ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಬೆಂಗಳೂರು ಯುವಕರ ‘ವೈರ್‌ಲೆಸ್ ಡಿಜೆ ರನ್’: ಜೆ.ಪಿ. ನಗರದ ಫಿಟ್ ನೆಸ್ ಕ್ರೇಜ್ ಗೆ ನೆಟ್ಟಿಗರು ಫಿದಾ!

ಜೆಪಿ ನಗರದಲ್ಲಿ ವೈರ್‌ಲೆಸ್ ಡಿಜೆ ರನ್ನಿಂಗ್: ವಿಡಿಯೊ ವೈರಲ್

Viral Video: ಫಿಟ್ ನೆಸ್ ಕಾಪಾಡಿಕೊಳ್ಳಲು ನಗರದ ವಿವಿಧ ಕ್ಲಬ್ ಗಳು ಜೊತೆ ಸೇರಿ ಬೆಂಗಳೂರಿನ ಯುವಕ- ಯುವತಿಯರಿಗೆ ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದಕ್ಕೆ ಪೂರಕವಾಗಿ ಜೆ.ಪಿ. ನಗರದಲ್ಲಿ ನಡೆದ ವಿಭಿನ್ನ ಶೈಲಿಯ ‘ವೈರ್‌ಲೆಸ್ ಡಿಜೆ ರನ್ ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ...

ಟಿಎಂಸಿ ಬಂಡಾಯದ ನಡುವೆ ಟ್ಯಾಂಗಿ, ಮಸಲೇದಾರ್, ಕುರುಕಲು...; ಬಂಗಾಳದ ಜಲ್ಮುರಿ ಬಗ್ಗೆ ಅಮಿತ್ ಶಾ ಹೇಳಿದ್ದೇಕೆ?

ಜಲ್ಮುರಿ ಸವಿ ನೆನಪು ಹಂಚಿಕೊಂಡ ಅಮಿತ್ ಶಾ

ಒಂದು ಕಡೆ ತೃಣ ಮೂಲ ಕಾಂಗ್ರೆಸ್ ನಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು, ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ತಾವು ಸವಿದಿರುವ ಜಲ್ಮುರಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಬಂಗಾಳದ ಜಲ್ಮುರಿ ಟ್ಯಾಂಗಿ, ಮಸಲೇದಾರ್, ಕುರುಕಲು ಎಂದು ನಿಗೂಢ ಪದಗಳಲ್ಲಿ ಉಲ್ಲೇಖಿಸಿರುವುದು ಯಾರಿಗೆ ಎನ್ನುವ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೇವಲ 4 ಸೆಂ.ಮೀ. ಮಳೆಗೆ ತತ್ತರಿಸಿ ಹೋದ ಹೈದರಾಬಾದ್; ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಒದ್ದಾಡಿದ ಪ್ರಯಾಣಿಕರು

ಮಳೆಯಿಂದಾಗಿ ಮುಳುಗಿದ ಹೈದರಾಬಾದ್

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪ್ರಮುಖ ಐಟಿ ವಲಯದಲ್ಲಿ ಸುರಿದ ಮಳೆಯಿಂದಾಗಿ ಜನ ಕಂಗಲಾಗಿ ಹೋಗಿದ್ದಾರೆ. ಕೇವಲ 4 ಸೆಂಟಿ ಮೀಟರ್ ಮಳೆ ಇಡೀ ನಗರದ ಜನರನ್ನು ಭಯಕ್ಕೆ ತಳ್ಳಿದೆ. ಐಟಿ ಕಾರಿಡಾರ್ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡು ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು‌. ಸದ್ಯ ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿಮ್ಲಾ ಬಿಡಿ! ಬೆಂಗಳೂರೇ ಇದೀಗ ಗಿರಿಧಾಮ: ಸಿಲಿಕಾನ್ ಸಿಟಿಯ ತಂಪಾದ ವಾತಾವರಣಕ್ಕೆ ನಿವಾಸಿಗಳಿ ಫಿದಾ

ಶಿಮ್ಲಾವನ್ನು ಮೀರಿಸಿದ ಬೆಂಗಳೂರು: ಕೂಲ್ ವಾತಾವರಣಕ್ಕೆ ನೆಟ್ಟಿಗರು ಫಿದಾ

Viral News: ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಪ್ರಸಿದ್ಧ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ.

Fact Check: ಕಾಗದದ ನೋಟು ಬದಲು ಪ್ಲಾಸ್ಟಿಕ್ ನೋಟು ಚಲಾವಣೆಗೆ ತಂದ ಆರ್‌ಬಿಐ; ವೈರಲ್‌ ಸುದ್ದಿಯ ಅಸಲಿಯತ್ತೇನು?

ಆರ್‌ಬಿಐ ಕಾಗದದ ನೋಟುಗಳನ್ನು ಬದಲಾಯಿಸುತ್ತಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ ಕಾಗದದ ನೋಟುಗಳನ್ನು ಪ್ಲಾಸ್ಟಿಕ್ ನೋಟುಗಳೊಂದಿಗೆ ಬದಲಾಯಿಸುತ್ತಿದೆ ಎನ್ನುವ ವದಂತಿಗಳು ಹರಿದಾಡುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ಘಟಕವು ತನಿಖೆಯನ್ನು ನಡೆಸಿದ್ದು, ಇದು ಸುಳ್ಳು ಸುದ್ದಿ. ಅಂತಹ ಯಾವುದೇ ಯೋಜನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸೆಲ್ಫಿ ತೆಗೆಯಲು ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಕೂದಲೆಳೆ ಅಂತರದಲ್ಲಿ ಪಾರು

ಸೆಲ್ಫಿ ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿಹೋದ ಪಂಜಾಬ್ ಪ್ರವಾಸಿಗರು

Viral Video: ಪ್ರಕೃತಿ ಸೌಂದರ್ಯವನ್ನು ಸವಿಯಲು ಹೋದ ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೊಂದು ಹಿಮಾಚಲ ಪ್ರದೇಶದ ಪಾರ್ವತಿ ನದಿಯಲ್ಲಿ ನಡೆದಿದೆ. ನದಿಯ ದಂಡೆಯಲ್ಲಿ ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನುಷ್ಯನಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ತಪ್ಪಿಲ್ಲ ಈ ಗೋಳು; ಸಂಗಾತಿಯೊಂದಿಗೆ ಜಗಳವಾಡಿದ ಗೋರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ?

ಸಂಗಾತಿಯೊಂದಿಗೆ ಮುನಿಸಿಕೊಂಡ ಗೊರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ!

Viral News: ಗೊರಿಲ್ಲಾವೊಂದು ಡೀಪ್ ಆಗಿ ಯೋಚನೆಯಲ್ಲಿ ಮಗ್ನರಾಗಿರುವ ದೃಶ್ಯವೊಂದು ವೈರಲ್ ಆಗಿದೆ. ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟು ಕೊಂಡು ಗೊರಿಲ್ಲಾ ಕುಳಿತಿದೆ. ತನ್ನ ಸಂಗಾತಿ ಜೊತೆ ಜಗಳವಾಡಿದ ನಂತರ ಮನುಷ್ಯರಂತೆ ಗೊರಿಲ್ಲಾ ಈ ರೀತಿ ಆಲೋಚನೆಯಲ್ಲಿ ಕುಳಿತಿದೆ ಎಂದು ಹೇಳಲಾಗುತ್ತಿದೆ.

"ಓಲ್ಡ್‌ ಈಸ್‌ ಗೋಲ್ಡ್‌" ತಾತನಿಂದ ಮೊಮ್ಮಗನಿಗೆ ಸಿಕ್ತು 35 ವರ್ಷ ಹಳೆಯ ಟೈಟಾನ್ ವಾಚ್‌

ಮೊಮ್ಮಗನ ಹುಟ್ಟುಹಬ್ಬಕ್ಕೆ ತಾತ ನೀಡಿದ ವಿಂಟೇಜ್ ವಾಚ್!

Viral News: ಯುವಕನೊಬ್ಬರು ತಮ್ಮ 27ನೇ ಹುಟ್ಟು ಹಬ್ಬಕ್ಕೆ ತಾತನಿಂದ 35 ವರ್ಷ ಹಳೆಯ ಟೈಟಾನ್ ವಿಂಟೇಜ್ ವಾಚ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಅನೇಕರು ಈ ವಾಚ್ ನ ವಿನ್ಯಾಸ ಮತ್ತು ಅದರ ಗುಣಮಟ್ಟದ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ವಾಚ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಭಾರಿ ಅನಾಹುತದಿಂದ ಪಾರಾದ ಸಿಬ್ಬಂದಿ

ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಅನಾಹುತದಿಂದ ಸಿಬ್ಬಂದಿ ಪಾರು

2026 FIFA World Cup: ಯುದ್ಧದ ಮಧ್ಯೆಯೂ ಇರಾನ್‌ ಆಟಗಾರರಿಗೆ ಅಮೆರಿಕಾದ ವೀಸಾ ಮಂಜೂರು ಮಾಡಿದೆ. ಇಸ್ರೇಲ್‌, ಅಮೆರಿಕ ಜೊತೆಗಿನ ಯುದ್ಧದ ಕಾರಣದಿಂದಾಗಿ ಇರಾನ್‌ ತಂಡ ಈ ಬಾರಿ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಗೊಂದಲವಿತ್ತು. ಆದರೆ ಸದ್ಯ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿರುವ ಇರಾನ್‌ ತಂಡಕ್ಕೆ ಅಮೆರಿಕ ಪ್ರವೇಶಿಸಲು ವೀಸಾ ಮಂಜೂರು ಮಾಡಲಾಗಿದೆ.

Raichur News: ಅಸಭ್ಯ ವರ್ತನೆ ತೋರಿದವನ ಕಣ್ಣಿಗೆ ಖಾರದ ಪುಡಿ ಎರಚಿ, ಧರ್ಮದೇಟು ಕೊಟ್ಟ ಮಹಿಳೆ! Video

ಅಸಭ್ಯ ವರ್ತನೆ ತೋರಿದವನಿಗೆ ಧರ್ಮದೇಟು ಕೊಟ್ಟ ಮಹಿಳೆ!

ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಸ್‌ ನಿಲ್ದಾಣದಲ್ಲಿ ಅನುಚಿತ ವರ್ತನೆ ತೋರಿದ್ದಾನೆ ಎಂದು ವ್ಯಕ್ತಿಯೊಬ್ಬನ ಕಣ್ಣಿಗೆ ಮಹಿಳೆ ಖಾರದ ಪುಡಿ ಎರಚಿ, ಧರ್ಮದೇಟು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ; ವಿವಾದ ಸೃಷ್ಟಿಸಿದ ಈ ಮಹಿಳೆ!

ರೆಸ್ಟೋರೆಂಟ್‌ನಲ್ಲಿ ಭಾರತೀಯರಿಗಿಲ್ಲ ಕೆಲಸ: ವಿವಾದಾತ್ಮಕ ಹೇಳಿಕೆ ವೈರಲ್

Viral News: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ಮುಂಬೈ ಮೂಲದ ಮಹಿಳೆಯೊಬ್ಬರು ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ರೆಸ್ಟೋರೆಂಟ್‌ನಲ್ಲಿ ನಾನು ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದು ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಮೃಗಾಲಯದಲ್ಲಿ ಮಲಗಿದ್ದ ಹುಲಿಗೆ ಕಲ್ಲು ಎಸೆದ ಪ್ರವಾಸಿಗರು: ಅಶಿಸ್ತಿನ ವರ್ತನೆ ಬಗ್ಗೆ ನೆಟ್ಟಿಗರು ಕಿಡಿ!

ಮೃಗಾಲಯದಲ್ಲಿ ಮಲಗಿದ್ದ ಹುಲಿ ಮೇಲೆ ಕಲ್ಲು ಎಸೆದ ಪ್ರವಾಸಿಗರು

Viral News: ಉದ್ಯಾನವನದ ಮೃಗಾಲಯದಲ್ಲಿ ಶಾಂತವಾಗಿ ಮಲಗಿದ್ದ ಹುಲಿಗೆ ಪ್ರವಾಸಿಗರು ಕಲ್ಲು ಎಸೆದಿರುವ ಘಟನೆಯೊಂದು ಕಂಡು ಬಂದಿದೆ. ಹುಲಿಯೂ ಮೃಗಾಲಯದಲ್ಲಿ ತನ್ನ ಪಾಡಿಗೆ ಮಲಗಿದೆ,ಆದರೆ ಪ್ರವಾಸಿಗರು ಕಲ್ಲು ಎಸೆದು ಕಿರುಕುಳ ನೀಡಿದ್ದಾರೆ. ಸದ್ಯ ಈ ವಿಡಿಯೊ ನೋಡಿದ ಪ್ರಾಣಿ ಪ್ರಿಯರು ಪ್ರವಾಸಿಗರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ...

​ತನ್ನ ಮರಿಯಂತೆ  ಬೀದಿ ನಾಯಿಮರಿಯನ್ನು ಎತ್ತಿ ಮುದ್ದಾಡಿದ ಕೋತಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ನಾಯಿಮರಿಯನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಂಡ ಮಂಗ: ವಿಡಿಯೊ ವೈರಲ್

Viral News: ಮಂಗವೊಂದು ನಾಯಿಮರಿಯನ್ನು ಮರದ ಮೇಲೆ ಹೊತ್ತುಕೊಂಡು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದೃಶವೊಂದು ವೈರಲ್ ಆಗಿದೆ. ರಸ್ತೆಯ ಬದಿಯಲ್ಲಿದ್ದ ಸಣ್ಣ ಬೀದಿನಾಯಿ ಮರಿಯನ್ನು ಎತ್ತಿ ಕೊಂಡ ಮಂಗವು ಸರಸರನೆ ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿ ಕೂಳಿತಿದೆ.. ಅದರಲ್ಲೂ ನಾಯಿ ಮರಿಯನ್ನು ಮಂಗ ಈ ರೀತಿ ಮುದ್ದಾಡುತ್ತಿರುವುದು ಕಂಡು ನೆಟ್ಟಿಗರೇ ಆಚ್ಚರಿ ವ್ಯಕ್ತ ಪಡಿಸಿದ್ದಾರೆ

ಮಲಗಿದ್ದ ವೃದ್ಧನ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಯುವಕ; ಆಘಾತಕಾರಿ ವಿಡಿಯೋ ವೈರಲ್‌

ರೈಲ್ವೆ ನಿಲ್ದಾಣದಲ್ಲಿ ವೃದ್ಧನ ಮೇಲೆ ಬೆಲ್ಟ್‌ನಿಂದ ಕ್ರೂರ ಹಲ್ಲೆ

Viral News: ಮುಂಬೈ ರೈಲು ನಿಲ್ದಾಣದಲ್ಲಿ ಅಘಾತಕಾರಿ ಘಟನೆ ಕಂಡು ಬಂದಿದೆ.. ರೈಲ್ವೆ ನಿಲ್ದಾಣದಲ್ಲಿ ಶಾಂತವಾಗಿ ಮಲಗಿದ್ದ ವಯೋ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಯಾವುದೇ ಕಾರಣವಿಲ್ಲದೆ ಬೆಲ್ಟ್ ನಿಂದ ಸರಿಯಾಗಿ ಬಾರಿಸಿದ್ದಾನೆ. ಈ ಕ್ರೌರ್ಯದ ಕೃತ್ಯವನ್ನು ಮಹಾರಾಷ್ಟ್ರದ ಬೈಕುಲ್ಲಾ ನಿಲ್ದಾಣದಲ್ಲಿ ದಾರಿಹೋಕರೊಬ್ಬರು ಚಿತ್ರೀಕರಿಸಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಬೀಚ್‌ನಲ್ಲಿ ಬರಿಗಾಲಿನಲ್ಲಿ ನಡೆಯೋದೆ ಡೇಂಜರ್‌?  ತಟದಲ್ಲಿ ಕಂಡು ಬಂತು ರಾಶಿ ರಾಶಿ  ಗಾಜಿನ ಚೂರುಗಳು, ವಿಡಿಯೋ ನೋಡಿ

ಗೋವಾ ಬೀಚ್‌ನಲ್ಲಿ ಗಾಜಿನ ಚೂರುಗಳ ರಾಶಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಯುವಕ

Viral News: ಗೋವಾ ಬೀಚ್ ನಲ್ಲಿ ನಡೆದ ಅಘಾತಕಾರಿ ಘಟನೆಯೊಂದನ್ನು ಯೂಟ್ಯೂಬರ್ ಒಬ್ಬರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ತಂತ್ರಜ್ಞಾನ ಯೂಟ್ಯೂಬರ್ ಗೀಕಿ ರಂಜಿತ್ ಅವರು ವಾಕಿಂಗ್ ಮಾಡುತ್ತಿದ್ದಾಗ ಮರಳಿನಲ್ಲಿ ಹಾಗೂ ನೀರಿನ ಅಡಿಯಲ್ಲಿ ಬಿದ್ದಿದ್ದ ಹಲವಾರು ಒಡೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳು ಕಾಲಿಗೆ ಅಂಟಿಕೊಂಡಿವೆ. ಈ ಕಹಿ ಅನುಭವ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಕಲಿಯುಗ ಅಂದ್ರೆ ಇದೇನಾ? ಮಗಳ ಸಂಸಾರ ಮುರಿದು ಅಳಿಯನ ಕೈಹಿಡಿದ ಅತ್ತೆ!

ಪತ್ನಿಯನ್ನು ತೊರೆದು ಅತ್ತೆಯನ್ನು ಮದುವೆಯಾದ ಕಾನ್ಪುರದ ವ್ಯಕ್ತಿ!

Viral Video: ವಿವಾಹಿತ ಮಹಿಳೆ ಜೊತೆ ಅಪ್ರಾಪ್ತ ಯುವಕನಿಗೆ ಪ್ರೀತಿ, 50 ವರ್ಷ ಅಂಕಲ್ ಅನ್ನು ಮದುವೆಯಾದ ಯುವತಿ ಹೀಗೆ ಅನೇಕ ಘಟನೆಗಳು ವರದಿಯಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತೊರೆದು ಪತ್ನಿಯ ತಾಯಿ ಅತ್ತೆಯನ್ನೇ ಮದುವೆಯಾಗಿರುವ ಘಟನೆ ಕಂಡು ಬಂದಿದೆ. ಈ ದಂಪತಿಗಳು ತಮ್ಮ ವಿವಾಹ ಪ್ರಮಾಣಪತ್ರವನ್ನು ಹಿಡಿದುಕೊಂಡು ನಿಂತಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ.

ʼʼನಂಗೆ ಮಸಾಜ್‌ ಮಾಡು ಪ್ಲೀಸ್‌ʼʼ: ಮಾವುತನ ಬಳಿ ಬಂದು ಕಾಲೊಡ್ಡಿದ ಪಾಪು ಆನೆ; ಕ್ಯೂಟ್‌ ವಿಡಿಯೊ ನೋಡಿ

ಮಸಾಜ್‌ ಮಾಡುವಂತೆ ಮಾವುತನಿಗೆ ದಂಬಾಲು ಬಿದ್ದ ಆನೆ ಮರಿ

Viral News: ತಮಿಳುನಾಡಿನ ದೇವಸ್ಥಾನವೊಂದರಿಂದರಲ್ಲಿ ಕಂಡುಬಂದ ಈ ಮುದ್ದಾದ ದೃಶ್ಯ ಭಾರಿ ವೈರಲ್ ಆಗಿದೆ. ಕೂಟ್‌ ಆನೆ ಮರಿಯೊಂದುಬಂದು ಮಸಾಜ್‌ ಮಾಡುವಂತೆ ಕಾಲನ್ನು ಚಾಚಿದೆ. ಈ ಕ್ಯೂಟ್ ಆನೆ ಮರಿಯ ಕ್ಲಿಪ್ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದೆ.

ಓದಿದ್ದು ಎಂಜಿನಿಯರಿಂಗ್; ಈಗ ನೂಡಲ್ಸ್ ಅಂಗಡಿ ಮಾಲಕ: ಹಣಕ್ಕಿಂತ ನೆಮ್ಮದಿ ಮುಖ್ಯ ಎಂದ ಯುವಕ

ನೂಡಲ್ಸ್ ಅಂಗಡಿ ಇಡಲು ಉದ್ಯೋಗ ತ್ಯಜಿಸಿದ ಮೆಟಾ ಎಂಜಿನಿಯರ್

Viral News: ಇದ್ರೆ ನೆಮ್ದಿಯಾಗಿರ್ಬೇಕ್‌-ಸದ್ಯ ಯುವ ಜನತೆಯ ಮಂತ್ರ ಇದು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕರೂ ಒತ್ತಡದ ಕಾರಣಕ್ಕಾಗಿ ಹಲವರು ಉದ್ಯೋಗ ತ್ಯಜಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟಾ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ಸಂಬಳ ಗಳಿಸುತ್ತಿದ್ದ ಯುವಕನೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತೊರೆದು ನೂಡಲ್ಸ್ ಸ್ಟಾಲ್ ಆರಂಭಿಸಿದ್ದಾನೆ.

ಭಕ್ತಿ ಹೆಸರಲ್ಲಿ ಪರಿಸರ ಮಾಲಿನ್ಯ: ಗಂಗೋತ್ರಿ-ಯಮುನೋತ್ರಿ ನದಿಗೆ ಸೀರೆ ಎಸೆದ ಭಕ್ತರು

ಭಕ್ತಿಯೋ ಅಥವಾ ಮಾಲಿನ್ಯವೋ? ನದಿಗೆ ಸೀರೆ ಎಸೆದ ಭಕ್ತರ ವಿಡಿಯೊ ವೈರಲ್

Viral News: ಭಕ್ತಿಯ ಹೆಸರಿನಲ್ಲಿ ನೀರಿಗೆ ಹಾಲು ಎರೆಯುವುದು, ಹೂವಿನ ಮಾಲೆಗಳನ್ನು ಎಸೆಯುವುದು ಹೀಗೆ ಪರಿಸರ ಮಾಲಿನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಕ್ತಿಯ ಹೆಸರಿನಲ್ಲಿ ಯುಮುನಾ ನದಿಯನ್ನು ಕಲುಷಿತ ಮಾಡಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರಾಖಂಡದ ಪವಿತ್ರ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ನದಿಯಲ್ಲಿ ಸೀರೆ, ಬಟ್ಟೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಎಸೆದಿರುವ ಈ ವಿಡಿಯೊ ವೈರಲ್ ಆಗಿದೆ.

ವಿಡಿಯೊದಲ್ಲಿ ಚಿನ್ನ ತೋರಿಸಿದ ಯುಟ್ಯೂಬರ್; ಮನೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ಆಭರಣ ಕಳವು

ಯೂಟ್ಯೂಬ್ ವಿಡಿಯೊ ನೋಡಿ ಆಭರಣ ದೋಚಿದ ಕಳ್ಳರು

ಸೋಷಿಯಲ್ ಮೀಡಿಯಾದಲ್ಲಿ ಚಿನ್ನಾಭರಣ, ನಗದು ಮತ್ತು ಐಷಾರಾಮಿ ಜೀವನಶೈಲಿಯನ್ನು ಪ್ರದರ್ಶಿಸಿದ್ದ ಯುಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಸುಮಾರು 8ರಿಂದ 10 ಲಕ್ಷ ರುಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳವು ಮಾಡಿದ್ದಾರೆ. ಕಳ್ಳತನಕ್ಕೆ ಸಾಮಾಜಿಕ ಜಾಲತಾಣದ ವಿಡಿಯೊ ಸುಳಿವು ನೀಡಿದೆ ಎನ್ನಲಾಗಿದೆ.

ಪರೀಕ್ಷೆಯಲ್ಲಿ ಕಾಪಿ ಹೊಡೆದ ಮಗ; ಬುದ್ಧಿ ಹೇಳುವ ಬದಲು ಕಾಲೇಜಿಗೆ ನುಗ್ಗಿ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್!

ಮಗ ಪರೀಕ್ಷೆಯಲ್ಲಿ ನಕಲು ಮಾಡಿದ್ದರೂ ಶಿಕ್ಷಕರಿಗೆಯೇ ಥಳಿಸಿದ ಪೊಲೀಸ್ ತಂದೆ

Viral News: ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ಮಗನ ಪರವಾಗಿ ಬಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕಾಲೇಜು ಸಿಬ್ಬಂದಿ ಮೇಲೆಯೆ ಹಲ್ಲೆ ನಡೆಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ತನಿಖೆಗೆ ಆದೇಶಿಸಲಾಗಿದೆ.

ಮಧ್ಯರಾತ್ರಿಯಲ್ಲೂ ದೆಹಲಿಯ ಪಾರ್ಕ್‌ನಲ್ಲಿ ಜನ ಜಂಗುಳಿ; ರಾತ್ರಿ 12ರ ಬಳಿಕ ಸಾರ್ವಜನಿಕರಿಗೆ ಇಲ್ಲೇನು ಕೆಲಸ ಅಂತೀರಾ? ಈ ಸ್ಟೋರಿ ಓದಿ

ರಾತ್ರಿ 12 ಗಂಟೆಗೆ ದೆಹಲಿ ಪಾರ್ಕ್ ನೋಡಿ ಆಶ್ಚರ್ಯಗೊಂಡ ಮೆಕ್ಸಿಕೋ ಮಹಿಳೆ

Viral News: ದೆಹಲಿಯಲ್ಲಿ ತಾಪಮಾನ ಮಿತಿ ಮೀರಿದ್ದು, ವೃದ್ಧರು, ಮಕ್ಕಳು, ಪೋಷಕರು ಸೇರಿ ರಾತ್ರಿ ಕೂಡ ಪಾರ್ಕ್‌ನಲ್ಲೇ ಸಮಯ ಕಳೆಯುತ್ತಿದ್ದಾರೆ. ದೆಹಲಿಯಲ್ಲಿ ವಾಸಿಸುತ್ತಿರುವ ಮೆಕ್ಸಿಕೋದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಮಧ್ಯರಾತ್ರಿ ಸ್ಥಳೀಯ ಪಾರ್ಕ್‌ಗೆ ವಾಕಿಂಗ್ ಹೋದಾಗ ಕಂಡ ಈ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ತಾಪಮಾನವು 40°Cನಿಂದ 43°C ಆಸುಪಾಸಿನಲ್ಲಿದೆ. ಇದರಿಂದ ಮಧ್ಯರಾತ್ರಿಯೂ ಜನರು ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.

ಹಗಲು ಬಿಡಿ ರಾತ್ರಿ 2 ಗಂಟೆಗೂ ರಸ್ತೆಯಲ್ಲಿ ವಾಹನಗಳ ಸಾಲು: ಮತ್ತೆ ಸದ್ದು ಮಾಡುತ್ತಿದೆ ಬೆಂಗಳೂರು ಟ್ರಾಫಿಕ್‌

ಬೆಂಗಳೂರಿನಲ್ಲಿ ತಡರಾತ್ರಿಯೂ ಟ್ರಾಫಿಕ್ ಜಾಮ್‌: ನೆಟ್ಟಿಗರು ಕಿಡಿ

Bengaluru Traffic: ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆಯಲ್ಲೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಯಾದರೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ತಡರಾತ್ರಿಯಲ್ಲೂ ವಾಹನ ದಟ್ಟಣೆ ಏಕೆ ಉಂಟಾಗುತ್ತಿದೆ ಎಂಬುದರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಆಂಬ್ಯುಲೆನ್ಸ್‌ ಕೊರತೆ; ಸುಡು ಬಿಸಿಲಿನಲ್ಲೇ ಬಾಲಕನನ್ನು ಆಸ್ಪತ್ರೆಗೆ ಸ್ಟ್ರೆಚರ್‌ನಲ್ಲಿ ಸಾಗಿಸಿದ ಕುಟುಂಬಸ್ಥರು: ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆ ತೆರೆದಿಟ್ಟ ವಿಡಿಯೊ

ಸುಡು ಬಿಸಿಲಿನಲ್ಲೇ ಬಾಲಕನನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದ ಕುಟುಂಬಸ್ಥರು

Madhya Pradesh News: ಆಂಬ್ಯುಲೆನ್ಸ್‌ ವ್ಯವಸ್ಥೆ ಇಲ್ಲದ ಕಾರಣ 12 ವರ್ಷದ ಬಾಲಕನನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಮನೆಯವರೇ ಸ್ಟ್ರೆಚರ್‌ನಲ್ಲಿ ಮಲಗಿಸಿ ಸುಡು ಬಿಸಿಲಿನಲ್ಲೇ ಕರೆದುಕೊಂಡು ಹೋಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Loading...