ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರೀಡೆ

ʻದೇಶ ನನಗೆ ಮೊದಲುʼ-ಬಿಪಿಎಲ್‌ನಿಂದ ಹೊರ ನಡೆದ ಬಗ್ಗೆ ನಿರೂಪಕಿ ರಿಧಿಮಾ ಪಠಾಕ್‌ ಸ್ಪಷ್ಟನೆ!

ಬಿಪಿಎಲ್‌ನಿಂದ ಹೊರ ನಡೆದ ಬಗ್ಗೆ ರಿಧಿಮಾ ಪಠಾಕ್‌ ಸ್ಪಷ್ಟನೆ!

ಬಾಂಗ್ಲಾದೇಶ ಹಾಗೂ ಭಾರತ ನಡುವೆ ರಾಜಕೀಯ ಸಮಸ್ಯೆಗಳು ಇದೀಗ ಕ್ರೀಡೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಮುಸ್ತಾಫಿಝುರ್‌ ರೆಹಮಾನ್‌ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಕೈ ಬಿಟ್ಟ ಬಳಿಕ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಬೇಕಿದ್ದ ರಿಧಿಮಾ ಪಠಾಕ್‌ ಅವರನ್ನು ಕೈ ಬಿಡಲಾಗಿದೆ. ಈ ಬಗ್ಗೆ ಸ್ವತಃ ಪಠಾಕ್‌ ಸ್ಪಷ್ಟನೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 63 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್‌ ಸೂರ್ಯವಂಶಿ!

63 ಎಸೆತಗಳಲ್ಲಿ ಶತಕ ಸಿಡಿಸಿದ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ!

Vaibhav Suryavanshi Century: ದಕ್ಷಿಣ ಆಫ್ರಿಕಾದಲ್ಲಿ ಭಾರತ ಅಂಡರ್‌-19 ತಂಡದ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಶತಕವನ್ನು ಬಾರಿಸಿದ್ದಾರೆ. ಅವರು 63 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಫಾರ್ಮ್‌ ಅನ್ನು 2026ರಲ್ಲಿಯೂ ಮುಂದುವರಿಸುವ ಭರವಸೆಯನ್ನು ನೀಡಿದ್ದಾರೆ.

ಐಪಿಎಲ್‌ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್‌ ರೆಹಮಾನ್‌!

ಪಾಕಿಸ್ತಾನ ಸೂಪರ್‌ ಲೀಗ್‌ಗೆ ಮುಸ್ತಾಫಿಝುರ್‌ ರೆಹಮಾನ್‌ ಸೇರ್ಪಡೆ!

Mustafizur Rahman joins PSL:ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಕೈ ಬಿಟ್ಟ ಬೆನ್ನಲ್ಲೆ ಬಾಂಗ್ಲಾದೇಶ ತಂಡದ ವೇಗದ ಬೌಲರ್‌ ಮುಸ್ತಾಫಿಝುರ್‌ ರೆಹಮಾನ್‌ ಅವರು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಬಿಸಿಸಿಐಗೆ ಬಾಂಗ್ಲಾ ವೇಗಿ ತಿರುಗೇಟು ನೀಡಿದ್ದಾರೆ.

ಭಾರತದಿಂದ ಟಿ20 ವಿಶ್ವಕಪ್ ಪಂದ್ಯ ಸ್ಥಳಾಂತರಿಸುವ ಬಾಂಗ್ಲಾದ ಮನವಿ ತಿರಸ್ಕರಿಸಿದ ಐಸಿಸಿ

ವಿಶ್ವಕಪ್‌ ಆಡಲು ಭಾರತಕ್ಕೆ ಹೋಗಲ್ಲ: ಬಾಂಗ್ಲಾ ಮನವಿ ತಿರಸ್ಕರಿಸಿದ ಐಸಿಸಿ

T20 World Cup: ಭಾರತಕ್ಕೆ ತಿರುಗೇಟು ನೀಡುವ ಸಲುವಾಗಿ ಬಾಂಗ್ಲಾದೇಶವು ಮುಂಬರುವ ಐಪಿಎಲ್ ಋತುವಿನ ಪ್ರಸಾರವನ್ನು ದೇಶದಲ್ಲಿ ನಿಷೇಧಿಸುವ ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೂ ಮೊದಲು ಇಂಡಿಯಾ ಟುಡೇ ಜತೆ ಮಾತನಾಡಿದ ಫಾರೂಕ್ ಅಹ್ಮದ್, ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧವನ್ನು ಹದಗೆಡಿಸುವಲ್ಲಿ ರಾಜಕೀಯವು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದರು

ʻಯುವರಾಜ್‌ ಸಿಂಗ್‌ರ 6 ಸಿಕ್ಸರ್‌ ನನ್ನ ವೃತ್ತಿ ಜೀವನದ 5 ವರ್ಷಗಳನ್ನು ಉಳಿಸಿದೆʼ: ಸ್ಟುವರ್ಟ್‌ ಬ್ರಾಡ್‌!

ಯುವರಾಜ್‌ ಸಿಂಗ್‌ 6 ಸಿಕ್ಸರ್‌ ಸ್ಮರಿಸಿದ ಸ್ಟುವರ್ಟ್‌ ಬ್ರಾಡ್‌!

2007ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌ ತನ್ನ ಓವರ್‌ಗೆ ಆರು ಸಿಕ್ಸರ್‌ ಬಾರಿಸಿದ್ದ ಘಟನೆಯನ್ನು ಇಂಗ್ಲೆಂಡ್‌ ಮಾಜಿ ವೇಗಿ ಸ್ಟುವರ್ಟ್‌ ಬ್ರಾಡ್‌ ಸ್ಮರಿಸಿಕೊಂಡಿದ್ದಾರೆ. ಈ ಘಟನೆಯಿಂದ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಐದು ವರ್ಷಗಳು ಉಳಿದಿವೆ ಎಂದು ಹೇಳಿದ್ದಾರೆ.

ಕೆಕೆಆರ್‌ನಿಂದ  ರಿಲೀಸ್‌ ಆದ 9  ಕೋಟಿ ರು ಬೆಲೆಯ ಮುಸ್ತಾಫಿಝುರ್‌ ರೆಹಮಾನ್‌ಗೆ ಪರಿಹಾರ ಸಿಗುತ್ತಾ?

ಕೆಕೆಆರ್‌ ತಂಡದಿಂದ ಮುಸ್ತಾಫಿಝುರ್‌ ರೆಹಮಾನ್‌ಗೆ ಪರಿಹಾರ ಸಿಗುತ್ತಾ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 9.20 ಕೋಟಿ ರು. ಗಳಿಗೆ ಖರೀದಿಸಿದ್ದ ಬಾಂಗ್ಲಾದೇಶದ ವೇಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದೆ. ಆದರೆ, ಬಿಡುಗಡೆ ಮಾಡಿದ ಬಳಿಕ ಬಾಂಗ್ಲಾ ವೇಗಿಗೆ ಕೋಲ್ಕತಾ ಫ್ರಾಂಚೈಸಿ ಎಷ್ಟು ಮೊತ್ತವನ್ನು ಪರಿಹಾರ ನೀಡುತ್ತಾ? ಅಥವಾ ಇಲ್ಲವಾ? ಎಂದು ಇಲ್ಲಿ ವಿವರಿಸಲಾಗಿದೆ.

ʻಸಮಸ್ಯೆ ಬಗೆಹರಿಸದೆ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದಾರೆʼ: ವಿರಾಟ್‌ ಕೊಹ್ಲಿ  ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಅಚ್ಚರಿ ಹೇಳಿಕೆ!

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸಂಜಯ್‌ ಮಾಂಜ್ರೇಕರ್‌!

Sanjay Manjrekar on Virat Kohli's Test Retirement: ಭಾರತೀಯ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿ ಬಗ್ಗೆ ಮಾಜಿ ಆಟಗಾರ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೊಹ್ಲಿ ತಕ್ಷಣ ಟೆಸ್ಟ್‌ಗೆ ವಿದಾಯ ಹೇಳಿದ್ದಾರೆಂದು ತಿಳಿಸಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯ ಆರಂಭದ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಕ್ರೀಡಾ ಸಚಿವ!

2025-26ರ ಸಾಲಿನ‌ ಇಂಡಿಯನ್ ಸೂಪರ್‌ ಲೀಗ್‌ ದಿನಾಂಕ ಪ್ರಕಟ!

2025-26ರ ಸಾಲಿನ ಇಂಡಿಯನ್ ಸೂಪರ್ ಲೀಗ್ ಋತುವು ಫೆಬ್ರವರಿ 14 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಜನವರಿ 6 ರಂದು ಮಂಗಳವಾರ ಘೋಷಿಸಿದ್ದಾರೆ. ಆ ಮೂಲಕ ಇಷ್ಟು ದಿನಗಳ ಕಾಲ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಇದೀಗ ಬ್ರೇಕ್‌ ಬಿದ್ದಿದೆ.

KAR vs RAJ: ಮಯಾಂಕ್‌ ಅಗರ್ವಾಲ್‌ ಶತಕ, ಕರ್ನಾಟಕ ತಂಡಕ್ಕೆ ಸತತ ಆರನೇ ಜಯ!

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಸತತ ಆರನೇ ಜಯ!

ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ ಆರನೇ ಗೆಲುವು ಸಾಧಿಸಿದೆ. ಮಂಗಳವಾರ ರಾಜಸ್ಥಾನ್‌ ವಿರುದ್ಧ 150 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

AUS vs ENG: ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ 96 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಸ್ಮಿತ್‌ ಶತಕದ ಬಲದಿಂದ ಆಸೀಸ್‌, ಐದನೇ ಟೆಸ್ಟ್‌ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದೆ.

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಸ್ಟಾರ್‌ ದೇವದತ್‌ ಪಡಿಕ್ಕಲ್‌!

600 ರನ್‌ಗಳನ್ನು ಪೂರ್ಣಗೊಳಿಸಿದ ದೇವದತ್‌ ಪಡಿಕ್ಕಲ್‌!

Devdutt Padikkal Scored 600 Runs: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ದೇವದತ್‌ ಪಡಿಕ್ಕಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಮಂಗಳವಾರ ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ 91 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಈ ಟೂರ್ನಿಯಲ್ಲಿ 600 ರನ್‌ಗಳನ್ನು ಪೂರ್ಣಗೊಳಿಸಿದರು.

Vijaya Hazare Trophy: ಬಂಗಾಳ ವಿರುದ್ಧ ದ್ವಿಶತಕ ಬಾರಿಸಿದ ಅಮನ್‌ ರಾವ್‌ ಯಾರು?

ಬಂಗಾಳ ಎದುರು ದ್ವಿಶತಕ ಬಾರಿಸಿದ ಅಮನ್‌ ರಾವ್‌ ಯಾರು?

Who is Aman Rao?: ಬಂಗಾಳ ವಿರುದ್ಧದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ ಅಮನ್‌ ರಾವ್‌ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ತಮ್ಮ ತಂಡ ಬೃಹತ್‌ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು. ಅಂದ ಹಾಗೆ 2026 ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಅಮನ್‌ ರಾವ್‌ ಅವರನ್ನು 30 ಲಕ್ಷ ರು ಮೂಲ ಬೆಲೆಗೆ ರಾಜಸ್ಥಾನ್‌ ರಾಯಲ್ಸ್‌ ಖರೀದಿಸಿತ್ತು.

ಶಿಖರ್ ಧವನ್ ಮದುವೆಯಾಗಲಿರುವ ಐರಿಶ್ ಮಹಿಳೆ ಸೋಫಿ ಶೈನ್ ಯಾರು?

ಫೆಬ್ರವರಿಯಲ್ಲಿ ಐರ್ಲೆಂಡ್‌ನ ಸೋಫಿ ಶೈನ್ ಜತೆ ಶಿಖರ್‌ ಧವನ್‌ ಮದುವೆ

Shikhar Dhawan Sophie Shine: ಧವನ್‌ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಶಾ ಮುಖರ್ಜಿ ಜತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪತ್ನಿಯ ಅತಿಯಾದ ಕಿರುಕುಳದಿಂದ ಬೇಸತ್ತು ಧವನ್‌ ಕೊನೆಗೆ ಕೋರ್ಟ್‌ ಮೊರೆ ಹೋಗಿ ವಿಚ್ಛೇದನ ಪಡೆದಿದ್ದರು. 2024 ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.

ಕ್ರಿಕೆಟ್‌ನಲ್ಲಿಯೇ ಅಪರೂಪದ ಘಟನೆ, ಒಂದೇ ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ರಿಟೈರ್‌ ಔಟ್‌!

ಒಂದೇ ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟರ್ಸ್‌ ರಿಟೈರ್‌ ಔಟ್‌!

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಷ್‌ ಟಿ20 ಲೀಗ್‌ನಲ್ಲಿ ನಡೆದ ಘಟನೆಯೊಂದು ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ನಾರ್ಥೆರ್ನ್‌ ಡಿಸ್ಟ್ರಿಕ್ಟ್ಸ್ ಮತ್ತು ಒಟಾಗೊ ವೋಲ್ಟ್ಸ್ ನಡುವಿನ ಪುರುಷರ ಟಿ20 ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಕಾರ್ಯತಂತ್ರದಿಂದ ರಿಟೈರ್‌ ಔಟ್‌ ಮಾಡಲಾಯಿತು.

ಆಷಸ್‌ ಟೆಸ್ಟ್‌ ಸರಣಿಯಲ್ಲಿ 500 ರನ್‌ ಕಲೆ ಹಾಕಿ ಯಶಸ್ವಿ ಜೈಸ್ವಾಲ್‌ ದಾಖಲೆ ಮುರಿದ ಟ್ರಾವಿಸ್‌ ಹೆಡ್‌!

ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ದಾಖಲೆ ಮುರಿದ ಟ್ರಾವಿಸ್‌ ಹೆಡ್‌!

Travis Head breaks Yashasvi Jaiswal Record: ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಟ್ರಾವಿಸ್‌ ಹೆಡ್‌ ಅಜೇಯ 91 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿದ್ದಾರೆ. ಇದರೊಂದಿಗೆ ಯಶಸ್ವಿ ಜೈಸ್ವಾಲ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

AUS vs ENG: ಶತಕ ಬಾರಿಸಿ ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ಜೋ ರೂಟ್‌!

41ನೇ ಶತಕ ಬಾರಿಸಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ಜೋ‌ ರೂಟ್!

ಆಸ್ಟ್ರೇಲಿಯಾ ವಿರುದ್ದದ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್‌ ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದ 41ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಎದುರು 19 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ವೈಭವ್‌ ಸೂರ್ಯವಂಶಿ!

ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್‌ ಸೂರ್ಯವಂಶಿ!

ಭಾರತ ಅಂಡರ್-19 ಮತ್ತು ದಕ್ಷಿಣ ಆಫ್ರಿಕಾ ಅಂಡರ್-19 ನಡುವಿನ ಎರಡನೇ ಯೂತ್ ಏಕದಿನ ಪಂದ್ಯ ಬೆನೋನಿಯಲ್ಲಿ ನಡೆಯಿತು. ಭಾರತದ ನಾಯಕ ಹಾಗೂ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ.

ವೆಲ್ ಸ್ಪೋರ್ಟ್ಸ್‌ನೊಂದಿಗೆ  ಹೊಸ ಅಧ್ಯಾಯ ಆರಂಭಿಸಿದ ನೀರಜ್ ಚೋಪ್ರಾ!

ಜೆಎಸ್‌ಡಬ್ಲ್ಯುನಿಂದ ಹೊರಬಂದ ನೀರಜ್‌ ಚೋಪ್ರಾ!

ಒಲಿಂಪಿಕ್ಸ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಹಾಗೂ ಭಾರತದ ಸ್ಟಾರ್‌ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರು ಜೆಎಸ್‌ಡಬ್ಲ್ಯುದೊಂದಿಗಿನ ತಮ್ಮ ಸುದೀರ್ಘವಾದ ಸಂಬಂಧವನ್ನು ಕಳೆದುಕೊಂಡಿದ್ದಾರೆ. ಅವರು ಇದೀಗ ವೆಲ್‌ ಸ್ಪೋರ್ಟ್ಸ್‌ ಸಂಸ್ಥೆಯನ್ನು ಹೊಸದಾಗಿ ಕಟ್ಟಿದ್ದಾರೆ. ಹಾಗಾಗಿ ಅವರು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನಿಂದ ದೂರ ಸರಿದಿದ್ದಾರೆ.

VHT 2025-26: ಮುಂಬೈ ತಂಡದ ನಾಯಕತ್ವಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌!

ಮುಂಬೈ ತಂಡದ ನಾಯಕತ್ವಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌!

ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಗುಣಮುಖರಾಗಿದ್ದು, ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ʻನನ್ನ ಆರ್‌ಸಿಬಿ ಗೆಳೆಯ ಮೊಹಮ್ಮದ್‌ ಸಿರಾಜ್‌ಗೆ ಅದೃಷ್ಟವಿಲ್ಲʼ-ಎಬಿಡಿ ಈ ರೀತಿ ಹೇಳಿದ್ದೇಕೆ?

ನನ್ನ ಆರ್‌ಸಿಬಿ ಗೆಳೆಯ ಮೊಹಮ್ಮದ್‌ ಸಿರಾಜ್‌ಗೆ ಅದೃಷ್ಟವಿಲ್ಲ: ಎಬಿಡಿ!

ABD on Mohammed Siraj T20 WC Snub: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ ನೀಡದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿರಾಜ್‌ಗೆ ಅದೃಷ್ಟವಿಲ್ಲ ಎಂದು ಎಬಿಡಿ ಹೇಳಿದ್ದಾರೆ.

Mustafizur Rahman row: ಐಪಿಎಲ್‌ ಪಂದ್ಯಗಳ ಪ್ರಸಾರವನ್ನು ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ!

ಬಾಂಗ್ಲಾದೇಶದಲ್ಲಿ ಐಪಿಎಲ್‌ ಪಂದ್ಯಗಳ ವೀಕ್ಷಣೆಗೆ ನಿಷೇಧ!

IPL Broadcast Ban in Bangladesh:ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ (ಜನವರಿ 5) ಎಲ್ಲಾ ಸ್ಥಳೀಯ ಟಿವಿ ಚಾನೆಲ್‌ಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರವನ್ನು ನಿಷೇಧಿಸುವ ಆದೇಶವನ್ನು ಕಳುಹಿಸಿದೆ. ವೇಗಿ ಮುಸ್ಥಾಫಿಝುರ್‌ ರೆಹಮಾನ್‌ ಅವರನ್ನು ಕೆಕೆಆರ್‌ ಕೈ ಬಿಟ್ಟ ಬೆನ್ನಲ್ಲೆ ಬಾಂಗ್ಲಾ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.

ರಾಜಸ್ಥಾನ್‌ ರಾಯಲ್ಸ್‌ಗೆ ಜಡೇಜಾ ನಾಯಕ; ಸುಳಿವು ಬಿಟ್ಟುಕೊಟ್ಟ ಫ್ರಾಂಚೈಸಿ

ರಾಜಸ್ಥಾನ್‌ ರಾಯಲ್ಸ್‌ಗೆ ಜಡೇಜಾ ನಾಯಕ; ಸುಳಿವು ಬಿಟ್ಟುಕೊಟ್ಟ ಫ್ರಾಂಚೈಸಿ

Ravindra Jadeja: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಅನುಭವಿ ಆಟಗಾರರಲ್ಲಿ ಜಡೇಜಾ ಒಬ್ಬರು. ಭಾರತದ 2024 ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಅವರು, ಇದುವರೆಗೆ ನಾಲ್ಕು ತಂಡಗಳಾದ ಆರ್‌ಆರ್, ಕೊಚ್ಚಿ ಟಸ್ಕರ್ಸ್ ಕೇರಳ, ಸಿಎಸ್‌ಕೆ ಮತ್ತು ಗುಜರಾತ್ ಲಯನ್ಸ್ ಪರ 254 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆ 254 ಪಂದ್ಯಗಳಲ್ಲಿ ಅವರು ಒಟ್ಟು 3260 ರನ್‌ಗಳು ಮತ್ತು 170 ವಿಕೆಟ್‌ಗಳನ್ನು ಗಳಿಸಿದ್ದಾರೆ.

WPL 2026: ಯುಪಿ ವಾರಿಯರ್ಸ್‌ಗೆ ಮೆಗ್‌ ಲ್ಯಾನಿಂಗ್‌ ನಾಯಕಿ

ಯುಪಿ ವಾರಿಯರ್ಸ್‌ಗೆ ಮೆಗ್‌ ಲ್ಯಾನಿಂಗ್‌ ನಾಯಕಿ

"WPL ತನ್ನ ನಾಲ್ಕನೇ ಋತುವಿಗೆ ಪ್ರವೇಶಿಸುತ್ತಿದ್ದಂತೆ, ಲೀಗ್ ಹೇಗೆ ವಿಕಸನಗೊಂಡಿದೆ ಎಂಬುದನ್ನು ನೋಡುವುದು ಅದ್ಭುತವಾಗಿದೆ. ಕ್ರಿಕೆಟ್‌ನ ಗುಣಮಟ್ಟ, ಸ್ಪರ್ಧಾತ್ಮಕತೆ ಮತ್ತು ಅತ್ಯಾಕರ್ಷಕ ಹೊಸ ಪ್ರತಿಭೆಗಳ ಹೊರಹೊಮ್ಮುವಿಕೆ ಪ್ರತಿ ವರ್ಷವೂ ಗುಣಮಟ್ಟವನ್ನು ಹೆಚ್ಚಿಸುತ್ತಲೇ ಇದೆ" ಎಂದು ಅವರು ಹೇಳಿದರು.

ಅರ್ಧಶತಕ ಬಾರಿಸಿ ಸಚಿನ್‌ ವಿಶ್ವ ದಾಖಲೆ ಸನಿಹ ಬಂದ ಜೋ ರೂಟ್‌

ಅರ್ಧಶತಕ ಬಾರಿಸಿ ಸಚಿನ್‌ ವಿಶ್ವ ದಾಖಲೆ ಸನಿಹ ಬಂದ ಜೋ ರೂಟ್‌

Joe Root: ರೂಟ್ ಈ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ 151 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಟೆಸ್ಟ್‌ನಲ್ಲಿ 14,000 ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲಿಯವರೆಗೆ, ಟೆಸ್ಟ್‌ನಲ್ಲಿ 14,000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಕ್ರಿಕೆಟಿಗ ತೆಂಡೂಲ್ಕರ್ ಮಾತ್ರ.

Loading...