ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪಾದಕೀಯ

Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ

Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ

ನ್ಯಾಯಾಲಯದ ಅನುಮತಿ ಪಡೆಯದೇ ಕಲಾಪದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮುಖ್ಯವಾಗಿ ಕಲಾಪ ವೇಳೆ ನ್ಯಾಯಮೂರ್ತಿಗಳು ನೀಡುವ ಹೇಳಿಕೆಗಳು, ವಾದ-ಪ್ರತಿವಾದ ಹಾಗೂ ಪ್ರಕರಣದ ಬೆಳವಣಿಗೆಗಳಲ್ಲಿ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗುತ್ತಿತ್ತು.

Vishwavani Editorial: ಮಹಿಳೆಯ ಅಪಮಾನ ಸಲ್ಲದು

Vishwavani Editorial: ಮಹಿಳೆಯ ಅಪಮಾನ ಸಲ್ಲದು

ಉದಯನಿಧಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದು ಬಳಿಕ ಬಿಡುಗಡೆ ಆಗಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಯಬಹುದು. ಅದರಲ್ಲಿ ಉದಯನಿಧಿ ತಮ್ಮನ್ನು ಸಮರ್ಥಿಸಿಕೊಳ್ಳಬಹುದು, ಆ ಮಾತು ಬೇರೆ. ಆದರೆ ಈ ಕೀಳು ಮಾತಿಗಾಗಿ ಇದುವರೆಗೂ ಒಂದು ಕ್ಷಮೆ ಯನ್ನೂ ಅವರು ಕೇಳಿಲ್ಲ

ಭಾರತದ ಕಾಮನ್‌ವೆಲ್ತ್ ಸಾಧನೆ

ಭಾರತದ ಕಾಮನ್‌ವೆಲ್ತ್ ಸಾಧನೆ

ವೆಯ್ಟ್ ಲಿಫ್ಟಿಂಗ್‌ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಹ್ಯಾಟ್ರಿಕ್ ಚಿನ್ನ ಗಳಿಸಿರುವುದು ನೆನಪಿಡಬೇಕಾದ ದಾಖಲೆ. ಮಹಿಳೆಯರ ಜುಡೊದಲ್ಲಿ ಕಾಮನ್‌ವೆಲ್ತ್ ಇತಿಹಾಸ ದಲ್ಲೇ ಮೊದಲ ಬಾರಿಗೆ ಅಸ್ಮಿತಾ ದೇವಿ ಚಿನ್ನ ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನ ಎ-57 ವಿಭಾಗ ದಲ್ಲಿ ಪ್ಯಾರಾ ಕ್ರೀಡಾಳು ಶರ್ಮಿಳಾ ಧನ್ಕರ್ ಚಿನ್ನ ಪಡೆದು, ಬಂಗಾರ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎಂಬ ದಾಖಲೆ ಮಾಡಿ ಪುಳಕ ಮೂಡಿಸಿದರು.

ಸಚಿವ ಸಂಪುಟ ಗಜಪ್ರಸವ

ಸಚಿವ ಸಂಪುಟ ಗಜಪ್ರಸವ

ಅಳೆದೂ ತೂಗಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಎರಡು ಮೂರು ಪಟ್ಟಿಗಳು, ಹೈಕಮಾಂಡ್ ಜತೆಗೆ ಸತತ ತಿಕ್ಕಾಟ, ಜಾತಿ ಪ್ರಾತಿನಿಧ್ಯದ ಲೆಕ್ಕಾಚಾರ, ಹಲವು ನಾಯಕರ ಒತ್ತಡಗಳು ಇವೆಲ್ಲದರ ಫಲಿತಾಂಶ ಈ ಸಂಪುಟ ರಚನೆಯಲ್ಲಿ ಕಾಣಿಸುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಹೊಸದಾಗಿ 19 ಸಚಿವರ ಸೇರ್ಪಡೆಯಾಗಿದೆ.

Vishwavani Editorial: ನಶೆಯ ವಿರುದ್ಧ ಸಮರ

Vishwavani Editorial: ನಶೆಯ ವಿರುದ್ಧ ಸಮರ

ಯುವಜನತೆ ಮಾದಕ ದ್ರವ್ಯ ವ್ಯಸನಿಗಳಾಗದಂತೆ ತಡೆಯುವುದು ಮತ್ತು ಸಾಮಾಜಿಕ ಬದಲಾವಣೆ ಯ ರಾಯಭಾರಿಗಳಾಗುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಈ ಕಾಲಕ್ಕೆ ಇಂಥದೊಂದು ಅಭಿಯಾನ ಅಗತ್ಯವಿತ್ತು. ಈಗಾಗಲೇ ವ್ಯಸನಿಗಳಾಗಿರುವ ವಯಸ್ಕರನ್ನು ತಿದ್ದುವುದು ಕಷ್ಟ. ಆದರೆ ಯುವಜನತೆಯನ್ನು ಇದರ ಕಪಿಮುಷ್ಟಿಯಿಂದ ಬಿಡಿಸುವುದು ನಮ್ಮ ಆದ್ಯತೆಯಾಗಬೇಕು

Vishwavani Editorial: ಸಚಿವರಿಲ್ಲದೆ ಆಡಳಿತ ಸ್ಥಗಿತ

Vishwavani Editorial: ಸಚಿವರಿಲ್ಲದೆ ಆಡಳಿತ ಸ್ಥಗಿತ

ಸದ್ಯ 20 ಸಚಿವ ಸ್ಥಾನಗಳು ಖಾಲಿ ಇವೆ. 34 ಸದಸ್ಯರ ಸಾಮರ್ಥ್ಯ ಇರುವ ಸಚಿವ ಸಂಪುಟದಲ್ಲಿ ಕೇವಲ 13 ಮಂದಿ ಸಚಿವರಷ್ಟೇ ಖಾತೆಗಳ ಹೊಣೆಗಾರಿಕೆ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬರ ಬಳಿ ಎರಡು ಮೂರು ಖಾತೆಗಳಿವೆ. ಕೃಷಿ ಮತ್ತು ಶಿಕ್ಷಣದಂಥ ಪ್ರಮುಖ ಇಲಾಖೆಗಳಿಗೆ ಇನ್ನೂ ಪೂರ್ಣಾವಧಿ ಸಚಿವರ ನೇಮಕ ಆಗಿಲ್ಲ. ಈ ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇವೆ. ಜಿಲ್ಲೆಗೊಬ್ಬರಂತೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಾಗಿತ್ತು

Vishwavani Editorial: ಕಾವೇರಿ ನೀರಿಗೆ ಮತ್ತೆ ಕಿಚ್ಚು

Vishwavani Editorial: ಕಾವೇರಿ ನೀರಿಗೆ ಮತ್ತೆ ಕಿಚ್ಚು

ಬರ ಹಾಗೂ ನೀರಿನ ಕೊರತೆಯಿಂದ ತತ್ತರಿಸು ತ್ತಿರುವ ರಾಜ್ಯಕ್ಕೆ ಇದು ಮಾರಕ ಆಘಾತವೇ ಸರಿ. ರಾಜ್ಯದ ಜಲಾಶಯಗಳಲ್ಲಿ ಈಗಾಗಲೇ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಭಾವವಿರು ವಾಗ, ಈ ಪ್ರಮಾಣದ ನೀರನ್ನು ಹೊರಗೆ ಬಿಡುವುದು ಜಲಾಶಯಗಳ ಸಂಗ್ರಹದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಶಿಫಾರಸನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ನಿರ್ವಹಣಾ ಪ್ರಾಧಿಕಾರದ ನಿರ್ಧಾರ ಅಂತಿಮ.

Viswhavani Editorial: ರಾಜ್ಯಕ್ಕೆ ಅನ್ಯಾಯದ ಸರಣಿ

Viswhavani Editorial: ರಾಜ್ಯಕ್ಕೆ ಅನ್ಯಾಯದ ಸರಣಿ

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿ ನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಲು ಕರ್ನಾಟಕವು ತಮಿಳು ನಾಡು, ಕೇರಳ ಅಥವಾ ಪುದುಚೇರಿಯಿಂದ ಸಮ್ಮತಿ ಪಡೆಯಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.

Vishwavani Editorial: ಸಿಜೆಪಿ ಕಲಿಸಿದ ಪಾಠ

Vishwavani Editorial: ಸಿಜೆಪಿ ಕಲಿಸಿದ ಪಾಠ

ಸೋರಿಕೆ ತಿಳಿದು ಬಂದಾಗಲೇ ಕೇಂದ್ರ ಸಿಬಿಐ ತನಿಖೆ, ಮರುಪರೀಕ್ಷೆ ಸೇರಿದಂತೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ಆದರೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಬಾರದ, ಸೋನಂ ವಾಗ್ಚುಕ್ ಸತ್ಯಾಗ್ರಹ ನಿರತರಾಗಿ 20 ದಿನ ಕಳೆದರೂ ಉಸಿರೆತ್ತದ ಕೇಂದ್ರ ಸರಕಾರದ ಮೌನವೇ ಅದಕ್ಕೆ ದುಬಾರಿ ಯಾಗಿಬಿಟ್ಟಿದೆ.

Vishwavani Editorial: ಬದಲಾವಣೆಯ ಗಾಳಿ

Vishwavani Editorial: ಬದಲಾವಣೆಯ ಗಾಳಿ

ನೀಟ್ ಅಕ್ರಮದ ಕುರಿತ ಕೂಗು ಆರಂಭವಾದಾಗಲೇ ಸರಕಾರ ಮೌನ ಮುರಿದು ಕ್ರಮ ಕೈಗೊಂಡಿದ್ದರೆ ಅದರ ಘನತೆ ಇಷ್ಟರ ಮಟ್ಟಿಗೆ ಮುಕ್ಕಾಗುತ್ತಿರಲಿಲ್ಲ. ನೀಟ್‌ನಂಥ ಉನ್ನತ ಶಿಕ್ಷಣ ಪರೀಕ್ಷೆಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣಾತಿ ಕಠಿಣ ಕ್ರಮಗಳು, ಆರೋಪಿಗಳಿಗೆ ಶೀಘ್ರಗತಿಯಲ್ಲಿ ತನಿಖೆ ಮುಗಿಸಿ ಜೈಲುವಾಸ ಆಗುವ ಅಗತ್ಯವಿದೆ. ಇದನ್ನು ಕರ್ನಾಟಕದ ಕೆಪಿಎಸ್‌ಸಿಗೂ ವಿಸ್ತರಿಸಬೇಕು. ನಿನ್ನೆ ಕೂಡ ಇಲ್ಲಿ ಭಾರಿ ಅಕ್ರಮವೊಂದು ಬಯಲಾಗಿದೆ.

Vishwavani Editorial: ಕಾವೇರಿ ನೀರಿನ ಮಾತುಕತೆ

Vishwavani Editorial: ಕಾವೇರಿ ನೀರಿನ ಮಾತುಕತೆ

ಸಿಎಂ ಭೇಟಿಗೆ ವಿಜಯ್ ಸಮಯ ಕೇಳಿದ್ದು, ಅವರ ಭೇಟಿಗೆ ಆಗಸ್ಟ್ 3ಕ್ಕೆ ಸಿಎಂ ಸಮಯಾವಕಾಶ ನೀಡಿದ್ದಾರೆ. ಈ ಭೇಟಿಯ ವೇಳೆ ಮೇಕೆದಾಟು ಯೋಜನೆ, ಕಾವೇರಿ ನೀರು ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ, ಈ ಕುರಿತ ಮಾತುಕತೆಯಲ್ಲಿ ಧನಾತ್ಮಕ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸುವುದರಲ್ಲಿ ಆರ್ಥವಿದೆ. ಸದ್ಯ ಉಭಯ ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿದೆ.

Vishwavani Editorial: ಗೃಹಜ್ಯೋತಿ ಸಮೀಕ್ಷೆ ಗೊಂದಲ

Vishwavani Editorial: ಗೃಹಜ್ಯೋತಿ ಸಮೀಕ್ಷೆ ಗೊಂದಲ

ಆಧಾರ್ ಕಾರ್ಡ್, ಫೋಟೋ, ವೋಟರ್ ಐಡಿ, ಮನೆ ಬಾಡಿಗೆ ಅಥವಾ ಮಾಲಿಕತ್ವದ ದಾಖಲೆ ನೀಡಬೇಕಿದೆ. ಆದರೆ ಜಾತಿ ಪ್ರಮಾಣ ಪತ್ರ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಕೂಡ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಸೇರಿಸಿರುವುದು ಅನುಮಾನ ಮೂಡಿಸುತ್ತಿದೆ. ಎಸ್ಕಾಂನವರು ಪ್ಯಾನ್ ಕಾರ್ಡ್ ವಿವರ ತೆಗೆದುಕೊಂಡು ಏನು ಮಾಡಬೇಕಿದೆ? ತೆರಿಗೆ ಪಾವತಿದಾರರನ್ನು ಯೋಜನೆಯಿಂದ ಹೊರಗಿ ಡುವ ಚಿಂತನೆ ಇದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ.

Vishwavani Editorial: ಪ್ರತಿಭಟನೆಯನ್ನು ಪರಿಗಣಿಸಲಿ

Vishwavani Editorial: ಪ್ರತಿಭಟನೆಯನ್ನು ಪರಿಗಣಿಸಲಿ

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿತ ಕಾಂಗ್ರೆಸ್ ನಾಯಕರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ದೇಶದ ಇತರ ನಗರಗಳಿಗೂ ಈ ಪ್ರತಿಭಟನೆ ಹರಡುವ ಸೂಚನೆ ಇದೆ. ಸಿಜೆಪಿಯನ್ನು ‘ವ್ಯಂಗ್ಯಪೂರ್ವಕವಾಗಿ ಹುಟ್ಟಿಕೊಂಡ ಒಂದು ಸಂಘಟನೆ’ ಎಂದು ಹಗುರವಾಗಿ ಪರಿಗಣಿಸಿದ್ದೇ ಸರಿಯಲ್ಲ. ಸಿಜೆಪಿಯ ಬೇಡಿಕೆಯೂ ನ್ಯಾಯಯುತವಾಗಿಯೇ ಇದೆ.

Vishwavani Editorial: ಫಿಫಾ ರೋಮಾಂಚನ ಮುಕ್ತಾಯ

Vishwavani Editorial: ಫಿಫಾ ರೋಮಾಂಚನ ಮುಕ್ತಾಯ

ಹಲವು ಕಾರಣಗಳಿಗಾಗಿ ಈ ಸಲದ ಕ್ರೀಡಾಕೂಟ ನೆನಪಿನಲ್ಲಿ ಉಳಿಯುವಂತಿದೆ. ಒಂದೂವರೆ ತಿಂಗಳ ಕಾಲದ ನೂರಾರು ಕ್ರೀಡಾಳುಗಳು ಕ್ರೀಡಾಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಫುಟ್ಬಾಲ್ ಕ್ಷಣ ಕ್ಷಣವೂ ಆಟಗಾರರನ್ನೂ ನೋಡುಗರನ್ನೂ ಅಲರ್ಟ್ ಆಗಿರಿಸುವ, ರೋಮಾಂಚನ ನೀಡುವ ಆಟ. ಈ ಸಲದ ಪಂದ್ಯಾವಳಿಯಲ್ಲಿ ಆಡಿದ ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ, ಬ್ರೆಜಿಲ್‌ನ ನೆಯ್ಮಾರ್, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಫುಟ್ಬಾಲ್ ಕ್ಷೇತ್ರ ನೀಡಿದ ದಂತಕತೆ ಗಳಂಥ ಮಹಾನ್ ಆಟಗಾರರು

Vishwavani Editorial: ಮುಂಗಾರು ಅಧಿವೇಶನದ ನಿರೀಕ್ಷೆ

Vishwavani Editorial: ಮುಂಗಾರು ಅಧಿವೇಶನದ ನಿರೀಕ್ಷೆ

ಲೋಕಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸರಕಾರ ಮುಂದಿಡಲು ಕಾಯುತ್ತಿದೆ. ಆದರೆ ಇದರಲ್ಲಿ ಸೀಮಾ ನಿರ್ಣಯ ಮಾಡುವಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದು ಎಂಬ ಕೂಗು ಇದೆ. ಇದಲ್ಲದೆ ಅಭಿವೃದ್ಧಿ ಹೊಂದಿದ ಭಾರತ ಶಿಕ್ಷಣ ಪ್ರತಿಷ್ಠಾನ ವಿಧೇಯಕ, ಡೋಪಿಂಗ್ ವಿರೋಧಿ ವಿಧೇಯಕ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ತಿದ್ದುಪಡಿ ಮಸೂದೆಗಳೂ ಮೇಜು ಏರಬಹುದು.

Vishwavani Editorial: ದುರಂತದ ಹೊಣೆ ಯಾರು?

Vishwavani Editorial: ದುರಂತದ ಹೊಣೆ ಯಾರು?

11 ಮಂದಿ ಕ್ರೀಡಾಭಿಮಾನಿಗಳ ಸಾವು ಕೈಯಾರೆ ತಂದುಕೊಂಡ ದುರಂತ, ಅದಕ್ಕೆ ಯಾರೂ ಹೊಣೆಯಲ್ಲ, ಎಂದು ಸರಕಾರವೇ ನಿರ್ಧರಿಸಿ ಅಚ್ಚುಕಟ್ಟಾಗಿ ಕೈ ತೊಳೆದುಕೊಂಡಿದೆ. ಸತ್ತವರು ಪ್ರಾಣ ಬಿಟ್ಟದ್ದೇ ಬಂತು, ಅವರ ಕುಟುಂಬಕ್ಕೆ ಸರಿಯಾದ ಪರಿಹಾರ ಸಿಕ್ಕಿತೋ ಇಲ್ಲವೋ ಅದೂ ತಿಳಿದಿಲ್ಲ. ಪರಿಹಾರ ದೊರೆತರೆ ಹೋದ ಜೀವ ಬಂದಂತಲ್ಲ, ಆ ಮಾತು ಬೇರೆ. ಹಾಗಾದರೆ 11 ಮಂದಿಯ ಸಾವಿಗೆ ಕಾರಣ ಯಾರು?

Vishwavani Editorial: ಬಿಸಿ ತಾಪಮಾನ ನಿರ್ವಹಣೆ

Vishwavani Editorial: ಬಿಸಿ ತಾಪಮಾನ ನಿರ್ವಹಣೆ

ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಸಿ ವಾತಾವರಣ. ಹೀಟ್ ವೇವ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹೊತ್ತಿನಲ್ಲಿ ಬೀಚ್‌ಗಳಿಗೆ ಹೋದರೆ ಮೈ ಸುಡುವ ಬಿಸಿಲು ಕಾಣಿಸುತ್ತಿದೆ. ಮಳೆ ಮಾರುತಗಳೂ ದುರ್ಬಲವಾದ ಮುನ್ಸೂಚನೆಯಲ್ಲಿ ತಿಂಗಳ ಹಿಂದೆಯೇ ನೀಡಿದ್ದವು. ಇದು ಸ್ಪಷ್ಟವಾಗಿ ಬರದ ಸೂಚನೆ. ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಿ ಎಂದು ಪ್ರಧಾನಿಗೆ ಸಿಎಂ ಪತ್ರ ಬರೆದಿದ್ದಾರೆ.

Vishwavani Editorial: ನಾಡಗೀತೆಯಲ್ಲಿ ಬೌದ್ಧ ಧರ್ಮ

Vishwavani Editorial: ನಾಡಗೀತೆಯಲ್ಲಿ ಬೌದ್ಧ ಧರ್ಮ

ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ಬೌದ್ಧ ಧರ್ಮದ ಹೆಸರನ್ನೂ ಸೇರ್ಪಡೆ ಗೊಳಿಸಲು ಚಿಂತನೆ ನಡೆದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಈ ಮಹತ್ವದ ಸಲಹೆ ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಕೆಯಾಗಿದೆ. ಕುವೆಂಪು ಅವರು ಬರೆದಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಇತ್ತು.

Vishwavani Editorial: ಭ್ರಷ್ಟರಿಗೆ ಶಿಕ್ಷೆಯಾಗಲಿ

Vishwavani Editorial: ಭ್ರಷ್ಟರಿಗೆ ಶಿಕ್ಷೆಯಾಗಲಿ

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎಂಬಂತೆ ಆಗಿರುವ ಕೆಪಿಎಸ್‌ಸಿಯ ದುರಸ್ತಿಯನ್ನು ಎಲ್ಲಿಂದ ಆರಂಭಿಸುವುದು ಎಂಬುದು ಲೋಕಾಯುಕ್ತರಿಗೂ, ಸಚಿವರಿಗೂ ಗೊತ್ತಾಗುತ್ತಿಲ್ಲ. ‘ನನಗೆ ಬಿಟ್ಟರೆ ಈ ಸಂಸ್ಥೆಯನ್ನೇ ರದ್ದುಪಡಿಸುವೆ’ ಎಂದು ಪ್ರಿಯಾಂಕ ಖರ್ಗೆ ಅವರು ವ್ಯಕ್ತಪಡಿಸಿರುವ ಆಕ್ರೋಶದಲ್ಲಿ ವಾಸ್ತವ ಇದೆ. ಮಾಧ್ಯಮಗಳಿಗೂ ಕೆಪಿಎಸ್‌ಸಿಯಲ್ಲಿ ತಳ ಊರಿರುವ ಭ್ರಷ್ಟರ ಬಗ್ಗೆ ಬರೆದೂ ಬರೆದೂ ಶಾಯಿ ಬತ್ತಿಹೋಗಿದೆ ಬಿಟ್ಟರೆ ಫಲವೇನೂ ಸಿಕ್ಕಿದಂತಿಲ್ಲ

Vishwavani Editorial: ಎಥೆನಾಲ್ ಮಿಶ್ರಣದ ಗೊಂದಲ

Vishwavani Editorial: ಎಥೆನಾಲ್ ಮಿಶ್ರಣದ ಗೊಂದಲ

ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯ ಬಗ್ಗೆ ಕೇಂದ್ರ ಸರಕಾರ ಹಲವು ಸಮರ್ಥನೆಗಳನ್ನು ನೀಡಿದೆ. ದೇಶಾದ್ಯಂತ ಪೆಟ್ರೋಲ್ ಬಳಕೆದಾರರಲ್ಲಿ ಹಬ್ಬಿರುವ ಪ್ರಶ್ನೆ, ಸಂಶಯ, ಆತಂಕಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಒಂದೆಡೆ, ಇರಾನ್- ಅಮೆರಿಕ ನಡುವೆ ನಿಂತಿದ್ದ ಕದನ ಮತ್ತೆ ಉಲ್ಬಣಿಸಿದ್ದು, ಪರಿಣಾಮ ಶರವೇಗದಲ್ಲಿ ಕಚ್ಚಾ ತೈಲ ಬೆಲೆಯೂ ಏರುತ್ತಿದೆ. ಪೆಟ್ರೋಲ್- ಡೀಸೆಲ್ ಬೆಲೆಯೂ ಮತ್ತೆ ಹೊರೆಯಾಗುವ ಆತಂಕದಲ್ಲಿರುವುದು ನಿಜ.

Vishwavani Editorial: ದೇವಾಲಯದ ಭದ್ರತೆ

Vishwavani Editorial: ದೇವಾಲಯದ ಭದ್ರತೆ

ಎಲ್ಲ ಶ್ರದ್ಧಾ ತಾಣಗಳಲ್ಲೂ ಭಕ್ತರು ತಮ್ಮ ಭಕ್ತಿ ಭಾವನೆಗೆ ತಕ್ಕಂತೆ ಹಣ, ಚಿನ್ನ, ಬೆಳ್ಳಿ ಇತ್ಯಾದಿ ಗಳನ್ನು ಕಾಣಿಕೆಯಾಗಿ, ಹರಕೆಯಾಗಿ ಸಮರ್ಪಿಸುತ್ತಾರೆ. ಅವು ಭಕ್ತರು ಪರಿಶ್ರಮದಿಂದ ಸಂಪಾದಿಸಿದ, ಶ್ರದ್ಧೆ ಯಿಂದ ಸಮರ್ಪಿಸಿದ ಸ್ವತ್ತು. ಅದರ ಅಪಹರಣ ಎಂದರೆ ಭಕ್ತರ ಶ್ರದ್ಧೆಗೇ ಬಗೆಯುವ ದೋಖಾ. ಈ ಭದ್ರತಾ ಕ್ರಮವೇನೋ ಸರಿ. ಇದರ ಜೊತೆಗೇ ಮುಜರಾಯಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ಸೌಲಭ್ಯಗಳನ್ನು ನೀಡುವತ್ತಲೂ ಸರಕಾರ ಗಮನ ಹರಿಸಬೇಕಿದೆ.

Vishwavani Editorial: ರೋಡ್ ರೇಜ್‌ಗೆ ತಡೆ ಹಾಕಿ

Vishwavani Editorial: ರೋಡ್ ರೇಜ್‌ಗೆ ತಡೆ ಹಾಕಿ

ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು ನಗರಗಳನ್ನು ಕಂಗೆಡಿಸುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಿಳಿದರೆ ಸಾಕು ಒಂದಲ್ಲ ಒಂದು ರೋಡ್ ರೇಜ್ ಎದುರಿಸಬೇಕು ಎಂಬ ಪರಿಸ್ಥಿತಿ ಇದೆ. ಇತ್ತೀಚೆಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಒಂದು ಗುಂಪು ಹಲ್ಲೆ ಪ್ರಕರಣ, ಯಾರದೋ ಮೊಬೈಲ್‌ನಲ್ಲಿ ದಾಖಲಾಗಿ ವೈರಲ್ ಆದುದರಿಂದ ಸುದ್ದಿಯಾಯಿತು

Vishwavani Editorial: ಮತ್ತೆ ಕದನದ ಕಳವಳ

Vishwavani Editorial: ಮತ್ತೆ ಕದನದ ಕಳವಳ

ಯುದ್ಧದ ಹಿನ್ನೆಲೆಯಲ್ಲಿ ಸತತವಾಗಿ ಏರಿದ್ದ ತೈಲ ಬೆಲೆಗಳು ಇತ್ತೀಚೆಗೆ ಒಂದು ಹದಕ್ಕೆ ಬಂದಿದ್ದವು. ಆದರೆ ಮತ್ತೆ ಅವು ಏರಲಿದ್ದು, ಹಣದುಬ್ಬರದ ಭೂತ ಮತ್ತೆ ತಲೆದೋರುತ್ತಿದೆ. ಕದನವಿರಾಮ ಒಪ್ಪಂದವನ್ನು ಇರಾನ್ ಉಲ್ಲಂಸಿದೆ ಎಂಬುದು ಅಮೆರಿಕ ಆರೋಪ. ಆದರೆ ಅಮೆರಿಕ ಹಾಗೂ ಇಸ್ರೇಲ್ ಕೂಡ ಮತ್ತೊಂದು ದೇಶದ ಮುಖ್ಯಸ್ಥನನ್ನು ಹೊಡೆದುರುಳಿಸಿ ಅಂತಾರಾಷ್ಟ್ರೀಯ ಕಾನೂನನ್ನು ಬಹು ಹಿಂದೆಯೇ ಉಲ್ಲಂಘಿಸಿವೆ.

Vishwavani Editorial: ಹೊಸ ಮೆಡಿಕಲ್ ಕಾಲೇಜು

Vishwavani Editorial: ಹೊಸ ಮೆಡಿಕಲ್ ಕಾಲೇಜು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೋಲಾರ ಹಾಗೂ ವಿಜಯಪುರ. ಇವುಗಳ ಆರಂಭಕ್ಕೂ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಲು ಸರಕಾರ ಸಿದ್ಧವಾಗಿದೆ. ಆದರೆ ಅರ್ಹತೆ, ಮಾನದಂಡಗಳ ಪೂರೈಕೆ ಸರಿಯಾಗಿ ಆಗದಿದ್ದರೆ ಅವುಗಳಿಗೂ ಇದೇ ಗತಿ ಆಗಲಿದೆ. ರಾಜ್ಯಕ್ಕೆ ಹೊಸ ಮೆಡಿಕಲ್ ಕಾಲೇಜುಗಳು ಇನ್ನಷ್ಟು ಬೇಕು. ರಾಜಕೀಯ ನಾಯಕರು ಅವು ತಮ್ಮ ಊರಲ್ಲಿ ಆಗಲಿ ಎಂದು ಬಯಸುತ್ತಾರೆ. ಆದರೆ ಶೈಕ್ಷಣಿಕ- ಇತರ ಮೂಲಸೌಕರ್ಯಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

Loading...