ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್‌ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ

ರೈತರ ಪ್ರತಿಭಟನೆ ವೇಳೆ ಧೈರ್ಯ ತೋರಿದ ಎಸಿಪಿ ಮೋನಿಕಾ ಶುಕ್ಲಾ

Viral Video: ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ರೈತರ ಪ್ರತಿಭಟನೆ ವೇಳೆ ಬಸ್‌ ಮುಂದೆ ನಿಂತು ಪ್ರತಿಭಟನಾಕಾರರನ್ನು ತಡೆದ ಎಸಿಪಿ ಮೋನಿಕಾ ಶುಕ್ಲಾ ಅವರ ವಿಡಿಯೊ ವೈರಲ್ ಆಗಿದೆ. ಕರ್ತವ್ಯ ನಿರ್ವಹಣೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರತಿಭಟನಾಕಾರರನ್ನು ಸಂಯಮದಿಂದಲೇ ನಿಭಾಯಿಸಬೇಕು ಎಂದು ಅವರು ಹೇಳಿದ್ದಾರೆ.

ಧಮ್‌ ಮಾರೋ ಧಮ್:‌ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಧೂಮಪಾನ; ದೆಹಲಿ ಪ್ರವಾಸಿಗರನ್ನು ತರಾಟೆಗೆ ತಗೆದುಕೊಂಡ ಸ್ಥಳೀಯರು

ಲೋಹಗಢ ಕೋಟೆಯಲ್ಲಿ ಧಮ್‌ ಎಳೆದ ಪ್ರವಾಸಿಗರ ವಿರುದ್ಧ ಆಕ್ರೋಶ

Viral Video: ಐತಿಹಾಸಿಕ ಸ್ಥಳದಲ್ಲೇ ಪ್ರವಾಸಿಗರ ಗುಂಪೊಂದು ಧೂಮಪಾನ ಮಾಡಿದ್ದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರ ನಾಗರಿಕ ಪ್ರಜ್ಞೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಧೂಮಪಾನ ನಿಷೇಧ ಎಂದು ತಿಳಿದಿದ್ದರೂ ಕ್ಯಾರೇ ಎನ್ನದೆ ಈ ಕೃತ್ಯ ಎಸಗಿದ್ದಾರೆ.

ಪೊಲೀಸರ ಕೈಯಿಂದ ತಪ್ಪಿಸಿದ ಸರಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಸೆಕ್ಯುರಿಟಿ ಗಾರ್ಡ್‌; ವಿಡಿಯೊ ವೈರಲ್‌

ಸರಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಸೆಕ್ಯುರಿಟಿ ಗಾರ್ಡ್‌

Viral Video: ಉತ್ತರ ಪ್ರದೇಶದ ಅಲಿಗಢದಲ್ಲಿ ಸರಕಳ್ಳನನ್ನು ಸೆಕ್ಯುರಿಟಿ ಗಾರ್ಡ್‌ ಸೆರೆ ಹಿಡಿದ ಘಟನೆ ನಡೆದಿದೆ. ಅಪರಾಧಿ ನೋಯ್ಡಾದ 'ಪೂರ್ವಾಂಚಲ್ ರಾಯಲ್ ಸಿಟಿ' ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಪೊಲೀಸರ ಕಣ್ಣು ತಪ್ಪಿಸಿ ನೋಯ್ಡಾದ ಪೂರ್ವಾಂಚಲ್ ರಾಯಲ್ ಸಿಟಿಯಲ್ಲಿ ಓಡಾಡುತ್ತಿದ್ದ.

ʼʼಅಮಾನವೀಯʼʼ: ವಿಐಪಿ ಸಂಚಾರಕ್ಕಾಗಿ ಮಳೆಗೆ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದ ಸಾರ್ವಜನಿಕರನ್ನು ಓಡಿಸಿದ ಪೊಲೀಸರು

ವಿಐಪಿ ಪ್ರಯಾಣಕ್ಕಾಗಿ ಸಾರ್ವಜನಿಕರನ್ನು ಮಳೆಯಲ್ಲಿ ನೆನೆಯಿಸಿದ ಪೊಲೀಸರು

Viral Video: ವಿಐಪಿ ಸಂಚಾರಕ್ಕಾಗಿ ಬಸ್ ನಿಲ್ದಾಣದೊಳಗೆ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ಪೊಲೀಸರು ಗದರಿಸಿ ಓಡಿಸಿದ ಘಟನೆಯೊಂದು ನಡೆದಿದೆ. ರಾಜಸ್ಥಾನದ ಜೈಪುರದಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರಯಾಣಿಕರು ಜೆಎಲ್‌ಎನ್ ಮಾರ್ಗದಲ್ಲಿರುವ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಅದೇ ಮಾರ್ಗದಲ್ಲಿ ವಿಐಪಿ ವಾಹನ ಸಾಗಬೇಕಿದ್ದರಿಂದ ಮಳೆಯ ನಡುವೆಯೂ ಸಾರ್ವಜನಿಕರನ್ನು ಬೈದು ಓಡಿಸಿದ್ದಾರೆ.

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದಾಗ ಎದುರಿಸಿದ ಸಂಕಷ್ಟಗಳೇನು? ವೈರಲ್‌ ಆದ ಪೋಸ್ಟ್‌ನಲ್ಲೇನಿದೆ?

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದು ಎದುರಿಸಿದ ಸಂಕಷ್ಟಗಳೇನು?

Viral Video: ಸುಮಾರು 11 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದ ಕುಟುಂಬವೊಂದು ಮರಳಿ ಹೈದರಾಬಾದ್‌ ಗೆ ಬಂದಿದೆ. ಆದರೆ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಶೇರ್ ಮಾಡಿಕೊಂಡಿದ್ದು ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಎದುರಾದ ಕೆಲವು ಕಷ್ಟಗಳನ್ನು ಮಹಿಳೆಯೊಬ್ಬರು ವಿವರಿಸಿದ್ದಾರೆ.

ದೇವರಿಗೆ ಕ್ಷಮೆಯಾಚಿಸಿ ಹುಂಡಿ ಕಳ್ಳತನ ಮಾಡಿದ ಖದೀಮರು: ವಿಡಿಯೊ ವೈರಲ್

ದೇವರ ಬಳಿ ಕ್ಷಮೆ ಕೇಳಿ ಹುಂಡಿ ಕದ್ದ ಕಳ್ಳರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ!

Viral Video: ದೇವರ ಮುಂದೆ ಕ್ಷಮೆ ಕೇಳಿನಂತರ ದೇವಸ್ಥಾನದ ಹುಂಡಿ ಒಡೆದು ಹಣ ದೋಚಿರುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ಕ್ಷಣಗಳ ನಂತರ, ಖದೀಮರು ಕಾಣಿಕೆ ಪೆಟ್ಟಿಗೆಯನ್ನು ಒಡೆದು ಹಣವನ್ನು ಖಾಲಿ ಮಾಡಿ ಪರಾರಿಯಾಗಿದ್ದಾರೆ.

ಬಾಲಿವುಡ್‌ ಹಾಡನ್ನೂ ಮೀರಿಸುವ ದೃಶ್ಯ ಕಾವ್ಯ: ವರ್ಷಧಾರೆಯ ನಡುವೆ ವಿಶ್ವದ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು; ಅದ್ಭುತ ವಿಡಿಯೊ ನೋಡಿ

ಮಂಜಿನ ನಡುವೆ ಅತಿ ಎತ್ತರದ ಸೇತುವೆಯ ಮೇಲೆ ಸಾಗಿದ ವಂದೇ ಭಾರತ್ ರೈಲು

Viral Video: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಗಾರು ಮಳೆಯ ನಡುವೆ ವಂದೇ ಭಾರತ್ ರೈಲು ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯ ಮೇಲೆ ಹಾದುಹೋಗುವ ದೃಶ್ಯ ಭಾರಿ ವೈರಲ್ ಆಗಿದೆ. ಮಳೆಯ ಸುರುತ್ತಿರುವ ಹಿನ್ನೆಲೆಯಲ್ಲಿ ದಟ್ಟ ಮಂಜು ಆವರಿಸಿದ್ದು, ಮೋಡವನ್ನು ಸೀಳಿಕೊಂಡು ಸಾಗುವಂತೆ ಭಾಸವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ರೈಲು ಹಾದುಹೋಗುವ ದೃಶ್ಯ ನೋಡಿ ನೆಟ್ಟಿಗರು ʼಇದೇ ಸ್ವರ್ಗʼ ಎಂದು ಬಣ್ಣಿಸಿದ್ದಾರೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ರಷ್ಯಾದಲ್ಲಿರುವ ಯುವಕನ ವಿರುದ್ಧ ಬಿಹಾರದಲ್ಲಿ ಪ್ರಕರಣ? ವಿಡಿಯೊ ವೈರಲ್

NEET Protest: ರಷ್ಯಾದಲ್ಲಿ ನಾಲ್ಕು ತಿಂಗಳಿಂದ ವಾಸವಾಗಿರುವುದಾಗಿ ಹೇಳಿರುವ ಬಿಹಾರದ ಯುವಕ ಮೊಹಮ್ಮದ್ ಸದಾಕತ್, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

ಆಗ್ರಾದಲ್ಲಿ ವಿದೇಶಿ ಮಹಿಳೆ ಮೇಲೆ ಕೋತಿ ದಾಳಿ: ಗಂಟೆಗಟ್ಟಲೆ ಕಾದರೂ ಬರದ ಆಂಬ್ಯುಲೆನ್ಸ್

ಆಗ್ರಾದಲ್ಲಿ ಪ್ರವಾಸಿ ಮೇಲೆ ಕೋತಿ ದಾಳಿ: ಚಿಕಿತ್ಸೆಗೆ ಪರದಾಡಿದ ಮಹಿಳೆ

Viral Video: ದಕ್ಷಿಣ ಕೊರಿಯಾದ ಪ್ರವಾಸಿಯೊಬ್ಬರು ತಾಜ್ ಮಹಲ್ ವೀಕ್ಷಣೆ ಭೇಟಿಕೊಟ್ಟ ಸಂದರ್ಭದಲ್ಲಿ ಅನಾಹುತವೊಂದು ನಡೆದಿದೆ. ಕೋತಿಯೊಂದು ಮಹಿಳೆಯ ಕೈಯನ್ನು ಕಚ್ಚಿ ಗಾಯಗೊಳಿಸಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರೇಕ್ಷಣೀಯ ಸ್ಥಳದಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಕಿರಿದಾದ ಮೋಕ್ಷ ಮಾರ್ಗದಲ್ಲಿ ಸಿಲುಕಿ ಆಂಧ್ರ ಪ್ರದೇಶದ ಭಕ್ತ ಸಾವು; ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ರಕ್ಷಣೆ

ಕಿರಿದಾದ ಮೋಕ್ಷ ಮಾರ್ಗದಲ್ಲಿ ಸಿಲುಕಿ ಆಂಧ್ರ ಪ್ರದೇಶದ ಭಕ್ತ ಸಾವು

Viral Video: ವ್ಯಕ್ತಿಯೊಬ್ಬ ತನ್ನ ಜೀವವನ್ನು ಲೆಕ್ಕಿಸದೆ ಭಕ್ತಿಯನ್ನು ಪ್ರದರ್ಶಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನದ ಕಿರಿದಾದ ಮೋಕ್ಷ ಮಾರ್ಗದಲ್ಲಿ ಸಿಲುಕಿಕೊಂಡು ಭಕ್ತನೊಬ್ಬ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇದೀಗ ಇದೇ ಜಾಗದಲ್ಲಿ ಮಹಿಳೆಯೊಬ್ಬರು ಹೊರಬರಲು ಪರದಾಡಿದ ದೃಶ್ಯ ಭಾರಿ ವೈರಲ್ ಆಗಿತ್ತು.

ತಮಿಳುನಾಡಿನಲ್ಲಿ ವಿಚಿತ್ರ ವಂಚನೆ: 15,000 ರುಪಾಯಿ ಆಸೆಗೆ ಬಿದ್ದು ತಲೆ ಬೋಳಿಸಿಕೊಂಡ ಮಹಿಳೆಯರು; ʼವೀರ ಮದಕರಿʼ ಚಿತ್ರ ನೆನಪಿಸಿಕೊಂಡ ನೆಟ್ಟಿಗರು

ಸೇಲಂನಲ್ಲಿ 15,000 ರುಪಾಯಿ ಆಸೆಗಾಗಿ ತಲೆ ಬೋಳಿಸಿಕೊಂಡ ಮಹಿಳೆಯರು

Viral News: ತಮಿಳುನಾಡಿನ ಸೇಲಂನಲ್ಲಿ ಸ್ಯಾಂಡಲ್‌ವುಡ್‌ನ ʼವೀರ ಮದಕರಿʼ ಸಿನಿಮಾ ಕಥೆಯನ್ನು ಹೋಲುವ ವಿಚಿತ್ರ ಘಟನೆಯೊಂದು ನಡೆದಿದೆ. 15,000 ರುಪಾಯಿ ಆಸೆಗೆ ಮಹಿಳೆಯರು ತಲೆಯನ್ನು ಬೋಳಿಸಿಕೊಂಡಿದ್ದಾರೆ. ಹೌದು, ವಿಚಿತ್ರವಾದರೂ ಇದು ಸತ್ಯ ಘಟನೆ. ಕೋವಿಡ್-19ನಂತಹ ಅಪಾಯಕಾರಿ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ವಿಶೇಷ ಆರೋಗ್ಯ ಯೋಜನೆ ಪರಿಚಯಿಸಿದೆ ಎಂದು ನಂಬಿಸಿ ವ್ಯಕ್ತಿಯೋರ್ವ ಮಹಿಳೆಯರನ್ನು ವಂಚಿಸಿದ್ದಾನೆ.

ಅಸ್ಸಾಂ ಪ್ರವಾಹ: ಕರುವನ್ನು ರಕ್ಷಿಸಲು ಪ್ರವಾಹದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವ್ಯಕ್ತಿ; ವಿಡಿಯೊ ವೈರಲ್‌

ಮುಳುಗುತ್ತಿರುವ ಕರುವನ್ನು ಜೀವದ ಹಂಗು ತೊರೆದು ರಕ್ಷಿಸಿದ ವ್ಯಕ್ತಿ

Viral Video: ಅಸ್ಸಾಂ ಭೀಕರ ಪ್ರವಾಹದಲ್ಲಿ ಮನುಷ್ಯರಷ್ಟೇ ಅಲ್ಲದೆ ಸಾಕು ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಅಸಹಾಯಕ ಕರುವೊಂದನ್ನು ಜೀವದ ಹಂಗು ತೊರೆದು ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ. ಕುತ್ತಿಗೆಯವರೆಗೆ ನೀರಿದ್ದರೂ ಆತ ಕರುವೊಂದನ್ನು ಎದೆಗೆ ಬಿಗಿಯಾಗಿ ಹಿಡಿದಿರುವುದು ಕಂಡು ಬಂದಿದೆ.

ಬೆಂಗಳೂರಿನಲ್ಲಿ ಖತರ್ನಾಕ್‌ ಕಳ್ಳ; ವಿಶೇಷ ಚೇತನನಂತೆ ನಟಿಸಿ ಭಿಕ್ಷಾಟನೆ, ಐಫೋನ್‌ ಕಳವು: ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಅಂಗವೈಕಲ್ಯದ ನಾಟಕವಾಡಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದ ವ್ಯಕ್ತಿ

Viral Video: ವ್ಯಕ್ತಿಯೊರ್ವ ಕೈ-ಕಾಲುಗಳು ಸರಿಯಿದ್ದರೂ ಅಂಗವೈಕಲ್ಯ ಹೊಂದಿರುವಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಅಘಾತಕಾರಿ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಕಾಲು ಊನವಾಗಿರುವಂತೆ ನಟಿಸಿ ಸಾರ್ವಜನಿಕರ ಅನುಕಂಪ ಗಿಟ್ಟಿಸಿ ಹಣ ವಸೂಲಿ ಮಾಡುತ್ತಿದ್ದ. ಭಿಕ್ಷೆ ಬೇಡುವಾಗ ವಾಕಿಂಗ್ ಸ್ಟಿಕ್ ಬಳಸುತ್ತಿದ್ದ. ಆದರೆ ಸ್ಥಳೀಯರು ಆತನ ನಡವಳಿಕೆಯ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದಾಗ ಬಂಡವಾಳ ಬೆಳಕಿಗೆ ಬಂದಿದೆ.

ʼʼಈಗ ಉಳಿದಿರುವುದು ಮಗಳ ಹುಟ್ಟುಹಬ್ಬದ ಬಲೂನ್‌ ಮಾತ್ರʼʼ; ಆಸ್ಸಾಂ ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡ ಮಹಿಳೆಯ ಕಣ್ಣೀರು

ಭೀಕರ ಪ್ರವಾಹಕ್ಕೆ ಎಲ್ಲವನ್ನೂ ಕಳೆದುಕೊಂಡ ಆಸ್ಸಾಂ ಮಹಿಳೆಯ ಕಣ್ಣೀರು

Viral News: ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹವು ಲಕ್ಷಾಂತರ ಜನರ ಜೀವನವನ್ನು ನರಕವನ್ನಾಗಿಸಿದೆ. ಈ ಪೈಕಿ ರಿನಿ ಬರುವಾ ಎಂಬ ಮಹಿಳೆಯ ಕಣ್ಣೀರ ಕಥೆ ಎಂತಹವರ ಕಣ್ಣಂಚೂ ಒದ್ದೆಯಾಗುವಂತಿದೆ. ನಾಗಾಲ್ಯಾಂಡ್ ಕಡೆಯಿಂದ ಹಠಾತ್ತನೆ ನುಗ್ಗಿ ಬಂದ ಪ್ರವಾಹ ಕೆಲವೇ ನಿಮಿಷಗಳಲ್ಲಿ ತನ್ನ ಮನೆಯನ್ನು ಆಕ್ರಮಿಸಿಕೊಂಡ ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ‌. ಇದದರಿಂದ ಅವರ ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ಬೈಕ್ ಸವಾರನನ್ನು ಅರ್ಧ ಕಿ.ಮೀ. ದೂರ ಎಳೆದೊಯ್ದ ಉಬರ್ ಚಾಲಕ

Viral News: ಚಾಲಕ ನಿದ್ದೆಗೆ ಜಾರಿದ್ದರಿಂದ ಅತಿವೇಗವಾಗಿ ಬಂದ ಉಬರ್ ಕಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಸವಾರನನ್ನು ಕಾರಿನ ಚಕ್ರಗಳ ಅಡಿಯಲ್ಲಿ ಅರ್ಧ ಕಿ‌..ಮೀ.ವರೆಗೆ ಎಳೆದೊಯ್ದಿದ್ದಾನೆ‌. ಪೊಲೀಸರ ಪ್ರಕಾರ ಚಾಲಕ ನಿದ್ರಿಸಿದ್ದರಿಂದ ವಾಹನದ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ‌. ಆರೋಪಿಯನ್ನು ಆದಿಲ್ ತಸ್ಲಿಮ್ ಅನ್ಸಾರಿ ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಭಕ್ತಿ ಹೆಸರಿನಲ್ಲಿ ಅತಿರೇಕದ ವರ್ತನೆ; ರೈಲಿನ ಏಸಿ ಕೋಚ್‌ನಲ್ಲಿ ದೀಪ, ಅಗರಬತ್ತಿ ಹಚ್ಚಿ ಪೂಜೆ: ಪ್ರಯಾಣಿಕನ ವಿರುದ್ಧ ನೆಟ್ಟಿಗರ ಆಕ್ರೋಶ

ರೈಲಿನಲ್ಲಿ ದೀಪ, ಅಗರಬತ್ತಿ ಹಚ್ಚಿ ಪೂಜೆ ಮಾಡಿದ ಪ್ರಯಾಣಿಕ

Viral Video: ಚಲಿಸುವ ರೈಲಿನ ಏಸಿ ಕೋಚ್ ಒಳಗೆ ಪ್ರಯಾಣಿಕನೊಬ್ಬ ದೀಪ, ಅಗರಬತ್ತಿ ಹಚ್ಚಿ ಪೂಜೆ ಮಾಡಿರುವ ದೃಶ್ಯವೊಂದು ಕಂಡುಬಂದಿದೆ. ಹವಾನಿಯಂತ್ರಿತ ಕೋಚ್ ಒಳಗೆ ಇಂತಹ ಅಪಾಯಕಾರಿ ವಸ್ತುಗಳನ್ನು ಬಳಕೆ ಮಾಡಿರುವುದು ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಈತನನ್ನು ರೈಲು ಪ್ರಯಾಣದಿಂದಲೇ ನಿಷೇಧ ಮಾಡಬೇಕು ಎಂದು ನೆಟ್ಟಿಗರ ಆಗ್ರಹ ಕೇಳಿ ಬಂದಿದೆ.

ಆಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಮನಬಂದಂತೆ ಥಳಿಸಿದ ಪತಿ: ವಿಡಿಯೊ ವೈರಲ್

ಆಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಪತಿ

Viral Video: ಪತಿ-ಪತ್ನಿ ನಡುವಿನ ಸಣ್ಣ ಪುಟ್ಟ ಜಗಳಗಳು ಬೀದಿಗೆ ಬರುವಂತ ಘಟನೆಗಳು ವರದಿಯಾಗುತ್ತಿವೆ. ವೈಯಕ್ತಿಕ ವಿಚಾರ, ಆಕ್ರಮ ಸಂಬಂಧ, ಹಣಕಾಸಿನ ಸಮಸ್ಯೆ ಹೀಗೆ ನಾನಾ ಕಾರಣಕ್ಕಾಗಿ ಜಗಳ ಉಂಟಾಗಿ ದಾಂಪತ್ಯ ಜೀವನ ಕೊನೆಗೊಂಡ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪತಿಯ ಆಕ್ರಮ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯ ಮೇಲೆ ಆಕೆಯ ಗಂಡನೇ ಮನ ಬಂದಂತೆ ಥಳಿಸಿದ್ದಾನೆ‌. ಈ ಹಲ್ಲೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ʼʼಥಾಯ್ಲೆಂಡ್‌ನಲ್ಲಿ ಮಹಿಳೆಯರ ಡ್ರೆಸ್ ಕೋಡ್ ಬಗ್ಗೆ ಟೀಕೆ ಮಾಡುವವರಿಲ್ಲʼʼ: ಅಲ್ಲಿನ ಜೀವನ ಶೈಲಿಗೆ ಭಾರತೀಯ ಮಹಿಳೆ ಮೆಚ್ಚುಗೆ

ಥಾಯ್ಲೆಂಡ್‌ದಲ್ಲಿನ ಮಹಿಳೆಯರ ಸ್ವಾತಂತ್ರ್ಯಕ್ಕೆ ಭಾರತೀಯ ಮಹಿಳೆ ಫಿಧಾ

Viral Video: ಇತ್ತೀಚೆಗೆ ಥಾಯ್ಲೆಂಡ್‌ಗೆ ಭೇಟಿ ನೀಡಿದ ಭಾರತೀಯ ಮಹಿಳೆಯೊಬ್ಬರು ಅಲ್ಲಿನ ಭಿನ್ನ ಸಂಸ್ಕೃತಿ ಹಾಗೂ ಮಹಿಳೆಯರಿಗೆ ನೀಡಲಾಗಿರುವ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶ್ರೇಯಾ ಮಹೇಂದ್ರು ಎಂಬ ಮಹಿಳೆ ವೀಡಿಯೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಅವರು ತಮ್ಮನ್ನು ಹೆಚ್ಚು ಅಚ್ಚರಿಗೊಳಿಸಿದ ಥಾಯ್ ಸಂಸ್ಕೃತಿಯ ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ.

ʼʼಕೇಂದ್ರ ಸರ್ಕಾರ ಮಾತ್ರವಲ್ಲ ನಿಮ್ಮನ್ನೂ ವಿರೋಧಿಸುತ್ತೇವೆʼʼ: ರಾಹುಲ್ ಗಾಂಧಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಸಿಜೆಪಿ

ರಾಹುಲ್ ಗಾಂಧಿ ಅವರನ್ನು ಕೂಡ ವಿರೋಧಿಸುತ್ತೇವೆ: ಸಿಜೆಪಿ

ಸಿಜೆಪಿ ಪ್ರತಿಭಟನೆಯಲ್ಲಿ ಎಲ್ಲರ ಗಮನ ಸೆಳೆದ ವ್ಯಾಪಾರಿ ಎಂಡಿ ಇರ್ಫಾನ್ ಅವರು ಕೊಟ್ಟಿರುವ ಭರವಸೆ ಈಡೇರದಿದ್ದರೆ ನಿಮ್ಮನ್ನು ಕೂಡ ವಿರೋಧಿಸುತ್ತೇವೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಗಿಂತ ಮೊದಲು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸುತ್ತೇನೆ ಎಂದರು.

ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಪ್ರಾಣ ಕಳೆದುಕೊಂಡ ಆಟೋ ಚಾಲಕ; ದಾಳಿಯ ಭಯಾನಕ ವಿಡಿಯೊ ವೈರಲ್

ಆನೆ ತುಳಿತಕ್ಕೆ ಸಿಲುಕಿ ಆಟೋ ಚಾಲಕ ಸಾವು: ಭಯಾನಕ ವಿಡಿಯೊ ನೋಡಿ

Viral Video: ಆಟೋರಿಕ್ಷಾ ಚಾಲಕನೊಬ್ಬ ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಅದರ ದಿಢೀರ್ ದಾಳಿಯಿಂದ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜ್ ನಗರ ಪೊಲೀಸ್ ಹೊರಠಾಣೆ ಬಳಿಯ ರಾಜ್ ನಗರದ ನಿವಾಸಿ ವಿಜಯ್ ಅಲಿಯಾಸ್ ಲಕ್ಷ್ಮಣ್ ರಾವ್ ಹೋಳ್ಕರ್ ಎಂದು ಗುರುತಿಸಲಾಗಿದೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರೀತಿ ನಿರಾಕರಣೆ ವಿಚಾರವಾಗಿ ರಸ್ತೆಯಲ್ಲೆ ಹೈಡ್ರಾಮಾ! ಯುವತಿಯನ್ನು ಚಲಿಸುವ ಬೈಕ್‌ನಲ್ಲಿ ಎಳೆದೊಯ್ದ ಪ್ರಿಯತಮ!

ಯುವತಿಯನ್ನು ಚಲಿಸುವ ಬೈಕ್ ನಲ್ಲಿ ಎಳೆದೊಯ್ದ ಪ್ರಿಯತಮ: ನೆಟ್ಟಿಗರು ಕಿಡಿ

Viral Video: ಬಿಹಾರದ ನಲಂದಾ ಜಿಲ್ಲೆಯ ರಾಜ್ ಗೀರ್ ನಲ್ಲಿ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ಬೈಕ್ ನಲ್ಲಿ ಯುವತಿಯೊಬ್ಬಳು ನೇತಾಡುತ್ತಿದ್ದು ಬೈಕ್ ಸವಾರನು ರಸ್ತೆ ಯುದ್ದಕ್ಕೂ ಎಳೆದೊಯ್ದಿದ್ದಾನೆ. ಇವರಿಬ್ಬರು ಪ್ರೇಮಿಗಳಾಗಿದ್ದು ಯುವಕ ಮದುವೆಯಾಗಲು ನಿರಾಕರಣೆ ಮಾಡಿದ್ದು ಯುವತಿ ಬೈಕ್‌ನ ಹ್ಯಾಂಡಲ್ ಹಿಡಿದು ನಿಂತಿದ್ದಾಳೆ. ಆದರೆ ಬೈಕ್ ಸವಾರ ನಿಲ್ಲಿಸದೆಯೇ ಮುಂದೆ ಸಾಗಿದ್ದಾನೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

ʼʼಭಾರತ ಎಂದರೆ ಇದುʼʼ: ಗ್ರಾಮೀಣ ಭಾರತದ ವಿಶೇಷ ಆತಿಥ್ಯಕ್ಕೆ ಮನಸೋತ ನೆದರ್‌ಲ್ಯಾಂಡ್ಸ್‌ ಮಹಿಳೆ; ವಿಡಿಯೊ ನೋಡಿ

ಅಸ್ಸಾಂ ಹಳ್ಳಿಗರ ಪ್ರೀತಿ ಕಂಡು ಬೆರಗಾದ ವಿದೇಶಿ ಮಹಿಳೆ ಹೇಳಿದ್ದೇನು?

Viral Video: ನೆದರ್‌ಲ್ಯಾಂಡ್ಸ್‌ನಿಂದ ಒಬ್ಬಂಟಿಯಾಗಿ ಆಗಮಿಸಿದ ವಿದೇಶಿ ಮಹಿಳೆಯೊಬ್ಬರು ಭಾರತದ ಆತಿಥ್ಯವನ್ನು ಕೊಂಡಾಡಿದ್ದಾರೆ. ಅಸ್ಸಾಂನ ಹಳ್ಳಿಯಲ್ಲಿ ಜನರು ನೀಡಿದ ಔದಾರ್ಯದ ಕ್ಷಣವನ್ನು ಅವರು ಹಂಚಿಕೊಂಡಿದ್ದು, ತನ್ನ ಪರಿಚಯವೇ ಇಲ್ಲದೆ ಇದ್ದರೂ ಮನೆಯವರಂತೆ ಸತ್ಕರಿಸಿದ್ದಾರೆ ಎಂದು ಭಾವುಕರಾಗಿದ್ದಾರೆ.

ತಾಳಿ ಕಟ್ಟುವ ಶುಭವೇಳೆ ಹೈಡ್ರಾಮಾ: ಗಂಡನ 2ನೇ ಮದುವೆಗೆ ಆಗಮಿಸಿದ ಮೊದಲ ಪತ್ನಿ; ಮುಂದೆ ನಡೆದಿದ್ದು ಯಾರೂ ಊಹಿಸದ ಘಟನೆ

2ನೇ ಮದುವೆ ಆಗಲು ಸಿದ್ದತೆಯಲ್ಲಿದ್ದ ಪತಿಗೆ ಬಿಗ್ ಶಾಕ್ ಕೊಟ್ಟ ಮೊದಲನೇ ಪತ್ನಿ

Viral Video: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಭಾರಿ ಸುದ್ದಿಯಲ್ಲಿದೆ. ತನ್ನ ಪತಿಗೆ ಎರಡನೇ ಮದುವೆಯಾಗುತ್ತಿದೆ ಎಂದು ತಿಳಿದ ಪತ್ನಿ ಪೊಲೀಸರೊಂದಿಗೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ನೀಡಿ ವಧು- ವರ ಇಬ್ಬರಿಗೂ ಅಚ್ಚರಿ ಮೂಡಿಸಿದ್ದಾಳೆ.

ಕುಡಿತದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ: ಕಾನ್‌ಸ್ಟೆಬಲ್ ಲಾಠಿ ಕಸಿದು ಥಳಿಸಿದ ವ್ಯಕ್ತಿ!

ಲಾಠಿ ಕಸಿದು ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ ಕುಡುಕ: ವಿಡಿಯೊ ವೈರಲ್

Viral Video: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೈಲಿದ್ದ ಲಾಠಿಯನ್ನೇ ಕಸಿದುಕೊಂಡು ಮನ ಬಂದಂತೆ ಥಳಿಸಿರುವ ಘಟನೆಯೊಂದು ಕಂಡು ಬಂದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಖಡಕ್‌ಪಾಡಾ ಪೊಲೀಸರು ಬಂಧಿಸಿದ್ದಾರೆ.

Loading...