ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಅತ್ತ ಪ್ರಧಾನಿ ಮೋದಿ ತೈಲ ಬಳಕೆಯ ನಿಯಂತ್ರಣಕ್ಕೆ ಕರೆ ನೀಡಿದರೆ ಇತ್ತ ಬಿಜೆಪಿ ನಾಯಕರಿಂದ 200 ಬೆಂಗಾವಲು ಪಡೆಗಳ ವಾಹನಗಳೊಂದಿಗೆ ಮೆರವಣಿಗೆ!

200 ಬೆಂಗಾವಲು ಪಡೆಗಳ ವಾಹನಗಳೊಂದಿಗೆ ಬಿಜೆಪಿ ನಾಯಕರ ಮೆರವಣಿಗೆ

Narendra Modi: ಇಂಧನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಪಕ್ಷದವರೇ ಪಾಲಿಸುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ಬಿಜೆಪಿ ನಾಯಕರು ನೂರಾರು ಬೆಂಗಾವಲಯ ಪಡೆಗಳ ವಾಹನದೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿ ದುಂದು ವೆಚ್ಚ ಮಾಡಿದ್ದಾರೆ. ಸದ್ಯ ಬಿಜೆಪಿ ನಾಯಕರ ಈ ನಡೆ ದೇಶಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ.

ದೇವಸ್ಥಾನದಿಂದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಲಕ್ಷಣ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವಾಲಯದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಡಿಯೊ ವೈರಲ್

Viral Video: ಆಹಾರ ವಿತರಣಾ ಸಂಸ್ಥೆ ಝೊಮೆಟೊ ಸಮವಸ್ತ್ರ ಧರಿಸಿದ ಡೆಲಿವರಿ ಬಾಯ್ ಒಬ್ಬ ದೇವಸ್ಥಾನದ ನಳ್ಳಿಯನ್ನು ಕದ್ದಿದ್ದಾನೆ. ಇದರ ದೃಶ್ಯವು ಸಿಟಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಆತ ತಡರಾತ್ರಿ ಬೈಕ್‌ನಲ್ಲಿ ದೇವಸ್ಥಾನದ ಬಳಿ ಬಂದು ಕಳವು ಮಾಡಿದ್ದಾನೆ. ಸದ್ಯ ಇದರ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಡುರಸ್ತೆಯಲ್ಲಿಯೇ ನಾಯಿಯನ್ನು ಹೊಡೆದು ಕೊಂದ ಕಿಡಿಗೇಡಿಗಳು; ಮಾನವೀಯತೆಯನ್ನೇ ಮರೆತವರ ಕೃತ್ಯಕ್ಕೆ ಆಕ್ರೋಶ

ಬೀದಿ ನಾಯಿಯನ್ನು ಅಮಾನವೀಯವಾಗಿ ಕೊಂದ ದುಷ್ಕರ್ಮಿಗಳು

Viral Video: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯನ್ನು ಜನರ ಗುಂಪೊಂದು ಅತ್ಯಂತ ಕ್ರೂರವಾಗಿ ಹೊಡೆದು ಕೊಂದಿದೆ. ಕೃತ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರ ಮನಸ್ಥಿತಿ ಹಾಗೂ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಡಬ್ಲ್ಯು ಕಾರು, 1 ಕೋಟಿ ರುಪಾಯಿ ನಗದು; ದುಬಾರಿ ವರದಕ್ಷಿಣೆ ಹಸ್ತಾಂತರದ ವಿಡಿಯೊ ವೈರಲ್

ಕೋಟ್ಯಂತರ ರುಪಾಯಿ ಮೌಲ್ಯದ ವರದಕ್ಷಿಣೆ ವಿತರಣೆ

Viral Video: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಮದುವೆಯ ದೃಶ್ಯವೊಂದು ಎಲ್ಲರನ್ನು ಅಚ್ಚರಿಗೆ ದೂರಿದೆ. ಮದುವೆಯೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆ ನೀಡುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೂತ್ರ ವಿಸರ್ಜನೆ ತಡೆಗೆ ಬಳಸಿದ ಕನ್ನಡಿ ಅಸ್ತ್ರವೂ ವಿಫಲ; ಮೈಸೂರಲ್ಲಿ ಅಳವಡಿಸಿದ ಕನ್ನಡಿ ಎದುರೇ ಮೂತ್ರ: ಇಂತ ಜನಗಳು ಎಲ್ಲಿ ಸಿಗ್ತಾರೆ ಎಂದು ಕಾಲೆಳೆದ ನೆಟ್ಟಿಗರು

ಮೂತ್ರ ವಿಸರ್ಜನೆ ತಡೆಗೆ 'ಕನ್ನಡಿ' ಅಸ್ತ್ರ ಬಳಸಿದರೂ ಹಾವಳಿ ನಿಂತಿಲ್ಲ

Viral Video: ಸ್ವಚ್ಛ ನಗರ ಮೈಸೂರಿನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ವಿಶಿಷ್ಟ ಪ್ರಯೋಗ ಜಾರಿ ಮಾಡಿದೆ. ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆಗೆ ಸ್ಟೇನ್‌ಲೆಸ್ ಸ್ಟೀಲ್ ಕನ್ನಡಿ ಫಲಕ ಅಳವಡಿಸಿದೆ. ಆದರೆ ಈ ಕ್ರಮ ಜಾರಿಗೆ ಬಂದ ಕೆಲವು ದಿನಗಳಲ್ಲೇ ಕನ್ನಡಿಯ ಮುಂದೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವುದು ಕಂಡು ಬಂದಿದೆ.

ಪ್ರಧಾನಿ ಹೆಸರಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೇಳಿದ ಉದ್ಯೋಗಿ: ಇಮೇಲ್ ಮೂಲಕ ಮನವಿ

ಪ್ರಧಾನಿ ಹೆಸರಿನಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೋರಿ ಉದ್ಯೋಗಿಯ ಇಮೇಲ್

Viral News: ಸುಪ್ರಿಯಾ ಎಂಬ ಉದ್ಯೋಗಿ ಎಚ್‌ಆರ್‌ಗೆ ಕಳುಹಿಸಿದ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಇಮೇಲ್‌ನಲ್ಲಿ ಆಕೆ ಉಲ್ಲೇಖಿಸಿದ್ದು ವರ್ಕ್ ಫ್ರಮ್‌ ಹೋಂ ಆಯ್ಕೆ ಕೇಳಿದ್ದಾರೆ.

ಪುಣೆ- ಸುಪೌಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಪುಣೆ- ಸುಪೌಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಜನರಿಂದ ತುಂಬಿದ್ದ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆರ್‌ಪಿಎಫ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ನೆರವಿನಿಂದ ಅವರು ಆಸ್ಪತ್ರೆ ತಲುಪುವ ಮುನ್ನವೇ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸೀಲ್ ಮಾಡಿದ ಥಮ್ಸ್ ಅಪ್ ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ; ವಿಡಿಯೋ ನೋಡಿ

ಥಮ್ಸ್ ಅಪ್ ಬಾಟಲಿಯೊಳಗೆ ಸತ್ತ ಹಲ್ಲಿ ಪತ್ತೆ: ನೆಟ್ಟಿಗರ ಆಕ್ರೋಶ

Viral Video; ಇದೀಗ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಇದು ಅನೇಕ ಬಳಕೆದಾರರನ್ನು ಆಘಾತ ಮತ್ತು ಕಳವಳಕ್ಕೆ ಒಳಪಡಿಸಿದೆ. ಆದರೆ ಘಟನೆಯ ನಿಖರವಾದ ಸ್ಥಳ ಇನ್ನು ತಿಳಿದು ಬಂದಿಲ್ಲ. ಬಳಕೆದಾರರು ಕಂಪನಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

'ಕ್ಯಾಂಪ್ ಬರ್ಗರ್’ನಲ್ಲಿ ಜಿರಳೆ ಪತ್ತೆ: ಸಿಬ್ಬಂದಿಯ ದುರಹಂಕಾರ ವರ್ತನೆಗೆ ನೆಟ್ಟಿಗರು ಕಿಡಿ!

'ಬರ್ಗರ್’ನಲ್ಲಿ ಜಿರಳೆ: ಆಹಾರ ಸುರಕ್ಷತೆ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು

Viral Video: ಪುಣೆಯ ಕ್ಯಾಂಪ್ ಬರ್ಗರ್ ಔಟ್ ಲೆಟ್ ನಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಬರ್ಗರ್ ನಲ್ಲಿ ಜಿರಳೆ ಪತ್ತೆಯಾಗಿದೆ. ಇದು ಆಹಾರ ನೈರ್ಮಲ್ಯದ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ. ಆಹಾರ ನೈರ್ಮಲ್ಯ ಮಾನದಂಡಗಳ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ..

Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಭಾರತದ ಗಡಿ ದಾಟುವುದು ಸುಲಭ ಎಂದ ಪಾಕಿಸ್ತಾನ ಪತ್ರಕರ್ತೆ: ವಿಡಿಯೋ ವೈರಲ್

ಭಾರತದ ಗಡಿ ದಾಟಿ ಸುಲಭವಾಗಿ ಹೋಗಿ ಬರಬಹುದು ಎಂದ ಪಾಕಿಸ್ತಾನ ಪತ್ರಕರ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಸೂರ್ ಬಳಿಯ ಗಂಡಾ ಸಿಂಗ್ ಬಳಿ ಭಾರತಕ್ಕೆ ಕಾಲಿಡುವುದು ಸಲಭ ಎಂದು ಪಾಕಿಸ್ತಾನ ಪತ್ರಕರ್ತೆ ಸನಾ ಖಾದಿರ್ ಅವರು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಮೋದಿಯ ಕಾರ್‌ ನೀರಿನಲ್ಲಿ ಚಲಿಸುತ್ತದೆʼʼ-ನಿನ್ನೆ ಇಂಧನ ಉಪಯೋಗ ಕಡಿಮೆ ಮಾಡುವಂತೆ ಕರೆ ನೀಡಿದ ಪ್ರಧಾನಿ ಇಂದು ಟ್ರೋಲ್‌ ಆಗಿದ್ದೇಕೆ?

ಇಂಧನ ಉಪಯೋಗ ಕಡಿಮೆ ಮಾಡುವಂತೆ ಕರೆ ನೀಡಿದ ಮೋದಿ ಟ್ರೋಲ್‌

Narendra Modi: ಆದಷ್ಟು ಪೆಟ್ರೋಲ್‌-ಡೀಸೆಲ್‌ ಬಳಕೆ ಕಡಿಮೆ ಮಾಡಿ ಬಸ್‌, ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವಂತೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಗುಜರಾತ್‌ನ ಸೋಮನಾಥಪುರದಲ್ಲಿ ಸೋಮವಾರ ಮೋದಿ ಭರ್ಜರಿ ರೋಡ್‌ ಶೋ ಹಮ್ಮಿಕೊಂಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಆಹಾರ ಒದಗಿಸಿದ ಬಾಲಕಿಗೆ ಕಿವಿಯೋಲೆ, ಬಟನ್‌ ಉಡುಗೊರೆ ನೀಡುವ ಕಾಗೆಗಳು; ಮಾನವ-ವನ್ಯ ಜೀವಿಗಳ ಸ್ನೇಹಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?

ಕಾಗೆಗಳಿಂದ ಉಡುಗೊರೆ ಪಡೆದ ಬಾಲಕಿ: ಹೃದಯ ಸ್ಪರ್ಶಿ ದೃಶ್ಯ

Viral News: ಮಾತು ಬಾರದ ಮೂಕ ಪ್ರಾಣಿಗಳಿಗೂ ಮನುಷ್ಯನ ಭಾಷೆ ಅರ್ಥವಾಗುತ್ತದೆ. ಅವುಗಳಿಗೆ ಒಮ್ಮೆ ಪ್ರೀತಿ ತೋರಿದರೆ ಸಾಕು ಯಾವ ಸಂದರ್ಭದಲ್ಲೂ ಕೈ ಬಿಡದೇ ಪ್ರೀತಿ ತೋರಿಸುತ್ತವೆ. ಇದೀಗ ಅಮೆರಿಕದ ಸಿಯಾಟಲ್‌ನ ಗ್ಯಾಬಿ ಮನ್ ಎಂಬ ಬಾಲಕಿ ಕಾಗೆಗಳೊಂದಿಗೆ ಸ್ನೇಹ ಬೆಳೆಸಿದ್ದು, ಅವು ಕೂಡ ಆಕೆಗೆ ಉಡುಗೊರೆ ನೀಡಿವೆ.

ಮುಂಬೈಯಲ್ಲಿ ಮಹಿಳಾ ಬೈಕರ್‌ಗೆ ಕಿರುಕುಳ: ಮುಂಜಾನೆ  3 ಗಂಟೆಗೆ ಯುವತಿಯನ್ನು ಬೆನ್ನಟ್ಟಿದ ಕಾಮುಕ

ಮುಂಬೈಯಲ್ಲಿ ಮುಂಜಾನೆ 3 ಗಂಟೆಗೆ ಮಹಿಳೆಯನ್ನು ಹಿಂಬಾಲಿಸಿದ ಕಾಮುಕ

Viral Video: ಮಹಿಳೆಯರ ಸುರಕ್ಷತೆ, ಮಹಿಳಾ ಸಬಲಿಕರಣ ಎಂದು ಸರ್ಕಾರ ಎಷ್ಟೇ ಕಾರ್ಯಕ್ರಮ ಹಮ್ಮಿಕೊಂಡರೂ ಕಿರುಕುಳ ಪ್ರಕರಣಕ್ಕೆ ಕಡಿವಾನ ಹಾಕಲು ಸಾಧ್ಯವಾಗಿಲ್ಲ. ಅದೇ ರೀತಿ ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮುಂಬೈಯ ಮರೈನ್ ಡ್ರೈವ್ ಬಳಿ ಬೆಳಗಿನ ಜಾವ ಯುವತಿಯೊಬ್ಬರನ್ನು ಕಾಮುಕನೊಬ್ಬ ಹಿಂಬಾಲಿಸಿದ್ದಾನೆ.

ಹೆಲ್ಮೆಟ್ ಧರಿಸದಿದ್ದಕ್ಕೆ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಟ್ರಾಫಿಕ್ ಪೊಲೀಸ್: ಇಂದೋರ್‌ನಲ್ಲಿ ಹೈಡ್ರಾಮ

ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್

Viral News: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಹೆಲ್ಮೆಟ್ ಧರಿಸದ ವಿಚಾರವಾಗಿ ನಡೆದ ಜಗಳವು ವಿಕೋಪಕ್ಕೆ ಕಾರಣವಾಗಿದೆ. ಹೆಲ್ಮೆಟ್ ತಪಾಸಣೆ ವೇಳೆ ಬಿಜೆಪಿ ನಾಯಕನಿಗೆ ಸಂಚಾರಿ ಪೊಲೀಸ್‌ ಒಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೃದಯವಂತಿಕೆಯಲ್ಲಿ ಶ್ರೀಮಂತ ಈತ: ಐದು ಬೀದಿ ನಾಯಿಗಳಿಗೆ ಸೈಕಲ್ ರಿಕ್ಷಾದಲ್ಲಿ ಆಶ್ರಯ ನೀಡಿದ ವೃದ್ಧ

ಐದು ಬೀದಿ ನಾಯಿಗಳೊಂದಿಗೆ ಸೈಕಲ್ ರಿಕ್ಷಾದಲ್ಲಿ ವೃದ್ಧನ ಪಯಣ

Viral Video: ವೃದ್ಧರೊಬ್ಬರು ಐದು ಬೀದಿ ನಾಯಿಗಳೊಂದಿಗೆ ಸೈಕಲ್ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಪ್ರೀತಿ ಮತ್ತು ಕರುಣೆಗೆ ಹಣ ಬೇಕಾಗಿಲ್ಲ, ಹೃದಯವಂತಿಕೆ ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ಒತ್ತಿ ಹೇಳಿದೆ. ವೃದ್ಧನ ಜತೆ ಐದು ಬೀದಿನಾಯಿಗಳು ರಾಜಾರೋಷವಾಗಿ ತಿರುಗಿದ್ದು, ಗಮನ ಸೆಳೆಯುವಂತೆ ಮಾಡಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವೃದ್ಧನ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸೌತೆಕಾಯಿ ತಾಜಾವಾಗಿ ಕಾಣಲು ಕೃತಕ ಬಣ್ಣ ಬಳಿದ ಮಹಿಳೆಯರು: ಆಹಾರ ಸುರಕ್ಷತೆ ಬಗ್ಗೆ ಮೂಡಿದೆ ಆತಂಕ

ಸೌತೆಕಾಯಿ ತಾಜಾವಾಗಿ ಕಾಣುವಂತೆ ಮಾಡಲು ಕೃತಕ ಬಣ್ಣ ಬಳಿದ ಮಹಿಳೆಯರು!

Viral Video: ಬಿಹಾರದ ಕತಿಹಾರ್ ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ಮಹಿಳೆಯರಿಬ್ಬರು ಸೌತೆ ಕಾಯಿಗೆ ಕೃತಕ ಹಸಿರು ಬಣ್ಣ ಬಳಿದು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅವು ಹೆಚ್ಚು ಪ್ರೆಶ್ ಆಗಿರುವಂತೆ ಕಾಣಲು ಹಸಿರು ಬಣ್ಣದಲ್ಲಿ ಅದ್ದಿದ್ದಾರೆ. ಪ್ರಯಾಣಿಕರಿಗೆ ಮಾರಾಟ ಮಾಡಲು ಈ ತರಕಾರಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಆತಂಕಕಾರಿ ವಿಡಿಯೊವೊಂದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ.

Nisha Yogeshwar: ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌ ಕಣ್ಣೀರು, Video

ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌

ಚನ್ನಪಟ್ಟಣದ ತಮ್ಮ ಸ್ವಗೃಹದ ಮುಂದೆ ನಿಂತು ಅಸಹಾಯಕತೆ ವ್ಯಕ್ತಪಡಿಸಿರುವ ನಿಶಾ ಯೋಗೇಶ್ವರ್‌ ಅವರು, ನಾವು ಹುಟ್ಟಿ ಬೆಳೆದ ನಮ್ಮ ಮನೆಗೆ ನಮಗೆ ಪ್ರವೇಶವಿಲ್ಲ. ನಮ್ಮ ಮನೆಗೆ ಈಗ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಾವಿರಾರು ಕಿಲೋ ಮೀಟರ್ ನಡೆದು ಮಾಲೀಕನ ಮನೆ ತಲುಪಿದ ನಾಯಿ; ಶ್ವಾನದ ನಿಷ್ಠೆಗೆ ಮನಸೋತ ನೆಟ್ಟಿಗರು

ಮನೆ ತಪ್ಪಿದ ನಾಯಿ ಮಾಲೀಕನ ಮನೆ ಸೇರಿದ್ದು ಹೇಗೆ?

Viral News: ನಾಯಿಗಳಿಗೆ ನಾವು ಪ್ರೀತಿ ತೋರಿಸಿದರೆ ಅವು ಸಹಾಯವನ್ನು ನೆನಪಿಸಿ ದುಪ್ಪಟ್ಟು ಪ್ರೀತಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದು ಹೋದ ನಾಯಿಯೊಂದು ಕಿಲೊ ಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ನಡೆದು ಮಾಲೀಕನ ಮನೆ ತಲುಪಿದ ಘಟನೆಯೊಂದು ನಡೆದಿದೆ. ಒರೆಗಾನ್‌ನಲ್ಲಿ ತನ್ನ ಮಾಲೀಕರೊಂದಿಗೆ ಮತ್ತೆ ಒಂದಾಗಲು ಬಾಬಿ ಎಂಬ ನಾಯಿ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಪ್ರಯಾಣಿಸಿದ್ದು ಇಡೀ ಜಗತ್ತನ್ನೆ ಆಶ್ಚರ್ಯ ಪಡುವಂತೆ ಮಾಡಿದೆ.‌ ಸದ್ಯ ಇದರ ಸುದ್ದಿ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗಿದೆ.

Fact Check: ಬಿಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳದಿಂದ ಪಲಾಯನ ಮಾಡುತ್ತಿರುವ ವಲಸಿಗರು ! ವೈರಲ್‌ ವಿಡಿಯೊದ ಸತ್ಯಾಸತ್ಯತೆ ಏನು?

ವಿಡಿಯೋ ವೈರಲ್: ಪಶ್ಚಿಮ ಬಂಗಾಳದಿಂದ ವಲಸಿಗರು ಪಲಾಯನ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಲಸಿಗರು ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಪರಿಶೀಲನೆ ವೇಳೆ ಇದೊಂದು ಸುಳ್ಳು ವರದಿ ಎನ್ನುವುದು ದೃಢಪಟ್ಟಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ, ಇದರ ಅಸಲಿಯತ್ತೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಸತತ 7 ಗಂಟೆಗಳ ಕಾರ್ಯಾಚರಣೆ: ಕಲ್ಲುಗಳ ನಡುವೆ ಸಿಲುಕಿದ್ದ ಬಾಲಕನ ರಕ್ಷಣೆ

ಕಲ್ಲುಗಳ ನಡುವೆ ಸಿಲುಕಿದ್ದ ಬಾಲಕನ ರಕ್ಷಣೆ

ಜೇನು ತುಪ್ಪ ಸಂಗ್ರಹಿಸಲು ಹೋಗಿ ಕಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ ಬಾಲಕನನ್ನು ಸತತ 7 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಒಡಿಶಾದ ನಯಾಗಢ ಜಿಲ್ಲೆಯ ಕಾನಿಪಾದ ಕಾಡಿನಲ್ಲಿ ಜೇನುತುಪ್ಪ ಸಂಗ್ರಹಿಸುವಾಗ ಬೃಹತ್ ಬಂಡೆಗಳ ನಡುವೆ ಬಾಲಕ ಸಿಕ್ಕಿ ಹಾಕಿಕೊಂಡಿದ್ದನು. ಬಾಲಕನನ್ನು ರಕ್ಷಿಸಿದ ತಂಡದ ಕಾರ್ಯವನ್ನು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶ್ಲಾಘಿಸಿದ್ದಾರೆ.

ಬೆಂಗಳೂರಿನ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ; ವಿಡಿಯೊ ವೈರಲ್‌

ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

Bengaluru News: ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕೊಲೆ ಮಾಡಲು ಪತಿ ಯತ್ನಿಸಿದ ವೇಳೆ, ಆತನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್

ಐಪಿಎಲ್‌ನಲ್ಲಿ ಮತ್ತೆ ವಿವಾದದ ಹೊಗೆ; ವಿಮಾನದಲ್ಲಿ ದಮ್ಮು ಎಳೆದ ಚಾಹಲ್

Yuzvendra Chahal: ಐಪಿಎಲ್‌ ಆರಂಭಿಕ ಹಂತದಲ್ಲಿ ಯಜುವೇಂದ್ರ ಚಾಹಲ್‌, ಕಾರು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಮಾತ್ರವಲ್ಲದೆ ಸಿಗರೇಟ್ ಅನ್ನು ರಸ್ತೆಯಲ್ಲಿ ಎಸೆಯುವು ವೀಡಿಯೊದಲ್ಲಿ ಸೆರೆಯಾಗಿತ್ತು.

ಶಾಸಕಿ ದೂರ ತಳ್ಳಿದರೂ ಪದೇ ಪದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್‌ ನಾಯಕ; ವಿಡಿಯೊ ಇಲ್ಲಿದೆ

ಶಾಸಕಿ ದೂರ ತಳ್ಳಿದರೂ ಪದೇ ಪದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್‌ ನಾಯಕ

Viral Video: ನೂತನ ಶಾಸಕಿಯನ್ನು ಅಭಿನಂದಿಸಿ ಕಾಂಗ್ರೆಸ್‌ ಹಿರಿಯ ನಾಯಕ ತಬ್ಬಿಕೊಳ್ಳಲು ಮುಂದಾಗಿದ್ದು, ಆಕೆ ನಿರಾಕರಿಸಿರುವ ಘಟನೆ ಕೇರಳಂನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಇದೀಗ ಹರಿದಾಡುತ್ತಿದೆ. ಕಾಂಗ್ರೆಸ್‌ ನಾಯಕ ವರ್ತನೆಗೆ ಹಲವರು ಕಿಡಿ ಕಾರಿದ್ದಾರೆ.

ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆಗಳಲ್ಲಿ ಈಜಿ ಇತಿಹಾಸ ಬರೆದ ಬೆಂಗಳೂರಿನ ದಂಪತಿ

ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಬೆಂಗಳೂರಿನ ದಂಪತಿ

Swimming Challenge: ಶ್ರೀಲಂಕಾದಿಂದ ಭಾರತದವರೆಗಿನ ರಾಮಸೇತು ಮಾರ್ಗವಾಗಿ ಈಜುವ ಮೂಲಕ ಬೆಂಗಳೂರಿನ ದಂಪತಿ ಹೊಸ ಇತಿಹಾಸ ಬರೆದಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಸಾಧನೆ ಮಾಡಿದವರು. ಇವರು ಹಿಂದೂ ಮಹಾಸಾಗರದಲ್ಲಿ ಸುಮಾರು 32 ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ.

Loading...