ಒಂದೇ ಬೈಕ್ನಲ್ಲಿ ಆರು ಮಂದಿ ಯುವಕರ ಸವಾರಿ
Motorcycle stunt: ದೆಹಲಿಯ ರಸ್ತೆಯಲ್ಲಿನ ವಿಡಿಯೊವೊಂದು ವೈರಲ್ ಆಗಿದೆ. ಒಂದೇ ಬೈಕ್ನಲ್ಲಿ6 ಯುವಕರು ಸವಾರಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕ್ಯಾಮರಾ ನೋಡಿ ಅವರು ತೋರಿದ ಪ್ರತಿಕ್ರಿಯೆ ಸದ್ಯ ಗಮನ ಸೆಳೆಯುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಇಲ್ಲೊಂದು ಮದುವೆ ಸಮಾರಂಭದಲ್ಲಿ ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್ನಲ್ಲಿ ಈ ಘಟನೆ ನಡೆದಿದ್ದು ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ. ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.
Viral Video: ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸರಳ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ರಾತ್ರಿಯ ಬಸ್ ಪ್ರಯಾಣ ಮಾಡಿದ ಕೆನಡಾದ ಪ್ರವಾಸಿಗರೊಬ್ಬರು ಇಲ್ಲಿನ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಸ್ಲೀಪರ್ ಬಸ್ಗಳಲ್ಲಿ ಕೊಡುವ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬಸ್ನಲ್ಲಿ ಇರುವ ಸೌಲಭ್ಯಗಳು ಯುರೋಪಿಯನ್ ಬಸ್ಗಳಿಗಿಂತಲೂ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Viral Video: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮಹಿಳೆ ಮತ್ತು ಆಕೆಯ ಪತಿ ಮಾರ್ಗ ಮಧ್ಯೆಯೇ ಕಾರನ್ನು ನಿಲ್ಲಿಸಿ ರಸ್ತೆ ಮೇಲೆ ದಿನಸಿ ಸಾಮಗ್ರಿ ಎಲ್ಲ ಹರಡಿ ಅಡುಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಜನನಿಬಿಡ ಪ್ರದೇಶದಲ್ಲಿ ದಂಪತಿ ಯಾವುದೇ ಭಯ, ಅಂಜಿಕೆ ಇಲ್ಲದೆ ಮುಕ್ತವಾಗಿ ಅಡುಗೆ ಮಾಡುತ್ತಿದ್ದ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.
ಮದುವೆ ಸಮಾರಂಭದ ಔತಣ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ರಾಜಾತಿಥ್ಯ ನೀಡಲಾಗಿದೆ. ರಾಜ ಮಹಾರಾಜರ ಕಾಲದ ಅದ್ಧೂರಿ ಔತಣಕೂಟವನ್ನು ರೀ ಕ್ರಿಯೆಟ್ ಮಾಡಿರುವ ಘಟನೆ ದಕ್ಷಿಣ ಭಾರತದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಮದುವೆಯ ಊಟದ ಛತ್ರವು ಸಂಪೂರ್ಣ ಮಾರ್ಪಾಡಾಗಿದ್ದು ಸೆಲೆಬ್ರಿಟಿಗಳ ಔತಣಕೂಟವನ್ನು ಕೂಡ ಮೀರಿಸುವಂತಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣ ಮಹಿಳೆಯರು ಸಾಮಾನ್ಯವಾಗಿ ಭಯಪಡುತ್ತಾರೆ. ಆದರೆ, ಬೆಂಗಳೂರಿನ ಈ ಆಟೋ ಚಾಲಕ ಮಹಿಳೆಯರ ಸುರಕ್ಷತೆಗೆಂದು ತೆಗೆದುಕೊಂಡ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ರಾಪಿಡೋ ಆಟೋದಲ್ಲಿ ಮಧ್ಯರಾತ್ರಿಯಲ್ಲಿ ಮನೆಗೆ ಹೊರಟಿದ್ದ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ
ತುರ್ಕ್ಮೆನಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ವಿದೇಶಾಂಗ ಸಚಿವ ಇಶಾಕ್ ದರ್ ಜತೆಗೆ ಕಾರ್ಯಕ್ರಮಕ್ಕೆ ಪಾಕ್ ಪ್ರಧಾನಿ ಷರೀಫ್ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟರ್ಕಿ ಅಧ್ಯಕ್ಷರೊಂದಿಗೆ ಮೀಟಿಂಗ್ನಲ್ಲಿ ನಿರತರಾಗಿದ್ದರು ಎನ್ನಲಾಗಿದ್ದು, ಸಭೆ ಮುಗಿಯುವವರೆಗೆ ಸುಮಾರು 40 ನಿಮಿಷಗಳ ಕಾಲ ಪಾಕ್ ಪ್ರಧಾನಿ ಷರೀಫ್ ಅವರನ್ನು ಹೊರಗಡೆ ಕಾಯಿಸಲಾಗಿದೆ.
ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೊವನ್ನೇ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಜನರು ತನ್ನನ್ನು ಗುರುತಿಸಬೇಕು, ನಾನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇನೆ ಎಂದು ಯುವಕ ತನ್ನ ಹೆಂಡತಿ ಬಳಿಯೇ ಹೇಳಿ ಕೊಂಡಿದ್ದಾನಂತೆ. ಸದ್ಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಂದೆ ಮತ್ತು ಮಗಳ ನಡುವೆ ಇರುವ ಪ್ರೀತಿ , ವಾತ್ಸಲ್ಯವು ಎಲ್ಲದಕ್ಕೂ ಮಿಗಿಲಾಗಿದೆ. ತಂದೆಯಾದವನು ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನು ಕೂಡ ಸಹಿಸಬಲ್ಲ, ಮಕ್ಕಳ ಏಳ್ಗೆಗಾಗಿ ಏನು ಬೇಕಾದರೂ ಮಾಡುತ್ತಾನೆ. ಅಂತೆಯೇ ದೆಹಲಿಯಿಂದ ಉದಯಪುರಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ತಂದೆಯ ಬಗ್ಗೆ ಭಾವನಾತ್ಮಕ ವಿಡಿಯೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿ ದ್ದಾರೆ.
ಇತ್ತೀಚೆಗೆ ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಪದೇ ಪದೇ ತ್ಯಾಜ್ಯ ನಿರ್ವಹಣೆಯಲ್ಲಿ ಉಲ್ಲಂಘನೆಗಳು ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ನಗರದ ಸರ್ವಜ್ಞನಗರ ವಿಭಾಗದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಸವನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಅಧಿಕಾರಿಗಳು ವಾಹನ ಮಾಲೀಕರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಆಲ್ವಾರ್ನ ಸಿಲಿಸೆರ್ ಸರೋವರದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಯುವಕರ ಗುಂಪೊಂದು ಈ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ರೀಲ್ಸ್ ಹುಚ್ಚಿಗಾಗಿ ಮೊಸಳೆ ಜೊತೆ ಹುಚ್ಚಾಟ ಮೆರಿದಿದ್ದಾರೆ. ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಗಳ ಸಮೀಪಕ್ಕೆ ಹೋಗಿ ಯುವಕರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಎಂದರೆ ಈ ಗುಂಪಿನಲ್ಲಿದ್ದ ಒಬ್ಬ ಯುವಕ ಮೊಸಳೆಯ ಬಾಲ ಹಿಡಿಯಲು ಪ್ರಯತ್ನ ಮಾಡಿದ್ದಾನೆ.
ಮಧ್ಯಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಮಾಂಟೇಜ್ ವೊಂದನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾಗತಿಕ ರಾಜಕಾರಣಿಯಾಗಿ ತೋರ್ಪಡಿಸುವ ಈ ವಿಡಿಯೋವು 'ಧುರಂಧರ್' ಚಿತ್ರದ ಹಾಡಿನ ಟ್ರಾಕ್ ಗೆ ಎಡಿಟ್ ಮಾಡಲಾಗಿದೆ. ಸದ್ಯ ಈ ದೃಶ್ಯ ಅಕ್ಷಯ್ ಖನ್ನಾ ನಿರ್ವಹಿಸಿದ 'ರೆಹಮಾನ್ ಡಕಾಯತ್' ಪಾತ್ರದ ಶೈಲಿಯಿಂದ ಸ್ಫೂರ್ತಿ ಪಡೆದಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದ್ದು ಜನರ ಮೆಚ್ಚುಗೆ ಗಳಿಸಿದೆ.
ಧುರಂಧರ್ ಸಿನಿಮಾದ ಅಬ್ಬರ ಜೋರಾಗಿದ್ದು ರಣವೀರ್ ಸಿಂಗ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿ ದ್ದಾರೆ. ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಅಬ್ಬರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದಲ್ಲೂ ಕೂಡ ಈ ಚಿತ್ರ ಜನಪ್ರಿಯತೆ ಗಳಿಸಿದೆ. ಪಾಕಿಸ್ತಾನದ ಲಾಹೋರ್ನಲ್ಲಿ ನಡೆದ ಮದುವೆಯೊಂದರಲ್ಲಿ ಮೂವರು ಯುವಕರು ಧುರಂಧರ್ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ಅಲ್ಲಿನ ಜನರು ಕೂಡ ಫಿದಾ ಆಗಿದ್ದಾರೆ..
Delhi Police take a cinematic route: ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ದೆಹಲಿ ಪೊಲೀಸರು ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಸಿನಿಮಾವೊಂದರ ದೃಶ್ಯದ ಮೂಲಕ ಸಂದೇಶ ರವಾನಿಸಿದ್ದಾರೆ. ಜನಪ್ರಿಯ ಧುರಂಧರ್ ಚಿತ್ರದಲ್ಲಿ ಅಕ್ಷಯ್ ಖನ್ನಾ ನೃತ್ಯ ಮಾಡುವ ದೃಶ್ಯವನ್ನು ಮೀಮ್ಸ್ ರೂಪದಲ್ಲಿ ಹಂಚಿ, ಯುವಕರಿಗೆ ಮಾದಕ ವ್ಯಸನದ ಹಾನಿಗಳನ್ನು ಮನದಟ್ಟು ಮಾಡಿದ್ದಾರೆ.
Jadeja wife: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಲಿತ ಕುಟುಂಬವೊಂದು ನಡೆಸಿದ ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡಿದಕ್ಕೆ ಯುವಕ ಹಾಗೂ ಆತನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿದ ಘಟನೆ ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ನಡೆದಿದೆ. ಭರತ್ ಸಿಂಗ್ ಧಕಾಡ್ ಎಂಬಾತ ದಲಿತ ಕುಟುಂಬವೊಂದು ನಡೆಸಿದ ತಿಥಿ ಸಮಾರಂಭದಲ್ಲಿ ಊಟ ಮಾಡಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗ್ರಾಮ ಪಂಚಾಯತ್ ಬಹಿಷ್ಕರಿಸಿದೆ ಎಂದು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಘಟನೆ ನಡೆದದಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಾಲೆಯ ಬಳಿ ಜಮಾಯಿಸಿದ ಸ್ಥಳೀಯರು, ಶಿಕ್ಷಕನಿಗೆ ಮನಬಂದಂತೆ ಥಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಶಾಲೆಯಿಂದ ಪೊಲೀಸ್ ಠಾಣೆವರೆಗೂ ಮೆರವಣಿಗೆ ಕರೆದೊಯ್ದಿದ್ದಾರೆ.
ದಂಪತಿ ನಡುವೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯ ವಿಚಾರಕ್ಕೆ ವೈಮನಸ್ಸು ಮೂಡಿ 23 ವರ್ಷದ ದಾಂಪತ್ಯ ಜೀವನವು ಇದೀಗ ವಿಚ್ಛೇದನ ಹಂತಕ್ಕೆ ಬಂದು ತಲುಪಿದ ಘಟನೆ ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಅನ್ನು ತಿನ್ನುವ ವಿಚಾರದ ಬಗ್ಗೆ ಗುಜರಾತ್ ಮೂಲದ ದಂಪತಿ ನಡುವೆ ದೀರ್ಘಕಾಲದಿಂದಲೂ ಜಗಳ ನಡೆಯುತ್ತಿದ್ದು ಇದೀಗ ವಿಚ್ಛೇದನ ಪಡೆಯುವ ಮೂಲಕ ಸಂಬಂಧ ಅಂತ್ಯ ಕಂಡಿದೆ.