ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪಾದಕೀಯ

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಳಸುವವರ ಸಂಖ್ಯೆ 50 ಕೋಟಿಯಷ್ಟಿದ್ದು, ಅವರಲ್ಲಿ ಅರ್ಧ ಕ್ಕರ್ಧ ಮಂದಿ ಅದನ್ನು ಚಟವಾಗಿಸಿಕೊಂಡಿದ್ದಾರೆ. ಅದರಿಂದ ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅನಿಯಂತ್ರಿತವಾಗಿರುವ ಈ ಆನ್‌ಲೈನ್ ಗೇಮಿಂಗ್‌ಗಳಿಂದ ಭಾರತದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 10000 ಕೋಟಿ ರು.ಗಳು ಸ್ಕ್ಯಾಮರ್‌ಗಳ ಪಾಲಾಗುತ್ತಿದೆ!

‘ಕಾಯಕ’ ಜೀವಿಗಳ ಕಷ್ಟ ತಪ್ಪಲಿ

‘ಕಾಯಕ’ ಜೀವಿಗಳ ಕಷ್ಟ ತಪ್ಪಲಿ

ಇಂದು ಸರಕಾರಿ ಇಲಾಖೆಗಳಿಂದ ಹಿಡಿದು ಖಾಸಗಿ ವಲಯದವರೆಗೆ ‘ಗುತ್ತಿಗೆ ಆಧಾರಿತ ನೇಮ ಕಾತಿ’ ಎಂಬ ಪಿಡುಗು ವ್ಯಾಪಿಸಿದೆ. ಕಾಯಂ ನೌಕರರಿಗಿಂತ ಹಂಗಾಮಿ ನೌಕರರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಆತಂಕಕಾರಿ. ಇವರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ, ಪಿಂಚಣಿ ಯಿಲ್ಲ, ಕನಿಷ್ಠ ವಿಮೆಯ ಸೌಲಭ್ಯವೂ ಇಲ್ಲ.

ಭ್ರೂಣ ಹತ್ಯೆ ದಂಧೆಗೆ ಕಡಿವಾಣವಿಲ್ಲವೇ?

ಭ್ರೂಣ ಹತ್ಯೆ ದಂಧೆಗೆ ಕಡಿವಾಣವಿಲ್ಲವೇ?

ಭ್ರೂಣ ಹತ್ಯೆ ಕೇವಲ ಕಾನೂನಿನ ಸಮಸ್ಯೆಯಲ್ಲ, ಇದೊಂದು ಗಂಭೀರ ಸಾಮಾಜಿಕ ಪಿಡುಗು. ಹೆಣ್ಣು ಮಗುವನ್ನು ಹೊರೆ ಎಂದು ಭಾವಿಸುವ ಮನಸ್ಥಿತಿ ಇಂದಿಗೂ ಸಮಾಜದಲ್ಲಿ ಜೀವಂತ ವಾಗಿರುವುದು ವಿಷಾದನೀಯ. ಸರಕಾರಿ ಕಾರ್ಯಕ್ರಮಗಳು ಕೇವಲ ಘೋಷಣೆಗಳಿಗೆ ಸೀಮಿತ ವಾಗದೆ, ಕೆಳಹಂತದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗ ಬೇಕಿದೆ.

Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ

Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ

ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ವ್ಯಯಿಸಿದರೂ ನಿರ್ವಹಣೆಯ ಕೊರತೆಯಿಂದ ಯೋಜನೆ ವಿಫಲವಾದ ಉದಾಹರಣೆ ಕಣ್ಣ ಮುಂದಿದೆ. ಹೀಗಾಗಿ ಎಷ್ಟು ಗಿಡ ನೆಟ್ಟೆವು ಎನ್ನುವು ದಕ್ಕಿಂತ ಎಷ್ಟು ಗಿಡಗಳನ್ನು ಉಳಿಸಿದೆವು ಎಂಬುದು ಯೋಜನೆಯ ಯಶಸ್ಸಿನ ಮಾನದಂಡ ವಾಗಬೇಕು.

ಪಾರದರ್ಶಕ ರಾಜಕಾರಣಕ್ಕೆ ಪೂರಕ

ಪಾರದರ್ಶಕ ರಾಜಕಾರಣಕ್ಕೆ ಪೂರಕ

ಹೊಸ ನಿಯಮದಂತೆ, ಅಭ್ಯರ್ಥಿಗಳು ಕೇವಲ ತಮ್ಮ ವಿವರಗಳನ್ನಷ್ಟೇ ಅಲ್ಲದೆ, ತಮ್ಮ ಸಂಗಾತಿ (ಪತಿ ಅಥವಾ ಪತ್ನಿ) ಮತ್ತು ಅವಲಂಬಿತರ ಆರ್ಥಿಕ ಸ್ಥಿತಿಗತಿಗಳನ್ನು ಬಹಿರಂಗಪಡಿಸುವುದು ಕಡ್ಡಾಯ ವಾಗಿದೆ. ಆದಾಯ ತೆರಿಗೆ ಪಾವತಿಯ ವಿವರಗಳು ಮತ್ತು ಪಾನ್ ಸಂಖ್ಯೆಯನ್ನು ಒದಗಿಸ ಬೇಕಿರುವುದು ಆರ್ಥಿಕ ಶಿಸ್ತನ್ನು ಅಪೇಕ್ಷಿಸುತ್ತದೆ. ಈ ಹಿಂದೆ ಆರ್ಥಿಕ ವಿವರಗಳನ್ನು ಅರೆಬರೆಯಾಗಿ ನೀಡುವ ಅಥವಾ ಮರೆಮಾಚುವ ಪ್ರವೃತ್ತಿ ಇತ್ತು.

Vishwavani Editorial: ಗುಣಮಟ್ಟಕ್ಕೆ ಕುತ್ತು ತರದಿರಲಿ ಫಲಿತಾಂಶ

Vishwavani Editorial: ಗುಣಮಟ್ಟಕ್ಕೆ ಕುತ್ತು ತರದಿರಲಿ ಫಲಿತಾಂಶ

ಪ್ರಾಥಮಿಕ ಶಿಕ್ಷಣ ಸಚಿವರು ಇದೊಂದು ಸಾಧನೆ ಎಂಬಂತೆ ಬಿಂಬಿಸಿದರೂ ಇದರ ಹಿಂದಿರುವ ವಾಸ್ತವ ಆತಂಕಕಾರಿಯಾಗಿದೆ. ಹಿಂದಿ ಪರೀಕ್ಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರಕಾರದ ದಿಢೀರ್ ಆದೇಶ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ಈ ಗೊಂದಲದ ನಡುವೆಯೇ ಹೈಕೋರ್ಟ್ ಆದೇಶದಂತೆ ಹಿಂದಿಯನ್ನೂ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಸರಕಾರದ ಯೋಜನೆಯಂತೆ ಫಲಿತಾಂಶದ ಪ್ರಮಾಣವೂ ಹೆಚ್ಚಳವಾಗಿದೆ.

Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ

Vishwavani Editorial: ಜನರ ಆಶಯಗಳ ಮೊತ್ತವೇ ಸರಕಾರ

ತೃತೀಯ ಭಾಷೆಯ ಅಂಕಗಳನ್ನು ಅಂಕಪಟ್ಟಿಗೆ ಸೇರಿಸುವುದಿಲ್ಲ, ಅದಕ್ಕೆ ಬರೀ ಗ್ರೇಡ್ ನೀಡಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ರಾಜ್ಯದಲ್ಲಿ ಶೇ.70 ವಿದ್ಯಾರ್ಥಿಗಳ ತೃತೀಯ ಭಾಷೆ ಹಿಂದಿಯೇ. ಉಳಿದಂತೆ ನಗರಪ್ರದೇಶಗಳಲ್ಲಿ ಕನ್ನಡವೂ ಆಗುತ್ತದೆ. ಕೆಲವೇ ಕೆಲವು ಕಡೆ ಇತರೆ ಭಾಷೆಗಳೂ ತೃತೀಯ ಭಾಷೆ ಆಗಬಹುದು.

Vishwavani Editorial: ಸಂತ್ರಸ್ತರ ಕಣ್ಣೀರಿಗೆ ಸಿಕ್ಕ ಮನ್ನಣೆ

Vishwavani Editorial: ಸಂತ್ರಸ್ತರ ಕಣ್ಣೀರಿಗೆ ಸಿಕ್ಕ ಮನ್ನಣೆ

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ನೀಡಿದ ಮನವಿ ಮತ್ತು ನಿರಂತರ ಪ್ರತಿಭಟನೆಗಳ ಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸುತ್ತಿರುವುದು ಸ್ವಾಗತಾರ್ಹ. ಇದು ಕೇವಲ ಉದ್ಯೋಗವಲ್ಲ, ಬದಲಿಗೆ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಂತ್ರಸ್ತರಿಗೆ ನೀಡುತ್ತಿರುವ ಸಾಂತ್ವನವಾಗಿದೆ.

Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ

Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ

ಅಂತೂ ಇಂತೂ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ನೆಲಕಚ್ಚಿದೆ. ಒಂದು ಅತ್ಯುತ್ತಮವಾದ ಮಸೂದೆಯು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿ, ರಾಜಕೀಯ ಜಿದ್ದಾಜಿದ್ದಿ ಯಿಂದಾಗಿ ಅಂಗೀಕಾರಗೊಳ್ಳದೇ ಹೋಗಿದ್ದು ವಿಪರ್ಯಾಸ. ಇದರಿಂದ ಸಿಟ್ಟಿಗೆದ್ದಿರುವ ಬಿಜೆಪಿ ನಾಯಕರು ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಸಿಬಿಐ ಸತತವಾಗಿ ವಿಚಾರಣೆ ನಡೆಸಿ ಕೊಲೆ ಪ್ರಕರಣದಲ್ಲಿ, ಆಡಳಿತ ಪಕ್ಷದ ನಾಯಕನಿಗೆ ಶಿಕ್ಷೆ ಕೊಡಿಸಲು ಯಶಸ್ವಿಯಾಗಿದೆ. ಇದು ಜನಪ್ರತಿನಿಧಿ ನ್ಯಾಯಾಲಯದ ತೀರ್ಪು. ಇದನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಕುಲಕರ್ಣಿ ಹೋಗುವುದು ಖಚಿತ. ಅಲ್ಲಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಈ ಹಿನ್ನೆಲೆಯನ್ನೆಲ್ಲ ಬದಿಗಿಟ್ಟು ಪ್ರಕರಣವನ್ನೇ ನೋಡುವುದಾದರೆ, ನ್ಯಾಯದ ಮುಷ್ಟಿಯಿಂದ ಎಂತಹ ಪ್ರಬಲರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇಲ್ಲಿ ಸಾಬೀತಾಗಿದೆ.

Vishwavani Editorial: ಮಹಿಳಾ ಮೀಸಲು: ಮಹತ್ವದ ಹೆಜ್ಜೆ

Vishwavani Editorial: ಮಹಿಳಾ ಮೀಸಲು: ಮಹತ್ವದ ಹೆಜ್ಜೆ

ಪ್ರಸ್ತುತ ಲೋಕಸಭೆಯಲ್ಲಿ 543 ಸಂಸದರ ಪೈಕಿ ಕೇವಲ 74 ಮಹಿಳಾ ಸಂಸದರು ಇದ್ದಾರೆ. ಒಟ್ಟು ಸದಸ್ಯ ರಲ್ಲಿ ಇದು ಸುಮಾರು ಶೇ.13.6 ಮಾತ್ರ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದರೂ, ಸಂಸತ್ತಿ ನಲ್ಲಿ ಅವರ ಪಾಲು ಶೇ.15 ದಾಟಿಲ್ಲ. ಇನ್ನು ದೇಶದ ಎಲ್ಲ ವಿಧಾನಸಭೆಗಳ ಸರಾಸರಿ ಮಹಿಳಾ ಪ್ರತಿನಿಧಿತ್ವ ಸುಮಾರು ಶೇ.9 ಮಾತ್ರ ಇದೆ. ಕೆಲವು ರಾಜ್ಯಗಳಲ್ಲಿ ಇದು ಶೇ.10ಕ್ಕಿಂತ ಕಡಿಮೆ, ಕೆಲವೆಡೆ ಶೇ.20ರಷ್ಟು ತಲುಪಿಲ್ಲ.

Vishwavani Editorial: ಸಿದ್ದರಾಮಯ್ಯ ನಡೆ ಮಾದರಿ

Vishwavani Editorial: ಸಿದ್ದರಾಮಯ್ಯ ನಡೆ ಮಾದರಿ

ಕಾಂಗ್ರೆಸ್‌ನ ಬಹುಪಾಲು ನಾಯಕರಿಗಿಂತ ದೊಡ್ಡ ಮಟ್ಟದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ. ಕೇಂದ್ರ ಸರಕಾರವನ್ನು ಸಿದ್ದರಾಮಯ್ಯ ಅವರು ಟೀಕಿಸಿದಾಗಲೆಲ್ಲ, ಕೇಂದ್ರದೊಂದಿಗೆ ಸಮನ್ವಯ ಇರದೇ ಹೋದರೆ, ದಿನ ಬೆಳಗಾದರೇ ಪ್ರಧಾನಿಗಳನ್ನು ಟೀಕಿಸಿದರೆ ರಾಜ್ಯದ ಅಭಿವೃದ್ಧಿಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಬಿಜೆಪಿಗರು ಎತ್ತುತ್ತಿದ್ದರು.

ಹಠ ಬಿಡದಿದ್ದರೆ ಶಾಂತಿ ಹೇಗೆ ಸಾಧ್ಯ?

ಹಠ ಬಿಡದಿದ್ದರೆ ಶಾಂತಿ ಹೇಗೆ ಸಾಧ್ಯ?

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಯುದ್ಧ ಬೇಡ ಎನ್ನುವ ರಾಷ್ಟ್ರಗಳ ಸಮಕ್ಷಮದಲ್ಲಿ ಇರಾನ್-ಅಮೆರಿಕ ದೇಶಗಳ ಷರತ್ತುಗಳನ್ನು ಮಾತುಕತೆಗೆ ಬರುವ ಅನ್ಯರಾಷ್ಟ್ರಗಳ ಪ್ರತಿನಿಧಿಗಳ ಸಮಿತಿಯಿಂದ ಪರಿಷ್ಕರಿಸಿ, ಅಮೆರಿಕ - ಇರಾನ್ ಎರಡೂ ದೇಶಗಳಿಗೆ ಸಮ್ಮತವಾಗುವಂಥ ಷರತ್ತುಗಳನ್ನು ರೂಪಿಸಿ, ಇಬ್ಬರನ್ನೂ ಓಲೈಸಿ ಒಪ್ಪಿಸುವುದೇ ಸೂಕ್ತವಾದ ಮಾರ್ಗ.

Vishwavani Editorial: ನ್ಯಾ.ವರ್ಮಾ ಪ್ರಕರಣ ಇತ್ಯರ್ಥವಾಗಲಿ

Vishwavani Editorial: ನ್ಯಾ.ವರ್ಮಾ ಪ್ರಕರಣ ಇತ್ಯರ್ಥವಾಗಲಿ

ಭಾರತೀಯ ನ್ಯಾಯಾಲಯದ ಇತಿಹಾಸದಲ್ಲಿ ಮಾದರಿ ಅನ್ನುವಂತಹ ಘಟನೆಗಳೇ ಜಾಸ್ತಿ ನಡೆದಿವೆ. ನ್ಯಾಯಾಂಗದ ಬಗ್ಗೆ ಪ್ರಶ್ನೆ ಬರುವಂತಹ ಘಟನೆಗಳು ತೀರಾ ಅಪರೂಪ ಎಂದೇ ಹೇಳಬಹುದು. ಇಂತಹ ಹೊತ್ತಿನಲ್ಲೇ ಕಳೆದ ವರ್ಷ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ನಿವಾಸದಲ್ಲಿ ಲಭಿಸಿದ ಕಂತೆಕಂತೆ ಸುಟ್ಟ ನೋಟುಗಳು, ಅತಿದೊಡ್ಡ ಪ್ರಶ್ನೆಗಳಿಗೆ ಕಾರಣ ವಾಗಿದೆ.

ತೇರ್ಗಡೆಯೊಂದೇ ಗುರಿಯಾಗದಿರಲಿ

ತೇರ್ಗಡೆಯೊಂದೇ ಗುರಿಯಾಗದಿರಲಿ

ಅಂಕಗಳ ಇಳಿಕೆ ಕೇವಲ ಅಂಕಿಅಂಶಗಳ ಏರಿಕೆಗೆ ಸೀಮಿತವಾಗಬಾರದು, ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ವಿಷಯಾಧಾರಿತ eನವನ್ನು ನೀಡುವಲ್ಲಿ ನಮ್ಮ ಶಿಕ್ಷಣ ಕೊರತೆಯಾಗಿ ಕಾಡಬಾರದು. ಸ್ಫರ್ಧಾ ತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಓದು ಅತ್ಯಗತ್ಯ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳದಂತಹ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದುಳಿದಿರುವುದು ತಿಳಿಯದ ವಿಷಯವೇನಲ್ಲ.

ಕದನ ವಿರಾಮ: ಶಾಂತಿಯತ್ತ ಮೊದಲ ಹೆಜ್ಜೆ

ಕದನ ವಿರಾಮ: ಶಾಂತಿಯತ್ತ ಮೊದಲ ಹೆಜ್ಜೆ

ಯುದ್ಧಪೀಡಿತ ದೇಶಗಳ ಸಾಮಾನ್ಯ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ತೈಲ ಬೆಲೆಗಳ ಏರಿಳಿತ, ವಾಣಿಜ್ಯ ಮಾರ್ಗಗಳ ಅಸ್ಥಿರತೆ ಮತ್ತು ಭದ್ರತಾ ಆತಂಕಗಳಿಂದ ದಿನ ಕಳೆಯುತ್ತಿರುವ ಇತರ ದೇಶಗಳಿಗೂ ಕೂಡ ತಾತ್ಕಾಲಿಕವಾಗಿ ಭರವಸೆ ಸಿಕ್ಕಂತಾಗಿದೆ. ಈ ಕದನ ವಿರಾಮವು ತಾತ್ಕಾಲಿಕವಾಗಿ ಹಿಂಸೆಯನ್ನು ತಗ್ಗಿಸಿದರೂ, ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಪಷ್ಟ.

Vishwavani Editorial: ವಿನಾಶಕಾರಿ ಯುದ್ಧ ನಿಲ್ಲಲಿ

Vishwavani Editorial: ವಿನಾಶಕಾರಿ ಯುದ್ಧ ನಿಲ್ಲಲಿ

ಸಾಮ್ರಾಜ್ಯಶಾಹಿ ನೀತಿಯ ಭಾಗವಾಗಿ ಅಮೆರಿಕವು ಇರಾನ್‌ನಲ್ಲಿರುವ ತೈಲ ಸಂಪತ್ತನ್ನು ವಶ ಮಾಡಿ ಕೊಳ್ಳಲು ಯುದ್ಧವೆಂಬ ವಿನಾಶಕಾರಿ ನಾಟಕವಾಡುತ್ತಿದೆ ಎಂಬುದು ರಹಸ್ಯವೇನೂ ಅಲ್ಲ. ಇರಾನ್‌ನ ಸರ್ವಾಧಿಕಾರಿ ಆಡಳಿತ ಅಲ್ಲಿನ ಪ್ರಜೆಗಳ ಹಕ್ಕನ್ನು ದಮನ ಮಾಡುತ್ತಿದೆ ಎಂಬ ಅಮೆರಿಕದ ವಾದವನ್ನು ಒಪ್ಪಿಕೊಂಡರೂ, ಅಲ್ಲಿ ಆಡಳಿತ ಬದಲಾವಣೆಯನ್ನು ಮಾಡಬೇಕಿರು ವುದು ಸ್ಥಳೀಯ ಜನತೆ.

ಉತ್ತರಮುಖಿ ರಾಜಕಾರಣದ ಆತಂಕ

ಉತ್ತರಮುಖಿ ರಾಜಕಾರಣದ ಆತಂಕ

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ಕಳೆದ 5 ದಶಕಗಳಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ತಲಾವಾರು ಆದಾಯ, ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಜನಸಂಖ್ಯೆಯನ್ನು ಮಾನ ದಂಡವಾಗಿಟ್ಟುಕೊಂಡು ಕ್ಷೇತ್ರಗಳನ್ನು ಮರು ಹಂಚಿಕೆ ಮಾಡಿದರೆ, ಜನಸಂಖ್ಯೆ ಸ್ಫೋಟಗೊಂಡಿರುವ ಉತ್ತರ ಭಾರತದ ರಾಜ್ಯಗಳು ಹೆಚ್ಚಿನ ಸೀಟುಗಳನ್ನು ಪಡೆಯುತ್ತವೆ. ಪುನರ್‌ವಿಂಗಡಣೆಯು ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸಿದರೆ ಅದು ಅಂತಿಮವಾಗಿ ಪ್ರತ್ಯೇಕತೆಯ ಕೂಗಿಗೆ ಕಾರಣವಾಗಬಹುದು.

Vishwavani Editorial: ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ

Vishwavani Editorial: ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ

ಬಯಲು ಸೀಮೆ ಜಿಲ್ಲೆಗಳ ಆಶಾಕಿರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಹಲವು ಹೋರಾಟದ ಬಳಿಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೀಗ ಈ ತಾತ್ವಿಕ ಒಪ್ಪಿಗೆ, ಶಾಶ್ವತ ಒಪ್ಪಿಗೆಯಾಗುವಂತೆ ಮಾಡುವಲ್ಲಿ, ಹೊಸ ಕಾನೂನು ತೊಡಲು ಉಂಟಾ ಗದಂತೆ ತಡೆಯುವಲ್ಲಿ ರಾಜ್ಯ ಸರಕಾರದ ಪಾತ್ರ ಮಹತ್ವದಾಗಿದೆ.

Vishwavani Editorial: ಎಐನಿಂದ ಉದ್ಯೋಗ ನಷ್ಟ ಪಿಡುಗಾಗದಿರಲಿ

Vishwavani Editorial: ಎಐನಿಂದ ಉದ್ಯೋಗ ನಷ್ಟ ಪಿಡುಗಾಗದಿರಲಿ

ಪ್ರತಿದಿನ ಸರಾಸರಿ 936 ಮಂದಿ ತಮ್ಮ ಉದ್ಯೋಗದ ಗುರುತಿನ ಚೀಟಿಯನ್ನು ಕಚೇರಿಯ ಬಿಟ್ಟು ಹೊರಬರುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ಭಾರತಕ್ಕೆ ಇದು ಆಘಾತಕಾರಿ ಸುದ್ದಿ. ಈಗಾಗಲೇ ಕೊಲ್ಲಿ ಯುದ್ಧದ ಕಾರಣಕ್ಕೆ ಅಲ್ಲಿ ಬದುಕಿನ ಬುತ್ತಿ ಅರಸಿದ್ದ ಲಕ್ಷಾಂತರ ಭಾರತೀಯರು ಎಲ್ಲವನ್ನೂ ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ.

Vishwavani Editorial: ಮರುಕಳಿಸದಿರಲಿ ಮಹಾಯುದ್ಧ

Vishwavani Editorial: ಮರುಕಳಿಸದಿರಲಿ ಮಹಾಯುದ್ಧ

ಇರಾನಿನ ಯುರೇನಿಯಂ ಅಣುಸ್ಥಾವರಕ್ಕೆ ಇಸ್ರೇಲ್‌ನ ಕ್ಷಿಪಣಿ ಅಪ್ಪಳಿಸಿದುದರ ಪರಿಣಾಮ ವಾಗಿ ವಿಕಿರಣದ ಭೀತಿ ತಲೆದೋರಿದೆ. ಈ ಎಲ್ಲ ಬೆಳವಣಿಗೆಗಳು ಮೂರನೆಯ ಮಹಾಯುದ್ಧಕ್ಕೆ ನಾಂದಿ ಹಾಡಲಿವೆಯೇ ಎಂಬ ಭಯ ಸಹಜವಾಗಿಯೇ ಎಲ್ಲರನ್ನೂ ಕಾಡ ತೊಡಗಿದೆ. ಆದರೆ, ಯುದ್ಧದಲ್ಲಿ ವ್ಯಸ್ತವಾಗಿರುವ ಎರಡೂ ಬಣಗಳು ತಮ್ಮ ಹಠವನ್ನು ಬಿಡುತ್ತಿಲ್ಲ

Vishwavani Editorial: ದಲ್ಲಾಳಿ ದೇಶಕ್ಕೆ ಮುಖಭಂಗ!

Vishwavani Editorial: ದಲ್ಲಾಳಿ ದೇಶಕ್ಕೆ ಮುಖಭಂಗ!

ಹೊರ್ಮುಜ್ ಜಲಸಂಧಿಯ ಮೂಲಕ ಪಾಕಿಸ್ತಾನದ ಹಡಗು ಹಾದು ಹೋಗುವುದಕ್ಕೆ ಇರಾನ್ ‘ನಿರಾಕರಣೆ’ಯ ಅಸವನ್ನು ಪ್ರಯೋಗಿಸಿರುವುದು ವರದಿ ಯಾಗಿದೆ. ಕರಾಚಿಗೆ ತೆರಳುತ್ತಿದ್ದ ಹಡಗನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಪಡೆಗಳು ತಡೆದು ಹಿಂದಿರುಗುವಂತೆ ಸೂಚಿಸಿರುವುದು ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮುಖಭಂಗ ವನ್ನು ಉಂಟು ಮಾಡಿದೆ.

Vishwavani Editorial: ಭಾರತದ ನಿಲುವು ಜಗತ್ತಿಗೆ ಭರವಸೆ

Vishwavani Editorial: ಭಾರತದ ನಿಲುವು ಜಗತ್ತಿಗೆ ಭರವಸೆ

ನಮಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಭಾರತ ಬಲವಾಗಿ ಹೇಳಿತು. ಟ್ರಂಪ್ ಹೀಗೆ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಇದು ಹೊಸತೇನಲ್ಲ. ಇದರ ಮಧ್ಯೆ ನಡೆದಿರುವ ಇನ್ನೊಂದು ಬೆಳವಣಿಗೆಯೆಂದರೆ ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರೆಲ್ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

Vishwavani Editorial: ಕೆಡವೋದು ಸುಲಭ, ಕಟ್ಟೋದು ಕಷ್ಟ

Vishwavani Editorial: ಕೆಡವೋದು ಸುಲಭ, ಕಟ್ಟೋದು ಕಷ್ಟ

ಅಂತಾರಾಷ್ಟ್ರೀಯ ಭೂರಾಜಕೀಯದ ಹಿತಾಸಕ್ತಿಯ ನೆರವೇರಿಕೆಗೆಂದು ಯುದ್ಧದಲ್ಲಿ ತೊಡಗಿದ ನಾಯಕರು ಮಾತ್ರ ಸುರಕ್ಷಿತರಾಗೇ ಇರುತ್ತಾರೆ; ಆದರೆ ‘ಮೂರಾಬಟ್ಟೆ’ ಯಾಗುವುದು ಜನಸಾಮಾನ್ಯರ ಬದುಕು. ಇಂಥ ಶ್ರೀಸಾಮಾನ್ಯರು ಬಾರಿಸಬೇಕಾದ ‘ನ್ಯಾಯದ ಗಂಟೆ’ ಎಲ್ಲಿದೆ? ಅದಕ್ಕೆ ಕಟ್ಟಿರುವ ಹಗ್ಗ ಅವರಿಗೆ ಎಟುಕುತ್ತಿಲ್ಲವಲ್ಲವೇಕೆ...?!

Loading...