ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ʼʼಇಂತಹ ಸೌಲಭ್ಯ ಯುರೋಪ್‌ನಲ್ಲೂ ಇಲ್ಲʼʼ: ಭಾರತದ 438 ರುಪಾಯಿ ಏಸಿ ಸ್ಲೀಪರ್ ಬಸ್‌ಗೆ ಬ್ರಿಟನ್ ಯುವಕ ಫಿದಾ; ವಿಡಿಯೊ ವೈರಲ್

ಭಾರತದ ಸ್ಲೀಪರ್ ಬಸ್‌ನ ಗುಣಮಟ್ಟ ಕಂಡು ವಿದೇಶಿ ಪ್ರವಾಸಿಗ ಫಿದಾ

Viral Video: ದೆಹಲಿಯಿಂದ ಜೈಪುರಕ್ಕೆ ಏಳು ಗಂಟೆ ಕಾಲ ಸ್ಲೀಪರ್ ಏಸಿ ಬಸ್‌ನಲ್ಲಿ ಪ್ರಯಾಣಿಸಿದ ವಿದೇಶಿ ಪ್ರವಾಸಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಈ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಈ ಸ್ಲೀಪರ್ ಬಸ್‌ ಯುರೋಪಿನ ಸಾರಿಗೆ ವ್ಯವಸ್ಥೆಯನ್ನೇ ಮೀರಿಸುತ್ತಿದೆ. ಇದು ಭಾರತದ ಅತ್ಯುತ್ತಮ ಸಾರಿಗೆ ಅನುಭವಗಳಲ್ಲಿ ಒಂದು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.

ಅಮೆರಿಕದಲ್ಲಿ ಬಿಂದಿ ಧರಿಸಿದ್ದಕ್ಕಾಗಿ ಭಾರತೀಯ ಮೂಲದ ವೈದ್ಯೆಗೆ ಜನಾಂಗೀಯ ನಿಂದನೆ: ವಿಡಿಯೊ ಮೂಲಕ ತಿರುಗೇಟು ನೀಡಿದ ಮಹಿಳೆ

ಬಿಂದಿ ಧರಿಸಿದ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯೆಗೆ ನಿಂದನೆ

Viral Video: ಬಿಂದಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲಕ ವೈದ್ಯೆಗೆ ನಿಂದಿಸಿರುವ ಘಟನೆ ನಡೆದಿದೆ. ಈ ವೈದ್ಯೆ ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರೂ ಭಾರತೀಯ ವಿರೋಧಿ ನಡೆಯನ್ನು ಕಂಡು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ. ಬಿಂದಿ ಧರಿಸಿದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡೀಗೆಡಿಗಳು 'ಗೋ ಬ್ಯಾಕ್ ಟು ಇಂಡಿಯಾ' ಎಂಬ ನಿಂದನೆಯ ಪದ ಬಳಸಿದ್ದಾರೆ.

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಕಪಾಳಮೋಕ್ಷ ಮಾಡಿದ ಚಾಲಕ; ವಿಡಿಯೊ ವೈರಲ್‌

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಪಾಠ ಕಲಿಸಿದ ಬಸ್‌ ಚಾಲಕ

Viral News: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನಲ್ಲಿ ಮಹಿಳೆ ಜತೆ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ‌. ಬಸ್ ಚಾಲಕನಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಆತನಿಗೆ ಕಪಾಳಮೋಕ್ಷ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಜೆಪಿ ಪ್ರತಿಭಟನಾಕಾರರು ಗಲಾಟೆ ಮಾಡುತ್ತಿದ್ದರೂ ತಾಳ್ಮೆಯಿಂದ ನಿಂತ ಮಾಧ್ಯಮ ಪ್ರತಿನಿಧಿ; ವಿಡಿಯೊ ವೈರಲ್‌ ಆಗುತ್ತಿದ್ದಂತೆ ಕ್ಷಮೆ ಕೋರಿದ ಹೋರಾಟಗಾರರು

ಪ್ರತಿಭಟನಾಕಾರ ಗಲಾಟೆ ನಡುವೆ ತಾಳ್ಮೆಯಿಂದ ನಿಂತ ಮಾಧ್ಯಮ ಪ್ರತಿನಿಧಿ

CJP: ಮಹಾರಾಷ್ಟ್ರದ ಮುಂಬೈಯಲ್ಲಿ ನಡೆಯುತ್ತಿದ್ದ ಕಾಕ್ರೋಚ್‌ ಜನತಾ ಪಾರ್ಟಿಯ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಅವಮಾನ ಮಾಡಿದ ವೈರಲ್‌ ಆಗುತ್ತಿದ್ದಂತೆ ಭಾರಿ ಆಕ್ರೋಸ ವ್ಯಕ್ತವಾಗಿದೆ. ಇದೀಗ ಪ್ರತಿಭಟನಾಕಾರರು ವರದಿಗಾರರ ಬಳಿ ಕ್ಷಮೆ ಕೋರಿದ್ದಾರೆ.

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌ ; ವಿಡಿಯೋ ನೋಡಿ

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌

Viral Video: ಕೇರಳದ ಕಾಲೇಜಿನ ವಿದ್ಯಾರ್ಥಿಗಳು ತಮ್ಮನ್ನು ಕೇರ್ ಟೇಕರ್ ಮಾಡುತ್ತಿದ್ದ ವಾಚ್ ಮ್ಯಾನ್ ಗೆ ನೆನಪಿನಲ್ಲಿ ಉಳಿಯುವಂತಹ ಸುಂದರ ಗಿಫ್ಟ್ ವೊಂದನ್ನು ನೀಡುವ ಮೂಲಕ ಅವರನ್ನು ಭಾವಕರನ್ನಾಗಿಸಿದ್ದಾರೆ. ವಿದ್ಯಾರ್ಥಿಗಳು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಕಾಲೇಜು ಕೇರ್‌ ಟೇಕರ್‌ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸುರಕ್ಷತೆ ಎಲ್ಲಿದೆ? ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದ ಫಸ್ಟ್ ಕ್ಲಾಸ್ ಎಸಿ ರೈಲಿಗೆ ನುಗ್ಗಿ ಪ್ರಯಾಣಿಕರ 1.10 ಲಕ್ಷ ದೋಚಿದ ಕಳ್ಳರು!

ಎಸಿ ಕೋಚ್ ಗೆ ನುಗ್ಗಿ ಹಣ ದೋಚಿದ ಕಳ್ಳರು: ಸುರಕ್ಷತೆ ಬಗ್ಗೆ ಕಿಡಿ

Viral News: ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬವೊಂದರ ಲಗೇಜ್ ಕಳ್ಳತನವಾಗಿದ್ದು 1,10,000 ರೂ. ನಗದನ್ನು ಕಳ್ಳತನ ಮಾಡಲಾಗಿದೆ. ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಮುಖ್ಯ ಉದ್ದೇಶ ಸುರಕ್ಷತೆ, ಆದರೆ ಇಲ್ಲೂ ಹೀಗಾಗಿದೆ ಎಂದು ಪ್ರಯಾಣಿಕರೊಬ್ಬರು ಪೋಸ್ಟ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಇದು ಕೇವಲ ಆರಂಭ.. ಸಿಜೆಪಿ ಇನ್ನೂ ಬಹಳ ದೂರ ಸಾಗಬೇಕಿದೆ: ಪ್ರತಿಭಟನೆ ಕೊನೆಗೊಂಡ ಬಳಿಕ ಮೊದಲ ವಿಡಿಯೋ ಸಂದೇಶ ಹಂಚಿಕೊಂಡ ಅಭಿಜೀತ್ ದಿಪ್ಕೆ

ಪ್ರತಿಭಟನೆ ಮುಕ್ತಾಯದ ಬಳಿಕ ಅಭಿಜೀತ್ ದಿಪ್ಕೆ ಹೇಳಿದ್ದೇನು?

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಕಳೆದ 37 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಕೊನೆಗೊಂಡಿದ್ದು, ಇದರ ಬಳಿಕ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಬೆಂಬಲಿಗರಿಗೆ ಧನ್ಯವಾದ ಹೇಳಿದ್ದು, ಕೇಂದ್ರ ಸರ್ಕಾರದ ಭರವಸೆಯ ಕಾರಣದಿಂದ ಅಂತಿಮವಾಗಿ ತನಗೆ ಈಗ ವಿಶ್ರಾಂತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ನಡು-ರಸ್ತೆಯಲ್ಲಿಯೇ ಮಹಿಳೆಯನ್ನು ಇಳಿಸಿ ಅವ್ಯಾಚ ಪದಗಳಿಂದ ನಿಂದಿಸಿದ Rapido ಚಾಲಕ! ಮಹಿಳಾ ಸುರಕ್ಷತೆ ಬಗ್ಗೆ ಮೂಡಿದ ಪ್ರಶ್ನೆ!

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ Rapido ಚಾಲಕ: ವರ್ತನೆ ವಿರುದ್ಧ ಕಿಡಿ!

Viral News: Rapido ಚಾಲಕೊಬ್ಬ ಮಹಿಳೆಯ ಜೊತೆ ಉದ್ಧಟತನ ಮೆರೆದಿದ್ದು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾನೆ. ಜಾನ್ವಿ ಚೌಧರಿ ಎಂದು ಗುರುತಿಸಲ್ಪಟ್ಟ ಮಹಿಳೆ, ಸವಾರಿಯ ಸಮಯದಲ್ಲಿ ಏನಾಯಿತು ಎಂದು ವಿವರಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಚಾಲಕನು ಆ್ಯಪ್‌ನ ನಕ್ಷೆಯಲ್ಲಿ ತೋರಿಸಿದ ಮಾರ್ಗದಲ್ಲಿ ಹೋಗಲು ನಿರಾಕರಿಸಿದ್ದು ನಿರ್ಜನ ಪ್ರದೇಶದಲ್ಲಿ ತನ್ನನ್ನು ಕರೆದೊಯ್ದಿದ್ದಾನೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.

SBI ಬ್ರಾಂಚ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕರುಣಾನಿಧಿ ಮೊಮ್ಮಗಳು; ವಿಡಿಯೋ ವೈರಲ್‌

SBI ಬ್ರಾಂಚ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕರುಣಾನಿಧಿ ಮೊಮ್ಮಗಳು

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗಳು ಕಾಯಲ್ವಿಳಿ, ಲಿಫ್ಟ್ ಅಸಮರ್ಪಕ ಕಾರ್ಯದ ಬಗ್ಗೆ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ವ್ಯವಸ್ಥಾಪಕರಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿ ಹೋರಾಟದ ವೇಳೆ ಸಿಯಾ ಗೋಯಲ್‌ಗೇನು ಕೆಲಸ? ಪುಣೆ ಪ್ರತಿಭಟನೆಯಲ್ಲಿ ಹಂತಕಿ ಪೋಸ್ಟರ್‌ ಹಿಡಿದು ಧರ್ಮೇಂದ್ರ ಪ್ರಧಾನ್‌ಗೆ ಬೆದರಿಕೆ ಹಾಕಿ ಉದ್ಧಟತನ

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಿಯಾ ಗೋಯಲ್ ಪೋಸ್ಟರ್‌ ವೈರಲ್

Viral Vidro: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಿಯಾ ಗೋಯಲ್ ಹೆಸರಿನ ವ್ಯಂಗ್ಯಾತ್ಮಕ ಪೋಸ್ಟರ್‌ ವೈರಲ್ ಆಗಿದೆ. ಪರೀಕ್ಷಾ ಅಕ್ರಮ, ಶಿಕ್ಷಣ ಸುಧಾರಣೆ ಹಾಗೂ ನಿರುದ್ಯೋಗದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾವಿ ಪತಿ ಹಂತಕಿಯ ಫೋಟೊ ಗಮನ ಸೆಳೆಯಿತು.

ಉಚಿತ ಟ್ಯೂಷನ್ ನೀಡುವುದಾಗಿ ಹೇಳಿ ಲೈಂಗಿಕ ಕಿರುಕುಳ: ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು

ಮೊಟ್ಟೆಯಿಂದ ಹೊಡೆದು ಶೂ ಹಾರ ಹಾಕಿ ಉಪನ್ಯಾಸಕನ ಮೆರವಣಿಗೆ

ವಿದ್ಯಾರ್ಥಿನಿಯೊಬ್ಬಳಿಗೆ ಉಚಿತ ಟ್ಯೂಷನ್ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಗೋಬರ್ದಂಗ ಹಿಂದೂ ಕಾಲೇಜಿನ ಅತಿಥಿ ಉಪನ್ಯಾಸಕನ ವಿರುದ್ಧ ಗೋಬರ್ದಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಂಧಿಸಲಾಗಿದೆ.

Nelamangala News: ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ಕ್ಯಾಮೆರಾ ನೋಡ್ತಿದ್ದಂಗೆ ಕಾಲ್ಕಿತ್ತ ಅಧಿಕಾರಿಗಳು! Watch Video

ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ವಿಡಿಯೊ ವೈರಲ್!

ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಸಿದ್ದರಬೆಟ್ಟದಲ್ಲಿ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ತೋಡಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳೀಯರು ವಿಡಿಯೊ ಮಾಡುತ್ತಿದ್ದಂತೆ ಸ್ಥಳದಿಂದ ಅಧಿಕಾರಿಗಳು ಪರಾರಿಯಾಗಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕ ಕಾರಣವಾಗಿದೆ.

ಅಭಿಜಿತ್ ದೀಪ್ಕೆಗೆ ಟೈಫಾಯ್ಡ್; ಸಿಜೆಪಿ ನೇತೃತ್ವದ ಪ್ರತಿಭಟನೆ ಮುಂದುವರಿಯುವುದೇ?

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಟೈಫಾಯ್ಡ್ ಪತ್ತೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ. ಇದು ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿರುವ ಅವರು ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಒಂದೇ ಯುವಕನ ಜೊತೆ ಮದುವೆಯಾದ ಮೂವರು ಸಹೋದರಿಯರು! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಒಬ್ಬನೇ ಯುವಕನನ್ನು ವರಿಸಿದ ಮೂವರು ಸೋದರಿಯರು! ಕಾರಣವೇನು ಗೊತ್ತಾ?

Viral Video: ಈ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಚರ್ಚೆಗೆ ಒಳಪಟ್ಟ ವಿಚಾರವಾಗಿದೆ. ಅಪ್ರಾಪ್ತ ಯುವಕನನ್ನು ವರಿಸಿದ ಮಹಿಳೆ, ವೃದ್ದನನ್ನು ಪ್ರೀತಿಸಿದ ಯುವತಿ ಹೀಗೆ ಇಂತಹ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು ಮೂವರು ಸ್ವಂತ ಅಕ್ಕ-ತಂಗಿಯರು ಒಬ್ಬ ಯುವಕನನ್ನೇ ಮದುವೆಯಾಗಿದ್ದಾರೆ. ಒಬ್ಬರಿಗೊಬ್ಬರು ದೂರವಾಗಿ ಇರಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ಹೆಜ್ಜೆ ಇಟ್ಟಿದ್ದಾರೆ.

ಮಳೆ ಬರ್ತಿದೆ ವರ್ಕ್‌ ಫ್ರಾಂ ಹೋಂ ಕೊಡಿ ಎಂದ ಉದ್ಯೋಗಿಗೆ ಕಂಪನಿ ಹೇಳಿದ್ದೇನು? ವೈರಲ್‌ ಆಯ್ತು ಪೋಸ್ಟ್‌

ತೀವ್ರವಾದ ಮಳೆಯಲ್ಲೂ WFH ನಿರಾಕರಣೆ ಮಾಡಿದ ಐಟಿ ಕಂಪನಿ: ಉದ್ಯೋಗಿ ಬೇಸರ

Viral News: ಗುಜರಾತ್ ನಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ನಡುವೆಯೂ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನಿರಾಕರಣೆ ಮಾಡಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆಯ ಅಭಾವದಿಂದ ಅಸ್ತ ವ್ಯಸ್ತಗೊಂಡಿದ್ದು ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್‌ಗಳಿಂದಾಗಿ ಸಾವಿರಾರು ಜನರಿಗೆ ದೈನಂದಿನ ಪ್ರಯಾಣ ಕಷ್ಟಕರವಾಗಿದೆ. ಇದಕ್ಕಾಗಿ ಕಂಪನಿಯ ಬಹಳಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೇಳಿದ್ದು ಮ್ಯಾನೇಜರ್ ಇದನ್ನು ನಿರಾಕರಣೆ ಮಾಡಿದ್ದಾರೆ.

ತುಂಬಿ ಹರಿಯುತ್ತಿರುವ ಅಪಾಯಕಾರಿ ನದಿಯಲ್ಲಿ ಯುವಕರ ಹುಚ್ಚಾಟ: ವಿಡಿಯೊ ಶೇರ್ ಮಾಡಿ ಎಚ್ಚರಿಕೆ ನೀಡಿದ ಪೊಲೀಸ್!

ತುಂಬಿ ಹರಿಯುವ ನದಿಗೆ ಜಿಗಿದ ಯುವಕರು; ವಿಡಿಯೋ ನೋಡಿ

Viral Video: ಯುವಕರ ಗುಂಪೊಂದು ತೀವ್ರವಾಗಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವಿಡಿಯೊ ವೈರಲ್ ಆಗಿದ್ದು ನೀರಿನ ರಭಸದ ಪ್ರವಾಹದಲ್ಲಿ ಪ್ರಾಣದ ಭಯ ಇಲ್ಲದೆ ಈಜಾಡುತ್ತಿದ್ದಾರೆ. ಈ ದೃಶ್ಯ ಎಷ್ಟು ಅಪಾಯಕಾರಿ ಇತ್ತು ಅಂದ್ರೆ ಪರಿಣಿತ ಈಜುಗಾರರೂ ಸಹ ಇಂತಹ ರಭಸದ ಪ್ರವಾಹದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಈ ವಿಡಿಯೋವನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ಪ್ರವಾಸಿಗರಿಗೆ ನೀಡಿದ್ದಾರೆ‌.

ಮೋದಿ ಅನುಮತಿ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆಗೆ ಸೇನಾಧಿಕಾರಿ ಆದೇಶ  ? ಏನಿದು ವೈರಲ್‌ ಸುದ್ದಿ

ಮೋದಿ ಆದೇಶದ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆ?

NEET Exam Protest: ನೀಟ್‌ ಪರೀಕ್ಷೆಯ ಅಕ್ರಮದ ಕುರಿತು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಕಡೆ ಲಾಠಿ ಚಾರ್ಜ್‌ ನಡೆಸಲಾಗಿದೆ. ಪ್ರತಿಭಟನಾಕಾರರು ದೆಹಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಸರ್ಕಾರ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಭದ್ರತಾ ಪಡೆಗಳನ್ನು ನಿಯೋಜಿಸಿದೆ.

ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 67,000 ರೂ. ಮೌಲ್ಯದ ಪಿಜ್ಜಾ ವಿತರಿಸಿದ ಯುವಕ!

ದೆಹಲಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗೆ ಪಿಜ್ಜಾ ವಿತರಿಸಿದ ಯುವಕ

Viral News: ದೆಹಲಿಯಲ್ಲಿ ಪ್ರತಿಭಟನಾ ಕಿಚ್ಚು ಹೆಚ್ಚುತ್ತಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತದೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದು  ಪೊಲೀಸರು ಪ್ರತಿಭಟನಾಕರರನ್ನು ತಡೆಯಲು ತೀವ್ರ ಹರಸಾಹಸ ಪಡಬೇಕಾಯಿತು. ಈ ನಡುವೆ ಹೋರಾಟಕ್ಕೆ ನಾಗಾಲ್ಯಾಂಡ್ ನಲ್ಲಿರುವ ಇದ್ದ ಯುವಕ ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದ ಕಾರಣ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ 67,000 ಮೌಲ್ಯದ 150 ಚೀಸ್ ಬರ್ಸ್ಟ್ ಪೀಜ್ಜಾ ಆರ್ಡರ್ ಅನ್ನು ತಲುಪಿಸುವ ಮೂಲಕ ಬೆಂಬಲ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ : ಪ್ರಾಣದ ಹಂಗು ತೊರೆದು 7 ತಿಂಗಳ ಮಗುವನ್ನು ಕಾಪಾಡಿದ ಆಂಬ್ಯುಲೆನ್ಸ್ ಸಿಬ್ಬಂದಿ!

ಭೂಕುಸಿತ ನಡುವೆ 7 ತಿಂಗಳ ಮಗುವನ್ನು ರಕ್ಷಣೆ ಮಾಡಿದ ಆಂಬ್ಯುಲೆನ್ಸ್ ಸಿಬ್ಬಂದಿ

Viral Video: ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಭೂಕುಸಿತ ಉಂಟಾಗಿದೆ. ಕಿರಿದಾದ ಬೆಟ್ಟ ಮಾರ್ಗಗಳು, ದೊಡ್ಡ ಬಂಡೆಗಳು ನೋಡನೋಡುತ್ತಿದ್ದಂತೆ ಉರುಳಿ ಬೀಳುತ್ತಿವೆ. ಭೂ ಕುಸಿತದಿಂದಾಗಿ ರಸ್ತೆಯೂ ಸಂಪೂರ್ಣ ಜಖಂಗೊಂಡಿದೆ. ಈ ಅಪಾಯದ ಪರಿಸ್ಥಿತಿಯಲ್ಲೂ ಆಂಬ್ಯುಲೆನ್ಸ್ ಸಿಬ್ಬಂದಿ, ಪ್ರಾಣ‌ವನ್ನೇ ಪಣಕ್ಕಿಟ್ಟು ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಇವರ ನಿಸ್ವಾರ್ಥ ಬದ್ಧತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸಿಲ್ಲ; ಕೇಂದ್ರ ಸರ್ಕಾರದ ಭರವಸೆ: ಸೋನಮ್ ವಾಂಗ್ಚುಕ್

ಸೋನಮ್ ವಾಂಗ್ಚುಕ್ ಗೆ ಸರ್ಕಾರ ನೀಡಿರುವ ಭರವಸೆ ಏನು?

ಕೇಂದ್ರ ಸರ್ಕಾರ ನೀಡಿರುವ ಭರವಸೆಯ ಕಾರಣದಿಂದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಗುರುವಾರ ಕಳೆದ 26 ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸು ದಾಖಲಿಸುವುದಿಲ್ಲ ಎಂದು ಹೇಳಿರುವುದು ತಾನು ಉಪವಾಸ ಅಂತ್ಯಗೊಳಿಸಲು ಮುಖ್ಯ ಕಾರಣ ಎಂದಿರುವ ಅವರು ಸರ್ಕಾರ ನೀಡಿರುವ ಭರವಸೆಯ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ʼʼಅಪ್ಪ ನನಗಾಗಿ 5 ರುಪಾಯಿ ಉಳಿಸಲು ನಡೆದುಕೊಂಡು ಹೋಗುತ್ತಿದ್ದರುʼʼ: ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗನ ಭಾವುಕ ಪೋಸ್ಟ್

ತನಗಾಗಿ ತ್ಯಾಗ ಮಾಡಿದ ಅಪ್ಪನನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗ

Viral Video: ಮಕ್ಕಳ ಒಳಿತಿಗಾಗಿ ಪೋಷಕರು ಸಾಕಷ್ಟು ತ್ಯಾಗ ಮಾಡಿ ಶಿಕ್ಷಣ ಒದಗಿಸುತ್ತಾರೆ. ಇಡೀ ಜೀವನವನ್ನು ತಮಗಾಗಿ ಮೀಸಲಿಟ್ಟ ಹೆತ್ತವರನ್ನು ಖುಷಿಯಾಗಿ ಇರಿಸುವುದು ಮಕ್ಕಳ ಕರ್ತವ್ಯ ಕೂಡ ಹೌದು. ಇದಕ್ಕೆ ಪೂರಕವಾಗಿ ಯುವಕನೊಬ್ಬ ತನಗೆ ಕಷ್ಟಪಟ್ಟು ಓದಿಸಿದ ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ಯುವ ಮೂಲಕ ಭಾವುಕ ಪೋಸ್ಟ್ ಶೇರ್ ಮಾಡಿದ್ದಾನೆ. ತನ್ನ ತಂದೆ ರಿಕ್ಷಾ ದರದಲ್ಲಿ 5 ರುಪಾಯಿ ಉಳಿಸಲು ತನಗಾಗಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು.‌ ಇಂದು ಅವರನ್ನು ವಂದೇ ಭಾರತ್ ರೈಲಿನಲ್ಲಿ ಕರೆದುಕೊಂಡು ಹೋಗಲು ಹೆಮ್ಮೆ ಎನಿಸಿದೆ ಎಂದಿದ್ದಾರೆ.

ʼʼಭಾರತದ ಅತ್ಯಂತ ಸುಂದರ ನಗರʼʼ: ಜಮ್‌ಶೆಡ್‌ಪುರದ ಸೌಂದರ್ಯಕ್ಕೆ ಮನಸೋತ ಅಮೆರಿಕನ್ ವ್ಲಾಗರ್‌

ಜಾರ್ಖಂಡ್‌ ನ ಹಸಿರು ತಾಣಕ್ಕೆ ಭೇಟಿ ನೀಡಿ ಅಮೆರಿಕನ್ ವ್ಲಾಗರ್‌ ಮೆಚ್ಚುಗೆ

Viral Video: ಅಮೆರಿಕದ ಖ್ಯಾತ ಟ್ರಾವೆಲರ್‌ ಒಬ್ಬರು ಭಾರತಕ್ಕೆ ಭೇಟಿ ನೀಡಿದ್ದು ಜಾರ್ಖಂಡ್‌ನ ಪ್ರಸಿದ್ಧ ನಗರ ಜಮ್‌ಶೆಡ್‌ಪುರದ ಹಸಿರು ತಾಣ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರು ಈ ನಗರಕ್ಕೆ ಭೇಟಿ ನೀಡಿದ ರೋಮಾಂಚಕ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಈ ಸ್ಥಳ ಎಂದಿಗೂ ತಮ್ಮ ಭಾರತದ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಅಂತಿಮವಾಗಿ ಭಾರತದಲ್ಲಿ ಇದು ನೆಚ್ಚಿನ ಸ್ಥಳಗಳಲ್ಲಿ ಒಂದಾಯಿತು ಎಂದು ಹೇಳಿಕೊಂಡಿದ್ದಾರೆ.

"ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ": ಟ್ರಾಫಿಕ್ ಜಾಮ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ನಿರ್ವಹಿಸಿದ ಉದ್ಯೋಗಿ

ಬೈಕ್‌ನಲ್ಲಿ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ: ವಿಡಿಯೊ ವೈರಲ್

Viral Video: ಟ್ರಾಫಿಕ್ ಜಾಮ್‌ಗೆ ಸಿಲುಕಿದ ವ್ಯಕ್ತಿಯೊಬ್ಬ ಸಿಕ್ಕ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದು, ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ ಎಂದು ಇದನ್ನು ಕರೆದಿದ್ದಾರೆ.

ಮಲಗಿದ್ದ ಬೀದಿ ನಾಯಿಗೆ ಕಲ್ಲು ಹೊಡೆದ ಬಾಲಕ: ಮಗ ಮಾಡಿದ ಕೃತ್ಯ ನೋಡಿ ನಿರ್ಲಕ್ಷ್ಯ ಮಾಡಿದ ಪೋಷಕರು, ವಿಡಿಯೋ ನೋಡಿ

ಮಲಗಿದ್ದ ಬೀದಿ ನಾಯಿಗೆ ಕಲ್ಲು ಎಸೆದ ಪುಟ್ಟ ಬಾಲಕ: ನೆಟ್ಟಿಗರು ಕಿಡಿ

Viral Video: ದೆಹಲಿಯ ಒಂದು ವಿಡಿಯೋ ಈಗ ಪೋಷಕರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನೊಬ್ಬ ಹೆತ್ತವರ ಮುಂದೆಯೇ ಬೀದಿ ನಾಯಿಗೆ ಕಲ್ಲು ಎಸೆದಿದ್ದಾನೆ. ನಾಯಿಯೂ ಯಾವುದೇ ರೀತಿ ತೊಂದರೆ ಪಡಿಸದೇ ನಿದ್ರಿಸುತ್ತಿತ್ತು. ಆದರೆ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ನಾಯಿಗೆ ಎಸೆದಿದ್ದಾನೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

Loading...