ಇಂದು ಮತ್ತೆ ಗಗನಮುಖಿಯಾದ ಚಿನ್ನದ ದರ
Gold Rate Today: ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರುಪಾಯಿ ಏರಿಕೆ ಕಂಡು ಬಂದಿದ್ದು,12,785 ರುಪಾಯಿಗೆ ತಲುಪಿದೆ. 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರುಪಾಯಿ ಹೆಚ್ಚಾಗಿ 13,948 ರುಪಾಯಿಗೆ ಏರಿಕೆಯಾಗಿದೆ.
ಪ್ರತಿಷ್ಠಿತ ಏರ್ಬಿಎನ್ಬಿ ಸಂಸ್ಥೆಯು ತನ್ನ ಹೊಸ 'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಜೆನ್-ಜೀ ಪೀಳಿಗೆಯು ಲೈವ್ ಕಾನ್ಸರ್ಟ್ಗಳು ಮತ್ತು ಮ್ಯೂಸಿಕ್ ಫೆಸ್ಟಿವಲ್ ಗಳನ್ನು ಗಮನದಲ್ಲಿಟ್ಟು ಕೊಂಡು ತಮ್ಮ ಪ್ರವಾಸಗಳನ್ನು ಹೇಗೆ ಯೋಜಿಸುತ್ತಿದ್ದಾರೆ ಎಂದು ತಿಳಿಸಿದೆ.
Railway stocks: ಕಳೆದ ವರ್ಷ ಇಳಿಕೆಯನ್ನು ಕಂಡ ರೈಲ್ವೆ ಷೇರುಗಳು ಇದೀಗ ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಕಳೆದ ಎರಡು ವಾರಗಳಲ್ಲಿ ರೈಲ್ವೆ ಷೇರುಗಳು ಏರುಗತಿಯಲ್ಲಿ ಸಾಗುತ್ತಿದ್ದು, ಇರ್ಕಾನ್ಇಂಟರ್ ನ್ಯಾಷನಲ್, ರೈಲ್ ವಿಕಾಸ್ ನಿಗಮ್ ಮತ್ತು ಐಆರ್ಎಫ್ಸಿ ಸೇರಿದಂತೆ ಪ್ರಮುಖ ಸಂಸ್ಥೆಗಳ ಷೇರುಗಳಲ್ಲಿ ಶೇಕಡಾ 9–14ರಷ್ಟು ಏರಿಕೆ ಕಂಡು ಬಂದಿವೆ.
ಭಾರತೀಯ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ (SMBs), ಇದರಿಂದಾಗುವ ನಷ್ಟದ ಪ್ರಮಾಣ ಇನ್ನೂ ಹೆಚ್ಚಿರುತ್ತದೆ. ಒಂದೇ ಒಂದು ಮೋಸದ ವಹಿವಾಟು ಗ್ರಾಹಕರ ನಂಬಿಕೆಗೆ ಧಕ್ಕೆ, ಆರ್ಥಿಕ ನಷ್ಟಗಳು, ಕಾರ್ಯಾಚರಣೆಯ ಅಡಚಣೆಗಳಿಗೆ ಕಾರಣವಾಗ ಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಚಾರ್ಜ್ಬ್ಯಾಕ್ಗಳು ಮತ್ತು ಖಾತೆ ಸ್ಥಗಿತ ಗೊಳಿಸುವಿಕೆಗೆ ಕಾರಣವಾಗಬಹುದು
ಕಾರ್ ಖರೀದಿಸಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಕಾರ್ ಇವತ್ತು ಐಷಾರಾಮಿ ವಸ್ತುವಾಗಿ ಉಳಿದಿಲ್ಲ. ಇದು ದಿನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಮಾಧ್ಯಮ ವರ್ಗದ ಜನರು ಕಾರ್ ಖರೀದಿ ಮಾಡಬೇಕಾದರೆ ಯಾವ ರೀತಿಯ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದರ ಕುರಿತು ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ ನೀಡಿರುವ ಮಾಹಿತಿ ಇಲ್ಲಿದೆ.
ದಿನೇ ದಿನೆ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯ ನಡುವೆ ಇದೇ ಜೀವನ ಶೈಲಿಯನ್ನು ಮುಂದಿನ 20 ವರ್ಷಗಳ ಬಳಿಕ ಉಳಿಸಿಕೊಳ್ಳಲು ಸಾಧ್ಯವೇ? ಈ ಒಂದು ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಲೇಬೇಕು. ಯಾಕೆಂದರೆ ಈಗ ತಿಂಗಳಿಗೆ 1 ಲಕ್ಷ ರುಪಾಯಿ ಖರ್ಚು ಮಾಡುವಿರಾದರೆ ಮುಂದಿನ 20 ವರ್ಷಗಳ ಬಳಿಕ ತಿಂಗಳಿಗೆ ಖರ್ಚಿಗೆ ಎಷ್ಟು ಹಣ ಬೇಕಾಗುತ್ತೆ ಎಂಬುದನ್ನು ಯೋಚಿಸಿದ್ದೀರಾ? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ.
New Year Investment: ಹೊಸ ವರ್ಷ ಬಂದಾಗ ಹಣ ಖರ್ಚು ಮಾಡಲು ಸಾಕಷ್ಟು ದಾರಿಗಳನ್ನು ಹುಡುಕುತ್ತೇವೆ. ಅದಕ್ಕಿಂತ ಮುಖ್ಯವಾಗಿ ನಾವು ಹೂಡಿಕೆ ಮಾಡಲು ಯೋಜನೆಗಳನ್ನು ಮಾಡಬೇಕು. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಇದರಲ್ಲಿ ಕಾಯುವ ತಾಳ್ಮೆ ಬಹಳ ಮುಖ್ಯ ಎನ್ನುತ್ತಾರೆ ಹಣಕಾಸು ತಜ್ಞರಾದ ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕರಾದ ಅಶೋಕ್ ದೇವಾನಾಂಪ್ರಿಯ. ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ಎನ್ನುವ ಕುರಿತು ಅವರು ನೀಡಿರುವ ಸಲಹೆಗಳು ಇಂತಿವೆ.
ಕೇಂದ್ರ ಸರ್ಕಾರ ಸಿಗರೇಟ್ಗಳ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆ ಪರಿಣಾಮವಾಗಿ, ದೇಶದ ಅತಿದೊಡ್ಡ ಸಿಗರೇಟ್ ಉತ್ಪಾದಕ ಸಂಸ್ಥೆಯಾದ ಐಟಿಸಿ ಲಿಮಿಟೆಡ್ (ITC Ltd.)ಗೆ ಭಾರಿ ಹೊಡೆತ ತಗುಲಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 63,000 ಕೋಟಿ ರೂಪಾಯಿ (ಸುಮಾರು $7 ಬಿಲಿಯನ್) ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
Gold Rate Today: ಹೊಸ ವರ್ಷದಲ್ಲಿ ಚಿನ್ನದ ದರ ಏರುತ್ತಲೇ ಇದ್ದು, ಇಂದೂ ಸಹ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ 105 ರೂ. ಏರಿಕೆಯಾಗಿ ಬೆಲೆ 12,485 ರೂ. ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 114 ರೂ. ಏರಿಕೆಯಾಗಿ 13,620 ರೂ. ಇದೆ. 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 99,880 ರೂ. ಇದೆ.
Energy Efficiency Star Ratings: ಮನೆಯಲ್ಲಿ ಬಳಕೆಯಾಗುವ ಟಿವಿ, ರೆಫ್ರಿಜರೇಟರ್, ಎಲ್ಪಿಜಿ ಗ್ಯಾಸ್ ಸ್ಟೌವ್ಗಳು, ಎಸಿ ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಜನವರಿ 1ರಿಂದ ಸ್ಟಾರ್ ರೇಟಿಂಗ್ ಕಡ್ಡಾಯಗೊಳಿಸಲಾಗಿದೆ. ಇಂಧನ ದಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಲು ಇಂಧನ ದಕ್ಷತೆಯ ಬ್ಯೂರೋ (ಬಿಇಇ) ಈ ಅಧಿಸೂಚನೆ ಹೊರಡಿಸಿದೆ.
ಹೂಡಿಕೆ ಮಾಡುವಾಗ ಮೂರು ಮುಖ್ಯ ವಿಷಯಗಳ ಬಗ್ಗೆ ಯೋಚಿಸಬೇಕು. ಅವುಗಳೆಂದರೆ ಇಕ್ವಿಟಿಯಲ್ಲಿ ಹೂಡಿಕೆ ಮಾಡಬೇಕೋ, ಕಮಾಡಿಟಿಯಲ್ಲಿ ಹೂಡಿಕೆ ಮಾಡಬೇಕೋ ಅಥವಾ ಕ್ರಿಪ್ಟೋದಲ್ಲಿ ಹೂಡಿಕೆ ಮಾಡಬೇಕೋ ಎಂಬುದು. ಈ ಬಗ್ಗೆ ಹಣಕಾಸು ತಜ್ಞ, ಸ್ಟಾಕ್ ಟ್ರೇಡರ್ ದಯಾನಂದ ಏನು ಹೇಳುತ್ತಾರೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಹೊಸ ವರ್ಷದ ಆರಂಭದ ದಿನವೇ ಕೇಂದ್ರ ಸರ್ಕಾರ ಜನರಿಗೆ ದೊಡ್ಡ ಶಾಕ್ ನೀಡಿದೆ. ಫೆಬ್ರವರಿ 1ರಿಂದ ಜಾರಿಯಾಗುವಂತೆ ಸಿಗರೇಟ್, ಬೀಡಿ, ಪಾನ್ ಮಸಾಲ ಬೆಲೆ ಹೆಚ್ಚಳಕ್ಕೆ ಕಾರಣವಾಗುವಂತೆ ಮೇಲಿನ ಹೊಸ ಸುಂಕಗಳನ್ನು ವಿಧಿಸಿದೆ. ಇದು ಜಿಎಸ್ಟಿ ದರಕ್ಕಿಂತ ಹೆಚ್ಚಾಗಿದ್ದು, ಪ್ರಸ್ತುತ ಇವುಗಳ ಮೇಲೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ ಎನ್ನಲಾಗಿದೆ.
ಅನ್ಯಲೋಕದವರು ಭೂಮಿಯನ್ನು ಸಂಪರ್ಕಿಸುತ್ತಾರೆ, ಮಾರುಕಟ್ಟೆಯಲ್ಲಿ ಕುಸಿತ ಮುಂದುವರಿಯುತ್ತದೆ, ಏಷ್ಯಾ ಅದರಲ್ಲೂ ವಿಶೇಷವಾಗಿ ಚೀನಾ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ..ಇವೆಲ್ಲವೂ 2026ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು. ಇದು ನಿಜವಾಗುವ ಲಕ್ಷಣಗಳು ಗೋಚರವಾಗಿದ್ದರೂ ಸ್ಪಷ್ಟತೆಗೆ ಕಾಯಬೇಕಿದೆ. 2026ಕ್ಕೆ ಬಾಬಾ ವಂಗಾ ನುಡಿದಿರುವ ಹಲವು ಭವಿಷ್ಯವಾಣಿಗಳ ಕುರಿತು ಮಾಹಿತಿ ಇಲ್ಲಿವೆ.
ತೆಲಂಗಾಣ ಗಿಗ್, ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ ಭಾರತೀಯ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಡಿಸೆಂಬರ್ 31ರಂದು ಮುಷ್ಕರ ನಡೆಯುತ್ತಿದ್ದು, ಝೊಮ್ಯಾಟೊ, ಸ್ವಿಗ್ಗಿ, ಬ್ಲಿಂಕ್ಇಟ್, ಜೆಪ್ಟೋ, ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ಸೇರಿದಂತೆ ವಿವಿಧ ಗಿಗ್ ಪ್ಲಾಟ್ಫಾರ್ಮ್ಗಳ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬಂದ್ಗೆ ಕರೆ ನೀಡಿದ್ದಾರೆ. ವರ್ಷಾಂತ್ಯದ ದಿನದಂದು, ಭಾರತದ ಹಲವು ನಗರಗಳಲ್ಲಿ ಆಹಾರ ವಿತರಣೆ, ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ಸೇವೆಗಳಲ್ಲಿ ಅಡಚಣೆ ಆಗಲಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ದೆಹಲಿ-ಎನ್ಸಿಆರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕೆಲವು ಪ್ರದೇಶೀಯ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಇನ್ನೂ ಮಾಡಿಲ್ಲವೇ ? ಇಲ್ಲವಾದರೆ ಕೂಡಲೇ ಮಾಡಿಬಿಡಿ. ಯಾಕೆಂದರೆ ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಗೆ ಇಂದು ಕೊನೆಯ ದಿನವಾಗಿದೆ. ಆಧಾರ್ ಕಾರ್ಡ್ ಲಿಂಕ್ ಮಾಡದ ಪಾನ್ ಕಾರ್ಡ್ ನಾಳೆಯಿಂದ ನಿಷ್ಕ್ರಿಯಗೊಳ್ಳಲಿದೆ. ಇದರಿಂದ ಮುಂದೆ ತೆರಿಗೆ ಸಂಬಂಧಿತ ಕಾರ್ಯಗಳಿಗೆ ತೊಂದರೆಯಾಗಬಹುದು ಎಚ್ಚರ.
ಕಳೆದ 9 ವರ್ಷಗಳಿಂದ ಪಾಲಿಸಿಕೊಂಡು ಬಂದ ಸಂಸತ್ತಿನ ಸಂಪ್ರದಾಯವೊಂದು ಈ ಬಾರಿ ಮುರಿಯಲಾಗುತ್ತದೆಯೇ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ. ಯಾಕೆಂದರೆ ಈ ಬಾರಿಯ ಬಜೆಟ್ ಮಂಡನೆ ದಿನ ಭಾನುವಾರ ಬರಲಿದೆ. ಸಾಮಾನ್ಯವಾಗಿ ಭಾನುವಾರವನ್ನು ರಾಜಾ ದಿನವಾಗಿ ಪರಿಗಣಿಸಲಾಗಿದೆ. ಒಂದು ವೇಳೆ ಈ ದಿನ ಬಜೆಟ್ ಮಂಡನೆಯಾಗಲಿ ಅಥವಾ ಆಗದೇ ಇರಲಿ ಅದು ದಾಖಲೆಯಾಗಿ ಉಳಿಯಲಿದೆ.