ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ: ಸಹಾಯ ಮಾಡುವ ಬದಲು ಚೆಲ್ಲಿದ ಪಾಮ್ ಆಯಿಲ್‌ ಸಂಗ್ರಹಿಸಲು ಮುಗಿಬಿದ್ದ ಸ್ಥಳೀಯರು; ವಿಡಿಯೊ ವೈರಲ್‌

ಪಾಮ್ ಆಯಿಲ್ ಟ್ಯಾಂಕರ್ ಪಲ್ಟಿ: ಬಕೆಟ್ ಹಿಡಿದು ಜಮಾಯಿಸಿದ ಜನ

Viral Video: ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ತೋಡಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ‌. ಪಾಮ್ ಆಯಿಲ್ ಕೊಂಡೊಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ‌ ಪಲ್ಟಿಯಾಗಿದೆ. ಆದರೆ ಸ್ಥಳೀಯ ಜನರು ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್ ಕ್ಯಾನ್ ಹಿಡಿದು ಎಣ್ಣಿ ತುಂಬಿಸಲು ಮುಗಿಬಿದ್ದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿಕ್ಕಿರಿದ ಲೋಕಲ್ ಟ್ರೈನ್‌ನಲ್ಲಿ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ಮಹಿಳೆಯರು; ವಿಡಿಯೊ ನೋಡಿ ಆತಂಕ ವ್ಯಕ್ತಪಡಿಸಿದ ನೆಟ್ಟಿಗರು

ಮುಂಬೈ ಲೋಕಲ್ ರೈಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ಮಹಿಳೆಯರು

Viral Video: ಮುಂಬೈಯ ಲೋಕಲ್ ರೈಲು ಒಂದರಲ್ಲಿ ಮಹಿಳೆಯರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಕಿಕ್ಕಿರಿದ ರೈಲಿನ ಬಾಗಿಲಿಲ್ಲಿ ನೇತಾಡಿಕೊಂಡು ಮಹಿಳೆಯರು ಪ್ರಯಾಣಿಸಿದ್ದಾರೆ. ಈ ದೃಶ್ಯವು ಸಾರ್ವಜನಿಕ ಸಾರಿಗೆ ಮತ್ತು ಸುರಕ್ಷತೆ ಬಗ್ಗೆ ಕಳವಳ ಹುಟ್ಟು ಹಾಕಿದೆ.

ರಾಜಕೀಯದಲ್ಲಿ ಮೀನಿನ ಘಮಲು; ಅಯೋಧ್ಯೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೀನು ಖಾದ್ಯ ತಯಾರಿಸಲಾಗಿದೆ ಎಂದ ಬಿಜೆಪಿ; ಸಾಕ್ಷಿ ತೋರಿಸಲು ಕೈ ನಾಯಕನ ಸವಾಲು

ಅಯೋಧ್ಯೆಯ ನಿಷೇಧಿತ ಜಾಗದಲ್ಲಿ ಕಾಂಗ್ರೆಸ್‌ನಿಂದ ಮೀನು ಖಾದ್ಯ ತಯಾರಿ?

Fish dish controversy: ಅಯೋಧ್ಯೆಯ ರಾಮಮಂದಿರ ನಗರಿಯಲ್ಲಿ ಕಾಂಗ್ರೆಸ್ ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರಾಯ್ ಅವರನ್ನು ಸ್ವಾಗತಿಸಲು ಆಯೋಜಿಸಿದ್ದ ಔತಣಕೂಟದಲ್ಲಿ ಮೀನು ಖಾದ್ಯ ಬಡಿಸಿದೆ ಬಿಜೆಪಿ ಆರೋಪಿಸಿದ್ದು ವಿವಾದ ಭುಗಿಲೆದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ವಾಗ್ವಾದ ಆರಂಭಗೊಂಡಿದೆ.

Bantwal civic worker: ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ; ಬಂಟ್ವಾಳದ ಶ್ರಮಿಕನ ವಿಡಿಯೊ ವೈರಲ್‌!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ!

ಬಂಟ್ವಾಳದಲ್ಲಿ 50 ರೂ. ದಿನಗೂಲಿಯಿಂದ ಆರಂಭವಾದ ಪೌರ ಕಾರ್ಮಿಕರೊಬ್ಬರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ಅವರು ರಸ್ತೆ ಬದಿ ಕಸ ಗುಡಿಸುವ ಜತೆಗೆ ವಿವಿಧ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ.

ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಹ್ಯೂಮನಾಯ್ಡ್ ರೊಬೋಟ್ ಮಸ್ತ್ ಸ್ಟೆಪ್: ಯಾವ ಡ್ಯಾನ್ಸರ್‌ಗೂ ಕಮ್ಮಿ ಇಲ್ಲ ಎಂದ ನೆಟ್ಟಿಗರು

ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ರೊಬೋಟ್: ವಿಡಿಯೊ ನೋಡಿ

Viral Video: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಹೊಸದಾಗಿ ಆರಂಭಗೊಂಡ ಸ್ಯಾಂಡ್‌ವಿಚ್ ಶಾಪ್‌ನ ಉದ್ಘಾಟನಾ ಸಮಾರಂಭದಲ್ಲಿ ರೊಬೋಟ್ ಡ್ಯಾನ್ಸ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೌದು, ಈ ಸ್ಯಾಂಡ್‌ವಿಚ್ ಅಂಗಡಿ ಉದ್ಘಾಟನೆಯಲ್ಲಿ ಗಮನ ಸೆಳೆದಿದ್ದು ಮುಖ್ಯ ಅತಿಥಿಗಳು, ಸೆಲೆಬ್ರಿಟಿ ಅಥವಾ ವಿಐಪಿಗಳಲ್ಲ. ಬದಲಾಗಿ ಹ್ಯೂಮನಾಯ್ಡ್ ರೊಬೋಟ್.

"ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ": ಇಲ್ಲಿನ ಕೈಗೆಟುಕುವ ಸೇವೆಗಳಿಗೆ ಫಿದಾ ಆದ ಝಿಂಬಾಬ್ವೆ ಯುವಕ!

ಭಾರತದ ಸೇವೆಗಳಿಗೆ ಮನಸೋತ ವಿದೇಶಿ ಪ್ರವಾಸಿ: ವಿಡಿಯೊದಲ್ಲಿ ಹೇಳಿದ್ದೇನು?

Viral News: ಇಲ್ಲಿನ ಕೈಗೆಟುಕುವ ಕೆಲವು ಸೌಲಭ್ಯ ವಿದೇಶಿಗರನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಿದೆ ಡಿಜಿಟಲ್ ಪಾವತಿ, ದಿನಸಿ ಸೇವೆ, ಪ್ರಯಾಣ ಸೌಲಭ್ಯಕ್ಕೆ ಝಿಂಬಾಬ್ವೆಯ ಕಂಟೆಂಟ್ ಕ್ರಿಯೇಟರ್ ವೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೇವಲ ಫೋನ್‌ನಿಂದ ಬಹುತೇಕ ಎಲ್ಲದಕ್ಕೂ ಹಣ ಪಾವತಿಸುವುದರಿಂದ ಹಿಡಿದು ಆಹಾರ, ದಿನಸಿ ಮತ್ತು ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವರೆಗೆ, ಭಾರತ ತನ್ನ ಜೀವನವನ್ನೇ ಬದಲಾಯಿಸಿದೆ ಎಂದು ಬರೆದುಕೊಂಡಿದ್ದಾರೆ.

ಕಲಬೆರಕೆ ಆಹಾರ: ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ನಿರಾಕರಿಸಿದ ವ್ಯಾಪಾರಿಯ ವಿಡಿಯೊ ವೈರಲ್‌

ಕಳಪೆ ಆಹಾರ ಮಾರಾಟ: ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ಹಿಂಜರಿದ ವ್ಯಾಪಾರಿ

Viral News: ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ವ್ಯಾಪಾರಿಯೊಬ್ಬ ಕಲಬೆರಕೆ ಇರುವ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಲಕ ತನ್ನದೇ ಅಂಗಡಿಯ ಸ್ವೀಟ್‌ ತಿನ್ನಲಿ ನಿರಾಕರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ

ನದಿಯನ್ನೇ ಡಸ್ಟ್ ಬಿನ್ ಮಾಡಿದ ದಂಪತಿ: ದಂಡ ವಿಧಿಸಲು ನೆಟ್ಟಿಗರ ಆಗ್ರಹ

Viral Video: ಕಾರಿನಲ್ಲಿ ಬಂದ ದಂಪತಿ ತ್ಯಾಜ್ಯವನ್ನು ನದಿಗೆ ಎಸೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವು ಮತ್ತೊಮ್ಮೆ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಪರಿಸರ ಕಾಳಜಿಯ ಹೊಣೆ ತಮ್ಮದಲ್ಲ ಎಂಬಂತೆ ದಂಪತಿ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿದ್ದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ.

ಕೆಮ್ಮಿಗೆ ಚಿಕಿತ್ಸೆ ಪಡೆಯಬೇಕೆಂದರೂ ಒಂದು ವಾರ ಕಾಯಬೇಕು; ವಿದೇಶಗಳ ವೈದ್ಯಕೀಯ ಸ್ಥಿತಿ ಬಿಚ್ಚಿಟ್ಟ ಭಾರತೀಯ ಮಹಿಳೆ

ವಿದೇಶಗಳ ವೈದ್ಯಕೀಯ ಸ್ಥಿತಿ ಬಿಚ್ಚಿಟ್ಟ ಭಾರತೀಯ ಮಹಿಳೆ

ಅಭಿವೃದ್ಧಿ ಹೊಂದಿದ ವಿದೇಶಗಳಲ್ಲಿ ವೈದ್ಯಕೀಯ ಸೇವೆ ಪಡೆಯುವುದು ಎಷ್ಟು ಕಷ್ಟ ಎಂಬ ಸತ್ಯವನ್ನು ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತೀಯ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ತೀವ್ರ ಕೆಮ್ಮಿನಿಂದ ನರಳುತ್ತಿದ್ದ ಮಗನ ಚಿಕಿತ್ಸೆಗೆ ವೈದ್ಯರ ಅಪಾಯಿಂಟ್‌ಮೆಂಟ್ ಸಿಗದೆ ಅನುಭವಿಸಿದ ನರಕಯಾತನೆಯನ್ನು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದು, "ಇಂತಹ ಪರಿಸ್ಥಿತಿಯಲ್ಲಿ ಭಾರತದ ಹೆಲ್ತ್ಕೇರ್ ಸಿಸ್ಟಮ್ ನಿಜಕ್ಕೂ ಗ್ರೇಟ್" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಠ ಮಾಡಿ ಎಂದರೆ ಡ್ಯಾಮ್‌ನಲ್ಲಿ ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ; ಸ್ವಿಮ್ಮಿಂಗ್‌ ವಿಡಿಯೊ ವೈರಲ್‌

ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ

Viral Video: ರಾಜಸ್ಥಾನದ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರ ಜತೆ ಅಣೆಕಟ್ಟಿನಲ್ಲಿ ಈಜಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯ ವಿಡಿಯೊ ವೈರಲ್‌ ಆಗಿದೆ. ಘಟನೆಯ ಬಳಿಕ ಅವರನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪ್ರಾಂಶುಪಾಲರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಟ್ಟದ ಅಂಚಿನಲ್ಲಿ ನಿಂತ ಮಗ ಈಚೆ ಬರುವಂತೆ ಕೈ ಮುಗಿದು ಬೇಡಿದ ತಾಯಿ; ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ ಮೂವರು ಪ್ರತಾಪಕ್ಕೆ ಬಿದ್ದು ಬಲಿಯಾಗುವ ಮುನ್ನ ಆಗಿದ್ದೇನು? ಇಲ್ಲಿದೆ ಇಂಚಿಂಚು ಮಾಹಿತಿ

ಐಫೋನ್ EMI ಜಗಳ; ಒಂದೇ ಕುಟುಂಬದ ಮೂವರ ದಾರುಣ ಸಾವು

Maharashtra Tragedy: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ EMI ಪಾವತಿ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದ ಬಳಿಕ 19 ವರ್ಷದ ಮಗ ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ತಂದೆ-ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದು, ಕೆಲವೇ ಕ್ಷಣಗಳ ಬಳಿಕ ತಾಯಿಯೂ ಸಾವನ್ನಪ್ಪಿದ್ದಾರೆ.

19 ಭಾಷೆಗಳಲ್ಲಿ ಮಾತನಾಡಿ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ ರೈಲು ವ್ಯಾಪಾರಿ: ವಿಡಿಯೊ ನೋಡಿ

ರೈಲಿನಲ್ಲಿ 19 ಭಾಷೆ ನಿರರ್ಗಳವಾಗಿ ಮಾತನಾಡಿದ ವ್ಯಾಪಾರಿ: ಪ್ರಯಾಣಿಕರು ಫಿದಾ

Viral Video: ನಮ್ಮಲ್ಲಿ ಕ್ರಿಯಾತ್ಮಕ ಕಲೆ ಇದ್ದರೆ ಎಲ್ಲೂ ಹೋಗಿಯೂ ಬದುಕಬಹುದು ಅನ್ನುವುದನ್ನು ಇಲ್ಲೊಬ್ಬ ವ್ಯಾಪಾರಿ ತೋರಿಸಿಕೊಟ್ಟಿದ್ದಾರೆ. ರೈಲಿನಲ್ಲಿ ಅಗತ್ಯ ವಸ್ತುವನ್ನು ಮಾರಾಟ ಮಾಡುವ ವ್ಯಾಪಾರಿ ಸುಮಾರು 19 ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದಾರೆ. ಇವರ ಭಾಷೆಯ ಜ್ಞಾನ ತಿಳಿದು ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನ ಮೂಲದ ವ್ಯಾಪಾರಿ ಗಮನ ಸೆಳೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ: ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸಿದ ಚಾಲಕ!

ಮರಾಠಿ ಭಾಷೆ ಕಡ್ಡಾಯಕ್ಕೆ ಬೇಸೆತ್ತು ಆಟೋವನ್ನು ರೈಲಿಗೆ ತಳ್ಳಿದ ಚಾಲಕ

Viral Video: ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಹೊರ ರಾಜ್ಯದ ಚಾಲಕನೋರ್ವ ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರ್‌ಟಿಒ ಫ್ಲೈಯಿಂಗ್ ಸ್ಕ್ವಾಡ್‌ಗಳು ಇತ್ತೀಚೆಗೆ ಮುಂಬೈನಾದ್ಯಂತ 1,430 ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಪರಿಶೀಲಿಸಿದೆ.

ಅತ್ತೆಯೊಂದಿಗೆ ಇರಲು ಒಪ್ಪದ ಯುವತಿ: ಹುಡುಗನ ತಾಯಿಯ ಜವಾಬ್ದಾರಿ ತನ್ನದಲ್ಲ ಎಂದು ಮದುವೆ ಪ್ರಸ್ತಾವ ತಿರಸ್ಕಾರ!

ವೃದ್ಧ ತಾಯಿ ಹೊರೆ ಎಂದು ಮದುವೆ ಪ್ರಸ್ತಾವ ಕ್ಯಾನ್ಸಲ್ ಮಾಡಿದ ಯುವತಿ

Viral News: ಯುವತಿಯೊಬ್ಬಳು ಮದುವೆ ನಂತರ ಯುವಕನ ವೃದ್ಧ ತಾಯಿ ತಮ್ಮೊಂದಿಗೆ ವಾಸವಾಗಲಿದ್ದಾರೆ ಎನ್ನುವ ಕಾರಣಕ್ಕೆ ಮದುವೆ ಪ್ರಸ್ತಾಪವನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ತನಗೆ ಮದುವೆಯ ನಂತರ ಈ ಜವಾಬ್ದಾರಿ ತೆಗೆದುಕೊಳ್ಳಲು ಸಾದ್ಯವಿಲ್ಲ ಎಂದು ಯುವಕನ ಮುಂದೆಯೇ ಕಟುವಾಗಿ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲವರು ಯುವತಿಯ ನಿರ್ಧಾರ ಸರಿಯಾಗಿದೆ ಎಂದರೆ ಇನ್ನು ಕೆಲವರು ಟೀಕಿಸಿದ್ದಾರೆ.

ಮದುವೆ ಶಾಸ್ತ್ರ ಅರ್ಧಕ್ಕೆ ನಿಲ್ಲಿಸಿ ಕುಸಿದ ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಮದುಮಗಳು! ವೈದ್ಯರು ಯಾವತ್ತಿದ್ದರೂ ವೈದ್ಯರೇ

ಮೊದಲು ವೈದ್ಯೆ, ನಂತರ ಮದುಮಗಳು: ಅಡುಗೆ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಧು

Viral News: ವೈದ್ಯೆಯೊಬ್ಬರು ಜೀವನದ ಮುಖ್ಯ ಕ್ಷಣದಲ್ಲೂ ಕರ್ತವ್ಯ ಮರೆಯದೆ ಚಿಕಿತ್ಸೆ ನೀಡಲು ಮುಂದಾದ ಘಟನೆ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಕೇರಳಂನ ವಧುವೊಬ್ಬರು ಮದುವೆ ಮಂಟಪದಲ್ಲಿ ಇದ್ದಾಗಲೇ ಅಡುಗೆ ಸಿಬ್ಬಂದಿಯೊಬ್ಬರು ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಮದುವೆ ಎನ್ನುವುದನ್ನೂ ಲೆಕ್ಕಿಸದೇ ವಧು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದೆ.

ಕಂಟೆಂಟ್ ಕ್ರಿಯೇಟರ್‌ಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್: 10,000 ರೂ. ಪ್ರೋತ್ಸಾಹಧನ ಘೋಷಣೆ! ಷರತ್ತೇನು?

ಕಂಟೆಂಟ್ ಕ್ರಿಯೇಟರ್‌ಗಳಿಗೆ 10,000 ರೂ. ಪ್ರೋತ್ಸಾಹಧನ ಘೋಷಿಸಿದ ಸರ್ಕಾರ!

Viral News: ಸೋಷಿಯಲ್ ಮೀಡಿಯಾ ಕ್ರಿಯೇಟರ್ ಗಳಿಗೆ ಬಿಹಾರ ಸರಕಾರವು ಗುಡ್ ನ್ಯೂಸ್ ವೊಂದನ್ನು ನೀಡಿದೆ. ಸರಕಾರದ ಯೋಜನೆಗಳನ್ನು ಪ್ರಸಾರ ಮಾಡುವ ಕಂಟೆಟ್ ಕ್ರಿಯೇಟರ್ ಗೆ ಹತ್ತು ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷನೆ ಮಾಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಾವು ಬಿಹಾರ ಶಿಪ್ಟ್ ಆಗುವುದಾಗಿ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ತ್ಯಾಜ್ಯದಿಂದಲೇ ವ್ಯವಹಾರ: 13 ರೂಪಾಯಿಗೆ ಪ್ಲಾಸ್ಟಿಕ್ ಖರೀದಿಸಿ ತಿಂಗಳಿಗೆ 40 ಲಕ್ಷ ಸಂಪಾದಿಸುವ ಉದ್ಯಮಿ!

ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಲಕ್ಷ- ಲಕ್ಷ ಸಂಪಾದಿಸುವ ಉದ್ಯಮಿ

Viral News: ಪ್ಲಾಸ್ಟಿಕ್ ಬಳಕೆ ಕೆಲವೆಡೆ ನಿಷೇಧ ಮಾಡಲಾಗಿದೆ. ಆದರೆ ಇಲ್ಲೊಬ್ಬರು ಅದೇ ಹಳೆಯ ಪ್ಲಾಸ್ಟಿಕ್ ಮತ್ತು ಕಸ ತ್ಯಾಜ್ಯ ಉಪಯೋಗಿಸಿ ಲಕ್ಷಾಂತರ ರೂಪಾಯಿಸಂಪಾದನೆ ಮಾಡುತ್ತಿದ್ದಾರೆ. ಕೆಜಿಗೆ 13 ರೂ.ಗೆ ಬಿಸಾಕುವ ಪ್ಲಾಸ್ಟಿಕ್ ಖರೀದಿಸಿ ಅದನ್ನು ಮಾಸಿಕ 40 ಲಕ್ಷ ರೂ.ಗಳ ವ್ಯವಹಾರವನ್ನಾಗಿ ಮಾಡುತ್ತಿದ್ದಾರೆ. ಅದನ್ನು ಸಂಸ್ಕರಿಸಿ ಲಾಭ ಗಳಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.

ಕಾರ್‌ಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ: ಪೋಷಕರ ನಿರ್ಲಕ್ಷ್ಯದ ವಿರುದ್ಧ ಕಿಡಿ!

ಮಗುವಿದ್ದ ಕಾರಿಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ!

Viral News: 15 ವರ್ಷದ ಬಾಲಕನು ಕಾರು ಚಲಾಯಿಸಿದ್ದು ಮತ್ತೊಂದು ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಸಾಕಷ್ಟು ಹಾನಿಯಾಗಿದೆ. ಆದರೆ ಇದರಲ್ಲಿ ಇನ್ನೊಂದು ಆತಂಕಕಾರಿಯಾದ ಸಂಗತಿಯೆಂದರೆ, ಡಿಕ್ಕಿ ಹೊಡೆದ ಕಾರಿನೊಳಗೆ ಮಗುವೊಂದು ಇತ್ತು ಎನ್ನಲಾಗಿದೆ.

ಪಾಠ ಬಿಟ್ಟು ಒಟ್ಟಾಗಿ ಸಮಯ ಕಳೆಯುತ್ತಿದ್ದ ಶಿಕ್ಷಕರು: ವಿದ್ಯಾರ್ಥಿಗಳ ದೂರಿನ ಮೇರೆಗೆ ವರ್ಗಾವಣೆ!

ಕ್ಲಾಸ್ ಬಿಟ್ಟು ಶಿಕ್ಷಕರ ಕಾಲಹರಣ: ಮಕ್ಕಳಿಂದ ಜಿಲ್ಲಾಧಿಕಾರಿಗೆ ದೂರು!

Viral Video: ಇತ್ತೀಚೆಗೆ ಶಿಕ್ಷಕರೇ ತರಗತಿಕೋಣೆಯೊಳಗೆ ಕಾಲಹರಣ ಮಾಡುವ ಅನೇಕ ಘಟನೆಗಳು ನಡೆದಿವೆ. ಇದೀಗ ಚಿಂದ್ವಾರದ ಸರ್ಕಾರಿ ಮಧ್ಯಮ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಮತ್ತೊಬ್ಬ ಶಿಕ್ಷಕಿ ತರಗತಿಗಳನ್ನು ಬೇಗನೆ ಮುಗಿಸಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಮಕ್ಕಳೇ ಆರೋಪ ಮಾಡಿದ್ದಾರೆ.

ಹರಿದ್ವಾರ ಮೇಳದಲ್ಲಿ ಭಿಕ್ಷುಕನಾದ ಯುಟ್ಯೂಬರ್: 8 ಗಂಟೆಯಲ್ಲಿ ಗಳಿಸಿದ ಹಣವೆಷ್ಟು ಗೊತ್ತೆ?

ಭಿಕ್ಷುಕನ ವೇಷ ಧರಿಸಿ ಕೇವಲ 8 ಗಂಟೆಯಲ್ಲಿ 4,000 ರೂ ಗಳಿಸಿದ ಯುಟ್ಯೂಬರ್!

Viral News: ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಬಿಕ್ಷಾಟನೆ ಮೂಲಕ ಎಷ್ಟು ಹಣ ಗಳಿಸಬಹುದೆಂದು ತಿಳಿಯಲು ತನ್ನ ಸ್ನೇಹಿತನಿಗೆ ಭಿಕ್ಷುಕನ ವೇಷ ಧರಿಸಿ ಕೂರಿಸಿದ್ದಾರೆ. ಪ್ರಸಿದ್ದ ಕಾವಡ್ ಮೇಳದಲ್ಲಿ ಭಕ್ತರಿಂದ ಭಿಕ್ಷೆ ಬೇಡಿದ್ದು ಗಳಿಸಿದ ಹಣಕಂಡು ಅವರೇ ಅಚ್ಚರಿಗೆ ಒಳಗಾಗಿದ್ದಾರೆ. ಆರಂಭದಲ್ಲಿ, ದಿನದ ಅಂತ್ಯದ ವೇಳೆಗೆ 1,000 ರಿಂದ 2,000 ರೂ.ಗಳ ನಡುವೆ ಸಂಗ್ರಹಿಸಬಹುದು ಎಂದು ಅವರು ನಂಬಿದ್ದರು. ಆದರೆ ಕೇವಲ ಏಂಟು ಗಂಟೆಯಲ್ಲಿ ನಾಲ್ಕು ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟಿದ ರಸ್ತೆ ವ್ಯವಸ್ಥೆ: ಗುಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ!

ರಸ್ತೆಯಲ್ಲಿ ಪ್ರಯಾಣಿಸುವಾಗ ಗುಂಡಿಗೆ ಬಿದ್ದ ಬೈಕ್ ಸವಾರ: ಅಪಾಯದಿಂದ ಪಾರು

Viral News: ಬೆಂಗಳೂರಿನ ಗುಂಜೂರು ಬಳಿ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿದ್ದಾಗ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಅವರು ರಸ್ತೆಗೆ ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ವಾಟರ್ ಟ್ಯಾಂಕರ್ ಬೈಕ್ ಮೇಲೆಯೇ ಹರಿದಿದೆ. ತಕ್ಷಣವೇ ಅವರು ಪಕ್ಕಕ್ಕೆ ಬಂದಿರುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸದ್ಯ ಈ ಅಘಾತಕಾರಿ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸೇನಾ ಸಿಬ್ಬಂದಿ ಜತೆ ವಾಗ್ವಾದ: ಸಾರ್ವಜನಿಕರ ಟೀಕೆ ಬೆನ್ನಲ್ಲೇ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ ಜೆನ್ ಝೀ ಯುವತಿ!

ಸೇನಾ ಸಿಬ್ಬಂದಿ ಜೊತೆ ಕಿರಿಕ್‌; ಟೀಕೆ ಬೆನ್ನಲ್ಲೇ ಕ್ಷಮೆ ಕೇಳಿದ ಯುವತಿ

Viral News: ಜೆನ್ ಝೀ ಯುವತಿ ಒಬ್ಬಳು ಸೇನಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದು ಆಕೆಯ ನಡವಳಿಕೆ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಲಡಾಖ್‌ನ ಚೆಕ್‌ ಪಾಯಿಂಟ್‌ ನಲ್ಲಿ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರನ್ನು ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎನ್ನುವ ಕಾರಣಕ್ಕೆ ಯುವತಿ ಆಕ್ರೋಶಗೊಂಡಿದ್ದಳು. ಇದರ ಬೆನ್ನಲ್ಲೇ ಆಕೆ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ್ದಾರೆ. ನಾನು ಭಾರತೀಯ ಸೇನೆಯನ್ನು ತುಂಬಾ ಗೌರವಿಸುತ್ತೇನೆ..ತೀವ್ರ ಒತ್ತಡದಿಂದ ಆ ರೀತಿಯಾಗಿ ವರ್ತಿಸಿದೆ ಎಂದು ಕ್ಷಮೆ ಕೇಳಿದ್ದಾರೆ.

ಲಿಫ್ಟ್‌ ದಿಢೀರ್ ಚಲಿಸಿ ಮಹಿಳೆ ಸಾವು: ಮಗಳು, ಮೊಮ್ಮಗನ ಕಣ್ಣೆದುರೇ ದುರಂತ; ವಿಡಿಯೊ ವೈರಲ್‌

ಲಿಫ್ಟ್‌ನ ಬಾಗಿಲಿಗೆ ಸಿಲುಕಿ ಮಹಿಳೆ ಸಾವು; ವಿಡಿಯೊ ವೈರಲ್‌

Viral Video: ಆಂಧ್ರ ಪ್ರದೇಶದ ಒಂಗೋಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬಾಗಿಲು ತೆರೆದಿದ್ದಾಗಲೇ ಲಿಫ್ಟ್‌ ಏಕಾಏಕಿ ಚಲಿಸಿದ ಪರಿಣಾಮ ವನಿತಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮಗಳು ಮತ್ತು ಮೊಮ್ಮಗ ಲಿಫ್ಟ್‌ನಿಂದ ಹೊರಬಂದ ಬಳಿಕ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಡೆಲಿವರಿ ಸಿಬ್ಬಂದಿಯ ಕಷ್ಟ ಅರಿಯಲು ಬೆಂಗಳೂರಿನಲ್ಲಿ ರ‍್ಯಾಪಿಡೋ ಓಡಿಸಿದ ವಿದ್ಯಾರ್ಥಿ: ಗಿಗ್ ಕಾರ್ಮಿಕರು ಎದುರಿಸುವ ಸವಾಲು ಬಿಚ್ಚಿಟ್ಟ ಯುವಕ

ಡೆಲಿವರಿ ಸಿಬ್ಬಂದಿ ಎದುರಿಸುವ ಕಷ್ಟದ ಬಗ್ಗೆ ಬೇಸರ ಹೊರಹಾಕಿದ ವಿದ್ಯಾರ್ಥಿ

Viral News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಸತತ ಮೂರು ತಿಂಗಳ ಕಾಲ ಕೆಲಸ ಮಾಡಿದ್ದಾನೆ. ಗಿಗ್ ಕಾರ್ಮಿಕರು ಹೇಗೆ ದುಡಿಯುತ್ತಾರೆ? ಹೇಗೆ ಹಣವನ್ನು ಗಳಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆತ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾನೆ. ತನಗೆ ಇದು ನಿಜಕ್ಕೂ ಒಳ್ಳೆಯ ಸೈಡ್ ಬಿಸೆನೆಸ್ ಆಗಿತ್ತು ಎಂದ ಅವರು ಈ ಕೆಲಸವನ್ನು ತಮ್ಮ ಜೀವನೋಪಾಯವಾಗಿ ಅವಲಂಬಿಸಿರುವ ಸಿಬ್ಬಂದಿಬಗ್ಗೆ ಆತಂಕ ವ್ಯಕ್ತಪಡಿಸಿದರು.

Loading...