ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಆರೋಗ್ಯ
Dark Circles: ಕಣ್ಣಿನ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆಮದ್ದು

ಡಾರ್ಕ್ ಸರ್ಕಲ್ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

Beauty Tips: ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸ, ಅತಿಯಾಗಿ ಮೊಬೈಲ್ ಬಳಕೆ, ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಅನೇಕ ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಅಂತಹವುಗಳಲ್ಲಿ ಕಣ್ಣಿನ ಡಾರ್ಕ್ ಸರ್ಕಲ್ ಕೂಡ ಒಂದು. ಡಾರ್ಕ್ ಸರ್ಕಲ್ ಉಂಟಾದಾಗ ಕಣ್ಣಿನ ಅಂದ ಹಾಳಾಗಿ ಮುಖದ ಸೌಂದರ್ಯ ಕಳೆಗುಂದುತ್ತದೆ. ಮುಖವು ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಈ ಡಾರ್ಕ್ ಸರ್ಕಲ್ ಉಂಟಾಗಲು‌ ಕಾರಣ ಏನು? ಡಾರ್ಕ್ ಸರ್ಕಲ್ ನಿವಾರಣೆ ಹೇಗೆ ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Vitamin E: ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ? ಹೇಗೆ ದೊರೆಯುತ್ತದೆ?

ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ?

ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನು ಹೇಳುವಾಗಲೆಲ್ಲ ವಿಟಮಿನ್‌ ಇ ಅಂಶ ದೇಹಕ್ಕೆ ಬೇಕು ಎನ್ನುವುದು ಸಾಮಾನ್ಯ. ಆದರೆ ಉಳಿದೆಲ್ಲ ಜೀವಸತ್ವಗಳ ಬಗ್ಗೆ, ಅಂದರೆ ಎ, ಬಿ, ಸಿ, ಡಿ ವಿಟಮಿನ್‌ಗಳ ಬಗ್ಗೆ ಮಾತಾಡಿದಷ್ಟು ಇ ಜೀವಸತ್ವದ ಬಗ್ಗೆ ನಾವು ಗಮನ ನೀಡುವುದಿಲ್ಲ. ಹಾಗಾಗಿ ಇದರ ಮಹತ್ವ ನಮಗೆ ಸರಿಯಾಗಿ ಅರ್ಥವಾಗದೇ ಹೋಗಿರಬಹುದು.

Hair Care: ಪ್ರಸವದ ನಂತರ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ಹೆರಿಗೆ ನಂತರದ ಕೂದಲಿನ ಆರೈಕೆ ಏನು?

Hair Care After Delivery: ನವಜಾತ ಶಿಶುಗಳ ಅಮ್ಮಂದಿರಿಗೆ ಇರುವಂಥ ಹಲವು ಸವಾಲುಗಳ ಪೈಕಿ ಕೂದಲು ಉದುರುವುದೂ ಒಂದು. ಇದಕ್ಕಾಗಿ ಎಷ್ಟೋ ಮಂದಿ ಬಾಣಂತಿಯರು ಬಯೋಟಿನ್‌ ಪೂರಕಗಳ ಮೊರೆ ಹೋಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಕೂದಲಿನ ಆರೈಕೆಯಲ್ಲಿ ಬಯೋಟಿನ್‌ ಮಹತ್ವದ ಪಾತ್ರ ವಹಿಸುತ್ತದೆ. ಕೂದಲಿನ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ

Pregnancy Tips: ಗರ್ಭಾವಸ್ಥೆಯಲ್ಲಿ ಕಾಣಿಸುವ ರಕ್ತದ ಚುಕ್ಕೆಗಳು ಸಾಮಾನ್ಯವೇ? ಈ ಬಗ್ಗೆ ವೈದ್ಯರ ಸಲಹೆ ಏನು?

ಗರ್ಭಾವಸ್ಥೆಯಲ್ಲಿ ಕಾಣಿಸುವ ರಕ್ತದ ಚುಕ್ಕೆಗಳು- ಇದರ ಅಪಾಯವೇನು?

Pregnancy Tips: ಹೆರಿಗೆಯ ಆರಂಭದ ಹಂತದಲ್ಲಿ ಚುಕ್ಕೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಭಾರೀ ರಕ್ತಸ್ರಾವ ಉಂಟಾದರೆ ಅದನ್ನು ಕಡೆಗಣಿಸಬಾರದು, ಏಕೆಂದರೆ ಇದು ಗರ್ಭಪಾತದ ತೊಂದರೆಯು ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹವು ಹಲವಾರು ಹಾರ್ಮೋನುಗಳ ಮತ್ತು ದೈಹಿಕ ಬದಲಾವಣೆಗಳಿಗೆ ಒಳಗಾಗುವುದರಿಂದ ರಕ್ತ ಸ್ರಾವ ಉಂಟಾದಾಗ ತಪಾಸಣೆ ಅಗತ್ಯವಾಗಿರುತ್ತದೆ..

KMC Hospital: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!

KMC Hospital: ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್ ಸಮಸ್ಯೆಯನ್ನು ನುರಿತ ತಜ್ಞರಾದ ಕನ್ಸಲ್ಟೆಂಟ್ ಸರ್ಜಿಕಲ್ ಆನ್ಕೋಲಾಜಿಸ್ಟ್ ಕಾರ್ತಿಕ್ ಕೆ ಎಸ್ ಅವರ ತಂಡ ನಿರ್ವಹಿಸುವಲ್ಲಿ ಯಶಸ್ವಿ ಯಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.

Summer Tips: ಕಬ್ಬಿನ ರಸ ಇಷ್ಟವೇ? ಹಾಗಿದ್ರೆ ಜಗಿದು ತಿನ್ನಿ

ಕಬ್ಬನ್ನು ಈ ರೀತಿ ತಿಂದರೆ ಉತ್ತಮ!

Summer Tips: ಬಿಸಿಲಿನಲ್ಲಿ ಆಯಾಸಗೊಂಡಾಗ ಒಂದು ಗ್ಲಾಸ್‌ ಕಬ್ಬಿನ ಹಾಲು ದೊರೆತರೆ ಅಮೃತವೇ ದೊರೆತಷ್ಟು ಆನಂದವಾಗುವುದು ಇದೇ ಕಾರಣಕ್ಕೆ. ಆದರೆ ಒಂದೊಮ್ಮೆ ನಿಜವಾಗಿ ಸ್ವಚ್ಛತೆ ಕಾಪಾಡಿಕೊಳ್ಳದ ಜಾಗದಲ್ಲಿ ಇದನ್ನು ಕುಡಿದರೆ ಹೊಟ್ಟೆ ಹಾಳಾಗುವುದು ನಿಶ್ಚಿತ. ಹಾಗೆಂದು ಮನೆಯಲ್ಲಿ ಇದರ ರಸ ಹಿಂಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾದರೆ ಈ ರಸವನ್ನು ಕುಡಿಯುವ ಬದಲು ಕಬ್ಬಿನ ಜಲ್ಲೆಯನ್ನೇ ಜಗಿದು ತಿನ್ನಬಹುದಲ್ಲವೇ? ಇದರಿಂದೇನಾದರೂ ಹೆಚ್ಚುವರಿ ಲಾಭಗಳಿವೆಯೇ?

Manipal Hospitals: ಮಣಿಪಾಲ್‌ ಹಾಸ್ಪಿಟಲ್ಸ್‌ನಲ್ಲಿ  AI ಚಾಲಿತ ಡಿಜಿಟಲ್ ಆರೋಗ್ಯ ಸೇವೆ

ಮಣಿಪಾಲ್‌ ಹಾಸ್ಪಿಟಲ್ಸ್‌ ಗೂಗಲ್‌ ಕ್ಲೌಡ್‌ನೊಂದಿಗೆ ಪಾಲುದಾರಿಕೆ

ವಿಶ್ವಾಸಾರ್ಹ ಆರೋಗ್ಯ ಸೇವೆ ಒದಗಿಸುವಲ್ಲಿ ಮಣಿಪಾಲ್ ಆಸ್ಪತ್ರೆಗಳು ಸದಾ ಮುಂದು. ಇದೀಗ AI-ಚಾಲಿತ ಡಿಜಿಟಲ್ ಆರೋಗ್ಯ ಸೇವೆಯನ್ನು ಪ್ರಾರಂಭಿಸಲು ಗೂಗಲ್  ಕ್ಲೌಡ್‌ನೊಂದಿಗೆ ಕೈ ಜೋಡಿಸುವುದಾಗಿ ಘೋಷಿಸಿದೆ. ರೋಗಿಗಳ ಆರೈಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಆಸ್ಪತ್ರೆಯು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ, ಸುಧಾರಿತ ಡೇಟಾ ವಿಶ್ಲೇಷಣೆ ಮತ್ತು  ಸುರಕ್ಷಿತ ಕ್ಲೌಡ್ ಮೂಲಸೌಕರ್ಯವನ್ನು ಬಳಸಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸಿದ ವೈದ್ಯರು!

Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ಎರಡು ತಿಂಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಿ ಚಿಕಿತ್ಸೆ ನೀಡಲಾಯಿತು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅಶೋಕ್ ಎಂ.ವಿ. ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಗಾಯಗಳನ್ನು ಗುಣಪಡಿಸುವುದು: ಮಧುಮೇಹ ಪಾದಕ್ಕೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಗಳು

ಮಧುಮೇಹ ಪಾದಕ್ಕೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಗಳು

ಮಧುಮೇಹ ಪಾದದ ಶಸ್ತ್ರಚಿಕಿತ್ಸೆಯ ನಿರ್ವಹಣೆ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಕಾಲು ತೊಡಕುಗಳನ್ನು ಅಭಿವೃದ್ಧಿಪಡಿಸುವ ಚಿಕಿತ್ಸೆಯ ನಿರ್ಣಾಯಕ ಅಂಶವಾಗಿದೆ. ಮಧುಮೇಹ ಕಾಲು ಒಂದು ಗಂಭೀರ ಸ್ಥಿತಿಯಾಗಿದ್ದು, ಸಂಸ್ಕರಿಸದ ಅಥವಾ ಕಳಪೆಯಾಗಿ ನಿರ್ವಹಿಸಿದರೆ ತೀವ್ರವಾದ ಕಾಯಿಲೆ ಮತ್ತು ಮರಣಕ್ಕೆ ಕಾರಣವಾಗಬಹುದು.

ಆಳವಾದ ರಕ್ತನಾಳದ ಥ್ರಂಬೋಸಿಸ್ ಅನ್ನು ಅರ್ಥಮಾಡಿಕೊಳ್ಳುವುದು: ಅಪಾಯಗಳು, ಲಕ್ಷಣಗಳು ಮತ್ತು ತಡೆಗಟ್ಟುವಿಕೆ

ಆಳವಾದ ರಕ್ತನಾಳದ ಥ್ರಂಬೋಸಿಸ್ ಅನ್ನು ಅರ್ಥಮಾಡಿಕೊಳ್ಳುವುದು

ನಿಶ್ಚಲತೆ, ಗಾಯ ಅಥವಾ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಆನುವಂಶಿಕ ಪ್ರವೃತ್ತಿ ಮತ್ತು ವಯಸ್ಸು ಸೇರಿದಂತೆ ಹಲವಾರು ಅಂಶಗಳು ಡಿವಿಟಿಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸಬಹುದು. ದೀರ್ಘಾ ವಧಿಯ ಪ್ರಯಾಣ ಅಥವಾ ಆಸ್ಪತ್ರೆಗೆ ದಾಖಲಾದಂತಹ ದೀರ್ಘಕಾಲದ ಅವಧಿಗಳು ಡಿವಿಟಿಯ ಅಪಾಯವನ್ನು ಹೆಚ್ಚಿಸಬಹುದು

Health Tips: ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರವೇನು?

ಕಾಡುವ ಮಲಬದ್ಧತೆಗೆ ಸುಲಭದ ಪರಿಹಾರ ಮಾರ್ಗ

ಮಲಬದ್ಧತೆಯಂಥ ತೊಂದರೆಗಳು ಯಾರನ್ನೂ, ಯಾವಾಗಲೂ ಸತಾಯಿಸಬಲ್ಲವು. ಅದರಲ್ಲೂ ಬೇಸಿಗೆಯಲ್ಲಿ ನೀರು ಮತ್ತು ನಾರು ದೇಹಕ್ಕೆ ಸಾಕಾಗದಿದ್ದರೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಬಲ್ಲದು. ಆದರೆ ಈ ಸಮಸ್ಯೆಗೆ ಪರಿಹಾರವಿದೆ ಎಂಬುದು ಖುಷಿಯ ವಿಷಯ. ಈ ಪರಿಹಾರವು ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವು ಸರಳ ಮಾರ್ಪಾಡುಗಳನ್ನು ಮಾಡಿ ಕೊಂಡಲ್ಲಿ, ಮಲಬದ್ಧತೆಯ ಕಿರಿಕಿರಿ, ನೋವುಗಳಿಲ್ಲದೆ ಆರಾಮದಲ್ಲಿ ಬದುಕಬಹುದು.

Toothpaste: ಹಲ್ಲುಜ್ಜುವಾಗ ಬಳಸುವ ಟೂತ್‌ಪೇಸ್ಟ್‌ ಪ್ರಮಾಣ ಎಷ್ಟಿರಬೇಕು?

ಹಲ್ಲುಜ್ಜುವಾಗ ಟೂತ್‌ಪೇಸ್ಟ್ ಎಷ್ಟು ಬಳಸಬೇಕು?

ಹಲ್ಲುಜ್ಜುವಾಗ ಎಲ್ಲರೂ ಉಪಯೋಗಿಸುವ ಟೂತ್‌ಪೇಸ್ಟ್‌ ಬಳಸಬೇಕಾದ ಪ್ರಮಾಣ ಎಷ್ಟು?ಈ ಪ್ರಶ್ನೆ ಹಲವರನ್ನು ಕಾಡಿರುತ್ತದೆ. ಜಾಹೀರಾತುಗಳಲ್ಲಿ ತೋರಿಸುವಷ್ಟು ಟೂತ್‌ಪೇಸ್ಟ್‌ ಪ್ರಮಾಣವು ಸಾಮಾನ್ಯರಿಗೆ ನಾಲ್ಕು ದಿನಕ್ಕೆ ಸಾಕಾಗುತ್ತದೆ. ಜೊತೆಗೆ ಅಷ್ಟೊಂದು ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ಸುರಿದುಕೊಂಡರೆ ಬಾಯೆಲ್ಲ ಉರಿಯೆದ್ದ ಅನುಭವ ಆಗುತ್ತದೆ. ಹಾಗಾಗಿ ಅಷ್ಟು ಬೇಡ ದಿದ್ದರೂ ಈಗ ನಾವು ಬಳಸುತ್ತಿರುವ ಪ್ರಮಾಣ ಸಾಕೇ? ದಿನಕ್ಕೆರಡು ಬಾರಿ ಹಲ್ಲುಜ್ಜುವುದನ್ನು ಗಮನದಲ್ಲಿ ಇರಿಸಿಕೊಂಡರೆ, ಬಳಸುವ ಟೂತ್‌ಪೇಸ್ಟ್‌ ಪ್ರಮಾಣ ಎಷ್ಟಿರಬೇಕು? ಹೆಚ್ಚಾದರೇನು, ಕಡಿಮೆಯಾದರೇನು?

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?

ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?

Health Tips: ಬೇಸಿಗೆಯ ದಿನಗಳಲ್ಲೇ ನೀರು, ಆಹಾರದ ಸೊಂಕುಗಳು ಸಾಮಾನ್ಯ. ಮಕ್ಕಳಿಗೆ ಅನಾರೋಗ್ಯ ಕಾಡುವಾಗ ಅದನ್ನು ಗುಣ ಪಡಿಸುವುದಕ್ಕೆ ವೈದ್ಯರು ಮತ್ತು ಔಷಧಿಯ ನೆರವು ದೊರೆಯುವುದು ನಿಜವಾದರೂ ಅನಾರೋಗ್ಯದ ನಂತರ ಹೇಗೆ? ಅಂದರೆ ಹೊಟ್ಟೆನೋವು, ಜ್ವರ, ಕೆಮ್ಮು ಮುಂತಾವು ಗುಣವಾದ ನಂತರ ಕಾಡುವ ಸುಸ್ತು, ನಿಶ್ಶಕ್ತಿ ಕಳೆಯುವುದಕ್ಕೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು. ಅನಾರೋಗ್ಯದ ದಿನಗಳಲ್ಲಿ ಮತ್ತು ನಂತರದ ಚೇತರಿಕೆಯಲ್ಲಿ ಮಕ್ಕಳ ಆರೈಕೆಗೆ ಏನೆಲ್ಲಾ ಮಾಡಬಹುದು?

Summer Tips: ಬೇಸಿಗೆ ತಂಪಾಗಿಸಿಕೊಳ್ಳಲು ಇರಲಿ ಪುದೀನಾ..!

ಬೇಸಿಗೆಯಲ್ಲಿ ಕೂಲ್ ಆಗಿರಿಸಲು ಪುದೀನಾ ಬಳಕೆ ಮಾಡಿ

ಬಿಸಿ ಚಹಾ, ಖಾರದ ಪಲಾವ್‌, ಚಟ್ನಿಗಳಿಗಷ್ಟೇ ಅಲ್ಲ, ತಂಪಾದ ಸ್ಮೂದಿ, ಸಲಾಡ್‌, ಮಜ್ಜಿಗೆ, ಫ್ರೂಟ್‌ ಬೌಲ್‌ ಮುಂತಾದ ಹಲವು ಆಹಾರಗಳ ರುಚಿಯನ್ನು ಪುದೀನಾ ಹೆಚ್ಚಿಸಬಲ್ಲದು. ಇನ್ನು ಬೇಸಿಗೆಯ ಬಿಸಿಯನ್ನು ಪುದೀನಾ ಸೊಪ್ಪಿನ ನೆರವಿನಿಂದ ತಂಪಾಗಿ ಸಿಕೊಳ್ಳಬಹುದು. ಬೇಸಿಗೆಯಲ್ಲಿ ತಂಪಾದ ಮಜ್ಜಿಗೆಗೆ ಪುದೀನಾ ಹಾಕಿ ಕುಡಿದರೆ… ಅಡಿಯಿಂದ ಮುಡಿಯವರೆಗೆ ತಣ್ಣನೆಯ ಅನುಭವವಾಗುವುದಿಲ್ಲವೇ? ಏನು ಈ ಮೂಲಿಕೆಯ ಸತ್ವಗಳು?

Food Adulteration: ಬಾಟಲಿ ನೀರು ಕೂಡ ಕಳಪೆ! ಖೋವಾ ಕೂಡ ಮಾರಕ, ಆಹಾರ ಇಲಾಖೆ ಎಚ್ಚರಿಕೆ

ಬಾಟಲಿ ನೀರು ಕೂಡ ಕಳಪೆ! ಖೋವಾ ಕೂಡ ಮಾರಕ, ಆಹಾರ ಇಲಾಖೆ ಎಚ್ಚರಿಕೆ

ಈ ಕುರಿತು ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. 296 ಕುಡಿಯುವ ನೀರಿನ ಬಾಟಲಿಗಳ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 95 ಮಾದರಿಗಳು ಅಸುರಕ್ಷಿತ ಎಂದು, 88 ಮಾದರಿಗಳು ಕಳಪೆ ಗುಣಮಟ್ಟದವು ಎಂದು ವರದಿಯಾಗಿದೆ.

World Health Day: ಜೀವನಶೈಲಿ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ: ಪ್ರಾಕ್ಟೊ

ಉತ್ತಮ ಆರೋಗ್ಯ ಫಲಿತಾಂಶಕ್ಕೆ ಕೊಡುಗೆ ನೀಡುವ ಒಂದು ಕ್ರಮ

2023ರಲ್ಲಿ ಪ್ರತಿ ಹತ್ತ ಜನರ ಪೈಕಿ 3.4 ಜನರು ಜೀವನ ಶೈಲಿಯ ಕಾಯಿಲೆಗೆ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರೆ, 2024ರಲ್ಲಿ ಈ ಪ್ರಮಾಣ 4.1ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು ಹೆಚ್ಚಿನ ಜನರು ಡಿಜಿಟಲ್ ಪ್ಲಾಟ್‌ ಫಾರ್ಮ್‌ಗಳತ್ತ ಮುಖ ಮಾಡುತ್ತಿದ್ದಾರೆ.

Health: ಎಡ ಭುಜದ ಮುರಿತಕ್ಕೆ ಒಳಗಾಗಿದ್ದ 57 ವರ್ಷದ ವ್ಯಕ್ತಿಗೆ ಅಪರೂಪದ ಭುಜದ ಕೀಲು ಮರುನಿರ್ಮಣ ಶಸ್ತ್ರಚಿಕಿತ್ಸೆ

57 ವರ್ಷದ ವ್ಯಕ್ತಿಗೆ ಅಪರೂಪದ ಭುಜದ ಕೀಲು ಮರುನಿರ್ಮಣ ಶಸ್ತ್ರಚಿಕಿತ್ಸೆ

ಸಂಪೂರ್ಣ ತಪಾಸಣೆಯ ನಂತರ ಅವರ ಎಡ ಭುಜದ ಅಕ್ರೋಮಿಯೊಕ್ಲಾವಿಕ್ಯುಲರ್‌ (ಎಸಿ) ಕೀಲುಗಳಲ್ಲಿ ಮುರಿತವಾಗಿರುವುದು ಕಂಡು ಬಂತು. ಅಕ್ರೋಮಿಯೊಕ್ಲಾವಿಕ್ಯುಲರ್‌ ಎನ್ನುವುದು ಭುಜದಲ್ಲಿನ ಡಿಸ್ಲೊಕೇಷನ್‌ಗಳಲ್ಲಿ ಒಂದು. ಇಲ್ಲಿ ಮುರಿತವಾಗಿ 10 ದಿನ ಕಳೆದಿದ್ದರೂ ಅವರು ಹಾಗೇ ನಿರ್ಲಕ್ಷಿಸಿದ್ದರಿಂದ ಪರಿಸ್ಥಿತಿ ಸವಾಲಿನದ್ದಾಗಿತ್ತು

Ice cream: ಐಸ್‌ಕ್ರೀಮ್ ಪ್ರಿಯರೇ ಎಚ್ಚರ... ಎಚ್ಚರ! ತಿನ್ನೋ ಮುನ್ನ ಈ ಬಗ್ಗೆ ಹುಷಾರಾಗಿರಿ!

ಐಸ್‌ಕ್ರೀಮ್ ಪ್ರಿಯರೇ ಎಚ್ಚರ! ತಿನ್ನೋ ಮುನ್ನ ಈ ಬಗ್ಗೆ ಹುಷಾರಾಗಿರಿ!

Ice cream: ಐಸ್‌ಕ್ರೀಮ್‌ ಕುರಿತು ಇದೀಗ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಐಸ್ ಕ್ರೀಮ್ ಉತ್ಪನ್ನಗಳ ಖರ್ಚನ್ನು ಕಡಿಮೆ ಮಾಡಲು ಕೆಲವು ತಯಾರಕರು ಐಸ್ ಕ್ರೀಮ್ ಹಾಗೂ ತಂಪು ಪಾನೀಯ ತಯಾರಿಸುವಾಗ ಡಿಟರ್ಜೆಂಟ್ ಮತ್ತು ಪಾಸ್ಪರಿಕ್ ಆ್ಯಸಿಡ್ ಇತರ ಕಲಬೆರಕೆಗಳನ್ನು ಬಳಸುತ್ತಿರುವ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇರುವ‌ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ಕೂಲ್ ಡ್ರಿಂಕ್ಸ್ ಅಂಗಡಿಗಳ ಮೇಲೆ ಎಫ್‌ಡಿಎ ರೇಡ್‌ ನಡೆಸಿ ತಪಾಸನೆ ಮಾಡಿದೆ.

Summer Tips: ಬೇಸಿಗೆಯಲ್ಲಿ ಮೊಸರು ಬೇಗನೆ ಹುಳಿಯಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್‌

ಬೇಸಿಗೆಯಲ್ಲಿ ಮೊಸರನ್ನು ತಾಜಾವಾಗಿ ಇರಿಸುವುದು ಹೇಗೆ?

ನಿಯಮಿತವಾಗಿ ಮೊಸರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜತೆಗೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬೇಸಗೆಯ ಹೆಚ್ಚಿನ ತಾಪಮಾನವು ಮೊಸರನ್ನು ಬೇಗನೆ ಕೆಡುವಂತೆ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಮೊಸರನ್ನು ಕೆಡದಂತೆ ಇಡಲು ಕೆಲವೊಂದು ಟಿಪ್ಸ್ ಇಲ್ಲಿದೆ.

Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ದಿನ ನಿತ್ಯ ವಾಕ್ ಮಾಡಿ

ನಿಮ್ಮ ಪ್ರತಿಯೊಂದು ಹೆಜ್ಜೆಯೂ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅನೇಕ ಗಂಭೀರ ಸಮಸ್ಯೆಗಳನ್ನು ತಡೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ನಿಯಮಿತ ನಡಿಗೆ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುವ ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಿ ತೂಕವನ್ನು ನಿಭಾಯಿಸುತ್ತದೆ.

Bath Every day: ದಿನ ನಿತ್ಯ ಸ್ನಾನ ಮಾಡಿದ್ರೆ ಸಿಗುವ ಪ್ರಯೋಜನಗಳೇನು?

ವೈದ್ಯರ ಪ್ರಕಾರ ದಿನ ನಿತ್ಯ ಸ್ನಾನ‌ಮಾಡಬೇಕೋ? ಬೇಡವೋ?

ತಜ್ಞರು ಹೇಳುವಂತೆ, ಚರ್ಮವನ್ನು ರಕ್ಷಿಸಲು ಹಾಗೇ ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೆಗೆದು ಹಾಕಲು ಸ್ನಾನ ಮುಖ್ಯ. ಹಾಗಾಗಿ ನಿಯಮಿತ ಸ್ನಾನವು ಉತ್ತಮ ಅಭ್ಯಾಸ ಎನಿಸಿಕೊಂಡಿದೆ. ಪ್ರತಿದಿನ ತಪ್ಪದೇ ಸ್ನಾನ ಮಾಡುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುವ ಜತೆಗೆ ಒತ್ತಡ ಹಾರ್ಮೋನುಗಳ ನಿಯಂತ್ರಣವಾಗುತ್ತದೆ.

Health Tips: ಬೇಸಿಗೆಯಲ್ಲಿ ಗರ್ಭಿಣಿಯ ಆಹಾರ ಹೇಗಿರಬೇಕು?

ಬೇಸಿಗೆಯಲ್ಲಿ ಗರ್ಭಿಣಿಯರ ಆಹಾರಕ್ರಮ ಹೀಗಿರಲಿ!

ಗರ್ಭಾವಸ್ಥೆಯೆಂದರೆ ಆರೋಗ್ಯದ ಬಗ್ಗೆ ಮಾತ್ರವಲ್ಲ, ಆಹಾರದ ಕುರಿತಾಗಿಯೂ ಕಾಳಜಿ ಮಾಡಬೇಕಾದ ದಿನಗಳು. ಅದರಲ್ಲೂ ಬೇಸಿಗೆಯ ಕಾಲದಲ್ಲಿ ಗರ್ಭಿಣಿ ಯರು ಐಸ್‌ಕ್ರೀಮ್‌, ಮಿಲ್ಕ್‌ಶೇಕ್‌ನಂಥವಷ್ಟೇ ಅಲ್ಲ, ತರಹೇವಾರಿ ಹಣ್ಣು ತರ ಕಾರಿ ಗಳನ್ನೂ ಸೇವಿಸಬೇಕಾಗುತ್ತದೆ. ವಸಂತ ಕಾಲದಲ್ಲಿ ದೊರೆಯುವ ರಸ ಭರಿತ ಮತ್ತು ರುಚಿಕರವಾದ ಹಣ್ಣುಗಳು ಆಕೆಯ ಒಡಲನ್ನು ತಂಪಾಗಿಡು ವುದರ ಜೊತೆಗೆ ಬಗೆಬಗೆಯ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡಬಲ್ಲವು. ಬೇಸಿಗೆಯನ್ನು ಗರ್ಭಿಣಿಯರು ತಂಪಾಗಿ ಕಳೆಯಲು ಅವರ ಆಹಾರಕ್ರಮ ಹೇಗಿರಬೇಕು?

ನಕಲಿ, ಕಲಬೆರಕೆ ಪನೀರ್‌ ಮಾರಾಟ; ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವರಿಗೆ ಪ್ರಲ್ಹಾದ್‌ ಜೋಶಿ ಪತ್ರ‌

ನಕಲಿ-ಕಲಬೆರಕೆ ಪನೀರ್‌; ಕ್ರಮಕ್ಕೆ ಒತ್ತಾಯಿಸಿ ಜೋಶಿ ಪತ್ರ‌

Pralhad Joshi: ದೇಶದ ಮಾರುಕಟ್ಟೆಗಳಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟದ ಬಗ್ಗೆ ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಅನೇಕ ದೂರುಗಳನ್ನು ಸ್ವೀಕರಿಸಿದೆ. ಹೀಗಾಗಿ ಇದರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Summer Tips: ಬಿಸಿಲಿಗೆ ಚರ್ಮ ಕೆಂಪಾಯಿತೇ? ಇಲ್ಲಿದೆ ಉಪಶಮನ

ಬಿಸಿಲಿಗೆ ಚರ್ಮದ ಆರೈಕೆಗೆ ಇಲ್ಲಿದೆ ಟಿಪ್ಸ್!

ಮಕ್ಕಳನ್ನು ಶಾಲೆಯಿಂದ ಕರೆತರುವುದು,ಆಫೀಸಿಗೆ ಹೋಗುವುದು ಅಥವಾ ಇನ್ನೇನೋ ಕೆಲಸಕ್ಕೆ ಬಿಸಿಲಲ್ಲಿ ಹೋಗುವುದು ಅನಿವಾರ್ಯ ಆಗಬಹುದು. ಹೀಗೆ ಹತ್ತಿಪ್ಪತ್ತು ನಿಮಿಷ ಬಿರುಬಿಸಿಲಿಗೆ ಒಡ್ಡಿಕೊಂಡರೂ ಚರ್ಮ ಕೆಂಪಾಗಿ ಸುಟ್ಟಂ ತಾಗುತ್ತದೆ. ಸನ್‌ಬರ್ನ್‌ ಅಥವಾ ಬಿಸಿಲಿಗೆ ಸುಡುವುದೆಂದರೆ ಚರ್ಮ ಕೆಂಪಾ ಗುವುದು ಮಾತ್ರವಲ್ಲ. ಕೆಲವೊಮ್ಮೆ ಸಣ್ಣ ಗುಳ್ಳೆಗಳೆದ್ದು, ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮವೆಲ್ಲ ಸಿಪ್ಪೆ ಸುಲಿದಂತಾಗಿ ಸೂಕ್ಷ್ಮ ಚರ್ಮದವರಿಗಂತೂ ಇದು ಮತ್ತೂ ಕಷ್ಟ. ಈ ರೀತಿ ಬಿಸಿಲಿಗೆ ಚರ್ಮ ಸುಟ್ಟಂತಾದಾಗ ಸುರಕ್ಷಿತವಾದ ಮನೆಮದ್ದುಗಳೇನು?