ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

21ನೇ ಶತಮಾನದಲ್ಲೂ ಧಾರುಣ ಸ್ಥಿತಿ; ವಾಹನ ಸಂಚಾರಕ್ಕೆ ರಸ್ತೆ ಇಲ್ಲದೆ ಮಂಚದ ಮೇಲೆ ಮಲಗಿಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು!

ರಸ್ತೆ ಸಮಸ್ಯೆಯಿಂದ ಅರ್ಧ ದಾರಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

Viral Video; ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಸ್ತೆ ಕೊರತೆ ಕಾರಣದಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಸಿಗದೆ ದಾರಿ ಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಾಗರಿಕ ಪ್ರಜ್ಞೆಯ ಕೊರತೆ: ವಂದೇ ಭಾರತ್ ರೈಲಿನಲ್ಲಿ ಫುಲ್‌ ವಾಲ್ಯೂಮ್‌ನಲ್ಲಿ ವಿಡಿಯೊ ನೋಡುವ ʼಮಹಾನುಭಾವರುʼ

ವಂದೇ ಭಾರತ್ ರೈಲಿನಲ್ಲಿ ಸ್ಪೀಕರ್ ಹಾಕಿ ಗದ್ದಲ: ಪ್ರಯಾಣಿಕರ ಆಕ್ರೋಶ

Viral Video: ಸಾರ್ವಜನಿಕವಾಗಿ ಶಿಸ್ತು ಕಾಪಾಡದಿರುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು, ಜನ ಸಾಮಾನ್ಯರಿಗೆ ತೊಂದರೆ ಎಸಗುವುದು ಹೀಗೆ ನಾಗರಿಕ ಪ್ರಜ್ಞೆ ಕೊರತೆಯ ಹಲವು ವಿಡಿಯೊಗಳು ವೈರಲ್ ಆಗುತ್ತಿವೆ. ಇದೀಗ ವಂದೇ ಭಾರತ್ ರೈಲಿನಲ್ಲಿ ದೊಡ್ಡ ವಾಲ್ಯೂಮ್‌ ಮೂಲಕ ರೀಲ್ಸ್ ನೋಡುವವರ ವಿರುದ್ಧ ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಯಶಸ್ಸು ಎಂದರೆ ಇದು: ಒಂದು ಕಾಲದಲ್ಲಿ ಕಾಲೇಜ್‌ ಫೀಸ್ ಕಟ್ಟಲೂ ಹಣವಿಲ್ಲದೆ ಅಮ್ಮನ ಬಳೆ ಮಾರಾಟ ಮಾಡಬೇಕಾದ ಸ್ಥಿತಿ; ಇಂದು 1.9 ಕೋಟಿ ರುಪಾಯಿ ಸಂಬಳ!

ಕಾಲೇಜ್‌ ಫೀಸ್‌ಗಾಗಿ ತಾಯಿಯ ಚಿನ್ನ ಮಾರಾಟ; ಮಗನ ಭಾವನಾತ್ಮಕ ಪೋಸ್ಟ್

Viral News: ಕೆಲವರು ಹುಟ್ಟಿನಿಂದಲೇ ಶ್ರಿಮಂತರಾಗಿರುವುದಿಲ್ಲ. ಬಡತನವಿದ್ದರೂ ಶ್ರಮಪಟ್ಟು ಸಾಧನೆ ಮಾಡಿದ ಅನೇಕರಿದ್ದಾರೆ. ಇದೀಗ ಬೆಂಗಳೂರಿನ ಯುವಕನೊಬ್ಬ ಮೈಕ್ರೋಸಾಫ್ಟ್‌ನಲ್ಲಿ 1.9 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾನೆ. ಈ ಯಶಸ್ಸಿನ ಹಿಂದೆ ಅಡಗಿದ ನೋವಿನ ಘಟನೆಯೊಂದನ್ನು ಶೇರ್ ಮಾಡಿದ್ದಾನೆ. ತನ್ನ ಇಂದಿನ ಸಾಧನೆಗೆ ಬೆಂಬಲ ನೀಡಿದವರು ಪೋಷಕರು, ಅವರ ತ್ಯಾಗವನ್ನು ಮರೆಯುವಂತಿಲ್ಲ ಎಂದು ಈ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.

Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು

ಗಾಯಗೊಂಡಂತೆ ನಟಿಸಿ ಐಫೋನ್ ಕದ್ದ ಕಳ್ಳರು: ವಿಡಿಯೊ ವೈರಲ್‌

Viral News: ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೇ ಕೇಡು ಬಗೆಯುವ ಅನೇಕರಿದ್ದಾರೆ. ತೆಲಂಗಾಣದಸ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಇಂತಹದ್ದೇ ಘಟನೆ ಸದ್ಯ ಅನೇಕರ ನಿದ್ದೆಗೆಡಿಸಿದೆ. ಸಹಾಯ ಮಾಡೋದೇ ತಪ್ಪಾ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಪಘಾತದ ನಾಟಕವಾಡಿ ಸಹಾಯ ಮಾಡಿದ ವ್ಯಕ್ತಿಯಿಂದಲೇ ದುಬಾರಿ ಮೊತ್ತದ ಮೊಬೈಲ್ ಕದ್ದ ಘಟನೆಯೊಂದು ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ.

ಹಳಿಯಲ್ಲಿ ತಿರುಗಾಡುತ್ತಿದ್ದ ಬೀದಿನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್; ಮಾನವೀಯತೆಗೆ ನೆಟ್ಟಿಗರು ಫಿದಾ!

ಹಳಿಯಲ್ಲಿದ್ದ ಬೀದಿ ನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್!

Viral Video: ಲೋಕಲ್ ಟ್ರೈನ್ ನ ಪೈಲೆಟ್ ವೊಬ್ಬರು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ರೈಲು ಪ್ಲಾಟ್‌ಫಾರ್ಮ್ ಸಮೀಪಿಸುತ್ತಿದ್ದಾಗ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಹಳಿಗಳ ಮೇಲೆ ಅಲೆದಾಡುತ್ತಿದ್ದು ಇದನ್ನು ಗಮನಿಸಿದ ಲೋಕೋ ಪೈಲಟ್ ಟ್ರೈನ್ ನಿಲ್ಲಿಸಿ ನಾಯಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲೊಕೊ ಪೈಲಟ್ ನ ಕೆಲಸಕ್ಕೆ ಎಲ್ಲರು ಫಿದಾ ಆಗಿದ್ದಾರೆ..

'ಮುಕಾಬ್ಲಾ' ಹಾಡಿಗೆ ಶಿಕ್ಷಕಿಯ ಮಸ್ತ್ ಡ್ಯಾನ್ಸ್ : ಪ್ರಭುದೇವ ಸ್ಟೆಪ್ ಮೀರಿಸುವಂತಿದೆ ಎಂದ ನೆಟ್ಟಿಗರು!

ಒಡಿಶಾದ ಶಿಕ್ಷಕಿಯ ಭರ್ಜರಿ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

Viral Video; ಒಡಿಶಾ ಮೂಲದ ಶಿಕ್ಷಕಿ ಮೋತಿ ಬೆಹೆರಾ ಅವರು ಐಕಾನಿಕ್ ಹಾಡಿನ ಮುಕಾಬ್ಲಾ ವೆಂಟ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸರ್ ಪ್ರಭುದೇವ ಅವರ ಸಿಗ್ನೇಚರ್ ಸಾಂಗ್ ಗೆ ಸ್ಟೆಪ್ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಈ ಶಿಕ್ಷಕಿ ಮಾತ್ರ ಜಬರ್ದಸ್ ಡ್ಯಾನ್ಸ್ ಮಾಡಿ ನೋಡುಗರನ್ನು ಮೂಕ ವಿಸ್ಮಿತರಾಗಿ ಮಾಡಿದ್ದಾರೆ.

ಪಾಕಿಸ್ತಾನಿ 'ಫೇರ್‌ನಸ್ ಕ್ರೀಮ್' ಬಳಸಿದ 18 ಭಾರತೀಯ ಮಹಿಳೆಯರಿಗೆ ಕಿಡ್ನಿ ಸಮಸ್ಯೆ! ಎಚ್ಚರಿಕೆ ನೀಡಿದ ಆರೋಗ್ಯ ತಜ್ಞರು!

ಪಾಕಿಸ್ತಾನಿ ಕ್ರೀಮ್ ಬಳಸಿ ಕಿಡ್ನಿ ವೈಫಲ್ಯಕ್ಕೆ ತುತ್ತಾದ ಮಹಿಳೆಯರು!

Viral News: ಮೀಶೋ ಆ್ಯಪ್ ನಲ್ಲಿ ಸಿಗುವ ಪಾಕಿಸ್ತಾನಿ ಮೂಲದ "ಗೋರಿ ಬ್ಯೂಟಿ ಕ್ರೀಮ್ "ಬಳಸಿದ ಮಹಿಳೆಯರು ಇದೀಗ ಅನಾರೋಗ್ಯಕ್ಕೆ ತುತ್ತಾದ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಮೀಶೊದಲ್ಲಿ ಲಭ್ಯವಿರುವ ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟ ಗೋರಿ ಬ್ಯೂಟಿ ಕ್ರೀಮ್ ಬಳಸಿದ ನಂತರ 18 ಮಹಿಳೆಯರಿಗೆ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿ ಕೊಂಡಿವೆ ಎಂದು ವರದಿಯಾಗಿದೆ. ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‌ಬೆಂಗಳೂರಿನಲ್ಲಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ತಡೆದ ಕಿಡಿಗೇಡಿಗಳು; ಬೈಕ್‌ ಸ್ಟಂಟ್‌ ವಿಡಿಯೋ ವೈರಲ್‌

ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ತಡೆದ ಕಿಡಿಗೇಡಿಗಳು

ಬೆಂಗಳೂರಿನಲ್ಲಿ ಶನಿವಾರ ಮುಂಜಾನೆ ಬೈಕ್ ಸವಾರರ ಗುಂಪೊಂದು ಆಂಬ್ಯುಲೆನ್ಸ್‌ನ ಮಾರ್ಗವನ್ನು ತಡೆದು ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಹೆಡ್‌ಲೈಟ್‌ ಇಲ್ಲದೆ ಮೊಬೈಲ್‌ ಟಾರ್ಚ್‌ನಲ್ಲೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಚಾಲನೆ; ವಿಡಿಯೋ ವೈರಲ್‌

ಹೆಡ್‌ಲೈಟ್‌ ಇಲ್ಲದೆ ಮೊಬೈಲ್‌ ಟಾರ್ಚ್‌ನಲ್ಲೇ ಸಾರಿಗೆ ಬಸ್‌ ಚಾಲನೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)ಕ್ಕೆ ಸೇರಿದ ಬಸ್​ವೊಂದನ್ನು ಹೆಡ್​​ಲೈಟ್​​ಗಳು ಕಾರ್ಯನಿರ್ವಹಿಸದ ಸ್ಥಿತಿಯಲ್ಲೇ ಚಲಾಯಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ, ಬಸ್ ನಿರ್ವಾಹಕ ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ಟಾರ್ಚ್ ಹಾಕುವ ದೃಶ್ಯ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೊಮ್ಯಾಟೋದಲ್ಲಿ ಡೆಲಿವರಿ ಸಿಗದಿದ್ದಾಗ ಹಸಿದಿದ್ದ ಮಹಿಳೆಗೆ ಆಹಾರ ಕಳುಹಿಸಿ ಮಾನವೀಯತೆ ತೋರಿದ ಹೋಟೆಲ್ ಮಾಲೀಕ!

ಹಸಿದಿದ್ದ ಮಹಿಳೆಗೆ ಆಹಾರ ಕಳುಹಿಸಿ ಸತ್ಕಾರ ಮಾಡಿದ ರೆಸ್ಟೋರೆಂಟ್ ಮಾಲೀಕ

Viral News: ಹೋಟೆಲ್ ಮಾಲೀಕರೊಬ್ಬರು ಮಹಿಳೆಯೊಬ್ಬರಿಗೆ ತೋರಿದ ಔದರ್ಯ ಎಲ್ಲರ ಮನ ಗೆಲ್ಲುವಂತೆ ಮಾಡಿದೆ..ಮಹಿಳೆಯೊಬ್ಬರಿಗೆ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಕೈ ಕೊಟ್ಟಾಗ ಹೊಟೇಲ್ ಮಾಲೀಕರೊಬ್ಬರು ತನ್ನ ಮನೆಯವರಂತೆ ಕಾಳಜಿ ವಹಿಸಿ ಆಹಾರ ಕಳುಹಿಸಿ ಕೊಟ್ಟಿದ್ದಾರೆ. ಈ ಅತಿಥ್ಯದ ಬಗ್ಗೆ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಮೂರ್ಖತನದ ವರ್ತನೆ: ಅಮರನಾಥ ಯಾತ್ರೆಗೆ ತೆರಳಿ ಹಿಮನದಿಗೆ ಕೋಲಿನಿಂದ ಚುಚ್ಚಿದ ವ್ಯಕ್ತಿ! ನೆಟ್ಟಿಗರು ಕಿಡಿ

ಅಮರನಾಥ ಯಾತ್ರೆಯಲ್ಲಿ ಹಿಮನದಿಗೆ ಕೋಲಿನಿಂದ ಚುಚ್ಚಿದ ಕಿಡಿಗೇಡಿ!

Viral News: ಸಾರ್ವಜನಿಕ ಸ್ಥಳದಲ್ಲೇ ಮನಬಂದಂತೆ ವರ್ತಿಸಿ ಉಪಯೋಗಕಾರಿ ವಸ್ತುಗಳನ್ನು ಹಾಳುಗೆಡವಿದ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಅಮರನಾಥ ಯಾತ್ರೆಯಲ್ಲಿ ಭಕ್ತನೊಬ್ಬ ಹಿಮನದಿಗೆ ಕೋಲಿನಿಂದ ಚುಚ್ಚಿದ್ದಾನೆ. ಇಲ್ಲಿ ಆತ ಗೌರವದಿಂದ ನಡೆದುಕೊಳ್ಳುವ ಬದಲಿಗೆ ಬೇಜ ವಾಬ್ದಾರಿ ವರ್ತನೆ ತೋರಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ.

ರೈಲು ಪ್ರಯಾಣದುದ್ದಕ್ಕೂ ಲೈಂಗಿಕ ಕಿರುಕುಳ: ಪೋಸ್ಟ್ ಶೇರ್ ಮಾಡಿ ಬೇಸರ ಹೊರಹಾಕಿದ ಯುವತಿ

ಬಿಹಾರದ ರೈಲಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ

Viral Video: ಸಾರ್ವಜನಿಕ ಸ್ಥಳದಲ್ಲಿ, ಪ್ರಯಾಣ ಸ್ಥಳದಲ್ಲಿ ಮಹಿಳೆಯರು ಭಯದಿಂದಲೇ ಸಂಚಾರ ಮಾಡಬೇಕಾದ ಸಂದರ್ಭ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಹ ಪ್ರಯಾಣಿಕರು ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ತಾನು ಪ್ರಯಾಣದುದ್ದಕ್ಕೂ ಕಿರುಕುಳವನ್ನು ಅನುಭವಿಸುತ್ತಲೇ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ನಿ ವಸ್ತುವಿನ ಬೆಲೆ ಕೇಳುತ್ತಿದ್ದಂತೆ ಪತಿ ತಕ್ಷಣವೇ ಪರ್ಸ್ ಕೈಗೆತ್ತಿಕೊಂಡರು: ದಕ್ಷಿಣ ಕೊರಿಯಾ ಅಧ್ಯಕ್ಷರ ನಡೆಗೆ ನೆಟ್ಟಿಗರು ಫಿದಾ!

ದಕ್ಷಿಣ ಕೊರಿಯಾ ಅಧ್ಯಕ್ಷ ಹಾಗೂ ಪತ್ನಿಯ ಸಾಮರಸ್ಯಕ್ಕೆ ನೆಟ್ಟಿಗರು ಫಿದಾ

Viral Video: ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರ ನಡೆಯೊಂದು ಎಲ್ಲರ ಹೃದಯ ಗೆದ್ದಿದ್ದು ದಂಪತಿಗಳ ನಡುವಿನ ಬಂಧ ಹೀಗಿರಬೇಕೆಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಪತ್ನಿ ಕಿಮ್ ಹ್ಯೆ-ಕ್ಯುಂಗ್ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡಿದ್ದರು. ಆದರೆ ಪತ್ನಿಯೂ ಅಂಗಡಿ ಮಾಲೀಕನ ಬಳಿ ಯಾವುದೇ ವಸ್ತುವಿನ ಬೆಲೆಯೊಂದು ವಿಚಾರಿಸುತ್ತಿದ್ದಾಗ ಅವರ ಮಾತು ಮುಗಿಯುವ ಮುನ್ನವೇ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರು  ತಮ್ಮ ಜೇಬಿನಿಂದ ಹಣದ ಪರ್ಸ್ ತೆಗೆದು ಹಣ ಪಾವತಿಸಲು ಮುಂದಾಗಿದ್ದಾರೆ.

ವೇತನ ಹೆಚ್ಚಳಕ್ಕಾಗಿ ಜಾಬ್ ಬದಲಾಯಿಸಿ 3 ತಿಂಗಳಲ್ಲೇ ಕಂಪನಿಯಿಂದ ವಜಾಗೊಂಡ ಉದ್ಯೋಗಿ! ಪೋಸ್ಟ್ ನಲ್ಲಿ ಹೇಳಿದ್ದೇನು?

ಸಂಬಳ ಏರಿಕೆಗಾಗಿ ಕಂಪನಿ ಬದಲಾಯಿಸಿ, 3 ತಿಂಗಳಲ್ಲೇ ಜಾಬ್ ಕಳೆದುಕೊಂಡ ಉದ್ಯೋಗಿ

Viral News: ಹೆಚ್ಚಿನ ಸಂಬಳ ಅಥವಾ ವೈಯಕ್ತಿಕ ಕಾರಣದಿಂದ ಕೆಲವೊಮ್ಮೆ ಕೆಲಸ ಬದಲಾವಣೆ ಮಾಡಬೇಕಾದ ಸಂದರ್ಭ ಬರಬಹುದು.. ಆದರೆ ಇಂತಹ ನಿರ್ಧಾರಗಳು ಕೆಲವೊಮ್ಮೆ ನಮ್ಮ ಪರಿಸ್ಥಿತಿ ಯನ್ನು ಅತಂತ್ರ ಮಾಡಿಬಿಡಬಹುದು. ಇದಕ್ಕೆ ಪ್ರತಿಕೂಲವಾಗಿ ಹೆಚ್ಚಿನ ಸಂಬಳ ಪಡೆಯುವ ಉದ್ದೇಶ ದಿಂದ ಯುವಕನೊಬ್ಬ ಕೆಲಸ ಬದಲಾಯಿಸಿದ್ದು ಆದರೆ, ಕೆಲಸಕ್ಕೆ ಸೇರಿದ ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಅವರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆ ನಡೆದಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದರೂ ಸಿಗದ ಕೆಲಸ;  ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ

ಉದ್ಯೋಗ ಸಿಗದೆ ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ!

Viral News: ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ ಯಾವುದೇ ಕೆಲಸ ಸಿಕ್ಕದೆ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ದೈನಂದಿನ ಖರ್ಚುಗಳನ್ನು ನಿರ್ವಹಿ ಸಲು ಈ ಕೆಲಸ ಮಾಡಬೇಕಾಗಿ ಬಂತು, ಇಷ್ಟು ಶಿಕ್ಷಣ ಪಡೆದರೂ ತನಗೆ ಕೆಲಸ ಸಿಕ್ಕಿಲ್ಲ ಎಂದು ಆತ ಬೇಸರ ಹೊರ ಹಾಕಿದ್ದಾನೆ.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; ಭಾವುಕ ವಿಡಿಯೊ ವೈರಲ್

ಅಳಿಲಿನ ಅಂತ್ಯಸಂಸ್ಕಾರ ವೇಳೆ ಪುಟಾಣಿಗಳು ಕಣ್ಣೀರಿಟ್ಟ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುಟ್ಟ ಮಕ್ಕಳು ಅಳುತ್ತಾ, ಮೃತಪಟ್ಟ ಅಳಿಲಿಗೆ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದಕ್ಕೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು!; Video

ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಕ್ಕಳ ನಡುವೆ ರಗ್ಗಿನೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಕಂಡು ಹೆತ್ತವರು ಬೆಚ್ಚಿ ಬಿದ್ದಿದ್ದಾರೆ. ನಂತರ ಉರಗ ತಜ್ಞ ಆಗಮಿಸಿ, ಮಕ್ಕಳನ್ನು ರಕ್ಷಿಸಿ, ಹಾವನ್ನು ಸೆರೆ ಹಿಡಿದಿದ್ದಾರೆ.

'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್‌

ಉಚಿತ ಆಹಾರಕ್ಕಾಗಿ ಬೆಂಗಳೂರಿನ ರೆಸ್ಟೊರೆಂಟ್ ನಲ್ಲಿ ಮುಗಿಬಿದ್ದ ಜನ!

Viral Video: ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಉಚಿತ ಆಹಾರದ ಆಫರ್ ನೀಡಿದ್ದಕ್ಕೆ ಜನ ತುಂಬಿಹೋಗಿರುವ ಘಟನೆಯೊಂದು ನಡೆದಿದೆ‌. ರೆಸ್ಟೋರೆಂಟ್‌ ನಲ್ಲಿ 'ಉಚಿತ ಆಹಾರ'ಕ್ಕಾಗಿ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ವೈರಲ್ ಆಗಿದೆ..

ಸಂದರ್ಶನಕ್ಕೆ 40 ನಿಮಿಷ ಕಾಯಿಸಿ ಕ್ಷಮೆ ಕೇಳದ ಸಂಸ್ಥಾಪಕ; ಕೆಲಸವನ್ನೇ ತಿರಸ್ಕರಿಸಿದ ಬೆಂಗಳೂರು ಉದ್ಯಮಿ!

ಸಂಸ್ಥಾಪಕನ ನಡೆ ಕಂಡು ಕೆಲಸದ ಆಫರ್ ತಿರಸ್ಕಾರ ಮಾಡಿದ ಖ್ಯಾತ ಉದ್ಯಮಿ!

Viral News: ಇಲ್ಲೊಬ್ಬ ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು ಕಂಪನಿಯ ಸಿಇಒ 40 ನಿಮಿಷದ ವರೆಗೆ ಕಾಯಿಸಿದ ಘಟನೆ ನಡೆದಿದೆ. ಇಷ್ಟು ಸಮಯದವರೆಗೂ ಕಾಯಿಸಿದರೂ ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ ಇರುವ ಕಾರಣ ಕೆಲಸದ ಆಫರ್ ಅನ್ನೇ ಇವರು ನಿರಾಕರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬಡತನವಿದ್ದರೂ ನಗು ಮಾಸಿಲ್ಲ! ಬೆಳಿಗ್ಗೆ ರ‍್ಯಾಪಿಡೋ ರೈಡರ್‌, ಬಳಿಕ ಆಫೀಸ್‌, ಈ ವ್ಯಕ್ತಿಯ ಕಥೆ ಕೇಳಿದ್ರೆ ಮನಸ್ಸು ಮರುಗುವುದು ಗ್ಯಾರಂಟಿ

ಜೀವನ ನಿಭಾಯಿಸಲು ರ‍್ಯಾಪಿಡೋ ಜೊತೆಗೆ ಆಫೀಸ್‌ ಕೆಲಸ: ಪೋಸ್ಟ್ ನಲ್ಲಿ ಏನಿದೆ?

Viral News: ಕೆಲವೊಬ್ಬರು ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಳ್ಳುತ್ತಾರೆ.ಇದೆಲ್ಲದರ ನಡುವೆ ಜೀವನದಲ್ಲಿ ಬಹಳಷ್ಟು ನೊಂದಿದ್ದರೂ ನಗುತ್ತಾ ಬದುಕು ಸಾಗಿಸುವ ಅನೇಕ ಜನರನ್ನು ನಾವು ನೋಡಿ ರುತ್ತೇವೆ.ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ನಡೆದ ಈ ಘಟನೆಯೂ ಎಲ್ಲರ ಕಣ್ಣಲ್ಲಿ ನೀರು ತರಿಸು ವಂತೆ ಮಾಡಿದೆ. ಇಲ್ಲೊಬ್ಬರು ದಿನದ ಜೀವನ ಸಾಗಿಸಲು ರ‍್ಯಾಪಿಡೋ ಓಡಿಸಿ, ಮತ್ತೆ ಆಫೀಸ್ ಕೆಲಸಕ್ಕೆ ತೆರಳುವ ವ್ಯಕ್ತಿಯ ಜೀವನಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಮ, ಸೀತೆ, ಕೃಷ್ಣನಿಗೆ ಅವಮಾನ: ವಿಡಿಯೋ ತೆಗೆದುಹಾಕಲು ಧ್ರುವ ರಥೀಗೆ 15 ದಿನಗಳ ಗಡುವು

ಆಕ್ಷೇಪಾರ್ಹ ವಿಡಿಯೋ ತೆಗೆಯಲು ಧ್ರುವ ರಥೀಗೆ 15 ದಿನಗಳ ಗಡುವು

ಹಿಂದೂ ದೇವರಾದ ಶ್ರೀರಾಮ, ಸೀತೆ, ಶ್ರೀಕೃಷ್ಣ ಮಾಂಸಾಹಾರ, ಮದ್ಯ ಸೇವಿಸಿದ್ದಾರೆ ಎನ್ನುವ ವೀಡಿಯೊವನ್ನು ಯೂಟ್ಯೂಬರ್ ಧ್ರುವ ರಥೀ ಹಂಚಿಕೊಂಡಿದ್ದು, ಇದನ್ನು ತೆಗೆದು ಹಾಕಲು ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಶುಕ್ರವಾರ 15 ದಿನಗಳಲ್ಲಿ ವೀಡಿಯೊ ತೆಗೆದು ಹಾಕಲು ಆದೇಶಿಸಿದೆ.

ರಸ್ತೆ ಮಧ್ಯೆ ನೀರಿನಿಂದ ತುಂಬಿಹೋಗಿದ್ದ ಗುಂಡಿಗೆ ಬಿದ್ದ ಬೈಕ್; ದಂಪತಿಗೆ ಗಂಭೀರ ಗಾಯ!

ಗುಜರಾತ್ ನಲ್ಲಿ ಗುಂಡಿಗೆ ಬಿದ್ದ ದಂಪತಿಗಳ ಬೈಕ್: ವಿಡಿಯೊ ವೈರಲ್

Viral Video: ಗುಜರಾತ್ ನ ಜುನಾಗಢ್ ನಲ್ಲಿ ಭಾರಿ ಮಳೆಯ ಪ್ರಭಾವದಿಂದ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿ ರಸ್ತೆಯ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ‌. ಈ ದೃಶ್ಯವು ರಸ್ತೆ ಸುರಕ್ಷತೆ ಮತ್ತು ನಾಗರಿಕ ಮೂಲಸೌಕರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ...

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ಮರಳಿದ ಕುಟುಂಬ: ಈ ನಡೆಗೆ ಕಾರಣ ಏನೆಂದು ಸತ್ಯ ಬಿಚ್ಚಿಟ್ಟ ವ್ಯಕ್ತಿ!

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ವಾಪಸ್ಸಾದ ಕುಟುಂಬ: ಕಾರಣವೇನು?

Viral Video: ಜರ್ಮನಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದ ಭಾರತೀಯ ಕುಟುಂಬ ವೊಂದು ಕೊನೆಗೂ ಭಾರತದಲ್ಲೇ ಬದುಕು ಸಾಗಿಸುವ ಇಚ್ಚೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ‌. ಯಾವುದೇ ಒತ್ತಡ,ಅಥವಾ ಅಸಮಾಧಾನದಿಂದ ಜರ್ಮನಿ ತ್ಯಜಿಸಿಲ್ಲ,ಕೇವಲ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ...

ಚಲಿಸುವ ಲೋಕಲ್ ರೈಲಿನ ಮೇಲೆ ಕಲ್ಲು ಎಸೆದ ಮಹಿಳೆ! ಚಾಲಕನ ಕ್ಯಾಬಿನ್ ಗ್ಲಾಸ್ ಗೆ ಹಾನಿ!

ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ಎಸೆದು ಕ್ಯಾಬಿನ್ ಪುಡಿಪುಡಿ ಮಾಡಿದ ಮಹಿಳೆ

Viral News: ಚಲಿಸುತ್ತಿದ್ದ ಲೋಕಲ್ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು, ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿನ ಮುಂಭಾಗಕ್ಕೆ ದೊಡ್ಡ ಕಲ್ಲನ್ನು ಎಸೆದಿರುವ ದೃಶ್ಯವೊಂದು ಕಂಡು ಬಂದಿದೆ. ಈ ಘಟನೆಯು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಮಹಿಳೆ ಯಾಕೆ ಈ ರೀತಿಯಾಗಿ ವರ್ತಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

Loading...