ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಉದ್ಯಾವನದಲ್ಲಿ ಆಮೆಯ ಮೇಲೆ ನಿಂತು ವಿಕೃತಿ ಮೆರೆದ ಮಹಿಳೆ: ಹುಚ್ಚಾಟದ ವಿಡಿಯೊ ವೈರಲ್‌

ಪಾರ್ಕ್‌ನಲ್ಲಿ ಆಮೆಯ ಮೇಲೆ ನಿಂತು ವಿಕೃತಿ ಮೆರೆದ ಮಹಿಳೆ

Viral News: ಇತರ ಜೀವಿಗಳ ಬಗ್ಗೆ ಗಮನ ಕೊಡದೆ ತಮಗೆ ಬೇಕಾದಂತೆ ವರ್ತಿಸುವ ಘಟನೆಗಳು ಆಗಾಗ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರವಾಸಿ ತಾಣವೊಂದರಲ್ಲಿ ಮಹಿಳೆಯೊಬ್ಬಳು ಜೀವಂತ ಆಮೆಯ ಬೆನ್ನಿನ ಮೇಲೆ ನಿಂತು ವಿಕೃತಿ ಮೆರೆದಿದ್ದಾಳೆ. ಅದಕ್ಕೂ ನೋವಾಗುತ್ತದೆ ಎಂದು ಒಂಚೂರು ಮರುಕಪಟ್ಟಿಲ್ಲ. ಈ ಘಟನೆ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಭಾರಿ ಮಳೆಗೆ ಗುರುಗ್ರಾಮದ ರಸ್ತೆ ಮಧ್ಯೆ ಬೃಹತ್‌ ಹೊಂಡ ಸೃಷ್ಟಿ; ಕಳಪೆ  ಕಾಮಗಾರಿಗೆ ಸ್ಥಳೀಯರು ಕಿಡಿ

ಗುರುಗ್ರಾಮದಲ್ಲಿ ಕುಸಿದ ರಸ್ತೆ: ಬೃಹತ್ ಗುಂಡಿ ಕಂಡು ಸ್ಥಳೀಯರ ಆತಂಕ

Viral Video: ದೆಹಲಿ-ಗುರುಗ್ರಾಮ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನ ವಾಹನಗಳು ಕೆಟ್ಟಿವೆ. ಕಚೇರಿಯಿಂದ ಮನೆಗೆ ಹೊರಟ ಉದ್ಯೋಗಿಗಳು, ಮಕ್ಕಳು ಹೆದ್ದಾರಿಯಲ್ಲೇ ಸಿಲುಕಿಕೊಂಡು ಪರದಾಡುವಂತಾಯಿತು. ರಸ್ತೆ ಮೇಲೆ ಗಂಟೆ ಗಟ್ಟಲೆ ಸಿಲುಕಿ ಜನ ಹೈರಾಣರಾಗಿದ್ದಾರೆ. ಇದೀಗ ಪ್ರಸಿದ್ಧ ಇಫ್ಕೋ ಚೌಕ್ ರಸ್ತೆಯ ಬಳಿ ಭಾರೀ ಮಳೆಯ ನಂತರ ಬೃಹತ್ ಗಾತ್ರದ ಗುಂಡಿಯೊಂದು ಕಾಣಿಸಿಕೊಂಡಿದೆ.

ಮಧ್ಯ ರಸ್ತೆಯಲ್ಲೇ ಕಾರು ನಿಲ್ಲಿಸಿ ಗಾಢ ನಿದ್ದೆಗೆ ಜಾರಿದ ʼಕುಂಭಕರ್ಣʼ: ಎಚ್ಚರಿಸಲು ಹರಸಾಹಸ ಪಟ್ಟ ಸ್ಥಳೀಯರು

ರಸ್ತೆ ಮಧ್ಯೆ ನಿದ್ರೆಗೆ ಜಾರಿದ ಚಾಲಕ: ಕುಂಭ ಕರ್ಣನಿಗೆ ಹೋಲಿಸಿದ ನೆಟ್ಟಿಗರು

Viral News: ಇಲ್ಲೊಬ್ಬ ಚಾಲಕ ನಿದ್ದೆ ಬಂದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಇದು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಜನರು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆತ ಎಷ್ಟು ಗಾಢ ನಿದ್ದೆಗೆ ಜಾರಿದ್ದಾನೆ ಎಂದರೆ ಜನರು ಕೂಗಿದರೂ ಎಚ್ಚರಗೊಂಡಿಲ್ಲ. ಕೇರಳಂನ ಕೋಟಯಂ ಜಿಲ್ಲೆಯ ಅತಿರಂಪುಳ ಪಲ್ಲಿ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.‌ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದ್ದು ಭಾರೀ ವೈರಲ್ ಆಗಿದೆ.

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿ ವಿಕೃತಿ ಮೆರೆದ ಪಾಪಿ: ಹುಚ್ಚಾಟದ ವಿಡಿಯೊ ವೈರಲ್‌

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿದ ಪಾಪಿ

Viral News: ಇಲ್ಲೊಬ್ಬ ವ್ಯಕ್ತಿ ವೈರಲ್ ಆಗುವ ಉದ್ದೇಶದಿಂದ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಜೀವಂತವಾಗಿ ಸೈಕಲ್‌ಗೆ ಕಟ್ಟಿ ರೀಲ್ಸ್‌ ಮಾಡಿದ್ದಾನೆ. ನಂತರ ಅದು ಮೃತಪಟ್ಟ ಬಳಿಕ ಮತ್ತೊಂದು ವಿಡಿಯೊ ಮಾಡಿದ್ದಾನೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕರ ಇನ್ನೋವಾ ಕಾರ್‌ ತೊಳೆದ ಅಗ್ನಿಶಾಮಕ ದಳ ಸಿಬ್ಬಂದಿ: ವಿಡಿಯೊ ವೈರಲ್, ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಶಾಸಕರ ಇನ್ನೋವಾ ಕಾರ್‌ ತೊಳೆದ ಅಗ್ನಿಶಾಮಕ ದಳ

MLA's Innova Washed by Fire Department: ಮಧ್ಯ ಪ್ರದೇಶದ ಬಿಜೆಪಿ ಶಾಸಕ ರಾಮ್ನಿವಾಸ್ ಶಾ ಅವರ ಟೊಯೋಟಾ ಇನ್ನೋವಾ ಕಾರನ್ನು ತೊಳೆಯಲು ಅಗ್ನಿಶಾಮಕ ದಳದ ವಾಹನ ಬಳಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜತೆಗೆ ಇದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ: ಟ್ರಾಫಿಕ್‌ ಕಿರಿಕಿರಿಯಿಂದ ವಾಹನ ಸಿಗದೆ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

ಗುರುಗ್ರಾಮದಲ್ಲಿ ವಾಹನ ಸಿಗದೆ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

Viral News: ಐಷಾರಾಮಿ ವಸತಿ ಕೇಂದ್ರ ಹರಿಯಾಣದ ಗುರುಗ್ರಾಮದಲ್ಲಿ ತೀವ್ರ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕಚೇರಿಯಿಂದ ಮನೆಗೆ ಹಿಂತಿರುಗಲು ವಾಹನ ಸಿಗದೆ ಉದ್ಯೋಗಿಗಳು ಪರದಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳು ರಸ್ತೆ ಮಧ್ಯೆ ಗಂಟೆಗಟ್ಟಲೆ ಸಿಲುಕಿಕೊಂಡವು. ಈ ನಡುವೆ ಯುವತಿಯೊಬ್ಬಳು ಸಂಚಾರ ದಟ್ಟಣೆಯಿಂದಾಗಿ 8 ಕಿ.ಮೀ. ದೂರವನ್ನು ಬರೋಬ್ಬರಿ 2.5 ಗಂಟೆಗಳ ಕಾಲ ನಡೆದೇ ಮನೆ ತಲುಪಿದ ವಿಡಿಯೊವೊಂದು ವೈರಲ್ ಆಗಿದೆ.

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಟ್ರಾಫಿಕ್ ಜಾಮ್: ಕ್ಯಾಬ್‌ ರೂಫ್‌ನಲ್ಲಿ ಕುಳಿತು ಕೆಲಸ ಮಾಡಿದ ಉದ್ಯೋಗಿ

ಗುರುಗ್ರಾಮದಲ್ಲಿ ಕ್ಯಾಬ್‌ ರೂಫ್‌ನಲ್ಲಿ ಕುಳಿತು ಕೆಲಸ ಮಾಡಿದ ಉದ್ಯೋಗಿ

Viral Video: ಹರಿಯಾಣದ ಗುರುಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವಸ್ತ್ಯವಾಗಿದೆ. ನೀರಿನ ಮಧ್ಯೆಯೇ ವಾಹನಗಳೆಲ್ಲ ಸ್ಥಗಿತಗೊಂಡವು. ಈ ವೇಳೆ ಕಾರೊಂದು ಕೆಟ್ಟು ಹೋದಾಗ ಉದ್ಯೋಗಿಯೊಬ್ಬರು ಟ್ಯಾಕ್ಸಿಯ ಛಾವಣಿಯನ್ನೇ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಕಚೇರಿಗೆ ತಲುಪಲು ಸಾಧ್ಯವಿಲ್ಲವೆಂದು ಅರಿತ ಆತ, ತಕ್ಷಣವೇ ಅಲ್ಲಿಂದಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.

Viral Video: ಈ ಟ್ಯಾಕ್ಸಿಯಲ್ಲಿದೆ ಉಚಿತ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಊಚಿತ ಶಾಪಿಂಗ್‌ ಕೂಡ ಮಾಡಬಹುದು

ಬ್ಯಾಂಕಾಕ್ ಟ್ಯಾಕ್ಸಿಯಲ್ಲಿದೆ ಪ್ರಯಾಣಿಕರಿಗೆ ಬೇಕಾದ ವಿಶೇಷ ಸೌಲಭ್ಯ; ಏನದು?

Viral News: ಬ್ಯಾಂಕಾಕ್‌ನ ಟ್ಯಾಕ್ಸಿ ಸೌಲಭ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ ಪ್ರಯಾಣಕ್ಕಾಗಿ ಇದು ಖ್ಯಾತಿ ಪಡೆದಿದ್ದಲ್ಲ. ಬದಲಾಗಿ ಸಣ್ಣ ಮಿನಿ ಮಾರ್ಟ್ ರೀತಿಯಲ್ಲೇ ದಿನನಿತ್ಯದ ಅಗತ್ಯ ವಸ್ತು ಇದರಲ್ಲಿದೆ. ವಿಶೇಷವೆಂದರೆ ಪ್ರಯಾಣಿಕರು ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದು.

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಆಭರಣ ನಾಪತ್ತೆ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿದ್ದ ಕಳ್ಳನನ್ನು ನೋಡಿ ಹೌಹಾರಿದ ಅಧಿಕಾರಿಗಳು

ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರ ಆಭರಣ ನಾಪತ್ತೆ; ಕಳ್ಳ ಯಾರು ಗೊತ್ತೆ?

Jewellery Missing from Patient: ಸರ್ಕಾರಿ ಆಸ್ಪತ್ರೆಯಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿ ತಂದಿದೆ. ಯಾಕೆಂದರೆ ಆ ಆಭರಣಗಳನ್ನು ಕದ್ದಿದ್ದು ಯಾವುದೇ ಕಳ್ಳನಲ್ಲ, ಬದಲಿಗೆ ಶ್ವಾನ! ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಭಾರತದಲ್ಲಿ ರಣ ಭೀಕರ ಮಳೆ; ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ: ರಸ್ತೆಯಲ್ಲೇ ಗಂಟೆಗಟ್ಟಲೆ ಪರದಾಡಿದ ಶಾಲಾ ಮಕ್ಕಳು

ಗುರುಗ್ರಾಮದಲ್ಲಿ ಭಾರಿ ಮಳೆ: ರಸ್ತೆಯಲ್ಲೇ ಸಿಲುಕಿದ ಶಾಲಾ ಮಕ್ಕಳು

Viral News: ಐಷಾರಾಮಿ ವಸತಿ ಕೇಂದ್ರವಾದ ಹರಿಯಾಣದ ಗುರುಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ತೀವ್ರವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳೇ ಜಲವೃತಗೊಂಡಿವೆ. ರಸ್ತೆಯಲ್ಲಿಯೇ ವಾಹನಗಳು ಸಿಲುಕಿದ್ದು ಉದ್ಯೋಗಿಗಳು, ಶಾಲಾ ಮಕ್ಕಳು ಗಂಟೆಗಟ್ಟಲೆ ಪರದಾಡಿದ್ದಾರೆ. ನೀರು ಹೆಚ್ಚಾದ ಕಾರಣ ಚಾಲಕರು ಮತ್ತು ಅಟೆಂಡರ್‌ಗಳು ಬಸ್ ಮೇಲೇರಿ ಕುಳಿತುಕೊಂಡಿರುವ ದೃಶ್ಯ ವೈರಲ್‌ ಆಗಿದೆ.

ಕಾರ್‌ನ ತುಂಬೆಲ್ಲಾ ಪ್ರಿಯತಮೆಯ ಮುತ್ತು: ವೈರಲ್ ಟ್ರೆಂಡ್ ಪಾಲಿಸಲು ಹೋಗಿ ಪೇಚೆಗೆ ಸಿಲುಕಿದ ಯುವಕ!

ಕಾರ್ ಗೆ ಮುತ್ತಿಟ್ಟ ಪ್ರಿಯತಮೆ: ಯುವಕನಿಗೆ ಬಿತ್ತು 5,500 ರೂ. ದಂಡ!

Viral News: ಕಾರಿನ ಮೇಲೆ ಪ್ರಿಯತಮೆ 3,400 ಮುತ್ತುಕೊಟ್ಟಿದ್ದು ರಸ್ತೆಯಲ್ಲಿ ಸಾಗುವಾಗ ಈ ಕಾರು ಸಾರ್ವಜನಿಕರ ಗಮನ ಸೆಳೆಯುತ್ತಿತ್ತು. ಆದರೆ ಈ ವಿಚಿತ್ರ ಮೇಕ್‌ಓವರ್ ತೊಂದರೆಗೆ ಸಿಲುಕಿದ್ದು ಪೊಲೀಸರು ದಂಡ ವಿಧಿಸಿದ್ದಾರೆ‌. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 5,500 ರೂ ವಸೂಲಿ ಮಾಡಿದ್ದಾರೆ..

ಗಂಡನಿಗೆ ತಿಳಿಸದೆ 12 ಲಕ್ಷ ರೂ. ಪೆಟ್ಟಿಗೆಯೊಳಗೆ ಬಚ್ಚಿಟ್ಟಿದ್ದ ಮಹಿಳೆ: ನಗದು ಚೂರು ಚೂರು ಮಾಡಿದ ಇಲಿಗಳು!

ಗಂಡನಿಗೆ ತಿಳಿಸದೆ 12 ಲಕ್ಷ ರೂ. ಪೆಟ್ಟಿಗೆಯಲ್ಲಿಟ್ಟ ಮಹಿಳೆ: ನಗದು ಇಲಿ ಪಾಲು

Viral News: ಇಲ್ಲೊಬ್ಬ ಮಹಿಳೆ ಗಂಡನಿಗೆ ತಿಳಿಸದೇ ಸುಮಾರು 8 ವರ್ಷದಿಂದ ಪೆಟ್ಟಿಗೆಯೊಂದರಲ್ಲಿ ಹಣವನ್ನು ಬಚ್ಚಿಟ್ಟಿದ್ದಳು. ಆದರೆ ಈ ಲಕ್ಷಾಂತರ ರೂಪಾಯಿ ನಗದನ್ನು ಇಲಿಗಳು ತಿಂದು ಹಾಕಿವೆ. ಈ ಹೃದಯ ವಿದ್ರಾವಕ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಆಸ್ಪತ್ರೆಯೊಳಗೆ ಮದ್ಯಪಾನ ಮಾಡಿದ ಮಹಿಳೆ; ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಆಸ್ಪತ್ರೆ ವಾರ್ಡ್‌ನಲ್ಲೇ ಸಾರ್ವಜನಿಕವಾಗಿ ಮದ್ಯ ಸೇವಿಸಿದ ಮಹಿಳೆ!

Viral Video: ಮಹಿಳೆಯೊಬ್ಬರು ಆಸ್ವತ್ರೆ ವಾರ್ಡ್ ನಲ್ಲೇ ಬಹಿರಂಗವಾಗಿ ಮದ್ಯ ಸೇವಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಜಬಲ್ಪುರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಭದ್ರತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿಬ್ಬಂದಿಯ ಕಣ್ಣು ತಪ್ಪಿಸಿ ಆಸ್ವತ್ರೆ ಯೊಳಗೆ ಮದ್ಯ ಸೇವಿಸುವಷ್ಟು ಆಡಳಿತದ ನಿಯಮ ಸ್ವತಂತ್ರ ವಾಗಿದೆಯೇ? ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಛೇ ಇದೆಂತಾ ಸ್ಥಿತಿ; ಮೂಲಭೂತ ಸೌಕರ್ಯವಿಲ್ಲದೆ ನದಿಯ ಮಧ್ಯೆ ಶವವನ್ನು ಹೊತ್ತು ಈಜಿದ ಗ್ರಾಮಸ್ಥರು!

ತುಂಬಿ ಹರಿಯುತ್ತಿದ್ದ ನದಿಯಲ್ಲಿ ಶವವನ್ನು ಹೊತ್ತೊಯ್ದ ಗ್ರಾಮಸ್ಥರು

Viral Video: ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಇಲ್ಲಿನ ಜನರು ಪರದಾಡುವಂತೆ ಆಗಿದ್ದು ರಸ್ತೆ ಸಂಪರ್ಕ ಇಲ್ಲದೆ ಪ್ರವಾಹದ ನೀರಿನ ಮಧ್ಯೆಯೇ ಮೃತದೇಹವನ್ನು ಪ್ಲಾಸ್ಟಿಕ್ ಡ್ರಮ್ ಗಳ ಮೇಲೆ ಕಟ್ಟಿ ಸಾಗಿಸಿದ್ದಾರೆ. ಆಂಬ್ಯುಲೆನ್ಸ್ ಆ ಪ್ರದೇಶವನ್ನು ತಲುಪಲು ಸಾಧ್ಯವಾಗದೆ ಇರುವ ಕಾರಣ ಗ್ರಾಮಸ್ಥರು ಶವವನ್ನು ತಾವೇ ಜಲವೃತ ಗೊಂಡ ನೀರಿನಲ್ಲಿ ಹೊತ್ತು ಸಾಗಿದ್ದಾರೆ.

ದಿನ ಭವಿಷ್ಯ, ಆಗಸ್ಟ್‌ 25, 2026: ಇಂದು ಹೊಸ ಉದ್ಯಮ ಆರಂಭಿಸಲು ಸಕಾಲ

ಈ ರಾಶಿಯವರು ಇಂದು ಅನಗತ್ಯ ಖರ್ಚು- ವೆಚ್ಚ ತಪ್ಪಿಸಿ!

Horoscope Today August 25th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದ್ವಾದಶಿ ತಿಥಿ, ಉತ್ತರಾಷಾಢ ನಕ್ಷತ್ರದ ಆಗಸ್ಟ್ 25ನೇ ತಾರೀಖಿನ ಈ ದಿನದ ಭವಿಷ್ಯದ ಹೇಗಿರಲಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಎನ್ನುವ ವಿವರ ಇಲ್ಲಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ: ಸಹಾಯ ಮಾಡುವ ಬದಲು ಚೆಲ್ಲಿದ ಪಾಮ್ ಆಯಿಲ್‌ ಸಂಗ್ರಹಿಸಲು ಮುಗಿಬಿದ್ದ ಸ್ಥಳೀಯರು; ವಿಡಿಯೊ ವೈರಲ್‌

ಪಾಮ್ ಆಯಿಲ್ ಟ್ಯಾಂಕರ್ ಪಲ್ಟಿ: ಬಕೆಟ್ ಹಿಡಿದು ಜಮಾಯಿಸಿದ ಜನ

Viral Video: ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ತೋಡಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ‌. ಪಾಮ್ ಆಯಿಲ್ ಕೊಂಡೊಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ‌ ಪಲ್ಟಿಯಾಗಿದೆ. ಆದರೆ ಸ್ಥಳೀಯ ಜನರು ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್ ಕ್ಯಾನ್ ಹಿಡಿದು ಎಣ್ಣಿ ತುಂಬಿಸಲು ಮುಗಿಬಿದ್ದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿಕ್ಕಿರಿದ ಲೋಕಲ್ ಟ್ರೈನ್‌ನಲ್ಲಿ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ಮಹಿಳೆಯರು; ವಿಡಿಯೊ ನೋಡಿ ಆತಂಕ ವ್ಯಕ್ತಪಡಿಸಿದ ನೆಟ್ಟಿಗರು

ಮುಂಬೈ ಲೋಕಲ್ ರೈಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ಮಹಿಳೆಯರು

Viral Video: ಮುಂಬೈಯ ಲೋಕಲ್ ರೈಲು ಒಂದರಲ್ಲಿ ಮಹಿಳೆಯರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಕಿಕ್ಕಿರಿದ ರೈಲಿನ ಬಾಗಿಲಿಲ್ಲಿ ನೇತಾಡಿಕೊಂಡು ಮಹಿಳೆಯರು ಪ್ರಯಾಣಿಸಿದ್ದಾರೆ. ಈ ದೃಶ್ಯವು ಸಾರ್ವಜನಿಕ ಸಾರಿಗೆ ಮತ್ತು ಸುರಕ್ಷತೆ ಬಗ್ಗೆ ಕಳವಳ ಹುಟ್ಟು ಹಾಕಿದೆ.

ರಾಜಕೀಯದಲ್ಲಿ ಮೀನಿನ ಘಮಲು; ಅಯೋಧ್ಯೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೀನು ಖಾದ್ಯ ತಯಾರಿಸಲಾಗಿದೆ ಎಂದ ಬಿಜೆಪಿ; ಸಾಕ್ಷಿ ತೋರಿಸಲು ಕೈ ನಾಯಕನ ಸವಾಲು

ಅಯೋಧ್ಯೆಯ ನಿಷೇಧಿತ ಜಾಗದಲ್ಲಿ ಕಾಂಗ್ರೆಸ್‌ನಿಂದ ಮೀನು ಖಾದ್ಯ ತಯಾರಿ?

Fish dish controversy: ಅಯೋಧ್ಯೆಯ ರಾಮಮಂದಿರ ನಗರಿಯಲ್ಲಿ ಕಾಂಗ್ರೆಸ್ ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರಾಯ್ ಅವರನ್ನು ಸ್ವಾಗತಿಸಲು ಆಯೋಜಿಸಿದ್ದ ಔತಣಕೂಟದಲ್ಲಿ ಮೀನು ಖಾದ್ಯ ಬಡಿಸಿದೆ ಬಿಜೆಪಿ ಆರೋಪಿಸಿದ್ದು ವಿವಾದ ಭುಗಿಲೆದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ವಾಗ್ವಾದ ಆರಂಭಗೊಂಡಿದೆ.

Bantwal civic worker: ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ; ಬಂಟ್ವಾಳದ ಶ್ರಮಿಕನ ವಿಡಿಯೊ ವೈರಲ್‌!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ!

ಬಂಟ್ವಾಳದಲ್ಲಿ 50 ರೂ. ದಿನಗೂಲಿಯಿಂದ ಆರಂಭವಾದ ಪೌರ ಕಾರ್ಮಿಕರೊಬ್ಬರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ಅವರು ರಸ್ತೆ ಬದಿ ಕಸ ಗುಡಿಸುವ ಜತೆಗೆ ವಿವಿಧ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ.

ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಹ್ಯೂಮನಾಯ್ಡ್ ರೊಬೋಟ್ ಮಸ್ತ್ ಸ್ಟೆಪ್: ಯಾವ ಡ್ಯಾನ್ಸರ್‌ಗೂ ಕಮ್ಮಿ ಇಲ್ಲ ಎಂದ ನೆಟ್ಟಿಗರು

ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ರೊಬೋಟ್: ವಿಡಿಯೊ ನೋಡಿ

Viral Video: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಹೊಸದಾಗಿ ಆರಂಭಗೊಂಡ ಸ್ಯಾಂಡ್‌ವಿಚ್ ಶಾಪ್‌ನ ಉದ್ಘಾಟನಾ ಸಮಾರಂಭದಲ್ಲಿ ರೊಬೋಟ್ ಡ್ಯಾನ್ಸ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೌದು, ಈ ಸ್ಯಾಂಡ್‌ವಿಚ್ ಅಂಗಡಿ ಉದ್ಘಾಟನೆಯಲ್ಲಿ ಗಮನ ಸೆಳೆದಿದ್ದು ಮುಖ್ಯ ಅತಿಥಿಗಳು, ಸೆಲೆಬ್ರಿಟಿ ಅಥವಾ ವಿಐಪಿಗಳಲ್ಲ. ಬದಲಾಗಿ ಹ್ಯೂಮನಾಯ್ಡ್ ರೊಬೋಟ್.

"ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ": ಇಲ್ಲಿನ ಕೈಗೆಟುಕುವ ಸೇವೆಗಳಿಗೆ ಫಿದಾ ಆದ ಝಿಂಬಾಬ್ವೆ ಯುವಕ!

ಭಾರತದ ಸೇವೆಗಳಿಗೆ ಮನಸೋತ ವಿದೇಶಿ ಪ್ರವಾಸಿ: ವಿಡಿಯೊದಲ್ಲಿ ಹೇಳಿದ್ದೇನು?

Viral News: ಇಲ್ಲಿನ ಕೈಗೆಟುಕುವ ಕೆಲವು ಸೌಲಭ್ಯ ವಿದೇಶಿಗರನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಿದೆ ಡಿಜಿಟಲ್ ಪಾವತಿ, ದಿನಸಿ ಸೇವೆ, ಪ್ರಯಾಣ ಸೌಲಭ್ಯಕ್ಕೆ ಝಿಂಬಾಬ್ವೆಯ ಕಂಟೆಂಟ್ ಕ್ರಿಯೇಟರ್ ವೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೇವಲ ಫೋನ್‌ನಿಂದ ಬಹುತೇಕ ಎಲ್ಲದಕ್ಕೂ ಹಣ ಪಾವತಿಸುವುದರಿಂದ ಹಿಡಿದು ಆಹಾರ, ದಿನಸಿ ಮತ್ತು ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವರೆಗೆ, ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ ಎಂದು ಬರೆದುಕೊಂಡಿದ್ದಾರೆ.

ಕಲಬೆರಕೆ ಆಹಾರ: ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ನಿರಾಕರಿಸಿದ ವ್ಯಾಪಾರಿಯ ವಿಡಿಯೊ ವೈರಲ್‌

ಕಳಪೆ ಆಹಾರ ಮಾರಾಟ: ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ಹಿಂಜರಿದ ವ್ಯಾಪಾರಿ

Viral News: ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ವ್ಯಾಪಾರಿಯೊಬ್ಬ ಕಲಬೆರಕೆ ಇರುವ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಲಕ ತನ್ನದೇ ಅಂಗಡಿಯ ಸ್ವೀಟ್‌ ತಿನ್ನಲಿ ನಿರಾಕರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ

ನದಿಯನ್ನೇ ಡಸ್ಟ್ ಬಿನ್ ಮಾಡಿದ ದಂಪತಿ: ದಂಡ ವಿಧಿಸಲು ನೆಟ್ಟಿಗರ ಆಗ್ರಹ

Viral Video: ಕಾರಿನಲ್ಲಿ ಬಂದ ದಂಪತಿ ತ್ಯಾಜ್ಯವನ್ನು ನದಿಗೆ ಎಸೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವು ಮತ್ತೊಮ್ಮೆ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಪರಿಸರ ಕಾಳಜಿಯ ಹೊಣೆ ತಮ್ಮದಲ್ಲ ಎಂಬಂತೆ ದಂಪತಿ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿದ್ದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ.

ಕೆಮ್ಮಿಗೆ ಚಿಕಿತ್ಸೆ ಪಡೆಯಬೇಕೆಂದರೂ ಒಂದು ವಾರ ಕಾಯಬೇಕು; ವಿದೇಶಗಳ ವೈದ್ಯಕೀಯ ಸ್ಥಿತಿ ಬಿಚ್ಚಿಟ್ಟ ಭಾರತೀಯ ಮಹಿಳೆ

ವಿದೇಶಗಳ ವೈದ್ಯಕೀಯ ಸ್ಥಿತಿ ಬಿಚ್ಚಿಟ್ಟ ಭಾರತೀಯ ಮಹಿಳೆ

ಅಭಿವೃದ್ಧಿ ಹೊಂದಿದ ವಿದೇಶಗಳಲ್ಲಿ ವೈದ್ಯಕೀಯ ಸೇವೆ ಪಡೆಯುವುದು ಎಷ್ಟು ಕಷ್ಟ ಎಂಬ ಸತ್ಯವನ್ನು ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತೀಯ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ತೀವ್ರ ಕೆಮ್ಮಿನಿಂದ ನರಳುತ್ತಿದ್ದ ಮಗನ ಚಿಕಿತ್ಸೆಗೆ ವೈದ್ಯರ ಅಪಾಯಿಂಟ್‌ಮೆಂಟ್ ಸಿಗದೆ ಅನುಭವಿಸಿದ ನರಕಯಾತನೆಯನ್ನು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದು, "ಇಂತಹ ಪರಿಸ್ಥಿತಿಯಲ್ಲಿ ಭಾರತದ ಹೆಲ್ತ್ಕೇರ್ ಸಿಸ್ಟಮ್ ನಿಜಕ್ಕೂ ಗ್ರೇಟ್" ಎಂದು ಅಭಿಪ್ರಾಯಪಟ್ಟಿದ್ದಾರೆ.

Loading...