ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಕಟ್ಟುನಿಟ್ಟಿನ ಸುರಕ್ಷತೆ ಅಗತ್ಯ

Vishwavani Editorial: ಕಟ್ಟುನಿಟ್ಟಿನ ಸುರಕ್ಷತೆ ಅಗತ್ಯ

ಎಟಿಎಂ ವಾಹನದ ಚಲನವಲನದ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯ ಎಸಗಿರುವುದು ಸ್ಪಷ್ಟ. ಈ ಹಿಂದೆ ಮಂಗಳೂರಿನ ಉಳ್ಳಾಲ ಮತ್ತು ವಿಜಯಪುರದ ಚಡಚಣ ಮತ್ತು ಮನಗೂಳಿ ಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಉತ್ತರ ಭಾರತ ಮೂಲದ ದರೋಡೆ ಕೋರರು ಭಾಗಿಯಾಗಿದ್ದರು.

Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ

Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ

ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಎಷ್ಟೇ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳನ್ನು ನೀಡುತ್ತಿದ್ದರೂ, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಇತ್ಯಾದಿಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಹೀಗೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಹತ್ತತ್ತಿರ 32 ಕೋಟಿ ರುಪಾಯಿಗಳನ್ನು ಕಳೆದುಕೊಂಡಿರುವುದು ಇತ್ತೀಚಿನ ಉದಾಹರಣೆ.

Vishwavani Editorial: ಬೀಗಿದವ ಬಾಗಲೇಬೇಕು...

Vishwavani Editorial: ಬೀಗಿದವ ಬಾಗಲೇಬೇಕು...

ಪರದೇಶಗಳಿಂದ ಬರುವ ಉತ್ಪನ್ನಗಳ ಮೇಲೆ ಅತಿರೇಕದ ಸುಂಕವನ್ನು ವಿಧಿಸುವ ತಮ್ಮ ನಡೆಗೆ ಅಮೆರಿಕದ ಪ್ರಜೆಗಳಿಂದಲೇ ಆಕ್ರೋಶ- ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೆಜ್ಜೆಯಿಂದ ಹಿಂದೆ ಸರಿದಿದ್ದಾರೆ ಎಂಬುದು. ರಾಷ್ಟ್ರವೊಂದರ ಪ್ರಜೆಗಳ ಇಚ್ಛಾಶಕ್ತಿ ಬಲವಾಗಿ ದ್ದರೆ, ಅದರ ನಾಯಕನೂ ಮಣಿಯಲೇ ಬೇಕಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.

Vishwavani Editorial: ಆತ್ಮಾವಲೋಕನಕ್ಕೆ ಇದು ಸಕಾಲ

Vishwavani Editorial: ಆತ್ಮಾವಲೋಕನಕ್ಕೆ ಇದು ಸಕಾಲ

ಒಂದು ಕಾಲಕ್ಕೆ ‘ಚುನಾವಣಾ ತಂತ್ರಗಾರ’ ಎಂಬ ಹಣೆಪಟ್ಟಿಯನ್ನು ನೇತು ಹಾಕಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರಂತೂ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ; ಕಾರಣ ಅವರು ಹುಟ್ಟು ಹಾಕಿದ್ದ ‘ಜನ ಸುರಾಜ್ ಪಕ್ಷ’ಕ್ಕೆ ಬಿಹಾರದಲ್ಲಿ ಬೋಣಿ ಆಗಿಲ್ಲ. ಈ ಚುನಾವಣೆಯಲ್ಲಿ ತಂತಮ್ಮ ಪಕ್ಷಗಳು ಸೋತು, ಎನ್‌ಡಿಎ ಪಾಳಯವು ಗೆದ್ದಿರುವುದಕ್ಕೆ ಈ ಇಬ್ಬರು ನಾಯಕರು ತಮ್ಮದೇ ಆದ ಕಾರಣಗಳನ್ನು ಹೇಳಬಹುದು

Vishwavani Editorial: ಮತಾಂಧ ಶಕ್ತಿಗಳ ದಮನ ಅಗತ್ಯ

Vishwavani Editorial: ಮತಾಂಧ ಶಕ್ತಿಗಳ ದಮನ ಅಗತ್ಯ

ಫರಿದಾ ಬಾದ್‌ನ ಅಲ್ ಫಲಾಹ್ ವಿವಿಯಲ್ಲಿ ಭವಿಷ್ಯದ ವೈದ್ಯ ವಿದ್ಯಾರ್ಥಿಗಳನ್ನು ರೂಪಿಸ ಬೇಕಾದ ಪ್ರೊಫೆಸರ್‌ಗಳು ತಮ್ಮ ವೃತ್ತಿಗೆ ಸಂಪೂರ್ಣವಾಗಿ ವಿರುದ್ಧವಾದ ‘ಜೀವ ತೆಗೆಯುವ’ ಕೆಲಸಕ್ಕೆ ಸಂಚು ರೂಪಿಸಿದ್ದು ಕಳವಳಕಾರಿ ಸಂಗತಿ. ಶಿಕ್ಷಣವು ಭಯೋತ್ಪಾದನೆಯ ವಿರುದ್ಧದ ಖಾತರಿ ಅಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

Vishwavani Editorial: ದುರುಳರ ಹೆಡೆಮುರಿ ಕಟ್ಟಿ

Vishwavani Editorial: ದುರುಳರ ಹೆಡೆಮುರಿ ಕಟ್ಟಿ

ಉಗ್ರರಿಗೆ ಕಾಲಾನು ಕಾಲಕ್ಕೆ ಭಾರತವು ಬಿಸಿ ಮುಟ್ಟಿಸುತ್ತಿದ್ದರೂ ಅವರು ಪಾಠ ಕಲಿಯುತ್ತಿಲ್ಲ, ಜತೆಗೆ ದುರುಳದೇಶ ಪಾಕಿಸ್ತಾನದ ಚಿತಾವಣೆಯೂ ಅವರ ಬೆನ್ನಿಗಿರುವುದನ್ನು ಮರೆಯು ವಂತಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯ ಭಾರತವನ್ನು ಮತ್ತೆ ಮತ್ತೆ ಕೆಣಕುತ್ತಿರುವ ಪಾಕಿಸ್ತಾನದ ಸಂಚು ಇದಾಗಿರುವ ಸಾಧ್ಯತೆಯಿದೆ.

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಿರುವ ನಡುವೆಯೇ, ಮುಸ್ಲಿಂ ಬಾಹುಳ್ಯದ ಅಲ್ಲಿನ ಮುರ್ಷಿದಾಬಾದ್ ಜಿಲ್ಲೆಯಲ್ಲಿ 150 ಕಚ್ಚಾ ಬಾಂಬ್ ಗಳು ಪತ್ತೆಯಾಗಿರುವುದು ವರದಿ ಯಾಗಿದೆ.

Vishwavani Editorial: ದಂಡಂ ದಶಗುಣಂ ಭವೇತ್...

Vishwavani Editorial: ದಂಡಂ ದಶಗುಣಂ ಭವೇತ್...

ನಾಟಕೀಯವಾಗಿ ಶಾಂತಿಮಂತ್ರ ಜಪಿಸುತ್ತಲೇ ಬಗಲಲ್ಲಿನ ದೊಣ್ಣೆಯನ್ನು ಆಗಾಗ ಸವರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪರೋಕ್ಷವಾಗಿ ನೀಡುತ್ತಿರುವ ಕುಮ್ಮಕ್ಕು ಕೂಡ ಪಾಕಿಸ್ತಾನದ ಈ ಠೇಂಕಾರಕ್ಕೆ ಮತ್ತು ಕಿತಾಪತಿಗೆ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ಟಿನಲ್ಲಿ, ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ, ಅಷ್ಟೇ!

Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

ರೈತರ ಈ ಚಳವಳಿಯು ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷ ಗಳಲ್ಲಿ ಒಂದಾಗಿ ಬೆಳೆದಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಹಾಲಿ-ಮಾಜಿ ಸಚಿವರು, ಶಾಸಕ ರದ್ದೇ ಇವೆ. ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಒಡೆತನದಲ್ಲೇ ಸಕ್ಕರೆ ಕಾರ್ಖಾನೆಗಳು ಇದ್ದು, ಅವರು ಕೂಡ ಈವರೆಗೂ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಆಲಿಸಿಲ್ಲ

Vishwavani Editorial: ಕಟ್ಟೆಚ್ಚರದ ಅಗತ್ಯವಿದೆ

Vishwavani Editorial: ಕಟ್ಟೆಚ್ಚರದ ಅಗತ್ಯವಿದೆ

ಒಂದೆಡೆ ಟ್ರಂಪ್‌ರಂಥ ಭೂರಾಜಕೀಯದ ‘ತುಘಲಕ್’ಗಳು, ಮತ್ತೊಂದೆಡೆ ಭಯೋತ್ಪಾದಕರಂಥ ವಿಕ್ಷಿಪ್ತ ಶಕ್ತಿಗಳು- ಹೀಗೆ ಉಭಯ ತೆರನಾದ ಕಿರಿಕಿರಿಗಳನ್ನು ಭಾರತ ನಿಭಾಯಿಸಬೇಕಾಗಿ ಬಂದಿದೆ. ದೇಶದ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿರುವವರೂ ಸಮರ್ಥರೇ ಆಗಿರುವುದರಿಂದ ಇದು ನೆರವೇರುತ್ತದೆ ಎಂಬುದು ಭಾರತೀಯರ ವಿಶ್ವಾಸ.

Vishwavani Editorial: ಹಸಿರಾಗಲಿ ಉಸಿರಾಗಲಿ ಕನ್ನಡ

Vishwavani Editorial: ಹಸಿರಾಗಲಿ ಉಸಿರಾಗಲಿ ಕನ್ನಡ

ಇಂದು 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶ ಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು 1956 ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆಸಿಕೊಂಡಿದ್ದು ‘ಮೈಸೂರು ರಾಜ್ಯ’ ಎಂಬ ಹೆಸರಿನಿಂದ.

Vishwavani Editorial: ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬೀಳಲಿ

Vishwavani Editorial: ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬೀಳಲಿ

ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಸರಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು, ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗದಿರುವುದು ಬಹು ದೊಡ್ಡ ಹಿನ್ನಡೆಯೇ. ಬಾಲಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಗ್ರಾಮೀಣ ಭಾಗದಲ್ಲಿ ಇರುವ ಅಧಿಕಾರಿಗಳು, ಸರಕಾರಿ ಸಿಬ್ಬಂದಿಯ ಪಾತ್ರ ಮುಖ್ಯವಾಗಿದೆ.

Vishwavani Editorial: ಸಭ್ಯತೆಯ ಎಲ್ಲೆ ಮೀರದಿರಲಿ

Vishwavani Editorial: ಸಭ್ಯತೆಯ ಎಲ್ಲೆ ಮೀರದಿರಲಿ

ಸ್ಥಾಪಿತ ಸರಕಾರವೊಂದು ನನ್ನ ಆಡಳಿತ ನಿರ್ವಹಣೆಯಲ್ಲಿ ಮತ್ತು ಜನಕಲ್ಯಾಣದ ಬಾಬತ್ತಿನಲ್ಲಿ ಹಾದಿ ತಪ್ಪದಂತಿರುವುದಕ್ಕೂ, ಕಾಲಾನುಕಾಲಕ್ಕೆ ಅದರ ಕಿವಿ ಹಿಂಡುವ ಸಮರ್ಥ ವಿರೋಧ ಪಕ್ಷವೂ ಇರ ಬೇಕಾಗುತ್ತದೆ. ಅದುವೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು. ಹೀಗೆ ಆಡಳಿತಾರೂಢರು ಮತ್ತು ವಿಪಕ್ಷೀಯರು ಮುಖಾಮುಖಿಯಾಗುವ ವ್ಯವಸ್ಥೆಯೊಂದರಲ್ಲಿ ಟೀಕೆ-ಟಿಪ್ಪಣಿಗಳು ಒಪ್ಪಿತ ಸ್ಥಿತಿಯೇ ಆಗಿದೆ.

Vishwavani Editorial: ಬಿಹಾರದಲ್ಲಿ ಕದನ ಕುತೂಹಲ

Vishwavani Editorial: ಬಿಹಾರದಲ್ಲಿ ಕದನ ಕುತೂಹಲ

ತಾವು ಮುಖ್ಯಮಂತ್ರಿಯ ಗದ್ದುಗೆಯನ್ನು ಕಳೆದುಕೊಂಡ ನಂತರವೂ, ಚಾಣಾಕ್ಷತನದಿಂದ ಅದರ ಮೇಲೆ ಪತ್ನಿಯನ್ನು ಕೂರಿಸಿದವರು, ತರುವಾಯದಲ್ಲಿ ಮಗನನ್ನು ಮುಂಚೂಣಿಗೆ ತಂದವರು ಇದೇ ಲಾಲು. ನಂತರದಲ್ಲಿ, ಬದಲಾದ ರಾಜಕೀಯ ಸಮೀಕರಣಗಳ ಕಾರಣದಿಂದಾಗಿ ಹಾಗೂ ಮತದಾರರೂ ಕೈಹಿಡಿ ಯದಿದ್ದುದಕ್ಕೆ ಲಾಲು ಪ್ರಸಾದರು ಬಿಹಾರದ ಗದ್ದುಗೆಯನ್ನು ಸ್ವತಃ ಅಲಂಕರಿಸಲಾಗಲಿಲ್ಲ ಎನ್ನಿ.

Vishwavani Editorial: ಕುವರಿಯಾದೊಡೆ ಕುಂದೇನು?

Vishwavani Editorial: ಕುವರಿಯಾದೊಡೆ ಕುಂದೇನು?

ಹೆಣ್ಣು ಜೀವಗಳನ್ನು ಹೀಗೆ ಗರ್ಭದಲ್ಲಿರುವಾಗಲೇ ಕತ್ತು ಹಿಸುಕಿ ಇಲ್ಲವಾಗಿಸುವುದರಿಂದ, ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಜೀವಗಳ ಅನುಪಾತದಲ್ಲಿ ಅದೆಷ್ಟು ಅಂತರ ಮೈದಳೆ ಯುತ್ತದೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಸಮತೋಲನ ಅದೆಷ್ಟರ ಮಟ್ಟಿಗೆ ಹದ ತಪ್ಪುತ್ತದೆ ಎಂಬ ಅರಿವೂ ಇಂಥವರಿಗೆ ಇದ್ದಂತಿಲ್ಲ. ಇವರಿಗೆ ಬುದ್ಧಿ ಹೇಳೋರ‍್ಯಾರು?

Vishwavani Editorial: ದುಡ್ಡು ಮಾಡುವ ದಂಧೆಯೇ?!

Vishwavani Editorial: ದುಡ್ಡು ಮಾಡುವ ದಂಧೆಯೇ?!

ಲೋಕಸಭೆ ಚುನಾವಣೆ ಮತ್ತು ದೇಶದ ಅಷ್ಟೂ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಾತ್ರವಲ್ಲದೆ, ವಿವಿಧ ಸ್ತರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಪರಿಗಣಿಸಿ ನೋಡಿದರೆ, ನೇಪಥ್ಯದಲ್ಲಿ ಯಾವ ಮಟ್ಟಿಗೆ ಇಂಥ ‘ದುಡ್ಡಿನ ವ್ಯವಹಾರ’ ನಡೆಯುತ್ತಿರಬಹುದು? ಎಂದು ಲೆಕ್ಕಿಸಬಹುದು. ಛೇ, ಭಾರತ ಇನ್ನೂ ಪ್ರಬುದ್ಧನಾಗಬೇಕಿದೆ...

Vishwavani Editorial: ಸಾರ್ವಭೌಮತೆಯ ಸಂರಕ್ಷಣೆ

Vishwavani Editorial: ಸಾರ್ವಭೌಮತೆಯ ಸಂರಕ್ಷಣೆ

ಪಾಕಿಸ್ತಾನದ ಈ ಜಾಯಮಾನ ಹೊಸದೇನಲ್ಲ. ಹೀಗಾಗಿ, ಅದು ಮತ್ತೊಮ್ಮೆ ಕಾಲು ಕೆರೆದುಕೊಂಡು ಸಂಘರ್ಷಕ್ಕೆ ಬಂದರೆ ಸನ್ನದ್ಧವಾಗಿರಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿರುವ ಭಾರತ, ಅದಕ್ಕೆ ತಕ್ಕಂಥ ಸಜ್ಜಿಕೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಉತ್ತರ ಪ್ರದೇಶದ ಲಖನೌನ ಉತ್ಪಾದನಾ ಘಟಕವು ತಯಾರಿಸಿರುವ ಬ್ರಹ್ಮೋಸ್ ಕ್ಷಿಪಣಿಯ ೧ನೇ ಬ್ಯಾಚ್ ಬಿಡುಗಡೆ ಯಾಗಿರುವುದು ಇದಕ್ಕೆ ಸಾಕ್ಷಿ.

ಐಲುಪೈಲಿಗೆ ಮತ್ತೊಂದು ಅಧ್ಯಾಯ

ಐಲುಪೈಲಿಗೆ ಮತ್ತೊಂದು ಅಧ್ಯಾಯ

ಟ್ರಂಪ್ ಅವರು ತಮ್ಮ ಹುದ್ದೆಯ ಘನತೆಯನ್ನು ಅರಿತು ಇನ್ನಾದರೂ ‘ತೂಕ’ವಾಗಿ ನಡೆದುಕೊಳ್ಳ ದಿದ್ದರೆ, ಒಂದಿಡೀ ವಿಶ್ವದ ಜನರು ಅವರನ್ನು ‘ಹಗುರ’ವಾಗಿ ಪರಿಗಣಿಸುವ ದಿನಗಳು ದೂರವಿಲ್ಲ. ಮಾತ್ರ ವಲ್ಲ, ವಿವಿಧ ದೇಶಗಳ ರಾಜತಾಂತ್ರಿಕ ವಲಯವೂ ಅವರನ್ನು ಗಂಭೀರವಾಗಿ ಲೆಕ್ಕಿಸದೆ ಹೋಗುವ ಸಾಧ್ಯತೆಗಳೂ ಇವೆ...

Vishwavani Editorial: ವನ್ಯಜೀವಿಗಳಿಗಿದು ಕಾಲವಲ್ಲ

Vishwavani Editorial: ವನ್ಯಜೀವಿಗಳಿಗಿದು ಕಾಲವಲ್ಲ

ಭಾರತದಲ್ಲಿ ಕಾಡಾನೆಗಳ ಸಂಖ್ಯೆಯು ಶೇ.18ರಷ್ಟು ಇಳಿಕೆಯಾಗಿರುವ ಮಾಹಿತಿಯನ್ನು ದೇಶದ ಮೊದಲ ಡಿಎನ್‌ಎ ಆಧಾರಿತ ಸಮೀಕ್ಷೆಯು ತಿಳಿಸಿದೆ. 2017ರಲ್ಲಿ ನಡೆಸಲಾದ ಗಣತಿಯಲ್ಲಿ 27,312ರಷ್ಟು ಇದ್ದ ಕಾಡಾನೆಗಳ ಸಂಖ್ಯೆಯು ಪ್ರಸ್ತುತ 22446ಕ್ಕೆ ಇಳಿದಿರುವುದು ಈ ಸ್ಥೂಲ ಮಾಹಿತಿಗೆ ಮೂಲಾಧಾರ.

Vishwavani Editorial: ಖಾರವಾದ ಪ್ರತಿಕ್ರಿಯೆ ಬೇಕಿಲ್ಲ

Vishwavani Editorial: ಖಾರವಾದ ಪ್ರತಿಕ್ರಿಯೆ ಬೇಕಿಲ್ಲ

ತೆರಿಗೆ ಪಾವತಿಸುವ ಯಾವುದೇ ನಾಗರಿಕನಿಗೆ ಇಲ್ಲಿನ ಮೂಲ ಸೌಕರ‍್ಯ ಮತ್ತು ಕುಂದುಕೊರತೆಗಳ ಬಗ್ಗೆ ಪ್ರಶ್ನಿಸುವ ಹಕ್ಕಿದೆ. ಹೀಗಿರುವಾಗ ಸಚಿವರು ಕಿರಣ್ ಶಾ ಅವರ ಟ್ವೀಟ್ ಬಗ್ಗೆ ಇಷ್ಟೊಂದು ಖಾರವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಡಿಕೆಶಿ ಅವರ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರು ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಿದ ಕಾರಣದಿಂದಲೇ ಬೆಂಗಳೂರು ಇಂದು ಐಟಿ ನಗರವಾಗಿ ಬೆಳೆದು ನಿಂತಿರುವು ದನ್ನು ಮರೆಯಬಾರದು.

Vishwavani Editorial: ಬೇರುಗಳೇ ಭದ್ರವಾಗದಿದ್ದರೆ...

Vishwavani Editorial: ಬೇರುಗಳೇ ಭದ್ರವಾಗದಿದ್ದರೆ...

ಇಂಥ ಶಾಲೆಗಳಿರುವ ರಾಜ್ಯಗಳ ಯಾದಿಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಮತ್ತು ಐದನೇ ಸ್ಥಾನದಲ್ಲಿವೆ ಎಂಬುದು ಲಭ್ಯ ಮಾಹಿತಿ. ಏಕೋಪಾಧ್ಯಾಯ ಶಾಲೆಗಳು, ವಿವಿಧ ಹಂತದ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅಡ್ಡಿಯುಂಟುಮಾಡುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

Vishwavani Editorial: ಅತ್ತೂ ಕರೆದೂ ಔತಣಕ್ಕೆ...!

Vishwavani Editorial: ಅತ್ತೂ ಕರೆದೂ ಔತಣಕ್ಕೆ...!

ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ 7 ಯುದ್ಧಗಳನ್ನು ತಾವು ನಿಲ್ಲಿಸಿರುವು ದಾಗಿಯೂ, ಹೀಗೆ ವಿಶ್ವಶಾಂತಿಗೆ ಜೀವವನ್ನೇ ಮುಡಿಪಾಗಿಟ್ಟ ತಮಗೆ ಈ ಬಾರಿಯ ‘ನೊಬೆಲ್ ಶಾಂತಿ ಪುರಸ್ಕಾರ’ ದಕ್ಕಬೇಕು ಎಂದೂ ಟ್ರಂಪ್ ಮಹಾಶಯರು ಸಾರ್ವಜನಿಕವಾಗೇ ವಿಲಕ್ಷಣವಾಗಿ ಅಲವತ್ತು ಕೊಂಡಿದ್ದುಂಟು.

ಸೇನಾ ಸನ್ನದ್ಧತೆ ಅನಿವಾರ್ಯ

ಸೇನಾ ಸನ್ನದ್ಧತೆ ಅನಿವಾರ್ಯ

ನಮ್ಮ ಮಗ್ಗುಲುಮುಳ್ಳು ಪಾಕಿಸ್ತಾನಕ್ಕೆ ‘ಎಐಎಂ-೧೨೦’ ಕ್ಷಿಪಣಿಗಳನ್ನು ಕೊಡಲು ಸಮ್ಮತಿಸಿದೆ ಅಮೆರಿಕ. ಆರ್ಥಿಕವಾಗಿ ಧರಾಶಾಯಿ ಯಾಗಿದ್ದರೂ ಭಾರತವನ್ನು ಸಾಧ್ಯವಾದಷ್ಟರ ಮಟ್ಟಿಗೆ ಹಣಿಯಬೇಕೆಂಬ ವಿಲಕ್ಷಣ ಹಪಾಹಪಿಯನ್ನು ಹೊಂದಿರುವ ಪಾಕಿಸ್ತಾನವು, ಅಮೆರಿಕದ ಈ ಕುಮ್ಮಕ್ಕಿನಿಂದ ಒಂದಿಷ್ಟು ಬಲವನ್ನು ಕ್ರೋಡೀಕರಿಸಿಕೊಂಡು ಭಾರತದ ಮೇಲೆ ಎರಗಲು ಮುಂದಾಗುವ ಸಾಧ್ಯತೆಯಿದೆ

Vishwavani Editorial; ಔಷಧವೇ ವಿಷವಾಗದಿರಲಿ

Vishwavani Editorial; ಔಷಧವೇ ವಿಷವಾಗದಿರಲಿ

ತಮಿಳುನಾಡಿನ ಸ್ರೇಸನ್ ಫಾರ್ಮಾ ಎಂಬ ಕಂಪನಿ ತಯಾರಿಸಿದ್ದ ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಧ್ಯಪ್ರದೇಶದಲ್ಲಿ ೨೦ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಸಂಜೀವಿನಿ ಆಗಬೇಕಿದ್ದ ಔಷಧವೇ ಜೀವ ತೆಗೆದಿರುವುದು ಹಣ ಮಾಡುವ ಹಪಹಪಿಯ ಖಾಸಗಿ ಕಂಪನಿಗಳು ಹಾಗೂ ಭ್ರಷ್ಟ ಸರಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

Loading...