ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ

ರೈಲು ವೇಗವಾಗಿ ಬರುತ್ತಿದ್ದರೂ ಮಕ್ಕಳನ್ನು ಅಪ್ಪಿ ಹಿಡಿದು ಜೀವ ಉಳಿಸಿದ ತಾಯಿ

Viral Video: ಪ್ಲಾಟ್‌ಫಾರ್ಮ್ ಹಾಗೂ ಹಳಿಯ ನಡುವಿನ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡ ಮಕ್ಕಳನ್ನು ತಾಯಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ತಾಯಿಮಕ್ಕಳನ್ನು ಗೋಡೆಗೆ ಹಿಡಿದು, ಅವರಿಗೆ ಅಡ್ಡಲಾಗಿ ನಿಂತು ಕಾಪಾಡಿದರು. ರೈಲಿನ ಕಬ್ಬಿಣದ ಭಾಗಗಳು ಪದೇ ಪದೆ ಬೆನ್ನಿಗೆ ತಗುತ್ತಿದ್ದರೂ ನೋವು ಸಹಿಸಿಕೊಂಡು ಮಕ್ಕಳನ್ನು ರಕ್ಷಿಸಿದ್ದಾರೆ.

ನರೇಂದ್ರ ಮೋದಿ–ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವೈರಿಗಳ ಅಪರೂಪದ ಕ್ಷಣ ವೈರಲ್

ಭಿನ್ನಾಭಿಪ್ರಾಯ ಮರೆತು ನಗೆಯ ಹಂಚಿಕೆ: ಮೋದಿ–ಖರ್ಗೆ ಸಂಭಾಷಣೆ ವೈರಲ್

Narendra Modi: ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ವೇಳೆ ಮೋದಿ ಮತ್ತು ಖರ್ಗೆ ನಡುವೆ ನಡೆದ ಲಘು ಧಾಟಿಯ ಸಂಭಾಷಣೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಖರ್ಗೆ ಮೋದಿ ಅವರಿಗೆ “ನೀವು ಸ್ವಲ್ಪ ಬದಲಾಗಿದ್ದೀರಿ” ಎಂದು ಹೇಳಿದ್ದು, ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿದ ದೃಶ್ಯ ಗಮನ ಸೆಳೆದಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ನಾಯಕರ ಈ ಸ್ನೇಹಪೂರ್ಣ ಕ್ಷಣ ಅಪರೂಪದಲ್ಲಿ ಅಪರೂಪ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೇ ಸೇತುವೆ ಮೇಲೆ ನಿಂತು ಯುವಕರ ಅಪಾಯಕಾರಿ ಸಾಹಸ: ವಿಡಿಯೋ ನೋಡಿ

ರೈಲ್ವೇ ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನ ಮಧ್ಯೆ, ಬ್ರಿಡ್ಜ್‌ ಮೇಲೆ ನಿಂತೂ ರೀಲ್ಸ್ ರೆಕಾರ್ಡ್ ಮಾಡಿದ ಅನೇಕ ಘಟನೆಗಳು ವೈರಲ್ ಆಗಿವೆ. ಇದೀಗ ಮುಂಬೈನ ಭಾಯಂದರ್ ಖಾಡಿಯ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆಯುತ್ತಿದೆ. ಈ ಅಪಾಯ ಕಾರಿ ಸಾಹಸ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಕನ್ವರ್‌ ಯಾತ್ರೆಯಲ್ಲಿ ಶಿವನ ವಾಹನ ನಂದಿ ಪ್ರತ್ಯಕ್ಷ! ವಿಡಿಯೊ ನೋಡಿದರೆ ನೀವೂ ಬೆರಗಾಗೋದು ಖಚಿತ

ಕನ್ವರ್‌ ಯಾತ್ರೆಯಲ್ಲಿ ಶಿವನ ವಾಹನ ನಂದಿ ಪ್ರತ್ಯಕ್ಷ; ವಿಡಿಯೊ ವೈರಲ್‌

Viral Video: ಕನ್ವರ್‌ ತೀರ್ಥಯಾತ್ರೆಯ ಸಮಯದಲ್ಲಿ ಇಬ್ಬರು ಭಕ್ತರು ತಮ್ಮ ಬೈಕ್ ಅನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದು ಗಮನ ಸೆಳೆದಿದೆ. ಬೈಕ್‌ಗೆ ಶಿವನ ವಾಹನವಾದ ನಂದಿಯ ರೂಪ ಕೊಡಲಾಗಿದೆ. ನೈಜ ನಂದಿಯನ್ನು ಈ ಬೈಕ್ ಹೋಲುತ್ತಿದ್ದು, ಯುವಕರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೆದ್ದಾರಿಯಲ್ಲಿ ಈ ನಂದಿ ಜುಂ ಎಂದು ಸಾಗಿದ್ದು ವಿಡಿಯೊ ವೈರಲ್‌ ಆಗಿದೆ.

Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

ಗದ್ದೆಗೆ ಲಗ್ಗೆ ಇಟ್ಟ ಆನೆಯನ್ನು ಕೆರಳಿಸಿದ ಸಾರ್ವಜನಿಕರು; ವಿಡಿಯೊ ನೋಡಿ

Viral Video: ಉತ್ತರಾಖಂಡದ ಹಳ್ಳಿಯೊಂದರಲ್ಲಿ ನೀರು ತುಂಬಿದ ಭತ್ತದ ಗದ್ದೆಯನ್ನು ಆನೆಯೊಂದು ಹಾನಿ ಮಾಡಿದೆ. ಹೀಗಾಗಿ ಜನರೆಲ್ಲ ಸೇರಿ ಟಾರ್ಚ್ ಬೆಳಕು ತೋರಿಸಿ ಹಾಗೂ ಜೋರಾಗಿ ಕೂಗಿ ಅದನ್ನು ಓಡಿಸಲು ಯತ್ನಿಸಿದ್ದಾರೆ. ಆದರೆ ಆನೆ ತೀವ್ರವಾಗಿ ಕೆರಳಿದ್ದು ಅಲ್ಲಿದ್ದ ಜನರ ಮೇಲೆಯೇ ದಾಳಿ ನಡೆಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೇವಸ್ಥಾನದ ಬಳಿ ಬಂದ ಮೊಸಳೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದ ಅರ್ಚಕ: ಅಚ್ಚರಿಯ ವಿಡಿಯೊ ಇಲ್ಲಿದೆ

ಜೀವಂತ ಮೊಸಳೆಗೆ ಪೂಜೆ ಸಲ್ಲಿಸಿದ ಅರ್ಚಕ: ವಿಡಿಯೊ ವೈರಲ್

Viral Video: ತೆಲಂಗಾಣದ ಬೀಚುಪಲ್ಲಿಯ ಕೃಷ್ಣಾ ನದಿ ಘಾಟ್‌ಗೆ ಆಗಮಿಸಿದ ಮೊಸಳೆಯನ್ನು ಕಂಡು ಅರ್ಚಕರೊಬ್ಬರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿದ್ದಾರೆ. ಅಲ್ಲಿದ್ದ ಭಕ್ತರು ಗಾಬರಿಗೊಂಡಿದ್ದರೂ ಅರ್ಚಕ ಅನಿಲ್ ಶರ್ಮಾ ಎಂಬವರು ಧೈರ್ಯದಿಂದ ಮೊಸಳೆಯ ಬಳಿಗೆ ಬಂದು ಧಾರ್ಮಿಕ ವಿಧಿಗಳನ್ನು ಆರಂಭಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಂದೇ ಫ್ರೇಮ್‌ನಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ: ವಿವಾಹ ಆರತಕ್ಷತೆಯಲ್ಲಿ ಕಂಡ ಬಂದ ಅಪರೂಪದ ದೃಶ್ಯ ವೈರಲ್‌

ಒಂದೇ ಫ್ರೇಮ್‌ನಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ

Amit Shah and Rahul Gandhi in the Same Frame: ದೆಹಲಿಯ 6 ಜನಪಥ್‌ನಲ್ಲಿ ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ಮತ್ತು ನಾಗ್ಪುರ ಮೂಲದ ಕೈಗಾರಿಕೋದ್ಯಮಿ ಸಾರಂಗ್ ಲಖಾನಿ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಪ್ರಫುಲ್ ಪಟೇಲ್ ಸೇರಿ ಹಲವು ರಾಜಕೀಯ ನಾಯಕರು ಭಾಗವಹಿಸಿದರು.

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಕನ್ವರ್‌ ಯಾತ್ರಿಕರು; ವಿಡಿಯೊ ನೋಡಿ

ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಶಿವ ಭಕ್ತರು

Viral Video: ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆ ಮೆರೆದ ಅಪರೂಪದ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯಗೆ ಜಾಗ ಮಾಡಿಕೊಡಲು ಸಾವಿರಾರು ಶಿವಭಕ್ತರು ಮಾನವ ಸರಪಳಿ ನಿರ್ಮಿಸಿ ದಾರಿ ಮಾಡಿ ಕೊಟ್ಟಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಎಸೆದ ಮಹಿಳೆ: ರೆಡ್‌ ಹ್ಯಾಂಡಾಗಿ ಹಿಡಿದು ಮಸಿ ಬಳಿದ ಸ್ಥಳೀಯರು; ವಿಡಿಯೊ ವೈರಲ್‌

ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಎಸೆದ ಮಹಿಳೆ: ವಿಡಿಯೊ ವೈರಲ್‌

Viral Video: ಮಹಿಳೆಯೊಬ್ಬಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಮತ್ತು ಕಲ್ಲುಗಳನ್ನು ಎಸೆದಿರುವ ಅಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ನಡೆದಾಗ ಪ್ರತಿಮೆಯನ್ನು ಗಾಜಿನ ರಕ್ಷಣಾತ್ಮಕ ಕವಚದಿಂದ ಮುಚ್ಚಲಾಗಿತ್ತು. ಇದರಿಂದ ಪ್ರತಿಮೆಗೆ ಚಪ್ಪಲಿ ಎಸೆದರೂ ಯಾವುದೇ ಹಾನಿ ಆಗಿಲ್ಲ.

ಗೇಟ್‌ಗೆ ಡಿಕ್ಕಿ ಹೊಡೆದು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವೇಗದ ಕಾರ್‌; ಬೆಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ಸೆಕ್ಯೂರಿಟಿ ಗಾರ್ಡ್ ಪಾರು

ಅಪಾರ್ಟ್‌ಮೆಂಟ್ ಗೇಟ್‌ಗೆ ಕಾರ್‌ ಡಿಕ್ಕಿ: ಭಯಾನಕ ವಿಡಿಯೊ ನೋಡಿ

Viral Video: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪಾರ್ಟ್‌ಮೆಂಟ್‌ ಒಂದರ ಗೇಟ್‌ಗೆ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ವೇಗಕ್ಕೆ ಕಬ್ಬಿಣದ ಗೇಟ್ ಪುಡಿ ಪುಡಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಮ್ಮ ಧ್ವನಿ ಸರಕಾರಕ್ಕೆ ತಲುಪುತ್ತಿಲ್ಲ: ಸ್ಪೈಡರ್ ಮ್ಯಾನ್ ವೇಷಧರಿಸಿ ಜಾರ್ಖಂಡ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ!

ಜಾರ್ಖಂಡ್‌ ನಲ್ಲಿ ಸ್ಪೈಡರ್‌-ಮ್ಯಾನ್ ವೇಷ ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿ

Viral Video: ಜಾರ್ಖಂಡ್ ನಲ್ಲಿ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆ ಸುತ್ತಿದ್ದಾರೆ. ಈ ನಡುವೆ ಸ್ಪೈಡರ್‌-ಮ್ಯಾನ್ ಮುಖವಾಡ ಧರಿಸಿ ಬಂದ ವಿದ್ಯಾರ್ಥಿಯೊಬ್ಬ ಸರ್ಕಾರವನ್ನು ವ್ಯಂಗ್ಯ ಮಾಡಿರುವ ವಿಡಿಯೊಂದು ವೈರಲ್ ಆಗುತ್ತಿದೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ರೈಲ್ವೆ ಕ್ರಾಸಿಂಗ್‌ನಲ್ಲೇ ಟ್ರೈನ್ ಹತ್ತಿದ ಪ್ರಯಾಣಿಕರು: ನೆಟ್ಟಿಗರು ಕಿಡಿ

ಪ್ರಯಾಣಿಕರ ಗುಂಪೊಂದು ರೈಲ್ವೆ ಕ್ರಾಸಿಂಗ್‌ನಲ್ಲೇ ಟ್ರೈನ್ ನಿಲ್ಲಿಸಿ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ 8ರಂದು ಬಿಹಾರದ ಪಶ್ಚಿಮ ಚಂಪಾರಣ್‌ನ ಕುಮಾರ್‌ಬಾಗ್ ರೈಲ್ವೆ ನಿಲ್ದಾಣದ ಬಳಿ ಈ ದೃಶ್ಯ ನಡೆದಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ನೀರಿನ ಟ್ಯಾಂಕ್‌ಗೆ ಹಾರುವ ಮೊದಲು ಪುಟಾಣಿ ಮಕ್ಕಳಿಗೆ ವಿಷ ಕುಡಿಸಿದ ತಾಯಿ; ದುರಂತಕ್ಕೂ ಮುನ್ನ ನಡೆದಿದ್ದೇನು? ಹೃದಯ ವಿದ್ರಾವಕ ವಿಡಿಯೊ ವೈರಲ್‌

ನೀರಿನ ಟ್ಯಾಂಕ್‌ಗೆ ಹಾರುವ ಮುನ್ನ ಮಕ್ಕಳಿಗೆ ವಿಷ ಕುಡಿಸಿದ ತಾಯಿ

Crime News: 31 ವರ್ಷದ ಅಂಗನವಾಡಿ ಕಾರ್ಯಕರ್ತೆ ಸುದೇಶ್ ತಮ್ಮ ಇಬ್ಬರು ಮಕ್ಕಳಿಗೆ ವಿಷ ನೀಡಿದ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸುದೇಶ್ ಅವರ 9 ವರ್ಷದ ಪುತ್ರಿ ಜ್ಯೋತಿ ಮತ್ತು 8 ವರ್ಷದ ಪುತ್ರ ವಿನೀತ್ ಮೃತದೇಹಗಳು ಪತ್ತೆಯಾಗಿವೆ. ಸದ್ಯ ಸುದೇಶ್ ಮಕ್ಕಳಿಗೆ ವಿಷ ಕುಡಿಸುತ್ತಿರುವ ವಿಡುಒ ವೈರಲ್‌ ಆಗಿದೆ.

ನಿಜವಾದ ಮಹಿಳಾ ಸಬಲೀಕರಣ ಎಂದರೆ ಇದು: ಮಧ್ಯರಾತ್ರಿ ರೋಗಿಗಳಿಗೆ ಉಚಿತ ಆಟೋ ಸೇವೆ ನೀಡುವ ವಡೋದರಾದ ಚಾಲಕಿಗೆ ಬಿಗ್‌ ಸೆಲ್ಯೂಟ್‌

ಮಧ್ಯರಾತ್ರಿ ಉಚಿತ ಆಟೋ ಸೇವೆ ನೀಡುವ ಮಹಿಳೆಯ ವಿಡಿಯೊ ವೈರಲ್‌

Viral Video: ಗುಜರಾತ್‌ನ ವಡೋದರಾದ ಮಹಿಳೆಯೊಬ್ಬರು ರಾತ್ರಿ ಉಚಿತವಾಗಿ ಆಟೋ ಸೇವೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಈ ಸೇವೆಯನ್ನು ನೀಡುತ್ತಿದ್ದಾರೆ. ಇವರ ಈ ಸಹಾಯ ಮನೋಭಾವಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ʼʼಬಾಡಿಗೆಗೆ ಗೆಳೆಯನನ್ನು ಪಡೆಯಿರಿ...ʼʼ: ಆಮಿಷಕ್ಕೆ ಬಲಿಯಾಗದಂತೆ, ಹೊಸ ಸ್ಕ್ಯಾಮ್ ಬಗ್ಗೆ ಎಚ್ಚರಿಸಿದ ಹೈದರಾಬಾದ್ ಪೊಲೀಸರು

'ಗೆಳೆಯ ಬಾಡಿಗೆಗೆ' ವಂಚನೆ ಬಗ್ಗೆ ಎಚ್ಚರಿಕೆ

ಬಾಡಿಗೆಗೆ ಗೆಳೆಯ ದೊರೆಯುತ್ತಾನೆ ಎನ್ನುವ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದನ್ನು ನಂಬಿ ಮೋಸ ಹೋಗದಿರಿ ಎಂದು ವಿಶೇಷವಾಗಿ ಮಹಿಳೆಯರಿಗೆ ಹೈದರಾಬಾದ್ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ವಂಚಕರು ಹಣ ಮತ್ತು ವಯಕ್ತಿಕ ಮಾಹಿತಿಗಳನ್ನು ಕದಿಯಲು ಮಾಡಿರುವ ವಂಚನೆಯ ಜಾಲ ಇದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಜಲ ಫಿರಂಗಿ ಬಳಸಿದ ಪೊಲೀಸರಿಗೆ ಸೆಡ್ಡು ಹೊಡೆದ ಜೆನ್‌ ಝೀಗಳು; ರೈನ್‌ ಡ್ಯಾನ್ಸ್‌ ಮೂಲಕ ಪ್ರತಿಕ್ರಿಯಿಸಿದ ಜಾರ್ಖಂಡ್‌ ವಿದ್ಯಾರ್ಥಿಗಳ ವಿಡಿಯೊ ವೈರಲ್‌

ಜಲ ಫಿರಂಗಿ ಬಳಸಿದ ಪೊಲೀಸರು; ಡ್ಯಾನ್ಸ್‌ ಮಾಡಿದ ಪ್ರತಿಭಟನಾಕಾರರು

Protesters Dance: ಜಾರ್ಖಂಡ್‌ನ ರಾಂಚಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಿದರು. ಈ ವೇಳೆ ಭಯಪಡುವ ಬದಲು, ಪ್ರತಿಭಟನಾಕಾರರು ನೃತ್ಯ ಮಾಡಿದ್ದಾರೆ. ಪ್ರತಿಭಟನಾಕಾರರು ವಿಧಾನಸಭೆಯ ಕಡೆಗೆ ಸಾಗುತ್ತಿದ್ದಂತೆ, ಪೊಲೀಸರು ಬ್ಯಾರಿಕೇಡ್‌ಗಳನ್ನು ನಿಯೋಜಿಸಿದರು. ನಂತರ ಗುಂಪನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು.

ಮಗುವಿನ ಪರಿವೇ ಇಲ್ಲದೆ ರೀಲ್ಸ್‌ನಲ್ಲಿ ಕಳೆದುಹೋದ ತಾಯಿ; ಬ್ರಿಡ್ಜ್‌ನತ್ತ ಸಾಗಿದ ಕಂದಮ್ಮನ ರಕ್ಷಣೆ ಮಾಡಿದ್ಯಾರು?

ರೀಲ್ಸ್ ಗಾಗಿ ಮಗುವಿನ ಜೀವದ ಜೊತೆ ಚೆಲ್ಲಾಟ ಆಡಿದ ಪಾಪಿ ತಾಯಿ

Viral Video: ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ವಿಡಿಯೊವೊಂದು ವೈರಲ್ ಆಗಿದ್ದು ಮಹಿಳೆ ಯೊಬ್ಬರು ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದು ಆಕೆಯ ಮಗು ಸೇತುವೆಯ ಅಂಚಿನ ಕಡೆಗೆ ತೆವಳಿ ಕೊಂಡು ಹೋಗುತ್ತಿದೆ.‌ ಆದರೆ ಈಕೆ ತನ್ನ ಮಗುವಿನ ಬಗ್ಗೆ ಕ್ಯಾರೇ ಇಲ್ಲ ಎನ್ನುವಂತೆ ವಿಡಿಯೊ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾಳೆ. ಈ ವಿಡಿಯೊ ನೋಡಿದ ಅನೇಕರು ಮಹಿಳೆಯ ಬೇಜವ್ದಾರಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಮೊಬೈಲ್ ಕದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸಹೋದರಿಯರು; ವಿಡಿಯೋ ವೈರಲ್‌

ಮೊಬೈಲ್ ಕಳ್ಳನನ್ನು ಬೆನ್ನಟ್ಟಿದ ಯುವತಿಯರು: ಧೈರ್ಯಕ್ಕೆ ನೆಟ್ಟಿಗರ ಪ್ರಶಂಸೆ!

Viral Video: ಮೊಬೈಲ್ ಕಳ್ಳನನ್ನು ಇಬ್ಬರು ಸಹೋದರಿಯರು ಬೆನ್ನಟ್ಟಿ ಧೈರ್ಯದಿಂದ ಆತನನ್ನು ಎದುರಿಸಿದ್ದಾರೆ. ಮಧ್ಯ ಪ್ರದೇಶದ ಪದವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮುರಾರ್‌ನ ಸಿಪಿ ಕಾಲೋನಿಯ ನಿವಾಸಿಗಳಾದ ಇಬ್ಬರು ಸಹೋದರಿಯರು ಹರ್ಷಿತಾ ಮತ್ತು ರಸಿತಾ ಅಗರ್ವಾಲ್ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಡೆವಾಲ್ಡ್ ಬ್ರೆವಿಸ್ 97 ಮೀಟರ್ ನೋ-ಲುಕ್ ಸಿಕ್ಸರ್‌ ಕಂಡು ದಂಗಾದ ನೆಟ್ಟಿಗರು

ಬ್ರೆವಿಸ್ 97 ಮೀ. ನೋ-ಲುಕ್ ಸಿಕ್ಸರ್‌ ಕಂಡು ದಂಗಾದ ನೆಟ್ಟಿಗರು

Dewald Brevis: ಜಾನಿ ಬೈರ್‌ಸ್ಟೋವ್ ಮೂರು ಎಸೆತಗಳಲ್ಲಿ 10 ರನ್‌ಗಳಿಗೆ ಬೇಗನೆ ಔಟಾದರು. ಆದರೆ ನಾಯಕ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಬ್ರೆವಿಸ್ ನಂತರ 103 ರನ್‌ಗಳ ಪಾಲುದಾರಿಕೆಯನ್ನು ಗಳಿಸಿದರು. ಇದು ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್‌ನ ಯಾವುದೇ ವಿಕೆಟ್‌ಗೆ ಅತ್ಯಧಿಕ ಜತೆಯಾಟವಾಗಿದೆ.

75 ವರ್ಷದ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ಪಾಪಿ ಮಗ: ಕ್ರೌರ್ಯದ ವಿಡಿಯೋ ವೈರಲ್‌

ವೃದ್ಧ ತಾಯಿಗೆ ದೈಹಿಕವಾಗಿ ಕಿರುಕುಳ ನೀಡಿದ ಮಗ: ಸಿಸಿಟಿವಿ ದೃಶ್ಯ ವೈರಲ್

Viral Video: ಪಾಪಿ ಮಗನೊಬ್ಬ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯುದ್ದಕ್ಕೂ ಎಳೆ ದೊಯ್ದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಶಂಕಿತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಮನೆಯವರಿಗೆ ತಿಳಿಸದೆ ಹೊಲದಲ್ಲಿ ಹಣ ಬಚ್ಚಿಟ್ಟ ರೈತ: ಗೆದ್ದಲು ತಿಂದ 5 ಲಕ್ಷ ರುಪಾಯಿ ಮೌಲ್ಯದ ನೋಟು ಕಂಡು ಕಣ್ಣೀರು! ವಿಡಿಯೊ ವೈರಲ್‌

ಹಣವನ್ನು ಹೊಲದಲ್ಲಿ ಬಚ್ಚಿಟ್ಟು 5 ಲಕ್ಷ ರುಪಾಯಿ ಕಳೆದುಕೊಂಡ ರೈತ

Viral Video: ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ರೈತನೊಬ್ಬ ತಾನು ಕೂಡಿಟ್ಟ ಹಣದ ಬಗ್ಗೆ ಮನೆಯವರಿಗೆ ತಿಳಿಯಬಾರದೆಂದು ಹೊಲದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದ. ಆದರೆ ಗೆದ್ದಲುಗಳು ಹಣವನ್ನು ನಾಶ ಪಡಿಸಿದ್ದು ಐದು ಲಕ್ಷ ರುಪಾಯಿ ಮೌಲ್ಯದ 500 ರುಪಾಯಿ ನೋಟುಗಳು ಸಂಪೂರ್ಣ ಹಾಳಾಗಿವೆ. ಈ ಹಾಳಾದ ನೋಟುಗಳ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈಗಾಗಲೇ 25 ಮದುವೆಯಾಗಿದ್ದವ ಗುರುತು ಮರೆಮಾಡಿ ಬಿಜೆಪಿ ಶಾಸಕನ ಮಗಳನ್ನೇ ವರಿಸಿದ! ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಗುರುತು ಮರೆಮಾಡಿ ಬಿಜೆಪಿ ಶಾಸಕನ ಮಗಳನ್ನೇ ವರಿಸಿದ ವಂಚಕ ಅರೆಸ್ಟ್‌

Crime News: ಈಗಾಗಲೇ ಮದುವೆಯಾಗಿ ಕೋಟ್ಯಂತರ ರುಪಾರಿ ದೋಚಿದ್ದ ಖರ್ತನಾಕ್‌ ವ್ಯಕ್ತಿಯೊಬ್ಬ ಶಾಸಕರ ಮಗಳನ್ನೇ ಮೋಸದ ಜಾಲಕ್ಕೆ ಬೀಳಿಸಿ ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಶಾಸಕ ಗ್ಯಾನ್‌ ತಿವಾರಿ ಮತ್ತು ಅವರ ಪುತ್ರಿಗೆ ವಂಚಕ ಮೋಸ ಮಾಡಿದ್ದು, ಸದ್ಯ ಪ್ರಕರಣ ದಾಖಲಾಗಿದೆ. ವಂಚಕ ಪ್ರಖಾರ್‌ ತ್ರಿವೇದಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಕುಲದೀಪ್ ಬೌಲಿಂಗ್ ಶೈಲಿ ಅನುಕರಿಸಿದ ಜಡೇಜಾ; ಬಿದ್ದು ಬಿದ್ದು ನಕ್ಕ ಗಂಭೀರ್‌

ಕುಲದೀಪ್ ಬೌಲಿಂಗ್ ಶೈಲಿ ಅನುಕರಿಸಿದ ಜಡೇಜಾ; ವಿಡಿಯೊ ವೈರಲ್‌

Sri Lanka Cricket XI vs India: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಜಡೇಜಾ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ಹಾಸ್ಯಮಯವಾಗಿ ಅನುಕರಿಸುತ್ತಿರುವುದು ಕಂಡುಬಂದಿದೆ. ಅವರ ಅನುಕರಣೆ ಕಂಡ ಗಂಭೀರ್‌ಗೆ ನಗುವನ್ನು ತಡೆಯಲು ಸಾಧ್ಯವಾಗಲಿಲ್ಲ. ಬಿದ್ದುಬಿದ್ದು ನಕ್ಕರು.

'ʼನಿಜವಾದ ಮುಸ್ಲಿಂ ಗೋಹತ್ಯೆ ಮಾಡುವುದಿಲ್ಲʼ': ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯ ಹೇಳಿಕೆಯಿಂದ ಭುಗಿಲೆದ್ದ ವಿವಾದ

ಗೋಹತ್ಯೆ ತಡೆ ಸಭೆಯಲ್ಲಿ ವಿವಾದಿತ ಹೇಳಿಕೆ; ರಾಮ್‌ಪುರ ಎಸ್‌ಪಿ ಸ್ಪಷ್ಟನೆ

Viral Video: ಉತ್ತರ ಪ್ರದೇಶದ ರಾಮ್‌ಪುರ ಎಸ್‌ಪಿ ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ ʼ‘ನಿಜವಾದ ಮುಸ್ಲಿಮರು ಗೋಹತ್ಯೆ ಮಾಡುವುದಿಲ್ಲʼ’ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ʼʼಶ್ರಾವಣ ಮಾಸದಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮಾತನಾಡಿದ್ದು, ಯಾವುದೇ ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದು ತಮ್ಮ ಉದ್ದೇಶವಾಗಿರಲಿಲ್ಲʼʼ ಎಂದು ಹೇಳಿದ್ದಾರೆ.

Loading...