ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Viral Video: ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ನಾಗರಿಕ ಪ್ರಜ್ಞೆಯ ಕೊರತೆ: ಮದ್ಯದ ಬಾಟಲ್‌ ರಸ್ತೆಗೆ ಎಸೆದ ವ್ಯಕ್ತಿ

ಸಾರ್ವಜನಿಕ ಸ್ಥಳದಲ್ಲಿ ವಹಿಸಬೇಕಾದ ಜವಾಬ್ದಾರಿ ಹಾಗೂ ವರ್ತಿಸಬೇಕಾದ ರೀತಿಯನ್ನು ನಾವಿಂದು ಮರೆತಿದ್ದೇವೆ. ಅದರಲ್ಲೂ ಭಾರತೀಯರ ನಡವಳಿಕೆ ಬಗ್ಗೆ ಇತ್ತೀಚಿನ ದಿನದಲ್ಲಿ ದೂರು ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ವ್ಯಕ್ತಿಯೊಬ್ಬನ ಬೇಜವ್ದಾರಿಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮಧ್ಯವಯಸ್ಕನೊಬ್ಬ ರಸ್ತೆಗೆ ಗಾಜಿನ ಮದ್ಯದ ಬಾಟಲ್‌ ಎಸೆದಿದ್ದಾನೆ. ಈ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ಒಂದು ಪೆಗ್ ನೀಡಬೇಕಿತ್ತು ಎಂದ ನೆಟ್ಟಿಗರು

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ವೈರಲ್‌ ವಿಡಿಯೊ ನೋಡಿ!

Viral Video: ಕಾಡಿನಿಂದ ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ರಾಜಸ್ಥಾನದ ಟೋಂಕ್ ಜಿಲ್ಲೆಯ ಎಸ್‌ಬಿಐ ಚೌರಸ್ತಾ ಬಳಿಯ ವೈನ್ ಶಾಪ್‌ಗೆ ನುಗ್ಗಿದೆ. ಅಲ್ಲಿ ಸಿಕ್ಕ ಸಿಕ್ಕ ಬಾಟಲಿಗಳನ್ನು ಪುಡಿಮಾಡಿ ಮಾರಾಟಗಾರನ ಮೇಲೆಯೂ ದಾಳಿ ಮಾಡಿದೆ. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರು ಗಾಯಗೊಂಡಿದ್ದು ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ಈ ಘಟನೆಯೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ.

ಅಡ್ವಾನ್ಸ್ ನೀಡಿದ್ದು 1 ಲಕ್ಷ, ಕೈಗೆ ಸಿಕ್ಕಿದ್ದು 20 ಸಾವಿರ; ವಂಚಿಸಿದ ಬೆಂಗಳೂರು ಮನೆ ಮಾಲೀಕನ ವಿರುದ್ಧ ಮಹಿಳೆ ಆಕ್ರೋಶ!

ಬೆಂಗಳೂರಿನಲ್ಲಿ ಮಹಿಳೆಗೆ ಅಡ್ವಾನ್ಸ್ ಹಣ ಕಡಿತಗೊಳಿಸಿ ವಂಚನೆ

Viral News: ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿ ಮಾಡಿದರೂ ಮಾಲೀಕನೊಬ್ಬ ಒಟ್ಟು 1 ಲಕ್ಷ ಹಣದಲ್ಲಿ 80,396 ರೂಪಾಯಿ ಕಡಿತಗೊಳಿಸಿ ತನ್ನ ಕೈಗೆ ಕೇವಲ 20,000 ರೂಪಾಯಿ ನೀಡಿದ್ದಾನೆಂದು ಮಹಿಳೆ ಆಕ್ರೋಶಗೊಂಡಿದ್ದಾಳೆ. ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದ ಯುವಕ- ಯುವತಿಯರಿಗೆ ಇದೊಂದು ದೊಡ್ಡ ಹೊರೆ ಎಂದು ಅವರು ಬರೆದುಕೊಂಡಿದ್ದಾರೆ.

"ಬ್ಯಾಗ್ ಕಿತ್ತು ಡ್ರೆಸ್ ಎಳೆದರು": ಸೆರ್ಬಿಯಾ ಪ್ರವಾಸದದಲ್ಲಿ ಎದುರಾದ ನರಕದ ಅನುಭವ ವಿವರಿಸಿದ ಭಾರತೀಯ ಮಹಿಳೆ

ವಿದೇಶದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ: ವಿಡಿಯೊ ನೋಡಿ

Viral News: ವಿದೇಶದಲ್ಲಿ ರಜಾ ದಿನವನ್ನು ಕಳೆಯಬೇಕೆಂದು ಹೋದ ಭಾರತೀಯ ದಂಪತಿಗೆ ಭೀಕರ ಅನುಭವ ಎದುರಾಗಿದೆ. ಸೆರ್ಬಿಯಾಕ್ಕೆ ತೆರಳಿದ ಕೆಲವೇ ಸಮಯದಲ್ಲಿ ಅಲ್ಲಿನ ಸ್ಥಳೀಯರಿಂದ ನರಕಯಾತನೆ ಅನುಭವಿಸಿದೆವು ಎಂದು ದಂಪತಿ ಬೇಸರ ಹೊರ ಹಾಕಿದ್ದಾರೆ. ವ್ಲಾಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ತನ್ನ ಡ್ರೆಸ್ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

Viral Video: ʼʼನಂಗೂ ಅಡ್ಮಿಷನ್‌ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ

ಬಾಲಕರ ಹಾಸ್ಟೆಲ್‌ಗೆ ನುಗ್ಗಿದ ದೈತ್ಯ ಮೊಸಳೆ: ಇಲ್ಲಿದೆ ವಿಡಿಯೊ

Viral Video: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮೊಸಳೆ ದಾಳಿ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕ್ರೂರವಾಗಿ ಕೊಂದು ಸಾಯಿಸಿತ್ತು. ಇದರ ಬೆನ್ನಲೇ ರಾಜಸ್ಥಾನದ ಕೋಟಾದ ಬಾಯ್ಸ್ ಹಾಸ್ಟೆಲ್‌ನ ಅಡುಗೆ ಕೋಣೆಯೊಳಗೆ ಮೊಸಳೆಯೊಂದು ಎಂಟ್ರಿ ನೀಡಿದೆ. ಹಾಸ್ಟೆಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಬ್ಯಾಂಕ್‌ನಲ್ಲೇ ಸಿಬ್ಬಂದಿ ಲಾಕ್‌!

ಹಾಸನ ಜಿಲ್ಲೆಯ ಅರಕಲಗೂಡುದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರು ಸಿಬ್ಬಂದಿಯನ್ನು ತಡರಾತ್ರಿವರೆಗೆ ಕಚೇರಿಯಲ್ಲೇ ಉಳಿಯುವಂತೆ ಒತ್ತಾಯಿಸಿ, ಮುಖ್ಯ ಗೇಟ್‌ಗೆ ಬೀಗ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮ್ಯಾನೇಜರ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

"ದಿನವನ್ನು ಖುಷಿಯಾಗಿರಿಸಲು ಈ ಸಣ್ಣ ಕ್ಷಣ ಸಾಕು": ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಗೆ ಫೋಟೊ ತೆಗೆಯಲು ನೆರವಾದ ಯುವಕ

ಮೊದಲ ಬಾರಿಗೆ ವಿಮಾನ ಪ್ರಯಾಣ: ವ್ಯಕ್ತಿಯ ಮೊಗದಲ್ಲಿ ನಗು ತರಿಸಿದ ಯುವಕ

Viral News: ನಮಗೆ ಖುಷಿ ಕೊಡುವ ಕೆಲವೊಂದು ಸಣ್ಣ ಘಟನೆಗಳು ಸ್ಮರಣೀಯವಾಗುತ್ತವೆ. ಯಾರೋ ಅಪರಿಚಿತರು ದಯೆ ತೋರಿದರು ಎಂದಾಗ ಮನಸ್ಸಿಗೆ ಆಗುವ ಆನಂದವೇ ಬೇರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ಯುವಕನೊಬ್ಬನ ಮಾನವೀಯ ಗುಣ ಗಮನ ಸೆಳೆದಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏರೋಬ್ರಿಡ್ಜ್‌ನಲ್ಲಿ ನಿಂತು ತಾವೇ ಫೋಟೋ ತೆಗೆಯಲು ಒದ್ದಾಡುತ್ತಿದ್ದರು. ಇದನ್ನು ಕಂಡ ಯುವಕ ನೆರವಾಗಿದ್ದಾನೆ.

ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ನಾಲ್ವರು ಪೊಲೀಸರು; ವೈರಲ್ ವಿಡಿಯೊ ಹೊರಬಂದ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

ಹೆಲ್ಮೆಟ್ ಇಲ್ಲದೆ ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸರ ಪ್ರಯಾಣ

Viral Video: ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಸಾರಿಗೆ ಇಲಾಖೆ ಟ್ರಾಫಿಕ್ ರೂಲ್ಸ್ ಜಾರಿ ಮಾಡಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಂತಹ ಕಾನೂನುಗಳನ್ನು ತರುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿದ ಘಟನೆಯೊಂದು ನಡಿದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ನಾಲ್ವರು ಪೊಲೀಸ್ ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಅಪ್ರಾಪ್ತ ಬಾಲಕಿ ಇರುವುದನ್ನು ಗಮನಿಸಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್; ತಾಯಿಯ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ

ಪಾರ್ಸೆಲ್ ನೆಪದಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

Viral Video: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಬಾಯ್ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಅಪ್ರಾಪ್ತ ಬಾಲಕಿಗೆ ಆರ್ಡರ್ ನೀಡುವ ನೆಪದಲ್ಲಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್‌ಯ ವಿಡಿಯೊವೊಂದು ವೈರಲ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಬಾಲಕಿಯ ತಾಯಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ಮಗುಗೆ ಎಚ್ಚರವಾಗಬಹುದೆಂದು ಡೈಪರ್ ಆರ್ಡರ್ ಮಾಡಿದ ಮಹಿಳೆಯ ಮನೆಯ ಡೋರ್ ಬೆಲ್ ಮಾಡದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಮಗುವಿನ ಬಗ್ಗೆ ಕಾಳಜಿ ತೋರಿದ ಡೆಲಿವರಿ ಬಾಯ್: ಮಹಿಳೆಯ ವಿಡಿಯೊ ವೈರಲ್‌

Viral Video: ಯಾವುದೇ ಕಾರಣ ಇಲ್ಲದೆ ಅಪರಿಚಿತರು ಕಾಳಜಿ ವಹಿಸುತ್ತಾರೆ ಅಂದಾಗ ನಮಗಾಗುವ ತೃಪ್ತಿ ಭಾವನೆಯೇ ಬೇರೆ. ಯಾವುದೇ ಸಣ್ಣ ಪುಟ್ಟ ಘಟನೆಯೇ ಆಗಿರಲಿ ಅದು ನಮ್ಮನ್ನು ಇಡೀ ದಿನವನ್ನು ಖುಷಿಯಾಗಿ ಇರಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಒಬ್ಬ ತೋರಿಸಿದ ಕಾಳಜಿಗೆ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ತಡರಾತ್ರಿ ಮಗುವಿನ ಡೈಪರ್ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ನ ಹೃದಯವಂತಿಕೆ ಎಲ್ಲರ ಹೃದಯ ಗೆದ್ದಿದೆ. ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮಹಿಳೆ, ಇದನ್ನು "ಅತ್ಯಂತ ಸಿಹಿ ಅನುಭವ" ಎಂದು ಕರೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ...

ದೆಹಲಿ ಆಸ್ಪತ್ರೆಯಲ್ಲಿ ಘೋರ ದುರಂತ; ಹೊಟ್ಟೆ ಮೇಲೆ ಫ್ಯಾನ್ ಬಿದ್ದು ರೋಗಿ ಸಾವು: ವಿಡಿಯೊ ವೈರಲ್‌

ದೆಹಲಿ ಆಸ್ಪತ್ರೆಯಲ್ಲಿ ಫ್ಯಾನ್ ಬಿದ್ದು ರೋಗಿ ಸಾವು

Patient Dies After Ceiling Fan Falls: ಸೀಲಿಂಗ್ ಫ್ಯಾನ್ ಬಿದ್ದು 42 ವರ್ಷದ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ನಡೆದಿದೆ. ಆದರೆ ರೋಗಿಯು ಸೀಲಿಂಗ್ ಫ್ಯಾನ್ ಘಟನೆಯಿಂದಲ್ಲ, ಬದಲಾಗಿ ಅವರ ಅನಾರೋಗ್ಯದಿಂದ ಮೃತಪ್ಟಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವತಿಗೆ ನೆರವಾದ ಚಿರಾಗ್ ಪಾಸ್ವಾನ್; ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ

ವಿಐಪಿ ಬೆಂಗಾವಲು ನಿಲ್ಲಿಸಿ ಗಾಯಾಳು ಯುವತಿಗೆ ನೆರವಾದ ಚಿರಾಗ್ ಪಾಸ್ವಾನ್

Viral Video: ಪಂಜಾಬ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವತಿಯನ್ನು ಗಮನಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಮ್ಮ ವಿಐಪಿ ಬೆಂಗಾವಲು ನಿಲ್ಲಿಸಿ, ಅಧಿಕೃತ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ತಕ್ಷಣ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಂಡರು. ಚಿಕಿತ್ಸೆ ಆರಂಭವಾಗಿದೆ ಎಂಬ ದೃಢೀಕರಣ ಪಡೆದ ಬಳಿಕವೇ ಅವರು ತಮ್ಮ ಪ್ರಯಾಣ ಮುಂದುವರಿಸಿದರು.

ರೈಲಿನಲ್ಲಿ ಲೈಂಗಿಕ ಕಿರುಕುಳ: ಕಾಮುಕನ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ ಬಳೆ ತೊಡಿಸಿ ಸಾರ್ವಜನಿಕವಾಗಿ ಅವಮಾನಿಸಿದ ಯುವತಿ

ಕಿರುಕುಳ ನೀಡಿದ ಕಾಮುಕನಿಗೆ ತಕ್ಕ ಪಾಠ ಕಲಿಸಿದ ಯುವತಿ: ವಿಡಿಯೊ ವೈರಲ್

Viral Video: ಭಾರತದಲ್ಲಿ ಮಹಿಳೆಯರ ಸುರಕ್ಷತೆ ಹೇಗೆ? ಎನ್ನುವ ಆತಂಕದ ಪ್ರಶ್ನೆ ಜನರನ್ನು ಕಾಡುತ್ತಿದೆ. ಚಲಿಸುವ ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದು, ಭಯಪಡದ ಆಕೆ ತಕ್ಕ ಪಾಠ ಕಲಿಸಿದ್ದಾಳೆ. ಆತನಿಗೆ ಲಿಪ್‌ಸ್ಟಿಕ್‌ ಹಚ್ಚಿ, ಬಳೆ ತೊಡಿಸಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾಳೆ.

ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಲಾಕ್‌ ತುಂಡಾಗಿ 40 ಅಡಿ ಮೇಲಿಂದ ಬಿದ್ದ ಯುವಕ; ಗಂಭೀರ ಗಾಯ! Video

ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ತುಂಡಾಗಿ ಬಿದ್ದ ಯುವಕ! Video

Dandeli Zipline Accident: ದಾಂಡೇಲಿಯ 'ಸ್ಟರ್ಲಿಂಗ್​​ ರಿವರ್​ ರೆಸಾರ್ಟ್'ನಲ್ಲಿ ಜಿಪ್‌ಲೈನ್​ ಲಾಕ್‌ ತುಂಡಾಗಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಮಾರು 30 ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರಿಂದ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಗಾಯಾಳುವನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

"ಬ್ಲಿಂಕ್‌ಇಟ್‌ ಎಡವಟ್ಟು": ಭೋಪಾಲ್‌ನ ವ್ಯಕ್ತಿಗೆ ಆರ್ಡರ್‌ ಜತೆ ಸಿಕ್ತು ಅಪರಿಚಿತ ವ್ಯಕ್ತಿಯ ವೈಯಕ್ತಿಕ ದಾಖಲೆ

ಬ್ಲಿಂಕ್‌ಇಟ್‌ ಡೆಲಿವರಿಯಲ್ಲಿ ಸಿಕ್ಕಿದ್ದು ಅಪರಿಚಿತ ವ್ಯಕ್ತಿಯ ದಾಖಲೆ

Viral Video: ಇತ್ತೀಚೆಗಷ್ಟೇ ಕ್ವಿಕ್ ಕಾಮರ್ಸ್ ಆ್ಯಪ್ ಬ್ಲಿಂಕ್‌ಇಟ್‌ ಡಾಕ್ಯುಮೆಂಟ್ ಪ್ರಿಂಟಿಂಗ್ ಸೇವೆಯನ್ನು ಆರಂಭಿಸಿದೆ. ಆದರೆ ಇದು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಮೂಡುವಂತಾಗಿದೆ. ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ಇಲ್ಲಿ ನೀಡುವುದು ಸುರಕ್ಷತವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಮಧ್ಯ ಪ್ರದೇಶದ ಭೋಪಾಲ್‌ನ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಪ್ರಿಂಟ್ ಪ್ಯಾಕೆಟ್‌ನಲ್ಲಿ ಬೇರೊಬ್ಬರ ದಾಖಲೆಗಳು ಸಿಕ್ಕಿದೆ.

"ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮರೆಯಾಗಿದೆ": ಸಿಂಗಾಪುರದ ನೀರಿನಲ್ಲಿ ತೇಲಿದ 'ಕುರ್ಕುರೆ' ಪ್ಯಾಕೆಟ್ ನೋಡಿ ನೆಟ್ಟಿಗರು ಕೆಂಡಾಮಂಡಲ

ಸಿಂಗಾಪುರದಲ್ಲಿ ನೀರಿನಲ್ಲಿ ತೇಲಿದ ʼಕುರ್ಕುರೆʼ ಪ್ಯಾಕೆಟ್; ವಿಡಿಯೊ ಇಲ್ಲಿದೆ

Viral Video: ಸಾರ್ವಜನಿಕ ಸ್ಥಳ, ಪ್ರವಾಸಿ ಸ್ಥಳ ತಮ್ಮದೇ ಎಂಬ ರೀತಿಯಲ್ಲಿ ಹಲವರು ವರ್ತಿಸುತ್ತಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದು ಮೂಲಕ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸಿದ್ಧ ಪ್ರವಾಸಿ ತಾಣ ಸಿಂಗಾಪುರದಲ್ಲಿನ ಸಣ್ಣದೊಂದು ಕಸ ಇಡೀ ಸ್ಥಳದಲ್ಲಿ ಹೇಗೆ ಎದ್ದು ತೋರುತ್ತಿತ್ತು ಎಂಬುದನ್ನು ವಿವರಿಸುವ ವಿಡಿಯೊವೊಂದು ವೈರಲ್ ಆಗಿದೆ. ಶುದ್ಧ ನೀರಿನಲ್ಲಿ ಸಣ್ಣ ಹೂವಿನ ಎಸಳು, ಕೊಂಬೆಯ ಜತೆಗೆ 'ಕುರ್ಕುರೆ' ಪ್ಯಾಕೆಟ್ ಕೂಡ ಕಂಡು ಬಂದಿದೆ.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಮಹಿಳೆಗೆ ಭಾರತೀಯ ಯೋಧ ಸಹಾಯ ಮಾಡಿದ್ದು ಹೇಗೆ ಗೊತ್ತಾ?

Indian soldier helps a woman: ನರೇಂದ್ರ ಎನ್ನುವ ಯೋಧರೊಬ್ಬರು ತಮ್ಮ ಕಾರನ್ನು ಚಾರ್ಜಿಂಗ್ ಸ್ಟೇಷನ್‌ ತನಕ ತಳ್ಳಿದ್ದಲ್ಲದೆ, ಸುರಕ್ಷಿತವಾಗಿ ಪ್ರಯಾಣವನ್ನು ಮುಂದುವರಿಸಬಹುದೆಂದು ಖಚಿತವಾಗುವವರೆಗೂ ಅಲ್ಲಿಯೇ ಇದ್ದರು ಎಂದು ಕಂಟೆಂಟ್ ಕ್ರಿಯೇಟರ್ ದೀಪಿಕಾ ಶರ್ಮಾ ವಿವರಿಸಿದ್ದಾರೆ. ಸದ್ಯ ಭಾರತೀಯ ಸೈನಿಕರ ಈ ಅಂತಃಕರಣ ನೆಟ್ಟಿಗರ ಮನ ಗೆದ್ದಿದೆ.

ಆಟಿಕೆಯಲ್ಲಿ ಮೂಡಿಬಂತು ಪುರಿ ಜಗನ್ನಾಥ ಯಾತ್ರೆ: ನೆಟ್ಟಿಗರ ಮನ ಗೆದ್ದ ಪುಟಾಣಿಗಳ ಈ ಸಂಭ್ರಮ ನೀವೂ ಕಣ್ತುಂಬಿಕೊಳ್ಳಿ

ಪುಟ್ಟ ಮಕ್ಕಳ ರಥಯಾತ್ರೆಯ ವೈಭವ: ಮುದ್ದಾದ ವಿಡಿಯೊ ಎಂದ ನೆಟ್ಟಿಗರು

Viral Video: ಒಡಿಶಾಸದ ಪುರಿ ಜಗನ್ನಾಥ ರಥಯಾತ್ರೆಯು ದೇಶದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದು. ಈಗಾಗಲೇ ರಥ ಯಾತ್ರೆ ಆರಂಭವಾಗಿದೆ. ಈ ವೈಭವದ ನಡುವೆ ಪುಟ್ಟ ಮಕ್ಕಳ ಆಟಿಕೆಯ ರಥ ಯಾತ್ರೆಯ ವಿಡಿಯೊವೊಂದು ಎಲ್ಲರ ಮನ ಗೆದ್ದಿದೆ. ಚಿಕ್ಕ ಮಕ್ಕಳ ಗುಂಪೊಂದು ತಮ್ಮ ಆಟದ ವಸ್ತುಗಳನ್ನೇ ಬಳಸಿ ಈ ಹಬ್ಬದ ಮಾದರಿಯನ್ನು ಮರುಸೃಷ್ಟಿಸಿದ್ದಾರೆ.

ಲಿಫ್ಟ್‌ ಬಳಸುವಾಗ ಎಚ್ಚರ; ಸಾಕು ನಾಯಿ ದಾಳಿಯಿಂದ ಮೂವರಿಗೆ ಗಾಯ: ಆಕ್ರಮಣಕಾರಿ ಶ್ವಾನ ನಿಯಂತ್ರಿಸಲಾಗದೆ ಅಸಹಾಯಕಳಾಗಿ ನಿಂತ ಮಾಲಕಿ

ಲಿಫ್ಟ್ ಒಳಗೆ ದಾಳಿ ನಡೆಸಿದ ಸಾಕು ನಾಯಿ; ವಿಡಿಯೊ ವೈರಲ್‌

Pet dog attack: ಸಾಕು ನಾಯಿಯೊಂದು ಲಿಫ್ಟ್ ಒಳಗೆ ಆಕ್ರಮಣಕಾರಿಯಾಗಿ ವರ್ತಿಸಿ ಮೂವರು ಯುವತಿಯರ ಮೇಲೆ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈಯ ಬಹುಮಹಡಿ ವಸತಿ ಕಟ್ಟಡದಲ್ಲಿ ನಡೆದಿದೆ. ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ, ನಾಯಿ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತಿಸಿ ಯುವತಿಯರ ಮೇಲೆ ದಾಳಿ ಮಾಡಿತು.

ವಿದ್ಯುತ್‌ ಕಂಬಗಳ ನಡುವೆ ತಲೆ ಸಿಲುಕಿ ಹಸು ನರಳಾಟ; ರಕ್ಷಿಸಿ ಮಾನವೀಯತೆ ಮೆರೆದ ಶಾಸಕ ರವಿ ಸುಬ್ರಮಣ್ಯ

ವಿದ್ಯುತ್‌ ಕಂಬಗಳ ನಡುವೆ ಸಿಲುಕಿದ್ದ ಹಸುವನ್ನು ರಕ್ಷಿಸಿದ ಶಾಸಕ

ಬಸವನಗುಡಿ ವಿಧಾನಸಭಾ ಕ್ಷೇತ್ರದ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಹಿಂಭಾಗದ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳ ನಡುವೆ‌ ತಲೆ ಸಿಲುಕಿ ಹಸು ಒದ್ದಾಡುತ್ತಿದ್ದದ್ದನ್ನು ಕಂಡ ಶಾಸಕ ರವಿ ಸುಬ್ರಮಣ್ಯ ಅವರು ಸಾರ್ವಜನಿಕರ ಸಹಾಯದೊಂದಿಗೆ ತಕ್ಷಣ ಮೂಕಪ್ರಾಣಿಯನ್ನು ರಕ್ಷಿಸಿದ್ದಾರೆ.

ಶೌಚಾಲಯದ ನೀರು ಬಳಸಿ ನಿಂಬೆ ಜ್ಯೂಸ್ ತಯಾರಿಸಿದ ವ್ಯಾಪಾರಿ: ಲಖನೌ ರೈಲು ನಿಲ್ದಾಣದ ದೃಶ್ಯ ಕಂಡು ನೆಟ್ಟಿಗರು ಕಿಡಿಕಿಡಿ

ಶೌಚಾಲಯದ ನೀರು ಬಳಸಿ ಜ್ಯೂಸ್ ತಯಾರಿಸಿದ ಬೀದಿ ಬದಿ ವ್ಯಾಪಾರಿ

Viral Video: ಇತ್ತೀಚೆಗೆ ಆಹಾರದಲ್ಲಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವ ಅನೇಕ ಪ್ರಕರಣ ವರದಿಯಾಗಿವೆ. ಅದಕ್ಕೆ ಸೇರ್ಪಡೆ ಎಂಬಂತೆ ಉತ್ತರ ಪ್ರದೇಶದ ಲಖನೌ ರೈಲು ನಿಲ್ದಾಣದಲ್ಲಿ ವ್ಯಾಪಾರಿಯೊಬ್ಬ ಶೌಚಾಲಯದಿಂದ ನೀರು ತಂದು ಲಿಂಬೆ ಹಣ್ಣಿನ ಶರಬತ್ತು ಮಾಡಿದ್ದಾನೆ. ಈ ಕ್ಲಿಪ್ ಆಹಾರ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳ ಹುಟ್ಟು ಹಾಕಿದೆ.

ನೋಡ ನೋಡುತ್ತಿದ್ದಂತೆ ನದಿ ತಟದಲ್ಲಿದ್ದ 12 ವರ್ಷದ ಬಾಲಕನನ್ನೇ ಎಳೆದೊಯ್ದ ಮೊಸಳೆ; ಬೆಚ್ಚಿಬಿದ್ದ ಗ್ರಾಮಸ್ಥರು

ಬಹ್ರೈಚ್‌ನಲ್ಲಿ ಮೊಸಳೆ ದಾಳಿಗೆ 12 ವರ್ಷದ ಬಾಲಕ ಬಲಿ

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಘಾಘ್ರಾ ನದಿಯಲ್ಲಿ 12 ವರ್ಷದ ಬಾಲಕನ ಮೇಲೆ ದೈತ್ಯ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ರಕ್ಷಿಸಲು ಮಾವ ಪ್ರಾಣಪಣವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

"ಕೆಲಸ ಮಾಡಿದ್ದಕ್ಕೆ ಸರಿಯಾದ ಶಿಕ್ಷೆ ಸಿಕ್ಕಿದೆ": ಮ್ಯಾನೇಜರ್‌ ರಜೆಯಲ್ಲಿದ್ದಾಗ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ಕೆಟ್ಟ ಹೆಸರು ಪಡೆದ ಉದ್ಯೋಗಿ!

ಮ್ಯಾನೇಜರ್ ರಜೆ ಇದ್ದಾಗ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಉದ್ಯೋಗಿ

Viral News: ಭಾರತೀಯ ಉದ್ಯೋಗಿಯೊಬ್ಬರು ತನ್ನ ಮಾನ್ಯೇಜರ್ ರಜೆಯಲ್ಲಿದಾಗ ಕಂಪನಿಯ ಹಿರಿಯ ಅಧಿಕಾರಿಗೆ ಸಹಾಯ ಮಾಡಿ ತನಗೆ ಶಿಕ್ಷೆಯಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ಇದು ಎಲ್ಲ ಉದ್ಯೋಗದಲ್ಲಿ ನಡೆಯುವ ಮೊದಲನೇ ಸಮಸ್ಯೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಚಾಲಕನ ಜೊತೆ ರಾಜನಂತೆ ಕುಳಿತ ಬೀದಿನಾಯಿ; ವಿಡಿಯೊ ನೋಡಿ

ಸೈಕಲ್ ರಿಕ್ಷಾ ಚಾಲಕ ಹಾಗೂ ಬೀದಿನಾಯಿಯ ಭಾಂದವ್ಯಕ್ಕೆ ನೆಟ್ಟಿಗರು ಫಿದಾ!

Viral Video: ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಯೂ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ಇವರಿಬ್ಬರ ಪ್ರೆಂಡ್ ಶೀಪ್ ಗೆ ಲೈಕ್ ಕಾಮೆಂಟ್ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

Loading...