ಅತಿ ದುಬಾರಿ ಭಾರತೀಯ ಕಲಾಕೃತಿಯಾಗಿ ದಾಖಲೆ ನಿರ್ಮಿಸಿದೆ. ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಖ್ಯಾತ ಉದ್ಯಮಿ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕರೂ ಆದ ಸೈರಸ್ ಎಸ್. ಪೂನವಾಲಾ ಖರೀದಿಸಿದ್ದಾರೆ.

ರೈಲಿನ ಶೌಚಾಲಯದ ಬಳಿ ಮಲಗಿದ ಯೋಧರಿಗೆ ಸೀಟು ನೀಡಿದ ಟಿಟಿಇ; ವಿಡಿಯೊ ಇಲ್ಲಿದೆ

ರೈಲಿನ ಶೌಚಾಲಯದ ಬಳಿ ಮಲಗಿದ ಯೋಧರು

Viral Video: ಕಿಕ್ಕಿರಿದ ರೈಲಿನ ಪ್ರಯಾಣಿಕರ ನಡುವೆ, ಅವ್ಯವಸ್ಥೆಯ ಮಧ್ಯೆ ಮಾನವೀಯತೆಯ ಒಂದು ಸಣ್ಣ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶ ಕಾಯುವ ಸೈನಿಕರಿಗೆ ಸೀಟು ಬಿಟ್ಟು ಕೊಡುವ ಮೂಲಕ ಟಿಟಿಇ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದ್ಯ ಖರೀದಿಗೆ ಹಣ ನಿರಾಕರಿಸಿದ್ದೇ ತಪ್ಪಾಯ್ತು: ನವವಧು-ವರನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮದ್ಯಕ್ಕೆ ಹಣ ನೀಡದಿದ್ದಕ್ಕೆ ನವವಧು-ವರನ ಮೇಲೆ ಹಲ್ಲೆ

Viral Video: ಇಲ್ಲೊಂದು ಮದುವೆ ಸಂಭ್ರಮದ ನಡುವೆ ಮದ್ಯದ ವಿಚಾರವಾಗಿ ವಧು ವರನಿಗೆ ನೆರೆ ಮನೆಯ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ವಧು-ವರರ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಕರ್ಣದಲ್ಲಿ ಜಪಾನ್‌ ಮಹಿಳೆಯ ಕೊಳಲ ನಾದಕ್ಕೆ ಭಕ್ತರು ಫಿದಾ; ವೀಸಾ ನಿಯಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಕೃಷ್ಣ ವಿಗ್ರಹ ಇಟ್ಟು ಕೊಳಲು ನುಡಿಸಿದ ಜಪಾನ್‌ ಮಹಿಳೆ

Viral Video: ಗೋಕರ್ಣದಲ್ಲಿ ಜಪಾನಿನ ಪ್ರವಾಸಿಯೊಬ್ಬರು ಕೃಷ್ಣ ವಿಗ್ರಹದೊಂದಿಗೆ ಕೊಳಲು ನುಡಿಸುತ್ತ ಹಣ ಸಂಗ್ರಹಿಸುತ್ತಿರುವ ಸುದ್ದಿಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ ಆಕೆ ರಸ್ತೆಬದಿಯಲ್ಲಿ ಕುಳಿತು ಕೊಳಲು ನುಡಿಸುತ್ತ ಗಮನ ಸೆಳೆದಿದ್ದಾರೆ. ಭಾರತಕ್ಕೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಿರುವುದು ಕಾನೂನು ಪ್ರಕಾರ ತಪ್ಪು ಎಂದು ಅನೇಕರು ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮಾನವೀಯತೆ ಸಾಕ್ಷಿಯಾದ ಮುಂಬೈ ಲೋಕಲ್ ರೈಲು: ಬಾಯಾರಿದ ಬೀದಿ ನಾಯಿಗೆ ನೀರು ಕುಡಿಸಿದ ಪ್ರಯಾಣಿಕ

ಮುಂಬೈ ಲೋಕಲ್ ಟ್ರೈನ್‌ನಲ್ಲಿ ಬೀದಿನಾಯಿಗೆ ನೀರು ಕುಡಿಸಿದ ಪ್ರಯಾಣಿಕ

Viral Video: ಮುಂಬೈಯ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರೊಬ್ಬರ ಮಾನವೀಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಬೀದಿ ನಾಯಿಗೆ ಅವರು ತಾಳ್ಮೆಯಿಂದ ನೀರು ಕುಡಿಸಿದ್ದು, ಸದ್ಯ ಈ ಘಟನೆ ವಿಡಿಯೊ ವೈರಲ್ ಆಗಿದೆ.

ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ: ತೀವ್ರ ಅಲರ್ಜಿಯಿಂದ ಊದಿಕೊಂಡ ಮಹಿಳೆಯ ತುಟಿ

ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿ ಮಹಿಳೆಗೆ ಅಲರ್ಜಿ

Viral Video: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಳಪೆ ಮಟ್ಟದ ಆಹಾರ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ‌. ರೈಲಿನಲ್ಲಿ ಆಹಾರ ಸೇವಿಸಿದ ಬಳಿಕ ತೀವ್ರ ಅಲರ್ಜಿ ಉಂಟಾಗಿದೆ ಎಂದಿದ್ದಾರೆ. ಜತೆಗೆ ಎರಡು ವರ್ಷದ ಮಗನೂ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Channapatna News: ದಿನಾ ತಿಂಡಿ ಕೊಡುತ್ತಿದ್ದ ವೃದ್ಧೆಯ ಶವದ ಮೇಲೆ ಬಿದ್ದು ಹೊರಳಾಡಿ ದುಃಖಿಸಿದ ಕೋತಿ!

ತಿಂಡಿ ಕೊಡುತ್ತಿದ್ದ ವೃದ್ಧೆಯ ಶವದ ಮೇಲೆ ಬಿದ್ದು ಹೊರಳಾಡಿ ದುಃಖಿಸಿದ ಕೋತಿ!

ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನು ಪಾರ್ವತಮ್ಮ ಅವರು ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋದನ ವ್ಯಕ್ತಪಡಿಸಿದೆ.

PBKS vs GT: ಕೊನೊಲಿ ಸಿಕ್ಸರ್‌ ಕಂಡು ದಂಗಾದ ವಿಶ್ವದ ನಂ.1 ಟಿ20 ಬೌಲರ್‌ ರಶೀದ್‌ ಖಾನ್‌; ವಿಡಿಯೊ ವೈರಲ್‌

ಕೊನೊಲಿ ಬಾರಿಸಿದ 103 ಮೀ. ದೂರದ ಸಿಕ್ಸರ್‌ ಕಂಡು ದಂಗಾದ ರಶೀದ್‌ ಖಾನ್‌

Rashid Khan's Stunned Reaction: ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ದುಬಾರಿ ಬೌಲಿಂಗ್‌ ನಡೆಸಿದರು. 11 ಎಸೆತಗಳ ಓವರ್ ಎಸೆಯುವ ಮೂಲಕ ಅನಗತ್ಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಒಟ್ಟು 11ಎಸೆತ ಹಾಕಿದರು. ಇದರಲ್ಲಿ ಅವರು ನಾಲ್ಕು ವೈಡ್‌ಗಳು ಮತ್ತು ಒಂದು ನೋ-ಬಾಲ್ ಎಸೆದರು.

ಸಮೋಸಾ ತಿಂದು ಹಣ ಪಾವತಿಸುವ ಬದಲು ಹೋಟೆಲ್ ಮಾಲಕನ ಬೆರಳನ್ನೇ ಕಚ್ಚಿ ತುಂಡರಿಸಿದ ಗ್ರಾಹಕ!

ಸಮೋಸಾ ವಿಚಾರಕ್ಕೆ ಜಗಳ; ಹೋಟೆಲ್ ಮಾಲಕನ ಬೆರಳೇ ಕಟ್‌

Viral News: ಆನ್‌ಲೈನ್ ಪಾವತಿ ವಿಚಾರವಾಗಿ ನಡೆದ ಸಣ್ಣ ಜಗಳ ಅತಿರೇಕಕ್ಕೆ ಹೋಗಿರುವ ಘಟನೆಯೊಂದು ನಡೆದಿದೆ. ಸಿಡಿದೆದ್ದ ಗ್ರಾಹಕನು ಹೋಟೆಲ್ ಮಾಲಕನ ಬೆರಳನ್ನೇ ಕಂಚಿ ತುಂಡು ಮಾಡಿದ್ದಾನೆ. ಅಂಗಡಿ ಮಾಲಕ ರಂಜಿತ್ ಹರಿವಂಶ್ ಸಿಂಗ್ ಅವರ ಇತರ ಬೆರಳುಗಳಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಲಕ್ಷೀಂಧರ್ ಮಂಗಲ್ ಮಲ್ಲಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೈಪುರದ ʼಪಿಂಕ್ ಎಲಿಫೆಂಟ್' ಇನ್ನಿಲ್ಲ: ಬಣ್ಣ ಬಳಿದಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದೇ ಆನೆಯ ಸಾವಿಗೆ ಕಾರಣ ಎಂದ ನೆಟ್ಟಿಗರು

ವೈರಲ್ 'ಗುಲಾಬಿ ಆನೆ' ಇನ್ನಿಲ್ಲ: ಕಲಾವಿದೆ ವಿರುದ್ಧ ಸಿಡಿದೆದ್ದ ನೆಟ್ಟಿಗರು

Viral Video: ಕಲಾವಿದೆಯೊಬ್ಬಳ ಎಡವಟ್ಟಿನಿಂದ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ಇತ್ತೀಚೆಗೆ ರಷ್ಯಾದ ಕಲಾವಿದೆಯೊಬ್ಬಳು ರಾಜಸ್ಥಾನದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ ಆಗಿತ್ತು. ಚಂಚಲ್ ಹೆಸರಿನ ಈ ಆನೆ ಇದೀಗ ಸಾವನ್ನಪ್ಪಿದ್ದು, ಹಲವರು ಆಕ್ರೋಸ ವ್ಯಕ್ತಪಡಿಸಿದ್ದಾರೆ.

ಘೋರ ದುರಂತ; ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವು: ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಈಜುಕೊಳದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ 22 ವರ್ಷದ ಯುವಕ

Viral Video: ಗುಜರಾತ್‌ನ ಸೂರತ್‌ನಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿದ್ದಾನೆ‌. ಮೋಜು ಮಸ್ತಿಗಾಗಿ ತೆರಳಿದ್ದ ಯುವಕ ಈಜುಕೊಳದ ಆಳವಾದ ಪ್ರದೇಶಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾನೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.

ಡಿವೋರ್ಸ್‌ ಸಿಕ್ಕ ಖುಷಿ;  9 ಕಿ.ಮೀ. ದಂಡವತ್ ನಮಸ್ಕಾರ ಹಾಕಿ ಹರಕೆ ತೀರಿಸಿದ 25 ವರ್ಷದ ಭೂಪ!

ಡಿವೋರ್ಸ್‌ ನೀಡಿದ ಪತ್ನಿ; 9 ಕಿ.ಮೀ. ದಂಡವತ್ ನಮಸ್ಕಾರ ಹಾಕಿದ ಪತಿ

Viral News: ವ್ಯಕ್ತಿಯೊಬ್ಬ ತನಗೆ ಡಿವೋರ್ಸ್ ಸಿಕ್ಕ ಕಾರಣಕ್ಕೆ ದೇವಸ್ಥಾನಕ್ಕೆ ದಂಡವತ್ ನಮಸ್ಕಾರ ಹಾಕುತ್ತ 9. ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ದೃಶ್ಯ ವೈರಲ್‌ ಆಗಿದೆ. ದಾಂಪತ್ಯ ಜೀವನದ ಆರಂಭಿಕ ಹಂತದಲ್ಲೇ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಮುಕ್ತಿ ಸಿಕ್ಕರೆ ಉತ್ತರ ಪ್ರದೇಶದ ಭಾನ್‌ಪುರದ ಪ್ರಸಿದ್ಧ ಬಡ್ವಾ ಮಾತಾ ದೇವಸ್ಥಾನಕ್ಕೆ ತನ್ನ ಗ್ರಾಮದಿಂದ ದಂಡವತ್ ನಮಸ್ಕಾರ ಹಾಕುತ್ತಾ ಬರುವುದಾಗಿ ಆತ ಹರಕೆ ಹೊತ್ತಿದ್ದ.

Loading...