ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

"ನೋವೆಲ್ಲ ಗಂಗೆಯಲ್ಲಿ ತೇಲಿ ಹೋಯ್ತು": ವಾರಣಾಸಿ ಪ್ರವಾಸದ ಬಳಿಕ ಸ್ಪ್ಯಾನಿಷ್ ಮಹಿಳೆ ಭಾವುಕ

ವಾರಣಾಸಿಯ ಆಧ್ಯಾತ್ಮಿಕ ಶಕ್ತಿ ಕೊಂಡಾಡಿದ ವಿದೇಶಿ ಮಹಿಳೆ

Viral News: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ- ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಇಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ. ಇದೀಗ ಧಾರ್ಮಿಕ ನಗರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸ್ಪ್ಯಾನಿಷ್ ಮಹಿಳೆ ಆಂಡ್ರಿಯಾ ಪಾಸ್ಪರ್ ತಮಗಾದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Viral Video: 20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿದ ಕಾರ್‌ ಚಾಲಕ

Viral News: ಅಮೆರಿಕದ ಅಟ್ಲಾಂಟಾದಲ್ಲಿ ಭೀಕರ ಅಪಘಾತವೊಂದು ನಡೆದಿದೆ‌. ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದು, ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅದೃಷ್ಟವಶಾತ್ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

Viral Video: ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ  ಅರಣ್ಯಾಧಿಕಾರಿಗಳು

ಕತ್ತಿನಲ್ಲಿ ಟೈರ್ ಸಿಲುಕಿಕೊಂಡು ಒದ್ದಾಡಿದ ಕಾಡಾನೆ ಬಚವಾಗಿದ್ದು ಹೇಗೆ?

Viral Video: ಕಾಡಾನೆಯೊಂದರ ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಬಿಗಿಯಾಗಿ ಸಿಲುಕಿಕೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಅರಿತುಕೊಂಡ ಅರಣ್ಯಾಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಕೊನೆಗೂ ಟೈರನ್ನು ಹೊರ ತೆಗೆದು ಆನೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಾನವನ ನಿರ್ಲಕ್ಷ್ಯದಿಂದ ವನ್ಯಜೀವಿಗಳಿಗೆ ಎದುರಿಸುವ ಅಪಾಯದ ಉದಾಹರಣೆ ಎಂದು ನೆಟ್ಟಿಗರು ಹೇಳಿದ್ದಾರೆ.

ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿಗೆ ಖಾರದ ಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ ಕಳ್ಳ: ಕೆಲವೇ ನಿಮಿಷದಲ್ಲಿ ಖದೀಮನ ಹೆಡೆಮುಡಿ ಕಟ್ಟದ ಪೊಲೀಸರು

ಬ್ಯಾಂಕ್ ಸಿಬ್ಬಂದಿ ಮೇಲೆ ಮೆಣಸಿನ ಪುಡಿ ಎರಚಿ 4 ಲಕ್ಷ ರೂ. ದೋಚಿದ

Viral News: ಬ್ಯಾಂಕ್‌ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ, 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಯೊಂದು ನಡೆದಿದೆ. ಆದಾಗ್ಯೂ, ಪೊಲೀಸರು 30 ನಿಮಿಷಗಳಲ್ಲಿ ಆತನನ್ನು ಪತ್ತೆಹಚ್ಚಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಸಿನಿಮೀಯ ಘಟನೆ ನಡೆದಿದೆ.

ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ: ವಿಡಿಯೊ ವೈರಲ್

ಸರಕಾರಿ ಬಸ್ ನಲ್ಲಿ ಪ್ರಯಾಣಿಕರಿಬ್ಬರ ದೈಹಿಕ ಘರ್ಷಣೆ: ವಿಡಿಯೊ ವೈರಲ್

Viral Video: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್‌ನಲ್ಲಿಯೇ ಪ್ರಯಾಣಿಕರಿಬ್ಬರು ಜಗಳವಾಡಿದ್ದು ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲೂ ಪ್ರಯಾಣಿಕರು ಇದ್ದರೂ ಕ್ಯಾರೇ ಎನ್ನದೇ ಮಾತಿಗೆ ಮಾತು ಬೆಳೆಸಿದ್ದಾರೆ. ಈ ಘಟನೆಯೂ ಪುಣೆಯ ಭೋಸರಿಯಲ್ಲಿ ನಡೆದಿದ್ದು ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋವನ್ನು ಮತ್ತೊಬ್ಬ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ದಿನಕ್ಕೆ ನೂರು ಕರೆ ಮಾಡಿ ಪಾರ್ಸೆಲ್ ತಲುಪಿಸದ ಸಿಬ್ಬಂದಿ: ಕೊರಿಯರ್ ಸಂಸ್ಥೆ ವಿರುದ್ಧ ನಟಿ ಸುಚಿತ್ರಾ ಆಕ್ರೋಶ!

ಕೊರಿಯರ್ ಸಿಬ್ಬಂದಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ನಟಿ ಸುಚಿತ್ರಾ!

Viral News: ಖ್ಯಾತ ನಟಿ ಸುಚಿತ್ರಾ ಕೃಷ್ಣ ಮೂರ್ತಿ ಕೊರಿಯರ್ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಗಡ ಹಣ ಪಾವತಿ ಮಾಡಿದ್ದರೂ ಪಾರ್ಸಲ್ ತಲುಪಿಸದ ಬ್ಲೂ ಡಾರ್ಟ್ ಕೊರಿಯರ್ ಸಂಸ್ಥೆಯ ಸಿಬ್ಬಂದಿಯೊಬ್ಬ ಬೆಳಿಗ್ಗೆಯಿಂದಲೇ ಹಲವು ಭಾರಿ ಕರೆ ಮಾಡಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ.

ರೈಲು ಊಟಕ್ಕಿಂತ ಮನೆ ಅಡುಗೆಯೇ ಬೆಸ್ಟ್: ಪ್ರಯಾಣದ ಮಧ್ಯೆ ಪಾತ್ರೆ ತೆರೆದು ಚಿಕನ್ ಊಟ ಬಡಿಸಿದ ಮಹಿಳೆ!

ರೈಸ್ ,ಚಿಕನ್ ಸಾಂಬಾರು ತಂದು ರೈಲಿನ ಅಪ್ಪರ್ ಬರ್ತ್‌ನಿಂದ ಊಟ ಬಡಿಸಿದ ಮಹಿಳೆ

Viral News: ಭಾರತೀಯ ರೈಲು ಪ್ರಯಾಣ ಅಂದಾಗ ಅಲ್ಲಿ ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತ ಇರುವುದಿಲ್ಲ. ತರಹೇವಾರಿ ಖಾದ್ಯಗಳು, ಮನೆಯವರ ಜೊತೆ ಸೇರಿ ತಿನ್ನುವ ಸಂಭ್ರಮ ಕೂಡ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯೊಬ್ಬರು ಅನ್ನದ ಪಾತ್ರೆ, ಘಮ- ಘಮಿಸುವ ಚಿಕನ್ ಸಾರಿನ ಪಾತ್ರೆಯನ್ನೇ ತಂದಿದ್ದಾರೆ‌. ಅವರು ರೈಲಿನಲ್ಲಿ ಕುಳಿತುಕೊಂಡ ತನ್ನ ಕುಟುಂಬಕ್ಕೆ ಆಹಾರವನ್ನು ಬಡಿಸುತ್ತಿದ್ದಾರೆ.

ಮಾನವೀಯತೆಯೇ ಮರೆಯಾಯ್ತಾ? ವಿಕಲಚೇತನ ವ್ಯಕ್ತಿಯ ಪರ್ಸ್ ಕಸಿದುಕೊಂಡು ಪರಾರಿಯಾದ ದುಷ್ಕರ್ಮಿಗಳು!

ವಿಕಲಚೇತನ ವ್ಯಕ್ತಿಯ ಪರ್ಸ್ ಕಳ್ಳತನ ಮಾಡಿದ ಖದೀಮರು! ವಿಡಿಯೊ ವೈರಲ್

Viral News: ಪಂಜಾಬ್ ನ ಝಿರಾಕ್‌ಪುರದ ಪಾಲಂ ಎನ್‌ಕ್ಲೇವ್ ಎನ್ನುವ ಸ್ಥಳದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವೀಲ್‌ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಇಬ್ಬರು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ವಿಕಲ ಚೇತನ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ.

ವೃದ್ಧನ ಬೆನ್ನೇರಿ ಹಳ್ಳ ದಾಟಿದ ಕಂದಾಯ ಇಲಾಖೆ ಅಧಿಕಾರಿ: ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು

ವೃದ್ಧನ ಬೆನ್ನೇರಿ ಹಳ್ಳ ದಾಟಿದ ಅಧಿಕಾರಿಯ ದರ್ಪ

Revenue Department Official Suspended: ಕರ್ತವ್ಯದ ವೇಳೆ ವೃದ್ಧನೊಬ್ಬನ ಬೆನ್ನಿನ ಮೇಲೆ ಕುಳಿತು ನೀರು ತುಂಬಿದ್ದ ಹಳ್ಳವನ್ನು ದಾಟಿದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಾತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆ್ಯಪಲ್ ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ಲಾಂಚ್: ಬೆಲೆ ನೋಡಿ "ಎರಡೂ ಕಿಡ್ನಿ ಮಾರಬೇಕಾಗುತ್ತೆ" ಎಂದ ನೆಟ್ಟಿಗರು!

ಫೋಲ್ಡೆಬಲ್‌ ಐಫೋನ್ ಬಿಡುಗಡೆ: ಬೆಲೆ ಕಂಡು ಅಸಮಾಧಾನ ಹೊರಹಾಕಿದ ನೆಟ್ಟಿಗರು

Viral News: ಇದೀಗ ​ಆಪಲ್ ಸಂಸ್ಥೆ ತನ್ನ ಮತ್ತೊಂದು ಬಹುನಿರೀಕ್ಷಿತ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಫೋಲ್ಡಬಲ್‌ ಅಂದರೆ ಮಡಚಬಹುದಾದ ಸ್ಮಾರ್ಟ್‌ಫೋನ್ iPhone Duo ಬಿಡುಗಡೆ ಮಾಡಿದೆ. ಆದರೆ ಇದರ ವೈಶಿಷ್ಟ್ಯದ ಬಗ್ಗೆ ಜನ ಆಕರ್ಷಿತರಾದರೂ ಬೆಲೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಮೀಮ್ ಗಳ ಮಹಾಪೂರವೇ ಹರಿದು ಬರುತ್ತಿದೆ‌.

ಜೀವಕ್ಕೆ ಬೆಲೆಯೇ ಇಲ್ವಾ?  ಆ್ಯಂಬುಲೆನ್ಸ್‌ಗೂ ದಾರಿ ಕೊಡದೆ ನಡುರಸ್ತೆಯಲ್ಲಿ ಮಹಿಳೆಯಿಂದ ರಂಪಾಟ

ಆ್ಯಂಬುಲೆನ್ಸ್‌ಗೂ ದಾರಿ ಬಿಟ್ಟುಕೊಡದೆ ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಹಿಳೆ

Viral Video: ಮಹಿಳೆಯೊಬ್ಬರು ಮತ್ತೊಬ್ಬ ವಾಹನ ಸವಾರನೊಂದಿಗೆ ಜಗಳ ಮಾಡುತ್ತಿದ್ದು ಆ್ಯಂಬುಲೆನ್ಸ್ ಗೂ ದಾರಿ ಬಿಡದೆ ರಂಪಾಟ ಮಾಡಿದ್ದಾಳೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ʼʼಭಾರತದಲ್ಲಿ ನನ್ನನ್ನು ಓಡಾಡುವ ಎಟಿಎಂನಂತೆ ನೋಡುತ್ತಿದ್ದರುʼʼ: ವಿದೇಶಿ ಪ್ರವಾಸಿ ಹೀಗಂದಿದ್ದೇಕೆ?

ವಿದೇಶಿಗರಿಂದ ಹೆಚ್ಚು ಹಣ ವಸೂಲಿ: ಭಾರತದಲ್ಲಿನ ಅನುಭವ ಬಿಚ್ಚಿಟ್ಟ ಪ್ರವಾಸಿಗ

Viral News: ಭಾರತಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ ಇಲ್ಲಿ ಎದುರಾದ ಕಹಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಒಂದು ತಿಂಗಳ ಪ್ರವಾಸ ಕೈಗೊಂಡಿದ್ದ ತನ್ನನ್ನು ಇಲ್ಲಿನ ಜನರು ವಾಕಿಂಗ್ ಎಟಿಎಂನಂತೆ ನೋಡಿದ್ದಾರೆ. ವಿದೇಶಿಗರಿಂದ ವ್ಯಾಪಾರಿಗಳು ಹಾಗೂ ಸ್ಥಳೀಯರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

Viral Video: ಚಾಲಕನ ನಿರ್ಲಕ್ಷ್ಯ ತಂದ ಆಪತ್ತು; ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಎಳೆದೊಯ್ದ ಕಾರ್‌

ಪೆಟ್ರೋಲ್ ಬಂಕ್‌ ನೌಕರನನ್ನು ಎಳೆದೊಯ್ದ ಕಾರ್‌ ಚಾಲಕ: ವಿಡಿಯೊ ವೈರಲ್‌

Viral News: ಕಾರ್‌ ಚಾಲಕನ ನಿರ್ಲಕ್ಷ್ಯದಿಂದ ಇಂಧನ ತುಂಬಿಸಲು ಬಂದ ಪೆಟ್ರೋಲ್‌ ಬಂಕ್‌ ನೌಕರ ತೀವ್ರವಾಗಿ ಗಾಯಗೊಂಡ ಘಟನೆ ಕೇರಳಂನಲ್ಲಿ ನಡೆದಿದೆ. ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸುತ್ತಿದ್ದ ನೌಕರ ರಾಮಚಂದ್ರನ್ ಫ್ಯೂಯಲ್ ನೊಝಲ್ ಹೊರತೆಗೆಯಲು ಯತ್ನಿಸುತ್ತಿದ್ದರು. ಈ ವೇಳೆ ವ್ಯಾಗನ್‌ ಆರ್ ಕಾರಿನ ಚಾಲಕ ತಕ್ಷಣವೇ ಮುಂದಕ್ಕೆ ಚಲಾಯಿಸಿದ್ದಾನೆ. ಪೈಪ್ ಇನ್ನೂ ಗ್ಯಾಪ್‌ನಲ್ಲೇ ಸಿಲುಕಿದ್ದರಿಂದ, ರಾಮಚಂದ್ರನ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಕಾರು ಮುಂದಕ್ಕೆ ಚಲಿಸಿದ್ದರಿಂದ ಸುಮಾರು ದೂರದ ತನಕ ಎಳೆಯಲ್ಪಟ್ಟಿದ್ದಾರೆ.

ಮನೆಗೆ ನುಗ್ಗಲು ಯತ್ನಿಸಿದ ಚಿರತೆಯನ್ನು ದಿಟ್ಟವಾಗಿ ಎದುರಿಸಿದ ಶ್ವಾನ; ರೋಚಕ ಹಣಾಹಣಿಯಲ್ಲಿ ಕೊನೆಗೆ ಗೆದ್ದಿದ್ದು ಯಾರು?

ಏಕಾಏಕಿ ಚಿರತೆ ದಾಳಿ: ಧೈರ್ಯದಿಂದ ಎದುರಿಸಿ ಪಾರಾದ ಸಾಕು ನಾಯಿ

Viral News: ಮನೆಗೆ ನುಗ್ಗಿ ಸಾಕು ನಾಯಿಯೊಂದರ ಮೇಲೆ ಚಿರತೆ ಭೀಕರ ದಾಳಿ ಮಾಡಿದ ಘಟನೆ ನಡೆದಿದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಕತ್ತಲೆಯ ಮರೆಯಲ್ಲಿ, ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ನಾಯಿ ಗಾಢ ನಿದ್ರೆಯಲ್ಲಿದ್ದಾಗ ಅದರ ಮೇಲೆ ದಾಳಿ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ರಸ್ತೆಬದಿಯ ಅಂಗಡಿಯಿಂದ ಮಧ್ಯರಾತ್ರಿ ಗಣೇಶ ವಿಗ್ರಹ ಕಳವು: ಸಿಸಿಟಿವಿ ದೃಶ್ಯ ವೈರಲ್

ಬೆಂಗಳೂರಿನಲ್ಲಿ ಅಘಾತಕಾರಿ ಘಟನೆ: ರಸ್ತೆಬದಿ ಮಳಿಗೆಯಿಂದ ಗಣೇಶ ಮೂರ್ತಿ ಕಳವು

Viral News: ರಸ್ತೆಬದಿಯ ಮಳಿಗೆಯಿಂದಲೇ ಗಣೇಶ ಮೂರ್ತಿಯನ್ನು ತಡರಾತ್ರಿ ಕಳ್ಳತನ ಮಾಡಿರುವ ಘಟನೆಯೊಂದು ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿ ಪ್ರದೇಶದ ರಸ್ತೆ ಬದಿಯ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಗಣೇಶ ವಿಗ್ರಹವನ್ನು ಕಳ್ಳತನ ಮಾಡಲಾಗಿದ್ದು ಈ ಸಂಪೂರ್ಣ ಕೃತ್ಯ ಹತ್ತಿರದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.

15 ಬಾರಿ ರಿಜೆಕ್ಟ್ ಆದ್ರೂ ಛಲ ಬಿಡದ ಯುವಕ: ಕೊನೆಗೂ ಅಮೆಜಾನ್ ಕಂಪನಿಯಲ್ಲಿ 1.1 ಕೋಟಿ ರೂಪಾಯಿ ಪ್ಯಾಕೇಜ್‌ನ ಉದ್ಯೋಗ! ಸಾಧನೆ ಅಂದ್ರೆ ಇದು

15 ಬಾರಿ ಅರ್ಜಿ ರಿಜೆಕ್ಟ್: ಕೊನೆಗೂ ಅಮೆಜಾನ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ

Viral News: ಯುವಕನೊಬ್ಬ ಅಮೆಜಾನ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸತತ 15 ಬಾರಿ ಪ್ರಯತ್ನಿಸಿದಾಗಲೂ ರಿಜೆಕ್ಟ್ ಆಗಿದ್ದಾನೆ. ಆದರೂ ಕುಗ್ಗದೆ ಛಲ ಬಿಡದ ಯುವಕ 16ನೇ ಬಾರಿ ಪ್ರಯತ್ನಿಸಿ ಅಮೆಜಾನ್ ಜರ್ಮನಿ ಶಾಖೆಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್‌ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸದ್ಯ ಈತನ ಸಾಧನೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ‌.

‘ಐ ಲವ್ ಯು’ ಎಂದು ಮಹಿಳೆಗೆ ಮೆಸೇಜ್ ಮಾಡಿದ ರ‍್ಯಾಪಿಡೋ ಚಾಲಕ; ಪೊಲೀಸ್‌ ದೂರಿಗೂ ಹೆದರದ ಡೆಲಿವರಿ ಬಾಯ್

ಮಹಿಳೆಗೆ ಕಿರುಕುಳ ನೀಡಿದ ಡೆಲಿವರಿ ಬಾಯ್

Viral News: ಪಾರ್ಸೆಲ್ ಬುಕ್ಕಿಂಗ್ ಆ್ಯಪ್‌ಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದನ್ನು ಪುಷ್ಟಿಕರಿಸುವ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ರ‍್ಯಾಪಿಡೋ ಆ್ಯಪ್ ಮೂಲಕ ಪಾರ್ಸೆಲ್ ಕಳುಹಿಸಿದ ಮಹಿಳೆಗೆ ಡೆಲಿವರಿ ಬಾಯ್‌ 'ಐ ಲವ್ ಯು' ಎಂಬ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಮಹಿಳೆ ತನ್ನ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ ಬಳಿಕವೂ ಸಂದೇಶ ಕಳುಹಿಸುತ್ತಲೇ ಇದ್ದ ಎಂದಿದ್ದಾರೆ.

ಗುರುಗ್ರಾಮದಲ್ಲಿ ಭೀಕರ ಅಪಘಾತ; ವೇಗವಾಗಿ ಬಂದ ಕಾರ್‌ ಹರಿದು ತಾಯಿಯ ಕಣ್ಣೆದುರೇ ಉಸಿರು ಚೆಲ್ಲಿದ  2 ವರ್ಷದ ಕಂದಮ್ಮ

ಕಾರ್‌ ಹರಿದು ಅಮ್ಮನ ಕಣ್ಣೆದುರೇ ಪ್ರಾಣ ಬಿಟ್ಟ 2 ವರ್ಷದ ಕಂದಮ್ಮ

Viral News: ಹರಿಯಾಣದ ಗುರುಗ್ರಾಮ್‌ನ ಸೆಕ್ಟರ್ 6ರ ಮನೆಯೊಂದರ ಹೊರಗೆ ಅಕ್ಕನೊಂದಿಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿಗೆ ವೇಗವಾಗಿ ಬಂದ ಕಾರ್‌ ಡಿಕ್ಕಿ ಹೊಡೆದಿದ್ದು, ಅಲ್ಲೇ ಅಸುನೀಗಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ತೆಲಂಗಾಣ ವಿಧಾನಸಭೆ ಆವರಣದಲ್ಲಿ ಕುಸಿದ ಸರ್ಕಾರಿ ಅಧಿಕಾರಿ: ಸಚಿವ ವಾಕಿಟಿ ಶ್ರೀಹರಿ ಸಿಪಿಆರ್‌ ಮಾಡಿದರೂ ಬದುಕಿಸಲು ಸಾಧ್ಯವಾಗಿಲ್ಲ

ವಿಧಾನಸಭೆ ಆವರಣದಲ್ಲೇ ಅಧಿಕಾರಿ ಸಾವು

Vakiti Srihari: ತೆಲಂಗಾಣ ವಿಧಾನಸಭೆ ಆವರಣದಲ್ಲಿ ಹಿರಿಯ ಐಎಎಸ್‌ ಅಧಿಕಾರಿಯ ಪಿಎಸ್‌ ಕೃಷ್ಣ ಮೋಹನ್‌ ರಾಜು (50) ಹಠಾತ್‌ ಕುಸಿದುಬಿದ್ದರು. ಸಚಿವ ವಾಕಿಟಿ ಶ್ರೀಹರಿ ಸ್ಥಳದಲ್ಲೇ ಸಿಪಿಆರ್‌ ನೀಡಿದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮೋಹನ್‌ ರಾಜು ಮೃತಪಟ್ಟಿದ್ದು, ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ

ಯುವತಿಯರಿರುವ ಬಾಡಿಗೆ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಮಾಲಕ; ಪ್ರಶ್ನಿಸಿದ್ದಾಗ ಸಭ್ಯ ಉಡುಗೆ ಧರಿಸಿ ಎಂದು ಉಡಾಫೆಯ ಉತ್ತರ

ಯುವತಿಯರ ಬಾಡಿಗೆ ರೂಮ್ ಒಳಗೆ ಅನುಮತಿ ಕೇಳದೆ ಸಿಸಿಟಿವಿ ಅಳವಡಿಸಿದ ಮಾಲಕ

Viral News: ಮಹಾರಾಷ್ಟ್ರದ ಮುಂಬೈಯಲ್ಲಿ ಯುವತಿಯರ ಬಾಡಿಗೆ ಮನೆಗೆ ಪೂರ್ವಾನುಮತಿ ಪಡೆಯದೆ ಮಾಲಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಆರೋಪಿಸಿರುವ ಪೋಸ್ಟ್ ವೈರಲ್ ಆಗಿದೆ. ಸದ್ಯ ಈ ಘಟನೆ ಬಾಡಿಗೆದಾರರ ಗೌಪ್ಯತೆ ಮತ್ತು ಸುರಕ್ಷತೆಯ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ; ರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿ ಮೇಲೆಯೇ ಏಕಾಏಕಿ ದಾಳಿ: ವಿಡಿಯೊ ವೈರಲ್‌

ಚಿರತೆ ರಕ್ಷಣಾ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿ ಮೇಲೆ ದಾಳಿ: ಭಯಾನಕ ವಿಡಿಯೊ

Viral Video: ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಕಾರ್‌ ಡಿಕ್ಕಿ ಹೊಡೆದು ಚಿರತೆಯೊಂದು ಗಂಭೀರ ಗಾಯಗೊಂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಚಿರತೆ ಅರಣ್ಯ ಅಧಿಕಾರಿ ಮೇಲೆ ದಾಳಿ ಮಾಡಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗ್ತಿದೆ 80ರ ದಶಕದ ಟ್ರೆಂಡ್: AI ಮೂಲಕ ನಿಮ್ಮ ಫೋಟೊವನ್ನು ರೆಟ್ರೋ ಲುಕ್‌ಗೆ ಬದಲಾಯಿಸುವುದು ಹೇಗೆ?

ನಿಮ್ಮ ಫೋಟೊವನ್ನು 80ರ ದಶಕದ ರೆಟ್ರೋ ಲುಕ್‌ಗೆ ಬದಲಾಯಿಸುವುದು ಹೇಗೆ?

ChatGPT ’80s Photo Trend: ಇನ್‌ಸ್ಟಾಗ್ರಾಮ್ ಬಳಕೆದಾರರು 1980ರ ದಶಕಕ್ಕೆ ಹಿಂತಿರುಗಿ, ತಮ್ಮ ಫೋಟೊವನ್ನು ಆಕರ್ಷಕ ರೆಟ್ರೊ ಭಾವಚಿತ್ರಗಳಾಗಿ ಪರಿವರ್ತಿಸಲು ChatGPT ಬಳಸುತ್ತಿದ್ದಾರೆ. 80ರ ದಶಕದ ವೈಬ್‌ ಅನ್ನು ಈ AI ಫೋಟೋಗಳು ನೈಜ ಎಂಬಂತೆ ಮರುಸೃಷ್ಟಿಸುತ್ತಿವೆ. ​ಬಳಕೆದಾರರು ತಮ್ಮ ಫೋಟೊಗಳನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ, ಪ್ರಾಂಪ್ಟ್ ನೀಡುವ ಮೂಲಕ 1980ರ ದಶಕದಲ್ಲಿದ್ದ ಬಾಲಿವುಡ್ ಶೈಲಿ, ಹಳೆಯ ಫ್ಯಾಮಿಲಿ ಆಲ್ಬಮ್, ಹಳೆಯ ಪತ್ರಿಕೆಗಳ ಮುಖಪುಟದ ಶೈಲಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ಪುಟ್ಟ ಸನ್ಯಾಸಿಗಳೊಂದಿಗೆ ಮಠದಲ್ಲಿ ಫುಟ್‌ಬಾಲ್ ಆಡಿದ ಗೋಲ್ಡನ್ ರಿಟ್ರೈವರ್ ನಾಯಿ: ಕ್ಯೂಟ್ ವಿಡಿಯೊ ನೋಡಿ!

ಪುಟ್ಟ ಬೌದ್ಧ ಸನ್ಯಾಸಿಗಳ ಜೊತೆ ಫುಟ್ ಬಾಲ್ ಆಡಿದ ಶ್ವಾನ: ಮುದ್ದಾದ ದೃಶ್ಯ!

Viral News: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೈಜ ಸೌಂದರ್ಯದ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದೆ. ಮಠ ವೊಂದರಲ್ಲಿ ಪುಟ್ಟ ಬೌದ್ಧ ಸನ್ಯಾಸಿಗಳು ಫುಟ್‌ಬಾಲ್ ಆಡುತ್ತಿದ್ದಾಗ ಮಾಫು ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್‌ ತಳಿಯ ನಾಯಿ ಅವರ ಜೊತೆಗೆ ಆಟಕ್ಕೆ ಎಂಟ್ರಿ ಕೊಟ್ಟಿದೆ. ಸನ್ಯಾಸಿಗಳು ಕೂಡ ತಮ್ಮ ತಂಡದಲ್ಲಿ ಗೋಲ್ಡನ್ ರಿಟ್ರೈವರ್ ಅನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ರೀಲ್ಸ್ ಚಟ;  ಹೆಚ್ಚು ವೀವ್ಸ್‌ಗಾಗಿ 30 ಅಡಿ ಎತ್ತರದ ಡ್ಯಾಮ್‌ನಿಂದ ಜಿಗಿದು ಎರಡೂ ಕಾಲು ಮುರಿದುಕೊಂಡ ವ್ಯಕ್ತಿ!

ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಎರಡು ಕಾಲು ಮುರಿದುಕೊಂಡ ವ್ಯಕ್ತಿ!

Viral Video: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು 30 ಅಡಿ ಎತ್ತರದ ಡ್ಯಾಮ್ ಮೇಲಿಂದ ನೀರಿಗೆ ಜಿಗಿದು ಎರಡೂ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇಂತಹ ಹುಚ್ಚು ಸಾಹಸ ಬೇಕೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Loading...