ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಡ್ರೋನ್‌ ಮೂಲಕ ಹಂದಿಗಳನ್ನು ಸಾಗಾಟ ಮಾಡಿ ಇಡೀ ಊರಿಗೆ ಪವರ್‌ ಕಟ್‌ ಮಾಡಿಸಿದ ರೈತ! ಏನಿದು ವೈರಲ್‌ ಸ್ಟೋರಿ

ಡ್ರೋನ್ ಬಳಸಿ ಹಂದಿ ಸಾಗಣೆ ಮಾಡಿ ವಿದ್ಯುತ್ ಗೆ ಅಡಚಣೆ ಉಂಟು ಮಾಡಿದ ರೈತ!

Viral News: ಚೀನಾದಲ್ಲಿ ನಡೆದ ಈ ಘಟನೆಯಿಂದ ಇಡೀ ಗ್ರಾಮದ ಜನರೇ ತೊಂದರೆ ಪಡುವಂತಾಗಿದೆ. ವ್ಯಕ್ತಿಯೊಬ್ಬ ಹಂದಿಗಳನ್ನು ಪರ್ವತದ ಕೆಳಗೆ ಸ್ಥಳಾಂತರಿಸಲು ಡ್ರೋನ್ ಬಳಸಿದ್ದು ಈ ಸಾಹಸದಿಂದಾಗಿ ಇಡೀ ಹಳ್ಳಿ ಅರ್ಧ ದಿನ ಕತ್ತಲಲ್ಲಿ ಕಳೆಯುವಂತಾಗಿದೆ.‌

ಬಾಲಕನ ಬಾಯಲ್ಲೇ ಸ್ಫೋಟಗೊಂಡ ಮೊಬೈಲ್‌ ಬ್ಯಾಟರಿ; ಭಯಾನಕ ವಿಡಿಯೋ ವೈರಲ್‌

ಲಿಥಿಯಂ ಫೋನ್ ಬ್ಯಾಟರಿ ಸ್ಫೋಟ; ಬಾಲಕನಿಗೆ ತೀವ್ರ ಗಾಯ!

Viral Video: ಮೊಬೈಲ್ ಫೋನ್ ಅಂಗಡಿಯೊಂದರಲೇ ಲಿಥಿಯಂ ಆಧಾರಿತ ಫೋನ್ ಬ್ಯಾಟರಿ ಸ್ಫೋಟಗೊಂಡ ಘಟನೆ ನಡೆದಿದೆ. ಮೊಬೈಲ್ ಫೋನ್ ಬ್ಯಾಟರಿಯನ್ನು ಬಾಯಲ್ಲಿಟ್ಟು ಕಚ್ಚಿದ ಪರಿ ಣಾಮ ಅದು ಸ್ಫೋಟಗೊಂಡಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಸದ್ಯ ಈ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ

ದೇಶವೇ ಬೆಚ್ಚಿಬೀಳುವ ಘಟನೆ: ಪ್ರೀತಿಸಲು ಒಪ್ಪದ ಶಿಕ್ಷಕಿಯ ತುಟಿ ಸೀಳಿದ ಹದಿಹರೆಯದ  ವಿದ್ಯಾರ್ಥಿ!

ಪ್ರೀತಿ ನಿರಾಕರಿಸಿದ ಶಿಕ್ಷಕಿಯ ತುಟಿ ಸೀಳಿದ ವಿದ್ಯಾರ್ಥಿ!

Viral News: ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತಂದಿರುವ ಘಟನೆಯೊಂದು ಕಂಡು ಬಂದಿದೆ. ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದೆ. ತನ್ನ ಪ್ರೀತಿ ಯನ್ನು ಶಿಕ್ಷಕರು ನಿರಾಕರಿಸಿದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ.

ಸರ್ಕಾರದ ನಿರ್ಲಕ್ಷ್ಯ; ನಿರ್ಮಾಣ ಹಂತದ ಗುಂಡಿಗೆ ಬಿದ್ದು ಬೈಕ್ ಸವಾರ 12 ಕ್ಕೂ ಅಧಿಕ ಗಂಟೆ ನರಳಿ ನರಳಿ ಸಾವು

ನಿರ್ಮಾಣ ಹಂತದ ಗುಂಡಿಗೆ ಬಿದ್ದು ದೆಹಲಿ ವ್ಯಕ್ತಿಯ ಸಾವು!

Viral Video: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಜನಕಪುರಿಯಲ್ಲಿ ನಿರ್ಮಾಣ ಹಂತದ ಗುಂಡಿಯ ಒಳಗೆ ಬಿದ್ದು ದೆಹಲಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೈಲಾಶ್‌ಪುರಿ ನಿವಾಸಿ ಕಮಲ್ ಎಂದು ಗುರುತಿಸಲಾಗಿದೆ. ಈ ಘಟನೆಯು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.

ಟಿಪ್ಸ್ ನೀಡಿದ್ರೆ ಇಲ್ಲಿ ಸಿಬ್ಬಂದಿ ಡ್ಯಾನ್ಸ್ ಮಾಡ್ತಾರೆ! ಬೆಂಗಳೂರಿನ ಈ ಕೆಫೆಯ ವಿಶಿಷ್ಟ ಸಂಪ್ರದಾಯಕ್ಕೆ ಫಿದಾ ಆದ ಗ್ರಾಹಕರು!

ಟಿಪ್ಸ್ ಕೊಟ್ರೆ ಸಾಕು ಬೆಂಗಳೂರಿನ ಈ ಕೆಫೆಯ ಸಿಬ್ಬಂದಿ ಡ್ಯಾನ್ಸ್ ಮಾಡ್ತಾರೆ

Viral Video: ಬೆಂಗಳೂರಿನ ಈ ಕೆಫೆ ಮಾತ್ರ ಈಗ ಟಿಪ್ಸ್ ವಿಚಾರವಾಗಿ ಗಮನ ಸೆಳೆದಿದೆ. ಸದ್ಯ ಬೆಂಗಳೂರು ಕೆಫೆ ಸಿಬ್ಬಂದಿಯ ವಿಶಿಷ್ಟ ಟಿಪ್ ನೀಡುವ ಸಂಪ್ರದಾಯ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಹೃದಯಗಳನ್ನು ಗೆಲ್ಲುತ್ತದೆ. ಗ್ರಾಹಕರು ಟಿಪ್ ನೀಡಿದಾಗಲೆಲ್ಲಾ ಸಿಬ್ಬಂದಿ ತ್ವರಿತ ನೃತ್ಯ ಮಾಡುವ ಮೂಲಕ ಗ್ರಾಹಕರನ್ನು ಖುಷಿ ಪಡಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಮನೆಯ ಕಸ ಎಸೆಯಲು ‘ಪೋರ್ಟರ್’ ಬುಕ್ ಮಾಡಿದ ಮಹಿಳೆ; ನಂತರ ಆಗಿದ್ದೇನು? ವಿಡಿಯೋ ನೋಡಿ

ಪೋರ್ಟರ್ ನಲ್ಲಿ ಆರ್ಡರ್ ಮೂಲಕ ಕಸ ಎಸೆದ ಮಹಿಳೆ: ನೆಟ್ಟಿಗರು ಕಿಡಿ!

Viral Video: ಡೆಲಿವರಿ ರೈಡರ್ ಕೈಗೆ ಮಹಿಳೆಯೊಬ್ಬರು 'ಕಸದ ಡಬ್' ಅನ್ನು ಕಳುಹಿಸಿದ ಘಟನೆ ವೊಂದು ನಡೆದಿದೆ. ಮಹಿಳೆಯೊಬ್ಬರು ಕಸವನ್ನು ವಿಲೇವಾರಿ ಮಾಡಲು ಪೋರ್ಟರ್ ಸೇವೆಯನ್ನು ಬಳಸಿದ್ದು ಬೇಜವಾಬ್ದಾರಿ ತನದ ವರ್ತನೆ, ವಿತರಣಾ ವೇದಿಕೆಗಳ ದುರುಪ ಯೋಗಕ್ಕಾಗಿ ಟೀಕೆಗೆ ಗುರಿಯಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಮಾನವೀಯತೆಯ ಸಂದೇಶ ಸಾರಿದ ಮುಂಬೈ ಪೊಲೀಸ್: ಬೀದಿ ಬದಿಯ ಮಗುವಿಗೆ ತೊಟ್ಟಿಲು ಉಡುಗೊರೆ

ಬೀದಿ ಬದಿಯ ಮಗುವಿಗೆ ತೊಟ್ಟಿಲು ಉಡುಗೊರೆ ನೀಡಿದ ಮುಂಬೈ ಪೊಲೀಸ್

Viral Video: ಕಾನೂನು ಪಾಲನೆಯ ರಕ್ಷಣೆಯ ಜತೆಗೆ ಮಾನವೀಯತೆಯಲ್ಲೂ ಕೈ ಜೋಡಿಸಿರುವ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೊ ಎಲ್ಲರ ಮನ ಗೆದ್ದಿದೆ. ಮುಂಬೈ ಬೀದಿಯಲ್ಲಿ ವಾಸಿಸುವ ಕುಟುಂಬಕ್ಕೆ ಮಗುವಿನ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ‌. ಅಧಿಕಾರಿ ಸುಶೀಲ್ ಶಿಖರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ರೋಗಿಯ ಪ್ರಾಣ ಕಾಪಾಡಿದ ಬ್ಲಿಂಕ್‌ಇಟ್‌: ಏನಿದು ಘಟನೆ?

ಸಕಾಲಕ್ಕೆ ನೆರವಾದ ಬ್ಲಿಂಕ್‌ಇಟ್‌ ಬಗ್ಗೆ ವಿಡಿಯೊ ಶೇರ್ ಮಾಡಿದ ಯುವತಿ

Viral Video: ಹತ್ತು ನಿಮಿಷದಲ್ಲಿ ದಿನಸಿ ಪದಾರ್ಥಗಳನ್ನು ಮನೆಗೆ ತಲುಪಿಸುವ ಬ್ಲಿಂಕ್‌ಇಟ್‌ ಸಂಸ್ಥೆಯು ಈಗ ತುರ್ತು ವೈದ್ಯಕೀಯ ಸೇವೆ ನೀಡುವಲ್ಲಿಯೂ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್ ಸೇವೆಯನ್ನು ಬೆಳಗ್ಗೆ 4 ಗಂಟೆಗೆ ಒದಗಿಸುವ ಮೂಲಕ ತನ್ನ ಕುಟುಂಬಕ್ಕೆ ಇದರ ನೆರವು ಹೇಗೆ ಸಿಕ್ಕಿದೆ ಎಂದು ಯುವತಿಯೊಬ್ಬರು ಶೇರ್ ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಯುನಿಸೈಕಲ್ ಮೊರೆ ಹೋದ ಯುವಕ; ವಿಡಿಯೊ ವೈರಲ್‌

ಬೆಂಗಳೂರು ಟ್ರಾಫಿಕ್‌ನಲ್ಲಿ ಯುನಿಸೈಕಲ್ ಮೊರೆ ಹೋದ ಯುವಕ

Viral Video: ಆಟೋ ಮತ್ತು ಕಾರ್‌ಗಳಿಂದ ಕೂಡಿದ ಜನನಿಬಿಡ ಪ್ರದೇಶದಲ್ಲಿ ಒಂದು ಅಸಾಮಾನ್ಯ ದೃಶ್ಯ ಎಲ್ಲರ ಗಮನ ಸೆಳೆಯಿತು. ಮಿತಿ ಮೀರಿದ ಟ್ರಾಫಿಕ್ ನಡುವೆ ಯುವಕನೊಬ್ಬ ಯುನಿಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲಿ 8 ಗಂಟೆ ಸಿಲುಕಿಕೊಂಡ ಉದ್ಯಮಿ; ಕಾದು-ಕಾದು ಸಾಕಾಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ: ಸಾಮಾನ್ಯ ಜನರ ಪಾಡೇನು?

ಟ್ರಾಫಿಕ್‌ ಕಿರಿಕಿರಿಯಿಂದ ಪಾರಾಗಲು ಹೆಲಿಕಾಫ್ಟರ್‌ ಬಳಿಸಿದ ಉದ್ಯಮಿ

Businessman stuck for 8 hours: ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಸಂಚಾರ ಜಾಮ್‌ನಿಂದಾಗಿ ಉದ್ಯಮಿಯೊಬ್ಬರು ಸುಮಾರು 8 ಗಂಟೆಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ. ದೀರ್ಘ ಸಮಯ ಕಾದು ಕಾದು ಬೇಸರಗೊಂಡ ಪಿನ್ನಾಕಲ್ ಗ್ರೂಪ್ ಅಧ್ಯಕ್ಷ ಡಾ. ಸುಧೀರ್ ಮೆಹ್ತಾ, ಕೊನೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮುಂದುವರಿಸಿದರು. ಸಂಚಾರ ದಟ್ಟಣೆಯ ಫೋಟೊವನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಆಫೀಸ್ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್ ವೈರಲ್‌

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾಸ್ ಮತ್ತು ಉದ್ಯೋಗಿಯ ನಡುವಿನ ಸಂಘರ್ಷದ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಬೆಳಗ್ಗೆ 6:30ಕ್ಕೆ ಕಚೇರಿಯಲ್ಲಿ ಇರಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿ ನೀಡಿದ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಯುವ ಉದ್ಯೋಗಿಯೊಬ್ಬರು ನೀಡಿದ ಜಾಣತನದ ಪ್ರತಿಕ್ರಿಯೆ ಈಗ ಹೊಸ ಚರ್ಚೆ ಹುಟ್ಟುಹಾಕಿದೆ.

ಅನುಮತಿಯಿಲ್ಲದೆ ವಿಡಿಯೊ ತೆಗೆದ ಅರ್ಷದೀಪ್‌ಗೆ ಎಚ್ಚರಿಕೆ ನೀಡಿದ ತಿಲಕ್ ವರ್ಮಾ; ವಿಡಿಯೊ ವೈರಲ್‌

ಅರ್ಷದೀಪ್‌ಗೆ ಎಚ್ಚರಿಕೆ ನೀಡಿದ ತಿಲಕ್ ವರ್ಮಾ; ವಿಡಿಯೊ ವೈರಲ್‌

Tilak Varma gets angry: ಪುರುಷರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೊದಲ ತಂಡವಾಗುವ ನಿರೀಕ್ಷೆಯಿರುವುದರಿಂದ ತಿಲಕ್ ವರ್ಮಾ ಭಾರತದ ಟಿ20 ವಿಶ್ವಕಪ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಬಾರ್ಬಡೋಸ್‌ನಲ್ಲಿ ನಡೆದ ಹಿಂದಿನ ಆವೃತ್ತಿಯನ್ನು ಭಾರತ ಗೆದ್ದುಕೊಂಡಿತ್ತು.

ಭಾರತ- ಅಮೆರಿಕ ವ್ಯಾಪಾರ ಒಪ್ಪಂದ; ಟೀಕೆಗೆ ಗುರಿಯಾದ ಪಾಕಿಸ್ತಾನ ಸರ್ಕಾರ

ಸ್ವದೇಶಿಯರಿಂದಲೇ ಟೀಕೆಗೆ ಗುರಿಯಾದ ಪಾಕಿಸ್ತಾನ

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಳಿಕ ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲೇ ಭಾರಿ ಟೀಕೆಗೆ ಗುರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿಲ್ಲ. ಆದರೆ ಅವರೊಂದಿಗೆ ಉತ್ತಮ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಹೇಳಿ ಅನೇಕರು ಪಾಕಿಸ್ತಾನ ಸರ್ಕಾರವನ್ನು ಹೀಯಾಳಿಸಿದ್ದಾರೆ.

ಉಸಿರಾಟ ತೊಂದರೆ; ಆಕ್ಸಿಜನ್ ಸಿಲಿಂಡರ್‌ ಸಮೇತ ತೆರಳಿ ಪತ್ನಿಗೆ ಮಾಯಕ್ಕ ದೇವಿ ದರ್ಶನ ಮಾಡಿಸಿದ ಪತಿ

ಆಕ್ಸಿಜನ್ ಸಿಲಿಂಡರ್‌ ಸಮೇತ ತೆರಳಿ ಪತ್ನಿಗೆ ದೇವಿಯ ದರ್ಶನ ಮಾಡಿಸಿದ ಪತಿ

ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಜತೆಗೆ ಮಹಾರಾಷ್ಟ್ರದ ಪಂಢರಪುರದ ದಂಪತಿ 176 ಕಿ.ಮೀಟರ್ ಸಂಚರಿಸಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಘಟನೆ ಬುಧವಾರ ನಡೆದಿದೆ.

ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್ ಮಾಡಿದ ತಾಯಿ; ಮಗುವಿನಂತೆ ಸಂಭ್ರಮಿಸಿದ ವಿಡಿಯೊ ಸೆರೆ ಹಿಡಿದ ಮಗಳು

ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್: ಮಗುವಿನಂತೆ ಕುಣಿದ ಮಹಿಳೆ

Viral Video: ದೆಹಲಿಯ ಮಹಿಳೆಯೊಬ್ಬರು ಮೊದಲ ಬಾರಿಗೆ ಬ್ಲಿಂಕ್‌ಇಟ್‌ ಆ್ಯಪ್ ಬಳಸಿ ಆರ್ಡರ್ ಮಾಡಿದ್ದಾರೆ. ಆದರೆ ಈ ಪರ್ಸೆಲ್ ತಲುಪಿದ ನಂತರ ತಾನು ಬಳಕೆ ಮಾಡಿದ ವಿಧಾನ ಸಕ್ಸಸ್ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಆರ್ಡರ್ ಯಶಸ್ವಿಯಾದ ತಕ್ಷಣ ಆ ತಾಯಿ ಮಗುವಿನಂತೆ ಸಂಭ್ರಮಿಸಿದ್ದಾರೆ.

ದೂರದ ಜಪಾನ್‌ ಅಲ್ಲ ನಮ್ಮ ದೇಶದಲ್ಲೇ ಇದೆ ಪಿಂಕ್ ಟ್ರಂಪೆಟ್ ಹೂವಿನ ಹಾದಿ; ನಿಸರ್ಗ ಸೌಂದರ್ಯಗೆ ಮನಸೋತ ನೆಟ್ಟಿಗರು

ಮುಂಬೈಯಲ್ಲಿ ಪಿಂಕ್ ಟ್ರಂಪೆಟ್: ಗುಲಾಬಿ ಬಣ್ಣಕ್ಕೆ ತಿರುಗಿದ ಹೆದ್ದಾರಿ

Viral Video: ಮುಂಬೈ ನಗರದ ವಿಖ್ರೋಲಿ ಮತ್ತು ಘಾಟ್ಕೋಪರ್ ನಡುವಿನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯು ಇದೀಗ ಸಂಪೂರ್ಣವಾಗಿ ಗುಲಾಬಿ ಬಣ್ಣದ ಹೂವುಗಳಿಂದ ಆವೃತವಾಗಿದ್ದು, ಪ್ರಯಾಣಿಕರ ಕಣ್ಣಿಗೆ ತಂಪು ನೀಡುತ್ತಿದೆ. ಈ ಸೊಬಗಿನ ಡ್ರೋನ್ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಸತ್ತಿನ ಮೆಟ್ಟಿಲಿನಲ್ಲಿ ಜಾರಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಸಹಾಯಕ್ಕೆ ಧಾವಿಸಿದ  ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್

ಜಾರಿ ಬಿದ್ದ ಶಶಿ ತರೂರ್ ಗೆ ಸಹಾಯ ಮಾಡಿದ ಅಖಿಲೇಶ್ ಯಾದವ್

ಸಂಸತ್ತಿನ ಸಂಕೀರ್ಣದ ಒಳಗೆ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಜಾರಿ ಬಿದ್ದಿದ್ದು ತಕ್ಷಣ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.

ರೈಲು ಬೋಗಿಯಲ್ಲ ಇದು ಮನೆ! ಮಗನ ರೈಲ್ವೆ ಕೆಲಸವನ್ನು ಗೌರವಿಸಲು ಮನೆಗೆ ಬೋಗಿಯಂತೆ ಬಣ್ಣ ಬಳಿದ ತಂದೆ

ಮಗನ ರೈಲ್ವೆ ಕೆಲಸವನ್ನು ಗೌರವಿಸಲು ಮನೆಯನ್ನೇ ಬೋಗಿಯನ್ನಾಗಿಸಿದ ತಂದೆ

Viral News: ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ತಂದೆಯೊಬ್ಬರು ತಮ್ಮ ಮಗನಿಗೆ ಸಿಕ್ಕ ಕೆಲಸ ಮತ್ತು ಆತನ ಸಾಧನೆಯ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ತನ್ನ ಮಗನ ರೈಲ್ವೆ ಕೆಲಸವನ್ನು ಗೌರವಿಸಲು ತಂದೆ ಮನೆಯನ್ನು ರೈಲಿನ ಬೋಗಿಯಂತೆ ಬದಲಾಯಿಸಿದ್ದಾರೆ.

ಸಂಜೆ 7 ಗಂಟೆಯನ್ನು ಬೆಳಗ್ಗೆ ಎಂದು ಭಾವಿಸಿ  ಶಾಲೆಗೆ ಹೊರಟ ಪುಟ್ಟ ಬಾಲಕ: ನೆಟ್ಟಿಗರ ಮನಗೆದ್ದ ಮುಗ್ಧತೆಯ ವಿಡಿಯೊ ಇಲ್ಲಿದೆ

ದೀರ್ಘ ನಿದ್ರೆಯ ನಂತರ ಸಂಜೆ ಶಾಲೆಗೆ ಹೊರಟ ಬಾಲಕ

Viral Video: ಶಾಲಾ ಸಮವಸ್ತ್ರ ಧರಿಸಿದ ಬಾಲಕ, ಬ್ಯಾಗ್ ಧರಿಸಿಕೊಂಡು ಸಂಜೆ 7 ಗಂಟೆ ಎನ್ನುವ ಅರಿವಿಲ್ಲದೆ ಆತ್ಮವಿಶ್ವಾಸದಿಂದ ಶಾಲೆಗೆ ಹೊರಟ ದೃಶ್ಯವೊಂದು ವೈರಲ್ ಆಗಿದೆ. ಬಾಲಕನು ಮಧ್ಯಾಹ್ನ ದೀರ್ಘಕಾಲ ನಿದ್ರೆ ಮಾಡಿದ್ದು ಸಂಜೆ 7 ಗಂಟೆ ಸುಮಾರಿಗೆ ಎಚ್ಚರವಾದಾಗ, ಬೆಳಗ್ಗೆಯಾಗಿದೆ ಎಂದು ಭಾವಿಸಿ ಶಾಲೆಗೆ ಹೊರಟಿದ್ದಾನೆ.‌

ಹಣ್ಣುಗಳ ಮೇಲೆ ಚರಂಡಿ ನೀರು ಚಿಮುಕಿಸಿ, ಗಟಗಟನೆ ಕುಡಿದ ವ್ಯಾಪಾರಿ: ಮುಖ ಸಿಂಡರಿಸುವ ಮುನ್ನ ವಿಡಿಯೊ ನೋಡಿ

ಹಣ್ಣುಗಳಿಗೆ ಚರಂಡಿ ನೀರು ಸಿಂಪಡಿಸಿದ ವ್ಯಾಪಾರಿ: ಕಿಡಿಕಾರಿದ ನೆಟ್ಟಿಗರು

Viral Video: ವ್ಯಾಪಾರಿಯೊಬ್ಬ ಹಣ್ಣುಗಳಿಗೆ ಚರಂಡಿ ನೀರು ಸಿಂಪಡಿಸುತ್ತಿದ್ದ ಘಟನೆವೊಂದು ಬೆಳಕಿಗೆ ಬಂದಿದೆ. ಮುಂಬೈ ಸಮೀಪದ ವಿರಾರ್ ವೆಸ್ಟ್‌ನಲ್ಲಿ ಈ ದೃಶ್ಯ ನಡೆದಿದ್ದು ಮಾರಾಟ ಮಾಡಲು ಇಟ್ಟಿದ್ದ ಹಣ್ಣುಗಳ ಮೇಲೆ ವ್ಯಾಪಾರಿ ಚರಂಡಿಯ ಕೊಳಕು ನೀರನ್ನು ಸಿಂಪಡಿಸುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಚರಂಡಿ ನೀರನ್ನು ಕುಡಿದಿದ್ದಾನೆ. ಸದ್ಯ ಇದನ್ನು ಗಮನಿಸಿದ ನೆರೆಹೊರೆಯವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೆಣಸಿನಕಾಯಿ ನೆನೆಸಿಟ್ಟ ನೀರಿನಲ್ಲಿ ಸ್ನಾನ ಮಾಡಲು ನೀವು ಸಿದ್ಧರಿದ್ದೀರಾ? ಚೀನಾಕ್ಕೆ ಭೇಟಿ ನೀಡಿ

ಮೆಣಸಿನಕಾಯಿ ನೀರಿನ ಸ್ನಾನ ಮಾಡ್ತೀರಾ? ಇಲ್ಲಿಗೆ ಭೇಟಿ‌ ನೀಡಿ

Viral Video: ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಜಗತ್ತಿನ ಗಮನ ಸೆಳೆದಿದೆ. ಚೀನಾದ ರೆಸಾರ್ಟ್‌ ಒಂದರಲ್ಲಿ 'ಹಾಟ್ ಪಾಟ್ ಸ್ಪಾ' ಎಂದು ಕರೆಯಲಾಗುವ ಸ್ಪಾಟ್ ಇದ್ದು, ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಹಾಕಲಾಗುತ್ತದೆ. ಮೆಣಸಿನಕಾಯಿ ತುಂಬಿದ ನೀರು ಒಂದು ಬದಿಯಲ್ಲಿ ಕೆಂಪು ಬಣ್ಣದಿಂದ ಕೂಡಿದ್ದು, ಇನ್ನೊಂದು ಬದಿಯಲ್ಲಿ ಹಾಲು ಮತ್ತು ಇತರ ತರಕಾರಿಗಳಿಂದ ಕೂಡಿದೆ.

ಕುಡಿದ ಮತ್ತಿನಲ್ಲಿ ಅರೆಬೆತ್ತಲೆಯಾಗಿ ಪತ್ನಿ ಮೇಲೆ ಹಲ್ಲೆ ನಡೆಸಿದ ಕಾನ್‌ಸ್ಟೇಬಲ್; ಚಿಕ್ಕ ಮಗು ಕೈಲಿದ್ರೂ ಮನಸ್ಸು ಕರಗಲಿಲ್ಲ

ಅರೆಬೆತ್ತಲೆಯಾಗಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಪೇದೆ

Constable attacks wife: ಕುಡಿದ ಮತ್ತಿನಲ್ಲಿ ಕಾನ್‌ಸ್ಟೇಬಲ್‍ ಒಬ್ಬ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತ್ನಿಯು ತನ್ನ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ, ಪೇದೆಯು ಅರೆಬೆತ್ತಲೆಯಾಗಿದ್ದು, ಮನಬಂದಂತೆ ಹೆಂಡತಿಗೆ ಥಳಿಸಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ; ಮೈಜುಮ್ಮೆನ್ನಿಸುವ ವಿಡಿಯೊ ವೈರಲ್

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ

Cobra caught with mouth: ಕೈಯಿಂದಲ್ಲ, ಬಾಯಿಯಿಂದಲೇ ನಾಗರಹಾವನ್ನು ಹಿಡಿದ ವ್ಯಕ್ತಿಯೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಅಪಾಯಕಾರಿ ಕೃತ್ಯವು ಬೆಚ್ಚಿ ಬೀಳಿಸುವಂತಿದ್ದು, ವ್ಯಕ್ತಿಯ ಧೈರ್ಯ ಮತ್ತು ಅಜಾಗರೂಕತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಒಡಿಶಾದ ಬಾಲಸೋರ್‌ನಲ್ಲಿ ಈ ಘಟನೆ ನಡೆದಿದೆ.

ಮೊಬೈಲ್ ಕದಿಯಲು ಮುಂದಾದ ಕಳ್ಳನಿಗೆ ತಕ್ಕ ಶಾಸ್ತ್ರಿ: ‘ಇನ್‌ಸ್ಟಂಟ್ ಕರ್ಮ’ ಎಂದ ನೆಟ್ಟಿಗರು

ಫೋನ್ ಕದಿಯಲು ಹೋಗಿ ಬಸ್‌ನೊಳಗೆ ಸಿಲುಕಿದ ಖದೀಮ

Viral Video: ಕಳ್ಳನೊಬ್ಬ ಬಸ್‌ನಲ್ಲಿದ್ದ ಪ್ರಯಾಣಿಕನ ಮೊಬೈಲ್ ಕದಿಯಲು ಮುಂದಾಗಿರುವ ಘಟನೆ ನಡೆದಿದೆ. ಆತ ಚಲಿಸುವ ಬಸ್‌ನ ಕಿಟಕಿಯಲ್ಲೇ ಸಿಲುಕಿಕೊಂಡು, ಸುಮಾರು ದೂರದವರೆಗೆ ನೇತಾಡಿದ್ದಾನೆ. ಬಸ್ ಚಲಿಸುತ್ತಿರುವಾಗ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಚಲಿಸುವ ಬಸ್‌ನ ಹೊರಗೆ ನೆತಾಡುತ್ತಾ ಪ್ರಯಾಣಿಕರ ಕೈಗೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಇದರ ವಿಡಿಯೊ ವೈರಲ್ ಆಗಿದೆ.

Loading...