ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಬೇಕರಿ ತಿಂಡಿ ಸೇವಿಸುವಾಗ ಹುಷಾರ್‌; ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ: ವಿಡಿಯೊ ಇಲ್ಲಿದೆ

ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆ: ನೆಟ್ಟಿಗರು ಕಿಡಿ

Viral Video: ಮಹಾರಾಷ್ಟ್ರದ ಮುಂಬೈಯ ಚರ್ನಿ ರೋಡ್‌ನ ಒಪೆರಾ ಹೌಸ್ ಬಳಿ ಇರುವ ಪ್ರಸಿದ್ಧ ತಿವಾರಿ ಬ್ರದರ್ಸ್ ಸ್ವೀಟ್ಸ್ ಮಳಿಗೆಯಿಂದ ಖರೀದಿಸಿದ ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಕಬ್ಬಣದ ಪಿನ್‌ ಪತ್ತೆಯಾಗಿದೆ. ಗ್ರಾಹಕರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಘಟನೆ ಆಹಾರ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದೆ.

ಶಾಲೆಯಲ್ಲೇ ಹರಿಯಿತು ನೆತ್ತರು; ಶಿಕ್ಷಕಿಯನ್ನು ಕ್ಲಾಸ್‌ನಿಂದ ಹೊರಗೆಳೆದು 20 ಬಾರಿ ಇರಿದು ಕೊಂದ ಪಾಪಿ

ಶಾಲೆಗೆ ನುಗ್ಗಿ ಶಿಕ್ಷಕಿಯನ್ನು ಭೀಕರವಾಗಿ ಕೊಂದ ಪಾಪಿ

Viral News: ಮುಸುಕುಧಾರಿ ವ್ಯಕ್ತಿಯೊಬ್ಬ ಶಾಲೆಗೆ ನುಗ್ಗಿ ಹಾಡಹಗಲೇ ತರಗತಿಯಿಂದ ಶಿಕ್ಷಕಿಯನ್ನು ಹೊರಗೆಳೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಶಿಕ್ಷಕಿಗೆ 18ರಿಂದ 20 ಇರಿತದ ಗಾಯಗಳಾಗಿದ್ದು, ದುಷ್ಕರ್ಮಿ ಆಕೆಯ ಕುತ್ತಿಗೆ ಮತ್ತು ಎದೆಯನ್ನು ಗುರಿಯಾಗಿಸಿಕೊಂಡು ಪದೇ ಪದೆ ಇರಿದಿದ್ದಾನೆ.‌ ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಯ ಮತ್ತೊಂದು ಅಸಭ್ಯ ವರ್ತನೆ; ಕುಡಿತದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನ: ಭಯಾನಕ ವಿಡಿಯೊ ವೈರಲ್‌

ಕುಡಿದ ಮತ್ತಿನಲ್ಲಿ ಮಹಿಳೆಯ ಮನೆಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

Viral Video: ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಮಾಡುವ ಮತ್ತೊಂದು ಅಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಉಬರ್ ಪಾರ್ಸಲ್ ಡೆಲಿವರಿ ಬಾಯ್ ಕುಡಿತದ ಮತ್ತಿನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಶೇರ್ ಮಾಡಿದ ಮಹಿಳೆ ಆತನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ ಬೆನ್ನಲ್ಲೇ ಆಲಂಕಾರಿಕ ಗಿಡಗಳನ್ನು ಕದ್ದೊಯ್ದ ಸ್ಥಳೀಯರು; ಹೊಡೀರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು

ವಿಮಾನ ನಿಲ್ದಾಣದಿಂದ ಗಿಡ ಕದ್ದೊಯ್ದ ಸ್ಥಳೀಯರು: ನೆಟ್ಟಿಗರು ಕಿಡಿ

Viral Video: ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಬೆನ್ನಲ್ಲೇ ಆವರಣವನ್ನು ಸುಂದರಗೊಳಿಸಲು ನೆಟ್ಟಿದ್ದ ಅಲಂಕಾರಿಕ ಗಿಡಗಳನ್ನು ಸ್ಥಳೀಯರು ಬೇರು ಸಹಿತವಾಗಿ ಕಿತ್ತುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಪಾದಪೂಜೆ ಮಾಡಿದ ಕಾರ್ಯಕರ್ತರು: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ವಿಡಿಯೊ ವೈರಲ್‌

ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಪಾದಪೂಜೆಗೆ ಬಿಜೆಪಿ ಟೀಕೆ

Congress Leader Nana Patole: ಗುರು ಪೂರ್ಣಿಮೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ಕಾರ್ಯಕರ್ತರು ತೊಳೆದು ಪೂಜೆ ಸಲ್ಲಿಸಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಇದನ್ನು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ ಎಂದು ಆರೋಪಿಸಿದೆ. ಪಟೋಲೆ ಈ ಬಗ್ಗೆ ಸ್ಪಷ್ಟನೆ ನೀಡಿ ಪಾದಪೂಜೆ ಮಾಡಿದವರು ತಮ್ಮ ಕುಟುಂಬದ ಸದಸ್ಯರು ಹಾಗೂ ಗುರು ಪೂರ್ಣಿಮೆಯ ಅಂಗವಾಗಿ ಗೌರವ ಸೂಚಕವಾಗಿ ಈ ಆಚರಣೆ ನಡೆಸಿದ್ದಾರೆ ಎಂದಿದ್ದಾರೆ.

ಒಬ್ಬಂಟಿ ಮಹಿಳೆ ಪ್ರಯಾಣಿಸುವಾಗ ಅಶ್ಲೀಲ ವಿಡಿಯೊ ವೀಕ್ಷಿಸಿದ ರ‍್ಯಾಪಿಡೋ ಚಾಲಕ! ಕಹಿ ಘಟನೆ ಶೇರ್ ಮಾಡಿದ ಯುವತಿ

ಯುವತಿಯ ಎದುರೇ ಅಶ್ಲೀಲ ವಿಡಿಯೊ ವೀಕ್ಷಿಸಿದ ರ‍್ಯಾಪಿಡೋ ಚಾಲಕ

Viral News: ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಮತ್ತೊಂದು ಪ್ರಕರಣ ವರದಿಯಾಗಿದೆ. ದೆಹಲಿಯ ಮಹಿಳೆಯೊಬ್ಬರು ರ‍್ಯಾಪಿಡೋ ಆಟೋ-ರಿಕ್ಷಾದಲ್ಲಿ ಪ್ರಯಾಣ ಮಾಡುವಾಗ ಚಾಲಕನೊಬ್ಬ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದು, ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯೂ ತನಗಾದ ಕಹಿ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜಾರ್ಜಿಯಾ ಮೆಲೋನಿಗೆ ನರೇಂದ್ರ ಮೋದಿ ಚಾಕೊಲೇಟ್‌ ಗಿಫ್ಟ್‌ ಕೊಟ್ಟ ಎಫೆಕ್ಟ್‌: ಇಟಲಿ ಸೊಗಡಿನಲ್ಲಿ ಪಾರ್ಲೆ Melody ಕ್ಯಾಂಡಿ; Melodi ಟ್ರೆಂಡ್‌ಗೆ ಸಿಹಿ ಟ್ವಿಸ್ಟ್

ಇಟಲಿ ಸೊಗಡಿನಲ್ಲಿ ಮೆಲೋಡಿ: ಹೊಸ ರುಚಿಗೆ ನೆಟ್ಟಿಗರ ಮೆಚ್ಚುಗೆ

India-Italy Friendship: ಭಾರತ–ಇಟಲಿ ಸ್ನೇಹವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪಾರ್ಲೆ ಸಂಸ್ಥೆ ತಿರಾಮಿಸು ರುಚಿಯ ಸೀಮಿತ ಆವೃತ್ತಿಯ ಮೆಲೋಡಿ ಕ್ಯಾಂಡಿಯನ್ನು ಬಿಡುಗಡೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿದ್ದ ʼಮೆಲೋಡಿʼ ಟ್ರೆಂಡ್‌ಗೆ ಸೃಜನಾತ್ಮಕ ಸ್ಪರ್ಶ ನೀಡಿರುವ ಈ ಹೊಸ ಪ್ರಯತ್ನ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ರುಚಿಯ ಮೆಲೋಡಿ ಬಿಡುಗಡೆಯಾದ ಕೂಡಲೇ ಭಾರಿ ಚರ್ಚೆಗೆ ಕಾರಣವಾಗಿದ್ದು, ಬ್ರ್ಯಾಂಡ್‌ನ ಹೊಸತನದ ಮಾರಾಟ ತಂತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Viral Video: ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!

ನ್ಯಾಯ ವಿಳಂಬಕ್ಕೆ ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ

ಛತ್ತರಪುರ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯ ಒಳಗೆಯೇ ವಿಷ ಸೇವಿಸಲು ಯತ್ನಿಸಿರುವ ಘಟನೆಯೊಂದು ನಡೆದಿದೆ. ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ ಎಂದು ಬೇಸೆತ್ತು ಪೊಲೀಸ್ ಸ್ಟೇಷನ್‌ ನಲ್ಲಿಯೇ ಇದ್ದಕ್ಕಿದ್ದಂತೆ ವಿಷ ಸೇವನೆ ಮಾಡಿದ್ದಾಳೆ..

ಪ್ರಧಾನಿಯನ್ನು ನಿಂದಿಸಿದ ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸು ಇಲ್ಲ: ದೆಹಲಿ ಪೊಲೀಸ್

ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿ ಬಳಿಕ ವಿಡಿಯೊ ಮೂಲಕ ಕ್ಷಮೆಯಾಚಿಸಿದ ಬಾಲಕಿ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿಯವರನ್ನು ನಿಂದಿಸಿದ ಬಾಲಕಿ ವಿರುದ್ಧ ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದರು. ಇದರ ಬಳಿಕ ಆಕೆ ಕ್ಷಮೆ ಕೇಳಿದ್ದು, ಆಕೆಯ ತಾಯಿಯು ಕೂಡ ಕ್ಷಮೆಯಾಚಿಸಿದ್ದರು.

ಮುಂಬೈ ಕಡಲತೀರದಲ್ಲಿ 1.5 ಟನ್ ಕಸವನನ್ನು ಸಂಗ್ರಹಿಸಿದ ಪರಿಸರ ಪ್ರೇಮಿ ಲಿಸ್ಬನ್ ಫೆರಾವ್ ತಂಡ: ನೆಟ್ಟಿಗರಿಂದ ಪ್ರಶಂಸೆ!

ಮುಂಬೈ ಬೀಚ್‌ನಲ್ಲಿ 1.5 ಟನ್ ತ್ಯಾಜ್ಯ ವಿಲೇವಾರಿ ಮಾಡಿದ ಪರಿಸರ ಪ್ರೇಮಿಗಳು!

Viral Video: ಪರಿಸರವಾದಿ ಲಿಸ್ಬನ್ ಫೆರಾವೊ ಎಂಬವರು ಕಡಲತೀರ ಸ್ವಚ್ಛತೆಯ ಅಭಿಯಾನ ಮೂಲಕ ಬರೋಬ್ಬರಿ 1.5 ಟನ್ ಕಸವನ್ನು ಹೊರತೆಗೆದಿದ್ದಾರೆ. ಇದು ಮುಂಬೈನ ತೀರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಡಲತೀರದ ಅಡಿಯಲ್ಲಿ ಹೂತುಹೋಗಿದ್ದು ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯುವತಿಯರಿಗೆ ಚುಡಾಯಿಸಿದ ಕಿಡಿಗೇಡಿಗಳಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ಏನು ಗೊತ್ತಾ? ಸ್ಟೋರಿ ಓದಿ ಶಾಕ್‌ ಆಗ್ತೀರಾ

ಯುವತಿಯರಿಗೆ ಅಸಭ್ಯ ಕಮೆಂಟ್: ಕಿಡಿಗೇಡಿಗೆ ತಕ್ಕ ಶಿಕ್ಷೆ ನೀಡಿದ ಗ್ರಾಮಸ್ಥರು

Viral Video: ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳೆಂದು ಹೇಳಲಾಗುವ ಇಬ್ಬರು ಯುವಕರು ಸಂಚಾರಿಸುವಾಗ ರಸ್ತೆಯಲ್ಲಿ ಕಂಡ ಸ್ಥಳೀಯ ಯುವತಿಯರನ್ನು ನೋಡಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ.ಇದರಿಂದ ಆಕ್ರೋಶಗೊಂಡ ಯುವತಿಯರು ಹಾಗೂ ಸ್ಥಳೀಯರು ಸೇರಿ ತಕ್ಕ ಶಿಕ್ಷೆ ನೀಡಿದ್ದಾರೆ.

ಚಲಿಸುವ ರೈಲಿನಡಿ ಹಾರಲು ಹೋದ ಯುವಕ: ಪ್ರಾಣದ ಹಂಗು ತೊರೆದು ಕಾಪಾಡಿದ ಮಹಿಳಾ ಕಾನ್‌ಸ್ಟೆಬಲ್!

ಚಲಿಸುವ ರೈಲಿನ ಅಡಿಗೆ ನುಗ್ಗಿದ ಯುವಕ- ಸಾಹಸ ಮೆರೆದ ಕಾನ್‌ಸ್ಟೆಬಲ್!

Viral Video: ಯುವಕನೊಬ್ಬ ಲೋಕಲ್ ರೈಲಿನ ಅಡಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ರಾತ್ರಿ 10:54 ರ ಸುಮಾರಿಗೆ ನಡೆದಿದ್ದು ಕಾರ್ಯ‌ಚರಣೆ ದೃಶ್ಯ ಭಾರೀ ವೈರಲ್ ಆಗಿದೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಶಹಬಾಸ್ ಎನ್ನುತ್ತಿದ್ದಾರೆ.

ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಆದ ಪ್ರಾಧ್ಯಾಪಕಿ: "ನೀವೇ ಮುರ್ಖರು" ಎಂದು ಕಾಲೆಳೆದ ನೆಟ್ಟಿಗರು!

ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಶೇರ್ ಮಾಡಿ ಟ್ರೋಲ್ ಗೆ ಒಳಗಾದ ಪ್ರಾಧ್ಯಾಪಕಿ

Viral News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಗೆ ಒಳಗಾದ ಘಟನೆಯೊಂದು ನಡೆದಿದೆ. ತಾವು ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ಹೇಳಿಕೊಂಡ ಅರ್ಪಿತಾ ಚಟರ್ಜಿ ಎಂಬವರು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹೈಲೈಟ್ ಮಾಡಿದ್ದು ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ತಾನು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿಕೊಂಡರೂ ಈ ಸಣ್ಣ ಪೋಸ್ಟ್‌ ನಲ್ಲೇ ಬರೋಬ್ಬರಿ 6 ರಿಂದ 7 ಭೀಕರ ವ್ಯಾಕರಣ ತಪ್ಪುಗಳಿದ್ದವು‌.

ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ

ಪ್ರಧಾನಿ ಕ್ಷಮೆಯಾಚಿಸಿದ ಬಾಲಕಿಯ ತಾಯಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆ ಯಾಚಿಸಿದ್ದ ಬಾಲಕಿಯ ತಾಯಿ ಈಗ ಮೊದಲ ರಿಯಾಕ್ಷನ್ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಳು. ಇದೀಗ ಆಕೆಯ ತಾಯಿ, ಪ್ರಧಾನಿಯವರು ತನ್ನ ಮಗಳಿಗೆ ಜೀವದಾನ ಮಾಡಿದ್ದಾರೆ ಎಂದಿದ್ದಾರೆ.

"ಆದಾಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಜೀವನಶೈಲಿ ಬದಲಾಯಿಸಬೇಕಾಗಿಲ್ಲ": ಬೆಂಗಳೂರು ಯುವತಿಯ ಸಲಹೆಗೆ ನೆಟ್ಟಿಗರು ಫಿದಾ

ದುಬಾರಿ ಜೀವನ ಶೈಲಿ ನಿಯಂತ್ರಿಸುವ ಬಗ್ಗೆ ಯುವತಿಯ ಸಲಹೆ ಏನು?

Viral Video: 7 ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಿಮ್ರಿಧಿ ಮಖಿಜಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದರಲ್ಲಿ ತಮ್ಮ ಅನಿಸಿಕೆ ಶೇರ್ ಮಾಡಿದ್ದಾರೆ. ನಗರದಲ್ಲಿ ಅವರು ಗಮನಿಸಿದ ಹಲವು ಖರ್ಚಿನ ಬಗ್ಗೆ ಅವರು ಮಾತನಾಡಿದ್ದು, ʼʼಸಿಟಿಗೆ ಬಂದಿದ್ದೇವೆ, ಒಳ್ಳೆಯ ಕೆಲಸ ಸಿಕ್ಕಿದೆ ಅಂದಾಕ್ಷಣ ನಮ್ಮ ಜೀವನಶೈಲಿ ಬದಲಾಯಿಸಬೇಕಾಗಿಲ್ಲʼʼ ಎಂದು ಸಲಹೆ ನೀಡಿದ್ದಾರೆ.

52 ವರ್ಷಗಳ ನಂತರ ಹೆಣ್ಣು ಮಗು ಜನನ; ಆಸ್ಪತ್ರೆಯಲ್ಲೇ ಸಂಭ್ರಮಿಸಿದ ಇಂದೋರ್ ಕುಟುಂಬ: ಭಾವುಕ ಕ್ಷಣದ ವಿಡಿಯೊ ನೋಡಿ

52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಇಂದೋರ್ ಕುಟುಂಬ

Viral Video: ಮಧ್ಯ ಪ್ರದೇಶದ ಇಂದೋರ್‌ನ ಕುಟುಂಬವೊಂದು 52 ವರ್ಷದ ಬಳಿಕ ಹೆಣ್ಣು ಮಗುವೊಂದನ್ನು ಬರಮಾಡಿಕೊಂಡಿದೆ. ಐದು ದಶಕಗಳ ಕಾಲ ಕೇವಲ ಗಂಡು ಮಕ್ಕಳನ್ನೇ ಕಂಡಿದ್ದ ಈ ಕುಟುಂಬಕ್ಕೆ ಕೊನೆಗೂ ಲಕ್ಷ್ಮೀಯ ರೂಪದಲ್ಲಿ ಹೆಣ್ಣು ಮಗುವಿನ ಆಗಮನವಾಗಿದೆ. ಆಸ್ಪತ್ರೆಯಲ್ಲೇ ಕುಟುಂಬ ಸಂಭ್ರಮಾಚರಿಸಿದ್ದು, ಈ ಖುಷಿಯ ಕ್ಷಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ.

ಬಿಹಾರದಲ್ಲೊಬ್ಬ ಬಾಹುಬಲಿ; ಗದ್ದೆಯಲ್ಲಿ ಸಿಕ್ಕ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ: ವಿಡಿಯೊ ವೈರಲ್‌

ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ

Viral video: ಬಿಹಾರದ ಸುಪೌಲ್ ಜಿಲ್ಲೆಯ ಹೊಲದಲ್ಲಿ ಸಿಕ್ಕ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದ ಬಳಿಕ, ಯುವಕನೊಬ್ಬ ಅದನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ಘಟನೆ ವೈರಲ್ ಆಗಿದೆ. ಬಳಿಕ ಅರಣ್ಯ ಇಲಾಖೆ ಮೊಸಳೆಯನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿ ಕೋಸಿ ನದಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ವನ್ಯಜೀವಿಗಳು ಕಂಡುಬಂದರೆ ಸಾರ್ವಜನಿಕರು ಸ್ವತಃ ಹಿಡಿಯಲು ಮುಂದಾಗದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಸ್ತೆ, ಹಾಸ್ಟೆಲ್ ಬಳಿಕ ಇದೀಗ ಬಾತ್‌ರೂಂಗೂ ನುಗ್ಗಿದ ಮೊಸಳೆ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ಬಾತ್‌ರೂಂನಲ್ಲಿ 7 ಅಡಿ ಉದ್ದದ ಮೊಸಳೆ ಪತ್ತೆ: ಇಲ್ಲಿದೆ ವಿಡಿಯೊ

Crocodile Found in a house: ಮನೆಯೊಂದರ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆ ಪತ್ತೆಯಾದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮೊಸಳೆ ಬಾಲಾಭಾಯಿ ಚೌಹಾಣ್ ಎಂಬುವವರ ಮನೆಯ ಬಾತ್‌ರೂಂಗೆ ಪ್ರವೇಶಿಸಿತ್ತು. ಕೂಡಲೇ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡವು ಅದನ್ನು ರಕ್ಷಿಸಿದೆ.

ಪಾಕ್‌ ಆಟಗಾರ್ತಿಯನ್ನು ಅಪ್ಪಿಕೊಂಡ ಭಾರತದ ಜೆಮಿಮಾ ರೋಡ್ರಿಗಸ್‌; ವಿಡಿಯೊ ವೈರಲ್‌

ಪಾಕ್‌ ಆಟಗಾರ್ತಿಯನ್ನು ಅಪ್ಪಿಕೊಂಡ ಜೆಮಿಮಾ ರೋಡ್ರಿಗಸ್‌

Jemimah Rodrigues: ಪಂದ್ಯದ ಬಗ್ಗೆ ಹೇಳುವುದಾದರೆ ಸದರ್ನ್ ಬ್ರೇವ್ ಪರ ಆಡುವ ರೊಡ್ರಿಗಸ್ 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರೆ, ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪರ ಫಾತಿಮಾ ನಿರಾಶಾದಾಯಕ ಪ್ರದರ್ಶನ ನೀಡಿದರು. ಸದರ್ನ್ ಬ್ರೇವ್ ಪಂದ್ಯವನ್ನು 24 ರನ್‌ಗಳಿಂದ ಗೆದ್ದುಕೊಂಡಿತು.

ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ; ಆದರೂ ನನ್ನನ್ನು ಕ್ಷಮಿಸಿಬಿಡಿ: ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ ಮಾಡಿರುವ ತಪ್ಪೇನು?

ನನಗೆ ಕೇವಲ 15 ವರ್ಷ. ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ, ಆದರೂ ನನ್ನನ್ನು ಕ್ಷಮಿಸಿ ಎಂದು ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಕೇಳಿದ್ದಾಳೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಾಳೆ.

ಯುಪಿಐ ವೈಫಲ್ಯ: ರಸ್ತೆ ಮಧ್ಯೆಯೇ ಪ್ರಯಾಣಿಕನನ್ನು ಬಸ್ಸಿನಿಂದ ಇಳಿಸಿದ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಆಕ್ರೋಶ!

ಯುಪಿಐ ವಿಳಂಬ: ಪ್ರಯಾಣಿಕನನ್ನು ರಸ್ತೆ ಮಧ್ಯೆಯೆ ಇಳಿಸಿದ ಕಂಡಕ್ಟರ್!

Viral News: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ವೊಬ್ಬ ಯುಪಿಐ ಪಾವತಿ ವೈಫಲ್ಯದ ವಿಚಾರವಾಗಿ ಪ್ರಯಾಣಿಕನ್ನು ಅರ್ಧದಾರಿಯಲ್ಲೆ ಇಳಿಸಿದ ಘಟನೆಯೊಂದು ಕಂಡು ಬಂದಿದೆ. ಸಂತ್ರಸ್ತ ಪ್ರಯಾಣಿಕನು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಬೇಸರ ಹೊರ ಹಾಕಿದ್ದಾರೆ.

ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಭಕ್ತನನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿ: ಎದೆ ಝಲ್‌ ಎನಿಸುವ ವಿಡಿಯೋ ವೈರಲ್‌

ಹರಿದ್ವಾರದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಿದ SDRF ಸಿಬ್ಬಂದಿ

Viral Video: ಗಂಗಾ ನದಿಯ ಭೋರ್ಗರೆಯುವ ಪ್ರವಾಹದಲ್ಲಿ ಭಕ್ತನೊಬ್ಬ ಕೊಚ್ಚಿ ಹೋಗಿದ್ದು ಎಸ್‌ಡಿ ಆರ್‌ಎಫ್ ತಂಡ ಕೂಡಲೆ ಸಮಯ ಪ್ರಜ್ಞೆ ಮೆರೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ SDRF ಕಾನ್ಸ್‌ಟೇಬಲ್ ನಿತೇಶ್ ಖೇತ್ವಾಲ್ ತಕ್ಷಣ ಹಿಂಜರಿಕೆ ಮಾಡದೇ ನದಿಗೆ ಹಾರಿದ್ದು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ದೃಶ್ಯ ಭಾರೀ ವೈರಲ್ ಆಗುತ್ತಿದೆ.

ಜೆಪ್ಟೊ ಸಿಬ್ಬಂದಿಯಿಂದ ಕಿರುಕುಳ: ಒಬ್ಬಂಟಿ ಮಹಿಳೆ ಕಂಡು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಡೆಲಿವರಿ ಬಾಯ್

ಮಹಿಳೆಗೆ ಕಿರುಕುಳ ನೀಡಿದ ಜೆಪ್ಟೊ ಡೆಲಿವರಿ ಬಾಯ್: ನೆಟ್ಟಿಗರ ಆಕ್ರೋಶ!

Viral Video: ಆರ್ಡರ್ ತಲುಪಿಸಲು ಬಂದ ಜೆಪ್ಟೊ ಸಂಸ್ಥೆಯ ಡೆಲಿವರಿ ಏಜೆಂಟ್ ಮಹಿಳೆಯೊಬ್ಬರು ಒಬ್ಬಂಟಿ ಇರುವಾಗ ಒಳಗೆ ಬರಲು ಪಟ್ಟು ಹಿಡಿದಿದ್ದಾನೆ. ವೀಡಿಯೊ ಶೇರ್ ಮಾಡಿದ ಮಹಿಳೆ ಜೆಪ್ಟೋ ಏಜೆಂಟ್ ಕುಡಿಯಲು ನೀರು ಕೇಳಿದ ನಂತರ ಪದೇ ಪದೇ ತನ್ನ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪರ ಪುರುಷನೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸಿದ ಪತ್ನಿ: ಸಾರ್ವಜನಿಕವಾಗಿಯೇ ಗೂಸಾ ನೀಡಿದ ಗಂಡ!

ಬಾಯ್ ಫ್ರೆಂಡ್ ಜೊತೆ ಪ್ರಯಾಣ: ಪತಿಯಿಂದ ಸಾರ್ವಜನಿಕವಾಗಿ ಹಲ್ಲೆ

Viral Video: ಅನೈತಿಕ ಸಂಬಂಧದ ವಿಚಾರಗಳು ಇತ್ತೀಚೆಗೆ ಹಾಟ್ ಟಾಪಿಕ್ ನಲ್ಲಿದೆ‌. ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಡಿಯೊಗಳು ದಿನ ನಿತ್ಯ ವೈರಲ್ ಆಗುತ್ತಿದೆ‌. ಇದೀಗ ಇಂದೋರ್ ನಲ್ಲಿ ಮತ್ತೊಬ್ಬ ಪುರುಷನ ಜೊತೆ ಪತ್ನಿ ಹೋಗುತ್ತಿರುವುದನ್ನು ಗಮನಿಸಿದ ಪತಿಯೊಬ್ಬ ರಸ್ತೆಯಲ್ಲೇ ಆಕೆಯನ್ನು ತಡೆದು ಬೆಲ್ಟ್ ನಿಂದ ಹೊಡೆದಿದ್ದಾನೆ. ಸಾರ್ವಜನಿಕವಾಗಿ ಪತ್ನಿಯ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿದ ವಿಡಿಯೊ ಭಾರೀ ವೈರಲ್ ಆಗುತ್ತಿದೆ.

Loading...