ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್‌

ಅಪಾಯದ ಎಚ್ಚರಿಕೆ ನೀಡಿದರೂ ಬುದ್ಧಿ ಕಲಿಯುತ್ತಿಲ್ಲ; ರೈಲಿನಲ್ಲಿ ಎಲೆಕ್ಟ್ರಿಕ್ ಕೆಟಲ್ ಬಳಸಿ ಚಹಾ ತಯಾರಿಸಿದ ಮಹಿಳೆ

ರೈಲಿನಲ್ಲಿ ಕೆಟಲ್ ಬಳಸಿ ಚಹಾ: ನೆಟ್ಟಿಗರ ಕಿಡಿ

ರೈಲಿನಲ್ಲಿ ಮಹಿಳೆಯೊಬ್ಬರು ಎಲೆಕ್ಟ್ರಿಕ್ ಕೆಟಲ್ ಬಳಸಿ ಚಹಾ ತಯಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ರೈಲಿನ ಸಾಕೆಟ್‌ಗೆ ಜೋಡಿಸುವುದು ಅಪಾಯಕಾರಿ ಎಂದು ನೆಟ್ಟಿಗರು ಎಚ್ಚರಿಸಿದ್ದಾರೆ. ಘಟನೆಗೆ ಸ್ಪಂದಿಸಿದ ರೈಲ್ವೆ ಇಲಾಖೆ ವಿವರಗಳನ್ನು ಕೇಳಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಪಾರ್ಕ್‌ನಲ್ಲಿ ಪ್ರಿಯತಮೆಗೆ 30-40 ಬಾರಿ ಕಪಾಳಮೋಕ್ಷ ಮಾಡಿದ ಯುವಕ; ಕ್ಲಾಸ್‌ ತೆಗೆದುಕೊಂಡ ನೆಟ್ಟಿಗರು

ಯುವತಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಯುವಕ

Viral Video: ಯುವಕನೊಬ್ಬ ತನ್ನ ಪ್ರಿಯತಮೆ ಮೇಲೆ ಸಾರ್ವಜನಿಕವಾಗಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಕಂಡು ಬಂದಿದೆ. ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಸ್ವರ್ಣ ಜಯಂತಿ ಪಾರ್ಕ್‌ನಲ್ಲಿ ಈ ಅಘಾತಕಾರಿ ಘಟನೆ ಕಂಡು ಬಂದಿದೆ.

ಹೋಳಿ ಎರಚುವ ವೇಳೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಿಡಿಗೇಡಿಗಳು; ವಿಡಿಯೊ ವೈರಲ್

ಹೋಳಿ ಎರಚುವ ವೇಳೆ ಮಹಿಳೆಯರ ಮೈ ಮುಟ್ಟಿದ ಕಿಡಿಗೇಡಿಗಳು

ಮಥುರಾ, ವೃಂದಾವನ, ಬರ್ಸಾನಾ, ನಂದಗಾಂವ್ ಮತ್ತು ಗೋಕುಲ್‌ನಂತಹ ಸ್ಥಳಗಳಲ್ಲಿ ಬ್ರಜ್ ಕಿ ಹೋಳಿ ಹೆಸರುವಾಸಿ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊ ಕಳವಳವನ್ನುಂಟು ಮಾಡಿದೆ. ಹೋಳಿ ಆಚರಣೆಯ ಸಮಯದಲ್ಲಿ ಕಿಡಿಗೇಡಿಗಳು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಇದು ಸೀಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಪ್ರವಾಹದಲ್ಲಿ ಕಂಡ ದೈತ್ಯಾಕಾರದ ಹೆಬ್ಬಾವು ನೋಡಿ ಬೆಚ್ಚಿ ಬಿದ್ದ ಪ್ರವಾಸಿಗರು! ವಿಡಿಯೋ ನೋಡಿ

ಬಾಲಿಯಲ್ಲಿ ಭೀಕರ ಮಳೆ: ರಸ್ತೆಯಲ್ಲಿ ಈಜುತ್ತಾ ಬಂದ ಆರು ಅಡಿ ಉದ್ದದ ಹೆಬ್ಬಾವು

Viral Video: ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಇಂಡೋನೇಷ್ಯಾದ ಬಾಲಿಯಲ್ಲಿ ಸುಮಾರು 6 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಬ್ಬಾವೊಂದು ಕಂಡುಬಂದಿದೆ. ಕಳೆದ ದಿನಗಳಿಂದ ಬಾಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರಸ್ತೆಯಲ್ಲಿ ನೀರಿನ ನಡುವೆ ಹೆಬ್ಬಾವೊಂದು ಸರಾಗವಾಗಿ ಈಜುತ್ತಿದ್ದ ವಿಡಿಯೊ ವೈರಲ್ ಆಗಿದೆ.

ಜಾತ್ರೋತ್ಸವದ ವೇಳೆ ಮಾವುತನನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ: ಭಯಾನಕ ವಿಡಿಯೊ ವೈರಲ್‌

ದೇವಾಲಯದ ಉತ್ಸವದಲ್ಲಿ ಆನೆ ದಾಳಿ: ವಿಡಿಯೊ ವೈರಲ್

Viral Video: ಕೇರಳದ ತ್ರಿಶೂರ್ ಜಿಲ್ಲೆಯ ದೇವಾಲಯದಲ್ಲಿ ಆನೆಯೊಂದು ಮಾವುತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಮಹಾದೇವ ದೇವಸ್ಥಾನದಲ್ಲಿ 'ವಲಿಯವಿಳಕ್ಕು' ಹಬ್ಬದ ಸಂಭ್ರಮದ ನಡುವೆಯೇ ಈ ಭೀಕರ ದೃಶ್ಯ ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಲೋಕಲ್‌ ಟ್ರೇನ್‌ನಲ್ಲಿ ಜಡೆ ಜಗಳ; ಯುವತಿಯ ಜುಟ್ಟು ಹಿಡಿದು ಎಳೆದ ಮಹಿಳೆ!

ಮುಂಬೈ ಟ್ರೈನ್ ನಲ್ಲಿ ಯುವತಿಯ ಜುಟ್ಟು ಹಿಡಿದು ಎಳೆದಾಟ: ಇಲ್ಲಿದೆ ವಿಡಿಯೊ!

Viral Video: ಮುಂಬೈನ ಲೋಕಲ್ ಟ್ರೈನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಮತ್ತೊಬ್ಬ ಮಹಿಳೆ ಜುಟ್ಟು ಹಿಡಿದು ಎಳೆದಾಡಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ರೈಲ್ವೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಗರ್ಭಿಣಿ ಪತ್ನಿಗಾಗಿ ʼಕೆಜಿಎಫ್‌ʼ ರಾಕಿ ಭಾಯ್‌ಯಾದ ಮಂಗಳೂರು ಉದ್ಯಮಿ; ಸೀಮಂತದ ಸಂಭ್ರಮದ ವೇಳೆ ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ

ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ ಸುರಿಸಿ ಸರ್‌ಪ್ರೈಸ್‌ ನೀಡಿದ ಪತಿ

Viral News: ಇಲ್ಲೊಬ್ಬ ಮಂಗಳೂರಿನ ವ್ಯಕ್ತಿ ತನ್ನ ಮಡದಿಯ ಸೀಮಂತದಂದು ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ ಸುರಿಸಿ ಅಚ್ಚರಿ ಮೂಡಿಸಿದ್ದಾರೆ. ತನ್ನ ಪತ್ನಿಗೆ ಸೀಮಂತದ ದಿನ ಪತಿ ಸರ್‌ಪ್ರೈಸ್‌ ನೀಡಲು ಈ ಪ್ಲ್ಯಾನ್‌ ಮಾಡಿದ್ದು ಆಕಾಶದಿಂದಲೇ ಹೂವಿನ ಸುರಿಮಳೆ ಗೈದಿದ್ದಾರೆ.

ಅಪರೂಪದ ಬಿಳಿ ಹುಲಿ ಅಸ್ವಸ್ಥ: ಪ್ರಾಣಿಪ್ರಿಯರಲ್ಲಿ ಆತಂಕ

ಅಸ್ವಸ್ಥ ಬಿಳಿ ಹುಲಿಯ ರಕ್ಷಣೆಗೆ ಪ್ರಾಣಿಪ್ರಿಯರ ಮನವಿ

Viral Video: ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿರುವ ಉದ್ಯಾನವನದಲ್ಲಿ ಪ್ರಾಣಿಗಳ ಆರೈಕೆಯ ಮಾನದಂಡಗಳ ಬಗ್ಗೆ ಅನುಮಾನ ಮೂಡಿದೆ. ಇಲ್ಲಿನ ಮೃಗಾಲಯದಲ್ಲಿರುವ ಬಿಳಿ ಹುಲಿಯೊಂದು ಅಸ್ವಸ್ಥಗೊಂಡಂತೆ ಕಾಣಿಸಿಕೊಂಡಿದ್ದುನಿರ್ವಾಹಕರು ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಾಣಿಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಕೆ ಪ್ರಾಣ ಉಳಿಸಲು ಜೀವ ಪಣಕ್ಕಿಟ್ಟ ಬಾಲಕ; 40 ಅಡಿ ಆಳದ ಬಾವಿಗಿಳಿದು ರಕ್ಷಣೆ!

ಮೇಕೆಯನ್ನು ರಕ್ಷಿಸಲು 40 ಅಡಿ ಆಳದ ಬಾವಿಗಿಳಿದ ಬಾಲಕ: ಇಲ್ಲಿದೆ ವಿಡಿಯೊ!

Viral Video: ಬಿಹಾರದ ಬಾಲಕನೊಬ್ಬ ಮಾನವೀಯತೆಯನ್ನು ಮೆರೆದಿರುವ ಘಟನೆ ಎಲ್ಲರನ್ನು ಮೆಚ್ಚುಗೆ ಗೊಳಿಸುವಂತೆ ಮಾಡಿದೆ. ಆಳವಾದ ಬಾವಿಗೆ ಬಿದ್ದ ಮೇಕೆ ಮರಿಯನ್ನು ಬಾಲಕನೊಬ್ಬ ಧೈರ್ಯದಿಂದ ರಕ್ಷಿಸಿದ ಘಟನೆ ಮೋತಿಹಾರಿ ಜಿಲ್ಲೆಯ ಪಹಾರ್‌ಪುರದಲ್ಲಿ ನಡೆದಿದೆ. ಬಾಲಕನು ತನ್ನ ಜೀವವನ್ನು ಲೆಕ್ಕಿಸದೆ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯನ್ನು ರಕ್ಷಣೆ ಮಾಡಿದ್ದಾನೆ..

ವಿಶ್ವವನ್ನೇ ಭಾವುಕವಾಗಿಸಿದ ಜಪಾನ್‌ನ ಕೋತಿ ʼಪಂಚ್‌ʼ ಈಗ ಸಾರ್ವಜನಿಕ ಜಾಗೃತಿಯ ರಾಯಭಾರಿ; ಗಮನಸೆಳೆದ ಮುಂಬೈ ಪೊಲೀಸರ ನಡೆ

ಬೇಬಿ ಮಂಕಿ 'ಪಂಚ್'ನಿಂದ ಸಾರ್ವಜನಿಕ ಜಾಗೃತಿ

Viral News: ಜಪಾನ್‌ನ ಏಳು ತಿಂಗಳ ಪುಟ್ಟ ಮಂಗ ಪಂಚ್ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಓಡಾಡುತ್ತಿದೆ. ಈ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಮೃಗಾಲಯದ ಪಾಲಕರು ನೀಡುತ್ತಿದ್ದ ಗೊಂಬೆಯನ್ನೇ ತಾಯಿ ಎಂದು ಅಪ್ಪಿಕೊಂಡು ಬದುಕುತ್ತಿರುವ ಪಂಚ್‌ನ ವಿಡಿಯೊ ವೈರಲ್‌ ಆಗಿದೆ.

ಜಪಾನ್‌ನಲ್ಲಿ ಯೋಗಿ ಆದಿತ್ಯನಾಥ್ ಕಾಲು ಮುಟ್ಟಿ ಶ್ಲೋಕ ಪಠಿಸಿದ ಬಾಲಕ; ವಿಡಿಯೋ ನೋಡಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ಶ್ಲೋಕ ಪಠಿಸಿದ ಬಾಲಕ!

Viral Video: ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಬಳಿ ಮಗುವೊಂದು ಕ್ಯೂಟ್ ಆಗಿ ಚಿಪ್ಸ್ ಬೇಕು ಎಂದು ಕೇಳಿಕೊಂಡಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಜಪಾನ್ ನಲ್ಲಿ ಭಾರತೀಯ ಮೂಲದ ಬಾಲಕನೊಬ್ಬ ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿ, ಶ್ಲೋಕಗಳನ್ನು ಪಠಿಸಿದ ಘಟನೆಯೊಂದು ನಡೆದಿದೆ. ಈ ವಿಡಿಯೊ ಭಾರೀ ವೈರಲ್ ಆಗಿದ್ದು ಬಳಕೆದಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

90ರ ಹರೆಯದಲ್ಲಿಯೂ ಕುಂದಿಲ್ಲ ಉತ್ಸಾಹ, ಅಜ್ಜಿಯ ಕಾರ್‌ ಡ್ರೈವಿಂಗ್‌ ಕ್ರೇಜ್‌ಗೆ ನೆಟ್ಟಿಗರು ಫಿದಾ; ವಿಡಿಯೋ ನೋಡಿ

ಕಾರು ಓಡಿಸಿದ 90ರ ಹರೆಯದ ಅಜ್ಜಿ; ಸಾಹಸ ಕಂಡು ಫಿದಾ ಆದ ನೆಟ್ಟಿಗರು!

Viral Video: ಜಮ್ಮು ಕಾಶ್ಮೀರದ ಕಥುವಾ ಬೀದಿಗಳಲ್ಲಿ 90 ವಯಸ್ಸಿನ ಅಜ್ಜಿಯೊಬ್ಬರು ಆತ್ಮವಿಶ್ವಾಸ ದಿಂದ ಕಾರು ಡ್ರೈವಿಂಗ್ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಭಾರೀ ಟ್ರಾಫಿಕ್‌ ನಡುವೆಯೂ ವೃದ್ಧ ಮಹಿಳೆಯೊಬ್ಬರು ಸುಜುಕಿ ಆಲ್ಟೋಕಾರನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸಿದ್ದಾರೆ. ಸದ್ಯ ಈ ಅಜ್ಜಿಯ ಧೈರ್ಯಕ್ಕೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕಂಪನಿಯ ಆರ್ಥಿಕ ಲಾಭದಲ್ಲಿ ಉದ್ಯೋಗಿಗಳಿಗೆ 236 ಕೋಟಿ ರೂ. ಬೋನಸ್ ನೀಡಿದ ಮಾಲೀಕ!

ಚೀನೀ ಸಂಸ್ಥೆಯ ಬೋನಸ್ 236 ಕೋಟಿ: ಉದ್ಯಮಿಯ ನಡೆಗೆ ಭಾರೀ ಮೆಚ್ಚುಗೆ!

Viral News: ಚೀನಾದ ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿಯ ಸಂಸ್ಥಾಪಕ ಕುಯಿ ಪೀಜುನ್ ಉದ್ಯೊಗಿಗಳಿಗೆ ಅಪಾರ ಮೌಲ್ಯದ ಹಣ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಕಂಪನಿಯ ಕೆಲಸ ಗಾರರಿಗೆ 26 ಮಿಲಿಯನ್ ಯುಎಸ್ ಡಾಲರ್ (236 ಕೋಟಿ ರೂ.) ಹಣ ನೀಡುವ ಮೂಲಕ ಅಚ್ಚರಿ ಪಡಿಸಿದ್ದಾರೆ. ಸದ್ಯ ಕಂಪನಿಯ ಬೋನಸ್ ಮೊತ್ತ ಕಂಡು ಇಡೀ ಜಗತ್ತೇ ಅಚ್ಚರಿಪಟ್ಟಿದೆ.

ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ಬೀದಿಬದಿ ವ್ಯಾಪಾರಿ; ಶಾಕಿಂಗ್‌ ವಿಡಿಯೊ ಕ್ಯಾಮರಾದಲ್ಲಿ ಸೆರೆ

ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ಬೀದಿಬದಿ ವ್ಯಾಪಾರಿ

Viral Video: ಮುಂಬೈಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ಇಲಿ ವಿಷವನ್ನು ಹಣ್ಣುಗಳಿಗೆ ಸವರುತ್ತಿರುವುದು ಕಂಡು ಬಂದಿದೆ. ಸದ್ಯ ಆತನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಚರ್ಚೆ ಹುಟ್ಟುಹಾಕಿದೆ. ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಇಬ್ಬರನ್ನು ಬಂಧಿಸಲಾಗಿದೆ.

ಹಣ ಉಳಿಸಲು ವಿಮಾನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ಮಾಡಿದ ಕುಟುಂಬ: ಸ್ಮಾರ್ಟ್ ಪ್ಲ್ಯಾನಿಂಗ್‌ ಎಂದ ನೆಟ್ಟಿಗರು

ಏರ್‌ಪೋರ್ಟ್‌ಗೆ ಪಿಜ್ಜಾ ಆರ್ಡರ್ ಮಾಡಿದ ʼಸ್ಮಾರ್ಟ್‌ʼ ಕುಟುಂಬ

Viral News: ಇಲ್ಲೊಂದು ಅಮರಿಕ ಕುಟುಂಬವು ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುವ ಬದಲು ಆನ್‌ಲೈನ್ ಮೂಲಕ ಪಿಜ್ಜಾ ಆರ್ಡರ್ ಮಾಡಿ ಸವಿದಿದೆ. ಈ ಕುಟುಂಬವು ನೇರವಾಗಿ ಡೊಮಿನೋಸ್ ಪಿಜ್ಜಾವನ್ನು ವಿಮಾನ ನಿಲ್ದಾಣಕ್ಕೆ ಆರ್ಡರ್ ಮಾಡಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್‌ನಿಂದ ಯುವ ಜೋಡಿಗೆ ಬೆದರಿಕೆ: ನೈತಿಕ ಪೋಲಿಸ್‌ಗಿರಿಗೆ ಬೇಸರ ಹೊರಹಾಕಿದ ಯುವಕ

ಖಾಸಗಿ ಬಸ್‌ನಲ್ಲಿ ಯುವಜೋಡಿಗೆ ಕಂಡಕ್ಟರ್‌ ಕಿರುಕುಳ

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಯುವ ಜೋಡಿಗೆ ಬಸ್ ಕಂಡಕ್ಟರ್ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಯುವಕ ಮತ್ತು ಯುವತಿ ಒಂದೇ ಬರ್ತ್‌ ಬುಕ್‌ ಮಾಡಿದ್ದು, ಅವರು ಪ್ರತ್ಯೇಕವಾಗಿ ಸೀಟ್‌ನಲ್ಲಿ ಕುಳಿತು ಕೊಳ್ಳಬೇಕೆಂದು ಕಂಡಕ್ಟರ್ ಒತ್ತಾಯಿಸಿದ್ದು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಯುವಕ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾನೆ.

ಶಾಕಿಂಗ್‌; ರೋಗಿಯ ಕತ್ತರಿಸಿದ ಕಾಲನ್ನು ಹೊತ್ತು ಬೀದಿಗಳಲ್ಲಿ ಅಲೆದಾಡಿದ ನಾಯಿ

ಆಸ್ಪತ್ರೆಗೆ ನುಗ್ಗಿ ರೋಗಿಯ ಕಾಲು ಹೊತ್ತೊಯ್ದ ನಾಯಿ!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಚಮಿಯಾನಾದಲ್ಲಿರುವ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್ ಆಸ್ಪತ್ರೆಯಲ್ಲಿ ನಡೆದ ಭಾರಿನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಕತ್ತರಿಸಲಾದ 61 ವರ್ಷದ ರೋಗಿಯ ಕಾಲನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾಗಿದ್ದರೂ, ಅದನ್ನು ಸರಿಯಾಗಿ ಸಂಗ್ರಹಿಸದೆ ಸ್ಟೋರ್ ರೂಂನಲ್ಲಿ ಇಡಲಾಗಿತ್ತು. ಸ್ಟೋರ್ ರೂಂ ಬಾಗಿಲು ಲಾಕ್ ಮಾಡದ ಕಾರಣ ಬೀದಿ ನಾಯಿಯೊಂದು ಒಳನುಗ್ಗಿ, ಕತ್ತರಿಸಿದ ಕಾಲನ್ನು ಕಚ್ಚಿಕೊಂಡು ಆಸ್ಪತ್ರೆ ಹೊರಭಾಗದಲ್ಲಿ ಓಡಾಡಿದ ದೃಶ್ಯ ವೈರಲ್ ಆಗಿದೆ.

Viral News: ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!

ಹುಲಿಗಳ ಆರೋಗ್ಯಕ್ಕಾಗಿ ಉಪವಾಸ ನಿಯಮ ಜಾರಿಗೆ ತಂದ ಉದ್ಯಾನವನ!

ಪ್ರಾಣಿಗಳು ಉಪವಾಸ ಮಾಡುವುದನ್ನು ಕೇಳಿದ್ದೀರಾ? ಈಗ ಚೀನಾದ ಹಿಲೊಂಗ್‌ ಜಿಯಾಂಗ್ ಪ್ರಾಂತ್ಯದ ಸೈಬೀರಿಯನ್ ಟೈಗರ್ ಪಾರ್ಕ್ ನಲ್ಲಿ ಸುಮಾರು ‌200 ಸೈಬೀರಿಯನ್ ಹುಲಿಗಳಿಗೆ ಮಧ್ಯಂತರ ಉಪವಾಸ ನಿಯಮವನ್ನು ಜಾರಿಗೆ ತರಲಾಗಿದೆ..ಈ ಉಪವಾಸವು ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ನಡೆಯಲಿದೆ.

ವಂದೇ ಭಾರತ್ ರೈಲಿನಲ್ಲಿ ಕಸ ಹಾಕಿದ ಹೆಕ್ಕಿಸಿದ ತಂದೆ; ಶ್ಲಾಘನೆ ವ್ಯಕ್ತ ಪಡಿಸಿದ ನೆಟ್ಟಿಗರು!

ರೈಲಿನಲ್ಲಿ ಚಿಪ್ಸ್ ಚೆಲ್ಲಿದ ಬಾಲಕ;ಮಗನಿಂದಲೇ ಕಸ ವಿಲೇವಾರಿ ಮಾಡಿಸಿದ ತಂದೆ!

Viral Video: ಇಲ್ಲೊಬ್ಬ ತಂದೆ ತನ್ನ ಎರಡು ವರ್ಷದ ಪುಟ್ಟ ಮಗನಿಗೆ ನಾಗರಿಕ ಪ್ರಜ್ಞೆಯ ಪಾಠ ಮಾಡಿಸಿ ದ್ದಾರೆ. ವಂದೇ ಭಾರತ್ ರೈಲಿನ ನೆಲದಲ್ಲಿ ಬಾಲಕನು ಚಿಪ್ಸ್ ಚೆಲ್ಲಿರುತ್ತಾನೆ. ಇದನ್ನು ಗಮನಿಸಿದ ತಂದೆಯೂ ಮಗನಿಗೆ ನಮ್ಮ ಕಸವನ್ನು ನಾವೇ ಕ್ಲೀನ್ ಮಾಡಬೇಕು ಎಂದು ಬುದ್ದಿಮಾತು ಹೇಳಿ ಮಗನಿಂದಲೇ ಕಸವನ್ನು ವಿಲೇವಾರಿ ಮಾಡಿಸಿದ್ದಾರೆ. ಸದ್ಯ ಈ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಹುಡುಗ- ಹುಡುಗಿ ಜೊತೆಯಾಗಿ ನಿಂತರೆ ವಿಶ್ವವಿದ್ಯಾಲಯದಲ್ಲೇ ಮದುವೆ! ವೈರಲ್‌ ಆಗ್ತಿದೆ ಕಾಲೇಜು ಹೊರಡಿಸಿದ ಸುತ್ತೋಲೆ

ಹುಡುಗ - ಹುಡುಗಿ ಒಟ್ಟಿಗೆ ನಿಂತರೆ ಮದುವೆ: ವೈರಲ್ ಆಗ್ತಿದೆ ಈ ಪೋಸ್ಟ್!

‌Viral News: ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ರಂಜಾನ್ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿಶೇಷ ನೋಟೀಸ್ ವೊಂದನ್ನು ಹೊರಡಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ನಿಲ್ಲುವುದು ಕಂಡು ಬಂದರೆ ಅಂತಹ ಜೋಡಿಗೆ ತಕ್ಷಣ ಮದುವೆ ಮಾಡಿಸುವುದಾಗಿ ಹೇಳಿಕೊಂಡಿದೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

400 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಸೋಶಿಯಲ್ ಮೀಡಿಯಾ ತಾರೆ ಇದೀಗ ಗರ್ಭಿಣಿ!

ನಾನು ಗರ್ಭಿಣಿ..!; ಚರ್ಚೆಗೀಡು ಮಾಡಿದ ಬೋನಿ ಬ್ಲೂ ಹೇಳಿಕೆ

ಖ್ಯಾತ ಅಡಲ್ಟ್ ಸೋಶಿಯಲ್ ಮೀಡಿಯಾ ತಾರೆ ಬೋನಿ ಬ್ಲೂ (ಟಿಯಾ ಎಮ್ಮಾ ಬಿಲಿಂಗರ್) ಇತ್ತೀಚೆಗೆ ತಾನು ಗರ್ಭಿಣಿಯಾಗಿರುವುದಾಗಿ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಸುಮಾರು 400 ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ ಬಳಿಕ ಗರ್ಭಧಾರಣೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಮದುವೆಯಾದ ಕೆಲವೇ ಗಂಟೆಗಳಲ್ಲಿ ದಾಂಪತ್ಯದಲ್ಲಿ ಬಿರುಕು: ಪತಿಯನ್ನು ಬಿಟ್ಟು ಪ್ರಿಯಕರನನ್ನೇ ವರಿಸಲು ಹಠ ಹಿಡಿದ ನವವಧು

ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತಿ ತೊರೆದ ವಧು

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಿಚಿತ್ರ ಘಟನೆ ನಡೆದಿದೆ. ನವವಧು ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಜೀವನ ಸಾಗಿಸುವುದಾಗಿ ಘೋಷಿಸಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಕುಟುಂಬದ ಒತ್ತಾಯದಿಂದ ಮದುವೆಗೆ ಒಪ್ಪಿದ್ದೆ ಎಂದು ಆಕೆ ಹೇಳಿದ್ದು, ಪೊಲೀಸರು ಎರಡೂ ಕುಟುಂಬಗಳ ಮಧ್ಯೆ ಸಮಾಲೋಚನೆ ನಡೆಸಿದರೂ ತನ್ನ ನಿರ್ಧಾರ ಬದಲಾಯಿಸಲಿಲ್ಲ ಎನ್ನಲಾಗಿದೆ.

ಪಾನಿಪುರಿ ತಯಾರಿಸಲು ವಾಟರ್ ಗನ್ ಬಳಸಿದ ವ್ಯಾಪಾರಿ; ಕ್ರಿಯೇಟಿವಿಟಿಗೆ ಫಿದಾ ಆದ ನೆಟ್ಟಿಗರು!

ಮುಂಬೈನ ಸ್ಪೆಷಲ್ ಗೋಲ್‌ಗಪ್ಪಾ ಈಗ ಫುಲ್ ವೈರಲ್!

Viral Video: ಮುಂಬೈನ ಬೀದಿ ಆಹಾರವು ಅದರ ವಿಭಿನ್ನವಾದ ಪರಿಮಳ ಮತ್ತು ರುಚಿಗೆ ಹೆಸರು ವಾಸಿಯಾಗಿದೆ. ಇದೀಗ ಮುಂಬೈ ಮೂಲದ ಪಾನಿಪುರಿ ಮಾರಾಟಗಾರನೊಬ್ಬ ಸಾಂಪ್ರದಾಯಿಕ ವಿಧಾನ ಬಿಟ್ಟು ಬಣ್ಣ ಬಣ್ಣದ ವಾಟರ್ ಗನ್ ಬಳಸಿ ಪಾನಿ ಪುರಿ ಮಾರಾಟ ಮಾಡುತ್ತಿದ್ದಾನೆ.

ಮದುವೆ ಹಾಲ್‌ನಿಂದ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಧು: ನೆಟ್ಟಿಗರಿಗೆ ಆಕೆಯ ವಯಸ್ಸಿನ ಬಗ್ಗೆ ಅನುಮಾನ

10ನೇ ತರಗತಿ ಪರೀಕ್ಷೆಗೆ ವಧುವಿನ ಆಲಂಕಾರದಲ್ಲೇ ಹಾಜರಾದ ಯುವತಿ

Viral Video: ಮದುವೆ ಸಂಭ್ರಮದ ನಡುವೆಯೂ ವಧು ಒಬ್ಬಳು ಪರೀಕ್ಷೆ ಬರೆಯಲು ಅದೇ ಧಿರಿಸಿನಲ್ಲಿ ಸಾಲೆಗೆ ಬಂದ ಘಟನೆ ಬಿಹಾರದ ಗಯಾ ಜಿಲ್ಲೆಯ ಶೇರ್ಘಾಟಿನಲ್ಲಿ ನಡೆದಿದೆ. ಮದುಮಗಳು ಕೆಂಪು ಬಣ್ಣದ ವಧುವಿನ ಉಡುಪನ್ನು ಧರಿಸಿ, ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾಳೆ.

Loading...