ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

ಹೃದಯದ ಆರೋಗ್ಯಕ್ಕೆ ನಿಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ!

ನಿಮ್ಮ ಹೃದಯವನ್ನು ರಕ್ಷಣೆ ಮಾಡುವ ಕೆಲವು ಸಲಹೆ ಇಲ್ಲಿದೆ!

Health Tips:ಸಾಮಾನ್ಯವಾಗಿ ಹೃದಯದ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುತ್ತೇವೆ. ಆದರೆ ಹೃದಯಕ್ಕೆ ಈ ಅಭ್ಯಾಸಗಳೇ ಸಾಲದು..ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ ಕೊಳ್ಳುವ ಮೂಲಕ ಹೃದಯದ ಆರೋಗ್ಯ ರಕ್ಷಣೆ ಮಾಡಬಹುದು.

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು: ರೋಗಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಲು ಮತ್ತು ಜೀವನ ಬದಲಾಯಿಸುವ ಚಿಕಿತ್ಸೆಗಳನ್ನು ಪಡೆಯಲು ತಜ್ಞರ ಕರೆ

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು

ಪಾರ್ಕಿನ್ಸನ್ಸ್ ರೋಗವು ಗಂಭೀರ, ಕೇಂದ್ರ ನರಮಂಡಲದ ಕ್ಷೀಣಗೊಳ್ಳುವ ಸಮಸ್ಯೆಯಾಗಿದ್ದು ಮೆದುಳಿ ನಲ್ಲಿ ಡೋಪಮೈನ್ ಉತ್ಪಾದಿಸುವ ನ್ಯೂರಾನ್ ಗಳು ಕ್ರಮೇಣ ನಷ್ಟವಾಗುತ್ತವೆ, ಇದರಿಂದ ಚಲನೆ ಮತ್ತು ಸಹಯೋಗ ದುರ್ಬಲಗೊಳ್ಳುತ್ತದೆ. ನಿರ್ದಿಷ್ಟ ಕಾರಣವು ಅಗೋಚರವಾಗಿದ್ದರೂ ಪರಿಣಿತರು ಅನುವಂಶಿಕ ಮತ್ತು ಪಾರಿಸರಿಕ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ ಎಂದು ನಂಬಿದ್ದಾರೆ.

ಕರ್ನಾಟಕದಲ್ಲಿ ಮೊಟ್ಟಮೊದಲ ಸಾಧನೆ: ಎಂಡೋ ಸ್ಕೋಪಿಕ್ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಮೂಲಕ 66 ವರ್ಷದ ಮಹಿಳೆಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆ

ಎಂಡೋಸ್ಕೋಪಿಕ್ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಮೂಲಕ ಕ್ಯಾನ್ಸರ್ ಚಿಕಿತ್ಸೆ

66 ವರ್ಷದ ಶ್ರೀಮತಿ ಸೀತಮ್ಮ ಕೆ. ಅವರು ಕಳೆದ ಎರಡು ತಿಂಗಳುಗಳಿಂದ ತೀವ್ರವಾದ ಹೊಟ್ಟೆ ನೋವಿ ನಿಂದ ನರಳುತ್ತಿದ್ದರು. ಕಾರಣವಿಲ್ಲದೆಯೇ ತೂಕ ಇಳಿಕೆ ಮತ್ತು ಇತ್ತೀಚೆಗೆ ಪತ್ತೆಯಾದ ಮಧುಮೇಹ ಅವರ ಅರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಜಟಿಲವಾಗಿಸಿದ್ದವು. ಪ್ರಾರಂಭದಲ್ಲಿ ಬೇರೆಡೆ ನಡೆಸಿದ ಪರೀಕ್ಷೆಗಳು ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ (ದೀರ್ಘಕಾಲದ ಮೇದೋಜೀರಕ ಗ್ರಂಥಿಯ ಸೋಂಕು ಮತ್ತು ಊತ) ಎಂದು ಸೂಚಿಸಿತ್ತು.

ಮಧುಮೇಹ ನಿಯಂತ್ರಣಕ್ಕೆ ಹಸಿ ಪಪ್ಪಾಯಿ ಉತ್ತಮವೋ ಅಥವಾ ಹಣ್ಣೋ?

ಹಸಿ- ಹಣ್ಣಾದ ಪಪ್ಪಾಯಿ: ಮಧುಮೇಹ ನಿಯಂತ್ರಣಕ್ಕೆ ಯಾವುದು ಒಳಿತು?

Health Tips: ಇತ್ತೀಚೆಗೆ ಮಧುಮೇಹದ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿದೆ. ಹೀಗಾಗಿ ಆಹಾರ ಕ್ರಮವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.. ಸಕ್ಕರೆ ಮಟ್ಟವನ್ನು ಕಾಯ್ದು ಕೊಳ್ಳುವುದು ಪ್ರಮುಖವಾಗಿದ್ದು ಪಪ್ಪಾಯಿ ಮಧು ಮೇಹಿಗಳಿಗೆ ರಾಮಬಾಣ ವಾಗಿದೆ.. ಆದರೆ, ಹಸಿಯಾದ ಪಪ್ಪಾಯಿ ಅಥವಾ ಹಣ್ಣಾದ ಪಪ್ಪಾಯಿ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಉತ್ತಮ?

ಬೇಸಗೆಯಲ್ಲಿ ಉರಿ ಬಿಸಿಲಿನಿಂದ ಪಾರಾಗಬೇಕೆ? ಈ ಪೇಯಗಳನ್ನು ಕುಡಿಯಿರಿ

ಬೇಸಗೆಯ ದಾಹಕ್ಕೆ ಈ ಪಾನೀಯ ಸೇವಿಸಿ

Health Tips: ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಎಲ್ಲರ ಬಯಕೆ. ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿ ಸುವಂಥ ಒಂದಿಷ್ಟು ಪೇಯಗಳು ಇಲ್ಲಿವೆ. ನಿಮಗೆ ಯಾವುದಿಷ್ಟ?

Basavaraja Shivappa Girgaon Column: ಭಾರತವು ವಿಶ್ವದ ಮಧುಮೇಹ, ಕ್ಯಾನ್ಸರ್‌ ರೋಗಗಳ ರಾಜಧಾನಿ

ಭಾರತವು ವಿಶ್ವದ ಮಧುಮೇಹ, ಕ್ಯಾನ್ಸರ್‌ ರೋಗಗಳ ರಾಜಧಾನಿ

ಮನುಷ್ಯನಿಗೆ ಬದುಕಲು ದಿನನಿತ್ಯ ಆಹಾರಗಳ ಸೇವನೆ ಅನಿವಾರ್ಯ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಗೆ ಸೂಕ್ತ ಶಕ್ತಿಯನ್ನು ದೊರಕಿಸುವಲ್ಲಿ ಸಮಯಾನುಸಾರ ಸೇವಿಸುವ ವೈವಿಧ್ಯ ಮಯ ಆಹಾರಗಳು ಮುಖ್ಯವಾಗಿವೆ. ಪ್ರಸ್ತುತ ದಿನಗಳಲ್ಲಿ ದೈನಂದಿನ ಕಾರ್ಯಗಳಲ್ಲಿನ ಅತಿಯಾದ ಮಾನಸಿಕ ಒತ್ತಡಗಳಿಂದ ಆಹಾರ, ವಿಹಾರ ಮತ್ತು ವಿಶ್ರಾಂತಿಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಜೀವನಶೈಲಿಯು ಬದಲಾಗುತ್ತಿದೆ.

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ತಾಂತ್ರಿಕವಾಗಿ ಮುಂದುವರಿದಿದ್ದರೂ, ದೈಹಿಕವಾಗಿ ದುರ್ಬಲನಾಗುತ್ತಿದ್ದಾನೆ. ಸಂಸ್ಕರಿಸಿದ ಆಹಾರ , ದೈಹಿಕ ಶ್ರಮದ ಕೊರತೆ ಮತ್ತು ಅತಿಯಾದ ಮಾನಸಿಕ ಒತ್ತಡಗಳು ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಽ ಕಾಯಿಲೆಗಳಿಗೆ ದಾರಿ ಕಲ್ಪಿಸಿ ಕೊಡುತ್ತಿವೆ.

ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭವಾಗಿ ದೀರ್ಘಕಾಲ ಗೋಪ್ಯ: ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 ವರದಿ

ಆರೋಗ್ಯದ ತೊಂದರೆಗಳು ದೀರ್ಘಕಾಲ ಗೋಪ್ಯವಾಗಿರುತ್ತದೆ

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ.

ಇಂದು ವಿಶ್ವ ಆರೋಗ್ಯ ದಿನ: ಇತಿಹಾಸದಿಂದ ಥೀಮ್‌ವರೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಆರೋಗ್ಯವೇ ಸಂಪತ್ತು: ವಿಶ್ವ ಆರೋಗ್ಯ ದಿನದ ಮಹತ್ವ

World Health Day 2026: ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಆರೋಗ್ಯದ ಮಹತ್ವ ಮತ್ತು ಸಮಾನ ಆರೋಗ್ಯ ಸೇವೆಗಳ ಅಗತ್ಯವನ್ನು ಒತ್ತಿಹೇಳುವ ಈ ದಿನಕ್ಕೆ 2026ರಲ್ಲಿ ʼಮಾನಸಿಕ ಆರೋಗ್ಯವೇ ಅಸಲಿ ಶಕ್ತಿʼ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಮಾನಸಿಕ ಸ್ವಾಸ್ಥ್ಯ, ಒತ್ತಡ ನಿಯಂತ್ರಣ ಮತ್ತು ಸಮಗ್ರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ವರ್ಷದ ಪ್ರಮುಖ ಉದ್ದೇಶ.

ನೀರು ಕುಡಿಯುವುದನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವುದು ಹೇಗೆ?

Drink more water: ಈ ಬೇಸಿಗೆಯ ದಿನಗಳಲ್ಲಿ ನೀರು ಕುಡಿಯುವುದಕ್ಕೆ ಯಾಕಿಷ್ಟು ಕಷ್ಟಪಡುತ್ತೇವೆ ನಾವು? ದೇಹಕ್ಕೆ ನೀರು ಸಾಕಾಗದಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ವಕ್ಕರಿಸಿಕೊಳ್ಳುತ್ತವೆ ಎಂಬುದನ್ನು ತಿಳಿದಿದ್ದರೂ, ನೀರು ಕುಡಿಯುವುದನ್ನು ಮುಂದೂಡುತ್ತೇವೆ. ಹಾಗಾದರೆ ನೀರು ಹೆಚ್ಚು ಕುಡಿಯುವಂತೆ ನಮಗೆ ನಾವೇ ಹೇಗೆ ಸ್ಫೂರ್ತಿ ತುಂಬಬಹುದು?

ಬೇಸಗೆಯಲ್ಲಿ ಆಯಾಸವೇ? ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

Summer health tips: ಬೇಸಗೆಯಲ್ಲಿ ಆಯಾಸ ಕಾಡುವುದು ಮಾಮೂಲಿ. ಬರೀ ನೀರನ್ನೇ ಕುಡಿಯುತ್ತ ಹೋದರೆ ಹೊಟ್ಟೆ ತುಂಬಿದಂತಾಗಿ, ಏನನ್ನೂ ತಿನ್ನಲಾಗದೆ ಪೌಷ್ಟಿಕಾಂಶಗಳ ಕೊರತೆಯಾಗಿ ನಿಶ್ಶಕ್ತಿ ಕಾಡಬಹುದು. ಬೇಸಗೆಯುದ್ದಕ್ಕೂ ಬರೀ ನೀರನ್ನೇ ಕುಡಿಯುತ್ತಾ ಕಳೆಯುವುದು ಸಾಧ್ಯವಿಲ್ಲವಲ್ಲ. ಹಾಗಾದರೆ ದೇಹಕ್ಕೆ ದೊರೆಯುವ ನೀರಿನಂಶವನ್ನು ಹೆಚ್ಚಿಸಲು ಏನು ಮಾಡಬೇಕು?

ಮೊಸರು, ಲಸ್ಸಿ, ಮಜ್ಜಿಗೆ: ಬೇಸಿಗೆಯಲ್ಲಿ ಯಾರು ಹಿತವರು ಈ ಮೂವರೊಳಗೆ?

ಮೊಸರು, ಲಸ್ಸಿ, ಮಜ್ಜಿಗೆ- ಯಾವುದು ದೇಹಕ್ಕೆ ಉತ್ತಮ?

Health Tips: ಬಿಸಿಲು ಮೇಲೇರಿದ ಹೊತ್ತಿನಲ್ಲಿ, ದೇಹದ ಉಷ್ಣತೆಯೂ ನೆತ್ತಿಗೇರಿದ ಹೊತ್ತಿನಲ್ಲಿ ಒಂದೊಂದು ಲೋಟ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಹೊಟ್ಟೆಗಿಳಿಸಿದರೆ ಜೀವಕ್ಕೆ ತಂಪೆನಿಸುವುದು ಹೌದು. ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಅವುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೂ ಒಂದೇ ಅಲ್ಲ. ಹಾಗಾದರೆ ಏನು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳಲ್ಲಿ?

Dr N Someshwara Column: ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಜಾಯ್, ತನ್ನ ಗಂಡ ಲೆಸ್‌ನ ದೇಹದಲ್ಲಿ ಒಂದು ಬದಲಾವಣೆಯಾಗುತ್ತಿರುವುದನ್ನು ಗಮನಿಸಿ ದಳು. ಅವನ ದೇಹದಿಂದ ಗಾಢವಾದ ಕಸ್ತೂರಿ ವಾಸನೆಯನ್ನು (ಮಸ್ಕಿ ಓಡರ್) ಹೋಲುವಂಥ ವಾಸನೆಯು ಹೊರಬರಲಾರಂಭಿಸಿತು. ವಿಶೇಷವಾಗಿ ಲೆಸ್‌ನ ಕುತ್ತಿಗೆ ಮತ್ತು ಬಾಹುಗಳಿಂದ ಈ ರೀತಿಯ ವಾಸನೆಯು ಹೊರಡುತ್ತಿತ್ತು. ವಾಸನೆಯು ಏನೂ ಅಹಿತರಕರವಾಗಿರಲಿಲ್ಲ. ಆದರೂ ಆ ವಾಸನೆಯು ಅಸಹಜವಾಗಿತ್ತು

Kidney Health : ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯ: ತಡೆಗಟ್ಟುವಿಕೆ, ಆರೈಕೆ ಮತ್ತು ಜಾಗೃತಿ

ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯ

ಮೂತ್ರಪಿಂಡದ ಕಾಯಿಲೆಯನ್ನು ಹೆಚ್ಚು ಆತಂಕಕಾರಿಯನ್ನಾಗಿಸುವುದು ಅದರ 'ಮೌನ' ಸ್ವರೂಪ. ಕಾಯಿಲೆಯು ಉಲ್ಬಣಗೊಂಡು ಕೊನೆಯ ಹಂತವನ್ನು ತಲುಪುವವರೆಗೂ ಅನೇಕ ರಿಗೆ ತಮ್ಮ ಮೂತ್ರಪಿಂಡದ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವ ಬಗ್ಗೆ ಅರಿವೇ ಇರುವುದಿಲ್ಲ. ಈ ವಿಳಂಬವು ಚಿಕಿತ್ಸೆಯನ್ನು ಸಂಕೀರ್ಣಗೊಳಿಸುವುದು ಮಾತ್ರವಲ್ಲದೆ, ರೋಗಿಯ ಜೀವನ ಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲವೇ?: ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಗೋಡಂಬಿ ಸೇವನೆ ಆರೋಗ್ಯಕ್ಕೆ ಒಳಿತೇ?

Health Tips: ಭಾರತೀಯ ಅಡುಗೆಮನೆಗಳಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ರುಚಿಗೆಂದೇ ಹಾಕುವ ಮುಖ್ಯ ವಸ್ತುಗಳಲ್ಲಿ ಗೋಡಂಬಿ ಅಥವಾ ಗೇರುಬೀಜ ಸಹ ಒಂದು. ಯಾವುದೇ ಬಗೆಯ ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತ-ಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.

ಕಷ್ಟಗಳು ನಮಗೆ ಹೆಚ್ಚು ಕಾಡುತ್ತೆ ಎಂದು ಅನ್ನಿಸೋದ್ಯಾಕೆ? ಈ ಮನಸ್ಥಿತಿ ಬದಲಿಸೋದು ಹೇಗೆ? Video

ಕಷ್ಟದ ಸಂದರ್ಭವನ್ನು ಎದುರಿಸುವುದು ಹೇಗೆ?

ಸಾಕಷ್ಟು ಜನರು ಕಷ್ಟಗಳನ್ನು ಎದುರಿಸಿದ ನಂತರ ತಮ್ಮ ಜೀವನ ಕಷ್ಟದಿಂದಲೇ ಕೂಡಿದೆ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಿರುವಾಗ ನಾವು ಹೇಗೆ ಮಾನಸಿಕ ಸ್ಥಿರತೆಯನ್ನು ಬದಲಿಸಿಕೊಳ್ಳಬೇಕು? ಎದುರಾದ ಸನ್ನಿವೇಶವನ್ನು ಹೇಗೆ ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಮನೋ ಶಾಸ್ತ್ರಜ್ಞ ಡಾ. ನವೀನ್‌ ನೆಲ್ಲಂಗಲ ತಿಳಿಸಿದ್ದಾರೆ.

ಜೀವನದ ಕಷ್ಟ ಉರುಳಿಸುವ ಶಕ್ತಿ ಉರುಳು ಸೇವೆಗಿದೆ! ಅದು ಹೇಗೆ ನೋಡಿ

ಉರುಳು ಸೇವೆ ಮಾಡುವುದರಿಂದ ಆರೋಗ್ಯ ಲಾಭಗಳೇನು?

Health Tips: ಜನರು ಭಕ್ತಿಯಿಂದ ಉರುಳು ಸೇವೆ ಮಾಡುತ್ತಾರೆ. ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು, ಆರೋಗ್ಯ ವೃದ್ಧಿಗೆ, ಅಂದು ಕೊಂಡ ಕೆಲಸ ಕಾರ್ಯಗಳನ್ನು ಪೂರೈಸಲು ಉರುಳು ಸೇವೆಯನ್ನು ತನ್ನ ಇಷ್ಟದ ದೇವರಿಗೆ ಸಮರ್ಪಿಸುತ್ತಾರೆ. ಇದು ದೈಹಿಕವಾಗಿ ಆರೋಗ್ಯ ವೃದ್ದಿ ಮಾಡುವುದಲ್ಲದೆ ಮಾನಸಿಕವಾಗಿಯೂ ಹಲವು ಆರೋಗ್ಯ ಲಾಭ ಹೊಂದಿದೆ. ಈ ಸೇವೆಯಿಂದ ವ್ಯಕ್ತಿಯಲ್ಲಿ ಯಾವೆಲ್ಲ ಬದಲಾವಣೆ ಕಂಡುಬರುತ್ತದೆ ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

Health Tips: ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?

ಮೂಗಿನಲ್ಲಿ ರಕ್ತ ಬರುತ್ತಿದ್ದೆಯೇ? ಕಾರಣವೇನು?

ಮೂಗಿನಲ್ಲಿ ರಕ್ತ ಬರುವುದು ಬಹಳಷ್ಟು ಜನರಿಗೆ ಒಂದಲ್ಲ ಒಂದು ಬಾರಿ ಆಗಿರಬಹುದಾದ ಸಮಸ್ಯೆ. ಇದೇನು ಅಂಥ ಗಂಭೀರ ಸಮಸ್ಯೆ ಅಲ್ಲವಾದರೂ, ಆಗುತ್ತಿರುವುದೇಕೆ ಎನ್ನುವುದನ್ನು ತಿಳಿದು ಕೊಳ್ಳುವುದು ಮುಖ್ಯ. ಅದರಲ್ಲೂ ಬೇಸಗೆಯ ದಿನಗಳಲ್ಲಿ ಹೀಗಾಗುವುದಕ್ಕೆ ಕಾರಣಗಳೇನು ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

ರಸಭರಿತ ಕಬ್ಬಿನ ಹಾಲು: ಏನೇನಿವೆ ಇದರ ಲಾಭಗಳು?

ಕಬ್ಬಿನ ಸೇವನೆಯಿಂದ ಆರೋಗ್ಯ ಲಾಭವೇನು?

Health Tips: ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್‌ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.

ಪಿಪಿಪಿ ಸಹಭಾಗಿತ್ವದಲ್ಲಿ ಡಯಾಲಿಸಿಸ್ ಯೋಜನೆಗೆ ನವೀನ ತಂತ್ರಜ್ಞಾನ ಬೆಂಬಲ: ನೆಫ್ರೋಪ್ಲಸ್‌ನ ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ ಆರಂಭ

ನೆಫ್ರೋಪ್ಲಸ್‌ನ ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ ಆರಂಭ

ಪ್ರಸ್ತುತ ಏಳು ಡಯಾಲಿಸಿಸ್ ಕೇಂದ್ರಗಳಲ್ಲಿ ಜಾರಿಗೊಂಡಿರುವ ಎಐ ಟೆಕ್ನಾಲಜಿಯು, ರೋಗಿಯ ಚಿಕಿತ್ಸೆ, ರೋಗಿ ಸುರಕ್ಷತೆ, ಹಾಸಿಗೆ ಲಭ್ಯತೆ, ಸಿಬ್ಬಂದಿಯ ಎಚ್ಚರಿಕೆ, ತುರ್ತು ಸಿದ್ಧತೆ, ಭದ್ರತಾ ನಿಯಮ ಪಾಲನೆ, ಸೋಂಕು ನಿಯಂತ್ರಣ, ಸ್ವಚ್ಛತೆ ಹಾಗೂ ಕಾರ್ಯ ಕ್ಷಮತೆ ಸೇರಿದಂತೆ 28 ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತದೆ.

ನೋವೊ ನಾರ್ಡಿಸ್ಕ್ ಇಂಡಿಯಾದಿಂದ ಓಜೆಂಪಿಕ್ ಮತ್ತು ವಿಗೋವಿ ಆರಂಭಿಕ ಡೋಸ್‌ ಗಳ ಬೆಲೆ ಇಳಿಕೆ

ಓಜೆಂಪಿಕ್ ಮತ್ತು ವಿಗೋವಿ ಆರಂಭಿಕ ಡೋಸ್‌ ಗಳ ಬೆಲೆ ಇಳಿಕೆ

ವಿಗೋವಿ ಮತ್ತು ಓಜೆಂಪಿಕ್ ನಲ್ಲಿರುವ ಸಕ್ರಿಯ ಔಷಧೀಯ ಘಟಕವಾದ 'ನೋವೊ ನಾರ್ಡಿಸ್ಕ್‌ ನ ಸೆಮಾಗ್ಲುಟೈಡ್', 50ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳು ಮತ್ತು 4.9 ಕೋಟಿ ರೋಗಿಗಳ ಬಳಕೆಯ ಅನುಭವದ ಹಿನ್ನೆಲೆಯನ್ನು ಹೊಂದಿದೆ. ಈ ಎರಡೂ ಚಿಕಿತ್ಸೆಗಳನ್ನು 'ಆರ್ ಡಿ ಎನ್ ಎ' ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇವುಗಳನ್ನು ಬಳಸಲು ಸುಲಭ ವಾದ 'ಪೆನ್' ಸಾಧನಗಳಲ್ಲಿ ನೀಡಲಾಗುತ್ತದೆ.

Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ಕೆಲವರು ನಿದ್ದೆಯಲ್ಲಿ ನಡೆಯುವುದಕ್ಕೆ ಕಾರಣಗಳೇನು?

ನಿದ್ದೆಗಣ್ಣಲ್ಲಿ ಮಾತಾಡುವುದು, ನಡೆದಾಡುವುದು ಇತ್ಯಾದಿ ಯಾವುದೇ ಚಟುವಟಿಕೆಯನ್ನು ಮಾಡಿದರೂ ಅದು ಮಾಡುವವರ ನಿಯಂತ್ರಣ ಮೀರಿ ಮಾಡುವುದು ಎನ್ನುವ ಅರ್ಥದಲ್ಲಿ ಅದನ್ನು ನೋಡುವುದು ಸಹಜ. ಆದರೆ ನಿದ್ದೆಯಲ್ಲಿ ಕೆಲವರು ನಡೆಯುವುದೇಕೆ, ಇದನ್ನು ಸರಿ ಪಡಿಸುವುದಕ್ಕೇನು ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ? ಇಲ್ಲಿದೆ ಪೋಷಕರಿಗೆ ಪ್ರಮುಖ ಸಲಹೆಗಳು

ಬೇಸಿಗೆಯಲ್ಲಿ ಮಕ್ಕಳ ಕಾಳಜಿ ಅಗತ್ಯ

ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಸಾಕಷ್ಟು ನೀರು ಕುಡಿಸುವುದು, ಹತ್ತಿ ಬಟ್ಟೆಗಳನ್ನು ಬಳಸುವುದು ಮತ್ತು ತಾಜಾ ಹಣ್ಣು-ತರಕಾರಿಗಳನ್ನು ನೀಡುವುದು ಮುಖ್ಯ. ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಮಕ್ಕಳನ್ನು ಬೇಸಿಗೆಯಲ್ಲಿ ಆರೋಗ್ಯವಾಗಿರಿಸಬಹುದು.

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌™” ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

ವಯೋವೃದ್ಧರಲ್ಲಿ ಸಾಮಾನ್ಯವಾಗಿದ್ದರೂ ಸಾಕಷ್ಟು ಗಮನ ಸಿಗದ ಮೂತ್ರ ನಿಯಂತ್ರಣ ಸಮಸ್ಯೆ ಗೆ ಪರಿಹಾರ ನೀಡುವತ್ತ ಈ ಉತ್ಪನ್ನ ಮಹತ್ವದ ಹೆಜ್ಜೆಯಾಗಿದೆ. ವಯಸ್ಸಿನ ಜೊತೆಗೆ ಉಂಟಾಗುವ ಆರೋಗ್ಯ ಸಮಸ್ಯೆಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತಿದ್ದು, ಇದರಿಂದ ಹಿರಿಯ ರಲ್ಲಿ ಹೊರಗೆ ಹೋಗುವ ಭಯವೂ ಉಂಟಾಗುತ್ತದೆ.

Loading...