ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಮಾನವೀಯತೆ ಇನ್ನೂ ಜೀವಂತ: ಚಾಲಕನ ಆಯಾಸ ಅರಿತು ತಾನೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ ಪ್ರಯಾಣಿಕ

ಚಾಲಕನ ದಣಿವು ಗಮನಿಸಿ ತಾನೇ ಕ್ಯಾಬ್ ಚಲಾಯಿಸಿದ ಪ್ರಯಾಣಿಕ

Viral News: ಕ್ಯಾಬ್ ಚಾಲಕನೊಬ್ಬ ತೀರಾ ನಿದ್ದೆಯಲ್ಲಿ ಇರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಾವೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ್ದಾರೆ. ಪ್ರಯಾಣಿಕ ತೋರಿದ ಮಾನವೀಯ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೊದಲ್ಲಿ ಶಿವ ಮಿಶ್ರಾ ವಾಹನ ಚಲಾಯಿಸುತ್ತಿರುವುದು ಮತ್ತು ಅವರ ಸಹೋದರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಕ್ಯಾಬ್ ಚಾಲಕ ಹಿಂಬದಿಯ ಸೀಟಿನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಮಾಲಕನ ಕಣ್ಣೆದುರೇ ಹಸುವಿನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Viral News: ಕಾಮುಕನೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯೊಂದು ವರದಿಯಾಗಿದೆ. ಎರಡು ವರ್ಷದ ಹಸುವಿನ ಮೇಲೆ ಈ ಪಾಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನನ್ನು ಕನುಭಾಯಿ ಗೊಂಡಾಲಿಯಾ ಎಂದು ಗುರುತಿಸಲಾಗಿದ್ದು, ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿ ಔಷಧ ಆರ್ಡರ್ ಮಾಡಿದ ವ್ಯಕ್ತಿಗೆ ಮೆಡಿಸಿನ್ ಜತೆ ಸಿಕ್ಕಿದ್ದು ವೈದ್ಯರ ಸಮಾಲೋಚನೆ: ಉಚಿತ ಸೇವೆಗೆ ಉದ್ಯಮಿ ಅರವಿಂದ್ ಅರೋರಾ ಮೆಚ್ಚುಗೆ

ಬ್ಲಿಂಕ್‌ಇಟ್‌ನಿಂದ ಔಷಧಿ ಜತೆಗೆ ವೈದ್ಯರ ಉಚಿತ ಸಲಹೆ: ನೆಟ್ಟಿಗರು ಫಿದಾ

Viral News: ದಿನ ನಿತ್ಯ ಆಹಾರ ವಸ್ತುಗಳಿಂದ ಹಿಡಿದು ಮೆಡಿಸಿನ್, ಆಂಬ್ಯುಲೆನ್ಸ್ ಸೇವೆಯನ್ನು ಜನರು ಆ್ಯಪ್‌ ಮೂಲಕ ಪಡೆಯುತ್ತಿದ್ದಾರೆ‌. ಇದೀಗ ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿಯಲ್ಲಿ ತುರ್ತು ಔಷಧಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಉಚಿತ ವೈದ್ಯರ ಸಮಾಲೋಚನೆ ಸಿಕ್ಕಿರುವ ಬಗ್ಗೆ ಉದ್ಯಮಿ ಅರವಿಂದ್ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರಸ್ತೆಗೆ ಕಸ ಎಸೆದು ಉದ್ಧಟತನ ತೋರಿದ ಬೈಕ್ ಸವಾರ: ವೈರಲ್ ವಿಡಿಯೋ ಕಂಡು ನೆಟ್ಟಿಗರು ಫುಲ್ ಗರಂ!

ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲ! ರಸ್ತೆಗೆ ಕಸ ಎಸೆದು ಜಗಳ ತೆಗೆದ ಸವಾರ!

Viral News: ಹೈದರಾಬಾದ್‌ನ ರಸ್ತೆಯಲ್ಲಿ ಹೋಗುತ್ತಿದ್ದ ಸವಾರನೊಬ್ಬ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ವ್ಯಕ್ತಿ ಕಸ ಹಾಕಿದ್ದನ್ನು ಪ್ರಶ್ನಿಸಿ ತಾನೇ ಕಸ ಹೆಕ್ಕಿ ತೊಟ್ಟಿಗೆ ಹಾಕುತ್ತಾನೆ‌. ಆದರೆ ಬೈಕ್ ಸವಾರ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ನಿನ್ನನ್ನು ಹೈದರಾಬಾದ್ ಮಹಾನಗರ ಪಾಲಿಕೆ ಕೆಲಸಕ್ಕೆ ಇಟ್ಟುಕೊಂಡಿದೆಯಾ? ಎಂದು ಗೇಲಿ ಮಾಡಿದ್ದಾನೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತನ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್‌; ಟಾರ್ಚ್ ಬೆಳಕಿನಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ

ಬಿಹಾರ ಆಸ್ಪತ್ರೆಯಲ್ಲಿ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ

ಬಿಹಾರ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿಆಸ್ಪತ್ರೆ ಸಿಬ್ಬಂದಿ ಮೊಬೈಲ್ ಟಾರ್ಚ್ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗರ್ಭಿಣಿಯರಿಗೆ ಟಾರ್ಚ್ ಮತ್ತು ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ; ವಿಡಿಯೊ ವೈರಲ್

ಬ್ರಿಕ್ಸ್‌ನಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ

Malaysian PM Sings a Bollywood Song: 18ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಕಿಶೋರ್ ಕುಮಾರ್ ಅವರ ಎವರ್‌ಗ್ರೀನ್ ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ರೀಲ್ಸ್‌ ಹುಚ್ಚು;  ತುಂಬಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರ್‌ ನುಗ್ಗಿಸಿದ ಯುವಕರು, ಮುಂದೆ ಆಗಿದ್ದೇನು?

ನದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರ್‌ ನುಗ್ಗಿಸಿದ ಯುವಕರು!

Viral Video: ಯುವಕರ ಗುಂಪೊಂದು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ವಾಹನವನ್ನು ಬಳಸಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಕಾರ್ ಅನ್ನು ತುಂಬಿ ಹರಿಯುತ್ತಿರುವ ಸಿಂಧ್ ನದಿಗೆ ನುಗ್ಗಿಸಿ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಆದರೆ ವಾಹನವು ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಲಾಗದೆ ನಡು ನದಿಯಲ್ಲಿಯೇ ನಿಂತುಹೋಗಿದೆ. ಇದರಿಂದಾಗಿ ವಾಹನದಲ್ಲಿದ್ದ ಯುವಕರು ಕಂಗಲಾಗಿದ್ದಾರೆ.

ಗಂಗಾ ನದಿ ತ್ಯಾಜ್ಯವನ್ನು ಒಬ್ಬಂಟಿಯಾಗಿ ವಿಲೇವಾರಿ ಗೊಳಿಸಿದ ಯುವಕ: ಪರಿಸರ ಕಾಳಜಿಗೆ ನೆಟ್ಟಿಗರು ಫಿದಾ!

ಅಪಾಯವನ್ನು ಲೆಕ್ಕಿಸದೇ ಗಂಗಾ ನದಿಯನ್ನು ಸ್ವಚ್ಛಗೊಳಿಸದ ಉತ್ತರಪ್ರದೇಶ ಯುವಕ

Viral News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 21 ವರ್ಷದ ಯುವಕನೊಬ್ಬ ಗಂಗಾ ನದಿಯಲ್ಲಿ ತುಂಬಿಹೋಗಿದ್ದ ಕಸ ತ್ಯಾಜ್ಯವನ್ನು ಒಬ್ಬಂಟಿಯಾಗಿ ತೆರವು ಗೊಳಿಸಿದ್ದಾನೆ‌. ಒಡೆದ ಗಾಜಿನ ಬಾಟಲಿಗಳು, ರಟ್ಟಿನ ತುಂಡುಗಳು, ಹಳೆಯ ಬಟ್ಟೆಗಳು, ಆಹಾರದ ತ್ಯಾಜ್ಯ ಮತ್ತು ಇತರ ತ್ಯಜಿಸಿದ ವಸ್ತುಗಳನ್ನು ಹೊರತೆಗೆದಿದ್ದಾರೆ.

Viral Video: ಹಠಾತ್ ಮಳೆ: ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು

ಮಳೆಯಿಂದ ಕೆಳಕ್ಕೆ ಬಿದ್ದು ನಾಶವಾದ ಬೃಹತ್ ಗಣೇಶನ ವಿಗ್ರಹ

Ganesh chaturthi 2026: ಹಠಾತ್ ಸುರಿದ ಮಳೆಯಿಂದಾಗಿ ಪಂಡಾಲ್‌ಗೆ ತರುತ್ತಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದು ನಾಶವಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬೃಹತ್ ಮೂರ್ತಿಯ ಅಡಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದ್ದು, ಈ ಘಟನೆ ಶನಿವಾರ ಸಂಜೆ ನಲಸೋಪರ ಪಶ್ಚಿಮದಲ್ಲಿ ನಡೆದಿದೆ.

5G ನೆಟ್‌ವರ್ಕ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಟೆಲಿಕಾಂ ಟೆಕ್ನಿಷಿಯನ್‌; ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ ಸಾರ್ವಜನಿಕರು

ಟೆಲಿಕಾಂ ಟೆಕ್ನಿಷಿಯನ್‌ನ್ನು ಟವರ್‌ಗೆ ಕಟ್ಟಿ ಹಾಕಿದ ಗ್ರಾಮಸ್ಥರು

Viral Video: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳಿಂದ 5G ನೆಟ್‌ವರ್ಕ್ ತೊಂದರೆ ಎದುರಿಸುತ್ತಿರುವುದಾಗಿ ಆರೋಪಿಸಿದ ಸಾರ್ವಜನಿಕರು, ಸಮಸ್ಯೆ ಪರಿಶೀಲಿಸಲು ಬಂದಿದ್ದ ಟೆಲಿಕಾಂ ಟೆಕ್ನಿಷಿಯನ್‌ನ್ನು ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಪ್ರಿಯಕರನೊಂದಿಗೆ ಓಡಿಹೋದ ಮಹಿಳೆಯನ್ನು ಹುಡುಕಿ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ ಪತಿರಾಯ! ಸಿನಿಮಾ ಕಥೆಯನ್ನೂ ಮೀರಿಸುವ ಘಟನೆ ಇದು

ಪ್ರಿಯಕರನೊಂದಿಗೆ ಪತ್ನಿಯ ವಿವಾಹ ನೆರವೇರಿಸಿದ ಪತಿರಾಯ

Viral News: ಸುಮಾರು ಒಂದು ವರ್ಷದ ಹಿಂದೆ ಪಿಆರ್‌ಡಿ ಜವಾನನೊಂದಿಗೆ ಮದುವೆಯಾಗಿದ್ದ ಮಹಿಳೆ, ನಾಲ್ಕು ದಿನಗಳ ಹಿಂದೆ ತನ್ನ ಮನೆಯನ್ನು ತೊರೆದು ಮಾಜಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದಳು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪತ್ತೆಹಚ್ಚಿದ ಗಂಡ, ಪ್ರೇಮಿಯೊಂದಿಗೆ ವಿವಾಹ ಮಾಡಿದ್ದಾನೆ.

ಬಾವಿಗೆ ಬಿದ್ದ ಶ್ವಾನಗಳ ಜೀವ ಉಳಿಸಲು 60 ಅಡಿ ಆಳಕ್ಕೆ ಧುಮುಕಿದ ರಕ್ಷಣಾ ತಂಡದ ಸದಸ್ಯರು; ಕಾರ್ಯಾಚರಣೆ ವಿಡಿಯೊ ನೋಡಿ

60 ಅಡಿ ಆಳದ ಬಾವಿಗೆ ಬಿದ್ದ ಶ್ವಾನಗಳ ರಕ್ಷಣೆ: ವಿಡಿಯೊ ನೋಡಿ

Viral Video: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 60 ಅಡಿ ಆಳದ ಬಾವಿಗೆ ಎರಡು ನಾಯಿಗಳು ಬಿದ್ದಿದ್ದು, ಪ್ರಾಣ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದವು. ರಕ್ಷಣಾ ತಂಡವು ಸುಮಾರು 90 ಕಿಲೋ ಮೀಟರ್ ಪ್ರಯಾಣಿಸಿ ಮೂಕ ಪ್ರಾಣಿಗಳ ಜೀವ ಉಳಿಸಿದೆ.

"ನೋವೆಲ್ಲ ಗಂಗೆಯಲ್ಲಿ ತೇಲಿ ಹೋಯ್ತು": ವಾರಣಾಸಿ ಪ್ರವಾಸದ ಬಳಿಕ ಸ್ಪ್ಯಾನಿಷ್ ಮಹಿಳೆ ಭಾವುಕ

ವಾರಣಾಸಿಯ ಆಧ್ಯಾತ್ಮಿಕ ಶಕ್ತಿ ಕೊಂಡಾಡಿದ ವಿದೇಶಿ ಮಹಿಳೆ

Viral News: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ- ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಇಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ. ಇದೀಗ ಧಾರ್ಮಿಕ ನಗರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸ್ಪ್ಯಾನಿಷ್ ಮಹಿಳೆ ಆಂಡ್ರಿಯಾ ಪಾಸ್ಪರ್ ತಮಗಾದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Viral Video: 20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿದ ಕಾರ್‌ ಚಾಲಕ

Viral News: ಅಮೆರಿಕದ ಅಟ್ಲಾಂಟಾದಲ್ಲಿ ಭೀಕರ ಅಪಘಾತವೊಂದು ನಡೆದಿದೆ‌. ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದು, ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅದೃಷ್ಟವಶಾತ್ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

Viral Video: ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ  ಅರಣ್ಯಾಧಿಕಾರಿಗಳು

ಕತ್ತಿನಲ್ಲಿ ಟೈರ್ ಸಿಲುಕಿಕೊಂಡು ಒದ್ದಾಡಿದ ಕಾಡಾನೆ ಬಚವಾಗಿದ್ದು ಹೇಗೆ?

Viral Video: ಕಾಡಾನೆಯೊಂದರ ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಬಿಗಿಯಾಗಿ ಸಿಲುಕಿಕೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಅರಿತುಕೊಂಡ ಅರಣ್ಯಾಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಕೊನೆಗೂ ಟೈರನ್ನು ಹೊರ ತೆಗೆದು ಆನೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಾನವನ ನಿರ್ಲಕ್ಷ್ಯದಿಂದ ವನ್ಯಜೀವಿಗಳಿಗೆ ಎದುರಿಸುವ ಅಪಾಯದ ಉದಾಹರಣೆ ಎಂದು ನೆಟ್ಟಿಗರು ಹೇಳಿದ್ದಾರೆ.

ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿಗೆ ಖಾರದ ಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ ಕಳ್ಳ: ಕೆಲವೇ ನಿಮಿಷದಲ್ಲಿ ಖದೀಮನ ಹೆಡೆಮುಡಿ ಕಟ್ಟದ ಪೊಲೀಸರು

ಬ್ಯಾಂಕ್ ಸಿಬ್ಬಂದಿ ಮೇಲೆ ಮೆಣಸಿನ ಪುಡಿ ಎರಚಿ 4 ಲಕ್ಷ ರೂ. ದೋಚಿದ

Viral News: ಬ್ಯಾಂಕ್‌ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ, 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಯೊಂದು ನಡೆದಿದೆ. ಆದಾಗ್ಯೂ, ಪೊಲೀಸರು 30 ನಿಮಿಷಗಳಲ್ಲಿ ಆತನನ್ನು ಪತ್ತೆಹಚ್ಚಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಸಿನಿಮೀಯ ಘಟನೆ ನಡೆದಿದೆ.

ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ: ವಿಡಿಯೊ ವೈರಲ್

ಸರಕಾರಿ ಬಸ್ ನಲ್ಲಿ ಪ್ರಯಾಣಿಕರಿಬ್ಬರ ದೈಹಿಕ ಘರ್ಷಣೆ: ವಿಡಿಯೊ ವೈರಲ್

Viral Video: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್‌ನಲ್ಲಿಯೇ ಪ್ರಯಾಣಿಕರಿಬ್ಬರು ಜಗಳವಾಡಿದ್ದು ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲೂ ಪ್ರಯಾಣಿಕರು ಇದ್ದರೂ ಕ್ಯಾರೇ ಎನ್ನದೇ ಮಾತಿಗೆ ಮಾತು ಬೆಳೆಸಿದ್ದಾರೆ. ಈ ಘಟನೆಯೂ ಪುಣೆಯ ಭೋಸರಿಯಲ್ಲಿ ನಡೆದಿದ್ದು ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋವನ್ನು ಮತ್ತೊಬ್ಬ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ದಿನಕ್ಕೆ ನೂರು ಕರೆ ಮಾಡಿ ಪಾರ್ಸೆಲ್ ತಲುಪಿಸದ ಸಿಬ್ಬಂದಿ: ಕೊರಿಯರ್ ಸಂಸ್ಥೆ ವಿರುದ್ಧ ನಟಿ ಸುಚಿತ್ರಾ ಆಕ್ರೋಶ!

ಕೊರಿಯರ್ ಸಿಬ್ಬಂದಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ನಟಿ ಸುಚಿತ್ರಾ!

Viral News: ಖ್ಯಾತ ನಟಿ ಸುಚಿತ್ರಾ ಕೃಷ್ಣ ಮೂರ್ತಿ ಕೊರಿಯರ್ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಗಡ ಹಣ ಪಾವತಿ ಮಾಡಿದ್ದರೂ ಪಾರ್ಸಲ್ ತಲುಪಿಸದ ಬ್ಲೂ ಡಾರ್ಟ್ ಕೊರಿಯರ್ ಸಂಸ್ಥೆಯ ಸಿಬ್ಬಂದಿಯೊಬ್ಬ ಬೆಳಿಗ್ಗೆಯಿಂದಲೇ ಹಲವು ಭಾರಿ ಕರೆ ಮಾಡಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ.

ರೈಲು ಊಟಕ್ಕಿಂತ ಮನೆ ಅಡುಗೆಯೇ ಬೆಸ್ಟ್: ಪ್ರಯಾಣದ ಮಧ್ಯೆ ಪಾತ್ರೆ ತೆರೆದು ಚಿಕನ್ ಊಟ ಬಡಿಸಿದ ಮಹಿಳೆ!

ರೈಸ್ ,ಚಿಕನ್ ಸಾಂಬಾರು ತಂದು ರೈಲಿನ ಅಪ್ಪರ್ ಬರ್ತ್‌ನಿಂದ ಊಟ ಬಡಿಸಿದ ಮಹಿಳೆ

Viral News: ಭಾರತೀಯ ರೈಲು ಪ್ರಯಾಣ ಅಂದಾಗ ಅಲ್ಲಿ ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತ ಇರುವುದಿಲ್ಲ. ತರಹೇವಾರಿ ಖಾದ್ಯಗಳು, ಮನೆಯವರ ಜೊತೆ ಸೇರಿ ತಿನ್ನುವ ಸಂಭ್ರಮ ಕೂಡ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯೊಬ್ಬರು ಅನ್ನದ ಪಾತ್ರೆ, ಘಮ- ಘಮಿಸುವ ಚಿಕನ್ ಸಾರಿನ ಪಾತ್ರೆಯನ್ನೇ ತಂದಿದ್ದಾರೆ‌. ಅವರು ರೈಲಿನಲ್ಲಿ ಕುಳಿತುಕೊಂಡ ತನ್ನ ಕುಟುಂಬಕ್ಕೆ ಆಹಾರವನ್ನು ಬಡಿಸುತ್ತಿದ್ದಾರೆ.

ಮಾನವೀಯತೆಯೇ ಮರೆಯಾಯ್ತಾ? ವಿಕಲಚೇತನ ವ್ಯಕ್ತಿಯ ಪರ್ಸ್ ಕಸಿದುಕೊಂಡು ಪರಾರಿಯಾದ ದುಷ್ಕರ್ಮಿಗಳು!

ವಿಕಲಚೇತನ ವ್ಯಕ್ತಿಯ ಪರ್ಸ್ ಕಳ್ಳತನ ಮಾಡಿದ ಖದೀಮರು! ವಿಡಿಯೊ ವೈರಲ್

Viral News: ಪಂಜಾಬ್ ನ ಝಿರಾಕ್‌ಪುರದ ಪಾಲಂ ಎನ್‌ಕ್ಲೇವ್ ಎನ್ನುವ ಸ್ಥಳದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವೀಲ್‌ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಇಬ್ಬರು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ವಿಕಲ ಚೇತನ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ.

ವೃದ್ಧನ ಬೆನ್ನೇರಿ ಹಳ್ಳ ದಾಟಿದ ಕಂದಾಯ ಇಲಾಖೆ ಅಧಿಕಾರಿ: ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು

ವೃದ್ಧನ ಬೆನ್ನೇರಿ ಹಳ್ಳ ದಾಟಿದ ಅಧಿಕಾರಿಯ ದರ್ಪ

Revenue Department Official Suspended: ಕರ್ತವ್ಯದ ವೇಳೆ ವೃದ್ಧನೊಬ್ಬನ ಬೆನ್ನಿನ ಮೇಲೆ ಕುಳಿತು ನೀರು ತುಂಬಿದ್ದ ಹಳ್ಳವನ್ನು ದಾಟಿದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಾತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆ್ಯಪಲ್ ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ಲಾಂಚ್: ಬೆಲೆ ನೋಡಿ "ಎರಡೂ ಕಿಡ್ನಿ ಮಾರಬೇಕಾಗುತ್ತೆ" ಎಂದ ನೆಟ್ಟಿಗರು!

ಫೋಲ್ಡೆಬಲ್‌ ಐಫೋನ್ ಬಿಡುಗಡೆ: ಬೆಲೆ ಕಂಡು ಅಸಮಾಧಾನ ಹೊರಹಾಕಿದ ನೆಟ್ಟಿಗರು

Viral News: ಇದೀಗ ​ಆಪಲ್ ಸಂಸ್ಥೆ ತನ್ನ ಮತ್ತೊಂದು ಬಹುನಿರೀಕ್ಷಿತ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಫೋಲ್ಡಬಲ್‌ ಅಂದರೆ ಮಡಚಬಹುದಾದ ಸ್ಮಾರ್ಟ್‌ಫೋನ್ iPhone Duo ಬಿಡುಗಡೆ ಮಾಡಿದೆ. ಆದರೆ ಇದರ ವೈಶಿಷ್ಟ್ಯದ ಬಗ್ಗೆ ಜನ ಆಕರ್ಷಿತರಾದರೂ ಬೆಲೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಮೀಮ್ ಗಳ ಮಹಾಪೂರವೇ ಹರಿದು ಬರುತ್ತಿದೆ‌.

ಜೀವಕ್ಕೆ ಬೆಲೆಯೇ ಇಲ್ವಾ?  ಆ್ಯಂಬುಲೆನ್ಸ್‌ಗೂ ದಾರಿ ಕೊಡದೆ ನಡುರಸ್ತೆಯಲ್ಲಿ ಮಹಿಳೆಯಿಂದ ರಂಪಾಟ

ಆ್ಯಂಬುಲೆನ್ಸ್‌ಗೂ ದಾರಿ ಬಿಟ್ಟುಕೊಡದೆ ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಹಿಳೆ

Viral Video: ಮಹಿಳೆಯೊಬ್ಬರು ಮತ್ತೊಬ್ಬ ವಾಹನ ಸವಾರನೊಂದಿಗೆ ಜಗಳ ಮಾಡುತ್ತಿದ್ದು ಆ್ಯಂಬುಲೆನ್ಸ್ ಗೂ ದಾರಿ ಬಿಡದೆ ರಂಪಾಟ ಮಾಡಿದ್ದಾಳೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ʼʼಭಾರತದಲ್ಲಿ ನನ್ನನ್ನು ಓಡಾಡುವ ಎಟಿಎಂನಂತೆ ನೋಡುತ್ತಿದ್ದರುʼʼ: ವಿದೇಶಿ ಪ್ರವಾಸಿ ಹೀಗಂದಿದ್ದೇಕೆ?

ವಿದೇಶಿಗರಿಂದ ಹೆಚ್ಚು ಹಣ ವಸೂಲಿ: ಭಾರತದಲ್ಲಿನ ಅನುಭವ ಬಿಚ್ಚಿಟ್ಟ ಪ್ರವಾಸಿಗ

Viral News: ಭಾರತಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ ಇಲ್ಲಿ ಎದುರಾದ ಕಹಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಒಂದು ತಿಂಗಳ ಪ್ರವಾಸ ಕೈಗೊಂಡಿದ್ದ ತನ್ನನ್ನು ಇಲ್ಲಿನ ಜನರು ವಾಕಿಂಗ್ ಎಟಿಎಂನಂತೆ ನೋಡಿದ್ದಾರೆ. ವಿದೇಶಿಗರಿಂದ ವ್ಯಾಪಾರಿಗಳು ಹಾಗೂ ಸ್ಥಳೀಯರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

Loading...