ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ನೇಪಾಳ ಪ್ರವಾಹದಲ್ಲಿ ಧ್ವಂಸಗೊಂಡ ಮನೆಯ ಬಳಿ ಕುಳಿತು ಮಾಲಕರಿಗಾಗಿ ಕಾಯುತ್ತಿರುವ ಶ್ವಾನಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್‌

ನೇಪಾಳ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾದ ಮಾಲಕನಿಗಾಗಿ ಕಾಯುತ್ತಿರುವ ಶ್ವಾನಗಳು

Nepal Flood: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಅಪಾರ ಜೀವಹಾನಿಗೆ ಕಾರಣವಾಗಿದೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು 1,127 ಮಂದಿ ಸಾವನ್ನಪ್ಪಿದ್ದು, 4,858 ಮಂದಿ ನಾಪತ್ತೆಯಾಗಿದ್ದಾರೆ. ಜತೆಗೆ ಲೆಕ್ಕವಿಲ್ಲದಷ್ಟು ಮನೆ, ಕಟ್ಟಗಳನ್ನು ಧ್ವಂಸಗೊಂಡಿವೆ. ಈ ಎಲ್ಲ ಭೀಕರತೆಯ ನಡುವೆ, ತಮ್ಮ ಮಾಲಕರಿಗಾಗಿ ಧ್ವಂಸಗೊಂಡ ಮನೆಗಳ ಬಳಿ ಶ್ವಾನಗಳು ಕಾಉಇತ್ತಿರುವ ದೃಶ್ಯ ವೈರಲ್‌ ಆಗಿದೆ.

ವಯನಾಡು ಹೆದ್ದಾರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು: ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ಏಕಾಏಕಿ ಕಾರಿನ ಮೇಲೆ ದಾಳಿ ಮಾಡಲು ಮುಂದಾದ ಆನೆ: ಭಯಾನಕ ವಿಡಿಯೊ ನೋಡಿ

Viral News: ವಯನಾಡಿನ ಸುಲ್ತಾನ್ ಬತ್ತೇರಿ- ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಭೀಕರ ಅನುಭವವೊಂದು ಎದುರಾಗಿದೆ. ರಸ್ತೆ ದಾಟಿ ಕಾಡಿನತ್ತ ಸಾಗುತ್ತಿದ್ದ ಆನೆ ಏಕಾಏಕಿ ಕಾರಿನ ಬಳಿ ರಭಸವಾಗಿ ನುಗ್ಗಲು ಯತ್ನಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆ: ಆನ್‌ಲೈನ್ ಪೇಮೆಂಟ್ ಮಾಡಿಸಿ ಬೆಂಗಳೂರು ಯುವಕನಿಗೆ ಕೈಕೊಟ್ಟ ʼಬೆಳದಿಂಗಳ ಬಾಲೆʼ

ಡೇಟಿಂಗ್ ಆ್ಯಪ್‌ನಲ್ಲಿ ವಂಚನೆಗೆ ಒಳಗಾದ ಬೆಂಗಳೂರು ಯುವಕ

Viral News: ಬೆಂಗಳೂರಿನ ಯುವಕನೊಬ್ಬ ಡೇಟಿಂಗ್ ಆ್ಯಪ್ ಬಳಸಲು ಹೋಗಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಆತ ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ಮಾಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಜಮೀನು ಮಾರಾಟ ಮಾಡಿದ ಹೆತ್ತವರನ್ನು ರಸ್ತೆಯಲ್ಲೇ ಥಳಿಸಿದ ಮಕ್ಕಳು; ವಿಡಿಯೊ ವೈರಲ್‌

ಜಮೀನು ಮಾರಾಟ ಮಾಡಿದ ಹೆತ್ತವರನ್ನು ರಸ್ತೆಯಲ್ಲೇ ಥಳಿಸಿದ ಮಕ್ಕಳು

Viral Video: ಮಹಾರಾಷ್ಟ್ರದಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮನ್ನು ಕೇಳದೆ ಮಾರಟ ಮಾಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಪುತ್ರರು ವೃದ್ಧ ತಂದೆ-ತಾಯಿಯ ರಸ್ತೆ ಮಧ್ಯೆ ದೊಣ್ಣೆಯಿಂದ ಕ್ರೂರವಾಗಿ ಹಲ್ಲೆ ಮಾಡಿರುವ ದಾರುಣ ಘಟನೆ ಸಂಭವಿಸಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಮಹಾರಾಷ್ಟ್ರದ ಕುಟುಂಬವೊಂದರಲ್ಲಿ 200 ವರ್ಷಗಳ ನಂತರ ಹುಟ್ಟಿದ ಹೆಣ್ಣು ಮಗು: ರಾಜವೈಭವ, ಮೆರವಣಿಗೆ ಮೂಲಕ ಲಕ್ಷ್ಮೀಗೆ ಅದ್ಧೂರಿ ಸ್ವಾಗತ

200 ವರ್ಷಗಳ ನಂತರ ಹುಟ್ಟಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಕುಟುಂಬ

Viral Video: ಮಹಾರಾಷ್ಟ್ರದ ಪುಣೆ ಜಿಲ್ಲೆಯ ವೆಂಶಟ್ ಗ್ರಾಮದ ಕುಟುಂಬವೊಂದರಲ್ಲಿ ಸುಮಾರು 200 ವರ್ಷಗಳ ನಂತರ ಹೆಣ್ಣುಮಗು ಜನಿಸಿದ್ದು, ಸಂಭ್ರಮ ಮನೆ ಮಾಡಿದೆ. ಈ ಕುಟುಂಬ ತಾಯಿ ಮತ್ತು ಮಗುವನ್ನು ರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮರವಣಿಗೆ ಮಾಡಿ ಅಮೂಲ್ಯ ಕ್ಷಣವನ್ನು ಸ್ಮರಣೀಯವಾಗಿಸಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಂಗಾ ನದಿಯ ಅಬ್ಬರಕ್ಕೆ ಕೊಚ್ಚಿಹೋದ 100 ವರ್ಷ ಹಳೆಯ ದುರ್ಗಾ ದೇಗುಲ; ವಿಡಿಯೊ ವೈರಲ್

ನದಿಯ ರೌದ್ರಾವತಾರಕ್ಕೆ ನೀರು ಪಾಲಾದ 100 ವರ್ಷ ಹಳೆಯ ದೇಗುಲ

Bihar Chaiti Durga Temple: ಬಿಹಾರದ ಭಾಗಲ್ಪುರ ಜಿಲ್ಲೆಯ ರಘೋಪುರದಲ್ಲಿ ತೀವ್ರ ನದಿ ತೀರದ ಸವೆತದಿಂದ ಸುಮಾರು 100 ವರ್ಷ ಹಳೆಯ ಚೈತಿ ದುರ್ಗಾ ದೇವಸ್ಥಾನ ಕೊಚ್ಚಿಹೋಗಿದೆ. ದೇವಸ್ಥಾನ ಕುಸಿದು ಗಾಂಗಾ ನದಿಯಲ್ಲಿ ಮುಳುಗುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಂಟಿ ಕಾಲಿನಲ್ಲೇ 400 ಮೀಟರ್ ನಡೆಯುತ್ತ ಶಾಲೆಗೆ ತೆರಳುವ 7 ವರ್ಷದ ವಿದ್ಯಾರ್ಥಿನಿ; ತ್ರಿಚಕ್ರದ ಸೈಕಲ್‌ ಕೊಡಿಸುವಂತೆ ಡಿಸಿಗೆ ಮನವಿ

ಒಂದೇ ಕಾಲಿನಲ್ಲಿ 400 ಮೀ. ನಡೆದು ಶಾಲೆಗೆ ತೆರಳುವ ಬಾಲಕಿ: ವಿಡಿಯೊ ವೈರಲ್

Viral Video: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಗಿಣಿ ಎಂಬ ಬಾಲಕಿ ತನ್ನ ಮನೆಯಿಂದ ಪ್ರತಿದಿನ 400 ಮೀಟರ್ ದೂರದಲ್ಲಿರುವ ಶಾಲೆಗೆ ಒಂದು ಕಾಲಿನಲ್ಲಿಯೇ ತೆರಳುತ್ತಿದ್ದಾಳೆ. ಕಾಲು ಕಳೆದುಕೊಂಡರೂ ಶಾಲೆಗೆ ಹೋಗುವ 7 ವರ್ಷದ ಬಾಲಕಿಯ ಆಸಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆ "ಓಡಾಡಲು ಒಂದು ತ್ರಿಚಕ್ರ ಸೈಕಲ್ ಕೊಡಿಸಿ, ನಾನು ಪ್ರತಿದಿನ ಶಾಲೆಗೆ ಓದಲು ಬರುತ್ತೇನೆ" ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

Viral Video: ಬಿಜೆಪಿ ಪ್ರತಿಭಟನೆ ವೇಳೆ ಮಾಜಿ ಶಾಸಕನ ದರ್ಪ; ಸ್ಕೂಟರ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಎಸೆದ ರಾಜ್‌ಕುಮಾರ್ ಪಾಟೀಲ್

ಸ್ಕೂಟರ್ ಸವಾರನ ಹೆಲ್ಮೆಟ್ ಕಿತ್ತೆಸೆದು ನೆಲಕ್ಕೆ ಎಸೆದ ಬಿಜೆಪಿ ಮಾಜಿ ಶಾಸಕ

Rajkumar Patil Telkur Argues with Scooter Rider: ಬಿಜೆಪಿ ಪ್ರತಿಭಟನೆ ಮಧ್ಯೆ ಸ್ಕೂಟರ್ ಚಲಾಯಿಸಲು ಯತ್ನಿಸಿದ ಸವಾರನೊಬ್ಬನನ್ನು ತಡೆದ ಮಾಜಿ ಬಿಜೆಪಿ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್, ಆತನ ಹೆಲ್ಮೆಟ್ ಕಿತ್ತು ನೆಲಕ್ಕೆ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಗಮನ ಸೆಳೆದ ಜಪಾನ್‌ನ ಪಂಚ್‌ ಕೋತಿ ಮರಿ ಏಲ್ಲಿದೆ? ಹಲವು ದಿನಗಳಿಂದ ಕಾಣಿಸಿಕೊಳ್ಳದಿರುವುದಕ್ಕೆ ಸ್ಪಷ್ಟನೆ ನೀಡಿದ ಮೃಗಾಲಯ ಸಿಬ್ಬಂದಿ

ಪಂಚ್ ಕೋತಿ ಸತ್ತಿದೆ ಎಂಬ ವದಂತಿ ನಿಜವೇ? ಮೃಗಾಲಯದ ಸ್ಪಷ್ಟನೆ ಏನು?

Viral News: ಜಪಾನ್‌ ಮೃಗಾಲಯದಲ್ಲಿದ್ದ ಏಳು ತಿಂಗಳ ಪುಟ್ಟ ಮಂಗ ಪಂಚ್ ಹುಟ್ಟಿದ ಕೂಡಲೇ ತಾಯಿಯಿಂದ ಬೇರ್ಪಟ್ಟು ಒಬ್ಬಂಟಿಯಾಗಿತ್ತು. ಇತರ ಕೋತಿಗಳು ಅದನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಮೃಗಾಲಯದ ಸಿಬ್ಬಂದಿ ಪಂಚ್‌ಗೆ ಒರಾಂಗುಟನ್ ಗೊಂಬೆ ನೀಡಿದ್ದರು. ಅದನ್ನೇ ಪಂಚ್ ತನ್ನ ತಾಯಿ ಎಂದು ಪರಿಗಣಿಸಿ ಆಟವಾಡುತ್ತಿತ್ತು. ಇದರ ಕಥೆ ಕೇಳಿ ಪ್ರಾಣಿ ಪ್ರಿಯರು ಮರುಕ ವ್ಯಕ್ತಪಡಿಸಿದ್ದರು. ಆ ಮೂಲಕ ಪಂಚ್‌ ಜಗತ್ತಿನ ಗಮನ ಸೆಳೆದಿತ್ತು. ಅಲ್ಲದೆ ಪಂಚ್‌ ನೋಡಲೆಂದೇ ಸಾರ್ವಜನಿಕರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಪಂಚ್ ಸಾರ್ವಜನಿಕರಿಗೆ ಕಾಣಿಸದೆ ಇರುವುದರಿಂದ ಅದು ಸತ್ತಿದೆ ಎನ್ನುವ ವದಂತಿ ಹಬ್ಬಿದೆ. ಇದಕ್ಕೆ ಇದೀಗ ಮೃಗಾಲಯ ಸಿಬ್ಬಂದಿ ಸ್ಪಷ್ಟನೆ ನೀಡಿದ್ದು, ವದಂತಿ ನಿರಾಕರಿಸಿದ್ದಾರೆ.

Zomatoದಲ್ಲಿ ಫುಡ್‌ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಶಾಕ್‌; ಬೆಂಗಳೂರಿನಲ್ಲಿ ಪಾವ್‌ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿದ ಬೀಡಿ!

ಬೆಂಗಳೂರಿನಲ್ಲಿ ಪಾವ್‌ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿದ ಬೀಡಿ!

ಬೆಂಗಳೂರಿನ ನಿವಾಸಿಯೊಬ್ಬರು ಜೊಮ್ಯಾಟೊ ಮೂಲಕ ಅರ್ಡರ್‌ ಮಾಡಿದ ಪಾವ್ ಭಾಜಿಯಲ್ಲಿ ಸೇದಿದ ಬೀಡಿ ಪತ್ತೆಯಾಗಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ್ ನೈರ್ಮಲ್ಯ ಹಾಗೂ ಆಹಾರ ಸುರಕ್ಷತೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶುದ್ಧೀಕರಣ ಗದ್ದಲದ ಮಧ್ಯೆ ರಾಹುಲ್ ಗಾಂಧಿಗೆ ಬುದ್ಧಿ ಶುದ್ಧಿ ಯಜ್ಞ ಮಾಡಿದ ಬಿಜೆಪಿ; ಏನಿದು ಆಚರಣೆ? ಯಾಕಾಗಿ?

ರಾಹುಲ್ ಗಾಂಧಿಗೆ ಬುದ್ಧಿ ಶುದ್ಧಿ ಯಜ್ಞ ಮಾಡಿದ ಬಿಜೆಪಿ

BJP Performs Buddhi Shuddhi Yagna: ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾವು ಉತ್ತರಾಖಂಡದ ಡೆಹ್ರಾಡೂನ್‌ನ ದೇವಸ್ಥಾನವೊಂದರಲ್ಲಿ ಬುದ್ಧಿ ಶುದ್ಧಿ ಯಜ್ಞವನ್ನು ಆಯೋಜಿಸಿದ್ದು, ಈ ಧಾರ್ಮಿಕ ಆಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಇರಿಸಲಾಗಿತ್ತು.

ಎಸ್​ಸಿಒ ಶೃಂಗಸಭೆ: ಗ್ರೂಪ್ ಫೋಟೊದಿಂದ ಪ್ರಧಾನಿ ನರೇಂದ್ರ ಮೋದಿಯನ್ನು ಕ್ರಾಪ್‌ ಮಾಡಿದ ಪಾಕಿಸ್ತಾನ

ಎಸ್​ಸಿಒ ಶೃಂಗಸಭೆಯ ಫೋಟೊದಿಂದ ಮೋದಿ ಕ್ರಾಪ್‌ ಮಾಡಿದ ಪಾಕಿಸ್ತಾನ

Shehbaz Sharif: ಎಸ್‌ಸಿಒ ಶೃಂಗಸಭೆಯ ಮೂಲ ಫೋಟೊದಲ್ಲಿ ಹಲವು ವಿಶ್ವ ನಾಯಕರಿದ್ದರೂ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕಚೇರಿ ಹಂಚಿಕೊಂಡ ಚಿತ್ರದಲ್ಲಿ ಇತರ ನಾಯಕರನ್ನು ಕ್ರಾಪ್ ಮಾಡಿ ಷರೀಫ್ ಅವರನ್ನು ಮಧ್ಯದಲ್ಲಿ ಕಾಣುವಂತೆ ಮಾಡಲಾಗಿದೆ ಎಂಬುದು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ಹಂಚಿಕೊಂಡ ಮೂಲ ಚಿತ್ರದಲ್ಲಿ ಷರೀಫ್ ಬಲಭಾಗದಿಂದ ನಾಲ್ಕನೇ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ.

ಆ್ಯಪ್ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾದ ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕ: ಆಕ್ರೋಶ ಹೊರ ಹಾಕಿದ ಮಹಿಳೆ

ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ವಂಚನೆ: ಮಹಿಳೆ ಹೇಳಿದ್ದೇನು?

Viral News: ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುವ ಘಟನೆಗಳು ದಿನಕ್ಕೆ ಒಂದಾದರೂ ನಡೆಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರ‍್ಯಾಪಿಡೋ ಚಾಲಕನೊಬ್ಬ ಆ್ಯಪ್‌ನಲ್ಲಿ ತೋರಿಸಿದ ದರಕ್ಕಿಂತ 900 ರುಪಾಯಿ ಹೆಚ್ಚುವರಿ ಹಣವನ್ನು ದೋಚಿದ್ದಾನೆ. ಈ ಬಗ್ಗೆ ತಮಗಾದ ಅನುಭವವನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ʼʼಇದು ನಮಗೆ ಸಿಕ್ಕ ಮರುಜನ್ಮʼʼ: ಭಯಾನಕ ಅನುಭವ ಬಿಚ್ಚಿಟ್ಟ ನೇಪಾಳ ಪ್ರವಾಹದಲ್ಲಿ ಬದುಕುಳಿದ ಮಹಿಳೆ

ನೇಪಾಳ ಪ್ರವಾಹದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ ಹೇಳೆದ್ದೇನು?

Viral Video: ಹಿಮನದಿ ಕುಸಿತ, ಬಂಡೆ ಕುಸಿತ ಹಾಗೂ ಹಠಾತ್ ಪ್ರವಾಹದಂತಹ ದುರಂತಗಳು ಇತ್ತೀಚೆಗೆ ಪದೇ ಪದೆ ಸಂಭವಿಸುತ್ತಿವೆ. ಅದರಲ್ಲೂ ನೇಪಾಳದ ಜಲ ಪ್ರವಾಹದ ಜಾಲಕ್ಕೆ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ. ಈ ನಡುವೆ ತೀವ್ರ ಪ್ರವಾಹಕ್ಕೆ ಸುತ್ತಮುತ್ತಲಿನ ಅನೇಕ ಮನೆಗಳು ಧ್ವಂಸಗೊಂಡರೂ ಹಸಿರು ಮನೆಯೊಂದು ಮಾತ್ರ ಅಲುಗಾಡದೆ ನಿಂತಿತ್ತು. ಆ ಮನೆಯಲ್ಲಿದ್ದ ಮಹಿಳೆ ತಮ್ಮ ಅನುಭವ ವಿವರಿಸಿದ್ದಾರೆ.

Viral Video: ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ಸೂರತ್ ರೈಲ್ವೆ ನಿಲ್ದಾಣದ ಮಳಿಗೆಯಲ್ಲಿ ಇಲಿ ಓಡಾಟ: ವಿಡಿಯೊ ವೈರಲ್‌

Viral Video: ಗುಜರಾತ್‌ನ ಸೂರತ್ ರೈಲ್ವೆ ನಿಲ್ದಾಣದ ಫುಡ್ ಸ್ಟಾಲ್‌ನಲ್ಲಿ ಇಲಿಯೊಂದು ಪಫ್ ತಿನ್ನುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯವು ಆಹಾರ ಮಳಿಗೆಗಳಲ್ಲಿನ ನೈರ್ಮಲ್ಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಆಡಳಿತ ಮಂಡಳಿ ತಕ್ಷಣ ಕ್ರಮಕ್ಕೆ ಮುಂದಾಗಿದೆ.

ಎತ್ತರ ಕಮ್ಮಿ ಎನ್ನುವ ಕಾರಣಕ್ಕೆ ಉತ್ತಮ ಗುಣವಿರುವ ಹುಡುಗನನ್ನು ತಿರಸ್ಕರಿಸಿದ ಯುವತಿ! ಇಂಟರ್‌ನೆಟ್‌ನಲ್ಲಿ ಬಿಸಿಬಿಸಿ ಚರ್ಚೆ

ಎತ್ತರ ಕಮ್ಮಿ ಎಂಬ ವಿಚಾರಕ್ಕೆ ಒಳ್ಳೆಯ ಹುಡುಗನನ್ನು ತಿರಸ್ಕರಿಸಿದ ಯುವತಿ

Viral News: ಮದುವೆ ವಯಸ್ಸಿಗೆ ಬಂದ ಯುವಕ-ಯುವತಿಯರಿಗೆ ಸೂಕ್ತ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸಾಹಸ. ಅದರಲ್ಲೂ ಇಂದು ಒಳ್ಳೆಯ ಗೌರವಯುತ ಸಂಬಂಧಕ್ಕಿಂತ ಶ್ರೀಮಂತಿಕೆ, ಉದ್ಯೋಗ, ರೂಪ ನೋಡಿ ಆಯ್ಕೆ ಮಾಡಿಕೊಳ್ಳುವವರೇ ಹೆಚ್ಚು. ಇಲ್ಲೊಬ್ಬ ಯುವತಿ ಉತ್ತಮ ಗುಣವಿರುವ ಹುಡುಗ ಇದ್ದರೂ ಆತನ ಎತ್ತರ ಕಮ್ಮಿ ಇದೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾಳೆ.

ವೃದ್ಧೆಗೆ 50 ಸಾವಿರ ರುಪಾಯಿಯ ಡಿಯೋರ್ ಸನ್‌ ಗ್ಲಾಸ್‌ ಗಿಫ್ಟ್ ನೀಡಿದ ಸಿಎಂ ವಿಜಯ್; ವಿಡಿಯೊ ವೈರಲ್‌

ವೃದ್ಧೆಗೆ ಚಶ್ಮಾ ಉಡುಗೊರೆ ನೀಡಿದ ಸಿಎಂ ವಿಜಯ್: ಸರಳತೆಗೆ ನೆಟ್ಟಿಗರು ಫಿದಾ

Viral Video: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೆಟ್ಟೂರುಗೆ ಭೇಟಿ ನೀಡಿ ಕಾವೇರಿ ಡೆಲ್ಟಾ ಭಾಗದ 'ಸಂಬಾ' ಭತ್ತ ಬೇಸಾಯ ಪ್ರದೇಶಕ್ಕೆ ಜಲಾಶಯದಿಂದ ನೀರು ಹರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಸೇರಿದ್ದರೂ ವೃದ್ಧೆಯೊಬ್ಬರನ್ನು ಗಮನಿಸಿ ತಮ್ಮ ಬೆಲೆಬಾಳುವ 'ಕ್ರಿಶ್ಚಿಯನ್ ಡಿಯೋರ್' ಕೂಲಿಂಗ್‌ ಗ್ಲಾಸ್‌ ಉಡುಗೊರೆಯಾಗಿ ನೀಡಿದರು. ಅಲ್ಲದೆ ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕಿದರು.

ದುಪ್ಪಟಾ ಬಳಸಿ ಪ್ರವಾಹಕ್ಕೆ ಸಿಲುಕಿದ ಬೈಕ್ ಸವಾರನ ಪ್ರಾಣ ಉಳಿಸಿದ ನವದಂಪತಿ; ರೋಚಕ ಕಾರ್ಯಾಚರಣೆಯ ವಿಡಿಯೊ ನೋಡಿ

ದುಪ್ಪಟಾ ಬಳಸಿ ಬೈಕ್ ಸವಾರನ ಪ್ರಾಣ ಉಳಿಸಿದ ನವದಂಪತಿ: ವಿಡಿಯೊ ವೈರಲ್

Viral Video: ದಿಢೀರ್ ಪ್ರವಾಹಕ್ಕೆ ಸಿಲುಕಿದ ಬೈಕ್ ಸವಾರನೊಬ್ಬನನ್ನು ನವದಂಪತಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಮಹಿಳೆ ಧರಿಸಿದ್ದ ದುಪ್ಪಟಾವನ್ನೇ ರಕ್ಷಣಾ ಹಗ್ಗವನ್ನಾಗಿ ಬಳಸಿ ಚಾಲಕನನ್ನು ಕಾಪಾಡಲಾಗಿದೆ. ಈ ಘಟನೆಯ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ದಂಪತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು, ತಿಂದ್ರೆ ಸಮಸ್ಯೆ ಗ್ಯಾರಂಟಿ!

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು!

ನೇಪಾಳದ ಭೀಕರ ಪ್ರವಾಹದಿಂದಾಗಿ ಬಿಹಾರದ ಗಂಡಕ್ ನದಿಗೆ ಅಪರಿಚಿತ ಹಾಗೂ ವಿಚಿತ್ರ ತಳಿಯ ಮೀನುಗಳು ಹರಿದುಬಂದಿವೆ, ಈ ಮೀನುಗಳನ್ನು ಸೇವಿಸಿದ ಕೆಲವರ ಅನಾರೋಗ್ಯಕ್ಕೆ ಒಳಗಾದ ವರದಿಗಳು ಬಂದ ನಂತರ ಬಿಹಾರ ಸರ್ಕರವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

‘ʼಮಹಿಳೆಯರು ಮನೆಗೇ ಸೀಮಿತವಾಗಿರಬೇಕು’ʼ: ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡ ಅಬೂಬಕರ್ ಮುಸ್ಲಿಯಾರ್

ವಿವಾದಕ್ಕೆ ತಿರುಗಿದ ಮಹಿಳೆಯರ ಕುರಿತ ಮುಸ್ಲಿಯಾರ್ ಹೇಳಿಕೆ

AP Aboobacker Musliyar: ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಗೇ ಸೀಮಿತರಾಗಬೇಕು ಎಂದು ಕೇರಳಂನ ಹಿರಿಯ ಮುಸ್ಲಿಮ್‌ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಸಿಪಿಐ(ಎಂ) ಹಾಗೂ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನಿರ್ಬಂಧಿಸುವ ಪ್ರಯತ್ನವನ್ನು ವಿರೋಧಿಸಿದ್ದಾರೆ.

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಸಾರ್ವಜನಿಕ ರಸ್ತೆಯನ್ನು ಪಿಕ್ನಿಕ್ ಸ್ಪಾಟ್‌ನಂತೆ ಬಳಸಿಕೊಂಡ ಕುಟುಂಬ

Rajasthan expressway: ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತನೆ ತೋರುವ ಅನೇಕ ಘಟನೆಗಳು ವೈರಲ್ ಆಗುತ್ತವೆ. ಎಲ್ಲೆಂದರಲ್ಲಿ ಕಸ ಹಾಕುವುದು, ಪ್ರವಾಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು, ರೀಲ್ಸ್ ಚಿತ್ರೀಕರಣ ಮಾಡುವುದು ಹೀಗೆ ಮನ ಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನ ಎಕ್ಸ್‌ಪ್ರೆಸ್‌ ವೇಯ ಮಧ್ಯದಲ್ಲಿ ಕುಟುಂಬವೊಂದು ಕುಳಿತು ಊಟ ಮಾಡುತ್ತಿರುವ ದೃಶ್ಯ ಕಂಡುಬಂದಿದೆ‌.

ನೇಪಾಳ ಪ್ರವಾಹದ ವೇಳೆ ಕಂಡುಬಂದ ಹೃದಯವಿದ್ರಾವಕ ದೃಶ್ಯ: ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನು ಹುಡುಕುತ್ತ ಹೊರಟ ಬಾಲಕ!

ನೇಪಾಳದಲ್ಲಿ ಪೋಷಕರಿಂದ ಬೇರ್ಪಟ್ಟ ಅಣ್ಣ-ತಂಗಿ: ಕರುಳು ಹಿಂಡುವ ದೃಶ್ಯ

Viral Video: ನೇಪಾಳ ಪ್ರವಾಹದಲ್ಲಿ ಕಂಡು ಬಂದ ಈ ದೃಶ್ಯ ಇಡೀ ಜಗತ್ತನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಪೋಷಕರಿಂದ ಬೇರ್ಪಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಮೇಲೆ ಹೊತ್ತುಕೊಂಡು ತನ್ನವರಿಗಾಗಿ ಹುಡುಕುತ್ತಿರುವ ಕರುಳು ಹಿಂಡುವ ದೃಶ್ಯ ಇದಾಗಿದ್ದು, ನೆಟ್ಟಿಗರು ಈ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ನೇಪಾಳ ಪ್ರವಾಹ: ಮಹಿಳೆಯ ಸೀರೆಯಿಂದ ಉಳಿಯಿತು 21 ಯಾತ್ರಿಕರ ಜೀವ!

ನೇಪಾಳ ನೆರೆ: ತಮಿಳುನಾಡು ಯಾತ್ರಿಕರ ಪ್ರಾಣ ಉಳಿಸಿದ ಸೀರೆ!

Viral Video: ಟಿಬೆಟ್ ಗಡಿಯ ಬಳಿ ಉಂಟಾದ ದಿಢೀರ್ ಪ್ರವಾಹದ ವೇಳೆ ತಮಿಳುನಾಡಿನ ಯಾತ್ರಿಕರ ಗುಂಪೊಂದು ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಅವರು ಪ್ರಾಣ ಉಳಿಸಿಕೊಳ್ಳಲು ಮಹಿಳೆಯೊಬ್ಬರ ಸೀರೆಯನ್ನು ಬಳಸಿದ್ದಾರೆ. ಸೀರೆಯನ್ನು ಹಿಡಿದುಕೊಂಡು ಜಾರುತ್ತಿದ್ದ ಇಳಿಜಾರಿನಿಂದ ಯಾತ್ರಿಕರು ಮೇಲೇರಿದ್ದಾರೆ.

Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!

ಸ್ಮಶಾನದಲ್ಲಿ ಮೃತದೇಹದ ಮಾಂಸ ತಿಂದ ಮಹಿಳೆ: ವಿಡಿಯೊ ವೈರಲ್‌

ಮಹಿಳೆಯೊಬ್ಬಳು ಚಿತಾಗಾರವೊಂದರಿಂದ ಮೃತದೇಹದ ಮಾಂಸವನ್ನು ತಿನ್ನುತ್ತಿರುವ ದೃಶ್ಯವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆ ಮಧ್ಯ ಪ್ರದೇಶದ ಉಜ್ಜಯಿನಿನಲ್ಲಿ ನಡೆದಿದ್ದು ಮಹಿಳೆಯನ್ನು ಕಾಳಿ ನಂದ್ ಗಿರಿ ಎಂದು ಗುರುತಿಸಲಾಗಿದೆ. ಆಕೆ ಉರಿಯುತ್ತಿರುವ ಚಿತೆಯ ಹತ್ತಿರ ನಿಂತು ಮೂಳೆಗಳು ಮತ್ತು ತಲೆಬುರುಡೆಗಾಗಿ ಹುಡುಕುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

Loading...