ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

ರೊಬೋಟ್ ನೆರವಿನಿಂದ ಹೃದಯ ಬೈಪಾಸ್, ಹರ್ನಿಯಾ ಹಾಗೂ ಸುನ್ನತಿಯ ಯಶಸ್ವಿ ಶಸ್ತ್ರಚಿಕಿತ್ಸೆ

ವಿಶ್ವದಲ್ಲಿಯೇ ಮೊದಲ ಬಾರಿಗೆ ರೊಬೋಟ್ ನೆರವಿನಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ತುಂಬ ಸಂಕೀರ್ಣಮಯವಾಗಿದ್ದ ಈ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇದರಿಂದಾಗಿ 81 ವರ್ಷದ ರೋಗಿಯು ಮೂರು ಪ್ರತ್ಯೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾದ ಅನಿವಾರ್ಯತೆ ತಪ್ಪಿದೆ. ಶಸ್ತ್ರಚಿಕಿತ್ಸೆಯ ನೋವು, ದೀರ್ಘಕಾಲ ಆಸ್ಪತ್ರೆಯಲ್ಲಿ ಉಳಿಯುವ ಅವಶ್ಯಕತೆ, ಸೋಂಕಿನ ಸಾಧ್ಯತೆ ಹಾಗೂ ಚೇತರಿಕೆಯ ಅವಧಿ ಗಣನೀಯವಾಗಿ ಕಡಿಮೆಯಾಗಿದೆ.

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ ಅಳವಡಿಕೆ: ಭಾರತದಲ್ಲಿ ಎಐ-ಸಕ್ರಿಯ ಅಡಾಪ್ಟಿವ್ ರೇಡಿಯೋಥೆರಪಿಗೆ ಹೊಸ ಉತ್ತೇಜನ

ಭಾರತದಲ್ಲಿ ಎಐ-ಸಕ್ರಿಯ ಅಡಾಪ್ಟಿವ್ ರೇಡಿಯೋಥೆರಪಿಗೆ ಹೊಸ ಉತ್ತೇಜನ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಭಾರತದಲ್ಲಿ ಕ್ಯಾನ್ಸರ್‌ ನ ಭಾರ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರತಿ ವರ್ಷ ಅಂದಾಜು 1.46 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣ ಗಳು ಪತ್ತೆಯಾಗುತ್ತಿವೆ. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ರೇಡಿಯೇಷನ್ ಥೆರಪಿಯ ಅಗತ್ಯವಿರುವುದರ ಜೊತೆಗೆ, ಅನೇಕರು ಸಂಕೀರ್ಣ ಅಥವಾ ಮುಂದುವರಿದ ಹಂತದ ಕ್ಯಾನ್ಸರ್‌ ನೊಂದಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ.

ತೂಕ ಇಳಿಕೆಗೆ ಜಿಮ್ ಆಹಾರಕ್ಕಿಂತಲೂ ಬೆಸ್ಟ್ ನಮ್ಮ ದೇಸಿ 'ಹುರಿದ ಕಡಲೆ'!

ಹುರಿದ ಕಡಲೆಯ ಆರೋಗ್ಯ ಉಪಯೋಗ ನಿಮಗೆ ಗೊತ್ತೆ?

Health Tips: ತೂಕವನ್ನು ಇಳಿಸಿಕೊಳ್ಳಬೇಕೆಂದು ಹೆಚ್ಚಿನವರು ನಾನಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ದಿನ ನಿತ್ಯದ ಊಟವನ್ನು ತ್ಯಜಿಸಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಹರಸಹಾಸ ಪಡುತ್ತಾರೆ‌. ಆದರೆ ಇದಕ್ಕೆ ಪರ್ಯಾಯವಾಗಿ ತೂಕ ಇಳಿಸಲು ಬಯಸುವವರಿಗೆ ಹುರಿದ ಕಡಲೆ ಅತ್ಯುತ್ತಮ ಸ್ನ್ಯಾಕ್ಸ್ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹುರಿದ ಕಡಲೆಕಾಯಿ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯಕರ ಆಯ್ಕೆಗಳಲ್ಲಿ ಒಂದಾಗಿದೆ. ಪ್ರೋಟೀನ್, ಫೈಬರ್ ಮತ್ತು ಅಗತ್ಯ ಖನಿಜಗಳಿಂದ ತುಂಬಿರುವ ಇದರಲ್ಲಿ ತೂಕ ಇಳಿಕೆ ಮಾಡುವ ಸಾಮರ್ಥ್ಯ ಕೂಡ ಇದೆ.

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.

ವ್ಯಕ್ತಿಗಳಿಗೆ ತಿಳಿಯದೇ ಪ್ರತಿದಿನ ಸೇವನೆಯಾಗುವ ಅಡಗಿರುವ ಸಕ್ಕರೆ

ವ್ಯಕ್ತಿಗಳಿಗೆ ತಿಳಿಯದೇ ಪ್ರತಿದಿನ ಸೇವನೆಯಾಗುವ ಅಡಗಿರುವ ಸಕ್ಕರೆ

ಅನೇಕ ಪ್ಯಾಕೇಜ್ ಮಾಡಿದ ಮತ್ತು ಸಂಸ್ಕರಿತ ಆಹಾರಗಳಲ್ಲಿ ರುಚಿಯನ್ನು ಹೆಚ್ಚಿಸಲು, ಗುಣಮಟ್ಟ ವನ್ನು ಕಾಪಾಡಲು ಅಥವಾ ಅವುಗಳ ಶೆಲ್ಫ್ ಲೈಫ್ ಹೆಚ್ಚಿಸಲು ಹೆಚ್ಚುವರಿ ಸಕ್ಕರೆಯನ್ನು ಸೇರಿಸ ಲಾಗುತ್ತದೆ. ಬೆಳಗಿನ ಉಪಾಹಾರ ಧಾನ್ಯಗಳು (Breakfast Cereals), ರುಚಿಯುಕ್ತ ಮೊಸರು (Flavoured Yogurt), ಗ್ರಾನೋಲಾ ಬಾರ್‌ಗಳು, ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು, ಸ್ಪೋರ್ಟ್ಸ್ ಡ್ರಿಂಕ್ಸ್ ಮತ್ತು ತಕ್ಷಣ ಸೇವಿಸಬಹುದಾದ ತಿಂಡಿಗಳು ಇದರ ಸಾಮಾನ್ಯ ಉದಾಹರಣೆಗಳಾಗಿವೆ

ಜೀವನಶೈಲಿ ಬದಲಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ತಜ್ಞರ ಈ ಟಿಪ್ಸ್‌ ಫಾಲೋ ಮಾಡಿ

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹೇಗೆ?

Health Tips: ಒಂದೇ ದಿನದಲ್ಲಿ ಆಹಾರ ಸೇವಿಸಿ ಅಥವಾ ಒಮ್ಮಲೆ ಹಣ್ಣು ತರಕಾರಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಲು ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸರಿಯಾದ ಅಭ್ಯಾಸ ಅಗತ್ಯವಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರತಿದಿನವೂ ಕಾಳಜಿ ವಹಿ ಸುವುದು ಅತ್ಯಗತ್ಯವಾಗಿದ್ದು ತಜ್ಞರು ಈ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.

ವಿಪ್ರೋ ಕನ್ಸ್ಯೂಮರ್ ಕೇರ್'ನಿಂದ ಟಿಟಿಕೆ ಹೆಲ್ತ್‌ಕೇರ್‌ʼನ 'ಗುಡ್-ಹೋಮ್' ಮತ್ತು 'ಇವಾ' ಬ್ರ್ಯಾಂಡ್‌ಗಳ ಖರೀದಿ

ವಿಪ್ರೋ ಕನ್ಸ್ಯೂಮರ್ ಕೇರ್'ನಿಂದ 'ಗುಡ್-ಹೋಮ್' ಖರೀದಿ

ಗುಡ್ ಹೋಮ್ (Good Home) ಎಂಬುದು ಹೋಮ್ ಕೇರ್ ವಿಭಾಗದಲ್ಲಿ ಗುರುತಿಸಿಕೊಂಡಿರುವ ಬ್ರ್ಯಾಂಡ್ ಆಗಿದ್ದು, ಏರ್ ಕೇರ್, ದುರ್ವಾಸನೆ ನಿವಾರಕಗಳು, ಸ್ಕ್ರಬ್ಬರ್‌ಗಳು ಮತ್ತು ಡ್ರೈನ್ ಕ್ಲೀನರ್‌ ಗಳನ್ನು ಒಳಗೊಂಡಿದೆ. ಇದು ವ್ಯಾಪಕ ಶ್ರೇಣಿಯ ಮನೆಯ ಸ್ವಚ್ಛತೆ ಮತ್ತು ನೈರ್ಮಲ್ಯದ ಅಗತ್ಯಗಳನ್ನು ಪೂರೈಸುತ್ತದೆ.

ವಿಶ್ವ ಮೆದುಳು ದಿನದ ಅಂಗವಾಗಿ ‘ಬ್ರೀತ್ ಫಾರ್ ದಿ ಬ್ರೇನ್ 2.0’ ಆಯೋಜಿಸಿದ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ

‘ಬ್ರೀತ್ ಫಾರ್ ದಿ ಬ್ರೇನ್ 2.0’ ಆಯೋಜಿಸಿದ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ

ಕಳೆದ ವರ್ಷ ಇದೇ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ದೊರೆತ ಅತ್ಯುತ್ತಮ ಸ್ಪಂದನೆಯಿಂದ ಪ್ರೇರಿತವಾಗಿ, ಈ ವರ್ಷ *"ಬ್ರೀತ್ ಫಾರ್ ದಿ ಬ್ರೇನ್ 2.0"* ಅನ್ನು ಮತ್ತಷ್ಟು ವಿಸ್ತೃತವಾಗಿ ಆಯೋಜಿಸ ಲಾಯಿತು. ಮೆದುಳಿನ ಆರೋಗ್ಯದ ಬಗ್ಗೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಹಾಗೂ ಪ್ರಾಣಾಯಾಮ, ಧ್ಯಾನ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು

ಮಳೆಗಾಲದಲ್ಲಿ ಸದಾ ಆಯಾಸವೇ? ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

ಮಳೆಗಾಲದಲ್ಲಿ ಆಲಸ್ಯತನ ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

Health Tips: ಮಳೆಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ..ಇದು ಆಲಸ್ಯತನಕ್ಕೆ ಕಾರಣವಾಗಿ ನಿಮ್ಮ ದಿನವನ್ನು ಬೋರಿಂಗ್ ಆಗಿ ಇರಿಸಬಹುದು. ಈ ಆಲಸ್ಯವನ್ನು ಸೂಕ್ತ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಮೂಲಕ ಸುಲಭವಾಗಿ ಪರಿಹರಿಸಿಕೊಳ್ಳಬಹುದು.

ನವಜಾತ ಶಿಶುವಿಗೆ ಮರುಜೀವ; ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ವೈದ್ಯರ ಸಾಧನೆ

ನವಜಾತ ಶಿಶುವಿಗೆ ಮರುಜೀವ ನೀಡಿದ ಸಿದ್ದಾರ್ಥ ಆಸ್ಪತ್ರೆ ವೈದ್ಯರು

Tumkur News: ನವಜಾತ ಶಿಶುಗಳಲ್ಲಿ ಎದುರಾಗುವ ಕರುಳಿನ ಅಡಚಣೆಯಂತಹ ಅತ್ಯಂತ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ತುರ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತುಮಕೂರು ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡವು ಮಗುವಿಗೆ ಮರುಜೀವ ನೀಡಿದೆ.

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಬಹುತೇಕ ಇತರ ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆ ಅಪೂರ್ವ ಅವಕಾಶವಿದೆ. ಈ ಕಾಯಿಲೆಗೆ ಕಾರಣವೇನು ಎಂಬುದು ನಮಗೆ ತಿಳಿದಿದೆ; ಹೆಚ್ಚಿನ ಪ್ರಕರಣಗಳನ್ನು ತಡೆಯಬಲ್ಲ ಲಸಿಕೆ ನಮ್ಮಲ್ಲಿದೆ; ಮತ್ತು ಜೀವಕ್ಕೆ ಅಪಾಯವಾಗುವ ಹಂತಕ್ಕೆ ತಲುಪುವ ಮುನ್ನವೇ ಇದನ್ನು ಪತ್ತೆಹಚ್ಚಬಲ್ಲ ತಪಾಸಣಾ ಪರೀಕ್ಷೆಗಳೂ ಲಭ್ಯವಿವೆ.

Health Tips: ನಿದ್ದೆಯಲ್ಲಿ ಬಾಯಲ್ಲೇ ಉಸಿರಾಡುತ್ತೀರಾ? ಈ ಸಮಸ್ಯೆ ಎದುರಾಗಬಹುದು ಎಚ್ಚರ

ನಿದ್ದೆ ಬಂದಾಗ ಬಾಯಲ್ಲೇ ಉಸಿರಾಡುತ್ತೀರಾ? ಎಚ್ಚರ!

ನಿಮಗೆ ಸಖತ್‌ ನೆಗಡಿಯಾಗಿದೆ. ಮೂಗೆಲ್ಲ ಕಟ್ಟಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಲಗಿದಾಗ ಈ ಸಮಸ್ಯೆ ಇನ್ನೂ ಹೆಚ್ಚು ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಾಯಲ್ಲಿ ಉಸಿರಾಡುವುದೊಂದೇ ಮಾರ್ಗ. ಆದರೆ ನೆಗಡಿ ಕಡಿಮೆಯಾದ ನಂತರ ಮರಳಿ, ಮೂಗಲ್ಲೇ ಉಸಿರಾಟ ಆರಂಭಿಸುತ್ತೀರಿ. ಹಾಗಲ್ಲದೆ, ಮಲಗಿದಾಗೆಲ್ಲ ಮೂಗಿನಲ್ಲಲ್ಲದೆ, ಬಾಯಲ್ಲೇ ಉಸಿರಾಡುತ್ತೀರಾ? ನೆಗಡಿ ಇಲ್ಲದಿದ್ದರೂ ನಿಮ್ಮ ಉಸಿರಾಟ ಬಾಯಲ್ಲೇ ನಡೆಯುತ್ತದೆಯೇ? ಹಾಗಾದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು.

Dr N Someshwara Column: ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ಸಂಪೂರ್ಣವಾಗಿ ಒಳಗೆ ಹೋದರೆ ನಾನು ಸಾಯುತ್ತೇನೆ!’ ಎಂದು ಆತ ಕಿರುಚಿದ. ವೈದ್ಯರು ಅವನನ್ನು ಪರೀಕ್ಷಿಸಿದರು. ಯಾವುದೇ ಅಪಾಯಕಾರಿ ದೈಹಿಕ ಬದಲಾವಣೆಗಳು ಇರಲಿಲ್ಲ. ಚಳಿಯಿಂದಲೋ, ಭಯದಿಂದಲೋ ಸಾಮಾನ್ಯವಾಗಿ ಸಂಭವಿಸಬಹುದಾದ ತಾತ್ಕಾಲಿಕ ಸಂಕೋಚನ ಮಾತ್ರ ಇತ್ತು. ಆದರೆ ಯುವಕನ ಅನುಭವ ಸುಳ್ಳಾಗಿರಲಿಲ್ಲ. ಅವನ ಭಯ ನಿಜವಾಗಿತ್ತು; ಹೃದಯ ವೇಗವಾಗಿ ಬಡಿದುಕೊಳ್ಳು ತ್ತಿತ್ತು; ಮೈ ಬೆವರಿತ್ತು; ಉಸಿರಾಟ ತೀವ್ರಗೊಂಡಿತ್ತು.

ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದ ವೃದ್ಧೆಗೆ  ಸಂಕೀರ್ಣ ಹಿಪ್ ಶಸ್ತ್ರಚಿಕಿತ್ಸೆ

ಸೊಂಟದ ಮೂಳೆ ಮುರಿತ: ವೃದ್ಧೆಗೆ ಹಿಪ್ ಶಸ್ತ್ರಚಿಕಿತ್ಸೆ

ಲಕ್ಷ್ಮಿ ಭಾರ್ಗವ್ ಅವರು ತಮ್ಮ 99ನೇ ವಯಸ್ಸಿನಲ್ಲಿ ಎಡಭಾಗದ ಫೆಮೊರಲ್ ನೆಕ್ ಫ್ರ್ಯಾಕ್ಚರ್ ಮತ್ತು ಕಾಂಪ್ಲೆಕ್ಸ್ ಸಬ್‌ಟ್ರೊಕಾಂಟೆರಿಕ್ ಎಕ್ಸ್‌ಟೆನ್ಶನ್‌ನಿಂದ ಬಳಲುತ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ವಯೋವೃದ್ಧರಲ್ಲಿ ಇಂತಹ ಅಸ್ಥಿರ ಗಾಯಗಳು ಭಾರೀ ಸವಾಲೊಡ್ಡುತ್ತವೆ. ಇಳಿ ವಯಸ್ಸಿನ ಜೊತೆಗೆ ದೀರ್ಘಕಾಲದ ಬ್ರಾಂಕಿಯಲ್ ಅಸ್ತಮಾ (ಉಬ್ಬಸ) ಕೂಡ ಇದ್ದುದರಿಂದ ಈ ಪ್ರಕರಣವು ವೈದ್ಯರಿಗೆ ಅತ್ಯಂತ ಹೈ-ರಿಸ್ಕ್ ಆಗಿತ್ತು.

Health Tips: ಚಹಾ ಅತಿಯಾಗಿ ಕುದಿಸಬೇಡಿ, ಒಳ್ಳೆಯದಲ್ಲ! ಟೀ ಮಾಡುವ ಪರ್ಫೆಕ್ಟ್‌ ವಿಧಾನ ಇಲ್ಲಿದೆ

ಚಹಾ ಅತಿಯಾಗಿ ಕುದಿಸಿದರೆ ಅಪಾಯಕಾರಿಯೆ?

ಚಹಾ ಡಿಕಾಕ್ಷನ್‌ಗೆ ಹಾಲು ಹಾಕಿದ ಮೇಲೆ ಪಾಯಸದಂತೆ ಕುದಿಸುವವರಿದ್ದಾರೆ. ಡಿಕಾಕ್ಷನ್‌ ಕುದಿಸಿ ಕೊನೆಗೆ ಹಾಲು ಹಾಕುವವರಿದ್ದಾರೆ- ಹೀಗೆ... ದಿನಕ್ಕೊಂದೆರಡು ಬಾರಿ ಚಹಾ ಕುಡಿಯುವುದರಲ್ಲಿ ಸಮಸ್ಯೆಗಳಿಲ್ಲ. ಅದರಲ್ಲೂ ಏಕ್ಕಿ, ಶುಂಠಿ ಮುಂತಾದ ಮಸಾಲೆಗಳನ್ನು ಹಾಕಿ ಚಹಾ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಆದರೆ ಇದನ್ನು ಮಾಡುವ ಕ್ರಮ ತಪ್ಪಾಗಿದ್ದರೆ, ಆರೋಗ್ಯಕ್ಕೆ ಸಮಸ್ಯೆಗಳು ಎದುರಾಗಬಹುದು.

Vijayanagara News: ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಜಯಶ್ರೀ ಚೈಲ್ಡ್ ಕೇರ್ ಮಕ್ಕಳ ಹಾಗೂ ನವಜಾತ ಶಿಶುಗಳ ಆರೈಕೆ ಆಸ್ಪತ್ರೆ ಉದ್ಘಾಟನೆಯಾಗಿದೆ. ಆಸ್ಪತ್ರೆಯನ್ನು ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಬಲ್ಡೋಟಾ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದೇರ್ಶಕ ನರೇಂದ್ರ ಬಲ್ಡೋಟಾ ಉದ್ಘಾಟಿಸಿದರು.

ಡಿಜಿಟಲ್ ಡಿಟಾಕ್ಸ್ ಸಮಯದಲ್ಲಿ ನಿಮ್ಮ ಮೆದುಳಿನಲ್ಲಿ ಏನಾಗುತ್ತದೆ?

ಡಿಜಿಟಲ್ ಡಿಟಾಕ್ಸ್ ಸಮಯದಲ್ಲಿ ನಿಮ್ಮ ಮೆದುಳಿನಲ್ಲಿ ಏನಾಗುತ್ತದೆ?

ಪ್ರತಿ "ಲೈಕ್", ಸಂದೇಶ ಮತ್ತು ನೋಟಿಫಿಕೇಶನ್ ಮೆದುಳಿನಲ್ಲಿ ಸಂತೋಷ ಮತ್ತು ಬಹುಮಾನದ ಭಾವನೆಗೆ ಕಾರಣವಾಗುವ ಡೋಪಮೈನ್ ಎಂಬ ರಾಸಾಯನಿಕವನ್ನು ಸ್ವಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಕಾಲಕ್ರಮೇಣ, ಇದು ಮೆದುಳು ಪದೇಪದೇ ಈ ತ್ವರಿತ ಪ್ರಚೋದನೆಯನ್ನು ಬಯಸು ವಂತಹ ಚಕ್ರವನ್ನು ನಿರ್ಮಿಸುತ್ತದೆ. ಇದು ಸೌಮ್ಯ ವ್ಯಸನದಂತೆಯೇ ಕಾರ್ಯ ನಿರ್ವಹಿಸುತ್ತದೆ.

Health Tips: ರೋಗ ನಿರೋಧಕ ಶಕ್ತಿಯಿಂದ ಕೂದಲಿನ ಆರೈಕೆಯವರೆಗೆ...ನೆಲ್ಲಿಕಾಯಿಯ 14 ಲಾಭಗಳು ಇಲ್ಲಿವೆ

ನೆಲ್ಲಿಕಾಯಿ ತಿನ್ನುವುದರಿಂದ ಸಿಗುವ 14 ಅದ್ಭುತ ಪ್ರಯೋಜನಗಳಿವು

Health Benefits of Amla: ಆಯುರ್ವೇದ ಹಾಗೂ ಆಧುನಿಕ ಪೌಷ್ಟಿಕಾಂಶ ವಿಜ್ಞಾನದ ಪ್ರಕಾರ, ನೆಲ್ಲಿಕಾಯಿ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನ ಸಮೃದ್ಧ ಮೂಲ. ಇದು ರೋಗ ನಿರೋಧಕ ಶಕ್ತಿ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಯಕೃತ್ತು, ಚರ್ಮ, ಕೂದಲು, ಕಣ್ಣು ಮತ್ತು ಮೆದುಳಿನ ಆರೋಗ್ಯವನ್ನು ಬೆಂಬಲಿಸುವಲ್ಲಿ ಸಹಕಾರಿ ಎಂದು ಪರಿಗಣಿಸಲಾಗಿದೆ. ಆರೋಗ್ಯಪೂರ್ಣ ಜೀವನಶೈಲಿಯ ಭಾಗವಾಗಿ ಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ಗರ್ಭಿಣಿಯರಲ್ಲಿ ಮಧುಮೇಹ !

ಗರ್ಭಿಣಿಯರಲ್ಲಿ ಮಧುಮೇಹ !

ಇದು ಗರ್ಭಕೋಶದಲ್ಲಿರುವ ಮಗುವಿಗೆ ರಕ್ಷಣೆ ಕೊಡುವ ಮಾಯೆ ಮಾಡುವ ಒಂದು ಅದ್ಭುತವಾದ ಆಟ! ಸ್ವಲ್ಪ ಯೋಚನೆ ಮಾಡಿ, ತಾಯಿ ತಿಂದ ಆಹಾರವೆಲ್ಲಾ ಪೂರ್ತಿಯಾಗಿ ಅವಳ ದೇಹವೇ ಬಳಸಿ ಕೊಂಡರೆ, ಒಳಗಿರುವ ಪುಟ್ಟ ಜೀವಕ್ಕೆ ಶಕ್ತಿ ಎಲ್ಲಿಂದ ಬರಬೇಕು? ಅದಕ್ಕೇ ಪ್ರಕೃತಿ ಒಂದು ಚಮತ್ಕಾರ ಮಾಡಿದೆ.

Health Tips: 40 ವರ್ಷ ದಾಟಿದ ನಂತರವೂ ಫಿಟ್ ಆಗಿರಲು ಈ ಆಹಾರ ಸೇವಿಸಿ

ವಯಸ್ಸು ಹೆಚ್ಚಾದಂತೆ ಆರೋಗ್ಯವಾಗಿರಬೇಕೇ? ಈ ಆಹಾರ ಸೇವಿಸಿ

50 ವರ್ಷ ದಾಟಿದ ನಂತರ ಜೀರ್ಣಕ್ರಿಯೆಯಲ್ಲಿ ಬದಲಾವಣೆ ಆಗಬಹುದು, ಸಕ್ಕರೆ ಮಟ್ಟ ಹೆಚ್ಚಾಗಬಹುದು, ರಕ್ತದೊತ್ತಡ, ಮಧುಮೇಹದಂತ ಅನೇಕ ಸಮಸ್ಯೆಗಳು ಕಾಡಬಹುದು. ಹೀಗಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಪ್ರಖ್ಯಾತ ಆಹಾರ ತಜ್ಞರೊಬ್ಬರು ವಯಸ್ಸಾದ್ದಂತೆ ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಪ್ರಮುಖ ಆಹಾರಗಳನ್ನು ಶಿಫಾರಸ್ಸು ಮಾಡಿದ್ದಾರೆ.

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

ನಾವು ಸಾಮಾನ್ಯವಾಗಿ ರೋಗವನ್ನು ಒಂದು ವೈರಸ್, ಒಂದು ಬ್ಯಾಕ್ಟೀರಿಯಾ ಅಥವಾ ಒಂದು ರಕ್ತಪರೀಕ್ಷೆ ಯ ವರದಿಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ತಪ್ಪಲ್ಲ. ಇಂದಿನ ವೈದ್ಯಕೀಯ ವಿಜ್ಞಾನವು ಸೋಂಕುಗಳ ಬಗ್ಗೆ, ರೋಗಾಣುಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ ಮಾನವಕುಲಕ್ಕೆ ಅಪಾರ ಸೇವೆ ಸಲ್ಲಿಸಿದೆ. ಪ್ರತಿಜೀವಕಗಳು, ತುರ್ತು ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು- ಇವೆಲ್ಲವೂ ಅನೇಕ ಜೀವಗಳನ್ನು ಉಳಿಸಿವೆ.

ಕರುಳಿನ ಆರೋಗ್ಯವನ್ನು ಹೆಚ್ಚಿಸಲು ತಜ್ಞರ ಸಲಹೆ ಇಲ್ಲಿದೆ!

ಕರುಳಿನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರಗಳು!

Health Tips: ಮಳೆಗಾಲದಲ್ಲಿ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹೊರಗಿನಿಂದ ಹಾಗೂ ಕರಿದ ಆಹಾರಗಳ ಸೇವನೆಯಿಂದ ಈ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ ಹೆಚ್ಚಿನವರು ಇದನ್ನು ಸುಧಾರಿಸಲು 'ಪ್ರೊಬಯೋಟಿಕ್ ಸಪ್ಲಿಮೆಂಟ್‌ಗಳು' ಹಾಗೂ ಕ್ಯಾಪ್ಸೂಲ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದರ ಬದಲಾಗಿ ಮನೆಯಲ್ಲೇ ಸಿಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ

ಕಿಡ್ನಿ ಸ್ಟೋನ್ಸ್ ತಡೆಗಟ್ಟುವಿಕೆಯ ಬಗ್ಗೆ ಅತಿ ಹೆಚ್ಚು ಸಂಖ್ಯೆಯ ಜಾಗೃತಿ: ಈ ಸಾಧನೆಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

ಕಿಡ್ನಿ ಸ್ಟೋನ್ಸ್ ಜಾಗೃತಿ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

ಭಾರತದಲ್ಲಿ ಮೂತ್ರಪಿಂಡದ ಕಲ್ಲಿನ ಕಾಯಿಲೆಯು ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ ಯಾಗಿದೆ. ಸರಿಯಾದ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ಮತ್ತೆ ಮತ್ತೆ ಮರುಕಳಿಸುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವೈದ್ಯರು ವಹಿಸುವ ಪ್ರಮುಖ ಪಾತ್ರ ವನ್ನು ಗುರುತಿಸಿ, ದೈನಂದಿನ ಸರಳ ತಡೆಗಟ್ಟುವ ಕ್ರಮಗಳ ಬಗ್ಗೆ ವೈದ್ಯರ ನೇತೃತ್ವದಲ್ಲಿ ಸಂವಹನ ನಡೆಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿತ್ತು.

Microsleep: ಸುಸ್ತಾದಾಗ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ? ಏನಿದರ ಮರ್ಮ? ಇದು ಒಳ್ಳೆಯದಾ?

ಕೂತಲ್ಲೇ ತೂಕಡಿಸುತ್ತೀರಾ? ಒಳ್ಳೆಯದು!

Health Tips: ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಲ್ಲೂ ನಿದ್ದೆʼ ಎಂದೆಲ್ಲ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಹಾಗೆ ಹಗಲಿನಲ್ಲಿ ನಿದ್ದೆ ಮಾಡಿದರೆ ರಾತ್ರಿಯ ನಿದ್ದೆಗೆ ತೊಂದರೆ ಆಗುವುದಿಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Loading...