ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮಗುವಿನ ಪರಿವೇ ಇಲ್ಲದೆ ರೀಲ್ಸ್‌ನಲ್ಲಿ ಕಳೆದುಹೋದ ತಾಯಿ; ಬ್ರಿಡ್ಜ್‌ನತ್ತ ಸಾಗಿದ ಕಂದಮ್ಮನ ರಕ್ಷಣೆ ಮಾಡಿದ್ಯಾರು?

ರೀಲ್ಸ್ ಗಾಗಿ ಮಗುವಿನ ಜೀವದ ಜೊತೆ ಚೆಲ್ಲಾಟ ಆಡಿದ ಪಾಪಿ ತಾಯಿ

Viral Video: ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ವಿಡಿಯೊವೊಂದು ವೈರಲ್ ಆಗಿದ್ದು ಮಹಿಳೆ ಯೊಬ್ಬರು ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದು ಆಕೆಯ ಮಗು ಸೇತುವೆಯ ಅಂಚಿನ ಕಡೆಗೆ ತೆವಳಿ ಕೊಂಡು ಹೋಗುತ್ತಿದೆ.‌ ಆದರೆ ಈಕೆ ತನ್ನ ಮಗುವಿನ ಬಗ್ಗೆ ಕ್ಯಾರೇ ಇಲ್ಲ ಎನ್ನುವಂತೆ ವಿಡಿಯೊ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾಳೆ. ಈ ವಿಡಿಯೊ ನೋಡಿದ ಅನೇಕರು ಮಹಿಳೆಯ ಬೇಜವ್ದಾರಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಮೊಬೈಲ್ ಕದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸಹೋದರಿಯರು; ವಿಡಿಯೋ ವೈರಲ್‌

ಮೊಬೈಲ್ ಕಳ್ಳನನ್ನು ಬೆನ್ನಟ್ಟಿದ ಯುವತಿಯರು: ಧೈರ್ಯಕ್ಕೆ ನೆಟ್ಟಿಗರ ಪ್ರಶಂಸೆ!

Viral Video: ಮೊಬೈಲ್ ಕಳ್ಳನನ್ನು ಇಬ್ಬರು ಸಹೋದರಿಯರು ಬೆನ್ನಟ್ಟಿ ಧೈರ್ಯದಿಂದ ಆತನನ್ನು ಎದುರಿಸಿದ್ದಾರೆ. ಮಧ್ಯ ಪ್ರದೇಶದ ಪದವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮುರಾರ್‌ನ ಸಿಪಿ ಕಾಲೋನಿಯ ನಿವಾಸಿಗಳಾದ ಇಬ್ಬರು ಸಹೋದರಿಯರು ಹರ್ಷಿತಾ ಮತ್ತು ರಸಿತಾ ಅಗರ್ವಾಲ್ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಡೆವಾಲ್ಡ್ ಬ್ರೆವಿಸ್ 97 ಮೀಟರ್ ನೋ-ಲುಕ್ ಸಿಕ್ಸರ್‌ ಕಂಡು ದಂಗಾದ ನೆಟ್ಟಿಗರು

ಬ್ರೆವಿಸ್ 97 ಮೀ. ನೋ-ಲುಕ್ ಸಿಕ್ಸರ್‌ ಕಂಡು ದಂಗಾದ ನೆಟ್ಟಿಗರು

Dewald Brevis: ಜಾನಿ ಬೈರ್‌ಸ್ಟೋವ್ ಮೂರು ಎಸೆತಗಳಲ್ಲಿ 10 ರನ್‌ಗಳಿಗೆ ಬೇಗನೆ ಔಟಾದರು. ಆದರೆ ನಾಯಕ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಬ್ರೆವಿಸ್ ನಂತರ 103 ರನ್‌ಗಳ ಪಾಲುದಾರಿಕೆಯನ್ನು ಗಳಿಸಿದರು. ಇದು ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್‌ನ ಯಾವುದೇ ವಿಕೆಟ್‌ಗೆ ಅತ್ಯಧಿಕ ಜತೆಯಾಟವಾಗಿದೆ.

75 ವರ್ಷದ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ಪಾಪಿ ಮಗ: ಕ್ರೌರ್ಯದ ವಿಡಿಯೋ ವೈರಲ್‌

ವೃದ್ಧ ತಾಯಿಗೆ ದೈಹಿಕವಾಗಿ ಕಿರುಕುಳ ನೀಡಿದ ಮಗ: ಸಿಸಿಟಿವಿ ದೃಶ್ಯ ವೈರಲ್

Viral Video: ಪಾಪಿ ಮಗನೊಬ್ಬ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯುದ್ದಕ್ಕೂ ಎಳೆ ದೊಯ್ದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಶಂಕಿತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಮನೆಯವರಿಗೆ ತಿಳಿಸದೆ ಹೊಲದಲ್ಲಿ ಹಣ ಬಚ್ಚಿಟ್ಟ ರೈತ: ಗೆದ್ದಲು ತಿಂದ 5 ಲಕ್ಷ ರುಪಾಯಿ ಮೌಲ್ಯದ ನೋಟು ಕಂಡು ಕಣ್ಣೀರು! ವಿಡಿಯೊ ವೈರಲ್‌

ಹಣವನ್ನು ಹೊಲದಲ್ಲಿ ಬಚ್ಚಿಟ್ಟು 5 ಲಕ್ಷ ರುಪಾಯಿ ಕಳೆದುಕೊಂಡ ರೈತ

Viral Video: ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ರೈತನೊಬ್ಬ ತಾನು ಕೂಡಿಟ್ಟ ಹಣದ ಬಗ್ಗೆ ಮನೆಯವರಿಗೆ ತಿಳಿಯಬಾರದೆಂದು ಹೊಲದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದ. ಆದರೆ ಗೆದ್ದಲುಗಳು ಹಣವನ್ನು ನಾಶ ಪಡಿಸಿದ್ದು ಐದು ಲಕ್ಷ ರುಪಾಯಿ ಮೌಲ್ಯದ 500 ರುಪಾಯಿ ನೋಟುಗಳು ಸಂಪೂರ್ಣ ಹಾಳಾಗಿವೆ. ಈ ಹಾಳಾದ ನೋಟುಗಳ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈಗಾಗಲೇ 25 ಮದುವೆಯಾಗಿದ್ದವ ಗುರುತು ಮರೆಮಾಡಿ ಬಿಜೆಪಿ ಶಾಸಕನ ಮಗಳನ್ನೇ ವರಿಸಿದ! ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಗುರುತು ಮರೆಮಾಡಿ ಬಿಜೆಪಿ ಶಾಸಕನ ಮಗಳನ್ನೇ ವರಿಸಿದ ವಂಚಕ ಅರೆಸ್ಟ್‌

Crime News: ಈಗಾಗಲೇ ಮದುವೆಯಾಗಿ ಕೋಟ್ಯಂತರ ರುಪಾರಿ ದೋಚಿದ್ದ ಖರ್ತನಾಕ್‌ ವ್ಯಕ್ತಿಯೊಬ್ಬ ಶಾಸಕರ ಮಗಳನ್ನೇ ಮೋಸದ ಜಾಲಕ್ಕೆ ಬೀಳಿಸಿ ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಶಾಸಕ ಗ್ಯಾನ್‌ ತಿವಾರಿ ಮತ್ತು ಅವರ ಪುತ್ರಿಗೆ ವಂಚಕ ಮೋಸ ಮಾಡಿದ್ದು, ಸದ್ಯ ಪ್ರಕರಣ ದಾಖಲಾಗಿದೆ. ವಂಚಕ ಪ್ರಖಾರ್‌ ತ್ರಿವೇದಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಕುಲದೀಪ್ ಬೌಲಿಂಗ್ ಶೈಲಿ ಅನುಕರಿಸಿದ ಜಡೇಜಾ; ಬಿದ್ದು ಬಿದ್ದು ನಕ್ಕ ಗಂಭೀರ್‌

ಕುಲದೀಪ್ ಬೌಲಿಂಗ್ ಶೈಲಿ ಅನುಕರಿಸಿದ ಜಡೇಜಾ; ವಿಡಿಯೊ ವೈರಲ್‌

Sri Lanka Cricket XI vs India: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಜಡೇಜಾ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ಹಾಸ್ಯಮಯವಾಗಿ ಅನುಕರಿಸುತ್ತಿರುವುದು ಕಂಡುಬಂದಿದೆ. ಅವರ ಅನುಕರಣೆ ಕಂಡ ಗಂಭೀರ್‌ಗೆ ನಗುವನ್ನು ತಡೆಯಲು ಸಾಧ್ಯವಾಗಲಿಲ್ಲ. ಬಿದ್ದುಬಿದ್ದು ನಕ್ಕರು.

'ʼನಿಜವಾದ ಮುಸ್ಲಿಂ ಗೋಹತ್ಯೆ ಮಾಡುವುದಿಲ್ಲʼ': ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯ ಹೇಳಿಕೆಯಿಂದ ಭುಗಿಲೆದ್ದ ವಿವಾದ

ಗೋಹತ್ಯೆ ತಡೆ ಸಭೆಯಲ್ಲಿ ವಿವಾದಿತ ಹೇಳಿಕೆ; ರಾಮ್‌ಪುರ ಎಸ್‌ಪಿ ಸ್ಪಷ್ಟನೆ

Viral Video: ಉತ್ತರ ಪ್ರದೇಶದ ರಾಮ್‌ಪುರ ಎಸ್‌ಪಿ ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ ʼ‘ನಿಜವಾದ ಮುಸ್ಲಿಮರು ಗೋಹತ್ಯೆ ಮಾಡುವುದಿಲ್ಲʼ’ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ʼʼಶ್ರಾವಣ ಮಾಸದಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮಾತನಾಡಿದ್ದು, ಯಾವುದೇ ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದು ತಮ್ಮ ಉದ್ದೇಶವಾಗಿರಲಿಲ್ಲʼʼ ಎಂದು ಹೇಳಿದ್ದಾರೆ.

ಮದ್ಯದ ದೊರೆ ವಿಜಯ್‌ ಮಲ್ಯ ಪುತ್ರ ಎಣ್ಣೆ ಹೊಡೆಯೋದು ಬಿಟ್ಟು 8 ವರ್ಷ! ವಿಡಿಯೊ ಮೂಲಕ ಖುಷಿ ಹಂಚಿಕೊಂಡ ಸಿದ್ಧಾರ್ಥ್‌ ಮಲ್ಯ

ಮದ್ಯದ ದೊರೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮದ್ಯಪಾನ ತ್ಯಜಿಸಿ 8 ವರ್ಷ

Siddharth Mallya: ಮದ್ಯದ ದೊರೆ, ಆರ್​ಸಿಬಿ ಫ್ರಾಂಚೈಸಿಯ ಮಾಜಿ ಮಾಲಕ ವಿಜಯ್‌ ಮಲ್ಯ ಅವರ ಪುತ್ರ ಸಿದ್ಧಾರ್ಥ್‌ ಮಲ್ಯ ಮದ್ಯಪಾನ ತ್ಯಜಿಸಿ 8 ವರ್ಷವಾಗಿದ್ದು, ಇದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೊ ಮಾಡಿರುವ ಸಿದ್ಧಾರ್ಥ್‌ ಮಲ್ಯ ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ಮದ್ಯಪಾನ ತ್ಯಜಿಸಬಹುದು ಎಂದಿದ್ದಾರೆ.

ಶ್ವಾನದಂತೆ ಬದಲಾಗಲು ಬರೋಬ್ಬರಿ 220 ಕೋಟಿ ರುಪಾಯಿ ಖರ್ಚು ಮಾಡಿದ ಜಪಾನ್ ಯುವಕ! ವೈರಲ್ ಸುದ್ದಿಯ ಅಸಲಿಯತ್ತೇನು?

ಶ್ವಾನದಂತೆ ಬದಲಾಗಲು 220 ಕೋಟಿ ರುಪಾಯಿ ಖರ್ಚು ಮಾಡಿದ ಯುವಕ

Viral Video: ಜಪಾನ್‌ನ ಯುವಕನೊಬ್ಬ ನಾಯಿಯಂತೆ ಬದಲಾಗಲು ಬಯಸಿದ್ದ. ಅಷ್ಟೇ ಅಲ್ಲದೆ ಈ ಶಸ್ತ್ರಚಿಕಿತ್ಸೆ ಮಾಡಲು ಸುಮಾರು 2.2 ಬಿಲಿಯನ್ ರುಪಾಯಿ (220 ಕೋಟಿ ರುಪಾಯಿ) ಖರ್ಚು ಮಾಡಿದ್ದಾನೆ ಎನ್ನುವ ಸುದ್ದಿ ಹಬ್ಬಿದೆ. ಯುವಕ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು ಈಗ ನಾಯಿಯಂತಹ ನಡವಳಿಕೆ ಮತ್ತು ದೈಹಿಕ ನೋಟವನ್ನು ಹೊಂದಿದ್ದಾನೆ ಎನ್ನುವ ಪೋಸ್ಟ್ ವೈರಲ್ ಆಗಿತ್ತು.‌ ಹಾಗಿದ್ರೆ ಈ ಸುದ್ದಿ ನಿಜವೇ? ಈ ಘಟನೆಯ ಸತ್ಯಸತ್ಯತೆ ಏನು?

ಆಸ್ಪತ್ರೆಯಲ್ಲಿ ಕೈಕೊಟ್ಟ ಕರೆಂಟ್: ಮೊಬೈಲ್ ಟಾರ್ಚ್ ಬೆಳಕಲ್ಲೇ ರೋಗಿಗಳಿಗೆ ಚಿಕಿತ್ಸೆ; ಕೇಂದ್ರ ಆರೋಗ್ಯ ಸಚಿವರ ತವರಲ್ಲೇ ದುಸ್ಥಿತಿ

ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಲ್ಲೇ ರೋಗಿಗಳಿಗೆ ಚಿಕಿತ್ಸೆ

Power Outage at Hospital: ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡ ಪರಿಣಾಮ ರೋಗಿಗಳು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ಪಡೆಯುವಂತಾದ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ನಡೆದಿದೆ. ಬ್ಯಾಕಪ್ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಿದ್ದರೂ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್‌ನಲ್ಲಿ ಈರುಳ್ಳಿ ಮೂಟೆಗಳ ಸಾಗಾಟ: ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ

ಆಂಬ್ಯುಲೆನ್ಸ್‌ನಲ್ಲೇ ಮಾರುಕಟ್ಟೆಗೆ ಈರುಳ್ಳಿ ಸಾಗಾಟ: ನೆಟ್ಟಿಗರು ಕಿಡಿ

Viral Video: ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗೆ ಬಳಸಬೇಕಾದ ಆಂಬ್ಯುಲೆನ್ಸ್‌ಗಳನ್ನು ಈರುಳ್ಳಿ‌ ಮೂಟೆ ಸಾಗಿಸಲು ಬಳಸಲಾಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಸರಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Viral Video: 8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ

ಅತೀ ಉದ್ದ ಕೂದಲು ಬೆಳೆಸಿ ಗಿನ್ನೆಸ್ ದಾಖಲೆ ಬರೆದ ಉತ್ತರಾಖಂಡ ಮಹಿಳೆ

Viral News: ಬಹುತೇಕರು ವೆಸ್ಟರ್ನ್ ಲೈಫ್‌ಸ್ಟೈಲ್‌ಗೆ ಆಕರ್ಷಿತರಾಗಿ ಶಾಟ್ ಹೇರ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ಮಧ್ಯೆ ವಿಶ್ವದಲ್ಲೇ ಅತ್ಯಂತ ಉದ್ದವಾದ ಕೂದಲನ್ನು ಬೆಳೆಸಿಕೊಂಡಿರುವ ಮಹಿಳೆಯ ಬಗ್ಗೆ ನಿಮಗೆ ಗೊತ್ತೆ? ಉತ್ತರಾಖಂಡದ ರೇಣು ಧರಿಯಾಲ್ ಎಂಬ ಮಹಿಳೆ ಅತೀ ಉದ್ದ ಕೂದಲನ್ನು ಬೆಳೆಸಿಕೊಂಡು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ಖುಷಿಯನ್ನು ಆಚರಿಸುವುದರ ಜತೆಗೆ ತಮ್ಮ ಕೂದಲನ್ನು ಹೇಗೆ ಕಾಳಜಿ ವಹಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡರ್, ಕೀಪರ್‌ ಆಗಿ ಮಕ್ಕಳಿಗೆ ಸಾಥ್ ನೀಡಿದ ಶ್ವಾನಗಳು! ಕ್ಯೂಟ್ ವಿಡಿಯೊ ನೋಡಿ

ಮಕ್ಕಳ ಜತೆ ಕ್ರಿಕೆಟ್‌ ಆಡಿದ ಶ್ವಾನಗಳು: ವಿಡಿಯೊ ವೈರಲ್

Viral Video: ಕ್ರಿಕೆಟ್ ಆಡಲೆಂದು ಬೆಟ್ಟ ಗುಡ್ಡದ ನಡುವೆ ಗುಂಪು ಸೇರಿದ ಮಕ್ಕಳಿಗೆ ಜನ ಸಾಕಾಗಿಲ್ಲ ಏನು ಮಾಡುವುದೆಂದು ಯೋಚಿಸಿದಾಗ ಸಿಕ್ಕಿದ್ದು ಅಪರೂಪದ ಫೀಲ್ಡರ್‌ಗಳು. ತಮ್ಮ ಜತೆಗಿದ್ದ ನಾಯಿಗಳಿಗೆ ಫೀಲ್ಡಿಂಗ್ ಜವಾಬ್ದಾರಿಯನ್ನು ಮಕ್ಕಳು ನೀಡಿದ್ದಾರೆ. ನಾಯಿಗಳು ಕೂಡ ತಾವೇನು ಕಮ್ಮಿಯಿಲ್ಲ ಎಂಬಂತೆ ಆಟಕ್ಕೆ ಸಾಥ್ ನೀಡಿವೆ.‌ ಈ ಕ್ಯೂಟ್ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ.

ಗ್ರಾಮಕ್ಕೆ ಬಂತು ಮೊದಲ ಸರ್ಕಾರಿ ಬಸ್‌; ಡೋಲು, ನೃತ್ಯದೊಂದಿಗೆ ಸ್ವಾಗತಿಸಿ ಗ್ರಾಮಸ್ಥರು, ವಿಡಿಯೋ ನೋಡಿ

ಹಳ್ಳಿಗೆ ಬಂದ ಮೊದಲ ಸರ್ಕಾರಿ ಬಸ್: ಗ್ರಾಮಸ್ಥರಿಂದ ಅದ್ಧೂರಿ ಪೂಜೆ

Viral Video: ರಾಜಸ್ಥಾನದ ದೂರದ ಹಳ್ಳಿಯೊಂದಕ್ಕೆ ಇದುವರೆಗೆ ಸರಕಾರಿ ಬಸ್ ನ‌ ಸೌಲಭ್ಯ ಇರಲಿಲ್ಲ, ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳೇ ಕಳೆದರೂ ಸಾರ್ವಜನಿಕ ಸಾರಿಗೆ ಸೌಲಭ್ಯ ವಂಚಿತವಾಗಿದ್ದ ಗ್ರಾಮಕ್ಕೆ ಕೊನೆಗೂ ಬಸ್ ನ ಆಗಮನ‌ವಾಗಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳ ನಂತರ ತಮ್ಮ ಪ್ರದೇಶದಲ್ಲಿ ಮೊದಲ ಸರ್ಕಾರಿ ಬಸ್ ಅನ್ನು ಗ್ರಾಮದ ನಿವಾಸಿಗಳು ಸ್ವಾಗತ ಮಾಡಿದ್ದಾರೆ.‌ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಟ್ರೈನ್‌ನಲ್ಲಿ ಪ್ರಯಾಣಿಕರ ಮುಂದೆಯೇ ಮಹಿಳೆ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿದ ಪುರುಷ; ಕ್ರೌರ್ಯದ ವಿಡಿಯೋ ವೈರಲ್‌

ಚಲಿಸುವ ರೈಲಿನಲ್ಲಿ ಯುವತಿ ಮೇಲೆ ದೈಹಿಕ ಹಲ್ಲೆ: ಕಿಡಿಕಾರಿದ ನೆಟ್ಟಿಗರು

Viral Video: ಮುಂಬೈ ನ ಲೋಕಲ್ ಟ್ರೈನ್ ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಬೆಲ್ಟ್ ನಿಂದಲೇ ಹಲ್ಲೆಯನ್ನು ನಡೆಸಿದ್ದಾನೆ. ಬೋಗಿಯಲ್ಲಿ ಸಹಪ್ರಯಾಣಿಕರು ಇದ್ದರೂ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಧಾವಿಸಿರಲಿಲ್ಲ. ಅಲ್ಲಿದ್ದ ಜನರ ಮನಸ್ಥಿತಿಯ ಬಗ್ಗೆಯೂ ನೆಟ್ಟಿಗರು ಕಿಡಿಕಾರಿದ್ದಾರೆ.

ರೈಲಿನ ಕಿಟಕಿ, ರಾಡ್ ಧ್ವಂಸಗೊಳಿಸಿ ಹುಚ್ಚಾಟ ಮೆರೆದ ಯುವಕ: ವಿಡಿಯೋ ನೋಡಿದವರು ಏನಂದ್ರು?

ರೈಲಿನಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ ಯುವಕನ ವಿಕೃತಿ: ವಿಡಿಯೊ ವೈರಲ್

Viral Video: ಸಾರ್ವಜನಿಕ ಸ್ಥಳದಲ್ಲಿರುವ ವಸ್ತುಗಳನ್ನು ಕೆಲವರು ತಮ್ಮದೆ ಆಸ್ತಿ ಎಂಬಂತೆ ಮೆರೆಯುತ್ತಿದ್ದಾರೆ.‌ ಪ್ರವಾಸಿ ಸ್ಥಳದಲ್ಲಿ ಕಸ ಎಸೆಯುವುದು, ವಸ್ತುಗಳನ್ನು ಮುಟ್ಟಿ ಹಾನಿ ಗೆಡವುದು ಹೀಗೆ ದಿನಕ್ಕೊಂದು ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುತ್ತಿದ್ದ ರೈಲಿನಲ್ಲಿ ಯುವಕ ನೊಬ್ಬ ಸಾರ್ವಜನಿಕ ಆಸ್ತಿಯನ್ನು ಧ್ವಂಸ ಗೊಳಿಸಿ ಮಜಾ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈತನ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇನಿದು ವಿಸ್ಮಯ ಬಾವಿ? ಗಾಳಿಯಿಲ್ಲದಿದ್ದರೂ ಅಲೆಗಳಂತೆ ತೂಗಾಡುತ್ತಿದೆ ನೀರು! ಕಾರಣವೇನು?

ಗುಜರಾತ್‌ನಲ್ಲಿದೆ ಅಲೆಗಳಂತೆ ತೂಗಾಡುತ್ತಿರುವ ಬಾವಿಯ ನೀರು? ಏನಿದರ ವಿಶೇಷತೆ?

Viral Video: ಬಾವಿಯಲ್ಲಿರುವ ನೀರು ತಾನಾಗಿಯೇ ಅಲೆಗಳಂತೆ ತೂಗಾಡುವುದನ್ನು ನೀವು ಕಂಡಿದ್ದೀರಾ? ನಿಮಗೂ ಅಚ್ಚರಿ ಎನಿಸಬಹುದು. ಹೌದು ಗುಜರಾತ್ ನ ಮೊರ್ಬಿ ಜಿಲ್ಲೆಯ ವೀರಪರ್ದಾ ಗ್ರಾಮದಲ್ಲಿ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದ್ದು ಬಾವಿಯ ನೀರು ಅಲೆಯಂತೆ ಅಪ್ಪಳಿಸುತ್ತಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಅಯ್ಯೋ ಇದೆಂತಾ ಹುಚ್ಚಾಟ! ಎತ್ತರದ ಬೀದಿ ದೀಪ ಕಂಬವೇರಿ ಪುಲ್-ಅಪ್ಸ್ ಮಾಡಿದ ಯುವಕ!

ರೀಲ್ಸ್ ಗಾಗಿ ಪ್ರಾಣದ ಹಂಗು ತೊರೆದು ಬೀದಿ ದೀಪ ಏರಿದ ಯುವಕ! ನೆಟ್ಟಿಗರು ಕಿಡಿ

Viral Video: ವೈರಲ್ ಆಗುವ ಉದ್ದೇಶದಿಂದ ರಸ್ತೆ ಮಧ್ಯೆ ಡ್ಯಾನ್ಸ್ ಮಾಡುವುದು, ರೈಲು ಹಳಿಯಲ್ಲಿ ಹುಚ್ಚಾಟ ಮೆರೆಯುವುದು ಹೀಗೆ ಹಲವು ಘಟನೆಗಳು ವರದಿಯಾಗಿವೆ. ಇದೀಗ ಯುವಕನೊಬ್ಬ ಅಪಾಯಕಾರಿ ಕಂಬವೇರಿ ಪುಲ್- ಅಪ್ಸ್ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು ಎತ್ತರದ ಬೀದಿ ದೀಪದ ಕಂಬವನ್ನು ಯಾವುದೇ ಸುರಕ್ಷಿತ ವಸ್ತು ಬಳಸದೇ ಮೇಲೆ ಹತ್ತಿದ್ದಾನೆ. ಈ ದೃಶ್ಯ ನೋಡಿದಾಗಲೇ ಮೈ ಜುಮ್ಮೆನಿಸುವಂತಿದೆ.

ಮುರಿದ ಕಾಲು, ದಾರಿದ್ರ್ಯ ; ಚಿಕಿತ್ಸೆಗಾಗಿ ಟ್ರೈಸಿಕಲ್‌ನಲ್ಲಿ 150 ಕಿ.ಮೀ.ಸಂಚರಿಸಿದ 73 ವರ್ಷದ ವೃದ್ಧ

ಚಿಕಿತ್ಸೆಗಾಗಿ ಟ್ರೈಸಿಕಲ್‌ನಲ್ಲಿ 150 ಕಿ.ಮೀ. ಪ್ರಯಾಣಿಸಿದ ವೃದ್ಧ!

ಒಡಿಶಾದ 73 ವರ್ಷದ ಸುಕದೇವ್ ನಾಹಕ್ ಅವರು ಮುರಿದ ಎಡ ಕಾಲು, ಬಡತನ ಮತ್ತು ಕುಟುಂಬದ ಬೆಂಬಲವಿಲ್ಲದ ಪರಿಸ್ಥಿತಿಯ ನಡುವೆಯೂ ಚಿಕಿತ್ಸೆ ಪಡೆಯುವ ದೃಢ ಸಂಕಲ್ಪದಿಂದ ಸುಮಾರು 150 ಕಿಲೋಮೀಟರ್ ದೂರವನ್ನು ಟ್ರೈಸಿಕಲ್‌ನಲ್ಲಿ ಕ್ರಮಿಸಿ ಬರ್ಹಾಂಪುರದ ಎಂ.ಕೆ.ಸಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತಲುಪಿದ್ದಾರೆ. ದಾರಿಯುದ್ದಕ್ಕೂ ಅಪರಿಚಿತರ ನೆರವಿನಿಂದ ಆಹಾರ ಪಡೆದು ಪ್ರಯಾಣಿಸಿದ ಅವರ ಬದುಕಿನ ಹೋರಾಟ ಇದೀಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ಚಿಕಿತ್ಸೆಯ ಜವಾಬ್ದಾರಿಯನ್ನು ಆಸ್ಪತ್ರೆ ಆಡಳಿತ ವಹಿಸಿಕೊಂಡಿದೆ.

ವಿಮಾನ ಹಾರಾಟದ ವೇಳೆ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ: ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿಗಳು!

ವಿಮಾನ ಪ್ರಯಾಣದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನ: ವಿಡಿಯೊ ವೈರಲ್

Viral Video: ಪ್ರಯಾಣಿಕನೊಬ್ಬ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ವಿಮಾನದಲ್ಲಿದ್ದ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ತಕ್ಷಣವೇ ಕ್ರಾಯಪ್ರವೃತ್ತರಾಗಿ ಆತನನ್ನು ತಡೆದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಐಟಿ ಕಂಪನಿಯ 18 ಲಕ್ಷ ರುಪಾಯಿ ಸಂಬಳ ತೊರೆದು ಡೇರಿ ಉದ್ಯಮ ಆರಂಭಿಸಿದ 42 ವರ್ಷದ ಟೆಕ್ಕಿ! ಸ್ಫೂರ್ತಿದಾಯಕ ವಿಡಿಯೊ ನೋಡಿ

ಐಟಿ ಕಂಪನಿ ಜಾಬ್ ತೊರೆದು ಡೇರಿ ಉದ್ಯಮ ಆರಂಭಿಸಿ ಸಕ್ಸಸ್ ಕಂಡ 42ರ ಟೆಕ್ಕಿ

Viral News: ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ಸಂಬಳ ಸಿಗುತ್ತಿದ್ದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಲು ಇಚ್ಚಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಅಧಿಕಾರ ದರ್ಪದಿಂದ ಬೀದಿಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ: ಕಣ್ಣೀರಿಟ್ಟ ಮಾರಾಟಗಾರನ ವಿಡಿಯೊ ವೈರಲ್‌

ಬೀದಿ ಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ

Viral Video: ಕಾನೂನು ರಕ್ಷಿಸಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸ್ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕ್ರಮವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೋರಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್

81ರ ಅಜ್ಜಿ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೇಮ ಈಗ ಮದುವೆಯತ್ತ

Viral Video: ಫ್ರಾನ್ಸ್‌ನ 81 ವರ್ಷದ ಮಹಿಳೆ ಮತ್ತು ಸೆನೆಗಲ್‌ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಎರಡು ವರ್ಷಗಳ ಆನ್‌ಲೈನ್‌ ಸಂಪರ್ಕದ ಬಳಿಕ ಸೆನೆಗಲ್‌ನಲ್ಲಿ ಮೊದಲ ಬಾರಿ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದೆ. 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಈ ಜೋಡಿ ಮುಂದಾಗಿದೆ.

Loading...