ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಪಾಕ್‌ ಜಲಸಂಧಿಯ 29 ಕಿಲೋ ಮೀಟರ್‌ ದೂರವನ್ನು 10 ಗಂಟೆಯೊಳಗೆ ಈಜಿ ದಾಖಲೆ ನಿರ್ಮಿಸಿದ 7 ವರ್ಷದ ಪೋರ

ಪಾಕ್ ಸಮುದ್ರ ಮಾರ್ಗ ಈಜಿ ವಿಶ್ವ ದಾಖಲೆ ಬರೆದ 7 ವರ್ಷದ ಪೋರ

Viral Video: ಜಾರ್ಖಂಡ್‌ನ ರಾಂಚಿಯ ಬಾಲಕನೊಬ್ಬ ಪಾಕ್ ಜಲಸಂಧಿ ಈಜಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ರಾಂಚಿಯ ಏಳು ವರ್ಷದ ಬಾಲಕ ಇಶಾಂಕ್ ಶ್ರೀಲಂಕಾ ಮತ್ತು ಭಾರತದ ನಡುವಿನ ಅಪಾಯಕಾರಿಯಾದ ಸಮುದ್ರ ಮಾರ್ಗವನ್ನು ದಾಟುವ ಮೂಲಕ ಅಪರೂಪದ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾನೆ. ಸದ್ಯ ಈ ಬಾಲಕನ ಸಾಧನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Bengaluru Central Jail: ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಪತ್ನಿಗೆ ವಿಡಿಯೊ ಕಾಲ್‌ ಮಾಡಿದ ಕೈದಿ!; Video ವೈರಲ್‌

ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಪತ್ನಿಗೆ ವಿಡಿಯೊ ಕಾಲ್‌ ಮಾಡಿದ ಕೈದಿ!

ವಿಚಾರಣಾಧೀನ ಕೈದಿಯಾಗಿದ್ದ ಅಕ್ಬರ್ ಎಂಬಾತ ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲೇ ಕುಳಿತುಕೊಂಡೇ ಪತ್ನಿಗೆ ವಿಡಿಯೊ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಸದ್ಯ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆದರೆ ಈಗ ಈತನ ವಿಡಿಯೊ ವೈರಲ್ ಆಗುತ್ತಿದೆ. ಹೀಗಾಗಿ ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ.

'ಪಿತ್ತ ನೆತ್ತಿಗೇರುವ ಮುನ್ನ ಜಾಗ ಖಾಲಿ ಮಾಡು'; ಹುಚ್ಚಾಟ ಮೆರೆದ ಅಭಿಮಾನಿಗೆ ಎಚ್ಚರಿಕೆ ನೀಡಿದ ಕ್ಲಾಸೆನ್‌; ಇಲ್ಲಿದೆ ವಿಡಿಯೊ

ಹುಚ್ಚಾಟ ಮೆರೆದ ಅಭಿಮಾನಿಗೆ ಎಚ್ಚರಿಕೆ ನೀಡಿದ ಕ್ಲಾಸೆನ್‌

IPL 2026:‌ ಕ್ಲಾಸೆನ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 59.14 ರ ಸರಾಸರಿಯಲ್ಲಿ 414 ರನ್ ಗಳಿಸಿ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾ ನಂತರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೆಟ್ರೋದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ; ಪುರುಷ ಪ್ರಯಾಣಿಕನ ಕೆನ್ನೆಗೆ ಹೊಡೆದ ಮಹಿಳೆ: ವಿಡಿಯೊ ವೈರಲ್

ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಕಿತ್ತಾಟ: ವಿಡಿಯೊ ವೈರಲ್

Viral Video: ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರ ನಡುವೆ ಜಗಳ, ಕಿತ್ತಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಂತಹುದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಮೆಟ್ರೋದಲ್ಲಿ ಕಿಕ್ಕಿರಿದ್ದು ತುಂಬಿದ ಬೋಗಿಯಲ್ಲಿ ಸೀಟಿನ ವಿಚಾರವಾಗಿ ಕಿತ್ತಾಟ ನಡೆದಿದ್ದು, ಮಹಿಳೆ ಹಾಗೂ ಪುರುಷ ಪ್ರಯಾಣಿಕನ ನಡುವಿನ ಜಗಳ ತಾರಕ್ಕೇರಿದೆ. ಬಳಿಕ ಮಹಿಳೆ ಪುರುಷ ಪ್ರಯಾಣಿಕನ ಕೆನ್ನೆಗೆ ಹೊಡೆದಿದ್ದಾಳೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 23 ವರ್ಷಗಳವರೆಗೆ ಈ ವ್ಯಕ್ತಿಯ ತಲೆಯಲ್ಲಿತ್ತು ಬುಲೆಟ್! ಆತನಿಗೂ ಮರೆತು ಹೋಗಿದ್ದ ಈ ವಿಚಾರ ಬೆಳಕಿಗೆ ಬಂದಿದ್ದು ಹೇಗೆ?

23 ವರ್ಷಗಳವರೆಗೆ ವ್ಯಕ್ತಿಯ ತಲೆಯಲ್ಲಿತ್ತು ಬುಲೆಟ್: ಏನಿದು ಪ್ರಕರಣ?

Viral News: ಚೀನಾದಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತಮ್ಮ ತಲೆಯಲ್ಲಿ ಬುಲೆಟ್‌ ಇರುವುದನ್ನು 23 ವರ್ಷಗಳ ನಂತರ ಕಂಡು ಬಂದಿದೆ. ಈ ಘಟನೆ ಚೀನಾದ ಹೆಬೈಯಲ್ಲಿ ನಡೆದಿದೆ. ಇತ್ತೀಚಿಗೆ ಅವರಿಗೆ ಪದೇ ಪದೆ ಪ್ರಜ್ಞೆ ತಪ್ಪುತ್ತಿತ್ತು. ಹೀಗಾಗಿ ವೈದ್ಯರ ಬಳಿ ಪರೀಕ್ಷೆಗೆಂದು ಬಂದಾಗ ಮೆದುಳಿನ ಭಾಗದಲ್ಲಿ ಬುಲೆಟ್‌ ಪತ್ತೆಯಾಗಿದೆ. ಇದನ್ನು ತಿಳಿದ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದು ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಮಹಿಳಾ ಉದ್ಯೋಗಿಗಳಿಗೆ ವಿಶೇಷ ಗಿಫ್ಟ್ , ಪುರುಷರಿಗೆ ಕೇವಲ ಮೋಮೊಸ್‌: ಕೆಲಸಕ್ಕೆ ರಾಜೀನಾಮೆ ನೀಡಿದ ಯುವಕ!

ಕೆಲಸದ ಸ್ಥಳದಲ್ಲಿ ತಾರತಮ್ಯ; ಯುವಕ ರಾಜೀನಾಮೆ

Viral Video: ಇಲ್ಲೊಬ್ಬ ವ್ಯಕ್ತಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳಿಗೆ ಕಂಪನಿ ತಾರತಮ್ಯ ಮಾಡಿದೆ ಎನ್ನುವ ಕಾರಣಕ್ಕೆ ಕೆಲಸ ತೊರೆದಿದ್ದಾರೆ. ತನ್ನ ಕಚೇರಿಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿರುವುದರಿಂದ ರಾಜೀನಾಮೆ ನೀಡಲು ಬಯಸಿದ್ದೇನೆ ಎಂದು ಯುವಕ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.

ರೀಲ್ಸ್‌ಗಾಗಿ ಇದೆಂಥ ಅಸಹ್ಯ ಸಾಹಸ; ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿಂದ ಯುವಕ

ಛೇ ಇದೆಂಥಾ ಅಸಹ್ಯ? ಚರಂಡಿ ನೀರಲ್ಲಿ ಆಹಾರ ಅದ್ದಿ ತಿಂದ ಯುವಕ

Viral Video: ಹೆಚ್ಚಿನ ಲೈಕ್ ಹಾಗೂ ವೀವ್ಸ್‌ಗಾಗಿ ಯುವಕರು ನಾನಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಫ್ಲುಯೆನ್ಸರ್ ಒಬ್ಬ ಕೇವಲ ವೀಕ್ಷಣೆಗಾಗಿ ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿನ್ನುವ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು ಅಸಹ್ಯ ಎಂದು ಕಿಡಿಕಾರಿದ್ದಾರೆ.

ಬಸ್‌ ಚಲಾಯಿಸುತ್ತಿದ್ಧಂತೆ ಪ್ರಜ್ಞೆ ತಪ್ಪಿದ ಡ್ರೈವರ್‌: ಬ್ರೇಕ್‌ ಹಾಕಿ ಹಲವರ ಜೀವ ಉಳಿಸಿದ ವಿದ್ಯಾರ್ಥಿಗಳು

ಡ್ರೈವರ್‌ ಪ್ರಜ್ಞೆ ತಪ್ಪಿದರೂ ಅಪಘಾತ ತಪ್ಪಿಸಿದ ವಿದ್ಯಾರ್ಥಿಗಳು

Viral Video: ಶಾಲಾ ಬಸ್‌ ಚಲಾಯಿಸುತ್ತಿದ್ದಂತೆ ಡ್ರೈವರ್‌ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮೆರೆದು ಹಲವರ ಪ್ರಾಣ ಉಳಿಸಿದ್ದಾರೆ. ಬೆಳಗ್ಗೆ ಶಾಲಾ ಬಸ್ ಚಾಲಕಿ ಲಿಯಾ ಟೇಲರ್ ವಿದ್ಯಾರ್ಥಿಗಳನ್ನು ಸಾಗಿಸುವಾಗ ಈ ಘಟನೆ ನಡೆದಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ವಿದ್ಯಾರ್ಥಿಗಳ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಕುಟುಂಬಕ್ಕೆ ಸಮಯ ನೀಡಲು ಬಡ್ತಿ ನಿರಾಕರಿಸಿದ ಉದ್ಯೋಗಿ: ರಿಯಲ್‌ ʼಫ್ಯಾಮಿಲಿ ಮ್ಯಾನ್‌ʼ ನಡೆಗೆ ನೆಟ್ಟಿಗರ ಮೆಚ್ಚುಗೆ

ಕುಟುಂಬಕ್ಕೆ ಆದ್ಯತೆ ನೀಡಲು ಬಡ್ತಿ ತಿರಸ್ಕರಿಸಿದ ಉದ್ಯೋಗಿ

Viral News: ಇಲ್ಲೊಬ್ಬರು ಉದ್ಯೋಗದಲ್ಲಿ ಪ್ರಮೋಷನ್ ಸಿಕ್ಕರೂ ಕುಟುಂಬಕ್ಕಾಗಿ ಈ ಬಡ್ತಿಯನ್ನು ನಿರಾಕರಿಸಿದ್ದಾರೆ. ಉತ್ತಮ ಸಂಬಳ ದೊರಕುವ ಅವಕಾಶ ಸಿಕ್ಕರೂ ಆ ವ್ಯಕ್ತಿ ಕುಟುಂಬದ ಸಂತೋಷಕ್ಕಾಗಿ ನಿರಾಕರಿಸಿದ್ದು, ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

"ಶ್ರೀಮಂತ ಮಹಿಳೆಯರು ಮದ್ಯಪಾನಿಗಳಾಗುತ್ತಿದ್ದಾರೆ": ವಿವಾದಾತ್ಮಕ ಹೇಳಿಕೆ ನೀಡಿದ ಧೀರೇಂದ್ರ ಕೃಷ್ಣ ಶಾಸ್ತ್ರಿ

ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕ ನೀಡಿದ ವಾಗ್ಮಿ ಧೀರೇಂದ್ರ ಶಾಸ್ತ್ರಿ

Viral Video: ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಶ್ರೀಮಂತ ಮಹಿಳೆಯರ ಮದ್ಯಪಾನ ವ್ಯಸನ ಬಗ್ಗೆ ಮಾತನಾಡಿದ್ದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇತ್ತೀಚೆಗೆ ಸಂಸ್ಕೃತಿಯ ಮಾಯವಾಗಿದ್ದು, ಇತ್ತೀಚಿನ ದಿನದಲ್ಲಿ ಪುರುಷರು ಬಿಡಿ ಮಹಿಳೆಯರೂ ಕೂಡ ಮದ್ಯಾಪನಕ್ಕೆ ತುತ್ತಾಗುತ್ತಿದ್ದಾರೆ. ಇವರನ್ನು ಭಜರಂಗಬಲಿಯೇ ಕಾಪಾಡಬೇಕು ಎಂದಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ: ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ ವಿಡಿಯೋ ನೋಡಿ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ

Viral Video: ಚಲಿಸುವ ರೈಲಿನಿಂದ ಮಗುವೊಂದು ರೈಲು ಹಳಿಗೆ ಬಿದ್ದ ಘಟನೆಯೊಂದು ನಡೆದಿದೆ. ತಂದೆ - ಮಗು ಇಬ್ಬರು ರೈಲಿನಲ್ಲಿ ಪ್ರಯಾಣಿಸಿದ್ದು ಮಗುವನ್ನು ಎತ್ತಿಕೊಂಡು ಇಳಿಯಲು ಪ್ರಯತ್ನಿ ಸುವಾಗ ಮಗು ಕೈತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಪ್ರದೇಶಕ್ಕೆ ಬಿದ್ದಿದೆ. ಕೂಡಲೇ ತಂದೆ ರೈಲಿನಿಂದ ಹಾರಿ ಮಗುವನ್ನು ಕೂದಲೆಳೆ ಅಂತರದಿಂದ ರಕ್ಷಣೆ ಮಾಡಿದ್ದಾರೆ.‌ ಈ ಆತಂಕಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮನದಲ್ಲಿ ಪ್ರಿಯಕರನ ನೆನಪು, ಕೈಯಲ್ಲಿ ಟವರ್ ಏಣಿ: ಉತ್ತರ ಪ್ರದೇಶದ ವಿವಾಹಿತ ಮಹಿಳೆಯ ಹೈಡ್ರಾಮ

ಪ್ರಿಯಕರನಿಗಾಗಿ ಟವರ್ ಏರಿದ ವಿವಾಹಿತೆ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಇರಲು ಹಠ ಹಿಡಿದು ಮೊಬೈಲ್ ಟವರ್ ಏರಿ ಮೂರು ಗಂಟೆಗಳ ಕಾಲ ಹೈಡ್ರಾಮವನ್ನೇ ಸೃಷ್ಟಿಸಿದ್ದಾಳೆ. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

“ಹೊಸ ಸಿಮ್ ಖರೀದಿಸಿದರೆ 1 ಲೀಟರ್ ಪೆಟ್ರೋಲ್ ಉಚಿತ”: ಮೊಬೈಲ್ ಅಂಗಡಿಯೊಂದರ ವಿನೂತನ ಆಫರ್

ಸಿಮ್ ಖರೀದಿಗೆ 1 ಲೀಟರ್ ಪೆಟ್ರೋಲ್ ಘೋಷಿಸಿದ ಮೊಬೈಲ್ ಅಂಗಡಿ

Mobile shop’s unique offer: ಹೊಸ ಸಿಮ್ ಖರೀದಿಸಿ, 350 ರುಪಾಯಿ ರೀಚಾರ್ಜ್ ಮಾಡಿದರೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಮೊಬೈಲ್ ಅಂಗಡಿಯೊಂದರ ಮಾಲಿಕ ಘೋಷಿಸಿದ್ದಾರೆ. ಒಂದು ಲೀಟರ್ ಪೆಟ್ರೋಲ್‌ಗೆ ಪ್ರತಿಯಾಗಿ ಮೊಬೈಲ್ ಸಿಮ್‌ ಖರೀದಿಸುವಂತೆ ಗ್ರಾಹಕರಿಗೆ ಆಮಿಷವೊಡ್ಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

Fact Check: ಪಂಚರಾಜ್ಯ ಚುನಾವಣೆ ನಡುವೆಯೇ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಯ್ತಾ?; ಸತ್ಯಾಂಶವೇನು?

ಪಂಚರಾಜ್ಯ ಚುನಾವಣೆ ನಡುವೆಯೇ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಯ್ತಾ?

PIB Fact Check: ಪೆಟ್ರೋಲ್‌, ಡೀಸೆಲ್‌ ದರ ಏರಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದೆ ಎಂಬ ನಕಲಿ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೀಗಾಗಿ ಹಲವರು ಇದನ್ನು ಸತ್ಯ ಎಂದು ತಿಳಿದು ಹಂಚಿಕೊಳ್ಳುತ್ತಿದ್ದಾರೆ. ಈ ವದಂತಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಆಂಬ್ಯುಲೆನ್ಸ್‌ನಲ್ಲಿ ರೋಗಿಯ ರಕ್ತದ ಕಲೆ; ಪತ್ನಿಯಿಂದಲೇ ವಾಹನ ಶುಚಿಗೊಳಿಸಿದ ವೈದ್ಯರು

ರೋಗಿಯ ಪತ್ನಿಯಿಂದಲೇ ಆಂಬ್ಯುಲೆನ್ಸ್‌ ಶುಚಿಗೊಳಿಸಿದ ವೈದ್ಯರು

Medic Makes Wife Wash Entire Vehicle: ಗಾಯಗೊಂಡ ರೋಗಿಯೊಬ್ಬನ ರಕ್ತದ ಕಲೆ ಆಂಬ್ಯುಲೆನ್ಸ್‌ನಲ್ಲಿದ್ದ ಕಾರಣ ಆತನ ಪತ್ನಿಯಿಂದಲೇ ವಾಹನವನ್ನು ಶುಚಿಗೊಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪಂದ್ಯದ ವೇಳೆ ಇ-ಸಿಗರೇಟ್ ಸೇದಿದ ರಾಜಸ್ಥಾನ್‌ ನಾಯಕ ರಿಯಾನ್‌ ಪರಾಗ್‌ಗೆ ಬಂಧನ ಭೀತಿ

ಪಂದ್ಯದ ವೇಳೆ ಇ-ಸಿಗರೇಟ್ ಸೇವನೆ; ಬಂಧನ ಭೀತಿಯಲ್ಲಿ ರಿಯಾನ್‌ ಪರಾಗ್‌

Riyan Parag vaping: ಐಪಿಎಲ್ ಜಿಲ್ಲಾ ನಿಯಮಗಳ ಪ್ರಕಾರ, ಗೊತ್ತುಪಡಿಸಿದ ಪ್ರದೇಶಗಳನ್ನು ಹೊರತುಪಡಿಸಿ, ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಕ್ರೀಡಾಂಗಣದ ಆವರಣದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಇ-ಸಿಗರೇಟ್‌ಗಳು ಅಥವಾ ವೇಪ್‌ಗಳನ್ನು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (ಪಿಇಸಿಎ), 2019 ರ ಅಡಿಯಲ್ಲಿ ನಿಷೇಧಿಸಲಾಗಿದೆ.

ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜತೆ ಅಫೇರ್‌: ಮಕ್ಕಳಿಗಾಗಿ ಸಂಬಂಧ ಉಳಿಸಿಕೊಂಡ ಪತಿ ಹೇಳಿದ್ದೇನು?

ಪತ್ನಿಯ ಅಕ್ರಮ ಸಂಬಂಧವನ್ನು ಮಕ್ಕಳಿಗಾಗಿ ಸಹಿಸಿಕೊಂಡ ಪತಿ

Viral News: ಇತ್ತೀಚೆಗೆ ಪತಿ ಅಥವಾ ಪತ್ನಿಯ ಅಕ್ರಮ ಸಂಬಂಧದ ವಿಚಾರ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮೂರು ವರ್ಷಗಳ ಹಿಂದೆ ತನಗೆ‌ ಮೋಸ ಮಾಡಿದ್ದು ದ್ರೋಹದ ಹೊರತಾಗಿಯೂ, ಮಕ್ಕಳ ಹಿತದೃಷ್ಟಿಯಿಂದ ಒಂದೇ ಮನೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ.

ಭಾರತದ ಸಂಸ್ಕೃತಿಗೆ ಫಿದಾ: ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

Viral Video: ಹಲವು ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌ಗಳು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಲವು ಘಟನೆಗಳನ್ನು ನೋಡಿದ್ದೇವೆ. ಇದೀಗ ಪ್ರಸಿದ್ಧ ಜಾಗತಿಕ ಪ್ರವಾಸಿಗರೊಬ್ಬರು ಭಾರತದ ಹಲವು ರಾಜ್ಯಗಳನ್ನು ಹೊಗಳಿದ್ದು, ಕರ್ನಾಟಕಕ್ಕೆ ನಂಬರ್ 1 ಪಟ್ಟ ನೀಡಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಸ್ತಕ ಖರೀದಿ ವಿಚಾರಕ್ಕೆ ಪೋಷಕರ ವಿರುದ್ಧ ಕಿರುಚಾಡಿದ ಪ್ರಾಂಶುಪಾಲೆ: ಇದೇನಾ ನೀವು ಕಲಿಸುವ ಸಂಸ್ಕಾರ ಎಂದು ಪ್ರಶ್ನಿಸಿದ ನೆಟ್ಟಿಗರು

ಪೋಷಕರಿಗೆ ಬೆದರಿಕೆ ಹಾಕಿದ ಶಾಲಾ ಪ್ರಾಂಶುಪಾಲೆ

Viral Video: ಶಾಲಾ ಪ್ರಾಂಶುಪಾಲೆಯೊಬ್ಬರು ಪೋಷಕರ ಮೇಲೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಶಾಲಾ ಪುಸ್ತಕ ಖರೀದಿ ವಿಚಾರವಾಗಿ ಮಗುವಿನ ಪೋಷಕರೊಬ್ಬರಿಗೆ ಶಿಕ್ಷಕಿ ಮನಬಂದಂತೆ ಬೈದಿದ್ದಾರೆ. ಸದ್ಯ ಈ ದೃಶ್ಯ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಗರಿಕ ಪ್ರಜ್ಞೆ ಮರೆತು ದೆಹಲಿ–ಬ್ಯಾಂಕಾಕ್ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು

ವಿಮಾನದಲ್ಲಿ ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು: ವಿಡಿಯೊವೈರಲ್‌

Viral Video: ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಗಲಾಟೆಯ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರಯಾಣಿಕರಿಬ್ಬರು ಭೀಕರವಾಗಿ ಹೊಡೆದಾಡಿಕೊಂಡಿದ್ದಾರೆ. ಮೊದಲಿಗೆ ಇಬ್ಬರಲ್ಲಿ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು ಮತ್ತೆ ಪರಿಸ್ಥಿತಿ ಉಲ್ಬಣಗೊಂಡಿದೆ.

"ಮರೆಯಾದ ಮಾನವೀಯತೆ": ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಾರದೆ ಜ್ಯೂಸ್ ಬಾಟಲಿ ದೋಚಿದ ಸಾರ್ವಜನಿಕರು

ಗಾಯಗೊಂಡ ಚಾಲಕನ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿದ ಸ್ಥಳೀಯರು

Viral Video: ಅಪಘಾತಕ್ಕೀಡಾದ ಚಾಲಕನ ಸಹಾಯಕ್ಕೆ ಧಾವಿಸದೇ ಜನರು ಜ್ಯೂಸ್ ಬಾಟಲಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್‌ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಚಾಲಕ ಗಾಯಗೊಂಡಿದ್ದು, ಅಲ್ಲಿನ ಜನ ಮಾತ್ರ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗದು ವಿತ್‌ಡ್ರಾ ಮಾಡಲು ಸಹೋದರಿಯ ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ತಂದ ವ್ಯಕ್ತಿ; ಒಡಿಶಾದಲ್ಲಿ ಮನಕಲಕುವ ಘಟನೆ

ಸಹೋದರಿಯ ಅಸ್ಥಿಪಂಜರವನ್ನು ಅಗೆದು ಬ್ಯಾಂಕಿಗೆ ತಂದ ವ್ಯಕ್ತಿ

Sister's Skeleton: ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ ಮೂರು ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿ, ಆಕೆಯ ಖಾತೆಯಿಂದ 19,300 ರುಪಾಯಿ ಪಡೆಯಲು ಮುಂದಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಅರಣ್ಯ ರಕ್ಷಣೆಗಾಗಿ ಜೆಸಿಬಿಯನ್ನೇ ಅಡ್ಡಗಟ್ಟಿದ ಗಜರಾಜ: ಇಲ್ಲಿದೆ ನೋಡಿ ಭಯಾನಕ ವಿಡಿಯೊ!

ಕಾಡನ್ನು ಉಳಿಸಿಕೊಳ್ಳಲು ಒಂಟಿ ಆನೆಯ ಹೋರಾಟ: ವಿಡಿಯೊ ನೋಡಿ!

Viral Video: ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ಮಾಡಿರುವ ಘಟನೆ ನಡೆದಿದೆ. ಆನೆಯೊಂದು ಬೃಹತ್ ಜೆಸಿಬಿ ಅಗೆಯುವ ಯಂತ್ರದ ಮುಂದೆ ನಿಂತು, ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಗೂಗಲ್ ಕ್ಯಾಂಪಸ್‌ನಲ್ಲಿ ತಾತನೊಂದಿಗೆ ಸಮಯ ಕಳೆದ ಮೊಮ್ಮಗ

Viral Video: ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ತೋರಿಸಿಕೊಟ್ಟಿದ್ದಾನೆ.

Loading...