ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮನೆಗೆ ನುಗ್ಗಲು ಯತ್ನಿಸಿದ ಹೆಬ್ಬಾವಿನ ಬೃಹತ್‌ ಗಾತ್ರ ನೋಡಿಯೇ ಬೆಚ್ಚಿಬಿದ್ದ ಸ್ಥಳೀಯರು: ವಿಡಿಯೊ ಇಲ್ಲಿದೆ

ಮನೆಯೊಳಗೆ ನುಗ್ಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವು: ವಿಡಿಯೊ ನೋಡಿ

Viral Video: ಜನ ವಸತಿ ಪ್ರದೇಶದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರಾಮಸ್ಥರು ಮತ್ತು ದಾರಿಹೋಕರು ಸುತ್ತಲೂ ಜಮಾಯಿಸಿದ್ದರಿಂದ ಹೆಬ್ಬಾವು ಮುಖ್ಯ ರಸ್ತೆಯಲ್ಲಿ ಸಾಗಿ ಜನವಸತಿ ಪ್ರದೇಶದ ಒಳಗೆ ನುಗ್ಗಲು ಯತ್ನಿಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವಿನ ಗಾತ್ರ ನೋಡಿಯೇ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

"ಮೊನಲಿಸಾಗೆ ಹೋಲಿಸಬೇಡಿ": ಕನ್ವರ್ ಯಾತ್ರೆಯಲ್ಲಿ ವೈರಲ್ ಆದ ಮಾನ್ಸಿ ಠಾಕೂರ್ ಹೀಗೆ ಮನವಿ ಮಾಡಿದ್ದೇಕೆ?

ಕುಂಭಮೇಳದ ಮೊನಲಿಸಾಳಂತೆ ಕನ್ವರ್ ಯಾತ್ರೆಯಲ್ಲಿ ಮಾನ್ಸಿ ಠಾಕೂರ್ ವೈರಲ್‌

Viral Video: ಮಾನ್ಸಿ ರಜಪೂತ್ ಎಂದೂ ಕರೆಯಲ್ಪಡುವ ಮಾನಸಿ ಠಾಕೂರ್, 61 ಲೀಟರ್ ನೀರು ಹೊತ್ತುಕೊಂಡು 180 ಕಿಲೋ ಮೀಟರ್‌ ದೂರದ ಕನ್ವರ್ ಯಾತ್ರೆ ಕೈಗೊಂಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಕುಂಭಮೇಳದ ಯುವತಿ ಮೊನಲಿಸಾ ಜತೆ ಹೋಲಿಕೆ ಮಾಡಿರುವ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಸ್ಲಂನಲ್ಲಿ ಹುಟ್ಟಿ ಬೆಳೆದ ಯುವಕ ಇಂದು ಫೋನ್‌ಪೇಯಲ್ಲಿ 33 ಲಕ್ಷ ರುಪಾಯಿ ಸಂಬಳ ಪಡೆವ ಉದ್ಯೋಗಿ; ಸ್ಫರ್ತಿಯ ಕಥೆ ಇಲ್ಲಿದೆ

ಬಡತನದಲ್ಲಿ ಅರಳಿದ ಪ್ರತಿಭೆ ಇಂದು ಪ್ರತಿಷ್ಠಿತ ಕಂಪನಿಯ ಉದ್ಯೋಗಿ

Viral News: ಬಡತನದಲ್ಲೇ ಶಿಕ್ಷಣ ಪಡೆದು ಯುವಕನೋರ್ವ ಇಂದು ಪ್ರತಿಷ್ಠಿತ ಕಂಪನಿ ಫೋನ್‌ಪೇಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸ್ಲಂನಲ್ಲಿ ಬೆಳೆದು, ಅನೇಕ ಕಷ್ಟಗಳ ನಡುವೆ ಶಿಕ್ಷಣ ಪೂರ್ತಿಗೊಳಿಸಿದ ಅವರು ಇಂದು 33 ಲಕ್ಷ ರುಪಾಯಿಯ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸದ್ಯ ಈ ಯುವಕನ ಸ್ಫೂರ್ತಿದಾಯಕ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌.

ಟ್ಯಾಕ್ಸಿ ಚಾಲಕನಿಗೆ ಮಹಿಳೆಯರಿಂದ ಬ್ಲ್ಯಾಕ್‌ಮೇಲ್: ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ನೀಡುವುದಾಗಿ ಬೆದರಿಕೆ

ಟ್ಯಾಕ್ಸಿ ಚಾಲಕನಿಗೆ 10,000 ರೂ. ನೀಡುವಂತೆ ಬೆದರಿಕೆ ಹಾಕಿದ ಮಹಿಳೆಯರು

Viral Video: ಚಲಿಸುತ್ತಿದ್ದ ಟ್ಯಾಕ್ಸಿ ಚಾಲಕನಿಗೆ ಕಿರುಕುಳ ಎಸಗಿ ಹತ್ತು ಸಾವಿರ ರೂಪಾಯಿ ನೀಡದಿದ್ದರೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸುವುದಾಗಿ ಮಹಿಳೆಯರು ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ್‌ನಿಂದ ಭಿವಂಡಿ ಕಡೆಗೆ ತೆರಳುತ್ತಿದ್ದ ಟ್ಯಾಕ್ಸಿಯಲ್ಲಿ ಈ ದೌರ್ಜನ್ಯ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ.

ಜನಪ್ರತಿನಿಧಿಗಳ ಗಮನ ಸೆಳೆಯಲು ಹೊಂಡ ಬಿದ್ದ ರಸ್ತೆಗೆ ಪೂಜೆ ಮಾಡಿದ ಸಾರ್ವಜನಿಕರು; ವಿಡಿಯೋ ನೋಡಿ

ಹೊಂಡ ಬಿದ್ದ ರಸ್ತೆಗೆ 'ಪೂಜೆ-ಆರತಿ' ಮಾಡಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು

Viral Video: ಪುಣೆಯ ಪ್ರಮುಖ ಐಟಿ ಹಬ್ ಗಳಾದ ಹಿಂಜವಡಿ,ಮಾನ್ ಮತ್ತು ಮರುಂಜಿಯಲ್ಲಿ ರಸ್ತೆ ಗುಂಡಿಯ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನಪ್ರತಿನಿಧಿಗಳ ಗಮನ ಸೆಳೆಯಲೆಂದು ಅಲ್ಲಿನ ನಾಗರಿಕರು ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ 'ಪೂಜೆ' ಮತ್ತು 'ಆರತಿ' ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿಗಳಿಂದ ಎಣ್ಣೆ ಪಾರ್ಟಿ! ವೈರಲ್‌ ಆಯ್ತು ವಿಡಿಯೋ

ಶಾಲಾ ತರಗತಿಯೊಳಗೆ ವಿದ್ಯಾರ್ಥಿಗಳಿಂದ ಮದ್ಯಪಾನ: ವಿಡಿಯೊ ವೈರಲ್

Viral Video: ಶಾಲೆಗೆ ಬರುವ ಮಕ್ಕಳು ಕೊಠಡಿಯಲ್ಲೆ ಕುಳಿತು ಮದ್ಯಪಾನ ಮಾಡಿರುವ ಅಘಾತಕಾರಿ ವಿಡಿಯೊವೊಂದು ವೈರಲ್ ಆಗಿದೆ. ತರಗತಿ ಯೊಳಗೆ ಕುಳಿತ ವಿದ್ಯಾರ್ಥಿಗಳ ಗುಂಪು ಬಾಟಲಿಗಳು ಮತ್ತು ಆಹಾರ ಪ್ಯಾಕೆಟ್‌ಗಳನ್ನು ಹಿಡಿದು ಕುಳಿತುಕೊಂಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಕ್ಕಲೈ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೋಷಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಛೇ ಇವನೆಂತಾ ಪಾಪಿ; ದೇವಾಲಯದ ಬಳಿ ಕುಳಿತಿದ್ದ ಭಿಕ್ಷುಕಿಯ ಮೇಲೆ ಹಲ್ಲೆ ನಡೆಸಿದ ಅಂಗಡಿ ಮಾಲೀಕ

ದೇವಾಲಯದ ದ್ವಾರದ ಬಳಿ ಕುಳಿತಿದ್ದ ಭಿಕ್ಷುಕಿಯ ಮೇಲೆ ಹಲ್ಲೆ!

Viral Video: ಮಹಿಳಾ ಭಿಕ್ಷುಕಿಯೊಬ್ಬರ ಮೇಲೆ ವ್ಯಕ್ತಿಯೋರ್ವ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗೆ ಕುಳಿತಿದ್ದ ಆಕೆಯ ಮಕ್ಕಳು ದೇವಾಲಯದ ಹೊರಗೆ ನಿಲ್ಲಿಸಿದ್ದ ಬೈಕನ್ನು ಮುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಭೀಕರವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇಂಡಿಗೋ ಫ್ಲೈಟ್ ರದ್ದು: ವಿಮಾನ ನಿಲ್ದಾಣದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಿದ ಮಹಿಳೆ

ಫ್ಲೈಟ್ ರದ್ದು! ವಿಮಾನ ನಿಲ್ದಾಣದಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

Viral Video: ವಿಮಾನ ರದ್ದಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಕೋಪಗೊಂಡು ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೂ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು‌. ಆದರೆ ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಜಗಳವಾಡಿದ್ದು ಸಾರ್ವಜನಿಕ ವಸ್ತುವನ್ನು ಹಾನಿಗೊಳಿಸಿದ್ದಾರೆ

ಆರ್ಥಿಕ ಸ್ವಾತಂತ್ರ್ಯವೇ ಮುಖ್ಯ: ಐಟಿ ಕೆಲಸ ಬಿಡಲು ಹೇಳಿದ ಯುವಕನ ಮದುವೆ ಪ್ರಪೋಸಲ್ ಅನ್ನೇ ಕ್ಯಾನ್ಸಲ್ ಮಾಡಿದ ಯುವತಿ!

ದುಪ್ಪಟ್ಟು ವೇತನ ಗಳಿಸುವ ವರನನ್ನೇ ರಿಜೆಕ್ಟ್ ಮಾಡಿದ ಯುವತಿ: ಕಾರಣವೇನು?

Viral News: ಯುವತಿಯರು ಇಂದು ಆರ್ಥಿಕ ಸ್ವಾವಲಂಬಿಯಾಗಿ ಬದುಕಲು ಇಚ್ಚಿಸಿದ್ದು ತಾವು ಉತ್ತಮ ಉದ್ಯೋಗದಲ್ಲಿದ್ದಾರೆ. ಹೀಗಾಗಿ ವರನಿಂದ ದುಪ್ಪಟ್ಟು ಆದಾಯ ಬರುತ್ತಿದ್ದರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಅನೇಕ ಯುವತಿಯರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ಯುವತಿಯೊಬ್ಬಳು ತಿಂಗಳಿಗೆ ಎರಡು ಲಕ್ಷ ಬರುತ್ತಿದ್ದ ಯುವಕನ ಪ್ರಪೋಸಲ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ‌. ಇದಕ್ಕೆ ಕಾರಣವೆನೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ...

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ವೇಳೆ ರಸ್ತೆಯಲ್ಲೇ ಕುಡಿದು ಗಲಾಟೆ:  ವೈರಲ್‌ ಆಗ್ತಿದೆ ವಿಡಿಯೋ

ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಡಿದು ರಂಪಾಟ ಮಾಡಿದ ಪಾಕಿಸ್ತಾನಿ ನಾಗರಿಕರು

Viral Video: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಈ ದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾರ್ವಜನಿಕರು ಪರಸ್ವರ ಗಲಾಟೆ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಪಾಕಿಸ್ತಾನಿ ನಾಗರಿಕರು ರಸ್ತೆಗಳಲ್ಲಿ ಜಗಳವಾಡುತ್ತಾ, ಪರಸ್ಪರ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಅಂತ್ಯಕ್ರಿಯೆಗೆ ಮುನ್ನ ಖಾಲಿ ಕಾಗದಗಳಲ್ಲಿ ಮೃತ ತಂದೆಯ  ಹೆಬ್ಬೆರಳಿನ ಗುರುತು ಪಡೆದ ಮಗ! ವಿಡಿಯೋ ನೋಡಿ

ಖಾಲಿ ಕಾಗದಗಳಲ್ಲಿ ಮೃತ ತಂದೆಯ ಹೆಬ್ಬೆರಳಿನ ಗುರುತು ಪಡೆದ ಮಗ!

family dispute: ಅಂತ್ಯಕ್ರಿಯೆಗೂ ಮುನ್ನ ಖಾಲಿ ಕಾಗದಗಳಲ್ಲಿ ಮೃತ 75 ವರ್ಷದ ವ್ಯಕ್ತಿಯೊಬ್ಬರ ಹೆಬ್ಬೆರಳಿನ ಗುರುತನ್ನು ಪಡೆಯಲಾಗಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಗದದ ಹಾಳೆಗಳ ಮೇಲೆ ಮೃತ ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ತೆಗೆದುಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

ರೈಲು ಪ್ರಯಾಣದಲ್ಲಿ ಆಹಾರ ಖರೀದಿಸುವ ಮುನ್ನ ಎಚ್ಚರ! ಉದ್ಯೋಗ್ ನಗರಿ ಎಕ್ಸ್‌ಪ್ರೆಸ್‌ ಟ್ರೈನ್‌ ಫುಡ್‌ನಲ್ಲಿ ಇಲಿ ಓಡಾಟ

ರೈಲು ಪ್ರಯಾಣಿಕರಿಗಾಗಿ ತಯಾರಿಸಿದ ಆಹಾರದಲ್ಲಿ ಇಲಿ ಓಡಾಟ

Viral Video: ಉದ್ಯೋಗ ನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಆಹಾರದ ಮೇಲೆ ಇಲಿಯೊಂದು ತೆವಳುತ್ತಿರುವುದು ಮತ್ತು ಹಿಟ್ಟನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೈಲ್ವೇ ಆಡಳಿತ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.

"ಸಿಬ್ಬಂದಿಯ ರೆಸ್ಪಾನ್ಸ್ ಇಲ್ಲ, ಉಪಹಾರವೂ ಇಲ್ಲ'': ಮುಂಬೈ-ಗೋವಾ ಸ್ಪೈಸ್‌ಜೆಟ್ ವಿಮಾನ 6 ಗಂಟೆ ವಿಳಂಬ; ಪ್ರಯಾಣಿಕರಿಗೆ ನರಕಯಾತನೆ

ಮುಂಬೈ-ಗೋವಾ ವಿಮಾನ 6 ಗಂಟೆ ವಿಳಂಬ: ಕಾದು ಸುಸ್ತಾದ ಪ್ರಯಾಣಿಕರು

Viral Video: ವಿಮಾನವೊಂದು 6 ಗಂಟೆ ವಿಳಂಬವಾಗಿದ್ದು, ಸಿಬ್ಬಂದಿ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿದ ಘಟನೆ ನಡೆದಿದೆ. ಯಾವುದೇ ಸರಿಯಾದ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಪ್ರಯಾಣಿಕರು ದೀರ್ಘ ಕಾಲದವರೆಗೆ ಕಾದು ಕೂರುವಂತೆ ಮಾಡಲಾಗಿದೆ. ಕ್ಯಾಪ್ಟನ್ ಅವರನ್ನು ಪದೇ ಪದೆ ವಿನಂತಿಸಿದರೂ ವಿಳಂಬಕ್ಕೆ ಕಾರಣ ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋದ ಯುಟ್ಯೂಬರ್ ಪತ್ನಿ: ʼರೇಸಿಂಗ್‌ʼ ದೃಶ್ಯ ವೈರಲ್

ಬಸ್ ಕಂಡಕ್ಟರ್ ಜತೆ ಓಡಿ ಹೋದ ಯುಟ್ಯೂಬರ್ ಪತ್ನಿ: ವಿಡಿಯೊ ವೈರಲ್

Viral Video: ಕೇರಳಂನ ಯುಟ್ಯೂಬರ್ ಅಖಿಲ್ ಎನ್‌.ಆರ್‌.ಡಿ. ಮತ್ತು ಅವರ ಪತ್ನಿಯ ದಾಂಪತ್ಯ ಕಲಹದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮದುವೆ ಆದ ಕೆಲವೇ ತಿಂಗಳಿನಲ್ಲಿ ಅವರ ಪತ್ನಿ ಮೇಘಾ ಖಾಸಗಿ ಬಸ್ ಕಂಡಕ್ಟರ್‌ ಜತೆ  ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಮೇಘಾ ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

200 ರುಪಾಯಿಯ ಮೀನು ಊಟಕ್ಕೆ 300 ರುಪಾಯಿ ಬಿಲ್: ರಣರಂಗವಾಯ್ತು ಹೋಟೆಲ್‌; ಗ್ರಾಹಕ- ಸಿಬ್ಬಂದಿಯ ಮಾರಾಮಾರಿಯ ವಿಡಿಯೊ ವೈರಲ್‌

200 ರುಪಾಯಿಯ ಊಟಕ್ಕೆ 300 ರುಪಾಯಿ ಬಿಲ್; ಮುಂದೇನಾಯ್ತು?

Viral News: ಹೋಟೆಲ್‌ಗೆ ಬಂದ ಗ್ರಾಹಕರಿಗೆ ಮೀನಿನ ಖಾದ್ಯ ಆರ್ಡರ್ ಮಾಡುವಾಗ 200 ರುಪಾಯಿ ಎಂದು ಹೇಳಲಾಗಿತ್ತು. ಆದರೆ ಊಟ ಮುಗಿಸಿ ಬಿಲ್ ನೋಡಿದಾಗ 300 ರುಪಾಯಿ ಎಂದು ನಮೂದಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಹಕ ಹೋಟೆಲ್‌ ಸಿಬ್ಬಂದಿ ಜತೆ ಜಗಳ ಆರಂಭಿಸಿದ್ದಾನೆ. ಘಟನೆಯಲ್ಲಿ ಹಲವು ಮಂದಿ ಜನರು ಗಾಯಗೊಂಡಿದ್ದು, ಪೀಠೋಪಕರಣಗಳು ಹಾನಿಗೊಳಗಾಗಿವೆ.

"ದೇಶ ಬದಲಾಗುತ್ತಿದೆ": ಹಿಂಸಾಚಾರ ತೊರೆದು ಕೈಮಗ್ಗ ಸೀರೆ ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮಾಜಿ ಮಾವೋವಾದಿಗಳು

ಫ್ಯಾಷನ್ ಶೋದಲ್ಲಿ ರ‍್ಯಾಂಪ್ ವಾಕ್ ಮಾಡಿ ಗಮನ ಸೆಳೆದ ಮಾಜಿ ನಕ್ಸಲರು

Viral Video: ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು ಇಂದು ಸಮಾಜದ ಮುಖ್ಯ ಭಾಗವಾಗಿದ್ದಾರೆ. ರಾಯ್ ಪುರದಲ್ಲಿ ಆಯೋಜನೆ ಮಾಡಲಾಗಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಕೈಮಗ್ಗ ಉಡುಪುಗಳನ್ನು ಧರಿಸಿ ಈ ಮಹಿಳೆಯರು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಬಸ್ತಾರ್‌ನಲ್ಲಿ ಸಶಸ್ತ್ರ ದಂಗೆಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ಶ್ವಾನದ ದಾಳಿ! ಭಯಾನಕ ವಿಡಿಯೊ ವೈರಲ್‌

ಬಾಡಿಗೆ ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ದಾಳಿ

Viral Video: ಪಂಜಾಬ್‌ನ ಪಟಿಯಾಲದ ಮನೆಯೊಂದರ ಹೊರಗೆ ಪಿಟ್‌ಬುಲ್ ಶ್ವಾನ ನಡೆಸಿದ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅಂಕಿತ್ ಸಭರ್ವಾಲ್ ಮತ್ತು ಅವರ ಪತ್ನಿ ಶಿಫಾಲಿ ಬಾಡಿಗೆ ಮನೆಯನ್ನು ನೋಡಲು ತೆರಳಿದಾಗ ಈ ಘಟನೆ ನಡೆದಿದೆ. ದಂಪತಿ ಗೇಟ್ ತೆರೆದ ಕ್ಷಣದಲ್ಲಿ ಸಾಕು ನಾಯಿ ಓಡಿ ಬಂದು ದಾಳಿ ಮಾಡಿದೆ.

ಹೊಡಿ ಮಗ ಹೊಡಿ ಮಗ...: ಕಾಲೇಜಿನಲ್ಲಿ ತಾರಕಕ್ಕೇರಿದ ಜಡೆ ಜಗಳ; ಯುವತಿಯರ ಕಾಳಗದ ವಿಡಿಯೊ ವೈರಲ್‌

ಕಾಲೇಜು ವಿದ್ಯಾರ್ಥಿಗಳಿಂದ ಭೀಕರ ಘರ್ಷಣೆ: ಶಿಸ್ತಿನ ಬಗ್ಗೆ ನೆಟ್ಟಿಗರು ಕಿಡಿ

Viral Video: ಕಾಲೇಜೊಂದರಲ್ಲಿ ಯುವತಿಯರ ಎರಡು ಗುಂಪಿನ ನಡುವೆ ಭೀಕರ ಜಗಳ ನಡೆದಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯುವಕನೊಬ್ಬ ಈ ದೃಶ್ಯ ರೆಕಾರ್ಡ್ ಮಾಡಿದ್ದಾರೆ. ಘರ್ಷಣೆ ತಾರಕಕ್ಕೇರುವ ಮೊದಲು ಎರಡು ಗುಂಪುಗಳು ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಂಡು ಬಂದಿದೆ.

ಪೌಷ್ಟಿಕ ಆಹಾರ ಮರೀಚಿಕೆ; ಅಂಗನವಾಡಿ ಮಕ್ಕಳಿಗೆ ಪೂರಿ, ಉಪ್ಪು ಆಹಾರವಾಗಿ ಬಡಿಸಿದ ಶಿಕ್ಷಕಿಯರು: ವಿಡಿಯೊ ನೋಡಿ

ಅಂಗನವಾಡಿಯಲ್ಲಿ ಮಕ್ಕಳಿಗೆ ಪೂರಿ, ಉಪ್ಪೇ ಆಹಾರ

Viral Video: ಮಧ್ಯ ಪ್ರದೇಶದ ಮೈಹಾರ್ ಜಿಲ್ಲೆಯ ಕಾಕ್ರಾ ಅಂಗನವಾಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಬದಲಿಗೆ ಕೇವಲ ಪೂರಿ ಮತ್ತು ಉಪ್ಪನ್ನು ನೀಡಿರುವ ಘಟನೆ ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಂಗನವಾಡಿ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಸದ್ದಿಲ್ಲದೆ ನಡೆಯಿತು ಮತ್ತೊಂದು ಜೆನ್‌ ಝೀ ಕ್ರಾಂತಿ: ರಸ್ತೆ ದುರವಸ್ತೆ ತೋರಿಸಲು ನ್ಯೂಸ್ ರಿಪೋರ್ಟರ್ ಆದ ಬಾಲಕಿಯರು; ವಿಡಿಯೊ ವೈರಲ್ ಬೆನ್ನಲ್ಲೇ ರಾತ್ರೋರಾತ್ರಿ ಕಾಮಗಾರಿ

ರಸ್ತೆ ಗುಂಡಿ ಮುಚ್ಚಲು ವಿಡಿಯೊ ಮೂಲಕ ಬಾಲಕಿಯರಿಂದ ಜಾಗೃತಿ

Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮೂವರು ಶಾಲಾ ಬಾಲಕಿಯರು ರಸ್ತೆಯ ದುರವಸ್ಥೆಯನ್ನು ಎತ್ತಿ ತೋರಿಸಲು ವಿಭಿನ್ನ ಪ್ಲ್ಯಾನ್‌ ಮಾಡಿದ್ದಾರೆ. ಬಾಲಕಿಯರು ಮಡಚಿದ ಛತ್ರಿಯನ್ನೇ ಮೈಕ್ ರೀತಿಯಲ್ಲಿ ಹಿಡಿದು ‘ನ್ಯೂಸ್ ರಿಪೋರ್ಟರ್’ ಥರ ನಟಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಭಾರತದ ವೈದ್ಯಕೀಯ ಸೌಲಭ್ಯಕ್ಕೆ ಬ್ರಿಟನ್ ಪ್ರಜೆ ಫಿದಾ

Viral News: ಬ್ರಿಟನ್‌ನ ಜೀನ್ ಪೌಲ್ ತೀವ್ರ ಮೊಣಕಾಲು ನೋವು ಇದ್ದ ಕಾರಣ ದಿನ ನಿತ್ಯದ ನಡಿಗೆ ಕಷ್ಟವಾಗಿತ್ತು. ಆದರೆ ಶಸ್ತ್ರಚಿಕಿತ್ಸೆಗಾಗಿ ಬ್ರಿಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 3 ವರ್ಷಗಳವರೆಗೆ ಕಾಯಲು ಹೇಳಿದ್ದರು. ಖಾಸಗಿಯಾಗಿ ಆಸ್ಪತ್ರೆಯಲ್ಲಿ 51.56 ಲಕ್ಷ ರುಪಾಯಿ ತಗುಲುತ್ತದೆ ಎಂದು ತಿಳಿಸಲಾಗಿತ್ತು. ಆದದೆ ಇದೇ ಸೌಲಭ್ಯವನ್ನು ಭಾರತದಲ್ಲಿ ಎಷ್ಟು ಕಡಿಮೆ ಮೊತ್ತಕ್ಕೆ ಪಡೆಯಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಭಾರತದ ಆರೋಗ್ಯ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ

ರೈಲು ವೇಗವಾಗಿ ಬರುತ್ತಿದ್ದರೂ ಮಕ್ಕಳನ್ನು ಅಪ್ಪಿ ಹಿಡಿದು ಜೀವ ಉಳಿಸಿದ ತಾಯಿ

Viral Video: ಪ್ಲಾಟ್‌ಫಾರ್ಮ್ ಹಾಗೂ ಹಳಿಯ ನಡುವಿನ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡ ಮಕ್ಕಳನ್ನು ತಾಯಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ತಾಯಿಮಕ್ಕಳನ್ನು ಗೋಡೆಗೆ ಹಿಡಿದು, ಅವರಿಗೆ ಅಡ್ಡಲಾಗಿ ನಿಂತು ಕಾಪಾಡಿದರು. ರೈಲಿನ ಕಬ್ಬಿಣದ ಭಾಗಗಳು ಪದೇ ಪದೆ ಬೆನ್ನಿಗೆ ತಗುತ್ತಿದ್ದರೂ ನೋವು ಸಹಿಸಿಕೊಂಡು ಮಕ್ಕಳನ್ನು ರಕ್ಷಿಸಿದ್ದಾರೆ.

ನರೇಂದ್ರ ಮೋದಿ–ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವೈರಿಗಳ ಅಪರೂಪದ ಕ್ಷಣ ವೈರಲ್

ಭಿನ್ನಾಭಿಪ್ರಾಯ ಮರೆತು ನಗೆಯ ಹಂಚಿಕೆ: ಮೋದಿ–ಖರ್ಗೆ ಸಂಭಾಷಣೆ ವೈರಲ್

Narendra Modi: ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ವೇಳೆ ಮೋದಿ ಮತ್ತು ಖರ್ಗೆ ನಡುವೆ ನಡೆದ ಲಘು ಧಾಟಿಯ ಸಂಭಾಷಣೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಖರ್ಗೆ ಮೋದಿ ಅವರಿಗೆ “ನೀವು ಸ್ವಲ್ಪ ಬದಲಾಗಿದ್ದೀರಿ” ಎಂದು ಹೇಳಿದ್ದು, ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿದ ದೃಶ್ಯ ಗಮನ ಸೆಳೆದಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ನಾಯಕರ ಈ ಸ್ನೇಹಪೂರ್ಣ ಕ್ಷಣ ಅಪರೂಪದಲ್ಲಿ ಅಪರೂಪ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೇ ಸೇತುವೆ ಮೇಲೆ ನಿಂತು ಯುವಕರ ಅಪಾಯಕಾರಿ ಸಾಹಸ: ವಿಡಿಯೋ ನೋಡಿ

ರೈಲ್ವೇ ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನ ಮಧ್ಯೆ, ಬ್ರಿಡ್ಜ್‌ ಮೇಲೆ ನಿಂತೂ ರೀಲ್ಸ್ ರೆಕಾರ್ಡ್ ಮಾಡಿದ ಅನೇಕ ಘಟನೆಗಳು ವೈರಲ್ ಆಗಿವೆ. ಇದೀಗ ಮುಂಬೈನ ಭಾಯಂದರ್ ಖಾಡಿಯ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆಯುತ್ತಿದೆ. ಈ ಅಪಾಯ ಕಾರಿ ಸಾಹಸ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ.

Loading...