ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ನೋಡ ನೋಡುತ್ತಿದ್ದಂತೆ ನದಿ ತಟದಲ್ಲಿದ್ದ 12 ವರ್ಷದ ಬಾಲಕನನ್ನೇ ಎಳೆದೊಯ್ದ ಮೊಸಳೆ; ಬೆಚ್ಚಿಬಿದ್ದ ಗ್ರಾಮಸ್ಥರು

ಬಹ್ರೈಚ್‌ನಲ್ಲಿ ಮೊಸಳೆ ದಾಳಿಗೆ 12 ವರ್ಷದ ಬಾಲಕ ಬಲಿ

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಘಾಘ್ರಾ ನದಿಯಲ್ಲಿ 12 ವರ್ಷದ ಬಾಲಕನ ಮೇಲೆ ದೈತ್ಯ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ರಕ್ಷಿಸಲು ಮಾವ ಪ್ರಾಣಪಣವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

"ಕೆಲಸ ಮಾಡಿದ್ದಕ್ಕೆ ಸರಿಯಾದ ಶಿಕ್ಷೆ ಸಿಕ್ಕಿದೆ": ಮ್ಯಾನೇಜರ್‌ ರಜೆಯಲ್ಲಿದ್ದಾಗ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ಕೆಟ್ಟ ಹೆಸರು ಪಡೆದ ಉದ್ಯೋಗಿ!

ಮ್ಯಾನೇಜರ್ ರಜೆ ಇದ್ದಾಗ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಉದ್ಯೋಗಿ

Viral News: ಭಾರತೀಯ ಉದ್ಯೋಗಿಯೊಬ್ಬರು ತನ್ನ ಮಾನ್ಯೇಜರ್ ರಜೆಯಲ್ಲಿದಾಗ ಕಂಪನಿಯ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ತನಗೆ ಶಿಕ್ಷೆಯಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ಇದು ಎಲ್ಲ ಉದ್ಯೋಗದಲ್ಲಿ ನಡೆಯುವ ಮೊದಲನೇ ಸಮಸ್ಯೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಚಾಲಕನ ಜೊತೆ ರಾಜನಂತೆ ಕುಳಿತ ಬೀದಿನಾಯಿ; ವಿಡಿಯೊ ನೋಡಿ

ಸೈಕಲ್ ರಿಕ್ಷಾ ಚಾಲಕ ಹಾಗೂ ಬೀದಿನಾಯಿಯ ಭಾಂದವ್ಯಕ್ಕೆ ನೆಟ್ಟಿಗರು ಫಿದಾ!

Viral Video: ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಯೂ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ಇವರಿಬ್ಬರ ಪ್ರೆಂಡ್ ಶೀಪ್ ಗೆ ಲೈಕ್ ಕಾಮೆಂಟ್ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

ಕಾಡನ್ನು ರಕ್ಷಿಸಲು ಜೆಸಿಬಿ ಎದುರು ನಿಂತು ಘರ್ಜಿಸಿದ ಒಬ್ಬಂಟಿ ಗಜರಾಜ: ವಿಡಿಯೋ ನೋಡಿ

ಅರಣ್ಯದಲ್ಲಿ ಜೆಸಿಬಿ ಎದುರು ನಿಂತು ಪ್ರತಿಭಟಿಸಿದ ಆನೆ: ಹೃದಯವಿದ್ರಾವಕ ದೃಶ್ಯ

Viral Video: ಸರಕಾರವು ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೇ ಹಾನಿಗೆಡವುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆನೆಯೊಂದು ಒಬ್ಬಂಟಿಯಾಗಿ ಜೆಸಿಬಿ ಎದುರು ನಿಂತು ಪ್ರತಿಭಟನೆ ಮಾಡಿದ ವಿಡಿಯೊ ವೊಂದು ವೈರಲ್ ಆಗುತ್ತಿದೆ‌‌. ಅಸ್ಸಾಂನಲ್ಲಿ ಈ ಘಟನೆ ನಡೆದಿದ್ದು ಅರಣ್ಯ ಪ್ರದೇಶದೊಳಗೆ ನಡೆ ಯುತ್ತಿರುವ ಕೆಲಸವನ್ನು ನಿಲ್ಲಿಸಲು ಜೆಸಿಬಿ ಯಂತ್ರದ ಎದುರು ನೇರವಾಗಿ ನಿಂತಿದೆ.

ಲೇಡಿ ಕಾನ್‌ಸ್ಟೆಬಲ್‌ಗೆ ಖಾಸಗಿ ಅಂಗ ತೋರಿಸಿದ ಡೆಲಿವರಿ ಬಾಯ್: ಕಾಮುಕನ ಕಾಲರ್ ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ!

ಮಹಿಳಾ ಕಾನ್ಸ್‌ಟೇಬಲ್ ಜೊತೆ ಅಸಭ್ಯ ವರ್ತನೆ ತೋರಿದ ಕಾಮುಕ

Viral Video: ವಿಕೃತಿ ಮೆರೆದ ಕಾಮುಕನೊಬ್ಬನಿಗೆ ಮಹಿಳಾ ಕಾನ್‌ಸ್ಟೆಬಲ್ ತಕ್ಕ ಪಾಠ ಕಲಿಸಿದ ಘಟನೆಯೊಂದು ಕಂಡು ಬಂದಿದೆ. ಕರ್ತವ್ಯದ ಹೊರಗಿದ್ದಾಗ ಪೊಲೀಸ್ ಕಾನ್‌ಸ್ಟೆಬಲ್ ಎಂದು ಅರಿಯದೆ ವ್ಯಕ್ತಿಯೊಬ್ಬ ಖಾಸಗಿ ಅಂಗ ತೋರಿಸಿ ಅಸಹ್ಯವಾಗಿ ವರ್ತಿಸಿದ್ದಾನೆ. ಆದರೆ ಮಹಿಳೆಯೂ ಇದಕ್ಕೆ ಹೆದರದೆ ಕಾಲರ್ ಹಿಡಿದೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಾರಣಾಸಿಯಲ್ಲಿ ವಿದೇಶಿಗನ ಹುಚ್ಚಾಟ: ಅರೆನಗ್ನ ಸ್ಥಿತಿಯಲ್ಲಿ ಮನೆಗಳಿಗೆ ನುಗ್ಗಿ ಸಾರ್ವಜನಿಕರ ಮೇಲೆ ಹಲ್ಲೆ!

ವಾರಣಾಸಿಯಲ್ಲಿ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ ವಿದೇಶಿಗ

Viral Video: ವಾರಣಾಸಿಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಯೊಬ್ಬ ಅರೆ ಬೆತ್ತಲೆ ಸ್ಥಿತಿಯಲ್ಲಿದ್ದು ಹಲವಾರು ಮನೆಗಳಿಗೆ ನುಗ್ಗಿ ವಸ್ತುಗಳನ್ನು ಎಸೆದು, ನಿವಾಸಿಗಳ ಮೇಲೆ ಹಲ್ಲೆ ನಡೆಸಿ ಅವಾಂತರ ಸೃಷ್ಟಿ ಮಾಡಿದ್ದಾನೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

Viral Video: ಕ್ಷುಲ್ಲಕ ಕಾರಣಕ್ಕೆ ಲಿಫ್ಟ್‌ನಲ್ಲೇ ಹೊಡೆದಾಡಿದ ಅಪಾರ್ಟ್‌ಮೆಂಟ್ ಮಾಲಕರು; ದೊಡ್ಡವರ ಸಣ್ಣ ಗುಣ ಎಂದ ನೆಟ್ಟಿಗರು

ಅಪಾರ್ಟ್‌ಮೆಂಟ್ ವಿವಾದಕ್ಕೆ ಲಿಫ್ಟ್‌ನಲ್ಲೇ ಹೊಡೆದಾಟ: ವಿಡಿಯೊ ವೈರಲ್

ಅಪಾರ್ಟ್‌ಮೆಂಟ್ ಮಾಲಕರ ಸಂಘದ ಸದಸ್ಯರಿಬ್ಬರು ಹಳೆಯ ವೈಷಮ್ಯದ ವಿಚಾರವಾಗಿ ಲಿಫ್ಟ್ ಒಳಗೆಯೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ GS-7 ಹೈ-ರೈಸ್ ಸೊಸೈಟಿಯ ಲಿಫ್ಟ್ ಒಳಗೆ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಮಾಲಕರ ಸಂಘದ ಇಬ್ಬರು ಮಾಜಿ ಪದಾಧಿಕಾರಿಗಳು ಹಲ್ಲೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಘಟನೆ ವಿಡಿಯೊ ವೈರಲ್ ಆಗಿದೆ.

Viral Video: "ಭಾರತದಲ್ಲಿ ಮಾತ್ರ ಇದು ಸಾಧ್ಯ"; ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ

ಭಾರತದಲ್ಲಿ ಸಿಗುವ ಉಚಿತ ಆರೋಗ್ಯ ಸೌಲಭ್ಯಕ್ಕೆ ಅಮೆರಿಕದ ಮಹಿಳೆ ಫಿದಾ

Viral News: ಭಾರತೀಯರಿಗೆ ಸಾಮಾನ್ಯ ಎಂದೆನಿಸುವ ಆರೋಗ್ಯ ಸೇವೆಯನ್ನು ಅಮೆರಿಕದ ಮಹಿಳೆಯೊಬ್ಬರು ಕೊಂಡಾಡಿದ್ದಾರೆ. ಭಾರತದಲ್ಲಿ ಸಿಗುವ ಇಂತಹ ಸೌಲಭ್ಯ ಕಂಡು ತಾವು ನಿಜಕ್ಕೂ ಆಶ್ಚರ್ಯಗೊಂಡಿದ್ದು, ಅಮೆರಿಕಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಪಡೆಯಬಹುದು ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.

Viral Video: ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಹಕರು

ಸಮೋಸಕ್ಕಾಗಿ ಅಂಗಡಿಯಲ್ಲೇ ಮಾರಾಮಾರಿ: ವಿಡಿಯೊ ವೈರಲ್

Viral News: ಮಹಾರಾಷ್ಟ್ರದ ಶಿರೂರ್ ತಾಲೂಕಿನ ಕರೇಗಾಂವ್ ಗ್ರಾಮದ ಸ್ವೀಟ್ ಅಂಗಡಿಯಲ್ಲಿ ಸಮೋಸವನ್ನು ಮೊದಲು ಯಾರಿಗೆ ನೀಡಬೇಕೆಂಬ ವಿವಾದ ಹಿಂಸಾಚಾರಕ್ಕೆ ತಿರುಗಿದೆ‌. ಬೇಕರಿ ಉದ್ಯೋಗಿ ರಾಜು ಲಾಬುರಾಮ್ ದೇವಸಿ ಸಲ್ಲಿಸಿದ ದೂರಿನ ಆಧಾರದ ಮೇಲೆ ರಂಜನ್‌ಗಾಂವ್ ಎಂಐಡಿಸಿ ಪೊಲೀಸರು ಕರೇಗಾಂವ್ ನಿವಾಸಿಗಳಾದ ಈಶ್ವರ್ ರಂಗನಾಥ್ ನವಲೆ ಮತ್ತು ಸಾಯಿ ಲಕ್ಷ್ಮಣ್ ನವಲೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ವಿಡಿಯೊ ವೈರಲ್‌ ಆಗಿದೆ.

Viral Video: ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್‌ವರ್ಕ್ ಕೊಟ್ಟ ಶಿಕ್ಷಕಿ; ಮತಾಂತರದ ಕೇಂದ್ರವಾಯ್ತೆ ಶಾಲೆ?

ವಿದ್ಯಾರ್ಥಿಗೆ 'ಕಲ್ಮಾ’ ಕಲಿಯಲು ಮುಂದಾದ ಶಿಕ್ಷಕಿ ಶಾಲೆಯಿಂದ ವಜಾ

Viral News: ಖಾಸಗಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಇಸ್ಲಾಂ ಧರ್ಮದ ‘ಕಲ್ಮಾ’ ಮತ್ತು ಸುರಾ’ವನ್ನು ಕಲಿಯುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಯೀದಾಬಾದ್‌ನ ಸಕ್ಸಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ ವಿದ್ಯಾರ್ಥಿಗೆ ಈ ಹೋಮ್ ವರ್ಕ್ ನೀಡಿದ್ದಾರೆ. ಸದ್ಯ ಅವರ ವಿರುದ್ಧ ಆಕ್ರೋಸ ವ್ಯಕ್ತವಾಗುತ್ತಿದ್ಧಂತೆ ಅಮಾನತುಗೊಳಿಸಲಾಗಿದೆ

ʼʼಭಾರತದಲ್ಲಿ ಇಂತಹ ದಿನ ಯಾವಾಗ ಬರುತ್ತದೆ?ʼʼ ಮುಂಜಾನೆ 3 ಗಂಟೆಗೆ ಜರ್ಮನಿಯಲ್ಲಿ ಒಬ್ಬಂಟಿಯಾಗಿ ನಿರ್ಭೀತಿಯಿಂದ ಮಹಿಳೆ

ಜರ್ಮನಿಯಲ್ಲಿನ ಮಹಿಳೆಯರ ಸುರಕ್ಷತೆ ಬಗ್ಗೆ ಮೆಚ್ಚುಗೆ ಸೂಚಿಸಿದ ಭಾರತೀಯ ಮಹಿಳೆ

Viral Video: ವಿದೇಶದಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ ಎಂಬುದನ್ನು ಜರ್ಮನಿಯಲ್ಲಿ ವಾಸವಾಗಿರುವ ಭಾರತೀಯ ಮಹಿಳೆಯೊಬ್ಬರು ಅನುಭವ ಹಂಚಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಮುಂಜಾನೆ 3 ಗಂಟೆಗೆ ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೊ ಹಂಚಿಕೊಂಡು, ʼʼಇಲ್ಲಿ ನಾವು ಸ್ವಾತಂತ್ರ್ಯವಾಗಿದ್ದೇವೆ. ಯಾರ ಭಯವಿಲ್ಲದೆ ಒಬ್ಬಂಟಿಯಾಗಿ ಪ್ರಯಾಣಿಸಬಹುದುʼʼ ಎಂದಿದ್ದಾರೆ. ಈ ಘಟನೆಯನ್ನು ಭಾರತದ ಸ್ಥಿತಿಯೊಂದಿಗೆ ಇದೀಗ ಹೋಲಿಸಲಾಗುತ್ತಿದೆ.

“ಶ್ರೀಕೃಷ್ಣ ಮುಸ್ಲಿಂ; ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ”: ನಾಲಗೆ ಹರಿಯಬಿಟ್ಟು ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಧರ್ಮಗುರು

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ಧರ್ಮಗುರು

Maulana Jarjis Ansari: ಶ್ರೀಕೃಷ್ಣನು ಮುಸ್ಲಿಂ ಆಗಿದ್ದ, ಅವನು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ ಎಂದು ಹೇಳಿರುವ ಮುಸ್ಲಿಂ ಧರ್ಮಗುರುವಿನ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. “ನೀವು ನಂಬದಿದ್ದರೆ, ಶ್ರೀ ಭಗವದ್ಗೀತೆಯ 6ನೇ ಅಧ್ಯಾಯದ 10ನೇ ಶ್ಲೋಕವನ್ನು ಓದಿ” ಎಂದು ಅನ್ಸಾರಿ ಹೇಳಿದ್ದ.

ಛೀ...ಥೂ...: ಕ್ಲಾಸ್‌ ರೂಮ್‌ನಲ್ಲೇ ಶಿಕ್ಷಕಿಗೆ ಲೊಚ ಲೊಚ ಮುತ್ತಿಟ್ಟ ಶಿಕ್ಷಕ; ರಾಸಲೀಲೆಯ ವಿಡಿಯೊ ವೈರಲ್

ಕ್ಲಾಸ್‌ ರೂಮ್‌ನಲ್ಲೇ ಶಿಕ್ಷಕರ ರೊಮ್ಯಾನ್ಸ್‌; ವೈರಲ್‌ ವಿಡಿಯೊ ಇಲ್ಲಿದೆ

Viral Video: ಉತ್ತರ ಪ್ರದೇಶದ ಕೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ತರಗತಿಯೊಳಗೇ ಅನುಚಿತವಾಗಿ ವರ್ತಿಸಿದ್ದಾರೆ‌. ಈ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಶಿಕ್ಷಕನು ಶಿಕ್ಷಕಿಗೆ ಮುತ್ತಿಕ್ಕುವ ದೃಶ್ಯ ಕಂಡು ಬಂದಿದೆ.

ಇನ್‌ಸ್ಟಾಮಾರ್ಟ್‌ನಿಂದ ಮತ್ತೊಂದು ಅಡುಗೆ ಕ್ರಾಂತಿ: ಇನ್ಮುಂದೆ ಚಿಟಿಕೆ ಹೊಡೆಯುವಷ್ಟರಲ್ಲಿ ಮನೆ ಬಾಗಿಲಿಗೆ ಬರಲಿದೆ LPG ಸಿಲಿಂಡರ್!

ಗ್ರಾಹಕರಿಗೆ ಗುಡ್‌ನ್ಯೂಸ್; ಇನ್‌ಸ್ಟಾಮಾರ್ಟ್‌ನಲ್ಲೂ ಸಿಲಿಂಡರ್ ಲಭ್ಯ

Swiggy Instamart: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಇದೀಗ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ತಕ್ಷಣಕ್ಕೆ ನಿಮ್ಮ ಬಾಗಿಲಿಗೆ ತಲುಪಿಸಲು ಹೊಸ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ ಸ್ವಿಗ್ಗಿ ಸಂಸ್ಥೆಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಕೈ ಜೋಡಿಸಿದೆ. ಜುಲೈ 15ರಂದು ಬೆಂಗಳೂರಿನಲ್ಲಿ ಯೋಜನೆ ಆರಂಭಿಸಲಾಗಿದೆ.

ಮಗುವಿನ ಕೈಗೆ ಕಸ ಕೊಟ್ಟು ರೈಲಿನಲ್ಲಿ ಎಸೆಯುವಂತೆ ಹೇಳಿದ ತಾಯಿ; ವಿಡಿಯೋ ವೈರಲ್‌

ಮಹಿಳೆಯ ಬೇಜವ್ದಾರಿ ವರ್ತನೆ! ರೈಲಿನಲ್ಲಿ ಮಗುವಿಗೆ ಕಸ ಎಸೆಯಲು ಕೊಟ್ಟ ಮಹಿಳೆ

Viral News: ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ಜನ ತಮ್ಮ ಆಸ್ತಿಯಂತೆ ಬಳಕೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈ ದೃಶ್ಯ ನೋಡಿದ ಅನೇಕರು ಮಹಿಳೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ತನ್ನ ಚಿಕ್ಕ ಮಗನಿಗೆ ರೈಲಿನ ಕಿಟಕಿಯಿಂದ ರೈಲ್ವೆ ಟ್ರ್ಯಾಕ್‌ಗೆ ಕಸ ಎಸೆಯಲು ಹೇಳುತ್ತಿದ್ದಾಳೆ.

ದೇವಾಲಯದಲ್ಲಿ ಡ್ಯಾನ್ಸ್ ರೀಲ್ ಚಿತ್ರೀಕರಿಸುತ್ತಿದ್ದ ಯುವತಿ; ಖಡಕ್ ಕ್ಲಾಸ್ ತೆಗೆದುಕೊಂಡ ಪೊಲೀಸ್ ಸಿಬ್ಬಂದಿ! ವಿಡಿಯೋ ನೋಡಿ

ದೇವಸ್ಥಾನದಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿ! ಖಡಕ್ಎಚ್ಚರಿಕೆ ನೀಡಿದ ಪೊಲೀಸ್

Viral Video: ಯುವತಿಯೊಬ್ಬಳು ಪವಿತ್ರ ಧಾರ್ಮಿಕ ಕ್ಷೇತ್ರದ ಸರತಿ ಸಾಲಿನಲ್ಲೇ ನಿಂತು ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯನ್ನು ತಡೆದು ತಕ್ಷಣವೇ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಈ ವಿಡಿಯೊ ನೋಡಿದ ಅನೇಕರು ಯುವತಿಯ ನಡೆ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದ ಯುವತಿಗೆ 70,000 ರೂ. ಡೆಪಾಸಿಟ್‌ನಲ್ಲಿ ಸಿಕ್ಕಿದ್ದು ಕೇವಲ 18,000! ಮಾಲೀಕನ ವಿರುದ್ಧ ಯುವತಿ ಕಿಡಿ

ಡೆಪಾಸಿಟ್ ಹಣ ವಾಪಸ್ಸು ನೀಡದೆ ವಂಚನೆ ಮಾಡಿದ ಮಾಲೀಕ! ಯುವತಿ ಕಿಡಿ

Viral News: ಬೆಂಗಳೂರಿನ ಯುವತಿಯೊಬ್ಬಳು ಬಾಡಿಗೆ ಮನೆಯ ಮಾಲೀಕ ಡೆಪಾಸಿಟ್ ಹಣ ವಾಪಸ್ಸು ನೀಡಿಲ್ಲವೆಂದು ಆಕ್ರೋಶ ಹೊರಹಾಕಿದ ಪೋಸ್ಟ್ ವೈರಲ್ ಆಗಿದೆ.. ಮನೆ ಬಾಡಿಗೆ ಪಡೆಯುವಾಗ 'ಸೆಕ್ಯೂರಿಟಿ ಡೆಪಾಸಿಟ್' ಅಂದ್ರೆ ಮುಂಗಡ ಹಣ ಪ್ರತಿಯೊಬ್ಬರು ನೀಡುತ್ತಾರೆ‌. ಆದರೆ ಇದನ್ನು ವಾಪಸ್ ಪಡೆಯುವುದು ಒಂದು ಸವಾಲಿನ ಕೆಲಸವಾಗಿದ್ದು ಯುವತಿ ಇದೇ ವಿಚಾರವಾಗಿ ಬೇಸರ ಹೊರಹಾಕಿದ್ದಾಳೆ.

ಪರಿಚಯವಾದ ಕೆಲವೇ ದಿನಕ್ಕೆ ಮದುವೆ ಪ್ರಸ್ತಾಪ: ಯುವತಿಯನ್ನು ಒಪ್ಪಿಸಲು ಸ್ಯಾಲರಿ ಸ್ಲಿಪ್ ಕಳುಹಿಸಿದ ಯುವಕ!

ಸ್ಯಾಲರಿ ಸ್ಲಿಪ್ ಕಳುಹಿಸಿ ಯುವತಿಗೆ ಮದುವೆ ಪ್ರಸ್ತಾಪ ಮಾಡಿದ ಯುವಕ!

Viral News: ಯುವತಿಯೊಬ್ಬಳಿಗೆ ಪರಿಚಯವಾದ ನಾಲ್ಕೇ ದಿನಕ್ಕೆ ಯುವಕನು ಮದುವೆ ಪ್ರಸ್ತಾಪ ಇಟ್ಟ ಘಟನೆಯನ್ನು ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ತಾನು ಶ್ರೀಮಂತ ಹುಡುಗನನ್ನು ಬಯಸುತ್ತಿದ್ದೇನೆ ಎಂದು ಸ್ಯಾಲರಿ ಸ್ಲಿಪ್ ಅನ್ನು ಕಳುಹಿಸಿರುವ ಬಗ್ಗೆ ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾಳೆ...

"ಬೆಂಗಳೂರಿಗರ ಆತ್ಮೀಯತೆಗೆ ಕೊನೆಯಿಲ್ಲ": ಆಟೋ ಚಾಲಕನ ಸೌಹಾರ್ದಯುತ ಮಾತಿಗೆ ಫಿದಾ ಆದ ಅಮೆರಿಕನ್ ಪ್ರವಾಸಿ!

ಆಟೋಚಾಲಕ ಹಾಗೂ ವಿದೇಶಿ ಪ್ರವಾಸಿಯ ಸ್ನೇಹಪರ ಸಂಭಾಷಣೆಗೆ ನೆಟ್ಟಿಗರು ಫಿದಾ!

Viral Video: ಅಮೆರಿಕನ್ ಯೂಟ್ಯೂಬರ್ ಹಾಗೂ ರಿಕ್ಷಾ ಚಾಲಕರ ನಡುವೆ ನಡೆದ ಮಾತುಕತೆ ಯೊಂದು ಇಂಟರ್ನೆಟ್ ನಲ್ಲಿ ಜನರ ಮನ ಗೆದ್ದಿದೆ. "ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿ ಕೊಳ್ಳುವುದು ಸುಲಭ" ಎಂಬ ಶೀರ್ಷಿಕೆಯೊಂದಿಗೆ ಅಮೆರಿಕನ್ ಪ್ರವಾಸಿ ಈ ವಿಡಿಯೊ ಶೇರ್ ಮಾಡಿದ್ದಾರೆ.

ಹೆತ್ತವರಿಗಾಗಿ 18 ವರ್ಷಗಳ ಅಮೆರಿಕ ಜೀವನ ತೊರೆದು ಬೆಂಗಳೂರಿಗೆ ಮರಳಿದ ಮೆಟಾ ಉದ್ಯೋಗಿ; ಭಾವನಾತ್ಮಕ ಪೋಸ್ಟ್ ವೈರಲ್

18 ವರ್ಷಗಳ ನಂತರ ಅಮೆರಿಕ ತೊರೆದು ಭಾರತಕ್ಕೆ ಮರಳಿದ ಮೆಟಾ ಉದ್ಯೋಗಿ

Viral News: ಅಮೆರಿಕದಲ್ಲಿ 18 ವರ್ಷಗಳ ಕಾಲ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ವೃತ್ತಿ ಜೀವನ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಯಾವುದೇ ಒತ್ತಡದಿಂದ ಕೆಲಸ ತೊರೆದಿಲ್ಲ, ಬದಲಾಗಿ ವೈಯಕ್ತಿಕ ವಿಚಾರದಿಂದ ಅಮೆರಿಕ ತೊರೆದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಶೇರ್ ಮಾಡಿಕೊಂಡಿದ್ದಾರೆ.

ಆಟಿಕೆ ಕಾರಿನ ಜತೆ ಮಗುವಿನಂತೆ ಆಟವಾಡಿದ ತಮಿಳುನಾಡು ಸಿಎಂ ವಿಜಯ್; ವೈರಲ್ ವಿಡಿಯೊ ಇಲ್ಲಿದೆ

ಆಟಿಕೆ ಕಾರಿನ ಜತೆ ಮಗುವಿನಂತೆ ಆಡಿದ ಸಿಎಂ ವಿಜಯ್

Viral Video: ರಾಜಕೀಯಕ್ಕೆ ಹೆಜ್ಜೆ ಇಟ್ಟು ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡ ನಟ ವಿಜಯ್ ಮುಖ್ಯಮಂತ್ರಿಯಾಗಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರ ಮುಗ್ಧ ಕ್ಷಣವೊಂದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ‌. ಖ್ಯಾತ ರಾಜಕಾರಣಿಯಾದರೂ ಆಟಿಕೆ ಕಾರ್‌ ನೋಡಿ ಖುಷಿಪಟ್ಟಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.

11 ಲಕ್ಷ ರುಪಾಯಿ ಗಳಿಸುವ ಯುವತಿಗೆ 1 ಕೋಟಿ ರುಪಾಯಿ ಸಂಬಳದ ವರನೇ ಬೇಕಂತೆ: ಕುಟುಂಬದ ನಿರೀಕ್ಷೆ ಕೇಳಿ ಕ್ಲೈಂಟ್ ಕೈಬಿಟ್ಟ ಬ್ರೋಕರ್ ಹೇಳಿದ್ದೇನು?

ವರ ಹುಡುಕಲು ಹೋದ ಬ್ರೋಕರ್ ಕುಟುಂಬದ ನಿರೀಕ್ಷೆ ಕೇಳಿ ಶಾಕ್

Viral Video: ತಮ್ಮ ಮಕ್ಕಳಿಗೆ ಇದೇ ರೀತಿಯ ಹುಡುಗ ಅಥವಾ ಹುಡುಗಿ ಸಿಗಬೇಕು ಅನ್ನುವ ನಿರೀಕ್ಷೆಗಳು ಪೋಷಕರಿಗೆ ಇರುತ್ತದೆ. ಇದೀಗ ಇದೇ ವಿಚಾರವಾಗಿ ಮ್ಯಾಚ್‌ಮೇಕರ್ ಒಂದ್ರಿಲಾ ಕಪೂರ್ ಪೋಸ್ಟ್ ಶೇರ್ ಮಾಡಿದ್ದು, ಬ್ರಾಹ್ಮಣ ಯುವತಿಯ ಕುಟುಂಬಸ್ಥರ ನಿರೀಕ್ಷೆಗಳನ್ನು ಕೇಳಿ ಆ ಕ್ಲೈಂಟ್ ಅನ್ನೇ ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.

21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು

ತಾತ್ಕಾಲಿಕ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳ್ಳಿಯೊಂದು ಮೂಲ ಸೌಕರ್ಯದಿಂದ ವಂಚಿತವಾಗಿದೆ. ವಾಹನಗಳು ಚಲಿಸಲು ಅಗತ್ಯವಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದೆ, ಗರ್ಭಿಣಿಯನ್ನು ತಾತ್ಕಾಲಿಕ ಬಟ್ಟೆಯ ಜೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಮನಕಲಕುವ ಘಟನೆ ನಡೆದಿದೆ.

Viral Video: ಆಗ್ರಾದಲ್ಲಿ ಫ್ರಿಜ್‌ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು

ಫ್ರಿಜ್‌ನಲ್ಲಿ ಮೂಡಿದ ಹಿಮ ಶಿವಲಿಂಗಕ್ಕೆ ಜಲಾಭಿಷೇಕ; ವಿಡಿಯೊ ಇಲ್ಲಿದೆ

Shivling-Like Ice Formation: ಉತ್ತರ ಪ್ರದೇಶದ ಆಗ್ರಾದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ ಆಕಾರ ಮೂಡಿದ್ದು, ಸ್ಥಳೀಯರು ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Loading...