ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಣಿಜ್ಯ

Vijayanagara News: ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಜಯಶ್ರೀ ಚೈಲ್ಡ್ ಕೇರ್ ಮಕ್ಕಳ ಹಾಗೂ ನವಜಾತ ಶಿಶುಗಳ ಆರೈಕೆ ಆಸ್ಪತ್ರೆ ಉದ್ಘಾಟನೆಯಾಗಿದೆ. ಆಸ್ಪತ್ರೆಯನ್ನು ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಬಲ್ಡೋಟಾ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದೇರ್ಶಕ ನರೇಂದ್ರ ಬಲ್ಡೋಟಾ ಉದ್ಘಾಟಿಸಿದರು.

Gold Price Today On 20th July 2026: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದು ಹೆಚ್ಚಾಗಿದ್ದು ಇಷ್ಟು

ಚಿನ್ನದ ದರದಲ್ಲಿ ಮತ್ತೆ ಏರಿಕೆ

Gold Silver Price Today: ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರದಲ್ಲಿ ಸೋಮವಾರ (ಜುಲೈ 20) ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15 ರುಪಾಯಿ ಹೆಚ್ಚಾಗಿ 13,150 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 17 ರುಪಾಯಿ ಅಧಿಕವಾಗಿ 14,346 ರುಪಾಯಿಗೆ ಬಂದಿದೆ.

ಭಾರತದ ವಾಣಿಜ್ಯ ವಾಹನಗಳ ಹಣಕಾಸು ವ್ಯವಸ್ಥೆ ಬಲಪಡಿಸಲು ಟಾಟಾ ಮೋಟಾರ್ಸ್ ಮತ್ತು ಯುಕೋ ಬ್ಯಾಂಕ್ ಸಹಭಾಗಿತ್ವ

ವಾಣಿಜ್ಯ ವಾಹನಗಳ ಹಣಕಾಸು ವ್ಯವಸ್ಥೆ ಬಲಪಡಿಸಲು ಸಹಭಾಗಿತ್ವ

ಈ ಪಾಲುದಾರಿಕೆಯು ತಡೆರಹಿತ ಖರೀದಿ ಅನುಭವಕ್ಕಾಗಿ ಸರಳೀಕೃತ, ಗ್ರಾಹಕ ಸ್ನೇಹಿ ದಾಖಲಾತಿ ಗಳು, ವ್ಯವಹಾರಗಳಿಗೆ ಮುಂಗಡ ಬಂಡವಾಳದ ಅವಶ್ಯಕತೆಗಳನ್ನು ಕಡಿಮೆ ಮಾಡುವ ಹೆಚ್ಚಿನ ಸಾಲ-ಮೌಲ್ಯ ನಿಧಿ ಆಯ್ಕೆಗಳು ಮತ್ತು ಫ್ಲೀಟ್ ಆಪರೇಟರ್‌ಗಳ ನಗದು ಹರಿವಿನ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ, ರಚನಾತ್ಮಕ ಮರುಪಾವತಿ ಅವಧಿಗಳನ್ನು ಸಹ ತರುತ್ತದೆ.

Gold Price Today On 19th July 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ

ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕ ಕಂಡುಬಂದಿದೆ . ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,135 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 14,329 ರುಪಾಯಿಗೆ ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,080 ರುಪಾಯಿ ಆಗಿದೆ.

‘ಗಿಫ್ಟ್ ಸಿಟಿ'ಯಲ್ಲಿ ನೂತನ 'ಗ್ಲೋಬಲ್ ಟೆಕ್ ಸೆಂಟರ್' ಆರಂಭಿಸಿದ ಎಚ್‌ಸಿಎಲ್‌ ಟೆಕ್‌; ಯುವಕರಿಗೆ ಭರ್ಜರಿ ಉದ್ಯೋಗಾವಕಾಶ

‘ಗಿಫ್ಟ್ ಸಿಟಿ'ಯಲ್ಲಿ ನೂತನ 'ಗ್ಲೋಬಲ್ ಟೆಕ್ ಸೆಂಟರ್' ಆರಂಭ

'ಎಚ್‌ಸಿಎಲ್ ಟೆಕ್' ಕಂಪನಿ, ಇದೀಗ ಗುಜರಾತ್‌ನ ಪ್ರತಿಷ್ಠಿತ 'ಗಿಫ್ಟ್ ಸಿಟಿ' ಯಲ್ಲಿ ತನ್ನ ಹೊಸ 'ಗ್ಲೋಬಲ್ ಟೆಕ್ನಾಲಜಿ ಸೆಂಟರ್' ಅನ್ನು ಆರಂಭಿಸಿದೆ. ಹಣಕಾಸು ವಲಯದ ಜಾಗತಿಕ ಗ್ರಾಹಕರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ ಈ ಬೃಹತ್ ಕೇಂದ್ರವನ್ನು ನಿರ್ಮಿಸಲಾಗಿದೆ.

Vishwavani Money: ಉದ್ಯೋಗ ಬದಲಾಯಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ Video

ಪಿಎಫ್ ಹಣ ವರ್ಗಾವಣೆ ಹೇಗೆ?

ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಉದ್ಯೋಗ ಬದಲಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಈಗ ಮತ್ತಷ್ಟು ಸುಲಭವಾಗಿದೆ. ಇಪಿಎಫ್ ತನ್ನ ಸದಸ್ಯರ ಪೋರ್ಟಲ್ ಅನ್ನು ನವೀಕರಿಸಿದ್ದು, ಇದರಿಂದ ಪಿಎಫ್ ಖಾತೆ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸಲು ಎರಡು ಸುಲಭ ಮಾರ್ಗಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

Gold Price Today On 18th July 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಇಲ್ಲಿದೆ ಬೆಲೆ

ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಇಲ್ಲಿದೆ ಬೆಲೆ

ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕ ಕಂಡುಬಂದಿದೆ . ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 70 ರುಪಾಯಿ ಏರಿಕೆಯಾಗಿ 13,135 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 76 ರುಪಾಯಿ ಏರಿಕೆಯಾಗಿ 14,329 ರುಪಾಯಿಗೆ ಬಂದಿದೆ.

ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಏನು ಇದರ ವಿಶೇಷತೆ?

ಹೈಡ್ರೋಜನ್ ಹೈಡ್ರೋಜನ್ ಪ್ರಧಾನಿ ಮೋದಿ ರೈಲಿಗೆ ಚಾಲನೆ

ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳಲ್ಲಿ ಈಗ ಭಾರತವು ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸುವ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.

Gold Price Today On 17th July 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಇಲ್ಲಿದೆ

Gold Price Today: ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯ ಕಂಡುಬಂದಿದೆ . ಆ ಮೂಲಕ ಗ್ರಾಹಕರಿಗೆ ತುಸು ರಿಲೀಫ್‌ ಸಿಕ್ಕಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 70 ರುಪಾಯಿ ಕಡಿಮೆಯಾಗಿ 13,065ರುಪಾಯಿಗೆ ಬಂದು ತಲುಪಿದೆ.

34 ಕೋಟಿ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ; ನಿಮ್ಮ ಅಕೌಂಟ್‌ಗೂ ಬಂತಾ? ಹೀಗೆ ಚೆಕ್‌ ಮಾಡಿ

ಇಪಿಎಫ್ ಖಾತೆಗೆ ಬಡ್ಡಿ ಜಮೆ; ಹೀಗೆ ಚೆಕ್‌ ಮಾಡಿ

Employees Provident Fund: ದೇಶಾದ್ಯಂತ ಇರುವ ಸುಮಾರು 34 ಕೋಟಿ ಜನರ ಭವಿಷ್ಯ ನಿಧಿ ಖಾತೆಗೆ ಬಡ್ಡಿ ಮೊತ್ತವನ್ನು ಜುಲೈ 15ರಂದು ಜಮೆ ಮಾಡಲಾಗಿದೆ. ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳು ಬಡ್ಡಿ ಮೊತ್ತ ತಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎನ್ನುವ ವಿವರ ಇಲ್ಲಿದೆ.

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

ಭಾರತದಿಂದ ಪೆಟ್ರೋಲ್ ಕೇಳಿದ ರಷ್ಯಾ; ಏನಿದು ರಿವರ್ಸ್‌ ಎಕಾನಮಿ?

Russia-Ukraine War: ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದ್ದು, ದೇಶದಲ್ಲಿ ಪೆಟ್ರೋಲ್ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.

Gold Price Today On 16th July 2026: ಮತ್ತೆ ಇಳಿದ ಚಿನ್ನದ ಬೆಲೆ; ಬೆಂಗಳೂರಿನ ಇಂದಿನ ದರ ಚೆಕ್‌ ಮಾಡಿ

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಬೆಲೆ ಚೆಕ್‌ ಮಾಡಿ

Gold Silver Price Today: ಬುಧವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು ಇಳಿಕೆಯ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 25 ರುಪಾಯಿ ಕಡಿಮೆಯಾಗಿ 13,135 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 28 ರುಪಾಯಿ ಅಗ್ಗವಾಗಿ, 14,329 ರುಪಾಯಿಗೆ ಬಂದಿದೆ.

ಪ್ರವಾಸಿಗರಿಗೆ ಭರ್ಜರಿ ಕೊಡುಗೆ: 'ಒನ್ ಸರ್ಕಲ್' ಗ್ಲೋಬಲ್ ರಿವಾರ್ಡ್ಸ್ ಪ್ರೋಗ್ರಾಂ ಆರಂಭಿಸಿದ ಮೇಕ್ ಮೈ ಟ್ರಿಪ್‌! ಏನಿದರ ಲಾಭ?

ಪ್ರವಾಸಿಗರಿಗೆ ಭರ್ಜರಿ ಕೊಡುಗೆ

ದೇಶದಲ್ಲಿ ಮಾತ್ರವಲ್ಲದೆ, ಭಾರತೀಯರು ಅತಿ ಹೆಚ್ಚು ಭೇಟಿ ನೀಡುವ 39 ದೇಶಗಳ 134 ಪ್ರವಾಸಿ ತಾಣ ಗಳಲ್ಲಿನ 1,046 ಪ್ರಾಪರ್ಟಿಗಳನ್ನು ಸಹ ಈ ರಿವಾರ್ಡ್ಸ್ ಕಾರ್ಯಕ್ರಮದಡಿ ಸೇರಿಸಲಾಗಿದೆ. ಗ್ರಾಹಕರ ರೇಟಿಂಗ್ಸ್ ಹಾಗೂ ಮೇಕ್ ಮೈ ಟ್ರಿಪ್ ತಂಡದ ನೇರ ಪರಿಶೀಲನೆಯ ನಂತರವೇ ಅತ್ಯುತ್ತಮ ಹೋಟೆಲ್‌ ಗಳನ್ನು ಈ ನೆಟ್‌ವರ್ಕ್‌ಗೆ ಸೇರ್ಪಡೆಗೊಳಿಸಲಾಗಿದೆ.

E20 ಪೆಟ್ರೋಲ್‌ನಿಂದ ಎಂಜಿನ್‌ಗೆ ಹಾನಿಯಿಲ್ಲ, ಮೈಲೇಜ್ ಮೇಲೂ ದೊಡ್ಡ ಪರಿಣಾಮವಿಲ್ಲ: IIT ಕಾನ್ಪುರ್ ಸಂಶೋಧನೆಯಿಂದ ದೃಢ

E20 ಕುರಿತು ವದಂತಿ ತಳ್ಳಿ ಹಾಕಿದ IIT

E20 Petrol: E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುವುದಿಲ್ಲ ಹಾಗೂ ಮೈಲೇಜ್‌ನಲ್ಲಿ ಗಮನಾರ್ಹ ಕುಸಿತವೂ ಕಂಡುಬರುವುದಿಲ್ಲ ಎಂದು ಐಐಟಿ ಕಾನ್ಪುರ್ ಸಂಶೋಧನೆ ತಿಳಿಸಿದೆ. ಚಾಲನಾ ಶೈಲಿ, ರಸ್ತೆ ಪರಿಸ್ಥಿತಿ ಮತ್ತು ವಾಹನದ ನಿರ್ವಹಣೆಯೇ ಮೈಲೇಜ್ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಪುರಿ ವಾರ್ಷಿಕ ರಥಯಾತ್ರೆ ವೇಳೆ ಭಕ್ತರ ನೆರವಿಗೆ ಧಾವಿಸಿದ ರಿಲಯನ್ಸ್ ಫೌಂಡೇಷನ್‌; ಅನ್ನ ದಾನ, ಪೊಲೀಸ್ ಸಹಾಯ ಕೇಂದ್ರ, ಜಾಗೃತಿ ಸೇರಿ ವಿವಿಧ ಸೇವೆ

ಪುರಿ ವಾರ್ಷಿಕ ರಥಯಾತ್ರೆ; ರಿಲಯನ್ಸ್ ಫೌಂಡೇಷನ್‌ನಿಂದ ವಿವಿದ ಸೇವೆ

Reliance Foundation: ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಪುರಿ ಜಗನ್ನಾಥ ವಾರ್ಷಿಕ ರಥಯಾತ್ರೆಯಲ್ಲಿ ರಿಲಯನ್ಸ್ ಫೌಂಡೇಷನ್‌ನಿಂದ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಆಡಳಿತದ ಜತೆಗೆ ಕೈ ಜೋಡಿಸಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಆದಾಯ ತೆರಿಗೆ ಮರುಪಾವತಿಗೆ ಎಷ್ಟು ದಿನ ಕಾಯಬೇಕು?

ಆದಾಯ ತೆರಿಗೆ ಮರುಪಾವತಿ ನಿಯಮಗಳೇನು?

ಆದಾಯ ತೆರಿಗೆ ಮರುಪಾವತಿಗೆ ಕಾಯುತ್ತಿದ್ದೀರಾ ? ಇನ್ನು ಆದಾಯ ತೆರಿಗೆ ಮರುಪಾವತಿ ಪಡೆಯಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಕೇವಲ 10 ದಿನಗಳಲ್ಲಿ ನಿಗದಿತ ಮೊತ್ತ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಸಲ್ಲಿಸಿದ ಆದಾಯ ತೆರಿಗೆ ಮರು ಪಾವತಿ ಅರ್ಜಿ ವಿವರಗಳ ಇ-ಪರಿಶೀಲನೆಯ ಬಳಿಕ ಆದಾಯ ತೆರಿಗೆ ಮರುಪಾವತಿಯಾಗಲಿದೆ.

AACCI ಕರ್ನಾಟಕ ರಾಜ್ಯದ 'ಮೆಂಬರ್ ವೆಲ್ಫೇರ್ ಕಮಿಟಿ' ಅಧ್ಯಕ್ಷರಾಗಿ ಕಾರ್ತಿಕ್ ಸೋಮಯಾಜಿ ನೇಮಕ

AACCI ಕರ್ನಾಟಕ 'ಮೆಂಬರ್ ವೆಲ್ಫೇರ್ ಕಮಿಟಿ'ಅಧ್ಯಕ್ಷರಾಗಿ ಕಾರ್ತಿಕ್ ಸೋಮಯಾಜಿ

AACCI: ಅಂತಾರಾಷ್ಟ್ರೀಯ ಮಟ್ಟದ ವೇಗವಾಗಿ ಬೆಳೆಯುತ್ತಿರುವ ಪ್ರತಿಷ್ಠಿತ ವ್ಯಾಪಾರ ಸಂಘಟನೆ ಏಷ್ಯನ್-ಆಫ್ರಿಕನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (AACCI) ತನ್ನ ಕರ್ನಾಟಕ ರಾಜ್ಯದ 'ಮೆಂಬರ್ ವೆಲ್ಫೇರ್ ಕಮಿಟಿ' (ಸದಸ್ಯರ ಕಲ್ಯಾಣ ಸಮಿತಿ) ಅಧ್ಯಕ್ಷರಾಗಿ ಕಾರ್ತಿಕ್ ಸೋಮಯಾಜಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದೆ.

Gold Price Today On 15th July 2026: ಚಿನ್ನದ ದರದಲ್ಲಿಂದು ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಏರಿಕೆ; ಬೆಲೆ ಇಲ್ಲಿದೆ

Gold Rate Today: ಕಳೆದ ಕೆಲ ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 70 ರೂ. ಏರಿಕೆಯಾಗಿ, 13,160 ರುಪಾಯಿ ಇದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 77 ರೂ. ಏರಿಕೆಯಾಗಿ, 14,357 ರುಪಾಯಿಗೆ ಇದೆ.

JioHome: ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್

ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ; 400 ರೂ.ಗೆ 1,000+ ಚಾನೆಲ್ಸ್

Reliance Jio: ರಿಲಯನ್ಸ್ ಜಿಯೋ, ಇಂದು ಜಿಯೋ ಹೋಮ್ ಟಿವಿ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಇದು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಗ್ರಾಹಕರಿಗೆ ತಿಂಗಳಿಗೆ ಕೇವಲ 400 ರೂ.ಗಳಿಗೆ (ಎಲ್ಲವನ್ನೂ ಒಳಗೊಂಡಂತೆ) ನೀಡುತ್ತದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಪಿಎಫ್ ಬಡ್ಡಿ ಮೊತ್ತ ಖಾತೆಗೆ ಜಮೆಯಾಗಿದೆಯೇ? ಪರಿಶೀಲಿಸುವುದು ಎಲ್ಲಿ, ಹೇಗೆ? Video

ಜುಲೈ 15ರೊಳಗೆ ಪಿಎಫ್ ಬಡ್ಡಿ ಉದ್ಯೋಗಿಗಳ ಖಾತೆಗೆ ಜಮೆ

ಭವಿಷ್ಯ ನಿಧಿ ಖಾತೆ ಹೊಂದಿರುವ ಎಲ್ಲರಿಗೂ ಜುಲೈ 15ರೊಳಗೆ ಪಿಎಫ್ ಮೊತ್ತದ ಬಡ್ಡಿಯನ್ನು ಪಾವತಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಎಷ್ಟು ಬಡ್ಡಿ ಮೊತ್ತ ಪಾವತಿಯಾಗಿದೆ, ಇದನ್ನು ಪರಿಶೀಲಿಸುವುದು ಹೇಗೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Gold Price Today On 14th July 2026: ಸ್ವರ್ಣ ಪ್ರಿಯರಿಗಿಂದು ಶುಭ ಸುದ್ದಿ; ಚಿನ್ನದ ಬೆಲೆಯಲ್ಲಿಂದು ಮತ್ತೆ ಇಳಿಕೆ

ಸ್ವರ್ಣ ಪ್ರಿಯರಿಗಿಂದು ಶುಭ ಸುದ್ದಿ; ಚಿನ್ನದ ಬೆಲೆಯಲ್ಲಿಂದು ಮತ್ತೆ ಇಳಿಕೆ

Gold Price Today: ಸ್ವರ್ಣ ಕೊಳ್ಳುವವರಿಗೆ ಇಂದು ಸಹ ಸಿಹಿ ಸುದ್ದಿ ದೊರಕಿದೆ. ಚಿನ್ನದ ದರದಲ್ಲಿಂದು ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 10 ರೂ. ಇಳಿಕೆಯಾಗಿ 13,090 ರುಪಾಯಿ ಇದೆ.

E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

E20 ಪೆಟ್ರೋಲ್‌ಗೆ ಎನ್‌ಡಿಎ ಬೆಂಬಲಿಗರೇ ಹಿಂದೇಟು

E20 Petrol: ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಶೇ. 55.1ರಷ್ಟು ಜನರು E20 ಪೆಟ್ರೋಲ್ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಬೆಂಬಲಿಗರ ಪೈಕಿ ಶೇ. 52.5ರಷ್ಟು ಜನರು ಕೂಡ E20 ಬಳಸಲು ಹಿಂದೇಟು ಹಾಕಿದ್ದು, ವಾಹನದ ಎಂಜಿನ್ ಹಾನಿ ಮತ್ತು ಮೈಲೇಜ್ ಕಡಿಮೆಯಾಗುವ ಆತಂಕವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಹೆಚ್ಚಿನವರು ಸಾಮಾನ್ಯ ಪೆಟ್ರೋಲ್ ಮತ್ತು E20 ಎರಡೂ ಮಾರುಕಟ್ಟೆಯಲ್ಲಿ ಲಭ್ಯವಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪ್ಯಾರಿಸ್ ಕೌಟೂರ್ ಸಪ್ತಾಹ-2026” ಅನಾವರಣದಲ್ಲಿ ತನಿಷ್ಕ್ ನ್ಯಾಚುರಲ್ ಡೈಮಂಡ್ಸ್ ಮತ್ತು ರಾಹುಲ್ ಮಿಶ್ರಾ ಭಾಗಿ

ಮೊದಲ ಬಾರಿಗೆ ವಿಶೇಷವಾಗಿ ಆಯೋಜಿಸಿರುವ ವಸ್ತ್ರಾಭರಣ ಸಂಗ್ರಹ

ಜಾಗತಿಕ ಮಟ್ಟದ ಮಹತ್ವಾಕಾಂಕ್ಷಿ ಅನಾವರಣಕ್ಕೆ ಸಾಕ್ಷಿಯಾಗಲಿರುವ ಈ ಸಹಯೋಗವು ತನಿಷ್ಕ್‌ನ ನೈಸರ್ಗಿಕ ವಜ್ರದ ಕರಕುಶಲತೆ ಮತ್ತು ರಾಹುಲ್ ಮಿಶ್ರಾ ಅವರ ಜಾಗತಿಕವಾಗಿ ಪ್ರಸಿದ್ಧವಾದ ಕೌಟೂರ್ (ಹೈ ಫ್ಯಾಷನ್) ಕಲಾತ್ಮಕತೆಯನ್ನು ಒಟ್ಟುಗೂಡಿಸಿ ಫ್ಯಾಷನ್‌ನ ಅತ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಒಂದಾದ ಸಮಕಾಲೀನ ಭಾರತೀಯ ಐಷಾರಾಮಿ ಆಭರಣ ವಿನ್ಯಾಸಗಳ ಹೊಸ ಅಭಿವ್ಯಕ್ತಿಯನ್ನು ಪ್ರಸ್ತುತಪಡಿಸಿದೆ.

HDFC Layoff: ಸ್ವಯಂ ಚಾಲಿತ ತಂತ್ರಜ್ಞಾನ ಅಳವಡಿಕೆ; ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌

ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗ ಕಡಿತ

HDFC Bank: ಆಟೋಮೇಷನ್‌ಗೆ ಹೆಚ್ಚಿನ ಆದ್ಯತೆ ನೀಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್ 3,300ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. ಹೊಸ ನೇಮಕಾತಿಗಳನ್ನು ಕೂಡ ಕಡಿಮೆ ಮಾಡಲಾಗಿದೆ. ಕಳೆದ ಮಾರ್ಚ್ 31ರ ವೇಳೆಗೆ ಬ್ಯಾಂಕಿನ ಒಟ್ಟು ಸಿಬ್ಬಂದಿ ಸಂಖ್ಯೆ 2,11,178ಕ್ಕೆ ಇಳಿದಿದೆ ಎಂದು ಶನಿವಾರ ಬಿಡುಗಡೆಗೊಳಿಸಲಾದ ವಾರ್ಷಿಕ ವರದಿ ತಿಳಿಸಿದೆ.

Loading...