ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಸಮಾಜ ತಿದ್ದಬೇಕಾದ ಶಿಕ್ಷಕರಿಂದಲೇ ನೀಚ ಕೃತ್ಯ; 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕರು

Odisha News: ಒಡಿಶಾದಲ್ಲಿ 12 ವರ್ಷದ ಬಾಲಕಿಯ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಲವರ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

ಏರ್‌ ಇಂಡಿಯಾ ಗೇಟ್‌ನ ಎಸಿ ಯೂನಿಟ್ ಮೇಲೆ 7 ಅಡಿಯ ಬೃಹತ್‌ ಹಾವು ಪ್ರತ್ಯಕ್ಷ

ಎಸಿ ಯೂನಿಟ್‌ನಲ್ಲಿ 7ಅಡಿ ಉದ್ದದ ಹಾವು ಪತ್ತೆ: ಭಯಾನಕ ವಿಡಿಯೊ ಇಲ್ಲಿದೆ

Viral Video: ಏಳು ಅಡಿ ಉದ್ದದ ಬೃಹತ್ ಹಾವೊಂದು ಏರ್ ಕಂಡೀಷನರ್ (AC) ಯೂನಿಟ್ ಮೇಲೆ ಪತ್ತೆಯಾಗಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಏರ್ ಇಂಡಿಯಾ ಗೇಟ್‌ ನಂಬರ್‌ 3ಯ ಎಸಿ ಯೂನಿಟ್‌ನಲ್ಲಿ ಹಾವು ಪತ್ತೆಯಾಗಿದ್ದು, ವನ್ಯಜೀವಿ ರಕ್ಷಕರು ಅದನ್ನು ಕಾಪಾಡಿದ್ದಾರೆ.

ರಸ್ತೆಯಲ್ಲಿ ಮಾತ್ರವಲ್ಲ ನದಿಯಲ್ಲೂ ನಡೆಯುತ್ತೆ ಅಪಘಾತ; ಅಲಕನಂದಾ ನದಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ 2 ದೋಣಿಗಳು

ಡಿಕ್ಕಿ ಹೊಡೆದ ಪ್ರವಾಸಿ ದೋಣಿಗಳು: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

Viral Video: ಉತ್ತರಾಖಂಡದ ಪೌರಿ ಜಿಲ್ಲೆಯ ಪ್ರಸಿದ್ಧ ಧಾರಿ ದೇವಿ ದೇವಸ್ಥಾನದ ಬಳಿ ಅಲಕನಂದಾ ನದಿಯಲ್ಲಿ ಎರಡು ಪ್ರವಾಸಿ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆ ಎಷ್ಟು ಪ್ರಬಲವಾಗಿತ್ತೆಂದರೆ, ದೋಣಿ ನಿರ್ವಾಹಕರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ನೇರವಾಗಿ ನದಿಗೆ ಬಿದ್ದಿದ್ದಾರೆ.‌ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

ಅದ್ಧೂರಿ ಮದುವೆಯಲ್ಲಿ ಹೈಡ್ರಾಮಾ: ವರನ ಎಂಟ್ರಿ ಆಗುತ್ತಿದ್ದಂತೆ ಲೈನ್‌ ಮ್ಯಾನ್‌ನಿಂದ ವಿದ್ಯುತ್ ಕಡಿತ

ವರನ ಎಂಟ್ರಿ ವೇಳೆ ವಿದ್ಯುತ್ ಕಡಿತ ಗೊಳಿಸಿದ ಲೈನ್‌ ಮ್ಯಾನ್

Viral Video: ಇಲ್ಲೊಂದು ಕಡೆ ಮದುವೆ ಗ್ರ್ಯಾಂಡ್ ಆಗಿ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿರುವಾಗಲೇ ವಿದ್ಯುತ್ ಕಡಿತಗೊಂಡ ಘಟನೆ ನಡೆದಿದೆ‌.‌‌ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಡೈಮಂಡ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ವರ ಶುಭಂ ಚೌಹಾಣ್ ಎಂಬ ವ್ಯಕ್ತಿ ಮೆರವಣಿಗೆ ಹೊರಡಲು ಸಿದ್ಧವಾಗಿದ್ದಾಗಲೇ ಈ ಘಟನೆ ನಡೆದಿದೆ.

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆ: ಪುಟ್ಟ ಬಾಲಕಿಯ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಎಂದ ನೆಟ್ಟಿಗರು

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದ ಪುಟ್ಟ ಬಾಲಕಿ

Viral Video: ಬಾಲಕಿಯೊಬ್ಬಳು ಪುಟ್ಟ ಮಕ್ಕಳಿಗೆ ಚಾಚಿದ ಸಹಾಯ ಹಸ್ತದ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಿಫ್ಟ್‌ನೊಳಗೆ ಸಿಲುಕಿಕೊಂಡಿರುವ ಇಬ್ಬರು ಮಕ್ಕಳನ್ನು ಈ ಪುಟ್ಟ ಬಾಲಕಿ‌ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇದಾಗಿದ್ದು, ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ.

ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ

ಕಳ್ಳರನ್ನು ಓಡಿಸಲು ಎನ್‌ಆರ್‌ಐ ಮಹಿಳೆ ಮಾಡಿದ್ದೇನು ಗೊತ್ತೇ?

ದೋಚಲು ಬಂದ ಕಳ್ಳರನ್ನು ಮಹಿಳೆಯೊಬ್ಬರು ಕತ್ತಿ ಹಿಡಿದು ಓಡಿಸಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ. ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಬಂದಿದ್ದ ಮಹಿಳೆ ಹರ್ಜಿಂದ್ ಕೌರ್ ಅವರ ವಾಹನವನ್ನು ದರೋಡೆಕೋರರು ಮುತ್ತಿಗೆ ಹಾಕಿದ್ದು, ಈ ವೇಳೆ ಧೈರ್ಯ ತೋರಿದ ಮಹಿಳೆ ಕತ್ತಿ ಹಿಡಿದು ಅವರನ್ನು ಓಡಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಡಕ್ಕಲ್ ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಸ್ಕೂಟರ್‌ಗೆ ಗುದ್ದಿದ್ದ ಯಮರೂಪಿ ಕಾರ್, ಎದೆ ಝಲ್ ಎನಿಸುವ ವಿಡಿಯೊ

ಮಡಕ್ಕಲ್ ಜಂಕ್ಷನ್‌ನಲ್ಲಿ ಭೀಕರ ಡಿಕ್ಕಿ; ಮಹಿಳೆ ಗಂಭೀರ ಗಾಯ

ಕೇರಳದ ಮಡಕ್ಕಲ್ ಜಂಕ್ಷನ್‌ನಲ್ಲಿ ಅತಿವೇಗದಲ್ಲಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಸ್ಕೂಟರ್‌ ಚಲಾಯಿಸುತ್ತಿದ್ದ ಮಹಿಳೆ ಜಂಕ್ಷನ್ ದಾಟಲು ಎಚ್ಚರಿಕೆಯಿಂದ ಸಾಗುತ್ತಿದ್ದರೂ ತಮ್ಮದಲ್ಲದ ತಪ್ಪಿಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿರಿದಾದ ರಸ್ತೆ, ಸಂಚಾರ ಸಂಕೇತಗಳ ಕೊರತೆ ಮತ್ತು ವೇಗ ನಿಯಂತ್ರಣದ ಅಭಾವವೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು; ಫೋನ್‌ ನಂಬರ್‌ ಕೇಳಿ ಕಿರುಕುಳ, ವಿಡಿಯೋ ನೋಡಿ

ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು!

Students misbehave with woman reporter: ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳ ಗುಂಪೊಂದು ಮಹಿಳಾ ವರದಿಗಾರ್ತಿಯೊಬ್ಬರಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಫೆಬ್ರವರಿ 17 ರಿಂದ 25 ರವರೆಗೆ ನಡೆಯುತ್ತಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಗಳ ಮಧ್ಯೆ ಈ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ! ವಿಡಿಯೋ ನೋಡಿ

ಬೆಂಗಳೂರಿನ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿ ಶಾಕ್ ಆದ ನೆಟ್ಟಿಗರು

ಇತ್ತೀಚೆಗೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವರು ಹಲವಾರು ಇದ್ದಾರೆ‌. ಆದರೆ ಇಲ್ಲಿ ಉದ್ಯೋಗದ ಅವಕಾಶ ಹೆಚ್ಚಿದ್ದರೂ ಜೀವನ ವೆಚ್ಚ ನಿಭಾಯಿಸೋದು ಕಷ್ಟ‌. ರೂಮ್ ಬಾಡಿಗೆ, ಕರೆಂಟ್, ವಾಟರ್ ಬಿಲ್ ಹೀಗೆ ದುಡಿದ ಅರ್ಧದಷ್ಟು ಹಣ ಇದಕ್ಕೆ ವ್ಯಯಿಸ ಬೇಕು..ಇದಕ್ಕೆ ಸಾಕ್ಷಿ ಎಂಬಂತೆ ಇದೀಗ 22 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ದುಬಾರಿ ವೆಚ್ಚದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಕಿರಾತಕ!

ಸಿಗರೇಟ್ ಸೇದಿ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಯುವಕ: ಭಯಾನಕ ವಿಡಿಯೊ!

Viral Video: ಇಲ್ಲೊಬ್ಬ ಅಸಾಮಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಘಟನೆಯೊಂದು ನಡೆದಿದೆ. ರಾಯ್‌ಪುರದಲ್ಲಿ ಈ ಘಟನೆ ನಡೆದಿದ್ದು ಪೆಟ್ರೋಲ್ ಹಾಕಿಸುವಾಗ ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಆತನು ಸಿಟ್ಟಿನಿಂದ ಇಡೀ ಬಂಕ್‌ಗೇ ಬೆಂಕಿ ಹಚ್ಚಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌

ವೃದ್ಧ ತಾಯಿಯ ಕೂದಲು ಹಿಡಿದು ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ಮಗಳು: ನೋಡಿದವರ ರಕ್ತ ಕುದಿಯುತ್ತೆ

ವೃದ್ಧ ತಾಯಿಯ ಕೂದಲನ್ನು ಎಳೆದು ಥಳಿಸಿದ ಮಗಳು: ಕಿಡಿಕಾರಿದ ನೆಟ್ಟಿಗರು!

Viral Video; ಮಗಳೊಬ್ಬಳು ವೃದ್ಧ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.‌ ಹರಿಯಾಣದ ಅಂಬಾಲಾದಲ್ಲಿ ಈ ಘಟನೆ ನಡೆದಿದೆ. ವಯಸ್ಸಾದ ತಾಯಿಯ ಮೇಲೆ ಮಗಳು ಈ ರೀತಿ ಯಾಗಿ ಹಲ್ಲೆ ನಡೆಸಿದ್ದು ಕಂಡು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹೆತ್ತಮ್ಮನೇ ದೂರ ಮಾಡಿದ ಮೇಲೆ ಗೊಂಬೆಯೇ ಕೋತಿ ಮರಿಗೆ ಆಶ್ರಯ ; ಕಣ್ಣಂಚಲ್ಲಿ ನೀರು ತರಿಸುವಂತಿದೆ ಈ ವಿಡಿಯೋ

ಗೊಂಬೆಯನ್ನೇ ತಾಯಿಯಾಗಿ ಸ್ವೀಕರಿಸಿದ ಕೋತಿ ಮರಿ: ಹೃದಯ ಸ್ಪರ್ಶಿ ದೃಶ್ಯ!

Viral Video: ಇಲ್ಲೊಂದು ಪುಟ್ಟ ಮಂಗವೊಂದು ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೆ ತಾಯಿ ಎಂದು ಭಾವಿಸಿ ಕೊಂಡು ಬದುಕುತ್ತಿದೆ. ಇಚಿಕಾವಾ ಸಿಟಿ ಮೃಗಾಲಯದ ಏಳು ತಿಂಗಳ ಪುಟ್ಟ ಮಂಗ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು ಒಂಟಿಯಾಗಿ ಬದುಕುತ್ತಿದೆ. ಇದರ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿ ಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ.

ಬೀಚ್ ನಲ್ಲಿ ಸಮೋಸಾ ಸವಿದ ಹಸ್ಕಿ ನಾಯಿಯ ಕ್ಯೂಟ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

ಮುಂಬೈ ಬೀಚ್‌ನಲ್ಲಿ ಸಮೋಸಾವನ್ನು ಆನಂದಿಸಿದ ಹಸ್ಕಿ ನಾಯಿ

Viral Video: ಮುಂಬೈ ಬೀಚ್‌ನಲ್ಲಿ ಹಸ್ಕಿ ನಾಯಿಯೊಂದು ಸಮೋಸಾವನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. 'ಆಕ್ಸಲ್' ಎಂಬ ಹೆಸರಿನ ಸೈಬೀರಿಯನ್ ಹಸ್ಕಿ ನಾಯಿಯು ಮುಂಬೈ ಬೀಚ್‌ನಲ್ಲಿ ಅಪರಿಚಿತರೊಂದಿಗೆ ಸೇರಿ ಸಮೋಸವನ್ನು ಸವಿದಿದೆ.‌ ಈ ದೃಶ್ಯ ನೋಡಲು ಬಹಳಷ್ಟು ಮುದ್ದಾಗಿದೆ...

ಅಯ್ಯೊಯ್ಯೋ!  15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಸದ ರಾಶಿಗೆ ಎಸೆದ ವ್ಯಕ್ತಿ; ಆಮೇಲೇನಾಯ್ತು?

ಆಕಸ್ಮಿಕವಾಗಿ ಚಿನ್ನಾಭರಣವನ್ನು ಕಸದ ರಾಶಿಗೆ ಎಸೆದ ವ್ಯಕ್ತಿ

Man accidentally throws gold: ಕುಟುಂಬ ಸದಸ್ಯರೆಲ್ಲರೂ ತೀರ್ಥಯಾತ್ರೆಗೆ ಹೋದಾಗ ಮನೆಯಲ್ಲಿ ದರೋಡೆ ನಡೆಯಬಹುದು ಎಂಬ ಭಯದಿಂದ ವ್ಯಕ್ತಿಯೊಬ್ಬರು ಚಿನ್ನಾಭರಣಗಳನ್ನು ಮುಚ್ಚಿಡಲು ಒಂದು ವಿಶಿಷ್ಟ ಮಾರ್ಗವನ್ನು ಯೋಚಿಸಿದರು. ಅದನ್ನು ಹಳೆಯ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ, ಕಸ ತುಂಬಿದ ಚೀಲದೊಳಗೆ ಮರೆಮಾಡಿದರು.

ಹೆರಿಗೆಯಾದ 10 ದಿನಕ್ಕೆ ಕೈಯಲ್ಲಿ ಹಸುಗೂಸು ಹಿಡಿದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಯುವತಿ: ಹೃದಯಸ್ಪರ್ಶಿ ದೃಶ್ಯ!

ಹೆರಿಗೆಯಾದ 10 ದಿನಕ್ಕೆ ನವಜಾತ ಶಿಶುವಿನೊಂದಿಗೆ ಪರೀಕ್ಷೆ ಬರೆದ ಯುವತಿ!

Viral News: 21 ವರ್ಷದ ಮಹಿಳೆಯೊಬ್ಬರು ಹೆರಿಗೆಯಾದ 10 ದಿನದಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಕೊಂಡು 12 ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾದ ಘಟನೆಯೊಂದು ನಡೆದಿದೆ. ಮಹಾ ರಾಷ್ಟ್ರದ ನಾಂದೇಡ್‌ ನಲ್ಲಿರುವ ಪೀಪಲ್ಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಅಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಸೌಲಭ್ಯವನ್ನು ಸ್ಥಾಪಿಸುವ ಮೂಲಕ ಮಹಿಳೆಗೆ ಬೆಂಬಲ ನೀಡಿದ್ದಾರೆ.

ಸುಟ್ಟ ಕಲೆ ಇರುವ ಶರ್ಟ್‌ಗೆ 1 ಲಕ್ಷ ರುಪಾಯಿ: ಇಂತಹ ಬಟ್ಟೆ ಕಸದ ಬುಟ್ಟಿಗೆ ಎಸೆದಿದ್ದೇವೆ ಎಂದು ಕಾಲೆಳೆದ ನೆಟ್ಟಿಗರು

1 ಲಕ್ಷ ರುಪಾಯಿ ಮೌಲ್ಯದ ಐರನ್ ಬರ್ನ್ ಶರ್ಟ್: ತಮಾಷೆ ಮಾಡಿದ ನೆಟ್ಟಿಗರು

Viral News: ಬ್ರ್ಯಾಂಡ್ ಉಡುಪುಗಳು ಅಂತ ಬಂದಾಗ ಆಫರ್ ಇದ್ದರೆ ಸಾಕು ಜನ ಸಾಲುಗಟ್ಟಿ ನಿಂತು ಖರೀದಿಸುತ್ತಾರೆ. ಈಗ 'ವೆಟ್‌ಮೆಂಟ್ಸ್' ಎಂಬ ಫ್ಯಾಷನ್ ಬ್ರ್ಯಾಂಡ್ ವಿಭಿನ್ನ ವಾದ ಶರ್ಟ್ ಒಂದನ್ನು ಪರಿಚಯಿಸಿದ್ದು ಇದರ ವಿನ್ಯಾಸ ನೋಡಿಯೇ ಜನ‌ ಶಾಕ್ ಆಗಿದ್ದಾರೆ.

ಯುವಕನ ಹೆಲಿಕಾಪ್ಟರ್ ಪ್ರಯಾಣದ ‌ಕನಸನ್ನು ನನಸಾಗಿಸಿದ ಹರಿಯಾಣ ಸಿಎಂ

ಯುವಕನಿಗೆ ಹೆಲಿಕಾಪ್ಟರ್ ಸವಾರಿ ಮಾಡಿಸಿದ ಹರಿಯಾಣ ಸಿಎಂ

Viral News: ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಯುವಕನೊಬ್ಬನಿಗೆ ಹೆಲಿಕಾಪ್ಟರ್ ಪ್ರಯಾಣ ಮಾಡಲು ಅವಕಾಶ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದನ್ನು ಕೊನೆಗೊಳಿಸಿ ಹೆಲಿಕಾಪ್ಟರ್ ಏರಲು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸಿದ್ಧರಾಗಿದ್ದರು. ಅದೇ ವೇಳೆ ಬ್ಯಾರಿಕೇಡ್ ಆಚೆ ನಿಂತಿದ್ದ ಯುವಕನ ಮಾತನ್ನು ಅರ್ಥೈಸಿಕೊಂಡು ಆತನನ್ನು ಹೆಲಿಕಾಪ್ಟರ್ ಸವಾರಿ ಮಾಡಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸಿದ್ದಾರೆ.

ರೀಲ್ಸ್‌ಗಾಗಿ ಮಗುವಿಗೆ ಮದ್ಯ ಕುಡಿಸಿ, ಸಿಗರೇಟ್‌ ನೀಡಿದ ಕಿರಾತಕ: ಈ ವಿಡಿಯೊ ನೋಡಿದರೆ ನೀವೂ ಉರಿದು ಬೀಳೋದು ಗ್ಯಾರಂಟಿ

ರೀಲ್ಸ್‌ಗಾಗಿ ಚಿಕ್ಕ ಮಗುವಿಗೆ ಸಿಗರೇಟ್, ಮದ್ಯ ನೀಡಿದ ಕಿರಾತಕ

Viral Video: ರಾಜಸ್ಥಾನದ ವ್ಯಕ್ತಿಯೊಬ್ಬ ರೀಲ್ಸ್‌ಗಾಗಿ ಚಿಕ್ಕ ಮಗುವಿಗೆ ಸಿಗರೇಟ್ ಮತ್ತು ಮದ್ಯ ನೀಡಿದ್ದಾನೆ. ಈ ದೃಶ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದು, ಹೆಚ್ಚು ವೀವ್ಸ್ ಮತ್ತು ಲೈಕ್ಸ್‌ಗಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕೆ? ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತೀಯರೆಲ್ಲ ಕೆ ಬ್ಯಾಂಡ್‌ನತ್ತ ಮುಖ ಮಾಡಿದರೆ ಸನಾತನ ಧರ್ಮಕ್ಕೆ ಮನಸೋತ ಕೆ-ಪಾಪ್ ಸ್ಟಾರ್ ಔರಾ; ಚೆನ್ನೈ ದೇವಸ್ಥಾನದಲ್ಲಿ ಶಿವ ತಾಂಡವ ಸ್ತೋತ್ರ ಪಠಿಸಿದ ಗಾಯಕ

ಚೆನ್ನೈ ದೇವಸ್ಥಾನದಲ್ಲಿ 'ಶಿವ ತಾಂಡವ ಸ್ತೋತ್ರ' ಪಠಿಸಿದ ಕೆ-ಪಾಪ್ ಸ್ಟಾರ್

Viral Video: ದಕ್ಷಿಣ ಕೊರಿಯಾದ ಗಾಯಕ ಔರಾ ಶಿವರಾತ್ರಿ ಆಚರಣೆಯ ಭಾಗವಾಗಿ ಭಾರಿ ಸುದ್ದಿಯಾಗಿದ್ದಾರೆ. ಖ್ಯಾತ ಗಾಯಕ ಔರಾ ಈ ಬಾರಿಯ ಮಹಾಶಿವರಾತ್ರಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ಅತ್ಯಂತ ಭಕ್ತಿಯಿಂದ ಆಚರಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಶಿವ ಸ್ತೋತ್ರ ಪಠಿಸುತ್ತಾ ಶಿವನ ಆರಾಧನೆಯಲ್ಲಿ ಮುಳುಗಿರುವ ಅವರ ವಿಡಿಯೊ ವೈರಲ್ ಆಗಿದೆ.

Fact Check: ಭಾರತೀಯ ಸೇನೆಯನ್ನು ಕೇಸರಿಯನ್ನಾಗಿಸಲು ಮೋಹನ್‌ ಭಾಗವತ್‌ ಮೋದಿಗೆ ಮನವಿ ಸಲ್ಲಿಸಿದ್ರಾ? ವೈರಲ್‌ ವಿಡಿಯೊ ಹಿಂದಿನ ಸತ್ಯಾಂಶ ಇಲ್ಲಿದೆ

ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ ಹಿಂದಿನ ರಹಸ್ಯವೇನು?

ಭಾರತೀಯ ಸೇನೆಯನ್ನು ಕೇಸರಿ ಮಾಡಬೇಕು, ಸೇನೆಯಲ್ಲಿರುವ ಹಿಂದೂಯೇತರರನ್ನು ತೆಗೆದು ಹಾಕಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಅಸಲಿ ವಿಡಿಯೊ ಅಲ್ಲ ಡೀಪ್ ಫೇಕ್ ವಿಡಿಯೊ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.

ಎಐ 'ಶೀತಲ ಸಮರ': ದೆಹಲಿ ಶೃಂಗಸಭೆಯಲ್ಲಿ ಓಪನ್-ಎಐ, ಆಂಥ್ರೋಪಿಕ್ ಸಿಇಒಗಳಿಗೆ ಮುಜುಗರ

ವೇದಿಕೆಯ ಮೇಲೆಯೇ ಎಐ ಸಂಘರ್ಷ: ದೆಹಲಿ ಸಮಾವೇಶದಲ್ಲಿ ಸಿಇಒಗಳ ವಾಗ್ವಾದ

ದೆಹಲಿ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ನಡೆದ ಚರ್ಚೆಯ ವೇಳೆ ಓಪನ್-ಎಐ ಮತ್ತು ಆಂಥ್ರೋಪಿಕ್ ಸಂಸ್ಥೆಗಳ ಸಿಇಒಗಳ ನಡುವೆ ತೀಕ್ಷ್ಣ ಭಿನ್ನಾಭಿಪ್ರಾಯಗಳು ಗೋಚರಿಸಿದವು. ವೇದಿಕೆಯ ಮೇಲೆಯೇ ಪರಸ್ಪರ ಪ್ರಶ್ನೋತ್ತರ ಮತ್ತು ಟೀಕೆಗಳು ನಡೆಯುತ್ತಿದ್ದರಿಂದ ವಾತಾವರಣದಲ್ಲಿ ಶೀತಲ ಸಮರದ ವಾತಾವರಣ ಕಂಡುಬಂದಿತು. ಎಐ ಭದ್ರತೆ, ನಿಯಂತ್ರಣ, ಮತ್ತು ಭವಿಷ್ಯದ ನೀತಿಗಳ ಬಗ್ಗೆ ಇಬ್ಬರು ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣ, ಚರ್ಚೆ ಕೆಲ ಕ್ಷಣಗಳಲ್ಲಿ ಮುಜುಗರದ ಸ್ಥಿತಿಗೆ ತಲುಪಿತು.

ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿಯಾಗ್ತಾರೆ; ಭವಿಷ್ಯ ನುಡಿದ ಬಾಬಾ: ವಿಡಿಯೊ ನೋಡಿ

ಪ್ರಿಯಾಂಕಾ ವಾದ್ರಾ ಪ್ರಧಾನಿಯಾಗಲಿದ್ದಾರೆ ಎಂದ ಬಾಬಾ

Priyanka Gandhi Vadra: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಅವರಿಗೆ ಭವ್ಯ ಸ್ವಾಗತ ನೀಡಿದರು. ಆದರೆ ಪ್ರಿಯಾಂಕಾ ವಾದ್ರಾ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಬಾಬಾ (ತಪಸ್ವಿ) ಆಶೀರ್ವಾದ ಪಡೆದಿದ್ದು ಹೆಚ್ಚು ಗಮನಸೆಳೆದಿದೆ. ಈ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಬಾಬಾ ಭವಿಷ್ಯ ನುಡಿದಿದ್ದಾರೆ.

ಇಲ್ಲಿ 2BHK ಮನೆಗೆ 1.11 ಲಕ್ಷ ಬಾಡಿಗೆ; ಪಾವತಿ ಮಾಡಲು ಎರಡು ಕಿಡ್ನಿ ಬೇಕು ಎಂದ ಯುವತಿ! ವಿಡಿಯೋ ವೈರಲ್‌

ಮುಂಬೈನಲ್ಲಿ 2BHK ಗೆ ಯುವತಿ ಪಾವತಿ ಮಾಡುವ ಬಾಡಿಗೆ ಕೇಳಿ ದಂಗಾದ‌ ನೆಟ್ಟಿಗರು

Viral Video: ಮಹಿಳೆ ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ಗೆ ಪಾವತಿಸುವ ಬಾಡಿಗೆ ಮೊತ್ತವನ್ನು ಬಹಿ ರಂಗಪಡಿಸಿದ್ದು, ಭಾರತದ ಆರ್ಥಿಕ ರಾಜಧಾನಿಯಲ್ಲಿ ಜೀವನ ವೆಚ್ಚವನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ರಾಂಕಾ ಎನ್ನುವ ಯುವತಿ ಮನೆಯನ್ನು ಪ್ರೀತಿಯಿಂದ "ಬ್ಯಾಡಿ ಭವನ" ಎಂದು ಕರೆಯುತ್ತಾರೆ. ಆದರೆ ಈ ಮನೆಗೆ ಅವರು ಭಾರೀ ಮೊತ್ತದ ಬಾಡಿಗೆಯನ್ನು ಪಾವತಿ ಮಾಡುತ್ತಾರೆ.

ಗೆಳತಿಯ ಹುಟ್ಟುಹಬ್ಬದಂದು ರೋಮ್ಯಾಂಟಿಕ್ ಪೋಸ್ಟ್‌ ಹಂಚಿಕೊಂಡ ಪಾಂಡ್ಯ

ಗೆಳತಿಯ ಹುಟ್ಟುಹಬ್ಬದಂದು ರೋಮ್ಯಾಂಟಿಕ್ ಪೋಸ್ಟ್‌ ಹಂಚಿಕೊಂಡ ಪಾಂಡ್ಯ

Hardik Pandya girlfriend birthday post: ಪ್ರೇಮಿಗಳ ದಿನದಂದು ಪಾಂಡ್ಯ ತನ್ನ ಗೆಳತಿ ಮಹೀಕಾಯ ನೆನಪಿಗಾಗಿ ತನ್ನ ಕುತ್ತಿಗೆಯ ಹಿಂಭಾಗದಲ್ಲಿ ಎರಡು ಚಿರತೆಗಳ ಜತೆಗೆ 'M' ಅಕ್ಷರವನ್ನು ಹೊಂದಿರುವ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಈ ಚಿತ್ರಣವು ಅವರ ಪ್ರೀತಿ ಮನಸ್ಥಿತಿ ಮತ್ತು ಪರಸ್ಪರ ಅವಲಂಬನೆಯನ್ನು ಪ್ರತಿಬಿಂಬಿಸುತ್ತದೆ.

Loading...