ಈ ವಿಷಯದಲ್ಲೂ ರಾಜಕೀಯವೇ?!
ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ?