ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್‌, Video

ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ಹಾಕಿ ಹೆದರಿಸಿದ ಸಿಬ್ಬಂದಿ!

ಬೆಂಗಳೂರಿನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್​ಫೀಲ್ಡ್​​ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅಳುವ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿದ್ದಾರೆ.

"ನಮ್ಮ ನಡುವೆ ಧರ್ಮದ ಹಂಗಿಲ್ಲ": ಪಾಕಿಸ್ತಾನಿ ಸ್ನೇಹಿತನನ್ನು ಪರಿಚಯಿಸಿ ಟ್ರೋಲ್ ಆದ ಭಾರತೀಯ ವಿದ್ಯಾರ್ಥಿನಿ ಹೇಳಿದ್ದೇನು?

ಪಾಕಿಸ್ತಾನಿ ಸ್ನೇಹಿತನನ್ನು ರೀಲ್ಸ್‌ನಲ್ಲಿ ಪರಿಚಯಿಸಿದ ವಿದ್ಯಾರ್ಥಿನಿ

Viral Video: ಕಝಾಕಿಸ್ತಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ತನ್ನ ರೀಲ್ಸ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಯುವತಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ. ಕೆಲವರು ಇದನ್ನು ಲವ್ ಜಿಹಾದ್. ಇಷ್ಟಾದರೂ ಹಿಂದೂಗಳಿಗೆ ಬುದ್ದಿ ಬರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಕ್ಸ್ತ್ ಸೆನ್ಸ್‌ನಿಂದ ಪಾರಾದ ಶ್ವಾನ; ಲಿವಿಂಗ್ ರೂಂ ಚಾವಣಿ ಕುಸಿಯುವ ಕೆಲವೇ ಕ್ಷಣಗಳ ಮುನ್ನ ಹೊರಗೋಡಿದ ಬುದ್ದಿವಂತ ನಾಯಿ

ಚಾವಣಿ ಕುಸಿತದ ಮುನ್ಸೂಚನೆ ಅರಿತು ಪ್ರಾಣ ಉಳಿಸಿಕೊಂಡ ಶ್ವಾನ: ವಿಡಿಯೊ ನೋಡಿ

Viral Video: ಸಾಕು ನಾಯಿಯೊಂದು ತನ್ನ ಅದ್ಬುತ ಸಿಕ್ಸ್ತ್ ಸೆನ್ಸ್‌ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಲಿವಿಂಗ್ ರೂಂನ ಚಾವಣಿಯೊಂದು ದಿಢೀರನೆ ಕುಸಿದು ಬೀಳುವ ಸೂಚನೆ ಸಿಕ್ಕ ತಕ್ಷಣ ಈ ಸಾಕು ನಾಯಿ ಅಲ್ಲಿಂದ ಓಡಿ ಹೋಗಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೂ ಮೊಟ್ಟೆ ದಾಳಿ: ವಿಡಿಯೊ ವೈರಲ್‌

ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ, ಬದನೆಕಾಯಿ ಎಸೆತ

Eggs Thrown at Mahua Moitra: ಇತ್ತೀಚೆಗೆ ಪಶ್ವಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಮೇಲಿನ ಹಲ್ಲೆಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಸಂಸದೆ ಮಹುವಾ ಮೊಯಿತ್ರಾ ಈ ರೀತಿಯ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಟಿಎಂಸಿ ನಾಯಕರ ವಿರುದ್ಧ ಸರಣಿ ಮೊಟ್ಟೆ ಎಸೆತದ ಘಟನೆಗಳ ಕುರಿತು ಕೋಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದಿನವೇ ಮಹುವಾ ಮೊಯಿತ್ರಾ ಅವರ ಮೇಲೆ ದಾಳಿ ನಡೆದಿದೆ.

'ʼನಾನು ಸ್ಕೂಲ್ ಸ್ಟೂಡೆಂಟ್ ಅಲ್ಲʼ': ಸಿಕ್‌ ಲೀವ್‌ಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ರಜೆ ವಿಚಾರವಾಗಿ ಮ್ಯಾನೇಜರ್‌ಗೆ ಖಡಕ್ ರಿಪ್ಲೈ ಕೊಟ್ಟ ಜೆನ್‌ ಝೀ ಉದ್ಯೋಗಿ

Viral News: ಆಫೀಸ್ ಒತ್ತಡ, ಕೆಲಸದ ಟಾರ್ಗೆಟ್, ರಜೆಯ ವಿಚಾರವಾಗಿ ನೊಂದು ಕೆಲಸ ತ್ಯಜಿಸಿದ ಅನೇಕರು ಇದ್ದಾರೆ. ಇದೀಗ ಜ್ವರ ಬಂದ ಹಿನ್ನಲೆಯಲ್ಲಿ ರಜೆ ಕೇಳಿದ ಜೆನ್‌ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ಒಬ್ಬರ ವಾಟ್ಸ್‌ಆ್ಯಪ್ ಚಾಟ್‌ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ರಜೆ ನೀಡಲು ಸತಾಯಿಸಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಯುವ ಉದ್ಯೋಗಿ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ್ದಾಳೆ. ಈ ಚಾಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ಆಕ್ರೋಶ ಹೊರ ಹಾಕಿದ್ದಾರೆ.

'ʼಅಯೋಧ್ಯೆ ದೇಣಿಗೆ ಕಳ್ಳರಿಗೆ ಕ್ಯಾನ್ಸರ್ ಬರಲಿದೆʼ': ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕನ ಹೇಳಿಕೆ

ಅಯೋಧ್ಯೆ ದೇಣಿಗೆ ದುರುಪಯೋಗ: ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಕದ್ದವರಿಗೆ ಕ್ಯಾನ್ಸರ್ ಬರಲಿದೆ ಎಂದು ಬಿಜೆಪಿ ಶಾಸಕರೊಬ್ಬರು ನೀಡಿದ ಹೇಳಿಕೆ ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೌರವಾನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅನಿಲ್ ಸಿಂಗ್ ಈ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘರ್‌ ವಾಪಸಿ: ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್; ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವ ವಿಡಿಯೊ ವೈರಲ್

ಇಸ್ಲಾಂನಿಂದ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಉದ್ಯಮಿ ಪುತ್ರ ಆಯುಷ್ ಮಲಿಕ್

Viral Video: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 'ಮೊಹಮ್ಮದ್ ಅಲಿ' ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಪ್ರಸಿದ್ಧ ಉದ್ಯಮಿಯ ಪುತ್ರ ಆಯುಷ್ ಮಲಿಕ್ ಈಗ ಮತ್ತೆ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಆಯುಷ್ ಮಲಿಕ್ ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

ಫೋಟೋ ತೆಗೆಯುವ ವಿಚಾರಕ್ಕೆ ಗಲಾಟೆ: ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಗುದ್ದಾಟ!

ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲೇ ಯುವಕರ ಜಗಳ: ನಾಲ್ವರ ಬಂಧನ!

Viral Video: ರಾಜಧಾನಿಯ ಅತ್ಯಂತ ಬಿಗಿ ಭದ್ರತೆಯ ಸ್ಥಳವಾಗಿರುವ ವಿಧಾನ ಸೌಧದ ಮುಂಭಾಗದಲ್ಲೇ ಅಘಾತಕಾರಿ ಘಟನೆಯೊಂದು ಕಂಡುಬಂದಿದೆ. ನೇಪಾಳ ಮೂಲದ ಯುವಕರ ಗುಂಪಿನ ನಡುವೆ ಭೀಕರ ಜಗಳ ನಡೆದಿದ್ದು ಇದರಲ್ಲಿ ಭಾಗಿಯಾದ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ...

ಟ್ರಾಫಿಕ್, ದುಬಾರಿ ಬಾಡಿಗೆ ಅಂತ ದಿನಾ ಬೈಕೊಂಡ್ರು ಜನ ಬೆಂಗಳೂರು ಯಾಕೆ ಬಿಟ್ಟು ಹೋಗಲ್ಲ? ಸತ್ಯ ಬಿಚ್ಚಿಟ್ಟ ಯುವಕ!

ದಿನ ಬೈದ್ರೂ ಜನ ಬೆಂಗಳೂರು ಬಿಟ್ಟು ಯಾಕೆ ಹೋಗಲ್ಲ? ಅನುಭವ ಬಿಚ್ಚಿಟ್ಟ ಟೆಕ್ಕಿ

Viral Video: ಉದ್ಯೋಗ ಅರಸಿ ಬರುವ ಯುವಕ- ಯುವತಿಯರು ಬೆಂಗಳೂರು ಬಿಟ್ಟು ಹೋಗಲು ಇಚ್ಚೆ ಪಡುವುದಿಲ್ಲ. ಟ್ರಾಫಿಕ್, ಬಾಡಿಗೆ ದರ ದುಪ್ಪಟ್ಟು ಆದಾಗಲೂ ಯುವಕರು ಇಲ್ಲಿನ ಕಷ್ಟಗಳನ್ನು ಸಹಿಸಿ ಕೊಂಡು ಇಲ್ಲೇ ನೆಲೆಸುತ್ತಾರೆ..ಯಾಕೆ ಬೆಂಗಳೂರು ಬಿಟ್ಟು ಹೋಗಲು ಜನ ಇಷ್ಟ ಪಡುವುದಿಲ್ಲ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ಪೋಸ್ಟ್ ಶೇರ್ ಮಾಡಿದ್ದು ಭಾರೀ ವೈರಲ್ ಆಗಿದೆ...

ಮಾತು ಬಾರದಿದ್ದರೂ ಹೃದಯ ಗೆದ್ದ ಇಂಡಿಗೋ ಉದ್ಯೋಗಿ: ಹೃದಯಸ್ಪರ್ಶಿ ವಿಡಿಯೊ ಶೇರ್ ಮಾಡಿದ ಪ್ರಯಾಣಿಕ!

ಮಾತು ಬಾರದಿದ್ದರೂ ಪ್ರಯಾಣಿಕರ ಮನಗೆದ್ದ ಇಂಡಿಗೋ ಉದ್ಯೋಗಿ! ವಿಡಿಯೊ ನೋಡಿ

Viral News: ಒಬ್ಬರ ಮನಸ್ಸನ್ನು ಅರ್ಥೈಸಿಕೊಳ್ಳಲು ಕೇವಲ ಮಾತುಗಳು ಮಾತ್ರ ಮುಖ್ಯವಲ್ಲ.. ಅವರ ಭಾವನೆಗಳು ಹಾಗೂ ಒಳ್ಳೆಯ ಮನಸ್ಸು ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ತೋರಿಸಿಕೊಟ್ಟಿದೆ. ಇಂಡಿಗೋದ ಬ್ಯಾಗೇಜ್ ಚೆಕ್-ಇನ್ ಸಿಬ್ಬಂದಿಯೊಬ್ಬರಿಗೆ ಮಾತು ಬರೋದಿಲ್ಲ. ಆದರೆ ಆತ್ಮವಿಶ್ವಾಸ ದಿಂದ ಪ್ರಯಾಣಿಕರಿಗೆ ನಗುವಿನೊಂದಿಗೆ ಸ್ವಾಗತಾರ್ಹ ಮಾಡುತ್ತಾರೆ. ಕೇವಲ ಕೈಸಜ್ಞೆಗಳು ಮತ್ತು ಮುಖದ ಭಾವನೆಗಳ ಮೂಲಕವೇ ಅವರು ಪ್ರಯಾಣಿಕರಿಗೆ ನೆರವು ನೀಡುತ್ತಿದ್ದಾರೆ.

ಕರಗಿದ ರಸ್ತೆಯ ಡಾಮರು, ಬಾಗಿದ ರೈಲು ಹಳಿ...; ದಾಖಲೆ ಪ್ರಮಾಣದ ತಾಪಮಾನಕ್ಕೆ ಯುರೋಪ್‌ ತತ್ತರ: 1,300ಕ್ಕೂ ಹೆಚ್ಚು ಸಾವು

ಯುರೋಪ್‌ನಲ್ಲಿ ದಾಖಲೆ ಬಿಸಿಗಾಳಿ; ಜನ ಜೀವನ ತತ್ತರ: ವಿಡಿಯೊ ವೈರಲ್‌

ಯುರೋಪ್‌ನಲ್ಲಿ ದಾಖಲೆ ಮಟ್ಟದ ಬಿಸಿಗಾಳಿ ಆತಂಕ ಸೃಷ್ಟಿಸಿದೆ. ಹಲವು ದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ರಸ್ತೆಗಳು ಕರಗುವುದು, ಟ್ರಾಮ್‌ ಹಳಿಗಳು ಬಾಗುವುದು ಸೇರಿದಂತೆ ಹಲವು ಅಸಾಮಾನ್ಯ ಘಟನೆಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಜೂನ್‌ 21ರಿಂದ ಬಿಸಿಗಾಳಿಗೆ ಸಂಬಂಧಿಸಿದಂತೆ 1,300ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ದಾಖಲಾಗಿವೆ. ಫ್ರಾನ್ಸ್‌ನಲ್ಲಿ ಮುಳುಗಿ ಸಾಯುವ ಪ್ರಕರಣಗಳೂ ಹೆಚ್ಚಾಗಿದ್ದು, ಹಲವೆಡೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್; ಚಲಿಸುವ ಆಟೋದಲ್ಲಿ ನೇತಾಡಿ ವೃದ್ಧ ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದ ಕಿಡಿಗೇಡಿ: ವಿಡಿಯೊ ವೈರಲ್

ಆಟೋದಲ್ಲಿ ಸ್ಟಂಟ್ ಮಾಡಿದ ಕಿಡಿಗೇಡಿ; ಸೈಕಲ್ ಸವಾರನಿಗೆ ಡಿಕ್ಕಿ

Man Performing Stunt: ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರವೃತ್ತಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದೀಗ ಇಂಥದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, ಆಟೋರಿಕ್ಷಾದಿಂದ ಹೊರಗೆ ನೇತಾಡುತ್ತಾ ರೀಲ್ಸ್ ಮಾಡಲು ಹೋದ ಯುವಕನೊಬ್ಬ, ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ.

ಗೆಳೆಯ ಕೆನ್ನೆಗೆ ಹೊಡೆದನೆಂದು ಮೊಬೈಲ್‌ ಟವರ್‌ ಏರಿದ ಭೂಪ; ಕ್ಷಮೆ ಕೋರಲು ಪಟ್ಟು ಹಿಡಿದ ʼಸ್ವಾಭಿಮಾನಿʼ ಯುವಕ

ಗೆಳೆಯ ಕೆನ್ನೆಗೆ ಹೊಡೆದನೆಂದು ಮೊಬೈಲ್‌ ಟವರ್‌ ಏರಿದ ಭೂಪ

Viral Video: ಕುಡಿದ ಮತ್ತಿನಲ್ಲಿ ಗೆಳೆಯ ಕೆನ್ನೆಗೆ ಹೊಡೆದಿದ್ದಾನೆ ಎಂದು ಯುವಕ ಮೊಬೈಲ್‌ ಟವರ್‌ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಗೆಳೆಯ ಕ್ಷಮೆ ಕೋರದ ಹೊರತು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅರುಣಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಭೀಕರ ಪ್ರವಾಹ; ಮಣ್ಣಿನ ರಾಶಿಯೊಂದಿಗೆ ಕೊಚ್ಚಿ ಹೋದ ಬೈಕ್‌ ಸವಾರ: ಭೀಕರ ವಿಡಿಯೊ ವೈರಲ್‌

ಭೂಕುಸಿತದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಸವಾರ

ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಗುಡ್ಡದ ರಸ್ತೆ ಏಕಾಏಕಿ ಕುಸಿದ ಪರಿಣಾಮ ಬೈಕ್ ಸವಾರನೊಬ್ಬ ಮಣ್ಣು, ಬಂಡೆ ಹಾಗೂ ಅವಶೇಷಗಳೊಂದಿಗೆ ಕೊಚ್ಚಿಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆತ ಯಾವುದೇ ಗಂಭೀರ ಗಾಯಗಳಿಲ್ಲದೆ ಬದುಕುಳಿದಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭೂಕುಸಿತದಿಂದ ಸಿಜಿ ನದಿಯ ಹರಿವಿಗೂ ತಾತ್ಕಾಲಿಕ ಅಡ್ಡಿಯಾಗಿದೆ. ಇದೇ ವೇಳೆ ಜೂನ್ 24ರ ಮೋಡ ಸ್ಫೋಟದ ಬಳಿಕ ರಾಷ್ಟ್ರೀಯ ಹೆದ್ದಾರಿ-13 ಬಂದ್ ಆಗಿರುವುದರಿಂದ ರಾಜ್ಯದ ಏಳು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.

ಡ್ಯಾನ್ಸ್‌ ಮಾಡುತ್ತ ಸ್ವಿಮ್ಮಿಂಗ್ ಪೂಲ್‌ಗೆ ಹೆಡ್ ಡೈವ್ ಮಾಡಿದ ಯುವಕ ಸಾವು; ಬೆಚ್ಚಿಬೀಳಿಸುವ ವಿಡಿಯೊ ವೈರಲ್

4 ಅಡಿ ಆಳದ ಪೂಲ್‌ಗೆ ಹೆಡ್ ಡೈವ್; 25 ವರ್ಷದ ಪ್ರವಾಸಿಗನ ದಾರುಣ ಅಂತ್ಯ

Viral Video: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಾಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ 25 ವರ್ಷದ ಪ್ರವಾಸಿಗ ಶ್ರೇಣಿಕ್ ಮಿಲಿಂದ್ ತಕಾಲೆ ಸುಮಾರು 8–10 ಅಡಿ ಎತ್ತರದಿಂದ 4 ಅಡಿ ಆಳದ ಸ್ವಿಮ್ಮಿಂಗ್ ಪೂಲ್‌ಗೆ ಹೆಡ್ ಡೈವ್ ಮಾಡಿದ ಪರಿಣಾಮ ತೀವ್ರ ತಲೆಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಅಪಘಾತ ಮರಣ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಠಾಣೆಯಲ್ಲೇ ರೊಮ್ಯಾನ್ಸ್: ವೈರಲ್ ವಿಡಿಯೊ ಬೆನ್ನಲ್ಲೇ ಕಾನ್ಸ್‌ಟೇಬಲ್‌ ಅಮಾನತು

ಉತ್ತರ ಪ್ರದೇಶದ ಜಾಲೌನ್‌ನ ಓರೈ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾನ್ಸ್‌ಟೇಬಲ್‌ಗಳು ಆತ್ಮೀಯವಾಗಿ ವರ್ತಿಸುತ್ತಿರುವುದಾಗಿ ಹೇಳಲಾದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪುರುಷ ಕಾನ್ಸ್‌ಟೇಬಲ್ ಅರವಿಂದ್‌ನನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರಿದಿದೆ.

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

ಆಟೋ ಚಾಲಕನ ಮೇಲೆ ದೌರ್ಜನ್ಯ ಎಸಗಿದ ಹೋಮ್ ಗಾರ್ಡ್ ಸಿಬ್ಬಂದಿ

Viral Video: ಆಟೋ ರಿಕ್ಷಾ ಚಾಲಕನೊಬ್ಬ ಉಚಿತವಾಗಿ ಲಿಫ್ಟ್ ನೀಡಲು ನಿರಾಕರಿಸಿದ್ದಾನೆ ಎಂಬ ಕಾರಣಕ್ಕೆ ಹರಿಯಾಣದ ಗುರುಗ್ರಾಮ್‌ನ ಹೋಮ್ ಗಾರ್ಡ್ ಸಿಬ್ಬಂದಿ ಸಾರ್ವಜನಿಕವಾಗಿ ಆಟೋ ಚಾಲಕನನ್ನು ನಿಂದಿಸಿದ್ದಾನೆ‌. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Viral Video: ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ; ಬಾಡಿಗೆ ಹಣ ಪಡೆಯದೆ ಹೃದಯವಂತಿಕೆ ತೋರಿಸಿದ ಆಟೋ ಚಾಲಕ

ಬಾಲಕನ ಔದಾರ್ಯಕ್ಕೆ ಮನಸೋತ ಆಟೋ ಚಾಲಕ: ವಿಡಿಯೊ ವೈರಲ್

ಒಳ್ಳೆಯತನಕ್ಕೆ ವಯಸ್ಸಿನ ಹಂಗಿಲ್ಲ. ನಾವು ಇತರರಿಗೆ ಒಳ್ಳೆದು ಮಾಡಬೇಕು ಎಂಬ ಮನಸ್ಸಿದ್ದರೆ ಸಾಕು. ಇದಕ್ಕೆ ಪೂರಕವಾಗಿ ದೆಹಲಿಯಲ್ಲಿ ನಡೆದ ಈ ದೃಶ್ಯವು ಎಲ್ಲರ ಮುಖದಲ್ಲೊಂದು ನಗು ಮೂಡಿಸಿದೆ. ಶಾಲಾ ಬಾಲಕನೊಬ್ಬ ತನ್ನ ತಂಗಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಅದೇ ದಾರಿಯಲ್ಲಿ ಬಾಲಕಿಯೊಬ್ಬಳು ಆಟೋ ಸಿಗದೇ ಪರದಾಡುತ್ತಿದ್ದನ್ನು ಗಮನಿಸಿ ತಕ್ಷಣವೇ ಆಟೋ ನಿಲ್ಲಿಸಿ ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾನೆ. ಈತನ ಈ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದು ಬಾಲಕನ ಈ ದೊಡ್ಡ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Viral Video: ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ

ಉತ್ತಮ ಸಂಬಳವಿದ್ದರೂ ಸ್ವಿಟ್ಜರ್‌ಲ್ಯಾಂಡ್‌ ಬದುಕು ದುಬಾರಿ

Viral Video: ಮಾಸಿಕ ವೇತನ ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಹಾಗೂ ಭಾರತದ 40,000 ರುಪಾಯಿ ಆದಾಯವನ್ನು ಹೋಲಿಕೆ ಮಾಡಿ ದಂಪತಿ ಶೇರ್ ಮಾಡಿದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಭಾರತದಲ್ಲಿ ವಸತಿಗೆ ಸುಮಾರು 20,000 ರುಪಾಯಿ ವೆಚ್ಚವಾಗುತ್ತಿದ್ದರೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸುಮಾರು 2 ಲಕ್ಷ ರುಪಾಯಿ ಪಾವತಿಸಬೇಕಾಗುತ್ತದೆ. ಅಲ್ಲಿನ ಜೀವನ ಶೈಲಿ ಅಷ್ಟೊಂದು ದುಬಾರಿ ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ಉಗ್ರ ಸೈಫುಲ್ಲಾ ಕಸೂರಿ ಭಾಗಿ

ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಪ್ರಮುಖ ಭಯೋತ್ಪಾದಕರು ಪಾಲ್ಗೊಂಡಿದ್ದಾರೆ. ಇದರ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶೋಯೆಬ್ ಅಖ್ತರ್ ಸಹೋದರ ಜೂನ್ 24 ರಂದು ನಿಧನರಾದರು.

ಪುಟ್ಟ ಬಾಲಕಿಯನ್ನು ಫುಟ್‌ಬಾಲ್‌ನಂತೆ ಒದ್ದ ಅಂಗನವಾಡಿ ಕಾರ್ಯಕರ್ತೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

ಪುಟ್ಟ ಬಾಲಕಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಅಂಗನವಾಡಿ ಕಾರ್ಯಕರ್ತೆ

Viral Video: ಮಹಾರಾಷ್ಟ್ರದ ಪನ್ವೇಲ್ ತಾಲೂಕಿನ ನಂದಗಾಂವ್ ಗ್ರಾಮದ ಅಂಗನವಾಡಿ ಕೇಂದ್ರವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕಾರ್ಯಕರ್ತೆ ಪುಟ್ಟ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾಳೆ. ಪುಟ್ಟ ಬಾಲಕಿಯನ್ನು ಒದೆಯುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ಅಘಾತಕಾರಿ ಘಟನೆ: ಬೈಕ್ ಸವಾರಿ ಮಾಡುವಾಗ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!

ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ: ಸಿಸಿಟಿವಿ ದೃಶ್ಯ ವೈರಲ್!

Viral Video: ಮರದ ಕೊಂಬೆಯೊಂದು ಬಿದ್ದ ಪರಿಣಾಮ 53 ವರ್ಷದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇವರು ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲದ ಕಂತುಗಳನ್ನು ವಸೂಲಿ ಮಾಡುವುದ್ದಕ್ಕಾಗಿ ಸಂಜೆ 5 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆದರೆ ಹೆಲ್ಮೆಟ್ ಧರಿಸಿರಿಲಿಲ್ಲ‌. ಈ ವೇಳೆ ರಸ್ತೆ ಬದಿಯ ಮರದಿಂದ ಬೃಹತ್ ಗಾತ್ರದ ಒಣಗಿದ ಕೊಂಬೆ ದಿಢೀರನೆ ಮುರಿದು ನೇರವಾಗಿ ಅವರ ತಲೆಯ ಮೇಲೆಯೇ ಬಿದ್ದಿದೆ...

ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತನ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಮಹಿಳೆ: ಕೇರಳದಲ್ಲಿ ಮಾನವೀಯತೆಗೆ ಮೆಚ್ಚುಗೆ

ಮುಸ್ಲಿಂ ಮಹಿಳೆಯಿಂದ ಆರ್‌ಎಸ್‌ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ

ಕೇರಳದ ಕಾಸರಗೋಡಿನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ನೆರವೇರಿಸಿದ್ದು, ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಮಾನವೀಯತೆಯೇ ಸತ್ತು ಹೋಯಿತಾ?: ತೀವ್ರ ಬಿಸಿಲಿನ ನಡುವೆ ಕಾರಿನೊಳಗೆ ಶ್ವಾನ ಲಾಕ್ ಮಾಡಿದ ಮಾಲೀಕ!

ಕಾರಿನೊಳಗೆ ಶ್ವಾನ ಲಾಕ್: ಮಾಲೀಕನ ಬೇಜವಾಬ್ದಾರಿತನಕ್ಕೆ ನೆಟ್ಟಿಗರು ಕಿಡಿ

Viral News: ಪುಟ್ಟ ನಾಯಿಮರಿ, ಬೆಕ್ಕಿನ ಮರಿಗಳನ್ನು ಸುತ್ತ ಮುತ್ತಲಿನ ಬೀದಿಗಳಲ್ಲಿ ಬಿಟ್ಟು ಅವುಗಳು ನರಳಾಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ಕಂಡುಬಂದಿವೆ..ಇಷ್ಟಾದರೂ ಮನುಷ್ಯನಿಗೆ ಪಾಪ ಪ್ರಜ್ಞೆ ಅನ್ನೋದು ಕಾಡಿಲ್ಲ..ಇದಕ್ಕೆ ಸಾಕ್ಷಿ ಎಂಬಂತೆ ಧಗಧಗಿಸುವ ಬಿಸಿಲಿನಲ್ಲಿ ಮಾಲೀಕನೊಬ್ಬ ಕಾರಿನೊಳಗೆ ನಾಯಿಯನ್ನು ಲಾಕ್ ಮಾಡಿ ಹೋಗಿದ್ದಾನೆ. ನಾಯಿ ಉಸಿರಾಡಲು ಸಾಧ್ಯವಾಗದೆ ಪರದಾಡುತ್ತಿರುವ ವಿಡಿಯೊ ವೈರಲ್ ಆಗಿದೆ..

Loading...