ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

18 ವರ್ಷಗಳ ಸೇವೆಯ ನಂತರ ಬಸ್‌ಗೆ ಮುತ್ತಿಕ್ಕಿ ವಿದಾಯ ಹೇಳಿದ KSRTC ಚಾಲಕ; ಹೃದಯಸ್ಪರ್ಶಿ ವಿಡಿಯೊ!

ಬಸ್ ಗೆ ಮುತ್ತಿಕ್ಕಿ ಭಾವನಾತ್ಮಕ ವಿದಾಯ ಹೇಳಿದ KSRTC ಚಾಲಕ!

Viral Video:ಸರಕಾರಿ ಸಾರಿಗೆ ಸಂಸ್ಥೆಯ ಚಾಲಕ 18 ವರ್ಷದ ಸೇವೆಯ ನಂತರ ಬಸ್ ಗೆ ಮುತ್ತಿ ಟ್ಟು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡುವ ವಿಡಿಯೊ ವೈರಲ್ ಆಗಿದೆ. ಇಡುಕ್ಕಿಯ ಕಟ್ಟಪ್ಪನ ಮೂಲದ ಪೌಲ್ ಕುರಿಯನ್ ಎಂಬವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೊಂದಿಗೆ 18 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ, ಅವರು ಇಡುಕ್ಕಿ ಮತ್ತು ಕುಮಿಲಿಯನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ತಮ್ಮ ಕೊನೆಯ ಕೆಲಸದ ದಿನದಂದು ಬಸ್‌ನ ಮುಂದೆ ನಿಂತಿರುವ ಭಾವನಾತ್ಮಕ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಶ್ವಾನ ಪ್ರಿಯರು ಓದಲೇ ಬೇಕಾದ ಸ್ಟೋರಿ; ನಾಯಿಗಳಿಗಾಗಿಯೇ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ರಸ್ತೆಬದಿ ವ್ಯಾಪಾರಿ!

ನಾಯಿಗಳ ಆರೈಕೆಗಾಗಿ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ವ್ಯಾಪಾರಿ!

Viral News: ಸಾಮಾನ್ಯವಾಗಿ ಐಸ್ ಕ್ಯಾಂಡಿ, ಪೆಪ್ಸಿ ಇತ್ಯಾದಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಯನ್ನು ನೀವು ನೋಡಿರಬಹುದು. ಇದೀಗ ವ್ಯಾಪಾರಿಯೊಬ್ಬರು ಸಾಕು ನಾಯಿಗಳಿಗಾಗಿಯೇ ಶುಗರ್ ಫ್ರೀ ಕುಲ್ಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶ್ವಾನ ಪ್ರಿಯರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ನೀಡುತ್ತಿದ್ದು ಕ್ಯೂಟ್ ಅಂಕಲ್ ಎಂದು ಕರೆಯುತ್ತಿದ್ದಾರೆ.

ಬರಿಗೈಯಲ್ಲೇ ಒಬ್ಬಂಟಿಯಾಗಿ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ:ನಿಸ್ವಾರ್ಥ ಸೇವೆಗೆ ಶ್ಲಾಘಿಸಿ ಕೆಲಸದ ಆಫರ್ ನೀಡಿದ ಓಷನ್ ಕ್ಲೀನ್‌ಅಪ್ CEO

ನದಿ ನೀರು ಸ್ವಚ್ಚಗೊಳಿಸಿದ ಯುವಕನಿಗೆ ಜಾಬ್ ಆಫರ್ ನೀಡಿದ ವಿದೇಶಿ ಸಂಸ್ಥಾಪಕ

Viral News: ಮಧ್ಯಪ್ರದೇಶದ ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಬಿಟ್ಟು ತಬಾಹಿ ಎನ್ನುವ ಯುವಕ ಒಬ್ಬಂಟಿಯಾಗಿ ತೆರವು ಗೊಳಿಸಿದ್ದ.ಇದೀಗ ಯುವಕನ ಈ ನಿಸ್ವಾರ್ಥ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಪರಿಸರ ಕಾಳಜಿಗೆ ಶ್ಲಾಘನೆ ವ್ಯಕ್ತ ಪಡಿಸಿದ ನೆದರ್ಲ್ಯಾಂಡ್ಸ್ ಮೂಲದ 'ದಿ ಓಷನ್ ಕ್ಲೀನ್‌ಅಪ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುವಂತೆ ಈ ಯುವಕನಿಗೆ ಆಫರ್ ನೀಡಿದ್ದಾರೆ.

ಮೆಟ್ರೋದಲ್ಲಿ ಎಸ್‌ಆರ್‌ಸಿಸಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ; ಜೆನ್‌ ಝೀ ಮಕ್ಕಳೊಂದಿಗೆ ಮುಕ್ತ ಮಾತು, ಹರಟೆ: ವಿಡಿಯೊ ಇಲ್ಲಿದೆ

ಮೆಟ್ರೋ ಏರಿ ಎಸ್‌ಆರ್‌ಸಿಸಿಗೆ ಮೋದಿ ಪಯಣ

SRCC's 100 Year Celebrations: ಎಸ್‌ಆರ್‌ಸಿಸಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೆಟ್ರೋ ಕಾರ್ಡ್ ಹಿಡಿದು ವಿದ್ಯಾರ್ಥಿಗಳು ಹಾಗೂ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಮೋದಿ, 13 ವರ್ಷಗಳ ಬಳಿಕ ಎಸ್‌ಆರ್‌ಸಿಸಿಗೆ ಭೇಟಿ ನೀಡಿದರು.

ರಸ್ತೆ ಮಧ್ಯೆ ನಮಾಜ್ ಮಾಡಿದ ಎಸ್‌ಪಿ ನಾಯಕ ಹಾಜಿ ಮೊಹಮ್ಮದ್ ಉಸ್ಮಾನ್ ವಿರುದ್ಧ ಎಫ್ಐಆರ್

ರಸ್ತೆಯಲ್ಲಿ ನಮಾಜ್ ಮಾಡಿದ ಎಸ್‌ಪಿ ನಾಯಕ: ಎಫ್ಐಆರ್ ದಾಖಲು

SP leader booked for offering namaz: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಸರ್ಕಾರಿ ಸರ್ಕ್ಯೂಟ್ ಹೌಸ್ ಆವರಣದ ರಸ್ತೆಯಲ್ಲಿ ನಮಾಜ್ (ಪ್ರಾರ್ಥನೆ) ಸಲ್ಲಿಸಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಜಿ ಮೊಹಮ್ಮದ್ ಉಸ್ಮಾನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 16 ವರ್ಷದ ಕಾಮುಕನನ್ನು ಓಡಿಸಿದ ಬೀದಿನಾಯಿಗಳು; ವೈರಲ್‌ ವಿಡಿಯೊ ಇಲ್ಲಿದೆ

ಕಿರುಕುಳ ನೀಡುತ್ತಿದ್ದ ಬಾಲಕನಿಂದ ಸಂತ್ರಸ್ತೆಯನ್ನು ಕಾಪಾಡಿದ ನಾಯಿಗಳು

Stray Dogs Save Victim: ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಅಪ್ರಾಪ್ತ ವಯಸ್ಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬೀದಿನಾಯಿಗಳು ಆಕೆಯನ್ನು ಕಾಪಾಡಿದ್ದು, ಆರೋಪಿಯನ್ನು ಓಡಿಸಿವೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ವಾನಗಳು ನಿರಂತರ ಬೊಗಳುವ, ನಡೆಸುವ ಮೂಲಕ ಕಾಮುಕನನ್ನು ಅಲ್ಲಿಂದ ಓಡಿಹೋಗುವಂತೆ ಮಾಡಿವೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಕೋಮು ಸೌಹಾರ್ದತೆ ಸಾರುವ ದೃಶ್ಯ: ಹಿಂದೂ ಕುಟುಂಬಕ್ಕಾಗಿ ಗಣಪತಿ ವಿಗ್ರಹ ತಯಾರಿಸಿದ ಪಾಕಿಸ್ತಾನದ ಮುಸ್ಲಿಂ ಕಲಾವಿದ!

ಮರಾಠಿ ಕುಟುಂಬಕ್ಕಾಗಿ ಗಣಪತಿ ವಿಗ್ರಹ ರಚಿಸಿದ ಮುಸ್ಲಿಂ ಕಲಾವಿದ

Viral Video: ಕರಾಚಿಯಲ್ಲಿರುವ ಮರಾಠಿ ಕುಟುಂಬವು ಗಣೇಶ ಚತುರ್ಥಿಯ ಹಬ್ಬಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಇಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ವಿಗ್ರಹಕ್ಕೆ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಬಣ್ಣ ಬಳಿಯುತ್ತಿದ್ದು ಕೋಮು ಸೌಹಾರ್ದತೆಯ ಹೃದಯಸ್ಪರ್ಶಿ ಪ್ರದರ್ಶನ ಇದಾಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಸದ್ದು ಮಾಡುತ್ತಿರುವ ವಿಚಿತ್ರ ಉದ್ಯಮ: ಕೇವಲ ಬೆನ್ನು ಕೆರೆದು ಲಕ್ಷ -ಲಕ್ಷ ಗಳಿಸುತ್ತಿರುವ ಯುವಕ!

ಬೆನ್ನು ಕೆರೆಯುವ ಕೆಲಸ ಆರಂಭಿಸಿ ಗಂಟೆಗೆ 4,200 ರೂಪಾಯಿ ಗಳಿಸುವ ಯುವಕ

Viral News: ಇಲ್ಲೊಬ್ಬ ವ್ಯಕ್ತಿ ಕೇವಲ ಬೆನ್ನು ಕೆರೆಯುವ ಕೆಲಸವನ್ನು ಉದ್ಯಮವನ್ನಾಗಿ ಮಾಡಿ ಗಂಟೆಗೆ 4,200 ರೂಪಾಯಿ ಗಳಿಸುತ್ತಾನೆ. 'ಸುಮಾ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಜ್ಯಾಂಗ್ ಎಂಬ ವ್ಯಕ್ತಿ ಈ ಉದ್ಯಮ ಆರಂಭಿಸಿ ಸಕ್ಸಸ್ ಕಂಡಿದ್ದಾನೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀಗೂ ಹಣ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿದೇಶಕ್ಕೆ ತೆರಳುವ ಮುನ್ನ ಸ್ಕಾರ್ಪಿಯೋ ಗೆ ಹೈ ಸೆಕ್ಯುರಿಟಿ: ಟೆರೇಸ್ ಮೇಲೆಯೇ ಕಾರ್ ಪಾರ್ಕ್ ಮಾಡಿದ ಮಾಲೀಕ!

ಕಳ್ಳರ ಭಯಕ್ಕೆ ಕ್ರೇನ್ ಮೂಲಕ ಕಾರನ್ನು ಮನೆಯ ಟೆರೇಸ್ ಮೇಲೆ ಇರಿಸಿದ ಮಾಲೀಕ

Viral Video: ಇಲ್ಲೊಬ್ಬ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಎಸ್ ಯುವಿ ಕಾರನ್ನು ಕಳ್ಳರಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಕಾರನ್ನು ಹೊರಗೆ ನಿಲ್ಲಿಸುವ ಬದಲು, ಮಾಲೀಕರು ಸ್ಕಾರ್ಪಿಯೋ ವನ್ನು ಕ್ರೇನ್ ಮೂಲಕ ಎತ್ತಿ ತಮ್ಮ ಮನೆಯ ಛಾವಣಿಯ ಮೇಲೆ ಇರಿಸಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಟೆರೇಸ್ ಮೇಲೆ ಕಾರನ್ನು ಪಾರ್ಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

‘ನಾವು ಮುಸ್ಲಿಮರೆಂಬ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ’: ದೆಹಲಿ ಪೊಲೀಸರ ವಿರುದ್ಧ ಪತ್ರರ್ಕತೆಯರಿಂದ ಗಂಭೀರ ಆರೋಪ

ದೆಹಲಿ ಪೊಲೀಸರ ವಿರುದ್ಧ ಪತ್ರರ್ಕತೆಯರ ಗಂಭೀರ ಆರೋಪ! ಏನಿದು ಘಟನೆ?

ದೆಹಲಿಯಲ್ಲಿ ವರದಿಗಾರಿಕೆ ತೆರಳಿದ್ದ ಇಬ್ಬರು ಮಹಿಳಾ ಪತ್ರರ್ಕತೆಯರ ಮೇಲೆ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿ, ಧಾರ್ಮಿಕವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. "ನಾವು ಮುಸ್ಲಿಮರೆಂಬ ಕಾರಣಕ್ಕಾಗಿ ನಮ್ಮನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆʼ ಎಂದು ಪತ್ರರ್ಕತೆಯರು ದೂರಿದ್ದಾರೆ. ಆದರೆ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ದೆಹಲಿ ಪೊಲೀಸರು, ಘಟನೆಯಲ್ಲಿ ಯಾವುದೇ ಅಮಾನವೀಯ ನಡವಳಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಭಾರತದಲ್ಲೇ ನೆಮ್ಮದಿ": ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಕೆಲಸ ತೊರೆದು ತಾಯ್ನಾಡಿಗೆ ಮರಳಿದ ಟೆಕ್ಕಿ ಹೇಳಿದ್ದೇನು?

ಮೈಕ್ರೋಸಾಫ್ಟ್ ಕೆಲಸ ತೊರೆದು ಭಾರತಕ್ಕೆ ಮರಳಿದ ಟೆಕ್ಕಿ: ಕಾರಣವೇನು?

Viral News: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರು ಲಕ್ಷ ಲಕ್ಷ ಸಂಬಳ ತೊರೆದು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರವು ಸಂಬಳಕ್ಕಿಂತ ಹೆಚ್ಚಿನದನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಈಗ ಕಡಿಮೆ ಸಂಪಾದಿಸಬಹುದಾದರೂ, ಹೆಚ್ಚಿನ ಸ್ವಾತಂತ್ರ್ಯ, ಕುಟುಂಬದೊಂದಿಗೆ ಸಮಯ ಮತ್ತು ಹಲವರ ಜೊತೆ ವೈಯಕ್ತಿಕ ಸಂಪರ್ಕಗಳನ್ನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು ಹಂಚಿಕೊಂಡಿದ್ದಾರೆ.

"ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಲಿವೆ": ನೇಪಾಳದ ಪ್ರಕೃತಿ ವಿಕೋಪದ ಭೀಕರತೆ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದ ಪಾದ್ರಿ!

ನೇಪಾಳ ಪ್ರವಾಹದ ಬಗ್ಗೆ ಮೊದಲೇ ಭವಿಷ್ಯವಾಣಿ ನುಡಿದಿದ್ದ ಪಾದ್ರಿ!

Viral Video: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ. ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳು,ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇಲ್ಲಿನ ಜನ ಜೀವನವೇ ಅಸ್ತವಸ್ತ್ಯವಾಗಿದ್ದು ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ಈ ನಡುವೆ ನೇಪಾಳದ ಭೀಕರ ಜಲಪ್ರಳಯದ ಬಗ್ಗೆ ಪಾದ್ರಿಯೊಬ್ಬರು ಈ ಮೊದಲೇ ಎಚ್ಚರಿಕೆ ನೀಡಿದ್ದ ಭವಿಷ್ಯವಾಣಿಯ ವಿಡಿಯೊವೊಂದು ವೈರಲ್ ಆಗುತ್ತಿದೆ.

ಕೆಸರಿನಲ್ಲಿ ಹೂತುಹೋದ ಲಾರಿ, ಜೆಸಿಬಿ; ಮಣ್ಣಿನೊಳಗೆ ಕೊಳೆತ ಮಾನವ ಮೃತದೇಹಗಳು: ನೇಪಾಳ ಪ್ರವಾಹದ ಭೀಕರತೆ ಬಿಚ್ಚಿಟ್ಟ ಯುಟ್ಯೂಬರ್

ನೇಪಾಳ ದುರಂತದ ನೈಜ ದೃಶ್ಯ ಬಿಚ್ಚಿಟ್ಟ ಯುಟ್ಯೂಬರ್

Nepal Floods Aftermath: ನೇಪಾಳ ಪ್ರವಾಹದ ಭೀಕರತೆಗೆ ಜಗತ್ತೇ ಮರುಗಿದೆ. ಹಿಮನದಿ ಕುಸಿತ ಮತ್ತು ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹವು ಹಲವು ಜನರ ಬದುಕನ್ನೇ ನುಂಗಿ ಹಾಕಿದೆ. ಈ ದುರಂತವನ್ನು ಬಿಚ್ಚಿಡುವ ಅಘಾತಕಾರಿ‌ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

"ಗೃಹಿಣಿಯರ ಶ್ರಮಕ್ಕೆ ಬೆಲೆ ಕಟ್ಟಲಾಗದು": ಮನೆ ಕೆಲಸ ವಹಿಸಿಕೊಂಡ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸರ್ಕಾರಿ ಅಧಿಕಾರಿ

ಮನೆ ಕೆಲಸ ಮಾಡುವ ಗೃಹಿಣಿಗೆ ಮಾಸಿಕ ಸಂಬಳ ನೀಡುವ ಸರ್ಕಾರಿ ಅಧಿಕಾರಿ

Viral News: ಇಲ್ಲೊಬ್ಬ ಸರ್ಕಾರಿ ಉದ್ಯೋಗಿ ತನ್ನ ಮನೆಯನ್ನು ಮುನ್ನಡೆಸುವ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸುದ್ದಿಯೊಂದು ಭಾರಿ ವೈರಲ್ ಆಗಿದೆ. ಇವರು ತನ್ನ ಗೃಹಿಣಿ ಪತ್ನಿಗೆ ಏನಾದರೂ ಅಗತ್ಯವಿದ್ದಾಗ ಮಾತ್ರ ಹಣವನ್ನು ನೀಡುವ ಬದಲು, ಮನೆಯಲ್ಲಿ ಮಾಡುವ ಕೆಲಸಕ್ಕೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುತ್ತಾರೆ‌.

ಕಳೆದುಹೋದ 2 ಲಕ್ಷ ಮೌಲ್ಯದ ಮ್ಯಾಕ್‌ಬುಕ್ ಮರಳಿಸಿದ ರಿಕ್ಷಾ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

ಕಳೆದು ಹೋದ ಮ್ಯಾಕ್ ಬುಕ್ ಮರಳಿಸಿ ಮಾನವೀಯತೆ ಮೆರೆದ ರಿಕ್ಷಾ ಚಾಲಕ!

Viral News: ದೆಹಲಿಯಲ್ಲಿ ನಡೆದ ಘಟನೆಯೊಂದು ಇಂದಿಗೂ ಪ್ರಾಮಾಣಿಕ ವ್ಯಕ್ತಿತ್ವ ಕೆಲವರಲ್ಲಿ ಜೀವಂತವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ‌ಅದರಲ್ಲೂ ಕಳೆದುಹೋದ ದುಬಾರಿ ವಸ್ತುಗಳನ್ನು ಮರಳಿ ಪಡೆಯುವ ಎಲ್ಲಾ ಭರವಸೆಯನ್ನು ಕಳೆದುಕೊಳ್ಳುವ ಈ ಜಗತ್ತಿನಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳೆದ ಹೋದ ಮ್ಯಾಕ್ ಬುಕ್ ಅನ್ನು ರಿಕ್ಷಾ ಚಾಲಕರೊಬ್ಬರು ಮಾಲೀಕರಿಗೆ ತಲುಪಿಸಿದ್ದಾರೆ. ಚಾಲಕನ ಮಾನವೀಯ ಗುಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌..

ಬರಿಗೈಯಲ್ಲೇ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ: ಆಡಳಿತ ವಿಫಲತೆಯ ವಿರುದ್ಧ ತೀವ್ರ ಟೀಕೆ!

ಅಧಿಕಾರಿಗಳಿಗೆ ಕಾಯದೆ ಕಲುಷಿತ ನದಿಯ ನೈರ್ಮಲ್ಯಕ್ಕಿಳಿದ ಯುವಕ!

Viral Video: ಮಧ್ಯಪ್ರದೇಶದಲ್ಲಿ​ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು 20 ವರ್ಷದ ಯುವಕನೊಬ್ಬ ಸ್ವತಃ ತಾನೇ ಮುಂದೆ ನಿಂತು ಮಾಡಿದ್ದಾನೆ. ಕಲುಷಿತಗೊಂಡ ನದಿಯ ನೀರನ್ನು ಸ್ವಚ್ಛ ಗೊಳಿಸಲು ಪುರಸಭೆಯ ಸ್ವಚ್ಛತಾ ಅಭಿಯಾನ ಕ್ಕಾಗಿ ಕಾಯದೆ ತಾನೇ ವೈಯಕ್ತಿಕವಾಗಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾನೆ.

IT ಉದ್ಯೋಗಿಗಳನ್ನೇ ಮೀರಿಸುವಂತೆ ಈತನ ಗಳಿಕೆ; ಬೆಂಗಳೂರಿನ ಉಬರ್‌ ಚಾಲಕನ ಆದಾಯ ಕೇಳಿದ್ರೆ ಶಾಕ್‌ ಆಗ್ತೀರಾ!

ಬೆಂಗಳೂರಿನಲ್ಲಿ ಉಬರ್ ಚಾಲಕನ ಗಳಿಕೆ ಕಂಡು ಐಟಿ ಉದ್ಯೋಗಿಗಳು ಶಾಕ್!

Viral News: ಕೇವಲ ಟ್ಯಾಕ್ಸಿ ಚಾಲನೆ ಮಾಡುವ ಮೂಲಕ ವಾರಕ್ಕೆ ಬರೋಬ್ಬರಿ 46,000 ರೂಪಾಯಿ ಗಳಿಸುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಉಬರ್ ಚಾಲಕ ಹ್ಯಾಮ್ಟರ್ ಡೆಬ್ಬರ್ಮ ಎಂಬುವವರು ತಮ್ಮ ದಿನನಿತ್ಯದ ಕೆಲಸದ ಶೈಲಿ ಮತ್ತು ಗಳಿಕೆಯ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಹೆಚ್ಚು ಹಣ ಸಂಪಾದನೆ ಮಾಡಲು ನಾವು ತೋರುವ ಆಸಕ್ತಿ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಈ ಹುದ್ದೆ ಯಾಕೆ? ಪಂಚಾಯತಿ ಸದಸ್ಯನಿಗೆ ಗ್ರಾಮಸಭೆಯಲ್ಲೇ ಕಪಾಳಮೋಕ್ಷ  ಮಾಡಿದ ವೃದ್ಧ!

ಪಂಚಾಯತ್ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ 70 ವರ್ಷದ ವೃದ್ಧ

Viral Video: ಹಿರಿಯ ನಾಗರಿಕರೊಬ್ಬರು ಯಾವುದೇ ಅಭಿವೃದ್ಧಿ ಕಾರ್ಯಗಳು ತನ್ನ ಊರಿನಲ್ಲಿ ನಡೆಯುತ್ತಿಲ್ಲ ಅನ್ನುವ ಕಾರಣಕ್ಕೆ ಪಂಚಾಯತಿ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಲಾತೂರು ತಾಲೂಕಿನ ಏಕುರ್ಗಾ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ 70 ವರ್ಷದ ವೃದ್ಧರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಪಂಚಾಯತಿ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ನೇಪಾಳ ಪ್ರವಾಹದಲ್ಲಿ ಧ್ವಂಸಗೊಂಡ ಮನೆಯ ಬಳಿ ಕುಳಿತು ಮಾಲಕರಿಗಾಗಿ ಕಾಯುತ್ತಿರುವ ಶ್ವಾನಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್‌

ನೇಪಾಳ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾದ ಮಾಲಕನಿಗಾಗಿ ಕಾಯುತ್ತಿರುವ ಶ್ವಾನಗಳು

Nepal Flood: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಅಪಾರ ಜೀವಹಾನಿಗೆ ಕಾರಣವಾಗಿದೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು 1,127 ಮಂದಿ ಸಾವನ್ನಪ್ಪಿದ್ದು, 4,858 ಮಂದಿ ನಾಪತ್ತೆಯಾಗಿದ್ದಾರೆ. ಜತೆಗೆ ಲೆಕ್ಕವಿಲ್ಲದಷ್ಟು ಮನೆ, ಕಟ್ಟಗಳನ್ನು ಧ್ವಂಸಗೊಂಡಿವೆ. ಈ ಎಲ್ಲ ಭೀಕರತೆಯ ನಡುವೆ, ತಮ್ಮ ಮಾಲಕರಿಗಾಗಿ ಧ್ವಂಸಗೊಂಡ ಮನೆಗಳ ಬಳಿ ಶ್ವಾನಗಳು ಕಾಉಇತ್ತಿರುವ ದೃಶ್ಯ ವೈರಲ್‌ ಆಗಿದೆ.

ವಯನಾಡು ಹೆದ್ದಾರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು: ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ಏಕಾಏಕಿ ಕಾರಿನ ಮೇಲೆ ದಾಳಿ ಮಾಡಲು ಮುಂದಾದ ಆನೆ: ಭಯಾನಕ ವಿಡಿಯೊ ನೋಡಿ

Viral News: ವಯನಾಡಿನ ಸುಲ್ತಾನ್ ಬತ್ತೇರಿ- ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಭೀಕರ ಅನುಭವವೊಂದು ಎದುರಾಗಿದೆ. ರಸ್ತೆ ದಾಟಿ ಕಾಡಿನತ್ತ ಸಾಗುತ್ತಿದ್ದ ಆನೆ ಏಕಾಏಕಿ ಕಾರಿನ ಬಳಿ ರಭಸವಾಗಿ ನುಗ್ಗಲು ಯತ್ನಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆ: ಆನ್‌ಲೈನ್ ಪೇಮೆಂಟ್ ಮಾಡಿಸಿ ಬೆಂಗಳೂರು ಯುವಕನಿಗೆ ಕೈಕೊಟ್ಟ ʼಬೆಳದಿಂಗಳ ಬಾಲೆʼ

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆಗೆ ಒಳಗಾದ ಬೆಂಗಳೂರು ಯುವಕ

Viral News: ಬೆಂಗಳೂರಿನ ಯುವಕನೊಬ್ಬ ಡೇಟಿಂಗ್ ಆ್ಯಪ್ ಬಳಸಲು ಹೋಗಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಆತ ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ಮಾಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಜಮೀನು ಮಾರಾಟ ಮಾಡಿದ ಹೆತ್ತವರನ್ನು ರಸ್ತೆಯಲ್ಲೇ ಥಳಿಸಿದ ಮಕ್ಕಳು; ವಿಡಿಯೊ ವೈರಲ್‌

ಜಮೀನು ಮಾರಾಟ ಮಾಡಿದ ಹೆತ್ತವರನ್ನು ರಸ್ತೆಯಲ್ಲೇ ಥಳಿಸಿದ ಮಕ್ಕಳು

Viral Video: ಮಹಾರಾಷ್ಟ್ರದಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮನ್ನು ಕೇಳದೆ ಮಾರಟ ಮಾಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಪುತ್ರರು ವೃದ್ಧ ತಂದೆ-ತಾಯಿಯ ರಸ್ತೆ ಮಧ್ಯೆ ದೊಣ್ಣೆಯಿಂದ ಕ್ರೂರವಾಗಿ ಹಲ್ಲೆ ಮಾಡಿರುವ ದಾರುಣ ಘಟನೆ ಸಂಭವಿಸಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಮಹಾರಾಷ್ಟ್ರದ ಕುಟುಂಬವೊಂದರಲ್ಲಿ 200 ವರ್ಷಗಳ ನಂತರ ಹುಟ್ಟಿದ ಹೆಣ್ಣು ಮಗು: ರಾಜವೈಭವ, ಮೆರವಣಿಗೆ ಮೂಲಕ ಲಕ್ಷ್ಮೀಗೆ ಅದ್ಧೂರಿ ಸ್ವಾಗತ

200 ವರ್ಷಗಳ ನಂತರ ಹುಟ್ಟಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಕುಟುಂಬ

Viral Video: ಮಹಾರಾಷ್ಟ್ರದ ಪುಣೆ ಜಿಲ್ಲೆಯ ವೆಂಶಟ್ ಗ್ರಾಮದ ಕುಟುಂಬವೊಂದರಲ್ಲಿ ಸುಮಾರು 200 ವರ್ಷಗಳ ನಂತರ ಹೆಣ್ಣುಮಗು ಜನಿಸಿದ್ದು, ಸಂಭ್ರಮ ಮನೆ ಮಾಡಿದೆ. ಈ ಕುಟುಂಬ ತಾಯಿ ಮತ್ತು ಮಗುವನ್ನು ರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮರವಣಿಗೆ ಮಾಡಿ ಅಮೂಲ್ಯ ಕ್ಷಣವನ್ನು ಸ್ಮರಣೀಯವಾಗಿಸಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಂಗಾ ನದಿಯ ಅಬ್ಬರಕ್ಕೆ ಕೊಚ್ಚಿಹೋದ 100 ವರ್ಷ ಹಳೆಯ ದುರ್ಗಾ ದೇಗುಲ; ವಿಡಿಯೊ ವೈರಲ್

ನದಿಯ ರೌದ್ರಾವತಾರಕ್ಕೆ ನೀರು ಪಾಲಾದ 100 ವರ್ಷ ಹಳೆಯ ದೇಗುಲ

Bihar Chaiti Durga Temple: ಬಿಹಾರದ ಭಾಗಲ್ಪುರ ಜಿಲ್ಲೆಯ ರಘೋಪುರದಲ್ಲಿ ತೀವ್ರ ನದಿ ತೀರದ ಸವೆತದಿಂದ ಸುಮಾರು 100 ವರ್ಷ ಹಳೆಯ ಚೈತಿ ದುರ್ಗಾ ದೇವಸ್ಥಾನ ಕೊಚ್ಚಿಹೋಗಿದೆ. ದೇವಸ್ಥಾನ ಕುಸಿದು ಗಾಂಗಾ ನದಿಯಲ್ಲಿ ಮುಳುಗುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...