Vishwavani Editorial: ಮಳೆ ಕೊರತೆ ಎದುರಿಸೋಣ
ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾ ಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿ ದ್ದಾರೆ.