ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಲಂಡನ್-ಬಾಂಗ್ಲಾದೇಶ ಫ್ಲೈಟ್‌ನಲ್ಲಿ  ಪ್ರಯಾಣಿಕರಿಬ್ಬರ ಭೀಕರ ಗಲಾಟೆ: ವಿಡಿಯೊ ವೈರಲ್

ವಿಮಾನ ಪ್ರಯಾಣದ ವೇಳೆ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿ ಜಗಳ!

Viral News: ವಿಮಾನದಲ್ಲಿ ಪ್ರಯಾಣದ ವೇಳೆ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿ ಜಗಳ ಉಂಟಾದ ಅಘಾತಕಾರಿ ಘಟನೆಯೊಂದು ನಡೆದಿದೆ. ಇದರಿಂದ ಸಹ-ಪ್ರಯಾಣಿಕರು ಆತಂಕ ಕ್ಕೊಳಗಾಗಿದ್ದು ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ತಿಳಿಗೊಳಿಸಲು ಹರಸಾಹಸ ಪಟ್ಟಿರುವುದು ಕಂಡುಬಂದಿದೆ.

ಸ್ತ್ರೀಯರಿಗೆ ಸುರಕ್ಷತೆ ಏಲ್ಲಿದೆ? ದೆಹಲಿಯಲ್ಲಿ ತಡರಾತ್ರಿ ಮಹಿಳೆಯ ವೇಷ ಧರಿಸಿ ಸ್ಕೂಟರ್ ಚಲಾಯಿಸಿದ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಸುರಕ್ಷತೆ ಪರಿಶೀಲಿಸಲು ಮಹಿಳೆಯ ವೇಷ ಧರಿಸಿ ರಾತ್ರಿ ಸವಾರಿ ಮಾಡಿದ ವ್ಯಕ್ತಿ

Viral News: ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಅರಿಯಲು ಕಂಟೆಂಟ್ ಕ್ರಿಯೇಟರ್ ವೊಬ್ಬರು ವಿಶೇಷ ಪ್ರಯೋಗ ಮಾಡಿದ್ದಾರೆ. ಅವರು ಮಹಿಳೆಯ ಉಡುಪನ್ನು ಧರಿಸಿ, ಮೇಕಪ್ ಮಾಡಿಕೊಂಡು ದುಪಟ್ಟಾದಿಂದ ಮುಖವನ್ನು ಮುಚ್ಚಿಕೊಂಡು ಸುಮಾರು ಎರಡು ಗಂಟೆಗಳ ಕಾಲ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಚಲಾಯಿಸಿದ್ದಾರೆ. ಈ ವೇಳೆ ತಮಗಾದ ಅನುಭವವನ್ನು ಸೆರೆಹಿಡಿದು ಶೇರ್ ಮಾಡಿದ್ದಾರೆ.

ಬಿಹಾರ ನೆರೆ ಸಂತ್ರಸ್ತರಿಗೆ ಹಣ್ಣು ಕೊಡಲು ಬಂದ ಹರಿಯಾಣದ ಸ್ವಯಂಸೇವಕ: ಶಿಸ್ತು ಮರೆತು ಕಸಿದುಕೊಂಡ ಜನ!

ಶಿಸ್ತು ಕಾಪಾಡದೇ ಹಣ್ಣುಗಳನ್ನು ಕಸಿದುಕೊಂಡ ಬಿಹಾರದ ನೆರೆ ಸಂತ್ರಸ್ತರು!

Viral News: ಇತ್ತೀಚೆಗೆ ಬಿಹಾರದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ್ಣುಗಳನ್ನು ಹಂಚಲೆಂದು ಹರಿಯಾಣದಿಂದ ಬಂದಿದ್ದ 'ಹರ್ ಮೈದಾನ್ ಫತೇಹ್ ಸೊಸೈಟಿ' ಎನ್‌ಜಿಒ ಸಂಸ್ಥೆಯ ಅಧ್ಯಕ್ಷ ಸಹಜ್ ದುಗ್ಗಲ್ ಅವರು ಜನರ ಹತ್ತಿರ ತೆರಳಿದ್ದರು. ಆದರೆ ಅಲ್ಲಿದ್ದ ಜನರು ಶಿಸ್ತು ಪಾಲಿಸದೇ ಹಣ್ಣುಗಳನ್ನು ಕಸಿದುಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.

ಪತ್ನಿಗೆ ಐಫೋನ್‌ ಕೊಡಿಸಲು ಚಿನ್ನವನ್ನೇ ಮಾರಿದ ಪತಿ; ಬೆಳಿಗ್ಗೆಯಿಂದಲೇ ಕ್ಯೂ!

ಪತ್ನಿಗೆ ಐಫೋನ್‌ ಕೊಡಿಸಲು ಚಿನ್ನವನ್ನೇ ಮಾರಿದ ಪತಿ

ಭಾರತದಲ್ಲಿ ಆಪಲ್‌ನ ಹೊಸ iPhone 18 Pro ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಮುಖ ನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಐಫೋನ್ ಕೊಳ್ಳಲು ಕಾಯುತ್ತಿದ್ದಾರೆ. ಈ ನಡುವೆ ನೋಯ್ಡಾದಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಗೆ ಹೊಸ ಐಫೋನ್ ಕೊಡಿಸಲು ಚಿನ್ನವನ್ನು ಮಾರಿರುವ ಘಟನೆ ನಡೆದಿದೆ. ಲಕ್ಷ ದಾಟಿ ಭಾರಿ ಬೆಲೆಯಿದ್ದರೂ ದೇಶಾದ್ಯಂತ ಆ್ಯಪಲ್ ಫೋನ್‌ಗಳಿಗಿರುವ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.

ಸೂಟ್‌ಕೇಸ್‌ನಲ್ಲಿ ರೈಲ್ವೆ ಬೆಡ್‌ಶೀಟ್ ಬಚ್ಚಿಟ್ಟ ಜೋಡಿ: ಟಿಟಿಇ ಹೆಚ್ಚುವರಿ ಮೊತ್ತ ಕೇಳಿದ್ದಕ್ಕೆ ಕದ್ದೆವು ಎಂದು ಸಮರ್ಥನೆ!

ರೈಲ್ವೆ ಬೆಡ್‌ಶೀಟ್ ಕದ್ದ ಜೋಡಿ: ವರ್ತನೆ ವಿರುದ್ಧ ನೆಟ್ಟಿಗರು ಕಿಡಿ!

Viral News: ರೈಲು ಪ್ರಯಾಣವೊಂದರಲ್ಲಿ ರೈಲ್ವೆಗೆ ಸೇರಿದ ಬೆಡ್‌ಶೀಟ್ ಕವರ್‌ ಗಳನ್ನು ಜೋಡಿ ಯೊಂದು ಕದ್ದೊಯ್ದಿರುವ ಘಟನೆಯೊಂದು ನಡೆದಿದೆ‌. ಈ ಬಗ್ಗೆ ಪ್ರಶ್ನೆ ಮಾಡಿದಾಗ ಟಿಟಿಇ ತಮ್ಮಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದರಿಂದಲೇ ತಾವು ಈಸಾಮಗ್ರಿಗಳನ್ನು ತೆಗೆದುಕೊಂಡಿದ್ದಾಗಿ ಮಹಿಳೆ ಸಮರ್ಥನೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ಗೆ ಭಾರತದಲ್ಲಿ ಭಾರೀ ಕ್ರೇಜ್: ಆ್ಯಪಲ್ ಸ್ಟೋರ್‌ಗಳ ಮುಂದೆ ಖರೀದಿಗೆ ಮುಗಿಬಿದ್ದ ಗ್ರಾಹಕರು!

ಐಫೋನ್ 18 ಪ್ರೊ, ಪ್ರೊ ಮ್ಯಾಕ್ಸ್ ಗೆ ದೇಶದೆಲ್ಲೆಡೆ ಭಾರಿ ಡಿಮ್ಯಾಂಡ್!

Viral News: ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಖರೀದಿಸುವ ಬಗ್ಗೆ ಭಾರತೀಯ ಗ್ರಾಹಕರಲ್ಲಿ ಅಪಾರ ಉತ್ಸಾಹವಿದೆ. ಈ ಮೊಬೈಲ್‌ಗಳು ಇಂದು ಮಾರಾಟಕ್ಕೆ ಲಭ್ಯವಿದ್ದು ಇದೀಗ ಮೊಬೈಲ್ ಖರೀದಿ ಮಾಡಲು ದೆಹಲಿ, ನೋಯ್ಡಾ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಆ್ಯಪಲ್ ಮಳಿಗೆಗಳ ಹೊರಗೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.

‘ಅಸ್ಸಲಾಮ್‌ ಅಲೈಕುಮ್’ ಹೇಳಿದ ಐಪಿಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ; ಪಶ್ಚಿಮ ಬಂಗಾಳದಲ್ಲಿ ಚರ್ಚೆಗೆ ಗ್ರಾಸವಾಯ್ತು ಬುಷ್ರಾ ಬಾನು ಪ್ರಕರಣ

ಐಪಿಎಸ್ ಅಧಿಕಾರಿ ಬುಷ್ರಾ ಬಾನುಗೆ ವರ್ಗಾವಣೆ

Bushra Bano: ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ಬುಷ್ರಾ ಬಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯುಪಿಎಸ್‌ಸಿ ಕುರಿತ ವಿಡಿಯೊದಲ್ಲಿ ‘ಅಸ್ಸಲಾಮು ಅಲೈಕುಮ್’, ‘ಇನ್‌ಶಾ ಅಲ್ಲಾ’ ಸೇರಿದಂತೆ ಕೆಲವು ಪದಗಳನ್ನು ಬಳಸಿದ್ದ ವಿಚಾರ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಅವರನ್ನು ಮತ್ತೊಂದು ಹುದ್ದೆಗೆ ವರ್ಗಾವಣೆ ಮಾಡಿದೆ. ಆದರೆ ವರ್ಗಾವಣೆ ಆದೇಶದಲ್ಲಿ ಕಾರಣವಾಗಿ ‘ಸಾರ್ವಜನಿಕ ಹಿತಾಸಕ್ತಿ’ ಎಂದು ಮಾತ್ರ ಉಲ್ಲೇಖಿಸಲಾಗಿದೆ. ವಿಡಿಯೊ ವಿವಾದವೇ ವರ್ಗಾವಣೆಗೆ ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.

ಜಲಪಾತದ ಬಳಿ ಮಗು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ಬಿದ್ದ ಬೃಹತ್‌ ಕಾಳಿಂಗ ಸರ್ಪ; ಮೈ ಜುಂ ಎನಿಸುವ ವಿಡಿಯೊ ವೈರಲ್‌

ಅಂಬೋಲಿ ಜಲಪಾತದಲ್ಲಿ ಮಗು ಹಿಡಿದ ವ್ಯಕ್ತಿ ಮೇಲೆ ಬಿದ್ದ ಹಾವು

Amboli waterfall: ಮಹಾರಾಷ್ಟ್ರದ ಪ್ರಸಿದ್ಧ ಅಂಬೋಲಿ ಜಲಪಾತಕ್ಕೆ ಪ್ರವಾಸ ಹೋಗಿದ್ದ ಕುಟುಂಬವೊಂದಕ್ಕೆ ಅಘಾತವೊಂದು ಎದುರಾಗಿದೆ. ವ್ಯಕ್ತಿಯೊಬ್ಬರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಜಲಪಾತದ ಸೌಂದರ್ಯ ಸವಿಯುತ್ತಿದ್ದಾಗ ಏಕಾಏಕಿ ದೈತ್ಯಾಕಾರದ ಹಾವೊಂದು ಅವರ ಹೆಗಲ ಮೇಲೆ ಬಿದ್ದಿದೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬೀದಿ ಬದಿ ವ್ಯಾಪಾರಿಯ ಆಹಾರವನ್ನು ರಸ್ತೆಗೆ ಎಸೆದು ಹಲ್ಲೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!

ಬೀದಿ ಬದಿ ವ್ಯಾಪಾರಿಯ ಮೇಲೆ ಏಕಾಏಕಿ ದಾಳಿ: ಆರೋಪಿ ವಿರುದ್ಧ ಕಿಡಿ!

Viral News: ಬೀದಿ ಬದಿಯ ಮಾರಾಟಗಾರನೊಬ್ಬನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಏನೂ ಕಾರಣವಿಲ್ಲದೆ ಏಕಾಏಕಿ ಭೇಲ್ ಪುರಿ ಮಾರಾಟಗಾರನ ಮೇಲೆ ಹಲ್ಲೆ ನಡೆಸಿ, ಆತನ ಬಳಿಯಿದ್ದ ತಿನಿಸುಗಳನ್ನು ರಸ್ತೆಗೆ ಎಸೆದಿದ್ದಾನೆ.

ಜಪಾನ್, ಕೊರಿಯಾದ ಅನುಭವ ನೀಡುತ್ತಿದೆ: ದೆಹಲಿ ಮೆಟ್ರೋ ಸ್ವಚ್ಛತೆ ಕಂಡು ವಿದೇಶಿ ಪ್ರವಾಸಿ ಫುಲ್ ಫಿದಾ!

ದೆಹಲಿ ಮೆಟ್ರೋ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ವಿದೇಶಿ ಪ್ರವಾಸಿ

Viral News: ಭಾರತದ ಆಧುನಿಕ ಮೂಲ ಸೌಕರ್ಯ ಹಾಗೂ ಮೆಟ್ರೊದ ಸ್ವಚ್ಚತೆ ಕಂಡು ವಿದೇಶಿ ಪ್ರವಾಸಿಯೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಲ್ಲಿನ ಸಾರಿಗೆ ವ್ಯವಸ್ಥೆಯು ಜಪಾನ್, ದಕ್ಷಿಣ ಕೊರಿಯದಂತ ಸ್ಥಳಗಳನ್ನು ನೆನಪಿಸುತ್ತದೆ. ಅಷ್ಟೇ ಅಲ್ಲದೆ ಕೇವಲ 56 ರೂಪಾಯಿಗೆ ದೆಹಲಿ ಏರ್‌ಪೋರ್ಟ್‌ನಿಂದ ನಗರದ ಕೇಂದ್ರ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಲು ಸಾಧ್ಯ ವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವ್ಯಾನ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು!

ಶಾಲಾ ವ್ಯಾನ್ ಮರಕ್ಕೆ ಡಿಕ್ಕಿ: ಪವಾಡ ಸದೃಶವಾಗಿ ಮಕ್ಕಳು ಪಾರು!

Viral News: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆ ದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ವಿಜಯ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪವಾಡ ಸದೃಶವಾಗಿ ಮಕ್ಕಳು ಪಾರಾಗಿದ್ದಾರೆ.

ಭಾರತದ ಡಿಸೈನ್ ಬಳಸಿದ ಹ್ಯಾಂಡ್ ಬ್ಯಾಗ್ ಬರೋಬ್ಬರಿ 8.3 ಲಕ್ಷ ರೂಪಾಯಿಗೆ ಮಾರಾಟ: ಇಟಲಿಯ ಫೆಂಡಿ ಸಂಸ್ಥೆ ವಿರುದ್ಧ ಹರ್ಷ್ ಗೋಯೆಂಕಾ, ಕಿರಣ್ ಮಜುಂದಾರ್ ಷಾ ಟೀಕೆ

ಭಾರತದ ಡಿಸೈನ್‌ನ ಈ ಬ್ಯಾಗ್‌ಗೆ ಬರೋಬ್ಬರಿ ಬಳಸಿ 8.3 ಲಕ್ಷ ರೂ.

Viral News: ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಫೆಂಡಿ 8.3 ಲಕ್ಷ ರೂಪಾಯಿಯ 'ಮಲ್ಟಿಕಲರ್ ಬ್ಯಾಗೆಟ್' ಹ್ಯಾಂಡ್‌ಬ್ಯಾಗ್ ವಿನ್ಯಾಸ ಮಾಡಿದೆ. ಇದರ ಕನ್ನಡಿ ಮತ್ತು ಮಣಿಗಳ ವಿನ್ಯಾಸವನ್ನು, ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬ್ಯಾಗ್‌ನಂತೆ ರೂಪಿಸಲಾಗಿದೆ. ಇದು ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಬ್ಯಾಗ್‌ನಂತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ ಭಕ್ತರು: ವಿಡಿಯೊ ನೋಡಿ

ಬ್ಯಾಂಕಾಕ್‌ನಲ್ಲಿ ಗಣೇಶನಿಗೆ ಬಬಲ್ ಟೀ ನೈವೇದ್ಯ

Viral News: ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿರುವ ಗಣಪತಿ ದೇವಾಲಯವೊಂದರಲ್ಲಿ ಚೌತಿಯನ್ನು ವಿಶಿಷ್ಟ ರೀತಿ ಆಚರಿಸಲಾಗಿದೆ. ಇಲ್ಲಿನ ಭಕ್ತರು ಸಾಂಪ್ರದಾಯಿಕ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ್ದಾರೆ. ಭಕ್ತರು ಗಣಪನಿಗೆ ಅರ್ಪಿಸಲು ಸ್ವತಃ ಬಬಲ್ ಟೀಯನ್ನು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭೋಪಾಲ್‌ನಲ್ಲಿ ʼಕಾಂತಾರʼ ಚಿತ್ರ ವೈಭವ: ‌ಗುಳಿಗ, ಪಂಜುರ್ಲಿ ದೈವದೊಂದಿಗೆ ಗಣಪತಿ ವಿಗ್ರಹವಿಟ್ಟು ಚೌತಿ ಆಚರಣೆ

ಭೋಪಾಲ್‌ನಲ್ಲಿ ಗುಳಿಗ, ಪಂಜುರ್ಲಿ ದೈವದೊಂದಿಗೆ ಕಂಗೊಳಿಸುತ್ತಿರುವ ಗಣಪ

Viral News: ಈ ಬಾರಿಯ ಮಧ್ಯ ಪ್ರದೇಶದ ಗಣೇಶೋತ್ಸವದಲ್ಲಿ ʼಕಾಂತಾರ ಚಾಪ್ಟರ್-1ʼ ಕಾನ್ಸೆಪ್ಟ್‌ ಆಧಾರಿತ ಅದ್ದೂರಿ ಸೆಟಪ್ ಮಾಡಲಾಗಿದ್ದು, ಗಮನ ಸೆಳೆದಿದೆ. ʼಕಾಂತಾರʼ ಸಿನಿಮಾದ ದೈವಾರಾಧನೆಯ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರೇರಿತಗೊಂಡು ವಿಶೇಷ ಪೆಂಡಲ್ ಸಿದ್ಧಪಡಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ಗುಳಿಗ ಮತ್ತು ಪಂಜುರ್ಲಿ ದೈವದ ವಿಗ್ರಹವನ್ನು ಕೂರಿಸಲಾಗಿದೆ.

ಡೆಲಿವರಿ ಸಿಬ್ಬಂದಿ ಕಷ್ಟ ನೋಡಲಾಗದೆ ತನಗಾಗಿ ತಂದ ಹೊಸ ಅಡಿಡಾಸ್ ಶೂ ನೀಡಿದ ಯುವಕ

ಡೆಲಿವರಿ ಬಾಯ್‌ ಕಷ್ಟ ಅರಿತು ಹೊಸ ಅಡಿಡಾಸ್ ಶೂ ನೀಡಿದ ಯುವಕ

Viral News: ಕೆಲವೊಮ್ಮೆ ನಾವು ತೋರಿಸುವ ಸರಳ ದಯೆ ಯಾರನ್ನಾದರೂ ಸಂತೋಷಪಡಿಸಲು ಸಾಕಾಗುತ್ತದೆ. ಇದಕ್ಕೆ ಉತ್ತರಾಖಂಡದ ಈ ಘಟನೆಯೇ ಸಾಕ್ಷಿ. ಅಮನ್ ಶರ್ಮಾ ಎಂಬ ಯುವಕ ತಮ್ಮ ಹೊಸ ಶೂಗಳನ್ನು ಡೆಲಿವರಿ ಪಾರ್ಟ್‌ನರ್‌ಗೆ ನೀಡುತ್ತಿರುವ ಕ್ಷಣ ಎಲ್ಲರ ಹೃದಯ ಗೆದ್ದಿದೆ. ಮಳೆಯಲ್ಲಿ ಯಾವುದೇ ರಕ್ಷಣೆ ಹಾಗೂ ಶೂ ಇಲ್ಲದೆ ಆಹಾರ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ತಮ್ಮ ಹೊಸ ಅಡಿಡಾಸ್ ಶೂ ಉಡುಗೊರೆಯಾಗಿ ನೀಡಿದ್ದಾರೆ.

ನದಿಯಂತಾದ ರಸ್ತೆಗಳು; ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಧಾರಾಕಾರ ಮಳೆಗೆ ಅಹಮದಾಬಾದ್ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ತುರ್ತು ವೈದ್ಯಕೀಯ ಸೇವೆಗಳಿಗೂ ಹಾದಿಯಿಲ್ಲದೆ ಜನರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಆಂಬುಲೆನ್ಸ್ ಬರಲಾಗದಿದ್ದಾಗ, ಕುಟುಂಬಸ್ಥರೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಹೆಗಲ ಮೇಲೆ ಹೊತ್ತು ಹರಿಯುವ ನೀರಿನಲ್ಲಿ ಸಾಗಿಸಿದ ದಯನೀಯ ಘಟನೆ ನಡೆದಿದೆ.

"ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಂದೇ ಭಾರತ್ ರೈಲಿನೊಳಗೆ ಎಲ್ಲವೂ ಚೆನ್ನಾಗಿತ್ತು"! ಆದರೆ ಸಹ ಪ್ರಯಾಣಿಕರ ವರ್ತನೆ ವಿರುದ್ಧ ಯುವಕ ಬೇಸರ!

ವಂದೇ ಭಾರತ್ ನಲ್ಲಿ ಪ್ಲಾಸ್ಟಿಕ್ ಎಸೆದು ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕರು

Viral News: ವಂದೇ ಭಾರತ್ ರೈಲು ಅತ್ಯಂತ ಸ್ವಚ್ಛವಾಗಿ ಕಂಡುಬಂದರೂ, ಸಿಬ್ಬಂದಿಗಳು ನಿಯಮಿತವಾಗಿ ಸ್ವಚ್ಛಗೊಳಿಸಿದ ಹೊರತಾಗಿಯೂ ಸೀಟುಗಳ ಕೆಳಗೆ ಮತ್ತು ಬೋಗಿಯ ವಿವಿಧ ಭಾಗಗಳಲ್ಲಿ ಕಸ ಬಿದ್ದಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಬೇಸರ ಹೊರಹಾಕಿದ್ದಾರೆ.

ಅಸದುದ್ದೀನ್ ಓವೈಸಿ ಬೆಂಗಾವಲು ಪಡೆಯ ವಾಹನ-ಬೈಕ್‌ಗಳ ನಡುವೆ ಡಿಕ್ಕಿ: ಹಲವರಿಗೆ ಗಾಯ

ಓವೈಸಿ ಅವರ ಬೆಂಗಾವಲು ಪಡೆ ಬೈಕ್‌ಗಳ ನಡುವೆ ಡಿಕ್ಕಿ

Bikes Collision: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆಯ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಹಲವಾರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಭೋಪಾಲ್ ನಲ್ಲಿ ನಡೆದಿದೆ. ತಿರುವಿನಲ್ಲಿ ಕೆಲವೊಂದು ವಾಹನಗಳು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಅಪಘಾತ ಸಂಭವಿಸಿದೆ.

ಪ್ರವಾಹದ ನಡುವೆಯೂ ಪಾಠಕ್ಕೆ ವಿರಾಮವಿಲ್ಲ; ಬಿಹಾರದಲ್ಲಿ ದೋಣಿಯೇ ಮಕ್ಕಳ ತರಗತಿ! ಕಲಿಕಾಸಕ್ತಿಗೆ ದೇಶವೇ ಫಿದಾ

ನೆರೆಯಿಂದ ಊರೇ ಮುಳುಗಿದಾಗ ದೋಣಿಯನ್ನೇ ತರಗತಿಯಾಗಿಸಿದ ಶಿಕ್ಷಕ

Bihar Flood: ಬಿಹಾರದ ಕತಿಹಾರ್‌ ಜಿಲ್ಲೆಯಲ್ಲಿ ಭಾರಿ ಪ್ರವಾಹದಿಂದ ಶಾಲೆ, ಮನೆ ಹಾಗೂ ಕೋಚಿಂಗ್‌ ಕೇಂದ್ರಗಳು ಜಲಾವೃತವಾಗಿವೆ. ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಖಾಸಗಿ ಶಿಕ್ಷಕರೊಬ್ಬರು ದೋಣಿಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಪಾಠ ಮುಂದುವರಿಸಲಾಗುತ್ತಿದ್ದು, ಪ್ರವಾಹದ ನಡುವೆಯೂ ಶಿಕ್ಷಣದ ಮಹತ್ವವನ್ನು ಮಕ್ಕಳು ಸಾರಿದ್ದಾರೆ.

ಖಾಕಿ ತೊಟ್ಟು ಮಕ್ಕಳಂತೆ ಪಾರ್ಕ್‌ನಲ್ಲಿ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ: ವಿಡಿಯೊ ವೈರಲ್

ಪಾರ್ಕ್‌ನಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ

Viral News: ಉದ್ಯಾನವನವೊಂದರಲ್ಲಿ ಕರ್ತವ್ಯದ ನಡುವಿನ ಬಿಡುವಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಮೆರ್ರಿ-ಗೋ-ರೌಂಡ್ ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಮಕ್ಕಳು ಆಡುವ ಆಟಿಕೆ ಮೇಲೆ ಕುಳಿತು ಸಮವಸ್ತ್ರಧಾರಿ ಸಿಬ್ಬಂದಿ ಬಾಲ್ಯದ ಕ್ಷಣ ಕಳೆದಿದ್ದಾರೆ. ಆದರೆ ಈ ವಿಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ.

ಬೈಕ್‌ನಲ್ಲಿ ಬಂದು ವೃದ್ಧೆಯ ಸರ ದೋಚಲು ಯತ್ನ: ಕಳ್ಳರನ್ನು ಬೆನ್ನಟ್ಟಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ವೃದ್ಧೆಯ ಸರ ಕಳವಿಗೆ ಯತ್ನ: ಖದೀಮರನ್ನು ಹಿಡಿದ ಸ್ಥಳೀಯರು

Viral News: ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಿಂದ ಸರ ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಗಟ್ಟಿಯಾಗಿ ಬೊಬ್ಬೆ ಹಾಕುತ್ತಿದ್ದಂತೆ ಸಾರ್ವಜನಿಕರು ಒಟ್ಟಾಗಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ‌. ಕಳ್ಳರು ಮಹಿಳೆಯ ಕುತ್ತಿಗೆಯಿಂದ ಸರ ಕಸಿದುಕೊಳ್ಳಲು ಪ್ರಯತ್ನಿ ಸುತ್ತಿರುವುದು ಕಂಡುಬಂದಿದೆ. ಕೊನೆಗೂ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಹಬ್ಬ ಮಿಸ್ ಮಾಡಿಕೊಂಡ ಏರ್ ಇಂಡಿಯಾ ಸಿಬ್ಬಂದಿಗೆ ಫ್ಲೈಟ್‌ನಲ್ಲೇ ಬಪ್ಪನ ದರ್ಶನ! ಹೃದಯಸ್ಪರ್ಶಿ ದೃಶ್ಯ ವೈರಲ್‌

35,000 ಅಡಿ ಎತ್ತರದಲ್ಲಿ ಫ್ಲೈಟ್‌ನಲ್ಲೇ ಚೌತಿ ಏರ್ ಇಂಡಿಯಾ ಸಿಬ್ಬಂದಿ

Ganpati Puja 2026: ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದ್ದಾಗ ವಿಶೇಷವಾಗಿ ಗಣೇಶ ಹಬ್ಬವೊಂದನ್ನು ಆಚರಿಸಿಕೊಂಡಿದ್ದಾರೆ. ಫ್ಲೈಟ್ ಸಮಯ ಕೊನೆ ಕ್ಷಣದಲ್ಲಿ ಬದಲಾದ ಕಾರಣ ಸಿಬ್ಬಂದಿಯೊಬ್ಬರಿಗೆ ತಮ್ಮ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ ಗಣಪನ ಆಶೀವಾರ್ದ ಎಂಬಂತೆ ಒಬ್ಬ ಪ್ರಯಾಣಿಕರು ವಿಮಾನದಲ್ಲಿ ಗಣಪತಿ ವಿಗ್ರಹವನ್ನು ತಂದಿದ್ದು ಇದನ್ನು ಕಂಡ ಅನುರಾಧಾ ಹಾಗೂ ಅವರ ಸಹೋದ್ಯೋಗಿ ಸಿಬ್ಬಂದಿಗಳು ಆಕಾಶದಲ್ಲೇ ಗಣಪತಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ‌.

ಸೌಂದರ್ಯ ವರ್ಧಕ ಚಿಕಿತ್ಸೆಗಾಗಿ 4 ಕೋಟಿ ರೂಪಾಯಿ ವೆಚ್ಚ ಮಾಡಿದ 75 ವರ್ಷದ ವೃದ್ಧೆ; ಈಗ ಊಟಕ್ಕೂ ಗತಿ ಇಲ್ಲ

ಸೌಂದರ್ಯ ಚಿಕಿತ್ಸೆಗೆ 4 ಕೋಟಿ ರೂ. ಖರ್ಚು ಮಾಡಿದ 75 ವರ್ಷದ ವೃದ್ಧೆ

Viral News: 75 ವರ್ಷದ ವೃದ್ಧೆಯೊಬ್ಬಳು ತಮ್ಮ ಇಡೀ ಉಳಿತಾಯ ಹಣವನ್ನು ಕೇವಲ ಸೌಂದರ್ಯ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಹಣವನ್ನು ಒಂದೇ ಬ್ಯೂಟಿ ಸೆಲೂನ್‌ನಲ್ಲಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ. ಆದರೆ ಈ ಇಡೀ ಹಣ ಖಾಲಿಯಾದ ನಂತರ ವೃದ್ಧೆ ಮನೆ ಬಾಡಿಗೆ ಕಟ್ಟಲು ಮತ್ತು ದಿನನಿತ್ಯದ ವೆಚ್ಚಗಳಿಗೂ ಹಣವಿಲ್ಲದೆ ಒಡವೆಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾಳೆ.

Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್

ವಿಮಾನದಲ್ಲಿ ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿದ ಮಹಿಳೆ

Obscene Behaviour in Flight:ಅಮೆರಿಕದ ವಿಮಾನಯಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಅಮೆರಿಕದ ಬಾಲ್ಟಿಮೋರ್‌ನಿಂದ ಮಿಯಾಮಿ ನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು.

Loading...