ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಕೆಲಸಕ್ಕಲ್ಲ, ಮಾವಿನ ಹಣ್ಣಿನ ರುಚಿ ಸವಿಯಲು ಸಂಜೆ 4 ಗಂಟೆಗೆ ಆಫೀಸ್‌ಗೆ ಎಂಟ್ರಿ ಕೊಟ್ಟ ಉದ್ಯೋಗಿ

ಮ್ಯಾಂಗೋ ಫೆಸ್ಟಿವಲ್‌ಗಾಗಿ 4 ಗಂಟೆಗೆ ಕಚೇರಿಗೆ ಆಗಮಿಸಿದ ಗೂಗಲ್ ಉದ್ಯೋಗಿ

Viral Video: ಗೂಗಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಉದ್ಯೋಗಿಯೊಬ್ಬರು ಸಂಜೆ 4 ಗಂಟೆಗೆ ಕಚೇರಿಗೆ ಧಾವಿಸಿದ್ದಾರೆ. ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯೂ ಮಾವಿನ ಹಣ್ಣಿನ ಹಬ್ಬ ಆಯೋಜಿಸಲಾಗಿತ್ತು. ಉದ್ಯೋಗಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಲು ತಮ್ಮ ಕಚೇರಿಗೆ ಸಂಜೆ ಭೇಟಿ ನೀಡಿದ್ದಾರೆ.

ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ ಯುವಕ: ಕಾರ್ಪೊರೇಟ್ ಒತ್ತಡದ ಕುರಿತು ಜನ ಹೇಳೋದೇನು?

ಬೈಕ್ ಟ್ಯಾಂಕ್ ಮೇಲೆ ಲ್ಯಾಪ್‌ಟಾಪ್ ಆನ್ ಇಟ್ಟು ಚಲಾಯಿಸಿದ ಹೈದರಾಬಾದ್ ಸವಾರ

Viral News: ಹೈದರಾಬಾದ್‌ ನ ಕಾರಿಡಾರ್‌ನ ಹೈಟೆಕ್ಸ್ ಕಮಾನ್ ಸಿಗ್ನಲ್ ಬಳಿ ಯುವಕನೊಬ್ಬ ಬೈಕ್ ಮೇಲೆ ಲ್ಯಾಪ್ ಟಾಪ್ ಆನ್ ಇಟ್ಟು ಚಲಾಯಿಸಿದ್ದಾನೆ. ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯ ರೆಕಾರ್ಡ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿ ಸುಸ್ತೋ ಸುಸ್ತು! ಸ್ಟಾರ್ಟ್‌ಅಪ್ ಓನರ್‌ ರಿಯಾಕ್ಷನ್‌ ಹೇಗಿತ್ತು?

ಬೆಂಗಳೂರಿನ ಬಾಡಿಗೆ ದರ ಕೇಳಿ ದಂಗಾದ ಸ್ಟಾರ್ಟ್‌ಅಪ್ ಸಂಸ್ಥಾಪಕ!

Viral News: ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಬೆಂಗಳೂರಿನ ಬಾಡಿಗೆ ವೆಚ್ಚದ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್ ಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಹಂಚಿಕೊಂಡಿದ್ದು ತನಗೆ ನಿಜಕ್ಕೂ ಶಾಕ್ ಆಯಿತು. ತಿಂಗಳಿಗೆ 2.75 ಲಕ್ಷ ರೂ., 3.1 ಲಕ್ಷ ರೂ. ಹಾಗೂ ಅದಕ್ಕಿಂತಲೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಹಕ್ಕಿಯ ಮೊಟ್ಟೆಗಳಿಂದ ಮಳೆ ಮುನ್ಸೂಚನೆ ಗೊತ್ತಾಗುತ್ತಾ? : ಮಧ್ಯಪ್ರದೇಶದ ರೈತರ ವಿಶಿಷ್ಟ ನಂಬಿಕೆ ಏನಿದು?

ಹಕ್ಕಿಯ ಮೊಟ್ಟೆಯಿಂದ ಮಳೆಯ ಸೂಚನೆ: ಮಧ್ಯಪ್ರದೇಶದ ರೈತರ ವಿಶೇಷ ನಂಬಿಕೆ!

Viral News: ಇಂದಿನ ಆಧುನಿಕ ಯುಗದಲ್ಲಿ ಮಳೆಯ ಮುನ್ಸೂಚನೆ ಅರಿತುಕೊಳ್ಳಲು ನಾವು ಮೊಬೈಲ್ ಆ್ಯಪ್ ಅಥವಾ ಹವಾಮಾನ ಇಲಾಖೆಯ ವದಿಗಳನ್ನು ಅವಲಂಬಿಸಿ ಇರುತ್ತೇವೆ.‌ ಆದರೆ ಮಧ್ಯಪ್ರದೇಶದ ಹಳ್ಳಿಯಲ್ಲಿ ರೈತರು ಇಂದಿಗೂ ಮಳೆಯನ್ನು ಅಂದಾಜಿಸಲು ಸಣ್ಣ ಹಕ್ಕಿಗಳ ಮೊಟ್ಟೆಯನ್ನು ಗಮನಿಸಿ ಮಳೆಯ ಮುನ್ಸೂಚನೆಯನ್ನು ಅರಿಯುತ್ತಾರೆ. ಸದ್ಯ ಈ ವಿಚಾರ ಕೇಳಿ ನೆಟ್ಟಿಗರೇ ಆಶ್ಚರ್ಯ ಪಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮದುವೆಗೆ ಸಿಗರೇಟ್ ಸೇದುತ್ತಾ ಬುಲ್ಡೋಜರ್ ಏರಿ ಬಂದ ವರ: ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರರಿಂದ ಬಿತ್ತು ಭಾರೀ ದಂಡ!

ಬುಲ್ಡೋಜರ್ ಏರಿ ಮದುವೆ ಮಂಟಪಕ್ಕೆ ಬಂದ ವರ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

Viral Video: ವಧು ಅಥವಾ ವರ ಐಷಾರಾಮಿ ಕಾರಿನಲ್ಲಿ ಬರುವುದು, ಕುದುರೆ ಏರಿ ಬರುವುದು ಹೀಗೆ ನಾನಾ ದೃಶ್ಯಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮೊರಾದಾಬಾದ್ ನ ಮದುವೆಯಲ್ಲಿ ವರನೊಬ್ಬ ಜೆಸಿಬಿ ಏರಿ, ಕೈಯಲ್ಲಿ ಸಿಗರೇಟ್ ಸೇದುತ್ತಾ ಎಂಟ್ರಿ ನೀಡಿದ್ದಾನೆ‌. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮದುವೆ ಸಮಾರಂಭದಲ್ಲಿ ಇಂತಹ ನಡವಳಿಕೆ ಬೇಕೆ? ಎಂದು ಕಿಡಿಕಾರಿದ್ದಾರೆ.

ಯೋಗ ಶಿಕ್ಷಕಿಯಾಗಲು 26 ಲಕ್ಷದ ಕಾರ್ಪೊರೇಟ್ ಉದ್ಯೋಗವನ್ನೇ ತ್ಯಜಿಸಿದ ಬೆಂಗಳೂರಿನ ಯುವತಿ

26 ಲಕ್ಷ ಪ್ಯಾಕೇಜ್ ಕೆಲಸ ತೊರೆದು ಯೋಗ ಶಿಕ್ಷಕಿಯಾದ ಬೆಂಗಳೂರಿನ ಯುವತಿ

Viral News: ಕೆಲಸದ ಒತ್ತಡ, ಕೆಲಸದ ಅವಧಿ ಇದಕ್ಕೆಲ್ಲಾ ಹೊಂದಾಣಿಕೆಯಾಗದೆ ಕೈತುಂಬಾ ಸಂಬಳ ಬರುವ ಐಷಾರಾಮಿ ಕಾರ್ಪೊರೇಟ್ ಕೆಲಸ ತ್ಯಜಿಸಿದವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗ ಳೂರಿನ ಮುಕುಲಿತಾ ಗಂಗೂಲಿ ಎನ್ನುವ ಯುವತಿ ಕೈತುಂಬಾ 26 ಲಕ್ಷ ರೂಪಾಯಿ ಸಂಬಳ ಬಿಟ್ಟು ನೆಮ್ಮದಿಯ ಜೀವನದ ಕಡೆ ಹೊರಟಿದ್ದಾರೆ. ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಯೋಗ ಹಾಗೂ ನೃತ್ಯ ಶಿಕ್ಷಕಿಯಾಗಿದ್ದಾರೆ. ಕೆಲಸ ತ್ಯಜಿಸಲು ಕಾರಣವೇನು ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಹುಟ್ಟಿದ ಎರಡೇ ದಿನಕ್ಕೆ ಫುಟ್‌ಬಾಲ್ ‘ಟ್ರೈನಿಂಗ್’ ; ಫಿಫಾ ವಿಶ್ವಕಪ್‌ಗೆ ಆನೆ ಮರಿ ಫುಲ್‌ ರೆಡಿ, ವಿಡಿಯೋ ನೋಡಿ

ಫುಟ್‌ಬಾಲ್‌ಗಾಗಿ 'ತರಬೇತಿ' ಪಡೆಯುತ್ತಿರುವ ಮರಿ ಆನೆ: ಮುದ್ದಾದ ವಿಡಿಯೊ!

Viral News: ಮೃಗಾಲಯದಲ್ಲಿ ಹುಟ್ಟಿದ ಕೇವಲ ಎರಡು ದಿನದ ಪುಟ್ಟ ಆನೆಯೊಂದು ಫುಟ್ ಬಾಲ್ ಟ್ರೈನಿಂಗ್ ಆರಂಭ ಮಾಡಿರುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ವೀಡಿಯೊದಲ್ಲಿ, ಪುಟ್ಟ ಆನೆಯು ತನ್ನ ಮುಂದೆ ಇರಿಸಲಾದ ಫುಟ್‌ಬಾಲ್ ಅನ್ನು ಆಶ್ಚರ್ಯದಿಂದ ನೋಡುತ್ತಿರುವ ವಿಡಿಯೊ ಕಾಣಬಹುದು...

ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ ಕಾನ್‌ಸ್ಟೆಬಲ್!

ಜೀವದ ಹಂಗು ತೊರೆದು ಕಾರ್ಮಿಕನ ಪ್ರಾಣ ಉಳಿಸಿದ ಕಾನ್‌ಸ್ಟೆಬಲ್: ವಿಡಿಯೊ ವೈರಲ್

Viral News: ಸೂರತ್ ನಲ್ಲಿ 7ನೇ ಮಹಡಿಯ ಫ್ಲ್ಯಾಟ್‌ನಲ್ಲಿ ವಜ್ರದ ಕಟಿಂಗ್ ಮತ್ತು ಪಾಲಿಶಿಂಗ್ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ವೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೆ ಕಾರ್ಮಿಕನ ಪ್ರಾಣ ಉಳಿಸಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಇದರ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸೊಸೆ, ಮಗಳ ಜತೆ ವಿಮಾನದಲ್ಲಿ ಕ್ರಿಕೆಟ್‌ ಆಡಿದ ಸಚಿನ್ ತೆಂಡೂಲ್ಕರ್; ವಿಡಿಯೊ ವೈರಲ್‌

ಸೊಸೆ, ಮಗಳ ಜತೆ ವಿಮಾನದಲ್ಲಿ ಕ್ರಿಕೆಟ್‌ ಆಡಿದ ಸಚಿನ್ ತೆಂಡೂಲ್ಕರ್

Sachin Tendulkar: ವೈರಲ್‌ ವಿಡಿಯೋದಲ್ಲಿ ತೆಂಡೂಲ್ಕರ್ ವಿಮಾನದ ಕ್ಯಾಬಿನ್ ಒಳಗೆ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು. ಅವರ ಸೊಸೆ ಸಾನಿಯಾ ಚಾಂದೋಕ್, ಬೌಲಿಂಗ್‌ ಮಾಡುತ್ತಿರುವುದು ಮತ್ತು ಮಗಳು ಸಾರಾ ತೆಂಡೂಲ್ಕರ್ ಸೋಫಾದ ಮೇಲೆ ಕುಳಿತು ಫೀಲ್ಡಿಂಗ್ ಮಾಡುವ ಮೂಲಕ ಮೋಜಿನಲ್ಲಿ ಭಾಗವಹಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.

ಭಾರತದ ಈ ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತೆಯೇ ಇಲ್ಲ; ವಿದೇಶಿ ಮಹಿಳೆ ಹೀಗೆ ಹೇಳಿದ್ದೇಕೆ?

ಭಾರತದ ಈ ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತ ಇಲ್ಲ ಎಂದ ವಿದೇಶಿ ಮಹಿಳೆ!

Viral Video: ಭಾರತೀಯರು ವಿದೇಶಿಗರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ದೊಡ್ಡ ಮಟ್ಟದ ಚರ್ಚೆಗಳು ಕೂಡ ನಡೆಯುತ್ತಿವೆ. ಇದೀಗ ಭಾರತದಲ್ಲಿ ಮೂರು ತಿಂಗಳ ಕಾಲ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದ ಜಪಾನ್ ಮೂಲದ ಯುವತಿಯೊಬ್ಬಳು ತಮಗೆ ಎದುರಾದ ಅನುಭವವನ್ನು ಮುಕ್ತವಾಗಿ ಶೇರ್ ಮಾಡಿಕೊಂಡಿದ್ದಾರೆ. ಭಾರತದ ಆತಿಥ್ಯ ಹಾಗೂ ಅಲ್ಲಿನ ಜನರ ಪ್ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದ ಅವರು ಅದೇ ಸಮಯದಲ್ಲಿ ಕಿರುಕುಳ ಎಸಗಿದ ಪ್ರಮುಖ ನಗರಗಳನ್ನು ಪಟ್ಟಿ ಮಾಡಿದ್ದಾರೆ.

ಮೈದಾನಕ್ಕೆ ನುಗ್ಗಿದ ಅಭಿಮಾನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೂರ್ಯಕುಮಾರ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಮೈದಾನಕ್ಕೆ ನುಗ್ಗಿದ ಅಭಿಮಾನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೂರ್ಯ

Suryakumar Yadav: ಸೂರ್ಯಕುಮಾರ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಸದ್ಯ ಅತ್ಯುತ್ತಮ ಸಮಯಗಳನ್ನು ಹೊಂದಿಲ್ಲ. ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಿಸಿಕೊಟ್ಟರೂ ಕಳಪೆ ಬ್ಯಾಟಿಂಗ್‌ ಫಾರ್ಮ್‌ನಿಂದ ನಾಯಕತ್ವದಿಂದ ತೆಗೆದುಹಾಕಲಾಗಿದೆ ಮಾತ್ರವಲ್ಲದೆ, ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ವೈಟ್-ಬಾಲ್ ಪ್ರವಾಸಕ್ಕೂ ಅವರನ್ನು ತಂಡದಿಂದ ಕೈಬಿಡಲಾಗಿದೆ.

ರಸ್ತೆಗೆ ತೇವಳುತ್ತ ಬಂದ ಮಗು: ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು

ರಸ್ತೆಗೆ ತೆವಳುತ್ತ ಬಂದ ಮಗುವನ್ನು ರಕ್ಷಿಸಿದ ಬಸ್‌ ಚಾಲಕ: ವಿಡಿಯೊ ನೋಡಿ

Viral News: ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಚಲಿಸುತ್ತಿರುವ ಬಸ್‌ನ ಮುಂದೆ ರಸ್ತೆಯಲ್ಲಿ ಮಗುವೊಂದು ಇದ್ದಕ್ಕಿದ್ದಂತೆ ತೆವಳಿಕೊಂಡು ಬಂದಿದ್ದು, ಚಾಲಕ ಸಮಯ ಪ್ರಜ್ಞೆ ಮೆರೆಯುವ ಅದರ ಪ್ರಾಣ ಉಳಿಸಿದ್ದಾನೆ. ಸದ್ಯ ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ರೂಮ್ ಹುಡುಕುತ್ತಿದ್ದ ಯುವಕನಿಗೆ ಶಾಕ್: ಮನೆ ಒಳಗಡೆ ಇರಬೇಕಾದ್ರೆ ಈ 'ವಿಚಿತ್ರ' ಕಂಡಿಷನ್‌ಗೆ ಒಪ್ಪಬೇಕು ಎಂದ ಮಾಲಕ

ಬೆಂಗಳೂರಿನಲ್ಲಿ ಬಾಡಿಗೆ ನೀಡಲು ವಿಚಿತ್ರ ಷರತ್ತು ವಿಧಿಸಿದ ಮಾಲಕ

Viral News: ಇಲ್ಲೊಬ್ಬ ಯುವಕನಿಗೆ ಬೆಂಗಳೂರಿನಲ್ಲಿ ಮನೆ ಹುಡುಕಾಟದಲ್ಲಿದ್ದಾಗ ವಿಚಿತ್ರ ಅನುಭವವೊಂದು ಎದುರಾಗಿದೆ. ಕೊರಮಂಗಲದಲ್ಲಿ ಫ್ಲಾಟ್ ಹುಡುಕುತ್ತಿದ್ದ ಪ್ರಣವ್ ಎಂಬವರು ತಮಗೆ ಎದುರಾದ ವಿಚಿತ್ರ ಸಂದೇಶದ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.

ಮಹಿಳೆಯರ ಕೋಚ್‌ನಲ್ಲೇ ಯುವತಿಯರ ರಹಸ್ಯ ಚಿತ್ರೀಕರಣ: ಇಲ್ಲೂ ರಕ್ಷಣೆಯಿಲ್ಲ‌ ಎಂದು ಕಿಡಿಕಾರಿದ ನೆಟ್ಟಿಗರು!

ಮಹಿಳೆಯರ ಬೋಗಿಯಲ್ಲಿ ರಹಸ್ಯ ಚಿತ್ರೀಕರಣ: ವಿಡಿಯೊ ವೈರಲ್

Viral Video: ಸಾರ್ವಜನಿಕ ಸಾರಿಗೆ ಅಂತ ಬಂದಾಗ ಹೆಚ್ಚಿನ ಸ್ತ್ರೀಯರು ಮಹಿಳೆಯರ ಬೋಗಿಯನ್ನು ಹತ್ತುತ್ತಾರೆ, ಇದು ರೈಲಿನಲ್ಲಿರುವ ಉಳಿದ ಬೋಗಿಗಳಿಗಿಂತ ಸುರಕ್ಷಿತ ಆಯ್ಕೆಯಾಗಿದೆ ಎಂದು ಭಾವಿ ಸುತ್ತಾರೆ. ಆದರೆ ಇಲ್ಲೂ ಸುರಕ್ಷಿತ ಇಲ್ಲ ಅಂದ್ರೆ ನೀವು ನಂಬುತ್ತೀರಾ?ಹೌದು ಮಹಿಳಾ ಬೋಗಿಯಲ್ಲೇ ಸಹ ಪ್ರಯಾಣಿಕರು ಇಬ್ಬರು ಯುವತಿಯರ ರಹಸ್ಯ ಚಿತ್ರೀಕರಣ ಮಾಡಿರುವ ಘಟನೆಯೊಂದು ವರದಿಯಾಗಿದೆ.

ಬೆಂಗಳೂರು Vs ಹೈದರಾಬಾದ್ ಮತ್ತೆ ಶುರುವಾಯ್ತು ಹೋಲಿಕೆ; ಸಾಫ್ಟ್‌ವೇರ್ ಇಂಜಿನಿಯರ್ ಮಾಡಿದ ಪೋಸ್ಟ್‌ನಲ್ಲಿ ಅಂಥದ್ದೇನಿದೆ?

ಬೆಂಗಳೂರು ಮತ್ತು ಹೈದರಾಬಾದ್ ಸೌಕರ್ಯ ಬಗ್ಗೆ ಯುವಕ ಹೇಳಿದ್ದೇನು?

Viral News: ಸಿಲಿಕಾನ್ ಸಿಟಿ ಮತ್ತು ಹೈದರಾಬಾದ್ ನಗರಗಳ ನಡುವಿನ ಹೋಲಿಕೆ ಇಂದಿನದಲ್ಲ. ಆಹಾರ, ಹವಾಮಾನದಿಂದ ಹಿಡಿದು ಸಾರಿಗೆ ಮೂಲ ಸೌಕರ್ಯದವರೆಗೆ ಚರ್ಚೆ ನಡೆಯುತ್ತಲೇ ಇರುತ್ತದೆ‌. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಶೇರ್ ಮಾಡಿದ ಪೋಸ್ಟ್‌ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಚಲಿಸುವ ಮೆಟ್ರೋವನ್ನೇ ಡ್ಯಾನ್ಸ್ ಫ್ಲೋರ್ ಮಾಡಿದ ಯುವಕರು; ಮಿತಿ ಮೀರಿದ ವರ್ತನೆಗೆ ಸಾರ್ವಜನಿಕರ ಆಕ್ರೋಶ

ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ ಯುವಕರು: ನೆಟ್ಟಿಗರು ಕಿಡಿ

Viral News: ವಿದ್ಯಾವಂತ ಜನರ ನಡವಳಿಕೆಗಳೇ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿಕೊಂಡು ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಾ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಈ ವೀಡಿಯೊ ನೋಡಿದ ಅನೇಕರು ಆಕ್ರೋಶವನ್ನು ಹೊರ ಹಾಕಿದ್ದು ಸಾರ್ವಜನಿಕ ಶಿಷ್ಟಾಚಾರ ಮತ್ತು ಪ್ರಯಾಣಿಕರ ಶಿಸ್ತಿನ ನಡವಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಯುವಕರ ‘ವೈರ್‌ಲೆಸ್ ಡಿಜೆ ರನ್’: ಜೆ.ಪಿ. ನಗರದ ಫಿಟ್ ನೆಸ್ ಕ್ರೇಜ್ ಗೆ ನೆಟ್ಟಿಗರು ಫಿದಾ!

ಜೆಪಿ ನಗರದಲ್ಲಿ ವೈರ್‌ಲೆಸ್ ಡಿಜೆ ರನ್ನಿಂಗ್: ವಿಡಿಯೊ ವೈರಲ್

Viral Video: ಫಿಟ್ ನೆಸ್ ಕಾಪಾಡಿಕೊಳ್ಳಲು ನಗರದ ವಿವಿಧ ಕ್ಲಬ್ ಗಳು ಜೊತೆ ಸೇರಿ ಬೆಂಗಳೂರಿನ ಯುವಕ- ಯುವತಿಯರಿಗೆ ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದಕ್ಕೆ ಪೂರಕವಾಗಿ ಜೆ.ಪಿ. ನಗರದಲ್ಲಿ ನಡೆದ ವಿಭಿನ್ನ ಶೈಲಿಯ ‘ವೈರ್‌ಲೆಸ್ ಡಿಜೆ ರನ್ ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ...

ಟಿಎಂಸಿ ಬಂಡಾಯದ ನಡುವೆ ಟ್ಯಾಂಗಿ, ಮಸಲೇದಾರ್, ಕುರುಕಲು...; ಬಂಗಾಳದ ಜಲ್ಮುರಿ ಬಗ್ಗೆ ಅಮಿತ್ ಶಾ ಹೇಳಿದ್ದೇಕೆ?

ಜಲ್ಮುರಿ ಸವಿ ನೆನಪು ಹಂಚಿಕೊಂಡ ಅಮಿತ್ ಶಾ

ಒಂದು ಕಡೆ ತೃಣ ಮೂಲ ಕಾಂಗ್ರೆಸ್ ನಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು, ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ತಾವು ಸವಿದಿರುವ ಜಲ್ಮುರಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಬಂಗಾಳದ ಜಲ್ಮುರಿ ಟ್ಯಾಂಗಿ, ಮಸಲೇದಾರ್, ಕುರುಕಲು ಎಂದು ನಿಗೂಢ ಪದಗಳಲ್ಲಿ ಉಲ್ಲೇಖಿಸಿರುವುದು ಯಾರಿಗೆ ಎನ್ನುವ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೇವಲ 4 ಸೆಂ.ಮೀ. ಮಳೆಗೆ ತತ್ತರಿಸಿ ಹೋದ ಹೈದರಾಬಾದ್; ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಒದ್ದಾಡಿದ ಪ್ರಯಾಣಿಕರು

ಮಳೆಯಿಂದಾಗಿ ಮುಳುಗಿದ ಹೈದರಾಬಾದ್

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪ್ರಮುಖ ಐಟಿ ವಲಯದಲ್ಲಿ ಸುರಿದ ಮಳೆಯಿಂದಾಗಿ ಜನ ಕಂಗಲಾಗಿ ಹೋಗಿದ್ದಾರೆ. ಕೇವಲ 4 ಸೆಂಟಿ ಮೀಟರ್ ಮಳೆ ಇಡೀ ನಗರದ ಜನರನ್ನು ಭಯಕ್ಕೆ ತಳ್ಳಿದೆ. ಐಟಿ ಕಾರಿಡಾರ್ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡು ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು‌. ಸದ್ಯ ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿಮ್ಲಾ ಬಿಡಿ! ಬೆಂಗಳೂರೇ ಇದೀಗ ಗಿರಿಧಾಮ: ಸಿಲಿಕಾನ್ ಸಿಟಿಯ ತಂಪಾದ ವಾತಾವರಣಕ್ಕೆ ನಿವಾಸಿಗಳಿ ಫಿದಾ

ಶಿಮ್ಲಾವನ್ನು ಮೀರಿಸಿದ ಬೆಂಗಳೂರು: ಕೂಲ್ ವಾತಾವರಣಕ್ಕೆ ನೆಟ್ಟಿಗರು ಫಿದಾ

Viral News: ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಪ್ರಸಿದ್ಧ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ.

Fact Check: ಕಾಗದದ ನೋಟು ಬದಲು ಪ್ಲಾಸ್ಟಿಕ್ ನೋಟು ಚಲಾವಣೆಗೆ ತಂದ ಆರ್‌ಬಿಐ; ವೈರಲ್‌ ಸುದ್ದಿಯ ಅಸಲಿಯತ್ತೇನು?

ಆರ್‌ಬಿಐ ಕಾಗದದ ನೋಟುಗಳನ್ನು ಬದಲಾಯಿಸುತ್ತಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ ಕಾಗದದ ನೋಟುಗಳನ್ನು ಪ್ಲಾಸ್ಟಿಕ್ ನೋಟುಗಳೊಂದಿಗೆ ಬದಲಾಯಿಸುತ್ತಿದೆ ಎನ್ನುವ ವದಂತಿಗಳು ಹರಿದಾಡುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ಘಟಕವು ತನಿಖೆಯನ್ನು ನಡೆಸಿದ್ದು, ಇದು ಸುಳ್ಳು ಸುದ್ದಿ. ಅಂತಹ ಯಾವುದೇ ಯೋಜನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸೆಲ್ಫಿ ತೆಗೆಯಲು ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಕೂದಲೆಳೆ ಅಂತರದಲ್ಲಿ ಪಾರು

ಸೆಲ್ಫಿ ತೆಗೆಯಲು ಹೋಗಿ ನದಿಯಲ್ಲಿ ಕೊಚ್ಚಿಹೋದ ಪಂಜಾಬ್ ಪ್ರವಾಸಿಗರು

Viral Video: ಪ್ರಕೃತಿ ಸೌಂದರ್ಯವನ್ನು ಸವಿಯಲು ಹೋದ ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೊಂದು ಹಿಮಾಚಲ ಪ್ರದೇಶದ ಪಾರ್ವತಿ ನದಿಯಲ್ಲಿ ನಡೆದಿದೆ. ನದಿಯ ದಂಡೆಯಲ್ಲಿ ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನುಷ್ಯನಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ತಪ್ಪಿಲ್ಲ ಈ ಗೋಳು; ಸಂಗಾತಿಯೊಂದಿಗೆ ಜಗಳವಾಡಿದ ಗೋರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ?

ಸಂಗಾತಿಯೊಂದಿಗೆ ಮುನಿಸಿಕೊಂಡ ಗೊರಿಲ್ಲಾದ ಎಕ್ಸ್ ಪ್ರೇಷನ್ ಹೇಗಿತ್ತು ಗೊತ್ತಾ!

Viral News: ಗೊರಿಲ್ಲಾವೊಂದು ಡೀಪ್ ಆಗಿ ಯೋಚನೆಯಲ್ಲಿ ಮಗ್ನರಾಗಿರುವ ದೃಶ್ಯವೊಂದು ವೈರಲ್ ಆಗಿದೆ. ತನ್ನ ಬಲಗೈಯನ್ನು ದೇಹದಾದ್ಯಂತ ಮಡಚಿ ಎಡಗೈಯನ್ನು ಬಾಯಿಯ ಮೇಲೆ ಇಟ್ಟು ಕೊಂಡು ಗೊರಿಲ್ಲಾ ಕುಳಿತಿದೆ. ತನ್ನ ಸಂಗಾತಿ ಜೊತೆ ಜಗಳವಾಡಿದ ನಂತರ ಮನುಷ್ಯರಂತೆ ಗೊರಿಲ್ಲಾ ಈ ರೀತಿ ಆಲೋಚನೆಯಲ್ಲಿ ಕುಳಿತಿದೆ ಎಂದು ಹೇಳಲಾಗುತ್ತಿದೆ.

"ಓಲ್ಡ್‌ ಈಸ್‌ ಗೋಲ್ಡ್‌" ತಾತನಿಂದ ಮೊಮ್ಮಗನಿಗೆ ಸಿಕ್ತು 35 ವರ್ಷ ಹಳೆಯ ಟೈಟಾನ್ ವಾಚ್‌

ಮೊಮ್ಮಗನ ಹುಟ್ಟುಹಬ್ಬಕ್ಕೆ ತಾತ ನೀಡಿದ ವಿಂಟೇಜ್ ವಾಚ್!

Viral News: ಯುವಕನೊಬ್ಬರು ತಮ್ಮ 27ನೇ ಹುಟ್ಟು ಹಬ್ಬಕ್ಕೆ ತಾತನಿಂದ 35 ವರ್ಷ ಹಳೆಯ ಟೈಟಾನ್ ವಿಂಟೇಜ್ ವಾಚ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಅನೇಕರು ಈ ವಾಚ್ ನ ವಿನ್ಯಾಸ ಮತ್ತು ಅದರ ಗುಣಮಟ್ಟದ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ವಾಚ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Loading...