ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರೀಡೆ

IND vs SA: ಭಾರತದ ಎದುರು ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ದಕ್ಷಿಣ ಆಫ್ರಿಕಾ!

IND vs SA: ಟಾಸ್‌ ಸೋತ ಭಾರತ ತಂಡ ಮೊದಲು ಬೌಲಿಂಗ್‌!

IND vs SA Match Toss: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೀಗ ನಡಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಆರಿಸಿಕೊಂಡಿದೆ.

ಭಾರತ-ಪಾಕ್‌ ಆಟಗಾರರು ಶೇಕ್‌ ಹ್ಯಾಂಡ್‌ ಮಾಡಬೇಕು, ಇದು ಕ್ರೀಡಾ ಮನೋಭಾವ: ದಿಗ್ವಿಜಯ ಸಿಂಗ್‌!

ಇಂಡೋ-ಪಾಕ್‌ ಆಟಗಾರರು ಹ್ಯಾಂಡ್‌ ಶೇಕ್‌ ಮಾಡಬೇಕೆಂದ: ದ್ವಿಗಜಯ ಸಿಂಗ್‌!

ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಎ ಗುಂಪಿನ ಪಂದ್ಯಗಳಲ್ಲಿ ಈ ಎರಡೂ ತಂಡಗಳು ಒಮ್ಮೆ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹ್ಯಾಂಡ್‌ ಶೇಕ್‌ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್‌ ನಾಯಕ ದಿಗ್ವಜಯ ಸಿಂಗ್‌, ಇಂಡೋ-ಪಾಕ್‌ ಆಟಗಾರರು ಹ್ಯಾಂಡ್‌ ಶೇಕ್‌ ಮಾಡಬೇಕೆಂದು ಹೇಳಿದ್ದಾರೆ.

ವಿವಿಧ ತಂಡಗಳ ಪರ ಟಿ20 ವಿಶ್ವಕಪ್‌ ಆಡಿದ ಭಾರತೀಯ ಮೂಲದ ಆಟಗಾರರಿಗೆ ನರೇಂದ್ರ ಮೋದಿ ಮೆಚ್ಚುಗೆ!

T20 World Cup: ಭಾರತೀಯ ಮೂಲದ ಆಟಗಾರರಿಗೆ ಮೋದಿ ಮೆಚ್ಚುಗೆ!

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿದೆ. ಈ ಬಾರಿ ಟೂರ್ನಿಯಲ್ಲಿ ಹಲವು ತಂಡಗಳ ಪರ ಭಾರತೀಯ ಮೂಲದ ಆಟಗಾರರು ಆಡುತ್ತಿದ್ದಾರೆ. ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳು ಇನ್ನೂ ಖಚಿತಗೊಂಡಿಲ್ಲ

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳು ಇನ್ನೂ ಖಚಿತಗೊಂಡಿಲ್ಲ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆಗಳ ದಿನಾಂಕಗಳಿಗಾಗಿ ಕಾಯುತ್ತಿರುವುದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2026 ರ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಿಸಿಸಿಐ ಸಾಮಾನ್ಯವಾಗಿ ಚುನಾವಣಾ ದಿನಾಂಕಗಳ ಸುತ್ತಲೂ ಐಪಿಎಲ್ ಕಾರ್ಯಕ್ರಮವನ್ನು ರೂಪಿಸುತ್ತದೆ.

ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯ ರದ್ದು; ಉಭಯ ತಂಡಗಳಿಗೂ ಒಂದಂಕ

ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯ ರದ್ದು; ಉಭಯ ತಂಡಗಳಿಗೂ ಒಂದಂಕ

Pakistan vs New Zealand: ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್​ಗೇರಲಿದೆ. ಒಂದೊಮ್ಮೆ ಫೈನಲ್‌ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.

ಖಾಸಗಿ ಸಮಾರಂಭದಲ್ಲಿ ಗೆಳತಿ ಸೋಫಿ ಶೈನ್‌ ಜತೆ ಹಸೆಮಣೆ ಏರಿದ ಶಿಖರ್ ಧವನ್

ಸದ್ದಿಲ್ಲದೆ ಗೆಳತಿ ಸೋಫಿ ಶೈನ್‌ ಜತೆ ಹಸೆಮಣೆ ಏರಿದ ಶಿಖರ್ ಧವನ್

Shikhar Dhawan: ಸೋಫಿ ಶೈನ್ ಜತೆ ಧವನ್‌ ಕಳೆದೊಂದು ವರ್ಷದಿಂದ ಡೇಟಿಂಗ್‌ ನಡೆಸುತ್ತಿದ್ದರು. ಅಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹ ಕ್ರಮೇಣ ಸಂಬಂಧವಾಗಿ ಬದಲಾಯಿತು.

ಕೊಲಂಬೊದಲ್ಲಿ ಮಳೆ ಅಬ್ಬರ; ಪಾಕ್‌-ಕಿವೀಸ್‌ ಸೂಪರ್-‌8 ಪಂದ್ಯ ರದ್ದು ಸಾಧ್ಯತೆ

ಮಳೆ ಅಬ್ಬರ; ಪಾಕ್‌-ಕಿವೀಸ್‌ ಸೂಪರ್-‌8 ಪಂದ್ಯ ರದ್ದು ಸಾಧ್ಯತೆ

T20 World Cup 2026 Super Eights: 8:10 ರಿಂದ ಓವರ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. 5 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್ ಸಮಯ ರಾತ್ರಿ 10:16. ಆ ನಂತರ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಸೂಪರ್‌ ಸಂಡೆಯಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ಸೂಪರ್‌-8 ಸವಾಲು

ಹರಿಣಗಳ ವಿರುದ್ಧ ಭಾರತಕ್ಕೆ ಸೂಪರ್‌-8 ಸವಾಲು

T20 World Cup: ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ತಂಡವೊಂದು ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸೂಪರ್-8 ಹಂತದ ಪ್ರತಿ ಪಂದ್ಯವು ಎಲ್ಲಾ ತಂಡಗಳಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಕನ್ನಡತಿ ಶ್ರೇಯಾಂಕಾ ಬೌಲಿಂಗ್‌ ಕಮಾಲ್‌; 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ

10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ

Australia Women vs India Women: ಚೇಸಿಂಗ್‌ ವೇಳೆ ಆಸೀಸ್‌ ಪರ ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿ ಅರ್ಧಶತ ಬಾರಿಸಿದರು. ಉಳಿದಂತೆ ಫೋಬೆ ಲಿಚ್‌ಫೀಲ್ಡ್ 27 ರನ್‌ ಗಳಿಸಿದರು. ಆಶ್ಲೀ ಗಾರ್ಡ್ನರ್ 5 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿದರು. ಉಭಯ ಆಟಗಾರ್ತಿಯರದ್ದೇ ತಂಡದ ಪರ ದಾಖಲಾದ ಗರಿಷ್ಠ ಸೋರ್‌.

ಭಾರತ-ದಕ್ಷಿಣ ಆಫ್ರಿಕಾ ಸೂಪರ್-‌8 ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಭಾರತ-ದಕ್ಷಿಣ ಆಫ್ರಿಕಾ ಸೂಪರ್-‌8 ಪಂದ್ಯದ ಹವಾಮಾನ ವರದಿ

ind vs sa pitch report: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿ. ಕಳೆದ ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಭಾರತ ಮಧ್ಯಮ ಕ್ರಮಾಂಕದ ಎಡವಟ್ಟಿನ ಹೊರತಾಗಿಯೂ, 193/6 ಬೃಹತ್ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿಗಿತ್ತು ಮತ್ತು ಎದುರಾಳಿಗಳು 176/7 ತಲುಪಿದ್ದರು. ಬಲಿಷ್ಠ ಬ್ಯಾಟಿಂಗ್‌ ಲೈನ್‌ ಅಪ್‌ ಇದ್ದರೆ ಇಲ್ಲಿ ಬೃಹತ್‌ ಮೊತ್ತಕ್ಕೆ ಅಡ್ಡಿಯಿಲ್ಲ.

ಅಭ್ಯಾಸದ ವೇಳೆ ಗಾಯಗೊಂಡ ಸಿರಾಜ್;‌ ಸೂಪರ್-8 ಪಂದ್ಯಕ್ಕೆ ಅನುಮಾನ

ಅಭ್ಯಾಸದ ವೇಳೆ ಗಾಯಗೊಂಡ ವೇಗಿ ಮೊಹಮ್ಮದ್‌ ಸಿರಾಜ್‌

Mohammed Siraj injury: ತರಬೇತಿಯ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಹೊಡೆದ ಚೆಂಡು ಸಿರಾಜ್ ಅವರ ಎಡ ಮೊಣಕಾಲಿಗೆ‌ ಬಡಿದು ಗಾಯವಾಗಿದೆ. ಘಟನೆಯ ನಂತರ ಮೊಹಮ್ಮದ್ ಸಿರಾಜ್ ನೋವಿನಿಂದ ಬಳಲುತ್ತಿದ್ದರು. ಮತ್ತು ಅವರು ನೆಟ್ಸ್‌ನಿಂದ ಹೊರನಡೆದರು.

ಭಾರತ-ಪಾಕ್‌ ವಿಶ್ವಕಪ್‌ನ ಸೆಮಿಫೈನಲ್‌ ತಲುಪುವ ಬಗ್ಗೆ ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗರು

ಸೆಮಿಫೈನಲ್‌ ತಂಡಗಳ ಭವಿಷ್ಯ ನುಡಿದ ಭಾರತದ ಮಾಜಿ ಕ್ರಿಕೆಟಿಗರು

T20 World Cup 2026: ಆಶ್ಚರ್ಯಕರ ಸಂಗತಿಯೆಂದರೆ, ಆಸ್ಟ್ರೇಲಿಯಾವನ್ನು ಗ್ರೂಪ್ ಹಂತದಿಂದಲೇ ಹೊರದಬ್ಬಲು ಮುಖ್ಯ ಪಾತ್ರವಹಿಸಿದ್ದ ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡವನ್ನು ಹೆಚ್ಚಿನ ತಜ್ಞರು ಬೆಂಬಲಿಸಿಲ್ಲ. ಪೂಜಾರ ಮತ್ತು ಬಂಗಾರ್ ಮಾತ್ರ ಶ್ರೀಲಂಕಾ ಸೆಮಿಫೈನಲ್‌ಗೆ ತಲುಪುತ್ತದೆ ಎಂದು ಭಾವಿಸಿದ್ದಾರೆ ಆದರೆ ಜಿಂಬಾಬ್ವೆ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪುತ್ತದೆ ಎಂದು ಯಾರೂ ಊಹಿಸಿಲ್ಲ

ಸೂಪರ್ 8 ಪಂದ್ಯಕ್ಕೂ ಮುನ್ನ ಭಾರತ vs ದಕ್ಷಿಣ ಆಫ್ರಿಕಾ ಮುಖಾಮುಖಿ ದಾಖಲೆಯ ಇಣುಕು ನೋಟ

ಭಾರತ vs ದಕ್ಷಿಣ ಆಫ್ರಿಕಾ ಟಿ20 ಮುಖಾಮುಖಿ ದಾಖಲೆ ಹೇಗಿದೆ?

IND vs SA: ಗುಂಪು ಹಂತದಲ್ಲಿ ಭಾರತ ತಂಡ ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ಜತೆಗೆ 'ಎ' ಗುಂಪಿನಲ್ಲಿ ಆಡಿತ್ತು ಮತ್ತು ಎಲ್ಲಾ ನಾಲ್ಕು ತಂಡಗಳನ್ನು ಗೆದ್ದಿತ್ತು. ನಾಲ್ಕು ಸಂದರ್ಭಗಳಲ್ಲಿಯೂ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತವನ್ನು ಗಳಿಸಿತ್ತು. ನಮೀಬಿಯಾ ವಿರುದ್ಧ 93 ರನ್‌ಗಳಿಂದ ಗೆದ್ದರೆ, ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತ್ತು.

AUS vs OMN: ಒಮಾನ್‌ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ!

T20 World Cup: ಆಸ್ಟ್ರೇಲಿಯಾ ತಂಡಕ್ಕೆ ಸುಲಭ ತುತ್ತಾದ ಒಮಾನ್‌!

AUS vs OMN Match Highlights: ಆಡಂ ಝಾಂಪ ಸ್ಪಿನ್‌ ಮೋಡಿಯ ಬಲದಿಂದ ಆಸ್ಟ್ರೇಲಿಯಾ ತಂಡ, ಕ್ರಿಕೆಟ್‌ ಶಿಶು ಒಮಾನ್‌ ವಿರುದ್ಧ 9 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ಈಗಾಗಲೇ ಸೂಪರ್‌-8ರ ಹಂತದಿಂದ ಹೊರ ಬಿದ್ದಿರುವ ಮಿಚೆಲ್‌ ಮಾರ್ಷ್‌ ನಾಯಕತ್ವದ ಆಸೀಸ್‌, ಈ ಗೆಲುವಿನ ಮೂಲಕ ಟಿ20 ವಿಶ್ವಕಪ್‌ ಅಭಿಯಾನವನ್ನು ಮುಗಿಸಿತು.

ತಮ್ಮ ಪತ್ನಿ ಇಶಾನ್‌ ಜೋಹರ್‌ಗೆ ಡಿವೋರ್ಸ್‌ ನೀಡಿದ ಸ್ಪಿನ್ನರ್‌ ರಾಹುಲ್‌ ಚಹರ್‌!

ಪತ್ನಿ ಇಶಾನ್‌ ಜೋಹರ್‌ಗೆ ಡಿವೋರ್ಸ್‌ ನೀಡಿದ ರಾಹುಲ್‌ ಚಹರ್‌!

ಭಾರತೀಯ ಕ್ರಿಕೆಟ್‌ನ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಪತ್ನಿ ಇಶಾನಿ ಜೋಹರ್‌ ಅವರಿಂದ ಬೇರ್ಪಟ್ಟಿದ್ದಾರೆ. ಅವರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು 15 ತಿಂಗಳ ಕಾನೂನು ಹೋರಾಟದ ನಂತರ ಈಗ ವಿಚ್ಛೇದನ ಪಡೆದಿದ್ದಾರೆ. ಈ ವಿಷಯವನ್ನು ಸ್ವತಃ ಸಿಎಸ್‌ಕೆ ಸ್ಪಿನ್ನರ್‌ ಪ್ರಕಟಿಸಿದ್ದಾರೆ.

T20 World Cup: ಫಾರ್ಮ್‌ಗೆ ಮರಳಲು ಅಭಿಷೇಕ್‌ ಶರ್ಮಾಗೆ ಸಲಹೆ ನೀಡಿದ ಮೊಹಮ್ಮದ್ ಅಮೀರ್!

ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಮಹತ್ವದ ಸಲಹೆ ನೀಡಿದ ಆಮಿರ್‌!

ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಜಿಯೋ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್‌ ಮಾತನಾಡಿದ್ದಾರೆ. ಅಭಿಷೇಕ್ ಶರ್ಮಾ ಅವರು ಆಫ್ ಸೈಡ್‌ನಲ್ಲಿ ತಮ್ಮ ಆಟವನ್ನು ಸುಧಾರಿಸಿಕೊಳ್ಳಬೇಕು, ಇದರ ಹೊರತಾಗಿ ಅವರ ಪ್ರದರ್ಶನ ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಾಕ್‌ ಆಟಗಾರರನ್ನು ನಿರ್ಬಂಧಿಸುವ ಐಪಿಎಲ್‌ ಮಾಲೀಕರಿಗೆ ಕಡಿವಾಣ ಹಾಕಿ: ಮೈಕಲ್‌ ವಾನ್‌ ಆಗ್ರಹ!

The Hundred: ಐಪಿಎಲ್‌ ಮಾಲೀಕರ ವಿರುದ್ಧ ಗುಡುಗಿದ ಮೈಕಲ್‌ ವಾನ್‌!

ಮುಂಬರುವ ಹಂಡ್ರೆಡ್‌ ಟೂರ್ನಿಯ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನ ಕ್ರಿಕೆಟಿಗರನ್ನು ನಿರ್ಬಂಧಿಸುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರಿಯ ಮಾಲೀಕರಿಗೆ ಕಡಿವಾಣ ಹಾಕಿ ಎಂದು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಆಗ್ರಹಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಾನ್‌ ಪೋಸ್ಟ್‌ ಹಾಕುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಾರೆ.

IND  vs SA: ಅಭಿಷೇಕ್‌ ಶರ್ಮಾರನ್ನು ಕಟ್ಟಿ ಹಾಕಲು ವಿಶೇಷ ರಣತಂತ್ರ ರೂಪಿಸಿರುವ ದಕ್ಷಿಣ ಆಫ್ರಿಕಾ!

ಅಭಿಷೇಕ್‌ ಶರ್ಮಾರನ್ನು ಕಟ್ಟಿ ಹಾಕಲು ಏಡೆನ್‌ ಮಾರ್ಕ್ರಮ್‌ ರಣತಂತ್ರ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಫೆಬ್ರವರಿ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಕಟ್ಟಿ ಹಾಕಲು ಹರಿಣ ಪಡೆ ಈಗಾಗಲೇ ರಣತಂತ್ರವನ್ನು ರೂಪಿಸಿದೆ.

IND vs SA: ಅಭಿಷೇಕ್‌ ಶರ್ಮಾ ಔಟ್‌? ಸೂಪರ್‌-8ರ ಪದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

IND vs SA: ಸೂಪರ್‌-8ರ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ?

India's Predicted Playing XI: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯ ಫೆಬ್ರವರಿ 22 ರಂದು ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

IND vs SA: ಭಾರತ ತಂಡವನ್ನು ಗೆಲ್ಲಿಸಬಲ್ಲ ಇಬ್ಬರು ಬೌಲರ್‌ಗಳನ್ನು ಆರಿಸಿದ ಶಾನ್‌ ಪೊಲಾಕ್‌!

ಭಾರತ ತಂಡಕ್ಕೆ ಇಬ್ಬರು ಕೀ ಬೌಲರ್‌ಗಳನ್ನು ಆರಿಸಿದ ಶಾನ್‌ ಪೊಲಾಕ್!

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾನ್ ಪೊಲಾಕ್, ಭಾರತ ತಂಡದ ಹಿರಿಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ಅವರನ್ನು ಶ್ಲಾಘಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಇವರಿಬ್ಬರೂ ದೊಡ್ಡ ವ್ಯತ್ಯಾಸವನ್ನು ತಂದುಕೊಡಬಲ್ಲರು ಎಂದು ಹೇಳಿದ್ದಾರೆ.

ಕಾನ್ಪುರ ಕ್ರಿಕೆಟ್ ಪಂದ್ಯ ನಡುವೆ ಜೇನುನೊಣ ದಾಳಿ; ಅಂಪೈರ್ ಸಾವು

ಕಾನ್ಪುರ ಕ್ರಿಕೆಟ್ ಪಂದ್ಯ ನಡುವೆ ಜೇನುನೊಣ ದಾಳಿ; ಅಂಪೈರ್ ಸಾವು

Umpire Dies After Bee Attack: ಜೋನುನೊಣದ ಏಕಾಏಕಿ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 10 ನಿಮಿಷದ ದಾಳಿಯಲ್ಲಿ ದುರಂತವೇ ನಡೆದು ಹೋಗಿದೆ. ಗಾಯಗೊಂಡಿರುವ ಕ್ರಿಕೆಟಿಗರು ಸೇರಿ ಅಂಪೈರ್ ಜಗದೀಶ್ ಶರ್ಮಾ ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತ ಒಡೆತನದ ಹಂಡ್ರೆಡ್ ಲೀಗ್‌ ತಂಡಗಳಿಂದ ಪಾಕ್‌ ಆಟಗಾರರಿಗೆ ಗೇಟ್‌ಪಾಸ್‌

ಐಪಿಎಲ್‌ ಒಡೆತನದ ಹಂಡ್ರೆಡ್ ಲೀಗ್‌ನಲ್ಲಿ ಪಾಕ್‌ ಆಟಗಾರರಿಗಿಲ್ಲ ಚಾನ್ಸ್‌

Indian-owned Hundred teams: ಪಾಕಿಸ್ತಾನದ ಹಿರಿಯ ಆಟಗಾರರಾದ ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸಿಮ್ ಕಳೆದ ವರ್ಷದ ಹಂಡ್ರೆಡ್‌ನಲ್ಲಿ ಕಾಣಿಸಿಕೊಂಡರು. ಸದ್ಯ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ನಿಷೇಧದ ಬಗ್ಗೆ ತಿಳಿದಿಲ್ಲ ಎಂದು ಇಸಿಬಿ ವಕ್ತಾರರು ಹೇಳಿದ್ದಾರೆ.

ರೈಸಿಂಗ್‌ ಸ್ಟಾರ್ಸ್ ಏಷ್ಯಾಕಪ್‌ ಟಿ20 ಟೂರ್ನಿ; ಲಂಕಾ ಮಣಿಸಿ ಫೈನಲ್‌ ತಲುಪಿದ ಭಾರತ ಮಹಿಳಾ ತಂಡ

ರಾಧಾ ಆಲ್‌ರೌಂಡ್‌ ಪ್ರದರ್ಶನ ಲಂಕಾ ವಿರುದ್ಧ ಭಾರತಕ್ಕೆ 5 ವಿಕೆಟ್‌ ಜಯ

ACC Women's Asia Cup Rising Stars 2026: ಲಂಕಾ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸಂಜನಾ ಕವಿಂದಿ(31) ಮತ್ತು ಶಶಿನಿ ಗಿಮ್ಹಾನಿ (22) ರನ್‌ ಬಾರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ತಂಡದ ಪರ 7 ಮಂದಿ ಬ್ಯಾಟರ್‌ಗಳು ಒಂದಂಕಿಗೆ ಸೀಮಿತರಾದರು.

ಟಿ20 ವಿಶ್ವಕಪ್ ಸೂಪರ್ 8 ಸ್ವರೂಪದ ಬಗ್ಗೆ ಐಸಿಸಿ ಟೀಕೆ ಎದುರಿಸುತ್ತಿರುವುದೇಕೆ?

ವಿಶ್ವಕಪ್ ಸೂಪರ್ 8 ಸ್ವರೂಪದ ಬಗ್ಗೆ ಐಸಿಸಿ ಟೀಕೆ ಎದುರಿಸುತ್ತಿರುವುದೇಕೆ?

T20 World Cup Super 8 Format: ಸಹ-ಆತಿಥೇಯ ಶ್ರೀಲಂಕಾ ತಂಡಕ್ಕೆ ಹೇಗೆ ಅನಾನುಕೂಲವನ್ನುಂಟು ಮಾಡುತ್ತದೆ ಎಂಬುದನ್ನು ವಿಮರ್ಶಕರು ಹೇಳಿದ್ದಾರೆ. ಇದುವರೆಗಿನ ತಮ್ಮ ಸಂಪೂರ್ಣ ಅಭಿಯಾನವನ್ನು ತವರಿನಲ್ಲಿ ಆಡಿದ್ದರೂ, ಅವರು ಸೆಮಿಫೈನಲ್‌ಗೆ ಅರ್ಹತೆ ಪಡೆದರೆ ಭಾರತಕ್ಕೆ ಪ್ರಯಾಣಿಸಬೇಕಿದೆ.

Loading...