ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಬೆಂಗಳೂರಿನಲ್ಲಿರುವ  ಗರ್ಲ್‌ಫ್ರೆಂಡ್‌ನ ತಿಂಗಳ ಖರ್ಚು 1.09 ಲಕ್ಷ ರೂ. ! ಲೆಕ್ಕ ನೋಡಿ ಗಣಿತವೇ ಮರೆತುಹೋಯ್ತು ಎಂದ ಯುವಕ!

ಗರ್ಲ್‌ಫ್ರೆಂಡ್‌ನ ತಿಂಗಳ 1.09 ಲಕ್ಷ ಖರ್ಚು ನೋಡಿ ದಂಗಾದ ಯುವಕ!

Viral News: ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿ ಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ಅವನೇ ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾನೆ...

ಇದು ಭಕ್ತಿ ಅಥವಾ ಪಿಕ್ನಿಕ್? ತುಂಗನಾಥ ದೇಗುಲದ ಬಳಿ ಮಾದಕ ದ್ರವ್ಯ ಸೇವಿಸಿದ ಪ್ರವಾಸಿಗರು! ಅರ್ಚಕರಿಂದ ಆಕ್ರೋಶ!

ತುಂಗನಾಥ ಧಾರ್ಮಿಕ ಸ್ಥಳವನ್ನು ಪಿಕ್ನಿಕ್ ತಾಣವಾಗಿ ಮಾಡಿದ ಪ್ರವಾಸಿಗರು!

Viral Video: ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

Viral Video: ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನ ವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸ ರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ..

ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್‌

ಬಿಸಿಲಿನ ತಾಪ ತಡೆದುಕೊಳ್ಳಲು ಮುಂಬೈನ ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ಜನ!

Viral Video: ಮುಂಬೈ ನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!

ಪ್ಲಾಸ್ಟಿಕ್ ಡಂಪ್‌ನಲ್ಲಿ ಆಹಾರ ಹುಡುಕಿದ ಕಾಡಾನೆ: ವಿಡಿಯೊ ವೈರಲ್

Viral Video: ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...

Viral Video; ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಯಾಬ್ ಚಾಲಕನೊಬ್ಬ ವಿಶೇಷ ಚೇತನ ಮಹಿಳೆಯೊಬ್ಬರ ವ್ಹೀಲ್‌ ಚೇರ್ ಇಟ್ಟುಕೊಳ್ಳಲು ನಿರಾಕರಿಸಿದ್ದು, ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿಷ್ಠಾ ದೇವೇಶ್ವರ್ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ವರ್ಷಕ್ಕೆ 70 ಲಕ್ಷ ನೀಡಿದ್ರೂ ತಪ್ಪದ ಸಂಕಷ್ಟ: ಕುಡಿಯುವ ನೀರಿನ‌ ಕೊರತೆ ಬಗ್ಗೆ ಬೇಸರ ಹೊರಹಾಕಿದ ಜನ

ಟ್ಯಾಂಕರ್‌ಗೆ 70 ಲಕ್ಷ ನೀಡಿದ್ರೂ ಕೆಸರು ನೀರು: ಪುಣೆ ನಿವಾಸಿ ಹೇಳಿದ್ದೇನು?

Viral Post: ಪುಣೆಯಲ್ಲಿ ದುಬಾರಿ ವೆಚ್ಚದ ಕಟ್ಟಡ, ಫ್ಲ್ಯಾಟ್ ಗಳನ್ನು ನಿರ್ಮಿಸಿದರೂ ಅಗತ್ಯವಾದ ಶುದ್ಧ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಘಟನೆ ಕಂಡು ಬಂದಿದೆ. ಇಲ್ಲಿನ ನಿವಾಸಿಗಳು ವರ್ಷಕ್ಕೆ 70 ಲಕ್ಷ ಹಣವನ್ನು ಖಾಸಗಿ ಟ್ಯಾಂಕರ್ ಗಾಗಿ ಖರ್ಚು ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ...

82 ವರ್ಷವಾದರೂ ಕುಗ್ಗದ ಜೀವನೋತ್ಸಾಹ: ಬೀದಿ ಬದಿಯಲ್ಲಿ ದಿನಕ್ಕೆ 12 ಗಂಟೆ ತಿಂಡಿ ಮಾರಿ ಬದುಕು ಸಾಗಿಸುವ ಮನ್ಸುಖ್ ಕಾಕಾ!

ಮುಂಬೈ ಬೀದಿಯಲ್ಲಿ ತಿಂಡಿ ಪ್ಯಾಕೇಟ್ ಮಾರಿ ಬದುಕು ಸಾಗಿಸುವ 82ರ ವೃದ್ಧ!

Viral Video; ಶ್ರಮ ಪಡಬೇಕು ಎನ್ನುವ ಛಲ ಇದ್ದರೆ ಯಾವುದರದಲ್ಲೂ ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೋವಿಡ್-19 ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, 82 ವರ್ಷದ ಮನ್ಸುಖ್ ಕಾಕಾ ಮುಂಬೈನ ರಸ್ತೆಯಲ್ಲಿ ತಿಂಡಿ ಪ್ಯಾಕೇಟ್ ಮಾರಾಟ ಮಾಡುವ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ವಂತ ಕಾಲಲ್ಲಿ ದುಡಿಯಬೇಕು,ಇತರರಿಗೆ ಅವಲಂಬಿತ ಆಗಬಾರದು ಎಂದು 82 ವರ್ಷದ ಮನ್ಸುಖ್ ಕಾಕಾ ಅವರೇ ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಸದ್ಯ ಇವರ ಜೀವನಗಾಥೆಗೆ ಎಲ್ಲರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ...

ರಾತ್ರಿ 9 ಗಂಟೆಯಾದ್ರೂ ಈ ದೇಶದಲ್ಲಿ ಕತ್ತಲಾಗುವುದೇ ಇಲ್ಲ; ಸೂರ್ಯ ಮುಳುಗದ ನಾಡಿನ ಕುರಿತು ಭಾರತೀಯ ಹೇಳಿದ್ದೇನು?

9 ಗಂಟೆ ಆದ್ರೂ ಮುಳುಗದ ಸೂರ್ಯ! ಡೆನ್ಮಾರ್ಕ್ ‘ಹಗಲು’ ಕಂಡು ಬೆರಗಾದ ಯುವಕ

Viral Video: ಡೆನ್ಮಾರ್ಕ್‌ನಲ್ಲಿ ವಾಸಿಸುವ ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ದೈನಂದಿನ ಪ್ರಕ್ರಿಯೆ ಕಂಡು ಅವರೇ ಶಾಕ್ ಆಗಿ ಹೋಗಿದ್ದಾರೆ. ರಾತ್ರಿ 9 ಗಂಟೆಯಾದರೂ ಸೂರ್ಯ ಮುಳಗದೇ ಇರುವುದನ್ನು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ‌. ಡೆನ್ಮಾರ್ಕ್‌ನ ವಿಚಿತ್ರ ‘ಹಗಲು’ ಕಂಡು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ...

ರೀಲ್ಸ್‌ ಹುಚ್ಚಿಗೆ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರು: ಕ್ರಮ ಕೈಗೊಳ್ಳಲು ಪ್ರಾಣಿ ಪ್ರಿಯರ ಆಕ್ರೋಶ!

ಒಡಿಶಾದಲ್ಲಿ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಅತಿರೇಕದ ವರ್ತನೆ ತೋರುವುದು, ಹೀಗೆ ಟೀಕೆ ವ್ಯಕ್ತ ಪಡಿಸುವ ಅನೇಕ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಒಡಿಶಾದ ಮಯೂರ್ ಭಂಜ್ ನ ಸಿಮಿಲಿಪಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಯುವಕರ ಗುಂಪೊಂದು ರೀಲ್ಸ್ ಗಾಗಿ ಕಾಡಾನೆಗಳ ಮೇಲೆ ತೀವ್ರ ಕಿರುಕುಳ ಎಸಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವಿರುದ್ಧ ಕಿಡಿಕಾರಿದ್ದಾರೆ...

ಬೆನ್ನ ಮೇಲೆ ಪತ್ನಿ, ಮನದಲ್ಲಿ ನೋವು: ಸರ್ಕಾರಿ ಸೌಲಭ್ಯಕ್ಕಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಕುಟುಂಬ

ಪತ್ನಿಯನ್ನು ಬೆನ್ನ ಮೇಲೆ ಹೊತ್ತು ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿ

ಮಧ್ಯಪ್ರದೇಶದ ಪನ್ನಾದಲ್ಲಿ ವ್ಯಕ್ತಿಯೊಬ್ಬರು ನಡೆಯಲು ಅಸಮರ್ಥಳಾದ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಸಾರ್ವಜನಿಕ ಅಹವಾಲು ಸಭೆಗೆ ಹಾಜರಾಗಿ, ಕಳೆದ 10 ವರ್ಷಗಳಿಂದ ರೇಷನ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಂದ ತಮ್ಮ ಕುಟುಂಬ ವಂಚಿತವಾಗಿದೆ ಎಂದು ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿದರು. ಪ್ರಕರಣದ ಪರಿಶೀಲನೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ 6 ವರ್ಷದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ; ವಿಡಿಯೋ ವೈರಲ್‌

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ

Viral Video: ಫ್ಲೋರಿಡಾದ ಈಜುಕೊಳದಲ್ಲಿ ಆರು ವರ್ಷದ ಮಗುವೊಂದು ಪ್ರಜ್ಞೆ ತಪ್ಪಿ ತೇಲುತ್ತಿದ್ದಂತೆ ICE ಅಧಿಕಾರಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ್ದಾರೆ. ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ ಫೋರ್ಸ್‌ಮೆಂಟ್ (ICE) ಅಧಿಕಾರಿ ಪ್ರಾಣ ಉಳಿಸಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ ಆಗಿದೆ. ನೀರಿನ ಮೇಲೆ ಮಗು ತೇಲುತ್ತಿರುವುದನ್ನ ಕಂಡ ಅವರು ಒಂದು ಕ್ಷಣವೂ ತಡಮಾಡದೆ ಧರಿಸಿದ್ದ ಬಟ್ಟೆಯಲ್ಲೇ ನೇರವಾಗಿ ನೀರಿಗೆ ಜಿಗಿದಿದ್ದಾರೆ..

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ಆದಾಯ ಕೇಳಿ ಖ್ಯಾತ ಉದ್ಯಮಿಗೆ ಅಚ್ಚರಿ

25,000 ರುಪಾಯಿ ಜಾಬ್ ತೊರೆದು ಯಶಸ್ವಿ ಕ್ಯಾಬ್ ಚಾಲಕನಾದ ಯುವಕ

Viral News: ಪ್ರತಿಷ್ಠಿತ ಕಂಪನಿಯಲ್ಲಿ ಶಿಕ್ಷಣವಂತರಿಗೆ ಉದ್ಯೋಗ ಸಿಕ್ಕರೂ ಒತ್ತಡ, ಬಿಡುವಿಲ್ಲದ ಅವಧಿಯಿಂದ ಬೇಸತ್ತು ಕೆಲಸ ತೊರೆದ ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಿಂಗಳಿಗೆ 25 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗಿ ಯಶಸ್ಸು ಗಳಿಸಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?

ವೃದ್ಧನ ಪ್ರಾಣ ಉಳಿಸಿದ ಬೆನ್ನಲ್ಲೇ ಯುವಕನಿಂದ ಕಪಾಳಮೋಕ್ಷ

ಸಮುದ್ರದ ಅಲೆಯಲ್ಲಿ ವೃದ್ಧನೊಬ್ಬ ಸಿಲುಕಿಕೊಂಡಿದ್ದು ಸ್ಥಳೀಯರು ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಸ್ಥಳೀಯ ಯುವಕರು ನೀರಿಗೆ ಹಾರಿ ಅವರನ್ನು ಮರಳಿ ಕರೆತರಲು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಆದರೆ ದಡಕ್ಕೆ ಬರುತ್ತಿದ್ದಂತೆ ರಕ್ಷಕನೊಬ್ಬ ವೃದ್ಧನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ನಡೆಯುತ್ತಿದೆ.

Viral Video: ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ರೈಲಿನ ಶೌಚಾಲಯದಲ್ಲಿ ಕುಳಿತು ಟಿಕೆಟ್ ಇಲ್ಲದೆ ಪ್ರಯಾಣ

ರೈಲಿನಲ್ಲಿ ಜನ ಸಾಗರವೇ ತುಂಬಿರುತ್ತದೆ. ಆದರೆ ಇದೀಗ ಕಾಯ್ದಿರಿಸಿದ ಬೋಗಿಯಲ್ಲೂ ಟಿಕೆಟ್ ರಹಿತವಾಗಿ ಪ್ರಯಾಣಿಸಿದವರ ವಿಡಿಯೊವೊಂದು ವೈರಲ್ ಆಗಿದೆ. ಟಿಕೆಟ್ ಪಡೆಯದ ಹಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಯೊಳಗೆ ಪ್ರವೇಶಿಸಿ ವಾಶ್ ರೂಮ್‌ಗಳ ಸುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಉಳಿದ ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ನೀನಾ-ನಾನಾ? ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ ಚಾಲಕನಿಗೆ ದಾರಿ ಬಿಡದೆ ವಾಪಸ್‌ ಕಳುಹಿಸಿದ ಬೈಕ್ ಸವಾರ

ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ತಡೆದ ಬೈಕ್ ಸವಾರ

Viral Video: ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ವಾಹನಗಳು ಬಂದು ನಿಂತರೆ ಸಾಕು. ನಾವೇ ದಾರಿ ಬಿಟ್ಟು ಕೊಡುತ್ತೇವೆ. ಆದರೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬೈಕ್‌ ಸವಾರ ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ಗೆ ದಾರಿ ಬಿಟ್ಟು ಕೊಡದೆ ನಿಯಮ ಉಲ್ಲಂಘಿಸಿರುವ ಬಗ್ಗೆ ಪ್ರಶ್ನಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ʼʼತಂದೆ ಬಂದಿದ್ದೇನೆ, ನೋಡುʼʼ: ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು ಅಸುನೀಗಿದ ಮಗನ ಮೃತದೇಹದ ಮುಂದೆ ತಂದೆಯ ಆಕ್ರಂದನ

ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು 21 ವರ್ಷದ ಯುವಕ ಸಾವು

ಉತ್ತರ ಪ್ರದೇಶದ ವೃಂದಾವನದ ಇಸ್ಕಾನ್‌ ದೇವಸ್ಥಾನದಲ್ಲಿ ಭೀಕರ ದುರಂತವೊಂದು ನಡೆದಿದ್ದು, ವಾಟರ್‌ ಸ್ಪ್ರೇ ಕೂಲರ್‌ನಿಂದ ವಿದ್ಯುತ್‌ ಪ್ರವಹಿಸಿ 21 ವರ್ಷದ ಯುವ ಮೃತಪಟ್ಟಿದ್ದಾನೆ. ಮೃತನನ್ನು ಮಧ್ಯ ಪ್ರದೇಶದ ಛತ್ರಾಪುರದಿಂದ ಆಗಮಿಸಿದ ಅಭಿಜ್ಞಾನ್‌ ಗುಪ್ತ ಎಂದು ಗುರುತಿಸಲಾಗಿದೆ. ಆತನ ಮೃತದೇಹದ ಮುಂದೆ ತಂದೆ ಗೋಳಾಡುತ್ತಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ.

ಎಸ್‌ಪಿ ಕಚೇರಿಯಲ್ಲಿ ಮಹಿಳೆಯರ ಹೈಡ್ರಾಮಾ: ಸಾರ್ವಜನಿಕ ಸಭೆಯಲ್ಲೇ ಜುಟ್ಟು ಹಿಡಿದು ಜಗಳವಾಡಿದ ಮಹಿಳೆಯರು

ಎಸ್‌ಪಿ ಕಚೇರಿಯಲ್ಲಿ ಮಹಿಳೆಯರ ಭೀಕರ ಹೊಡೆದಾಟ: ವಿಡಿಯೊ ವೈರಲ್

Viral Video: ಸೂಪರಿಂಡೆಂಟ್ ಆಫ್ ಪೊಲೀಸ್ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಯ ಸಮಯ ದಲ್ಲಿ ಇಬ್ಬರು ಮಹಿಳೆಯರು ಗಲಾಟೆ ಮಾಡಿರುವ ಘಟನೆಯೊಂದು ಕಂಡು ಬಂದಿದೆ. ಪೊಲೀಸರ ಎದುರಿನಲ್ಲಿಯೇ ಮಹಿಳೆಯರು ಮರಾಮಾರಿಯಾಗಿ ಹೊಡೆದುಕೊಂಡಿದ್ದಾರೆ. ಈ ಭೀಕರ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ...

ರೈಲ್ವೆ ಸ್ಟೇಷನ್‌ನಂತಾದ ಬೆಂಗಳೂರು ವಿಮಾನ ನಿಲ್ದಾಣ; ಕಾಂಕ್ರೀಟ್ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

ಬೆಂಗಳೂರು ವಿಮಾನ ನಿಲ್ದಾಣದ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

Viral Video: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಒಳಗೊಂಡು ಎಲ್ಲರ ಗಮನ ಸೆಳೆಯುವ ತಾಣ. ಆದರೆ ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ''ರೈಲು ನಿಲ್ದಾಣವೋ ಅಥವಾ ರೈಲ್ವೆ ಸ್ಟೇಷನ್?" ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಉಚಿತ ಬಸ್ ಉದ್ಘಾಟನೆ ವೇಳೆ ಕೇರಳಂ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ: ವಿಡಿಯೊ ವೈರಲ್

ಬಸ್‌ನೊಳಗೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ!

Viral Video: ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳಂ ಸರ್ಕಾರ ಚಾಲನೆ ನೀಡಿದೆ. ಉದ್ಘಾಟನೆ ಸಮಾರಂಭದ ವೇಳೆ ಸಚಿವೆ ಬಿಂದು ಕೃಷ್ಣ ಅವರ ಮೇಲೆ ಬಿಸಿ ಬಿಸಿ ಪಾಯಸ ಚೆಲ್ಲಿದ ಘಟನೆ ನಡೆದಿದೆ. ಉದ್ಘಾಟನೆಯ ಸಂದರ್ಭದಲ್ಲಿ ಬಸ್‌ನೊಳಗೆ ವಿತರಿಸುತ್ತಿದ್ದ ಪಾಯಸವು ತಪ್ಪಿ ಆಕಸ್ಮಿಕವಾಗಿ ಅವರ ತಲೆಯ ಮೇಲೆ ಬಿದ್ದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ಕೊಚ್ಚಿ ವಾಟರ್ ಮೆಟ್ರೋದಲ್ಲಿ ಗರ್ಬಾ ನೃತ್ಯ; ಪ್ರಯಾಣಿಕರಿಗೆ ಕಿರಿಕಿರಿ ಮಾಡಿದ್ದಕ್ಕೆ ನೆಟ್ಟಿಗರಿಂದ ಕ್ಲಾಸ್‌

ಕೊಚ್ಚಿ ವಾಟರ್ ಮೆಟ್ರೋದಲ್ಲಿ ಗರ್ಬಾ ನೃತ್ಯ: ವಿಡಿಯೊ ನೋಡಿ ನೆಟ್ಟಿಗರ ಆಕ್ರೋಶ

Kochi Water Metro: ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ ಅನೇಕ ದೃಶ್ಯ ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುತ್ತಿದ್ದ ವಾಟರ್ ಮೆಟ್ರೋ ಬೋಟ್ ಒಳಗೆ ಪ್ರಯಾಣಿಕರ ಗುಂಪೊಂದು ಡ್ಯಾನ್ಸ್ ಮಾಡಿದೆ. ಬೋಟ್ ಚಲಿಸುತ್ತಿರುವಾಗಲೇ ಗುಜರಾತ್‌ನ ಸಾಂಪ್ರ ದಾಯಿಕ ಜನಪದ ನೃತ್ಯವಾದ ಗರ್ಬಾವನ್ನು ಪ್ರಯಾಣಿಕರು ಬಹಳ ಆಸಕ್ತಿಯಿಂದ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಯಾಣಿಕರ ವರ್ತನೆಗೆ ಕಿಡಿಕಾರಿದ್ದಾರೆ.

Viral Video: ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು: ಮಹಿಳೆಯರ ಕಳ್ಳಾಟ ಕ್ಯಾಮರಾದಲ್ಲಿ ಸೆರೆ

ಯುವಕರಿಗೆ ಕಿರುಕುಳ ನೀಡಿ ತಮ್ಮ ಬಟ್ಟೆಯನ್ನು ತಾವೇ ಹರಿದು ಹಾಕಿದ ಮಹಿಳೆಯರು

Viral News: ಮಹಿಳೆಯರ ಗುಂಪೊಂದು ಯುವಕರಿಗೆ ಕಿರುಕುಳ ನೀಡಿ ಅವರ ಮೇಲೆಯೇ ಆರೋಪ ಹೊರಿಸಿದೆ. ಈ ಬಗ್ಗೆ ಮಹಿಳೆಯರನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದಾಗ ತಮ್ಮ ಬಟ್ಟೆಗಳನ್ನು ತಾವೇ ಹರಿದುಕೊಂಡು ಕಳ್ಳಾಟ ಆಡಿದ್ದಾರೆ. ಕಿರುಕುಳದ ಆರೋಪದ ಬೆನ್ನಲ್ಲೇ ಮಹಿಳೆಯರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರ್ಕ್‌ ಫ್ರಮ್‌ ಹೋಮ್‌ ಅಲ್ಲ, ವರ್ಕ್‌ ಫ್ರಮ್‌ ಕ್ಯಾಮಲ್‌! ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಆಫೀಸ್‌ನ ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾದ ಉದ್ಯೋಗಿ

ಒಂಟೆ ಮೇಲೆ ಕುಳಿತು ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾದ ಉದ್ಯೋಗಿ

Viral Video: ಉದ್ಯೋಗಿಗಳು ಆಫೀಸ್‌ಗೆ ತೆರಳುವ ಬದಲು ಮನೆಯಿಂದಲೇ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಏರ್‌ಪೋರ್ಟ್‌ನಲ್ಲಿ, ಬೈಕ್‌ನಲ್ಲಿ ಅಥವಾ ಮರದ ಕೆಳಗೆ ಕುಳಿತು ಆಫೀಸ್ ಕೆಲಸ ಮಾಡುವ ವಿಡಿಯೊ ಬಹಳಷ್ಟು ವೈರಲ್ ಆಗಿವೆ. ಇವೆಲ್ಲ ಬಿಡಿ, ಇದೀಗ ಇಲ್ಲೊಬ್ಬ ವ್ಯಕ್ತಿ ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಆಫೀಸ್‌ ಕೆಲಸ ಮಾಡಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಾಯುಪಡೆ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಯತ್ನ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ: ಇಬ್ಬರು ಅರೆಸ್ಟ್

Viral Video: ನಾಗಪುರದ ಭಾರತೀಯ ವಾಯುಪಡೆ ಅಧಿಕಾರಿಯ ಪತ್ನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಾದಕ ವಸ್ತು ನೀಡಿ ತಮ್ಮ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿದಿದೆ.

Loading...