ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಯ ಮೇಲೆ ಪತ್ನಿಯಿಂದ ಹಲ್ಲೆ: ವಿಡಿಯೊ ವೈರಲ್

ಎರಡನೇ ಮದುವೆಗೆ ಅರ್ಜಿ ಸಲ್ಲಿಸಲು ಬಂದ ಪತಿಗೆ ಪತ್ನಿಯಿಂದ ಹಲ್ಲೆ

Viral Video: ವ್ಯಕ್ತಿಯೊಬ್ಬ ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿಯು ಪತಿ ಹಾಗೂ ಆತ ಮದುವೆ ಆಗಬೇಕಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಾಹೋರ್‌ನಲ್ಲಿ ನಡೆದಿದೆ. ಸಾಹೋರ್ ಕಲೆಕ್ಟರ್ ಕಚೇರಿಯಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬದವರು ಜಗಳ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಸಾರ್ವಜನಿಕರ ಮುಂದೆ ಗದರಿಸಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಹದಿಹರೆಯದ ಬಾಲಕ; ಮಂಡಿಯೂರಿ ಕ್ಷಮೆಯಾಚಿಸಿದ ತಂದೆ

ಪುತ್ರನ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ ತಂದೆ

Viral News: ಸಾರ್ವಜನಿಕ ಸ್ಥಳದಲ್ಲಿ ಗದರಿಸಿದ ಘಟನೆ ಮನಸ್ಸಿಗೆ ನೋವು ತಂದ ಹಿನ್ನೆಲೆಯಲ್ಲಿ ಹದಿಹರೆಯದ ಬಾಲಕನೊಬ್ಬ ತಂದೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತಂದೆ, ತನ್ನ ಪುತ್ರನ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಅವಾಂತರ; ರೈಲ್ವೇ ಹಳಿಯಲ್ಲಿ ಆಟೋ ನಿಲ್ಲಿಸಿದ ಚಾಲಕ: ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಅಸ್ತವ್ಯಸ್ತ

ರೈಲ್ವೇ ಹಳಿಯಲ್ಲಿ ಆಟೋ ನಿಲ್ಲಿಸಿದ ಚಾಲಕ

Viral News: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಆಟೋವನ್ನು ರೈಲ್ವೆ ಹಳಿಯಲ್ಲಿ ನಿಲ್ಲಿಸಿದ್ದಾನೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

ಒಂದೇ ಬೈಕ್‍ನಲ್ಲಿ ಐವರ ಸವಾರಿ; ವಿಡಿಯೊ ವೈರಲ್ ಬೆನ್ನಲ್ಲೇ ಪೊಲೀಸರಿಂದ 31,000 ರುಪಾಯಿ ದಂಡ

ಒಂದೇ ಬೈಕ್‍ನಲ್ಲಿ ಐವರು ಸವಾರಿ; ವಿಡಿಯೊ ವೈರಲ್

5 riders in a single bike: ಒಂದೇ ಬೈಕ್‌ನಲ್ಲಿ ಐವರು ಮಂದಿ ಸವಾರಿ ಮಾಡಿರುವ ಘಟನೆಯ ವಿಡಿಯೊ ವೈರಲ್ ಆದ ನಂತರ, ಪೊಲೀಸರು ಕಾನೂನು ಉಲ್ಲಂಘನೆಗಾಗಿ 31,000 ರುಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಾಪುರದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಘಟನೆ ನಡೆದಿದೆ.

ರೋಗಿ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌; ನಿಜಕ್ಕೂ ಗಲಾಟೆ ಆರಂಭಿಸಿದ್ದು ಯಾರು? ಅಂದು ನಡೆದಿದ್ದೇನು?

ರೋಗಿಗೆ ಹೊಡೆದ ಆರೋಪಕ್ಕೆ ವೈದ್ಯರ ಸ್ಪಷ್ಟನೆ

Viral Video: ಹಿಮಾಚಲ ಪ್ರದೇಶದ ಶಿಮ್ಲಾದ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ರೋಗಿಯ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣ ಭಾರಿ ಸದ್ದು ಮಾಡಿತ್ತು. ವೈದ್ಯನದ್ದೇ ತಪ್ಪು, ಅವರು ರೋಗಿಗೆ ಚಿಕಿತ್ಸೆ ನೀಡುವ ಬದಲು ಮನಬಂದಂತೆ ಥಳಿಸಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಘಟನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದದ್ದನ್ನು ಮನಗಂಡ ವೈದ್ಯರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಂದು ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾರೆ.

ವಿವಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಪ್ರಶ್ನೆ; ಪ್ರೊಫೆಸರ್ ಸಸ್ಪೆಂಡ್

ವಿವಿ ಪರೀಕ್ಷೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಪ್ರಶ್ನೆ

controversial question: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಮುಸ್ಲಿಮರ ಬಗ್ಗೆ ಕೇಳಿರುವ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪ್ರಶ್ನೆಪತ್ರಿಕೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ಮಧ್ಯೆಯೇ ಪಟಾಕಿ ಹಚ್ಚಿದ ಉದ್ಯಮಿ: ಪ್ರಶ್ನಿಸಿದವರ ಮೇಲೆ ರೇಗಾಡಿ ಧಿಮಾಕು

ಮಗನ ಹುಟ್ಟುಹಬ್ಬ ಆಚರಿಸಲು ರಸ್ತೆ ತಡೆದು ಪಟಾಕಿ ಸಿಡಿಸಿದ ಉದ್ಯಮಿ

Viral Video: ಸಾರ್ವಜನಿಕ ರಸ್ತೆಯನ್ನು ತನ್ನ ಆಸ್ತಿಯಂತೆ ಬಳಸಿಕೊಂಡು ಮಗನ ಬರ್ತ್‌ಡೇ ಆಚರಿಸಿದ ವಿಡಿಯೊವೊಂದು ವೈರಲ್ ಆಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಮಗನ ಹುಟ್ಟುಹಬ್ಬ ಆಚರಿಸಿದ ಸೂರತ್‌ ಉದ್ಯಮಿಯ ವರ್ತನೆಯ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಅಂದು ಕೋಟಿ ವ್ಯವಹಾರ ನಡೆಸಿದ್ದ ಉದ್ಯಮಿ ಇಂದು ಡ್ರೈವರ್: ಕಣ್ಣೀರು ತರಿಸುವಂತಿದೆ ಇವರ ಕಥೆ!

ಕೋಟಿ ವ್ಯವಹಾರ ನಡೆಸಿದ ಉದ್ಯಮಿ ಈಗ ಚಾಲಕ: ಏನಾಗಿತ್ತು ಇವರ ಬದುಕಿನಲ್ಲಿ?

Viral News: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಜೀವನದ ದಿಕ್ಕೆ ಬದಲಾಯಿತು ಎಂದು ವ್ಯಕ್ತಿಯೋರ್ವ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೋಟಿ ಕೋಟಿ ಹಣಕಾಸಿನ ವ್ಯವ ಹಾರ ಮಾಡುತ್ತಿದ್ದ ಉದ್ಯಮಿಯಾಗಿದ್ದ ತಾನು ಈಗ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಲದಲ್ಲಿ ಐಶಾರಾಮಿ ಜೀವನ ಕಂಡಿದ್ದ ತನಗೆ ಈಗ ನಿತ್ಯ ಜೀವನ ತಳ್ಳಲು ಕಷ್ಟ ಪಡು ವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Viral Video: ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ಡೇಂಜರಸ್‌ ವಿಡಿಯೋ ವೈರಲ್‌

ಶಾಲಾ ಬಸ್ಸಿನಲ್ಲಿ ನೇತಾಡುತ್ತಿರುವ ಮಕ್ಕಳು: ಭಯಾನಕ ವಿಡಿಯೊ ವೈರಲ್

ಶಾಲಾ ಬಸ್ಸಿನಲ್ಲಿ ಮಕ್ಕಳು ನೇತಾಡುತ್ತ ಪ್ರಯಾಣಿಸುತ್ತಿರುವ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಕ್ಕಳ ಸುರಕ್ಷತೆಯನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಬಸ್ಸೊಂದರಲ್ಲಿ ಮಕ್ಕಳು ನೇತಾಡುತ್ತಾ ಪ್ರಯಾಣಿಸುತ್ತಿರುವ ದೃಶ್ಯ ಕಂಡು ಬಂದಿದೆ.‌ ಈ ಘಟನೆ ರಾಜಸ್ಥಾನದ ಸಲೂಂಬರ್‌ನಿಂದ ಧರಿಯಾ ವಾದ್ ಮಾರ್ಗದಲ್ಲಿ ಕಂಡುಬಂದಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು? ಇಲ್ಲಿದೆ ಭಯಾನಕ ವಿಡಿಯೊ

ರೈಲಿನಿಂದ ಬಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಉದ್ಯೋಗಿ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯನ್ನು ರೈಲ್ವೇ ಉದ್ಯೋಗಿ ರಕ್ಷಿಸಿದ ಘಟನೆ ತಮಿಳುನಾಡಿನ ಚೆನ್ನೈನ ತಾಂಬರಂ ನಿಲ್ದಾಣದಲ್ಲಿ ನಡೆದಿದೆ. ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಮಹಿಳೆ ಸಿಲುಕಿಕೊಂಡಿದ್ದು, ಇದನ್ನು ನೋಡಿ ತ್ವರಿತವಾಗಿ ಸ್ಪಂದಿಸಿದ ರೈಲ್ವೇ ಉದ್ಯೋಗಿಯ ಆಕೆಯನ್ನು ರಕ್ಷಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಜೀವನ ಶೈಲಿಗೆ ಮನಸೋತ ರಷ್ಯಾ ಕುಟುಂಬ: ಇಲ್ಲಿನ ಜನರ ನಗುವೇ ನಮಗೆ ಆಸ್ತಿ ಎಂದು ಗುಣಗಾನ

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ರಷ್ಯಾ ಕುಟುಂಬ ಹೇಳಿದ್ದೇನು?

Viral Video: ಸಾಮಾನ್ಯವಾಗಿ ವಿದೇಶಿಯರು ಭಾರತವನ್ನು ಪ್ರವಾಸಿ ತಾಣವಾಗಿ ಇಷ್ಟ ಪಡುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ಸವಿದು ಪ್ರವಾಸಿಗರಾಗಿ ಬಂದು ಹೋಗುತ್ತಾರೆ. ಆದರೆ ಕಂಟೆಟ್ ಕ್ರಿಯೇಟರ್ ಯಾನಾ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಅವರು ಇಲ್ಲಿನ ಜನ ಜೀವನವನ್ನು ಹಾಡಿ ಹೊಗಳಿದ್ದಾರೆ.

ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ! ಮಂಗಳೂರಿನ ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ

ಭಾರಿ ವೈರಲ್ ಆಗ್ತಿದೆ ಮಂಗಳೂರಿನ ಆಲ್ಟೋ ಕಾರಿನ ಬರಹ: ಅಂತದೇನಿದೆ?

Viral Video: ಜನರು ತಮ್ಮ ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವು ಗಮನಿಸಿರಬಹುದು. ಅನೇಕ ಟ್ರಕ್‌, ಆಟೋ ಮತ್ತು ಬಸ್‌ಗಳಲ್ಲಿ ಬರೆದಿರುವ ಫನ್‌ ಸಾಲುಗಳು ಟ್ರಾಫಿಕ್‌ನಲ್ಲಿ ಕಾಯುತ್ತಿರುವ ಜನರನ್ನು ನಗಿಸಿದ ಉದಾಹರಣೆ ಇದೆ. ಇದೀಗ ಮಂಗಳೂರು ನೋಂದಣಿಯ ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆದಿರುವ ಸಾಲು ನೆಟ್ಟಿಗರ ಗಮನ ಸೆಳೆದಿದೆ.

ಜಲ ಮಾಲಿನ್ಯ ಜಾಗೃತಿಗಾಗಿ ಉಸಿರು ಬಿಗಿ ಹಿಡಿದು ನೀರಿನೊಳಗೆ ಹೆಜ್ಜೆ ಹಾಕಿದ ಡ್ಯಾನ್ಸರ್‌: ವಿಡಿಯೊ ವೈರಲ್

ಜಾಗೃತಿ ಮೂಡಿಸಲು ನೀರಿನ ಆಳದಲ್ಲಿ ಹೆಜ್ಜೆ ಹಾಕಿದ ಡ್ಯಾನ್ಸರ್‌

ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲ್‌ಗಳು ಸಮುದ್ರ ಗರ್ಭ ಸೇರುತ್ತಿದ್ದು ಅಲ್ಲಿನ ಜಲಚರಗಳಿಗೆ ಸಂಕಷ್ಟ ತಂದೊಡ್ಡಿವೆ. ಹೀಗಾಗಿ ಯುವತಿಯೊಬ್ಬರು ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೀರಿನ ಆಳದಲ್ಲಿ ಭರತನಾಟ್ಯ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪುದುಚೇರಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ನೀರಿನ ಆಳದಲ್ಲಿನ ಆಕೆಯ ನೃತ್ಯ ಗಮನ ಸೆಳೆಯುತ್ತಿದೆ.

ಟಿಪ್ಸ್ ಕೊಡೋದ್ರಲ್ಲಿ ಬೆಂಗಳೂರೇ ನಂಬರ್ 1: ಆನ್‌ಲೈನ್‌ ಡೆಲಿವರಿ ಬಾಯ್ಸ್‌ಗೆ ಗ್ರಾಹಕರು ಕೊಟ್ಟ ಟಿಪ್ಸ್ ಮೊತ್ತ ಕೇಳಿದ್ರೆ ದಂಗಾಗ್ತೀರ

ಡೆಲಿವರಿ ಬಾಯ್‌ಗೆ ಬರೋಬ್ಬರಿ 68,600 ರು. ಟಿಪ್ಸ್ ಕೊಟ್ಟ ಗ್ರಾಹಕ

Viral News: ಗ್ರಾಹಕರು ತಾವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ತಂದುಕೊಡುವ ಡೆಲಿವರಿ ಬಾಯ್ಸ್‌ಗೆ ಟಿಪ್ಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇನ್‌ಸ್ಟಾಮಾರ್ಟ್ ಬಳಕೆದಾರರೊಬ್ಬರು ಬರೋಬ್ಬರಿ 68,600 ರೂ. ಟಿಪ್ಸ್ ಅನ್ನು ಪಾವತಿ ಮಾಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ವೈರಲ್ ಆಗಿದೆ.

ಯುವಕನ ಮಾನವೀಯತೆಗೆ ದೇಶವೇ ಫಿದಾ! ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ

ಹೀಗೊಂದು ಮದುವೆ! ತಂಗಿಯ ಮದುವೆಗೆ ಭಿಕ್ಷುಕರನ್ನು ಕರೆದ ಅಣ್ಣ

Viral Video: ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸಿದ್ಧಾರ್ಥ್ ರಾಯ್ ಎಂಬ ವ್ಯಕ್ತಿ ತನ್ನ ತಂಗಿಯ ಮದುವೆಯನ್ನು ಅತ್ಯಂತ ಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ವಿವಾಹ ಸಂಭ್ರಮಕ್ಕೆ ಸಿದ್ಧಾರ್ಥ್ ತಮ್ಮ ಊರಿನ ಬೀದಿ ಬದಿಯ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಈ ಗ್ರಾಮದ ಮಹಿಳೆಯರಿಗೆ ಕ್ಯಾಮೆರಾ ಇರುವ ಫೋನ್‌ ಬಳಸುವುದೇ ನಿಷೇಧ; ಇದೇನಿದು ವಿಚಿತ್ರ ರೂಲ್ಸ್‌?

ಮಹಿಳೆಯರಿಗೆ ಇಲ್ಲಿ ಸ್ಮಾರ್ಟ್‌ಫೋನ್ ನಿಷೇಧ

mobile phone usage: ಸೊಸೆಯಂದಿರಿಗೆ, ಯುವತಿಯರಿಗೆ ಕ್ಯಾಮರಾ ಇರುವ ಫೋನ್ ಬಳಸುವಂತಿಲ್ಲ ಎಂದು ರಾಜಸ್ಥಾನದ ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್‍ನಲ್ಲಿ ಈ ವಿಚಿತ್ರ ನಿಯಮವನ್ನು ಜಾರಿಗೆ ತಂದಿದೆ. ಜನವರಿ 26 ರಿಂದ 15 ಹಳ್ಳಿಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು.

Viral Video: ಈ ಜನ್ಮದಲ್ಲೂ ಕುರುಡು, ಮುಂದಿನ ಜನ್ಮದಲ್ಲೂ ಇದೇ ಸ್ಥಿತಿ; ಅಂಧ ಮಹಿಳೆಗೆ ಬಿಜೆಪಿ ನಾಯಕಿ ಕಿರುಕುಳ, ಇಲ್ಲಿದೆ ವಿಡಿಯೊ

ಅಂಧ ಮಹಿಳೆಗೆ ಬಿಜೆಪಿ ನಾಯಕಿ ಕಿರುಕುಳ

BJP leader mocks a blind woman: ಅಂಧ ಮಹಿಳೆಯನ್ನು ಬಿಜೆಪಿ ನಾಯಕಿ ಅವಮಾನಿಸಿದ ಘಟನೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಬಿಜೆಪಿ ಮುಖಂಡೆಯು ಮಹಿಳೆಯ ಅಂಗವೈಕಲ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಂದು ತಿಂಗಳಲ್ಲಿ ಹಿಂದಿ ಕಲಿಯಿರಿ, ಇಲ್ಲಾ ಅಂದ್ರೆ..; ಆಫ್ರಿಕಾ ಫುಟ್‌ಬಾಲ್‌ ಕೋಚ್‌ಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕಿ

ಆಫ್ರಿಕಾ ಫುಟ್‌ಬಾಲ್‌ ಕೋಚ್‌ಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕಿ

Viral Video: ಪತ್ಪರ್‌ಗಂಜ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ರೇಣು ಚೌಧರಿ ವಿವಾದವನ್ನು ಸೃಷ್ಟಿಸಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ವಿದೇಶಿ ಫುಟ್‌ಬಾಲ್ ತರಬೇತುದಾರರಿಗೆ ಒಂದು ತಿಂಗಳೊಳಗೆ ಹಿಂದಿ ಕಲಿಯಿರಿ ಎಂದು ಬೆದರಿಕೆ ಹಾಕಿದ್ದಾರೆ.

ತಮಿಳುನಾಡಿನಲ್ಲಿ ಕಾರ್ತಿಕ ದೀಪದ ವಿವಾದದ ಮಧ್ಯೆ ದರ್ಗಾದಲ್ಲಿ ಮೆರೆಯಿತು ಹಿಂದೂ, ಮುಸ್ಲಿಂ ಭಾವೈಕ್ಯತೆ

ದರ್ಗಾದಲ್ಲಿ ವಾದ್ಯ ನುಡಿಸಿದ ಹಿಂದೂ ಕಲಾವಿದರು

ಸಂತಾನಕೂಡು ಉತ್ಸವದಲ್ಲಿ ಧಾರ್ಮಿಕ ಸಾಮರಸ್ಯತೆ ಮೆರೆದಿರುವ ಘಟನೆ ವರದಿಯಾಗಿದೆ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುವ ಮೂಲಕ ವಿವಾದ ಬದಿಗೆ ಸರಿದು, ಸಾಮರಸ್ಯತೆ ಮೆರೆದಿದೆ. ಮಸೀದಿಯ ಪ್ರತಿನಿಧಿಗಳು ಧ್ವಜವನ್ನು ಮತ್ತು ಗಂಧದ ಲೇಪವನ್ನು ದರ್ಗಾಕ್ಕೆ ಕೊಂಡೊಯ್ಯುವ ಮೊದಲು, ಇಬ್ಬರು ಹಿಂದೂ ಕಲಾವಿದರ ತಂಡ ಮೃದಂಗ ಮತ್ತು ಥವಿಲ್ ನುಡಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಪಾಡಬೇಕಾದ ವೈದ್ಯನೇ ಕಾಡಿದ; ರೋಗಿಯ ಮೇಲೆ ಕೈ ಎತ್ತಿದ ಡಾಕ್ಟರ್: ವಿಡಿಯೊ ವೈರಲ್

ಬೆಡ್ ಮೇಲೆ ಮಲಗಿದ್ದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ

Viral Video: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರು ಆಸ್ಪತ್ರೆಯ ಬೆಡ್ ಮೇಲಿದ್ದ ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಿ ಆಸ್ಪತ್ರೆಯ ನವಜಾತ ಶಿಶು ಆರೈಕೆ ಘಟಕದಲ್ಲಿ ರಾಜಾರೋಷವಾಗಿ ಓಡಾಡಿದ ಇಲಿ: ಬೆಚ್ಚಿಬಿದ್ದ ನೆಟ್ಟಿಗರು

ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳ ಅಟ್ಟಹಾಸ: ನೆಟ್ಟಿಗರು ಕಿಡಿ

Viral Video: ಮಧ್ಯ ಪ್ರದೇಶದ ಈ ಸರ್ಕಾರಿ ಆಸ್ಪತ್ರೆ ಒಳ ಹೊಕ್ಕರೆ ಕಾಯಿಲೆಗೆ ಬೀಳದವರೂ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಲ್ಲಿನ ಆಸ್ಪತ್ರೆ ಜನರ ಸುರಕ್ಷತೆಯನ್ನು ಗಾಳಿಗೆ ತೂರಿದಂತಿದೆ. ಮಧ್ಯ ಪ್ರದೇಶದ ಸಾತ್ನಾ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಇಲಿಗಳು ಮುಕ್ತವಾಗಿ ರೋಗಿಗಳ ಮಧ್ಯೆಯೇ ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.‌ ಸದ್ಯ ಈ ವಿಡಿಯೊ‌ ಭಾರಿ ವೈರಲ್ ಆಗಿದೆ.

ಸಿಗರೇಟ್ ಖರೀದಿಸಲು ರೈಲ್ವೆ ಕ್ರಾಸಿಂಗ್‌ನಲ್ಲಿ 10 ನಿಮಿಷಗಳ ಕಾಲ ರೈಲು ನಿಲ್ಲಿಸಿದ ಲೋಕೋ ಪೈಲಟ್; ನೆಟ್ಟಿಗರು ಗರಂ

ಸಿಗರೇಟ್ ಖರೀದಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲಟ್

ರೈಲ್ವೆ ಕ್ರಾಸಿಂಗ್‌ನಲ್ಲಿ ಸಿಗರೇಟ್ ಖರೀದಿಸಲು ಲೋಕೋ ಪೈಲಟ್ 10 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿರುವ ಆರೋಪ ಕೇಳಿ ಬಂದಿದೆ. ಇದರಿಂದ ಜನನಿಬಿಡ ಲೆವೆಲ್ ಕ್ರಾಸಿಂಗ್‌ನಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ರೈಲು ನಿಲುಗಡೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹಾಡುತ್ತ, ಕುಣಿಯುತ್ತ ಭೋಪಾಲ್ ಮೆಟ್ರೋ ಸ್ವಾಗತಿಸಿದ ಹಿರಿಯ ನಾಗರಿಕರು; ವಿಡಿಯೊ ವೈರಲ್‌

ಜನಸಂದಣಿಯಿಂದ ತುಂಬಿದ ಭೋಪಾಲ್ ಮೆಟ್ರೋ ನಿಲ್ದಾಣ

Bhopal Metro: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲೂ ಮೆಟ್ರೋ ತನ್ನ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದ್ದು, ನಗರವಾಸಿಗಲ ಬಹು ದಿನಗಳ ಕನಸು ನನಸಾಗಿದೆ. ಮೊದಲ ದಿನವೇ ಮೆಟ್ರೋ ಸಂಚಾರಕ್ಕೆ ಸಾವಿರಾರು ಜನರು ಮುಗಿಬಿದ್ದಿದ್ದು, ಹಿರಿಯ ನಾಗರಿಕರು ಡ್ಯಾನ್ಸ್‌, ಮಾಡಿ ಹಾಡು ಹಾಡಿ ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ನಿಮಿಷ ತಡವಾಗಿ ಬಂದ ಮೇಯರ್‌ನನ್ನು ಬಿಟ್ಟು ಹೊರಟೇ ಬಿಟ್ಟ ರೈಲು: ಮೆಕ್ಸಿಕೋ ರೈಲ್ವೆ ಇಲಾಖೆಯ ಸಮಯ ಪಾಲನೆಗೆ ನೆಟ್ಟಿಗರು ಫಿದಾ

ಮೇಯರ್ ಬಾರದೇ ಇದ್ರೂ ಸಮಯಕ್ಕೆ ಸರಿಯಾಗಿ ಹೊರಟ ರೈಲು

Viral Video: ಸಾಮಾನ್ಯವಾಗಿ ಯಾರೇ ಅಧಿಕಾರಿ, ರಾಜಕೀಯದವರು ಬರುತ್ತಾರೆ ಅಂದಾಗ ಬಸ್ ಇರಲಿ, ಫ್ಲೈಟ್ ಇರಲಿ ಕಾದು ನಿಲ್ಲುವುದು ಇದೆ.‌ ಆದರೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಹಲವರನ್ನು ಅಚ್ಚರಿಗೆ ದೂಡಿದೆ. ಹೌದು, ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ಹೋಗಿದೆ.

Loading...