ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಕುಟುಂಬಕ್ಕೆ ಸಮಯ ನೀಡಲು ಬಡ್ತಿ ನಿರಾಕರಿಸಿದ ಉದ್ಯೋಗಿ: ರಿಯಲ್‌ ʼಫ್ಯಾಮಿಲಿ ಮ್ಯಾನ್‌ʼ ನಡೆಗೆ ನೆಟ್ಟಿಗರ ಮೆಚ್ಚುಗೆ

ಕುಟುಂಬಕ್ಕೆ ಆದ್ಯತೆ ನೀಡಲು ಬಡ್ತಿ ತಿರಸ್ಕರಿಸಿದ ಉದ್ಯೋಗಿ

Viral News: ಇಲ್ಲೊಬ್ಬರು ಉದ್ಯೋಗದಲ್ಲಿ ಪ್ರಮೋಷನ್ ಸಿಕ್ಕರೂ ಕುಟುಂಬಕ್ಕಾಗಿ ಈ ಬಡ್ತಿಯನ್ನು ನಿರಾಕರಿಸಿದ್ದಾರೆ. ಉತ್ತಮ ಸಂಬಳ ದೊರಕುವ ಅವಕಾಶ ಸಿಕ್ಕರೂ ಆ ವ್ಯಕ್ತಿ ಕುಟುಂಬದ ಸಂತೋಷಕ್ಕಾಗಿ ನಿರಾಕರಿಸಿದ್ದು, ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

"ಶ್ರೀಮಂತ ಮಹಿಳೆಯರು ಮದ್ಯಪಾನಿಗಳಾಗುತ್ತಿದ್ದಾರೆ": ವಿವಾದಾತ್ಮಕ ಹೇಳಿಕೆ ನೀಡಿದ ಧೀರೇಂದ್ರ ಕೃಷ್ಣ ಶಾಸ್ತ್ರಿ

ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕ ನೀಡಿದ ವಾಗ್ಮಿ ಧೀರೇಂದ್ರ ಶಾಸ್ತ್ರಿ

Viral Video: ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಶ್ರೀಮಂತ ಮಹಿಳೆಯರ ಮದ್ಯಪಾನ ವ್ಯಸನ ಬಗ್ಗೆ ಮಾತನಾಡಿದ್ದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇತ್ತೀಚೆಗೆ ಸಂಸ್ಕೃತಿಯ ಮಾಯವಾಗಿದ್ದು, ಇತ್ತೀಚಿನ ದಿನದಲ್ಲಿ ಪುರುಷರು ಬಿಡಿ ಮಹಿಳೆಯರೂ ಕೂಡ ಮದ್ಯಾಪನಕ್ಕೆ ತುತ್ತಾಗುತ್ತಿದ್ದಾರೆ. ಇವರನ್ನು ಭಜರಂಗಬಲಿಯೇ ಕಾಪಾಡಬೇಕು ಎಂದಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ: ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ ವಿಡಿಯೋ ನೋಡಿ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ

Viral Video: ಚಲಿಸುವ ರೈಲಿನಿಂದ ಮಗುವೊಂದು ರೈಲು ಹಳಿಗೆ ಬಿದ್ದ ಘಟನೆಯೊಂದು ನಡೆದಿದೆ. ತಂದೆ - ಮಗು ಇಬ್ಬರು ರೈಲಿನಲ್ಲಿ ಪ್ರಯಾಣಿಸಿದ್ದು ಮಗುವನ್ನು ಎತ್ತಿಕೊಂಡು ಇಳಿಯಲು ಪ್ರಯತ್ನಿ ಸುವಾಗ ಮಗು ಕೈತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಪ್ರದೇಶಕ್ಕೆ ಬಿದ್ದಿದೆ. ಕೂಡಲೇ ತಂದೆ ರೈಲಿನಿಂದ ಹಾರಿ ಮಗುವನ್ನು ಕೂದಲೆಳೆ ಅಂತರದಿಂದ ರಕ್ಷಣೆ ಮಾಡಿದ್ದಾರೆ.‌ ಈ ಆತಂಕಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮನದಲ್ಲಿ ಪ್ರಿಯಕರನ ನೆನಪು, ಕೈಯಲ್ಲಿ ಟವರ್ ಏಣಿ: ಉತ್ತರ ಪ್ರದೇಶದ ವಿವಾಹಿತ ಮಹಿಳೆಯ ಹೈಡ್ರಾಮ

ಪ್ರಿಯಕರನಿಗಾಗಿ ಟವರ್ ಏರಿದ ವಿವಾಹಿತೆ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಇರಲು ಹಠ ಹಿಡಿದು ಮೊಬೈಲ್ ಟವರ್ ಏರಿ ಮೂರು ಗಂಟೆಗಳ ಕಾಲ ಹೈಡ್ರಾಮವನ್ನೇ ಸೃಷ್ಟಿಸಿದ್ದಾಳೆ. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

“ಹೊಸ ಸಿಮ್ ಖರೀದಿಸಿದರೆ 1 ಲೀಟರ್ ಪೆಟ್ರೋಲ್ ಉಚಿತ”: ಮೊಬೈಲ್ ಅಂಗಡಿಯೊಂದರ ವಿನೂತನ ಆಫರ್

ಸಿಮ್ ಖರೀದಿಗೆ 1 ಲೀಟರ್ ಪೆಟ್ರೋಲ್ ಘೋಷಿಸಿದ ಮೊಬೈಲ್ ಅಂಗಡಿ

Mobile shop’s unique offer: ಹೊಸ ಸಿಮ್ ಖರೀದಿಸಿ, 350 ರುಪಾಯಿ ರೀಚಾರ್ಜ್ ಮಾಡಿದರೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಮೊಬೈಲ್ ಅಂಗಡಿಯೊಂದರ ಮಾಲಿಕ ಘೋಷಿಸಿದ್ದಾರೆ. ಒಂದು ಲೀಟರ್ ಪೆಟ್ರೋಲ್‌ಗೆ ಪ್ರತಿಯಾಗಿ ಮೊಬೈಲ್ ಸಿಮ್‌ ಖರೀದಿಸುವಂತೆ ಗ್ರಾಹಕರಿಗೆ ಆಮಿಷವೊಡ್ಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

Fact Check: ಪಂಚರಾಜ್ಯ ಚುನಾವಣೆ ನಡುವೆಯೇ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಯ್ತಾ?; ಸತ್ಯಾಂಶವೇನು?

ಪಂಚರಾಜ್ಯ ಚುನಾವಣೆ ನಡುವೆಯೇ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಯ್ತಾ?

PIB Fact Check: ಪೆಟ್ರೋಲ್‌, ಡೀಸೆಲ್‌ ದರ ಏರಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದೆ ಎಂಬ ನಕಲಿ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೀಗಾಗಿ ಹಲವರು ಇದನ್ನು ಸತ್ಯ ಎಂದು ತಿಳಿದು ಹಂಚಿಕೊಳ್ಳುತ್ತಿದ್ದಾರೆ. ಈ ವದಂತಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಆಂಬ್ಯುಲೆನ್ಸ್‌ನಲ್ಲಿ ರೋಗಿಯ ರಕ್ತದ ಕಲೆ; ಪತ್ನಿಯಿಂದಲೇ ವಾಹನ ಶುಚಿಗೊಳಿಸಿದ ವೈದ್ಯರು

ರೋಗಿಯ ಪತ್ನಿಯಿಂದಲೇ ಆಂಬ್ಯುಲೆನ್ಸ್‌ ಶುಚಿಗೊಳಿಸಿದ ವೈದ್ಯರು

Medic Makes Wife Wash Entire Vehicle: ಗಾಯಗೊಂಡ ರೋಗಿಯೊಬ್ಬನ ರಕ್ತದ ಕಲೆ ಆಂಬ್ಯುಲೆನ್ಸ್‌ನಲ್ಲಿದ್ದ ಕಾರಣ ಆತನ ಪತ್ನಿಯಿಂದಲೇ ವಾಹನವನ್ನು ಶುಚಿಗೊಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪಂದ್ಯದ ವೇಳೆ ಇ-ಸಿಗರೇಟ್ ಸೇದಿದ ರಾಜಸ್ಥಾನ್‌ ನಾಯಕ ರಿಯಾನ್‌ ಪರಾಗ್‌ಗೆ ಬಂಧನ ಭೀತಿ

ಪಂದ್ಯದ ವೇಳೆ ಇ-ಸಿಗರೇಟ್ ಸೇವನೆ; ಬಂಧನ ಭೀತಿಯಲ್ಲಿ ರಿಯಾನ್‌ ಪರಾಗ್‌

Riyan Parag vaping: ಐಪಿಎಲ್ ಜಿಲ್ಲಾ ನಿಯಮಗಳ ಪ್ರಕಾರ, ಗೊತ್ತುಪಡಿಸಿದ ಪ್ರದೇಶಗಳನ್ನು ಹೊರತುಪಡಿಸಿ, ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಕ್ರೀಡಾಂಗಣದ ಆವರಣದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಇ-ಸಿಗರೇಟ್‌ಗಳು ಅಥವಾ ವೇಪ್‌ಗಳನ್ನು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (ಪಿಇಸಿಎ), 2019 ರ ಅಡಿಯಲ್ಲಿ ನಿಷೇಧಿಸಲಾಗಿದೆ.

ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜತೆ ಅಫೇರ್‌: ಮಕ್ಕಳಿಗಾಗಿ ಸಂಬಂಧ ಉಳಿಸಿಕೊಂಡ ಪತಿ ಹೇಳಿದ್ದೇನು?

ಪತ್ನಿಯ ಅಕ್ರಮ ಸಂಬಂಧವನ್ನು ಮಕ್ಕಳಿಗಾಗಿ ಸಹಿಸಿಕೊಂಡ ಪತಿ

Viral News: ಇತ್ತೀಚೆಗೆ ಪತಿ ಅಥವಾ ಪತ್ನಿಯ ಅಕ್ರಮ ಸಂಬಂಧದ ವಿಚಾರ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮೂರು ವರ್ಷಗಳ ಹಿಂದೆ ತನಗೆ‌ ಮೋಸ ಮಾಡಿದ್ದು ದ್ರೋಹದ ಹೊರತಾಗಿಯೂ, ಮಕ್ಕಳ ಹಿತದೃಷ್ಟಿಯಿಂದ ಒಂದೇ ಮನೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ.

ಭಾರತದ ಸಂಸ್ಕೃತಿಗೆ ಫಿದಾ: ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

Viral Video: ಹಲವು ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌ಗಳು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಲವು ಘಟನೆಗಳನ್ನು ನೋಡಿದ್ದೇವೆ. ಇದೀಗ ಪ್ರಸಿದ್ಧ ಜಾಗತಿಕ ಪ್ರವಾಸಿಗರೊಬ್ಬರು ಭಾರತದ ಹಲವು ರಾಜ್ಯಗಳನ್ನು ಹೊಗಳಿದ್ದು, ಕರ್ನಾಟಕಕ್ಕೆ ನಂಬರ್ 1 ಪಟ್ಟ ನೀಡಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಸ್ತಕ ಖರೀದಿ ವಿಚಾರಕ್ಕೆ ಪೋಷಕರ ವಿರುದ್ಧ ಕಿರುಚಾಡಿದ ಪ್ರಾಂಶುಪಾಲೆ: ಇದೇನಾ ನೀವು ಕಲಿಸುವ ಸಂಸ್ಕಾರ ಎಂದು ಪ್ರಶ್ನಿಸಿದ ನೆಟ್ಟಿಗರು

ಪೋಷಕರಿಗೆ ಬೆದರಿಕೆ ಹಾಕಿದ ಶಾಲಾ ಪ್ರಾಂಶುಪಾಲೆ

Viral Video: ಶಾಲಾ ಪ್ರಾಂಶುಪಾಲೆಯೊಬ್ಬರು ಪೋಷಕರ ಮೇಲೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಶಾಲಾ ಪುಸ್ತಕ ಖರೀದಿ ವಿಚಾರವಾಗಿ ಮಗುವಿನ ಪೋಷಕರೊಬ್ಬರಿಗೆ ಶಿಕ್ಷಕಿ ಮನಬಂದಂತೆ ಬೈದಿದ್ದಾರೆ. ಸದ್ಯ ಈ ದೃಶ್ಯ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಗರಿಕ ಪ್ರಜ್ಞೆ ಮರೆತು ದೆಹಲಿ–ಬ್ಯಾಂಕಾಕ್ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು

ವಿಮಾನದಲ್ಲಿ ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು: ವಿಡಿಯೊವೈರಲ್‌

Viral Video: ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಗಲಾಟೆಯ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರಯಾಣಿಕರಿಬ್ಬರು ಭೀಕರವಾಗಿ ಹೊಡೆದಾಡಿಕೊಂಡಿದ್ದಾರೆ. ಮೊದಲಿಗೆ ಇಬ್ಬರಲ್ಲಿ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು ಮತ್ತೆ ಪರಿಸ್ಥಿತಿ ಉಲ್ಬಣಗೊಂಡಿದೆ.

"ಮರೆಯಾದ ಮಾನವೀಯತೆ": ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಾರದೆ ಜ್ಯೂಸ್ ಬಾಟಲಿ ದೋಚಿದ ಸಾರ್ವಜನಿಕರು

ಗಾಯಗೊಂಡ ಚಾಲಕನ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿದ ಸ್ಥಳೀಯರು

Viral Video: ಅಪಘಾತಕ್ಕೀಡಾದ ಚಾಲಕನ ಸಹಾಯಕ್ಕೆ ಧಾವಿಸದೇ ಜನರು ಜ್ಯೂಸ್ ಬಾಟಲಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್‌ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಚಾಲಕ ಗಾಯಗೊಂಡಿದ್ದು, ಅಲ್ಲಿನ ಜನ ಮಾತ್ರ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗದು ವಿತ್‌ಡ್ರಾ ಮಾಡಲು ಸಹೋದರಿಯ ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ತಂದ ವ್ಯಕ್ತಿ; ಒಡಿಶಾದಲ್ಲಿ ಮನಕಲಕುವ ಘಟನೆ

ಸಹೋದರಿಯ ಅಸ್ಥಿಪಂಜರವನ್ನು ಅಗೆದು ಬ್ಯಾಂಕಿಗೆ ತಂದ ವ್ಯಕ್ತಿ

Sister's Skeleton: ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ ಮೂರು ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿ, ಆಕೆಯ ಖಾತೆಯಿಂದ 19,300 ರುಪಾಯಿ ಪಡೆಯಲು ಮುಂದಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಅರಣ್ಯ ರಕ್ಷಣೆಗಾಗಿ ಜೆಸಿಬಿಯನ್ನೇ ಅಡ್ಡಗಟ್ಟಿದ ಗಜರಾಜ: ಇಲ್ಲಿದೆ ನೋಡಿ ಭಯಾನಕ ವಿಡಿಯೊ!

ಕಾಡನ್ನು ಉಳಿಸಿಕೊಳ್ಳಲು ಒಂಟಿ ಆನೆಯ ಹೋರಾಟ: ವಿಡಿಯೊ ನೋಡಿ!

Viral Video: ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ಮಾಡಿರುವ ಘಟನೆ ನಡೆದಿದೆ. ಆನೆಯೊಂದು ಬೃಹತ್ ಜೆಸಿಬಿ ಅಗೆಯುವ ಯಂತ್ರದ ಮುಂದೆ ನಿಂತು, ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಗೂಗಲ್ ಕ್ಯಾಂಪಸ್‌ನಲ್ಲಿ ತಾತನೊಂದಿಗೆ ಸಮಯ ಕಳೆದ ಮೊಮ್ಮಗ

Viral Video: ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ತೋರಿಸಿಕೊಟ್ಟಿದ್ದಾನೆ.

ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ತೀವ್ರ ಹಲ್ಲೆ: ವಿಡಿಯೊ ವೈರಲ್

ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಭಾರತೀಯ ಯುವಕನ ಮೇಲೆ ಹಲ್ಲೆ

Viral Video: ಭಾರತೀಯ ಯುವಕನ ಮೇಲೆ ಥೈಲ್ಯಾಂಡ್‌ನ ಪುಕೆಟ್‌ನಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವೈರಲ್ ವಿಡಿಯೊದಲ್ಲಿ ಜಿತೇಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ರೆಸ್ಟೋರೆಂಟ್‌ನೊಳಗೆ ಸಿಬ್ಬಂದಿ ಥಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ.

"ಫೀಸ್ ಕಟ್ಟಲು ಕೆಲಸ ಬೇಕು, ಕೆಲಸ ಮಾಡಲು ಕಾಲೇಜು ಹೋಗ್ಲೇಬೇಕು": ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

ಕೆಲಸ-ಶಿಕ್ಷಣ ನಡುವೆ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

Viral News: ಕಲಿಕೆಯ ಹಂಬಲದ ನಡುವೆ ವಿದ್ಯಾರ್ಥಿಯೊಬ್ಬಳು ಶಿಕ್ಷಣ ಮತ್ತು ಉದ್ಯೋಗ ಎರಡನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುವುದನ್ನು ತಿಳಿಸಿದ್ದಾಳೆ. ಕೆನಡಾಕ್ಕೆ ಹೋಗಿ ಕೆಲಸ ಮಾಡುವ, ಹೊಸ ದೇಶದಲ್ಲಿ ತಮ್ಮ ಅತ್ಯುತ್ತಮ ಜೀವನವನ್ನು ನಡೆಸುವ ಕನಸು ಯಾರು ಹೊಂದಿರುವುದಿಲ್ಲ? ಹೇಳಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿ ಜ್ಯೋತಿ ಖರಾಯತ್ ವಿದೇಶದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾಳೆ.

ಪೋಷಕರ ಬೇಜವಾಬ್ದಾರಿಯ ಪರಮಾವಧಿ: ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ: ವಿಡಿಯೊ ನೋಡಿ ನೆಟ್ಟಿಗರು ಕಿಡಿಕಿಡಿ

Viral Video: ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಲು ಎಷ್ಟೇ ಕ್ರಮ ಕೈಗೊಂಡರೂ ಹಲವಾರು ಇದನ್ನು ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಸ್ಕೂಟರ್ ನಲ್ಲಿ ಆರು ಮಕ್ಕಳು ಪ್ರಯಾಣ ಮಾಡಿದ್ದಾರೆ. ಈ ಆಘಾತಕಾರಿ ದೃಶ್ಯವು ಬೆಳಿಗ್ಗೆ 10:45 ರ ಸುಮಾರಿಗೆ ಪಾದರಾಯನಪುರ ಮುಖ್ಯ ರಸ್ತೆಯಲ್ಲಿ ಗೋರಿಪಾಳ್ಯ ಬಳಿ, ಟೋಟಲ್ ಎಂಜಿನಿಯರ್ ಆಟೋ ಗ್ಯಾಸ್ ಎದುರು ಸಂಭವಿಸಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ವಿಶ್ವದ ಅತೀ ದೊಡ್ಡ ಇಟಾಲಿಯನ್ ತಿರಾಮಿಸು ಇದು; ವಂದೇ ಭಾರತ್‌ ರೈಲಿಗಿಂತ ಉದ್ದ ಈ ಖಾದ್ಯ

3,000 ಮೊಟ್ಟೆಗಳಿಂದ ತಯಾರಿಸಲ್ಪಟ್ಟ ವಿಶ್ವದ ಅತಿ ಉದ್ದದ ತಿರಾಮಿಸು

Viral Video: ತಂದೂರಿ ಐಸ್ ಕ್ರೀಂ, ಹಣ್ಣುಗಳ ಮೊಮೊಸ್ ಹೀಗೆ ಹಲವು ವಿಚಿತ್ರ ಖಾದ್ಯಗಳು ಹಲವರನ್ನು ಅಚ್ಚರಿಗೊಳಿಸಿದೆ. ಇದೀಗ ರೈಲಿಗಿಂತಲೂ ಉದ್ದದ ತಿರಾಮಿಸು ಎಂಬ ಇಟಾಲಿಯನ್ ಸಿಹಿ ತಿಂಡಿಯ ವಿಡಿಯೊವೊಂದು ವೈರಲ್ ಆಗಿದೆ. 100ಕ್ಕೂ ಹೆಚ್ಚು ಬಾಣಸಿಗರು ಸೇರಿ ಈ ಖಾದ್ಯವನ್ನು ತಯಾರಿಸಿದ್ದಾರೆ.

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ; ಮೃತರ ಕೊನೆಯ ಆಸೆಯನ್ನು ವಿಶಿಷ್ಟವಾಗಿ ಪೂರೈಸಿದ ಕುಟುಂಬಸ್ಥರು

ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ

Viral News: ತಮ್ಮ ಪ್ರೀತಿ ಪಾತ್ರರ ಅಂತ್ಯಕ್ರಿಯೆ ವೇಳೆ ಕುಟುಂಬವೊಂದು ಬಾರ್ ಡ್ಯಾನ್ಸರ್ಸ್ ಅನ್ನು ಕರೆಸಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಅಂತ್ಯಕ್ರಿಯೆಯು ಎಲ್ಲರನ್ನು ಬೆರಗುಗೊಳಿಸಿದೆ. ಮೃತರ ಕೊನೆಯ ಆಸೆಯನ್ನು ಪೂರೈಸಲು, ಕುಟುಂಬವು ಬಾರ್ ನೃತ್ಯಗಾರರನ್ನು ಆಹ್ವಾನಿಸಿತು ಎಂದು ಮೂಲಗಳು ತಿಳಿಸಿವೆ.

ಬೀಚ್‌ಗಳಲ್ಲಿ ಕಸದ ರಾಶಿ ನೋಡಿ ವಿದೇಶಿ ಪ್ರವಾಸಿಗ ಕಿಡಿ ಕಿಡಿ; ಭಾರತೀಯರಲ್ಲಿನ ಶಿಸ್ತಿನ ಕೊರತೆ ಬಗ್ಗೆ ಕಳವಳ

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಬಗ್ಗೆ ವಿದೇಶಿ ಪ್ರವಾಸಿಗ ಆಕ್ರೋಶ

Viral Video: ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಅಜಾಗರೂಕತೆಯಿಂದ ವರ್ತಿಸಿ ಕಸ ಹಾಕುವುದಕ್ಕೆ ವಿದೇಶಿ ಬ್ಲಾಗರ್ ಒಬ್ಬರು ಕಿಡಿಕಾರಿದ್ದಾರೆ. ಜನರು ಯಾಕೆ ಬುದ್ದಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈದ್ಯರ ಗ್ಲೌಸ್‌ ಗಟ್ಟಿಯಾಗಿ ಹಿಡಿದ ಆಗ ತಾನೇ ಹುಟ್ಟಿದ ಶಿಶು: ಗಮನ ಸೆಳೆದ ದೃಶ್ಯ ಇಲ್ಲಿದೆ

ವೈದ್ಯರ ಗ್ಲೌಸ್‌ ಹಿಡಿದ ನವಜಾತ ಶಿಶು: ಇಲ್ಲಿದೆ ಕ್ಯೂಟ್ ವಿಡಿಯೊ

Viral News: ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಅಮ್ಮನ ಲಾಲನೆ ಪಾಲನೆಗಾಗಿ ಕಾಯುತ್ತಿರುತ್ತದೆ‌. ಆದರೆ ಇಲ್ಲೊಂದು ಮಗು ವೈದ್ಯರ ಗ್ಲೌಸ್‌ ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಕ್ಷಣದಲ್ಲಿ ಆ ಮಗು ವೈದ್ಯರ ಗ್ಲೌಸ್‌ ಬಿಡದೆ ಹಿಡಿದಿರುವ ಅಪರೂಪದ ದೃಶ್ಯ ಎಲ್ಲರ ಮನ ಗೆದ್ದಿದೆ‌.

ದಿನಸಿ ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ಇದು ಕ್ಯೂಟ್‌ ದರೋಡೆ ಎಂದ ನೆಟ್ಟಿಗರು

ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ವಿಡಿಯೊ ವೈರಲ್

Viral Video: ಆನೆವೊಂದು ಅಂಗಡಿಯೊಂದಕ್ಕೆ ನುಗ್ಗಿ ತನಗೆ ಬೇಕಾದ ತಿಂಡಿ ಸವಿದು ಆರಾಮವಾಗಿ ನಡೆದುಹೋಗುತ್ತಿರುವ ಘಟನೆವೊಂದು ನಡೆದಿದೆ. ಆನೆ ತನ್ನ ಸೊಂಡಿಲನ್ನು ಬಳಸಿ, ಕಪಾಟಿನಿಂದ ತಿಂಡಿ ಎಗರಿಸಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ನಗು ತರಿಸಿದೆ.

Loading...