ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ʼʼಕಾಯಿಲೆ ಹರಡಲು ಇದೇ ರಹದಾರಿʼʼ: ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರನ ವಿಡಿಯೊ ವೈರಲ್

ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರ; ವಿಡಿಯೊ ವೈರಲ್‌

Vendor Washes Fruits in Drain Water: ಬೀದಿಬದಿ ಮಾರಾಟಗಾರನೊಬ್ಬ ಚರಂಡಿಯ ಕೊಳಕು ನೀರಿನಲ್ಲಿ ಹಣ್ಣು ತೊಳೆಯುತ್ತಿರುವ ವಿಡಿಯೊವೊಂದು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಹಣ್ಣುಗಳನ್ನು ಜೋಡಿಸುವ ಮೊದಲು ಚರಂಡಿ ನೀರಿನಲ್ಲಿ ತೊಳೆಯುತ್ತಿರುವುನ್ನು ವಿಡಿಯೊದಲ್ಲಿ ಕಾಣಬಹುದು.

ಆಸ್ತಿ ಮಾರಿ ಓದಿಸಿದ ಪತಿಗೇ ಕೈಕೊಟ್ಟ ಶಿಕ್ಷಕಿ; ಪತ್ನಿಯ ಅಕ್ರಮ ಸಂಬಂಧ ಹೊರಬರುತ್ತಿದ್ದಂತೆ ಗೋಳಾಡಿದ ಅಮಾಯಕನ ಸ್ಥಿತಿಗೆ ಮರುಗಿದ ಸ್ಥಳೀಯರು

ಶಿಕ್ಷಕಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪತಿ ಹೇಳಿದ್ದೇನು?

Husband Accuses Teacher: ಬಿಪಿಎಸ್‌ಸಿ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾದ ನಂತರ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿಯೊಬ್ಬರು ಆರೋಪಿಸಿದ್ದಾರೆ. ಆಕೆಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರಿದ್ದಾಗಿ ಗೋಳಾಡಿದ್ದಾರೆ. ಪತಿ ಮತ್ತು ಪೊಲೀಸರೊಂದಿಗೆ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ವಾಗ್ವಾದ ನಡೆಸಿದ್ದಾಳೆ. ಇದರ ವಿಡಿಯೊ ವೈರಲ್ ಆಗಿದೆ.

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ; ವಿಡಿಯೊ ವೈರಲ್‌

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ

IPL 2026 Qualifier 2: ಕ್ವಾಲಿಫೈಯರ್‌-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ವೈಭವ್‌ ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್‌ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2026ರ ಫೈನಲ್‌ಗೆರಲು ವಿಫಲವಾದ ಬೇಸರದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ತಂಡದ ಸೋಲು ಕಂಡು ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

Sooryavanshi breaks down: ನಿರಾಸೆಗೊಂಡ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ಹಲವಾರು ತಂಡದ ಸದಸ್ಯರು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೂರ್ಯವಂಶಿ ಬಳಿಗೆ ನಡೆದವರಲ್ಲಿ ರವೀಂದ್ರ ಜಡೇಜಾ ಕೂಡ ಇದ್ದರು, ತಂಡದ ವ್ಯವಸ್ಥಾಪಕಿ ರೋಮಿ ಭಿಂದರ್ ಸೇರಿದಂತೆ ಸಹಾಯಕ ಸಿಬ್ಬಂದಿ ಸದಸ್ಯರು ಸಹ ಅವರನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿತು.

ರೈಲಿನ ಶೌಚಾಲಯದಲ್ಲಿ ಊಟದ ತಟ್ಟೆಗಳನ್ನು ತೊಳೆದ ಸಿಬ್ಬಂದಿ: ಪ್ರಯಾಣಿಕರ ಸುರಕ್ಷತೆ ಬಗ್ಗೆ ನೆಟ್ಟಿಗರ ಆಕ್ರೋಶ!

ರೈಲಿನ ಶೌಚಾಲಯದೊಳಗೆ ಪ್ಲೇಟ್‌ಗಳನ್ನು ತೊಳೆದ ಸಿಬ್ಬಂದಿ: ವಿಡಿಯೊ ವೈರಲ್

Viral Video: ರೈಲಿನ ಶೌಚಾಲಯದೊಳಗೆ ಸಿಬ್ಬಂದಿಯೊಬ್ಬ ಊಟದ ತಟ್ಟೆಯನ್ನಿಟ್ಟು ತೊಳೆದ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಂಬೈ-ಎರ್ನಾಕುಲಂ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಸಿಬ್ಬಂದಿಯೂ ರೈಲಿನ ಶೌಚಾಲಯ ಪ್ರದೇಶ ದೊಳಗೆ ತಟ್ಟೆಗಳನ್ನು ಇಟ್ಟು ತೊಳೆಯುತ್ತಿದ್ದಾನೆ.

ಬಕ್ರೀದ್‌ಗೆ  ಬಲಿ ನಿಲ್ಲಿಸಿ ಮಾನವೀಯತೆ ಮೆರೆದ ಕುಟುಂಬ; ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ!

ಬಕ್ರೀದ್‌ಗೆ ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ ಮಾಡಿದ ಮುಸ್ಲಿಂ ಕುಟುಂಬ

Viral News: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿ ಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆಗಳನ್ನು ನೀಡಿದ್ದಾರೆ..

ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಮುಕ್ತವಾಗಿ ತಿರುಗುತ್ತಿದ್ದಾನೆ ಪಾತಕಿ! ಕಾರಣವೇನು?

ಮಹಾರಾಷ್ಟ್ರದಲ್ಲಿ ಯುವತಿ ಮೇಲೆ ಭೀಕರ ಹಲ್ಲೆ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

Viral Video: ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ...

ಸ್ನೇಹಕ್ಕೆ ಧರ್ಮವಿಲ್ಲ: ಭಾರತ- ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ವೃದ್ಧ ಸ್ನೇಹಿತರು

ಭಾರತ-ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ಸ್ನೇಹಿತರು

Viral News: 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊವೊಂದು ವೈರಲ್ ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ...ಯಾವುದೇ ಗಡಿ ವಿಭಜನೆಗಳಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ..

ನಡುರಸ್ತೆಯಲ್ಲೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ; ಹೈಡ್ರಾಮಾದ ವಿಡಿಯೊ ವೈರಲ್!

ಮಧ್ಯ ರಸ್ತೆಯಲ್ಲೇ ಗಂಡನ ಮೇಲೆ ಹಲ್ಲೆ ನಡೆಸಿದ ಪತ್ನಿ: ವಿಡಿಯೊ ವೈರಲ್

Viral Video: ಇದೀಗ ದಂಪತಿಗಳ ನಡುವಿನ ಖಾಸಗಿ ವಿಚಾರದ ಜಗಳವೊಂದು ಬೀದಿಗೆ ಬಂದ ಘಟನೆ ಯೊಂದು ನಡೆದಿದೆ. ಪತ್ನಿಯೂ ಸಾರ್ವಜನಿಕರ ಮುಂದೆಯೇ ಪತಿಗೆ ಮನ ಬಂದಂತೆ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ.

ಹಾಸ್ಟೆಲ್‌ನಲ್ಲಿ ಕಳಪೆ ಆಹಾರ: ಚಿಕನ್ ಕರಿಯಲ್ಲಿ ಸತ್ತ ಹಲ್ಲಿ ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು

ಹಾಸ್ಟೆಲ್ ಮೆಸ್‌ನ ಚಿಕನ್‌ ಕರಿಯಲ್ಲಿ ಹಲ್ಲಿ ಪತ್ತೆ

Viral Video: ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು, ಸುರಕ್ಷತೆ ನಿಯಮಗಳನ್ನು ಉಲ್ಲಂಘನೆ ಮಾಡುವುದು ಹೀಗೆ ದಿನಕ್ಕೊಂದು ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಇದೀಗ ಹಾಸ್ಟೆಲ್ ಒಂದರಲ್ಲಿ ತಯಾರಿಸಿದ ಕರಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ದಾಲ್ಮಿಯಾ ಹಾಸ್ಟೆಲ್‌ನಲ್ಲಿ ಈ ದೃಶ್ಯ ಕಂಡು ಬಂದಿದೆ.

ನಮ್ಮದೇ ಅತ್ಯಂತ ಕೊಳಕು ದೇಶ: ಶ್ರೀಲಂಕಾದ ಶುಚಿತ್ವದೊಂದಿಗೆ ಭಾರತದ ಸ್ಥಿತಿ ಹೋಲಿಸಿದ ಪ್ರವಾಸಿ ವ್ಲಾಗರ್

ಭಾರತವೇ ಕೊಳಕು ದೇಶ: ಶ್ರೀಲಂಕಾದ ಶಿಸ್ತಿನ ಬಗ್ಗೆ ವ್ಲಾಗರ್ ಹೇಳಿದ್ದೇನು?

Viral Video: ಇತ್ತೀಚೆಗೆ ಭಾರತೀಯರು ನಾಗರಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ತಾಜ್ಯವನ್ನು ಎಸೆದು ಸುಂದರ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಪ್ರಸಿದ್ಧ ಪ್ರವಾಸಿ ವ್ಲಾಗರ್ ಹಾಗೂ ನಟಿ ಶೆನಾಜ್ ಟ್ರೆಜರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಯೊಂದು ಶೇರ್ ಮಾಡಿದ್ದು, ಭಾರತವೇ ಅತ್ಯಂತ ಕೊಳಕು ದೇಶ ಎಂದು ಹೇಳಿಕೊಂಡಿದ್ದಾರೆ.

ಈ ಟಾಕ್ಸಿ ಹತ್ತಿದ್ರೆ ಸಾಕು ಥಂಡಾ ಥಂಡಾ ಕೂಲ್‌, ಕೂಲ್‌; ಚಾಲಕನ ಐಡಿಯಾಕ್ಕೆ ನೆಟ್ಟಿಗರು ಫಿದಾ

ಚಾಲಕನ ಕೂಲಿಂಗ್ ಎಸಿ ಟ್ರಿಕ್ಸ್ ಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

Viral Video: ಈ ಬಿಸಿಲಿಗೆ ಹೈರಾಣಾದ ಟ್ಯಾಕ್ಸಿ ಚಾಲಕನೊಬ್ಬ ತನ್ನ ವಾಹನವನ್ನು ಕೂಲ್ ಆಗಿ ಇರಿಸಲು ಹೊಸ ಪ್ಲಾನ್ ಮಾಡಿಕೊಂಡಿದ್ದಾನೆ‌. ಟ್ಯಾಕ್ಸಿ ಒಳಗಡೆ ಶಿಮ್ಲಾ ಮಾದರಿಯ ಕೂಲ್ ವಾತಾ ವರಣ ಸೃಷ್ಟಿ ಮಾಡಿದ್ದು ಚಾಲಕನ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಚಾಲಕನು ತನ್ನ ಕಾರಿನ ಎಸಿ ಕಂಡೆನ್ಸರ್ ಮೇಲೆ ನೀರು ಚಿಮುಕಿಸುವ ಮೂಲಕ ಎಸಿ ಕೂಲ್ ಆಗುವುದನ್ನು ದುಪ್ಪಟ್ಟು ಮಾಡಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬಿಲ್ ಕಟ್ಟೋರು ಯಾರು?: ರೆಸ್ಟೋರೆಂಟ್‌ ನಲ್ಲಿ ಯುವಕರ ಕಿತ್ತಾಟದಿಂದ ಗ್ಲಾಸ್ - ಪ್ಲೇಟ್‌ಗಳೆಲ್ಲ ಪುಡಿ ಪುಡಿ! ವಿಡಿಯೋ ನೋಡಿ

ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಯುವಕರ ಕಿತ್ತಾಟ: ವಿಡಿಯೊ ವೈರಲ್

Viral Video: ಪಾರ್ಟಿ ಎಲ್ಲ ಮುಗಿಸಿ ಬಿಲ್ ಬಂದಾಗ ತಾನೇ ಬಿಲ್ ಕೊಡ್ತೀನಿ ಅಂತ ಪ್ರೀತಿಯಿಂದ ಜಗಳ ಮಾಡಿ ಹೊರಟು ಹೋಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಬಿಲ್ ಪಾವತಿ ಮಾಡುವ ವಿಚಾರವೇ ತಾರಕಕ್ಕೆ ಹೋಗಿರುವ ಘಟನೆ ನಡೆದಿದೆ. ಪುರುಷರ ಗುಂಪೊಂದು ಆಕ್ರಮಣಕಾರಿ ಯಾಗಿ ಗುದ್ದುವುದು, ತಳ್ಳುವುದು ಮತ್ತು ಪರಸ್ಪರ ಹೊಡೆದಾಡಿ ಕೊಳ್ಳುತ್ತಿರುವ ವಿಡಿಯೊಯೊಂದು ವೈರಲ್ ಆಗಿದೆ...

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿದ್ರೆ ಶಾಕ್‌ ಆಗ್ತೀರಿ : 3BHK ಫ್ಲ್ಯಾಟ್‌ಗೆ 1.1 ಲಕ್ಷ ಮೊತ್ತ!

ಬೆಂಗಳೂರಿನ ಫ್ಲಾಟ್ ಗೆ 1.1 ಲಕ್ಷ ಬಾಡಿಗೆ: ನೆಟ್ಟಿಗರು ಕಿಡಿ

Viral News: ಬೆಂಗಳೂರಿನಲ್ಲಿ ಬಾಡಿಗೆ ದರಗಳು ದುಪ್ಪಟ್ಟು ಆಗಿವೆ‌. ಇದೀಗ ಐಟಿ ಉದ್ಯೋಗಿಯೊಬ್ಬರು ಇಂದಿರಾನಗರ ಮತ್ತು ಡೊಮ್ಲೂರ್ ಬಳಿಯ ಪ್ರತಿಷ್ಠಿತ ಎಂಬಸಿ ಗಾಲ್ಫ್ ಲಿಂಕ್ಸ್ (EGL) ಬಿಸಿನೆಸ್ ಪಾರ್ಕ್ ಹತ್ತಿರ ಇರುವ 3BHK ಫ್ಲ್ಯಾಟ್‌ ಒಂದಕ್ಕೆ ಬರೋಬ್ಬರಿ 1.1 ಲಕ್ಷ ಮಾಸಿಕ ಬಾಡಿಗೆ ಪಾವತಿ ಮಾಡುತ್ತಿರುವ ವಿಚಾರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಬಕ್ರೀದ್‌ಗೆ ಬಲಿ ಕೊಡದೆ ಬಾಂಗ್ಲಾದೇಶ ಮೃಗಾಲಯಕ್ಕೆ "ಡೊನಾಲ್ಡ್ ಟ್ರಂಪ್" ಸ್ಥಳಾಂತರ!

ಬಕ್ರೀದ್‌ಗೆ ಬಲಿ ಕೊಡದೆ ಮೃಗಾಲಯಕ್ಕೆ ‘ಡೊನಾಲ್ಡ್ ಟ್ರಂಪ್ ಎಮ್ಮೆ’ ಶಿಫ್ಟ್

‘Donald Trump buffalo’ shifted to zoo: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಎಮ್ಮೆಯನ್ನು ಬಕ್ರೀದ್‌ಗೆ ಮುನ್ನಾದಿನದಂದು ರಕ್ಷಿಸಿ, ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಜನರ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶಿಸಿದರು.

ಕೆಫೆಯೊಳಗೆ ಕೇಸರಿ ಬಟ್ಟೆ ಧರಿಸಿ ಬಂದ ನಾರಿಯರು ಮಾಡಿದ್ದೇನು? ಪಾರ್ಟಿ ಆಚರಣೆ ಹೀಗೂ ಇರುತ್ತಾ ಎಂದ ನೆಟ್ಟಿಗರು

ಕೆಫೆಯಲ್ಲಿ ಮಹಿಳೆಯರ 'ಜೈ ಶ್ರೀ ರಾಮ್' ಥೀಮ್' ಆಚರಣೆ: ವಿಡಿಯೊ ವೈರಲ್

Viral Video: ಯುವತಿಯರ ಫ್ರೆಂಡ್ಸ್ ಪಾರ್ಟಿ ಎಂದಾಗ ರುಚಿಕರವಾದ ಆಹಾರ,ಹರಟೆ, ಡ್ಯಾನ್ಸ್, ಮೋಜು- ಮಸ್ತಿಗಳೇ ನೆನಪು ಆಗುತ್ತವೆ‌. ಆದರೆ ಇಲ್ಲೊಂದು ಯುವತಿಯರ ಗುಂಪು ಇದನ್ನೆಲ್ಲ ಬದಿಗೊತ್ತಿ ಜೈ ಶ್ರೀ ರಾಮ್ ಥೀಮ್ ಇಟ್ಟು ಪಾರ್ಟಿ ನಡೆಸಿದ್ದಾರೆ. ಕೋಲ್ಕತ್ತಾದ ಕೆಫೆಯೊಂದಕ್ಕೆ ಕೇಸರಿ ಉಡುಪಿನಲ್ಲಿ ಬಂದ ಮಹಿಳೆಯರ ಗುಂಪು ಕೆಫೆಯನ್ನು ಕೇಸರಿಮಯ ವಾತಾವರಣವನ್ನು ಸೃಷ್ಟಿ ಮಾಡಿದೆ..

ರವೀಂದ್ರ ಜಡೇಜಾ ಐಕಾನಿಕ್‌ ಪುಷ್ಪ ಶೈಲಿಯ ಸಂಭ್ರಮಾಚರಣೆಗೆ ಫಿದಾ ಆದ ಪ್ರೇಕ್ಷಕರು

ಜಡೇಜಾ 'ಐಕಾನಿಕ್‌ ಪುಷ್ಪ' ಶೈಲಿಯ ಸಂಭ್ರಮಾಚರಣೆಗೆ ನೆಟ್ಟಿಗರು ಫಿದಾ

Ravindra Jadeja Pushpa celebration: ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್‌ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ. ಗುಜರಾತ್‌ ತಂಡ ಮಂಗಳವಾರ ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು.

RR vs SRH: ಎಲಿಮಿನೇಟರ್‌ನಲ್ಲಿ ಹೈದರಾಬಾದ್‌ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ಎಲಿಮಿನೇಟರ್‌ನಲ್ಲಿ ತಂಡ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಕಾವ್ಯಾ ಮಾರನ್​

Frustrated Kavya Maran: ಕಾವ್ಯ, ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಪ್ರತಿ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು: ಹಿಂದೂಗಳ ಭಾವನೆಗೆ ಧಕ್ಕೆ ತಂದವರ ಬೆವರಿಳಿಸಿದ ಯುವಕ

ದೇವಸ್ಥಾನ ಬಳಿ ಶೂ ಧರಿಸಿ ಕುಳಿತ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡ ಯುವಕ

Viral Video: ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುವುದು, ಧಾರ್ಮಿಕ ಕ್ಷೇತ್ರದಲ್ಲಿ ಅಶಿಸ್ತಿನಿಂದ ವರ್ತಿಸುವ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಾಖಂಡದ ಧಾರ್ಮಿಕ ಕ್ಷೇತ್ರವಾದ ಚಂದ್ರಶಿಲಾ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಶೂ ಧರಿಸಿ ಕುಳಿತಿರುವ ವಿಡಿಯೊವೊಂದು ವೈರಲ್ ಆಗಿದೆ.

ಪುಣೆ ಪೋರ್ಷೆ ಪ್ರಕರಣ: ಜಾಮೀನಿನ ನಂತರ ಆರೋಪಿಗಳ ಸಂಭ್ರಮಾಚರಣೆ? ವಿಡಿಯೊದ ಅಸಲಿಯತ್ತೇನು?

ಜಾಮೀನಿನ ನಂತರ ಭರ್ಜರಿ ಪಾರ್ಟಿ! ವಿಡಿಯೊದ ಸತ್ಯಾಂಶ ಏನು?

Viral Video: ಮಹಾರಾಷ್ಟ್ರದ ಪುಣೆ ಪೋರ್ಷೆ ಕಾರು ಭೀಕರ ಅಪಘಾತ ಪ್ರಕರಣದ ಪ್ರಮುಖ ಆರೋಪಿ, ಬಿಲ್ಡರ್ ವಿಶಾಲ್ ಅಗರ್ವಾಲ್‌ನ ಪುತ್ರನಿಗೆ ಜಾಮೀನು ಸಿಕ್ಕಿದೆ. ಆದರೆ ಬಿಡುಗಡೆ ಆದ ಕೆಲವೇ ದಿನದಲ್ಲಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾನೆ. ಜಾಮೀನು ಪಡೆದು ರಿಲೀಸ್ ಆಗಿರುವ ವಿಶಾಲ್ ಅಗರ್ವಾಲ್, ಕುಟುಂಬದೊಂದಿಗೆ ಸೆಲೆಬ್ರೇಟ್‌ ಮಾಡಿದ್ದಾನೆ. ನೋಟುಗಳ ಹಾರವನ್ನು ಧರಿಸಿ ಸಂಭ್ರಮಿಸಿದ್ದಾನೆ ಎಂದು ಹೇಳಲಾಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

ರೈಲಿನಲ್ಲಿ ಸಮೋಸ ಬುಟ್ಟಿ ಮೇಲೆ ಕಾಲಿಟ್ಟು ಕುಳಿತ ವ್ಯಾಪಾರಿ: ಆಹಾರ ಸುರಕ್ಷತೆ ಬಗ್ಗೆ ಮೂಡಿದೆ ಕಳವಳ

ತಿಂಡಿಯ ಬುಟ್ಟಿಯ ಮೇಲೆ ಕಾಲಿಟ್ಟು ಕುಳಿತ ವ್ಯಾಪಾರಿ!

Viral Video: ಚಲಿಸುವ ರೈಲಿನಲ್ಲಿ ಸಮೋಸ ಮಾರಾಟಗಾರನೊಬ್ಬ ತಿಂಡಿಯ ಬುಟ್ಟಿಯ ಮೇಲೆಯೇ ಕಾಲುಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದ ದೃಶ್ಯವೊಂದು ವೈರಲ್ ಆಗಿದೆ. ಮಾರಾಟಗಾರನು ಸಮೋಸದ ಬುಟ್ಟಿಯ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು ಫೋನ್‌ನಲ್ಲಿ ಮಾತನಾಡುತ್ತ ಸಮಯ ಕಳೆದಿದ್ದಾನೆ.

ದೆಹಲಿಯ ಬಿಸಿಲಿನ ತೀವ್ರತೆಗೆ ಲಡ್ಡುಗಳೇ ಕರಗಿದವು! ವೈರಲ್‌ ವಿಡಿಯೊ ನೋಡಿ

ಬಿಸಿಲಿನ ತೀವ್ರತೆಗೆ ಲಡ್ಡು ಕರಗಿ ಹಲ್ವಾ ಆಯ್ತು

Viral News: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೀಕರ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಬೆಂದು ಹೋಗಿವೆ‌‌. ಇಷ್ಟೇ ಅಲ್ಲ ತಿನ್ನುವ ಆಹಾರ ಪದಾರ್ಥಗಳೂ ಕೂಡ ಕರಗಿ ಹೋಗುತ್ತಿವೆ. ದೆಹಲಿಯ ತೀವ್ರ ಬಿಸಿಲಿನ ತಾಪಮಾನಕ್ಕೆ ಅಂಗಡಿಯಿಂದ ಖರೀದಿಸಿದ ಲಡ್ಡುಗಳು ಕರಗಿ ಹಲ್ವಾದಂತೆ ಆಗಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ: ಮೇಜಿನ ಮೇಲಿದ್ದ ಆಹಾರ ತಿಂದ ಬೀದಿ ನಾಯಿ

ವಿಮಾನ ನಿಲ್ದಾಣಕ್ಕೆ ನುಗ್ಗಿ ಆಹಾರ ತಿಂದ ಬೀದಿ ನಾಯಿ: ವಿಡಿಯೊ ವೈರಲ್

Viral Video: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ನುಗ್ಗಿ ಮೇಜಿನ ಮೇಲೆ ಕುಳಿತು ಉಳಿದ ಆಹಾರವನ್ನು ತಿಂದಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್: ಅಧಿಕಾರಿ ವರ್ತನೆಗೆ ನೆಟ್ಟಿಗರ ಆಕ್ರೋಶ!

ಚಾಲಕನ ಕೆನ್ನೆಗೆ ಬಾರಿಸಿದ ಟ್ರಾಫಿಕ್ ಪೊಲೀಸ್: ವಿಡಿಯೊ ವೈರಲ್

Viral Video: ಪ್ರಯಾಣಿಕರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ವಾದ- ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರು ರಸ್ತೆಯಲ್ಲಿ ಸಣ್ಣ ಅಪಘಾತವೊಂದರ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಆಟೊ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರ ನಡವಳಿಕೆ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ...

Loading...