ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಒಂದು ತಿಂಗಳಲ್ಲಿ ಹಿಂದಿ ಕಲಿಯಿರಿ, ಇಲ್ಲಾ ಅಂದ್ರೆ..; ಆಫ್ರಿಕಾ ಫುಟ್‌ಬಾಲ್‌ ಕೋಚ್‌ಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕಿ

ಆಫ್ರಿಕಾ ಫುಟ್‌ಬಾಲ್‌ ಕೋಚ್‌ಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕಿ

Viral Video: ಪತ್ಪರ್‌ಗಂಜ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ರೇಣು ಚೌಧರಿ ವಿವಾದವನ್ನು ಸೃಷ್ಟಿಸಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ವಿದೇಶಿ ಫುಟ್‌ಬಾಲ್ ತರಬೇತುದಾರರಿಗೆ ಒಂದು ತಿಂಗಳೊಳಗೆ ಹಿಂದಿ ಕಲಿಯಿರಿ ಎಂದು ಬೆದರಿಕೆ ಹಾಕಿದ್ದಾರೆ.

ತಮಿಳುನಾಡಿನಲ್ಲಿ ಕಾರ್ತಿಕ ದೀಪದ ವಿವಾದದ ಮಧ್ಯೆ ದರ್ಗಾದಲ್ಲಿ ಮೆರೆಯಿತು ಹಿಂದೂ, ಮುಸ್ಲಿಂ ಭಾವೈಕ್ಯತೆ

ದರ್ಗಾದಲ್ಲಿ ವಾದ್ಯ ನುಡಿಸಿದ ಹಿಂದೂ ಕಲಾವಿದರು

ಸಂತಾನಕೂಡು ಉತ್ಸವದಲ್ಲಿ ಧಾರ್ಮಿಕ ಸಾಮರಸ್ಯತೆ ಮೆರೆದಿರುವ ಘಟನೆ ವರದಿಯಾಗಿದೆ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುವ ಮೂಲಕ ವಿವಾದ ಬದಿಗೆ ಸರಿದು, ಸಾಮರಸ್ಯತೆ ಮೆರೆದಿದೆ. ಮಸೀದಿಯ ಪ್ರತಿನಿಧಿಗಳು ಧ್ವಜವನ್ನು ಮತ್ತು ಗಂಧದ ಲೇಪವನ್ನು ದರ್ಗಾಕ್ಕೆ ಕೊಂಡೊಯ್ಯುವ ಮೊದಲು, ಇಬ್ಬರು ಹಿಂದೂ ಕಲಾವಿದರ ತಂಡ ಮೃದಂಗ ಮತ್ತು ಥವಿಲ್ ನುಡಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಪಾಡಬೇಕಾದ ವೈದ್ಯನೇ ಕಾಡಿದ; ರೋಗಿಯ ಮೇಲೆ ಕೈ ಎತ್ತಿದ ಡಾಕ್ಟರ್: ವಿಡಿಯೊ ವೈರಲ್

ಬೆಡ್ ಮೇಲೆ ಮಲಗಿದ್ದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ

Viral Video: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರು ಆಸ್ಪತ್ರೆಯ ಬೆಡ್ ಮೇಲಿದ್ದ ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಿ ಆಸ್ಪತ್ರೆಯ ನವಜಾತ ಶಿಶು ಆರೈಕೆ ಘಟಕದಲ್ಲಿ ರಾಜಾರೋಷವಾಗಿ ಓಡಾಡಿದ ಇಲಿ: ಬೆಚ್ಚಿಬಿದ್ದ ನೆಟ್ಟಿಗರು

ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳ ಅಟ್ಟಹಾಸ: ನೆಟ್ಟಿಗರು ಕಿಡಿ

Viral Video: ಮಧ್ಯ ಪ್ರದೇಶದ ಈ ಸರ್ಕಾರಿ ಆಸ್ಪತ್ರೆ ಒಳ ಹೊಕ್ಕರೆ ಕಾಯಿಲೆಗೆ ಬೀಳದವರೂ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಲ್ಲಿನ ಆಸ್ಪತ್ರೆ ಜನರ ಸುರಕ್ಷತೆಯನ್ನು ಗಾಳಿಗೆ ತೂರಿದಂತಿದೆ. ಮಧ್ಯ ಪ್ರದೇಶದ ಸಾತ್ನಾ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಇಲಿಗಳು ಮುಕ್ತವಾಗಿ ರೋಗಿಗಳ ಮಧ್ಯೆಯೇ ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.‌ ಸದ್ಯ ಈ ವಿಡಿಯೊ‌ ಭಾರಿ ವೈರಲ್ ಆಗಿದೆ.

ಸಿಗರೇಟ್ ಖರೀದಿಸಲು ರೈಲ್ವೆ ಕ್ರಾಸಿಂಗ್‌ನಲ್ಲಿ 10 ನಿಮಿಷಗಳ ಕಾಲ ರೈಲು ನಿಲ್ಲಿಸಿದ ಲೋಕೋ ಪೈಲಟ್; ನೆಟ್ಟಿಗರು ಗರಂ

ಸಿಗರೇಟ್ ಖರೀದಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲಟ್

ರೈಲ್ವೆ ಕ್ರಾಸಿಂಗ್‌ನಲ್ಲಿ ಸಿಗರೇಟ್ ಖರೀದಿಸಲು ಲೋಕೋ ಪೈಲಟ್ 10 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿರುವ ಆರೋಪ ಕೇಳಿ ಬಂದಿದೆ. ಇದರಿಂದ ಜನನಿಬಿಡ ಲೆವೆಲ್ ಕ್ರಾಸಿಂಗ್‌ನಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ರೈಲು ನಿಲುಗಡೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹಾಡುತ್ತ, ಕುಣಿಯುತ್ತ ಭೋಪಾಲ್ ಮೆಟ್ರೋ ಸ್ವಾಗತಿಸಿದ ಹಿರಿಯ ನಾಗರಿಕರು; ವಿಡಿಯೊ ವೈರಲ್‌

ಜನಸಂದಣಿಯಿಂದ ತುಂಬಿದ ಭೋಪಾಲ್ ಮೆಟ್ರೋ ನಿಲ್ದಾಣ

Bhopal Metro: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲೂ ಮೆಟ್ರೋ ತನ್ನ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದ್ದು, ನಗರವಾಸಿಗಲ ಬಹು ದಿನಗಳ ಕನಸು ನನಸಾಗಿದೆ. ಮೊದಲ ದಿನವೇ ಮೆಟ್ರೋ ಸಂಚಾರಕ್ಕೆ ಸಾವಿರಾರು ಜನರು ಮುಗಿಬಿದ್ದಿದ್ದು, ಹಿರಿಯ ನಾಗರಿಕರು ಡ್ಯಾನ್ಸ್‌, ಮಾಡಿ ಹಾಡು ಹಾಡಿ ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ನಿಮಿಷ ತಡವಾಗಿ ಬಂದ ಮೇಯರ್‌ನನ್ನು ಬಿಟ್ಟು ಹೊರಟೇ ಬಿಟ್ಟ ರೈಲು: ಮೆಕ್ಸಿಕೋ ರೈಲ್ವೆ ಇಲಾಖೆಯ ಸಮಯ ಪಾಲನೆಗೆ ನೆಟ್ಟಿಗರು ಫಿದಾ

ಮೇಯರ್ ಬಾರದೇ ಇದ್ರೂ ಸಮಯಕ್ಕೆ ಸರಿಯಾಗಿ ಹೊರಟ ರೈಲು

Viral Video: ಸಾಮಾನ್ಯವಾಗಿ ಯಾರೇ ಅಧಿಕಾರಿ, ರಾಜಕೀಯದವರು ಬರುತ್ತಾರೆ ಅಂದಾಗ ಬಸ್ ಇರಲಿ, ಫ್ಲೈಟ್ ಇರಲಿ ಕಾದು ನಿಲ್ಲುವುದು ಇದೆ.‌ ಆದರೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಹಲವರನ್ನು ಅಚ್ಚರಿಗೆ ದೂಡಿದೆ. ಹೌದು, ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ಹೋಗಿದೆ.

ಬೆಂಗಳೂರಿನ ಪಾದಚಾರಿ ಮಾರ್ಗಗಳ ಸ್ಥಿತಿ ನೋಡಿ; ವಿಡಿಯೊ ಶೇರ್ ಮಾಡಿದ ಕೆನಡಾ ವ್ಯಕ್ತಿ ಹೇಳಿದ್ದೇನು?

ಬೆಂಗಳೂರಿನ ಪಾದಚಾರಿ ರಸ್ತೆಯ ಅವ್ಯವಸ್ಥೆ: ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

Viral Video: ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರೂ ಇಲ್ಲಿನ ಮೂಲ ಸೌಕರ್ಯಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶದಲ್ಲಿ ಒಂದಾದ ಇಂದಿರಾನಗರದ ಪಾದಚಾರಿ ಮಾರ್ಗಗಳ ಸಮಸ್ಯೆಯನ್ನು ಅವರು ಶೇರ್ ಮಾಡಿಕೊಂಡಿದ್ದು ಸದ್ಯ ಭಾರಿ ವೈರಲ್ ಆಗಿದೆ.

ಶಾಪಿಂಗ್ ಮಾಲೇ ಮಂಟಪ...ಪ್ರೇಯಸಿಗೆ ಪ್ರಪೋಸ್‌ ಮಾಡಿ ಇದ್ದಕ್ಕಿದ್ದಂತೆ ತಾಳಿ ಕಟ್ಟಿದ ಯುವಕ; ವಿಡಿಯೊ ಇಲ್ಲಿದೆ

ಶಾಪಿಂಗ್‌ ಮಾಲ್‌ನಲ್ಲೇ ಪ್ರೇಯಸಿಗೆ ತಾಳಿ ಕಟ್ಟಿ ಶಾಕ್ ನೀಡಿದ ಯುವಕ

Viral Video: ಇಲ್ಲೊಂದು ಜೋಡಿ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಶಾಪಿಂಗ್‌ ಮಾಲ್‌ನಲ್ಲಿ ಸರಳವಾಗಿ ವಿವಾಹವಾಗಿರುವ ಅಪರೂಪದ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಪ್ರೇಯಸಿಗೆ ಪ್ರಪೋಸ್‌ ಮಾಡಿದ ಯುವಕ ಆಕೆಯ ಹಣೆಗೆ ಸಿಂಧೂರ ಹಚ್ಚಿ ಬಳಿಕ ಮಂಗಳಸೂತ್ರ ಕಟ್ಟಿದ್ದಾನೆ. ಕ್ಷಣ ಮಾತ್ರದಲ್ಲಿ ನಡೆದ ನಡೆದ ಈ ಘಟನೆಗೆ ಪ್ರೇಯಸಿಯೇ ದಂಗಾಗಿದ್ದಾಳೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಅತಿಥಿ ದೇವೋ ಭವ: ಇದು ಕೇವಲ ಮಾತಲ್ಲ, ಭಾರತೀಯರ ಸಂಸ್ಕೃತಿ,  ಅಮೆರಿಕ  ಮಹಿಳೆ ಹೇಳಿದ್ದೇನು ನೋಡಿ!

ಭಾರತೀಯರ ಆತಿಥ್ಯದ ಬಗ್ಗೆ ವಿಡಿಯೊ ಮಾಡಿ ಭಾವುಕರಾದ ಅಮೇರಿಕಾದ ಮಹಿಳೆ!

Viral Video: ಅಮೇರಿಕ ಮೂಲದ ಪ್ರವಾಸಿಗರೊಬ್ಬರು ಭಾರತೀಯದ ಸಹೃದಯ, ಪ್ರೀತಿ, ಆತಿಥ್ಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ಮೂಲಕ ಭಾರತೀಯರೆಲ್ಲ ಒಂದೆ ತರನಾಗಿಲ್ಲ.. ಅತಿಥಿ ದೇವೋ ಭವ ಎಂಬ ಮಾತನ್ನು ಪಾಲಿಸುವವರು ಇದ್ದಾರೆ ಎಂಬುದನ್ನು ವಿಡಿಯೋ ಮೂಲಕ ಮಹಿಳೆಯು ತಿಳಿಸಿಕೊಟ್ಟಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ...

ನಾನು ಸ್ಫೋಟಿಸುವ ದಿನ…: ಅಹಮದಾಬಾದ್ ವಿಶ್ವವಿದ್ಯಾಲಯದಲ್ಲಿ ಕಳಪೆ ಫಾರ್ಮ್ ಬಗ್ಗೆ ಸೂರ್ಯಕುಮಾರ್ ಭಾಷಣ ವೈರಲ್

ಕಳಪೆ ಫಾರ್ಮ್ ಬಗ್ಗೆ ಸೂರ್ಯಕುಮಾರ್ ಭಾಷಣ ವೈರಲ್

Suryakumar Yadav: ತಮ್ಮ ಪ್ರದರ್ಶನದ ಬಗ್ಗೆ ಚರ್ಚೆಗಳು ಎದ್ದಿದ್ದರೂ, ಭಾರತೀಯ ನಾಯಕ ತಮ್ಮ ಮನಸ್ಥಿತಿ ಇನ್ನೂ ಸಕಾರಾತ್ಮಕವಾಗಿದೆ ಎಂದು ಸಮರ್ಥಿಸಿಕೊಂಡರು. "ನಾನು ತುಂಬಾ ಸಕಾರಾತ್ಮಕ. ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ" ಎಂದು ಸೂರ್ಯಕುಮಾರ್‌ ವಿದ್ಯಾರ್ಥಿ ಜೀವನಕ್ಕೆ ಸಮಾನಾಂತರವಾಗಿ ಮಾತನಾಡುವ ಮೊದಲು ಹೇಳಿದರು.

Viral Video: ರಷ್ಯಾಕ್ಕೆ ಬರುವವರೇ ಎಚ್ಚರ; ಉಕ್ರೇನ್‌ ವಶದಲ್ಲಿರುವ ಭಾರತೀಯ ಬಿಚ್ಚಿಟ್ಟ ಕರಾಳತೆ ಏನು?

ಉಕ್ರೇನ್ ಸೈನ್ಯಕ್ಕೆ ಸಿಕ್ಕಿಬಿದ್ದ ಭಾರತೀಯ ಯುವಕ ಹೇಳಿದ್ದೇನು?

Russian military: ಉಕ್ರೇನ್ ಸೇನೆಗೆ ಸಿಕ್ಕಿಬಿದ್ದ ಭಾರತೀಯ ಯುವಕ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬ ಯುವಕನ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ರಷ್ಯಾ ಸೇನೆಯಲ್ಲಿ ಸೇರುವಂತೆ ಒತ್ತಾಯಿಸುವ ವಂಚನೆಯ ಬಗ್ಗೆ ಜಾಗರೂಕರಾಗಿರುವಂತೆ ಭಾರತೀಯರನ್ನು ಅವರು ಎಚ್ಚರಿಸಿದ್ದಾರೆ.

ರಿಕ್ಷಾ ಚಾಲಕನಿಗೆ ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ; ಕಾರಣವೇನು?

ರಿಕ್ಷಾ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ

ಆಟೋರಿಕ್ಷಾ ಚಾಲಕನಿಗೆ ಬಿಜೆಪಿ ಶಾಸಕರೊಬ್ಬರು ಕಪಾಳಮೋಕ್ಷ ಮಾಡಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಂಬೈನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ರಿಕ್ಷಾ ಚಾಲಕನಿಗೆ ಬಿಜೆಪಿ ಶಾಸಕ ಪರಾಗ್ ಶಾ ಕಪಾಳಮೋಕ್ಷ ಮಾಡಿದ್ದು ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮದುವೆ ಆದ ಮೇಲೆ ಮಹಿಳೆ ಅಡುಗೆ ಮನೆಗೆ ಸೀಮಿತವಾಗಬೇಕೆ? ಟಾಕ್ಸಿಕ್ ಆರೇಂಜ್ಡ್ ಮ್ಯಾರೇಜ್‌ ಬಗ್ಗೆ ಮಹಿಳೆಯ ಮಾತು ವೈರಲ್; ನೆಟ್ಟಿಗರು ಹೇಳಿದ್ದೇನು?

ಟಾಕ್ಸಿಕ್ ಆರೇಂಜ್ಡ್ ಮ್ಯಾರೇಜ್‌ ಬಗ್ಗೆ ಮಹಿಳೆ ಹೇಳಿದ್ದೇನು?

ಆರೇಂಜ್ಡ್ ಮದುವೆಯಿಂದ ತಾವು ಅನುಭವಿಸಿದ ತೊಂದರೆಗಳ ಬಗ್ಗೆ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ವ್ಯವಸ್ಥೆ, ಸಂಬಂಧಗಳಲ್ಲಿನ ಒತ್ತಡದ ಬಗ್ಗೆ ಚರ್ಚೆಗೆ ಕಾರಣವಾಗಿವೆ. ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಎತ್ತಿನ ಬಂಡಿ ಏರಿ ಭಾರತೀಯ ಗ್ರಾಮೀಣ ವೈಭವ, ಸಂಸ್ಕೃತಿ ಕಣ್ತುಂಬಿಕೊಂಡ ವಿದೇಶಿ ಪ್ರವಾಸಿಗರು

ಎತ್ತಿನ ಬಂಡಿ ಏರಿ ಭಾರತೀಯ ಸಂಸ್ಕೃತಿ ಕಣ್ತುಂಬಿಕೊಂಡ ದೇಶಿ ಪ್ರವಾಸಿಗರು

ಗ್ರಾಮೀಣ ಜೀವನ ಶೈಲಿಗೆ ಮನಸೋತ ವಿದೇಶಿ ಪ್ರವಾಸಿಗರು ಹಳ್ಳಿಯ ಜೀವನವನ್ನು ಅನುಭವಿಸಲು‌ ಸಾಂಪ್ರದಾಯಿಕ ಎತ್ತಿನ ಬಂಡಿ ಏರಿದ ಘಟನೆಯೊಂದು ನಡೆದಿದೆ. ಈ ‌ಅಪ ರೂಪದ ದೃಶ್ಯ ಮಧ್ಯ ಪ್ರದೇಶದ ವಿಶ್ವವಿಖ್ಯಾತ ಪ್ರವಾಸಿ ತಾಣ ಖಜುರಾಹೊದಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನವದಂಪತಿ ರೈಲಿನಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌; ಘಟನೆಗೂ ಮುನ್ನ ಜಗಳವಾಡಿದ ವಿಡಿಯೊ ವೈರಲ್

ರೈಲಿನಿಂದ ಜಿಗಿಯುವ ಮುನ್ನ ಜಗಳವಾಡಿದ ನವದಂಪತಿ

Viral Video: ಆಂಧ್ರ ಪ್ರದೇಶ ಮೂಲದ, ಹೊಸದಾಗಿ ಮದುವೆಯಾದ ಜೋಡಿವೊಂದು ರೈಲಿನಿಂದ ಜಿಗಿದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ನವ ವಿವಾಹಿತ ದಂಪತಿ ಜಗಳವಾಡಿ ಚಲಿಸುವ ರೈಲಿನಿಂದ ಹಾರಿ ಪ್ರಾಣವೇ ಕಳೆದುಕೊಂಡಿದ್ದಾರೆ.‌ ಸದ್ಯ ಅವರಿಬ್ಬರು ಸಾಯುವ ಮೊದಲು ಜಗಳ ವಾಡಿಕೊಂಡಿರುವ ದೃಶ್ಯ ವೈರಲ್ ಆಗಿದೆ.

ಕುಸ್ತಿ ಪಂದ್ಯಕ್ಕೆ ಪತ್ರಕರ್ತನನ್ನು ಆಹ್ವಾನಿಸಿದ ಯೋಗ ಗುರು ಬಾಬಾ ರಾಮ್‌ದೇವ್; ಆಮೇಲಾಗಿದ್ದೇನು? ಇಲ್ಲಿದೆ ವಿಡಿಯೊ

ಕುಸ್ತಿ ಪಂದ್ಯಕ್ಕೆ ಪತ್ರಕರ್ತನಿಗೆ ಸವಾಲು ಹಾಕಿದ ಬಾಬಾ ರಾಮ್‌ದೇವ್

Yoga guru Baba Ramdev: ಯೋಗ ಗುರು ಬಾಬಾ ರಾಮ್‌ದೇವ್ ಮತ್ತೊಮ್ಮೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಪತ್ರಕರ್ತರೊಬ್ಬರಿಗೆ ಕುಸ್ತಿ ಪಂದ್ಯಕ್ಕೆ ಸವಾಲು ಹಾಕಿರುವ ಅವರ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನೆಟ್ಟಿಗರು ಮಜವಾದ ಪ್ರತಿಕ್ರಿಯೆ ನೀಡಿದ್ದಾರೆ.

ಕಿಂಡು ಏರ್‌ಪೋರ್ಟ್‌ನಲ್ಲಿ ಮೂಲ ಸೌಕರ್ಯದ ಕೊರತೆ: ವಿಮಾನದಿಂದ ಜಿಗಿದ ಪ್ರಯಾಣಿಕರು

ಏರ್‌ಪೋರ್ಟ್‌ನಲ್ಲಿ ಭಾರೀ ಅವ್ಯವಸ್ಥೆ: ವಿಮಾನದಿಂದ ಜಿಗಿದ ಪ್ರಯಾಣಿಕರು

ಡೆಮಾಕ್ರಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದ ಕಿಂಡು ಏರ್‌ಪೋರ್ಟ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆಯಿತು. ಏರ್ ಕಾಂಗೋ ಫ್ಲೈಟ್‌ನಿಂದ ಪ್ರಯಾಣಿಕರು ಜಿಗಿದಿರುವ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಪೈಲಟ್ ಅಪ್ಪನಿಗೆ 8 ತಿಂಗಳ ಮಗನೇ ಕೋ ಪೈಲಟ್‌; ಕ್ಯೂಟ್‌ ವಿಡಿಯೊ ನೀವೂ ನೋಡಿ

ಪೈಲಟ್ ತಂದೆಯ ವಿಮಾನದಲ್ಲಿ 8 ತಿಂಗಳ ಮಗು ಪಯಣ ಹೇಗಿತ್ತು?

Viral Video: ಪೈಲಟ್ ಒಬ್ಬರು ತನ್ನ 8 ತಿಂಗಳ ಮಗನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದ ಘಟನೆಯ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅವರು ಕಾಕ್‌ ಪಿಟ್‌ಗೆ ಮಗುವನ್ನು ಕರೆದೊಯ್ದಿದ್ದು, ಕುತೂಹಲದಿಂದ ವೀಕ್ಷಿಸಿದೆ.

ಅಯ್ಯೊಯ್ಯೋ ಸೇತುವೆ ಮೇಲಿಂದ ಫುಲ್‌ ಅಪ್‌ ಮಾಡಿ ಹುಚ್ಚಾಟ ಮೆರೆದ ವ್ಯಕ್ತಿ; ಡೇಂಜರಸ್‌ ವಿಡಿಯೋ ವೈರಲ್‌

ಜನನಿಬಿಡ ಹೆದ್ದಾರಿಯ ಸೇತುವೆಯಲ್ಲಿ ಪುಲ್-ಅಪ್ ಪ್ರದರ್ಶಿಸಿದ ವ್ಯಕ್ತಿ

Man performs pull-ups: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಬೇಕು ಅನ್ನೋ ಉದ್ದೇಶದಿಂದ ಕೆಲವರು ಅಪಾಯಕಾರಿ ಸಾಹಸವನ್ನು ಕೈಗೊಳ್ಳುತ್ತಾರೆ. ಇದರಿಂದ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ವ್ಯಕ್ತಿಯೊಬ್ಬ ಹೆದ್ದಾರಿಯ ಸೇತುವೆಯ ತುದಿಯಲ್ಲಿ ನಿಂತುಕೊಂಡು ಪುಲ್-ಅಪ್ ಪ್ರದರ್ಶಿಸಿದ್ದಾನೆ.

ವಿಶ್ವದ ಅತ್ಯಂತ ಶೀತದ ವಾತಾವರಣ ಇರುವ ಸ್ಥಳ ಯಾವುದು ಗೊತ್ತಾ? ಈ ವಿಡಿಯೋ ನೋಡಿ

ಪ್ರಪಂಚದ ಅತ್ಯಂತ ಕೋಲ್ಡೆಸ್ಟ್ ಸ್ಥಳ ಯಾವುದು ಗೊತ್ತಾ?

Viral Video: ರಷ್ಯಾದ ನಗರವೊಂದರಲ್ಲಿ ಚಳಿಯಲ್ಲಿ ನಿತ್ಯ ಜೀವನ ಕಷ್ಟಕರವಾಗಿದ್ದು ಈ ಬಗ್ಗೆ ಇತ್ತೀಚೆಗಷ್ಟೇ ವಿಡಿಯೋ ಒಂದು ವೈರಲ್ (Viral Video) ಆಗಿದೆ. ಈ ಪ್ರದೇಶವನ್ನು ಭೂಮಿಯ ಮೇಲಿನ ಅತ್ಯಂತ ಶೀತಲ ವಾತಾವರಣ ಇರುವ ಪ್ರದೇಶ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಜನರ ಪರಿಸ್ಥಿತಿ ಯನ್ನು ಚಳಿಗಾಲದಲ್ಲಿ ನಮಗೆ ಊಹಿಸಲು ಸಾಧ್ಯವಿಲ್ಲದ ಮಟ್ಟಿಗೆ ಭೀಕರವಾಗಿರುತ್ತದೆ ಎನ್ನಲು ಈ ವಿಡಿಯೋ ಸಾಕ್ಷಿಯಾಗಿದೆ.

ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ ಹೇಳಿದ್ದೇನು?

ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ ಹೇಳಿದ್ದೇನು?

NRI Women: ಕೆನಡಾದಲ್ಲಿ ನೆಲೆಸಿದ್ದ ಎನ್‌ಆರ್‌ಐ ಮಹಿಳೆಯೊಬ್ಬರು ಭಾರತಕ್ಕೆ ಮರಳಿದ ನಂತರ ತಮ್ಮ ಜೀವನದಲ್ಲಿ ಸಂಭವಿಸಿದ ಬದಲಾವಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತಕ್ಕೆ ವಾಪಸಾದುದು ಕೇವಲ ಸ್ಥಳಾಂತರವಲ್ಲ, ಬದಲಾಗಿ ಬದುಕಿನ ದೃಷ್ಠಿಕೋನವನ್ನೇ ಬದಲಿಸಿದ ಅನುಭವ ಎಂದು ಅವರು ವಿವರಿಸಿದ್ದಾರೆ.

ನ್ಯಾಯಾಧೀಶರ ನಿವಾಸದ ಎದುರೇ ಶ್ವಾನವನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ; ಆಘಾತಕಾರಿ ಕೃತ್ಯದ ವಿಡಿಯೊ ವೈರಲ್

ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ಜಡ್ಜ್ ಭದ್ರತಾ ಸಿಬ್ಬಂದಿ

ನ್ಯಾಯಾಧೀಶರ ನಿವಾಸದ ಎದುರೇ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್‌ ಭಾರಿ ಚರ್ಚೆಗೆ ಕಾರಣವಾಗಿದೆ. ನ್ಯಾಯಾಧೀಶರ ಮನೆಯ ಬಳಿಯ ನೆಲಕ್ಕೆ ಹೊಸದಾಗಿ ಕಾಂಕ್ರೀಟ್‌ ಹಾಕಲಾಗಿದ್ದು, ಅದರ ಮೇಲೆ ಹೆಜ್ಜೆ ಹಾಕಿದ ಶ್ವಾನಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪುಟಿನ್ ಜತೆಗಿನ ಪ್ರಧಾನಿ ಮೋದಿ ಫೋಟೊಗೆ ಜನರ ಬಹುಪರಾಕ್; ಎಕ್ಸ್‌ನ ಅತಿ ಹೆಚ್ಚು ಇಷ್ಟವಾದ ಪೋಸ್ಟ್ ಇದು

ಪುಟಿನ್ ಜತೆಗಿನ ಪ್ರಧಾನಿ ಮೋದಿ ಫೋಟೊಗೆ ಬಹುಪರಾಕ್

People admire Modi’s photo with Putin: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರ ಫೋಟೊ ಪೋಸ್ಟ್ ಆದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ಬಂದಿದೆ. ಈ ಪೋಸ್ಟ್‌ ಅನ್ನು ನೆಟ್ಟಿಗರು ರೀಪೋಸ್ಟ್‌, ಶೇರ್, ಲೈಕ್‌ ಮಾಡಿದ್ದಾರೆ.

Loading...