ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

"ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ": ಟ್ರಾಫಿಕ್ ಜಾಮ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ನಿರ್ವಹಿಸಿದ ಉದ್ಯೋಗಿ

ಬೈಕ್‌ನಲ್ಲಿ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ: ವಿಡಿಯೊ ವೈರಲ್

Viral Video: ಟ್ರಾಫಿಕ್ ಜಾಮ್‌ಗೆ ಸಿಲುಕಿದ ವ್ಯಕ್ತಿಯೊಬ್ಬ ಸಿಕ್ಕ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದು, ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ ಎಂದು ಇದನ್ನು ಕರೆದಿದ್ದಾರೆ.

ಮಲಗಿದ್ದ ಬೀದಿ ನಾಯಿಗೆ ಕಲ್ಲು ಹೊಡೆದ ಬಾಲಕ: ಮಗ ಮಾಡಿದ ಕೃತ್ಯ ನೋಡಿ ನಿರ್ಲಕ್ಷ್ಯ ಮಾಡಿದ ಪೋಷಕರು, ವಿಡಿಯೋ ನೋಡಿ

ಮಲಗಿದ್ದ ಬೀದಿ ನಾಯಿಗೆ ಕಲ್ಲು ಎಸೆದ ಪುಟ್ಟ ಬಾಲಕ: ನೆಟ್ಟಿಗರು ಕಿಡಿ

Viral Video: ದೆಹಲಿಯ ಒಂದು ವಿಡಿಯೋ ಈಗ ಪೋಷಕರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನೊಬ್ಬ ಹೆತ್ತವರ ಮುಂದೆಯೇ ಬೀದಿ ನಾಯಿಗೆ ಕಲ್ಲು ಎಸೆದಿದ್ದಾನೆ. ನಾಯಿಯೂ ಯಾವುದೇ ರೀತಿ ತೊಂದರೆ ಪಡಿಸದೇ ನಿದ್ರಿಸುತ್ತಿತ್ತು. ಆದರೆ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ನಾಯಿಗೆ ಎಸೆದಿದ್ದಾನೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್‌ನ ನೈರ್ಮಲ್ಯ ಕಂಡು ಅಚ್ಚರಿಗೆ ಒಳಗಾದ ವಿದೇಶಿ ಮಹಿಳೆ: ವಿಡಿಯೊದಲ್ಲಿ ಹೇಳಿದ್ದೇನು?

ವಂದೇ ಭಾರತ್ ಸ್ಲೀಪರ್ ಕೋಚ್ ನ ಸೌಲಭ್ಯ ಬಗ್ಗೆ ಕೊಂಡಾಡಿದ ವಿದೇಶಿ ಮಹಿಳೆ!

Viral Video: ಭಾರತೀಯ ರೈಲ್ವೆ ಸೇವೆಯಾದ 'ವಂದೇ ಭಾರತ್ ಸ್ಲೀಪರ್' ಕೋಚ್' ನ ಸ್ವಚ್ಛತೆಯ ಬಗ್ಗೆ ವಿದೇಶಿ ಮಹಿಳೆ ಕೊಂಡಾಡಿದ್ದಾರೆ. ಹಳೆಯ ಕೋಚ್ , ಕೊಳಕು ಶೌಚಾಲಯ ಇರಬಹುದು ಎಂದು ಊಹಿಸಿ ರೈಲು ಹತ್ತಿದ ಮಹಿಳೆ ಅಲ್ಲಿನ ಗುಣಮಟ್ಟ ಕಂಡು ನಿಜಕ್ಕೂ ಆಶ್ಚರ್ಯ ವೆನೆಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಮೇಲ್ವಿಚಾರಕ: 93 ಉತ್ತರ ಪತ್ರಿಕೆ ಸೀಜ್!

ರಾಜಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಮೇಲ್ವಿಚಾರಕ

Viral News: ರಾಜಸ್ಥಾನದಲ್ಲಿ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಜೋಯಿ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಬೆಳಿಗ್ಗೆ 7 ರಿಂದ 10 ರವರೆಗೆ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಬ್ಬರು ಇನ್ವಿ ಜಿಲೇಟರ್‌ಗಳು ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿರುವ ದೃಶ್ಯ ಕಂಡು ಬಂದಿದೆ. ಶಿಕ್ಷಣದ ಹೆಸರಿನಲ್ಲಿ ಈ ರೀತಿ ಆಕ್ರಮಗಳು ನಡೆಯುತ್ತಿರುವ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

"ವಿದೇಶದಲ್ಲಿರುವ ವಿದ್ಯಾರ್ಥಿಗಳು ಒತ್ತಡದಲ್ಲೇ ಬದುಕಬೇಕು": ಕಹಿ ವಾಸ್ತವ ತೆರೆದಿಟ್ಟ ಭಾರತೀಯ ಯುವಕ

ವಿದೇಶದಲ್ಲಿನ ಭಾರತೀಯ ವಿದ್ಯಾರ್ಥಿಗಳ ಕಷ್ಟ ವಿವರಿಸಿದ ಯುವಕ

Viral Video: ಕನಸು ನನಸು ಮಾಡಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌, ರಷ್ಯಾ, ಅಮೆರಿಕದಂತಹ ದೇಶಗಳಿಗೆ ಶಿಕ್ಷಣ ಪಡೆಯಲು ಹೋಗುತ್ತಾರೆ. ಆದರೆ ಅಲ್ಲಿನ ಜೀವನ ಅಂದುಕೊಂಡಷ್ಟು ಸುಲಭವಲ್ಲ. ದುಬಾರಿ ಜೀವನ ವೆಚ್ಚದ ಜತೆಗೆ ಬದುಕು ಸಾಗಿಸಲು ಬಹಳಷ್ಟು ಪರದಾಡಬೇಕಾಗುತ್ತದೆ. ಇದೀಗ ಯುರೋಪಿನಲ್ಲಿ ವಾಸಿಸುವ ಭಾರತೀಯ ಯುವಕನೊಬ್ಬ ಜನರು ನಿರೀಕ್ಷಿಸುವುದಕ್ಕಿಂತ ಹೆಚ್ಚು ಇಲ್ಲಿನ ಜೀವನ ಕಠಿಣವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದೆಂಥ ದುರಂತ? ಕೋಟಿ ರುಪಾಯಿ ಕೊಟ್ಟು ಖರೀದಿಸಿದ ಕನಸಿನ ಮನೆ ಜಲಾವೃತ: ಬಿಲ್ಡರ್ ಭ್ರಷ್ಟಾಚಾರಕ್ಕೆ ದೆಹಲಿ ಕುಟುಂಬ ಬೇಸರ

ಕಳಪೆ ಕಾಮಗಾರಿಯಿಂದ ಸೋರುತ್ತಿರುವ ದುಬಾರಿ ವೆಚ್ಚದ ಮನೆ! ಮಾಲಕ ಕಣ್ಣೀರು

Viral Video: ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ಉಳಿತಾಯ ಮಾಡಿ, ಇಲ್ಲವೇ ಸಾಲ ಮಾಡಿಯಾದರೂ ಸ್ವಂತ ಮನೆ ನಿರ್ಮಾಣ ಮಾಡುವವರು ಇದ್ದಾರೆ. ಆದರೆ ಇಷ್ಟೆಲ್ಲ ಶ್ರಮಪಟ್ಟ ಮನೆಯಲ್ಲಿ ಕಳಪೆ ಕಾಮಗಾರಿ ನಡೆದರೆ ಹೇಗಾಗಬೇಡ ಅಲ್ಲವೆ? ದೆಹಲಿಯ ಕುಟುಂಬವೊಂದು ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿ ಖರೀದಿಸಿದ ಮನೆಯೊಂದರಿಂದ ನೀರು ಜಲಧಾರೆಯಂತೆ ಸುರಿದಿದೆ. ಫ್ಲಾಟ್‌ನ ಮೇಲ್ಛಾವಣಿ ಒಡೆದು ಮನೆಯೊಳಗೇ ನೀರು ತುಂಬಿಕೊಂಡಿದೆ.

‘'ಬ್ಯಾಟ್‌ಮ್ಯಾನ್‌ಗೂ ನ್ಯಾಯ ಬೇಕು": ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸೂಪರ್‌ಹೀರೋ; ವಿಡಿಯೊ ಇಲ್ಲಿದೆ

ಇಂದೋರ್‌ನ ನೀಟ್ ಪ್ರತಿಭಟನೆಯಲ್ಲಿ ಗಮನ ಸೆಳೆದ ʼಬ್ಯಾಟ್‌ಮ್ಯಾನ್‌ʼ

Viral Video: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶೇಷ ವೇಷಧಾರಿಯೊಬ್ಬ ಗಮನ ಸೆಳೆದಿದ್ದಾನೆ. ಹೌದು, ಬ್ಯಾಟ್‌ಮ್ಯಾನ್‌ನಂತೆ ವೇಷ ಧರಿಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವ ಯುವಕನ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಬ್ಯಾಟ್‌ಮ್ಯಾನ್ ವೇಷಧಾರಿ ಕಾಣಿಸಿಕೊಂಡಿದ್ದಾನೆ.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಸಿಜೆಪಿ ಪ್ರತಿಭಟನೆಗಾಗಿ ದೂರದ ಆಸ್ಟ್ರೇಲಿಯಾದಿಂದ ಆಗಮಿಸಿದ ಯುವಕ

CJP Protest In Delhi: ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಹೋರಾಟ ನಡೆಯುತ್ತಿದೆ. ಸಿಜೆಪಿ ಆರಂಭಿಸಿರುವ ಈ ಪ್ರತಿಭಟನೆಗೆ ಯುವಜನತೆ, ಸೆಲೆಬ್ರಿಟಿಗಳ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಯುವಕನೊಬ್ಬ ಆಸ್ಟ್ರೇಲಿಯಾದಿಂದ ಸುಮಾರು 1 ಲಕ್ಷ ಖರ್ಚು ರುಪಾಯಿ ಖರ್ಚು ಮಾಡಿಕೊಂಡು ಬಂದಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.

ಭುಗಿಲೆದ್ದ ಆಕ್ರೋಶ; ಪುಣೆ ಬಾಲಕನನ್ನು ಹತೈಗೈದ ಅಪ್ರಾಪ್ತನಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಿದ ಮಹಿಳೆ: ವಿಡಿಯೊ ಇಲ್ಲಿದೆ

ಕೊಲೆ ಎಸಗಿದ ಅಪ್ರಾಪ್ತನಿಗೆ ಚಪ್ಪಲಿ ಏಟು ನೀಡಿದ ಮಹಿಳೆ

Viral Video: ಮಹಾರಾಷ್ಟ್ರದ ಪುಣೆಯ ಕಾತ್ರಾಜ್‌ನಲ್ಲಿ ಇತ್ತೀಚೆಗೆ ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 17 ವರ್ಷದ ಬಾಲಕನ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ 17 ವರ್ಷದ ಗಣೇಶ್ ರವೀಂದ್ರ ಮಾಲ್ವೆ ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ ಮೆರವಣಿಗೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೇಳೆ ಮಹಿಳೆಯೊಬ್ಬರು ಅಪ್ರಾಪ್ತರ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ಜನ್ಮ ದಿನಾಚರಣೆ: ಪುಣೆಯಲ್ಲಿ 30 ಅಡಿ ಕಟೌಟ್‌ಗೆ ಎನ್‌ಸಿಪಿ ಕಾರ್ಯಕರ್ತರಿಂದ ಹಾಲಿನ ಅಭಿಷೇಕ

ಅಜಿತ್ ಪವಾರ್ 30 ಅಡಿ ಕಟೌಟ್‌ಗೆ ಹಾಲಿನ ಅಭಿಷೇಕ

Viral Video: ಮಹಾರಾಷ್ಟ್ರ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ ಜನ್ಮ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಗಿದೆ. ಈ ನಡುವೆ ಎನ್‌ಸಿಪಿ ಕಾಂಗ್ರೆಸ್ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ 30 ಅಡಿ ಎತ್ತರದ ಅಜಿತ್ ಪವಾರ್ ಕಟೌಟ್‌ಗೆ ಹಾಲಿನ ಅಭಿಷೇಕ ಅರ್ಪಣೆ ಮಾಡಿದ್ದಾರೆ. ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಜನಸಂಖ್ಯೆ ನೆರೆದಿತ್ತು. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಪ್ರತಿಭಟನೆಯ ನಡುವೆ ಬರ್ಗರ್ ತಿಂದ ಸಿಜೆಪಿ ವಕ್ತಾರ ವಿಜೇತ ದಹಿಯಾಗೆ ಕೋಕ್

ಬರ್ಗರ್ ವಿವಾದ: ಸಿಜೆಪಿ ವಕ್ತಾರ ವಿಜೇತ ದಹಿಯಾ ಹುದ್ದೆಯಿಂದ ವಜಾ

Vijeta Dahiya: ದೆಹಲಿ ಪ್ರತಿಭಟನೆಯ ವೇಳೆ ಮಾಲ್‌ನಲ್ಲಿ ಬರ್ಗರ್ ತಿನ್ನುತ್ತಿರುವ ವಿಡಿಯೊ ವೈರಲ್ ಆದ ಬಳಿಕ ಸಿಜೆಪಿ ತನ್ನ ವಕ್ತಾರ ವಿಜೇತ ದಹಿಯಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ದಹಿಯಾ ತಾವು ಪ್ರತಿಭಟನೆ ಬಳಿಕ ಹಸಿವಾಗಿತ್ತೆಂದು ಆಹಾರ ಸೇವಿಸಲು ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದರೂ ಪಕ್ಷ ಅವರ ನಡೆ ಅಸಂವೇದನಾಶೀಲ ಎಂದು ಶಿಸ್ತು ಕ್ರಮ ಕೈಗೊಂಡಿದೆ.

ಡಾರ್ಜಿಲಿಂಗ್‌ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್: ಪ್ರಪಾತಕ್ಕೆ ಜಾರುತ್ತಿದ್ದಂತೆ ನಿಯಂತ್ರಣಕ್ಕೆ ತಂದ ರೈಡರ್‌; ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವಿಡಿಯೊ ವೈರಲ್‌

ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಬೈಕರ್‌

Viral Video: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಕುರ್ಸಿಯಾಂಗ್ ಪ್ರದೇಶದ ಮಳೆಕಾಡಿನ ರಸ್ತೆಯೊಂದರಲ್ಲಿ ಬೈಕರ್ ಒಬ್ಬರು ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಭಕ್ತಿಯೋ ಶೋಷಣೆಯೋ? ಜುನಾಗಢದ ದುರ್ಗದ ಹಾದಿಯಲ್ಲಿ ಭಕ್ತನನ್ನು ಹೊತ್ತು ಸಾಗಿದ ಕಾರ್ಮಿಕರು

ಭಕ್ತನನ್ನು ದುರ್ಗದ ಹಾದಿಯಲ್ಲಿ ಹೊತ್ತು ಸಾಗಿದ ಕಾರ್ಮಿಕರು: ವಿಡಿಯೊ ವೈರಲ್

Viral Video: ಆಧುನಿಕ ಯುಗದಲ್ಲಿ ಮಾನವನನ್ನು ಮಾನವನೇ ಹೊರುವ ರೀತಿಗೆ ಸಮಾಜ ನಿಜಕ್ಕೂ ಒಪ್ಪುತ್ತಾ? ಇಂತಹದೊಂದು ಗಂಭೀರ ಚರ್ಚೆಗೆ ಕಾರಣವಾಗುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಇದು ಭಕ್ತಿಯೇ ಅಥವಾ ಮಾನವ ಶೋಷಣೆಯೇ ಎಂದು ಪ್ರಶ್ನೆ ಮೂಡುವಂತಾಗಿದೆ. ಗುಜರಾತ್‌ನ ಜುನಾಗಢದ ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತನೊಬ್ಬನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಲ್ಕು ಜನ ಕಾರ್ಮಿಕರು ಹೊತ್ತುಕೊಂಡು ಸಾಗಿರುವ ವಿಡಿಯೊ ಸದ್ಯ ಚರ್ಚೆಗೆ ಕಾರಣವಾಗಿದೆ.

Viral Video: ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ನಾಗರಿಕ ಪ್ರಜ್ಞೆಯ ಕೊರತೆ: ಮದ್ಯದ ಬಾಟಲ್‌ ರಸ್ತೆಗೆ ಎಸೆದ ವ್ಯಕ್ತಿ

ಸಾರ್ವಜನಿಕ ಸ್ಥಳದಲ್ಲಿ ವಹಿಸಬೇಕಾದ ಜವಾಬ್ದಾರಿ ಹಾಗೂ ವರ್ತಿಸಬೇಕಾದ ರೀತಿಯನ್ನು ನಾವಿಂದು ಮರೆತಿದ್ದೇವೆ. ಅದರಲ್ಲೂ ಭಾರತೀಯರ ನಡವಳಿಕೆ ಬಗ್ಗೆ ಇತ್ತೀಚಿನ ದಿನದಲ್ಲಿ ದೂರು ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ವ್ಯಕ್ತಿಯೊಬ್ಬನ ಬೇಜವ್ದಾರಿಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮಧ್ಯವಯಸ್ಕನೊಬ್ಬ ರಸ್ತೆಗೆ ಗಾಜಿನ ಮದ್ಯದ ಬಾಟಲ್‌ ಎಸೆದಿದ್ದಾನೆ. ಈ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ಒಂದು ಪೆಗ್ ನೀಡಬೇಕಿತ್ತು ಎಂದ ನೆಟ್ಟಿಗರು

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ವೈರಲ್‌ ವಿಡಿಯೊ ನೋಡಿ!

Viral Video: ಕಾಡಿನಿಂದ ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ರಾಜಸ್ಥಾನದ ಟೋಂಕ್ ಜಿಲ್ಲೆಯ ಎಸ್‌ಬಿಐ ಚೌರಸ್ತಾ ಬಳಿಯ ವೈನ್ ಶಾಪ್‌ಗೆ ನುಗ್ಗಿದೆ. ಅಲ್ಲಿ ಸಿಕ್ಕ ಸಿಕ್ಕ ಬಾಟಲಿಗಳನ್ನು ಪುಡಿಮಾಡಿ ಮಾರಾಟಗಾರನ ಮೇಲೆಯೂ ದಾಳಿ ಮಾಡಿದೆ. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರು ಗಾಯಗೊಂಡಿದ್ದು ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ಈ ಘಟನೆಯೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ.

ಅಡ್ವಾನ್ಸ್ ನೀಡಿದ್ದು 1 ಲಕ್ಷ, ಕೈಗೆ ಸಿಕ್ಕಿದ್ದು 20 ಸಾವಿರ; ವಂಚಿಸಿದ ಬೆಂಗಳೂರು ಮನೆ ಮಾಲೀಕನ ವಿರುದ್ಧ ಮಹಿಳೆ ಆಕ್ರೋಶ!

ಬೆಂಗಳೂರಿನಲ್ಲಿ ಮಹಿಳೆಗೆ ಅಡ್ವಾನ್ಸ್ ಹಣ ಕಡಿತಗೊಳಿಸಿ ವಂಚನೆ

Viral News: ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿ ಮಾಡಿದರೂ ಮಾಲೀಕನೊಬ್ಬ ಒಟ್ಟು 1 ಲಕ್ಷ ಹಣದಲ್ಲಿ 80,396 ರೂಪಾಯಿ ಕಡಿತಗೊಳಿಸಿ ತನ್ನ ಕೈಗೆ ಕೇವಲ 20,000 ರೂಪಾಯಿ ನೀಡಿದ್ದಾನೆಂದು ಮಹಿಳೆ ಆಕ್ರೋಶಗೊಂಡಿದ್ದಾಳೆ. ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದ ಯುವಕ- ಯುವತಿಯರಿಗೆ ಇದೊಂದು ದೊಡ್ಡ ಹೊರೆ ಎಂದು ಅವರು ಬರೆದುಕೊಂಡಿದ್ದಾರೆ.

"ಬ್ಯಾಗ್ ಕಿತ್ತು ಡ್ರೆಸ್ ಎಳೆದರು": ಸೆರ್ಬಿಯಾ ಪ್ರವಾಸದದಲ್ಲಿ ಎದುರಾದ ನರಕದ ಅನುಭವ ವಿವರಿಸಿದ ಭಾರತೀಯ ಮಹಿಳೆ

ವಿದೇಶದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ: ವಿಡಿಯೊ ನೋಡಿ

Viral News: ವಿದೇಶದಲ್ಲಿ ರಜಾ ದಿನವನ್ನು ಕಳೆಯಬೇಕೆಂದು ಹೋದ ಭಾರತೀಯ ದಂಪತಿಗೆ ಭೀಕರ ಅನುಭವ ಎದುರಾಗಿದೆ. ಸೆರ್ಬಿಯಾಕ್ಕೆ ತೆರಳಿದ ಕೆಲವೇ ಸಮಯದಲ್ಲಿ ಅಲ್ಲಿನ ಸ್ಥಳೀಯರಿಂದ ನರಕಯಾತನೆ ಅನುಭವಿಸಿದೆವು ಎಂದು ದಂಪತಿ ಬೇಸರ ಹೊರ ಹಾಕಿದ್ದಾರೆ. ವ್ಲಾಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ತನ್ನ ಡ್ರೆಸ್ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

Viral Video: ʼʼನಂಗೂ ಅಡ್ಮಿಷನ್‌ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ

ಬಾಲಕರ ಹಾಸ್ಟೆಲ್‌ಗೆ ನುಗ್ಗಿದ ದೈತ್ಯ ಮೊಸಳೆ: ಇಲ್ಲಿದೆ ವಿಡಿಯೊ

Viral Video: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮೊಸಳೆ ದಾಳಿ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕ್ರೂರವಾಗಿ ಕೊಂದು ಸಾಯಿಸಿತ್ತು. ಇದರ ಬೆನ್ನಲೇ ರಾಜಸ್ಥಾನದ ಕೋಟಾದ ಬಾಯ್ಸ್ ಹಾಸ್ಟೆಲ್‌ನ ಅಡುಗೆ ಕೋಣೆಯೊಳಗೆ ಮೊಸಳೆಯೊಂದು ಎಂಟ್ರಿ ನೀಡಿದೆ. ಹಾಸ್ಟೆಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಬ್ಯಾಂಕ್‌ನಲ್ಲೇ ಸಿಬ್ಬಂದಿ ಲಾಕ್‌!

ಹಾಸನ ಜಿಲ್ಲೆಯ ಅರಕಲಗೂಡುದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರು ಸಿಬ್ಬಂದಿಯನ್ನು ತಡರಾತ್ರಿವರೆಗೆ ಕಚೇರಿಯಲ್ಲೇ ಉಳಿಯುವಂತೆ ಒತ್ತಾಯಿಸಿ, ಮುಖ್ಯ ಗೇಟ್‌ಗೆ ಬೀಗ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮ್ಯಾನೇಜರ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

"ದಿನವನ್ನು ಖುಷಿಯಾಗಿರಿಸಲು ಈ ಸಣ್ಣ ಕ್ಷಣ ಸಾಕು": ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಗೆ ಫೋಟೊ ತೆಗೆಯಲು ನೆರವಾದ ಯುವಕ

ಮೊದಲ ಬಾರಿಗೆ ವಿಮಾನ ಪ್ರಯಾಣ: ವ್ಯಕ್ತಿಯ ಮೊಗದಲ್ಲಿ ನಗು ತರಿಸಿದ ಯುವಕ

Viral News: ನಮಗೆ ಖುಷಿ ಕೊಡುವ ಕೆಲವೊಂದು ಸಣ್ಣ ಘಟನೆಗಳು ಸ್ಮರಣೀಯವಾಗುತ್ತವೆ. ಯಾರೋ ಅಪರಿಚಿತರು ದಯೆ ತೋರಿದರು ಎಂದಾಗ ಮನಸ್ಸಿಗೆ ಆಗುವ ಆನಂದವೇ ಬೇರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ಯುವಕನೊಬ್ಬನ ಮಾನವೀಯ ಗುಣ ಗಮನ ಸೆಳೆದಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏರೋಬ್ರಿಡ್ಜ್‌ನಲ್ಲಿ ನಿಂತು ತಾವೇ ಫೋಟೋ ತೆಗೆಯಲು ಒದ್ದಾಡುತ್ತಿದ್ದರು. ಇದನ್ನು ಕಂಡ ಯುವಕ ನೆರವಾಗಿದ್ದಾನೆ.

ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ನಾಲ್ವರು ಪೊಲೀಸರು; ವೈರಲ್ ವಿಡಿಯೊ ಹೊರಬಂದ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

ಹೆಲ್ಮೆಟ್ ಇಲ್ಲದೆ ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸರ ಪ್ರಯಾಣ

Viral Video: ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಸಾರಿಗೆ ಇಲಾಖೆ ಟ್ರಾಫಿಕ್ ರೂಲ್ಸ್ ಜಾರಿ ಮಾಡಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಂತಹ ಕಾನೂನುಗಳನ್ನು ತರುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿದ ಘಟನೆಯೊಂದು ನಡಿದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ನಾಲ್ವರು ಪೊಲೀಸ್ ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಅಪ್ರಾಪ್ತ ಬಾಲಕಿ ಇರುವುದನ್ನು ಗಮನಿಸಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್; ತಾಯಿಯ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ

ಪಾರ್ಸೆಲ್ ನೆಪದಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

Viral Video: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಬಾಯ್ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಅಪ್ರಾಪ್ತ ಬಾಲಕಿಗೆ ಆರ್ಡರ್ ನೀಡುವ ನೆಪದಲ್ಲಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್‌ಯ ವಿಡಿಯೊವೊಂದು ವೈರಲ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಬಾಲಕಿಯ ತಾಯಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ಮಗುಗೆ ಎಚ್ಚರವಾಗಬಹುದೆಂದು ಡೈಪರ್ ಆರ್ಡರ್ ಮಾಡಿದ ಮಹಿಳೆಯ ಮನೆಯ ಡೋರ್ ಬೆಲ್ ಮಾಡದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಮಗುವಿನ ಬಗ್ಗೆ ಕಾಳಜಿ ತೋರಿದ ಡೆಲಿವರಿ ಬಾಯ್: ಮಹಿಳೆಯ ವಿಡಿಯೊ ವೈರಲ್‌

Viral Video: ಯಾವುದೇ ಕಾರಣ ಇಲ್ಲದೆ ಅಪರಿಚಿತರು ಕಾಳಜಿ ವಹಿಸುತ್ತಾರೆ ಅಂದಾಗ ನಮಗಾಗುವ ತೃಪ್ತಿ ಭಾವನೆಯೇ ಬೇರೆ. ಯಾವುದೇ ಸಣ್ಣ ಪುಟ್ಟ ಘಟನೆಯೇ ಆಗಿರಲಿ ಅದು ನಮ್ಮನ್ನು ಇಡೀ ದಿನವನ್ನು ಖುಷಿಯಾಗಿ ಇರಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಒಬ್ಬ ತೋರಿಸಿದ ಕಾಳಜಿಗೆ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ತಡರಾತ್ರಿ ಮಗುವಿನ ಡೈಪರ್ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ನ ಹೃದಯವಂತಿಕೆ ಎಲ್ಲರ ಹೃದಯ ಗೆದ್ದಿದೆ. ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮಹಿಳೆ, ಇದನ್ನು "ಅತ್ಯಂತ ಸಿಹಿ ಅನುಭವ" ಎಂದು ಕರೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ...

ದೆಹಲಿ ಆಸ್ಪತ್ರೆಯಲ್ಲಿ ಘೋರ ದುರಂತ; ಹೊಟ್ಟೆ ಮೇಲೆ ಫ್ಯಾನ್ ಬಿದ್ದು ರೋಗಿ ಸಾವು: ವಿಡಿಯೊ ವೈರಲ್‌

ದೆಹಲಿ ಆಸ್ಪತ್ರೆಯಲ್ಲಿ ಫ್ಯಾನ್ ಬಿದ್ದು ರೋಗಿ ಸಾವು

Patient Dies After Ceiling Fan Falls: ಸೀಲಿಂಗ್ ಫ್ಯಾನ್ ಬಿದ್ದು 42 ವರ್ಷದ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ನಡೆದಿದೆ. ಆದರೆ ರೋಗಿಯು ಸೀಲಿಂಗ್ ಫ್ಯಾನ್ ಘಟನೆಯಿಂದಲ್ಲ, ಬದಲಾಗಿ ಅವರ ಅನಾರೋಗ್ಯದಿಂದ ಮೃತಪ್ಟಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

Loading...