ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ವಿಮಾನದ ಕಿಟಕಿ ಗ್ಲಾಸ್ ಮೇಲೆ ತನ್ನದೇ ಹೆಸರು ಕೆತ್ತಿದ ಪ್ರಯಾಣಿಕ;  ನೆಟ್ಟಿಗರು ಫುಲ್ ಗರಂ!

ವಿಮಾನದ ಗ್ಲಾಸ್ ಮೇಲೆ ಪ್ರಯಾಣಿಕನ ಹೆಸರು ಕೆತ್ತನೆ: ನೆಟ್ಟಿಗರಿಂದ ತರಾಟೆ

Viral News: ವಿಮಾನ ಒಂದರಲ್ಲಿ ಪ್ರಯಾಣ ಮಾಡಿದ್ದ ಪ್ರಯಾಣಿಕರೊಬ್ಬರು ತಮ್ಮ ಹೆಸರನ್ನು ವಿಮಾನದ ಕಿಟಕಿಯ ಗ್ಲಾಸ್ ಮೇಲೆ ಕೆತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಈ ಫೋಟೊ ವೈರಲ್ ಆಗಿದ್ದು ನಾಗರಿಕರ ಪ್ರಜ್ಞೆಯ ಬಗ್ಗೆ ಕಳವಳವನ್ನು ಹುಟ್ಟು ಹಾಕುವಂತೆ ಮಾಡಿದೆ. ಈ ಬಗ್ಗೆ ನೆಟ್ಟಿಗರು ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಾಲಿಗೆ ಡಿಟರ್ಜೆಂಟ್, ಯೂರಿಯಾ ಬೆರೆಸಿ ಮಾರಾಟ! ಯಾಮಾರಿದ್ರೆ ಜೀವ ಹೋಗೋದು ಗ್ಯಾರಂಟಿ

ಹಾಲಿಗೆ ಡಿಟರ್ಜೆಂಟ್, ಯೂರಿಯಾ ಬೆರೆಸಿ ಮಾರಾಟ!

Viral Video: ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ಹಾಲು ಕಲಬೆರಕೆ ದಂಧೆ ನಡೆದಿದೆ. ಹಾಲಿನ ಸಾಂದ್ರತೆ ಹೆಚ್ಚು ಮಾಡಲು ಡಿಟರ್ಜೆಂಟ್, ಯೂರಿಯಾ ಮತ್ತು ರಿಫೈನ್ಡ್ ಆಯಿಲ್ ಬಳಕೆ ಮಾಡುತ್ತಿರುವ ಆಘಾತಕಾರಿ ದೃಶ್ಯ ಕಂಡು ಬಂದಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಅರಣ್ಯ ಅಧಿಕಾರಿಯ ಮೇಲೆ ಕಾಡುಹಂದಿಯಿಂದ ಭೀಕರ ದಾಳಿ: ಬೆಚ್ಚಿ ಬೀಳಿಸುವ ವಿಡಿಯೊ!

ಭಯಾನಕ ವಿಡಿಯೋ: ಅರಣ್ಯಾಧಿಕಾರಿ ಮೇಲೆ ಕಾಡುಹಂದಿ ಭೀಕರ ದಾಳಿ!

Viral Video: ಉತ್ತರ ಪ್ರದೇಶದಲ್ಲಿ ಅರಣ್ಯ ಅಧಿಕಾರಿಯೊಬ್ಬರ ಮೇಲೆ ಕಾಡುಹಂದಿವೊಂದು ದಾಳಿ ನಡೆಸಿದೆ. ಗ್ರಾಮದಲ್ಲಿ ಬೆಳೆ ನಾಶಪಡಿಸುತ್ತಿದ್ದ ಕಾಡುಹಂದಿಯನ್ನು ಸೆರೆಹಿಡಿಯಲು ಹೋದ ಅರಣ್ಯಾಧಿ ಕಾರಿಯೊಬ್ಬರ ಮೇಲೆಯೇ ಕಾಡುಹಂದಿ ಭಯಾನಕವಾಗಿ ದಾಳಿ ಮಾಡಿದೆ. ಸದ್ಯ ಈ ಆಘಾತಕಾರಿ ವಿಡಿಯೊ ಭಾರೀ ವೈರಲ್ ಆಗಿದೆ.

Viral Video: ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದ ರೈಲು ಪ್ರಯಾಣ: ವಿಶ್ವ ದಾಖಲೆ ನಿರ್ಮಿಸಿದ ಚೀನಾ!

ವಿಶ್ವದ ಅತಿವೇಗದ ರೈಲು ಕಂಡುಹಿಡಿದ ಚೀನಾ: ವಿಡಿಯೊ ಇಲ್ಲಿದೆ!

ಸಾರಿಗೆ ಕ್ಷೇತ್ರದಲ್ಲಿ ಚೀನಾವು ಇದೀಗ ಎಲ್ಲರೂ ಶಹಬಾಸ್ ಎನ್ನುವಂತಹ ಪಟ್ಟವೊಂದನ್ನು ಪಡೆದಿದೆ. ಚೀನಾ ಅತೀ ವೇಗವಾಗಿ ಚಲಿಸುವ ರೈಲು ವೊಂದನ್ನು ನಿರ್ಮಿಸಿ ವಿಶ್ವ ದಾಖಲೆಯನ್ನು ಮಾಡಿದೆ. ಚೀನಾದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಹೊಸ ಮ್ಯಾಗ್ಲೆವ್ (Maglev)ರೈಲು ಕೇವಲ ಎರಡೇ ಸೆಕೆಂಡ್ ನಲ್ಲಿ ಗಂಟೆಗೆ 700 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ..

ಕಂಪನಿ ಮಾರಿದ ದುಡ್ಡಲ್ಲಿ ಉದ್ಯೋಗಿಗಳಿಗೆ 2 ಕೋಟಿ ರೂ ಕೊಟ್ಟ CEO; ಹೃದಯಸ್ಪರ್ಶಿ ಕ್ಷಣ ವೈರಲ್‌

ಕಂಪೆನಿ ಮಾರಿ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಅಮೆರಿಕನ್ ಸಿಇಒ

ಅಮೆರಿಕನ್ ಸಿಇಒವೊಬ್ಬರು ಕಂಪೆನಿಯನ್ನು ಮಾರಿ ತಮ್ಮ 540 ಉದ್ಯೋಗಿಗಳಿಗೆ 2 ಕೋಟಿ ರೂ. ಬೋನಸ್ ವಿತರಿಸಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಫೈಬರ್‌ಬಾಂಡ್‌ನ ಸಿಇಒ ಆಗಿದ್ದ ಗ್ರಹಾಂ ವಾಕರ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಕಂಪೆನಿಯನ್ನು ಮಾರಾಟ ಮಾಡಿದ್ದರು. ಈಗ ಇದರಿಂದ ಬಂದಿರುವ ಹಣದಿಂದ ಉದ್ಯೋಗಿಗಳಿಗೆ ಬೋನಸ್ ವಿತರಿಸಿದ್ದಾರೆ.

Viral Video: ಇನ್ಸ್ಟಾಗ್ರಾಮ್​ನಲ್ಲಿ ಗೆಳೆಯನಿಗೆ ಹುಡುಗಿಯಿಂದ ಮೆಸೇಜ್‌; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ, ವಿಡಿಯೋ ನೋಡಿ

ಗೆಳೆಯನಿಗೆ ಹುಡುಗಿಯಿಂದ ಮೆಸೇಜ್‌; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ

ಯುವತಿಯೊಬ್ಬಳು ತನ್ನ ಗೆಳೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಿವಾದದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಗೆ ಬೆಲ್ಟ್‌ನಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ಇಬ್ಬರೂ ವಿದ್ಯಾರ್ಥಿಗಳು ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ಭೇಟಿ ವೇಳೆ ಉಪಾಹಾರದ ಅವ್ಯವಸ್ಥೆ: ಸಮೋಸಕ್ಕಾಗಿ ಕಿತ್ತಾಡಿದ ಜನರು, ವಿಡಿಯೋ ನೋಡಿ

ಲಕ್ನೋದಲ್ಲಿ ಸಮೋಸಕ್ಕಾಗಿ ಕಿತ್ತಾಡಿದ ಜನ: ವಿಡಿಯೋ ವೈರಲ್

Viral Video: ಡಿಸೆಂಬರ್ 25 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯ ಅಂಗವಾಗಿ ಅವರ ಜೀವನ ಮತ್ತು ಆದರ್ಶಗಳನ್ನು ಗೌರವಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನಸಮೂಹವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಅವರು ಭಾಷಣ ಕೂಡ ಮಾಡಿದ್ದರು. ವೇದಿಕೆಯಲ್ಲಿ ಅವರು ಭಾಷಣ ಮಾಡುತ್ತಿದ್ದಾಗಲೇ ಸಭಿಕರು ಕುಳಿತಿದ್ದ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ‌. ಕೆಲವು ಜನರು ತಮಗೆ ಸಮೋಸಾಗಳನ್ನು ನೀಡಲಾಗಿಲ್ಲ ಎಂಬ ಕಾರಣಕ್ಕೆ ತಕರಾರು ಎತ್ತಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ: ಆಘಾತಕಾರಿ ಘಟನೆಗೆ ನೆಟ್ಟಿಗರ ಆಕ್ರೋಶ!

ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ!

Viral Video: ಮಹಿಳೆಯೊಬ್ಬರಿಗೆ ಕ್ಲುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆವೊಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯ ಮಗು, ಆರೋಪಿಯ ಮಗನ ಜೊತೆ ಆಟವಾಡಲು ನಿರಾಕರಿಸಿದೆ ಎಂಬ ಸಣ್ಣ ವಿಚಾರಕ್ಕೆ ಜಗಳ ಉಂಟಾಗಿದೆ. ಕ್ಷುಲ್ಲಕ ಕಾರಣಕ್ಕಾಗಿಯೇ ಮಹಿಳೆಯ ಮೇಲೆ ಆ ವ್ಯಕ್ತಿ ಸಾರ್ವಜನಿಕವಾಗಿ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ.

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ: ದಿಲ್ಲಿ ಯುವತಿ ಆಗ್ರಹ

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ: ದಿಲ್ಲಿ ಯುವತಿ ಆಗ್ರಹ

viral video: ಸುರಕ್ಷತೆ ಕುರಿತು ಪ್ರಸ್ತಾವಿಸಿರುವ ಮಖಿಜಾ, ‘ರಾತ್ರಿ ಸಹ ಮಹಿಳೆಯರಿಗೆ ಬೆಂಗಳೂರು ಹೆಚ್ಚು ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗಲೂ ಹಿತಕರ ಅನುಭವವಾಯಿತು. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಳಜಿಯ ವಿಷಯವಾಗಿಲ್ಲ. ಬೆಂಗಳೂರಿಗೆ ಆದ್ಯತೆ ಕೊಡಲು ಇದೂ ಒಂದು ಮುಖ್ಯ ಕಾರಣ’ ಎಂದಿದ್ದಾರೆ.

ನಮಾಜ್ ಮಾಡುತ್ತಿದ್ದ ಪ್ಯಾಲೆಸ್ಟೀನಿಯನ್ ವ್ಯಕ್ತಿ ಮೇಲೆ ವಾಹನ ಹತ್ತಿಸಿದ ಇಸ್ರೇಲ್ ಸೈನಿಕ!; ವೈರಲ್‌ ವಿಡಿಯೊ ಇಲ್ಲಿದೆ

ನಮಾಜ್ ಮಾಡುತ್ತಿದ್ದ ವ್ಯಕ್ತಿ ಮೇಲೆ ವಾಹನ ಹತ್ತಿಸಿದ ಇಸ್ರೇಲ್ ಸೈನಿಕ!

viral video: ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯಿತು. ಇದೀಗ ಇಸ್ರೇಲ್ ಸೇನೆಯು ಇರಾನ್ ಬೆಂಬಲಿತ ಲೆಬನಾನ್‌ನ ಮೇಲೆ ಪ್ರತಿದಿನ ದಾಳಿ ನಡೆಸುತ್ತಿದೆ. ಲೆಬನಾನ್‌ನಲ್ಲಿರು ಉಗ್ರಗಾಮಿ ಗುಂಪು ಹೆಜ್ಬೊಲ್ಲಾದ ಪುನರ್‌ನಿರ್ಮಾಣವನ್ನು ತಡೆಯುವ ಪ್ರಯತ್ನ ಇದು ಎಂದು ಇಸ್ರೇಲ್‌ ಹೇಳಿದೆ.

ಯೋಜನೆ ಮಂಜೂರು ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ; ಗ್ರಾಮ ಪಂಚಾಯತ್‌ ಕಚೇರಿಗೆ ಬೆಂಕಿ ಹಚ್ಚಿಯೇ ಬಿಟ್ಟ ಭೂಪ

ಗ್ರಾಮ ಪಂಚಾಯತ್‌ ಕಚೇರಿಗೆ ಬೆಂಕಿ ಹಚ್ಚಿದ ಭೂಪ

ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯ ಮಂಗ್ರೋಲ್‌ ಗ್ರಾಮ ಪಂಚಾಯತ್‌ ಕಚೇರಿಯಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಸ್ಥಳೀಯ ನಿವಾಸಿ ಗೋಪಾಲ್‌ ಪೆಟ್ರೋಲ್‌ ಸುರಿದು ಪಂಚಾಯತ್‌ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ತಮ್ಮನ್ನು ಪಂಚಾಯತ್‌ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಗೋಪಾಲ್‌ ಈ ಕೃತ್ಯ ಎಸಗಿದ್ದಾನೆ. ಪ್ರಕರಣ ತಬಿಖೆ ನಡೆಯುತ್ತಿದೆ.

ಅದ್ದೂರಿ ಮದುವೆಗೆ ಬ್ರೇಕ್ ಹಾಕಿ ಅನಾಥ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ದಂಪತಿ; ನೆಟ್ಟಿಗರು ಭಾವುಕ

ಅದ್ಧೂರಿ ಮದುವೆ ಬದಲು ಅನಾಥ ಮಕ್ಕಳಿಗೆ ಆಸರೆಯಾದ ದಂಪತಿ

Viral Video: ಲಕ್ಷಾಂತರ ರುಪಾಯಿ ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವುದು ಸದ್ಯದ ಟ್ರೆಂಡ್. ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದು ಎಲ್ಲರಿಗೂ ಮಾದರಿಯಂತಿದೆ. ನವ ಜೋಡಿ ಅದ್ಧೂರಿ ಮದುವೆ ಆಚರಣೆಯ ಬದಲಿಗೆ 11 ಬಡ ಮತ್ತು ಅನಾಥ ಮಕ್ಕಳನ್ನು ದತ್ತು ಪಡೆಯುವ ಮೂಲಕ ಮೆಚ್ಚುಗೆ ಗಳಿಸಿದೆ.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್‌ ಎಳೆದೊಯ್ದ ಚಾಲಕ

ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನಿಂದ ಬುಲೆಟ್ ಸವಾರನಿಗೆ ಡಿಕ್ಕಿ

Viral Video: ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದ ವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ವೀಸಾ ಸಂದರ್ಶನಕ್ಕಾಗಿ ದಾಖಲೆ ಮರೆತ ಮಹಿಳೆಗೆ ನೆರವಾದ ಬ್ಲಿಂಕ್‌ಇಟ್‌; ಸಾಲಿನಲ್ಲಿ ನಿಂತಿದ್ದಾಗಲೇ ಸಿಕ್ತು ಪ್ರಿಂಟ್‌ಔಟ್‌

ದಾಖಲೆ ಮರೆತ ಮಹಿಳೆಗೆ ಪ್ರಿಂಟ್ಔಟ್‌ ತಲುಪಿಸಿದ ಬ್ಲಿಂಕಿಟ್

Viral News: ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ ಬಳಕೆ ಹೆಚ್ಚಾಗುತ್ತಿದೆ. ಈ ಅನ್‌ಲೈನ್ ಶಾಪಿಂಗ್‌ ತಾಣಗಳು ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಮಾಡುವುದಕ್ಕೆ ಸೀಮಿತವಾಗಿಲ್ಲ, ಕಷ್ಟದ ಸಮಯದಲ್ಲಿ ದಾಖಲೆಗಳನ್ನು ಒದಗಿಸುವ ಮೂಲಕವೂ ನೆರವಾಗುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಇತ್ತೀಚೆಗೆ ದಾಖೆಲೆ ಮರೆತು ಅಮೆರಿಕ ವೀಸಾದ ಸಂದರ್ಶನಕ್ಕೆ ತೆರಳಿದ ಮಹಿಳೆಗೆ ಅದರ ಪ್ರಿಂಟ್‌ಔಟ್‌ ಒದಗಿಸುವ ಮೂಲಕ ಬ್ಲಿಂಕ್‌ಇಟ್‌ ನೆರವಾಗಿದೆ.

Viral Video: ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು! ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ಪ್ರಧಾನಿ ಸ್ವಾಗತಿಸಲು ಅಳವಡಿಸಿದ್ದ ಹೂಕುಂಡ ಕದ್ದೊಯ್ದ ಜನ

ಉತ್ತರ ಪ್ರದೇಶದ ಲಖನೌ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಅಲಂಕಾರಕ್ಕಾಗಿ ರಸ್ತೆ ಬದಿ ಅಳವಡಿಸಿದ್ದ ಹೂ ಕುಂಡಗಳನ್ನು ಸಾರ್ವಜನಿಕರು ಕದ್ದೊಯ್ದ ಘಟನೆ ನಡೆದಿದ್ದು, ಈ ವಿಡಿಯೊ ವೈರಲ್‌ ಆಗಿದೆ. ನೂರಾರು ಅಲಂಕಾರಿಕ ಹೂವಿನ ಕುಂಡಗಳನ್ನು ರಸ್ತೆ ಬದಿ ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ಈ ಹೂವಿನ ಕುಂಡವನ್ನು ಮನೆಗೆ ಕದ್ದೊಯ್ದಿದ್ದಾರೆ.

ಹಿಂದೂಗಳ ಹತ್ಯೆಗೆ ಆಕ್ರೋಶ: ರಸ್ತೆ, ಸಾರ್ವಜನಿಕ ಶೌಚಾಲಯಕ್ಕೆ ಬಾಂಗ್ಲಾ ಧ್ವಜ ಅಂಟಿಸಿ ಪ್ರತಿಭಟನೆ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ!

ಬಾಂಗ್ಲಾದೇಶದಲ್ಲಿ ಹಿಂದೂ ಯುವ ನಾಯಕನಾದ ದೀಪು ಚಂದ್ರ ದಾಸ್ ಅವರನ್ನು ಕ್ರೂರವಾಹಿ ಹತ್ಯೆ ಮಾಡಲಾಗಿದ್ದು ಅದನ್ನು ಖಂಡಿಸಿ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಹತ್ಯೆ ಬಗ್ಗೆ ಕೋಪಗೊಂಡ ಯುವಕರ ತಂಡವು ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಮತ್ತು ಧ್ವಜಗಳನ್ನು ತುಳಿದ ಘಟನೆ ಛತ್ರಸಾಲ್ ಚೌಕದಲ್ಲಿ ನಡೆದಿದೆ. ಹತ್ಯೆ ಮಾಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯುವಕರ ತಂಡವು ಪ್ರತಿಭಟನೆ ನಡೆಸಿದೆ.‌

ಆಯುಷ್ಯ ಗಟ್ಟಿ ಇದ್ದರೆ ಯಮನೂ ಸುಮ್ಮನಾಗುತ್ತಾನೆ; ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ವ್ಯಕ್ತಿ

10ನೇ ಮಹಡಿಯಿಂದ ಬಿದ್ದ ವ್ಯಕ್ತಿ ಪವಾಡ ಸದೃಶವಾಗಿ ಪಾರು

Viral Video: ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ತನಗೆ ಅರಿವಿಲ್ಲದೆ ಅವರು ಬೀಳುತ್ತಿದ್ದಂತೆ 8ನೇ ಮಹಡಿಯ ಕಿಟಕಿಯ ಹೊರಗೆ ಅಳವ ಡಿಸಲಾದ ಲೋಹದ ಗ್ರಿಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೊ ವೈರಲ್ ಆಗಿದೆ.

ಮುಂಬೈ ತಂಡದಲ್ಲಿ ತದ್ರೂಪಿ ರೋಹಿತ್ ಶರ್ಮಾ ಕಂಡು ಆಶ್ಚರ್ಯಚಕಿತರಾದ ನೆಟ್ಟಿಗರು

ಮುಂಬೈ ತಂಡದಲ್ಲಿ ತದ್ರೂಪಿ ರೋಹಿತ್; ಯಾರು ಈ ಹಾರ್ದಿಕ್ ತಾಮೋರೆ?

Rohit Sharma's lookalike: 28 ವರ್ಷದ ಹಾರ್ದಿಕ್ ಜಿತೇಂದ್ರ ತಮೋರೆ ಮುಂಬೈ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದು, ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಟೋಬರ್ 20, 1997 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ ತಮೋರೆ, ಕಳೆದ ಕೆಲವು ಋತುಗಳಲ್ಲಿ ಮುಂಬೈನ ಎಲ್ಲಾ ಮಾದರಿಗಳ ಹಿರಿಯರ ತಂಡದ ಭಾಗವಾಗಿದ್ದಾರೆ.

ಶಾಂತವಾಗಿ ಕುಳಿತು ಭಜನೆಯಲ್ಲಿ ಮಗ್ನನಾದ ʼಡಾಗೇಶ್‌ ಭಾಯಿʼ: ಶ್ವಾನದ ಭಕ್ತಿಗೆ ನೆಟ್ಟಿಗರ ಬಹುಪರಾಕ್

ಭಜನೆಯನ್ನು ಆಲಿಸಿ ಎಲ್ಲರ ಮನಗೆದ್ದ ನಾಯಿ: ಕ್ಯೂಟ್ ವಿಡಿಯೊ ಇಲ್ಲಿದೆ

Viral Video: ಶ್ವಾನವೊಂದು ಭಕ್ತಿ ಮತ್ತು ಸಂಗೀತಕ್ಕೆ ಮನಸೋತಿದ್ದು ಶಾಂತವಾಗಿ ಕುಳಿತು ಭಜನೆಯನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸತ್ಸಂಗವೊಂದರಲ್ಲಿ ಮಹಿಳೆಯ ಪಕ್ಕದಲ್ಲಿ ಶ್ವಾನ ಕೂತಿದ್ದು ಭಜನೆಯನ್ನು ಭಾರಿ ಗಂಭೀರವಾಗಿ ಆಲಿಸುತ್ತಿರುವುದು ಕಂಡುಬಂದಿದೆ‌.‌ ಈ ಶ್ವಾನಕ್ಕೆ ನೆಟ್ಟಿಗರು ಡಾಗೇಶ್‌ ಎಂದು ಹೆಸರಿಟ್ಟಿದ್ದಾರೆ.

Men Will Be Men: ಬರ್ತ್‌ಡೇ ದಿನ ಮೊದಲು ಬೆಸ್ಟ್ ಫ್ರೆಂಡ್‌ಗೆ ಕೇಕ್ ತಿನ್ನಿಸಿದ ಪ್ರಿಯತಮೆ; ಕೋಪದಿಂದ ಎಲ್ಲವನ್ನೂ ಧ್ವಂಸ ಮಾಡಿದ ಪ್ರಿಯತಮ

ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸಿದ ಯುವತಿ: ಪ್ರಿಯತಮ ಕಿಡಿಕಿಡಿ

Viral Video: ಯುವಕನೊಬ್ಬ ತನ್ನ ಪ್ರಿಯತೆಮೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲು ಮುಂದಾಗಿದ್ದಾನೆ. ಬಣ್ಣ ಬಣ್ಣದ ಬಲೂನ್‌ಗಳು, ವಿದ್ಯುತ್ ಆಲಂಕಾರಗಳು ಹಾಗೂ ಕೇಕ್‌ನೊಂದಿಗೆ ಸತ್‌ಪ್ರೈಸ್‌ ನೀಡಿದ್ದಾನೆ. ಆದರೆ ಈ ಸಂಭ್ರಮದ ಮಧ್ಯೆ ನಡೆದ ಒಂದು ಘಟನೆ ಇಡೀ ಖುಷಿಯನ್ನೇ ಹಾಳು ಮಾಡಿದೆ. ಯುವತಿಯು ಕೇಕ್ ಕತ್ತರಿಸಿದ ನಂತರ, ತನ್ನ ಪಕ್ಕದಲ್ಲಿ ನಿಂತಿದ್ದ ಆತ್ಮೀಯ ಗೆಳೆಯನಿಗೆ ಮೊದಲು ಕೇಕ್‌ ಅನ್ನು ತಿನ್ನಿಸಿದ್ದು ಈ ಅನಾಹುತಕ್ಕೆ ಕಾರಣ.

ಚುಮುಚುಮು ಚಳಿಗೆ ಬಿಸಿಬಿಸಿ ಕಾಫಿ ಸಪ್ಲೈ ಮಾಡುವ ವಾಕಿಂಗ್ ಶಾಪ್: ಗಮನ ಸೆಳೆದ ಯುವಕನ ಹೊಸ ಐಡಿಯಾ

ವಾಕಿಂಗ್ ಕಾಫಿ ಶಾಪ್: ಯುವಕನ ಹೊಸ ಐಡಿಯಾ ವೈರಲ್‌

ಟೀ, ಕಾಫಿಗೆ ಅಡಿಕ್ಟ್ ಆಗಿರುವವರು ಅದನ್ನು ಪದೇ ಪದೆ ಸೇವಿಸುತ್ತಲೇ ಇರುತ್ತಾರೆ. ಅದರಲ್ಲೂ ಈ ಚಳಿ ವಾತಾವರಣಕ್ಕೆ ಬಿಸಿ ಬಿಸಿ ಪಾನೀಯ ಸಿಕ್ಕರೆ ಕೆಲವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ. ಆದರೆ ಕೆಲವೊಮ್ಮೆ ಟೀ ಅಥವಾ ಕಾಫಿ ಇಲ್ಲದೆ ತಲೆ ನೋವು ಉಂಟಾದಾಗ ಹತ್ತಿರದಲ್ಲಿ ಯಾವ ಅಂಗಡಿ ಇಲ್ಲದಾಗ ಉಂಟಾಗುವ ನಿರಾಸೆ ಹೇಳತೀರದು. ಇದಕ್ಕಿಗ ಹೊಸ ಐಡಿಯಾ ಒಂದನ್ನು ಯುವಕನೊಬ್ಬ ಕಂಡು ಹಿಡಿದಿದ್ದಾನೆ. ಓಡಾಡಿಕೊಂಡೆ ಕಾಫಿ ತಯಾರಿಸಿ ವಿತರಿಸುತ್ತಿದ್ದಾನೆ. ಆತ ತನ್ನ ಮೈತುಂಬ ಕಪ್‌ ಅಳವಡಿಸಿಕೊಂಡಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಗಂಟಲಿಗೆ ಪೆನ್ಸಿಲ್ ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು; ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ

ಯುಕೆಜಿ ವಿದ್ಯಾರ್ಥಿಯ ಬಲಿ ಪಡೆದ ಪೆನ್ಸಿಲ್‌

ಯುಕೆಜಿ ವಿದ್ಯಾರ್ಥಿಯು ಪೆನ್ಸಿಲ್‌ನಿಂದ ಅಕಾಲಿಕ ಮರಣ ಹೊಂದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಭವಿಷ್ಯದ ಕನಸು ಕಂಡು ಹೆತ್ತವರ ಕಣ್ಣೆದುರು ಬಾಳಿ ಬದುಕ ಬೇಕಿದ್ದ ಈ ಬಾಲಕನ ಸಾವು ಶಾಲಾ ಆಡಳಿತ ಮಂಡಳಿಗೆ, ಪೋಷಕರಿಗೆ ಆಘಾತ ತಂದಿದೆ.

ಮರವೇರಿ ಕೊಹ್ಲಿಯ ಶತಕ ಕಣ್ತುಂಬಿಕೊಂಡ ಅಭಿಮಾನಿ!

ಲಾರಿ, ಮರವೇರಿ ಕೊಹ್ಲಿಯ ಬ್ಯಾಟಿಂಗ್‌ ಕಣ್ತುಂಬಿಕೊಂಡ ಅಭಿಮಾನಿ!

Virat Kohli fans: ಮೈದಾನದ ಸುತ್ತ ಇರುವ ಎತ್ತರದ ಕಂಪೌಂಡ್‌ ಹಿಂದೆ ನಿಂತು ಇಣುಕಿದರು. ರಸ್ತೆ ಬದಿ ನಿಂತ ಲಾರಿ, ಮರಗಳನ್ನು ಹತ್ತಿ ಕೊಹ್ಲಿಯನ್ನು ನೋಡುವ ಸಾಹಸ ಮಾಡಿದರು. ಇದೆಲ್ಲದರ ನಡುವೆ ವಿರಾಟ್ ಶತಕ ದಾಖಲಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳ ಗಡಿ ದಾಟಿದ ಸಾಧನೆಯೂ ಮಾಡಿದರು.

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಯ ಮೇಲೆ ಪತ್ನಿಯಿಂದ ಹಲ್ಲೆ: ವಿಡಿಯೊ ವೈರಲ್

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಗೆ ಪತ್ನಿಯಿಂದ ಹಲ್ಲೆ

Viral Video: ವ್ಯಕ್ತಿಯೊಬ್ಬ ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿಯು ಪತಿ ಹಾಗೂ ಆತ ಮದುವೆ ಆಗಬೇಕಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಾಹೋರ್‌ನಲ್ಲಿ ನಡೆದಿದೆ. ಸಾಹೋರ್ ಕಲೆಕ್ಟರ್ ಕಚೇರಿಯಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬದವರು ಜಗಳ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

Loading...