ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಒಂದೇ ಯುವಕನ ಜೊತೆ ಮದುವೆಯಾದ ಮೂವರು ಸಹೋದರಿಯರು! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಒಬ್ಬನೇ ಯುವಕನನ್ನು ವರಿಸಿದ ಮೂವರು ಸೋದರಿಯರು! ಕಾರಣವೇನು ಗೊತ್ತಾ?

Viral Video: ಈ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಚರ್ಚೆಗೆ ಒಳಪಟ್ಟ ವಿಚಾರವಾಗಿದೆ. ಅಪ್ರಾಪ್ತ ಯುವಕನನ್ನು ವರಿಸಿದ ಮಹಿಳೆ, ವೃದ್ದನನ್ನು ಪ್ರೀತಿಸಿದ ಯುವತಿ ಹೀಗೆ ಇಂತಹ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು ಮೂವರು ಸ್ವಂತ ಅಕ್ಕ-ತಂಗಿಯರು ಒಬ್ಬ ಯುವಕನನ್ನೇ ಮದುವೆಯಾಗಿದ್ದಾರೆ. ಒಬ್ಬರಿಗೊಬ್ಬರು ದೂರವಾಗಿ ಇರಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ಹೆಜ್ಜೆ ಇಟ್ಟಿದ್ದಾರೆ.

ಮಳೆ ಬರ್ತಿದೆ ವರ್ಕ್‌ ಫ್ರಾಂ ಹೋಂ ಕೊಡಿ ಎಂದ ಉದ್ಯೋಗಿಗೆ ಕಂಪನಿ ಹೇಳಿದ್ದೇನು? ವೈರಲ್‌ ಆಯ್ತು ಪೋಸ್ಟ್‌

ತೀವ್ರವಾದ ಮಳೆಯಲ್ಲೂ WFH ನಿರಾಕರಣೆ ಮಾಡಿದ ಐಟಿ ಕಂಪನಿ: ಉದ್ಯೋಗಿ ಬೇಸರ

Viral News: ಗುಜರಾತ್ ನಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ನಡುವೆಯೂ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನಿರಾಕರಣೆ ಮಾಡಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆಯ ಅಭಾವದಿಂದ ಅಸ್ತ ವ್ಯಸ್ತಗೊಂಡಿದ್ದು ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್‌ಗಳಿಂದಾಗಿ ಸಾವಿರಾರು ಜನರಿಗೆ ದೈನಂದಿನ ಪ್ರಯಾಣ ಕಷ್ಟಕರವಾಗಿದೆ. ಇದಕ್ಕಾಗಿ ಕಂಪನಿಯ ಬಹಳಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೇಳಿದ್ದು ಮ್ಯಾನೇಜರ್ ಇದನ್ನು ನಿರಾಕರಣೆ ಮಾಡಿದ್ದಾರೆ.

ತುಂಬಿ ಹರಿಯುತ್ತಿರುವ ಅಪಾಯಕಾರಿ ನದಿಯಲ್ಲಿ ಯುವಕರ ಹುಚ್ಚಾಟ: ವಿಡಿಯೊ ಶೇರ್ ಮಾಡಿ ಎಚ್ಚರಿಕೆ ನೀಡಿದ ಪೊಲೀಸ್!

ತುಂಬಿ ಹರಿಯುವ ನದಿಗೆ ಜಿಗಿದ ಯುವಕರು; ವಿಡಿಯೋ ನೋಡಿ

Viral Video: ಯುವಕರ ಗುಂಪೊಂದು ತೀವ್ರವಾಗಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವಿಡಿಯೊ ವೈರಲ್ ಆಗಿದ್ದು ನೀರಿನ ರಭಸದ ಪ್ರವಾಹದಲ್ಲಿ ಪ್ರಾಣದ ಭಯ ಇಲ್ಲದೆ ಈಜಾಡುತ್ತಿದ್ದಾರೆ. ಈ ದೃಶ್ಯ ಎಷ್ಟು ಅಪಾಯಕಾರಿ ಇತ್ತು ಅಂದ್ರೆ ಪರಿಣಿತ ಈಜುಗಾರರೂ ಸಹ ಇಂತಹ ರಭಸದ ಪ್ರವಾಹದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಈ ವಿಡಿಯೋವನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ಪ್ರವಾಸಿಗರಿಗೆ ನೀಡಿದ್ದಾರೆ‌.

ಮೋದಿ ಅನುಮತಿ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆಗೆ ಸೇನಾಧಿಕಾರಿ ಆದೇಶ  ? ಏನಿದು ವೈರಲ್‌ ಸುದ್ದಿ

ಮೋದಿ ಆದೇಶದ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆ?

NEET Exam Protest: ನೀಟ್‌ ಪರೀಕ್ಷೆಯ ಅಕ್ರಮದ ಕುರಿತು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಕಡೆ ಲಾಠಿ ಚಾರ್ಜ್‌ ನಡೆಸಲಾಗಿದೆ. ಪ್ರತಿಭಟನಾಕಾರರು ದೆಹಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಸರ್ಕಾರ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಭದ್ರತಾ ಪಡೆಗಳನ್ನು ನಿಯೋಜಿಸಿದೆ.

ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 67,000 ರೂ. ಮೌಲ್ಯದ ಪಿಜ್ಜಾ ವಿತರಿಸಿದ ಯುವಕ!

ದೆಹಲಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗೆ ಪಿಜ್ಜಾ ವಿತರಿಸಿದ ಯುವಕ

Viral News: ದೆಹಲಿಯಲ್ಲಿ ಪ್ರತಿಭಟನಾ ಕಿಚ್ಚು ಹೆಚ್ಚುತ್ತಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತದೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದು  ಪೊಲೀಸರು ಪ್ರತಿಭಟನಾಕರರನ್ನು ತಡೆಯಲು ತೀವ್ರ ಹರಸಾಹಸ ಪಡಬೇಕಾಯಿತು. ಈ ನಡುವೆ ಹೋರಾಟಕ್ಕೆ ನಾಗಾಲ್ಯಾಂಡ್ ನಲ್ಲಿರುವ ಇದ್ದ ಯುವಕ ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದ ಕಾರಣ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ 67,000 ಮೌಲ್ಯದ 150 ಚೀಸ್ ಬರ್ಸ್ಟ್ ಪೀಜ್ಜಾ ಆರ್ಡರ್ ಅನ್ನು ತಲುಪಿಸುವ ಮೂಲಕ ಬೆಂಬಲ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ : ಪ್ರಾಣದ ಹಂಗು ತೊರೆದು 7 ತಿಂಗಳ ಮಗುವನ್ನು ಕಾಪಾಡಿದ ಆಂಬ್ಯುಲೆನ್ಸ್ ಸಿಬ್ಬಂದಿ!

ಭೂಕುಸಿತ ನಡುವೆ 7 ತಿಂಗಳ ಮಗುವನ್ನು ರಕ್ಷಣೆ ಮಾಡಿದ ಆಂಬ್ಯುಲೆನ್ಸ್ ಸಿಬ್ಬಂದಿ

Viral Video: ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಭೂಕುಸಿತ ಉಂಟಾಗಿದೆ. ಕಿರಿದಾದ ಬೆಟ್ಟ ಮಾರ್ಗಗಳು, ದೊಡ್ಡ ಬಂಡೆಗಳು ನೋಡನೋಡುತ್ತಿದ್ದಂತೆ ಉರುಳಿ ಬೀಳುತ್ತಿವೆ. ಭೂ ಕುಸಿತದಿಂದಾಗಿ ರಸ್ತೆಯೂ ಸಂಪೂರ್ಣ ಜಖಂಗೊಂಡಿದೆ. ಈ ಅಪಾಯದ ಪರಿಸ್ಥಿತಿಯಲ್ಲೂ ಆಂಬ್ಯುಲೆನ್ಸ್ ಸಿಬ್ಬಂದಿ, ಪ್ರಾಣ‌ವನ್ನೇ ಪಣಕ್ಕಿಟ್ಟು ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಇವರ ನಿಸ್ವಾರ್ಥ ಬದ್ಧತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸಿಲ್ಲ; ಕೇಂದ್ರ ಸರ್ಕಾರದ ಭರವಸೆ: ಸೋನಮ್ ವಾಂಗ್ಚುಕ್

ಸೋನಮ್ ವಾಂಗ್ಚುಕ್ ಗೆ ಸರ್ಕಾರ ನೀಡಿರುವ ಭರವಸೆ ಏನು?

ಕೇಂದ್ರ ಸರ್ಕಾರ ನೀಡಿರುವ ಭರವಸೆಯ ಕಾರಣದಿಂದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಗುರುವಾರ ಕಳೆದ 26 ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸು ದಾಖಲಿಸುವುದಿಲ್ಲ ಎಂದು ಹೇಳಿರುವುದು ತಾನು ಉಪವಾಸ ಅಂತ್ಯಗೊಳಿಸಲು ಮುಖ್ಯ ಕಾರಣ ಎಂದಿರುವ ಅವರು ಸರ್ಕಾರ ನೀಡಿರುವ ಭರವಸೆಯ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ʼʼಅಪ್ಪ ನನಗಾಗಿ 5 ರುಪಾಯಿ ಉಳಿಸಲು ನಡೆದುಕೊಂಡು ಹೋಗುತ್ತಿದ್ದರುʼʼ: ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗನ ಭಾವುಕ ಪೋಸ್ಟ್

ತನಗಾಗಿ ತ್ಯಾಗ ಮಾಡಿದ ಅಪ್ಪನನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ದು ಮಗ

Viral Video: ಮಕ್ಕಳ ಒಳಿತಿಗಾಗಿ ಪೋಷಕರು ಸಾಕಷ್ಟು ತ್ಯಾಗ ಮಾಡಿ ಶಿಕ್ಷಣ ಒದಗಿಸುತ್ತಾರೆ. ಇಡೀ ಜೀವನವನ್ನು ತಮಗಾಗಿ ಮೀಸಲಿಟ್ಟ ಹೆತ್ತವರನ್ನು ಖುಷಿಯಾಗಿ ಇರಿಸುವುದು ಮಕ್ಕಳ ಕರ್ತವ್ಯ ಕೂಡ ಹೌದು. ಇದಕ್ಕೆ ಪೂರಕವಾಗಿ ಯುವಕನೊಬ್ಬ ತನಗೆ ಕಷ್ಟಪಟ್ಟು ಓದಿಸಿದ ತಂದೆಯನ್ನು ವಂದೇ ಭಾರತ್ ರೈಲಿನಲ್ಲಿ ಕರೆದೊಯ್ಯುವ ಮೂಲಕ ಭಾವುಕ ಪೋಸ್ಟ್ ಶೇರ್ ಮಾಡಿದ್ದಾನೆ. ತನ್ನ ತಂದೆ ರಿಕ್ಷಾ ದರದಲ್ಲಿ 5 ರುಪಾಯಿ ಉಳಿಸಲು ತನಗಾಗಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು.‌ ಇಂದು ಅವರನ್ನು ವಂದೇ ಭಾರತ್ ರೈಲಿನಲ್ಲಿ ಕರೆದುಕೊಂಡು ಹೋಗಲು ಹೆಮ್ಮೆ ಎನಿಸಿದೆ ಎಂದಿದ್ದಾರೆ.

ʼʼಭಾರತದ ಅತ್ಯಂತ ಸುಂದರ ನಗರʼʼ: ಜಮ್‌ಶೆಡ್‌ಪುರದ ಸೌಂದರ್ಯಕ್ಕೆ ಮನಸೋತ ಅಮೆರಿಕನ್ ವ್ಲಾಗರ್‌

ಜಾರ್ಖಂಡ್‌ ನ ಹಸಿರು ತಾಣಕ್ಕೆ ಭೇಟಿ ನೀಡಿ ಅಮೆರಿಕನ್ ವ್ಲಾಗರ್‌ ಮೆಚ್ಚುಗೆ

Viral Video: ಅಮೆರಿಕದ ಖ್ಯಾತ ಟ್ರಾವೆಲರ್‌ ಒಬ್ಬರು ಭಾರತಕ್ಕೆ ಭೇಟಿ ನೀಡಿದ್ದು ಜಾರ್ಖಂಡ್‌ನ ಪ್ರಸಿದ್ಧ ನಗರ ಜಮ್‌ಶೆಡ್‌ಪುರದ ಹಸಿರು ತಾಣ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರು ಈ ನಗರಕ್ಕೆ ಭೇಟಿ ನೀಡಿದ ರೋಮಾಂಚಕ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಈ ಸ್ಥಳ ಎಂದಿಗೂ ತಮ್ಮ ಭಾರತದ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಅಂತಿಮವಾಗಿ ಭಾರತದಲ್ಲಿ ಇದು ನೆಚ್ಚಿನ ಸ್ಥಳಗಳಲ್ಲಿ ಒಂದಾಯಿತು ಎಂದು ಹೇಳಿಕೊಂಡಿದ್ದಾರೆ.

"ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ": ಟ್ರಾಫಿಕ್ ಜಾಮ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ನಿರ್ವಹಿಸಿದ ಉದ್ಯೋಗಿ

ಬೈಕ್‌ನಲ್ಲಿ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ: ವಿಡಿಯೊ ವೈರಲ್

Viral Video: ಟ್ರಾಫಿಕ್ ಜಾಮ್‌ಗೆ ಸಿಲುಕಿದ ವ್ಯಕ್ತಿಯೊಬ್ಬ ಸಿಕ್ಕ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದು, ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ ಎಂದು ಇದನ್ನು ಕರೆದಿದ್ದಾರೆ.

ಮಲಗಿದ್ದ ಬೀದಿ ನಾಯಿಗೆ ಕಲ್ಲು ಹೊಡೆದ ಬಾಲಕ: ಮಗ ಮಾಡಿದ ಕೃತ್ಯ ನೋಡಿ ನಿರ್ಲಕ್ಷ್ಯ ಮಾಡಿದ ಪೋಷಕರು, ವಿಡಿಯೋ ನೋಡಿ

ಮಲಗಿದ್ದ ಬೀದಿ ನಾಯಿಗೆ ಕಲ್ಲು ಎಸೆದ ಪುಟ್ಟ ಬಾಲಕ: ನೆಟ್ಟಿಗರು ಕಿಡಿ

Viral Video: ದೆಹಲಿಯ ಒಂದು ವಿಡಿಯೋ ಈಗ ಪೋಷಕರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನೊಬ್ಬ ಹೆತ್ತವರ ಮುಂದೆಯೇ ಬೀದಿ ನಾಯಿಗೆ ಕಲ್ಲು ಎಸೆದಿದ್ದಾನೆ. ನಾಯಿಯೂ ಯಾವುದೇ ರೀತಿ ತೊಂದರೆ ಪಡಿಸದೇ ನಿದ್ರಿಸುತ್ತಿತ್ತು. ಆದರೆ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ನಾಯಿಗೆ ಎಸೆದಿದ್ದಾನೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್‌ನ ನೈರ್ಮಲ್ಯ ಕಂಡು ಅಚ್ಚರಿಗೆ ಒಳಗಾದ ವಿದೇಶಿ ಮಹಿಳೆ: ವಿಡಿಯೊದಲ್ಲಿ ಹೇಳಿದ್ದೇನು?

ವಂದೇ ಭಾರತ್ ಸ್ಲೀಪರ್ ಕೋಚ್ ನ ಸೌಲಭ್ಯ ಬಗ್ಗೆ ಕೊಂಡಾಡಿದ ವಿದೇಶಿ ಮಹಿಳೆ!

Viral Video: ಭಾರತೀಯ ರೈಲ್ವೆ ಸೇವೆಯಾದ 'ವಂದೇ ಭಾರತ್ ಸ್ಲೀಪರ್' ಕೋಚ್' ನ ಸ್ವಚ್ಛತೆಯ ಬಗ್ಗೆ ವಿದೇಶಿ ಮಹಿಳೆ ಕೊಂಡಾಡಿದ್ದಾರೆ. ಹಳೆಯ ಕೋಚ್ , ಕೊಳಕು ಶೌಚಾಲಯ ಇರಬಹುದು ಎಂದು ಊಹಿಸಿ ರೈಲು ಹತ್ತಿದ ಮಹಿಳೆ ಅಲ್ಲಿನ ಗುಣಮಟ್ಟ ಕಂಡು ನಿಜಕ್ಕೂ ಆಶ್ಚರ್ಯ ವೆನೆಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಮೇಲ್ವಿಚಾರಕ: 93 ಉತ್ತರ ಪತ್ರಿಕೆ ಸೀಜ್!

ರಾಜಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಮೇಲ್ವಿಚಾರಕ

Viral News: ರಾಜಸ್ಥಾನದಲ್ಲಿ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಜೋಯಿ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಬೆಳಿಗ್ಗೆ 7 ರಿಂದ 10 ರವರೆಗೆ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಬ್ಬರು ಇನ್ವಿ ಜಿಲೇಟರ್‌ಗಳು ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿರುವ ದೃಶ್ಯ ಕಂಡು ಬಂದಿದೆ. ಶಿಕ್ಷಣದ ಹೆಸರಿನಲ್ಲಿ ಈ ರೀತಿ ಆಕ್ರಮಗಳು ನಡೆಯುತ್ತಿರುವ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

"ವಿದೇಶದಲ್ಲಿರುವ ವಿದ್ಯಾರ್ಥಿಗಳು ಒತ್ತಡದಲ್ಲೇ ಬದುಕಬೇಕು": ಕಹಿ ವಾಸ್ತವ ತೆರೆದಿಟ್ಟ ಭಾರತೀಯ ಯುವಕ

ವಿದೇಶದಲ್ಲಿನ ಭಾರತೀಯ ವಿದ್ಯಾರ್ಥಿಗಳ ಕಷ್ಟ ವಿವರಿಸಿದ ಯುವಕ

Viral Video: ಕನಸು ನನಸು ಮಾಡಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌, ರಷ್ಯಾ, ಅಮೆರಿಕದಂತಹ ದೇಶಗಳಿಗೆ ಶಿಕ್ಷಣ ಪಡೆಯಲು ಹೋಗುತ್ತಾರೆ. ಆದರೆ ಅಲ್ಲಿನ ಜೀವನ ಅಂದುಕೊಂಡಷ್ಟು ಸುಲಭವಲ್ಲ. ದುಬಾರಿ ಜೀವನ ವೆಚ್ಚದ ಜತೆಗೆ ಬದುಕು ಸಾಗಿಸಲು ಬಹಳಷ್ಟು ಪರದಾಡಬೇಕಾಗುತ್ತದೆ. ಇದೀಗ ಯುರೋಪಿನಲ್ಲಿ ವಾಸಿಸುವ ಭಾರತೀಯ ಯುವಕನೊಬ್ಬ ಜನರು ನಿರೀಕ್ಷಿಸುವುದಕ್ಕಿಂತ ಹೆಚ್ಚು ಇಲ್ಲಿನ ಜೀವನ ಕಠಿಣವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದೆಂಥ ದುರಂತ? ಕೋಟಿ ರುಪಾಯಿ ಕೊಟ್ಟು ಖರೀದಿಸಿದ ಕನಸಿನ ಮನೆ ಜಲಾವೃತ: ಬಿಲ್ಡರ್ ಭ್ರಷ್ಟಾಚಾರಕ್ಕೆ ದೆಹಲಿ ಕುಟುಂಬ ಬೇಸರ

ಕಳಪೆ ಕಾಮಗಾರಿಯಿಂದ ಸೋರುತ್ತಿರುವ ದುಬಾರಿ ವೆಚ್ಚದ ಮನೆ! ಮಾಲಕ ಕಣ್ಣೀರು

Viral Video: ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ಉಳಿತಾಯ ಮಾಡಿ, ಇಲ್ಲವೇ ಸಾಲ ಮಾಡಿಯಾದರೂ ಸ್ವಂತ ಮನೆ ನಿರ್ಮಾಣ ಮಾಡುವವರು ಇದ್ದಾರೆ. ಆದರೆ ಇಷ್ಟೆಲ್ಲ ಶ್ರಮಪಟ್ಟ ಮನೆಯಲ್ಲಿ ಕಳಪೆ ಕಾಮಗಾರಿ ನಡೆದರೆ ಹೇಗಾಗಬೇಡ ಅಲ್ಲವೆ? ದೆಹಲಿಯ ಕುಟುಂಬವೊಂದು ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿ ಖರೀದಿಸಿದ ಮನೆಯೊಂದರಿಂದ ನೀರು ಜಲಧಾರೆಯಂತೆ ಸುರಿದಿದೆ. ಫ್ಲಾಟ್‌ನ ಮೇಲ್ಛಾವಣಿ ಒಡೆದು ಮನೆಯೊಳಗೇ ನೀರು ತುಂಬಿಕೊಂಡಿದೆ.

‘'ಬ್ಯಾಟ್‌ಮ್ಯಾನ್‌ಗೂ ನ್ಯಾಯ ಬೇಕು": ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸೂಪರ್‌ಹೀರೋ; ವಿಡಿಯೊ ಇಲ್ಲಿದೆ

ಇಂದೋರ್‌ನ ನೀಟ್ ಪ್ರತಿಭಟನೆಯಲ್ಲಿ ಗಮನ ಸೆಳೆದ ʼಬ್ಯಾಟ್‌ಮ್ಯಾನ್‌ʼ

Viral Video: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶೇಷ ವೇಷಧಾರಿಯೊಬ್ಬ ಗಮನ ಸೆಳೆದಿದ್ದಾನೆ. ಹೌದು, ಬ್ಯಾಟ್‌ಮ್ಯಾನ್‌ನಂತೆ ವೇಷ ಧರಿಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವ ಯುವಕನ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಬ್ಯಾಟ್‌ಮ್ಯಾನ್ ವೇಷಧಾರಿ ಕಾಣಿಸಿಕೊಂಡಿದ್ದಾನೆ.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಸಿಜೆಪಿ ಪ್ರತಿಭಟನೆಗಾಗಿ ದೂರದ ಆಸ್ಟ್ರೇಲಿಯಾದಿಂದ ಆಗಮಿಸಿದ ಯುವಕ

CJP Protest In Delhi: ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಹೋರಾಟ ನಡೆಯುತ್ತಿದೆ. ಸಿಜೆಪಿ ಆರಂಭಿಸಿರುವ ಈ ಪ್ರತಿಭಟನೆಗೆ ಯುವಜನತೆ, ಸೆಲೆಬ್ರಿಟಿಗಳ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಯುವಕನೊಬ್ಬ ಆಸ್ಟ್ರೇಲಿಯಾದಿಂದ ಸುಮಾರು 1 ಲಕ್ಷ ಖರ್ಚು ರುಪಾಯಿ ಖರ್ಚು ಮಾಡಿಕೊಂಡು ಬಂದಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.

ಭುಗಿಲೆದ್ದ ಆಕ್ರೋಶ; ಪುಣೆ ಬಾಲಕನನ್ನು ಹತೈಗೈದ ಅಪ್ರಾಪ್ತನಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಿದ ಮಹಿಳೆ: ವಿಡಿಯೊ ಇಲ್ಲಿದೆ

ಕೊಲೆ ಎಸಗಿದ ಅಪ್ರಾಪ್ತನಿಗೆ ಚಪ್ಪಲಿ ಏಟು ನೀಡಿದ ಮಹಿಳೆ

Viral Video: ಮಹಾರಾಷ್ಟ್ರದ ಪುಣೆಯ ಕಾತ್ರಾಜ್‌ನಲ್ಲಿ ಇತ್ತೀಚೆಗೆ ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 17 ವರ್ಷದ ಬಾಲಕನ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ 17 ವರ್ಷದ ಗಣೇಶ್ ರವೀಂದ್ರ ಮಾಲ್ವೆ ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ ಮೆರವಣಿಗೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೇಳೆ ಮಹಿಳೆಯೊಬ್ಬರು ಅಪ್ರಾಪ್ತರ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ಜನ್ಮ ದಿನಾಚರಣೆ: ಪುಣೆಯಲ್ಲಿ 30 ಅಡಿ ಕಟೌಟ್‌ಗೆ ಎನ್‌ಸಿಪಿ ಕಾರ್ಯಕರ್ತರಿಂದ ಹಾಲಿನ ಅಭಿಷೇಕ

ಅಜಿತ್ ಪವಾರ್ 30 ಅಡಿ ಕಟೌಟ್‌ಗೆ ಹಾಲಿನ ಅಭಿಷೇಕ

Viral Video: ಮಹಾರಾಷ್ಟ್ರ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ ಜನ್ಮ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಗಿದೆ. ಈ ನಡುವೆ ಎನ್‌ಸಿಪಿ ಕಾಂಗ್ರೆಸ್ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ 30 ಅಡಿ ಎತ್ತರದ ಅಜಿತ್ ಪವಾರ್ ಕಟೌಟ್‌ಗೆ ಹಾಲಿನ ಅಭಿಷೇಕ ಅರ್ಪಣೆ ಮಾಡಿದ್ದಾರೆ. ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಜನಸಂಖ್ಯೆ ನೆರೆದಿತ್ತು. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಪ್ರತಿಭಟನೆಯ ನಡುವೆ ಬರ್ಗರ್ ತಿಂದ ಸಿಜೆಪಿ ವಕ್ತಾರ ವಿಜೇತ ದಹಿಯಾಗೆ ಕೋಕ್

ಬರ್ಗರ್ ವಿವಾದ: ಸಿಜೆಪಿ ವಕ್ತಾರ ವಿಜೇತ ದಹಿಯಾ ಹುದ್ದೆಯಿಂದ ವಜಾ

Vijeta Dahiya: ದೆಹಲಿ ಪ್ರತಿಭಟನೆಯ ವೇಳೆ ಮಾಲ್‌ನಲ್ಲಿ ಬರ್ಗರ್ ತಿನ್ನುತ್ತಿರುವ ವಿಡಿಯೊ ವೈರಲ್ ಆದ ಬಳಿಕ ಸಿಜೆಪಿ ತನ್ನ ವಕ್ತಾರ ವಿಜೇತ ದಹಿಯಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ದಹಿಯಾ ತಾವು ಪ್ರತಿಭಟನೆ ಬಳಿಕ ಹಸಿವಾಗಿತ್ತೆಂದು ಆಹಾರ ಸೇವಿಸಲು ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದರೂ ಪಕ್ಷ ಅವರ ನಡೆ ಅಸಂವೇದನಾಶೀಲ ಎಂದು ಶಿಸ್ತು ಕ್ರಮ ಕೈಗೊಂಡಿದೆ.

ಡಾರ್ಜಿಲಿಂಗ್‌ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್: ಪ್ರಪಾತಕ್ಕೆ ಜಾರುತ್ತಿದ್ದಂತೆ ನಿಯಂತ್ರಣಕ್ಕೆ ತಂದ ರೈಡರ್‌; ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವಿಡಿಯೊ ವೈರಲ್‌

ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಬೈಕರ್‌

Viral Video: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಕುರ್ಸಿಯಾಂಗ್ ಪ್ರದೇಶದ ಮಳೆಕಾಡಿನ ರಸ್ತೆಯೊಂದರಲ್ಲಿ ಬೈಕರ್ ಒಬ್ಬರು ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಭಕ್ತಿಯೋ ಶೋಷಣೆಯೋ? ಜುನಾಗಢದ ದುರ್ಗದ ಹಾದಿಯಲ್ಲಿ ಭಕ್ತನನ್ನು ಹೊತ್ತು ಸಾಗಿದ ಕಾರ್ಮಿಕರು

ಭಕ್ತನನ್ನು ದುರ್ಗದ ಹಾದಿಯಲ್ಲಿ ಹೊತ್ತು ಸಾಗಿದ ಕಾರ್ಮಿಕರು: ವಿಡಿಯೊ ವೈರಲ್

Viral Video: ಆಧುನಿಕ ಯುಗದಲ್ಲಿ ಮಾನವನನ್ನು ಮಾನವನೇ ಹೊರುವ ರೀತಿಗೆ ಸಮಾಜ ನಿಜಕ್ಕೂ ಒಪ್ಪುತ್ತಾ? ಇಂತಹದೊಂದು ಗಂಭೀರ ಚರ್ಚೆಗೆ ಕಾರಣವಾಗುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಇದು ಭಕ್ತಿಯೇ ಅಥವಾ ಮಾನವ ಶೋಷಣೆಯೇ ಎಂದು ಪ್ರಶ್ನೆ ಮೂಡುವಂತಾಗಿದೆ. ಗುಜರಾತ್‌ನ ಜುನಾಗಢದ ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತನೊಬ್ಬನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಲ್ಕು ಜನ ಕಾರ್ಮಿಕರು ಹೊತ್ತುಕೊಂಡು ಸಾಗಿರುವ ವಿಡಿಯೊ ಸದ್ಯ ಚರ್ಚೆಗೆ ಕಾರಣವಾಗಿದೆ.

Viral Video: ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ನಾಗರಿಕ ಪ್ರಜ್ಞೆಯ ಕೊರತೆ: ಮದ್ಯದ ಬಾಟಲ್‌ ರಸ್ತೆಗೆ ಎಸೆದ ವ್ಯಕ್ತಿ

ಸಾರ್ವಜನಿಕ ಸ್ಥಳದಲ್ಲಿ ವಹಿಸಬೇಕಾದ ಜವಾಬ್ದಾರಿ ಹಾಗೂ ವರ್ತಿಸಬೇಕಾದ ರೀತಿಯನ್ನು ನಾವಿಂದು ಮರೆತಿದ್ದೇವೆ. ಅದರಲ್ಲೂ ಭಾರತೀಯರ ನಡವಳಿಕೆ ಬಗ್ಗೆ ಇತ್ತೀಚಿನ ದಿನದಲ್ಲಿ ದೂರು ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ವ್ಯಕ್ತಿಯೊಬ್ಬನ ಬೇಜವ್ದಾರಿಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮಧ್ಯವಯಸ್ಕನೊಬ್ಬ ರಸ್ತೆಗೆ ಗಾಜಿನ ಮದ್ಯದ ಬಾಟಲ್‌ ಎಸೆದಿದ್ದಾನೆ. ಈ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ಒಂದು ಪೆಗ್ ನೀಡಬೇಕಿತ್ತು ಎಂದ ನೆಟ್ಟಿಗರು

ವೈನ್ ಶಾಪ್‌ಗೆ ನುಗ್ಗಿ ಚಿರತೆ ದಾಳಿ; ವೈರಲ್‌ ವಿಡಿಯೊ ನೋಡಿ!

Viral Video: ಕಾಡಿನಿಂದ ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ರಾಜಸ್ಥಾನದ ಟೋಂಕ್ ಜಿಲ್ಲೆಯ ಎಸ್‌ಬಿಐ ಚೌರಸ್ತಾ ಬಳಿಯ ವೈನ್ ಶಾಪ್‌ಗೆ ನುಗ್ಗಿದೆ. ಅಲ್ಲಿ ಸಿಕ್ಕ ಸಿಕ್ಕ ಬಾಟಲಿಗಳನ್ನು ಪುಡಿಮಾಡಿ ಮಾರಾಟಗಾರನ ಮೇಲೆಯೂ ದಾಳಿ ಮಾಡಿದೆ. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರು ಗಾಯಗೊಂಡಿದ್ದು ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ಈ ಘಟನೆಯೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ.

Loading...