ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಸೋತರೂ ಬುದ್ಧಿ ಕಲಿಯದ ದೀದಿ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್‌

ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ

Mamata Banerjee: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಿಎಂಸಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದಿದ್ದು, ವಿಡಿಯೊ ವೈರಲ್‌ ಆಗಿದೆ.

ಬಲೂನ್, ಹೂವುಗಳಿಂದ ರೈಲು ಬೋಗಿಯ ಅಲಂಕಾರ; ಹನಿಮೂನ್ ಸ್ಪಾಟ್‌ನಂತೆ ಬದಲಾದ ಎಸಿ ಕ್ಯಾಬಿನ್

ಹನಿಮೂನ್ ಸ್ಪಾಟ್ ಆಗಿ ಅಲಂಕೃತಗೊಂಡ ರೈಲು ಬೋಗಿ

Viral Video: ರೈಲಿನ ಎಸಿ ಕೋಚ್‌ ಅನ್ನು ದಂಪತಿ ಐಷಾರಾಮಿ ಹನಿಮೂನ್ ಸೆಟ್ ಅಪ್‌ನಂತೆ ಆಲಂಕರಿಸಿದ ದೃಶ್ಯವೊಂದು ವೈರಲ್ ಆಗಿದೆ. ವಿವಿಧ ಬಣ್ಣದ ಬಲೂನ್‌, ಹೂವಿನ ಹ್ಯಾಂಗಿಂಗ್‌, ಮೇಣದ ಬತ್ತಿ, ಗುಲಾಬಿ ದಳಗಳಿಂದ ಕೋಚ್ ಅನ್ನು ಅಲಂಕರಿಸಲಾಗಿದೆ‌. ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Viral Video: ''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಪ್ರವಾಹದ ನಡುವೆ ಪ್ರಾಣದ ಹಂಗು ತೊರೆದು ಕಾರ್‌ ಉಳಿಸಿಕೊಂಡ ಮಾಲಕ

ವ್ಯಕ್ತಿಯೊಬ್ಬರು ತೀವ್ರ ಪ್ರವಾಹದ ನಡುವೆ ಕಾರನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ ವಿಡಿಯೊ ವೈರಲ್ ಆಗುತ್ತಿದೆ. ಅತಿಯಾದ ನೀರಿನ ರಭಸದ ನಡುವೆ ತನ್ನ ಪ್ರಾಣವನ್ನು ಲೆಕ್ಕಿಸದೆ ಕಾರನ್ನು ರಕ್ಷಿಸಲು ಅವರು ಮುಂದಾಗಿದ್ದಾರೆ. ಈ ದೃಶ್ಯವು ಆತನಿಗಿದ್ದ ಕಾರಿನ ಮೇಲಿನ ಪ್ರೀತಿಯನ್ನು ಎದ್ದು ತೋರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಮಹಾರಾಷ್ಟ್ರದ ಭೀಕರ ಮಳೆ ನಡುವೆ ಸ್ಪೈಡರ್‌ಮ್ಯಾನ್ ಪ್ರತ್ಯಕ್ಷ; ಟ್ರಾಫಿಕ್ ನಿಯಂತ್ರಿಸಿ ವಾಹನ ಸವಾರರಿಗೆ ನೆರವು: ವಿಡಿಯೊ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಜನರ ನೆರವಿಗೆ ಧಾವಿಸಿದ ಸ್ಪೈಡರ್‌ಮ್ಯಾನ್

Viral Video: ಮಹಾರಾಷ್ಟ್ರದ ಭಿವಂಡಿಯಲ್ಲಿ ಭಾರಿ ಮಳೆಯಿಂದ ರಸ್ತೆ ಎಲ್ಲ ತೋಡಿನಂತಾಗಿದ್ದು, ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಹೀಗಾಗಿ ಶಾದಾಬ್ ಎಂಬ ಯುವಕ ಸ್ಪೈಡರ್‌ಮ್ಯಾನ್ ವೇಷ ಧರಿಸಿ ಟ್ರಾಫಿಕ್ ನಿಯಂತ್ರಿಸಿ, ರಸ್ತೆ ಮೇಲಿನ ನೀರು ತೆರವುಗೊಳಿಸಿ ಸಾರ್ವಜನಿಕರಿಗೆ ನೆರವಾಗಿದ್ದಾನೆ. ಆತನ ಸೇವೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಕೃತಿಯೊಂದಿಗೆ ಚೆಲ್ಲಾಟವಾಡೋ ಮುನ್ನ ಎಚ್ಚರ: ಜಲಪಾತದಲ್ಲಿ ದಿಢೀರ್ ಪ್ರವಾಹ ಹೆಚ್ಚಿ ಪ್ರವಾಸಿಗರು ಕೊಚ್ಚಿಹೋಗುವ ದೃಶ್ಯ ವೈರಲ್‌

ಜಲಪಾತದಲ್ಲಿ ದಿಢೀರ್ ಹೆಚ್ಚಿದ ನೀರಿನ ಹರಿವು! ಕೊಚ್ಚಿಹೋದ ಪ್ರವಾಸಿಗರು

Viral Video: ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಮೀಪದ ಮಾರ್ಕೊನಹಳ್ಳಿ ಅಣೆಕಟ್ಟಿನಲ್ಲಿ ನಡೆದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಂದ್ರಿ ಸರೋವರದ ಬಳಿಯ ಜಲಪಾತಕ್ಕೆ ತೆರಳಿದ್ದ ಪ್ರವಾಸಿಗರಿಗೆ ಕಹಿ ಅನುಭವ ಎದುರಾಗಿದೆ. ಜಲಪಾತದಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿದ್ದು ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಪರದಾಡಿದ ದೃಶ್ಯ ವೈರಲ್‌ ಆಗಿದೆ.

Tumkur Accident: ಲಾರಿ ಹರಿದರೂ ಪವಾಡಸದೃಶ ರೀತಿಯಲ್ಲಿ ವಿದ್ಯಾರ್ಥಿನಿ ಪಾರು; ಇಲ್ಲಿದೆ ಎದೆ ಝಲ್ ಎನಿಸೋ Video!

ಲಾರಿ ಹರಿದರೂ ಪವಾಡಸದೃಶ ರೀತಿಯಲ್ಲಿ ಪಾರಾದ ವಿದ್ಯಾರ್ಥಿನಿ; Video

ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಭೀಕರ ನಡೆದಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು,ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರಿ ಪ್ರವಾಹ, ರಸ್ತೆ ಸಂಪರ್ಕ ಕಡಿತ; ಮರದ ಬಾಗಿಲನ್ನೇ ಸ್ಟ್ರೆಚರ್‌ನಂತೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

ಬಾಗಿಲು ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

Maharashtra Flood: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಆಗಿ ಬಾಗಿಲನ್ನು ಗ್ರಾಮಸ್ಥರು ಬಳಸಿರುವ ಮನಮಿಡಿಯುವ ಘಟನೆ ನಡೆದಿದೆ. ಬೇರೆ ದಾರಿ ಕಾಣದೆ ಮನೆಯ ಬಾಗಿಲನ್ನೇ ತಾತ್ಕಾಲಿಕ ಸ್ಟ್ರೆಚರ್ ಆಗಿ ಪರಿವರ್ತಿಸಲಾಗಿದೆ.

Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ಅಪ್ರಾಪ್ತ ಬಾಲಕಿಗೆ ಕಿರುಕುಳ: ಕ್ರಮ ಕೈಗೊಳ್ಳಲು ನೆಟ್ಟಿಗರ ಆಗ್ರಹ

ಕಾನ್ಪುರದ ಬಾರ್ರಾ-2 ಪ್ರದೇಶದಲ್ಲಿ ನೆರೆಮನೆಯ ಯುವಕ ನಿರಂತರವಾಗಿ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿರುವ ಬಗ್ಗೆ ಬಾಲಕಿ ಆರೋಪಿಸಿದ್ದಾಳೆ. ವೈರಲ್ ಆದ ವೀಡಿಯೊದಲ್ಲಿ, ಬಾಲಕಿ ತನ್ನನ್ನು ಬರ್ರಾ-2 ನಿವಾಸಿ ಭೂಮಿ ಸಿಂಗ್ ರಾಥೋಡ್ ಎಂದು ಗುರುತಿಸಿಕೊಂಡಿದ್ದು ತಾನು ದಿನ ನಿತ್ಯವೂ ನಿರಂತರ ಭಯದಲ್ಲಿ ಬದುಕುವಂತೆ ಮಾಡಿದ ಹಲವಾರು ಘಟನೆಗಳನ್ನು ವಿವರಿಸಿದ್ದಾಳೆ..

ಕಾನೂನು ದುರುಪಯೋಗದ ಜ್ವಲಂತ ಉದಾಹರಣೆ: ಅರ್ಚಕರ ಮೇಲೆಯೇ ದೌರ್ಜನ್ಯ ಎಸಗಿ ಸುಳ್ಳು ಆರೋಪ ಹೊರಿಸಿದ ಮಹಿಳೆ

ಅರ್ಚಕನ ವಿರುದ್ಧ ಸುಳ್ಳು ಆರೋಪ ಹೊರಿಸಿ ಮಹಿಳೆಯ ಹೈಡ್ರಾಮ

Viral Video: ರಾಜಸ್ಥಾನದಲ್ಲಿ ಮಹಿಳೆಯೊಬ್ಬಳು ಅರ್ಚಕರ ಮೇಲೆ ದೌರ್ಜನ್ಯ ಎಸಗಿ ಸುಳ್ಳು ಆರೋಪ ಹೊರಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅರ್ಚಕರು ತನ್ನ ಬಟ್ಟೆಗಳನ್ನು ಹರಿದು ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸತ್ಯಾಸತ್ಯತೆ ಹೊರ ಬಿದ್ದಿದೆ.

ರೀಲ್ಸ್ ನೋಡುತ್ತಾ 100 ಕಿ.ಮೀ ವೇಗದಲ್ಲಿ ಬಸ್ ಚಾಲನೆ: ಪ್ರಯಾಣಿಕರ ಜೀವ ಜೊತೆ ಚೆಲ್ಲಾಟ ಆಡಿದ ಚಾಲಕನ ವಿರುದ್ಧ ಆಕ್ರೋಶ!

ರೀಲ್ಸ್ ನೋಡುತ್ತ 100 ಕಿ.ಮೀ ವೇಗದಲ್ಲಿ ಬಸ್ ಚಲಾಯಿಸಿದ ಚಾಲಕ

Viral Video: ಸಾರಿಗೆ ಇಲಾಖೆಯೂ ಟ್ರಾಫಿಕ್ ನಿಯಮಗಳನ್ನು ಕಠಿಣಗೊಳಿಸಿದ್ದರೂ ಕೆಲವರು ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವವರು ಇದ್ದಾರೆ. ಇದೀಗ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ದೆಹಲಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್‌ ಚಾಲಕನು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. ಮೊಬೈಲ್ ನೋಡುತ್ತಾ ಅತೀ ವೇಗದಲ್ಲಿ ಬಸ್ ಚಲಾಯಿಸಿದ್ದು ಇದರ ವಿಡಿಯೊ ನೋಡಿ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬಂದಿದೆ.

Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ಮದುವೆ ಮಂಟಪಕ್ಕೆ ನುಗ್ಗಿದ ನೀರು: ಮದುಮಗಳನ್ನು ಎತ್ತಿಕೊಂಡ ವರ

Viral Video: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಭಾರಿ ಮಳೆಯಿಂದಾಗಿ ಕಲ್ಯಾಣ ಮಂಟಪ ಜಲಾವೃತಗೊಂಡ ಹಿನ್ನೆಲೆಯಲ್ಲಿ ವಧುವನ್ನು ವರ ಎತ್ತಿಕೊಂಡು ಓಡಾಡಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಲೈಕ್, ಕಮೆಂಟ್ ಮಾಡಿ ವಧು- ವರರಿಗೆ ಶುಭ ಹಾರೈಸಿದ್ದಾರೆ.

ದೇವರ ನಾಡನ್ನು ನಡುಗಿಸಿದ ಮತ್ತೊಂದು ಭೂಕುಸಿತ; ಟ್ಯಾಂಕರನ್ನು 10 ಅಡಿ ತಳ್ಳಿದ ಭೀಕರ ಪ್ರವಾಹ: ಎದೆ ಝಲ್ಲೆನ್ನಿಸುವ ವಿಡಿಯೊ ಇಲ್ಲಿದೆ

ವಯನಾಡಿನ ಭೂಕುಸಿತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Wayanad Landslide: ಕೇರಳಂನ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಎದೆ ಝಲ್ಲೆನ್ನಿಸುವ ಭೂಕುಸಿತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹಿಳೆಯರು ಸೇರಿ ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ.

Viral Video: ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ಎಮರ್ಜೆನ್ಸಿ ವೇಳೆ ನೆರವಾದ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್

Viral News: ಆನ್‌ಲೈನ್ ಆ್ಯಪ್ ಕೇವಲ ವಸ್ತುಗಳನ್ನು ತಲುಪಿಸುವುದು ಮಾತ್ರವಲ್ಲ, ತುರ್ತು ವೈದ್ಯಕೀಯ ನೆರವನ್ನು ಕೂಡ ನೀಡುತ್ತಿದೆ. ಹೌದು, ವೈದ್ಯಕೀಯ ಸೇವೆಯನ್ನು ಕ್ವಿಕ್ ಕಾಮರ್ಸ್ ಸಂಸ್ಥೆ ಬ್ಲಿಂಕ್‌ಇಟ್‌ ಆರಂಭಿಸಿದೆ. ಬ್ಲಿಂಕ್‌ಇಟ್‌ನ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಜನರು ಬಳಸುತ್ತಿದ್ದಾರೆ. ಇದೇ ಆ್ಯಪ್‌ನ ನೆರವಿನಿಂದ ವೃದ್ಧೆಯೊಬ್ಬರ ಪ್ರಾಣ ಉಳಿದಿದ್ದು, ಈ ವಿಚಾರ ವೈರಲ್‌ ಆಗಿದೆ.

Mallalli Falls: ರೀಲ್ಸ್‌ಗಾಗಿ ದುಸ್ಸಾಹಸ; ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಪಾಯಕ್ಕೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ, Video

ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಪಾಯಕ್ಕೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ

ಕೊಡಗಿನ ಮಲ್ಲಳ್ಳಿ ಫಾಲ್ಸ್‌ ನೋಡಲು ಸ್ನೇಹಿತರೊಂದಿಗೆ ಬಂದಿದ್ದ ವಿದ್ಯಾರ್ಥಿಗಳು, ಸುರಕ್ಷತಾ ಬೇಲಿಯನ್ನು ಲೆಕ್ಕಿಸದೆ ಹೊಳೆಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ. ಅವರನ್ನು ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.

ಮಗುವಿನ ಮೇಲೆ ಪೋಷಕರ  ಕ್ರೌರ್ಯ: ಎತ್ತರ ಬೆಳೆಯಲೆಂದು ಬಾಗಿಲಿಗೆ ಕಟ್ಟಿಹಾಕಿ ಹಿಂಸೆ; ವೈರಲ್‌ ವಿಡಿಯೊ ಇಲ್ಲಿದೆ

ಮಗುವಿನ ಎತ್ತರ ಹೆಚ್ಚಿಸಲು ಬಾಗಿಲಿಗೆ ಕಟ್ಟಿಹಾಕಿದ ದಂಪತಿ: ವಿಡಿಯೊ ವೈರಲ್

Viral Video: ಎತ್ತರ ಬೆಳೆಯಲೆಂದು ಮಗುವನ್ನು ಪೋಷಕರೇ ಚಿತ್ರಹಿಂಸೆಗೆ ಒಳಪಡಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ಬಾಗಿಲಿನ ಚೌಕಟ್ಟಿಗೆ ಕೈ ಕಟ್ಟಿ ಹಾಕಿ ನೇತುಹಾಕಲಾಗಿದೆ. ಹಿಂಸೆ ತಾಳಲಾರದೆ ಮಗು ಅಳುತ್ತಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ.

ಮಹಾರಾಷ್ಟ್ರದ ಪ್ರವಾಹದ ನಡುವೆಯೂ ಮರೆಯಾಗದ ಮಾನವೀಯತೆ; ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್‌ಗೆ ಬಿಗ್‌ ಸೆಲ್ಯೂಟ್‌ ಹೊಡೆದ ನೆಟ್ಟಿಗರು

ಪ್ರವಾಹದಲ್ಲಿ ಸಿಲುಕಿದ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್

Police Officer Carries Elderly Woman: ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ 72 ವರ್ಷದ ವೃದ್ಧೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸರಸಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌; ರಸ್ತೆ ಮಧ್ಯೆಯೇ ಕಾರ್ ಅಡ್ಡಗಟ್ಟಿ ಕುಟುಂಬದ ಮೇಲೆ ಅಪರಿಚಿತರಿಂದ ಹಲ್ಲೆ

ಬೆಂಗಳೂ ಕಾರಿನಲ್ಲಿ ಅಡ್ಡಗಟ್ಟಿ ಹಲ್ಲೆ ಎಸಗಿದ ದುಷ್ಕರ್ಮಿಗಳು: ವಿಡಿಯೊ ವೈರಲ್

Viral Video: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಅಪರಿಚಿತ ಪುರುಷರ ಗುಂಪೊಂದು ಹಲ್ಲೆ ಎಸಗಿರುವ ಘಟನೆಯೊಂದು ನಡೆದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಈ ಭೀಕರ ಕೃತ್ಯ ನಡೆದಿದೆ‌. ಹಿಂದೆ ಚಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೀರು ಬಿಟ್ಟು ರಸ್ತೆಗೆ ಬಂದ ದೈತ್ಯ ಮೊಸಳೆ; ಜನವಸತಿ ಪ್ರದೇಶದಲ್ಲಿನ ಓಡಾಟದ ಭಯಾನಕ ವಿಡಿಯೊ ವೈರಲ್‌

ಮುಂಬೈಯ ಜನಸಂದಣಿ ಪ್ರದೇಶದಲ್ಲೇ ಮೊಸಳೆಯ ಓಡಾಟ: ಭಯಾನಕ ವಿಡಿಯೊ

Viral Video: ಮುಂಬೈನ ಪವಾಯಿ NITIE ಬಳಿ ದೈತ್ಯಕಾರದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಸಳೆ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ದನ ಕಾಯುವವನ ಮೇಲೆ ಏಕಾ ಏಕಿ ದಾಳಿ ಮಾಡಿದ ಸಿಂಹ: ಕಲ್ಲು ತೂರಿ ಜೀವ ಉಳಿಸಿದ ಗ್ರಾಮಸ್ಥರು!

ಗುಜರಾತ್‌ನಲ್ಲಿ ವ್ಯಕ್ತಿಯ ಮೇಲೆ ಸಿಂಹ ದಾಳಿ: ಭಯಾನಕ ವಿಡಿಯೊ ವೈರಲ್

Viral Video: ಗುಜರಾತ್ ನ ಗರ್ಜಿಯಾ ಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು ದನಗಾಹಿ ಯೊಬ್ಬನ ಮೇಲೆ ಸಿಂಹವೊಂದು ದಾಳಿ ಮಾಡಿದ್ದು ವ್ಯಕ್ತಿಗೆ ತೀವ್ರ ಗಾಯಗಳಾಗಿವೆ‌. ಕೂಡಲೇ ಎಚ್ಚೆತ್ತು ಕೊಂಡ ಗ್ರಾಮಸ್ಥರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಗ್ರಾಮಸ್ಥರ ಸುರಕ್ಷತೆ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

21ನೇ ಶತಮಾನದಲ್ಲೂ ಧಾರುಣ ಸ್ಥಿತಿ; ವಾಹನ ಸಂಚಾರಕ್ಕೆ ರಸ್ತೆ ಇಲ್ಲದೆ ಮಂಚದ ಮೇಲೆ ಮಲಗಿಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು!

ರಸ್ತೆ ಸಮಸ್ಯೆಯಿಂದ ಅರ್ಧ ದಾರಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

Viral Video; ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಸ್ತೆ ಕೊರತೆ ಕಾರಣದಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಸಿಗದೆ ದಾರಿ ಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಾಗರಿಕ ಪ್ರಜ್ಞೆಯ ಕೊರತೆ: ವಂದೇ ಭಾರತ್ ರೈಲಿನಲ್ಲಿ ಫುಲ್‌ ವಾಲ್ಯೂಮ್‌ನಲ್ಲಿ ವಿಡಿಯೊ ನೋಡುವ ʼಮಹಾನುಭಾವರುʼ

ವಂದೇ ಭಾರತ್ ರೈಲಿನಲ್ಲಿ ಸ್ಪೀಕರ್ ಹಾಕಿ ಗದ್ದಲ: ಪ್ರಯಾಣಿಕರ ಆಕ್ರೋಶ

Viral Video: ಸಾರ್ವಜನಿಕವಾಗಿ ಶಿಸ್ತು ಕಾಪಾಡದಿರುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು, ಜನ ಸಾಮಾನ್ಯರಿಗೆ ತೊಂದರೆ ಎಸಗುವುದು ಹೀಗೆ ನಾಗರಿಕ ಪ್ರಜ್ಞೆ ಕೊರತೆಯ ಹಲವು ವಿಡಿಯೊಗಳು ವೈರಲ್ ಆಗುತ್ತಿವೆ. ಇದೀಗ ವಂದೇ ಭಾರತ್ ರೈಲಿನಲ್ಲಿ ದೊಡ್ಡ ವಾಲ್ಯೂಮ್‌ ಮೂಲಕ ರೀಲ್ಸ್ ನೋಡುವವರ ವಿರುದ್ಧ ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಯಶಸ್ಸು ಎಂದರೆ ಇದು: ಒಂದು ಕಾಲದಲ್ಲಿ ಕಾಲೇಜ್‌ ಫೀಸ್ ಕಟ್ಟಲೂ ಹಣವಿಲ್ಲದೆ ಅಮ್ಮನ ಬಳೆ ಮಾರಾಟ ಮಾಡಬೇಕಾದ ಸ್ಥಿತಿ; ಇಂದು 1.9 ಕೋಟಿ ರುಪಾಯಿ ಸಂಬಳ!

ಕಾಲೇಜ್‌ ಫೀಸ್‌ಗಾಗಿ ತಾಯಿಯ ಚಿನ್ನ ಮಾರಾಟ; ಮಗನ ಭಾವನಾತ್ಮಕ ಪೋಸ್ಟ್

Viral News: ಕೆಲವರು ಹುಟ್ಟಿನಿಂದಲೇ ಶ್ರಿಮಂತರಾಗಿರುವುದಿಲ್ಲ. ಬಡತನವಿದ್ದರೂ ಶ್ರಮಪಟ್ಟು ಸಾಧನೆ ಮಾಡಿದ ಅನೇಕರಿದ್ದಾರೆ. ಇದೀಗ ಬೆಂಗಳೂರಿನ ಯುವಕನೊಬ್ಬ ಮೈಕ್ರೋಸಾಫ್ಟ್‌ನಲ್ಲಿ 1.9 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾನೆ. ಈ ಯಶಸ್ಸಿನ ಹಿಂದೆ ಅಡಗಿದ ನೋವಿನ ಘಟನೆಯೊಂದನ್ನು ಶೇರ್ ಮಾಡಿದ್ದಾನೆ. ತನ್ನ ಇಂದಿನ ಸಾಧನೆಗೆ ಬೆಂಬಲ ನೀಡಿದವರು ಪೋಷಕರು, ಅವರ ತ್ಯಾಗವನ್ನು ಮರೆಯುವಂತಿಲ್ಲ ಎಂದು ಈ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.

Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು

ಗಾಯಗೊಂಡಂತೆ ನಟಿಸಿ ಐಫೋನ್ ಕದ್ದ ಕಳ್ಳರು: ವಿಡಿಯೊ ವೈರಲ್‌

Viral News: ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೇ ಕೇಡು ಬಗೆಯುವ ಅನೇಕರಿದ್ದಾರೆ. ತೆಲಂಗಾಣದಸ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಇಂತಹದ್ದೇ ಘಟನೆ ಸದ್ಯ ಅನೇಕರ ನಿದ್ದೆಗೆಡಿಸಿದೆ. ಸಹಾಯ ಮಾಡೋದೇ ತಪ್ಪಾ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಪಘಾತದ ನಾಟಕವಾಡಿ ಸಹಾಯ ಮಾಡಿದ ವ್ಯಕ್ತಿಯಿಂದಲೇ ದುಬಾರಿ ಮೊತ್ತದ ಮೊಬೈಲ್ ಕದ್ದ ಘಟನೆಯೊಂದು ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ.

ಹಳಿಯಲ್ಲಿ ತಿರುಗಾಡುತ್ತಿದ್ದ ಬೀದಿನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್; ಮಾನವೀಯತೆಗೆ ನೆಟ್ಟಿಗರು ಫಿದಾ!

ಹಳಿಯಲ್ಲಿದ್ದ ಬೀದಿ ನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್!

Viral Video: ಲೋಕಲ್ ಟ್ರೈನ್ ನ ಪೈಲೆಟ್ ವೊಬ್ಬರು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ರೈಲು ಪ್ಲಾಟ್‌ಫಾರ್ಮ್ ಸಮೀಪಿಸುತ್ತಿದ್ದಾಗ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಹಳಿಗಳ ಮೇಲೆ ಅಲೆದಾಡುತ್ತಿದ್ದು ಇದನ್ನು ಗಮನಿಸಿದ ಲೋಕೋ ಪೈಲಟ್ ಟ್ರೈನ್ ನಿಲ್ಲಿಸಿ ನಾಯಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲೊಕೊ ಪೈಲಟ್ ನ ಕೆಲಸಕ್ಕೆ ಎಲ್ಲರು ಫಿದಾ ಆಗಿದ್ದಾರೆ..

Loading...