ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಎಸ್​ಸಿಒ ಶೃಂಗಸಭೆ: ಗ್ರೂಪ್ ಫೋಟೊದಿಂದ ಪ್ರಧಾನಿ ನರೇಂದ್ರ ಮೋದಿಯನ್ನು ಕ್ರಾಪ್‌ ಮಾಡಿದ ಪಾಕಿಸ್ತಾನ

ಎಸ್​ಸಿಒ ಶೃಂಗಸಭೆಯ ಫೋಟೊದಿಂದ ಮೋದಿ ಕ್ರಾಪ್‌ ಮಾಡಿದ ಪಾಕಿಸ್ತಾನ

Shehbaz Sharif: ಎಸ್‌ಸಿಒ ಶೃಂಗಸಭೆಯ ಮೂಲ ಫೋಟೊದಲ್ಲಿ ಹಲವು ವಿಶ್ವ ನಾಯಕರಿದ್ದರೂ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕಚೇರಿ ಹಂಚಿಕೊಂಡ ಚಿತ್ರದಲ್ಲಿ ಇತರ ನಾಯಕರನ್ನು ಕ್ರಾಪ್ ಮಾಡಿ ಷರೀಫ್ ಅವರನ್ನು ಮಧ್ಯದಲ್ಲಿ ಕಾಣುವಂತೆ ಮಾಡಲಾಗಿದೆ ಎಂಬುದು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ಹಂಚಿಕೊಂಡ ಮೂಲ ಚಿತ್ರದಲ್ಲಿ ಷರೀಫ್ ಬಲಭಾಗದಿಂದ ನಾಲ್ಕನೇ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ.

ಆ್ಯಪ್ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾದ ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕ: ಆಕ್ರೋಶ ಹೊರ ಹಾಕಿದ ಮಹಿಳೆ

ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ವಂಚನೆ: ಮಹಿಳೆ ಹೇಳಿದ್ದೇನು?

Viral News: ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುವ ಘಟನೆಗಳು ದಿನಕ್ಕೆ ಒಂದಾದರೂ ನಡೆಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರ‍್ಯಾಪಿಡೋ ಚಾಲಕನೊಬ್ಬ ಆ್ಯಪ್‌ನಲ್ಲಿ ತೋರಿಸಿದ ದರಕ್ಕಿಂತ 900 ರುಪಾಯಿ ಹೆಚ್ಚುವರಿ ಹಣವನ್ನು ದೋಚಿದ್ದಾನೆ. ಈ ಬಗ್ಗೆ ತಮಗಾದ ಅನುಭವವನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ʼʼಇದು ನಮಗೆ ಸಿಕ್ಕ ಮರುಜನ್ಮʼʼ: ಭಯಾನಕ ಅನುಭವ ಬಿಚ್ಚಿಟ್ಟ ನೇಪಾಳ ಪ್ರವಾಹದಲ್ಲಿ ಬದುಕುಳಿದ ಮಹಿಳೆ

ನೇಪಾಳ ಪ್ರವಾಹದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ ಹೇಳೆದ್ದೇನು?

Viral Video: ಹಿಮನದಿ ಕುಸಿತ, ಬಂಡೆ ಕುಸಿತ ಹಾಗೂ ಹಠಾತ್ ಪ್ರವಾಹದಂತಹ ದುರಂತಗಳು ಇತ್ತೀಚೆಗೆ ಪದೇ ಪದೆ ಸಂಭವಿಸುತ್ತಿವೆ. ಅದರಲ್ಲೂ ನೇಪಾಳದ ಜಲ ಪ್ರವಾಹದ ಜಾಲಕ್ಕೆ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ. ಈ ನಡುವೆ ತೀವ್ರ ಪ್ರವಾಹಕ್ಕೆ ಸುತ್ತಮುತ್ತಲಿನ ಅನೇಕ ಮನೆಗಳು ಧ್ವಂಸಗೊಂಡರೂ ಹಸಿರು ಮನೆಯೊಂದು ಮಾತ್ರ ಅಲುಗಾಡದೆ ನಿಂತಿತ್ತು. ಆ ಮನೆಯಲ್ಲಿದ್ದ ಮಹಿಳೆ ತಮ್ಮ ಅನುಭವ ವಿವರಿಸಿದ್ದಾರೆ.

Viral Video: ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ಸೂರತ್ ರೈಲ್ವೆ ನಿಲ್ದಾಣದ ಮಳಿಗೆಯಲ್ಲಿ ಇಲಿ ಓಡಾಟ: ವಿಡಿಯೊ ವೈರಲ್‌

Viral Video: ಗುಜರಾತ್‌ನ ಸೂರತ್ ರೈಲ್ವೆ ನಿಲ್ದಾಣದ ಫುಡ್ ಸ್ಟಾಲ್‌ನಲ್ಲಿ ಇಲಿಯೊಂದು ಪಫ್ ತಿನ್ನುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯವು ಆಹಾರ ಮಳಿಗೆಗಳಲ್ಲಿನ ನೈರ್ಮಲ್ಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಆಡಳಿತ ಮಂಡಳಿ ತಕ್ಷಣ ಕ್ರಮಕ್ಕೆ ಮುಂದಾಗಿದೆ.

ಎತ್ತರ ಕಮ್ಮಿ ಎನ್ನುವ ಕಾರಣಕ್ಕೆ ಉತ್ತಮ ಗುಣವಿರುವ ಹುಡುಗನನ್ನು ತಿರಸ್ಕರಿಸಿದ ಯುವತಿ! ಇಂಟರ್‌ನೆಟ್‌ನಲ್ಲಿ ಬಿಸಿಬಿಸಿ ಚರ್ಚೆ

ಎತ್ತರ ಕಮ್ಮಿ ಎಂಬ ವಿಚಾರಕ್ಕೆ ಒಳ್ಳೆಯ ಹುಡುಗನನ್ನು ತಿರಸ್ಕರಿಸಿದ ಯುವತಿ

Viral News: ಮದುವೆ ವಯಸ್ಸಿಗೆ ಬಂದ ಯುವಕ-ಯುವತಿಯರಿಗೆ ಸೂಕ್ತ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸಾಹಸ. ಅದರಲ್ಲೂ ಇಂದು ಒಳ್ಳೆಯ ಗೌರವಯುತ ಸಂಬಂಧಕ್ಕಿಂತ ಶ್ರೀಮಂತಿಕೆ, ಉದ್ಯೋಗ, ರೂಪ ನೋಡಿ ಆಯ್ಕೆ ಮಾಡಿಕೊಳ್ಳುವವರೇ ಹೆಚ್ಚು. ಇಲ್ಲೊಬ್ಬ ಯುವತಿ ಉತ್ತಮ ಗುಣವಿರುವ ಹುಡುಗ ಇದ್ದರೂ ಆತನ ಎತ್ತರ ಕಮ್ಮಿ ಇದೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾಳೆ.

ವೃದ್ಧೆಗೆ 50 ಸಾವಿರ ರುಪಾಯಿಯ ಡಿಯೋರ್ ಸನ್‌ ಗ್ಲಾಸ್‌ ಗಿಫ್ಟ್ ನೀಡಿದ ಸಿಎಂ ವಿಜಯ್; ವಿಡಿಯೊ ವೈರಲ್‌

ವೃದ್ಧೆಗೆ ಚಶ್ಮಾ ಉಡುಗೊರೆ ನೀಡಿದ ಸಿಎಂ ವಿಜಯ್: ಸರಳತೆಗೆ ನೆಟ್ಟಿಗರು ಫಿದಾ

Viral Video: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೆಟ್ಟೂರುಗೆ ಭೇಟಿ ನೀಡಿ ಕಾವೇರಿ ಡೆಲ್ಟಾ ಭಾಗದ 'ಸಂಬಾ' ಭತ್ತ ಬೇಸಾಯ ಪ್ರದೇಶಕ್ಕೆ ಜಲಾಶಯದಿಂದ ನೀರು ಹರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಸೇರಿದ್ದರೂ ವೃದ್ಧೆಯೊಬ್ಬರನ್ನು ಗಮನಿಸಿ ತಮ್ಮ ಬೆಲೆಬಾಳುವ 'ಕ್ರಿಶ್ಚಿಯನ್ ಡಿಯೋರ್' ಕೂಲಿಂಗ್‌ ಗ್ಲಾಸ್‌ ಉಡುಗೊರೆಯಾಗಿ ನೀಡಿದರು. ಅಲ್ಲದೆ ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕಿದರು.

ದುಪ್ಪಟಾ ಬಳಸಿ ಪ್ರವಾಹಕ್ಕೆ ಸಿಲುಕಿದ ಬೈಕ್ ಸವಾರನ ಪ್ರಾಣ ಉಳಿಸಿದ ನವದಂಪತಿ; ರೋಚಕ ಕಾರ್ಯಾಚರಣೆಯ ವಿಡಿಯೊ ನೋಡಿ

ದುಪ್ಪಟಾ ಬಳಸಿ ಬೈಕ್ ಸವಾರನ ಪ್ರಾಣ ಉಳಿಸಿದ ನವದಂಪತಿ: ವಿಡಿಯೊ ವೈರಲ್

Viral Video: ದಿಢೀರ್ ಪ್ರವಾಹಕ್ಕೆ ಸಿಲುಕಿದ ಬೈಕ್ ಸವಾರನೊಬ್ಬನನ್ನು ನವದಂಪತಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಮಹಿಳೆ ಧರಿಸಿದ್ದ ದುಪ್ಪಟಾವನ್ನೇ ರಕ್ಷಣಾ ಹಗ್ಗವನ್ನಾಗಿ ಬಳಸಿ ಚಾಲಕನನ್ನು ಕಾಪಾಡಲಾಗಿದೆ. ಈ ಘಟನೆಯ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ದಂಪತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು, ತಿಂದ್ರೆ ಸಮಸ್ಯೆ ಗ್ಯಾರಂಟಿ!

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು!

ನೇಪಾಳದ ಭೀಕರ ಪ್ರವಾಹದಿಂದಾಗಿ ಬಿಹಾರದ ಗಂಡಕ್ ನದಿಗೆ ಅಪರಿಚಿತ ಹಾಗೂ ವಿಚಿತ್ರ ತಳಿಯ ಮೀನುಗಳು ಹರಿದುಬಂದಿವೆ, ಈ ಮೀನುಗಳನ್ನು ಸೇವಿಸಿದ ಕೆಲವರ ಅನಾರೋಗ್ಯಕ್ಕೆ ಒಳಗಾದ ವರದಿಗಳು ಬಂದ ನಂತರ ಬಿಹಾರ ಸರ್ಕರವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

‘ʼಮಹಿಳೆಯರು ಮನೆಗೇ ಸೀಮಿತವಾಗಿರಬೇಕು’ʼ: ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡ ಅಬೂಬಕರ್ ಮುಸ್ಲಿಯಾರ್

ವಿವಾದಕ್ಕೆ ತಿರುಗಿದ ಮಹಿಳೆಯರ ಕುರಿತ ಮುಸ್ಲಿಯಾರ್ ಹೇಳಿಕೆ

AP Aboobacker Musliyar: ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಗೇ ಸೀಮಿತರಾಗಬೇಕು ಎಂದು ಕೇರಳಂನ ಹಿರಿಯ ಮುಸ್ಲಿಮ್‌ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಸಿಪಿಐ(ಎಂ) ಹಾಗೂ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನಿರ್ಬಂಧಿಸುವ ಪ್ರಯತ್ನವನ್ನು ವಿರೋಧಿಸಿದ್ದಾರೆ.

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

ಸಾರ್ವಜನಿಕ ರಸ್ತೆಯನ್ನು ಪಿಕ್ನಿಕ್ ಸ್ಪಾಟ್‌ನಂತೆ ಬಳಸಿಕೊಂಡ ಕುಟುಂಬ

Rajasthan expressway: ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತನೆ ತೋರುವ ಅನೇಕ ಘಟನೆಗಳು ವೈರಲ್ ಆಗುತ್ತವೆ. ಎಲ್ಲೆಂದರಲ್ಲಿ ಕಸ ಹಾಕುವುದು, ಪ್ರವಾಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು, ರೀಲ್ಸ್ ಚಿತ್ರೀಕರಣ ಮಾಡುವುದು ಹೀಗೆ ಮನ ಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನ ಎಕ್ಸ್‌ಪ್ರೆಸ್‌ ವೇಯ ಮಧ್ಯದಲ್ಲಿ ಕುಟುಂಬವೊಂದು ಕುಳಿತು ಊಟ ಮಾಡುತ್ತಿರುವ ದೃಶ್ಯ ಕಂಡುಬಂದಿದೆ‌.

ನೇಪಾಳ ಪ್ರವಾಹದ ವೇಳೆ ಕಂಡುಬಂದ ಹೃದಯವಿದ್ರಾವಕ ದೃಶ್ಯ: ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನು ಹುಡುಕುತ್ತ ಹೊರಟ ಬಾಲಕ!

ನೇಪಾಳದಲ್ಲಿ ಪೋಷಕರಿಂದ ಬೇರ್ಪಟ್ಟ ಅಣ್ಣ-ತಂಗಿ: ಕರುಳು ಹಿಂಡುವ ದೃಶ್ಯ

Viral Video: ನೇಪಾಳ ಪ್ರವಾಹದಲ್ಲಿ ಕಂಡು ಬಂದ ಈ ದೃಶ್ಯ ಇಡೀ ಜಗತ್ತನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಪೋಷಕರಿಂದ ಬೇರ್ಪಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಮೇಲೆ ಹೊತ್ತುಕೊಂಡು ತನ್ನವರಿಗಾಗಿ ಹುಡುಕುತ್ತಿರುವ ಕರುಳು ಹಿಂಡುವ ದೃಶ್ಯ ಇದಾಗಿದ್ದು, ನೆಟ್ಟಿಗರು ಈ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ನೇಪಾಳ ಪ್ರವಾಹ: ಮಹಿಳೆಯ ಸೀರೆಯಿಂದ ಉಳಿಯಿತು 21 ಯಾತ್ರಿಕರ ಜೀವ!

ನೇಪಾಳ ನೆರೆ: ತಮಿಳುನಾಡು ಯಾತ್ರಿಕರ ಪ್ರಾಣ ಉಳಿಸಿದ ಸೀರೆ!

Viral Video: ಟಿಬೆಟ್ ಗಡಿಯ ಬಳಿ ಉಂಟಾದ ದಿಢೀರ್ ಪ್ರವಾಹದ ವೇಳೆ ತಮಿಳುನಾಡಿನ ಯಾತ್ರಿಕರ ಗುಂಪೊಂದು ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಅವರು ಪ್ರಾಣ ಉಳಿಸಿಕೊಳ್ಳಲು ಮಹಿಳೆಯೊಬ್ಬರ ಸೀರೆಯನ್ನು ಬಳಸಿದ್ದಾರೆ. ಸೀರೆಯನ್ನು ಹಿಡಿದುಕೊಂಡು ಜಾರುತ್ತಿದ್ದ ಇಳಿಜಾರಿನಿಂದ ಯಾತ್ರಿಕರು ಮೇಲೇರಿದ್ದಾರೆ.

Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!

ಸ್ಮಶಾನದಲ್ಲಿ ಮೃತದೇಹದ ಮಾಂಸ ತಿಂದ ಮಹಿಳೆ: ವಿಡಿಯೊ ವೈರಲ್‌

ಮಹಿಳೆಯೊಬ್ಬಳು ಚಿತಾಗಾರವೊಂದರಿಂದ ಮೃತದೇಹದ ಮಾಂಸವನ್ನು ತಿನ್ನುತ್ತಿರುವ ದೃಶ್ಯವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆ ಮಧ್ಯ ಪ್ರದೇಶದ ಉಜ್ಜಯಿನಿನಲ್ಲಿ ನಡೆದಿದ್ದು ಮಹಿಳೆಯನ್ನು ಕಾಳಿ ನಂದ್ ಗಿರಿ ಎಂದು ಗುರುತಿಸಲಾಗಿದೆ. ಆಕೆ ಉರಿಯುತ್ತಿರುವ ಚಿತೆಯ ಹತ್ತಿರ ನಿಂತು ಮೂಳೆಗಳು ಮತ್ತು ತಲೆಬುರುಡೆಗಾಗಿ ಹುಡುಕುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

Nepal Floods: ಭೀಕರ ಪ್ರವಾಹಕ್ಕೆ ಸುತ್ತಮುತ್ತಲ ಕಟ್ಟಡಗಳೆಲ್ಲ ಕುಸಿದರೂ ಗಟ್ಟಿಯಾಗಿ ಉಳಿದ ಮನೆ; ವೈರಲ್‌ ವಿಡಿಯೊ ಮೂಲಕ ಕಾರಣ ವಿವರಿಸಿದ ತಜ್ಞರು

ಸುತ್ತಲೂ ಪ್ರವಾಹ, ಕುಸಿದ ಕಟ್ಟಡಗಳು; ಈ ಮನೆ ಮಾತ್ರ ಉಳಿದಿದ್ದೇಕೆ?

ನೇಪಾಳದಲ್ಲಿ ಭಾರಿ ನೀರು, ಬಂಡೆ, ಕೆಸರು ಹಾಗೂ ಮರಗಳೊಂದಿಗೆ ಬಂದ ದಿಢೀರ್‌ ಪ್ರವಾಹಕ್ಕೆ ಹಲವು ಕಟ್ಟಡಗಳು ಕುಸಿದರೂ, ಹಸಿರು ಬಣ್ಣದ ಮನೆಯೊಂದು ಸುರಕ್ಷಿತವಾಗಿ ಉಳಿದಿದೆ. ದೃಢವಾಗಿ ಉಳಿದಿದೆ. ಆರ್‌ಸಿಸಿ ಫ್ರೇಮ್, ಬಲಿಷ್ಠ ಕಂಬ–ಬೀಮ್–ಅಡಿಪಾಯದ ಜೋಡಣೆ ಹಾಗೂ ಮುಖ್ಯ ಪ್ರವಾಹದ ಮಾರ್ಗದಿಂದ ಸ್ವಲ್ಪ ದೂರದಲ್ಲಿದ್ದ ಸ್ಥಳ ಈ ಮನೆ ಉಳಿಯಲು ಪ್ರಮುಖ ಕಾರಣ ಎಂದು ತಜ್ಞರು ವಿವರಿಸಿದ್ದಾರೆ.

ಬೆಂಗಳೂರು ಟ್ಯಾಕ್ಸಿ ಚಾಲಕನಿಂದ ಮಹಿಳೆಗೆ ವಂಚನೆ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ!

ಟ್ಯಾಕ್ಸಿ ಹಗರಣ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ ಮಾಡಿದ ಚಾಲಕ

Viral News: ಯುಕೆಯಿಂದ ಭಾರತಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಟ್ಯಾಕ್ಸಿ ಚಾಲಕನು ಕೇವಲ14 ಕಿ.ಲೋ ಮೀಟರ್ ಪ್ರಯಾಣಕ್ಕೆ 4,000 ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ಆಕೆ ಬರೆದುಕೊಂಡಿರುವ ಪೋಸ್ಟ್‌ನಲ್ಲಿ, ಕ್ಯಾಬ್‌ಗೆ ಹೋಗುವ ಮೊದಲು ಚಾಲಕನನ್ನು ಶುಲ್ಕದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ್ದಾಗಿ ಅವರು ಹಂಚಿಕೊಂಡಿದ್ದಾರೆ.

ನೇಪಾಳ ಭೀಕರ ಪ್ರವಾಹದಿಂದ ಶಾಲೆ ಧ್ವಂಸ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

ನೇಪಾಳ ಪ್ರವಾಹ: ಶಾಲೆ ಧ್ವಂಸವಾಗುವ ಮೊದಲೇ ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕ

Nepal floods: ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಶಾಲೆಯ ಶಿಕ್ಷಕರೊಬ್ಬರ ಸಮಯ ಪ್ರಜ್ಞೆಯಿಂದ ಸಾವಿರಾರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಹದ ಭೋರ್ಗೇರೆತಕ್ಕೆ ಶಾಲೆ ಕೊಚ್ಚಿಹೋಗುವ ಮೊದಲೇ 1,643 ಮಕ್ಕಳ ಪ್ರಾಣವನ್ನು ಶಿಕ್ಷಕ ಉಳಿಸಿದ್ದಾರೆ.

ನೇಪಾಳ ಪ್ರವಾಹ; ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ  2 ಗೋಲ್ಡನ್ ರಿಟ್ರೈವರ್‌ ನಾಯಿಗಳು!

ನೇಪಾಳ ಪ್ರವಾಹ; ವೈರಲ್ ಆಗ್ತಿವೆ ಹೃದಯಸ್ಪರ್ಶಿ ವಿಡಿಯೋಗಳು

ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್​ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ.

ನೇಪಾಳ ಪ್ರವಾಹ: ತೇಲಿಬಂದ ಸೇಫ್‌ ಲಾಕರ್ ಒಡೆದು 93 ಲಕ್ಷ ರುಪಾಯಿ ದೋಚಿದ ಖದೀಮರು

ನೇಪಾಳ ಪ್ರವಾಹದ ವೇಳೆಯಲ್ಲೂ 93 ಲಕ್ಷ ರುಪಾಯಿ ಕಳವು

Viral News: ಪ್ರಕೃತಿ ವಿಕೋಪದಿಂದ ತಲೆಯೆತ್ತಲಾಗದ ಸಂದರ್ಭದಲ್ಲೂ ಅಮಾನವೀಯ ಘಟನೆಯೊಂದು ನಡೆದಿದೆ. ತೀವ್ರ ಪ್ರವಾಹದ ನಡುವೆ ಕೊಚ್ಚಿಕೊಂಡು ಬಂದಿದ್ದ ಸೇಫ್ ಲಾಕರ್ ಒಡೆದು 93 ಲಕ್ಷ ರುಪಾಯಿ ಹಣ ದೋಚಿದ್ದಾರೆ‌. ಧಾಡಿಂಗ್‌ನಲ್ಲಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಿದ್ದು, 92.68 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.

60 ಕಿ.ಮೀ. ಓಲಾ ಪ್ರಯಾಣಕ್ಕೆ 5,662 ರುಪಾಯಿ ವಸೂಲಿ ಮಾಡಿದ ಚಾಲಕ: ದುಬಾರಿ ಬಿಲ್‌ ನೋಡಿ ಬೆಚ್ಚಿಬಿದ್ದ ಗ್ರಾಹಕರು

60 ಕಿ.ಮೀ. ಓಲಾ ಪ್ರಯಾಣಕ್ಕೆ ದುಬಾರಿ ಬಿಲ್ ವಿಧಿಸಿದ ಚಾಲಕ

Viral News: ಓಲಾ ಟ್ಯಾಕ್ಸಿ ಚಾಲಕನೊಬ್ಬ 60 ಕಿಲೋ ಮೀಟರ್ ಪ್ರಯಾಣಕ್ಕೆ 5,662 ರುಪಾಯಿ ಬಿಲ್ ನೀಡಿರುವ ಘಟನೆ ನಡೆದಿದೆ. ಪ್ರಯಾಣಿಕರ ಗುಂಪೊಂದು ಬುಕಿಂಗ್ ಮಾಡುವಾಗ ತೋರಿಸಲಾದ ದರ 1,285 ರುಪಾಯಿ ಆಗಿತ್ತು. ಅದಾಗ್ಯೂ, ಅಂತಿಮ ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಅವಧಿ ಮೀರಿದ ಬಿಸ್ಕೇಟ್‌ ಮಾರಾಟ: ಎಫ್‌ಡಿಎ ಅಧಿಕಾರಿಗೆ ಜನರಿಂದ ಘೇರಾವ್, ಬಾಯಿಗೆ ಬಿಸ್ಕೇಟ್‌ ತುರುಕಲು ಯತ್ನ

ಅವಧಿ ಮೀರಿದ ಬಿಸ್ಕೇಟ್‌ ವಿಚಾರಕ್ಕೆ ಗಲಾಟೆ: FDA ಅಧಿಕಾರಿಗೆ ಜನರಿಂದ ತರಾಟೆ

Food and Drug Administration: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿಗೆ ಪರಿಶೀಲನೆಗೆ ತೆರಳಿದ್ದ ಎಫ್‌ಡಿಎ ಅಧಿಕಾರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಅಧಿಕಾರಿಯು ಅಂಗಡಿ ಮಾಲಕನನ್ನು ರಕ್ಷಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಜನರು, ವಶಪಡಿಸಿಕೊಂಡ ಅವಧಿ ಮೀರಿದ ಬಿಸ್ಕೇಟ್‌ ಅನ್ನು ಅವರೇ ತಿನ್ನುವಂತೆ ಒತ್ತಾಯಿಸಿದ್ದಾರೆ. ಕೆಲವರು ಬಿಸ್ಕೇಟ್‌ ಅಧಿಕಾರಿಯ ಬಾಯಿಗೆ ಹಾಕಲು ಯತ್ನಿಸಿದ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

ವಾಹನ ಇದ್ದರೂ ಗಾಯಗೊಂಡ ಮಹಿಳೆಯನ್ನು ಎತ್ತಿಕೊಂಡು ಓಡಿದ ಇನ್ಸ್‌ಪೆಕ್ಟರ್; ಪ್ರಚಾರದ ಹುಚ್ಚು ಎಂದ ನೆಟ್ಟಿಗರು: ವಿಡಿಯೊ ವೈರಲ್‌

ಗಾಯಾಳುವನ್ನು ಎತ್ತಿಕೊಂಡು ಓಡಿದ ಪೊಲೀಸ್ ನಡೆಗೆ ವ್ಯಾಪಕ ಟೀಕೆ

Viral Video: ಪೊಲೀಸ್ ಅಧಿಕಾರಿಯೊಬ್ಬರು ಪ್ರಚಾರದ ಉದ್ದೇಶದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದೆ ಪೊಲೀಸ್ ವಾಹನ ಸಾಲಾಗಿ ಬರುತ್ತಿದ್ದರೂ ಅದನ್ನು ಬಳಸದೆ ಓಡಿಕೊಂಡೆ ಹೋಗಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

“ಇವರು ನನ್ನನ್ನು ಕೊಲ್ಲುತ್ತಾರೆ”: ಹೆರಿಗೆಗೂ ಮುನ್ನ ಹೇಳಿದ್ದ ಮೃತ ಮಹಿಳೆಯ ವಿಡಿಯೊ ವೈರಲ್‌

ಹೆರಿಗೆಯ ನಂತರ ಮಹಿಳೆ, ಮಗು ಸಾವು; ಹಳೆಯ ವಿಡಿಯೊ ಬಹಿರಂಗ

childbirth death: ಹೆರಿಗೆಯ ನಂತರ ಮಹಿಳೆ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜನರು ತನ್ನನ್ನು ಕೊಲ್ಲುತ್ತಾರೆ ಎಂದು ಆಕೆ ಹೇಳಿರುವ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇದೀಗ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಡೆಲಿವರಿ ಬಾಯ್‌ಗೆ ರಾಖಿ ಕಟ್ಟಿದ ಯುವತಿ: ಜೇಬಿನಲಿದ್ದ 50 ರೂ ಉಡುಗೊರೆಯಾಗಿ ನೀಡಿದ ಸಿಬ್ಬಂದಿ! ಹೃದಯಸ್ಪರ್ಶಿ ದೃಶ್ಯ!

ರಾಖಿ ಕಟ್ಟಿದ ಯುವತಿಗೆ 50 ರೂಪಾಯಿ ಉಡುಗೊರೆ ನೀಡಿದ ಡೆಲಿವರಿ ಬಾಯ್!

Viral Video: ಮನೆ ಬಾಗಿಲಿಗೆ ಬಂದ ಡೆಲಿವರಿ ಸಿಬ್ಬಂದಿಗೆ ಯುವತಿಯೊಬ್ಬಳು ರಾಖಿ ಕಟ್ಟಿ ಆತನನ್ನು ಅಣ್ಣನ ಸ್ಥಾನದಲ್ಲಿ ನೋಡಿದ್ದಾಳೆ.‌ ಡೆಲಿವರಿ ಬಾಯ್ ಕೂಡ ಬಹಳ ಖುಷಿಯಿಂದ ತನ್ನ ಕೈಯನ್ನು ಮುಂಭಾಗಕ್ಕೆ ಚಾಚಿ, ಮುಖದಲ್ಲಿ ಮುಗ್ಧ ನಗುವಿನೊಂದಿಗೆ ರಾಖಿ ಕಟ್ಟಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮುಂಬೈನ ಆಟೋ ಚಾಲಕರ ಹರ್ಷೋದ್ಗಾರ: ಮರಾಠಿ ಕಲಿಯಲು ಒಂದು ವರ್ಷ ಕಾಲಾವಕಾಶ ನೀಡಿದ ಸಿಎಂ ಫಡ್ನವೀಸ್!

ಮುಂಬೈ ಚಾಲಕರು ಮರಾಠಿ ಕಲಿಕೆಗೆ ಸಮಯ ವಿಸ್ತರಣೆ ಮಾಡಿದ ಸಿಎಂ ಫಡ್ನವೀಸ್

ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯನ್ನು ಕಡ್ಡಾಯ ಗೊಳಿಸಲಾಗಿದೆ. ಈಗಾಗಲೇ ಮರಾಠಿ ಮಾತನಾಡಲು ಬರದ ಚಾಲಕರಿಗೆ ನೋಟಿಸ್ ಕೂಡ ನೀಡ ಲಾಗಿದ್ದು ಮರಾಠಿ ಕಲಿಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಬಹಳಷ್ಟು ಚಾಲಕರು ಭಾಷೇ ಕಲಿಯಲಾಗದೆ ತಮ್ಮ ಊರಿಗೆ ಮರಳ ಬೇಕಾಯಿತು. ಈ ನಡುವೆ ಮಹಾರಾಷ್ಟ್ರ ಸರ್ಕಾರ ಚಾಲಕರಿಗೆ ದೊಡ್ಡ ರಿಲೀಫ್ ನೀಡಿದೆ.

Loading...