ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

'ʼಇದು ಹಿಂದೂ ಸಂಸ್ಕೃತಿಯೇ?": ಪವಿತ್ರ ಸರಸ್ವತಿ ನದಿಗೆ ಕಸ ಎಸೆದ ಪ್ರವಾಸಿಗರು

ಪವಿತ್ರ ಸರಸ್ವತಿ ನದಿ ಮಾಲಿನ್ಯ ಮಾಡಿದ ಪ್ರವಾಸಿಗರು

Viral Video: ನದಿ, ಕೆರೆ ಹಾಗೂ ಸಮುದ್ರದಂತಹ ಜಲಮೂಲಗಳಿಗೆ ಹಾನಿಯಾಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅದಕ್ಕೆ ಸೇರ್ಪಡೆ ಎಂಬಂತೆ ಉತ್ತರಾಖಂಡದ ಬದರಿನಾಥದ ಸಮೀಪವಿರುವ ಪವಿತ್ರ ಸರಸ್ವತಿ ನದಿಗೆ ಪ್ರವಾಸಿಗರು ತ್ಯಾಜ್ಯ ಎಸೆದಿದ್ದಾರೆ. ಅನೇಕರು ಈ ವಿಡಿಯೊ ನೋಡಿ ಇದೇನಾ ಹಿಂದೂ ಸಂಸ್ಕೃತಿ? ಎಂದು ಕಿಡಿಕಾರಿದ್ದಾರೆ.

ಕುಡಿತದ ಮತ್ತಿನಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ವಿಡಿಯೊ ವೈರಲ್

ಕುಡಿದು ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ನೆಟ್ಟಿಗರು ಕಿಡಿ

Viral News: ವೈದ್ಯಕೀಯ ತಪಾಸಣೆ ವೇಳೆ ಪೊಲೀಸರಿಗೆ ಕುಡುಕ ಯುವಕನೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಒಡಿಶಾದ ಖುರ್ದಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ನೀಡುತ್ತಿದ್ದರು. ಅವರ ವರ್ತನೆಯಿಂದ ಕಿರಿಕಿರಿಗೆ ಒಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಈ ಪೈಕಿ ಓರ್ವ ಯುವಕ ಕುಡಿತದ ಮತ್ತಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿದ್ದಾನೆ.

ಟ್ರಾಫಿಕ್‌ನಲ್ಲಿ ಮುರಿದು ಬಿದ್ದ ಪುಟ್ಟ ಬಾಲಕನ ‘ಲವ್ ಸ್ಟೋರಿ’: ಕ್ಯೂಟ್ ಎಕ್ಸ್‌ಪ್ರೆಶನ್‌ ಇಲ್ಲಿದೆ ನೋಡಿ

ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕ-ಬಾಲಕಿಯ ಕ್ಯೂಟ್ ಲವ್: ವಿಡಿಯೊ ನೋಡಿ

Viral Video: ವಾಹನ ದಟ್ಟಣೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಆಗಿರುವ ವಿಡಿಯೊವೊಂದು ಗಮನ ಸೆಳೆಯುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ಕ್ಯೂಟ್ ಎಕ್ಸ್‌ಪ್ರೆಶನ್‌ಗಳ ಮೂಲಕ ಗಮನ ಸೆಳೆದಿದ್ದು ಪುಟ್ಟ ಬಾಲಕನ ಪ್ರೀತಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಜತೆಗೆ ಇದು ಎಐ ರಚಿತ ವಿಡಿಯೊ ಎನ್ನುವ ವಾದವೂ ಕೇಳಿ ಬಂದಿದೆ.

ವಸತಿ ಹಂಚಿಕೆ ಮಾಡುವುದಾಗಿ ಹಣ ಪಡೆದು ವಂಚಿಸಿದ ಟಿಎಂಸಿ ಮುಖಂಡನ ವಿರುದ್ಧ ಆಕ್ರೋಶ; ಮಂಚದ ಕೆಳಗೆ ಅಡಗಿ ಕುಳಿತರೂ ಬಿಡಲಿಲ್ಲ ಜನ

ಮಂಚದ ಕೆಳಗೆ ಅಡಗಿ ಕುಳಿತ ಟಿಎಂಸಿ ನಾಯಕ; ಇಲ್ಲಿದೆ ವಿಡಿಯೊ

TMC Leader hiding under a bed: ಜನಾಕ್ರೋಶಕ್ಕೆ ತುತ್ತಾದ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮಂಚದ ಕೆಳಗೆ ಅಡಗಿ ಕುಳಿತಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಸತಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಜನರು ಮುತ್ತಿಗೆ ಹಾಕಿದಾಗ, ಹೆದರಿದ ಮುಖಂಡ ಅಡಗಿ ಕುಳಿತಿದ್ದಾನೆ.

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಗೆ ಪಿಸ್ತೂಲ್ ತೋರಿಸಿ  ಬೆದರಿಕೆ ಹಾಕಿದ ವ್ಯಕ್ತಿ!

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಯನ್ನೇ ಸಾಯಿಸಲು ಮುಂದಾದ ದುಷ್ಕರ್ಮಿ

Viral News: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಡೀ ಜಗತ್ತೆ ತಲೆಕೆಡಿಸಿಕೊಳ್ಳುವಂತಹ ಘಟನೆ ಯೊಂದು ನಡೆದಿದೆ. ಕೇವಲ ಸೆಂಟ್ರಲ್ ಜೈಲು ಹೇಗಿರುತ್ತೆ ಎನ್ನುವ ಕುತೂಹಲದಿಂದ ವ್ಯಕ್ತಿಯೊಬ್ಬ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಜೈಲಿನೊಳಗೆ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದಲೇ ಈ ಅಪರಾಧ ಮಾಡಿದ್ದೇನೆ ಎಂದು ಈ ಕಿಲಾಡಿ ಹೇಳಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ದೆಹಲಿ ಬೆಂಕಿ ದುರಂತ: ಲಕ್ಷಾಂತರ ರುಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಂತ್ರಸ್ತರ ಜೀವ ರಕ್ಷಣೆಗೆ ಮುಂದಾದ ಸ್ಥಳೀಯ ಅಂಗಡಿ ಮಾಲಕ

ದೆಹಲಿ ಬೆಂಕಿ ದುರಂತದ ಹೀರೋ ಇವರು

ದೆಹಲಿಯಲ್ಲಿ ಬುಧವಾರ ನಡೆದ ಬೆಂಕಿ ದುರಂತದ ವೇಳೆ ಜೀವ ರಕ್ಷಣೆಗಾಗಿ ಸ್ಥಳೀಯ ಅಂಗಡಿ ಮಾಲೀಕರೊಬ್ಬರು ತಮಗಾಗ ಬಹುದಾದ ಲಕ್ಷಾಂತರ ರೂಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಹಾಯಕ್ಕೆ ಮುಂದಾದರು. ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಪರಿಹಾರ ಒದಗಿಸಬೇಕು ಎಂದು ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

"ಇಸ್ಲಾಂ ಸ್ನೇಹಿ ಜಿಮ್":  ಕೇರಳದಲ್ಲಿ ಭುಗಿಲೆದ್ದ  ಭಾರಿ ವಿವಾದ

ಪಾಲಕ್ಕಾಡಿನಲ್ಲಿ ‘ಇಸ್ಲಾಮಿಕ್ ಸ್ನೇಹಿ ಜಿಮ್’ ವಿವಾದ

ಕೇರಳದ ಪಾಲಕ್ಕಾಡಿನಲ್ಲಿ 'ಇಸ್ಲಾಮಿಕ್ ಸ್ನೇಹಿ ಜಿಮ್' ಎಂಬ ಹೆಸರಿನ ಫಿಟ್ನೆಸ್ ಕೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ, ಜೋರಾದ ಸಂಗೀತವಿಲ್ಲದ ವ್ಯವಸ್ಥೆ ಇರುವುದಾಗಿ ಮಾಲೀಕ ನವಾಜ್ ತಿಳಿಸಿದ್ದಾರೆ. ಇದು ಮುಸ್ಲಿಮರಿಗಷ್ಟೇ ಅಲ್ಲ, ಎಲ್ಲ ಧರ್ಮದವರಿಗೂ ಮುಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1BHK ಮನೆಗೆ ಬೆಂಗಳೂರಿನಲ್ಲಿ 45,000 ರೂ ಬಾಡಿಗೆ!  ಟೆಕ್ಕಿ ಹಂಚಿಕೊಂಡ ವಿಶೇಷತೆ ಏನು?

ದುಡಿಯುವ ಅರ್ಧದಷ್ಟು ಭಾಗ ಬಾಡಿಗೆ ಕಟ್ಟುತ್ತಿರುವ ಬೆಂಗಳೂರಿನ ಟೆಕ್ಕಿ!

Viral News: ಸಿಲಿಕಾನ್ ಸಿಟಿಯ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಬಗ್ಗೆ ಹೆಚ್ಚಿನ ಜನರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಇಲ್ಲಿ ಬಾಡಿಗೆ ಹಣ ಪಾವತಿಸುವುದೇ ಒಂದು ತಲೆ ನೋವಾಗಿ ಬಿಟ್ಟಿದೆ. ಉದ್ಯೋಗಿಗಳ ನೆಚ್ಚಿನ ತಾಣ ಹಾಗೂ ಕಚೇರಿಗಳಿಗೆ ಸುಲಭ ಮಾರ್ಗವಾದ ಎಚ್‌ಎಸ್‌ಆರ್ ಲೇಔಟ್ ನಲ್ಲೂ ಬಾಡಿಗೆ ದರ ದುಪ್ಪಟ್ಟು ಆಗಿದೆ ಎಂದು ಕೆಲವರು ದೂರಿದ್ದಾರೆ...

ಮೊಬೈಲ್ ನೀಡಿಲ್ಲ ಎಂದು ಬ್ಯಾಟ್‌ನಿಂದ ಹೊಡೆದ ಬಾಲಕ;  ಮುಂದೆ ಆಗಿದ್ದೇನು?

ಮೊಬೈಲ್ ಹಠಕ್ಕೆ ಬಿದ್ದು ತಾಯಿಗೆ ಬ್ಯಾಟ್ ನಿಂದ ಹೊಡೆದ ಬಾಲಕ: ವಿಡಿಯೊ ವೈರಲ್

Viral News: ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರಿಗಂತೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ. ಇಂದು ಮೊಬೈಲ್ ನೀಡಿಲ್ಲ ಅನ್ನೋ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು, ಊಟ- ತಿಂಡಿ ತಿನ್ನದೆ ಇರುವುದು ಹೀಗೆ ಇಂತಹ ಅಭ್ಯಾಸಗಳು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್ ಫೋನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಣ್ಣ ವಯಸ್ಸಿನ ಬಾಲಕನೊಬ್ಬ ತನ್ನ ತಾಯಿಗೆ ಬ್ಯಾಟ್ ನಿಂದ ಹೊಡೆದ ಘಟನೆಯೊಂದು ನಡೆದಿದೆ. ಸದ್ಯ ಈ ಆಘಾತಕಾರಿ ವೀಡಿಯೊ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ.

ನಾರ್ವೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೂ ತೆರೆದಿರುತ್ತೆ ಹೂವಿನ ಅಂಗಡಿ: ಗ್ರಾಹಕರ ಪ್ರಾಮಾಣಿಕತೆ ಮೇಲೆ ನಡೆಯುತ್ತದೆ ವ್ಯಾಪಾರ

ಈ ಅಂಗಡಿಯಲ್ಲಿ ಸಿಬ್ಬಂದಿ ಇಲ್ಲದಿದ್ರೂ ನಡೆಯುತ್ತೆ ಹೂವಿನ ವ್ಯಾಪಾರ!

Viral News: ಇಲ್ಲೊಂದು ಅಂಗಡಿಯಲ್ಲಿ ಯಾವುದೇ ವ್ಯಾಪಾರಿ ಇಲ್ಲ, ಕಾವಲು ಕಾಯಲು ಸೆಕ್ಯೂರಿಟಿ ಗಾರ್ಡ್ ಇಲ್ಲ. ಆದರೆ ಇಲ್ಲಿ ಯಾವುದೇ ರೀತಿಯ ಕಳ್ಳತನ ಆಗಲ್ಲ ಎಂದರೆ ನಿಮಗೂ ಆಶ್ಚರ್ಯ ಎನಿಸಬಹುದು. ಹೌದು, ನಾರ್ವೆಯಲ್ಲಿ ಇರುವ ಸಣ್ಣ ಹೂವಿನ ಅಂಗಡಿಯೊಂದು ರಾತ್ರಿ 10 ಗಂಟೆಯಾದರೂ ಯಾವುದೇ ಅಡೆತಡೆ ಇಲ್ಲದೆ, ಕಳ್ಳತನದ ಹಂಗಿಲ್ಲದೆ ನಡೆಯುತ್ತಿದೆ. ಸದ್ಯ ಈ ವೈರಲ್ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರ ಗಮನ ಸೆಳೆದಿದೆ.

ಜಪಾನ್‌ನಲ್ಲಿ ಭಾರತೀಯ ಪ್ರವಾಸಿಗನಿಗೆ ಸಿಕ್ಕ ಪ್ರೀತಿಯ ಆತಿಥ್ಯ: ನೀರು ಕೇಳಿದಾಗ ಜ್ಯೂಸ್‌ ಕೊಟ್ಟು ಸತ್ಕರಿಸಿದ ವೃದ್ಧ ದಂಪತಿ

ಜಪಾನ್‌ನಲ್ಲಿ ಭಾರತೀಯ ಯುವಕನಿಗೆ ವಿಶೇಷ ಆತಿಥ್ಯ: ನೆಟ್ಟಿಗರ ಮನಗೆದ್ದ ದೃಶ್ಯ

Viral News: ಜಪಾನ್ ಕೂಡ ಆತಿಥ್ಯ ನೀಡುವಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಜಪಾನ್‌ನ ದ್ವೀಪವೊಂದರಲ್ಲಿ ಕಾಲ ಕಳೆಯುತ್ತಿದ್ದ ಭಾರತೀಯ ಪ್ರವಾಸಿಗನಿಗೆ ಅಲ್ಲಿನ ಸ್ಥಳೀಯ ವೃದ್ಧ ದಂಪತಿ ತೋರಿದ ಕಾಳಜಿಯ ದೃಶ್ಯ ಎಲ್ಲರ ಮನ ಗೆದ್ದಿದೆ. ಕುಡಿಯುವ ನೀರಿಗಾಗಿ ಆರಂಭವಾದ ಹುಡುಕಾಟ, ಕೊನೆಗೆ ಭರ್ಜರಿ ಮಧ್ಯಾಹ್ನದ ಊಟದವರೆಗೆ ಈ ಸ್ನೇಹವೇ ಮುಂದುವರಿದಿದೆ.

ನಾಸಿಕ್ ಘಟಿಕೋತ್ಸವ ಮುಗಿದ ಬೆನ್ನಲ್ಲೇ ಗೆಳತಿಗೆ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ ಸೇನಾ ಪೈಲಟ್ ವಿಡಿಯೊ ವೈರಲ್‌

ಗೆಳತಿಗೆ ಲವ್ ಪ್ರಪೋಸ್ ಮಾಡಿದ ಸೇನಾ ಪೈಲಟ್‌ನ ವಿಡಿಯೊ ವೈರಲ್‌

Viral News: ಮಹಾರಾಷ್ಟ್ರದ ನಾಸಿಕ್‌ನ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯಲ್ಲಿ ಹೊಸದಾಗಿ ಅರ್ಹತೆ ಪಡೆದ ಪೈಲಟ್ ಕ್ಯಾಪ್ಟನ್ ಭಾರದ್ವಾಜ್‌ ತಮ್ಮ ವೃತ್ತಿ ಜೀವನದ ದೊಡ್ಡ ಸಾಧನೆಯ ದಿನದಂದೇ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬಹು ಕಾಲದ ಗೆಳತಿಗೆ ಮದುವೆ ಪ್ರಸ್ತಾಪ ಮಾಡುವ ಮೂಲಕ ಅಚ್ಚರಿ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾರಿನೊಳಗೆ ಲಾಕ್‌ ಆಗಿ ನರಳುತ್ತಿದ್ದ ಸಾಕು ನಾಯಿಯನ್ನು ರಕ್ಷಿಸಿದ ಸ್ಥಳೀಯರು

ಕಾರಿನೊಳಗೆ ನರಳುತ್ತಿದ್ದ ಶ್ವಾನ: ಮಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ

Viral News: ಕಾರಿನೊಳಗೆ ನಾಯಿಯೊಂದು ಗಂಟೆಗಟ್ಟಲೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಅಸ್ಸಾಂನ ಗುವಹಾಟಿಯ ದಿಸ್ಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಘಟನೆ ವೈರಲ್‌ ಆಗಿದೆ.

ಇದೆಂಥಾ ಸಂಸ್ಕೃತಿ? ಅಮೆರಿಕದಲ್ಲಿ ಭಾರತದ ರಾಷ್ಟ್ರ ಧ್ವಜ ಹರಿದು ವಿಕೃತಿ ಮೆರೆದ ಯುವಕ

ಭಾರತದ ರಾಷ್ಟ್ರಧ್ವಜ ಹರಿದು ಹಾಕಿದ ಕಿಡಿಗೇಡಿ: ಭುಗಿಲೆದ್ದ ಆಕ್ರೋಶ

Viral News: ಭಾರತದ ವಿರುದ್ಧ ಕತ್ತಿ ಮಸೆಯುವ ಅನೇಕ ಕಿಡೀಗೆಡಿಗಳು ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿರುವ ದೃಶ್ಯವೊಂದು ವೈರಲ್‌ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ದೆಹಲಿ ಬೆಂಕಿ ಅವಘಡ: ಪ್ರಾಣ ಕಾಪಾಡಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆಯರ ವಿಡಿಯೊ ವೈರಲ್

ಬೆಂಕಿ ದುರಂತದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆಯರು

ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇಯ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ ನಡೆದ ಬೆಂಕಿ ದುರಂತದಲ್ಲಿ ಪ್ರಾಣ ಕಾಪಾಡಿಕೊಳ್ಳಲು ಹಲವು ಮಹಿಳೆಯರು ಎತ್ತರದ ಕಟ್ಟಡದಿಂದ ಜಿಗಿದಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಖಾಲಿ ರಸ್ತೆಯಲ್ಲೂ 1 ಗಂಟೆ ಸಿಗ್ನಲ್‌ಗಾಗಿ ಕಾದ ವ್ಯಕ್ತಿ: ಸಿಂಗಾಪುರದ ಶಿಸ್ತಿನ ನಡೆಗೆ ನೆಟ್ಟಿಗರು ಮೆಚ್ಚುಗೆ!

ರಸ್ತೆ ಖಾಲಿ ಇದ್ದರೂ ಟ್ರಾಫಿಕ್ ನಿಮಯ ಪಾಲಿಸಿದ ವ್ಯಕ್ತಿ: ವಿಡಿಯೊ ವೈರಲ್

Viral News: ವಾಹನ ಚಾಲನೆ ಮಾಡುವಾಗ ಪರವಾನಗಿ, ನೋಂದಣಿ ಪ್ರಮಾಣಪತ್ರ ಹೀಗೆ ವಿವಿಧ ದಾಖಲೆಯನ್ನು ಇಟ್ಟುಕೊಳ್ಳುವುದು, ರಸ್ತೆಯ ಸೂಚನಾ ಫಲಕಗಳನ್ನು ಗಮನಿಸುವುದು ಹೀಗೆ ಸಂಚಾರ ನಿಯನಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ಕೆಲವರು ಇಂತಹ ನಿಯಮಗಳನ್ನು ಪಾಲಿಸದೇ ದಂಡ ಕಟ್ಟಿಸಿಕೊಂಡವರು ಅನೇಕರು ಇದ್ದಾರೆ. ಇದೀಗ ಸಿಂಗಾಪುರದ ಖಾಲಿ ರಸ್ತೆಯಲ್ಲೂ ವ್ಯಕ್ತಿ ಯೊಬ್ಬರು ಟ್ರಾಫಿಕ್ ನಿಮಯ ಪಾಲನೆ ಮಾಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ...

‘ತಾರಕ್ ಮೆಹ್ತಾ’ ಸೀರಿಯಲ್ ನೋಡುತ್ತ ಕ್ಯಾಬ್‌ ಚಲಾಯಿಸಿ ಚಾಲಕ; ಪ್ರಶ್ನಿಸಿದ ಪ್ರಯಾಣಿಕನಿಗೇ ಧಮ್ಕಿ

ಡ್ರೈವಿಂಗ್‌ ವೇಳೆ ಸೀರಿಯಲ್ ನೋಡುತ್ತ ಕ್ಯಾಬ್‌ ಓಡಿಸಿದ ಚಾಲಕ

Viral News: ಕ್ಯಾಬ್‌ ಚಾಲಕನೊಬ್ಬ ಸೀರಿಯಲ್ ನೋಡುತ್ತ ಡ್ರೈವಿಂಗ್ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕ ಆತಂಕಕ್ಕೆ ಒಳಗಾಗಿದ್ದಾರೆ.

ಫ್ರಾನ್ಸ್‌ನ ಐಫೆಲ್ ಟವರ್ ಎದುರು ಭಾರತೀಯ ಯುವತಿಯರ ‘ಸೀರೆ ವಾಕ್’; ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ ಎಂದು ಉದ್ಘರಿಸಿದ ನೆಟ್ಟಿಗರು

ಐಫೆಲ್ ಟವರ್ ಬಳಿ ಭಾರತೀಯ ಮಹಿಳೆಯರ ರ‍್ಯಾಂಪ್ ವಾಕ್: ವಿಡಿಯೊ ನೋಡಿ

Viral Video: ಭಾರತೀಯ ಮಹಿಳೆಯರ ವಿಡಿಯೊವೊಂದು ಗಮನ ಸೆಳೆದಿದೆ. ಮಹಿಳೆಯರ ‌ಗುಂಪು ಫ್ರಾನ್ಸ್‌ನ ಐಫೆಲ್ ಟವರ್ ಎದುರು ಸೀರೆ ಉಟ್ಟು ರ‍್ಯಾಂಪ್ ವಾಕ್ ಮಾಡಿದ್ದು ಮೆಚ್ಚುಗೆ ಗಳಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನೃತ್ಯ ಮಾಡುವ ಬದಲು ಇಂತಹ ದೃಶ್ಯಗಳೇ ಬೆಸ್ಟ್ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಕಸದಿಂದ ತುಂಬಿ ಹೋದ ಕೇದಾರನಾಥ: ಹಿಮಾಲಯದ ರಕ್ಷಣೆಗೆ ಪ್ರತಿ ಯಾತ್ರಿಕ 1 ಕೆಜಿ ಕಸ ಮರಳಿ ಕೊಂಡೊಯ್ಯಲು ಮನವಿ

ಕೇದಾರನಾಥ ತ್ಯಾಜ್ಯ ವಿಲೇವಾರಿಗೆ ಸಹಕರಿಸಲು ಯಾತ್ರಿಕರಿಗೆ ಮನವಿ

Viral News: ಉತ್ತರಾಖಂಡದ ಕೇದಾರನಾಥಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು, ಕೇವಲ 40 ದಿನಗಳಲ್ಲಿ 10 ಲಕ್ಷ ನೋಂದಾಯಿತ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮಿತಿ ಮೀರುತ್ತಿರುವ ಕಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೀಲಿಂಗ್ ಹಿಮಾಲಯಸ್‌ನ ಸಂಸ್ಥಾಪಕ ಪ್ರದೀಪ್ ಸಾಂಗ್ವಾನ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರತಿಯೊಬ್ಬರೂ ಸುಮಾರು 1 ಕೆಜಿ ಕಸ ಅಲ್ಲಿಂದ ಸಾಗಿಸಬೇಕು ಎಂದು ಕರೆ ನೀಡಿದ್ದಾರೆ.

ನಾಗರಿಕ ಪ್ರಜ್ಞೆಯ ಕೊರತೆ: ಕ್ಯೂ ತಪ್ಪಿಸಿದವರಿಗೆ ಲಾಠಿ ರುಚಿ ತೋರಿಸಿದ ರೈಲ್ವೆ ಪೊಲೀಸ್

ರೈಲು ನಿಲ್ದಾಣದಲ್ಲಿ ರೂಲ್ಸ್ ಬ್ರೇಕ್: ಲಾಠಿ ರುಚಿ ತೋರಿಸಿದ ಪೊಲೀಸ್

Viral News: ಇತ್ತೀಚೆಗೆ ಭಾರತೀಯರ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ದಿನಕ್ಕೊಂದು ದೂರು ಕೇಳಿ ಬರುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದೇ ಇರುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ. ಇದರ ನಡುವೆಯೇ ರೈಲು ನಿಲ್ದಾಣವೊಂದರಲ್ಲಿ ಶಿಸ್ತು ಮರೆತು ಕೆಲವು ಪ್ರಯಾಣಿಕರು ಮನ ಬಂದಂತೆ ವರ್ತಿಸಿದ್ದಾರೆ. ಇವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಮೆಟ್ರೋದ ಸೀಟಿನ ಮೇಲೆ ಕಾಲಿಟ್ಟು ಕುಳಿತ ಯುವಕ; ಸಹ ಪ್ರಯಾಣಿಕರು ಮಾಡಿದ್ದೇನು? ವಿಡಿಯೋ ನೋಡಿ

ಮೆಟ್ರೋದ ಸೀಟಿನ ಮೇಲೆ ಕಾಲಿಟ್ಟು ಕುಳಿತ ಯುವಕ: ಸಹ ಪ್ರಯಾಣಿಕರಿಂದ ಛೀಮಾರಿ

Viral Video: ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಎರಡು ಸೀಟುಗಳನ್ನು ಆಕ್ರಮಿಸಿಕೊಂಡು ಸೀಟಿನ ಮೇಲೆಯೆ ಕಾಲಿಟ್ಟು ಕುಳಿತಿದ್ದಾನೆ‌.ಇದರಿಂದ ಸಹ ಪ್ರಯಾಣಿಕರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೈದರಾಬಾದ್ ಮೆಟ್ರೋದ ದೃಶ್ಯ ಇದಾಗಿದ್ದು ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಶಿಷ್ಟಾಚಾರದ ಕುರಿತು ಚರ್ಚೆಗೆ ಕಾರಣವಾಗಿದೆ. ಯುವಕನೊಬ್ಬ ಸಹಪ್ರಯಾಣಿಕನಿಗೆ ತೊಂದರೆಯಾಗುವಂತೆ ಸೀಟಿನ ಮೇಲೆ ಕಾಲಿಟ್ಟು ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ಯಾಂಟ್ ಮೇಲೆ ಕುಳಿತ ನೂರಾರು ಜೇನುನೊಣಗಳ ಹಿಂಡು: 30 ನಿಮಿಷ ಕದಲದೆ ನಿಂತ ಯುವಕನ ಧೈರ್ಯಕ್ಕೆ ನೆಟ್ಟಿಗರು ಫಿದಾ!

ಜೇನು ನೋಣಗಳು ಮುತ್ತಿಗೆ: ತಾಳ್ಮೆಯಿಂದ ಗೆದ್ದು ಅಪಾಯದಿಂದ ಪಾರಾದ ಯುವಕ

Viral News: ಇದೀಗ ಯುವಕನ ಪ್ಯಾಂಟ್ ನ ಹಿಂಭಾಗ ದಲ್ಲಿ ಸಾವಿರಾರು ಜೇನು ನೋಣಗಳು ಮುತ್ತಿಗೆ ಹಾಕಿದ ಘಟನೆಯೊಂದು ಕಂಡುಬಂದಿದೆ. ಆತನು ಈ ಸನ್ನಿವೇಶವನ್ನು ಬಹಳ ತಾಳ್ಮೆಯಿಂದ ಪರಿಹರಿಸಿ ಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕನು ಬರೋಬ್ಬರಿ 30 ನಿಮಿಷವರೆಗೆ ಒಂದು ಚೂರು ಕದಲದೆ ಪಾರಾಗಿದ್ದಾನೆ. ಸದ್ಯ ಈ ವಿಚಿತ್ರ ಘಟನೆಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ...

ತಿಂಗಳಿಗೆ 2 ಲಕ್ಷ ರುಪಾಯಿ ಗಳಿಕೆ: ಎಂಜಿನಿಯರಿಂಗ್ ಮುಗಿಸಿ ಕ್ಯಾಬ್ ಬ್ಯುಸಿನೆಸ್‌ನಲ್ಲಿ ಯಶಸ್ಸು ಕಂಡ ಚಾಲಕ

ಎಂಜಿನಿಯರಿಂಗ್ ಮುಗಿಸಿದರೂ ಕೈ ಹಿಡಿದಿದ್ದು ಕ್ಯಾಬ್ ಬ್ಯುಸಿನೆಸ್‌

Viral News: ಪ್ರಯತ್ನ ಪಟ್ಟರೆ ಸ್ವಂತ ಉದ್ಯಮದಲ್ಲೂ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಈ ಯುವಕನ ಸಾಧನೆಯೇ ಸಾಕ್ಷಿ. ಎಂಜಿನಿಯರ್ ಮುಗಿಸಿದ ಯುವಕ ಆಫೀಸ್ ಕೆಲಸ ಆಯ್ದುಕೊಳ್ಳದೆ ಕ್ಯಾಬ್ ಬ್ಯುಸಿನೆಸ್‌ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೇವಲ ಒಂದು ಕಾರಿನಿಂದ ಈ ಉದ್ಯೋಗ ಆರಂಭ ಮಾಡಿದ ಅವರು ಇಂದು ತಿಂಗಳಿಗೆ 2 ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ಪ್ರವಾಸಿ ತಾಣದಲ್ಲಿ ವಿದೇಶಿಗನಿಂದ ಸ್ವಚ್ಛತಾ ಅಭಿಯಾನ; ನೋಡಿ ಕಲಿಯಿರಿ ಎಂದ ನೆಟ್ಟಿಗರು

ಪ್ರವಾಸಿ ತಾಣ ಸ್ವಚ್ಛಗೊಳಿಸಿದ ವಿದೇಶಿ ವ್ಯಕ್ತಿ

Viral News: ಉತ್ತರಾಖಂಡ ಚಾರಣದ ಹಾದಿಯಲ್ಲಿ ವಿದೇಶಿ ಪ್ರವಾಸಿಯೊಬ್ಬರು ಪ್ಲಾಸ್ಟಿಕ್, ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಇದು ಭಾರತೀಯರ ವರ್ತನೆ, ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಅನೇಕರು ಸ್ವಚ್ಛತೆ ಪಾಲಿಸದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Loading...