ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮಾನವೀಯತೆಯೇ ಸತ್ತು ಹೋಯಿತಾ?: ತೀವ್ರ ಬಿಸಿಲಿನ ನಡುವೆ ಕಾರಿನೊಳಗೆ ಶ್ವಾನ ಲಾಕ್ ಮಾಡಿದ ಮಾಲೀಕ!

ಕಾರಿನೊಳಗೆ ಶ್ವಾನ ಲಾಕ್: ಮಾಲೀಕನ ಬೇಜವಾಬ್ದಾರಿತನಕ್ಕೆ ನೆಟ್ಟಿಗರು ಕಿಡಿ

Viral News: ಪುಟ್ಟ ನಾಯಿಮರಿ, ಬೆಕ್ಕಿನ ಮರಿಗಳನ್ನು ಸುತ್ತ ಮುತ್ತಲಿನ ಬೀದಿಗಳಲ್ಲಿ ಬಿಟ್ಟು ಅವುಗಳು ನರಳಾಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ಕಂಡುಬಂದಿವೆ..ಇಷ್ಟಾದರೂ ಮನುಷ್ಯನಿಗೆ ಪಾಪ ಪ್ರಜ್ಞೆ ಅನ್ನೋದು ಕಾಡಿಲ್ಲ..ಇದಕ್ಕೆ ಸಾಕ್ಷಿ ಎಂಬಂತೆ ಧಗಧಗಿಸುವ ಬಿಸಿಲಿನಲ್ಲಿ ಮಾಲೀಕನೊಬ್ಬ ಕಾರಿನೊಳಗೆ ನಾಯಿಯನ್ನು ಲಾಕ್ ಮಾಡಿ ಹೋಗಿದ್ದಾನೆ. ನಾಯಿ ಉಸಿರಾಡಲು ಸಾಧ್ಯವಾಗದೆ ಪರದಾಡುತ್ತಿರುವ ವಿಡಿಯೊ ವೈರಲ್ ಆಗಿದೆ..

Davangere News: ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ, ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ವೇಳೆ ಪೊಲೀಸರು ಯುವತಿಯನ್ನು ತಡೆದಿದ್ದಾರೆ. ಈ ವೇಳೆ ಬ್ರೆಥಲೈಜರ್ ಮೂಲಕ ಆಲ್ಕೋಹಾಲ್‌ ಸೇವನೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ, ಗಾಳಿ ಊದುವುದು ಬಿಟ್ಟು, ಉಸಿರು ಒಳಗೆಳೆದು ಯುವತಿ ನಾಟಕವಾಡಿದ್ದಾಳೆ. ನಂತರ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾಳೆ.

ವೆನೆಜುವೆಲಾದಲ್ಲಿ ಭಾರೀ ಭೂಕಂಪ: ಅವಶೇಷಗಳಡಿಯಲ್ಲಿ ಸಿಲುಕಿದ್ದ ನವಜಾತ ಶಿಶುವಿನ ರಕ್ಷಣೆ, ವಿಡಿಯೋ ನೋಡಿ

ಅವಶೇಷಗಳ ಮಧ್ಯೆ ನವಜಾತ ಶಿಶು ರಕ್ಷಣೆ ಮಾಡಿದ ಸಿಬ್ಬಂದಿ: ಭಾವನಾತ್ಮಕ ವಿಡಿಯೊ

Viral Video: ವೆನೆಜುವೆಲಾದಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಇದುವರೆಗೆ ಕನಿಷ್ಠ 235 ಜನರು ಸಾವನ್ನಪ್ಪಿದ್ದು, 4,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೂಡ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದರ ನಡುವೆ ಅವಶೇಷಗಳ ರಾಶಿಯ ಮಧ್ಯೆ ಬಿದ್ದಿದ್ದ ನವಜಾತ ಶಿಶುವೊಂದನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಮಾಡಿದ್ದಾರೆ..

ಚರಂಡಿಯ ಕೊಳಚೆ ನೀರಿನಲ್ಲೇ ನಿಂತು ಬರ್ತ್‌ಡೇ ಆಚರಿಸಿದ ಬಿಜೆಪಿ ಕೌನ್ಸಿಲರ್: ವಿಡಿಯೊ ವೈರಲ್

ಚರಂಡಿಯಲ್ಲಿ ನಿಂತು ಹುಟ್ಟುಹಬ್ಬ ಆಚರಣೆ ಮಾಡಿದ ಬಿಜೆಪಿ ಕೌನ್ಸಿಲರ್

Viral News: ಸ್ಮಾರ್ಟ್ ಸಿಟಿ ಆಗ್ರಾದಲ್ಲಿ ಜಿಜೆಪಿ ಕೌನ್ಸಿಲರ್ ವೊಬ್ಬರು ವಿಶೇಷ ಪ್ರತಿಭಟನೆ ಮಾಡಿದ್ದಾರೆ‌. ಸರಕಾರಿ ಅಧಿಕಾರಿಗಳಿಗೆ ಪ್ರಜ್ಞೆ ಬರಲಿ ಎಂದು ಚರಂಡಿಯ ಕೊಳಚೆ ನೀರಲ್ಲಿ ನಿಂತು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ..ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸರಕಾರದ ನಿರ್ಲಕ್ಷ್ಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೆಲಸ ಹೋಯಿತು ಎಂದು ಧೃತಿಗೆಡಲಿಲ್ಲ"; ಹುಟ್ಟೂರಲ್ಲೇ  ಸೂಪರ್ ಮಾರ್ಕೆಟ್ ತೆರೆದು ಯಶಸ್ಸು ಕಂಡ ಸಾಫ್ಟ್‌ವೇರ್ ಇಂಜಿನಿಯರ್!

ಸೂಪರ್ ಮಾರ್ಕೆಟ್ ತೆರೆದು ದಿನಕ್ಕೆ 50,000 ರೂ.ಲಾಭ ಗಳಿಸುತ್ತಿರುವ ಯುವಕ

Viral News: ಸಾಫ್ಟ್‌ವೇರ್ ಇಂಜಿನಿಯರ್ ಯೊಬ್ಬರು ಉದ್ಯೋಗವನ್ನು ಕಳೆದುಕೊಂಡಿದ್ದು ಇದಕ್ಕೆ ಎದೆಗುಂದದೆ ಸ್ವಂತ ಉದ್ಯಮವನ್ನು ಆರಂಭ ಮಾಡಿ ಯಶಸ್ಸು ಕಂಡಿದ್ದಾರೆ. ಯಾವುದೇ ಐಟಿ ಕ್ಷೇತ್ರ ಅಥವಾ ಪ್ರತಿಷ್ಠಿತ ಕಂಪನಿಯ ಕೆಲಸ ಎಂದು ಕಾಯದೇ ತನ್ನ ಹಳ್ಳಿಯಲ್ಲೇ ಸ್ವಂತ ಉದ್ಯಮ ಆರಂಭ ಮಾಡಿದ್ದಾರೆ. ತಮ್ಮ ಗ್ರಾಮದಲ್ಲಿ ಸಣ್ಣ ಸೂಪರ್‌ಮಾರ್ಕೆಟ್ ಅನ್ನು ತೆರೆದಿದ್ದು ಅವರ ಸಣ್ಣ ಕಲ್ಪನೆಯು ದೈನಂದಿನ ಮಾರಾಟದೊಂದಿಗೆ ಸ್ಥಳೀಯ ವ್ಯವಹಾರವಾಗಿ ಬೆಳೆದಿದೆ..ಇವರ ಈ ಯಾಶೋಗಾಥೆಯೂ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಅಭ್ಯಾಸದ ವಿಡಿಯೊ ಹಂಚಿಕೊಂಡ ಬಿಸಿಸಿಐ

ನೆಟ್ಸ್‌ನಲ್ಲಿ ಅನುಭವಿ ಬೌಲರ್‌ಗಳ ಚಳಿ ಬಿಡಿಸಿದ ಸೂರ್ಯವಂಶಿ

Vaibhav Sooryavanshi: ಐರ್ಲೆಂಡ್ ತಂಡಕ್ಕೆ, ಸೂರ್ಯವಂಶಿಯಂತಹ ಕಿರಿಯ ಆಟಗಾರನಿಗೆ ತಯಾರಿ ನಡೆಸುವ ನಿರೀಕ್ಷೆಯು ಒಂದು ವಿಶಿಷ್ಟ ಅನುಭವವಾಗಿದೆ. ಆದರೆ, ಅವರಿಗಾಗಿ ಪ್ರತ್ಯೇಕ ಯೋಜನೆ ಇಲ್ಲ ಎಂದು ಐರ್ಲೆಂಡ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಬೆನ್ ಕ್ಯಾಲಿಟ್ಜ್ ಹೇಳಿದ್ದಾರೆ.

Viral Video: ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ

ದಕ್ಷಿಣ ಕೊರಿಯಾದಲ್ಲಿ ಭಾರತೀಯ ಯುವತಿಯ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ

ದಕ್ಷಿಣ ಕೊರಿಯಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಗ್ ಧರಿಸಿ ಭಾರತೀಯ ಯುವತಿಯನ್ನು ಹಿಂಬಾಲಿಸಿದ ಘಟನೆ ನಡೆದಿದೆ. ಯುವತಿ ವಿಡಿಯೊ ಮೂಲಕ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾಳೆ. ಅಪರಿಚಿತ ವ್ಯಕ್ತಿ ಸ್ಥಳೀಯನಾಗಿದ್ದರೂ ರೆಸ್ಟೋರೆಂಟ್‌ ಎಲ್ಲಿದೆ ಎಂದು ಪ್ರಶ್ನಿಸಿ ಪದೇ ಪದೆ ಆಕೆಯ ಬಳಿ ಬಂದಿದ್ದಾನೆ.

Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ

ರಿಷಿಕೇಶದ ಘಾಟ್‌ನಲ್ಲಿ 3 ಗಂಟೆ 'ತಿಲಕ' ಇಟ್ಟು 2,350 ರುಪಾಯಿ ಗಳಿಸಿದ ಯುವಕ

Viral News: ರಿಷಿಕೇಶದ ಗಂಗಾ ಘಾಟ್‌ನಲ್ಲಿ ಯುವಕನೊಬ್ಬ ಆಗಮಿಸಿದ ಭಕ್ತರಿಗೆ ತಿಲಕ ಇಟ್ಟು ಉತ್ತಮ ಆದಾಯ ಗಳಿಸಿದ್ದಾನೆ. ಕೇವಲ 3 ಗಂಟೆಗಳಲ್ಲಿ ಭಕ್ತರಿಗೆ ತಿಲಕ ಇಟ್ಟು ಈತ ಬರೋಬ್ಬರಿ 2,350 ರುಪಾಯಿ ಗಳಿಸಿದ್ದಾನೆ.‌ ಹೇಗೆ ಈ ಹಣ ಗಳಿಸಿದೆ ಎಂಬುದನ್ನು ಆತನೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಕಡಿಮೆ ಸಮಯದಲ್ಲಿ ಇಷ್ಟು ಹಣ ಸಂಪಾದನೆ ಮಾಡಿರುವ ಬಗ್ಗೆ ಅನೇಕರು ಅಚ್ಚರಿ ಮತ್ತು ಕುತೂಹಲ ವ್ಯಕ್ತಪಡಿಸಿದ್ದಾರೆ. ಅನೇಕರು ಕಾರ್ಪೊರೇಟ್ ಉದ್ಯಮಕ್ಕಿಂತ ಇದೇ ಬೆಸ್ಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Viral News: ಕರ್ನಾಟಕ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಇದೆ ಮಂಗಳೂರು; ಏನೀದರ ಇತಿಹಾಸ?

ಆಸ್ಟ್ರೇಲಿಯಾದಲ್ಲಿ ಇರುವ ಮಂಗಳೂರಿನ ಬಗ್ಗೆ ನಿಮಗೆಷ್ಟು ಗೊತ್ತು?

Viral News: ಮಂಗಳೂರು ಕರ್ನಾಟಕದಲ್ಲಿ ಮಾತ್ರ ಇದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಮಂಗಳೂರು ನಮ್ಮಿಂದ ಸಾವಿರಾರು ಕಿಲೋ ಮೀಟರ್ ದೂರದ ಆಸ್ಟ್ರೇಲಿಯಾ ಖಂಡದಲ್ಲೂ ಇದೆ ಎಂದರೆ ನಂಬುತ್ತೋರಾ? ಅಚ್ಚರಿಯಅದರೂ ಇದು ಸತ್ಯ. ಆಸ್ಟ್ರೇಲಿಯಾದ 2 ಪಟ್ಟಣಗಳ ಹೆಸರು ಮಂಗಳೂರು. ಸದ್ಯ ಈ ಅಚ್ಚರಿಯ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಸಿಕ್ಕರೂ ನಿಲ್ಲದ ಕಣ್ಣೀರು: ಬೆಂಗಳೂರಿಗೆ ಬಂದ 23 ವರ್ಷದ ಯುವತಿಗೆ ಕಾಡುವ ಆತಂಕವೇನು?

ಕನಸಿಕ ಉದ್ಯೋಗ ಸಿಕ್ಕರೂ ನೆಮ್ಮದಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ ಯುವತಿ! ​

Viral News: ಬೆಂಗಳೂರಿನಲ್ಲಿ ತನ್ನ ಕನಸಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ 23 ವರ್ಷದ ಯುವತಿಯೊಬ್ಬಳು ತನ್ನ ಯಶಸ್ಸಿಗೆ ಖುಷಿ ಪಡುವ ಬದಲಿಗೆ ದಿನ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಕೆಲಸಕ್ಕೆ ಸೇರುವ ಮುನ್ನ ಬೆಂಗಳೂರಿನ ವಾತಾವರಣ ಬಹಳಷ್ಟು ಇಷ್ಟವಾಗಿತ್ತು, ಆದರೆ ಕಚೇರಿಗೆ ಹೋಗಲು ಆರಂಭಿಸಿದಾಗಿನಿಂದ ಮಾನಸಿಕ ಒತ್ತಡ ಉಂಟಾಗುತ್ತಿದೆ. ಮನೆಯವರ ನೆನಪು ತನ್ನನ್ನು ಬಿಟ್ಟು ಬಿಡದೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ..ರೆಡ್ಡೆಟ್ ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾಳೆ.

16 ಪಾಸ್‌ಪೋರ್ಟ್, 245 ದೇಶಕ್ಕೆ ಪ್ರಯಾಣ: ಬೆಂಗಳೂರಿನ ಸಂಗೀತಗಾರನ ಅಪರೂಪದ ಸಾಧನೆಗೆ ನೆಟ್ಟಿಗರು ಫಿದಾ!

245 ದೇಶಗಳಿಗೆ ಪ್ರಯಾಣಿಸಿದ್ದ ಬೆಂಗಳೂರಿನ ಖ್ಯಾತ ಸಂಗೀತಕಾರ!

Viral News: ಬೆಂಗಳೂರು ಮೂಲದ ಖ್ಯಾತ ಸಂಗೀತಕಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಕೇವಲ ಸಂಗೀತದಿಂದ ಎಲ್ಲರನ್ನು ಆಕರ್ಷಿಸಿ ಜಗತ್ತಿನಾದ್ಯಂತ ಸಂಚಾರ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.16 ಪಾಸ್‌ಪೋರ್ಟ್‌ಗಳೊಂದಿಗೆ 245 ದೇಶಗಳಿಗೆ ಪ್ರಯಾಣಿಸಿದ್ದು ಇವರ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಖರೀದಿಸುವ ಮುನ್ನ ಎಚ್ಚರ! ಪಾಚಿ ಕಟ್ಟಿ ನಿಂತ ಕೊಳಕು ನೀರಿನಲ್ಲೇ ತರಕಾರಿ ತೊಳೆದ ವ್ಯಾಪಾರಿ! ವಿಡಿಯೋ ನೋಡಿ

ಕೆಸರು ನೀರಿನಲ್ಲಿ ತರಕಾರಿ ತೊಳೆದ : ಸಾರ್ವಜನಿಕರ ಆಕ್ರೋಶ

Viral Video: ಕೆಸರು ನೀರಿನಲ್ಲಿ ತರಕಾರಿ ತೊಳೆದ ವಿಡಿಯೊವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು ನಿಂತ ನೀರಿನಲ್ಲಿ ಹಸಿರು ತರಕಾರಿಗಳ ಮೂಟೆ ಇಟ್ಟುಕೊಂಡು ವ್ಯಾಪಾರಿಯೊಬ್ಬ ತೊಳೆಯುತ್ತಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

Bengaluru Metro: ಮೆಟ್ರೋ ಕೈಕೊಟ್ಟಿದ್ದಕ್ಕೆ ಲಾರಿ ಹತ್ತಿದ ಪ್ರಯಾಣಿಕರು; ಥರ್ಡ್‌ ಕ್ಲಾಸ್‌ ಆಡಳಿತ ಎಂದು ತೇಜಸ್ವಿ ಸೂರ್ಯ ಕಿಡಿ

ಮೆಟ್ರೋ ಕೈಕೊಟ್ಟಿದ್ದಕ್ಕೆ ಲಾರಿ ಹತ್ತಿದ ಪ್ರಯಾಣಿಕರು! Video ವೈರಲ್‌

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆ ಸೇರಲು ಲಾರಿ, ಟ್ರಕ್‌ ಹತ್ತಿಕೊಂಡು ಹೋಗುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಸ್ತೆಯಲ್ಲೇ ಪಟಾಕಿ ಸಿಡಿಸಿ ಪತ್ನಿಯ ಬರ್ತ್‌ಡೇ ಆಚರಿಸಿದ ಉದ್ಯಮಿ: ಸಾರ್ವಜನಿಕ ಸ್ಥಳವನ್ನು ಬಳಸಲು ಅಧಿಕಾರ ಕೊಟ್ಟಿದ್ಯಾರು? ಎಂದ ನೆಟ್ಟಿಗರು

ಫ್ಲೈ ಓವರ್‌ನಲ್ಲಿ ಪಟಾಕಿ ಸಿಡಿಸಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ ಉದ್ಯಮಿ

Viral Video: ಗುವಾಹಟಿಯಲ್ಲಿ ನಡೆದ ಈ ಘಟನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಉದ್ಯಮಿ ಯೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಯಾವುದೇ ಐಷಾರಾಮಿ ಹೋಟೆಲ್‌ನಲ್ಲಿ ಆಚರಿಸುವ ಬದಲು ಸಾರ್ವಜನಿಕರು ಸಂಚಾರ ಮಾಡುವ ಫ್ಲೈಓವರ್ ಮೇಲೆ ಆಚರಣೆ ಮಾಡಿದ್ದಾರೆ. ಈ ವಿಡಿಯೊ ನೋಡಿದ ಅನೇಕರು ಹಣ ಇದ್ದವರೇ ಇಂತಹ ವರ್ತನೆ ತೋರುವುದು ಎಂದು ಕಿಡಿಕಾರಿದ್ದಾರೆ..

ಒಳಗೆ ಸೇರಿದರೆ ಗುಂಡು ಮಂಗನೂ ಆಗುವುದು ಮಾನವ! ಇಂಡೋನೇಷ್ಯಾದ ಬೀಚ್‌ನಲ್ಲಿ ಬಾಟಲ್‌ ಹಿಡಿದು ಬಿಯರ್‌ ಹೀರಿದ ಕೋತಿಗಳು

ಬೀಚ್‌ನಲ್ಲಿ ಬಿಯರ್ ಬಾಟಲಿ ಹಿಡಿದು ಕೂತ ಮಂಗಗಳು: ವಿಡಿಯೊ ವೈರಲ್

Viral Video: ಇಂಡೋನೇಷ್ಯಾದ ಜಕಾರ್ತದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕಡಲ ತೀರದಲ್ಲಿ ಪ್ರವಾಸಿಗರು ಎಸೆದು ಹೋಗಿದ್ದ ಬಿಯರ್ ಬಾಟಲಿಗಳನ್ನು ಹಿಡಿದು ಕೋತಿಗಳು ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಪ್ರವಾಸಿಗರು ತೋರುವ ಇಂತಹ ಬೇಜವಾಬ್ದಾರಿಯ ವರ್ತನೆಯಿಂದ ವನ್ಯ ಜೀವಿಗಳ ಆರೋಗ್ಯಕ್ಕೆ ಬಹಳಷ್ಟು ಪೆಟ್ಟು ಬೀಳುತ್ತಿದೆ ಎಂದು ಅರಣ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.‌

ಮುಂಗಾರು ಮಳೆಗೆ ರಸ್ತೆಯಲ್ಲೆ ರಾಜಗಾಂಭೀರ್ಯದಿಂದ ತಿರುಗಾಡಿದ ನವಿಲುಗಳು!

ಮುಂಬೈನ ರಸ್ತೆಯಲ್ಲಿ ಹೆಜ್ಜೆ ಹಾಕಿದ ನವಿಲು: ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬ

Viral Video: ಪ್ರಕೃತಿ ಪ್ರಿಯರನ್ನು ಗಮನ ಸೆಳೆಯುವಂತ ದೃಶ್ಯವೊಂದು ಕಂಡು ಬಂದಿದೆ. ವಾಣಿಜ್ಯ ನಗರಿಗೆ ನೈಋತ್ಯ ಮುಂಗಾರಿನ ಆಗಮನ ಆಗುತ್ತಿದ್ದಂತೆ ಪ್ರಸಿದ್ಧ ಪೆದ್ದರ್ ರಸ್ತೆಯಲ್ಲಿ ನವಿಲುಗಳು ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ‌. ನವಿಲುಗಳು ಗರಿಬಿಚ್ಚಿ ಆಕಸ್ಮಿಕವಾಗಿ ಅಡ್ಡಾಡುತ್ತಿರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ...

35,000 ರುಪಾಯಿಯ ಸ್ಮಾರ್ಟ್‌ ಫೋನ್ ಆರ್ಡರ್ ಮಾಡಿದ ಯುವಕನಿಗೆ ಕಾದಿತ್ತು ಶಾಕ್; ಪಾರ್ಸಲ್‌ನಲ್ಲಿ ಬಂತು ಸೋಪ್

35 ಸಾವಿರ ರುಪಾಯಿಯ ಫೋನ್ ಬುಕ್ ಮಾಡಿದ್ದ ಯುವಕನಿಗೆ ಸಿಕ್ತು ಸೋಪ್‌

Viral News: ಮನೆಗೆ ತರಕಾರಿಯಿಂದ ಹಿಡಿದು ಡ್ರೆಸ್ ಶಾಪಿಂಗ್ ಕೂಡ ಕೂತಲ್ಲೇ ನಡೆಯಬೇಕು ಎಂಬಂತೆ ಆಗಿ ಹೋಗಿದೆ. ಆದರೆ ಇಂತಹ ಆನ್‌ಲೈನ್ ಶಾಪಿಂಗ್ ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದೀಗ ಪ್ರಶ್ನೆಗೆ ವ್ಯತಿರಿಕ್ತವಾಗಿ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ ಯುವಕನಿಗೆ ವಂಚನೆ ಯಾಗಿರುವ ಘಟನೆಯೊಂದು ನಡೆದಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ 35,000 ಮೌಲ್ಯದ ವಿವೋ ಮೊಬೈಲ್ ಬದಲಾಗಿ ಬಾಕ್ಸ್‌ನಲ್ಲಿ ಬಟ್ಟೆ ತೊಳೆಯುವ ಸಾಬೂನು ಪತ್ತೆಯಾಗಿದೆ.

''ಪ್ರತಿ ಸಲವೂ ಸರ್ಕಾರವನ್ನು ದೂರಬೇಡಿʼʼ: ರೀಲ್ಸ್ ಹುಚ್ಚಿಗೆ ಪ್ರಾಣವನ್ನೇ ಪಣಕ್ಕಿಟ್ಟು ಝೇಲಂ ನದಿಯಲ್ಲಿ ಫಾರ್ಚುನರ್ ಕಾರ್ ಓಡಿಸಿದ ಪ್ರವಾಸಿಗ

ರೀಲ್ಸ್ ಕ್ರೇಝ್‌ಗಾಗಿ ನದಿಯಲ್ಲೇ ಕಾರ್‌ ಓಡಿಸಿದ ಪ್ರವಾಸಿಗ: ವಿಡಿಯೊ ವೈರಲ್

Viral News: ಕಾಶ್ಮೀರದಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಪ್ರವಾಸಿಗನೊಬ್ಬ ತನ್ನ ಐಷಾರಾಮಿ ಕಾರನ್ನು ನೀರಿನಲ್ಲಿ ಓಡಿಸಲು ಮುಂದಾಗಿದ್ದಾನೆ. ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೀರಿನಲ್ಲಿ ಇಂತಹ ಅಪಾಯಕಾರಿ ಸಾಹಸದ ಅಗತ್ಯ ಏನಿತ್ತು? ಎಂದು ಜನರು ಟೀಕೆ ವ್ಯಕ್ತಪಡಿಸಿದ್ದಾರೆ. ರೀಲ್ಸ್ ಗಾಗಿ ಇಂತಹ ಸಾಹಸ ಮಾಡಲು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...

ಬೆಂಗಳೂರಿನ ಟ್ರಾಫಿಕ್ ನಡುವೆ ರಾಂಗ್ ಸೈಡ್ ಡ್ರೈವ್ ಮಾಡಿ ದರ್ಪ ತೋರಿದ ಚಾಲಕ: ವಿಡಿಯೊ ವೈರಲ್

ರಾಂಗ್ ಸೈಡ್ ಡ್ರೈವ್ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ ಟ್ರಕ್ ಚಾಲಕ

Viral News: ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಶಾಕಿಂಗ್ ಘಟನೆಯೊಂದು ಕಂಡು ಬಂದಿದೆ. ರಾಂಗ್ ಲೇನ್ ನಲ್ಲಿ ಟ್ರಕ್ ಚಾಲಕನೊಬ್ಬ ವಾಹನ ಚಲಾಯಿಸಿಕೊಂಡು ಬಂದಿದ್ದು ಅದನ್ನು ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

Viral Video: ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ಕೋತಿಗಳಿಗೆ ಆಹಾರ ನೀಡುವ ತಮಿಳುನಾಡಿನ ನಿವೃತ್ತ ಅಧಿಕಾರಿ

ತಮಿಳುನಾಡಿನ 77ರ ವೃದ್ಧೆಯೊಬ್ಬರು ತಮ್ಮ ಪಿಂಚಣಿ ಹಣವನ್ನು ಕೋತಿಗಳ ಹಸಿವು ನೀಗಿಸಲು ಬಳಕೆ ಮಾಡುತ್ತಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯಾದ ಅವರು ಕಳೆದ ಹತ್ತು ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸದ್ಯ ಅವರ ನಿಸ್ವಾರ್ಥ ಸೇವೆಗೆ ಎಲ್ಲರೂ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಭಾರಿ ವೈರಲ್ ಆಗಿದೆ.

ಭೀಕರ ದುರಂತ: ಏರ್‌ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ 8 ಪ್ರವಾಸಿಗರು ಸಜೀವ ದಹನ; ವಿಡಿಯೊ ವೈರಲ್‌

ಬ್ರೆಜಿಲ್‌ನಲ್ಲಿ ಏರ್ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಮಂದಿ ಸಾವು

Viral News: ದಕ್ಷಿಣ ಬ್ರೆಜಿಲ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಏರ್‌ ಬಲೂನ್ ಹಾರಾಟದ ಮಧ್ಯೆಯೇ ಆಕಾಶದಲ್ಲಿ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಲ್ಲಿ ಎಂಟು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ವಿಡಿಯೊ ಸದ್ಯ ವೈರಲ್‌ ಆಗಿದೆ.

ಪೊಲೀಸ್ ಸಮವಸ್ತ್ರ ಧರಿಸಿ ಸ್ಪಾದಲ್ಲಿ ಮಹಿಳೆ ಜತೆ ಅಸಭ್ಯ ವರ್ತನೆ: ಕಿಡಿಗೇಡಿಯ ಅನುಚಿತ ವರ್ತನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಸಮವಸ್ತ್ರ ಧರಿಸಿದ ಕಿಡಿಗೇಡಿ

Viral Video: ಹರಿಯಾಣದ ಫರಿದಾಬಾದ್‌ನ ಸ್ಪಾ ಕೇಂದ್ರವೊಂದರಲ್ಲಿ ಖಾಕಿ ಸಮವಸ್ತ್ರಧಾರಿ ಧರಿಸಿದ್ದ ವ್ಯಕ್ತಿ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ‌. ಈ ಆಘಾತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Viral News: ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ; ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ

ಹಳ್ಳಿ ಜನರನ್ನು ಬೆದರಿಸಿ ದೋಚಿದ ಬೆಂಗಳೂರು ಆಟೋ ಚಾಲಕ

ಬೆಂಗಳೂರಿನ ಆಟೋ ಚಾಲಕನೊಬ್ಬ ಹಳ್ಳಿಯಿಂದ ಮೊದಲ ಬಾರಿಗೆ ನಗರಕ್ಕೆ ಬಂದಿದ್ದ ಯುವಕರನ್ನು ದೋಚಿದ್ದಾನೆ ಎಂದು ಟೆಕ್ಕಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋಗಲು ತಲಾ 50 ರೂ. ಬಾಡಿಗೆ ಬದಲಿಗೆ ಆತ ಯುವಕರಿಂದ 2,400 ರೂ. ಗಳನ್ನು ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಮಗುವಿನಂತೆ ಕಾಗೆಗೆ ಲಾಲನೆ, ಪಾಲನೆ ಮಾಡಿದ ಮಹಿಳೆ; ವಿಡಿಯೋ ವೈರಲ್!

ಮಗುವಿನಂತೆ ಕಾಗೆಗೆ ಲಾಲನೆ, ಪಾಲನೆ ಮಾಡಿದ ಮಹಿಳೆ

Viral Video: ಮಹಿಳೆಯೊಬ್ಬರು ಕಾಗೆಯೊಂದಿಗೆ ಪ್ರೀತಿಯ ಬಂಧವನ್ನು ಬೆಳೆಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆಯೂ ಕಾಗೆಯನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಅದಕ್ಕೆ ಮಸಾಜ್ ಮಾಡುತ್ತಾ ಕುಳಿತಿದ್ದಾರೆ. ಈ ವಿಡಿಯೊ ಪ್ರಾಣಿ ಪ್ರಿಯರ ಮನ ಗೆದ್ದಿದ್ದು ತಾಯಿಯ ಮಮತೆಗೆ ಮನ ಸೋತಿದ್ದಾರೆ..

Loading...