ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

Viral Video: ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

ಹರಿಹರ ಕೋಟೆಯಲ್ಲಿ ಪ್ರವಾಸಿಗರ ದಂಡು! ಆಡಳಿತದ ನಿರ್ಲಕ್ಷ್ಯಕ್ಕೆ ಕಿಡಿ

Viral Video: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಹರಿಹರ ಕೋಟೆಯಲ್ಲಿ ಜನ ಸಾಗರವೇ ಸೇರಿರುವ ದೃಶ್ಯವೊಂದು ವೈರಲ್ ಆಗಿದೆ. ಕಡಿದಾದ ಬಂಡೆಗಳಲ್ಲಿ ಕೆತ್ತಲಾದ ಕಿರಿದಾದ ಮೆಟ್ಟಿಲುಗಳ ಮೇಲೆ ನೂರಾರು ಪ್ರವಾಸಿಗರು ಸೇರಿದ್ದು, ಸುರಕ್ಷತೆ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.‌ ಸದ್ಯ ಈ ಅಘಾತಕಾರಿ ವಿಡಿಯೊ ವೈರಲ್ ಆಗುತ್ತಿದೆ.

ಫ್ಲಿಪ್‌ಕಾರ್ಟ್‌ನ ಶ್ರದ್ಧಾಂಜಲಿ ಶೈಲಿಯ ಜಾಹೀರಾತಿಗೆ ತೀವ್ರ ವಿರೋಧ: ನಿಮ್ಮ ಸೇಲ್ ಫ್ಲಾಪ್ ಆಗಲಿ ಎಂದ ನೆಟ್ಟಿಗರು

ಫ್ಲಿಪ್‌ಕಾರ್ಟ್‌ನ ಜಾಹೀರಾತು ವಿನ್ಯಾಸಕ್ಕೆ ನೆಟ್ಟಿಗರು ಆಕ್ರೋಶ

Viral News: ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ತನ್ನ ‘ಫ್ರೀಡಂ ಸೇಲ್’ ಕೊಡುಗೆಯ ಪ್ರಚಾರಕ್ಕಾಗಿ ಮುದ್ರಣ ಜಾಹೀರಾತುವೊಂದನ್ನು ನೀಡಿದೆ. ಸೇಲ್ ಕೊನೆಗೊಂಡಿದೆ ತಿಳಿಸಲು ಸಂಸ್ಥೆಯು ವಿಭಿನ್ನ ಮಾದರಿಯ ವಿನ್ಯಾಸವನ್ನು ಹಂಚಿಕೊಂಡಿದೆ. ಸಾವು ಮತ್ತು ಸಂತಾಪ ಸೂಚಿಸುವ ಮಾದರಿಯನ್ನು ವ್ಯಾಪಾರಕ್ಕೆ ಬಳಸಿಕೊಂಡಿರುವುದು ಇದೀಗ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರ್ಕೆಟಿಂಗ್ ವ್ಯವಹಾರ, ಆಕರ್ಷಣೆಗಾಗಿ ಈ ರೀತಿ ಜಾಹೀರಾತು ನೀಡುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾದ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಶಾಲಾ ಮಾಲಕ: ಭುಗಿಲೆದ್ದ ವಿವಾದ

ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಶಾಲಾ ಮಾಲಕರು

ಸ್ವಾತಂತ್ರ್ಯ ದಿನಾಚರಣೆಯಂದು ಗೈರಾದ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೂಲಕ ಶಾಲಾ ಮಾಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರು ಭಾರತದಲ್ಲಿ ವಾಸಿಸಲು ಅರ್ಹರಲ್ಲ ಎಂದು ಹೇಳಿದ್ದಾರೆ. ಶಾಲಾ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈ ಸಂದೇಶ ಹಂಚಿಕೊಂಡಿದ್ದಾರೆ.

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

ಡ್ಯೂಟಿಯಲ್ಲಿದ್ದ ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಜೆಡಿಎಸ್ ಮುಖಂಡನಿಂದ ಭೀಕರ ಹಲ್ಲೆ: ವಿಡಿಯೊ ವೈರಲ್!

ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಎಸಗಿದ ಜೆಡಿಎಸ್ ಮುಖಂಡ!

Viral Video: ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಸಿಬ್ಬಂದಿಯ ಕಾಲರ್ ಹಿಡಿದು ಸಾರ್ವಜನಿಕರ ಮುಂದೆಯೇ ಸರಿಯಾಗಿ ಥಳಿಸಿದ್ದಾನೆ. ಆಗಸ್ಟ್ 16ರಂದು ಸಂಜೆ 4 ಗಂಟೆಯ ಸುಮಾರಿಗೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಈ ಹಲ್ಲೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

"ಛೇ ನನ್ನ ಮೂಡ್‌ ಹಾಳು ಮಾಡಿದೆ"; ಹನಿಮೂನ್‌ನಲ್ಲಿ ಪೀರಿಯಡ್ಸ್‌ ಆಗಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಹನಿಮೂನ್‌ನಲ್ಲಿ ಪೀರಿಯಡ್ಸ್‌ ಆಗಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ವಿವಾಹವಾದ ಹೊಸತರಲ್ಲಿ ದಂಪತಿಗಳು ಹೊಸ ಜೀವನದ ಕನಸು ಕಾಣುತ್ತಾರೆ. ಹೊಸ ಜೀವನದ ಆರಂಭದಲ್ಲಿ ಪರಸ್ಪರ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದರೆ ಈ ನವ ವಿವಾಹಿತೆಗೆ ಹನಿಮೂನ್‌ ದುಸ್ವಪ್ನವಾಗಿ ಕಾಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹನಿಮೂನ್ ಸಮಯದಲ್ಲಿ ನವವಧು ಮುಟ್ಟಾದಾಗಿದಕ್ಕೆ ಆಕ್ರೋಶಗೊಂಡ ಪತಿ, ಆಕೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ.

ಎಚ್ಚರಿಕೆ ಫಲಕ ಹಾಕಿದ್ದರೂ ಇಂಡಿಯಾ ಗೇಟ್ ಜಲಾವೃತ ಪ್ರದೇಶಕ್ಕೆ ಜಿಗಿದ ಪ್ರವಾಸಿಗರು: ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲ ಎಂದು ನೆಟ್ಟಿಗರು ಕಿಡಿ!

ಸೂಚನೆ ಫಲಕ ಹಾಕಿದ್ದರೂ ಜಲಾವೃತಕ್ಕೆ ಜಿಗಿದ ಪ್ರವಾಸಿಗರು: ವಿಡಿಯೊ ವೈರಲ್

Viral Video: ಪ್ರವಾಸಿಗರ ಗುಂಪೊಂದು ಎಚ್ಚರಿಕೆ ಫಲಕ ಹಾಕಿದ್ದರೂ ಜಲಾವೃತ ಪ್ರದೇಶಕ್ಕೆ ಜಿಗಿದು ನಿಯಮ ಉಲ್ಲಂಘನೆ ಮಾಡಿದ್ದಾರೆ. ದೇಶದ ಪ್ರಮುಖ ಐತಿಹಾಸಿಕ ಸ್ಮಾರಕವಾದ ದೆಹಲಿಯ ಇಂಡಿಯಾ ಗೇಟ್ ಆವರಣದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ಇಲ್ಲಿನ ನಿಯಮ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ನೀರಿಗೆ ಇಳಿದಿದ್ದಾರೆ..

ಸ್ಟೇರಿಂಗ್ ಬಿಟ್ಟು ಟ್ರಕ್ ಮೇಲೆ ಕುಣಿದಾಡಿದ ಚಾಲಕ! ಬ್ಯುಸಿ ರಸ್ತೆ ಮಧ್ಯೆಯೇ ನಡೆದ ಹುಚ್ಚಾಟದ ವಿಡಿಯೊ ವೈರಲ್‌

ಚಲಿಸುತ್ತಿದ್ದ ಟ್ರಕ್ ಏರಿ ಚಾಲಕನ ಡ್ಯಾನ್ಸ್: ಅಪಾಯಕಾರಿ ವಿಡಿಯೊ ವೈರಲ್

Viral Video: ರಸ್ತೆ ಮಧ್ಯೆಯೇ ಚಾಲಕ ಅಪಾಯಕಾರಿ ಸಾಹಸ ಮಾಡಿದ್ದಾನೆ. ಯಾವುದೇ ಭಯವಿಲ್ಲದೇ ಚಲಿಸುತ್ತಿದ್ದ ಟ್ರಕ್‌ನ ಕಿಟಕಿಯಿಂದ ಹೊರಬಂದು, ನೇರವಾಗಿ ವಾಹನದ ಚಾವಣಿ ಮೇಲೆ ನಿಂತು ಸ್ಟೆಪ್ ಹಾಕಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಐದು ನಿಮಿಷ ಡೆಲಿವರಿ ನೀಡಲು ಲೇಟಾಗಿದ್ದಕ್ಕೆ ಬ್ಲಿಂಕಿಟ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೊ ವೈರಲ್!

ಡೆಲಿವರಿ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಗ್ರಾಹಕ!

Viral Video: ಗ್ರಾಹಕರೊಬ್ಬರು ಬ್ಲಿಂಕಿಟ್ ವಿತರಣಾ ಏಜೆಂಟ್ ಮೇಲೆ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾನೆ‌. ಡೆಲಿವರಿ ಸಿಬ್ಬಂದಿಯೂ ಐದು ನಿಮಿಷ ತಡವಾಗಿ ಬಂದಿದ್ದರೂ ಎನ್ನುವ ಕಾರಣಕ್ಕೆ ಕ್ರೂರವಾಗಿ ಹಲ್ಲೆಯನ್ನು ಮಾಡಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಡೆಲಿವರಿ ಏಜೆಂಟ್ ಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.

ಬೆಂಗಳೂರಿನಲ್ಲಿ ಕೇವಲ 3 ಕಿ.ಮೀ ಕ್ರಮಿಸಲು 90 ನಿಮಿಷ: ಕಾರು ರಸ್ತೆಯಲ್ಲೇ ಬಿಟ್ಟು ನಡೆದು ಹೋದ ಉದ್ಯಮಿ!

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಗೆ ಬೇಸತ್ತು ನಡೆದುಕೊಂಡು ಹೋದ ಉದ್ಯಮಿ

Viral News: ದಿನ ನಿತ್ಯ ಪ್ರಯಾಣ ಮಾಡೋರು ಗಂಟೆ- ಘಟ್ಟಲ್ಲೆ ಕಾದು ಸಮಯ ವ್ಯರ್ಥ ಮಾಡುವಂತೆ ಆಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉದ್ಯಮಿಯೊಬ್ಬರು ಬೇಸೆತ್ತು ತನ್ನ ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ನಡೆದುಕೊಂಡು ಹೋದ ಘಟನೆಯೊಂದು ನಡೆದಿದೆ. ವರ್ತೂರಿನಲ್ಲಿ ದಿನನಿತ್ಯದ ಪ್ರಯಾಣವು ಕೇವಲ 3 ಕಿ.ಮೀ ಕ್ರಮಿಸಲು 90 ನಿಮಿಷವರೆಗೆ ಕಾಯಬೇಕಾಯಿತು. ಇದು ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬೆಂಗಳೂರಿನ ಉದ್ಯಮಿ ಹಂಚಿಕೊಂಡಿದ್ದಾರೆ.

ಹಾವು ಕಚ್ಚಿದ ಸಹೋದರನ ಪ್ರಾಣ ಉಳಿಸಲು 1-ಗಂಟೆಯಲ್ಲಿ 150 ಬಾರಿ ಕಪಾಳಮೋಕ್ಷ ಮಾಡಿದ ಅಣ್ಣ!

ವಿಷಕಾರಿ ಹಾವು ಕಚ್ಚಿದ ತಮ್ಮನ ಪ್ರಾಣ ಉಳಿಸಲು ಹರಸಾಹಸ ಪಟ್ಟ ಅಣ್ಣ

Viral News: ಹಾವು ಕಚ್ಚಿದ 21 ವರ್ಷದ ಯುವಕನನ್ನು ಆತನ‌ ಅಣ್ಣನು ಪ್ರಜ್ಞೆ ತಪ್ಪದಂತೆ ನೋಡಿ ಕೊಳ್ಳಲು 150 ಭಾರಿ ಕಪಾಳಮೋಕ್ಷ ಮಾಡಿದ್ದಾನೆ‌. ಈ ರೋಚಕ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಹಾರ್ದೋಯ್‌ನ ಗ್ರಾಮೀಣ ಕೊಟ್ವಾಲಿ ಪ್ರದೇಶದ ಜ್ಯೋತಿ ನಗರದಲ್ಲಿ ನಡೆದಿದೆ. 21 ವರ್ಷದ ಅರುಣ್ ಬೆಳೆಗಳಿಗೆ ನೀರುಣಿಸಲು ತನ್ನ ಅಣ್ಣ ಆಕಾಶ್‌ನ ಜೊತೆ ಹೊಲಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ರಸ್ತೆ ಸೌಲಭ್ಯವಿಲ್ಲದೆ ತುಂಬಿ ಹರಿಯುವ ನದಿಯಲ್ಲೇ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು; ವಿಡಿಯೋ ನೋಡಿ

ಗರ್ಭಿಣಿಯನ್ನು ನದಿಯ ಮದ್ಯೆಯೇ ಹೊತ್ತೊಯ್ದ ಸ್ಥಳೀಯರು

Viral Video: ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕೇರಾಮೇರಿ ಮಂಡಲದ ಕೊಲಂ ಗೂಡಾ ಎಂಬ ಬುಡಕಟ್ಟು ಗ್ರಾಮದಲ್ಲಿ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ಘಟನೆಯೊಂದು ನಡೆದಿದೆ. ಸರಿಯಾದ ರಸ್ತೆ ಸೌಲಭ್ಯ ಇಲ್ಲದೆ ಆಂಬುಲೆನ್ಸ್ ಬರಲು ಸಾಧ್ಯವಾಗದಿದ್ದಾಗ, ಗ್ರಾಮಸ್ಥರು ಬಿದಿರು ಮತ್ತು ಬಟ್ಟೆಯಿಂದ ತಯಾರಿಸಿದ ಸಾಂಪ್ರದಾಯಿಕ 'ಡೋಲಿ' ಬಳಸಿ ಹರಿಯುತ್ತಿದ್ದ ಹಳ್ಳದಲ್ಲಿ ನಡೆದುಕೊಂಡೇ ಆಕೆಯನ್ನು ಸಾಗಿಸಿದ್ದಾರೆ. ಈ ಘಟನೆ ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಎಐ ನೆರವಿನಿಂದ ಕಳೆದುಹೋದ ಚಪ್ಪಲಿ ಹುಡುಕಿದ ವ್ಯಕ್ತಿ: ತಂತ್ರಜ್ಞಾನದ ಚಮತ್ಕಾರಕ್ಕೆ ನೆಟ್ಟಿಗರು ಫಿದಾ!

ಕಳೆದು ಹೋದ ಚಪ್ಪಲಿ ಪತ್ತೆ ಮಾಡಲು ಎಐ ತಂತ್ರಜ್ಞಾನ ಬಳಸಿದ ವ್ಯಕ್ತಿ

Viral News: ವ್ಯಕ್ತಿಯೊಬ್ಬ ಕಳೆದುಹೋದ ಚಪ್ಪಲಿಯನ್ನು ಹುಡುಕಲು ಎಐ ತಂತ್ರಜ್ಞಾನದ ಸಹಾಯ ಕೇಳಿದ್ದಾನೆ. ಒಂದು ಪಾದರಕ್ಷೆಯ ಚಿತ್ರವನ್ನು ತೆಗೆದುಕೊಂಡು ತನ್ನ ಕಾಣೆಯಾದ ಇನ್ನೊಂದು ಜೋಡಿಯನ್ನು ಗುರುತಿಸಲು ಸಹಾಯ ಮಾಡುವಂತೆ ಚಾಟ್ ಜಿಟಿಪಿಯನ್ನು ಕೇಳಿದ್ದಾನೆ. ಈ ಫೋಟೋದ ಆಧಾರದ ಮೇಲೆ ಎಐ ಚಪ್ಪಲಿ ಇರುವ ಸ್ಥಳವನ್ನು ಪತ್ತೆ ಮಾಡಿದೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎಐ ಚಮತ್ಕಾರಕ್ಕೆ ಫಿದಾ ಆಗಿದ್ದಾರೆ.

ಮುಖಕ್ಕೆ ಅಂಟಿಕೊಂಡ ಆಕ್ಟೋಪಸ್: ಕೊನೆಗೂ ಪ್ರಾಣ ಉಳಿಸಿಕೊಂಡ ಮೀನುಗಾರ! ಬೆಚ್ಚಿಬೀಳಿಸುವ ವಿಡಿಯೊ ವೈರಲ್‌

ಸಮುದ್ರದಲ್ಲಿ ಏಕಾಏಕಿ ದಾಳಿ ಮಾಡಿದ ಆಕ್ಟೋಪಸ್: ವಿಡಿಯೊ ವೈರಲ್

Viral Video: ಸಮುದ್ರದ ಜಲಚರವೊಂದು ಮೀನುಗಾರರೊಬ್ಬರಿಗೆ ಮರೆಯಲಾಗದ ಭಯಾನಕ ಅನುಭವ ನೀಡಿದೆ. ಜುಲೈ 10ರಂದು ಫಿಲಿಪೈನ್ಸ್‌ನ ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ದ್ವೀಪದ ಬಳಿ ಈ ಘಟನೆ ನಡೆದಿದೆ. ಮೀನುಗಾರರೊಬ್ಬರು ಆಕ್ಟೋಪಸ್ ಹಿಡಿಯಲು ಪ್ರಯತ್ನಿಸುವಾಗ ಏಕಾಏಕಿ ದಾಳಿ ಮಾಡಿದೆ. ವೈರಲ್ ವಿಡಿಯೊದಲ್ಲಿ ಮೀನುಗಾರ ತನ್ನ ಮುಖಕ್ಕೆ ಅಂಟಿಕೊಂಡಿದ್ದ ಆಕ್ಟೋಪಸ್ ಬಿಡಿಸಿಕೊಳ್ಳಲು ಹರಸಾಹಸ ಪಡುವ ದೃಶ್ಯ ಕಂಡುಬಂದಿದೆ.

ಮನೆಗೆ ನುಗ್ಗಲು ಯತ್ನಿಸಿದ ಹೆಬ್ಬಾವಿನ ಬೃಹತ್‌ ಗಾತ್ರ ನೋಡಿಯೇ ಬೆಚ್ಚಿಬಿದ್ದ ಸ್ಥಳೀಯರು: ವಿಡಿಯೊ ಇಲ್ಲಿದೆ

ಮನೆಯೊಳಗೆ ನುಗ್ಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವು: ವಿಡಿಯೊ ನೋಡಿ

Viral Video: ಜನ ವಸತಿ ಪ್ರದೇಶದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರಾಮಸ್ಥರು ಮತ್ತು ದಾರಿಹೋಕರು ಸುತ್ತಲೂ ಜಮಾಯಿಸಿದ್ದರಿಂದ ಹೆಬ್ಬಾವು ಮುಖ್ಯ ರಸ್ತೆಯಲ್ಲಿ ಸಾಗಿ ಜನವಸತಿ ಪ್ರದೇಶದ ಒಳಗೆ ನುಗ್ಗಲು ಯತ್ನಿಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವಿನ ಗಾತ್ರ ನೋಡಿಯೇ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

"ಮೊನಲಿಸಾಗೆ ಹೋಲಿಸಬೇಡಿ": ಕನ್ವರ್ ಯಾತ್ರೆಯಲ್ಲಿ ವೈರಲ್ ಆದ ಮಾನ್ಸಿ ಠಾಕೂರ್ ಹೀಗೆ ಮನವಿ ಮಾಡಿದ್ದೇಕೆ?

ಕುಂಭಮೇಳದ ಮೊನಲಿಸಾಳಂತೆ ಕನ್ವರ್ ಯಾತ್ರೆಯಲ್ಲಿ ಮಾನ್ಸಿ ಠಾಕೂರ್ ವೈರಲ್‌

Viral Video: ಮಾನ್ಸಿ ರಜಪೂತ್ ಎಂದೂ ಕರೆಯಲ್ಪಡುವ ಮಾನಸಿ ಠಾಕೂರ್, 61 ಲೀಟರ್ ನೀರು ಹೊತ್ತುಕೊಂಡು 180 ಕಿಲೋ ಮೀಟರ್‌ ದೂರದ ಕನ್ವರ್ ಯಾತ್ರೆ ಕೈಗೊಂಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಕುಂಭಮೇಳದ ಯುವತಿ ಮೊನಲಿಸಾ ಜತೆ ಹೋಲಿಕೆ ಮಾಡಿರುವ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಸ್ಲಂನಲ್ಲಿ ಹುಟ್ಟಿ ಬೆಳೆದ ಯುವಕ ಇಂದು ಫೋನ್‌ಪೇಯಲ್ಲಿ 33 ಲಕ್ಷ ರುಪಾಯಿ ಸಂಬಳ ಪಡೆವ ಉದ್ಯೋಗಿ; ಸ್ಫರ್ತಿಯ ಕಥೆ ಇಲ್ಲಿದೆ

ಬಡತನದಲ್ಲಿ ಅರಳಿದ ಪ್ರತಿಭೆ ಇಂದು ಪ್ರತಿಷ್ಠಿತ ಕಂಪನಿಯ ಉದ್ಯೋಗಿ

Viral News: ಬಡತನದಲ್ಲೇ ಶಿಕ್ಷಣ ಪಡೆದು ಯುವಕನೋರ್ವ ಇಂದು ಪ್ರತಿಷ್ಠಿತ ಕಂಪನಿ ಫೋನ್‌ಪೇಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸ್ಲಂನಲ್ಲಿ ಬೆಳೆದು, ಅನೇಕ ಕಷ್ಟಗಳ ನಡುವೆ ಶಿಕ್ಷಣ ಪೂರ್ತಿಗೊಳಿಸಿದ ಅವರು ಇಂದು 33 ಲಕ್ಷ ರುಪಾಯಿಯ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸದ್ಯ ಈ ಯುವಕನ ಸ್ಫೂರ್ತಿದಾಯಕ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌.

ಟ್ಯಾಕ್ಸಿ ಚಾಲಕನಿಗೆ ಮಹಿಳೆಯರಿಂದ ಬ್ಲ್ಯಾಕ್‌ಮೇಲ್: ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ನೀಡುವುದಾಗಿ ಬೆದರಿಕೆ

ಟ್ಯಾಕ್ಸಿ ಚಾಲಕನಿಗೆ 10,000 ರೂ. ನೀಡುವಂತೆ ಬೆದರಿಕೆ ಹಾಕಿದ ಮಹಿಳೆಯರು

Viral Video: ಚಲಿಸುತ್ತಿದ್ದ ಟ್ಯಾಕ್ಸಿ ಚಾಲಕನಿಗೆ ಕಿರುಕುಳ ಎಸಗಿ ಹತ್ತು ಸಾವಿರ ರೂಪಾಯಿ ನೀಡದಿದ್ದರೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸುವುದಾಗಿ ಮಹಿಳೆಯರು ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ್‌ನಿಂದ ಭಿವಂಡಿ ಕಡೆಗೆ ತೆರಳುತ್ತಿದ್ದ ಟ್ಯಾಕ್ಸಿಯಲ್ಲಿ ಈ ದೌರ್ಜನ್ಯ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ.

ಜನಪ್ರತಿನಿಧಿಗಳ ಗಮನ ಸೆಳೆಯಲು ಹೊಂಡ ಬಿದ್ದ ರಸ್ತೆಗೆ ಪೂಜೆ ಮಾಡಿದ ಸಾರ್ವಜನಿಕರು; ವಿಡಿಯೋ ನೋಡಿ

ಹೊಂಡ ಬಿದ್ದ ರಸ್ತೆಗೆ 'ಪೂಜೆ-ಆರತಿ' ಮಾಡಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು

Viral Video: ಪುಣೆಯ ಪ್ರಮುಖ ಐಟಿ ಹಬ್ ಗಳಾದ ಹಿಂಜವಡಿ,ಮಾನ್ ಮತ್ತು ಮರುಂಜಿಯಲ್ಲಿ ರಸ್ತೆ ಗುಂಡಿಯ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನಪ್ರತಿನಿಧಿಗಳ ಗಮನ ಸೆಳೆಯಲೆಂದು ಅಲ್ಲಿನ ನಾಗರಿಕರು ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ 'ಪೂಜೆ' ಮತ್ತು 'ಆರತಿ' ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿಗಳಿಂದ ಎಣ್ಣೆ ಪಾರ್ಟಿ! ವೈರಲ್‌ ಆಯ್ತು ವಿಡಿಯೋ

ಶಾಲಾ ತರಗತಿಯೊಳಗೆ ವಿದ್ಯಾರ್ಥಿಗಳಿಂದ ಮದ್ಯಪಾನ: ವಿಡಿಯೊ ವೈರಲ್

Viral Video: ಶಾಲೆಗೆ ಬರುವ ಮಕ್ಕಳು ಕೊಠಡಿಯಲ್ಲೆ ಕುಳಿತು ಮದ್ಯಪಾನ ಮಾಡಿರುವ ಅಘಾತಕಾರಿ ವಿಡಿಯೊವೊಂದು ವೈರಲ್ ಆಗಿದೆ. ತರಗತಿ ಯೊಳಗೆ ಕುಳಿತ ವಿದ್ಯಾರ್ಥಿಗಳ ಗುಂಪು ಬಾಟಲಿಗಳು ಮತ್ತು ಆಹಾರ ಪ್ಯಾಕೆಟ್‌ಗಳನ್ನು ಹಿಡಿದು ಕುಳಿತುಕೊಂಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಕ್ಕಲೈ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೋಷಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಛೇ ಇವನೆಂತಾ ಪಾಪಿ; ದೇವಾಲಯದ ಬಳಿ ಕುಳಿತಿದ್ದ ಭಿಕ್ಷುಕಿಯ ಮೇಲೆ ಹಲ್ಲೆ ನಡೆಸಿದ ಅಂಗಡಿ ಮಾಲೀಕ

ದೇವಾಲಯದ ದ್ವಾರದ ಬಳಿ ಕುಳಿತಿದ್ದ ಭಿಕ್ಷುಕಿಯ ಮೇಲೆ ಹಲ್ಲೆ!

Viral Video: ಮಹಿಳಾ ಭಿಕ್ಷುಕಿಯೊಬ್ಬರ ಮೇಲೆ ವ್ಯಕ್ತಿಯೋರ್ವ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗೆ ಕುಳಿತಿದ್ದ ಆಕೆಯ ಮಕ್ಕಳು ದೇವಾಲಯದ ಹೊರಗೆ ನಿಲ್ಲಿಸಿದ್ದ ಬೈಕನ್ನು ಮುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಭೀಕರವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇಂಡಿಗೋ ಫ್ಲೈಟ್ ರದ್ದು: ವಿಮಾನ ನಿಲ್ದಾಣದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಿದ ಮಹಿಳೆ

ಫ್ಲೈಟ್ ರದ್ದು! ವಿಮಾನ ನಿಲ್ದಾಣದಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

Viral Video: ವಿಮಾನ ರದ್ದಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಕೋಪಗೊಂಡು ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೂ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು‌. ಆದರೆ ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಜಗಳವಾಡಿದ್ದು ಸಾರ್ವಜನಿಕ ವಸ್ತುವನ್ನು ಹಾನಿಗೊಳಿಸಿದ್ದಾರೆ

ಆರ್ಥಿಕ ಸ್ವಾತಂತ್ರ್ಯವೇ ಮುಖ್ಯ: ಐಟಿ ಕೆಲಸ ಬಿಡಲು ಹೇಳಿದ ಯುವಕನ ಮದುವೆ ಪ್ರಪೋಸಲ್ ಅನ್ನೇ ಕ್ಯಾನ್ಸಲ್ ಮಾಡಿದ ಯುವತಿ!

ದುಪ್ಪಟ್ಟು ವೇತನ ಗಳಿಸುವ ವರನನ್ನೇ ರಿಜೆಕ್ಟ್ ಮಾಡಿದ ಯುವತಿ: ಕಾರಣವೇನು?

Viral News: ಯುವತಿಯರು ಇಂದು ಆರ್ಥಿಕ ಸ್ವಾವಲಂಬಿಯಾಗಿ ಬದುಕಲು ಇಚ್ಚಿಸಿದ್ದು ತಾವು ಉತ್ತಮ ಉದ್ಯೋಗದಲ್ಲಿದ್ದಾರೆ. ಹೀಗಾಗಿ ವರನಿಂದ ದುಪ್ಪಟ್ಟು ಆದಾಯ ಬರುತ್ತಿದ್ದರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಅನೇಕ ಯುವತಿಯರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ಯುವತಿಯೊಬ್ಬಳು ತಿಂಗಳಿಗೆ ಎರಡು ಲಕ್ಷ ಬರುತ್ತಿದ್ದ ಯುವಕನ ಪ್ರಪೋಸಲ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ‌. ಇದಕ್ಕೆ ಕಾರಣವೆನೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ...

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ವೇಳೆ ರಸ್ತೆಯಲ್ಲೇ ಕುಡಿದು ಗಲಾಟೆ:  ವೈರಲ್‌ ಆಗ್ತಿದೆ ವಿಡಿಯೋ

ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಡಿದು ರಂಪಾಟ ಮಾಡಿದ ಪಾಕಿಸ್ತಾನಿ ನಾಗರಿಕರು

Viral Video: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಈ ದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾರ್ವಜನಿಕರು ಪರಸ್ವರ ಗಲಾಟೆ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಪಾಕಿಸ್ತಾನಿ ನಾಗರಿಕರು ರಸ್ತೆಗಳಲ್ಲಿ ಜಗಳವಾಡುತ್ತಾ, ಪರಸ್ಪರ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಕಂಡು ಬಂದಿದೆ.

Loading...