ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ ಕೈತಪ್ಪಿ ಬಿದ್ದು 9 ತಿಂಗಳ ಕಂದಮ್ಮನ ದಾರುಣ ಅಂತ್ಯ: 23 ಗಂಟೆಗಳ ಬಳಿಕ ಮೃತದೇಹ ಪತ್ತೆ

ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ 9 ತಿಂಗಳ ಮಗು ಬಿದ್ದು ಸಾವು

Faizullahpur Horror: ಚಲಿಸುವ ರೈಲಿನಿಂದ 9 ತಿಂಗಳ ಕಂದಮ್ಮ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ‌. ಉತ್ತರ ಪ್ರದೇಶದ ಫೈಜುಲ್ಲಾಪುರ ನಿಲ್ದಾಣದ ಬಳಿ ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾಗ ಮಗು ಕಿಟಕಿಯಿಂದ ಜಾರಿ ಬಿದ್ದಿದೆ.

ಸಾಮಾನ್ಯ ಜನರ ಕಷ್ಟ ಅರಿಯಲು ಭಿಕ್ಷುಕನ ವೇಷ ಧರಿಸಿ ಬೀದಿಗೆ ಇಳಿದ ಮುಂಬೈಯ ಬಿಜೆಪಿ ಶಾಸಕ: ವಿಡಿಯೊ ವೈರಲ್

ಭಿಕ್ಷುಕನ ವೇಷ ಧರಿಸಿ ಬೀದಿಯಲ್ಲಿ ಓಡಾಡಿದ ಮುಂಬೈ ಶಾಸಕ: ವಿಡಿಯೊ ನೋಡಿ

Viral Video: ಅತ್ಯಂತ ಶ್ರಿಮಂತ ಬಿಜೆಪಿ ಶಾಸಕರೊಬ್ಬರು ಭಿಕ್ಷುಕನ ವೇಷ ಧರಿಸಿ ಮುಂಬೈಯ ಬೀದಿಗೆ ಇಳಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ದಿನವಿಡೀ ಅಲ್ಲಿದ್ದ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸಿಕ್ಕ ಆಹಾರವನ್ನೇ ಅವರು ಸೇವಿಸಿದ್ದಾರೆ. ಪ್ರಸಿದ್ಧ ರಾಜಕಾರಣಿಯಾಗಿದ್ದರೂ, ಸುತ್ತಮುತ್ತಲ ಜನರಿಗೆ ಅವರು ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಈ ವಿಶಿಷ್ಟ ಪ್ರಯೋಗದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ರಸ್ತೆ ಬದಿಯಲ್ಲಿ ಕುಳಿತಿರುವುದು ಮತ್ತು ಜನರಲ್ಲಿ ಭಿಕ್ಷೆ ಬೇಡುವುದು ಕಂಡುಬಂದಿದೆ.

ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ನಾಯಿ ಕರೆದೊಯ್ಯುವ ವಿಚಾರಕ್ಕೆ ಮಹಿಳೆಯರಿಬ್ಬರ ನಡುವೆ ಮಾರಾಮಾರಿ: ವಿಡಿಯೊ ವೈರಲ್

ಲಿಫ್ಟ್‌ನಲ್ಲಿ ನಾಯಿ ವಿಚಾರವಾಗಿ ಹೊಡೆದಾಡಿಕೊಂಡ ಮಹಿಳೆಯರು: ವಿಡಿಯೊ ಇಲ್ಲಿದೆ

Viral Video: ಕೇವಲ ಸಾಕು ನಾಯಿಯ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಭೀಕರ ಜಗಳ ನಡೆದಿದ್ದು ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಗಾಜಿಯಾಬಾದ್‌ನ ವಸತಿ ಸೊಸೈಟಿಯಲ್ಲಿ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಜಗಳ ನಡೆದಿದ್ದು ಬಳಿಕ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಭಾರತೀಯ ಸಂಸ್ಕೃತಿಯ ವೈಭವ: ಥೇಮ್ಸ್ ನದಿ ತೀರದಲ್ಲಿ ಗಂಗಾ ಆರತಿಗೆ ಸಾವಿರಾರು ಭಕ್ತರು ಸಾಕ್ಷಿ

ಇಂಗ್ಲೆಂಡ್‌ನ ಥೇಮ್ಸ್ ನದಿಯ ದಂಡೆಯಲ್ಲಿ ಗಂಗಾ ಆರತಿಯ ಸಂಭ್ರಮ

Viral News: ಇಂಗ್ಲೆಂಡ್‌ನ ಲಂಡನ್‌ನ ಥೇಮ್ಸ್ ನದಿ ತೀರದಲ್ಲಿ ಇದೇ ಮೊದಲ ಬಾರಿಗೆ ಗಂಗಾ ಆರತಿ ನಡೆಯಿತು. ಪ್ರಾರ್ಥನೆ, ಧ್ಯಾನ, ಭಾರತೀಯ ಸಾಂಸ್ಕೃತಿಕ ವೈಭವದ ಜತೆಗೆ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಸಾಮಾನ್ಯವಾಗಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಂಡುಬರುವಂತಹ ಸಮಾರಂಭವೊಂದು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ನಡೆದಿದ್ದು ವಿಶೇಷವಾಗಿತ್ತು.

ಮಹಿಳಾ ರೈಡರ್‌ ಮೇಲೆ ಕಾರ್ ಚಲಾಯಿಸಿ ಪರಾರಿಯಾದ ದುಷ್ಕರ್ಮಿಗಳು! ಹೆಲ್ಮೆಟ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮಹಿಳಾ ರೈಡರ್ ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾದ ಪುಂಡರು!

Viral News: ಗುರುಗ್ರಾಮ್ ನಲ್ಲಿ ಮಹಿಳಾ ಬೈಕರ್‌ವೊಬ್ಬರಿಗೆ ಎದುರಾದ ಅನುಭವವನ್ನು ಶೇರ್ ಮಾಡಿದ್ದಾರೆ. ಬೈಕ್ ನಲ್ಲಿ ಸಿಯಾ ಎಂಬ ಮಹಿಳೆ ತನ್ನ ರೈಡಿಂಗ್ ಗ್ರೂಪ್ ಜೊತೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೈಕರ್ ಅನ್ನು ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು ಬೈಕ್ ಕೆಲವು ಮೀಟರ್‌ಗಳ ಕಾಲ ರಸ್ತೆಗೆ ಎಸೆಯಲ್ಪಟ್ಟಿದೆ‌. ಈ ಇಡೀ ಘಟನೆ ಬೈಕ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಾರತೀಯ ಚಾಲಕನ ಸೇವೆಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್: ಸರಳತೆಗೆ ನೆಟ್ಟಿಗರು ಫಿದಾ!

ಭಾರತೀಯ ಚಾಲಕನಿಗೆ ಶುಭಹಾರೈಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್!

Viral Video: ಭಾರತಕ್ಕೆ ಭೇಟಿ ನೀಡಿದ ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸರಳತೆ ಸಾರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ತಮ್ಮ ಭಾರತ ಪ್ರವಾಸವನ್ನು ಮುಗಿಸಿ ವಿಮಾನ ಏರಲು ಸಜ್ಜಾಗುತ್ತಿದ್ದಾಗ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದಲ್ಲದೆ ವಾಹನ ಚಾಲಕನಿಗೂ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ.

ಮಾನವೀಯತೆ ಇನ್ನೂ ಜೀವಂತ: ಚಾಲಕನ ಆಯಾಸ ಅರಿತು ತಾನೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ ಪ್ರಯಾಣಿಕ

ಚಾಲಕನ ದಣಿವು ಗಮನಿಸಿ ತಾನೇ ಕ್ಯಾಬ್ ಚಲಾಯಿಸಿದ ಪ್ರಯಾಣಿಕ

Viral News: ಕ್ಯಾಬ್ ಚಾಲಕನೊಬ್ಬ ತೀರಾ ನಿದ್ದೆಯಲ್ಲಿ ಇರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಾವೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ್ದಾರೆ. ಪ್ರಯಾಣಿಕ ತೋರಿದ ಮಾನವೀಯ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೊದಲ್ಲಿ ಶಿವ ಮಿಶ್ರಾ ವಾಹನ ಚಲಾಯಿಸುತ್ತಿರುವುದು ಮತ್ತು ಅವರ ಸಹೋದರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಕ್ಯಾಬ್ ಚಾಲಕ ಹಿಂಬದಿಯ ಸೀಟಿನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಮಾಲಕನ ಕಣ್ಣೆದುರೇ ಹಸುವಿನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Viral News: ಕಾಮುಕನೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯೊಂದು ವರದಿಯಾಗಿದೆ. ಎರಡು ವರ್ಷದ ಹಸುವಿನ ಮೇಲೆ ಈ ಪಾಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನನ್ನು ಕನುಭಾಯಿ ಗೊಂಡಾಲಿಯಾ ಎಂದು ಗುರುತಿಸಲಾಗಿದ್ದು, ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿ ಔಷಧ ಆರ್ಡರ್ ಮಾಡಿದ ವ್ಯಕ್ತಿಗೆ ಮೆಡಿಸಿನ್ ಜತೆ ಸಿಕ್ಕಿದ್ದು ವೈದ್ಯರ ಸಮಾಲೋಚನೆ: ಉಚಿತ ಸೇವೆಗೆ ಉದ್ಯಮಿ ಅರವಿಂದ್ ಅರೋರಾ ಮೆಚ್ಚುಗೆ

ಬ್ಲಿಂಕ್‌ಇಟ್‌ನಿಂದ ಔಷಧಿ ಜತೆಗೆ ವೈದ್ಯರ ಉಚಿತ ಸಲಹೆ: ನೆಟ್ಟಿಗರು ಫಿದಾ

Viral News: ದಿನ ನಿತ್ಯ ಆಹಾರ ವಸ್ತುಗಳಿಂದ ಹಿಡಿದು ಮೆಡಿಸಿನ್, ಆಂಬ್ಯುಲೆನ್ಸ್ ಸೇವೆಯನ್ನು ಜನರು ಆ್ಯಪ್‌ ಮೂಲಕ ಪಡೆಯುತ್ತಿದ್ದಾರೆ‌. ಇದೀಗ ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿಯಲ್ಲಿ ತುರ್ತು ಔಷಧಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಉಚಿತ ವೈದ್ಯರ ಸಮಾಲೋಚನೆ ಸಿಕ್ಕಿರುವ ಬಗ್ಗೆ ಉದ್ಯಮಿ ಅರವಿಂದ್ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರಸ್ತೆಗೆ ಕಸ ಎಸೆದು ಉದ್ಧಟತನ ತೋರಿದ ಬೈಕ್ ಸವಾರ: ವೈರಲ್ ವಿಡಿಯೋ ಕಂಡು ನೆಟ್ಟಿಗರು ಫುಲ್ ಗರಂ!

ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲ! ರಸ್ತೆಗೆ ಕಸ ಎಸೆದು ಜಗಳ ತೆಗೆದ ಸವಾರ!

Viral News: ಹೈದರಾಬಾದ್‌ನ ರಸ್ತೆಯಲ್ಲಿ ಹೋಗುತ್ತಿದ್ದ ಸವಾರನೊಬ್ಬ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ವ್ಯಕ್ತಿ ಕಸ ಹಾಕಿದ್ದನ್ನು ಪ್ರಶ್ನಿಸಿ ತಾನೇ ಕಸ ಹೆಕ್ಕಿ ತೊಟ್ಟಿಗೆ ಹಾಕುತ್ತಾನೆ‌. ಆದರೆ ಬೈಕ್ ಸವಾರ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ನಿನ್ನನ್ನು ಹೈದರಾಬಾದ್ ಮಹಾನಗರ ಪಾಲಿಕೆ ಕೆಲಸಕ್ಕೆ ಇಟ್ಟುಕೊಂಡಿದೆಯಾ? ಎಂದು ಗೇಲಿ ಮಾಡಿದ್ದಾನೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತನ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್‌; ಟಾರ್ಚ್ ಬೆಳಕಿನಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ

ಬಿಹಾರ ಆಸ್ಪತ್ರೆಯಲ್ಲಿ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ

ಬಿಹಾರ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿಆಸ್ಪತ್ರೆ ಸಿಬ್ಬಂದಿ ಮೊಬೈಲ್ ಟಾರ್ಚ್ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗರ್ಭಿಣಿಯರಿಗೆ ಟಾರ್ಚ್ ಮತ್ತು ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ; ವಿಡಿಯೊ ವೈರಲ್

ಬ್ರಿಕ್ಸ್‌ನಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ

Malaysian PM Sings a Bollywood Song: 18ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಕಿಶೋರ್ ಕುಮಾರ್ ಅವರ ಎವರ್‌ಗ್ರೀನ್ ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ರೀಲ್ಸ್‌ ಹುಚ್ಚು;  ತುಂಬಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರ್‌ ನುಗ್ಗಿಸಿದ ಯುವಕರು, ಮುಂದೆ ಆಗಿದ್ದೇನು?

ನದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರ್‌ ನುಗ್ಗಿಸಿದ ಯುವಕರು!

Viral Video: ಯುವಕರ ಗುಂಪೊಂದು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ವಾಹನವನ್ನು ಬಳಸಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಕಾರ್ ಅನ್ನು ತುಂಬಿ ಹರಿಯುತ್ತಿರುವ ಸಿಂಧ್ ನದಿಗೆ ನುಗ್ಗಿಸಿ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಆದರೆ ವಾಹನವು ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಲಾಗದೆ ನಡು ನದಿಯಲ್ಲಿಯೇ ನಿಂತುಹೋಗಿದೆ. ಇದರಿಂದಾಗಿ ವಾಹನದಲ್ಲಿದ್ದ ಯುವಕರು ಕಂಗಲಾಗಿದ್ದಾರೆ.

ಗಂಗಾ ನದಿ ತ್ಯಾಜ್ಯವನ್ನು ಒಬ್ಬಂಟಿಯಾಗಿ ವಿಲೇವಾರಿ ಗೊಳಿಸಿದ ಯುವಕ: ಪರಿಸರ ಕಾಳಜಿಗೆ ನೆಟ್ಟಿಗರು ಫಿದಾ!

ಅಪಾಯವನ್ನು ಲೆಕ್ಕಿಸದೇ ಗಂಗಾ ನದಿಯನ್ನು ಸ್ವಚ್ಛಗೊಳಿಸದ ಉತ್ತರಪ್ರದೇಶ ಯುವಕ

Viral News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 21 ವರ್ಷದ ಯುವಕನೊಬ್ಬ ಗಂಗಾ ನದಿಯಲ್ಲಿ ತುಂಬಿಹೋಗಿದ್ದ ಕಸ ತ್ಯಾಜ್ಯವನ್ನು ಒಬ್ಬಂಟಿಯಾಗಿ ತೆರವು ಗೊಳಿಸಿದ್ದಾನೆ‌. ಒಡೆದ ಗಾಜಿನ ಬಾಟಲಿಗಳು, ರಟ್ಟಿನ ತುಂಡುಗಳು, ಹಳೆಯ ಬಟ್ಟೆಗಳು, ಆಹಾರದ ತ್ಯಾಜ್ಯ ಮತ್ತು ಇತರ ತ್ಯಜಿಸಿದ ವಸ್ತುಗಳನ್ನು ಹೊರತೆಗೆದಿದ್ದಾರೆ.

Viral Video: ಹಠಾತ್ ಮಳೆ: ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು

ಮಳೆಯಿಂದ ಕೆಳಕ್ಕೆ ಬಿದ್ದು ನಾಶವಾದ ಬೃಹತ್ ಗಣೇಶನ ವಿಗ್ರಹ

Ganesh chaturthi 2026: ಹಠಾತ್ ಸುರಿದ ಮಳೆಯಿಂದಾಗಿ ಪಂಡಾಲ್‌ಗೆ ತರುತ್ತಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದು ನಾಶವಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬೃಹತ್ ಮೂರ್ತಿಯ ಅಡಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದ್ದು, ಈ ಘಟನೆ ಶನಿವಾರ ಸಂಜೆ ನಲಸೋಪರ ಪಶ್ಚಿಮದಲ್ಲಿ ನಡೆದಿದೆ.

5G ನೆಟ್‌ವರ್ಕ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಟೆಲಿಕಾಂ ಟೆಕ್ನಿಷಿಯನ್‌; ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ ಸಾರ್ವಜನಿಕರು

ಟೆಲಿಕಾಂ ಟೆಕ್ನಿಷಿಯನ್‌ನ್ನು ಟವರ್‌ಗೆ ಕಟ್ಟಿ ಹಾಕಿದ ಗ್ರಾಮಸ್ಥರು

Viral Video: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳಿಂದ 5G ನೆಟ್‌ವರ್ಕ್ ತೊಂದರೆ ಎದುರಿಸುತ್ತಿರುವುದಾಗಿ ಆರೋಪಿಸಿದ ಸಾರ್ವಜನಿಕರು, ಸಮಸ್ಯೆ ಪರಿಶೀಲಿಸಲು ಬಂದಿದ್ದ ಟೆಲಿಕಾಂ ಟೆಕ್ನಿಷಿಯನ್‌ನ್ನು ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಪ್ರಿಯಕರನೊಂದಿಗೆ ಓಡಿಹೋದ ಮಹಿಳೆಯನ್ನು ಹುಡುಕಿ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ ಪತಿರಾಯ! ಸಿನಿಮಾ ಕಥೆಯನ್ನೂ ಮೀರಿಸುವ ಘಟನೆ ಇದು

ಪ್ರಿಯಕರನೊಂದಿಗೆ ಪತ್ನಿಯ ವಿವಾಹ ನೆರವೇರಿಸಿದ ಪತಿರಾಯ

Viral News: ಸುಮಾರು ಒಂದು ವರ್ಷದ ಹಿಂದೆ ಪಿಆರ್‌ಡಿ ಜವಾನನೊಂದಿಗೆ ಮದುವೆಯಾಗಿದ್ದ ಮಹಿಳೆ, ನಾಲ್ಕು ದಿನಗಳ ಹಿಂದೆ ತನ್ನ ಮನೆಯನ್ನು ತೊರೆದು ಮಾಜಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದಳು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪತ್ತೆಹಚ್ಚಿದ ಗಂಡ, ಪ್ರೇಮಿಯೊಂದಿಗೆ ವಿವಾಹ ಮಾಡಿದ್ದಾನೆ.

ಬಾವಿಗೆ ಬಿದ್ದ ಶ್ವಾನಗಳ ಜೀವ ಉಳಿಸಲು 60 ಅಡಿ ಆಳಕ್ಕೆ ಧುಮುಕಿದ ರಕ್ಷಣಾ ತಂಡದ ಸದಸ್ಯರು; ಕಾರ್ಯಾಚರಣೆ ವಿಡಿಯೊ ನೋಡಿ

60 ಅಡಿ ಆಳದ ಬಾವಿಗೆ ಬಿದ್ದ ಶ್ವಾನಗಳ ರಕ್ಷಣೆ: ವಿಡಿಯೊ ನೋಡಿ

Viral Video: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 60 ಅಡಿ ಆಳದ ಬಾವಿಗೆ ಎರಡು ನಾಯಿಗಳು ಬಿದ್ದಿದ್ದು, ಪ್ರಾಣ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದವು. ರಕ್ಷಣಾ ತಂಡವು ಸುಮಾರು 90 ಕಿಲೋ ಮೀಟರ್ ಪ್ರಯಾಣಿಸಿ ಮೂಕ ಪ್ರಾಣಿಗಳ ಜೀವ ಉಳಿಸಿದೆ.

"ನೋವೆಲ್ಲ ಗಂಗೆಯಲ್ಲಿ ತೇಲಿ ಹೋಯ್ತು": ವಾರಣಾಸಿ ಪ್ರವಾಸದ ಬಳಿಕ ಸ್ಪ್ಯಾನಿಷ್ ಮಹಿಳೆ ಭಾವುಕ

ವಾರಣಾಸಿಯ ಆಧ್ಯಾತ್ಮಿಕ ಶಕ್ತಿ ಕೊಂಡಾಡಿದ ವಿದೇಶಿ ಮಹಿಳೆ

Viral News: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ- ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಇಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ. ಇದೀಗ ಧಾರ್ಮಿಕ ನಗರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸ್ಪ್ಯಾನಿಷ್ ಮಹಿಳೆ ಆಂಡ್ರಿಯಾ ಪಾಸ್ಪರ್ ತಮಗಾದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Viral Video: 20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿದ ಕಾರ್‌ ಚಾಲಕ

Viral News: ಅಮೆರಿಕದ ಅಟ್ಲಾಂಟಾದಲ್ಲಿ ಭೀಕರ ಅಪಘಾತವೊಂದು ನಡೆದಿದೆ‌. ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 20 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದು, ಚಾಲಕನ ಕಾಲುಗಳು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅದೃಷ್ಟವಶಾತ್ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

Viral Video: ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ  ಅರಣ್ಯಾಧಿಕಾರಿಗಳು

ಕತ್ತಿನಲ್ಲಿ ಟೈರ್ ಸಿಲುಕಿಕೊಂಡು ಒದ್ದಾಡಿದ ಕಾಡಾನೆ ಬಚವಾಗಿದ್ದು ಹೇಗೆ?

Viral Video: ಕಾಡಾನೆಯೊಂದರ ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಬಿಗಿಯಾಗಿ ಸಿಲುಕಿಕೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಅರಿತುಕೊಂಡ ಅರಣ್ಯಾಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಕೊನೆಗೂ ಟೈರನ್ನು ಹೊರ ತೆಗೆದು ಆನೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಾನವನ ನಿರ್ಲಕ್ಷ್ಯದಿಂದ ವನ್ಯಜೀವಿಗಳಿಗೆ ಎದುರಿಸುವ ಅಪಾಯದ ಉದಾಹರಣೆ ಎಂದು ನೆಟ್ಟಿಗರು ಹೇಳಿದ್ದಾರೆ.

ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿಗೆ ಖಾರದ ಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ ಕಳ್ಳ: ಕೆಲವೇ ನಿಮಿಷದಲ್ಲಿ ಖದೀಮನ ಹೆಡೆಮುಡಿ ಕಟ್ಟದ ಪೊಲೀಸರು

ಬ್ಯಾಂಕ್ ಸಿಬ್ಬಂದಿ ಮೇಲೆ ಮೆಣಸಿನ ಪುಡಿ ಎರಚಿ 4 ಲಕ್ಷ ರೂ. ದೋಚಿದ

Viral News: ಬ್ಯಾಂಕ್‌ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ, 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಯೊಂದು ನಡೆದಿದೆ. ಆದಾಗ್ಯೂ, ಪೊಲೀಸರು 30 ನಿಮಿಷಗಳಲ್ಲಿ ಆತನನ್ನು ಪತ್ತೆಹಚ್ಚಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಸಿನಿಮೀಯ ಘಟನೆ ನಡೆದಿದೆ.

ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ: ವಿಡಿಯೊ ವೈರಲ್

ಸರಕಾರಿ ಬಸ್ ನಲ್ಲಿ ಪ್ರಯಾಣಿಕರಿಬ್ಬರ ದೈಹಿಕ ಘರ್ಷಣೆ: ವಿಡಿಯೊ ವೈರಲ್

Viral Video: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್‌ನಲ್ಲಿಯೇ ಪ್ರಯಾಣಿಕರಿಬ್ಬರು ಜಗಳವಾಡಿದ್ದು ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲೂ ಪ್ರಯಾಣಿಕರು ಇದ್ದರೂ ಕ್ಯಾರೇ ಎನ್ನದೇ ಮಾತಿಗೆ ಮಾತು ಬೆಳೆಸಿದ್ದಾರೆ. ಈ ಘಟನೆಯೂ ಪುಣೆಯ ಭೋಸರಿಯಲ್ಲಿ ನಡೆದಿದ್ದು ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋವನ್ನು ಮತ್ತೊಬ್ಬ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ದಿನಕ್ಕೆ ನೂರು ಕರೆ ಮಾಡಿ ಪಾರ್ಸೆಲ್ ತಲುಪಿಸದ ಸಿಬ್ಬಂದಿ: ಕೊರಿಯರ್ ಸಂಸ್ಥೆ ವಿರುದ್ಧ ನಟಿ ಸುಚಿತ್ರಾ ಆಕ್ರೋಶ!

ಕೊರಿಯರ್ ಸಿಬ್ಬಂದಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ನಟಿ ಸುಚಿತ್ರಾ!

Viral News: ಖ್ಯಾತ ನಟಿ ಸುಚಿತ್ರಾ ಕೃಷ್ಣ ಮೂರ್ತಿ ಕೊರಿಯರ್ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಗಡ ಹಣ ಪಾವತಿ ಮಾಡಿದ್ದರೂ ಪಾರ್ಸಲ್ ತಲುಪಿಸದ ಬ್ಲೂ ಡಾರ್ಟ್ ಕೊರಿಯರ್ ಸಂಸ್ಥೆಯ ಸಿಬ್ಬಂದಿಯೊಬ್ಬ ಬೆಳಿಗ್ಗೆಯಿಂದಲೇ ಹಲವು ಭಾರಿ ಕರೆ ಮಾಡಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ.

Loading...