ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಂಪಾದಕೀಯ
Vishwavani Editorial: ಈ ವಿಷಯದಲ್ಲೂ ರಾಜಕೀಯವೇ?!

ಈ ವಿಷಯದಲ್ಲೂ ರಾಜಕೀಯವೇ?!

ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ?

Vishwavani Editorial: ಭಾರತದ ರಾಜತಾಂತ್ರಿಕ ಗೆಲುವು

ಭಾರತದ ರಾಜತಾಂತ್ರಿಕ ಗೆಲುವು

ಮುಂಬೈ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಯ ಭಾರತ ಪ್ರವಾಸ ಮತ್ತು ಇತರ ಯೋಜನೆಗಳಿಗೆ ರಾಣಾ ಬೆಂಗಾವಲಾಗಿದ್ದ. ಈತ ಸದ್ಯ ಅಮೆರಿಕದ ಜೈಲಿನಲ್ಲಿದ್ದು ಭಾರತಕ್ಕೆ ಕರೆ ತರಬೇಕಿದೆ. ಅಲ್ಲದೆ, ಇದೇ ದಾಳಿಯ ಇನ್ನಿತರ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ.

Vishwavani Editorial: ಬಾಂಗ್ಲಾ ವರ್ತನೆ ಆಘಾತಕಾರಿ

ಬಾಂಗ್ಲಾ ವರ್ತನೆ ಆಘಾತಕಾರಿ

ಮೊಹಮದ್ ಯೂನುಸ್ ನೇತೃತ್ವದಲ್ಲಿ ರಚನೆಯಾದ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಸೌಹಾರ್ದತೆಗಿಂತಲೂ ಸಂಘರ್ಷಕ್ಕೆ ಹೆಚ್ಚು ಒತ್ತು ನೀಡಿದೆ. ಇದೀಗ ಚೀನಾದ ನೆಲದಲ್ಲಿ ನಿಂತು ಯೂನುಸ್ ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾತನಾಡಿರುವುದು ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿ ಮೂರು ದುಷ್ಟಕೂಟಗಳು ಭಾರತದ ವಿರುದ್ಧ ಸಂಚು ರೂಪಿಸುತ್ತಿವೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

Vishwavani Editorial: ಇದು ದುರ್ಭರ, ದುಬಾರಿ ದುನಿಯಾ

ಇದು ದುರ್ಭರ, ದುಬಾರಿ ದುನಿಯಾ

ಜನರು ಪ್ರಸ್ತುತ ಇಂಥದೇ ಪರಿಸ್ಥಿತಿಯ ಲಾನುಭವಿಗಳಾಗಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಮದ್ದು ಅರೆಯುವಂಥ ಉಪಕ್ರಮಗಳು ಹೇಳಿಕೊಳ್ಳುವಷ್ಟು ಜಾರಿಗೆ ಬರದ ಕಾರಣ, ‘ದುಡಿಯುವ ಕೈ ಒಂದು, ಆದರೆ ತಿನ್ನುವ ಬಾಯಿ ಹನ್ನೊಂದು’ ಎನ್ನುವಂಥ ಪರಿಸ್ಥಿತಿ ಇನ್ನೂ ಅನೇಕ ಕುಟುಂಬಗಳಲ್ಲಿದೆ.

Vishwavani Editorial: ಜಾರಿಯಾಗದ ಆಶಯ ಲೊಳಲೊಟೆ !

ಜಾರಿಯಾಗದ ಆಶಯ ಲೊಳಲೊಟೆ !

ಕಳೆದ ಕೆಲ ತಿಂಗಳಿಂದ ಕಮಲ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದು, ಹಾದಿರಂಪ-ಬೀದಿ ರಂಪದ ಹಂತವನ್ನು ತಲುಪಿದಾಗ ಅಥವಾ ಭಿನ್ನರ ಬಣಗಳು ತಮ್ಮದೇ ಆದ ದೂರಿನ ಮೂಟೆ ಯನ್ನು ಹೊತ್ತು ದೆಹಲಿ ದೊರೆಗಳ ಬಳಿ ಅವನ್ನು ಬಿಚ್ಚಿಡುವಾಗ ಹೀಗೆ ‘ನಾಲ್ಕು ಗೋಡೆಗಳ ಮಧ್ಯೆಯೇ’ ಭಿನ್ನಮತವನ್ನು ಬಗೆಹರಿಸಿಕೊಳ್ಳುವ ಚಿತ್ತಸ್ಥಿತಿಯು ಪಕ್ಷದ ತಥಾಕಥಿತ ರಾಜ್ಯ ನಾಯಕರಲ್ಲಿ ಇರಲಿಲ್ಲವೇಕೆ?

Vishwavani Editorial: ನಂಬಿದ ಗುರುವೇ ನೆತ್ತರು ಹೀರಿದರೆ?

ನಂಬಿದ ಗುರುವೇ ನೆತ್ತರು ಹೀರಿದರೆ?

ಅಕ್ಷರ ಹೇಳಿ ಕೊಡುವ ಗುರುವಾಗಿರಲಿ, ಆಟದ ಕೌಶಲ ಹೇಳಿಕೊಡುವ ತರಬೇತುದಾರನಾಗಿರಲಿ, ಕಲಿಕೆಗೆ ಬಂದಿರುವವರ ಪಾಲಿಗೆ ಆತ ದೇವರೇ. ಇದು ಬಹುತೇಕರ ಗ್ರಹಿಕೆ ಯೂ ಹೌದು. ಆದರೆ, ಮೇಲೆ ಉಲ್ಲೇಖಿಸಿರುವ ಪ್ರಕರಣದಲ್ಲಿ ಕಾಣವುದು ಗುರುವೆಂಬ ಗಿಳಿಯಲ್ಲ, ಅದು ಹಸಿಮಾಂಸ ಕ್ಕೆ ಹಪಹಪಿಸುವ ರಣಹದ್ದು.

Vishwavani Editorial: ಬರೆ ಬೀಳೋದು ಜನರಿಗೇ ಅಲ್ಲವೇ?

ಬರೆ ಬೀಳೋದು ಜನರಿಗೇ ಅಲ್ಲವೇ?

ತಮ್ಮ ಹಿತವನ್ನು ರಕ್ಷಿಸುತ್ತಾರೆ ಎಂಬ ಭರವಸೆಯಿಟ್ಟುಕೊಂಡು ತಾವು ಚುನಾ ಯಿಸಿದ ಪ್ರತಿನಿಧಿಗಳೇ ಸಮಸ್ಯೆಗೆ ಮದ್ದು ಅರೆಯುವ ಯತ್ನವನ್ನು ಮಾಡದೆ, ಪರಸ್ಪರರ ಮೇಲೆ ಕೆಸರೆರ ಚುತ್ತಾ ದಿನವನ್ನು ಕಳೆಯುತ್ತಿದ್ದರೆ, ಅದ್ಯಾವ ಪುರುಷಾರ್ಥ? ಎಂಬ ಬಿರುನುಡಿಗಳೂ ಅವರಿಂದ ಕೇಳಿಬರುತ್ತಿವೆ. ಅವರ ಮಾತಿನಲ್ಲೂ ತಥ್ಯವಿದೆ.

Vishwavani Editorial: ಆಗ ಯುವರಾಜ, ಈಗ ಎ.ರಾಜಾ!

ಆಗ ಯುವರಾಜ, ಈಗ ಎ.ರಾಜಾ!

ಎ.ರಾಜಾ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೊನ್ನೆ ಮಾತನಾಡುತ್ತಾ, “ಹಿಂದೂ ಧರ್ಮದ ಸಂಕೇತಗಳು, ಚಿಹ್ನೆಗಳನ್ನು ಧರಿಸಬೇಡಿ. ತಿಲಕ-ಕೇಸರಿಗಳನ್ನು ತ್ಯಜಿಸಿ, ಸಂಗಳಿಗಿಂತ ಭಿನ್ನವಾಗಿರಿ" ಎಂದು ಕರೆ ನೀಡಿದ್ದಾರೆ. ಪಕ್ಷದ ನಾಯಕರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲೂ ಕಾರ್ಯ ಕರ್ತರು ಹೀಗೇ ನಡೆದು ಕೊಳ್ಳಬೇಕು ಎಂಬುದು ರಾಜಾ ಅವರು ಹೊರಡಿಸಿರುವ ಫರ್ಮಾನು!

Vishwavani Editorial: ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ

ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ

ಏಪ್ರಿಲ್ 2 ವಿಶ್ವ ಆಟಿಸಂ ಜಾಗೃತಿ ದಿನ. ಮೇಲ್ನೋಟಕ್ಕೆ ಅಂಗಾಂಗಗಳೆಲ್ಲವೂ ಸರಿ ಇದ್ದರೂ ಕೇಂದ್ರಿ ಯ ನರಮಂಡಲ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಆಟಿಸಂ ರೋಗಿಗಳಿಗೆ ಪೋಷಕರು ಮಾತ್ರವಲ್ಲ ಇಡೀ ಸಮಾಜದ ಕಾಳಜಿ, ಆರೈಕೆ ಅಗತ್ಯವಿದೆ. ಶಾರೀರಿಕ ಸಮಸ್ಯೆ ರೋಗಗಳಿಗೆ ಚಿಕಿತ್ಸೆ ಕೊಡಿಸಬಹುದು. ಆದರೆ ಆಟಿಸಂ ಇರುವ ರೋಗಿಗಳಿಗೆ ಜೀವನ ಪರ‍್ಯಂತ ಪ್ರೀತಿ ತುಂಬಿದ ಆರೈಕೆ ಅಗತ್ಯ

Vishwavani Editorial: ಎಚ್ಚರಿಕೆ ಗಂಟೆಯಾಗಲಿ

ಎಚ್ಚರಿಕೆ ಗಂಟೆಯಾಗಲಿ

ಭೂಕಂಪ ಸಂತ್ರಸ್ತ ಪ್ರದೇಶ ಒಂದರ್ಥದಲ್ಲಿ ಸ್ಮಶಾನವಾಗಿ ಮಾರ್ಪ ಟ್ಟಿದೆ. ಭೂಕಂಪದಂಥ ಪ್ರಕೃತಿ ವಿಕೋಪಗಳನ್ನು ತಡೆಯುವುದು ಹುಲುಮಾನವರಿಂದ ಆಗದ ಕೆಲಸ ಎಂಬುದೇನೋ ಸರಿ; ಆದರೆ, ಇಂಥ ವಿಪತ್ತುಗಳು ಜರುಗುವಲ್ಲಿ ತನ್ನ ಪಾತ್ರ ಎಷ್ಟಿದೆ ಎಂಬು ದರ ಅವಲೋಕನಕ್ಕೆ ಮನುಷ್ಯ ಒಡ್ಡಿ ಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯತೆ.

Vishwavani Editorial: ರಾಜ್ಯದ ನಿಲುವು ಬದಲಾಗದಿರಲಿ

ರಾಜ್ಯದ ನಿಲುವು ಬದಲಾಗದಿರಲಿ

ಕೆಲ ತಿಂಗಳ ಹಿಂದೆ ವಯನಾಡಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದರು. ಈ ವಿಷಯ ದಲ್ಲಿ ಎರಡು ರಾಜ್ಯಗಳ ಬಾಂಧವ್ಯಕ್ಕಿಂತಲೂ ಸಮಸ್ತ ಜೀವಸಂಕುಲದ ಪ್ರಶ್ನೆ ಅಡಗಿರುವುದು ಇಬ್ಬರು ಹಿರಿಯ ಸಚಿವರಿಗೆ ತಿಳಿಯದ ವಿಷಯವೇನಲ್ಲ.

Vishwavani Editorial: ರಾಜಕಾರಣವೋ, ದೃಶ್ಯಭೀಷಣವೋ ?

ರಾಜಕಾರಣವೋ, ದೃಶ್ಯಭೀಷಣವೋ ?

ರಾಜ್ಯದ ಜನರಿಗೆ ಪ್ರಸ್ತುತ ಕಾಣುತ್ತಿರುವುದು ರಾಜಕಾರಣವಲ್ಲ, ‘ದೃಶ್ಯಭೀಷಣ’. ಜನಕಲ್ಯಾಣಕ್ಕೆ ಆಳುಗರು ದಿನಪೂರ್ತಿ ಸಮಯ ವಿನಿಯೋಗಿಸಿದರೂ ಸಾಲದು ಎಂಬ ಅನಿವಾರ್ಯತೆ ಇರು ವಾಗ, ಆಳುಗ ಪಕ್ಷ ದವರು ಹಾಗೂ ವಿಪಕ್ಷದವರು ತಂತಮ್ಮ ಮನೆಯ ಅಂತಃಕಲಹದ ಬೆಂಕಿಯ ಶಮನಕ್ಕೇ ಬಹುತೇಕ ಸಮಯವನ್ನು ಮೀಸಲಿಡುವಂತಾದರೆ, ಜನಕಲ್ಯಾಣದ ಆಶಯ ಸಾಕಾರ ಗೊಳ್ಳುವುದೆಂತು?

Vishwavani Editorial: ಬಿಜೆಪಿ ಕಲಹ ಉಲ್ಭಣ

ಬಿಜೆಪಿ ಕಲಹ ಉಲ್ಭಣ

ಪಕ್ಷದ ಕಟ್ಟಾ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಯತ್ನಾಳ್‌ರಿಗೆ ಕೇಂದ್ರ ದಲ್ಲೂ, ರಾಜ್ಯದಲ್ಲೂ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದರು. ಆದರೆ ಪಕ್ಷದ ಈ ಆಂತರಿಕ ಕಚ್ಚಾಟ ವನ್ನು ನಿರ್ಲಕ್ಷಿಸುತ್ತಲೇ ಬಂದ ಹೈಕಮಾಂಡ್, ಇದೀಗ ಒಮ್ಮಿಂದೊ ಮ್ಮೆಲೆ ಕೆಲವರಿಗೆ ಶೋಕಾ ಸ್ ನೋಟಿಸ್ ನೀಡಿದೆ.

Vishwavani Editorial: ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ

ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ

ಚುನಾಯಿತ ಕಾರ್ಪೊರೇಟರ್‌ಗಳು ನಿಯಮಗಳ ಪ್ರಕಾರ ತಮ್ಮ ಆಸ್ತಿ ವಿವರ ಘೋಷಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ 35 ಕಾರ್ಪೊರೇಟರ್‌ ಗಳ ನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ

Vishwavani Editorial: ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿ

ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿ

ಇದು ಗಂಭೀರ ಚಿಂತನೆಗೆ ಒಡ್ಡುವಂಥ ಸಂಗತಿಯೆನ್ನಬೇಕು. ಇನ್ನು ‘ಬಾಲ್ಯವಿವಾಹ’ ಮತ್ತು ‘ಬಾಲಕಾರ್ಮಿಕತನ’ಕ್ಕೆ ಸಂಬಂಧಿಸಿಯೂ ಪ್ರಕರಣಗಳು ದಾಖಲಾಗುವುದು ನಿಂತಿಲ್ಲ. ಆಗಷ್ಟೇ ಪ್ರಪಂಚವನ್ನು ನೋಡುತ್ತಿರುವ ಮಕ್ಕಳು ಶಿಕ್ಷಣ ಮುಖಿಗಳಾಗಿ ಕೈಯಲ್ಲಿ ಪುಸ್ತಕ ವನ್ನು ಹಿಡಿಯುವಂತಾಗಬೇಕೇ ವಿನಾ, ದುಡಿಮೆಯಲ್ಲಿ ತೊಡಗಿ ಕೈಮಸಿ ಮಾಡಿಕೊಳ್ಳ ಬಾರದು ಎಂಬ ಆಶಯದೊಂದಿಗೆ ಬಾಲಕಾರ್ಮಿಕ ಪದ್ಧತಿಗೆ ಲಗಾಮು ಹಾಕಲಾಗಿದೆ

Vishwavani Editorial: ದೇಶದ್ರೋಹಿಗಳನ್ನು ಜಾಲಾಡಬೇಕಿದೆ

ದೇಶದ್ರೋಹಿಗಳನ್ನು ಜಾಲಾಡಬೇಕಿದೆ

ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ವತಿ ಯಿಂದ ಬೆಂಗಳೂರಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಈತನ ಬಂಧನವಾಗಿದೆ ಎಂಬುದು ವಿಶೇಷ. ಪಾಕಿಸ್ತಾನದಲ್ಲಿನ ಏಜೆಂಟ್‌ಗಳನ್ನು ಸಂಪರ್ಕಿಸಲು ಈತ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಆಪ್ ಗಳು ಸೇರಿದಂತೆ ಇನ್ನೂ ಸಾಕಷ್ಟು ಸಂವಹನಾ ಮಾರ್ಗೋಪಾಯ ಗಳನ್ನು ಬಳಸಿರಬಹುದು ಎಂಬುದು ಗುಪ್ತಚರ ಸಂಸ್ಥೆಗಳ ಶಂಕೆ.

Vishwavani Editorial: ಹಣದ ಮೂಲ ಪತ್ತೆಯಾಗಲಿ

ಹಣದ ಮೂಲ ಪತ್ತೆಯಾಗಲಿ

ದೆಹಲಿ ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ಅವರ ದೆಹಲಿ ಮನೆಯಲ್ಲಿ ಇತ್ತೀಚೆಗೆ ಅಗ್ನಿ ಆಕ ಸ್ಮಿಕ ಸಂಭವಿಸಿದ ವೇಳೆ ಅವರ ಮನೆಯಲ್ಲಿ ಶಂಕಾಸ್ಪದ ಅಪಾರ ಪ್ರಮಾಣದ ನೋಟಿನ ಕಂತೆಗಳು ಪತ್ತೆ ಯಾಗಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದ ಪ್ರಕರಣ ರಾಷ್ಟ್ರದ ಗಮನ ಸೆಳೆದಿದೆ

Vishwavani Editorial: ಸದನ ಪರಂಪರೆಗೆ ಕಪ್ಪುಚುಕ್ಕೆ

ಸದನ ಪರಂಪರೆಗೆ ಕಪ್ಪುಚುಕ್ಕೆ

ಈ ಬಾರಿಯ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿಗಿದ್ದ ಹತ್ತಾರು ವಿಷಯಗಳ ‘ಪ್ರಸ್ತಾಪ’ವೂ ಆಗಲಿಲ್ಲ. ಜತೆಗೆ ಕಳೆದ 3 ದಿನಗಳಿಂದ ವಿಧಾನಸಭೆಯ ಕಲಾಪ ಹನಿಟ್ರ್ಯಾಪ್ ವಿಷಯದ ಸುತ್ತಲೇ ಗಿರಕಿ ಹೊಡೆದಿದೆ. ಮೊದಲ ದಿನ ಸುನೀಲ್‌ಕುಮಾರ್ ಸೇರಿ ಕೆಲ ಶಾಸಕರು ವಿಷಯ ಪ್ರಸ್ತಾಪಿಸಿ ಕೈಬಿಟ್ಟರೆ, ಎರಡನೇ ದಿನ ಸಹಕಾರ ಸಚಿವ ರಾಜಣ್ಣ ಅವರೇ, ತಮ್ಮ ಮೇಲಿನ ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆಗ್ರಹಿಸಿದರು

Vishwavani Editorial: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ

ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವು ಶೇ. 0.36ರಷ್ಟಿದೆ. ಸಾಕ್ಷಾಧಾರಗಳ ಕೊರತೆ, ತನಿಖೆ ಹಾಗೂ ವಿಚಾರಣೆ ವಿಳಂಬವಾಗುವುದು ಇದಕ್ಕೆ ಕಾರಣ ಎನ್ನಲಾಗಿದೆ. ಲಭ್ಯ ಮಾಹಿತಿ ಪ್ರಕಾರ 2023ರಿಂದ 2025ರ ಫೆಬ್ರವರಿವರೆಗೆ ರಾಜ್ಯದಲ್ಲಿ 1460 ಅತ್ಯಾಚಾರ ಪ್ರಕರಣಗಳು ನಡೆದಿವೆ.

Vishwavani Editorial: ತಂದೆ-ತಾಯಿ ಕಡೆಗಣನೆ ಕಳವಳಕಾರಿ

ತಂದೆ-ತಾಯಿ ಕಡೆಗಣನೆ ಕಳವಳಕಾರಿ

ತಾಯಿ- ತಂದೆಯನ್ನು ಅನಾಥರನ್ನಾಗಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂಬ ಉದ್ದೇಶದಿಂದ ಹಿರಿಯ ನಾಗರಿಕ ರನ್ನು ಆರೈಕೆ ಮಾಡದೆ ನಿರ್ಲಕ್ಷಿಸುವ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ರದ್ದುಗೊಳಿಸಲು ಅವಕಾಶ ಕಲ್ಪಿ ಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದು ಸ್ವಾಗತಾರ್ಹ ನಡೆ

Vishwavani Editorial: ಜಗದ ಜನರ ‘ಮನ್ ಕೀ ಬಾತ್’

ಜಗದ ಜನರ ‘ಮನ್ ಕೀ ಬಾತ್’

ವಿಶ್ವಸಂಸ್ಥೆಗೆ ಅದರದ್ದೇ ಆದ ಸ್ಥಾಪಿತ ಆಶಯಗಳಿವೆ. ಅಂದರೆ, ತನ್ನ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದದ ವಾತಾವರಣ ರೂಪುಗೊಳ್ಳಲು ಒತ್ತಾಸೆ ನೀಡುವುದು, ರಾಜಕೀ ಯ-ಸಾಮಾಜಿಕ-ಸಾಂಸ್ಕೃತಿಕ-ಮಾನವೀಯ ನೆಲೆಗಟ್ಟಿನ ಸಮಸ್ಯೆಗಳನ್ನು ಸಹಕಾರ ತತ್ವದ ಆಧಾ ರದ ಮೇಲೆ ಬಗೆಹರಿಸಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆ ಯನ್ನು ಹತ್ತಿಕ್ಕುವುದು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಸೇರಿವೆ.

Vishwavani Editorial: ಇಸ್ರೊ ಸಾಧನೆ ಮುಂದುವರಿಯಲಿ

ಇಸ್ರೊ ಸಾಧನೆ ಮುಂದುವರಿಯಲಿ

2008ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಯೋಜನೆಯ ಸಂದರ್ಭದಲ್ಲಿ ಚಂದ್ರ ನಲ್ಲಿರುವ ರಾಸಾಯನಿಕ, ಖನಿಜಶಾಸೀಯ ಹಾಗೂ ಭೌಗೋಳಿಕ ಛಾಯಾ ನಕ್ಷೆಗಳನ್ನು ಭೂಮಿಗೆ ಹೊತ್ತು ತರಲಾಗಿತ್ತು. 2019ರಲ್ಲಿ ನಡೆದಿದ್ದ ಚಂದ್ರಯಾನ-2 ಯೋಜನೆಯು ಶೇ.98ರಷ್ಟು ಯಶಸ್ವಿ ಯಾದರೂ, ಅಂತಿಮ ಘಟ್ಟದಲ್ಲಿ ಶೇ.2ರಷ್ಟು ವಿಫಲಗೊಂಡಿತ್ತು

Vishwavani Editorial: ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ

ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ

ನೈಜೀರಿಯಾ, ಕಾಂಬೋಡಿಯಾ, ಥಾಯ್ಲೆಂಡ್, ಬರ್ಮಾ, ಅಪಘಾನಿಸ್ತಾನ ಮುಂತಾದ ದೇಶ ಗಳಿಂದ ಮಾದಕ ವಸ್ತು ಹರಿದು ಬರುತ್ತಲೇ ಇದೆ. ಗೃಹ ಇಲಾಖೆ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮಾದಕ ದ್ರವ್ಯ ಜಾಲದ ವಿರುದ್ಧ ವಿಶೇಷ ಕಾರ‍್ಯಾಚರಣೆ ಹಮ್ಮಿಕೊಳ್ಳಲಾಗಿದೆ.

Vishwavani Editorial: ಸಾಧನೆ ನಿರಂತರವಾಗಿರಲಿ

ಸಾಧನೆ ನಿರಂತರವಾಗಿರಲಿ

ಇದು ದಶಕಗಳ ಹಿಂದಿನ ಮಾತು. ತಾನು ನಿರ್ಮಿಸಿದ ಉಪಗ್ರಹವನ್ನು ಅದರ ಉಡಾವಣಾ ತಾಣದೆಡೆಗೆ ಒಯ್ಯುವುದಕ್ಕೂ ಮುನ್ನ, ಕಾಂತೀಯತೆ-ನಿರೋಧಕ ವೇದಿಕೆಯಂಥ ಉಪಕರಣದ ಅಲಭ್ಯತೆಯಿಂದಾಗಿ ಮರದ ಎತ್ತಿನ ಗಾಡಿಯ ಮೇಲೆ ಉಪಗ್ರಹವನ್ನು ಇರಿಸಿ ಕಾರ್ಯಸಾಧಿಸಿ ಕೊಳ್ಳಬೇಕಾದಂಥ ದುರ್ಭರ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು ಇಸ್ರೋ