ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದಾಗ ಹೃದಯಾಘಾತ: ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು

ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದ ಯುವಕ ಹೃದಯಾಘಾತದಿಂದ ಸಾವು

ಸ್ಕೂಟರ್ ರಿಪೇರಿಗಾಗಿತೆರಳುತ್ತಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಮಧ್ಯ ಪ್ರದೇದ ಪರ್ದೇಶಿಪುರದಲ್ಲಿ ಈ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕ ತನ್ನ ದ್ವಿಚಕ್ರ ವಾಹನವನ್ನು ಕಾಲ್ನಡಿಗೆಯಲ್ಲಿ ತಳ್ಳುತ್ತ ಹೋಗಿದ್ದಾನೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

Viral News: ಜಸ್ಟ್‌ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ! ಗಂಡನ ಮನೆ ಸೇರುತ್ತಿದ್ದಂತೆ ದಾಂಪತ್ಯ ಜೀವನ ನಿರಾಕರಿಸಿದ್ದೇಕೆ ನವ ವಧು?

ಮದುವೆಯಾದ ಜಸ್ಟ್‌ 20 ನಿಮಿಷಕ್ಕೆ ಸಂಬಂಧ ಕಡಿದುಕೊಂಡ ವಧು

ಇಲ್ಲೊಬ್ಬಳು ನವವಿವಾಹಿತೆ ಮದುವೆಯಾದ ದಿನವೇ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತನ್ನ ತವರು ಮನೆಗೆ ವಾಪಾಸಾದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ವಧುವಿನ ಒಪ್ಪಿಗೆಯಿಂದಲೇ ಈ ಮದುವೆ ಮಾಡಿಸಲಾಗಿದ್ದರೂ ಆಕೆ ಮಾತ್ರ ಗಂಡನ ಮನೆಗೆ ತಲುಪುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ.ಮದುವೆಯಾದ ಕೇವಲ 20ನಿಮಿಷಕ್ಕೆ ಸಂಬಂಧ ಮುರಿದುಕೊಂಡಿರುವ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಡೀ ದೇಶಕ್ಕೆ ಮಾದರಿ ಈ ಗ್ರಾಮ- ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊದಲ್ಲಿ ಏನಿದೆ?

ದೇಶಕ್ಕೆ ಮಾದರಿಯಾದ ಗ್ರಾಮದ ಬಗ್ಗೆ ಆನಂದ್ ಮಹೀಂದ್ರಾ ಹೇಳಿದ್ದೇನು?

ಮಹಾರಾಷ್ಟ್ರದ ತಡೋಬೊ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ಸತಾರ ನೆವಾರ್ ಎಂಬ ಹಳ್ಳಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದ ಗ್ರಾಮಸ್ಥರು ಸ್ಫೂರ್ತಿದಾಯಕ ಬದುಕನ್ನು ಸಾಗಿಸುತ್ತಿದ್ದು ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದೇ ವೈರಲ್ ಕ್ಲಿಪ್ ಅನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ಸದ್ಯ ಹಳ್ಳಿ ಜನರ ಜೀವನ ಶೈಲಿ, ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರುವ ಪರಿಯು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸಾವಿನ ಕದ ತಟ್ಟಿ ಬಂದ ಪ್ರವಾಸಿಗರು; ಸಫಾರಿ ವೇಳೆ ಪ್ರತ್ಯಕ್ಷಗೊಂಡ ಹುಲಿಗಳ ಮುಂದೆ ಹುಚ್ಚಾಟ

ಸಫಾರಿ ವೇಳೆ ಕಾಣಿಸಿಕೊಂಡ ಹುಲಿಗಳ ದಂಡು: ಪ್ರವಾಸಿಗರು ಮಾಡಿದ್ದೇನು?

ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಣಾ ಅರಣ್ಯವೊಂದರಲ್ಲಿ ಸಫಾರಿಯ ವೇಳೆ ಪ್ರವಾಸಿಗರು‌ ಅತಿರೇಕದ ವರ್ತನೆ ತೋರಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹುಲಿಗಳ ಗುಂಪೊಂದು ಕಾಣಿಸಿಕೊಂಡಾಗ ಅವುಗಳನ್ನು ಅಡ್ಡಗಟ್ಟಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು ಆತಂಕಕ್ಕೆ ಕಾರಣವಾಗಿದೆ.

ದಿನಾ ಕೆಮ್ಮಿನ ಸಿರಪ್ ಜತೆಗೆ ಡೋಲೋ 650 ಟ್ಯಾಬ್ಲೆಟ್‌...ಬೆಂಗಳೂರಿನ ಕೋಲ್ಡ್ ವೆದರ್ ಬಗ್ಗೆ ವಿಡಿಯೊ ಶೇರ್ ಮಾಡಿದ ಯುವಕ

ಬೆಂಗಳೂರಿನ ಚಳಿ ಹೇಗಿದೆ ಗೊತ್ತಾ? ಅನುಭವ ಬಿಚ್ಚಿಟ್ಟ ಯುವಕ

ಬೆಂಗಳೂರಿನ ಚಳಿಯ ವಾತಾವರಣದ ಬಗ್ಗೆ ಪೂರವ್ ಎನ್ನುವ ಹೆಸರಿನ ಯುವಕ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾನೆ. ಬೆಂಗಳೂರಿನ ಹವಾಮಾನದಿಂದ ವಿಪರೀತ ಚಳಿಯಾಗುತ್ತಿದ್ದು, ಇದರ ಮಧ್ಯೆಯೇ ಜೀವನ ಸಾಗಿಸಬೇಕು...ನಿತ್ಯ ಕೆಲಸಕ್ಕೂ ರೆಡಿಯಾಗಬೇಕು ಎಂದು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾನೆ.

Viral Video: ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!

ಸಿಂಹಿಣಿಯ ಆವರಣಕ್ಕೆ ನುಗ್ಗಿ ದುರಂತ ಅಂತ್ಯ ಕಂಡ ಯುವಕ: ಭಯಾನಕ ವಿಡಿಯೊ ವೈರಲ್

ಬ್ರೆಜಿಲ್‌ನ ಜಾವೊ ಪೆಸ್ಸೋದಲ್ಲಿರುವ ಮೃಗಾಲಯವಾದ 'ಬಿಕಾ'ದಲ್ಲಿ ದುರಂತ ಘಟನೆ ನಡೆದಿದ್ದು ಸಿಂಹಿಣಿಯ ಆವರಣಕ್ಕೆ ನುಗ್ಗಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಯುವಕನು ತನ್ನ ಇಚ್ಚೆ ಯಿಂದಲೇ ಅಪಾಯಕಾರಿ ಪ್ರದೇಶ ಪ್ರವೇಶಿಸಿ, ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡ ಘಟನೆ ಪ್ರವಾಸಿಗರ ಕಣ್ಣ ಮುಂದೆಯೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಯ್ಪುರದಲ್ಲಿ ಕೊಹ್ಲಿಗೆ  ಗುಲಾಬಿ ಹೂವುಗಳಿಂದ ಸ್ವಾಗತಿಸಿದ ಮಕ್ಕಳು; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ರಾಯ್ಪುರದಲ್ಲಿ ಕೊಹ್ಲಿಗೆ ಗುಲಾಬಿ ಹೂವುಗಳಿಂದ ಸ್ವಾಗತಿಸಿದ ಮಕ್ಕಳು

ಎರಡನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದಂತೆ ಭಾರಿ ಜನಸಂದಣಿ ನಿರೀಕ್ಷಿಸಲಾಗಿದೆ. ವಾರದ ಮಧ್ಯದ ವೇಳಾಪಟ್ಟಿಯ ಹೊರತಾಗಿಯೂ, ಈ ಸ್ಥಳವು ಉತ್ಸಾಹಭರಿತ ಜನಸಂದಣಿಯನ್ನು ವೀಕ್ಷಿಸುವ ಸಾಧ್ಯತೆಯಿದೆ.

ನರ್ಸರಿ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಮನ ಬಂದಂತೆ ಹಲ್ಲೆ; ಮಹಿಳಾ ಸಿಬ್ಬಂದಿಯ ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆ

4 ವರ್ಷದ ಬಾಲಕಿ ಮೇಲೆ ಮನ ಬಂದಂತೆ ಹಲ್ಲೆ

Nursery school assault case: ನರ್ಸರಿ ಶಾಲೆಯೊಂದರಲ್ಲಿ 4 ವರ್ಷದ ಬಾಲಕಿಯ ಮೇಲೆ ಸಿಬ್ಬಂದಿಯೊಬ್ಬಳು ಮನ ಬಂದಂತೆ ಥಳಿಸಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Viral Video: ಅರೇ...ಇದೇನಿದು ಹಣ್ಣಿನ ಮೊಮೊಸ್? ಭಾರಿ ವೈರಲ್ ಆಗ್ತಿದೆ ಈ ವಿಚಿತ್ರ ಖಾದ್ಯದ ವಿಡಿಯೊ

ಇದು ಫ್ರೂಟ್ ಗ್ರೇವಿ ಮೊಮೊಸ್: ವಿಚಿತ್ರ ಖಾದ್ಯದ ವಿಡಿಯೊ ನೋಡಿ

ಭಾರತದ ಅತ್ಯಂತ ಪ್ರಿಯವಾದ ಬೀದಿ ಆಹಾರಗಳಲ್ಲಿ ಮೊಮೊಸ್‌ ಕೂಡ ಒಂದು. ಟಿಬೆಟ್ ಮತ್ತು ನೇಪಾಳ ಮೂಲದ ಜನಪ್ರಿಯ ಬೀದಿ ಆಹಾರ ಮೊಮೊಸ್‌ ಅನ್ನು ಭಾರತಾದ್ಯಂತ ಬಹಳಷ್ಟು ಮಂದಿ ಇಷ್ಟ ಪಟ್ಟು ತಿನ್ನುತ್ತಾರೆ. ಮೊಮೊಸ್ ಸಾಮಾನ್ಯವಾಗಿ ಖಾರದ ತಿನಿಸು. ಮಸಲಾಗೆ ಮಾಂಸ ಅಥವಾ ತರಕಾರಿಗಳಿಂದ ತುಂಬಿಸಿ ಸಂಸ್ಕರಿಸಿದ ಹಿಟ್ಟಿನ ಮೂಲಕ ಮಸಾಲೆಯುಕ್ತ ಟೊಮೆಟೊ ಮತ್ತು ಕೆಂಪು ಮೆಣಸಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ ದೆಹಲಿಯ ಬೀದಿ ಬದಿಯ ವ್ಯಾಪಾರಿಯೊಬ್ಬರು 'ಫ್ರೂಟ್ ಗ್ರೇವಿ ಮೋಮೋ' ತಯಾರಿಸುವ ಮೂಲಕ ಆಹಾರ ಪ್ರಿಯರನ್ನೇ ಹುಬ್ಬೆರಿಸುವಂತೆ ಮಾಡಿದ್ದಾರೆ.

Virat Kohli: ಜೈಸ್ವಾಲ್ ಕೇಶವಿನ್ಯಾಸ ನೋಡಿ 'ಲಗನ್ ಲಗಿ' ನೃತ್ಯದ ಮೂಲಕ ಕೆಣಕಿದ ಕೊಹ್ಲಿ

ಜೈಸ್ವಾಲ್ ಕೇಶವಿನ್ಯಾಸ ನೋಡಿ ಕೆಣಕಿದ ಕೊಹ್ಲಿ; ವೈರಲ್‌ ವಿಡಿಯೊ ಇಲ್ಲಿದೆ

viral video: ಪಂದ್ಯದಲ್ಲಿ ಭಾರತ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಕೊಹ್ಲಿ ಶತಕ, ರೋಹಿತ್‌ ಶರ್ಮಾ ಹಾಗೂ ರಾಹುಲ್‌ ತಲಾ ಅರ್ಧಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 349 ರನ್‌ ಕಲೆಹಾಕಿತು. ಈ ಮೊತ್ತವನ್ನು ದ.ಆಫ್ರಿಕಾ ಬ್ಯಾಟರ್‌ಗಳು ಯಶಸ್ವಿಯಾಗಿ ಬೆನ್ನಟ್ಟದಿದ್ದರೂ ಸುಲಭದಲ್ಲಿ ಸೋಲೊಪ್ಪಲಿಲ್ಲ. ಉತ್ತಮ ಹೋರಾಟದ ಹೊರತಾಗಿಯೂ ತಂಡ 49.2 ಓವರ್‌ಗಳಲ್ಲಿ 332 ರನ್‌ಗೆ ಆಲೌಟಾಯಿತು.

ಸಿಲಿಕಾನ್ ಸಿಟಿಯಲ್ಲಿ ವಿಪರೀತ ಚಳಿಗೆ ಥರಥರ ನಡುಗಿದ ಜನತೆ; ಇದೇನು ಬೆಂಗಳೂರಾ, ಲಂಡನ್ನಾ ಎಂದ ಅಮೆರಿಕನ್ ಯುವತಿ

ಸಿಲಿಕಾನ್ ಸಿಟಿಯಲ್ಲಿ ವಿಪರೀತ ಚಳಿಗೆ ಥರಥರ ನಡುಗಿದ ಜನತೆ

Severe cold wave hits Silicon City: ಸಿಲಿಕಾನ್ ಸಿಟಿಯಲ್ಲಿ ಅಸಹಜ ಚಳಿ ಜನರನ್ನು ಬೆಚ್ಚಿಬೀಳಿಸಿದೆ. ತೀವ್ರ ಚಳಿಯಿಂದ ಜನತೆ ಕಂಗೆಟ್ಟಿದ್ದಾರೆ. ರಾತ್ರಿ-ಹಗಲೆನ್ನದೆ ಒಂದೇ ರೀತಿಯ ಹವಾಮಾನಕ್ಕೆ ಜನತೆ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಇದೀಗ ಅಮೆರಿಕದ ಯುವತಿಯೊಬ್ಬಳು ಬೆಂಗಳೂರಿನ ಚಳಿಗೆ ನಡುಗಿ ಹೋಗಿರುವುದಾಗಿ ತಿಳಿಸಿದ್ದಾಳೆ.

ಸಿಗರೇಟ್ ತುಂಡು ಎಲ್ಲೆಂದರಲ್ಲಿ ಎಸೆದರೆ 31,000 ರೂ. ದಂಡ, ರಸ್ತೆಯಲ್ಲಿ ಕಸ ಹಾಕಿದರೆ 10 ಲಕ್ಷ ರೂ ಫೈನ್‌: ಎಲ್ಲಿದೆ ಈ ಕಾನೂನು?

ಸಿಗರೇಟ್ ತುಂಡು ಎಲ್ಲೆಂದರಲ್ಲಿ ಎಸೆದರೆ 31,000 ರೂ. ದಂಡ

Switzerland Rules: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪರಿಸರ ಶುದ್ಧತೆಯನ್ನು ಕಾಪಾಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕಸದ ಬುಟ್ಟಿಯಲ್ಲಿ ಸಿಗರೇಟ್ ತುಂಡುಗಳನ್ನು ಹಾಕದೆ ಹೊರಗೆ ಎಸೆದರೆ ಸುಮಾರು 31,000 ರೂ. ದಂಡ, ರಸ್ತೆಯಲ್ಲಿ ಕಸ ಹಾಕಿದರೆ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಈ ನಿಯಮಗಳು ನಗರಗಳನ್ನು ವ್ಯವಸ್ಥಿತ ಮತ್ತು ಸ್ವಚ್ಛವಾಗಿ ಇರಿಸಲು ಸಹಾಯ ಮಾಡಲಿವೆ.

ಶಿವ ದೇವಾಲಯದಲ್ಲಿ ಆರತಿ ಮಾಡಿದ ವಿಷ ಸರ್ಪ; ವಿಡಿಯೊ ನೋಡಿ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು

ಶಿವ ದೇವಾಲಯದಲ್ಲಿ ಆರತಿ ಮಾಡಿದ ವಿಷ ಸರ್ಪ

Snake Performs Aarti in Shiva Temple: ಶಿವನ ದೇವಸ್ಥಾನದಲ್ಲಿ ಭಕ್ತರು ನೆರೆದ ವೇಳೆ ವಿಷ ಸರ್ಪ ಆರತಿ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ಅಪರೂಪದ ದೃಶ್ಯವನ್ನು ಕಂಡು ನೆಟ್ಟಿಗರು, ಇದು ನಿಜವಲ್ಲ, ಎಐ (ಕೃತಕ ಬುದ್ಧಿಮತ್ತೆ) ಮೂಲಕ ರಚಿಸಲಾಗಿರುವ ವಿಡಿಯೊ ಎಂದು ಹೇಳಿದ್ದಾರೆ.

ಚಿರತೆ ಹಿಡಿಯಲು ಇಟ್ಟ ಬೋನಿನೊಳಗಿದ್ದ ಮೇಕೆಯನ್ನೂ ಬಿಡದ ಜನ; ಕದಿಯಲು ಹೋಗಿ ರಾತ್ರಿ ಇಡೀ ಪಂಜರದಲ್ಲಿ ಬಂಧಿಯಾದ ವ್ಯಕ್ತಿಯ ವಿಡಿಯೊ ವೈರಲ್‌

ಚಿರತೆ ಬೋನಿನೊಳಗೆ ಸಿಕ್ಕಿಬಿದ್ದ ವ್ಯಕ್ತಿ, ವಿಡಿಯೊ ವೈರಲ್

Man Attempts to Steal Live Goat: ಚಿರತೆ ಬೋನಿನೊಳಗಿದ್ದ ಜೀವಂತ ಮೇಕೆಯನ್ನು ಕದಿಯಲು ಯತ್ನಿಸಿದ ವ್ಯಕ್ತಿ ತಾನೇ ಪಂಜರದೊಳಗೆ ಸಿಕ್ಕಿಹಾಕಿಕೊಂಡು ರಾತ್ರಿಯಿಡೀ ಅಲ್ಲೇ ಕಾಲ ಕಳೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರಾಣವನ್ನೇ ಪಣಕ್ಕಿಟ್ಟು ಮುಳುಗುತ್ತಿದ್ದ ಕಾರು ಚಾಲಕನನ್ನು ರಕ್ಷಿಸಿದ ವ್ಯಕ್ತಿ; ವಿಡಿಯೊ ವೈರಲ್‌

ಕಾರು ಚಾಲಕನನ್ನು ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ವ್ಯಕ್ತಿ

Man saves a car driver: ನೀರಿನಲ್ಲಿ ಮುಳುಗುತ್ತಿದ್ದ ಕಾರು ಚಾಲಕನ ಪ್ರಾಣವನ್ನು ರಕ್ಷಿಸಲು ವ್ಯಕ್ತಿಯೊಬ್ಬರು ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ. ಈ ವ್ಯಕ್ತಿಯ ಧೈರ್ಯ ಮತ್ತು ನಿಷ್ಠಾವಂತ ಕಾರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಮದುವೆಯಲ್ಲಿ ವರನ ಶೂ ಕದಿಯಲು ಮುಂದಾದ ಮಹಿಳೆಯರು; ಬಾಯಲ್ಲಿ ಕಚ್ಚಿ ಹಿಡಿದ ವ್ಯಕ್ತಿಯ ವಿಡಿಯೊ ವೈರಲ್

ಮದುವೆಯಲ್ಲಿ ವರನ ಶೂ ಕದ್ದ ಹೆಂಗಳೆಯರಿಗೆ ಚಮಕ್

Bride’s friends steal groom’s shoes at wedding: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ನೆಟ್ಟಿಗರನ್ನು ರಂಜಿಸಿದೆ. ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ವರನ ಶೂವನ್ನು ಬಾಯಲ್ಲಿ ಕಚ್ಚಿಕೊಂಡು, ಅದನ್ನು ಕದಿಯದಂತೆ ತಡೆಹಿಡಿದಿದ್ದಾನೆ. ಈ ದೃಶ್ಯ ನೋಡಿದ ಅತಿಥಿಗಳು ಬಿದ್ದು ಬಿದ್ದು ನಕ್ಕಿದ್ದಾರೆ.

11 ವರ್ಷ ಪ್ರೀತಿಸಿ ಮದುವೆಯಾದ ಜೋಡಿ: ವಿವಾಹದ ವಿಡಿಯೊ ವೈರಲ್ ಬೆನ್ನಲ್ಲೇ ಟೀಕೆ ವ್ಯಕ್ತಪಡಿಸಿದ್ದೇಕೆ ನೆಟ್ಟಿಗರು?

11 ವರ್ಷ ಪ್ರೀತಿಸಿ ಮದುವೆಯಾದ ಜೋಡಿ; ನೆಟ್ಟಿಗರಿಂದ ಟೀಕೆ

Netizens criticize after wedding video goes viral: ಮಧ್ಯ ಪ್ರದೇಶದ ಯುವ ದಂಪತಿ ರಿಷಬ್‌ ರಾಜಪುತ್ ಮತ್ತು ಶೋನಲಿ ಚೌಕ್ಸಿ ಎಂಬವರು 11 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಇವರಿಬ್ಬರ ವಿವಾಹದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಟೀಕೆಗೆ ಗುರಿಯಾಯಿತು. ವರನ ಚರ್ಮದ ಬಣ್ಣದ ಬಗ್ಗೆ ಅನೇಕರು ಟೀಕಿಸಿದ್ದಾರೆ.

ಸೈಕಲ್ ಹ್ಯಾಂಡಲ್ ಮೇಲೆ ರಾಜ ಗಾಂಭೀರ್ಯದಿಂದ ಕುಳಿತ ಬೃಹತ್‌ ಗಾತ್ರದ ಹಾವು; ಬಹುಶಃ ಇದೇ ಓನರ್‌ ಇರಬೇಕು ಎಂದು ನೆಟ್ಟಿಗರು

ವೈರಲ್ ಆಯ್ತು ಸೈಕಲ್ ಹ್ಯಾಂಡಲ್ ಮೇಲೆ ಕುಳಿತ ನಿಗೂಢ ಹಾವು

Snake sitting on bicycle handle: ಸೈಕಲ್‌ ಹ್ಯಾಂಡಲ್ ಮೇಲೆ ಕುಳಿತಿದ್ದ ನಿಗೂಢ ಹಾವಿನ ಫೋಟೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಅಚ್ಚರಿ ಮೂಡಿಸುವ ಕ್ಷಣವನ್ನು ನೋಡಿ ನೆಟ್ಟಿಗರು ಹಾಸ್ಯ ಚಟಾಕಿ ಮಾಡಿದ್ದು, ಈ ಸೈಕಲ್‌ನ ನಿಜವಾದ ಮಾಲೀಕರು ಇದೇ ಎಂದು ತಮಾಷೆ ಮಾಡಿದ್ದಾರೆ.

Viral Video: 25 ಸಾವಿರ ರೂ.ಗೆ ಎಐ ಶಿಕ್ಷಕಿ ಸೃಷ್ಟಿಸಿದ 17 ವರ್ಷದ ವಿದ್ಯಾರ್ಥಿ; ರೋಬೋಟ್ ಉಪನ್ಯಾಸದ ವಿಡಿಯೊ ವೈರಲ್

ರೋಬೋಟ್ ಉಪನ್ಯಾಸದ ವಿಡಿಯೊ ವೈರಲ್

Student Creates AI Teacher: 17 ವರ್ಷದ ವಿದ್ಯಾರ್ಥಿ ಆದಿತ್ಯ ಕುಮಾರ್ ಕೇವಲ 25 ಸಾವಿರ ರೂ. ವೆಚ್ಚದಲ್ಲಿ ಎಐ ಕಾರ್ಯಕ್ಷಮತೆಯೊಂದಿಗೆ ರೋಬೋಟ್ ಶಿಕ್ಷಕಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಶಿವ ಚರಣ್ ಇಂಟರ್ ಕಾಲೇಜಿನ ವಿದ್ಯಾರ್ಥಿ ಈ ಸಾಧನೆ ಮಾಡಿದವರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತರಗತಿಯೊಳಗೆ ಪುಟ್ಟ ಮಕ್ಕಳಿಗೆ ಕಪಾಳ ಮೋಕ್ಷ ಮಾಡಿದ ಶಿಕ್ಷಕಿ; ವಿಡಿಯೊ ವೈರಲ್ ಬೆನ್ನಲ್ಲೇ ವ್ಯಾಪಕ ಆಕ್ರೋಶ

ತರಗತಿಯಲ್ಲಿ ಮಕ್ಕಳಿಗೆ ಕಪಾಳಮೋಕ್ಷ ಮಾಡಿದ ಶಿಕ್ಷಕಿ

Teacher assaults students in classroom: ತರಗತಿಯಲ್ಲಿ ಮಕ್ಕಳ ಮೇಲೆ ಶಿಕ್ಷಕಿಯೊಬ್ಬರು ಕಪಾಳಮೋಕ್ಷ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಶಾಲಾ ಸುರಕ್ಷತೆ ಮತ್ತು ಶಿಕ್ಷಕರ ನಡವಳಿಕೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

Viral News: ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌? ಏನಿದು ಸ್ಟೋರಿ

ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಇನ್‌ಫ್ಲುಯೆನ್ಸರ್‌?

Girl’s eye injured: ದೆಹಲಿಯಲ್ಲಿ ದೀಪಾವಳಿ ವೇಳೆ ನಡೆದ ಪಟಾಕಿ ದುರ್ಘಟನೆಯಿಂದ ಎಂಟು ವರ್ಷದ ಬಾಲಕಿಯ ಕಣ್ಣಿಗೆ ಗಂಭೀರ ಗಾಯವಾದ ಪ್ರಕರಣ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಕ್ಕೆ ಗುರಿಯಾಗಿರುವ ಬ್ರಿಟೀಷ್ ಇನ್ಫ್ಲುಯೆನ್ಸರ್ ಸ್ಯಾಮ್ ಪೆಪ್ಪರ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿರುವುದು ಇನ್ನಷ್ಟು ಕೋಪ ತರಿಸಿದೆ.

ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ ಮುಸ್ಲಿಂ ಧರ್ಮಗುರು ವಿಡಿಯೊ ವೈರಲ್

ಭಾರತ್ ಮಾತಾ ಕಿ ಜೈ ಎನ್ನಲು ನಿರಾಕರಿಸಿದ ಧರ್ಮಗುರು

ಮಸೀದಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರುವೊಬ್ಬರು ಭರತ್ ಮಾತಾ ಕಿ ಜೈ ಎನ್ನಲು ನಿರಾಕರಿಸಿರುವ ಘಟನೆ ನಡೆದಿದೆ. ಇದು ಅರುಣಾಚಲ ಪ್ರದೇಶದ ನಹರ್ಲಗುನ್‌ನ ಜಾಮಾ ಮಸೀದಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಿಖಿಲ್‌ ಕಾಮತ್‌- ಎಲಾನ್‌ ಮಸ್ಕ್‌ ಪಾಡ್‌ಕಾಸ್ಟ್‌ ಟೀಸರ್‌;  ಬಿಡುಗಡೆಯಾದ ಗಂಟೆಯಲ್ಲೇ ಲಕ್ಷಗಟ್ಟಲೇ ವೀವ್ಸ್‌

ಎಲಾನ್ ಮಸ್ಕ್, ನಿಖಿಲ್ ಕಾಮತ್ ಪಾಡ್‌ಕಾಸ್ಟ್ ಟೀಸರ್ ವೈರಲ್

ಜೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರೊಂದಿಗಿನ ಸಂಭಾಷಣೆಯ ಪಾಡ್‌ಕಾಸ್ಟ್ ಸಂಚಿಕೆಯ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಇದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಸಾಕಷ್ಟು ಮಂದಿ ಇದರ ಪೂರ್ಣ ಸಂಚಿಕೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

Viral News: ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ಭೂಮಿ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

Jammu Kashmir: ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ ನಂತರ, ಜಮ್ಮುವಿನ ಹಿಂದೂ ನಿವಾಸಿ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ ನಿವೇಶನವನ್ನು ಅವರಿಗೆ ಉಡುಗೊರೆಯಾಗಿ ನೀಡಿದ ಘಟನೆ ನಡೆದಿದೆ.

Loading...