ಚಾಣಕ್ಯ ನೀತಿ ಪ್ರಕಾರ, ಯಶಸ್ಸಿನ ಸರಳ ಮಾರ್ಗ ಯಾವುದು ಗೊತ್ತೆ?
ಜೀವನದಲ್ಲಿ ಯಶಸ್ಸು ಎಂಬುದು ಸುಲಭವಾಗಿ ಸಿಗುವುದಿಲ್ಲ, ಅದನ್ನು ದಕ್ಕಿಸಿಕೊಳ್ಳಲು ಕಠಿಣ ಶ್ರಮದ ಜತೆ ನಿರಂತರ ಪ್ರಯತ್ನ ಅಗತ್ಯ ಎಂದಿದ್ದಾರೆ ಪ್ರಾಚೀನ ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ಮತ್ತು ರಾಜ ನೀತಿಜ್ಞ ಚಾಣಕ್ಯ. ಚಾಣಕ್ಯ ನೀತಿಯಲ್ಲಿ ಜೀವನ ನಿರ್ವಹಿಸುವ ಕುರಿತು ನಾನಾ ನಿಯಮಗಳನ್ನು ತಿಳಿಸಿದ್ದು, ಯಶಸ್ಸನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ.