ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಉತ್ತರ ಪ್ರದೇಶದಲ್ಲಿ ಮನಕಲಕುವ ಘಟನೆ: ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ

ಮನೆಯವರ ರಕ್ಷಣೆಗಾಗಿ ಹಾವಿನೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಶ್ವಾನ

Viral News: ಉತ್ತರ ಪ್ರದೇಶದಲ್ಲಿ ಮನಕುಲಕುವ ಘಟನೆಯೊಂದು ನಡೆದಿದೆ. ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಶ್ವಾನ ಬಳಿಕ ಪ್ರಾಣ ಬಿಟ್ಟಿದೆ. ಹಾವಿನ ಜತೆ ಹೋರಾಡಿ ಜೀವ ಕಳೆದುಕೊಂಡಿದೆ. ಈ ಭಾವುಕ ಘಟನೆ ನೆಟ್ಟಿಗರ ಕಣ್ನಂಚು ಒದ್ದೆ ಮಾಡಿದೆ.

ಮೃತ ಮರಿಯನ್ನು ಮರೆಯಲು ಸಾಧ್ಯವಾಗದೆ ಶವವನ್ನು ಬೆನ್ನ ಮೇಲೆ ಹೊತ್ತು ಈಜಿದ ತಾಯಿ ಡಾಲ್ಫಿನ್: ಭಾವುಕ ವಿಡಿಯೊ ವೈರಲ್‌

ಮೃತ ಮರಿಯನ್ನು ಹೊತ್ತು ಈಜಿದ ತಾಯಿ ಡಾಲ್ಫಿನ್: ವಿಡಿಯೊ ನೋಡಿ

Viral Video: ತಾಯಿ ಡಾಲ್ಫಿನ್ ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತುಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ.

ಆರ್ಡರ್ ಮಾಡದೇ ಇದ್ದರೂ ತಲುಪಿದ ಪಾರ್ಸೆಲ್: ಬೆಂಗಳೂರಿನಲ್ಲಿ 500 ರುಪಾಯಿಯ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್; ಏನಿದು ಮೋಸದ ಜಾಲ? ಹೇಗೆ ಕಾರ್ಯ ನಿರ್ವಹಿಸುತ್ತೆ?

500 ರುಪಾಯಿ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್ ಬಗ್ಗೆ ಎಚ್ಚರಿಸಿದ ಯುವತಿ

Viral Video: ಇಂದು ಆನ್‌ಲೈನ್ ವ್ಯವಹಾರದಲ್ಲಿ ಮೋಸದ ಜಾಲ ಹೆಚ್ಚಾಗಿದ್ದು, ಹಣವನ್ನು ಕಳುಹಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಹೊಸ ಸ್ಕ್ಯಾಮ್‌ ನಡೆಯುತ್ತಿದೆ. ಯುವತಿಯೊಬ್ಬರು ಯಾವುದೇ ವಸ್ತು ಆರ್ಡರ್ ಮಾಡದೇ ಇದ್ದರೂ ಅವರ ಹೆಸರಿಗೆ ಹಾಗೂ ವಿಳಾಸಕ್ಕೆ 500 ರುಪಾಯಿ ಮೌಲ್ಯದ ಪಾರ್ಸಲ್ ಬಂದಿದೆ. ಈ ವಂಚನೆಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಚಿಂತೆ ಇಲ್ಲದ ಶಿಕ್ಷಕನಿಗೆ ಕ್ಲಾಸ್‌ನಲ್ಲೇ ನಿದ್ದೆ; ತರಗತಿಯಲ್ಲೇ ಮಲಗಿದ ಅಧ್ಯಾಪಕ: ಮೊಬೈಲ್ ನೋಡುತ್ತ ಕುಳಿತ ಮಕ್ಕಳು

ತರಗತಿಯೊಳಗೆ ನಿದ್ದೆಗೆ ಜಾರಿದ ಶಿಕ್ಷಕ: ವಿಡಿಯೊ ವೈರಲ್‌

Viral Video: ಉತ್ತರ ಪ್ರದೇಶದ ಕನ್ನೌಜ್‌ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತರಗತಿ ವೇಳೆಯಲ್ಲಿ ನಿದ್ದೆ ಮಾಡಿದ್ದು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾನೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ

ಶಾಲೆ ಸೇರುವ ದಾರಿ ಜೀವಕ್ಕೆ ಸವಾಲು; ನದಿ ದಾಟುವ ಮಕ್ಕಳ ವಿಡಿಯೊ ವೈರಲ್

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಕರುವಾ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಪ್ರತಿದಿನ ಬೆಟ್ವಾ ನದಿಯ ಮೇಲಿನ ಕಿರಿದಾದ ಸ್ಟಾಪ್ ಡ್ಯಾಂ ದಾಟುತ್ತಿದ್ದಾರೆ. ಸುರಕ್ಷಿತ ರಸ್ತೆ ಬಳಸಲು 8–10 ಕಿ.ಮೀ. ಸುತ್ತು ಹೋಗಬೇಕಾಗಿರುವುದರಿಂದ ಮಕ್ಕಳು ಜೀವದ ಹಂಗು ತೊರೆದು ಈ ಅಪಾಯಕಾರಿ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ. ವೈರಲ್ ವಿಡಿಯೋ ಬಳಿಕ ಆಡಳಿತ ಸೈಕಲ್ ವಿತರಣೆ, ತಾತ್ಕಾಲಿಕ ಸೇತುವೆ ನಿರ್ಮಾಣ ಹಾಗೂ ಹೊಸ ಶಾಲೆ ಆರಂಭಿಸುವ ಭರವಸೆ ನೀಡಿದೆ.

ಮದುವೆಯಾಗುವ ಕನ್ಯೆಗಾಗಿ ವ್ಯಕ್ತಿಯ ವಿಚಿತ್ರ ಷರತ್ತು ಕೇಳಿದ್ರೆ ಶಾಕ್‌ ಆಗ್ತೀರಾ! ಈತನ ನಿರೀಕ್ಷೆ ಕಂಡು ಕಾಲೆಳೆದ ನೆಟ್ಟಿಗರು!

ಆದರ್ಶ ಪತ್ನಿಗಾಗಿ ಯುವಕನ ವಿಚಿತ್ರ ಷರತ್ತು ಕಂಡು ನೆಟ್ಟಿಗರೇ ಶಾಕ್!

Viral News: ಇಲ್ಲೊಬ್ಬ ಆದರ್ಶ ಪತ್ನಿಯ ಬಗ್ಗೆ ವಿಚಿತ್ರ ಷರತ್ತುವೊಂದನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತಾನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳಿದ್ದರೆ ಮಾತ್ರ ಮದುವೆ ಯಾಗುತ್ತೆನೆಂದು ಹೇಳಿಕೊಂಡಿದ್ದು ಯುವಕನ ಷರತ್ತು ಕಂಡು ನೆಟ್ಟಿಗರು ಟ್ರೋಲ್ ಮಾಡು ತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಹುಡುಗಿ ಸಿಗುವ ಕನಸು ಕಾಣಬೇಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಬೆಂಗಳೂರು ಐಟಿ ಕಂಪನಿಯ 11 ಲಕ್ಷ ವೇತನದ ಕೆಲಸ ತೊರೆದು ನೀರಿನ ಬಿಸಿನೆಸ್ ಆರಂಭ ಮಾಡಿದ ಯುವಕ! ಈಗ ವಾರ್ಷಿಕ ಗಳಿಕೆ 28.5 ಲಕ್ಷ!

ಐಟಿ ಕಂಪನಿಯ ಜಾಬ್ ತೊರೆದು ನೀರಿನ ಬಿಸಿನೆಸ್ ಮೂಲಕ ಯಶಸ್ಸು ಕಂಡ ಯುವಕ

Viral News: ಕಾರ್ಪೊರೇಟ್ ಉದ್ಯಮವನ್ನು ತೊರೆದ ಅನೇಕ ಯುವಕ- ಯುವತಿಯರಿದ್ದಾರೆ. ಲಕ್ಷ ಲಕ್ಷ ಸಂಬಳ ಬರುತ್ತಿದ್ದರೂ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ ಪ್ರತಿಷ್ಠಿತ ಕಂಪನಿಯ ಕೆಲಸವನ್ನೇ ತ್ಯಜಿ ಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಯುವಕನೊಬ್ಬ ಕಾರ್ಪೊರೇಟ್ ಜಾಬ್ ನಿಂದ ಬೇಸೆತ್ತು ಸ್ವಂತ ಉದ್ಯಮ ಮಾಡುವ ಮೂಲಕ ಯಶಸ್ಸು ಕಂಡ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ

Fact Check: ಕೇಂದ್ರ ಸರ್ಕಾರದ 2.5 ಲಕ್ಷ ರುಪಾಯಿ ಮಾಸಿಕ ಆದಾಯದ ಭರವಸೆ; ವೈರಲ್ ಸುದ್ದಿಯ ಅಸಲಿಯತ್ತೇನು?

2.5 ಲಕ್ಷ ರೂ. ಮಾಸಿಕ ಆದಾಯ: ಕೇಂದ್ರ ಸರ್ಕಾರದ ಹೊಸ ಯೋಜನೆ ಏನು?

ಕೇಂದ್ರ ಸರ್ಕಾರ ಹೊಸ ಮಾಸಿಕ ಆದಾಯದ ಯೋಜನೆಯೊಂದನ್ನು ಪ್ರಕಟಿಸಿದೆ ಎನ್ನುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಏನಿದು ಯೋಜನೆ? ಈ ವೈರಲ್ ವಿಡಿಯೊದ ಅಸಲಿಯತ್ತೇನು ಎಂಬುದರ ಕುರಿತು ಪತ್ರಿಕಾ ಮಾಹಿತಿ ಬ್ಯೂರೋ ನೀಡಿರುವ ಮಾಹಿತಿ ಇಲ್ಲಿದೆ.

ಬೇಕರಿ ತಿಂಡಿ ಸೇವಿಸುವಾಗ ಹುಷಾರ್‌; ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ: ವಿಡಿಯೊ ಇಲ್ಲಿದೆ

ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ: ನೆಟ್ಟಿಗರು ಕಿಡಿ

Viral Video: ಮಹಾರಾಷ್ಟ್ರದ ಮುಂಬೈಯ ಚರ್ನಿ ರೋಡ್‌ನ ಒಪೆರಾ ಹೌಸ್ ಬಳಿ ಇರುವ ಪ್ರಸಿದ್ಧ ತಿವಾರಿ ಬ್ರದರ್ಸ್ ಸ್ವೀಟ್ಸ್ ಮಳಿಗೆಯಿಂದ ಖರೀದಿಸಿದ ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಕಬ್ಬಣದ ಪಿನ್‌ ಪತ್ತೆಯಾಗಿದೆ. ಗ್ರಾಹಕರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಘಟನೆ ಆಹಾರ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದೆ.

ಶಾಲೆಯಲ್ಲೇ ಹರಿಯಿತು ನೆತ್ತರು; ಶಿಕ್ಷಕಿಯನ್ನು ಕ್ಲಾಸ್‌ನಿಂದ ಹೊರಗೆಳೆದು 20 ಬಾರಿ ಇರಿದು ಕೊಂದ ಪಾಪಿ

ಶಾಲೆಗೆ ನುಗ್ಗಿ ಶಿಕ್ಷಕಿಯನ್ನು ಭೀಕರವಾಗಿ ಕೊಂದ ಪಾಪಿ

Viral News: ಮುಸುಕುಧಾರಿ ವ್ಯಕ್ತಿಯೊಬ್ಬ ಶಾಲೆಗೆ ನುಗ್ಗಿ ಹಾಡಹಗಲೇ ತರಗತಿಯಿಂದ ಶಿಕ್ಷಕಿಯನ್ನು ಹೊರಗೆಳೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಶಿಕ್ಷಕಿಗೆ 18ರಿಂದ 20 ಇರಿತದ ಗಾಯಗಳಾಗಿದ್ದು, ದುಷ್ಕರ್ಮಿ ಆಕೆಯ ಕುತ್ತಿಗೆ ಮತ್ತು ಎದೆಯನ್ನು ಗುರಿಯಾಗಿಸಿಕೊಂಡು ಪದೇ ಪದೆ ಇರಿದಿದ್ದಾನೆ.‌ ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಯ ಮತ್ತೊಂದು ಅಸಭ್ಯ ವರ್ತನೆ; ಕುಡಿತದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನ: ಭಯಾನಕ ವಿಡಿಯೊ ವೈರಲ್‌

ಕುಡಿದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

Viral Video: ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಮಾಡುವ ಮತ್ತೊಂದು ಅಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಉಬರ್ ಪಾರ್ಸಲ್ ಡೆಲಿವರಿ ಬಾಯ್ ಕುಡಿತದ ಮತ್ತಿನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಶೇರ್ ಮಾಡಿದ ಮಹಿಳೆ ಆತನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ ಬೆನ್ನಲ್ಲೇ ಆಲಂಕಾರಿಕ ಗಿಡಗಳನ್ನು ಕದ್ದೊಯ್ದ ಸ್ಥಳೀಯರು; ಹೊಡೀರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ವಿಮಾನ ನಿಲ್ದಾಣದಿಂದ ಗಿಡ ಕದ್ದೊಯ್ದ ಸ್ಥಳೀಯರು: ನೆಟ್ಟಿಗರು ಕಿಡಿ

Viral Video: ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಬೆನ್ನಲ್ಲೇ ಆವರಣವನ್ನು ಸುಂದರಗೊಳಿಸಲು ನೆಟ್ಟಿದ್ದ ಅಲಂಕಾರಿಕ ಗಿಡಗಳನ್ನು ಸ್ಥಳೀಯರು ಬೇರು ಸಹಿತವಾಗಿ ಕಿತ್ತುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಪಾದಪೂಜೆ ಮಾಡಿದ ಕಾರ್ಯಕರ್ತರು: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ವಿಡಿಯೊ ವೈರಲ್‌

ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಪಾದಪೂಜೆಗೆ ಬಿಜೆಪಿ ಟೀಕೆ

Congress Leader Nana Patole: ಗುರು ಪೂರ್ಣಿಮೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ಕಾರ್ಯಕರ್ತರು ತೊಳೆದು ಪೂಜೆ ಸಲ್ಲಿಸಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಇದನ್ನು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ ಎಂದು ಆರೋಪಿಸಿದೆ. ಪಟೋಲೆ ಈ ಬಗ್ಗೆ ಸ್ಪಷ್ಟನೆ ನೀಡಿ ಪಾದಪೂಜೆ ಮಾಡಿದವರು ತಮ್ಮ ಕುಟುಂಬದ ಸದಸ್ಯರು ಹಾಗೂ ಗುರು ಪೂರ್ಣಿಮೆಯ ಅಂಗವಾಗಿ ಗೌರವ ಸೂಚಕವಾಗಿ ಈ ಆಚರಣೆ ನಡೆಸಿದ್ದಾರೆ ಎಂದಿದ್ದಾರೆ.

ಒಬ್ಬಂಟಿ ಮಹಿಳೆ ಪ್ರಯಾಣಿಸುವಾಗ ಅಶ್ಲೀಲ ವಿಡಿಯೊ ವೀಕ್ಷಿಸಿದ ರ‍್ಯಾಪಿಡೋ ಚಾಲಕ! ಕಹಿ ಘಟನೆ ಶೇರ್ ಮಾಡಿದ ಯುವತಿ

ಯುವತಿಯ ಎದುರೇ ಅಶ್ಲೀಲ ವಿಡಿಯೊ ವೀಕ್ಷಿಸಿದ ರ‍್ಯಾಪಿಡೋ ಚಾಲಕ

Viral News: ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಮತ್ತೊಂದು ಪ್ರಕರಣ ವರದಿಯಾಗಿದೆ. ದೆಹಲಿಯ ಮಹಿಳೆಯೊಬ್ಬರು ರ‍್ಯಾಪಿಡೋ ಆಟೋ-ರಿಕ್ಷಾದಲ್ಲಿ ಪ್ರಯಾಣ ಮಾಡುವಾಗ ಚಾಲಕನೊಬ್ಬ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದು, ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯೂ ತನಗಾದ ಕಹಿ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜಾರ್ಜಿಯಾ ಮೆಲೋನಿಗೆ ನರೇಂದ್ರ ಮೋದಿ ಚಾಕೊಲೇಟ್‌ ಗಿಫ್ಟ್‌ ಕೊಟ್ಟ ಎಫೆಕ್ಟ್‌: ಇಟಲಿ ಸೊಗಡಿನಲ್ಲಿ ಪಾರ್ಲೆ Melody ಕ್ಯಾಂಡಿ; Melodi ಟ್ರೆಂಡ್‌ಗೆ ಸಿಹಿ ಟ್ವಿಸ್ಟ್

ಇಟಲಿ ಸೊಗಡಿನಲ್ಲಿ ಮೆಲೋಡಿ: ಹೊಸ ರುಚಿಗೆ ನೆಟ್ಟಿಗರ ಮೆಚ್ಚುಗೆ

India-Italy Friendship: ಭಾರತ–ಇಟಲಿ ಸ್ನೇಹವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪಾರ್ಲೆ ಸಂಸ್ಥೆ ತಿರಾಮಿಸು ರುಚಿಯ ಸೀಮಿತ ಆವೃತ್ತಿಯ ಮೆಲೋಡಿ ಕ್ಯಾಂಡಿಯನ್ನು ಬಿಡುಗಡೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿದ್ದ ʼಮೆಲೋಡಿʼ ಟ್ರೆಂಡ್‌ಗೆ ಸೃಜನಾತ್ಮಕ ಸ್ಪರ್ಶ ನೀಡಿರುವ ಈ ಹೊಸ ಪ್ರಯತ್ನ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ರುಚಿಯ ಮೆಲೋಡಿ ಬಿಡುಗಡೆಯಾದ ಕೂಡಲೇ ಭಾರಿ ಚರ್ಚೆಗೆ ಕಾರಣವಾಗಿದ್ದು, ಬ್ರ್ಯಾಂಡ್‌ನ ಹೊಸತನದ ಮಾರಾಟ ತಂತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Viral Video: ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!

ನ್ಯಾಯ ವಿಳಂಬಕ್ಕೆ ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ

ಛತ್ತರಪುರ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯ ಒಳಗೆಯೇ ವಿಷ ಸೇವಿಸಲು ಯತ್ನಿಸಿರುವ ಘಟನೆಯೊಂದು ನಡೆದಿದೆ. ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ ಎಂದು ಬೇಸೆತ್ತು ಪೊಲೀಸ್ ಸ್ಟೇಷನ್‌ ನಲ್ಲಿಯೇ ಇದ್ದಕ್ಕಿದ್ದಂತೆ ವಿಷ ಸೇವನೆ ಮಾಡಿದ್ದಾಳೆ..

ಪ್ರಧಾನಿಯನ್ನು ನಿಂದಿಸಿದ ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸು ಇಲ್ಲ: ದೆಹಲಿ ಪೊಲೀಸ್

ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿ ಬಳಿಕ ವಿಡಿಯೊ ಮೂಲಕ ಕ್ಷಮೆಯಾಚಿಸಿದ ಬಾಲಕಿ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿಯವರನ್ನು ನಿಂದಿಸಿದ ಬಾಲಕಿ ವಿರುದ್ಧ ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದರು. ಇದರ ಬಳಿಕ ಆಕೆ ಕ್ಷಮೆ ಕೇಳಿದ್ದು, ಆಕೆಯ ತಾಯಿಯು ಕೂಡ ಕ್ಷಮೆಯಾಚಿಸಿದ್ದರು.

ಮುಂಬೈ ಕಡಲತೀರದಲ್ಲಿ 1.5 ಟನ್ ಕಸವನನ್ನು ಸಂಗ್ರಹಿಸಿದ ಪರಿಸರ ಪ್ರೇಮಿ ಲಿಸ್ಬನ್ ಫೆರಾವ್ ತಂಡ: ನೆಟ್ಟಿಗರಿಂದ ಪ್ರಶಂಸೆ!

ಮುಂಬೈ ಬೀಚ್‌ನಲ್ಲಿ 1.5 ಟನ್ ತ್ಯಾಜ್ಯ ವಿಲೇವಾರಿ ಮಾಡಿದ ಪರಿಸರ ಪ್ರೇಮಿಗಳು!

Viral Video: ಪರಿಸರವಾದಿ ಲಿಸ್ಬನ್ ಫೆರಾವೊ ಎಂಬವರು ಕಡಲತೀರ ಸ್ವಚ್ಛತೆಯ ಅಭಿಯಾನ ಮೂಲಕ ಬರೋಬ್ಬರಿ 1.5 ಟನ್ ಕಸವನ್ನು ಹೊರತೆಗೆದಿದ್ದಾರೆ. ಇದು ಮುಂಬೈನ ತೀರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಡಲತೀರದ ಅಡಿಯಲ್ಲಿ ಹೂತುಹೋಗಿದ್ದು ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯುವತಿಯರಿಗೆ ಚುಡಾಯಿಸಿದ ಕಿಡಿಗೇಡಿಗಳಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ಏನು ಗೊತ್ತಾ? ಸ್ಟೋರಿ ಓದಿ ಶಾಕ್‌ ಆಗ್ತೀರಾ

ಯುವತಿಯರಿಗೆ ಅಸಭ್ಯ ಕಮೆಂಟ್: ಕಿಡಿಗೇಡಿಗೆ ತಕ್ಕ ಶಿಕ್ಷೆ ನೀಡಿದ ಗ್ರಾಮಸ್ಥರು

Viral Video: ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳೆಂದು ಹೇಳಲಾಗುವ ಇಬ್ಬರು ಯುವಕರು ಸಂಚಾರಿಸುವಾಗ ರಸ್ತೆಯಲ್ಲಿ ಕಂಡ ಸ್ಥಳೀಯ ಯುವತಿಯರನ್ನು ನೋಡಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ.ಇದರಿಂದ ಆಕ್ರೋಶಗೊಂಡ ಯುವತಿಯರು ಹಾಗೂ ಸ್ಥಳೀಯರು ಸೇರಿ ತಕ್ಕ ಶಿಕ್ಷೆ ನೀಡಿದ್ದಾರೆ.

ಚಲಿಸುವ ರೈಲಿನಡಿ ಹಾರಲು ಹೋದ ಯುವಕ: ಪ್ರಾಣದ ಹಂಗು ತೊರೆದು ಕಾಪಾಡಿದ ಮಹಿಳಾ ಕಾನ್‌ಸ್ಟೆಬಲ್!

ಚಲಿಸುವ ರೈಲಿನ ಅಡಿಗೆ ನುಗ್ಗಿದ ಯುವಕ- ಸಾಹಸ ಮೆರೆದ ಕಾನ್‌ಸ್ಟೆಬಲ್!

Viral Video: ಯುವಕನೊಬ್ಬ ಲೋಕಲ್ ರೈಲಿನ ಅಡಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ರಾತ್ರಿ 10:54 ರ ಸುಮಾರಿಗೆ ನಡೆದಿದ್ದು ಕಾರ್ಯ‌ಚರಣೆ ದೃಶ್ಯ ಭಾರೀ ವೈರಲ್ ಆಗಿದೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಶಹಬಾಸ್ ಎನ್ನುತ್ತಿದ್ದಾರೆ.

ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಆದ ಪ್ರಾಧ್ಯಾಪಕಿ: "ನೀವೇ ಮುರ್ಖರು" ಎಂದು ಕಾಲೆಳೆದ ನೆಟ್ಟಿಗರು!

ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಶೇರ್ ಮಾಡಿ ಟ್ರೋಲ್ ಗೆ ಒಳಗಾದ ಪ್ರಾಧ್ಯಾಪಕಿ

Viral News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಗೆ ಒಳಗಾದ ಘಟನೆಯೊಂದು ನಡೆದಿದೆ. ತಾವು ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ಹೇಳಿಕೊಂಡ ಅರ್ಪಿತಾ ಚಟರ್ಜಿ ಎಂಬವರು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹೈಲೈಟ್ ಮಾಡಿದ್ದು ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ತಾನು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿಕೊಂಡರೂ ಈ ಸಣ್ಣ ಪೋಸ್ಟ್‌ ನಲ್ಲೇ ಬರೋಬ್ಬರಿ 6 ರಿಂದ 7 ಭೀಕರ ವ್ಯಾಕರಣ ತಪ್ಪುಗಳಿದ್ದವು‌.

ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ

ಪ್ರಧಾನಿ ಕ್ಷಮೆಯಾಚಿಸಿದ ಬಾಲಕಿಯ ತಾಯಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆ ಯಾಚಿಸಿದ್ದ ಬಾಲಕಿಯ ತಾಯಿ ಈಗ ಮೊದಲ ರಿಯಾಕ್ಷನ್ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಳು. ಇದೀಗ ಆಕೆಯ ತಾಯಿ, ಪ್ರಧಾನಿಯವರು ತನ್ನ ಮಗಳಿಗೆ ಜೀವದಾನ ಮಾಡಿದ್ದಾರೆ ಎಂದಿದ್ದಾರೆ.

"ಆದಾಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಜೀವನಶೈಲಿ ಬದಲಾಯಿಸಬೇಕಾಗಿಲ್ಲ": ಬೆಂಗಳೂರು ಯುವತಿಯ ಸಲಹೆಗೆ ನೆಟ್ಟಿಗರು ಫಿದಾ

ದುಬಾರಿ ಜೀವನ ಶೈಲಿ ನಿಯಂತ್ರಿಸುವ ಬಗ್ಗೆ ಯುವತಿಯ ಸಲಹೆ ಏನು?

Viral Video: 7 ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಿಮ್ರಿಧಿ ಮಖಿಜಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದರಲ್ಲಿ ತಮ್ಮ ಅನಿಸಿಕೆ ಶೇರ್ ಮಾಡಿದ್ದಾರೆ. ನಗರದಲ್ಲಿ ಅವರು ಗಮನಿಸಿದ ಹಲವು ಖರ್ಚಿನ ಬಗ್ಗೆ ಅವರು ಮಾತನಾಡಿದ್ದು, ʼʼಸಿಟಿಗೆ ಬಂದಿದ್ದೇವೆ, ಒಳ್ಳೆಯ ಕೆಲಸ ಸಿಕ್ಕಿದೆ ಅಂದಾಕ್ಷಣ ನಮ್ಮ ಜೀವನಶೈಲಿ ಬದಲಾಯಿಸಬೇಕಾಗಿಲ್ಲʼʼ ಎಂದು ಸಲಹೆ ನೀಡಿದ್ದಾರೆ.

52 ವರ್ಷಗಳ ನಂತರ ಹೆಣ್ಣು ಮಗು ಜನನ; ಆಸ್ಪತ್ರೆಯಲ್ಲೇ ಸಂಭ್ರಮಿಸಿದ ಇಂದೋರ್ ಕುಟುಂಬ: ಭಾವುಕ ಕ್ಷಣದ ವಿಡಿಯೊ ನೋಡಿ

52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಇಂದೋರ್ ಕುಟುಂಬ

Viral Video: ಮಧ್ಯ ಪ್ರದೇಶದ ಇಂದೋರ್‌ನ ಕುಟುಂಬವೊಂದು 52 ವರ್ಷದ ಬಳಿಕ ಹೆಣ್ಣು ಮಗುವೊಂದನ್ನು ಬರಮಾಡಿಕೊಂಡಿದೆ. ಐದು ದಶಕಗಳ ಕಾಲ ಕೇವಲ ಗಂಡು ಮಕ್ಕಳನ್ನೇ ಕಂಡಿದ್ದ ಈ ಕುಟುಂಬಕ್ಕೆ ಕೊನೆಗೂ ಲಕ್ಷ್ಮೀಯ ರೂಪದಲ್ಲಿ ಹೆಣ್ಣು ಮಗುವಿನ ಆಗಮನವಾಗಿದೆ. ಆಸ್ಪತ್ರೆಯಲ್ಲೇ ಕುಟುಂಬ ಸಂಭ್ರಮಾಚರಿಸಿದ್ದು, ಈ ಖುಷಿಯ ಕ್ಷಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ.

Loading...