ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Fact Check: ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಬೆಂಬಲ ಸೂಚಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್? ವೈರಲ್‌ ನ್ಯೂಸ್‌ನ ಅಸಲಿಯತ್ತೇನು?

ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಭಾರತ ಬೆಂಬಲ?

ಪಾಕಿಸ್ತಾನ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಭಾರತ ಬೆಂಬಲ ನೀಡುತ್ತಿದೆ. ಇದನ್ನು ಸ್ವತಃ ಭಾರತದ ರಕ್ಷಣಾ ಸಚಿವರೇ ಹೇಳಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ನಕಲಿ ವಿಡಿಯೋ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್ ಚೆಕ್ ವಿಭಾಗವು ಸೋಮವಾರ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಜತೆ ಸಾಲಿನಲ್ಲಿ ನಿಂತು ಶಾಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದಿ ನಾಯಿ: ಕ್ಯೂಟ್ ವಿಡಿಯೊ ಇಲ್ಲಿದೆ

ಶಾಲಾ ಪ್ರಾರ್ಥನೆಯಲ್ಲಿ ಬೀದಿ ನಾಯಿಯೂ ಭಾಗಿ: ಅಪರೂಪದ ವಿಡಿಯೊ ವೈರಲ್‌

Viral News: ಸಿಕ್ಕಿಂನ ಶಾಲೆಯೊಂದರಲ್ಲಿ ಎಲ್ಲರ ಗಮನ ಸೆಳೆಯುವ ದೃಶ್ಯವೊಂದು ಕಂಡು ಬಂದಿದೆ. ಬೀದಿ ನಾಯಿಯೊಂದು ಶಾಲಾ ಪ್ರಾರ್ಥನ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು ಮಕ್ಕಳ ಸಾಲಿನಲ್ಲಿ ಅದು ಕೂಡ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತು ಪಾಲ್ಗೊಂಡಿದೆ. ಸದ್ಯ ಈ ಕ್ಯೂಟ್ ವಿಡಿಯೊ ಭಾರಿ ಗಮನ ಸೆಳೆದಿದೆ.

ಕಾರ್‌ನಿಂದ ಕಸ ಎಸೆದ ಪ್ರವಾಸಿಗರು; ರಸ್ತೆ ಮಧ್ಯದಲ್ಲೇ ತಡೆದು ಕಸ ವಾಪಸ್ ಕೊಟ್ಟ ಸಾಮಾಜಿಕ ಕಾರ್ಯಕರ್ತ!

ಕಸ ಎಸೆದ ಪ್ರವಾಸಿಗರಿಗೆ ತಕ್ಕ ಶಿಕ್ಷೆ ನೀಡಿದ ಸಾಮಾಜಿಕ ಕಾರ್ಯಕರ್ತ

Viral Video: ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡದೇ ಇರುವುದು, ಜವಾಬ್ದಾರಿತನದಿಂದ ವರ್ತಿಸದೇ ಇರುವುದು ಹೀಗೆ ನಾನಾ ದೂರುಗಳು ಕೇಳಿ ಬರುತ್ತಲೇ ಇವೆ. ಅದರಲ್ಲೂ ಪ್ರವಾಸಿ ಸ್ಥಳದಲ್ಲಿ ಕೆಲ ಪ್ರಯಾಣಿಕರು ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಸ್ಸೂರಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರ್ ನಿಂದ ಪ್ಲಾಸ್ಟಿಕ್ ಕಸವನ್ನು ರಸ್ತೆಗೆ ಎಸೆದ ಪ್ರವಾಸಿಗರೊಬ್ಬರನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ತಡೆದು ಬುದ್ದಿ ಮಾತು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ...

ಕೇವಲ 149 ರೂ ಕೊಟ್ಟರೆ ಸಾಕು, ನಿಮ್ಮ ಶಾಪಿಂಗ್ ಬ್ಯಾಗ್ ಹೊರಲು ಕ್ಯಾರಿಮ್ಯಾನ್ ರೆಡಿ! ಏನಿದು ದೆಹಲಿಯ ಹೊಸ ಸೇವೆ!

ದೆಹಲಿಯ ಶಾಪಿಂಗ್ ಮಾಲ್‌ನಲ್ಲಿ ಸಹಾಯ ಮಾಡಲು ಕ್ಯಾರಿಮ್ಯಾನ್

Viral News: ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಡ್ರೆಸ್ ಖರೀದಿಸಲು ಹೆಚ್ಚಿನವರು ಆಸಕ್ತಿ ವಹಿ ಸುತ್ತಾರೆ.. ಶಾಪಿಂಗ್ ಏನೋ ಖುಷಿ...ಆದ್ರೆ ಭಾರವಾದ ಬ್ಯಾಗ್ ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ..ಇದಕ್ಕಾಗಿ ದೆಹಲಿಯಲ್ಲಿ ಸುಲಭವಾದ ಪರಿಹಾರ ಕ್ರಮವೊಂದನ್ನು ಜಾರಿ ಮಾಡಲಾಗಿದೆ. ದೆಹಲಿಯ ಪ್ರಸಿದ್ಧ ಲಜಪತ್ ನಗರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೆರವಾಗಲು ‘ಕ್ಯಾರಿಮ್ಯಾನ್’ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕಾರ್ಪೊರೇಟ್ ಕೆಲಸವನ್ನೇ ತೊರೆದ ವ್ಯಕ್ತಿ; ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ!

ಕಾರ್ಪೊರೇಟ್ ಕೆಲಸ ತ್ಯಜಿಸಿ ಬಡ ಮಕ್ಕಳಿಗೆ ನೆರವಾದ ಹೈದರಾಬಾದ್ ವ್ಯಕ್ತಿ!

Viral News: ಹೈದರಾಬಾದ್ ವಿಯಾಪುರದ ನಿವಾಸಿಯೊಬ್ಬರು ತನ್ನ ಕಾರ್ಪೊರೇಟ್ ಕೆಲಸ ಬಿಟ್ಟು ಬಡ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದಾರೆ. ಕೈ ತುಂಬಾ ಬರುತ್ತಿದ್ದ ಸಂಬಳ ಬಿಟ್ಟು ಇದೀಗ ಇದೀಗ ಸಾವಿ ರಾರು ಬಡ ಮಕ್ಕಳ ಜೀವನವನ್ನು ಬೆಳಗಿಸುತ್ತಿದ್ದಾರೆ. ಸದ್ಯ ಇವರ ಮಾನವೀಯ ಕೆಲಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ...

ಹೃದಯ ವಿದ್ರಾವಕ ದೃಶ್ಯ; 1,500 ರುಪಾಯಿ ಪಿಂಚಣಿ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು 9 ಕಿ.ಮೀ. ನಡೆದ ಮಹಿಳೆ

ವೃದ್ಧ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ನಡೆದ ಮಹಿಳೆ

Woman Carries Mother-in-Law: ಮಹಿಳೆಯೊಬ್ಬಳು ಬ್ಯಾಂಕಿನಿಂದ ಪಿಂಚಣಿ ಹಣವನ್ನು ಪಡೆಯುವ ಸಲುವಾಗಿ, ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸುಡುವ ಬಿಸಿಲು, ಕಾಡಿನ ಹಾದಿ, ಕಲ್ಲು-ಮುಳ್ಳುಗಳು, ಬಂಡೆಗಳು ಮತ್ತು ನದಿಗಳನ್ನು ಅತ್ತೆಯನ್ನು ಹೊತ್ತುಕೊಂಡೇ ಸಾಗಿದ್ದಾರೆ.

ಪೌರ ಕಾರ್ಮಿಕರಿಗೆ ಚಹಾ, ಬಿಸ್ಕೆಟ್ ಕೊಟ್ಟು ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಆನ್‌ಲೈನ್‌ನಲ್ಲಿ ಎಲ್ಲರ ಹೃದಯ ಗೆದ್ದ ಬೆಂಗಳೂರಿನ ಮಹಿಳೆ

ಮಾಡುವ ಸಣ್ಣದೊಂದು ಸಹಾಯ, ತೋರುವ ಕೊಂಚ ಪ್ರೀತಿ, ಕರುಣೆ ಕೂಡ ಕೆಲವೊಬ್ಬರ ಪಾಲಿಗೆ ದೇವರಾಗಿ ಬಂದರೇನೋ ಎಂದೆನಿಸುವಂತೆ ಮಾಡುತ್ತದೆ. ನಿಸ್ವಾರ್ಥವಾಗಿ ಮಾಡುವ ಇಂತಹ ಕಾರ್ಯಗಳೇ ಮಾನವೀಯತೆಯ ಬಹುದೊಡ್ಡ ಉದಾಹರಣೆಗಳಾಗಿ ಕಾಣುತ್ತವೆ. ಹೀಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸಣ್ಣ ಕಾರ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹಗಲಿನಲ್ಲೇ ಮಹಿಳೆಯರಿದ್ದ ಆಟೋ ಬೆನ್ನಟ್ಟಿದ ಬೆತ್ತಲೆ ಕಾಮುಕರು! ಸಂತ್ರಸ್ತೆ ಹೇಳಿದ್ದೇನು?

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರನ್ನು ಬೆನ್ನಟ್ಟಿದ ಕಾಮುಕರು

Viral News: ಮಹಿಳೆರ ಕಿರುಕುಳ, ಅತ್ಯಾಚಾರದಂತ ಘಟನೆಗಳು ವರದಿಯಾಗುತ್ತಲೇ ಇವೆ‌. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ‌. ಮೂವರು ಮಹಿಳೆಯರು ಪ್ರಯಾಣ ಮಾಡುತ್ತಿದ್ದ ಆಟೋ ರೀಕ್ಷಾವನ್ನು ಕಾರಿನಲ್ಲಿ ಬಂದ ಮೂವರು ವಿಕೃತರು ಬೆನ್ನಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಯುವಕರು ಸಂಪೂರ್ಣ ಬೆತ್ತಲಾಗಿದ್ದರು ಎಂದು ತಿಳಿದು ಬಂದಿದೆ.

ಬಾಲ್ಯದ ಮುಗ್ಧತೆ ಕಸಿಯುವ ಯತ್ನ: ಬಾಲಕಿಯ ಮೀತಿ ಮೀರಿದ ಡ್ಯಾನ್ಸ್ ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

ಮಕ್ಕಳಿಗೆ ಈ ನೃತ್ಯ ಸೂಕ್ತವಲ್ಲ: ಮಿತಿ ಮೀರಿದ ಡ್ಯಾನ್ಸ್ ಗೆ ನೆಟ್ಟಿಗರು ಕಿಡಿ

Viral Video: ಇಲ್ಲೊಬ್ಬ ಬಾಲಕಿಯೂ ತನ್ನ ವಯಸ್ಸಿಗೂ ಮೀರಿ ನೃತ್ಯ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧದ ಚರ್ಚೆ ಉಂಟಾಗಿದೆ."ಮಿನಿ ಮಾಧುರಿ" ಎಂದು ಕರೆಯಲ್ಪಡುವ ಅತ್ಯಂತ ಜನಪ್ರಿಯ ಬಾಲ ನರ್ತಕಿ ಬರ್ಕತ್ ಅರೋರಾ ಅವರ ವೀಡಿಯೊವೊಂದು ವೈರಲ್ ಆಗಿದ್ದು ಇಷ್ಟು ಸಣ್ಣ ವಯಸ್ಸಿಗೆ ಇಂತಹ ನೃತ್ಯ ಬೇಕಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ...

ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ; ವಿಡಿಯೊ ವೈರಲ್

ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ

man dresses as a cockroach: ವ್ಯಕ್ತಿಯೊಬ್ಬರು ಯಮುನೆಯ ಮಾಲಿನ್ಯದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿರಳೆ ವೇಷಭೂಷಣ ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಈ ರೀತಿ ವಿಲಕ್ಷಣ ವೇಷ ತೊಟ್ಟು ಗಮನಸೆಳೆದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ 15 ಬೀದಿ ನಾಯಿಗಳಿಂದ ದಾಳಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗುಂಪು ದಾಳಿ: ವಿಡಿಯೊ ವೈರಲ್

Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮೀತಿ ಮೀರಿ ಹೋಗಿದೆ. ಸಾರ್ವಜನಿಕ ರಲ್ಲಿ ಇದು ತೀವ್ರ ಆತಂಕವನ್ನು ಕೂಡ ಮೂಡಿಸಿದೆ. ಇದೀಗ ಬೆಂಗಳೂರಿನ ರಾಮಮೂರ್ತಿ ನಗರದ ಬಳಿಯ ಹೊಯ್ಸಳ ನಗರದಲ್ಲಿ 15 ಕ್ಕೂ ಹೆಚ್ಚು ಬೀದಿ ನಾಯಿಗಳ ಗುಂಪೊಂದು ವಿದ್ಯಾರ್ಥಿನಿಯ ಮೇಲೆ ಹಠಾತ್ತನೆ ದಾಳಿಯನ್ನು ಮಾಡಿವೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಗಮಿಸಿ ನಾಯಿಯನ್ನು ಓಡಿಸಿದ್ದಾರೆ.

"ಜ್ವರ ಬರವುದಕ್ಕೂ ಮೊದಲೇ ಮಾಹಿತಿ ನೀಡಿ ರಜೆ ತೆಗೆದುಕೊಳ್ಳಿ";  ಮ್ಯಾನೇಜರ್ ವಿರುದ್ಧ ಉದ್ಯೊಗಿ ವಾಗ್ದಾಳಿ!

ಅನಾರೋಗ್ಯದ ರಜೆಗೂ ಅನುಮತಿ ಬೇಕು: ಮ್ಯಾನೇಜರ್ ವಿರುದ್ಧ ಯುವತಿ ಕಿಡಿ

Viral Video: ಕೆಲಸದ ಒತ್ತಡ, ರಜೆ ಇಲ್ಲ, ಸ್ಯಾಲರಿ ಹೆಚ್ಚಳ ವಿಲ್ಲ, ಹೀಗೆ ನಾನಾ ನೆಪ ಹೇಳಿ ಕೆಲಸ ತೊರೆ ದವರು ಅನೇಕರು ಇದ್ದಾರೆ‌. ಇದೀಗ ಯುವತಿಯೊಬ್ಬಳು ಮ್ಯಾನೇಜರ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿಯನ್ನು ನಡೆಸಿದ ಘಟನೆಯೊಂದು ಕಂಡುಬಂದಿದೆ. ಉದ್ಯೋಗಿಗಳು ಅನಾರೋಗ್ಯದ ರಜೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಕೇಳಿದ್ದಕ್ಕಾಗಿ ಮ್ಯಾನೇಜರ್ ವಿರುದ್ಧ ಯುವತಿ ಆಕ್ರೋಶ ಗೊಂಡಿದ್ದಾಳೆ. ಸದ್ಯ ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಬಿಸಿಲ ಬೇಗೆಗೆ ಪ್ರಜ್ಞೆ ತಪ್ಪಿ ಬಿದ್ದ ಬಾವಲಿ: ಪ್ರಾಣ ಉಳಿಸಿ ಮಾನವೀಯತೆ ಮೆರೆದ ವಕೀಲ!

ಬಿಸಿಲ ದಾಹಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಬಾವಲಿ: ಹೃದಯಸ್ಪರ್ಶಿ ವಿಡಿಯೊ!

Viral Video: ಬುಂದೇಲ್‌ಖಂಡ್‌ನ ಹಮೀರಪುರ ಜಿಲ್ಲೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ತೀವ್ರ ಶಾಖದ ನಡುವೆ ಮರದಲ್ಲಿ ನೇತಾಡುತ್ತಿದ್ದ ಬಾವಲಿಯೊಂದು ಪ್ರಜ್ಞೆ ತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ವಕೀಲರೊಬ್ಬರು ಅದರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ...

ಭಾರತದಲ್ಲಿ ವೈಯಕ್ತಿಕ ದಾಖಲೆಗಳಿಗಿಲ್ಲ ಸುರಕ್ಷತೆ: 20 ರೂ. ಬೇಲ್ ಪುರಿ ಜೊತೆ ಸಿಕ್ತು ಬ್ಯಾಂಕ್ ಸ್ಟೇಟ್‌ಮೆಂಟ್!

ಬೇಲ್‌ ಪುರಿ ಜೊತೆ ಗ್ರಾಹಕನಿಗೆ ಸಿಕ್ತು ಬ್ಯಾಂಕ್ ಸ್ಟೇಟ್‌ಮೆಂಟ್

Viral News: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯಕ್ತಿಯೊರ್ವರ ಎರಡು ಪುಟಗಳ ಮುದ್ರಿತ ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ಬೇಲ್ ಪುರಿಯನ್ನು ಕಟ್ಟಿಕೊಡಲಾಗಿದೆ. ಈ ಪೇಪರ್ ನಲ್ಲಿ ಆ ವ್ಯಕ್ತಿಯ ಸೂಕ್ಷ್ಮ ವಿವರಗಳನ್ನು ಕೂಡ ದಾಖಲಿಸಲಾಗಿತ್ತು. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಈದ್ ಹಬ್ಬಕ್ಕೆ ಬಲಿಯಾಗಲಿದೆ 'ಡೊನಾಲ್ಡ್ ಟ್ರಂಪ್' ಎಮ್ಮೆ!

ಈದ್ ಹಬ್ಬಕ್ಕೆ ಬಲಿಯಾಗಲಿದೆ 'ಡೊನಾಲ್ಡ್ ಟ್ರಂಪ್' ಎಮ್ಮೆ!

ಬಾಂಗ್ಲಾದೇಶದಲ್ಲಿ ಡೊನಾಲ್ಡ್ ಟ್ರಂಪ್ ಅವರ ಕೇಶವಿನ್ಯಾಸದಂತೆ ಕಾಣುವ ಹೊಂಬಣ್ಣದ ಕೂದಲಿನಿಂದ ಪ್ರಸಿದ್ಧಿ ಪಡೆದ ಅಪರೂಪದ ಅಲ್ಬಿನೋ ಎಮ್ಮೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಮಾರು 700 ಕೆಜಿ ತೂಕದ ಈ ಬೃಹತ್ ಎಮ್ಮೆ ಈದ್-ಉಲ್-ಅದ್ಹಾ ಹಬ್ಬದ ಕುರ್ಬಾನಿಗಾಗಿ ಮಾರಾಟವಾಗಿದ್ದು, ಅದನ್ನು ನೋಡಲು ಪ್ರತಿದಿನ ಸಾವಿರಾರು ಜನರು ಫಾರ್ಮ್‌ಗೆ ಭೇಟಿ ನೀಡುತ್ತಿದ್ದಾರೆ. ಅಪರೂಪದ ಬಿಳಿ ಚರ್ಮ, ಗುಲಾಬಿ ಮೂಗು ಮತ್ತು ವಿಶಿಷ್ಟ ರೂಪದಿಂದ ಈ ಎಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರೀ ಗಮನ ಸೆಳೆದಿದೆ.

ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆಗೆ ಕೊಲೆ ಬೆದರಿಕೆ

ಅಭಿಜೀತ್ ಡಿಪ್ಕೆಗೆ ಕೊಲೆ ಬೆದರಿಕೆ

ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಕಾಕ್ರೋಚ್ ಪಕ್ಷದ ಸ್ಥಾಪಕ ಅಭಿಜೀತ್ ಡಿಪ್ಕೆಗೆ ಕೊಲೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ. ಅಮೆರಿಕದಲ್ಲೇ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆಗಳು ಬರುತ್ತಿವೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.

ಆಪ್ ಜೊತೆ ನಂಟು: ಕಾಕ್ರೋಚ್‌ ಜನತಾ ಪಾರ್ಟಿ ಸೇರಿದ್ದ ಮಾಜಿ ನಾಗರಿಕ ಸೇವಕ ರಾಜೀನಾಮೆ

ಆಪ್ ಜೊತೆಗೆ ಕಾಕ್ರೋಚ್‌ ಜನತಾ ಪಾರ್ಟಿಗಿದೆ ಸಂಬಂಧ ?

ಕೆಲವು ವರ್ಷಗಳ ಹಿಂದೆ ಹುಟ್ಟಿ ಸಾಕಷ್ಟು ಗದ್ದಲವೆಬ್ಬಿಸಿ ಇವತ್ತಿಗೂ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಕ್ಷದೊಂದಿಗೆ ವಾರಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಜನ್ಮ ತಳೆದ ಕಾಕ್ರೋಚ್‌ ಜನತಾ ಪಾರ್ಟಿ ಸಂಬಂಧ ಹೊಂದಿದೆಯೇ? ಈ ಕುರಿತು ಪ್ರಶ್ನಿಸಿದ ಮಾಜಿ ನಾಗರಿಕ ಸೇವಕರಿಗೆ ಯಾವುದೇ ಉತ್ತರ ಸಿಗದೇ ಇದ್ದುದರಿಂದ ಅವರು ಇದೀಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮನ ಕಲಕುವ ದೃಶ್ಯ; ಬಿಸಿಲಿನ ಬೇಗೆಗೆ ದಾಹ ತಾಳಲಾರದೆ ಸರ್ಕಾರಿ ಬಸ್‌ಗೆ ಮುತ್ತಿಗೆ ಹಾಕಿದ ಕೋತಿಗಳ ಹಿಂಡು

ನೀರಿಗಾಗಿ ಸರ್ಕಾರಿ ಬಸ್ ಮುತ್ತಿಗೆ ಹಾಕಿದ ಕೋತಿಗಳು: ವಿಡಿಯೊ ನೋಡಿ

Viral Video: ಬಾಯಿ ಬಾರದ ಮುಖ ಪ್ರಾಣಿಗಳು ಈ ಬಿಸಿಲಿನಲ್ಲಿ ಅನುಭಸುತ್ತಿರುವ ತೊಂದರೆಗಳ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ವಾಶಿಮ್‌ನಿಂದ ಪುಸಾದ್‌ಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಮುಂದೆ ಹಠಾತ್ತನೆ ಕೋತಿಯೊಂದು ಬಂದು ನಿಂತಿದೆ. ಪ್ರಯಾಣಿಕರು ಆರಂಭದಲ್ಲಿ ಪ್ರಾಣಿ ಆಕಸ್ಮಿಕವಾಗಿ ರಸ್ತೆಗೆ ಬಂದಿದೆ ಎಂದುಕೊಂಡು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ನಿಜ ವಿಷಯ ತಿಳಿದು ಅಲ್ಲಿದ್ದವರ ಮನಸ್ಸು ಕರಗಿತು.

ಪ್ರತಿಯೊಬ್ಬ ಪೋಷಕರ ಕನಸು: ಮಗನಿಗೆ ಗೂಗಲ್‌ನಲ್ಲಿ ಕೆಲಸ ಸಿಕ್ಕ ವಿಚಾರ ಕೇಳಿ ಹೆತ್ತವರು ಭಾವುಕ! ಹೃದಯಸ್ಪರ್ಶಿ ವಿಡಿಯೊ ವೈರಲ್‌

ಮಗನಿಗೆ ಗೂಗಲ್ ಕಂಪನಿಯಲ್ಲಿ ಕೆಲಸ ಸಿಕ್ಕ ಖುಷಿಗೆ ಪೋಷಕರು ಭಾವುಕ

Viral Video: ಪ್ರತಿಷ್ಠಿತ ಗೂಗಲ್‌ನಲ್ಲಿ ಕೆಲಸ ಸಿಕ್ಕ ಬಗ್ಗೆ ಯುವಕ ಪೋಷಕರ ಬಳಿ ಹೇಳಿಕೊಂಡಿದ್ದು, ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಇದು ಪೋಷಕರ ಪ್ರಯತ್ನ, ಮಕ್ಕಳ ಮೇಲಿನ ನಂಬಿಕೆ, ಕಠಿಣ ಪರಿಶ್ರಮಕ್ಕೆ ಸಾಕ್ಷಿ ಎನಿಸಿಕೊಂಡಿದೆ.

ಟ್ರಾಫಿಕ್ ನಿಯಮ ಜನಸಾಮಾನ್ಯರಿಗೆ ಮಾತ್ರನಾ? ಹೆಲ್ಮೆಟ್‌ ಧರಿಸದೆ ಬುಲೆಟ್‌ ಓಡಿಸಿದ ಇಂದೋರ್ ಶಾಸಕನ ವಿರುದ್ಧ ಮುಗಿಬಿದ್ದ ನೆಟ್ಟಿಗರು

ಇಂದೋರ್ ಶಾಸಕನ ಹೆಲ್ಮೆಟ್ ರಹಿತ ಬುಲೆಟ್ ಸವಾರಿ: ನೆಟ್ಟಿಗರು ಆಕ್ರೋಶ!

Viral Video: ಮಧ್ಯ ಪ್ರದೇಶದ ಬಿಜೆಪಿ ನಾಯಕ, ಶಾಸಕ ಮಹೇಂದ್ರ ಹರ್ದಿಯಾ ಇಂದೋರ್‌ನ ಬೀದಿಗಳಲ್ಲಿ ಹೆಲ್ಮೆಟ್‌ ಧರಿಸದೆ ರಾಯಲ್ ಎನ್‌ಫೀಲ್ಡ್ ಸವಾರಿ ಮಾಡುತ್ತಿರುವ ದೃಶ್ಯ ವೈರಲ್‌ ಆಗಿದೆ. ಬೈಕು ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಒಂದು ನ್ಯಾಯ? ಜನಸಾಮಾನ್ಯರಿಗೆ ಒಂದು ನಿಯಮವೇ? ಎಂದು ಹಲವರು ಪ್ರಶ್ನಿಸಿದ್ದಾರೆ.

''ಗಣತಿಯಲ್ಲಿ ನನ್ನ ಹೆಸರೂ ಸೇರಿಸಿ'': ಸಭಾಂಗಣಕ್ಕೆ ಎಂಟ್ರಿ ಕೊಟ್ಟು ಸೆನ್ಸಸ್‌ ತರಬೇತಿ ಆಲಿಸಿದ ಮಂಗಣ್ಣ! ವಿಡಿಯೊ ನೋಡಿ

ಜನಗಣತಿ ಕಾರ್ಯಾಗಾರಕ್ಕೆ ಕೋತಿಯ ಎಂಟ್ರಿ: ಕ್ಯೂಟ್ ವಿಡಿಯೊ ನೋಡಿ

Viral Video: ಗುಜರಾತ್‌ನಲ್ಲಿ ನಡೆದ ಜನಗಣತಿ 2026ರ ಸಿದ್ಧತೆಗಳಿಗಾಗಿ ತರಬೇತಿಯೊಂದನ್ನು ಆಯೋಜಿಸಲಾಗಿತ್ತು‌. ಈ ಕಾರ್ಯಾಗಾರದ ಅವಧಿಯಲ್ಲಿ ಮಂಗವೊಂದು ಆಕಸ್ಮಿಕವಾಗಿ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದೆ. ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರು ಹಾಗೂ ಅಧಿಕಾರಿಗಳು ಇದ್ಯಾರಪ್ಪಾ ಹೊಸ ಜನ ಎಂದು ನಿಬ್ಬೆರಗಾಗಿ ನೋಡಿದ್ದಾರೆ.

ಅಸಹ್ಯದ ಪರಮಾವಧಿ; ಟ್ರಕ್‌ ಹಿಂಭಾಗದಲ್ಲಿ ಅಂಟಿಸಿದ ಮಹಿಳೆಯರ ಪೋಸ್ಟರ್ ನೆಕ್ಕಿದ ಕಾಮುಕ ಅಂಕಲ್‌! ವಿಡಿಯೊ ವೈರಲ್‌

ಮಹಿಳೆಯರ ಪೋಸ್ಟರ್‌ ನೆಕ್ಕಿದ ವಿಕೃತ ವ್ಯಕ್ತಿ: ವಿಡಿಯೊ ವೈರಲ್

Viral Video: ಟ್ರಕ್‌ನ ಹಿಂಭಾಗದಲ್ಲಿ ಅಂಟಿಸಿದ್ದ ಮಹಿಳೆಯರ ಪೋಸ್ಟರ್‌ಗಳನ್ನು ವೃದ್ಧನೊಬ್ಬ ನಾಲಗೆಯಿಂದ ನೆಕ್ಕುತ್ತಿರುವ ದೃಶ್ಯ ವೈರಲ್‌ ಆಗಿದೆ. ಈ ಅಸಹ್ಯ ದೃಶ್ಯ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹಿಳೆಯರ ರಕ್ಷಣೆ ಎತ್ತ ಸಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಅಯ್ಯಯ್ಯೋ ಶಿಕ್ಷಕಿಯ ಸ್ಕೂಟರ್ ಡಿಕ್ಕಿ ಹೊಡೆದ ರಭಸಕ್ಕೆ ಆನೆಯ ದಂತವೇ ಕಟ್!

ಪ್ರಾಣಿಗಳು ಸಹ ಸುರಕ್ಷಿತವಲ್ಲ: ಸ್ಕೂಟರ್ ಡಿಕ್ಕಿಯಾಗಿ ಆನೆಯ ದಂತವೇ ಕಟ್

Viral News: ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಆನೆ ನೋಡಿದರೆ ಎಂತಹವರ ಎದೆಯೂ ಒಡೆಯುತ್ತದೆ. ಅದೇ ರೀತಿ ಉತ್ತರಾಖಂಡದ ಖತಿಮಾ ರಸ್ತೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿಕ್ಷಕಿಯೊಬ್ಬರು ಕಾಡಿನ ಮಧ್ಯದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಆನೆ ಹಠಾತ್ತನೆ ಎಂಟ್ರಿ ನೀಡಿದೆ. ಸ್ಕೂಟರ್ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಆನೆಯ ದಂತವೇ ಬಿದ್ದು ಹೋಗಿದೆ.

"ಕೆಲಸಕ್ಕೂ ಬ್ಯಾಂಕ್ ಬ್ಯಾಲೆನ್ಸ್‌ಗೂ ಹೋಲಿಕೆ ಆಗ್ತಿಲ್ಲ": ಆಫೀಸ್ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಜೆನ್-ಜಿ  ಉದ್ಯೋಗಿ!

ಕೆಲಸದ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಯುವತಿ

Viral News: ಜೆನ್ ಜಿ ಉದ್ಯೋಗಿಯೊಬ್ಬರು ಕಚೇರಿಯ ಒತ್ತಡ ಹಾಗೂ ಕಡಿಮೆ ಸಂಬಳಕ್ಕೆ ಬೇಸತ್ತು ಕೆಲಸಕ್ಕೆ ರಿಸೈನ್ ನೀಡಿರುವ ಘಟನೆಯೊಂದು ನಡೆದಿದೆ. ಲಕ್ನೋ ಮೂಲದ ಉದ್ಯೋಗಿಯೊಬ್ಬರು ತಮ್ಮ ರಾಜೀನಾಮೆ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Loading...