ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು

Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು

ಹಿಂದೂಗಳನ್ನು ಮತ್ತು ಭಾರತವನ್ನು ಗುರಿಯಾಗಿಸಿಕೊಂಡ ಪ್ರತಿಭಟನೆಗಳು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಲೇ ಇವೆ. ಇಷ್ಟು ಸಾಲದೆಂಬಂತೆ, ಬಾಂಗ್ಲಾದ ಒಂದಿಷ್ಟು ತಥಾ ಕಥಿತ ನಾಯಕರು ಗಡಿಭಾಗದ ‘ಚಿಕನ್ ನೆಕ್’ ಪ್ರದೇಶದ ಕುರಿತು ಉಲ್ಲೇಖಿಸಿ, ಈಶಾನ್ಯ ಭಾರತದ ಜತೆಗಿನ ಸಂಪರ್ಕವನ್ನೇ ತುಂಡರಿಸುವುದಾಗಿ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು.

Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...

Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...

ದೀಪು ಚಂದ್ರ ದಾಸ್, ಅಮೃತ್ ಮೊಂಡಲ್ ಎಂಬಿಬ್ಬರ ಮೇಲೆ ಉದ್ರಿಕ್ತ ಮುಸ್ಲಿಮರ ಗುಂಪು ಹೀಗೆಯೇ ಘೋರದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದದನ್ನು ಮರೆಯು ವಂತಿಲ್ಲ. ಖೋಕೋನ್ ದಾಸ್ ಎಂಬುವವರೂ ಮಾರಕ ದಾಳಿಗೆ ತುತ್ತಾಗಿದ್ದು, ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ದಿನಗಳು ಬೇಕಾಗುತ್ತವೆ ಎನ್ನಲಾಗುತ್ತಿದೆ.

Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!

Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!

ಬದಲಾದ ಕಾಲ ಘಟ್ಟದಲ್ಲಿ ಜೈಲುಗಳಲ್ಲಿ ‘ಪ್ರಭಾವಿ’ ಕೈದಿಗಳಿಗೆ ರಾಜವೈಭೋಗ ಸದೃಶ ವಾಗಿರುವ ಸೇವೆ ಸಲ್ಲುತ್ತಿರುವುದು ಒಂದೊಂದಾಗಿ ವರದಿಯಾಗುತ್ತಿದೆ. ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು-ಮದ್ಯ ಸರಬರಾಜಿಗೆ, ಇಸ್ಪೀಟು ಆಟಕ್ಕೆ ಎಡೆಮಾಡಿಕೊಡಲಾಗಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿ ಕೊಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ತಥ್ಯವನ್ನು ಸಂಬಂಧ ಪಟ್ಟವರು ಹೊರಗೆಡಹಬೇಕಿದೆ.

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

ಹೊಸ ವರ್ಷಾಚರಣೆ ಯಾವತ್ತೂ ಅತಿರೇಕಕ್ಕೆ ಹೋಗಿ ನಮ್ಮ ಜೀವನದ ನಾಶದವರೆಗೆ ಹೋಗಬಾರದು. ಹೊಸವರ್ಷದಲ್ಲಿ ಹಳೆಯ ತಪ್ಪುಗಳನ್ನು ಮುಂದುವರಿಸಬಾರದು, ನಮ್ಮದೇ ಗುಣಮಟ್ಟವನ್ನು ವೃದ್ಧಿಸಿ ಕೊಳ್ಳಬೇಕು. ಹೊಸ ಸಂಬಂಧಗಳನ್ನು ಶುರು ಮಾಡುವುದು ಎಷ್ಟು ಮುಖ್ಯವೋ ಸಂಬಂಧಗಳನ್ನು ಅಷ್ಟೇ ಹದವಾಗಿ ಕಾಪಾಡಿಕೊಳ್ಳುವುದು ಅಗತ್ಯ.

Vishwavani Editorial: ದಿನಪತ್ರಿಕೆ ಓದುವ ಅಭ್ಯಾಸ

Vishwavani Editorial: ದಿನಪತ್ರಿಕೆ ಓದುವ ಅಭ್ಯಾಸ

ಶಾಲೆಗಳಲ್ಲಿ ಮುಂಜಾನೆಯ ಪ್ರಾರ್ಥನೆ ಮತ್ತು ರಾಷ್ಟ್ರಗೀತೆ ಗಾಯನದ ಸಂದರ್ಭದಲ್ಲಿ, ಅಂದಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಮುಖ ಸುದ್ದಿಗಳನ್ನು/ಸುದ್ದಿ ಶೀರ್ಷಿಕೆಗಳನ್ನು ದಿನಕ್ಕೊಬ್ಬ ವಿದ್ಯಾರ್ಥಿಯಿಂದ ಓದಿಸುವ ಪರಿಪಾಠ ಬಹುತೇಕ ಶಾಲೆಗಳಲ್ಲಿದೆ. ಆದರೆ ಇದು ‘ಹತ್ತರಲ್ಲಿ ಹನ್ನೊಂದು’ ಎಂಬಂಥ ಚಟುವಟಿಕೆ ಆಗಿ ಬಿಟ್ಟಿದೆಯೇ ವಿನಾ, ಸಾಕಷ್ಟು ವಿದ್ಯಾರ್ಥಿಗಳು ಇದರ ಮಹತ್ವವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ

Vishwavani Editotial: ಸ್ವಯಂವೈದ್ಯ ಸರ್ವಥಾ ಸಲ್ಲ

Vishwavani Editotial: ಸ್ವಯಂವೈದ್ಯ ಸರ್ವಥಾ ಸಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮ ದಲ್ಲಿ ಮಾತನಾಡುತ್ತಾ, ‘ಆರೋಗ್ಯ ಕೆಟ್ಟಾಗ ನಮ್ಮಲ್ಲಿ ಅನೇಕ ಮಂದಿಗೆ ಸ್ವಯಂ ವೈದ್ಯ ಮಾಡಿಕೊಳ್ಳುವ ರೂಢಿ ಇದೆ, ಇದು ಬಹಳ ಅಪಾಯಕಾರಿ’ ಎಂಬ ಗಮನ ಸೆಳೆಯುವ ಮಾತನ್ನಾಡಿದ್ದಾರೆ. ಇದು ಅಕ್ಷರಶಃ ಸತ್ಯ.

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

ಪಾಕಿಸ್ತಾನ ಮೂಲದ ‘ಲಷ್ಕರ್-ಎ-ತೈಬಾ’ (ಎಲ್‌ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ದಕ್ಷಿಣ ಕಾಶ್ಮೀರ ಭಾಗದಲ್ಲಿ ನಿರಾಳವಾಗಿ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ವ್ಯಾಪಾರದ ಮಳಿಗೆಯೊಂದರ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿರುವ ಸುದ್ದಿ ಬಂದಿದೆ. ‘ಮೀನಿನ ಹೆಜ್ಜೆಯ ಜಾಡನ್ನಾದರೂ ಕಂಡುಹಿಡಿಯಬಹುದು, ಆದರೆ ಕುತ್ಸಿತ ಜನರ ದುರಾಲೋಚನೆಗಳನ್ನು ಮುಂಚಿತ ವಾಗಿ ಲೆಕ್ಕಿಸುವುದು ಕಷ್ಟ’ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು, ಈ ಬೆಳವಣಿಗೆಯನ್ನು ಹದ್ದಿನ ಕಣ್ಣುಗಳಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.

Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ

Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ

ಪಹಲ್ಗಾಮ್ ಹತ್ಯಾಕಾಂಡ, ಇಸ್ರೇಲ್‌ನ ‘ನೋವಾ’ ಸಂಗೀತೋತ್ಸವದ ವೇಳೆ ಘಟಿಸಿದ ಉಗ್ರದಾಳಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಭಯೋತ್ಪಾದಕರ ಹೇಷಾರವ ಇವೆಲ್ಲವೂ ಜಾಗತಿಕ ಸಮುದಾಯದ ಮನವನ್ನು ಇನ್ನಿಲ್ಲದಂತೆ ಕಲಕಿರುವ ಘೋರ ಘಟನೆಗಳೇ. ಪ್ರಸ್ತುತ ಜಗತ್ತಿಗೆ ಬೇಕಿರುವುದು ಬುಲೆಟ್ಟು-ಬಾಂಬುಗಳ ಅಬ್ಬರವಲ್ಲ

Vishwavani Editorial: ವಿಶ್ವಗುರುವಾಗಲಿ ಭಾರತ

Vishwavani Editorial: ವಿಶ್ವಗುರುವಾಗಲಿ ಭಾರತ

ಬರೋಬ್ಬರಿ 6500 ಕೆ.ಜಿ. ತೂಕದ, ಅಮೆರಿಕದ ‘ಬ್ಲೂಬರ್ಡ್-6’ ಉಪಗ್ರಹವನ್ನು ನಿಗದಿತ ಭೂಕಕ್ಷೆಗೆ ಯಶಸ್ವಿಯಾಗಿ ಸೇರಿಸಿರುವುದೇ ಈ ಸಾಧನೆ. ಇದಕ್ಕೆ ಬಳಕೆಯಾಗಿದ್ದು, ಅತಿಭಾರದ ಉಪಗ್ರಹಗಳನ್ನು ಭೂಕಕ್ಷೆಗೆ ನಿರಾಯಾಸವಾಗಿ ತೂರಿಬಿಡಬಲ್ಲ ‘ಬಾಹುಬಲಿ’ ವಾಹಕ. ವಿಶ್ವದ ಪ್ರಬಲ ಆರ್ಥಿಕ ಶಕ್ತಿಗಳ ಪಟ್ಟಿಯಲ್ಲಿನ ತನ್ನ ಸ್ಥಾನವನ್ನು ಹಂತಹಂತ ವಾಗಿ ಮೇಲೇರಿಸಿಕೊಳ್ಳು ತ್ತಿರುವ ಭಾರತವು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಹೀಗೆ ಪಾರಮ್ಯವನ್ನು ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ.

Vishwavani Editorial: ಹೆತ್ತಪ್ಪನೇ ಹಂತಕನಾದರೆ...

Vishwavani Editorial: ಹೆತ್ತಪ್ಪನೇ ಹಂತಕನಾದರೆ...

ಸಂಯಮ, ಸಮಾಧಾನ, ಪರಾನುಭೂತಿ ಶಕ್ತಿ, ಸಹಾನುಭೂತಿ, ಅನುಕಂಪ, ದಯೆ ಮುಂತಾದ ಗುಣ-ವೈಶಿಷ್ಟ್ಯಗಳು ವ್ಯಕ್ತಿಯೊಬ್ಬನಲ್ಲಿ ಮಾಯವಾದರೆ, ಏನೆಲ್ಲಾ ಅತಿರೇಕಗಳು ಸಂಭವಿಸಬಹುದು ಮತ್ತು ಕ್ಷಣಾರ್ಧದ ಕೋಪವು ಕುರುಳಿನ ಕುಡಿಯನ್ನೂ ತರಿದು ಹಾಕುವುದಕ್ಕೆ ಕುಮ್ಮಕ್ಕು ನೀಡಬಲ್ಲದು ಎಂಬು ದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಇತಿಹಾಸವಷ್ಟೇ ಏಕೆ, ಪುರಾಣ, ರಾಮಾಯಣ-ಮಹಾಭಾರತಗಳನ್ನು ಒಮ್ಮೆ ತಡಕಿದರೂ ಮುಖಕ್ಕೆ ರಪ್ಪನೆ ರಾಚುವ ಅಪ್ರಿಯಸತ್ಯವಾಗುತ್ತದೆ ಈ ಹಗ್ಗಜಗ್ಗಾಟ. ಅಧಿಕಾರ ದಕ್ಕದೆ ಹತಾಶರಾದವರು, ತಮ್ಮ ಎದುರಾಳಿಯ ಒಂದಿಡೀ ಕುಲವನ್ನೇ ನಿರ್ನಾಮ ಮಾಡಲು ಪಣತೊಟ್ಟ ಉದಾಹರಣೆಗಳೂ ಇಂಥ ಕಥನಗಳಲ್ಲಿ ಸಾಕಷ್ಟು ಸಿಗುತ್ತವೆ.

Vishwavani Editorial: ಅಮಲುದ್ರವ್ಯಗಳ ಆಟಾಟೋಪ

Vishwavani Editorial: ಅಮಲುದ್ರವ್ಯಗಳ ಆಟಾಟೋಪ

ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 400 ಕೋಟಿ ರುಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಇಲಾಖೆ ಯು ವಶಕ್ಕೆ ಪಡೆದುಕೊಂಡಿರುವುದೇ ಈ ಮಾತಿಗೆ ಪುಷ್ಟಿ ನೀಡುತ್ತದೆ. ಒಂದು ಕಾಲಕ್ಕೆ ಪಂಜಾಬ್ ರಾಜ್ಯ ವನ್ನು ‘ಉಡ್ತಾ ಪಂಜಾಬ್’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು; ಮಾದಕ ದ್ರವ್ಯಗಳ ದಾಸರ ಸಂಖ್ಯೆ ಅಲ್ಲಿ ಗಣನೀಯ ಮಟ್ಟಕ್ಕೆ ಏರಿದ್ದುದೇ ಇದಕ್ಕೆ ಕಾರಣ.

Vishwavani Editorial: ಎಲ್ಲಿ ಹೋಯಿತು ಹಬ್ಬದ ವಾತಾವರಣ?

Vishwavani Editorial: ಎಲ್ಲಿ ಹೋಯಿತು ಹಬ್ಬದ ವಾತಾವರಣ?

‘ಕಾಂತಾರ-1’, ‘ಸು ಫ್ರಮ್ ಸೋ’ ಹೀಗೆ ಕೈಬೆರಳೆಣಿಕೆಯ ನಿದರ್ಶನಗಳನ್ನು ಹೊರತು ಪಡಿಸಿದರೆ ಮಿಕ್ಕ ಹೆಚ್ಚಿನವು ಚಿತ್ರಮಂದಿರಕ್ಕೆ ಬಂದಿದ್ದೂ ಗೊತ್ತಿಲ್ಲ, ಅಲ್ಲಿಂದ ನಿರ್ಗಮಿಸಿದ್ದೂ ಗೊತ್ತಿಲ್ಲ ಬಹುತೇಕರಿಗೆ. ‘ಚಲನಚಿತ್ರಗಳ ಮಾರುಕಟ್ಟೆ ಲೆಕ್ಕಾಚಾರ ಈಗ ಮೊದಲಿನಂತಿಲ್ಲ, ಈಗಿನ ಉಪಗ್ರಹ ಆಧಾರಿತ ಪ್ರದರ್ಶನ ವ್ಯವಸ್ಥೆಯಲ್ಲಿ ಏಕಕಾಲಿಕವಾಗಿ 300-400 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಒಂದೇ ವಾರಕ್ಕೆ ಹಣದ ಕೊಯಿಲು ಮಾಡಬಹುದು.

Vishwavani Editorial: ಇಸ್ಲಾಮ್ ಮೂಲಭೂತವಾದ ನಿಲ್ಲಲಿ

Vishwavani Editorial: ಇಸ್ಲಾಮ್ ಮೂಲಭೂತವಾದ ನಿಲ್ಲಲಿ

ಭಾರತಕ್ಕೆ ಉಗ್ರರನ್ನು ಕಳುಹಿಸಿ ಕೊಡುವ ಪಾಕಿಸ್ತಾನದಲ್ಲೂ ಉಗ್ರರ ಕಿರುಕುಳ ಕಡಿಮೆ ಯಿಲ್ಲ. ಸದಾ ಅಲ್ಲಿ ಬಾಂಬ್ ಸ್ಫೋಟಗೊಳ್ಳುತ್ತ ಆಗಾಗ ಜನ ಸಾಯುತ್ತಲೇ ಇರುತ್ತಾರೆ. ಆ ದೇಶದ ಅಭಿವೃದ್ಧಿಯೇ ಹಳ್ಳ ಹಿಡಿದಿದೆ. ಜಮ್ಮುಕಾಶ್ಮೀರ ರೋಗಗ್ರಸ್ತವಾಗುವುದಕ್ಕೆ ಭಯೋತ್ಪಾದನೆಯೇ ಕಾರಣ. ಅಫ್ಘಾನಿಸ್ತಾನ, ಸಿರಿಯಾದಂತಹ ಕೆಲವು ದೇಶಗಳು ಇಸ್ಲಾಮ್ ಹೆಸರಿನ ಭಯೋತ್ಪಾದನೆ ಯಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ.

Vishwavani Editorial: ಹೆಸರಿಗಿಂತ ಕೆಲಸ ಮುಖ್ಯ

Vishwavani Editorial: ಹೆಸರಿಗಿಂತ ಕೆಲಸ ಮುಖ್ಯ

ಕೇಂದ್ರ ಸರಕಾರದ ಈ ಹೊಸ ಮಸೂದೆ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಕ್ಕಾಗಿ ಖಾತರಿ ಮಿಷನ್ (ಗ್ರಾಮೀಣ)’ ಎಂಬ ಹೆಸರಿನಿಂದ ಕರೆಯಲ್ಪಡಲಿದೆ. ಇದನ್ನು ಸಂಕ್ಷಿಪ್ತ ವಾಗಿ ‘ವಿಬಿ ಜಿ ರಾಮ್ ಜಿ’ ಎನ್ನಲಾಗುತ್ತದೆ. ಮಸೂದೆ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿಗೆ ಹಾಜರಾಗುವಂತೆ ವಿಪ್ ಹೊರಡಿಸಲಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ

Vishwavani Editorial: ಅಂದು ‘ನೋವಾ’, ಮೊನ್ನೆ ‘ಹನುಕ್ಕಾ’

Vishwavani Editorial: ಅಂದು ‘ನೋವಾ’, ಮೊನ್ನೆ ‘ಹನುಕ್ಕಾ’

ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಆಚರಿಸಲಾಗುತ್ತಿದ್ದ ‘ಹನುಕ್ಕಾ’ ಹಬ್ಬದ ಸಂದರ್ಭವನ್ನು. ಆ ವೇಳೆ ವಾರಾಂತ್ಯ ರಜೆಯಲ್ಲಿ ವಿಹರಿಸುತ್ತಿದ್ದ ಯೆಹೂದಿ ಗಳ ಮೇಲೆ ಬೇಕಾಬಿಟ್ಟಿ ಗುಂಡಿನ ಮಳೆಗರೆದ ಉಗ್ರರು, ತಾವು ‘ರಕ್ತಬೀಜಾಸುರನ ಸಂತತಿ’ ಎಂಬು ದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Vishwavani Editorial: ಎಡವಟ್ಟನಿಗೆ ಎದುರೇಟು

Vishwavani Editorial: ಎಡವಟ್ಟನಿಗೆ ಎದುರೇಟು

ಅತೀವ ಕುಶಲಿಗಳಾಗಿರುವ ವಿದೇಶಿ ಉದ್ಯೋಗಾರ್ಥಿಗಳನ್ನು ಅಮೆರಿಕಕ್ಕೆ ಕರೆಸಿಕೊಂಡು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಎಚ್-1ಬಿ ವೀಸಾದ ವಾರ್ಷಿಕ ಶುಲ್ಕದ ಪ್ರಮಾಣವನ್ನು 1 ಲಕ್ಷ ಡಾಲರ್‌ಗೆ ಏರಿಸಿದಾಗ, ವಿಶ್ವದ ವಿವಿಧೆಡೆ ಮತ್ತೊಮ್ಮೆ ಟ್ರಂಪ್ ವಿರುದ್ಧದ ಹುಯಿಲು ಕೇಳಿಬಂತು ಮತ್ತು ಅದು ಸಹಜವೂ ಆಗಿತ್ತು.

Vishwavani Editorial: ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ

Vishwavani Editorial: ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ

ವಿಶ್ವದ ವಿವಿಧೆಡೆ ಸುನಾಮಿ/ಚಂಡಮಾರುತ, ಭೂಕಂಪದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿ ದಾಗ, ಭಾರತವು ಮುಂದೆ ನಿಂತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿ ಕೊಂಡಿದ್ದಿದೆ. ಇದು ಬಹುತೇಕ ದೇಶಗಳಿಗೆ ಗೊತ್ತಿರುವ ಸಂಗತಿಯೇ. ಇಷ್ಟಾಗಿಯೂ, ‘ವಿಶ್ವದ ದೊಡ್ಡಣ್ಣ’ ಅಮೆರಿಕ ಕಳೆದ ಕೆಲ ತಿಂಗಳಿಂದ ಭಾರತದ ಮೇಲೆ ‘ಸುಂಕ ಸಮರ’ದ ಹೆಸರಲ್ಲಿ ಕೆಂಗಣ್ಣು ಬೀರಿಕೊಂಡೇ ಬಂದಿದೆ. ಈ ಸಾಲಿಗೆ ಈಗ ಮೆಕ್ಸಿಕೊ ಕೂಡ ಸೇರಿರುವುದು ಹಲವರ ಹುಬ್ಬೇರಿಸಿದೆ

Vishwavani Editorial: ಬದಲಾವಣೆ ಜಗದ ನಿಯಮ

Vishwavani Editorial: ಬದಲಾವಣೆ ಜಗದ ನಿಯಮ

ಪ್ರಸ್ತುತ ಚಾಲ್ತಿಯಲ್ಲಿರುವ ‘ಕೃತಕ ಬುದ್ಧಿಮತ್ತೆ’ (ಎಐ) ಮತ್ತು ಅದರ ಅನ್ವಯಿಕ ಕ್ಷೇತ್ರಗಳಿಗೂ ಇದು ಒಪ್ಪುವಂಥ ಮಾತು. ‘ಎಐ’ ಎಂಬ ಸಾಧ್ಯತೆ ಹತ್ತು ಹಲವು ಕ್ಷೇತ್ರಗಳಿಗೆ ದಾಳಿಯಿಡುತ್ತಿರುವುದರಿಂದ, ಉದ್ಯೋಗ ಕ್ಷೇತ್ರದಲ್ಲಿ ಇನ್ನು ಮುಂದೆ ಮಾನವ ಸಂಪನ್ಮೂಲದ ಅಗತ್ಯವೇ ಇರುವುದಿಲ್ಲ ಎಂಬುದು ಸುಮಾರು ಒಂದು ವರ್ಷದ ಹಿಂದೆ ಕೇಳಿಬರುತ್ತಿದ್ದ ಮಾತಾಗಿತ್ತು.

ಸಂಕಟಗಳಿಗೆ ಯಾರು ಹೊಣೆ?

ಸಂಕಟಗಳಿಗೆ ಯಾರು ಹೊಣೆ?

ದೇಶದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.67 ಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಡಿ.೫ ರಿಂದ ದಿಢೀರನೆ ವಿಮಾನಯಾನಗಳನ್ನು ರದ್ದು ಮಾಡಿದ್ದು, ಇಡೀ ದೇಶದಲ್ಲಿ ಗೊಂದಲಕ್ಕೆ ಕಾರಣ ವಾಗಿದೆ. ಕೇಂದ್ರ ಸರಕಾರ ಬಹಳ ಮುಂಚಿತವಾಗಿಯೇ ಮಾಹಿತಿ ನೀಡಿ ದೇಶದ ವಿಮಾನ ಯಾನ ಸಂಸ್ಥೆಗಳ ಪೈಲಟ್‌ಗಳೂ ಸೇರಿ ಎಲ್ಲ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ನೀಡಬೇಕೆಂಬ ನಿಯಮ ಜಾರಿ ಮಾಡಿತ್ತು

Vishwavani Editorial: ಹಣ ಮಾಡುವ ದಂಧೆಯಾಗದಿರಲಿ

Vishwavani Editorial: ಹಣ ಮಾಡುವ ದಂಧೆಯಾಗದಿರಲಿ

ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಸುಖಾ ಸುಮ್ಮನೆ ಕೈಗೊಳ್ಳುವಂತಿಲ್ಲ ಎಂಬುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಸಹಜ ಹೆರಿಗೆಯಲ್ಲಿ ಅಡಚಣೆ ತಲೆದೋರಬಹುದು ಎನಿಸಿದರೆ, ಗರ್ಭಿಣಿಯಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದರೆ, ಅವಳಿ ಗರ್ಭಧಾರಣೆಯಾಗಿದ್ದರೆ ಹೀಗೆ ಸಿಸೇರಿಯನ್ ಆಯ್ಕೆಗೆ ಒಂದಿಷ್ಟು ಕಾರಣಗಳಿವೆ. ವೈದ್ಯಕೀಯವಾಗಿ ಅಗತ್ಯವಿದ್ದಾಗಷ್ಟೇ ಸಿಸೇರಿಯನ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.

Vishwavani Editorial: ತೂತುಕೊಡಕ್ಕೆ ನೀರು ತುಂಬಿದರೆ...

Vishwavani Editorial: ತೂತುಕೊಡಕ್ಕೆ ನೀರು ತುಂಬಿದರೆ...

‘ಜನಕಲ್ಯಾಣ ಮತ್ತು ಬಡತನ ನಿರ್ಮೂಲನೆಗೆಂದು ಸರಕಾರದ ವತಿಯಿಂದ ಖರ್ಚಾಗುವ ಪ್ರತಿ ೧ ರುಪಾಯಿ ಯೋಜನಾ ಮೊತ್ತವು, ಉದ್ದೇಶಿತ ಫಲಾನುಭವಿಗೆ ತಲುಪುವ ಹೊತ್ತಿಗೆ ೧೫ ಪೈಸೆಗೆ ಇಳಿದಿರು ತ್ತದೆ’ ಎಂಬಂರ್ಥದ ಮಾತನ್ನಾಡಿದ್ದರು ಭಾರತದ ಮಾಜಿ ಪ್ರಧಾನಿಯೊಬ್ಬರು. ಇದು ಸ್ವಾತಂತ್ರ್ಯಾ ನಂತರದ ಕಾಲಘಟ್ಟದಿಂದಲೂ ನಮ್ಮ ದೇಶದಲ್ಲಿ ‘ಪರಂಪರೆ’ಯಂತೆ ನಡೆದುಕೊಂಡು ಬಂದಿರುವ ‘ಸೋರಿಕೆ’ಯ ಪರಿಪಾಠವೇ!

Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ

Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ

ನಾಲ್ಕು ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಆಗಮಿಸು ತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ನಾಳೆ (ಡಿಸೆಂಬರ್ ೫) ನಡೆಯಲಿದೆ. ಹಿಂದಿನ ಶೃಂಗಸಭೆಗಳಿಗಿಂತ ಈ ಬಾರಿಯ ಈ ಭೇಟಿಯು ಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದೆ.

Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...

Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...

ಕಾಡ್ಗಿಚ್ಚು, ಚಂಡಮಾರುತ/ಸುನಾಮಿ, ಕುಂಭದ್ರೋಣ ಮಳೆ, ಮಹಾಪ್ರವಾಹ, ಗುಡ್ಡಗಳ ಕುಸಿತ ಮುಂತಾದ ಪ್ರಕೃತಿ ವಿಕೋಪಗಳನ್ನು ಹುಲುಮಾನವರು ತಡೆಯುವುದಕ್ಕಂತೂ ಸಾಧ್ಯವಿಲ್ಲ; ಆದರೆ ಅವು ಘಟಿಸುವುದಕ್ಕೆ ಮನುಷ್ಯರ ಒಂದಿಷ್ಟು ತಪ್ಪುಹೆಜ್ಜೆಗಳೂ ಕಾರಣವಾಗಿದ್ದರೆ, ಅಂಥ ತಪ್ಪು ಗಳನ್ನು ತಿದ್ದಿಕೊಳ್ಳುವುದಕ್ಕೆ ಇನ್ನಾದರೂ ನಾವು ಕಟಿಬದ್ಧರಾಗಬೇಕಿದೆ.

Loading...