ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಮದುವೆಯಾದ ಕೆಲವೇ ಗಂಟೆಗಳಲ್ಲಿ ದಾಂಪತ್ಯದಲ್ಲಿ ಬಿರುಕು: ಪತಿಯನ್ನು ಬಿಟ್ಟು ಪ್ರಿಯಕರನನ್ನೇ ವರಿಸಲು ಹಠ ಹಿಡಿದ ನವವಧು

ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತಿ ತೊರೆದ ವಧು

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಿಚಿತ್ರ ಘಟನೆ ನಡೆದಿದೆ. ನವವಧು ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಜೀವನ ಸಾಗಿಸುವುದಾಗಿ ಘೋಷಿಸಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಕುಟುಂಬದ ಒತ್ತಾಯದಿಂದ ಮದುವೆಗೆ ಒಪ್ಪಿದ್ದೆ ಎಂದು ಆಕೆ ಹೇಳಿದ್ದು, ಪೊಲೀಸರು ಎರಡೂ ಕುಟುಂಬಗಳ ಮಧ್ಯೆ ಸಮಾಲೋಚನೆ ನಡೆಸಿದರೂ ತನ್ನ ನಿರ್ಧಾರ ಬದಲಾಯಿಸಲಿಲ್ಲ ಎನ್ನಲಾಗಿದೆ.

ಪಾನಿಪುರಿ ತಯಾರಿಸಲು ವಾಟರ್ ಗನ್ ಬಳಸಿದ ವ್ಯಾಪಾರಿ; ಕ್ರಿಯೇಟಿವಿಟಿಗೆ ಫಿದಾ ಆದ ನೆಟ್ಟಿಗರು!

ಮುಂಬೈನ ಸ್ಪೆಷಲ್ ಗೋಲ್‌ಗಪ್ಪಾ ಈಗ ಫುಲ್ ವೈರಲ್!

Viral Video: ಮುಂಬೈನ ಬೀದಿ ಆಹಾರವು ಅದರ ವಿಭಿನ್ನವಾದ ಪರಿಮಳ ಮತ್ತು ರುಚಿಗೆ ಹೆಸರು ವಾಸಿಯಾಗಿದೆ. ಇದೀಗ ಮುಂಬೈ ಮೂಲದ ಪಾನಿಪುರಿ ಮಾರಾಟಗಾರನೊಬ್ಬ ಸಾಂಪ್ರದಾಯಿಕ ವಿಧಾನ ಬಿಟ್ಟು ಬಣ್ಣ ಬಣ್ಣದ ವಾಟರ್ ಗನ್ ಬಳಸಿ ಪಾನಿ ಪುರಿ ಮಾರಾಟ ಮಾಡುತ್ತಿದ್ದಾನೆ.

ಮದುವೆ ಹಾಲ್‌ನಿಂದ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಧು: ನೆಟ್ಟಿಗರಿಗೆ ಆಕೆಯ ವಯಸ್ಸಿನ ಬಗ್ಗೆ ಅನುಮಾನ

10ನೇ ತರಗತಿ ಪರೀಕ್ಷೆಗೆ ವಧುವಿನ ಆಲಂಕಾರದಲ್ಲೇ ಹಾಜರಾದ ಯುವತಿ

Viral Video: ಮದುವೆ ಸಂಭ್ರಮದ ನಡುವೆಯೂ ವಧು ಒಬ್ಬಳು ಪರೀಕ್ಷೆ ಬರೆಯಲು ಅದೇ ಧಿರಿಸಿನಲ್ಲಿ ಸಾಲೆಗೆ ಬಂದ ಘಟನೆ ಬಿಹಾರದ ಗಯಾ ಜಿಲ್ಲೆಯ ಶೇರ್ಘಾಟಿನಲ್ಲಿ ನಡೆದಿದೆ. ಮದುಮಗಳು ಕೆಂಪು ಬಣ್ಣದ ವಧುವಿನ ಉಡುಪನ್ನು ಧರಿಸಿ, ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾಳೆ.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಪ್ರಿಯಕರನ ಮೇಲೆ ಅಮಾನುಷವಾಗಿ ಥಳಿಸಿದ ಯುವತಿ: ವಿಡಿಯೊ ವೈರಲ್

ಇತ್ತೀಚೆಗೆ ಪ್ರೇಮಿಗಳ ನಡುವಿನ ಸಣ್ಣಪುಟ್ಟ ಜಗಳದ ಹಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಹರಿಯಾಣದ ಗುರುಗ್ರಾಮ್‌ನಲ್ಲಿ ಯುವತಿಯೊಬ್ಬಳು ತನ್ನ ಪ್ರಿಯತಮನಿಗೆ ಸಾರ್ವಜನಿಕವಾಗಿ ಥಳಿಸುತ್ತಿರುವ ಘಟನೆಯೊಂದು ಕಂಡು ಬಂದಿದೆ. ಆಕೆ ಯಾಕಾಗಿ ಹಲ್ಲೆ ನಡೆಸಿದ್ದಾಳೆ ಎನ್ನುವುದು ತಿಳಿದು ಬಂದಿಲ್ಲ.

ಕುದುರೆ ಮೂಲಕ ಆರ್ಡರ್ ತಲುಪಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್: ವೈರಲ್‌ ವಿಡಿಯೊ ನೋಡಿ

ಕುದುರೆಯ ಮೇಲೆ ಆರ್ಡರ್ ತಲುಪಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್

Viral Video: ಡೆಲಿವರಿ ಬಾಯ್ ಒಬ್ಬರು ಕುದುರೆ ಸವಾರಿ ಮೂಲಕ ಬ್ಲಿಂಕ್‌ಇಟ್‌ ಆರ್ಡರ್ ತಲುಪಿಸಿದ ಘಟನೆವೊಂದು ನಡೆದಿದೆ. ರಾಜಸ್ಥಾನದಲ್ಲಿ ಈ ದೃಶ್ಯ ಕಂಡು ಬಂದಿದ್ದು ವೈರಲ್ ಆಗಿರುವ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯು ಹಗಲು ಹೊತ್ತಿನಲ್ಲಿಯೇ ಜನನಿಬಿಡ ರಸ್ತೆಯಲ್ಲಿ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ.

ಕಿರುಕುಳ ನೀಡಿದ ಯುವಕನಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ; ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ

ಪೊಲೀಸ್ ಸ್ಟೇಷನ್ ಎದುರೇ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಪೊಲೀಸ್ ಠಾಣೆ ಎದುರೇ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ತನ್ನ ಚಾರಿತ್ರ್ಯದ ಬಗ್ಗೆ ಯುವಕನು ತಪ್ಪು ಆರೋಪಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದ ಮಹಿಳೆ, ದೂರು ನೀಡಲು ಪತಿಯೊಂದಿಗೆ ಠಾಣೆಗೆ ಬಂದಿದ್ದರು. ದೂರು ನೀಡಿ ಹೊರಬಂದಾಗಲೇ ಆ ಯುವಕ ಕಾಣಿಸಿಕೊಂಡಿದ್ದು, ಪತಿ ಹಿಡಿದಿಟ್ಟಿದ್ದ ವೇಳೆ ಮಹಿಳೆ ಕೇವಲ 52 ಸೆಕೆಂಡುಗಳಲ್ಲಿ ಸುಮಾರು 21 ಬಾರಿ ಚಪ್ಪಲಿಯಿಂದ ಹೊಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ

ಆ್ಯಂಕರ್‌ಗೆ ಚಪ್ಪಲಿಯಿಂದ ಬಾರಿಸಿದ ಖ್ಯಾತ ಗಾಯಕಿ: ವಿಡಿಯೊ ವೈರಲ್

ಖ್ಯಾತ ಗಾಯಕಿಯೊಬ್ಬರು ಆ್ಯಂಕರ್‌ಗೆ ಲೈವ್ ಶೋ ವೇಳೆಯೇ ಹೊಡೆದ ಅಘಾತಕಾರಿ ಘಟನೆ ನಡೆದಿದೆ. ಭೋಜ್‌ಪುರಿಯಲ್ಲಿ ಈ ದೃಶ್ಯ ಕಂಡುಬಂದಿದ್ದು ಗಾಯಕಿ ನಿಶಾ ಉಪಾಧ್ಯಾಯ್ ಲೈವ್ ಶೋ ವೇಳೆಯೇ ‌ನಿರೂಪಕನಿಗೆ ಚಪ್ಪಲಿಯಿಂದ ಬಾರಿಸಿದ್ದಾರೆ. ಗಾಯಕಿಯ ಸಂಭಾವನೆಯ ಕುರಿತಾಗಿ ನಿರೂಪಕ ವೇದಿಕೆಯಲ್ಲೇ ಅಸಂಬದ್ಧವಾಗಿ ಮಾತನಾಡಿದ್ದೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ.

ಇದು ಜುಮ್ಕಿ ಕಮಾಲ್‌; ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿದ ಚಾಲಕ: ವಿಡಿಯೊ ವೈರಲ್

ಆಟೋದಲ್ಲಿ ಪತ್ನಿಯ ಕಿವಿಯೋಲೆ: ಪ್ರೀತಿ ಗೆದ್ದ ಬೆಂಗಳೂರು ಚಾಲಕ

Viral Video: ಪ್ರೀತಿ ಅನ್ನೋದು ಕೇವಲ ದುಬಾರಿ ಕಾರು, ಮನೆ, ಐಷಾರಾಮಿ ವಸ್ತುಗಳಿಗೆ ಸೀಮಿತವಾಗಿಲ್ಲ.‌ ಅದು ದೈನಂದಿನ ಬದುಕಿನ ಸಣ್ಣ ಪುಟ್ಟ ಸಂಗತಿಯಲ್ಲೂ ಅಡಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ನಗರದ ಆಟೋ ಚಾಲಕನೊಬ್ಬ ತನ್ನ ಮಡದಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

10ನೇ ತರಗತಿ ವಿದ್ಯಾರ್ಥಿಗೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು; ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

10ನೇ ತರಗತಿ ವಿದ್ಯಾರ್ಥಿಗೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕು ಇರಿತ

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಸ್ನೂಕರ್ ಕ್ಲಬ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯನ್ನು ಇಬ್ಬರು ಅಪ್ರಾಪ್ತರು ಕೇವಲ 30 ಸೆಕೆಂಡ್‌ಗಳಲ್ಲಿ 27 ಬಾರಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹಳೆಯ ವೈಷಮ್ಯವೇ ದಾಳಿಗೆ ಕಾರಣ ಎನ್ನಲಾಗಿದೆ. ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಸಾಂಬಾರ್‌ಗೆ ಪ್ಲಾಸ್ಟಿಕ್ ಕವರ್ ತೆಗೆಯದೇ ಚಿಕನ್ ಹಾಕಿದ ಮಹಿಳೆ: ಸೋಶಿಯಲ್ ಮೀಡಿಯಾದಲ್ಲಿ ಮೀಮ್ ಹಬ್ಬ!

ಸಾಂಬಾರ್‌ಗೆ ಪ್ಲಾಸ್ಟಿಕ್‌ ಕವರ್‌ ಜತೆಗೆ ಚಿಕನ್‌ ಹಾಕಿದ ಮಹಿಳೆ

Viral Video: ಇಲ್ಲೊಂದು ಅಡುಗೆ ಕೆಲಸದ ಮಹಿಳೆ ಚಿಕನ್ ಸಾಂಬಾರ್‌ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಫ್ರಿಡ್ಜ್‌ನಲ್ಲಿದ್ದ ಚಿಕನ್ ಪ್ಯಾಕೆಟ್ ಅನ್ನೇ ನೇರವಾಗಿ ಗ್ಯಾಸ್ ಮೇಲಿಟ್ಟ ಸಾಂಬಾರ್‌ಗೆ ಹಾಕಿದ್ದಾಳೆ. ಚಿಕನ್ ಮೇಲೆ ಹಾಕಿದ್ದ ಪ್ಲಾಸ್ಟಿಕ್ ತೆಗೆಯದೇ ನೇರವಾಗಿ ಬೇಯಿಸಿದ್ದಾಳೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ತಮಾಷೆಯ ಕಮೆಂಟ್ ಮಾಡಿದ್ದಾರೆ.

ಪ್ರತಿಯೊಬ್ಬರೂ ಭಾರತಕ್ಕೆ ಏಕೆ ಭೇಟಿ ನೀಡಬೇಕು ಎಂದು ವಿವರಿಸಿದ ಆಸ್ಟ್ರೇಲಿಯಾ ಪ್ರಜೆ: ವಿಡಿಯೊ ನೋಡಿ

ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಸ್ಟ್ರೇಲಿಯಾ ಪ್ರಜೆ

Viral Video: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಭಾರತದ ಆತಿಥ್ಯ ಹಾಗೂ ಇಲ್ಲಿನ ಪ್ರವಾಸಿ ಸ್ಥಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾರತವು ಪ್ರತಿ ಪ್ರವಾಸಿಯ ಪಟ್ಟಿಯಲ್ಲಿ ಇರಲೇಬೇಕಾದ ದೇಶ ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದ್ದು ಅನೇಕರು ಲೈಕ್, ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶಕ್ಕೆ ಹೋಲಿಸಿದರೆ ಬೆಂಗಳೂರೇ ಬೆಸ್ಟ್‌: ವರ್ಲ್ಡ್ ಬೆಸ್ಟ್‌ ಪ್ಲೇಸ್ ಎಂದ ನೆಟ್ಟಿಗನ ಪೋಸ್ಟ್‌ ವೈರಲ್‌

ಬೆಂಗಳೂರಿನ ಹವಾಮಾನಕ್ಕೆ ವ್ಯಕ್ತಿ ಫಿದಾ

Viral Video: ಕೆಲಸದ ನಿಮಿತ್ತ ಬೆಂಗಳೂರನ್ನು ಆಯ್ಕೆ ಮಾಡಿಕೊಂಡವರು ಹಲವು ಮಂದಿ ಇದ್ದಾರೆ. ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು, ಹೆಚ್ಚಿನವರಿಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿದೆ. ಹಾಗೆಯೇ ಇಲ್ಲಿನ ಟ್ರಾಫಿಕ್ ಮತ್ತು ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ದೂರುಗಳಿದ್ದರೂ, ಇಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ಹವಾಮಾನ, ತಂಪಾದ ವಾತಾವರಣ ಇರುತ್ತದೆ ಎಂದು ಹೊಗಳುವವರೂ ಇದ್ದಾರೆ. ಇತ್ತೀಚೆಗೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಹವಾಮಾನಕ್ಕೆ ಫಿದಾ ಆಗಿದ್ದು, ವರ್ಲ್ಡ್ ಬೆಸ್ಟ್ ಸಿಟಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಾಚೀನ ಭಾರತದಲ್ಲಿತ್ತಾ ಕಾಂಡೋಮ್‌ ಬಳಕೆ? 2 ಸಾವಿರ ವರ್ಷಗಳ ಹಿಂದೆ ಗರ್ಭ ನಿರೋಧಕವನ್ನಾಗಿ ಏನು ಬಳಸುತ್ತಿದ್ದರು?

2,000 ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಗರ್ಭ ನಿರೋಧಕ ಪದ್ಧತಿ ಇತ್ತೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೊದಲ್ಲಿ ಸುಮಾರು 2,000 ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಜನನ ನಿಯಂತ್ರಣ ವ್ಯವಸ್ಥೆ ಸಂಘಟಿತವಾಗಿ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಹೇಳಿಕೆ ಇತಿಹಾಸದ ದೃಷ್ಟಿಯಿಂದ ಸತ್ಯವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಪ್ರಾಚೀನ ಗ್ರಂಥಗಳಲ್ಲಿ ಕುಟುಂಬ ಯೋಜನೆಗೆ ಸಂಬಂಧಿಸಿದ ಉಲ್ಲೇಖಗಳಿವೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಈ ದಾವೆಗೆ ಸ್ಪಷ್ಟವಾದ ಪುರಾವೆಗಳಿಲ್ಲ ಎಂದಿದ್ದಾರೆ.

ʼʼದಯವಿಟ್ಟ ಶಿಕ್ಷಕರಿಗೆ ಹಿಂಸೆ ಕೊಡಬೇಡಿʼʼ; ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳಲ್ಲಿ ದೆಹಲಿ ವಿವಿ ಪ್ರೊಫೆಸರ್ ಮನವಿ

ವಿದ್ಯಾರ್ಥಿಗಳ ಅಸಂಬದ್ಧ ಉತ್ತರ ನೋಡಿ ಪ್ರೊಫೆಸರ್ ಬೇಸರ

Viral Video: ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ‌‌. ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಮನವಿ ಮಾಡಿದ್ದು, ಉತ್ತರ ಪತ್ರಿಕೆಯನ್ನು ಕಸ ಎಂದು ಭಾವಿಸಿ ಪರೀಕ್ಷೆ ಬರೆಯುವುದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಭರ್ತಿ ಮಾಡಲು ಏನೇನೋ ಅಸಂಬದ್ಧ ಬರೆಯುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಸಮಾಜ ತಿದ್ದಬೇಕಾದ ಶಿಕ್ಷಕರಿಂದಲೇ ನೀಚ ಕೃತ್ಯ; 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕರು

Odisha News: ಒಡಿಶಾದಲ್ಲಿ 12 ವರ್ಷದ ಬಾಲಕಿಯ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಲವರ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

ಏರ್‌ ಇಂಡಿಯಾ ಗೇಟ್‌ನ ಎಸಿ ಯೂನಿಟ್ ಮೇಲೆ 7 ಅಡಿಯ ಬೃಹತ್‌ ಹಾವು ಪ್ರತ್ಯಕ್ಷ

ಎಸಿ ಯೂನಿಟ್‌ನಲ್ಲಿ 7ಅಡಿ ಉದ್ದದ ಹಾವು ಪತ್ತೆ: ಭಯಾನಕ ವಿಡಿಯೊ ಇಲ್ಲಿದೆ

Viral Video: ಏಳು ಅಡಿ ಉದ್ದದ ಬೃಹತ್ ಹಾವೊಂದು ಏರ್ ಕಂಡೀಷನರ್ (AC) ಯೂನಿಟ್ ಮೇಲೆ ಪತ್ತೆಯಾಗಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಏರ್ ಇಂಡಿಯಾ ಗೇಟ್‌ ನಂಬರ್‌ 3ಯ ಎಸಿ ಯೂನಿಟ್‌ನಲ್ಲಿ ಹಾವು ಪತ್ತೆಯಾಗಿದ್ದು, ವನ್ಯಜೀವಿ ರಕ್ಷಕರು ಅದನ್ನು ಕಾಪಾಡಿದ್ದಾರೆ.

ರಸ್ತೆಯಲ್ಲಿ ಮಾತ್ರವಲ್ಲ ನದಿಯಲ್ಲೂ ನಡೆಯುತ್ತೆ ಅಪಘಾತ; ಅಲಕನಂದಾ ನದಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ 2 ದೋಣಿಗಳು

ಡಿಕ್ಕಿ ಹೊಡೆದ ಪ್ರವಾಸಿ ದೋಣಿಗಳು: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

Viral Video: ಉತ್ತರಾಖಂಡದ ಪೌರಿ ಜಿಲ್ಲೆಯ ಪ್ರಸಿದ್ಧ ಧಾರಿ ದೇವಿ ದೇವಸ್ಥಾನದ ಬಳಿ ಅಲಕನಂದಾ ನದಿಯಲ್ಲಿ ಎರಡು ಪ್ರವಾಸಿ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆ ಎಷ್ಟು ಪ್ರಬಲವಾಗಿತ್ತೆಂದರೆ, ದೋಣಿ ನಿರ್ವಾಹಕರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ನೇರವಾಗಿ ನದಿಗೆ ಬಿದ್ದಿದ್ದಾರೆ.‌ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

ಅದ್ಧೂರಿ ಮದುವೆಯಲ್ಲಿ ಹೈಡ್ರಾಮಾ: ವರನ ಎಂಟ್ರಿ ಆಗುತ್ತಿದ್ದಂತೆ ಲೈನ್‌ ಮ್ಯಾನ್‌ನಿಂದ ವಿದ್ಯುತ್ ಕಡಿತ

ವರನ ಎಂಟ್ರಿ ವೇಳೆ ವಿದ್ಯುತ್ ಕಡಿತ ಗೊಳಿಸಿದ ಲೈನ್‌ ಮ್ಯಾನ್

Viral Video: ಇಲ್ಲೊಂದು ಕಡೆ ಮದುವೆ ಗ್ರ್ಯಾಂಡ್ ಆಗಿ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿರುವಾಗಲೇ ವಿದ್ಯುತ್ ಕಡಿತಗೊಂಡ ಘಟನೆ ನಡೆದಿದೆ‌.‌‌ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಡೈಮಂಡ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ವರ ಶುಭಂ ಚೌಹಾಣ್ ಎಂಬ ವ್ಯಕ್ತಿ ಮೆರವಣಿಗೆ ಹೊರಡಲು ಸಿದ್ಧವಾಗಿದ್ದಾಗಲೇ ಈ ಘಟನೆ ನಡೆದಿದೆ.

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆ: ಪುಟ್ಟ ಬಾಲಕಿಯ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಎಂದ ನೆಟ್ಟಿಗರು

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದ ಪುಟ್ಟ ಬಾಲಕಿ

Viral Video: ಬಾಲಕಿಯೊಬ್ಬಳು ಪುಟ್ಟ ಮಕ್ಕಳಿಗೆ ಚಾಚಿದ ಸಹಾಯ ಹಸ್ತದ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಿಫ್ಟ್‌ನೊಳಗೆ ಸಿಲುಕಿಕೊಂಡಿರುವ ಇಬ್ಬರು ಮಕ್ಕಳನ್ನು ಈ ಪುಟ್ಟ ಬಾಲಕಿ‌ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇದಾಗಿದ್ದು, ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ.

ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ

ಕಳ್ಳರನ್ನು ಓಡಿಸಲು ಎನ್‌ಆರ್‌ಐ ಮಹಿಳೆ ಮಾಡಿದ್ದೇನು ಗೊತ್ತೇ?

ದೋಚಲು ಬಂದ ಕಳ್ಳರನ್ನು ಮಹಿಳೆಯೊಬ್ಬರು ಕತ್ತಿ ಹಿಡಿದು ಓಡಿಸಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ. ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಬಂದಿದ್ದ ಮಹಿಳೆ ಹರ್ಜಿಂದ್ ಕೌರ್ ಅವರ ವಾಹನವನ್ನು ದರೋಡೆಕೋರರು ಮುತ್ತಿಗೆ ಹಾಕಿದ್ದು, ಈ ವೇಳೆ ಧೈರ್ಯ ತೋರಿದ ಮಹಿಳೆ ಕತ್ತಿ ಹಿಡಿದು ಅವರನ್ನು ಓಡಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಡಕ್ಕಲ್ ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಸ್ಕೂಟರ್‌ಗೆ ಗುದ್ದಿದ್ದ ಯಮರೂಪಿ ಕಾರ್, ಎದೆ ಝಲ್ ಎನಿಸುವ ವಿಡಿಯೊ

ಮಡಕ್ಕಲ್ ಜಂಕ್ಷನ್‌ನಲ್ಲಿ ಭೀಕರ ಡಿಕ್ಕಿ; ಮಹಿಳೆ ಗಂಭೀರ ಗಾಯ

ಕೇರಳದ ಮಡಕ್ಕಲ್ ಜಂಕ್ಷನ್‌ನಲ್ಲಿ ಅತಿವೇಗದಲ್ಲಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಸ್ಕೂಟರ್‌ ಚಲಾಯಿಸುತ್ತಿದ್ದ ಮಹಿಳೆ ಜಂಕ್ಷನ್ ದಾಟಲು ಎಚ್ಚರಿಕೆಯಿಂದ ಸಾಗುತ್ತಿದ್ದರೂ ತಮ್ಮದಲ್ಲದ ತಪ್ಪಿಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿರಿದಾದ ರಸ್ತೆ, ಸಂಚಾರ ಸಂಕೇತಗಳ ಕೊರತೆ ಮತ್ತು ವೇಗ ನಿಯಂತ್ರಣದ ಅಭಾವವೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು; ಫೋನ್‌ ನಂಬರ್‌ ಕೇಳಿ ಕಿರುಕುಳ, ವಿಡಿಯೋ ನೋಡಿ

ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು!

Students misbehave with woman reporter: ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳ ಗುಂಪೊಂದು ಮಹಿಳಾ ವರದಿಗಾರ್ತಿಯೊಬ್ಬರಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಫೆಬ್ರವರಿ 17 ರಿಂದ 25 ರವರೆಗೆ ನಡೆಯುತ್ತಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಗಳ ಮಧ್ಯೆ ಈ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ! ವಿಡಿಯೋ ನೋಡಿ

ಬೆಂಗಳೂರಿನ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿ ಶಾಕ್ ಆದ ನೆಟ್ಟಿಗರು

ಇತ್ತೀಚೆಗೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವರು ಹಲವಾರು ಇದ್ದಾರೆ‌. ಆದರೆ ಇಲ್ಲಿ ಉದ್ಯೋಗದ ಅವಕಾಶ ಹೆಚ್ಚಿದ್ದರೂ ಜೀವನ ವೆಚ್ಚ ನಿಭಾಯಿಸೋದು ಕಷ್ಟ‌. ರೂಮ್ ಬಾಡಿಗೆ, ಕರೆಂಟ್, ವಾಟರ್ ಬಿಲ್ ಹೀಗೆ ದುಡಿದ ಅರ್ಧದಷ್ಟು ಹಣ ಇದಕ್ಕೆ ವ್ಯಯಿಸ ಬೇಕು..ಇದಕ್ಕೆ ಸಾಕ್ಷಿ ಎಂಬಂತೆ ಇದೀಗ 22 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ದುಬಾರಿ ವೆಚ್ಚದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಕಿರಾತಕ!

ಸಿಗರೇಟ್ ಸೇದಿ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಯುವಕ: ಭಯಾನಕ ವಿಡಿಯೊ!

Viral Video: ಇಲ್ಲೊಬ್ಬ ಅಸಾಮಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಘಟನೆಯೊಂದು ನಡೆದಿದೆ. ರಾಯ್‌ಪುರದಲ್ಲಿ ಈ ಘಟನೆ ನಡೆದಿದ್ದು ಪೆಟ್ರೋಲ್ ಹಾಕಿಸುವಾಗ ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಆತನು ಸಿಟ್ಟಿನಿಂದ ಇಡೀ ಬಂಕ್‌ಗೇ ಬೆಂಕಿ ಹಚ್ಚಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌

Loading...