ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

Dr Sadhanashree Column: ಹಬ್ಬ ಮುಗಿದ ಮೇಲೆ ದೇಹಕ್ಕೆ ರಜೆ ಏಕೆ ?

ಹಬ್ಬ ಮುಗಿದ ಮೇಲೆ ದೇಹಕ್ಕೆ ರಜೆ ಏಕೆ ?

ಮನೆಯ ಒಬ್ಬರಿಗೆ ಆರೋಗ್ಯ ಕೆಟ್ಟರೆ, ಮತ್ತೊಬ್ಬರಿಗೆ, ನಂತರ ಮತ್ತೊಬ್ಬರಿಗೆ, ಹೀಗೆ ಇಡೀ ಕುಟುಂಬವೇ ಹಬ್ಬದ ನಂತರ ವಿಶ್ರಾಂತಿಗೆ ಜಾರುವುದುಂಟು. ಹಾಗಾದರೆ ಹಬ್ಬದ ಸಂಭ್ರಮದ ಜೊತೆಗೆ ಆರೋಗ್ಯದ ತೊಂದರೆಯೂ ಒಂದು ಕೊಂಡರೆ ಇನ್ನೊಂದು ಉಚಿತ ಎಂಬ ಕೊಡುಗೆಯೇ? ಖಂಡಿತವಾಗಿಯೂ ಅಲ್ಲ. ನಮ್ಮ ಹಬ್ಬಗಳು ಆರೋಗ್ಯವನ್ನು ಹಾಳು ಮಾಡುವುದಕ್ಕಾಗಿ ಬಂದಿಲ್ಲ.

Fitness Tips: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಎದುರಾಗುವ ಸಮಸ್ಯೆ ಒಂದೆರಡಲ್ಲ; ಈ ಬಗ್ಗೆ ತಜ್ಞರ ಸಲಹೆ ಏನು?

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವ ಮುನ್ನ ಈ ವಿಚಾರ ತಿಳಿಯಿರಿ

Work Out On An Empty Stomach: ಮುಂಜಾನೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕೇ? ಅಥವಾ ಬೆಳಗ್ಗೆ ಏನಾದರೂ ತಿಂಡಿ ಸೇವಿಸಿ ವ್ಯಾಯಾಮ ಮಾಡಬಹುದೇ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಖಾಲಿ ಹೊಟ್ಟೆಯಲ್ಲಿ ಕಸರತ್ತು ಮಾಡುವುದರಿಂದ ಶರೀರದಲ್ಲಿರುವ ಅನಗತ್ಯ ಕೊಬ್ಬು ಬೇಗನೆ ಕರಗಿ ತೂಕ ಇಳಿಸಬಹುದು ಎನ್ನುವ ನಂಬಿಕೆ ಹಲವರಲ್ಲಿದೆ. ಇದೀಗ ವೈದ್ಯಕೀಯ ತಜ್ಞರೊಬ್ಬರು ಈ ಬಗ್ಗೆ ಸಲಹೆ ನೀಡಿದ್ದಾರೆ.

Vishwavani Health: ಕುಡಿಯುವ ನೀರಿನಿಂದಲೇ  ಶುಗರ್ ಬರುತ್ತಾ? ಏನಂತಾರೆ ತಜ್ಞರು ? Video

ನೀರಿನಿಂದ ಮಧುಮೇಹ ಹೆಚ್ಚಾಗುತ್ತಾ ?

ಮಧುಮೇಹ ಮತ್ತು ಕುಡಿಯುವ ನೀರಿಗೆ ಸಂಬಂಧವಿದೆಯೇ? ಕುಡಿಯುವ ನೀರಿನಿಂದ ಮಧುಮೇಹ ಹೆಚ್ಚಾಗುವುದು, ಕುಡಿಯುವ ನೀರಿನಿಂದ ಕೂದಲು ಉದುರುವುದೇ ? ಆರೋ, ಮಿನರಲ್, ಬಾಟಲ್ ವಾಟರ್ ಯಾವುದು ಒಳ್ಳೆಯದು? ಎನ್ನುವ ಕುರಿತು ಮಧುಮೇಹ ತಜ್ಞರಾದ ಡಾ. ಸುಮನ್ ಅವರು ವಿಶ್ವವಾಣಿ ಹೆಲ್ತ್ ಯುಟ್ಯೂಬ್‌ ಚಾನಲ್‌ನಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

World First Aid Day 2026: ಸೆಪ್ಟೆಂಬರ್ 12 ‘ವಿಶ್ವ ಪ್ರಥಮ ಚಿಕಿತ್ಸಾ ದಿನʼ; ಈ ದಿನದ ಪ್ರಾಮುಖ್ಯತೆ ಏನು?

ಸೆ.12 ‘ವಿಶ್ವ ಪ್ರಥಮ ಚಿಕಿತ್ಸಾ ದಿನʼ; ಈ ದಿನದ ಪ್ರಾಮುಖ್ಯತೆ ಏನು?

World First Aid Day 2026: ವಿಶ್ವದಾದ್ಯಂತ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರದಂದು ‘ವಿಶ್ವ ಪ್ರಥಮ ಚಿಕಿತ್ಸಾ ದಿನʼ ಎಂದು ಆಚರಿಸಲಾಗುತ್ತದೆ. 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸೊಸೈಟಿ ಈ ಆಚರಣೆಯನ್ನು ಜಾರಿಗೆ ತಂದಿದೆ. ಈ ಕುರಿತ ವರದಿ ಇಲ್ಲಿದೆ.

ಮೆಡ್ ಜಿನೋಮ್ ನಿಂದ ಭಾರತದಲ್ಲಿ ಸುಧಾರಿತ ನಿಖರ ಕ್ಯಾನ್ಸರ್ ಆರೈಕೆಗೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಬಿಡುಗಡೆ

ನಿಖರ ಕ್ಯಾನ್ಸರ್ ಆರೈಕೆಗೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಬಿಡುಗಡೆ

ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ತೀವ್ರವಾಗಿ ಹೆಚ್ಚುತ್ತಿದ್ದು, ಪ್ರತಿವರ್ಷ ಅಂದಾಜು 1.5 ಮಿಲಿಯನ್ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಸವಾಲೆಂದರೆ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ರೋಗದ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದು.

ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳು ಹಾಗೂ ಅವುಗಳನ್ನು ಸೇವಿಸಬೇಕಾದ ವಿಧಾನ ಇಲ್ಲಿದೆ!

ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳ ಸೇವನೆ ಮಾಡಿ!

Health Tips: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಫಿಲ್ಟರ್ ಗಳಾಗಿ ಕಾರ್ಯನಿರ್ವಹಿಸುತ್ತದೆ. ದಿನದ 24 ಗಂಟೆಯೂ ಸದ್ದಿಲ್ಲದೆ ಕೆಲಸ ಮಾಡಿ ತ್ಯಾಜ್ಯವನ್ನು ಹೊರಹಾಕುತ್ತವೆ. ಆದರೆ ಇತ್ತೀಚೆಗೆ ಮೂತ್ರಪಿಂಡ ರೋಗಗಳ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರವಾಗಿದೆ‌. ದಿನನಿತ್ಯದ ಆಹಾರದಲ್ಲಿ ಕಿಡ್ನಿಯ ಆರೋಗ್ಯ ಮತ್ತು ದೇಹದಲ್ಲಿರುವ ಪೊಟ್ಯಾಸಿಯಮ್ ಮಟ್ಟಕ್ಕೆ ಸೂಕ್ತವಾದ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಪರೂಪದ ಮಲ್ಟಿಪಲ್ ಮೈಲೋಮಾದಿಂದ ನರಳುತ್ತಿದ್ದ ವ್ಯಕ್ತಿಗೆ ದಕ್ಕಿತು ಓಡಾಡುವ ಶಕ್ತಿ ಮತ್ತು ಹೊಸ ಜೀವನ

ಮಲ್ಟಿಪಲ್ ಮೈಲೋಮಾದಿಂದ ನರಳುತ್ತಿದ್ದ ವ್ಯಕ್ತಿಗೆ ಹೊಸ ಜೀವನ

ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಫಿಸಿಯೋಥೆರಪಿಸ್ಟ್ ಹಾಗೂ ವಿಭಾಗದ ಮುಖ್ಯಸ್ಥ ರಾದ (ಎಚ್‌ಓಡಿ) (ಸಿಒಒ) ಬಾಬು ಜಾರ್ಜ್ ಅವರ ನೇರ ಮೇಲ್ವಿಚಾರಣೆ ಮತ್ತು ಆಪ್ತ ಆರೈಕೆಯಲ್ಲಿ, ಸದರಿ ರೋಗಿಯು ಬರೋಬ್ಬರಿ ಒಂಬತ್ತು ತಿಂಗಳುಗಳ ಕಾಲ ಅತ್ಯಂತ ಎಚ್ಚರಿಕೆ ಯಿಂದ ನಿಯಂತ್ರಿಸಲ್ಪಟ್ಟ ಪುನರ್ವಸತಿ ಚಿಕಿತ್ಸಾ ಪ್ರಕ್ರಿಯೆಗೆ ಒಳಗಾದರು.

Vishwavani Health: ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ; ಹೆತ್ತವರು ಮಾಡಬೇಕಾದ್ದೇನು?

ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ

Mental Health: ಇತ್ತೀಚಿನ ದಿನಗಳಲ್ಲಿ ಜೆನ್ ಝೀಗಳಲ್ಲಿ ಮಾನಸಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಭಯ, ಖಿನ್ನತೆ, ಆತಂಕ. ಮುಂದಿನ ಹತ್ತು ವರ್ಷಗಳಲ್ಲಿ ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯವೇ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳು ಯಾವುದು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಬೆಳಗಿನ ತಿಂಡಿಗೆ ಹಣ್ಣು ಸೇವಿಸುತ್ತಿದ್ದೀರಾ? ಈ ಅಭ್ಯಾಸ ಇಂದೇ ಬಿಟ್ಟುಬಿಡಿ; ಆರೋಗ್ಯ ತಜ್ಞರ ಕಿವಿಮಾತು ಇಲ್ಲಿದೆ

ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ ಉತ್ತಮ?

Health Tips: ಪ್ರತಿದಿನ ತಾಜಾ ಹಣ್ಣುಗಳ ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಪೋಷಕಾಂಶಗಳು ಹಣ್ಣಿನಲ್ಲಿ ಸಮೃದ್ಧವಾಗಿವೆ. ಆದರೆ ತಜ್ಞರ ಪ್ರಕಾರ, ನಮಗೆ ಇಷ್ಟ ಬಂದಂತೆ ನಾವು ಹಣ್ಣುಗಳನ್ನು ಸೇವಿಸುವಂತಿಲ್ಲ. ಯಾವಾಗ ಮತ್ತು ಹೇಗೆ ಹಣ್ಣುಗಳನ್ನು ತಿನ್ನುತ್ತೇವೆ ಎಂಬುದು ಮುಖ್ಯ.

ರಕ್ತದೊತ್ತಡ ನಿಯಂತ್ರಣ ಮಾಡಲು ಈ  ನೈಸರ್ಗಿಕ ಪಾನೀಯಗಳ ಸೇವನೆ ಮಾಡಿ!

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ನೈಸರ್ಗಿಕ ಪಾನೀಯಗಳು

Health Tips: ಇತ್ತೀಚೆಗೆ ಹೆಚ್ಚಿನ ಜನರಲ್ಲಿ ರಕ್ತದೊತ್ತಡ ಸಮಸ್ಯೆ ಅನ್ನೋದು ಕಾಡುತ್ತಿದೆ. ಇದಕ್ಕೆ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯೇ ಕಾರಣ. ಹೀಗಾಗಿ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಮುಖ್ಯವಾಗಿ ಆರೋಗ್ಯ ತಜ್ಞರು ಕೆಲವು ನೈಸರ್ಗಿಕ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯಲು ಸಲಹೆಯನ್ನು ನೀಡಿದ್ದಾರೆ.

ಬೆಂಡೆಕಾಯಿ ಬಳಕೆ ಬಗ್ಗೆ ತಜ್ಞರು ನೀಡಿರುವ ಪ್ರಮುಖ ಸಲಹೆಗಳಿವು!

ಬೆಂಡೆಕಾಯಿ ಆರೋಗ್ಯಕ್ಕೆ ಒಳಿತೇ?

Health Tips: ಸರಳವಾಗಿ ಕಾಣುವ ಈ ಬೆಂಡೆಕಾಯಿಯಲ್ಲಿಅಪಾರ ಪ್ರಮಾಣದ ಪೋಷಕಾಂಶಗಳಿದ್ದು ಬಹಳಷ್ಟು ಹಿತಕಾರಿ. ಆರೋಗ್ಯವನ್ನು ಬೆಂಬಲಿಸುವ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳನ್ನು ಸಹ ಒಳಗೊಂಡಿದೆ. ದಿನ ನಿತ್ಯ ಆಹಾರದಲ್ಲಿ ಬೆಂಡೆಕಾಯಿ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.

Revolution in ESI hospitals : ಹಾಸಿಗೆ ಸಾಮರ್ಥ್ಯ ಹೆಚ್ಚಳ, ಐಸಿಯು, ಮಾಡ್ಯುಲರ್ ಒಟಿ ಅಳವಡಿಕೆ: ರಾಜ್ಯದಲ್ಲಿ ಸರ್ಜರಿ ಕ್ರಾಂತಿ ಮಾಡುತ್ತಿರುವ ಇಎಸ್‌ಐ ಆಸ್ಪತ್ರೆಗಳು

ಮೇಲ್ದರ್ಜೆಗೇರಿದ ರಾಜ್ಯದ 7 ಇಎಸ್‌ʼಐ ಆಸ್ಪತ್ರೆಗಳು

ಬೆಂಗಳೂರಿನ ಇಂದಿರಾನಗರ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಬೆಳಗಾವಿ ಮತ್ತು ದಾಂಡೇಲಿ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ತೀವ್ರ ನಿಗಾ ಘಟಕ (ಐಸಿಯು), ಮಾಡ್ಯುಲರ್ ಆಪರೇಷನ್ ಥಿಯೇಟರ್ (ಒಟಿ) ಉಪಕರಣ ಅಳವಡಿಕೆ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್, ಸಿಬ್ಬಂದಿ ನೇಮಕ ಸೇರಿ ಇತರ ವೈದ್ಯಕೀಯ ಸೌಕರ್ಯ ಕಲ್ಪಿಸಲಾಗುತ್ತಿದೆ.

ಸೆ.27ರಂದು ಹೈದರಾಬಾದ್‌ನಲ್ಲಿ ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಪಿಂಕ್ ಪವರ್ ರನ್ 3.0 ಆಯೋಜನೆ

ಸೆ.27ಕ್ಕೆ ಹೈದರಾಬಾದ್‌ನಲ್ಲಿ ಪಿಂಕ್ ಪವರ್ ರನ್ 3.0 ಆಯೋಜನೆ

Pink Power Run 3.0: ಸುಧಾ ರೆಡ್ಡಿ ಫೌಂಡೇಶನ್ ಹಾಗೂ ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಯಾದ ಎಂಇಐಎಲ್ ಫೌಂಡೇಶನ್ ಜಂಟಿಯಾಗಿ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಮತ್ತು ಸಮುದಾಯ ಫಿಟ್ನೆಸ್ ಉಪಕ್ರಮವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ‘ಪಿಂಕ್ ಪವರ್ ರನ್ʼ ಮೂರನೇ ಆವೃತ್ತಿಯನ್ನು ಇದೇ ಸೆ.27 ರಂದು ಆಯೋಜಿಸಲಾಗಿದೆ.

Vishwavani health: ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು? ಇಲ್ಲಿದೆ ಟಿಪ್ಸ್‌ Video

ಮದುವೆ ಬಳಿಕ ದಪ್ಪವಾಗದಿರಲು ಏನು ಮಾಡಬೇಕು?

ಸಾಮಾನ್ಯವಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಹೆಚ್ಚಿನವರು ದಪ್ಪವಾಗುತ್ತಾರೆ. ದೇಹದ ತೂಕವನ್ನು ನಿಯಂತ್ರಿಸುವುದು ಹೆಚ್ಚಿನವರಿಗೆ ಕಷ್ಟವಾಗುತ್ತದೆ, ಯಾಕೆ ಹೀಗೆ, ಇದಕ್ಕೆ ಕಾರಣ ಏನಿರಬಹುದು, ಇದನ್ನು ತಡೆಯಲು ಏನು ಮಾಡಬೇಕು ಎನ್ನುವ ಕುರಿತು ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವಿದ್ಯಾ ಭಟ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

Vishwavani Health: ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು? ಏನಿದಕ್ಕೆ ಪರಿಹಾರ?

ಜೆನ್ ಝೀಗಳನ್ನು ಕಾಡುತ್ತಿದೆ ಹಲವು ಆರೋಗ್ಯ ಸಮಸ್ಯೆಗಳು

Gen Z: ಕಣ್ಣುರಿ, ಕತ್ತುನೋವು ಸೇರಿ ಜೆನ್ ಝೀಗಳನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಮುಖ್ಯವಾಗಿ ಸಣ್ಣ ವಯಸ್ಸಿಗೇ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

Belly Fat: ಹೊಟ್ಟೆಯ ಬೊಜ್ಜು ನಿಯಂತ್ರಣ ಮಾಡಲು ಆಹಾರಕ್ರಮದಲ್ಲಿ ಏನು ಬದಲಾವಣೆ ಅಗತ್ಯ?

ಹೊಟ್ಟೆಯ ಬೊಜ್ಜು ನಿಯಂತ್ರಣ ಹೇಗೆ?

Health Tips: ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜಿಗೆ ಕಾರಣ ವಾಗುತ್ತಿದೆ. ಅತೀಯಾದ ಹೊರಗಿನ ಆಹಾರ, ಕರಿದ ಆಹಾರ ತಿನ್ನುವುದರಿಂದ ಪೌಷ್ಟಿಕಾಂಶದ ಸಮ ತೋಲನವನ್ನು ಹಾಳುಮಾಡುತ್ತದೆ. ಇದರಿಂದ ಕರುಳಿನ ಆರೋಗ್ಯ ಕೆಟ್ಟು ಹೊಟ್ಟೆಯ ಭಾಗದ ಸ್ನಾಯುಗಳ ಸುತ್ತಲೂ 'ವಿಸರಲ್ ಫ್ಯಾಟ್' ಸಂಗ್ರಹ ವಾಗುತ್ತದೆ.

ಎಷ್ಟು ತಿಂದರೂ ಮತ್ತೆ ತಿನ್ನುವ ಆಸೆ — ಇದ್ಯಾವ ಸಮಸ್ಯೆ? ಆಯುರ್ವೇದ ಏನು ಹೇಳುತ್ತೆ?

ಎಷ್ಟು ತಿಂದರೂ ಮತ್ತೆ ತಿನ್ನುವ ಆಸೆ — ಇದ್ಯಾವ ಸಮಸ್ಯೆ?

ಊಟ ಮುಗಿಸಿ ಕೈ ತೊಳೆದ ತಕ್ಷಣವೇ 'ಮುಂದೆ ಏನ್ ತಿನ್ನೋಣ?' ಅಂತ ಯೋಚಿಸುವ 25ರ ಹರೆಯದ ಯುವಕರನ್ನು ನೀವು ನೋಡಿರಬಹುದು. "ನನಗೆ ಹಸಿವು ಜಾಸ್ತಿ, ಮೆಟಬಾಲಿಸಂ ಸಖತ್ತಾಗಿದೆ" ಎಂದು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೂ ಇದ್ದಾರೆ. ಆದರೆ, ಎಷ್ಟು ತಿಂದರೂ ತೀರದ ಈ ಹಸಿವು ಕೇವಲ 'ಜೀರ್ಣಶಕ್ತಿಯ ಸಂಕೇತ'ವಲ್ಲ; ಇದರ ಹಿಂದೆ ಒಂದು ದೊಡ್ಡ ವೈಜ್ಞಾನಿಕ ಮತ್ತು ಆಯುರ್ವೇದೀಯ ರಹಸ್ಯವಿದೆ. ಆಯುರ್ವೇದದಲ್ಲಿ ಈ ಸ್ಥಿತಿಯನ್ನು 'ಭಸ್ಮಕ ರೋಗ' ಅಥವಾ 'ಅತ್ಯಗ್ನಿ' ಎಂದು ಕರೆಯಲಾಗು ತ್ತದೆ.

Dr Sadhanashree Column: ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು

ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು

ರೋಗವು ಒಂದೇ ದಿನದಲ್ಲಿ ದೊಡ್ಡದಾಗುವುದಿಲ್ಲ. ಒಂದು ದೊಡ್ಡ ಮರ ಒಂದು ಸಣ್ಣ ಬೀಜದಿಂದ ಮೊಳಕೆ, ಸಸಿ, ಗಿಡ, ಮರ ಎಂಬ ಹಂತಗಳನ್ನು ದಾಟಿ ಹೆಮ್ಮರವಾಗುತ್ತದೆ. ರೋಗವೂ ಹಾಗೆಯೇ. ಅದು ಸಾಮಾನ್ಯವಾಗಿ ಒಂದು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗುವುದಿಲ್ಲ. ದೇಹದ ಸಹಜ ಸಮತೋಲನದಲ್ಲಿ ಸಣ್ಣ ಬದಲಾವಣೆಗಳು ಆರಂಭವಾಗುತ್ತವೆ.

ಪಾಮ್ ಆಯಿಲ್ ಬಳಕೆ ಬಗ್ಗೆ ಆರೋಗ್ಯ ತಜ್ಞರ ಸಲಹೆ ಏನು?

ಪಾಮ್ ಆಯಿಲ್ ಸೇವನೆ ಆರೋಗ್ಯಕ್ಕೆ ಒಳಿತೇ?

Health Tips: ತಾಳೆ ಎಣ್ಣೆಯೂ ಅಡುಗೆ ಎಣ್ಣೆ ಚಾಕೊಲೇಟ್ ಮತ್ತು ವಿವಿಧ ಸಂಸ್ಕರಿಸಿದ ಆಹಾರ ಗಳಂತಹ ಉತ್ಪನ್ನಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ದೇಹಕ್ಕೆ ಪೋಷಕಾಂಶ ಒದಗಿಸುತ್ತವೆ. ತಾಳೆ ಎಣ್ಣೆಯಲ್ಲಿ ಸಹಜವಾಗಿ ಕೊಲೆ ಸ್ಟ್ರಾಲ್ ಮಟ್ಟ ಇರುವುದಿಲ್ಲ ಆದರೆ, ಒಂದೇ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು‌.

Vishwavani Health: ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?

ಜೆನ್ ಝೀಗಳನ್ನು ಜಿರಳೆಗಳಿಗೆ ಹೋಲಿಸುವುದು ಏಕೆ?

Gen Z: ದೇಶಾದ್ಯಂತ ಗಮನ ಸೆಳೆದಿರುವ ಜೆನ್ ಝೀಗಳು ತಮ್ಮನ್ನು ತಾವು ಜಿರಳೆಗಳು ಎಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ? ಈ ಕುರಿತು ವಿಜ್ಞಾನ ಹೇಳುವುದೇನು? ಜಿರಳೆ ಯಾವುದನ್ನು ಪ್ರತಿನಿಧಿಸುತ್ತದೆ ಮತ್ತು ಅವುಗಳಿಂದ ಯಾವ ರೀತಿಯ ಅಪಾಯಗಳಿವೆ ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

ತೂಕ ನಿಯಂತ್ರಣದಿಂದ ಚರ್ಮದ ಆರೈಕೆವರೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನ ಒಂದೆರಡಲ್ಲ!

ಕೊಬ್ಬರಿ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

Health Tips: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ತಾಜಾ ತೆಂಗಿನ ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.​

ಅಡುಗೆ ಎಣ್ಣೆಯನ್ನು ಪದೇ ಪದೆ ಬಳಕೆ ಮಾಡುವ ಅಭ್ಯಾಸ ಇದೆಯೆ? ಹಾಗಾದರೆ ನೀವು ಡೇಂಜರ್‌ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ!

ಅಡುಗೆ ಎಣ್ಣೆ ಮರುಬಳಕೆ: ತಜ್ಞರು ಹೇಳೋದೇನು?

Health Tips: ಅಡುಗೆಗೆ ಎಣ್ಣೆ ಹಾಕದೇ ಆಹಾರದ ರುಚಿಯೇ ಇಲ್ಲ ಅನ್ನುವ ಮಟ್ಟಿಗೆ ಅಭ್ಯಾಸ ಮಾಡಿಕೊಂಡಿದ್ದೇವೆ. ಅದರೆ ನಾವು ಬಳಸುವ ಎಣ್ಣೆಯೂ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಕೆಲವರು ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಪುನಃ ಬಳಕೆ ಮಾಡುತ್ತಾರೆ. ಇದನ್ನು ನಾವು ಸರಿಯೆಂದು ಭಾವಿಸಿದ್ದೇವೆ. ಆದರೆ ಈ ಅಭ್ಯಾಸದ ಕುರಿತು ತಜ್ಞರು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ; ಆರೋಗ್ಯ ಸಚಿವರಿಂದ ಕಾರ್ಯಕ್ರಮಕ್ಕೆ ಚಾಲನೆ

ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ

ದೇಶದ ಮೃತ ಅಂಗಾಂಗ ದಾನ ಪ್ರಮಾಣವು ಪ್ರತಿ ದಶಲಕ್ಷ ಜನಸಂಖ್ಯೆಗೆ 1 ದಾನಿಗಿಂತ ಕಡಿಮೆಯಿದ್ದು, ಸ್ಪೇನ್’ನಲ್ಲಿ ಇದು ಪ್ರತಿ ದಶಲಕ್ಷಕ್ಕೆ 48ಕ್ಕಿಂತ ಹೆಚ್ಚಿದೆ. 2025ರಲ್ಲಿ ಭಾರತವು 20,138 ಕಸಿ ಶಸ್ತ್ರಚಿಕಿತ್ಸೆ ಗಳೊಂದಿಗೆ ಒಂದು ಮೈಲಿಗಲ್ಲನ್ನು ದಾಖಲಿಸಿದರೂ, ಅವುಗಳಲ್ಲಿ ಸುಮಾರು 82% ಜೀವಂತ ದಾನಿಗಳನ್ನು ಅವಲಂಬಿಸಿದ್ದವು, ಮತ್ತು ಮಾರ್ಚ್ 2026ರ ಹೊತ್ತಿಗೆ 89,000ಕ್ಕೂ ಹೆಚ್ಚು ರೋಗಿಗಳು ಕಸಿ ನಿರೀಕ್ಷಣಾ ಪಟ್ಟಿಯಲ್ಲಿ ಉಳಿದಿದ್ದಾರೆ, ಈ ಸಂಖ್ಯೆ ಲಭ್ಯವಿರುವ ಅಂಗಾಂಗಗಳಿಗಿಂತ ಬಹಳಷ್ಟು ಮುಂದಿದೆ.

ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ತಂತ್ರಜ್ಞಾನಕ್ಕೆ ಉತ್ತೇಜನ: ಸ್ಟ್ರೈಕರ್–ಐಎಜಿಇ ಸಹಭಾಗಿತ್ವ

ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ತಂತ್ರಜ್ಞಾನ

ಎಫ್‌ಜಿಎಸ್ ಕ್ಷೇತ್ರದಲ್ಲಿ ಗುಣಮಟ್ಟದ ಶೈಕ್ಷಣಿಕ ಅವಕಾಶಗಳ ಲಭ್ಯತೆಯನ್ನು ವಿಸ್ತರಿಸಲು ಸ್ಟ್ರೈಕರ್ ಮತ್ತು ಐಎಜಿಇ ಉದ್ದೇಶಿಸಿವೆ. ಮುಂದಿನ ಎರಡು ವರ್ಷ ಗಳಲ್ಲಿ ದೇಶದಾದ್ಯಂತ ವಿವಿಧ ವೈದ್ಯಕೀಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ಸಹಯೋಗದಡಿ ಆಯೋಜಿಸಲಾಗುವುದು. ಭಾಗವಹಿಸುವ ಶಸ್ತ್ರಚಿಕಿತ್ಸಕರು ಭಾರತದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ತಜ್ಞರಿಂದ ಕಲಿಯುವ ಅವಕಾಶ ಪಡೆಯಲಿದ್ದು, ಇದರಿಂದ ಜ್ಞಾನ ವಿನಿಮಯಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕ ಉತ್ತಮ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹ ದೊರೆಯಲಿದೆ

Loading...