ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಲಿಫ್ಟ್‌ ದಿಢೀರ್ ಚಲಿಸಿ ಮಹಿಳೆ ಸಾವು: ಮಗಳು, ಮೊಮ್ಮಗನ ಕಣ್ಣೆದುರೇ ದುರಂತ; ವಿಡಿಯೊ ವೈರಲ್‌

ಲಿಫ್ಟ್‌ನ ಬಾಗಿಲಿಗೆ ಸಿಲುಕಿ ಮಹಿಳೆ ಸಾವು; ವಿಡಿಯೊ ವೈರಲ್‌

Viral Video: ಆಂಧ್ರ ಪ್ರದೇಶದ ಒಂಗೋಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬಾಗಿಲು ತೆರೆದಿದ್ದಾಗಲೇ ಲಿಫ್ಟ್‌ ಏಕಾಏಕಿ ಚಲಿಸಿದ ಪರಿಣಾಮ ವನಿತಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮಗಳು ಮತ್ತು ಮೊಮ್ಮಗ ಲಿಫ್ಟ್‌ನಿಂದ ಹೊರಬಂದ ಬಳಿಕ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಡೆಲಿವರಿ ಸಿಬ್ಬಂದಿಯ ಕಷ್ಟ ಅರಿಯಲು ಬೆಂಗಳೂರಿನಲ್ಲಿ ರ‍್ಯಾಪಿಡೋ ಓಡಿಸಿದ ವಿದ್ಯಾರ್ಥಿ: ಗಿಗ್ ಕಾರ್ಮಿಕರು ಎದುರಿಸುವ ಸವಾಲು ಬಿಚ್ಚಿಟ್ಟ ಯುವಕ

ಡೆಲಿವರಿ ಸಿಬ್ಬಂದಿ ಎದುರಿಸುವ ಕಷ್ಟದ ಬಗ್ಗೆ ಬೇಸರ ಹೊರಹಾಕಿದ ವಿದ್ಯಾರ್ಥಿ

Viral News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಸತತ ಮೂರು ತಿಂಗಳ ಕಾಲ ಕೆಲಸ ಮಾಡಿದ್ದಾನೆ. ಗಿಗ್ ಕಾರ್ಮಿಕರು ಹೇಗೆ ದುಡಿಯುತ್ತಾರೆ? ಹೇಗೆ ಹಣವನ್ನು ಗಳಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆತ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾನೆ. ತನಗೆ ಇದು ನಿಜಕ್ಕೂ ಒಳ್ಳೆಯ ಸೈಡ್ ಬಿಸೆನೆಸ್ ಆಗಿತ್ತು ಎಂದ ಅವರು ಈ ಕೆಲಸವನ್ನು ತಮ್ಮ ಜೀವನೋಪಾಯವಾಗಿ ಅವಲಂಬಿಸಿರುವ ಸಿಬ್ಬಂದಿಬಗ್ಗೆ ಆತಂಕ ವ್ಯಕ್ತಪಡಿಸಿದರು.

ಶಿಲ್ಲಾಂಗ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಕೆಎಸ್‌ಯು ಪ್ರತಿಭಟನೆ: ಪ್ರವಾಸಿಗರ ಕಾರ್‌ ಮೇಲೆ ಭೀಕರ ದಾಳಿ! ಮಗುವಿಗೆ ಗಾಯ

ಶಿಲ್ಲಾಂಗ್‌ನಲ್ಲಿ ಪ್ರವಾಸಿಗರ ಕಾರ್ ಮೇಲೆ ದಾಳಿ ನಡೆಸಿದ ಪ್ರತಿಭಟನಕಾರರು

Viral Video: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಖಾಸಿ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ನಡೆಸಿದ ಕಪ್ಪು ಬಾವುಟದ ಬೈಕ್ ರ್‍ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ. ಈ ನಡುವೆ ಪ್ರವಾಸಿಗರ ವಾಹನವೊಂದರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು ಮಗುವೊಂದು ಗಾಯಗೊಂಡಿದೆ‌.

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್; ಕಾರ್ಮಿಕರ ಕಷ್ಟದ ಜೀವನದ ಕುರಿತು ಹೇಳಿದ್ದೇನು?

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್

ಬೆಂಗಳೂರಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ತನ್ನ 3 ತಿಂಗಳ ಕಾಲೇಜು ರಜೆಯ ಅವಧಿಯಲ್ಲಿ ರ‍್ಯಾಪಿಡೋ ಬೈಕ್ ರೈಡರ್ ಆಗಿ ಕೆಲಸ ಮಾಡಿ, ದಿನನಿತ್ಯ ಆನ್‌ಲೈನ್ ಗಿಗ್ ವರ್ಕರ್ಸ್ ಅನುಭವಿಸುವ ಕಹಿ ಸತ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸಧ್ಯ ಈ ಪೋಸ್ಟ್‌ ಭಾರಿ ವೈರಲ್ ಆಗಿದೆ.

"ನಮ್ಮ ತೆರಿಗೆಯಿಂದಲೇ ನಿಮಗೆ ಸಂಬಳ ಬರೋದು": ಸೇನಾ ಸಿಬ್ಬಂದಿ ಜತೆ ಜೆನ್ ಝೀ ಯುವತಿಯ ಕಿರಿಕ್‌; ವಿಡಿಯೊ ವೈರಲ್‌

ಲಡಾಖ್‌ನಲ್ಲಿ ಸೇನಾ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದ ಜೆನ್ ಝೀ ಯುವತಿ

Viral News: ಕೆಲವು ದಿನಗಳಿಂದ ಜೆನ್ ಝೀಗಳಾದ್ದೇ ಹವಾ. ಕೆಲವೆಡೆ ತಮ್ಮದೆ ನಿಲುವು ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಈ ನಡುವೆ ಚೆಕ್ ಪೋಸ್ಟ್ ಒಂದರಲ್ಲಿ ಯುವತಿಯೊಬ್ಬಳು ಅಲ್ಲಿನ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. "ನಾವು ಜೆನ್ ಝೀಗಳು ಈ ಅಸಂಬದ್ಧತೆಯನ್ನು ಸಹಿಸುವುದಿಲ್ಲʼʼ ಎಂದು ಪದೇ ಪದೆ ಹೇಳಿ ಜಗಳ ಮಾಡಿದ್ದಾಳೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಅಮೆರಿಕಕ್ಕೆ ಕೇವಲ ಉದ್ಯೋಗಕ್ಕಾಗಿ ಬರಬೇಡಿ: ಭಾರತೀಯ ಯುವಜನತೆಗೆ ಸಲಹೆ ನೀಡಿದ ದಂಪತಿ

ಉದ್ಯೋಗಕ್ಕಾಗಿ ಅಮೆರಿಕ ತೆರಳುವ ಭಾರತೀಯರಿಗೆ ಎಚ್ಚರಿಕೆ ನೀಡಿದ ದಂಪತಿ

Viral News: ಭಾರತೀಯ ಯುವಕರಿಗೆ ಅಮೆರಿಕದಲ್ಲಿ ನೆಲೆಸಿರುವ ದಂಪತಿ ಮುಖ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಇಲ್ಲಿಗೆ ಬರಬೇಡಿ, ಈಗ ಭಾರತದಲ್ಲೇ ಉತ್ತಮ ಅವಕಾಶಗಳಿದೆ. ಯುವ ಭಾರತೀಯರು ವಿದೇಶಕ್ಕೆ ಬರುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಟ್ಟದಲ್ಲೊಂದು ಎಲ್ಲೂ ಸಿಗದ ಉದ್ಯೋಗಾವಕಾಶ: ಪ್ರಕೃತಿಯ ಸೌಂದರ್ಯ ಸೆರೆಹಿಡಿದು ತಿಂಗಳಿಗೆ 8.5 ಲಕ್ಷ ರೂ. ಸಂಪಾದಿಸಿದ ಯುವಕ!

ಪ್ರಕೃತಿ ಸೌಂದರ್ಯ ಚಿತ್ರೀಕರಣ ಮಾಡಿ ತಿಂಗಳಿಗೆ 8.5 ಲಕ್ಷ ಗಳಿಸಿದ 23ರ ಯುವಕ!

Viral News: ಚೀನಾದಲ್ಲಿ 23 ವರ್ಷದ ಯುವಕನೊಬ್ಬ ಕೆಲಸದ ಭಾಗವಾಗಿ ಪರ್ವತದ ಮೇಲೆ ವಾಸಿ ಸುತ್ತಾ, ಮೋಡಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸುತ್ತಾ ಒಂದು ತಿಂಗಳು ಕಳೆದಿದ್ದಾನೆ. ಪ್ರಕೃತಿ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಈತ ಪ್ರಸಿದ್ಧಿ ಪಡೆದಿದ್ದಾನೆ.

ಡ್ರಗ್ಸ್ ನಿಷೇಧಕ್ಕಾಗಿ ಯುವಕನ ವಿಶೇಷ ಅಭಿಯಾನ: ಫ್ರಂಟ್ ವೀಲ್ ಇಲ್ಲದ ಸೈಕಲ್‌ನಲ್ಲಿ 7,000 ಕಿ.ಮೀ ಪ್ರಯಾಣ!

ಡ್ರಗ್ಸ್ ಜಾಗೃತಿಗಾಗಿ ವಿಭಿನ್ನ ಸಾಹಸ ಮಾಡಲು ಮುಂದಾದ ಯುವಕ!

Viral News: ಮುಂಭಾಗದ ಚಕ್ರವಿಲ್ಲದೆ ಸಾವಿರಾರು ಕಿಲೋಮೀಟರ್ ಸೈಕಲ್ ಸವಾರಿ ಮಾಡುವ ಮೂಲಕ ಕೇರಳದ ಯುವಕ ಭಾರೀ ಸುದ್ದಿಯಾಗಿದ್ದಾರೆ. ಬರೋಬ್ಬರಿ 7,000 ಕಿಲೋ ಮೀಟರ್ ಸೈಕಲ್ ನಲ್ಲೇ ಪ್ರಯಾಣಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ವಿಶೇಷ ಜಾಗೃತಿ ಅಭಿಯಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಅಪರೂಪದ ಹೋರಾಟ; ನಾಯಿಯ ಮುಖವಾಡ ಧರಿಸಿ ದೂರು ನೀಡಿದ ವ್ಯಕ್ತಿ

ನಾಯಿಯ ಮುಖವಾಡ ಧರಿಸಿ ಪಾಲಿಕೆ ವಿರುದ್ಧ ಪ್ರತಿಭಟನೆ

Dog Mask: ಮಧ್ಯ ಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ವೇಳೆ ವ್ಯಕ್ತಿಯೊಬ್ಬರು ನಾಯಿಯ ಮುಖವಾಡ ಧರಿಸಿ ಮಹಾನಗರ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಬೀದಿ ನಾಯಿಗಳ ಸಂತಾನಶಕ್ತಿಹರಣ ಯೋಜನೆ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತ ತನಿಖೆಗೆ ಭರವಸೆ ನೀಡಿದೆ.

ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು; ಫೋಟೊದಲ್ಲಿದ್ದವನೇ ಬೇರೆ, ಎದುರು ನಿಂತವನೇ ಬೇರೆ!

ಮಂಟಪಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ವಧು

Viral Video: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೊನೆಯ ಕ್ಷಣದಲ್ಲಿ ವರಿಸಲು ನಿರಾಕರಿಸಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಲೋಕ ಭವನದ ಬಳಿ ಪ್ರಜ್ಞೆ ತಪ್ಪಿದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್‌

ಪ್ರಜ್ಞಾಹೀನನಾದ ವ್ಯಕ್ತಿ ನೆರವಿಗೆ ಧಾವಿಸಿದ ಕೇರಳ ರಾಜ್ಯಪಾಲ

ಲೋಕಭವನದ ಬಳಿ ಪ್ರಜ್ಞಾಹೀನನಾಗಿ ಬಿದ್ದ ವ್ಯಕ್ತಿಯ ನೆರವಿಗೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಧಾವಿಸಿದ ಘಟನೆ ಬುಧವಾರ ನಡೆದಿದೆ. ಅವರಿಗೆ ಅಗತ್ಯವಾದ ವೈದ್ಯಕೀಯ ನೆರವು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಅವರು ಬಳಿಕ ಓಣಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸಲು ತೆರಳಿದರು.

ತಾಜ್ ಮಹಲ್ ಆವರಣದಲ್ಲಿ ಪೂಜೆ, ಆರತಿ; ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರ ವಿರುದ್ಧ ಪ್ರಕರಣ ದಾಖಲು

ತಾಜ್ ಮಹಲ್ ಆವರಣದಲ್ಲಿ ಪೂಜೆ, ಆರತಿ

ಸಾವನ್ ತಿಂಗಳ ಮೂರನೇ ಸೋಮವಾರದಂದು ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರು ಆಗ್ರಾದ ತಾಜ್‌ ಮಹಲ್‌ ಬಳಿ ಪೂಜೆ, ಆರತಿ, ಜಲ ಅಭಿಷೇಕ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ಈ ಘಟನೆಯ ಎರಡು ವೀಡಿಯೊಗಳು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು.

ಫೋರ್ಕ್, ಸ್ಪೂನ್ ಬಳಸಿ ದೋಸೆ ತಿನ್ನಲು ಹೇಳಿಕೊಟ್ಟ ಶಿಕ್ಷಕ:  ಫೈವ್ ಸ್ಟಾರ್ ಹೋಟೆಲ್‌ನಲ್ಲೂ ಕೈಯಲ್ಲಿ ತಿಂದ್ರೆನೆ ರುಚಿ ಎಂದ ನೆಟ್ಟಿಗರು!

ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟು ಟೀಕೆಗೆ ಗುರಿಯಾದ ಶಿಕ್ಷಕ

Viral News: ಶಿಕ್ಷಕನೊಬ್ಬ ಫೋರ್ಕ್ ಸ್ಪೂನ್ ಬಳಸಿ ದೋಸೆ ತಿನ್ನುವುದು ಹೇಗೆ? ಎಂದು ತೋರಿಸಿ ಕೊಟ್ಟಿದ್ದಾನೆ. ಫೋರ್ಕ್ ಮತ್ತು ಸ್ಪೂನ್ ಸಹಾಯದಿಂದ ಮಡಚಿ, ಸಣ್ಣ ತುಂಡುಗಳನ್ನಾಗಿ ದೋಸೆ ಕತ್ತರಿಸಿ ತಿಂದಿದ್ದಾನೆ. ಆದರೆ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆಗೆ ಗುರಿಯಾಗಿದ್ದಾನೆ. ಸಾಂಪ್ರದಾಯಿಕ ಖಾದ್ಯಕ್ಕೆ ಹೊಸ ಊಟದ ನಿಯಮಗಳ ಅಗತ್ಯವಿದೆಯೇ ಎಂದು ಹಲವರು ಪ್ರಶ್ನಿಸಿದ್ದು ಭಾರತೀಯ ಆಹಾರವನ್ನು ಕೈಯಿಂದಲೇ ತಿಂದರೆ ರುಚಿ ಹೆಚ್ಚು ಎಂದಿದ್ದಾರೆ.

ಬೆಳಿಗ್ಗೆ 10 ಗಂಟೆಯಾದ್ರೂ ಇಡೀ ಆಫೀಸ್‌ ಖಾಲಿ-ಖಾಲಿ; ಬೆಂಗಳೂರಿನ ಟ್ರಾಫಿಕ್‌ ಕುರಿತು ಸ್ಟಾರ್ಟ್‌ ಅಪ್‌ ಫೌಂಡರ್‌ ಹೇಳಿದ್ದೇನು?

ಬೆಂಗಳೂರಿನ ಟ್ರಾಫಿಕ್‌ ಕುರಿತು ಸ್ಟಾರ್ಟ್‌ ಅಪ್‌ ಫೌಂಡರ್‌ ಹೇಳಿದ್ದೇನು?

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಬಗ್ಗೆ ದಿನೇ ದಿನೇ ದೂರು ಕೇಳಿ ಬರುತ್ತಿರುತ್ತವೆ. ಇದೀಗ ಕಂಪನಿ ಬಾಸ್‌ ಒಬ್ಬರು ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಟ್ರಾಫಿಕ್‌ನಿಂದಾಗಿ ಬೆಳಿಗ್ಗೆ 10. 15 ಆದರೂ ಇನ್ನೂ ಯಾರೂ ಕಚೇರಿ ತಲುಪಿಲ್ಲ ಎಂಬ ಶೀರ್ಷಿಕೆಯಡಿ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.

Viral Video: ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಮ್ಯಾಜಿಕ್‌ ಅಲ್ಲ, ಕಳಪೆ ಕಾಮಗಾರಿಯ ಎಫೆಕ್ಟ್‌

ನೋಡನೋಡುತ್ತಿದ್ದಂತೆ ರಸ್ತೆಯಿಂದ ಜಿನುಗಿತು ನೀರು; ವಿಡಿಯೊ ವೈರಲ್‌

Indore's Smart City Road: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಭಾರಿ ಕಾಮಗಾರಿ ಅಕ್ರಮವೊಂದು ಬಯಲಾಗಿದೆ. ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಿರ್ಮಿಸಿದ್ದ ರಸ್ತೆಯೊಂದು ಪೈಪ್‌ಲೈನ್ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲೇ ಏಕಾಏಕಿ ಬಿರುಕು ಬಿಟ್ಟಿದೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಬೆಂಗಳೂರಿನ ಜನ ಪ್ರತಿಭಾವಂತರು; ಪ್ರಯಾಣ ಮಾತ್ರ ಆರೋಗ್ಯವನ್ನೇ ಕೆಡಿಸಿತುʼʼ: ಸಿಲಿಕಾನ್‌ ಸಿಟಿಯ ಬಗ್ಗೆ ದೆಹಲಿಯ ಉದ್ಯಮಿ ಹೇಳಿದ್ದೇನು?

ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ ದೆಹಲಿ ಉದ್ಯಮಿ

Viral News: ಖ್ಯಾತ ಮಹಿಳಾ ಉದ್ಯಮಿಯೊಬ್ಬರು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬೆಂಗಳೂರಿನ ಉದ್ಯಮಿಗಳು, ಉತ್ಪನ್ನ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನ ವೃತ್ತಿಪರರ ಶ್ರಮ ಅದ್ಭುತವಾದುದು. ಆದರೆ ಇಲ್ಲಿನ ದೈನಂದಿನ ಸಂಚಾರ ಹಾಗೂ ಟ್ರಾಫಿಕ್ ತಮ್ಮ ಆರೋಗ್ಯವನ್ನೇ ಹಾಳುಗೆಡವಿದೆ ಎಂದು ಹೇಳಿಕೊಂಡಿದ್ದಾರೆ.

ವಸತಿ ಗೃಹಕ್ಕೆ ನುಗ್ಗಲು ಯತ್ನಿಸಿದ ಬೃಹತ್ ಗಾತ್ರದ ಮೊಸಳೆ: ಭಯಾನಕ ವಿಡಿಯೊ ನೋಡಿ

ಗೋವಾದಲ್ಲಿ ಮನೆ ಅಂಗಳಕ್ಕೆ ನುಗ್ಗಿದ ದೈತ್ಯ ಮೊಸಳೆ: ಭಯಾನಕ ವಿಡಿಯೊ!

Viral Video: ದೈತ್ಯಾಕಾರದ ಮೊಸಳೆಯೊಂದು ಗೋವಾದ ಖಾಂಡೇಪಾರ ಗ್ರಾಮದ ವಸತಿ ಪ್ರದೇಶ ವೊಂದಕ್ಕೆ ದಿಢೀರ್ ಆಗಿ ನುಗ್ಗಿದೆ. ಮನೆಗಳ ಹತ್ತಿರದಲ್ಲಿಯೇ ಇಷ್ಟು ದೊಡ್ಡ ಮೊಸಳೆ ಕಂಡು ಗ್ರಾಮಸ್ಥರು ಕಳವಳವನ್ನು ವ್ಯಕ್ತಪಡಿಸಿದ್ದಾರೆ‌. ಕೂಡಲೆ ಅಲ್ಲಿದ್ದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಗೊಂಡಿ ದ್ದಾರೆ. ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಚೀನಾ ಅಗ್ಗವೇ? ತಿಂಗಳಿಗೆ 9.81 ಲಕ್ಷ ರೂ ಖರ್ಚು ಮಾಡುವ ಭಾರತೀಯ ಕುಟುಂಬ ಹೇಳಿದ್ದೇನು?

ಚೀನಾದ ದುಬಾರಿ ವೆಚ್ಚ: ತಿಂಗಳಿಗೆ 9.81 ಲಕ್ಷ ಖರ್ಚು ಮಾಡುವ ಭಾರತೀಯ ಕುಟುಂಬ

Viral News: ಚೀನಾದ ಶಾಂಘೈ ನಗರದಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು 4 ಜನರ ಕುಟುಂಬದ ವೆಚ್ಚ ಏಷ್ಟಿದೇ? ಎಂಬುದನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸುಮಾರು ರೂ. 10 ಲಕ್ಷ ಖರ್ಚು ಮಾಡುವುದನ್ನು ಹೇಳಿಕೊಂಡಿದ್ದು ಬಾಡಿಗೆ ಮತ್ತು ಅಂತರರಾಷ್ಟ್ರೀಯ ಶಾಲಾ ಶುಲ್ಕಗಳು ಅದರಲ್ಲಿ ಹೆಚ್ಚಿನ ಭಾಗವನ್ನು ಹೊಂದಿವೆ..

ಜನವಸತಿ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಕುದುರೆಯನ್ನು ಕೊಂದು ಕಾಡಿಗೆ ಎಳೆದೊಯ್ದ ಹುಲಿ: ಭಯಾನಕ ವಿಡಿಯೊ ವೈರಲ್

ಕುದುರೆಯನ್ನು ಕೊಂದು ಕಾಡಿಗೆ ಎಳೆದೊಯ್ದ ಹುಲಿ: ಮೈ ಜುಮ್ಮೆನಿಸುವ ದೃಶ್ಯ!

Viral Video: ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹುಲಿಯೊಂದು ಹಗಲಿನಲ್ಲೇ ಜನವಸತಿ ಪ್ರದೇಶಕ್ಕೆ ನುಗಿದ್ದು ಕುದುರೆಯ ಮೇಲೆ ದಾಳಿ ಮಾಡಿ ಕೊಂದಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ದಾರಿಯಲ್ಲೇ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಈ ಆತಂಕಕಾರಿ ಘಟನೆಯ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಹುಲಿಯೂ ಕುದುರೆಯ ಮೇಲೆ ದಾಳಿ ಮಾಡಿ ನಂತರ ಅದರ ಶವವನ್ನು ಕಾಡಿನ ಕಡೆಗೆ ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ..

ಭಾರತದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ: ಇಲ್ಲಿನ ವೈದ್ಯಕೀಯ ಸೌಲಭ್ಯ ಕೊಂಡಾಡಿದ ಅಮೆರಿಕ ನಿವಾಸಿ

ಭಾರತದ ಆರೋಗ್ಯ ಸೇವೆಗೆ ಫಿದಾ ಆದ ಅಮೆರಿಕ ನಿವಾಸಿ

Viral News: ಭಾರತದ ಪ್ರವಾಸೋದ್ಯಮ ಹಾಗೂ ಆರೋಗ್ಯ ಸೇವೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇಲ್ಲಿನ ಕೈಗೆಟುಕುವ ಗುಣಮಟ್ಟದ ಸೌಲಭ್ಯದ ಬಗ್ಗೆ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಡಿಶಾದ ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ತಾವು ಪಡೆದ ಉಚಿತ ಚಿಕಿತ್ಸೆಯ ಅನುಭವವನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Viral Video: ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

ಹರಿಹರ ಕೋಟೆಯಲ್ಲಿ ಪ್ರವಾಸಿಗರ ದಂಡು! ಆಡಳಿತದ ನಿರ್ಲಕ್ಷ್ಯಕ್ಕೆ ಕಿಡಿ

Viral Video: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಹರಿಹರ ಕೋಟೆಯಲ್ಲಿ ಜನ ಸಾಗರವೇ ಸೇರಿರುವ ದೃಶ್ಯವೊಂದು ವೈರಲ್ ಆಗಿದೆ. ಕಡಿದಾದ ಬಂಡೆಗಳಲ್ಲಿ ಕೆತ್ತಲಾದ ಕಿರಿದಾದ ಮೆಟ್ಟಿಲುಗಳ ಮೇಲೆ ನೂರಾರು ಪ್ರವಾಸಿಗರು ಸೇರಿದ್ದು, ಸುರಕ್ಷತೆ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.‌ ಸದ್ಯ ಈ ಅಘಾತಕಾರಿ ವಿಡಿಯೊ ವೈರಲ್ ಆಗುತ್ತಿದೆ.

ಫ್ಲಿಪ್‌ಕಾರ್ಟ್‌ನ ಶ್ರದ್ಧಾಂಜಲಿ ಶೈಲಿಯ ಜಾಹೀರಾತಿಗೆ ತೀವ್ರ ವಿರೋಧ: ನಿಮ್ಮ ಸೇಲ್ ಫ್ಲಾಪ್ ಆಗಲಿ ಎಂದ ನೆಟ್ಟಿಗರು

ಫ್ಲಿಪ್‌ಕಾರ್ಟ್‌ನ ಜಾಹೀರಾತು ವಿನ್ಯಾಸಕ್ಕೆ ನೆಟ್ಟಿಗರು ಆಕ್ರೋಶ

Viral News: ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ತನ್ನ ‘ಫ್ರೀಡಂ ಸೇಲ್’ ಕೊಡುಗೆಯ ಪ್ರಚಾರಕ್ಕಾಗಿ ಮುದ್ರಣ ಜಾಹೀರಾತುವೊಂದನ್ನು ನೀಡಿದೆ. ಸೇಲ್ ಕೊನೆಗೊಂಡಿದೆ ತಿಳಿಸಲು ಸಂಸ್ಥೆಯು ವಿಭಿನ್ನ ಮಾದರಿಯ ವಿನ್ಯಾಸವನ್ನು ಹಂಚಿಕೊಂಡಿದೆ. ಸಾವು ಮತ್ತು ಸಂತಾಪ ಸೂಚಿಸುವ ಮಾದರಿಯನ್ನು ವ್ಯಾಪಾರಕ್ಕೆ ಬಳಸಿಕೊಂಡಿರುವುದು ಇದೀಗ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರ್ಕೆಟಿಂಗ್ ವ್ಯವಹಾರ, ಆಕರ್ಷಣೆಗಾಗಿ ಈ ರೀತಿ ಜಾಹೀರಾತು ನೀಡುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾದ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಶಾಲಾ ಮಾಲಕ: ಭುಗಿಲೆದ್ದ ವಿವಾದ

ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಶಾಲಾ ಮಾಲಕರು

ಸ್ವಾತಂತ್ರ್ಯ ದಿನಾಚರಣೆಯಂದು ಗೈರಾದ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೂಲಕ ಶಾಲಾ ಮಾಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರು ಭಾರತದಲ್ಲಿ ವಾಸಿಸಲು ಅರ್ಹರಲ್ಲ ಎಂದು ಹೇಳಿದ್ದಾರೆ. ಶಾಲಾ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈ ಸಂದೇಶ ಹಂಚಿಕೊಂಡಿದ್ದಾರೆ.

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

Loading...