ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಭಾರತದ ಡಿಸೈನ್ ಬಳಸಿದ ಹ್ಯಾಂಡ್ ಬ್ಯಾಗ್ ಬರೋಬ್ಬರಿ 8.3 ಲಕ್ಷ ರೂಪಾಯಿಗೆ ಮಾರಾಟ: ಇಟಲಿಯ ಫೆಂಡಿ ಸಂಸ್ಥೆ ವಿರುದ್ಧ ಹರ್ಷ್ ಗೋಯೆಂಕಾ, ಕಿರಣ್ ಮಜುಂದಾರ್ ಷಾ ಟೀಕೆ

ಭಾರತದ ಡಿಸೈನ್‌ನ ಈ ಬ್ಯಾಗ್‌ಗೆ ಬರೋಬ್ಬರಿ ಬಳಸಿ 8.3 ಲಕ್ಷ ರೂ.

Viral News: ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಫೆಂಡಿ 8.3 ಲಕ್ಷ ರೂಪಾಯಿಯ 'ಮಲ್ಟಿಕಲರ್ ಬ್ಯಾಗೆಟ್' ಹ್ಯಾಂಡ್‌ಬ್ಯಾಗ್ ವಿನ್ಯಾಸ ಮಾಡಿದೆ. ಇದರ ಕನ್ನಡಿ ಮತ್ತು ಮಣಿಗಳ ವಿನ್ಯಾಸವನ್ನು, ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬ್ಯಾಗ್‌ನಂತೆ ರೂಪಿಸಲಾಗಿದೆ. ಇದು ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಬ್ಯಾಗ್‌ನಂತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ ಭಕ್ತರು: ವಿಡಿಯೊ ನೋಡಿ

ಬ್ಯಾಂಕಾಕ್‌ನಲ್ಲಿ ಗಣೇಶನಿಗೆ ಬಬಲ್ ಟೀ ನೈವೇದ್ಯ

Viral News: ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿರುವ ಗಣಪತಿ ದೇವಾಲಯವೊಂದರಲ್ಲಿ ಚೌತಿಯನ್ನು ವಿಶಿಷ್ಟ ರೀತಿ ಆಚರಿಸಲಾಗಿದೆ. ಇಲ್ಲಿನ ಭಕ್ತರು ಸಾಂಪ್ರದಾಯಿಕ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ್ದಾರೆ. ಭಕ್ತರು ಗಣಪನಿಗೆ ಅರ್ಪಿಸಲು ಸ್ವತಃ ಬಬಲ್ ಟೀಯನ್ನು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭೋಪಾಲ್‌ನಲ್ಲಿ ʼಕಾಂತಾರʼ ಚಿತ್ರ ವೈಭವ: ‌ಗುಳಿಗ, ಪಂಜುರ್ಲಿ ದೈವದೊಂದಿಗೆ ಗಣಪತಿ ವಿಗ್ರಹವಿಟ್ಟು ಚೌತಿ ಆಚರಣೆ

ಭೋಪಾಲ್‌ನಲ್ಲಿ ಗುಳಿಗ, ಪಂಜುರ್ಲಿ ದೈವದೊಂದಿಗೆ ಕಂಗೊಳಿಸುತ್ತಿರುವ ಗಣಪ

Viral News: ಈ ಬಾರಿಯ ಮಧ್ಯ ಪ್ರದೇಶದ ಗಣೇಶೋತ್ಸವದಲ್ಲಿ ʼಕಾಂತಾರ ಚಾಪ್ಟರ್-1ʼ ಕಾನ್ಸೆಪ್ಟ್‌ ಆಧಾರಿತ ಅದ್ದೂರಿ ಸೆಟಪ್ ಮಾಡಲಾಗಿದ್ದು, ಗಮನ ಸೆಳೆದಿದೆ. ʼಕಾಂತಾರʼ ಸಿನಿಮಾದ ದೈವಾರಾಧನೆಯ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರೇರಿತಗೊಂಡು ವಿಶೇಷ ಪೆಂಡಲ್ ಸಿದ್ಧಪಡಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ಗುಳಿಗ ಮತ್ತು ಪಂಜುರ್ಲಿ ದೈವದ ವಿಗ್ರಹವನ್ನು ಕೂರಿಸಲಾಗಿದೆ.

ಡೆಲಿವರಿ ಸಿಬ್ಬಂದಿ ಕಷ್ಟ ನೋಡಲಾಗದೆ ತನಗಾಗಿ ತಂದ ಹೊಸ ಅಡಿಡಾಸ್ ಶೂ ನೀಡಿದ ಯುವಕ

ಡೆಲಿವರಿ ಬಾಯ್‌ ಕಷ್ಟ ಅರಿತು ಹೊಸ ಅಡಿಡಾಸ್ ಶೂ ನೀಡಿದ ಯುವಕ

Viral News: ಕೆಲವೊಮ್ಮೆ ನಾವು ತೋರಿಸುವ ಸರಳ ದಯೆ ಯಾರನ್ನಾದರೂ ಸಂತೋಷಪಡಿಸಲು ಸಾಕಾಗುತ್ತದೆ. ಇದಕ್ಕೆ ಉತ್ತರಾಖಂಡದ ಈ ಘಟನೆಯೇ ಸಾಕ್ಷಿ. ಅಮನ್ ಶರ್ಮಾ ಎಂಬ ಯುವಕ ತಮ್ಮ ಹೊಸ ಶೂಗಳನ್ನು ಡೆಲಿವರಿ ಪಾರ್ಟ್‌ನರ್‌ಗೆ ನೀಡುತ್ತಿರುವ ಕ್ಷಣ ಎಲ್ಲರ ಹೃದಯ ಗೆದ್ದಿದೆ. ಮಳೆಯಲ್ಲಿ ಯಾವುದೇ ರಕ್ಷಣೆ ಹಾಗೂ ಶೂ ಇಲ್ಲದೆ ಆಹಾರ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ತಮ್ಮ ಹೊಸ ಅಡಿಡಾಸ್ ಶೂ ಉಡುಗೊರೆಯಾಗಿ ನೀಡಿದ್ದಾರೆ.

ನದಿಯಂತಾದ ರಸ್ತೆಗಳು; ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಧಾರಾಕಾರ ಮಳೆಗೆ ಅಹಮದಾಬಾದ್ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ತುರ್ತು ವೈದ್ಯಕೀಯ ಸೇವೆಗಳಿಗೂ ಹಾದಿಯಿಲ್ಲದೆ ಜನರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಆಂಬುಲೆನ್ಸ್ ಬರಲಾಗದಿದ್ದಾಗ, ಕುಟುಂಬಸ್ಥರೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಹೆಗಲ ಮೇಲೆ ಹೊತ್ತು ಹರಿಯುವ ನೀರಿನಲ್ಲಿ ಸಾಗಿಸಿದ ದಯನೀಯ ಘಟನೆ ನಡೆದಿದೆ.

"ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಂದೇ ಭಾರತ್ ರೈಲಿನೊಳಗೆ ಎಲ್ಲವೂ ಚೆನ್ನಾಗಿತ್ತು"! ಆದರೆ ಸಹ ಪ್ರಯಾಣಿಕರ ವರ್ತನೆ ವಿರುದ್ಧ ಯುವಕ ಬೇಸರ!

ವಂದೇ ಭಾರತ್ ನಲ್ಲಿ ಪ್ಲಾಸ್ಟಿಕ್ ಎಸೆದು ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕರು

Viral News: ವಂದೇ ಭಾರತ್ ರೈಲು ಅತ್ಯಂತ ಸ್ವಚ್ಛವಾಗಿ ಕಂಡುಬಂದರೂ, ಸಿಬ್ಬಂದಿಗಳು ನಿಯಮಿತವಾಗಿ ಸ್ವಚ್ಛಗೊಳಿಸಿದ ಹೊರತಾಗಿಯೂ ಸೀಟುಗಳ ಕೆಳಗೆ ಮತ್ತು ಬೋಗಿಯ ವಿವಿಧ ಭಾಗಗಳಲ್ಲಿ ಕಸ ಬಿದ್ದಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಬೇಸರ ಹೊರಹಾಕಿದ್ದಾರೆ.

ಅಸದುದ್ದೀನ್ ಓವೈಸಿ ಬೆಂಗಾವಲು ಪಡೆಯ ವಾಹನ-ಬೈಕ್‌ಗಳ ನಡುವೆ ಡಿಕ್ಕಿ: ಹಲವರಿಗೆ ಗಾಯ

ಓವೈಸಿ ಅವರ ಬೆಂಗಾವಲು ಪಡೆ ಬೈಕ್‌ಗಳ ನಡುವೆ ಡಿಕ್ಕಿ

Bikes Collision: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆಯ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಹಲವಾರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಭೋಪಾಲ್ ನಲ್ಲಿ ನಡೆದಿದೆ. ತಿರುವಿನಲ್ಲಿ ಕೆಲವೊಂದು ವಾಹನಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಅಪಘಾತ ಸಂಭವಿಸಿದೆ.

ಪ್ರವಾಹದ ನಡುವೆಯೂ ಪಾಠಕ್ಕೆ ವಿರಾಮವಿಲ್ಲ; ಬಿಹಾರದಲ್ಲಿ ದೋಣಿಯೇ ಮಕ್ಕಳ ತರಗತಿ! ಕಲಿಕಾಸಕ್ತಿಗೆ ದೇಶವೇ ಫಿದಾ

ನೆರೆಯಿಂದ ಊರೇ ಮುಳುಗಿದಾಗ ದೋಣಿಯನ್ನೇ ತರಗತಿಯಾಗಿಸಿದ ಶಿಕ್ಷಕ

Bihar Flood: ಬಿಹಾರದ ಕತಿಹಾರ್‌ ಜಿಲ್ಲೆಯಲ್ಲಿ ಭಾರಿ ಪ್ರವಾಹದಿಂದ ಶಾಲೆ, ಮನೆ ಹಾಗೂ ಕೋಚಿಂಗ್‌ ಕೇಂದ್ರಗಳು ಜಲಾವೃತವಾಗಿವೆ. ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಖಾಸಗಿ ಶಿಕ್ಷಕರೊಬ್ಬರು ದೋಣಿಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಪಾಠ ಮುಂದುವರಿಸಲಾಗುತ್ತಿದ್ದು, ಪ್ರವಾಹದ ನಡುವೆಯೂ ಶಿಕ್ಷಣದ ಮಹತ್ವವನ್ನು ಮಕ್ಕಳು ಸಾರಿದ್ದಾರೆ.

ಖಾಕಿ ತೊಟ್ಟು ಮಕ್ಕಳಂತೆ ಪಾರ್ಕ್‌ನಲ್ಲಿ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ: ವಿಡಿಯೊ ವೈರಲ್

ಪಾರ್ಕ್‌ನಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ

Viral News: ಉದ್ಯಾನವನವೊಂದರಲ್ಲಿ ಕರ್ತವ್ಯದ ನಡುವಿನ ಬಿಡುವಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಮೆರ್ರಿ-ಗೋ-ರೌಂಡ್ ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಮಕ್ಕಳು ಆಡುವ ಆಟಿಕೆ ಮೇಲೆ ಕುಳಿತು ಸಮವಸ್ತ್ರಧಾರಿ ಸಿಬ್ಬಂದಿ ಬಾಲ್ಯದ ಕ್ಷಣ ಕಳೆದಿದ್ದಾರೆ. ಆದರೆ ಈ ವಿಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ.

ಬೈಕ್‌ನಲ್ಲಿ ಬಂದು ವೃದ್ಧೆಯ ಸರ ದೋಚಲು ಯತ್ನ: ಕಳ್ಳರನ್ನು ಬೆನ್ನಟ್ಟಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ವೃದ್ಧೆಯ ಸರ ಕಳವಿಗೆ ಯತ್ನ: ಖದೀಮರನ್ನು ಹಿಡಿದ ಸ್ಥಳೀಯರು

Viral News: ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಿಂದ ಸರ ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಗಟ್ಟಿಯಾಗಿ ಬೊಬ್ಬೆ ಹಾಕುತ್ತಿದ್ದಂತೆ ಸಾರ್ವಜನಿಕರು ಒಟ್ಟಾಗಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ‌. ಕಳ್ಳರು ಮಹಿಳೆಯ ಕುತ್ತಿಗೆಯಿಂದ ಸರ ಕಸಿದುಕೊಳ್ಳಲು ಪ್ರಯತ್ನಿ ಸುತ್ತಿರುವುದು ಕಂಡುಬಂದಿದೆ. ಕೊನೆಗೂ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಹಬ್ಬ ಮಿಸ್ ಮಾಡಿಕೊಂಡ ಏರ್ ಇಂಡಿಯಾ ಸಿಬ್ಬಂದಿಗೆ ಫ್ಲೈಟ್‌ನಲ್ಲೇ ಬಪ್ಪನ ದರ್ಶನ! ಹೃದಯಸ್ಪರ್ಶಿ ದೃಶ್ಯ ವೈರಲ್‌

35,000 ಅಡಿ ಎತ್ತರದಲ್ಲಿ ಫ್ಲೈಟ್‌ನಲ್ಲೇ ಚೌತಿ ಏರ್ ಇಂಡಿಯಾ ಸಿಬ್ಬಂದಿ

Ganpati Puja 2026: ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದ್ದಾಗ ವಿಶೇಷವಾಗಿ ಗಣೇಶ ಹಬ್ಬವೊಂದನ್ನು ಆಚರಿಸಿಕೊಂಡಿದ್ದಾರೆ. ಫ್ಲೈಟ್ ಸಮಯ ಕೊನೆ ಕ್ಷಣದಲ್ಲಿ ಬದಲಾದ ಕಾರಣ ಸಿಬ್ಬಂದಿಯೊಬ್ಬರಿಗೆ ತಮ್ಮ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ ಗಣಪನ ಆಶೀವಾರ್ದ ಎಂಬಂತೆ ಒಬ್ಬ ಪ್ರಯಾಣಿಕರು ವಿಮಾನದಲ್ಲಿ ಗಣಪತಿ ವಿಗ್ರಹವನ್ನು ತಂದಿದ್ದು ಇದನ್ನು ಕಂಡ ಅನುರಾಧಾ ಹಾಗೂ ಅವರ ಸಹೋದ್ಯೋಗಿ ಸಿಬ್ಬಂದಿಗಳು ಆಕಾಶದಲ್ಲೇ ಗಣಪತಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ‌.

ಸೌಂದರ್ಯ ವರ್ಧಕ ಚಿಕಿತ್ಸೆಗಾಗಿ 4 ಕೋಟಿ ರೂಪಾಯಿ ವೆಚ್ಚ ಮಾಡಿದ 75 ವರ್ಷದ ವೃದ್ಧೆ; ಈಗ ಊಟಕ್ಕೂ ಗತಿ ಇಲ್ಲ

ಸೌಂದರ್ಯ ಚಿಕಿತ್ಸೆಗೆ 4 ಕೋಟಿ ರೂ. ಖರ್ಚು ಮಾಡಿದ 75 ವರ್ಷದ ವೃದ್ಧೆ

Viral News: 75 ವರ್ಷದ ವೃದ್ಧೆಯೊಬ್ಬಳು ತಮ್ಮ ಇಡೀ ಉಳಿತಾಯ ಹಣವನ್ನು ಕೇವಲ ಸೌಂದರ್ಯ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಹಣವನ್ನು ಒಂದೇ ಬ್ಯೂಟಿ ಸೆಲೂನ್‌ನಲ್ಲಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ. ಆದರೆ ಈ ಇಡೀ ಹಣ ಖಾಲಿಯಾದ ನಂತರ ವೃದ್ಧೆ ಮನೆ ಬಾಡಿಗೆ ಕಟ್ಟಲು ಮತ್ತು ದಿನನಿತ್ಯದ ವೆಚ್ಚಗಳಿಗೂ ಹಣವಿಲ್ಲದೆ ಒಡವೆಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾಳೆ.

Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್

ವಿಮಾನದಲ್ಲಿ ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿದ ಮಹಿಳೆ

Obscene Behaviour in Flight:ಅಮೆರಿಕದ ವಿಮಾನಯಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಅಮೆರಿಕದ ಬಾಲ್ಟಿಮೋರ್‌ನಿಂದ ಮಿಯಾಮಿ ನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು.

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌; ನೇಹಾ ಕಕ್ಕರ್‌ಗಿಂತಲೂ ವಾಯ್ಸ್‌ ಚೆನ್ನಾಗಿದೆ ಎಂದು ಗಾಯಕಿಯ ಕಾಲೆಳೆದ ನೆಟ್ಟಿಗರು

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌

Sonu Nigam: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಈ ವೇಳೆ ಹಾಡೊಂದನ್ನು ಏಕಕಾಲಕ್ಕೆ ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಗಾಯಕನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ದಳಪತಿ ವಿಜಯ್‌ ಫ್ಯಾನ್ಸ್‌ ಅತಿರೇಕದ ವರ್ತನೆ; ಗಣೇಶನ ರೂಪದಲ್ಲಿ ನಟನನ್ನು ನೋಡಿ ನೆಟ್ಟಿಗರು ಕಿಡಿ: ತಮಿಳುನಾಡಿನಲ್ಲಿ ಜೋರಾಯ್ತು ರಾಜಕೀಯ ಚರ್ಚೆ

ವಿಜಯ್‌ ರೂಪದಲ್ಲಿ ಗಣೇಶನನ್ನು ನೋಡಿ ನೆಟ್ಟಿಗರು ಕಿಡಿ

Vijay-Themed Ganesh Idols: ಗಣೇಶ ಚತುರ್ಥಿ ಪ್ರಯುಕ್ತ ತಮಿಳುನಾಡನಲ್ಲಿ ಮುಖ್ಯಮಂತ್ರಿ ಹಾಗೂ ನಟ ವಿಜಯ ರೂಪ ಹೋಲುವ ಗಣೇಶ ವಿಗ್ರಹಗಳು ತಯಾರಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ತಕ್ಷಣ ವಿಗ್ರಹಗಳನ್ನು ತೆರವುಗೊಳಿಸಬೇಕು ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್‌ ಮಂಗಳವಾರ ಒತ್ತಾಯಿಸಿದ್ದಾರೆ.

ಎಸಿ ಕೋಚ್‌ನಲ್ಲಿ ಮದ್ಯಪಾನ ಮಾಡಿ ರಂಪಾಟ ಮಾಡಿದ ಸಹಪ್ರಯಾಣಿಕರು: ವಿಡಿಯೊ ಮೂಲಕ ಕಹಿ ಅನುಭವ ಬಿಚ್ಚಿಟ್ಟ ಯುವತಿ!

ಎಸಿ ಬೋಗಿಯಲ್ಲಿ ಮದ್ಯಪಾನ ಮಾಡಿ ಸಹಪ್ರಯಾಣಿಕರಿಂದ ಕಿರಿಕಿರಿ: ಯುವತಿ ಆಕ್ರೋಶ

Viral News: ಗುವಾಹಟಿಯಿಂದ ಕೋಲ್ಕತ್ತಾಕ್ಕೆ ಎಸಿ ಕೋಚ್ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬರು ಸಹ ಪ್ರಯಾಣಿಕರಿಂದ ಉಂಟಾದ ಕಿರಿಕಿರಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ‌. ಸಾರಾಯ್‌ ಘಾಟ್ ಎಕ್ಸ್‌ಪ್ರೆಸ್‌ನ 2AC ಬೋಗಿಯಲ್ಲಿದ್ದ ಸಹ-ಪ್ರಯಾಣಿಕರು ಮದ್ಯಪಾನ ಮಾಡುವುದು, ಬೋಗಿಯೊಳಗೆ ಕಸ ಹಾಕುವುದು ಮತ್ತು ರಾತ್ರಿಯಿಡೀ ಜೋರಾಗಿ ಸಂಗೀತ ನುಡಿಸುವ ಮೂಲಕ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳಿಂದ ಸ್ಪಂದನೆ ಸಿಗದೇ ಸ್ವಂತ ಖರ್ಚಿನಲ್ಲಿ ಫುಟ್‌ಪಾತ್ ದುರಸ್ತಿಗೊಳಿಸಿದ ಬೆಂಗಳೂರಿನ ಕಂಪನಿಯೊಂದರ ಸಿಇಒ! GBA ವಿರುದ್ಧ ನೆಟ್ಟಿಗರು ಕಿಡಿ!

ಸ್ವಂತ ಖರ್ಚಿನಲ್ಲೇ ಫುಟ್‌ಪಾತ್ ದುರಸ್ತಿಗೊಳಿಸಿದ ಬೆಂಗಳೂರಿನ ಸಿಇಒ!

Viral News: ಕೊರಮಂಗಲದಲ್ಲಿರುವ ವಸತಿ ಸಂಕೀರ್ಣದ ಮುಂಭಾಗದಲ್ಲಿದ್ದ ಹಾನಿಗೊಳಗಾಗಿದ್ದ ಫುಟ್‌ಪಾತ್‌ ಅನ್ನು ಸರಿಪಡಿಸಲು ಅಧಿಕಾರಿಗಳಿಗೆ ದೂರು ನೀಡಿದರೂ ಗಮನಹರಿಸದೇ ಇದ್ದಾಗ ಬೆಂಗಳೂರಿನ ಕಂಪನಿಯೊಂದರ ಸಿಇಒ ಒಬ್ಬರು ಸ್ವತಃ ತಾವೇ ಕ್ರಮ ಕೈಗೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ಫುಟ್ ಪಾತ್ ದುರಸ್ತಿ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ ಕೈತಪ್ಪಿ ಬಿದ್ದು 9 ತಿಂಗಳ ಕಂದಮ್ಮನ ದಾರುಣ ಅಂತ್ಯ: 23 ಗಂಟೆಗಳ ಬಳಿಕ ಮೃತದೇಹ ಪತ್ತೆ

ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ 9 ತಿಂಗಳ ಮಗು ಬಿದ್ದು ಸಾವು

Faizullahpur Horror: ಚಲಿಸುವ ರೈಲಿನಿಂದ 9 ತಿಂಗಳ ಕಂದಮ್ಮ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ‌. ಉತ್ತರ ಪ್ರದೇಶದ ಫೈಜುಲ್ಲಾಪುರ ನಿಲ್ದಾಣದ ಬಳಿ ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾಗ ಮಗು ಕಿಟಕಿಯಿಂದ ಜಾರಿ ಬಿದ್ದಿದೆ.

ಸಾಮಾನ್ಯ ಜನರ ಕಷ್ಟ ಅರಿಯಲು ಭಿಕ್ಷುಕನ ವೇಷ ಧರಿಸಿ ಬೀದಿಗೆ ಇಳಿದ ಮುಂಬೈಯ ಬಿಜೆಪಿ ಶಾಸಕ: ವಿಡಿಯೊ ವೈರಲ್

ಭಿಕ್ಷುಕನ ವೇಷ ಧರಿಸಿ ಬೀದಿಯಲ್ಲಿ ಓಡಾಡಿದ ಮುಂಬೈ ಶಾಸಕ: ವಿಡಿಯೊ ನೋಡಿ

Viral Video: ಅತ್ಯಂತ ಶ್ರಿಮಂತ ಬಿಜೆಪಿ ಶಾಸಕರೊಬ್ಬರು ಭಿಕ್ಷುಕನ ವೇಷ ಧರಿಸಿ ಮುಂಬೈಯ ಬೀದಿಗೆ ಇಳಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ದಿನವಿಡೀ ಅಲ್ಲಿದ್ದ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸಿಕ್ಕ ಆಹಾರವನ್ನೇ ಅವರು ಸೇವಿಸಿದ್ದಾರೆ. ಪ್ರಸಿದ್ಧ ರಾಜಕಾರಣಿಯಾಗಿದ್ದರೂ, ಸುತ್ತಮುತ್ತಲ ಜನರಿಗೆ ಅವರು ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಈ ವಿಶಿಷ್ಟ ಪ್ರಯೋಗದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ರಸ್ತೆ ಬದಿಯಲ್ಲಿ ಕುಳಿತಿರುವುದು ಮತ್ತು ಜನರಲ್ಲಿ ಭಿಕ್ಷೆ ಬೇಡುವುದು ಕಂಡುಬಂದಿದೆ.

ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ನಾಯಿ ಕರೆದೊಯ್ಯುವ ವಿಚಾರಕ್ಕೆ ಮಹಿಳೆಯರಿಬ್ಬರ ನಡುವೆ ಮಾರಾಮಾರಿ: ವಿಡಿಯೊ ವೈರಲ್

ಲಿಫ್ಟ್‌ನಲ್ಲಿ ನಾಯಿ ವಿಚಾರವಾಗಿ ಹೊಡೆದಾಡಿಕೊಂಡ ಮಹಿಳೆಯರು: ವಿಡಿಯೊ ಇಲ್ಲಿದೆ

Viral Video: ಕೇವಲ ಸಾಕು ನಾಯಿಯ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಭೀಕರ ಜಗಳ ನಡೆದಿದ್ದು ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಗಾಜಿಯಾಬಾದ್‌ನ ವಸತಿ ಸೊಸೈಟಿಯಲ್ಲಿ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಜಗಳ ನಡೆದಿದ್ದು ಬಳಿಕ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಭಾರತೀಯ ಸಂಸ್ಕೃತಿಯ ವೈಭವ: ಥೇಮ್ಸ್ ನದಿ ತೀರದಲ್ಲಿ ಗಂಗಾ ಆರತಿಗೆ ಸಾವಿರಾರು ಭಕ್ತರು ಸಾಕ್ಷಿ

ಇಂಗ್ಲೆಂಡ್‌ನ ಥೇಮ್ಸ್ ನದಿಯ ದಂಡೆಯಲ್ಲಿ ಗಂಗಾ ಆರತಿಯ ಸಂಭ್ರಮ

Viral News: ಇಂಗ್ಲೆಂಡ್‌ನ ಲಂಡನ್‌ನ ಥೇಮ್ಸ್ ನದಿ ತೀರದಲ್ಲಿ ಇದೇ ಮೊದಲ ಬಾರಿಗೆ ಗಂಗಾ ಆರತಿ ನಡೆಯಿತು. ಪ್ರಾರ್ಥನೆ, ಧ್ಯಾನ, ಭಾರತೀಯ ಸಾಂಸ್ಕೃತಿಕ ವೈಭವದ ಜತೆಗೆ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಸಾಮಾನ್ಯವಾಗಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಂಡುಬರುವಂತಹ ಸಮಾರಂಭವೊಂದು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ನಡೆದಿದ್ದು ವಿಶೇಷವಾಗಿತ್ತು.

ಮಹಿಳಾ ರೈಡರ್‌ ಮೇಲೆ ಕಾರ್ ಚಲಾಯಿಸಿ ಪರಾರಿಯಾದ ದುಷ್ಕರ್ಮಿಗಳು! ಹೆಲ್ಮೆಟ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮಹಿಳಾ ರೈಡರ್ ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾದ ಪುಂಡರು!

Viral News: ಗುರುಗ್ರಾಮ್ ನಲ್ಲಿ ಮಹಿಳಾ ಬೈಕರ್‌ವೊಬ್ಬರಿಗೆ ಎದುರಾದ ಅನುಭವವನ್ನು ಶೇರ್ ಮಾಡಿದ್ದಾರೆ. ಬೈಕ್ ನಲ್ಲಿ ಸಿಯಾ ಎಂಬ ಮಹಿಳೆ ತನ್ನ ರೈಡಿಂಗ್ ಗ್ರೂಪ್ ಜೊತೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೈಕರ್ ಅನ್ನು ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು ಬೈಕ್ ಕೆಲವು ಮೀಟರ್‌ಗಳ ಕಾಲ ರಸ್ತೆಗೆ ಎಸೆಯಲ್ಪಟ್ಟಿದೆ‌. ಈ ಇಡೀ ಘಟನೆ ಬೈಕ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಾರತೀಯ ಚಾಲಕನ ಸೇವೆಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್: ಸರಳತೆಗೆ ನೆಟ್ಟಿಗರು ಫಿದಾ!

ಭಾರತೀಯ ಚಾಲಕನಿಗೆ ಶುಭಹಾರೈಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್!

Viral Video: ಭಾರತಕ್ಕೆ ಭೇಟಿ ನೀಡಿದ ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸರಳತೆ ಸಾರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ತಮ್ಮ ಭಾರತ ಪ್ರವಾಸವನ್ನು ಮುಗಿಸಿ ವಿಮಾನ ಏರಲು ಸಜ್ಜಾಗುತ್ತಿದ್ದಾಗ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದಲ್ಲದೆ ವಾಹನ ಚಾಲಕನಿಗೂ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ.

ಮಾನವೀಯತೆ ಇನ್ನೂ ಜೀವಂತ: ಚಾಲಕನ ಆಯಾಸ ಅರಿತು ತಾನೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ ಪ್ರಯಾಣಿಕ

ಚಾಲಕನ ದಣಿವು ಗಮನಿಸಿ ತಾನೇ ಕ್ಯಾಬ್ ಚಲಾಯಿಸಿದ ಪ್ರಯಾಣಿಕ

Viral News: ಕ್ಯಾಬ್ ಚಾಲಕನೊಬ್ಬ ತೀರಾ ನಿದ್ದೆಯಲ್ಲಿ ಇರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಾವೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ್ದಾರೆ. ಪ್ರಯಾಣಿಕ ತೋರಿದ ಮಾನವೀಯ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೊದಲ್ಲಿ ಶಿವ ಮಿಶ್ರಾ ವಾಹನ ಚಲಾಯಿಸುತ್ತಿರುವುದು ಮತ್ತು ಅವರ ಸಹೋದರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಕ್ಯಾಬ್ ಚಾಲಕ ಹಿಂಬದಿಯ ಸೀಟಿನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

Loading...