ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ

Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ

ಕೆಲ ದಿನಗಳ ಹಿಂದಷ್ಟೇ ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ, ತರುವಾಯದಲ್ಲಿ ‘ದೊಡ್ಡಣ್ಣ’ ಅಮೆರಿಕದೊಂದಿಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು ಗೊತ್ತಿರುವ ಸಂಗತಿಯೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಲೆದೋರಿದ್ದ ಆರ್ಥಿಕ ಅನಿಶ್ಚಿತತೆಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಎರಡು ಒಪ್ಪಂದಗಳು ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ವ್ಯಾಖ್ಯಾನಿಸಲಾಗಿತ್ತು.

Vishwavani Editorial: ಅಮೆರಿಕ ಅಧ್ಯಕ್ಷರ ಹುಸಿ ಸಂಭ್ರಮ

Vishwavani Editorial: ಅಮೆರಿಕ ಅಧ್ಯಕ್ಷರ ಹುಸಿ ಸಂಭ್ರಮ

ಕಾನೂನುಬದ್ಧ ದಾಖಲೆ ಹೊಂದಿರುವ ವಲಸಿಗರಷ್ಟೇ ದೇಶವನ್ನು ಪ್ರವೇಶಿಸಿರುವುದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚೆಚ್ಚು ಅಮೆರಿಕನ್ನರು ಉದ್ಯೋಗಸ್ಥರಾಗಿದ್ದಾರೆ’ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಂಡಿದ್ದಾರೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯದೊಂದಿಗೇ ಗದ್ದುಗೆಯನ್ನು ಅಪ್ಪಿದ ಟ್ರಂಪ್ ಅವರು, ಅದು ಸಾಕಾರಗೊಳ್ಳುವ ಹಾದಿಯಲ್ಲಿದೆ ಎಂಬುದನ್ನು ಹೀಗೆ ಸಮರ್ಥಿಸಿಕೊಂಡಿರಲಿಕ್ಕೂ ಸಾಕು.

Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...

Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...

ಇಡೀ ಧಾರವಾಡ ನಗರವೇ ವಿದ್ಯಾರ್ಥಿಗಳಿಂದ ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಅಂತಹುದ್ದೇ ಒಂದು ಹೋರಾಟ ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆಯಿತು. ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಅಲ್ಲಿನ, ಆ ಭಾಗದ ಸ್ಥಳೀಯರು ರೊಚ್ಚಿ ಗೆದ್ದರು.

Vishwavani Editorial: ಮಾರಾಮಾರಿಯ ನೆಲೆಯಾಗದಿರಲಿ

Vishwavani Editorial: ಮಾರಾಮಾರಿಯ ನೆಲೆಯಾಗದಿರಲಿ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್'ಯು) ಆವರಣವು ಕಾರಣವಲ್ಲದ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಮೊನ್ನೆ ಭಾನುವಾರ ತಡರಾತ್ರಿ, ಅಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ, ಕಲ್ಲುತೂರಾಟವಾಗಿದೆ ಎಂಬ ಸುದ್ದಿ ಬಂದಿದೆ.

Vishwavani Editorial: ಮೆರೆದವರೆಲ್ಲ ಇಳಿಯುವುದು ಸತ್ಯ

Vishwavani Editorial: ಮೆರೆದವರೆಲ್ಲ ಇಳಿಯುವುದು ಸತ್ಯ

ವಿಶ್ವದ ವಿವಿಧ ದೇಶಗಳ ಸರಕುಗಳ ಮೇಲೆ ಟ್ರಂಪ್ ಅವರು ಮನಬಂದಂತೆ ಸುಂಕವನ್ನು ಏರಿಸಿ ದಾಗ ಜಾಗತಿಕ ಸಮುದಾಯದಲ್ಲಿ ಸುರಿಸಿದ ಗ್ರಹಿಕೆ. ಆದರೆ ಅಮೆರಿಕದ ಸರ್ವೋಚ್ಚ ನ್ಯಾಯಾಲ ಯವು ತಲೆಗೆ ಮೊಟಕಿರುವ ಪರಿಣಾಮವಾಗಿ ಟ್ರಂಪ್ ಈಗ ತಮ್ಮ ಹುಚ್ಚಾಟಕ್ಕೆ ಪೂರ್ಣ ವಿರಾಮವನ್ನು ಹಾಕಬೇಕಾಗಿ ಬಂದಿದೆ.

Vishwavani Editorial: ಯಾರಿಗೆ ಯಾರು ಆದರ್ಶ?!

Vishwavani Editorial: ಯಾರಿಗೆ ಯಾರು ಆದರ್ಶ?!

ಇದು ಮಮತಾ ಬ್ಯಾನರ್ಜಿಯವರ ಚಿಂತನಾ ಕ್ರಮವು ಅಧೋಗತಿಗೆ ಇಳಿದಿರುವುದರ ದ್ಯೋತಕ ವಷ್ಟೇ. ದಶಕಗಳ ಹಿಂದಿನ ಅವಽಗೆ ಹೋಲಿಸಿದಾಗ, ಕಳೆದ ಕೆಲ ವರ್ಷಗಳಲ್ಲಿ ನಮ್ಮ ಚುನಾ ವಣಾ ಚಟುವಟಿಕೆಗಳಲ್ಲಿ ಮತ್ತು ಆಯೋಗದ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆ ಯಾಗಿರುವುದು ಎದ್ದು ಕಾಣುತ್ತದೆ.

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

ಕಳೆದ ಕೆಲವು ತಿಂಗಳಿನಿಂದ ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಅದಕ್ಕೆ ಕೊಟ್ಟ ಕಾರಣ ಆಸುಪಾಸಿನ ಪ್ರದೇಶಗಳಲ್ಲಿ ಹುಲಿ ದಾಳಿಯಾಗುತ್ತಿದೆ. ಸಾಕು ಪ್ರಾಣಿಗಳು, ಮನುಷ್ಯರು ಸಾಯುತ್ತಿದ್ದಾರೆ. ಇದನ್ನು ತಡೆಯಲು ಈ ಕ್ರಮ ಎಂದು ಅರಣ್ಯ ಸಚಿವಾಲಯ ಘೋಷಿಸಿತ್ತು.

Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

ನೇರವಾಗಿ ಎಐ ಕೋರ್ಸ್‌ʼಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ ಅಥವಾ ವೈಯಕ್ತಿಕವಾಗಿ ಯಾದರೂ ಎಐಯನ್ನು ಕಲಿಯುತ್ತಿದ್ದಾರೆ. ಇಡೀ ಜಗತ್ತನ್ನು ಎಐ ತಂತ್ರಜ್ಞಾನ ಆವರಿಸಿಕೊಂಡಿರುವ ರೀತಿಗೆ ಇದು ಉದಾಹರಣೆ. ಎಐ ಕಲಿಕೆ ಅನಿವಾರ್ಯ ಎಂದು ಬಹಳ ಬೇಗನೆ ಈಗಿನ 5ಜಿ ತಲೆಮಾರಿನ ಜನಾಂಗ ಅರಿತುಕೊಂಡಿದೆ.

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

ಇದುವರೆಗೆ 17 ವರ್ಷಗಳ ಕಾಲ ಅವರು ತಮ್ಮ ದೇಶಕ್ಕೆ ಕಾಲು ಹಾಕಿರಲಿಲ್ಲ. ಇತ್ತ ನೆರೆಯ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಹೊರದಬ್ಬಿದ್ದು ಮಾತ್ರವಲ್ಲ, ಅವರನ್ನು ಜೈಲಿನಲ್ಲಿಡಲಾಗಿದೆ. ಅವರ ಎದುರಾಳಿ ಪಕ್ಷ ಅಧಿಕಾರಕ್ಕೇರಿದೆ. ಈ ಎರಡೂ ದೇಶಗಳಲ್ಲಿ ತಲೆತಲಾಂತರದಿಂದ ಇಂತಹ ವಿದ್ಯಮಾನಗಳೇ ನಡೆದುಕೊಂಡು ಬಂದಿವೆ.

Vishwavani Editorial: ಸಂಕಟದ ವೇಳೆಯೂ ಸುಂಕವೇ?

Vishwavani Editorial: ಸಂಕಟದ ವೇಳೆಯೂ ಸುಂಕವೇ?

ಗೋರಖಪುರದ ಗೀತಾ ಪ್ರೆಸ್ ಇದು ನಿಜಕ್ಕೂ ಮನಸ್ಸನ್ನು ವಿಹ್ವಲಗೊಳಿಸುವ ಸಂಗತಿ. ಹುಬ್ಬಳ್ಳಿ ಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವವನ್ನು ಅವರ ಕುಟುಂಬಿಕರಿಗೆ ಪ್ಯಾಕ್ ಮಾಡಿಕೊಡಲು ಐವರು ಹೊರಗುತ್ತಿಗೆ ಸಿಬ್ಬಂದಿ ನಾಚಿಕೆ ಬಿಟ್ಟು ಹಣವಸೂಲಿ ಮಾಡಿದ್ದರು ಎಂಬ ಸುದ್ದಿ ಇದಕ್ಕೆ ಕಾರಣ.

Vishwavani Editorial: ಇನ್ನೂ ಎಷ್ಟು ಬಲಿಯಾಗಬೇಕು?

ಇನ್ನೂ ಎಷ್ಟು ಬಲಿಯಾಗಬೇಕು?

ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ‘ಪಬ್‌ಜಿ’ ಎಂಬ ಆನ್‌ಲೈನ್ ಆಟದಲ್ಲಿ ಭಾಗಿಯಾಗಿದ್ದ ೨೨ರ ಹರೆಯದ ಯುವಕನೊಬ್ಬ, ರಕ್ತದೊತ್ತಡವು ತೀವ್ರವಾದ ಕಾರಣ ಸಾವನ್ನಪ್ಪಿದ ಮತ್ತು ಈತ ಕಳೆದ 4 ತಿಂಗಳಿಂದ ಈ ಆಟದ ಗೀಳು ಹತ್ತಿಸಿಕೊಂಡು, ದಿನದ ಬಹುಭಾಗವನ್ನು ಅದರಲ್ಲೇ ಕಳೆಯುತ್ತಿದ್ದ ಎಂದಿದೆ ವರದಿ.

Vishwavani Editorial: ಮೈಮರೆವು ಬೇಡ, ಎಚ್ಚರವಿರಲಿ

Vishwavani Editorial: ಮೈಮರೆವು ಬೇಡ, ಎಚ್ಚರವಿರಲಿ

ಇದು ದಶಕಗಳಿಂದಲೂ ಕೆನೆಗಟ್ಟಿರುವ ಭಾರತದ ಆಶಯಕ್ಕೆ ಅಮೆರಿಕದ ಕಡೆಯಿಂದ ಹೊಮ್ಮಿರುವ ಸಕಾರಾತ್ಮಕ ಸೂಚ್ಯವರ್ತನೆ ಎನ್ನುತ್ತಿದ್ದಾರೆ ಬಲ್ಲವರು. ಹಾಗಂತ ಭಾರತವು ಮೈಮರೆಯುವಂತಿಲ್ಲ. ತನಗೆ ಏನಾದರೂ ಲಾಭವಾಗುವಂತಿದ್ದರೆ ಮಾತ್ರವೇ ಅಮೆರಿಕ ಇಂಥ ಇಂಗಿತಗಳನ್ನು ವ್ಯಕ್ತಪಡಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ

ಇನ್ನೂ ಇಂಗಿಲ್ಲವೇ ರಕ್ತದಾಹ?

ಇನ್ನೂ ಇಂಗಿಲ್ಲವೇ ರಕ್ತದಾಹ?

ಒಂದೊಮ್ಮೆ ಗಾಳಿ ಬೀಸಿದರೆ, ಪಕ್ಕದ ಮನೆಗೆ ಅಮರಿಕೊಂಡಿರುವ ಬೆಂಕಿ ನಮ್ಮ ಮನೆಗೂ ರಾಚು ತ್ತದೆ ಎಂಬ ಅಪ್ರಿಯ ಸತ್ಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಅಂದರೆ, ಉಗ್ರವಾದದ ಮತ್ತು ಉಗ್ರವಾದಿ ಗಳ ದಮನವು ಜಗತ್ತಿನ ಪ್ರತಿಯೊಂದು ದೇಶದ ಪಾಲಿಗೂ ಆದ್ಯತೆಯ ಹೊಣೆಗಾರಿಕೆಯಾಗಬೇಕು.

Vishwavani Editorial: ಬಲೂಚ್ ಕಿಚ್ಚಿಗೆ ಪಾಕ್ ದಬ್ಬಾಳಿಕೆ ಕಾರಣ

Vishwavani Editorial: ಬಲೂಚ್ ಕಿಚ್ಚಿಗೆ ಪಾಕ್ ದಬ್ಬಾಳಿಕೆ ಕಾರಣ

ಬಲೂಚ್‌ನೊಳಗಿನ ಆಂತರಿಕ ಬೇಗುದಿಗೆ ಭಾರತ ಕಾರಣ ಎನ್ನುವ ಅವಿವೇಕಿಗಳಿಗೆಲ್ಲ ಈ ಸತ್ಯ ಗೊತ್ತಿಲ್ಲ. 2024ರಲ್ಲಿ ಆಪರೇಶನ್ ಹೆರೋಫ್-1 ನಡೆಯಿತು. ಆಗ ಬಲೂಚ್‌ನ ಹಲವಾರು ಪ್ರದೇಶ ಗಳು ಬಿಎಲ್‌ಎ ಕೈಗೆ ಸಿಕ್ಕಿತ್ತು. ಕೆಲವು ಪ್ರದೇಶಗಳಲ್ಲಿ 20 ಗಂಟೆ, ಇನ್ನು ಕೆಲವು ಕಡೆ 48 ಗಂಟೆಗಳ ಕಾಲ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಹಿಡಿತ ಸಾಧಿಸಿದ್ದರು. ಈ ಬಾರಿ ಆಪರೇಶನ್ ಹೆರೋಫ್-2 ನಡೆಯುತ್ತಿದೆ.

Vishwavani Editorial: ಮೂಗು ಹಿಡಿದರೆ ಬಾಯಿ ಬಿಟ್ಟೀತು

Vishwavani Editorial: ಮೂಗು ಹಿಡಿದರೆ ಬಾಯಿ ಬಿಟ್ಟೀತು

ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕದ ಭಾರತ ಎಂದಿನಂತೆ ‘ನಿರ್ಲಿಪ್ತ ರಾಜ ತಂತ್ರ’ವನ್ನು ಮೆರೆಯತೊಡಗಿತು ಹಾಗೂ ಪರ್ಯಾಯ ಆಯ್ಕೆಗಳತ್ತ ಮುಖ ಮಾಡ ತೊಡಗಿತು. ಆಗ ಮುನ್ನೆಲೆಗೆ ಬಂದಿದ್ದೇ ಐರೋಪ್ಯ ಒಕ್ಕೂಟದ ಜತೆಗಿನ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ʼಟಿಎ). ಇದು ಕೈಗೂಡುತ್ತಿದ್ದಂತೆಯೇ ಎಚ್ಚೆತ್ತುಕೊಂಡು ತಮ್ಮ ರಾಗವನ್ನು ಬದಲಿಸಿರುವ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ದೂರವಾಣಿ ಯಲ್ಲಿ ಮಾತುಕತೆ ನಡೆಸಿ, ಹೊಸ ವ್ಯಾಪಾರ ಒಪ್ಪಂದವನ್ನೂ ಘೋಷಿಸಿದ್ದಾರೆ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

ಇದೂ ಒಪ್ಪುವಂಥ ಮಾತೇ. ಆದರೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು, ಅದರ ಸಾಲುಗಳಿಗೆ ಪ್ರತ್ಯಕ್ಷ ಒಡ್ಡಿಕೊಂಡು, ಅಕ್ಷರದ ರಸಾಸ್ವಾದನೆಯನ್ನು ಮಾಡುವುದಿದೆಯಲ್ಲಾ, ಅದು ಪ್ರಾಯಶಃ ಡಿಜಿಟಲ್ ಸ್ವರೂಪದಲ್ಲಿ ದಕ್ಕುವುದಿಲ್ಲ. ಜತೆಗೆ, ಪುಸ್ತಕದ ಆ ಸಾಲುಗಳಲ್ಲಿರುವ ಭಾವನೆಗೆ ನಮ್ಮ ಮನವನ್ನು ಸರಿ ಹೊಂದಿಸಿಕೊಳ್ಳುತ್ತಾ ಸ್ವೀಕರಿಸುತ್ತಾ ಹೋದಂತೆ, ನಮಗೇ ಅರಿವಿಲ್ಲದಂತೆ ನಮ್ಮ ಕಲ್ಪನಾಶಕ್ತಿಯೂ ಗಣನೀಯವಾಗಿ ಗಾಢವಾಗುವುದಿದೆ.

Vishwavani Editorial: ಅಮಲಿನ ಅಡ್ಡಾ ಆಗದಿರಲಿ

Vishwavani Editorial: ಅಮಲಿನ ಅಡ್ಡಾ ಆಗದಿರಲಿ

ಒಂದು ಕಾಲಕ್ಕೆ ಪಂಜಾಬ್ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟಜಾಲವು ಅತಿರೇಕ ಎಂಬಷ್ಟರ ಮಟ್ಟಿಗೆ ಸಕ್ರಿಯವಾಗಿದ್ದು ಹಾಗೂ ಮಾದಕ ದ್ರವ್ಯದ ವ್ಯಸನಿಗಳ ಸಂಖ್ಯೆ ಅಲ್ಲಿ ಕಳವಳಕಾರಿ ಮಟ್ಟ ವನ್ನು ಮುಟ್ಟಿದ್ದು ಗೊತ್ತಿರುವಂಥದ್ದೇ. ಹೀಗೆ ನಶೆಯಲ್ಲಿ ತೇಲುವವರು ಹೆಚ್ಚಿದ್ದಾರೆ ಎಂಬ ಕಾರಣ ಕ್ಕಾಗಿಯೇ ಆ ರಾಜ್ಯವನ್ನು ‘ಉಡ್ತಾ ಪಂಜಾಬ್’ ಎಂದು ಕರೆದಿದ್ದೂ ಉಂಟು.

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

ಬೆಂಗಳೂರಿನ ಎಟಿಎಂ ಹಣ ದರೋಡೆ ಪ್ರಕರಣ, ಮೈಸೂರಿನ ಹುಣಸೂರು ಚಿನ್ನಾಭರಣ ಅಂಗಡಿ ದರೋಡೆ, ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ಚಿನ್ನಾಭರಣ ಅಂಗಡಿ ಪ್ರಕರಣದ ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಕೇಳಿ ಜನರು ನಿಟ್ಟುಸಿರುವ ಬಿಡುವ ಮುನ್ನವೇ ಇಂಥ ಹಲವು ಪ್ರಕರಣಗಳು ವರದಿಯಾಗುತ್ತಿವೆ.

Vishwavani Editorial: ಎರಡು ಅತಿರೇಕಗಳ ಸುತ್ತ

Vishwavani Editorial: ಎರಡು ಅತಿರೇಕಗಳ ಸುತ್ತ

ಮೊದಲನೆಯದಕ್ಕೆ ಕಾರಣಕರ್ತರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದ ಬೆನ್ನಿಗೆ ಅಂಟಿಕೊಂಡಿರುವ ಕೆನಡಾ ರಾಷ್ಟ್ರದ ಮೇಲೆಯೇ ಕೆಂಗಣ್ಣು ಬೀರಿರುವ ಟ್ರಂಪ್, ಅದರ ಮೇಲೆಯೂ ಶೇ.100ರ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ; ಚೀನಾ ದೊಂದಿಗಿನ ವ್ಯಾಪಾರ ಸಂಬಂಧವನ್ನು ಕೆನಡಾ ಮುಂದು ವರಿಸಿರುವುದೇ ಟ್ರಂಪ್ ಮಹಾ ಶಯರ ಈ ಕಡುಕೋಪಕ್ಕೆ ಕಾರಣವಂತೆ. ಈ ಐಲುದೊರೆಯ ಆಟಾಟೋಪ ಯಾವಾಗ ನಿಲ್ಲುವುದೋ ಭಗವಂತನೇ ಬಲ್ಲ!

Vishwavani Editorial: ಗಣತಂತ್ರದ ಸಾರ್ಥಕತೆ

Vishwavani Editorial: ಗಣತಂತ್ರದ ಸಾರ್ಥಕತೆ

ದೇಶದ ಉದ್ದಗಲಕ್ಕೂ ಇಂದು 77ನೇ ಗಣರಾಜ್ಯೋತ್ಸವದ ಸಂಭ್ರಮ. ನೈತಿಕ ನಾಯಕತ್ವ, ಸ್ಪಂದನಶೀಲ ಆಡಳಿತ ಮತ್ತು ಜನರ ಆಕಾಂಕ್ಷೆಗಳೊಂದಿಗೆ ನಿರಂತರವಾಗಿ ತೊಡಗಿಸಿ ಕೊಳ್ಳುವ ಮೂಲಕ ಗಣತಂತ್ರವು ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ, ಸಾರ್ಥಕತೆಯನ್ನು ಮೆರೆಯು ತ್ತದೆ ಹಾಗೂ ಆಳುಗ ವ್ಯವಸ್ಥೆಯು ಜನರಿಗಾಗಿ ಆಡಳಿತ ನಡೆಸಲು ಬದ್ಧವಾಗಿರುವಾಗ ಮಾತ್ರವೇ ಪ್ರಜಾಪ್ರಭುತ್ವವು ನಿಜಾರ್ಥದಲ್ಲಿ ಉಳಿಯುತ್ತದೆ ಎಂಬುದು ಬಲ್ಲವರ ವ್ಯಾಖ್ಯಾನ.

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

‘ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ’ ಎಂಬ ಮಾತಿನಂತೆ, ಶಾಂತಿಮಂತ್ರ ಪಠಿಸುತ್ತಲೇ ತನಗಾಗದ ದೇಶಗಳ ಮೇಲೆ ಯುದ್ಧಕ್ಕೆ ತೆರಳುವ ಅಥವಾ ಯಾವುದಾದರೂ ಎರಡು ರಾಷ್ಟ್ರಗಳ ನಡುವೆ ಹಿತಾಸಕ್ತಿಯ ಸಂಘರ್ಷ ತಲೆದೋರಿದ್ದರೆ ಅವುಗಳ ನಡುವೆ ಯುದ್ಧಕ್ಕೆ ತಿದಿಯೂದುವ ಟ್ರಂಪ್, ತಮ್ಮನ್ನು ತಾವು ‘ಶಾಂತಿದೂತ’ ಎಂದು ಭ್ರಮಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರ ಕ್ಕಾಗಿ ಹಟಮಾಡಿದ್ದು ಕಳೆದ ವರ್ಷದ ದೊಡ್ಡ ಜೋಕ್.

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿದ್ದ ಯೋಜನೆಯ ಭಾಗವಾಗಿದ್ದ ಟ್ಯಾಂಕ್ ಇದು ಎಂಬುದು ಗಮನಿಸಬೇಕಾದ ಸಂಗತಿ. ಈ ಘಟನೆಯನ್ನು ಸ್ಥೂಲ ನೋಟದಲ್ಲಿ ದಕ್ಕಿಸಿಕೊಳ್ಳುವವರು, ‘ಕುಸಿದಿದ್ದು ಕೇವಲ ನೀರಿನ ಟ್ಯಾಂಕ್, ಇಲ್ಲಿ ಅಣೆಕಟ್ಟೆಯೇನೂ ಒಡೆದು ಹೋಗಿಲ್ಲವಲ್ಲ’ ಎಂದು ಹಗುರ ದನಿಯಲ್ಲಿ ಪ್ರತಿಕ್ರಿಯಿಸಬಹುದು.

Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು

Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು

ರಾಜಕಾರಣಿಗಳು, ಅವರ ಹಿಂಬಾಲಕರು ಗುಂಪು ಘರ್ಷಣೆಯಲ್ಲಿ ತೊಡಗುವುದು, ಅಧಿಕಾರಿಗಳು ಕಚೇರಿಯಲ್ಲೇ ರಾಸಲೀಲೆ ನಡೆಸುವುದು, ಸಮಾಜದ ಮೌಲ್ಯಗಳ ಪ್ರತಿನಿಧಿಗಳೆಂದೇ ಗೌರವಿಸ ಲ್ಪಡುವ ಪೀಠಾಧಿಪತಿಗಳು, ಸನ್ಯಾಸಿಗಳು ಅನೈತಿಕ ಸಂಬಂಧವನ್ನು ಹೊಂದಿರುವುದು... ನಿತ್ಯ ಇಂತಹ ಸುದ್ದಿಗಳನ್ನೇ ಕೇಳುತ್ತ, ನೋಡುತ್ತ, ಇಡೀ ವ್ಯವಸ್ಥೆಯ ಬಗ್ಗೆಯೇ ಅನುಮಾನ ಬರುವಂತಾ ಗಿದೆ. ಸದ್ಯ ಕೆಲವು ಬಹಿರಂಗವಾಗಿವೆ ಅಷ್ಟೇ

Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ

Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ

ನೆರೆರಾಷ್ಟ್ರ ಪಾಕಿಸ್ತಾನವು ನೀಡುತ್ತಿರುವ ಕುಮ್ಮಕ್ಕು, ಆ ಪಾಕಿಸ್ತಾನಕ್ಕೆ ಅಮೆರಿಕದಿಂದ ಒದಗುತ್ತಿರುವ ವಿವಿಧ ನೆಲೆಗಟ್ಟಿನ ಒತ್ತಾಸೆಗಳು- ಹೀಗೆ ಉಗ್ರರ ಈ ಧಾರ್ಷ್ಟ್ಯದ ಹಿಂದೆ ಸಾಕಷ್ಟು ಅಂಶಗಳು ಕೆಲಸ ಮಾಡುತ್ತಿರುವ ಸಂಭವವಿದೆ. ಹೀಗಾಗಿ ಭಾರತವು ಉಗ್ರದಮನದ ನಿಟ್ಟಿನಲ್ಲಿ ನಿಷ್ಠುರ ಕ್ರಮಗಳಿಗೆ ಮುಂದಾಗಬೇಕಾದ ಅಗತ್ಯವಿದೆ.

Loading...