ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಪುಟ್ಟ ಸನ್ಯಾಸಿಗಳೊಂದಿಗೆ ಮಠದಲ್ಲಿ ಫುಟ್‌ಬಾಲ್ ಆಡಿದ ಗೋಲ್ಡನ್ ರಿಟ್ರೈವರ್ ನಾಯಿ: ಕ್ಯೂಟ್ ವಿಡಿಯೊ ನೋಡಿ!

ಪುಟ್ಟ ಬೌದ್ಧ ಸನ್ಯಾಸಿಗಳ ಜೊತೆ ಫುಟ್ ಬಾಲ್ ಆಡಿದ ಶ್ವಾನ: ಮುದ್ದಾದ ದೃಶ್ಯ!

Viral News: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೈಜ ಸೌಂದರ್ಯದ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದೆ. ಮಠ ವೊಂದರಲ್ಲಿ ಪುಟ್ಟ ಬೌದ್ಧ ಸನ್ಯಾಸಿಗಳು ಫುಟ್‌ಬಾಲ್ ಆಡುತ್ತಿದ್ದಾಗ ಮಾಫು ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್‌ ತಳಿಯ ನಾಯಿ ಅವರ ಜೊತೆಗೆ ಆಟಕ್ಕೆ ಎಂಟ್ರಿ ಕೊಟ್ಟಿದೆ. ಸನ್ಯಾಸಿಗಳು ಕೂಡ ತಮ್ಮ ತಂಡದಲ್ಲಿ ಗೋಲ್ಡನ್ ರಿಟ್ರೈವರ್ ಅನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ರೀಲ್ಸ್ ಚಟ;  ಹೆಚ್ಚು ವೀವ್ಸ್‌ಗಾಗಿ 30 ಅಡಿ ಎತ್ತರದ ಡ್ಯಾಮ್‌ನಿಂದ ಜಿಗಿದು ಎರಡೂ ಕಾಲು ಮುರಿದುಕೊಂಡ ವ್ಯಕ್ತಿ!

ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಎರಡು ಕಾಲು ಮುರಿದುಕೊಂಡ ವ್ಯಕ್ತಿ!

Viral Video: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು 30 ಅಡಿ ಎತ್ತರದ ಡ್ಯಾಮ್ ಮೇಲಿಂದ ನೀರಿಗೆ ಜಿಗಿದು ಎರಡೂ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇಂತಹ ಹುಚ್ಚು ಸಾಹಸ ಬೇಕೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಯುವಕನಿಗೆ ವಿಂಡೋ ಸೀಟ್ ಬಿಟ್ಟುಕೊಟ್ಟ ಸಹ ಪ್ರಯಾಣಿಕ: ಹೃದಯವಂತಿಕೆಗೆ ನೆಟ್ಟಿಗರು ಫಿದಾ

ಅಪರಿಚಿತ ವ್ಯಕ್ತಿಯ ವಿಮಾನ ಪ್ರಯಾಣವನ್ನು ಸ್ಮರಣೀಯಗೊಳಿಸಿದ ಸಹಪ್ರಯಾಣಿಕ

Viral News: ವ್ಯಕ್ತಿಯೊಬ್ಬರು ಪಕ್ಕದಲ್ಲಿದ್ದ ಯುವಕನ ಮೊದಲ ವಿಮಾನ ಪ್ರಯಾಣವನ್ನು ವಿಶೇಷವಾಗಿಸಲು ತಮ್ಮ ವಿಂಡೋ ಸೀಟನ್ನೇ ಬಿಟ್ಟುಕೊಟ್ಟಿದ್ದಾರೆ. ಸದ್ಯ ಈ ಸಣ್ಣ ದಯೆಯೂ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆದ್ದಿದೆ. ಇನ್ನೊಬ್ಬರ ದಿನವನ್ನು ಖುಷಿಯಾಗಿ ಇರಿಸಲು ವ್ಯಕ್ತಿ ತೋರಿದ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಅನಾರೋಗ್ಯದಿಂದ ರಜೆಯಲ್ಲಿದ್ದರೂ ವರ್ಕ್‌ ಫ್ರಮ್‌ ಹೋಮ್‌ ಮಾಡಿ ಎಂದ ಮ್ಯಾನೇಜರ್‌ಗೆ ಮುಟ್ಟಿ ನೋಡುವಂತ ರಿಪ್ಲೈ ಕೊಟ್ಟ ಜೆನ್‌ ಝೀ ಉದ್ಯೋಗಿ

ಅನಾರೋಗ್ಯದಲ್ಲಿದ್ದರೂ WFH ಮಾಡಿ ಎಂದ ಬಾಸ್‌ಗೆ ಪಾಠ ಕಲಿಸಿದ Gen Z

Viral News: ಇಲ್ಲೊಬ್ಬ ಜೆನ್‌ ಝೀ ಉದ್ಯೋಗಿ ರಜೆ ನಿರಾಕರಿಸಿದ ಮ್ಯಾನೇಜರ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಅನಾರೋಗ್ಯದ ಕಾರಣ ರಜೆ ಕೇಳಿದ ಉದ್ಯೋಗಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಮಾನ್ಯೇಜರ್ ಸೂಚಿಸಿದ್ದರು. ಆದರೆ ಈ ನಡೆಗೆ ಬೇಸತ್ತ ಉದ್ಯೋಗಿ, ತಕ್ಷಣವೇ ಬೇರೆ ಕಂಪನಿಯಲ್ಲಿ ಸಂದರ್ಶನ ಕೊಟ್ಟು ಕೆಲಸ ಗಿಟ್ಟಿಸಿಕೊಂಡು ರಾಜೀನಾಮೆ ನೀಡಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನೇಜರ್‌ಗಳಿಗೆ ತಕ್ಕ ಪಾಠ ಕಲಿಸಲು ಜೆನ್ ಝೀಗಳೇ ಸರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಭರ್ಜರಿ ಸ್ಟೆಪ್‌ ಹಾಕಿದ ದಳಪತಿ 'ವಿಜಯ್‌': ತಮಿಳುನಾಡು ಸಿಎಂಗೆ ಇಲ್ಲೇನು ಕೆಲ್ಸ ಎನ್ನುವ ಮುನ್ನ ಈ ಸ್ಟೋರಿ ಓದಿ

ಉಡುಪಿಯ ವಿಟ್ಲಪಿಂಡಿ ಉತ್ಸವಕ್ಕೆ ಬಂದಿದ್ರಾ ದಳಪತಿ ವಿಜಯ್? ವಿಡಿಯೊ ನೋಡಿ

Krishna Janmashtami 2026: ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ರಥಬೀದಿ ಮೂಲಕ ತೆರೆದ ವಾಹನದಲ್ಲಿ ಅವರು ಸವಾರಿ ಮಾಡಿದ್ದು ಬ್ಲ್ಯಾಕ್‌ ಕೋಟ್ ಧರಿಸಿ ಮಿಂಚಿದ್ದಾರೆ. ಜತೆಗೆ ಭರ್ಜರಿ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Viral Video: ರೀಲ್ಸ್‌ಗಾಗಿ ಸ್ಕೂಟರ್‌ನಲ್ಲಿ ಐವರ ಅಪಾಯಕಾರಿ ಪ್ರಯಾಣ; ಮುಂದೆ ಸಿಕ್ಕಿದ್ದು ಯಾರೂ ಊಹಿಸದ ಟ್ವಿಸ್ಟ್‌!

ಸ್ಕೂಟರ್‌ನಲ್ಲಿ ಸ್ಟಂಟ್ ಪ್ರದರ್ಶಿಸಿದ ಯುವಕರು: ಮುಂದೇನಾಯ್ತು ನೋಡಿ

Viral News: ಯುವ ಸಮುದಾಯ ಸೋಷಿಯಲ್ ಮೀಡಿಯಾ ಕಂಟೆಂಟ್‌ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಸಾಹಸವನ್ನು ಮಾಡುತ್ತಿದೆ. ರಸ್ತೆ ಮಧ್ಯೆ ಸ್ಟಂಟ್, ರೈಲು ಹಳಿಯಲ್ಲಿ ರೀಲ್ಸ್ ಚಿತ್ರೀಕರಣ ಹೀಗೆ ಅಪಾಯಕಾರಿ ಸ್ಥಳದಲ್ಲಿ ವಿಡಿಯೊ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸ್ಕೂಟರ್ ಒಂದರಲ್ಲಿ ಬರೋಬ್ಬರಿ ಐವರು ಪ್ರಯಾಣಿಸಿ ರೀಲ್ಸ್‌ ಮಾಡಿದ್ದಾರೆ.

ಬಸ್‌ನಲ್ಲಿ ವಿಂಡೋ ಸೀಟ್ ಕೊಡಲು ನಿರಾಕರಿಸಿದ ವ್ಯಕ್ತಿಯ ವಿಡಿಯೊ ಮಾಡಿ ನಿಂದಿಸಿದ ಮಹಿಳೆ: ಇಂತಹವರು ಮನೆಯಲ್ಲಿರಬೇಕು ಎಂದ ನೆಟ್ಟಿಗರು

ವಿಂಡೋ ಸೀಟ್ ಕೊಡದ ಪ್ರಯಾಣಿಕನನ್ನು ನಿಂದಿಸಿದ ಮಹಿಳೆ!

Viral Video: ಮಹಿಳೆಯೊಬ್ಬಳು ಬಸ್‌ ಪ್ರಯಾಣದ ವೇಳೆ ತನಗೆ ವಿಂಡೋ ಸೀಟ್ ಬೇಕೆಂದು ಸಹಪ್ರಯಾಣಿಕನ ಬಳಿ ಪಟ್ಟು ಹಿಡಿದಿದ್ದಾಳೆ. ಆದರೆ ಆ ವ್ಯಕ್ತಿ ಸೀಟ್ ನೀಡಲು ಒಪ್ಪಿಲ್ಲ. ಇದರಿಂದ ಕೆರಳಿದ ಮಹಿಳೆ ಆತನ‌ ಮೇಲೆ ಕೂಗಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

20 ರೂಪಾಯಿ ವಡಾಪಾವ್‌ಗೆ 15,000 ಖರ್ಚು ಮಾಡಿ ದೆಹಲಿಯಿಂದ ಮುಂಬೈಗೆ ತೆರಳಿದ ಯುವತಿ! ಟೇಸ್ಟ್‌ ಹೇಗಿತ್ತು?

20 ರೂ. ವಡಾಪಾವ್ ಖರೀದಿಗೆ ಫ್ಲೈಟ್ ಬುಕ್ ಮಾಡಿ ಮುಂಬೈಗೆ ಹೊರಟ ಯುವತಿ

Viral News: ಇಲ್ಲೊಬ್ಬರು ಕೇವಲ 20 ರೂಪಾಯಿ ವಡಪಾವ್ ತಿನ್ನಲು ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಮುಂಬೈ ಶೈಲಿಯ ವಡಾಪಾವ್ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು 15,000 ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಗ್ಗೆ ಯುವತಿ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ತಾನು ಸವಿದಿರುವ ಬೆಸ್ಟ್ ವಡಾಪಾವ್ ಎಂದು ಬರೆದುಕೊಂಡಿದ್ದಾರೆ.

ಭಾರತ-ಪಾಕಿಸ್ತಾನ ಮಹಿಳಾ ಏಷ್ಯಾ ಕಪ್‌ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

ಮಹಿಳಾ ಏಷ್ಯಾ ಕಪ್‌; ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

Women's Asia Cup match: ಅರ್ಷದ್‌ ಮುಹಮ್ಮದ್‌ ಹನೀಫ್ ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟ್ ಅಭಿಮಾನಿಯಾಗಿದ್ದು, ಈ ಹಿಂದೆಯೂ ಹಲವು ಬಾರಿ ಟೀಮ್ ಇಂಡಿಯಾ ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಸೋಲು-ಗೆಲುವಿನ ಆಚೆಗೂ ಕ್ರೀಡೆ ಹೇಗೆ ಎರಡು ದೇಶಗಳನ್ನು ಒಗ್ಗೂಡಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸಿಲಿಕಾನ್‌ ಸಿಟಿಯ ರಸ್ತೆಯ ಸ್ಥಿತಿ ನೋಡಿ: ವಿಡಿಯೊ ಮೂಲಕ ಬೆಂಗಳೂರಿಗರ ಸಂಕಷ್ಟ ತಿಳಿಸಿದ ಮಹಿಳೆ

ಬೆಂಗಳೂರಿನ ಗುಂಡಿ ಬಿದ್ದ ರಸ್ತೆ ಸ್ಥಿತಿಯನ್ನು ಟೀಕಿಸಿದ ಮಹಿಳೆ

Viral News: ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಹಾಗೂ ಗುಂಡಿ ಬಿದ್ದ ರಸ್ತೆಗಳ ಸಮಸ್ಯೆ ಹೊಸತಲ್ಲ. ಈ ಬಗ್ಗೆ ಹಲವರು ಧ್ವನಿ ಎತ್ತಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ಇಲ್ಲಿನ ರಸ್ತೆಗಳ ದುಸ್ಥಿತಿ ಹಾಗೂ ಸಂಚಾರ ದಟ್ಟಣೆಗೆ ರೋಸಿಹೋದ ಮಹಿಳೆ ವಿಡಿಯೊ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಪ್ಲೇಟ್‌ಲೆಟ್ ಕೌಂಟ್ ಆಧರಿಸಿ ಇನ್ಶೂರೆನ್ಸ್ ಕ್ಲೇಮ್ ತಿರಸ್ಕರಿಸಿದ ವಿಮೆ ಸಂಸ್ಥೆ

ರೋಗಿಯ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡಿದ ವಿಮೆ ಸಂಸ್ಥೆ: ಕಾರಣವೇನು?

Viral News: ಇಲ್ಲೊಬ್ಬರು ​ಡೆಂಗ್ಯೂ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು ಬಹಳ ದಿನದವರೆಗೆ ಆಡ್ಮಿಟ್ ಆಗಿದ್ದರು. ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಆಗಬಹುದು ಎನ್ನುವ ನಂಬಿಕೆಯೂ ಇವರಲ್ಲಿತ್ತು. ಆದರೆ ಡಿಸ್‌ಚಾರ್ಚ್‌ ಆಗುವ ಕೊನೆಯ ಕ್ಷಣದಲ್ಲಿ, ಅವರ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಅನ್ನು ವಿಮೆ ಕಂಪನಿ ತಿರಸ್ಕರಿಸಿದೆ. ಈ ಘಟನೆ ಆರೋಗ್ಯ ವಿಮಾ ರಕ್ಷಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಳಗೆ ಸೇರಿದರೆ ಗುಂಡು...: ಮದ್ಯಪಾನ ಮಾಡಿ ಕಾರ್‌ನ ಬಾನೆಟ್ ಮೇಲೆ ಕುಳಿತು ಮಹಿಳೆಯ ಕಿರಿಕ್‌; ಟ್ರಾಫಿಕ್‌ ಜಾಮ್‌

ಕುಡಿದು ಕಾರ್‌ನ ಮೇಲೇರಿ ಕುಳಿತು ಸಂಚಾರಕ್ಕೆ ಅಡ್ಡಿ ಪಡಿಸಿದ ಮಹಿಳೆ

Viral Video: ಹರಿಯಾಣದ ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯೊಬ್ಬಳು ಗಲಾಟೆ ಮಾಡಿದ ದೃಶ್ಯ ಕಂಡು ಬಂದಿದೆ. ಮಹಿಳೆ ಮದ್ಯದ ಬಾಟಲಿ ಹಿಡಿದು ಕಾರಿನ ಬಾನೆಟ್ ಮೇಲೆ ಕುಳಿತಿದ್ದಾಳೆ. ಈ ದೃಶ್ಯ ವೈರಲ್ ಆಗಿದ್ದು, ಘಟನೆಯ ಸುತ್ತಲಿನ ಸಂದರ್ಭ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾದ ನಡವಳಿಕೆಯ ಬಗ್ಗೆ ವೀಕ್ಷಕರು ಚರ್ಚೆ ನಡೆಸಿದ್ದಾರೆ.

ಊಟ ಮಾಡುವಾಗಲೇ ಹೃದಯಾಘಾತ; ಮಗಳ ಮುಂದೆಯೇ ಪ್ರಾಣಬಿಟ್ಟ ತಂದೆ, ಆಘಾತಕಾರಿ ವಿಡಿಯೊ ಇಲ್ಲಿದೆ!

ಊಟ ಮಾಡುವಾಗಲೇ ಹೃದಯಾಘಾತ; ಮಗಳ ಮುಂದೆಯೇ ತಂದೆ ಸಾವು!

Ramanagara News: ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಯ್ಯ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗಳ ಕಣ್ಣೆದುರೇ ತಂದೆಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

18 ವರ್ಷಗಳ ಸೇವೆಯ ನಂತರ ಬಸ್‌ಗೆ ಮುತ್ತಿಕ್ಕಿ ವಿದಾಯ ಹೇಳಿದ KSRTC ಚಾಲಕ; ಹೃದಯಸ್ಪರ್ಶಿ ವಿಡಿಯೊ!

ಬಸ್ ಗೆ ಮುತ್ತಿಕ್ಕಿ ಭಾವನಾತ್ಮಕ ವಿದಾಯ ಹೇಳಿದ KSRTC ಚಾಲಕ!

Viral Video:ಸರಕಾರಿ ಸಾರಿಗೆ ಸಂಸ್ಥೆಯ ಚಾಲಕ 18 ವರ್ಷದ ಸೇವೆಯ ನಂತರ ಬಸ್ ಗೆ ಮುತ್ತಿ ಟ್ಟು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡುವ ವಿಡಿಯೊ ವೈರಲ್ ಆಗಿದೆ. ಇಡುಕ್ಕಿಯ ಕಟ್ಟಪ್ಪನ ಮೂಲದ ಪೌಲ್ ಕುರಿಯನ್ ಎಂಬವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೊಂದಿಗೆ 18 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ, ಅವರು ಇಡುಕ್ಕಿ ಮತ್ತು ಕುಮಿಲಿಯನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ತಮ್ಮ ಕೊನೆಯ ಕೆಲಸದ ದಿನದಂದು ಬಸ್‌ನ ಮುಂದೆ ನಿಂತಿರುವ ಭಾವನಾತ್ಮಕ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಶ್ವಾನ ಪ್ರಿಯರು ಓದಲೇ ಬೇಕಾದ ಸ್ಟೋರಿ; ನಾಯಿಗಳಿಗಾಗಿಯೇ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ರಸ್ತೆಬದಿ ವ್ಯಾಪಾರಿ!

ನಾಯಿಗಳ ಆರೈಕೆಗಾಗಿ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ವ್ಯಾಪಾರಿ!

Viral News: ಸಾಮಾನ್ಯವಾಗಿ ಐಸ್ ಕ್ಯಾಂಡಿ, ಪೆಪ್ಸಿ ಇತ್ಯಾದಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಯನ್ನು ನೀವು ನೋಡಿರಬಹುದು. ಇದೀಗ ವ್ಯಾಪಾರಿಯೊಬ್ಬರು ಸಾಕು ನಾಯಿಗಳಿಗಾಗಿಯೇ ಶುಗರ್ ಫ್ರೀ ಕುಲ್ಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶ್ವಾನ ಪ್ರಿಯರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ನೀಡುತ್ತಿದ್ದು ಕ್ಯೂಟ್ ಅಂಕಲ್ ಎಂದು ಕರೆಯುತ್ತಿದ್ದಾರೆ.

ಬರಿಗೈಯಲ್ಲೇ ಒಬ್ಬಂಟಿಯಾಗಿ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ:ನಿಸ್ವಾರ್ಥ ಸೇವೆಗೆ ಶ್ಲಾಘಿಸಿ ಕೆಲಸದ ಆಫರ್ ನೀಡಿದ ಓಷನ್ ಕ್ಲೀನ್‌ಅಪ್ CEO

ನದಿ ನೀರು ಸ್ವಚ್ಚಗೊಳಿಸಿದ ಯುವಕನಿಗೆ ಜಾಬ್ ಆಫರ್ ನೀಡಿದ ವಿದೇಶಿ ಸಂಸ್ಥಾಪಕ

Viral News: ಮಧ್ಯಪ್ರದೇಶದ ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಬಿಟ್ಟು ತಬಾಹಿ ಎನ್ನುವ ಯುವಕ ಒಬ್ಬಂಟಿಯಾಗಿ ತೆರವು ಗೊಳಿಸಿದ್ದ.ಇದೀಗ ಯುವಕನ ಈ ನಿಸ್ವಾರ್ಥ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಪರಿಸರ ಕಾಳಜಿಗೆ ಶ್ಲಾಘನೆ ವ್ಯಕ್ತ ಪಡಿಸಿದ ನೆದರ್ಲ್ಯಾಂಡ್ಸ್ ಮೂಲದ 'ದಿ ಓಷನ್ ಕ್ಲೀನ್‌ಅಪ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುವಂತೆ ಈ ಯುವಕನಿಗೆ ಆಫರ್ ನೀಡಿದ್ದಾರೆ.

ಮೆಟ್ರೋದಲ್ಲಿ ಎಸ್‌ಆರ್‌ಸಿಸಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ; ಜೆನ್‌ ಝೀ ಮಕ್ಕಳೊಂದಿಗೆ ಮುಕ್ತ ಮಾತು, ಹರಟೆ: ವಿಡಿಯೊ ಇಲ್ಲಿದೆ

ಮೆಟ್ರೋ ಏರಿ ಎಸ್‌ಆರ್‌ಸಿಸಿಗೆ ಮೋದಿ ಪಯಣ

SRCC's 100 Year Celebrations: ಎಸ್‌ಆರ್‌ಸಿಸಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೆಟ್ರೋ ಕಾರ್ಡ್ ಹಿಡಿದು ವಿದ್ಯಾರ್ಥಿಗಳು ಹಾಗೂ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಮೋದಿ, 13 ವರ್ಷಗಳ ಬಳಿಕ ಎಸ್‌ಆರ್‌ಸಿಸಿಗೆ ಭೇಟಿ ನೀಡಿದರು.

ರಸ್ತೆ ಮಧ್ಯೆ ನಮಾಜ್ ಮಾಡಿದ ಎಸ್‌ಪಿ ನಾಯಕ ಹಾಜಿ ಮೊಹಮ್ಮದ್ ಉಸ್ಮಾನ್ ವಿರುದ್ಧ ಎಫ್ಐಆರ್

ರಸ್ತೆಯಲ್ಲಿ ನಮಾಜ್ ಮಾಡಿದ ಎಸ್‌ಪಿ ನಾಯಕ: ಎಫ್ಐಆರ್ ದಾಖಲು

SP leader booked for offering namaz: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಸರ್ಕಾರಿ ಸರ್ಕ್ಯೂಟ್ ಹೌಸ್ ಆವರಣದ ರಸ್ತೆಯಲ್ಲಿ ನಮಾಜ್ (ಪ್ರಾರ್ಥನೆ) ಸಲ್ಲಿಸಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಜಿ ಮೊಹಮ್ಮದ್ ಉಸ್ಮಾನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 16 ವರ್ಷದ ಕಾಮುಕನನ್ನು ಓಡಿಸಿದ ಬೀದಿನಾಯಿಗಳು; ವೈರಲ್‌ ವಿಡಿಯೊ ಇಲ್ಲಿದೆ

ಕಿರುಕುಳ ನೀಡುತ್ತಿದ್ದ ಬಾಲಕನಿಂದ ಸಂತ್ರಸ್ತೆಯನ್ನು ಕಾಪಾಡಿದ ನಾಯಿಗಳು

Stray Dogs Save Victim: ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಅಪ್ರಾಪ್ತ ವಯಸ್ಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬೀದಿನಾಯಿಗಳು ಆಕೆಯನ್ನು ಕಾಪಾಡಿದ್ದು, ಆರೋಪಿಯನ್ನು ಓಡಿಸಿವೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ವಾನಗಳು ನಿರಂತರ ಬೊಗಳುವ, ನಡೆಸುವ ಮೂಲಕ ಕಾಮುಕನನ್ನು ಅಲ್ಲಿಂದ ಓಡಿಹೋಗುವಂತೆ ಮಾಡಿವೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಕೋಮು ಸೌಹಾರ್ದತೆ ಸಾರುವ ದೃಶ್ಯ: ಹಿಂದೂ ಕುಟುಂಬಕ್ಕಾಗಿ ಗಣಪತಿ ವಿಗ್ರಹ ತಯಾರಿಸಿದ ಪಾಕಿಸ್ತಾನದ ಮುಸ್ಲಿಂ ಕಲಾವಿದ!

ಮರಾಠಿ ಕುಟುಂಬಕ್ಕಾಗಿ ಗಣಪತಿ ವಿಗ್ರಹ ರಚಿಸಿದ ಮುಸ್ಲಿಂ ಕಲಾವಿದ

Viral Video: ಕರಾಚಿಯಲ್ಲಿರುವ ಮರಾಠಿ ಕುಟುಂಬವು ಗಣೇಶ ಚತುರ್ಥಿಯ ಹಬ್ಬಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಇಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ವಿಗ್ರಹಕ್ಕೆ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಬಣ್ಣ ಬಳಿಯುತ್ತಿದ್ದು ಕೋಮು ಸೌಹಾರ್ದತೆಯ ಹೃದಯಸ್ಪರ್ಶಿ ಪ್ರದರ್ಶನ ಇದಾಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಸದ್ದು ಮಾಡುತ್ತಿರುವ ವಿಚಿತ್ರ ಉದ್ಯಮ: ಕೇವಲ ಬೆನ್ನು ಕೆರೆದು ಲಕ್ಷ -ಲಕ್ಷ ಗಳಿಸುತ್ತಿರುವ ಯುವಕ!

ಬೆನ್ನು ಕೆರೆಯುವ ಕೆಲಸ ಆರಂಭಿಸಿ ಗಂಟೆಗೆ 4,200 ರೂಪಾಯಿ ಗಳಿಸುವ ಯುವಕ

Viral News: ಇಲ್ಲೊಬ್ಬ ವ್ಯಕ್ತಿ ಕೇವಲ ಬೆನ್ನು ಕೆರೆಯುವ ಕೆಲಸವನ್ನು ಉದ್ಯಮವನ್ನಾಗಿ ಮಾಡಿ ಗಂಟೆಗೆ 4,200 ರೂಪಾಯಿ ಗಳಿಸುತ್ತಾನೆ. 'ಸುಮಾ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಜ್ಯಾಂಗ್ ಎಂಬ ವ್ಯಕ್ತಿ ಈ ಉದ್ಯಮ ಆರಂಭಿಸಿ ಸಕ್ಸಸ್ ಕಂಡಿದ್ದಾನೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀಗೂ ಹಣ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿದೇಶಕ್ಕೆ ತೆರಳುವ ಮುನ್ನ ಸ್ಕಾರ್ಪಿಯೋ ಗೆ ಹೈ ಸೆಕ್ಯುರಿಟಿ: ಟೆರೇಸ್ ಮೇಲೆಯೇ ಕಾರ್ ಪಾರ್ಕ್ ಮಾಡಿದ ಮಾಲೀಕ!

ಕಳ್ಳರ ಭಯಕ್ಕೆ ಕ್ರೇನ್ ಮೂಲಕ ಕಾರನ್ನು ಮನೆಯ ಟೆರೇಸ್ ಮೇಲೆ ಇರಿಸಿದ ಮಾಲೀಕ

Viral Video: ಇಲ್ಲೊಬ್ಬ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಎಸ್ ಯುವಿ ಕಾರನ್ನು ಕಳ್ಳರಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಕಾರನ್ನು ಹೊರಗೆ ನಿಲ್ಲಿಸುವ ಬದಲು, ಮಾಲೀಕರು ಸ್ಕಾರ್ಪಿಯೋ ವನ್ನು ಕ್ರೇನ್ ಮೂಲಕ ಎತ್ತಿ ತಮ್ಮ ಮನೆಯ ಛಾವಣಿಯ ಮೇಲೆ ಇರಿಸಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಟೆರೇಸ್ ಮೇಲೆ ಕಾರನ್ನು ಪಾರ್ಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

‘ನಾವು ಮುಸ್ಲಿಮರೆಂಬ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ’: ದೆಹಲಿ ಪೊಲೀಸರ ವಿರುದ್ಧ ಪತ್ರರ್ಕತೆಯರಿಂದ ಗಂಭೀರ ಆರೋಪ

ದೆಹಲಿ ಪೊಲೀಸರ ವಿರುದ್ಧ ಪತ್ರರ್ಕತೆಯರ ಗಂಭೀರ ಆರೋಪ! ಏನಿದು ಘಟನೆ?

ದೆಹಲಿಯಲ್ಲಿ ವರದಿಗಾರಿಕೆ ತೆರಳಿದ್ದ ಇಬ್ಬರು ಮಹಿಳಾ ಪತ್ರರ್ಕತೆಯರ ಮೇಲೆ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿ, ಧಾರ್ಮಿಕವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. "ನಾವು ಮುಸ್ಲಿಮರೆಂಬ ಕಾರಣಕ್ಕಾಗಿ ನಮ್ಮನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆʼ ಎಂದು ಪತ್ರರ್ಕತೆಯರು ದೂರಿದ್ದಾರೆ. ಆದರೆ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ದೆಹಲಿ ಪೊಲೀಸರು, ಘಟನೆಯಲ್ಲಿ ಯಾವುದೇ ಅಮಾನವೀಯ ನಡವಳಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಭಾರತದಲ್ಲೇ ನೆಮ್ಮದಿ": ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಕೆಲಸ ತೊರೆದು ತಾಯ್ನಾಡಿಗೆ ಮರಳಿದ ಟೆಕ್ಕಿ ಹೇಳಿದ್ದೇನು?

ಮೈಕ್ರೋಸಾಫ್ಟ್ ಕೆಲಸ ತೊರೆದು ಭಾರತಕ್ಕೆ ಮರಳಿದ ಟೆಕ್ಕಿ: ಕಾರಣವೇನು?

Viral News: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರು ಲಕ್ಷ ಲಕ್ಷ ಸಂಬಳ ತೊರೆದು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರವು ಸಂಬಳಕ್ಕಿಂತ ಹೆಚ್ಚಿನದನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಈಗ ಕಡಿಮೆ ಸಂಪಾದಿಸಬಹುದಾದರೂ, ಹೆಚ್ಚಿನ ಸ್ವಾತಂತ್ರ್ಯ, ಕುಟುಂಬದೊಂದಿಗೆ ಸಮಯ ಮತ್ತು ಹಲವರ ಜೊತೆ ವೈಯಕ್ತಿಕ ಸಂಪರ್ಕಗಳನ್ನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು ಹಂಚಿಕೊಂಡಿದ್ದಾರೆ.

Loading...