ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಆರ್ಥಿಕ ಸ್ವಾತಂತ್ರ್ಯವೇ ಮುಖ್ಯ: ಐಟಿ ಕೆಲಸ ಬಿಡಲು ಹೇಳಿದ ಯುವಕನ ಮದುವೆ ಪ್ರಪೋಸಲ್ ಅನ್ನೇ ಕ್ಯಾನ್ಸಲ್ ಮಾಡಿದ ಯುವತಿ!

ದುಪ್ಪಟ್ಟು ವೇತನ ಗಳಿಸುವ ವರನನ್ನೇ ರಿಜೆಕ್ಟ್ ಮಾಡಿದ ಯುವತಿ: ಕಾರಣವೇನು?

Viral News: ಯುವತಿಯರು ಇಂದು ಆರ್ಥಿಕ ಸ್ವಾವಲಂಬಿಯಾಗಿ ಬದುಕಲು ಇಚ್ಚಿಸಿದ್ದು ತಾವು ಉತ್ತಮ ಉದ್ಯೋಗದಲ್ಲಿದ್ದಾರೆ. ಹೀಗಾಗಿ ವರನಿಂದ ದುಪ್ಪಟ್ಟು ಆದಾಯ ಬರುತ್ತಿದ್ದರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಅನೇಕ ಯುವತಿಯರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ಯುವತಿಯೊಬ್ಬಳು ತಿಂಗಳಿಗೆ ಎರಡು ಲಕ್ಷ ಬರುತ್ತಿದ್ದ ಯುವಕನ ಪ್ರಪೋಸಲ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ‌. ಇದಕ್ಕೆ ಕಾರಣವೆನೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ...

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ವೇಳೆ ರಸ್ತೆಯಲ್ಲೇ ಕುಡಿದು ಗಲಾಟೆ:  ವೈರಲ್‌ ಆಗ್ತಿದೆ ವಿಡಿಯೋ

ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಡಿದು ರಂಪಾಟ ಮಾಡಿದ ಪಾಕಿಸ್ತಾನಿ ನಾಗರಿಕರು

Viral Video: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಈ ದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾರ್ವಜನಿಕರು ಪರಸ್ವರ ಗಲಾಟೆ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಪಾಕಿಸ್ತಾನಿ ನಾಗರಿಕರು ರಸ್ತೆಗಳಲ್ಲಿ ಜಗಳವಾಡುತ್ತಾ, ಪರಸ್ಪರ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಅಂತ್ಯಕ್ರಿಯೆಗೆ ಮುನ್ನ ಖಾಲಿ ಕಾಗದಗಳಲ್ಲಿ ಮೃತ ತಂದೆಯ  ಹೆಬ್ಬೆರಳಿನ ಗುರುತು ಪಡೆದ ಮಗ! ವಿಡಿಯೋ ನೋಡಿ

ಖಾಲಿ ಕಾಗದಗಳಲ್ಲಿ ಮೃತ ತಂದೆಯ ಹೆಬ್ಬೆರಳಿನ ಗುರುತು ಪಡೆದ ಮಗ!

family dispute: ಅಂತ್ಯಕ್ರಿಯೆಗೂ ಮುನ್ನ ಖಾಲಿ ಕಾಗದಗಳಲ್ಲಿ ಮೃತ 75 ವರ್ಷದ ವ್ಯಕ್ತಿಯೊಬ್ಬರ ಹೆಬ್ಬೆರಳಿನ ಗುರುತನ್ನು ಪಡೆಯಲಾಗಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಗದದ ಹಾಳೆಗಳ ಮೇಲೆ ಮೃತ ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ತೆಗೆದುಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

ರೈಲು ಪ್ರಯಾಣದಲ್ಲಿ ಆಹಾರ ಖರೀದಿಸುವ ಮುನ್ನ ಎಚ್ಚರ! ಉದ್ಯೋಗ್ ನಗರಿ ಎಕ್ಸ್‌ಪ್ರೆಸ್‌ ಟ್ರೈನ್‌ ಫುಡ್‌ನಲ್ಲಿ ಇಲಿ ಓಡಾಟ

ರೈಲು ಪ್ರಯಾಣಿಕರಿಗಾಗಿ ತಯಾರಿಸಿದ ಆಹಾರದಲ್ಲಿ ಇಲಿ ಓಡಾಟ

Viral Video: ಉದ್ಯೋಗ ನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಆಹಾರದ ಮೇಲೆ ಇಲಿಯೊಂದು ತೆವಳುತ್ತಿರುವುದು ಮತ್ತು ಹಿಟ್ಟನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೈಲ್ವೇ ಆಡಳಿತ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.

"ಸಿಬ್ಬಂದಿಯ ರೆಸ್ಪಾನ್ಸ್ ಇಲ್ಲ, ಉಪಹಾರವೂ ಇಲ್ಲ'': ಮುಂಬೈ-ಗೋವಾ ಸ್ಪೈಸ್‌ಜೆಟ್ ವಿಮಾನ 6 ಗಂಟೆ ವಿಳಂಬ; ಪ್ರಯಾಣಿಕರಿಗೆ ನರಕಯಾತನೆ

ಮುಂಬೈ-ಗೋವಾ ವಿಮಾನ 6 ಗಂಟೆ ವಿಳಂಬ: ಕಾದು ಸುಸ್ತಾದ ಪ್ರಯಾಣಿಕರು

Viral Video: ವಿಮಾನವೊಂದು 6 ಗಂಟೆ ವಿಳಂಬವಾಗಿದ್ದು, ಸಿಬ್ಬಂದಿ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿದ ಘಟನೆ ನಡೆದಿದೆ. ಯಾವುದೇ ಸರಿಯಾದ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಪ್ರಯಾಣಿಕರು ದೀರ್ಘ ಕಾಲದವರೆಗೆ ಕಾದು ಕೂರುವಂತೆ ಮಾಡಲಾಗಿದೆ. ಕ್ಯಾಪ್ಟನ್ ಅವರನ್ನು ಪದೇ ಪದೆ ವಿನಂತಿಸಿದರೂ ವಿಳಂಬಕ್ಕೆ ಕಾರಣ ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋದ ಯುಟ್ಯೂಬರ್ ಪತ್ನಿ: ʼರೇಸಿಂಗ್‌ʼ ದೃಶ್ಯ ವೈರಲ್

ಬಸ್ ಕಂಡಕ್ಟರ್ ಜತೆ ಓಡಿ ಹೋದ ಯುಟ್ಯೂಬರ್ ಪತ್ನಿ: ವಿಡಿಯೊ ವೈರಲ್

Viral Video: ಕೇರಳಂನ ಯುಟ್ಯೂಬರ್ ಅಖಿಲ್ ಎನ್‌.ಆರ್‌.ಡಿ. ಮತ್ತು ಅವರ ಪತ್ನಿಯ ದಾಂಪತ್ಯ ಕಲಹದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮದುವೆ ಆದ ಕೆಲವೇ ತಿಂಗಳಿನಲ್ಲಿ ಅವರ ಪತ್ನಿ ಮೇಘಾ ಖಾಸಗಿ ಬಸ್ ಕಂಡಕ್ಟರ್‌ ಜತೆ  ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಮೇಘಾ ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

200 ರುಪಾಯಿಯ ಮೀನು ಊಟಕ್ಕೆ 300 ರುಪಾಯಿ ಬಿಲ್: ರಣರಂಗವಾಯ್ತು ಹೋಟೆಲ್‌; ಗ್ರಾಹಕ- ಸಿಬ್ಬಂದಿಯ ಮಾರಾಮಾರಿಯ ವಿಡಿಯೊ ವೈರಲ್‌

200 ರುಪಾಯಿಯ ಊಟಕ್ಕೆ 300 ರುಪಾಯಿ ಬಿಲ್; ಮುಂದೇನಾಯ್ತು?

Viral News: ಹೋಟೆಲ್‌ಗೆ ಬಂದ ಗ್ರಾಹಕರಿಗೆ ಮೀನಿನ ಖಾದ್ಯ ಆರ್ಡರ್ ಮಾಡುವಾಗ 200 ರುಪಾಯಿ ಎಂದು ಹೇಳಲಾಗಿತ್ತು. ಆದರೆ ಊಟ ಮುಗಿಸಿ ಬಿಲ್ ನೋಡಿದಾಗ 300 ರುಪಾಯಿ ಎಂದು ನಮೂದಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಹಕ ಹೋಟೆಲ್‌ ಸಿಬ್ಬಂದಿ ಜತೆ ಜಗಳ ಆರಂಭಿಸಿದ್ದಾನೆ. ಘಟನೆಯಲ್ಲಿ ಹಲವು ಮಂದಿ ಜನರು ಗಾಯಗೊಂಡಿದ್ದು, ಪೀಠೋಪಕರಣಗಳು ಹಾನಿಗೊಳಗಾಗಿವೆ.

"ದೇಶ ಬದಲಾಗುತ್ತಿದೆ": ಹಿಂಸಾಚಾರ ತೊರೆದು ಕೈಮಗ್ಗ ಸೀರೆ ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮಾಜಿ ಮಾವೋವಾದಿಗಳು

ಫ್ಯಾಷನ್ ಶೋದಲ್ಲಿ ರ‍್ಯಾಂಪ್ ವಾಕ್ ಮಾಡಿ ಗಮನ ಸೆಳೆದ ಮಾಜಿ ನಕ್ಸಲರು

Viral Video: ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು ಇಂದು ಸಮಾಜದ ಮುಖ್ಯ ಭಾಗವಾಗಿದ್ದಾರೆ. ರಾಯ್ ಪುರದಲ್ಲಿ ಆಯೋಜನೆ ಮಾಡಲಾಗಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಕೈಮಗ್ಗ ಉಡುಪುಗಳನ್ನು ಧರಿಸಿ ಈ ಮಹಿಳೆಯರು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಬಸ್ತಾರ್‌ನಲ್ಲಿ ಸಶಸ್ತ್ರ ದಂಗೆಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ಶ್ವಾನದ ದಾಳಿ! ಭಯಾನಕ ವಿಡಿಯೊ ವೈರಲ್‌

ಬಾಡಿಗೆ ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ದಾಳಿ

Viral Video: ಪಂಜಾಬ್‌ನ ಪಟಿಯಾಲದ ಮನೆಯೊಂದರ ಹೊರಗೆ ಪಿಟ್‌ಬುಲ್ ಶ್ವಾನ ನಡೆಸಿದ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅಂಕಿತ್ ಸಭರ್ವಾಲ್ ಮತ್ತು ಅವರ ಪತ್ನಿ ಶಿಫಾಲಿ ಬಾಡಿಗೆ ಮನೆಯನ್ನು ನೋಡಲು ತೆರಳಿದಾಗ ಈ ಘಟನೆ ನಡೆದಿದೆ. ದಂಪತಿ ಗೇಟ್ ತೆರೆದ ಕ್ಷಣದಲ್ಲಿ ಸಾಕು ನಾಯಿ ಓಡಿ ಬಂದು ದಾಳಿ ಮಾಡಿದೆ.

ಹೊಡಿ ಮಗ ಹೊಡಿ ಮಗ...: ಕಾಲೇಜಿನಲ್ಲಿ ತಾರಕಕ್ಕೇರಿದ ಜಡೆ ಜಗಳ; ಯುವತಿಯರ ಕಾಳಗದ ವಿಡಿಯೊ ವೈರಲ್‌

ಕಾಲೇಜು ವಿದ್ಯಾರ್ಥಿಗಳಿಂದ ಭೀಕರ ಘರ್ಷಣೆ: ಶಿಸ್ತಿನ ಬಗ್ಗೆ ನೆಟ್ಟಿಗರು ಕಿಡಿ

Viral Video: ಕಾಲೇಜೊಂದರಲ್ಲಿ ಯುವತಿಯರ ಎರಡು ಗುಂಪಿನ ನಡುವೆ ಭೀಕರ ಜಗಳ ನಡೆದಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯುವಕನೊಬ್ಬ ಈ ದೃಶ್ಯ ರೆಕಾರ್ಡ್ ಮಾಡಿದ್ದಾರೆ. ಘರ್ಷಣೆ ತಾರಕಕ್ಕೇರುವ ಮೊದಲು ಎರಡು ಗುಂಪುಗಳು ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಂಡು ಬಂದಿದೆ.

ಪೌಷ್ಟಿಕ ಆಹಾರ ಮರೀಚಿಕೆ; ಅಂಗನವಾಡಿ ಮಕ್ಕಳಿಗೆ ಪೂರಿ, ಉಪ್ಪು ಆಹಾರವಾಗಿ ಬಡಿಸಿದ ಶಿಕ್ಷಕಿಯರು: ವಿಡಿಯೊ ನೋಡಿ

ಅಂಗನವಾಡಿಯಲ್ಲಿ ಮಕ್ಕಳಿಗೆ ಪೂರಿ, ಉಪ್ಪೇ ಆಹಾರ

Viral Video: ಮಧ್ಯ ಪ್ರದೇಶದ ಮೈಹಾರ್ ಜಿಲ್ಲೆಯ ಕಾಕ್ರಾ ಅಂಗನವಾಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಬದಲಿಗೆ ಕೇವಲ ಪೂರಿ ಮತ್ತು ಉಪ್ಪನ್ನು ನೀಡಿರುವ ಘಟನೆ ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಂಗನವಾಡಿ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಸದ್ದಿಲ್ಲದೆ ನಡೆಯಿತು ಮತ್ತೊಂದು ಜೆನ್‌ ಝೀ ಕ್ರಾಂತಿ: ರಸ್ತೆ ದುರವಸ್ತೆ ತೋರಿಸಲು ನ್ಯೂಸ್ ರಿಪೋರ್ಟರ್ ಆದ ಬಾಲಕಿಯರು; ವಿಡಿಯೊ ವೈರಲ್ ಬೆನ್ನಲ್ಲೇ ರಾತ್ರೋರಾತ್ರಿ ಕಾಮಗಾರಿ

ರಸ್ತೆ ಗುಂಡಿ ಮುಚ್ಚಲು ವಿಡಿಯೊ ಮೂಲಕ ಬಾಲಕಿಯರಿಂದ ಜಾಗೃತಿ

Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮೂವರು ಶಾಲಾ ಬಾಲಕಿಯರು ರಸ್ತೆಯ ದುರವಸ್ಥೆಯನ್ನು ಎತ್ತಿ ತೋರಿಸಲು ವಿಭಿನ್ನ ಪ್ಲ್ಯಾನ್‌ ಮಾಡಿದ್ದಾರೆ. ಬಾಲಕಿಯರು ಮಡಚಿದ ಛತ್ರಿಯನ್ನೇ ಮೈಕ್ ರೀತಿಯಲ್ಲಿ ಹಿಡಿದು ‘ನ್ಯೂಸ್ ರಿಪೋರ್ಟರ್’ ಥರ ನಟಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಭಾರತದ ವೈದ್ಯಕೀಯ ಸೌಲಭ್ಯಕ್ಕೆ ಬ್ರಿಟನ್ ಪ್ರಜೆ ಫಿದಾ

Viral News: ಬ್ರಿಟನ್‌ನ ಜೀನ್ ಪೌಲ್ ತೀವ್ರ ಮೊಣಕಾಲು ನೋವು ಇದ್ದ ಕಾರಣ ದಿನ ನಿತ್ಯದ ನಡಿಗೆ ಕಷ್ಟವಾಗಿತ್ತು. ಆದರೆ ಶಸ್ತ್ರಚಿಕಿತ್ಸೆಗಾಗಿ ಬ್ರಿಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 3 ವರ್ಷಗಳವರೆಗೆ ಕಾಯಲು ಹೇಳಿದ್ದರು. ಖಾಸಗಿಯಾಗಿ ಆಸ್ಪತ್ರೆಯಲ್ಲಿ 51.56 ಲಕ್ಷ ರುಪಾಯಿ ತಗುಲುತ್ತದೆ ಎಂದು ತಿಳಿಸಲಾಗಿತ್ತು. ಆದದೆ ಇದೇ ಸೌಲಭ್ಯವನ್ನು ಭಾರತದಲ್ಲಿ ಎಷ್ಟು ಕಡಿಮೆ ಮೊತ್ತಕ್ಕೆ ಪಡೆಯಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಭಾರತದ ಆರೋಗ್ಯ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ

ರೈಲು ವೇಗವಾಗಿ ಬರುತ್ತಿದ್ದರೂ ಮಕ್ಕಳನ್ನು ಅಪ್ಪಿ ಹಿಡಿದು ಜೀವ ಉಳಿಸಿದ ತಾಯಿ

Viral Video: ಪ್ಲಾಟ್‌ಫಾರ್ಮ್ ಹಾಗೂ ಹಳಿಯ ನಡುವಿನ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡ ಮಕ್ಕಳನ್ನು ತಾಯಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ತಾಯಿಮಕ್ಕಳನ್ನು ಗೋಡೆಗೆ ಹಿಡಿದು, ಅವರಿಗೆ ಅಡ್ಡಲಾಗಿ ನಿಂತು ಕಾಪಾಡಿದರು. ರೈಲಿನ ಕಬ್ಬಿಣದ ಭಾಗಗಳು ಪದೇ ಪದೆ ಬೆನ್ನಿಗೆ ತಗುತ್ತಿದ್ದರೂ ನೋವು ಸಹಿಸಿಕೊಂಡು ಮಕ್ಕಳನ್ನು ರಕ್ಷಿಸಿದ್ದಾರೆ.

ನರೇಂದ್ರ ಮೋದಿ–ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವೈರಿಗಳ ಅಪರೂಪದ ಕ್ಷಣ ವೈರಲ್

ಭಿನ್ನಾಭಿಪ್ರಾಯ ಮರೆತು ನಗೆಯ ಹಂಚಿಕೆ: ಮೋದಿ–ಖರ್ಗೆ ಸಂಭಾಷಣೆ ವೈರಲ್

Narendra Modi: ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ವೇಳೆ ಮೋದಿ ಮತ್ತು ಖರ್ಗೆ ನಡುವೆ ನಡೆದ ಲಘು ಧಾಟಿಯ ಸಂಭಾಷಣೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಖರ್ಗೆ ಮೋದಿ ಅವರಿಗೆ “ನೀವು ಸ್ವಲ್ಪ ಬದಲಾಗಿದ್ದೀರಿ” ಎಂದು ಹೇಳಿದ್ದು, ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿದ ದೃಶ್ಯ ಗಮನ ಸೆಳೆದಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ನಾಯಕರ ಈ ಸ್ನೇಹಪೂರ್ಣ ಕ್ಷಣ ಅಪರೂಪದಲ್ಲಿ ಅಪರೂಪ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೇ ಸೇತುವೆ ಮೇಲೆ ನಿಂತು ಯುವಕರ ಅಪಾಯಕಾರಿ ಸಾಹಸ: ವಿಡಿಯೋ ನೋಡಿ

ರೈಲ್ವೇ ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನ ಮಧ್ಯೆ, ಬ್ರಿಡ್ಜ್‌ ಮೇಲೆ ನಿಂತೂ ರೀಲ್ಸ್ ರೆಕಾರ್ಡ್ ಮಾಡಿದ ಅನೇಕ ಘಟನೆಗಳು ವೈರಲ್ ಆಗಿವೆ. ಇದೀಗ ಮುಂಬೈನ ಭಾಯಂದರ್ ಖಾಡಿಯ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆಯುತ್ತಿದೆ. ಈ ಅಪಾಯ ಕಾರಿ ಸಾಹಸ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಕನ್ವರ್‌ ಯಾತ್ರೆಯಲ್ಲಿ ಶಿವನ ವಾಹನ ನಂದಿ ಪ್ರತ್ಯಕ್ಷ! ವಿಡಿಯೊ ನೋಡಿದರೆ ನೀವೂ ಬೆರಗಾಗೋದು ಖಚಿತ

ಕನ್ವರ್‌ ಯಾತ್ರೆಯಲ್ಲಿ ಶಿವನ ವಾಹನ ನಂದಿ ಪ್ರತ್ಯಕ್ಷ; ವಿಡಿಯೊ ವೈರಲ್‌

Viral Video: ಕನ್ವರ್‌ ತೀರ್ಥಯಾತ್ರೆಯ ಸಮಯದಲ್ಲಿ ಇಬ್ಬರು ಭಕ್ತರು ತಮ್ಮ ಬೈಕ್ ಅನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದು ಗಮನ ಸೆಳೆದಿದೆ. ಬೈಕ್‌ಗೆ ಶಿವನ ವಾಹನವಾದ ನಂದಿಯ ರೂಪ ಕೊಡಲಾಗಿದೆ. ನೈಜ ನಂದಿಯನ್ನು ಈ ಬೈಕ್ ಹೋಲುತ್ತಿದ್ದು, ಯುವಕರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೆದ್ದಾರಿಯಲ್ಲಿ ಈ ನಂದಿ ಜುಂ ಎಂದು ಸಾಗಿದ್ದು ವಿಡಿಯೊ ವೈರಲ್‌ ಆಗಿದೆ.

Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

ಗದ್ದೆಗೆ ಲಗ್ಗೆ ಇಟ್ಟ ಆನೆಯನ್ನು ಕೆರಳಿಸಿದ ಸಾರ್ವಜನಿಕರು; ವಿಡಿಯೊ ನೋಡಿ

Viral Video: ಉತ್ತರಾಖಂಡದ ಹಳ್ಳಿಯೊಂದರಲ್ಲಿ ನೀರು ತುಂಬಿದ ಭತ್ತದ ಗದ್ದೆಯನ್ನು ಆನೆಯೊಂದು ಹಾನಿ ಮಾಡಿದೆ. ಹೀಗಾಗಿ ಜನರೆಲ್ಲ ಸೇರಿ ಟಾರ್ಚ್ ಬೆಳಕು ತೋರಿಸಿ ಹಾಗೂ ಜೋರಾಗಿ ಕೂಗಿ ಅದನ್ನು ಓಡಿಸಲು ಯತ್ನಿಸಿದ್ದಾರೆ. ಆದರೆ ಆನೆ ತೀವ್ರವಾಗಿ ಕೆರಳಿದ್ದು ಅಲ್ಲಿದ್ದ ಜನರ ಮೇಲೆಯೇ ದಾಳಿ ನಡೆಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೇವಸ್ಥಾನದ ಬಳಿ ಬಂದ ಮೊಸಳೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದ ಅರ್ಚಕ: ಅಚ್ಚರಿಯ ವಿಡಿಯೊ ಇಲ್ಲಿದೆ

ಜೀವಂತ ಮೊಸಳೆಗೆ ಪೂಜೆ ಸಲ್ಲಿಸಿದ ಅರ್ಚಕ: ವಿಡಿಯೊ ವೈರಲ್

Viral Video: ತೆಲಂಗಾಣದ ಬೀಚುಪಲ್ಲಿಯ ಕೃಷ್ಣಾ ನದಿ ಘಾಟ್‌ಗೆ ಆಗಮಿಸಿದ ಮೊಸಳೆಯನ್ನು ಕಂಡು ಅರ್ಚಕರೊಬ್ಬರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿದ್ದಾರೆ. ಅಲ್ಲಿದ್ದ ಭಕ್ತರು ಗಾಬರಿಗೊಂಡಿದ್ದರೂ ಅರ್ಚಕ ಅನಿಲ್ ಶರ್ಮಾ ಎಂಬವರು ಧೈರ್ಯದಿಂದ ಮೊಸಳೆಯ ಬಳಿಗೆ ಬಂದು ಧಾರ್ಮಿಕ ವಿಧಿಗಳನ್ನು ಆರಂಭಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಂದೇ ಫ್ರೇಮ್‌ನಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ: ವಿವಾಹ ಆರತಕ್ಷತೆಯಲ್ಲಿ ಕಂಡ ಬಂದ ಅಪರೂಪದ ದೃಶ್ಯ ವೈರಲ್‌

ಒಂದೇ ಫ್ರೇಮ್‌ನಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ

Amit Shah and Rahul Gandhi in the Same Frame: ದೆಹಲಿಯ 6 ಜನಪಥ್‌ನಲ್ಲಿ ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ಮತ್ತು ನಾಗ್ಪುರ ಮೂಲದ ಕೈಗಾರಿಕೋದ್ಯಮಿ ಸಾರಂಗ್ ಲಖಾನಿ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಪ್ರಫುಲ್ ಪಟೇಲ್ ಸೇರಿ ಹಲವು ರಾಜಕೀಯ ನಾಯಕರು ಭಾಗವಹಿಸಿದರು.

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಕನ್ವರ್‌ ಯಾತ್ರಿಕರು; ವಿಡಿಯೊ ನೋಡಿ

ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಶಿವ ಭಕ್ತರು

Viral Video: ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆ ಮೆರೆದ ಅಪರೂಪದ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯಗೆ ಜಾಗ ಮಾಡಿಕೊಡಲು ಸಾವಿರಾರು ಶಿವಭಕ್ತರು ಮಾನವ ಸರಪಳಿ ನಿರ್ಮಿಸಿ ದಾರಿ ಮಾಡಿ ಕೊಟ್ಟಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಎಸೆದ ಮಹಿಳೆ: ರೆಡ್‌ ಹ್ಯಾಂಡಾಗಿ ಹಿಡಿದು ಮಸಿ ಬಳಿದ ಸ್ಥಳೀಯರು; ವಿಡಿಯೊ ವೈರಲ್‌

ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಎಸೆದ ಮಹಿಳೆ: ವಿಡಿಯೊ ವೈರಲ್‌

Viral Video: ಮಹಿಳೆಯೊಬ್ಬಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಮತ್ತು ಕಲ್ಲುಗಳನ್ನು ಎಸೆದಿರುವ ಅಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ನಡೆದಾಗ ಪ್ರತಿಮೆಯನ್ನು ಗಾಜಿನ ರಕ್ಷಣಾತ್ಮಕ ಕವಚದಿಂದ ಮುಚ್ಚಲಾಗಿತ್ತು. ಇದರಿಂದ ಪ್ರತಿಮೆಗೆ ಚಪ್ಪಲಿ ಎಸೆದರೂ ಯಾವುದೇ ಹಾನಿ ಆಗಿಲ್ಲ.

ಗೇಟ್‌ಗೆ ಡಿಕ್ಕಿ ಹೊಡೆದು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವೇಗದ ಕಾರ್‌; ಬೆಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ಸೆಕ್ಯೂರಿಟಿ ಗಾರ್ಡ್ ಪಾರು

ಅಪಾರ್ಟ್‌ಮೆಂಟ್ ಗೇಟ್‌ಗೆ ಕಾರ್‌ ಡಿಕ್ಕಿ: ಭಯಾನಕ ವಿಡಿಯೊ ನೋಡಿ

Viral Video: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪಾರ್ಟ್‌ಮೆಂಟ್‌ ಒಂದರ ಗೇಟ್‌ಗೆ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ವೇಗಕ್ಕೆ ಕಬ್ಬಿಣದ ಗೇಟ್ ಪುಡಿ ಪುಡಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಮ್ಮ ಧ್ವನಿ ಸರಕಾರಕ್ಕೆ ತಲುಪುತ್ತಿಲ್ಲ: ಸ್ಪೈಡರ್ ಮ್ಯಾನ್ ವೇಷಧರಿಸಿ ಜಾರ್ಖಂಡ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ!

ಜಾರ್ಖಂಡ್‌ ನಲ್ಲಿ ಸ್ಪೈಡರ್‌-ಮ್ಯಾನ್ ವೇಷ ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿ

Viral Video: ಜಾರ್ಖಂಡ್ ನಲ್ಲಿ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆ ಸುತ್ತಿದ್ದಾರೆ. ಈ ನಡುವೆ ಸ್ಪೈಡರ್‌-ಮ್ಯಾನ್ ಮುಖವಾಡ ಧರಿಸಿ ಬಂದ ವಿದ್ಯಾರ್ಥಿಯೊಬ್ಬ ಸರ್ಕಾರವನ್ನು ವ್ಯಂಗ್ಯ ಮಾಡಿರುವ ವಿಡಿಯೊಂದು ವೈರಲ್ ಆಗುತ್ತಿದೆ.

Loading...