ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raksha Bandhan 2025: ಈ ವರ್ಷದ ರಕ್ಷಾಬಂಧನ ಅತ್ಯಂತ ಶುಭದಾಯಕ; ಕಾರಣವೇನು?

ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷದ ರಕ್ಷಾಬಂಧನ ಆಗಸ್ಟ್ 9ರಂದು ನಡೆಯಲಿದೆ. ಈ ವರ್ಷದ ರಕ್ಷಾಬಂಧನವನ್ನು ನೂರು ವರ್ಷಗಳಲ್ಲೇ ಅತ್ಯಂತ ಶುಭ ದಿನ ಎಂದು ಹೇಳಲಾಗುತ್ತಿದೆ...ಕಾರಣವೇನು?

ರಕ್ಷಾ ಬಂಧನ
1/6

ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಕೂಡ ಒಂದು. ಅದರಲ್ಲೂ 2025ರ ರಕ್ಷಾ ಬಂಧನವು ಅತ್ಯಂತ ಮಂಗಳದಾಯಕ ದಿನವಾಗಿದ್ದು, ಇದಕ್ಕೆ ಒಂದು ಅಪರೂಪದ ಮತ್ತು ಶುಭ ಜ್ಯೋತಿಷ್ಯ ಅಂಶ ಕಾರಣ ಎಂದು ತಜ್ಞರು ಹೇಳುತ್ತಾರೆ.

2/6

ಶ್ರಾವಣ ಮಾಸದ ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇದೇ ಮೊದಲ ಬಾರಿಗೆ ಸೌಭಾಗ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶ್ರಾವಣ ನಕ್ಷತ್ರಗಳೆಲ್ಲವೂ ಒಂದೇ ದಿನದಲ್ಲಿ ಜತೆಯಾಗಿ ಬರುತ್ತಿದೆ. ಇದರಿಂದ ಈ ವರ್ಷದ ರಕ್ಷಾ ಬಂಧನವು ಹಿಂದಿನ ವರ್ಷಗಳಿಗಿಂತ ಬಹಳಷ್ಟು ವಿಶೇಷ ಎಂದು ಹೇಳಲಾಗುತ್ತದೆ.

3/6

ಆಗಸ್ಟ್ 9ರಂದು ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ರಾಖಿ ಕಟ್ಟುವ ಮಂಗಳಕರ ಸಮಯವು ಬೆಳಗ್ಗೆ 05:47ರಿಂದ ಮಧ್ಯಾಹ್ನ 1:24.

4/6

ಪಂಚಾಂಗದ ಪ್ರಕಾರ, ಶ್ರಾವಣ ಹುಣ್ಣಿಮೆ ಆಗಸ್ಟ್ 8ರಂದು ಮಧ್ಯಾಹ್ನ 2:12ರಿಂದ ಆರಂಭವಾಗಿ ಆಗಸ್ಟ್ 9ರಂದು ಮಧ್ಯಾಹ್ನ1:21ರವರೆಗೆ ಇರಲಿದೆ. ಹಾಗಾಗಿ ಉದಯ ತಿಥಿಯ ಕಾರಣ ರಕ್ಷಾ ಬಂಧನವನ್ನು ದಿನ ಪೂರ್ತಿಯಾಗಿ ಆಚರಣೆ ಮಾಡಬಹುದು.

5/6

ಹಿಂದೂ ಧರ್ಮದ ಪಂಚಾಂಗದ ಪ್ರಕಾರ, ಭಾದ್ರಾ ಎಂಬ ಸಮಯವು ಯಾವುದೇ ಶುಭ ಕಾರ್ಯಗಳಿಗೆ ಮಂಗಳಕರವಾಗಿರುವುದಿಲ್ಲ. ಈ ವರ್ಷ ಭಾದ್ರಾ ಅವಧಿಯು ರಕ್ಷಾ ಬಂಧನದ ಮುನ್ನವೇ ಮುಗಿಯಲಿದೆ. ಆದ್ದರಿಂದ ಯಾವುದೇ ಅಡೆತಡೆಗಳಿಲ್ಲದೆ ಪೂಜೆ ಸಲ್ಲಿಸಬಹುದು.

6/6

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೌಭಾಗ್ಯ ಯೋಗವು ಅದೃಷ್ಟ, ಸಮೃದ್ಧಿ ಮತ್ತು ಯೋಗ ಕ್ಷೇಮವನ್ನು ನೀಡಿದರೆ, ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲ ಒಳ್ಳೆಯ ಆಸೆ, ಕನಸುಗಳನ್ನು ಈಡೇರಿಸುತ್ತದೆ. ಶ್ರಾವಣ ನಕ್ಷತ್ರವು ಅಣ್ಣ-ತಂಗಿಯರ ಬಾಂಧವ್ಯವನ್ನು ಬಲ ಪಡಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಈ ವರ್ಷದ ರಕ್ಷಾ ಬಂಧನವು ಹೆಚ್ಚು ವಿಶೇಷವಾಗಿರಲಿದೆ.