ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈರಲ್‌

ರೈಲಿನ ಶೌಚಾಲಯದ ಬಳಿ ಮಲಗಿದ ಯೋಧರಿಗೆ ಸೀಟು ನೀಡಿದ ಟಿಟಿಇ; ವಿಡಿಯೊ ಇಲ್ಲಿದೆ

ರೈಲಿನ ಶೌಚಾಲಯದ ಬಳಿ ಮಲಗಿದ ಯೋಧರು

Viral Video: ಕಿಕ್ಕಿರಿದ ರೈಲಿನ ಪ್ರಯಾಣಿಕರ ನಡುವೆ, ಅವ್ಯವಸ್ಥೆಯ ಮಧ್ಯೆ ಮಾನವೀಯತೆಯ ಒಂದು ಸಣ್ಣ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶ ಕಾಯುವ ಸೈನಿಕರಿಗೆ ಸೀಟು ಬಿಟ್ಟು ಕೊಡುವ ಮೂಲಕ ಟಿಟಿಇ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದ್ಯ ಖರೀದಿಗೆ ಹಣ ನಿರಾಕರಿಸಿದ್ದೇ ತಪ್ಪಾಯ್ತು: ನವವಧು-ವರನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮದ್ಯಕ್ಕೆ ಹಣ ನೀಡದಿದ್ದಕ್ಕೆ ನವವಧು-ವರನ ಮೇಲೆ ಹಲ್ಲೆ

Viral Video: ಇಲ್ಲೊಂದು ಮದುವೆ ಸಂಭ್ರಮದ ನಡುವೆ ಮದ್ಯದ ವಿಚಾರವಾಗಿ ವಧು ವರನಿಗೆ ನೆರೆ ಮನೆಯ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ವಧು-ವರರ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಕರ್ಣದಲ್ಲಿ ಜಪಾನ್‌ ಮಹಿಳೆಯ ಕೊಳಲ ನಾದಕ್ಕೆ ಭಕ್ತರು ಫಿದಾ; ವೀಸಾ ನಿಯಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಕೃಷ್ಣ ವಿಗ್ರಹ ಇಟ್ಟು ಕೊಳಲು ನುಡಿಸಿದ ಜಪಾನ್‌ ಮಹಿಳೆ

Viral Video: ಗೋಕರ್ಣದಲ್ಲಿ ಜಪಾನಿನ ಪ್ರವಾಸಿಯೊಬ್ಬರು ಕೃಷ್ಣ ವಿಗ್ರಹದೊಂದಿಗೆ ಕೊಳಲು ನುಡಿಸುತ್ತ ಹಣ ಸಂಗ್ರಹಿಸುತ್ತಿರುವ ಸುದ್ದಿಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ ಆಕೆ ರಸ್ತೆಬದಿಯಲ್ಲಿ ಕುಳಿತು ಕೊಳಲು ನುಡಿಸುತ್ತ ಗಮನ ಸೆಳೆದಿದ್ದಾರೆ. ಭಾರತಕ್ಕೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಿರುವುದು ಕಾನೂನು ಪ್ರಕಾರ ತಪ್ಪು ಎಂದು ಅನೇಕರು ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮಾನವೀಯತೆ ಸಾಕ್ಷಿಯಾದ ಮುಂಬೈ ಲೋಕಲ್ ರೈಲು: ಬಾಯಾರಿದ ಬೀದಿ ನಾಯಿಗೆ ನೀರು ಕುಡಿಸಿದ ಪ್ರಯಾಣಿಕ

ಮುಂಬೈ ಲೋಕಲ್ ಟ್ರೈನ್‌ನಲ್ಲಿ ಬೀದಿನಾಯಿಗೆ ನೀರು ಕುಡಿಸಿದ ಪ್ರಯಾಣಿಕ

Viral Video: ಮುಂಬೈಯ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರೊಬ್ಬರ ಮಾನವೀಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಬೀದಿ ನಾಯಿಗೆ ಅವರು ತಾಳ್ಮೆಯಿಂದ ನೀರು ಕುಡಿಸಿದ್ದು, ಸದ್ಯ ಈ ಘಟನೆ ವಿಡಿಯೊ ವೈರಲ್ ಆಗಿದೆ.

ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ: ತೀವ್ರ ಅಲರ್ಜಿಯಿಂದ ಊದಿಕೊಂಡ ಮಹಿಳೆಯ ತುಟಿ

ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿ ಮಹಿಳೆಗೆ ಅಲರ್ಜಿ

Viral Video: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಳಪೆ ಮಟ್ಟದ ಆಹಾರ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ‌. ರೈಲಿನಲ್ಲಿ ಆಹಾರ ಸೇವಿಸಿದ ಬಳಿಕ ತೀವ್ರ ಅಲರ್ಜಿ ಉಂಟಾಗಿದೆ ಎಂದಿದ್ದಾರೆ. ಜತೆಗೆ ಎರಡು ವರ್ಷದ ಮಗನೂ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Channapatna News: ದಿನಾ ತಿಂಡಿ ಕೊಡುತ್ತಿದ್ದ ವೃದ್ಧೆಯ ಶವದ ಮೇಲೆ ಬಿದ್ದು ಹೊರಳಾಡಿ ದುಃಖಿಸಿದ ಕೋತಿ!

ತಿಂಡಿ ಕೊಡುತ್ತಿದ್ದ ವೃದ್ಧೆಯ ಶವದ ಮೇಲೆ ಬಿದ್ದು ಹೊರಳಾಡಿ ದುಃಖಿಸಿದ ಕೋತಿ!

ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನು ಪಾರ್ವತಮ್ಮ ಅವರು ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋದನ ವ್ಯಕ್ತಪಡಿಸಿದೆ.

PBKS vs GT: ಕೊನೊಲಿ ಸಿಕ್ಸರ್‌ ಕಂಡು ದಂಗಾದ ವಿಶ್ವದ ನಂ.1 ಟಿ20 ಬೌಲರ್‌ ರಶೀದ್‌ ಖಾನ್‌; ವಿಡಿಯೊ ವೈರಲ್‌

ಕೊನೊಲಿ ಬಾರಿಸಿದ 103 ಮೀ. ದೂರದ ಸಿಕ್ಸರ್‌ ಕಂಡು ದಂಗಾದ ರಶೀದ್‌ ಖಾನ್‌

Rashid Khan's Stunned Reaction: ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ದುಬಾರಿ ಬೌಲಿಂಗ್‌ ನಡೆಸಿದರು. 11 ಎಸೆತಗಳ ಓವರ್ ಎಸೆಯುವ ಮೂಲಕ ಅನಗತ್ಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಒಟ್ಟು 11ಎಸೆತ ಹಾಕಿದರು. ಇದರಲ್ಲಿ ಅವರು ನಾಲ್ಕು ವೈಡ್‌ಗಳು ಮತ್ತು ಒಂದು ನೋ-ಬಾಲ್ ಎಸೆದರು.

ಸಮೋಸಾ ತಿಂದು ಹಣ ಪಾವತಿಸುವ ಬದಲು ಹೋಟೆಲ್ ಮಾಲಕನ ಬೆರಳನ್ನೇ ಕಚ್ಚಿ ತುಂಡರಿಸಿದ ಗ್ರಾಹಕ!

ಸಮೋಸಾ ವಿಚಾರಕ್ಕೆ ಜಗಳ; ಹೋಟೆಲ್ ಮಾಲಕನ ಬೆರಳೇ ಕಟ್‌

Viral News: ಆನ್‌ಲೈನ್ ಪಾವತಿ ವಿಚಾರವಾಗಿ ನಡೆದ ಸಣ್ಣ ಜಗಳ ಅತಿರೇಕಕ್ಕೆ ಹೋಗಿರುವ ಘಟನೆಯೊಂದು ನಡೆದಿದೆ. ಸಿಡಿದೆದ್ದ ಗ್ರಾಹಕನು ಹೋಟೆಲ್ ಮಾಲಕನ ಬೆರಳನ್ನೇ ಕಂಚಿ ತುಂಡು ಮಾಡಿದ್ದಾನೆ. ಅಂಗಡಿ ಮಾಲಕ ರಂಜಿತ್ ಹರಿವಂಶ್ ಸಿಂಗ್ ಅವರ ಇತರ ಬೆರಳುಗಳಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಲಕ್ಷೀಂಧರ್ ಮಂಗಲ್ ಮಲ್ಲಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೈಪುರದ ʼಪಿಂಕ್ ಎಲಿಫೆಂಟ್' ಇನ್ನಿಲ್ಲ: ಬಣ್ಣ ಬಳಿದಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದೇ ಆನೆಯ ಸಾವಿಗೆ ಕಾರಣ ಎಂದ ನೆಟ್ಟಿಗರು

ವೈರಲ್ 'ಗುಲಾಬಿ ಆನೆ' ಇನ್ನಿಲ್ಲ: ಕಲಾವಿದೆ ವಿರುದ್ಧ ಸಿಡಿದೆದ್ದ ನೆಟ್ಟಿಗರು

Viral Video: ಕಲಾವಿದೆಯೊಬ್ಬಳ ಎಡವಟ್ಟಿನಿಂದ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ಇತ್ತೀಚೆಗೆ ರಷ್ಯಾದ ಕಲಾವಿದೆಯೊಬ್ಬಳು ರಾಜಸ್ಥಾನದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ ಆಗಿತ್ತು. ಚಂಚಲ್ ಹೆಸರಿನ ಈ ಆನೆ ಇದೀಗ ಸಾವನ್ನಪ್ಪಿದ್ದು, ಹಲವರು ಆಕ್ರೋಸ ವ್ಯಕ್ತಪಡಿಸಿದ್ದಾರೆ.

ಘೋರ ದುರಂತ; ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವು: ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಈಜುಕೊಳದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ 22 ವರ್ಷದ ಯುವಕ

Viral Video: ಗುಜರಾತ್‌ನ ಸೂರತ್‌ನಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿದ್ದಾನೆ‌. ಮೋಜು ಮಸ್ತಿಗಾಗಿ ತೆರಳಿದ್ದ ಯುವಕ ಈಜುಕೊಳದ ಆಳವಾದ ಪ್ರದೇಶಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾನೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.

ಡಿವೋರ್ಸ್‌ ಸಿಕ್ಕ ಖುಷಿ;  9 ಕಿ.ಮೀ. ದಂಡವತ್ ನಮಸ್ಕಾರ ಹಾಕಿ ಹರಕೆ ತೀರಿಸಿದ 25 ವರ್ಷದ ಭೂಪ!

ಡಿವೋರ್ಸ್‌ ನೀಡಿದ ಪತ್ನಿ; 9 ಕಿ.ಮೀ. ದಂಡವತ್ ನಮಸ್ಕಾರ ಹಾಕಿದ ಪತಿ

Viral News: ವ್ಯಕ್ತಿಯೊಬ್ಬ ತನಗೆ ಡಿವೋರ್ಸ್ ಸಿಕ್ಕ ಕಾರಣಕ್ಕೆ ದೇವಸ್ಥಾನಕ್ಕೆ ದಂಡವತ್ ನಮಸ್ಕಾರ ಹಾಕುತ್ತ 9. ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ದೃಶ್ಯ ವೈರಲ್‌ ಆಗಿದೆ. ದಾಂಪತ್ಯ ಜೀವನದ ಆರಂಭಿಕ ಹಂತದಲ್ಲೇ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಮುಕ್ತಿ ಸಿಕ್ಕರೆ ಉತ್ತರ ಪ್ರದೇಶದ ಭಾನ್‌ಪುರದ ಪ್ರಸಿದ್ಧ ಬಡ್ವಾ ಮಾತಾ ದೇವಸ್ಥಾನಕ್ಕೆ ತನ್ನ ಗ್ರಾಮದಿಂದ ದಂಡವತ್ ನಮಸ್ಕಾರ ಹಾಕುತ್ತಾ ಬರುವುದಾಗಿ ಆತ ಹರಕೆ ಹೊತ್ತಿದ್ದ.

ಬದುಕಿದ್ದಾಗಲೇ 2 ಸಾವಿರ ಜನರಿಗೆ ತಿಥಿ ಊಟ ಹಾಕಿಸಿದ 65ರ ವೃದ್ಧ!

ಜೀವಂತವಾಗಿದ್ದಾಗಲೇ ಪುಣ್ಯತಿಥಿ ಊಟ ಏರ್ಪಡು ಮಾಡಿದ 65ರ ವೃದ್ಧ!

Viral News: ಇಲ್ಲೊಬ್ಬರು ತಾನು ಮರಣ ಹೊಂದುವ ಮೊದಲೇ ಪುಣ್ಯ ಸ್ಮರಣೆ ಆಚರಿಸಿ ಊರಿನ ಜನರಿಗೆ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವೃದ್ಧ ವ್ಯಕ್ತಿಯೊಬ್ಬರು 'ಹದಿಮೂರನೇ ದಿನದ ಆಚರಣೆ 'ಯನ್ನು ಭರ್ಜರಿ ಔತಣಕೂಟ ಮೂಲಕ ಏರ್ಪಡಿಸಿದ್ದಾರೆ‌.

ಆಕಾಶದಲ್ಲಿ ಪ್ಯಾರಾಸೈಲಿಂಗ್ ಕೇಬಲ್ ತುಂಡಾಗಿ ಸಮುದ್ರಕ್ಕೆ ಬಿದ್ದ ಪ್ರವಾಸಿ; ತಪ್ಪಿದ  ದುರಂತ

ಆಕಾಶದಲ್ಲಿ ಪ್ಯಾರಾಸೈಲಿಂಗ್ ಕೇಬಲ್ ತುಂಡಾಗಿ ಸಮುದ್ರಕ್ಕೆ ಬಿದ್ದ ಪ್ರವಾಸಿ

A tourist fell into the sea: ಪ್ರವಾಸಿಗರೊಬ್ಬರು ಪ್ಯಾರಾಸೈಲಿಂಗ್ ಮಾಡುತ್ತಿರುವಾಗ ಕೇಬಲ್ ಹಠಾತ್ತನೆ ತುಂಡಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ದೋಣಿಯಲ್ಲಿದ್ದ ಸಿಬ್ಬಂದಿ ಪ್ರವಾಸಿಗನನ್ನು ರಕ್ಷಿಸಿದ್ದಾರೆ. ಗೋವಾದ ಬಾಗಾ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭಾರತದಲ್ಲಿ ಸಾಹಸ ಕ್ರೀಡೆಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ.

ನಿನ್ನಂಥ ಅಪ್ಪ ಇಲ್ಲ; ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ: ಭಾವುಕ ಕ್ಷಣ ಇಲ್ಲಿದೆ

ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ

Viral Video: ಪುಟ್ಟ ಮಗನಿಗೆ ಭಯವಾಗುತ್ತದೆ ಎನ್ನುವ ಕಾರಣಕ್ಕೆ ತಂದೆ ಕೂಡ ಎಂಆರ್‌ಐ ಸ್ಕ್ಯಾನಿಂಗ್‌ ಮೆಷಿನ್‌ ಒಳ ಹೋದ ಘಟನೆ ನಡೆದಿದೆ. ತಂದೆ-ಮಗನ ಈ ಭಾವನಾತ್ಮಕ ಕ್ಷಣ ಕಂಡು ಹಲವರ ಕಣ್ಣಂಚು ಒದ್ದೆಯಾಗಿದ್ದರೆ, ಇನ್ನು ಕೆಲವರು ಇಂತಹ ಅಪ್ಪನನ್ನು ಪಡೆದ ಪುತ್ರನೇ ಭಾಗ್ಯವಂತ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ʼʼಇಂತಹ ವ್ಯವಸ್ಥೆ ನಮ್ಮ ದೇಶಕ್ಕೂ ಬೇಕುʼʼ: ಗೋವಾದಲ್ಲಿ ಆರ್ಡರ್‌ ಮಾಡಿದ ಕೇವಲ 20 ನಿಮಿಷದಲ್ಲೇ ದಿನಸಿ ಪಡೆದ ಇಂಗ್ಲೆಂಡ್‌ ಯುವತಿಗೆ ಅಚ್ಚರಿಯೋ ಅಚ್ಚರಿ

ಭಾರತದ ಆನ್‌ಲೈನ್ ವಹಿವಾಟಿಗೆ ವಿದೇಶಿ ಯುವತಿ ಫಿದಾ

Viral Video: ವಿದೇಶಿ ಯುವತಿಯೊಬ್ಬಳು ಭಾರತದ ವೇಗದ ಡೆಲಿವರಿ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ. ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದ ಇಂಗ್ಲೆಂಡ್‌ನ ಕ್ಲೋ ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ಆರ್ಡರ್ ಮಾಡಿದ್ದಾರೆ. ಕೇವಲ 20 ನಿಮಿಷದಲ್ಲೇ ಆರ್ಡರ್‌ ಕೈ ಸೇರಿದ್ದು, ಈ ಅಚ್ಚರಿಯ ವಿಚಾರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಅಮೆರಿಕಕ್ಕಿಂತ ಬೆಂಗಳೂರಿನ ಆರೋಗ್ಯ ಸೇವೆಯೇ ಬೆಸ್ಟ್‌; ಸ್ಟಾರ್ಟ್‌ ಅಪ್ ಸಂಸ್ಥಾಪಕನ ಮೆಚ್ಚುಗೆ

ಭಾರತೀಯ ಆರೋಗ್ಯ ಸೌಲಭ್ಯ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕನ ಮೆಚ್ಚುಗೆ

Viral News: ವಿದೇಶಿ ಆರೋಗ್ಯ ಸೇವೆಗಿಂತ ಭಾರತದಲ್ಲಿ ಯಾವ ರೀತಿಯ ಉತ್ತಮ ಸೌಲಭ್ಯಗಳಿದೆ ಎನ್ನುವುದನ್ನು ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಹೇಳಿದ್ದು, ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ರೇಬಿಸ್ ನಿರೋಧಕ ಲಸಿಕೆ ಕೆಲವೇ ನಿಮಿಷಕ್ಕೆ ದೊರಕಿದೆ ಎಂದು ಭಾರತ್ ಅಗ್ರಿ ಸಂಸ್ಥಾಪಕ ಸಿದ್ಧಾರ್ಥ್ ಡಯಾಲಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರು ಜೀವನ ದುಬಾರಿ ಅಲ್ಲ: 18,000 ರುಪಾಯಿಯಲ್ಲಿ ಐಷಾರಾಮಿ ಬದುಕು ಸಾಗಿಸುವ ಯುವತಿ; ಈ ಟಿಪ್ಸ್‌ ನೀವೂ ಫಾಲೋ ಮಾಡಿ

18,000 ರು.ಯಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ಬದುಕು ಸಾಗಿಸುವ ಯುವತಿ

Viral Video: ಬೆಂಗಳೂರಿನಲ್ಲಿ ಕಡಿಮೆ ಬಜೆಟ್‌ನಲ್ಲೂ ಜೀವನ ನಡೆಸಬಹುದು ಎಂದು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಕೇವಲ 18,000 ರುಪಾಯಿಯಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ಹಣಕಾಸು ನಿರ್ವಹಣೆ ಮಾಡುತ್ತಿದ್ದಾಳೆ. ತನ್ನ ಮಾಸಿಕ ವೆಚ್ಚಗಳನ್ನು ನಿರ್ವಹಿಸುವ ರೀತಿಯನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‌ಧೂಮಪಾನ ಮಾಡಿ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಟೆಕ್ಕಿ; ಶಿಕ್ಷಣ ಇದ್ದರೆ ಸಾಲದು ಸಂಸ್ಕಾರವೂ ಬೇಕು ಎಂದ ನೆಟ್ಟಿಗರು

ಬೆಂಗಳೂರು ವಿಮಾನ ನಿಲ್ದಾಣದಲ್ಲೇ ‌ಧೂಮಪಾನ ಮಾಡಿದ ಟೆಕ್ಕಿ

Viral Video: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡಿದ್ದಲ್ಲದೆ ಪ್ರಶ್ನಿಸಿದವರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"MBA ಓದಲು ಬಂದೆ; ಜಿಂಕೆಗಳ ಸ್ನೇಹ ಮಾಡಿ ಹೊರಟೆ": ಐಐಟಿ ವಿದ್ಯಾರ್ಥಿನಿಯ ವಿಡಿಯೊ ವೈರಲ್

ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಜಿಂಕೆ ಜತೆ ವಿದ್ಯಾರ್ಥಿನಿಯ ಸ್ನೇಹ

Viral Video: ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿಯೊಬ್ಬಳು ಕ್ಯಾಂಪಸ್‌ನ ಒಳಗೆ ಪ್ರಾಣಿಗಳ ಜತೆ ಸ್ನೇಹ ಬೆಳೆಸಿದ್ದಾಳೆ. ಆಕೆ ಮೈದಾನದಲ್ಲಿ ಮುಕ್ತವಾಗಿ ಓಡಾಡುವ ಜಿಂಕೆಯನ್ನು ಮುದ್ದಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕ್ಯಾಂಪಸ್‌ನಿಂದ ಪ್ರಾಣಿಗಳು ತನ್ನನ್ನು ಹೇಗೆ ಬೀಳ್ಕೊಟ್ಟಿವೆ ಎಂಬುದನ್ನು ಆಕೆ ವಿವರಿಸಿದ್ದಾಳೆ.

ಮಾನವೀಯತೆ ಮರೆತ ವಿದೇಶಿ ಕಲಾವಿದೆ; ಜೈಪುರದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು ಹಿಂಸೆ: ನೆಟ್ಟಿಗರಿಂದ ತರಾಟೆ

ಫೋಟೊಶೂಟ್‌ಗಾಗಿ ಆನೆಗೆ ಗುಲಾಬಿ ಬಣ್ಣ ಬಳಿದ ವಿದೇಶಿ ಕಲಾವಿದೆ

Viral Video: ರಷ್ಯಾದ ಕಲಾವಿದೆಯೊಬ್ಬಳು ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ ಆಗಿದೆ. ಆಕೆ ಕಲಾತ್ಮಕ ಚಿತ್ರಕ್ಕಾಗಿ ಜೀವಂತ ಆನೆಗೆ ಗುಲಾಬಿ ಬಣ್ಣ ಬಳಿದಿದ್ದಾಳೆ. ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ವಾಸ್ತುಶಿಲ್ಪ, ಬಣ್ಣಗಳು ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸಲು ನೈಜ ಆನೆಗೆ ಬಣ್ಣ ಬಳಿದಿರುವುದಾಗಿ ಜೂಲಿಯಾ ಬುರುಲೆವ ಹೇಳಿಕೊಂಡಿದ್ದಾಳೆ.

ಸಾಧು ವೇಷ ಧರಿಸಿ ಅಶ್ಲೀಲ ವರ್ತನೆ;  ಮಹಿಳೆಯರಿಗೆ ಕಿರುಕುಳ ನೀಡಿದ ವ್ಯಕ್ತಿಗೆ ತಕ್ಕ ಶಾಸ್ತಿ

ಮಹಿಳೆಯರಿಗೆ ಕಿರುಕುಳ ನೀಡಿದ ಸಾಧು ವೇಷದ ವ್ಯಕ್ತಿ

Viral Video: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಾಧುವಿನ ವೇಷ ಧರಿಸಿದ ವ್ಯಕ್ತಿಯೊಬ್ಬ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ವಿಡಿಯೊ ವೈರಲ್ ಆದ ಬಳಿಕ ಶಿಮ್ಲಾ ಪೊಲೀಸರು ಸಾಧುವಿನ ವೇಷ ಧರಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬ್ಯಾಂಕ್ ಖಾತೆಗೆ ತಪ್ಪಿ 10 ಕೋಟಿ ರುಪಾಯಿ ಜಮೆ; ಹಣ ನನ್ನದಲ್ಲ ಎಂದು ಪ್ರಾಮಾಣಿಕತೆ ಮೆರೆದ ರೈತನ ಪತ್ನಿ

ತಪ್ಪಿ 10 ಕೋಟಿ ರುಪಾಯಿ ಖಾತೆಗೆ ಜಮೆ: ಮಹಿಳೆ ಮಾಡಿದ್ದೇನು?

Viral News: ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಪ್ರಾಮಾಣಿಕತೆಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಬ್ಯಾಂಕ್ ಖಾತೆಗೆ ಅನಿರೀಕ್ಷಿತವಾಗಿ ಬಂದ ಹಣವನ್ನು ತಾನು ಬಳಸಿಕೊಳ್ಳದೆ ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸದ್ಯ ಇವರ ಹೃದಯವಂತಿಕೆಗೆ ಎಲ್ಲರೂ ಫಿದಾ ಆಗಿದ್ದಾರೆ.

ಪ್ರಿಯಕರನಿಗಾಗಿ ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿದ ವಿದ್ಯಾರ್ಥಿನಿಯರು; ವಿಡಿಯೋ ವೈರಲ್‌

ಪ್ರಿಯಕರಗೋಸ್ಕರ ಕಾಲೇಜಿನಲ್ಲೇ ವಿದ್ಯಾರ್ಥಿನಿಯರ ಕಿತ್ತಾಟ!

Viral Video: ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಭೀಕರ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನೋಯ್ಡದ ಗಾಲ್ಗೋಟಿ ಯಾಸ್ ವಿಶ್ವವಿದ್ಯಾಲಯದಲ್ಲಿ‌ ಈ ಘಟನೆ ಕಂಡು ಬಂದಿದೆ. ಮಾಹಿತಿಯ ಪ್ರಕಾರ ಪ್ರೇಮ ಪ್ರಕರಣವೇ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ..

ವಿಮಾನ ನಿಲ್ದಾಣದ ಕ್ಯಾಂಟೀನ್‌ನ ಚಿತ್ರಾನ್ನದಲ್ಲಿ ಕಲ್ಲು ಪತ್ತೆ; ಗ್ರಾಹಕರಿಂದ ಆಕ್ರೊಶ

ವಿಮಾನ ನಿಲ್ದಾಣದ ಕ್ಯಾಂಟೀನ್‌ ಆಹಾರದಲ್ಲಿ ಕಲ್ಲು ಪತ್ತೆ

Viral Video: ತೆಲಂಗಾಣದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಟಿನ್‌ನ ಆಹಾರಲ್ಲಿ ಕಲ್ಲು ಪತ್ತೆಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಗ್ರಾಹಕರ ಸುರಕ್ಷತೆಯನ್ನು ನಿರ್ಲಕ್ಷಿಸಿದೆ ಕಿಡಿಕಾರಿದೆ.

Loading...