ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಪಾಠ ಮಾಡಿ ಎಂದರೆ ಡ್ಯಾಮ್‌ನಲ್ಲಿ ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ; ಸ್ವಿಮ್ಮಿಂಗ್‌ ವಿಡಿಯೊ ವೈರಲ್‌

ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ

Viral Video: ರಾಜಸ್ಥಾನದ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರ ಜತೆ ಅಣೆಕಟ್ಟಿನಲ್ಲಿ ಈಜಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯ ವಿಡಿಯೊ ವೈರಲ್‌ ಆಗಿದೆ. ಘಟನೆಯ ಬಳಿಕ ಅವರನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪ್ರಾಂಶುಪಾಲರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಟ್ಟದ ಅಂಚಿನಲ್ಲಿ ನಿಂತ ಮಗ ಈಚೆ ಬರುವಂತೆ ಕೈ ಮುಗಿದು ಬೇಡಿದ ತಾಯಿ; ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ ಮೂವರು ಪ್ರತಾಪಕ್ಕೆ ಬಿದ್ದು ಬಲಿಯಾಗುವ ಮುನ್ನ ಆಗಿದ್ದೇನು? ಇಲ್ಲಿದೆ ಇಂಚಿಂಚು ಮಾಹಿತಿ

ಐಫೋನ್ EMI ಜಗಳ; ಒಂದೇ ಕುಟುಂಬದ ಮೂವರ ದಾರುಣ ಸಾವು

Maharashtra Tragedy: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ EMI ಪಾವತಿ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದ ಬಳಿಕ 19 ವರ್ಷದ ಮಗ ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ತಂದೆ-ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದು, ಕೆಲವೇ ಕ್ಷಣಗಳ ಬಳಿಕ ತಾಯಿಯೂ ಸಾವನ್ನಪ್ಪಿದ್ದಾರೆ.

19 ಭಾಷೆಗಳಲ್ಲಿ ಮಾತನಾಡಿ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ ರೈಲು ವ್ಯಾಪಾರಿ: ವಿಡಿಯೊ ನೋಡಿ

ರೈಲಿನಲ್ಲಿ 19 ಭಾಷೆ ನಿರರ್ಗಳವಾಗಿ ಮಾತನಾಡಿದ ವ್ಯಾಪಾರಿ: ಪ್ರಯಾಣಿಕರು ಫಿದಾ

Viral Video: ನಮ್ಮಲ್ಲಿ ಕ್ರಿಯಾತ್ಮಕ ಕಲೆ ಇದ್ದರೆ ಎಲ್ಲೂ ಹೋಗಿಯೂ ಬದುಕಬಹುದು ಅನ್ನುವುದನ್ನು ಇಲ್ಲೊಬ್ಬ ವ್ಯಾಪಾರಿ ತೋರಿಸಿಕೊಟ್ಟಿದ್ದಾರೆ. ರೈಲಿನಲ್ಲಿ ಅಗತ್ಯ ವಸ್ತುವನ್ನು ಮಾರಾಟ ಮಾಡುವ ವ್ಯಾಪಾರಿ ಸುಮಾರು 19 ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದಾರೆ. ಇವರ ಭಾಷೆಯ ಜ್ಞಾನ ತಿಳಿದು ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನ ಮೂಲದ ವ್ಯಾಪಾರಿ ಗಮನ ಸೆಳೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ: ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸಿದ ಚಾಲಕ!

ಮರಾಠಿ ಭಾಷೆ ಕಡ್ಡಾಯಕ್ಕೆ ಬೇಸೆತ್ತು ಆಟೋವನ್ನು ರೈಲಿಗೆ ತಳ್ಳಿದ ಚಾಲಕ

Viral Video: ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಹೊರ ರಾಜ್ಯದ ಚಾಲಕನೋರ್ವ ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರ್‌ಟಿಒ ಫ್ಲೈಯಿಂಗ್ ಸ್ಕ್ವಾಡ್‌ಗಳು ಇತ್ತೀಚೆಗೆ ಮುಂಬೈನಾದ್ಯಂತ 1,430 ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಪರಿಶೀಲಿಸಿದೆ.

ಅತ್ತೆಯೊಂದಿಗೆ ಇರಲು ಒಪ್ಪದ ಯುವತಿ: ಹುಡುಗನ ತಾಯಿಯ ಜವಾಬ್ದಾರಿ ತನ್ನದಲ್ಲ ಎಂದು ಮದುವೆ ಪ್ರಸ್ತಾವ ತಿರಸ್ಕಾರ!

ವೃದ್ಧ ತಾಯಿ ಹೊರೆ ಎಂದು ಮದುವೆ ಪ್ರಸ್ತಾವ ಕ್ಯಾನ್ಸಲ್ ಮಾಡಿದ ಯುವತಿ

Viral News: ಯುವತಿಯೊಬ್ಬಳು ಮದುವೆ ನಂತರ ಯುವಕನ ವೃದ್ಧ ತಾಯಿ ತಮ್ಮೊಂದಿಗೆ ವಾಸವಾಗಲಿದ್ದಾರೆ ಎನ್ನುವ ಕಾರಣಕ್ಕೆ ಮದುವೆ ಪ್ರಸ್ತಾಪವನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ತನಗೆ ಮದುವೆಯ ನಂತರ ಈ ಜವಾಬ್ದಾರಿ ತೆಗೆದುಕೊಳ್ಳಲು ಸಾದ್ಯವಿಲ್ಲ ಎಂದು ಯುವಕನ ಮುಂದೆಯೇ ಕಟುವಾಗಿ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲವರು ಯುವತಿಯ ನಿರ್ಧಾರ ಸರಿಯಾಗಿದೆ ಎಂದರೆ ಇನ್ನು ಕೆಲವರು ಟೀಕಿಸಿದ್ದಾರೆ.

ಮದುವೆ ಶಾಸ್ತ್ರ ಅರ್ಧಕ್ಕೆ ನಿಲ್ಲಿಸಿ ಕುಸಿದ ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಮದುಮಗಳು! ವೈದ್ಯರು ಯಾವತ್ತಿದ್ದರೂ ವೈದ್ಯರೇ

ಮೊದಲು ವೈದ್ಯೆ, ನಂತರ ಮದುಮಗಳು: ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಧು

Viral News: ವೈದ್ಯೆಯೊಬ್ಬರು ಜೀವನದ ಮುಖ್ಯ ಕ್ಷಣದಲ್ಲೂ ಕರ್ತವ್ಯ ಮರೆಯದೆ ಚಿಕಿತ್ಸೆ ನೀಡಲು ಮುಂದಾದ ಘಟನೆ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಕೇರಳಂನ ವಧುವೊಬ್ಬರು ಮದುವೆ ಮಂಟಪದಲ್ಲಿ ಇದ್ದಾಗಲೇ ಅಡುಗೆ ಸಿಬ್ಬಂದಿಯೊಬ್ಬರು ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಮದುವೆ ಎನ್ನುವುದನ್ನೂ ಲೆಕ್ಕಿಸದೇ ವಧು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದೆ.

ಕಂಟೆಂಟ್ ಕ್ರಿಯೇಟರ್‌ಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್: 10,000 ರೂ. ಪ್ರೋತ್ಸಾಹಧನ ಘೋಷಣೆ! ಷರತ್ತೇನು?

ಕಂಟೆಂಟ್ ಕ್ರಿಯೇಟರ್‌ಗಳಿಗೆ 10,000 ರೂ. ಪ್ರೋತ್ಸಾಹಧನ ಘೋಷಿಸಿದ ಸರ್ಕಾರ!

Viral News: ಸೋಷಿಯಲ್ ಮೀಡಿಯಾ ಕ್ರಿಯೇಟರ್ ಗಳಿಗೆ ಬಿಹಾರ ಸರಕಾರವು ಗುಡ್ ನ್ಯೂಸ್ ವೊಂದನ್ನು ನೀಡಿದೆ. ಸರಕಾರದ ಯೋಜನೆಗಳನ್ನು ಪ್ರಸಾರ ಮಾಡುವ ಕಂಟೆಟ್ ಕ್ರಿಯೇಟರ್ ಗೆ ಹತ್ತು ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷನೆ ಮಾಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಾವು ಬಿಹಾರ ಶಿಪ್ಟ್ ಆಗುವುದಾಗಿ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ತ್ಯಾಜ್ಯದಿಂದಲೇ ವ್ಯವಹಾರ: 13 ರೂಪಾಯಿಗೆ ಪ್ಲಾಸ್ಟಿಕ್ ಖರೀದಿಸಿ ತಿಂಗಳಿಗೆ 40 ಲಕ್ಷ ಸಂಪಾದಿಸುವ ಉದ್ಯಮಿ!

ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಲಕ್ಷ- ಲಕ್ಷ ಸಂಪಾದಿಸುವ ಉದ್ಯಮಿ

Viral News: ಪ್ಲಾಸ್ಟಿಕ್ ಬಳಕೆ ಕೆಲವೆಡೆ ನಿಷೇಧ ಮಾಡಲಾಗಿದೆ. ಆದರೆ ಇಲ್ಲೊಬ್ಬರು ಅದೇ ಹಳೆಯ ಪ್ಲಾಸ್ಟಿಕ್ ಮತ್ತು ಕಸ ತ್ಯಾಜ್ಯ ಉಪಯೋಗಿಸಿ ಲಕ್ಷಾಂತರ ರೂಪಾಯಿಸಂಪಾದನೆ ಮಾಡುತ್ತಿದ್ದಾರೆ. ಕೆಜಿಗೆ 13 ರೂ.ಗೆ ಬಿಸಾಕುವ ಪ್ಲಾಸ್ಟಿಕ್ ಖರೀದಿಸಿ ಅದನ್ನು ಮಾಸಿಕ 40 ಲಕ್ಷ ರೂ.ಗಳ ವ್ಯವಹಾರವನ್ನಾಗಿ ಮಾಡುತ್ತಿದ್ದಾರೆ. ಅದನ್ನು ಸಂಸ್ಕರಿಸಿ ಲಾಭ ಗಳಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.

ಕಾರ್‌ಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ: ಪೋಷಕರ ನಿರ್ಲಕ್ಷ್ಯದ ವಿರುದ್ಧ ಕಿಡಿ!

ಮಗುವಿದ್ದ ಕಾರಿಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ!

Viral News: 15 ವರ್ಷದ ಬಾಲಕನು ಕಾರು ಚಲಾಯಿಸಿದ್ದು ಮತ್ತೊಂದು ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಸಾಕಷ್ಟು ಹಾನಿಯಾಗಿದೆ. ಆದರೆ ಇದರಲ್ಲಿ ಇನ್ನೊಂದು ಆತಂಕಕಾರಿಯಾದ ಸಂಗತಿಯೆಂದರೆ, ಡಿಕ್ಕಿ ಹೊಡೆದ ಕಾರಿನೊಳಗೆ ಮಗುವೊಂದು ಇತ್ತು ಎನ್ನಲಾಗಿದೆ.

ಪಾಠ ಬಿಟ್ಟು ಒಟ್ಟಾಗಿ ಸಮಯ ಕಳೆಯುತ್ತಿದ್ದ ಶಿಕ್ಷಕರು: ವಿದ್ಯಾರ್ಥಿಗಳ ದೂರಿನ ಮೇರೆಗೆ ವರ್ಗಾವಣೆ!

ಕ್ಲಾಸ್ ಬಿಟ್ಟು ಶಿಕ್ಷಕರ ಕಾಲಹರಣ: ಮಕ್ಕಳಿಂದ ಜಿಲ್ಲಾಧಿಕಾರಿಗೆ ದೂರು!

Viral Video: ಇತ್ತೀಚೆಗೆ ಶಿಕ್ಷಕರೇ ತರಗತಿಕೋಣೆಯೊಳಗೆ ಕಾಲಹರಣ ಮಾಡುವ ಅನೇಕ ಘಟನೆಗಳು ನಡೆದಿವೆ. ಇದೀಗ ಚಿಂದ್ವಾರದ ಸರ್ಕಾರಿ ಮಧ್ಯಮ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಮತ್ತೊಬ್ಬ ಶಿಕ್ಷಕಿ ತರಗತಿಗಳನ್ನು ಬೇಗನೆ ಮುಗಿಸಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಮಕ್ಕಳೇ ಆರೋಪ ಮಾಡಿದ್ದಾರೆ.

ಹರಿದ್ವಾರ ಮೇಳದಲ್ಲಿ ಭಿಕ್ಷುಕನಾದ ಯುಟ್ಯೂಬರ್: 8 ಗಂಟೆಯಲ್ಲಿ ಗಳಿಸಿದ ಹಣವೆಷ್ಟು ಗೊತ್ತೆ?

ಭಿಕ್ಷುಕನ ವೇಷ ಧರಿಸಿ ಕೇವಲ 8 ಗಂಟೆಯಲ್ಲಿ 4,000 ರೂ ಗಳಿಸಿದ ಯುಟ್ಯೂಬರ್!

Viral News: ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಬಿಕ್ಷಾಟನೆ ಮೂಲಕ ಎಷ್ಟು ಹಣ ಗಳಿಸಬಹುದೆಂದು ತಿಳಿಯಲು ತನ್ನ ಸ್ನೇಹಿತನಿಗೆ ಭಿಕ್ಷುಕನ ವೇಷ ಧರಿಸಿ ಕೂರಿಸಿದ್ದಾರೆ. ಪ್ರಸಿದ್ದ ಕಾವಡ್ ಮೇಳದಲ್ಲಿ ಭಕ್ತರಿಂದ ಭಿಕ್ಷೆ ಬೇಡಿದ್ದು ಗಳಿಸಿದ ಹಣಕಂಡು ಅವರೇ ಅಚ್ಚರಿಗೆ ಒಳಗಾಗಿದ್ದಾರೆ. ಆರಂಭದಲ್ಲಿ, ದಿನದ ಅಂತ್ಯದ ವೇಳೆಗೆ 1,000 ರಿಂದ 2,000 ರೂ.ಗಳ ನಡುವೆ ಸಂಗ್ರಹಿಸಬಹುದು ಎಂದು ಅವರು ನಂಬಿದ್ದರು. ಆದರೆ ಕೇವಲ ಏಂಟು ಗಂಟೆಯಲ್ಲಿ ನಾಲ್ಕು ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟಿದ ರಸ್ತೆ ವ್ಯವಸ್ಥೆ: ಗುಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ!

ರಸ್ತೆಯಲ್ಲಿ ಪ್ರಯಾಣಿಸುವಾಗ ಗುಂಡಿಗೆ ಬಿದ್ದ ಬೈಕ್ ಸವಾರ: ಅಪಾಯದಿಂದ ಪಾರು

Viral News: ಬೆಂಗಳೂರಿನ ಗುಂಜೂರು ಬಳಿ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿದ್ದಾಗ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಅವರು ರಸ್ತೆಗೆ ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ವಾಟರ್ ಟ್ಯಾಂಕರ್ ಬೈಕ್ ಮೇಲೆಯೇ ಹರಿದಿದೆ. ತಕ್ಷಣವೇ ಅವರು ಪಕ್ಕಕ್ಕೆ ಬಂದಿರುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸದ್ಯ ಈ ಅಘಾತಕಾರಿ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸೇನಾ ಸಿಬ್ಬಂದಿ ಜತೆ ವಾಗ್ವಾದ: ಸಾರ್ವಜನಿಕರ ಟೀಕೆ ಬೆನ್ನಲ್ಲೇ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ ಜೆನ್ ಝೀ ಯುವತಿ!

ಸೇನಾ ಸಿಬ್ಬಂದಿ ಜೊತೆ ಕಿರಿಕ್‌; ಟೀಕೆ ಬೆನ್ನಲ್ಲೇ ಕ್ಷಮೆ ಕೇಳಿದ ಯುವತಿ

Viral News: ಜೆನ್ ಝೀ ಯುವತಿ ಒಬ್ಬಳು ಸೇನಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದು ಆಕೆಯ ನಡವಳಿಕೆ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಲಡಾಖ್‌ನ ಚೆಕ್‌ ಪಾಯಿಂಟ್‌ ನಲ್ಲಿ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರನ್ನು ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎನ್ನುವ ಕಾರಣಕ್ಕೆ ಯುವತಿ ಆಕ್ರೋಶಗೊಂಡಿದ್ದಳು. ಇದರ ಬೆನ್ನಲ್ಲೇ ಆಕೆ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ್ದಾರೆ. ನಾನು ಭಾರತೀಯ ಸೇನೆಯನ್ನು ತುಂಬಾ ಗೌರವಿಸುತ್ತೇನೆ..ತೀವ್ರ ಒತ್ತಡದಿಂದ ಆ ರೀತಿಯಾಗಿ ವರ್ತಿಸಿದೆ ಎಂದು ಕ್ಷಮೆ ಕೇಳಿದ್ದಾರೆ.

ಲಿಫ್ಟ್‌ ದಿಢೀರ್ ಚಲಿಸಿ ಮಹಿಳೆ ಸಾವು: ಮಗಳು, ಮೊಮ್ಮಗನ ಕಣ್ಣೆದುರೇ ದುರಂತ; ವಿಡಿಯೊ ವೈರಲ್‌

ಲಿಫ್ಟ್‌ನ ಬಾಗಿಲಿಗೆ ಸಿಲುಕಿ ಮಹಿಳೆ ಸಾವು; ವಿಡಿಯೊ ವೈರಲ್‌

Viral Video: ಆಂಧ್ರ ಪ್ರದೇಶದ ಒಂಗೋಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬಾಗಿಲು ತೆರೆದಿದ್ದಾಗಲೇ ಲಿಫ್ಟ್‌ ಏಕಾಏಕಿ ಚಲಿಸಿದ ಪರಿಣಾಮ ವನಿತಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮಗಳು ಮತ್ತು ಮೊಮ್ಮಗ ಲಿಫ್ಟ್‌ನಿಂದ ಹೊರಬಂದ ಬಳಿಕ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಡೆಲಿವರಿ ಸಿಬ್ಬಂದಿಯ ಕಷ್ಟ ಅರಿಯಲು ಬೆಂಗಳೂರಿನಲ್ಲಿ ರ‍್ಯಾಪಿಡೋ ಓಡಿಸಿದ ವಿದ್ಯಾರ್ಥಿ: ಗಿಗ್ ಕಾರ್ಮಿಕರು ಎದುರಿಸುವ ಸವಾಲು ಬಿಚ್ಚಿಟ್ಟ ಯುವಕ

ಡೆಲಿವರಿ ಸಿಬ್ಬಂದಿ ಎದುರಿಸುವ ಕಷ್ಟದ ಬಗ್ಗೆ ಬೇಸರ ಹೊರಹಾಕಿದ ವಿದ್ಯಾರ್ಥಿ

Viral News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಸತತ ಮೂರು ತಿಂಗಳ ಕಾಲ ಕೆಲಸ ಮಾಡಿದ್ದಾನೆ. ಗಿಗ್ ಕಾರ್ಮಿಕರು ಹೇಗೆ ದುಡಿಯುತ್ತಾರೆ? ಹೇಗೆ ಹಣವನ್ನು ಗಳಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆತ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾನೆ. ತನಗೆ ಇದು ನಿಜಕ್ಕೂ ಒಳ್ಳೆಯ ಸೈಡ್ ಬಿಸೆನೆಸ್ ಆಗಿತ್ತು ಎಂದ ಅವರು ಈ ಕೆಲಸವನ್ನು ತಮ್ಮ ಜೀವನೋಪಾಯವಾಗಿ ಅವಲಂಬಿಸಿರುವ ಸಿಬ್ಬಂದಿಬಗ್ಗೆ ಆತಂಕ ವ್ಯಕ್ತಪಡಿಸಿದರು.

ಶಿಲ್ಲಾಂಗ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಕೆಎಸ್‌ಯು ಪ್ರತಿಭಟನೆ: ಪ್ರವಾಸಿಗರ ಕಾರ್‌ ಮೇಲೆ ಭೀಕರ ದಾಳಿ! ಮಗುವಿಗೆ ಗಾಯ

ಶಿಲ್ಲಾಂಗ್‌ನಲ್ಲಿ ಪ್ರವಾಸಿಗರ ಕಾರ್ ಮೇಲೆ ದಾಳಿ ನಡೆಸಿದ ಪ್ರತಿಭಟನಕಾರರು

Viral Video: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಖಾಸಿ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ನಡೆಸಿದ ಕಪ್ಪು ಬಾವುಟದ ಬೈಕ್ ರ್‍ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ. ಈ ನಡುವೆ ಪ್ರವಾಸಿಗರ ವಾಹನವೊಂದರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು ಮಗುವೊಂದು ಗಾಯಗೊಂಡಿದೆ‌.

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್; ಕಾರ್ಮಿಕರ ಕಷ್ಟದ ಜೀವನದ ಕುರಿತು ಹೇಳಿದ್ದೇನು?

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್

ಬೆಂಗಳೂರಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ತನ್ನ 3 ತಿಂಗಳ ಕಾಲೇಜು ರಜೆಯ ಅವಧಿಯಲ್ಲಿ ರ‍್ಯಾಪಿಡೋ ಬೈಕ್ ರೈಡರ್ ಆಗಿ ಕೆಲಸ ಮಾಡಿ, ದಿನನಿತ್ಯ ಆನ್‌ಲೈನ್ ಗಿಗ್ ವರ್ಕರ್ಸ್ ಅನುಭವಿಸುವ ಕಹಿ ಸತ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸಧ್ಯ ಈ ಪೋಸ್ಟ್‌ ಭಾರಿ ವೈರಲ್ ಆಗಿದೆ.

"ನಮ್ಮ ತೆರಿಗೆಯಿಂದಲೇ ನಿಮಗೆ ಸಂಬಳ ಬರೋದು": ಸೇನಾ ಸಿಬ್ಬಂದಿ ಜತೆ ಜೆನ್ ಝೀ ಯುವತಿಯ ಕಿರಿಕ್‌; ವಿಡಿಯೊ ವೈರಲ್‌

ಲಡಾಖ್‌ನಲ್ಲಿ ಸೇನಾ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದ ಜೆನ್ ಝೀ ಯುವತಿ

Viral News: ಕೆಲವು ದಿನಗಳಿಂದ ಜೆನ್ ಝೀಗಳಾದ್ದೇ ಹವಾ. ಕೆಲವೆಡೆ ತಮ್ಮದೆ ನಿಲುವು ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಈ ನಡುವೆ ಚೆಕ್ ಪೋಸ್ಟ್ ಒಂದರಲ್ಲಿ ಯುವತಿಯೊಬ್ಬಳು ಅಲ್ಲಿನ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. "ನಾವು ಜೆನ್ ಝೀಗಳು ಈ ಅಸಂಬದ್ಧತೆಯನ್ನು ಸಹಿಸುವುದಿಲ್ಲʼʼ ಎಂದು ಪದೇ ಪದೆ ಹೇಳಿ ಜಗಳ ಮಾಡಿದ್ದಾಳೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಅಮೆರಿಕಕ್ಕೆ ಕೇವಲ ಉದ್ಯೋಗಕ್ಕಾಗಿ ಬರಬೇಡಿ: ಭಾರತೀಯ ಯುವಜನತೆಗೆ ಸಲಹೆ ನೀಡಿದ ದಂಪತಿ

ಉದ್ಯೋಗಕ್ಕಾಗಿ ಅಮೆರಿಕ ತೆರಳುವ ಭಾರತೀಯರಿಗೆ ಎಚ್ಚರಿಕೆ ನೀಡಿದ ದಂಪತಿ

Viral News: ಭಾರತೀಯ ಯುವಕರಿಗೆ ಅಮೆರಿಕದಲ್ಲಿ ನೆಲೆಸಿರುವ ದಂಪತಿ ಮುಖ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಇಲ್ಲಿಗೆ ಬರಬೇಡಿ, ಈಗ ಭಾರತದಲ್ಲೇ ಉತ್ತಮ ಅವಕಾಶಗಳಿದೆ. ಯುವ ಭಾರತೀಯರು ವಿದೇಶಕ್ಕೆ ಬರುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಟ್ಟದಲ್ಲೊಂದು ಎಲ್ಲೂ ಸಿಗದ ಉದ್ಯೋಗಾವಕಾಶ: ಪ್ರಕೃತಿಯ ಸೌಂದರ್ಯ ಸೆರೆಹಿಡಿದು ತಿಂಗಳಿಗೆ 8.5 ಲಕ್ಷ ರೂ. ಸಂಪಾದಿಸಿದ ಯುವಕ!

ಪ್ರಕೃತಿ ಸೌಂದರ್ಯ ಚಿತ್ರೀಕರಣ ಮಾಡಿ ತಿಂಗಳಿಗೆ 8.5 ಲಕ್ಷ ಗಳಿಸಿದ 23ರ ಯುವಕ!

Viral News: ಚೀನಾದಲ್ಲಿ 23 ವರ್ಷದ ಯುವಕನೊಬ್ಬ ಕೆಲಸದ ಭಾಗವಾಗಿ ಪರ್ವತದ ಮೇಲೆ ವಾಸಿ ಸುತ್ತಾ, ಮೋಡಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸುತ್ತಾ ಒಂದು ತಿಂಗಳು ಕಳೆದಿದ್ದಾನೆ. ಪ್ರಕೃತಿ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಈತ ಪ್ರಸಿದ್ಧಿ ಪಡೆದಿದ್ದಾನೆ.

ಡ್ರಗ್ಸ್ ನಿಷೇಧಕ್ಕಾಗಿ ಯುವಕನ ವಿಶೇಷ ಅಭಿಯಾನ: ಫ್ರಂಟ್ ವೀಲ್ ಇಲ್ಲದ ಸೈಕಲ್‌ನಲ್ಲಿ 7,000 ಕಿ.ಮೀ ಪ್ರಯಾಣ!

ಡ್ರಗ್ಸ್ ಜಾಗೃತಿಗಾಗಿ ವಿಭಿನ್ನ ಸಾಹಸ ಮಾಡಲು ಮುಂದಾದ ಯುವಕ!

Viral News: ಮುಂಭಾಗದ ಚಕ್ರವಿಲ್ಲದೆ ಸಾವಿರಾರು ಕಿಲೋಮೀಟರ್ ಸೈಕಲ್ ಸವಾರಿ ಮಾಡುವ ಮೂಲಕ ಕೇರಳದ ಯುವಕ ಭಾರೀ ಸುದ್ದಿಯಾಗಿದ್ದಾರೆ. ಬರೋಬ್ಬರಿ 7,000 ಕಿಲೋ ಮೀಟರ್ ಸೈಕಲ್ ನಲ್ಲೇ ಪ್ರಯಾಣಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ವಿಶೇಷ ಜಾಗೃತಿ ಅಭಿಯಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಅಪರೂಪದ ಹೋರಾಟ; ನಾಯಿಯ ಮುಖವಾಡ ಧರಿಸಿ ದೂರು ನೀಡಿದ ವ್ಯಕ್ತಿ

ನಾಯಿಯ ಮುಖವಾಡ ಧರಿಸಿ ಪಾಲಿಕೆ ವಿರುದ್ಧ ಪ್ರತಿಭಟನೆ

Dog Mask: ಮಧ್ಯ ಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ವೇಳೆ ವ್ಯಕ್ತಿಯೊಬ್ಬರು ನಾಯಿಯ ಮುಖವಾಡ ಧರಿಸಿ ಮಹಾನಗರ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಬೀದಿ ನಾಯಿಗಳ ಸಂತಾನಶಕ್ತಿಹರಣ ಯೋಜನೆ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತ ತನಿಖೆಗೆ ಭರವಸೆ ನೀಡಿದೆ.

ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು; ಫೋಟೊದಲ್ಲಿದ್ದವನೇ ಬೇರೆ, ಎದುರು ನಿಂತವನೇ ಬೇರೆ!

ಮಂಟಪಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ವಧು

Viral Video: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೊನೆಯ ಕ್ಷಣದಲ್ಲಿ ವರಿಸಲು ನಿರಾಕರಿಸಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಲೋಕ ಭವನದ ಬಳಿ ಪ್ರಜ್ಞೆ ತಪ್ಪಿದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್‌

ಪ್ರಜ್ಞಾಹೀನನಾದ ವ್ಯಕ್ತಿ ನೆರವಿಗೆ ಧಾವಿಸಿದ ಕೇರಳ ರಾಜ್ಯಪಾಲ

ಲೋಕಭವನದ ಬಳಿ ಪ್ರಜ್ಞಾಹೀನನಾಗಿ ಬಿದ್ದ ವ್ಯಕ್ತಿಯ ನೆರವಿಗೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಧಾವಿಸಿದ ಘಟನೆ ಬುಧವಾರ ನಡೆದಿದೆ. ಅವರಿಗೆ ಅಗತ್ಯವಾದ ವೈದ್ಯಕೀಯ ನೆರವು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಅವರು ಬಳಿಕ ಓಣಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸಲು ತೆರಳಿದರು.

Loading...