ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
ದಿನ ಭವಿಷ್ಯ, ಜೂನ್ 8, 2026: ಇಂದು ಭಾರಿ ಅದೃಷ್ಟ; ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ದಿನ

ಈ ರಾಶಿಯವರಿಗೆ ಇಂದು ಉತ್ತಮ ದಿನ

Horoscope Today June 8th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಅಷ್ಟಮಿ ತಿಥಿ, ಪೂರ್ವಭಾದ್ರಪದ ನಕ್ಷತ್ರದ ಜೂನ್ 8ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Health Tips: ದಿನವೂ ಓಟ್ಸ್ ಸೇವಿಸುತ್ತಿದ್ದೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು

ಓಟ್ಸ್ ಸೇವಿಸುವಾಗ ಈ ಬಗ್ಗೆ ಎಚ್ಚರ ವಹಿಸಿ

Oats: ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ಹಲವರು ಓಟ್ಸ್ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು ಹೃದಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಅಂಶ ಇದರಲ್ಲಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಪೋಷಕಾಂಶಗಳ ಗಣಿಯಾಗಿದ್ದರೂ, ಅದನ್ನು ತಯಾರಿಸುವಾಗ ಮಾಡುವ ಸಣ್ಣ ತಪ್ಪುಗಳು ದೇಹಕ್ಕೆ ತೊಂದರೆಯನ್ನು ಉಂಟು ಮಾಡುತ್ತವೆ ಎಂದು ಎಚ್ಚರಿಸುತ್ತಾರೆ ವೈದ್ಯರು. ಹಾಗಾದರೆ ಯಾವ ರೀತಿ ಓಟ್ಸ್‌ ಸೇವಿಸಬೇಕು? ಎನ್ನುವ ನಿಮ್ಮ ಪ್ರಸ್ನೆಗೆ ಇಲ್ಲಿದೆ ಉತ್ತರ.

ದಿನ ಭವಿಷ್ಯ, ಜೂನ್ 7, 2026: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ದೊಡ್ಡ ಬದಲಾವಣೆ ಸಾಧ್ಯ!

ಈ ರಾಶಿಗೆ ಇಂದು ಅತೀ ತೃಪ್ತಿದಾಯಕ ದಿನವಾಗಿದೆ!

Horoscope Today June 7th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಶತಬಿಷಾ ನಕ್ಷತ್ರದ, ಜೂನ್ 7ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಪುಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಂಡ ಬೆಡ್‌ಶೀಟ್‌ನಲ್ಲಿ ಸಿಕ್ತು'ಮೇಡ್ ಇನ್ ಪಾಕಿಸ್ತಾನ್' ಟ್ಯಾಗ್; ತನಿಖೆಗೆ ಆದೇಶ

ಬೆಡ್‌ಶೀಟ್‌ನಲ್ಲಿ ಮೇಡ್ ಇನ್ ಪಾಕಿಸ್ತಾನ ಟ್ಯಾಗ್ ಪತ್ತೆ

Viral News: ಸ್ಥಳೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಖರೀದಿಸಿದ ಬೆಡ್ ಶೀಟ್‌ನಲ್ಲಿ ಮೇಡ್ ಇನ್ ಪಾಕಿಸ್ತಾನ್ ಎಂಬ ಲೇಬಲ್ ಪತ್ತೆಯಾಗಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಹೀಗೆ ಲೇಬಲ್ ಮಾಡಿದ ವಸ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೇಗೆ ಸಿಕ್ಕಿದೆ ಎಂಬುದು ನೆಟ್ಟಿಗರ ಪ್ರಶ್ನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

3 ಮೊಟ್ಟೆಗೆ 500 ರುಪಾಯಿ, ಪರಾಠಕ್ಕೆ 1,100 ರುಪಾಯಿ! ಮುಂಬೈಯ ಫೈವ್ ಸ್ಟಾರ್ ಹೊಟೇಲ್‌ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕ

ಫೈವ್ ಸ್ಟಾರ್ ಹೊಟೇಲ್‌ ದುಬಾರಿ ಬಿಲ್‌ಗೆ ಗ್ರಾಹಕ ಕಂಗಾಲು

Viral News: ಯಾವುದೇ ಫೈವ್ ಸ್ಟಾರ್ ಹೋಟೆಲ್ ಅಂದಾಗ ಸಾಮಾನ್ಯ ಹೊಟೇಲ್‌ಗಿಂತ ಅಧಿಕ ಬಿಲ್‌ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಖಾದ್ಯಗಳಿಗೆ ಎಲ್ಲೆ ಮೀರಿ ಗಗನಚುಂಬಿ ಬೆಲೆ ವಿಧಿಸಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. ಇದೀಗ ಮುಂಬೈಯ ಪ್ರತಿಷ್ಠಿತ ಹೊಟೆಲ್‌ನ ಬಿಲ್‌ ಭಾರಿ ಚರ್ಚೆಗೆ ಕಾರಣವಾಗಿದೆ.

ಪರೀಕ್ಷೆಯ ವೇಳೆ ವಿದ್ಯಾರ್ಥಿಗೆ ನೆರವು ನಿರಾಕರಿಸಿದ ಚಾಟ್‌ಜಿಪಿಟಿ: ಈ ಎಐ ಶಿಸ್ತಿನ ಸಿಪಾಯಿ ಎಂದ ನೆಟ್ಟಿಗರು

ಪರೀಕ್ಷೆ ವೇಳೆ ಉತ್ತರ ನೀಡಲು ನಿರಾಕರಿಸಿದ ಚಾಟ್‌ಜಿಪಿಟಿ

Viral News: ಚಾಟ್‌ಜಿಟಿಪಿ ಎಐ ಮೂಲಕ ಬಳಕೆದಾರರು ತಮ್ಮೆಲ್ಲ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ಪಡೆಯಬಹುದು. ಇದು ನಿಮ್ಮ ವೈಯಕ್ತಿಕ ಸಹಾಯಕನಂತೆ ಕೆಲಸ ಮಾಡುತ್ತದೆ. ಆದರೆ ಇಷ್ಟೆಲ್ಲ ನೆರವು ನೀಡುವ ಚಾಟ್‌ಜಿಟಿಪಿ ಇದೀಗ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ವೇಳೆ ನೆರವು ನೀಡಲು ನಿರಾಕರಿಸಿದೆ. ಇದೀಗ ಬಳಕೆದಾರರು ಎಐಯ ಕರಾಮಕ್ಕಿಗೆ ದಂಗಾಗಿದ್ದಾರೆ.

ಜಿಲೇಬಿಗೆ ‘ಸ್ಟ್ರಾಬೆರಿ ಲಸ್ಸಿ ಕಾಂಬಿನೇಷನ್; ಅಯ್ಯೋ ಇದೆಂಥಾ ವಿಚಿತ್ರ ಕಾಂಬಿನೇಷನ್‌!

ಜಿಲೇಬಿಗೆ ಸ್ಟ್ರಾಬೆರಿ ಲಸ್ಸಿ ಸೇರಿಸಿ ವಿಲಕ್ಷಣ ಖಾದ್ಯ ತಯಾರಿಸಿದ ವ್ಯಕ್ತಿ

Viral News: ಐಸ್ ಕ್ರೀಮ್ ರೋಲ್, ಲಿಚಿ ಮೊಮೊಸ್, ಜಾಮುನ್ ದೋಸೆ ಹೀಗೆ ವಿವಿಧ ಪಾಕ ವಿಧಾನದ ದೃಶ್ಯ ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಹಸಿರು ಬಣ್ಣದ ‘ಮಚ್ಚಾ ಜಿಲೇಬಿ ಮತ್ತು ಗುಲಾಬಿ ಬಣ್ಣದ ‘ಸ್ಟ್ರಾಬೆರಿ ಲಸ್ಸಿಯ ಕಾಂಬಿನೇಷನ್ ದೃಶ್ಯ ವೊಂದು ವೈರಲ್ ಆಗಿದೆ. ಚಿನ್ನದ ಬಣ್ಣ ದಲ್ಲಿ ಸಕ್ಕರೆ ಪಾಕದಿಂದ ಹೊಳೆಯುವ ಜಿಲೇಬಿಯನ್ನು ಜಪಾನಿನ ಪ್ರಸಿದ್ಧ ಹಸಿರು ಚಹಾದ ಪುಡಿಯಾದ 'ಮಚ್ಚಾ' ಬಳಸಿ ಹಸಿರು ಬಣ್ಣಕ್ಕೆ ತಿರುಗಿಸಿದ್ದಾರೆ..ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ‌.

ಅಯೋಧ್ಯೆಯ ಉದ್ಯಾನವನದಲ್ಲಿ ಯುವಜೋಡಿಯ ಖುಲ್ಲಾಂಖುಲ್ಲಾ ವರ್ತನೆ; ಕೇಸರಿ ಉಡುಪು ಧರಿಸಿದ ಯುವಕರಿಂದ ನೈತಿಕತೆಯ ಪಾಠ

ಅಯೋಧ್ಯೆಯ ಪಾರ್ಕ್‌ನಲ್ಲಿ ಯುವ ಜೋಡಿ ಮೇಲೆ ಹಲ್ಲೆ: ವಿಡಿಯೊ ವೈರಲ್

Viral News: ಕೇಸರಿ ಉಡುಪು ಧರಿಸಿದ ಪುರುಷರ ಗುಂಪೊಂದು ಯುವ ಜೋಡಿಯನ್ನು ಅಟ್ಟಾಡಿಸಿ ಹೊಡೆದಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೊದಲ್ಲಿ ಸಂತರ ಉಡುಪಿನಲ್ಲಿರುವ ನಾಲ್ವರು ಪುರುಷರು ಉದ್ಯಾನವನದೊಳಗೆ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಬೆನ್ನಟ್ಟುತ್ತಿರುವುದನ್ನು ಸೆರೆ ಹಿಡಿಯಲಾಗಿದೆ.

Fitness Tips: ದೇಹ ಫಿಟ್‌ ಆಗಿರಲು ದಿನಕ್ಕೆ 10,000 ಹೆಜ್ಜೆ ನಡೆದರೆ ಸಾಕೆ? ತಜ್ಞರ ಮಾತಿಗೆ ಕಿವಿ ಕೊಡಿ

ದಿನಕ್ಕೆ 10,000 ಹೆಜ್ಜೆ ನಡೆಯುವುದು ತೂಕ ಇಳಿಕೆಗೆ ಸಹಕಾರಿಯೆ?

Walking 10,000 Steps: ನಡಿಗೆ ಹೃದಯದ ಆರೋಗ್ಯವನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಪರಿಣಾಮಕಾರಿ ವ್ಯಾಯಾಮ ಎನಿಸಿಕೊಂಡಿದೆ.‌ ಅದರಲ್ಲೂ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ನಿಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಹಾಗಾದರೆ ಕೇವಲ 10,000 ಹೆಜ್ಜೆ ನಡೆಯುವುದರಿಂದಲೇ ದೇಹವನ್ನು ಮತ್ತೆ ಫಿಟ್ ಆಗಿಡಬಹುದೆ?

ದಿನ ಭವಿಷ್ಯ, ಜೂನ್ 6, 2026: ಇಂದು ಯಾವುದೇ ವ್ಯವಹಾರ ಮಾಡಬೇಡಿ

ಈ ರಾಶಿಗೆ ಇಂದು ಆರ್ಥಿಕವಾಗಿ ಭಾರಿ ಯಶಸ್ಸು

Horoscope Today June 6th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಷಷ್ಠಿ ತಿಥಿ, ದನಿಷ್ಠ ನಕ್ಷತ್ರದ ಜೂನ್ 6ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು? ಮುಂಬೈಯಲ್ಲಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನ ವಿಡಿಯೊ ವೈರಲ್

ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ: ನೆಟ್ಟಿಗರ ಆಕ್ರೋಶ

Viral News: ದೇಶದ ಅತ್ಯಂತ ಸುರಕ್ಷತೆ ಹಾಗೂ ಜನಸಂದಣಿ ಸೇರುವ ಮುಖ್ಯ ನಗರ ಮುಂಬೈನಲ್ಲೇ ಮಹಿಳಾ ಪ್ರಯಾಣಿಕರೊಬ್ಬರಿಗೆ ಮರೆಯಲಾಗದ ಘಟನೆ ನಡೆದಿದೆ. ಆಟೋ ಚಾಲಕನು ಮಹಿಳೆ ಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತ ವಾಗಿದೆ.

ಧರ್ಮಶಾಲಾದಲ್ಲಿ ತರಕಾರಿ ಎಸೆದು ವಿದೇಶಿ ಪ್ರವಾಸಿಗನ ರಂಪಾಟ; ನಾಗರಿಕ ಪ್ರಜ್ಞೆಯ ಕಾಳಜಿ ಉಳ್ಳವರು ಈಗ ಎಲ್ಲಿದ್ದಾರೆ ಎಂದು ನೆಟ್ಟಿಗರ ಪ್ರಶ್ನೆ

ಧರ್ಮಶಾಲಾದಲ್ಲಿ ತರಕಾರಿ ಎಸೆದು ಗದ್ದಲ ಸೃಷ್ಟಿಸಿದ ವಿದೇಶಿ ಪ್ರವಾಸಿಗ

Viral News: ವಿದೇಶದ ಪ್ರೇಕ್ಷಣೀಯ ಸ್ಥಳದಲ್ಲಿ ಭಾರತೀಯರು ರೀಲ್ಸ್ ಮಾಡುವುದು, ಸಾಲಿನಲ್ಲಿ ನಿಲ್ಲದೆ ಅಶ್ತಿನಿಂದ ವರ್ತಿಸುವುದು ಹೀಗೆ ಅನೇಕ ಘಟನೆಗಳು ವೈರಲ್‌ ಆಗಿದ್ದವು. ಈ ಬಗ್ಗೆ ಟೀಕೆ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಯು ರಂಪಾಟ ನಡೆಸಿರುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗ ಅನುಚಿತವಾಗಿ ವರ್ತಿಸಿದ್ದಾನೆ. ಈಗ ನಾಗರಿಕ ಪ್ರಜ್ಞೆ ಹೊಂದಿರುವ ವಿದೇಶಿಗರು ಎಲ್ಲಿದ್ದಾರೆ ಎಂದುನೆಟ್ಟಿಗರು ಪ್ರಶ್ನಿಸಿದ್ದಾರೆ.

ಪ್ರವಾಸಿ ಸ್ಥಳದಲ್ಲಿ ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ಕಾಮುಕ: ವಿಡಿಯೊ ವೈರಲ್

ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಯುವಕ

Viral News: ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳೆ ಜತೆ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಾರ್ವಜನಿಕವಾಗಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದು, ಇದರ ಸಿಸಿಟಿವಿ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಯುವಕನ ಬಳಿ ಲಿಫ್ಟ್ ಕೇಳಿ ಮೊಬೈಲ್ ದೋಚಲು ಯತ್ನಿಸಿದ ಕಳ್ಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಮಾಡಿದ್ದೇನು? ವೈರಲಾಯ್ತು ವಿಡಿಯೊ

ಲಿಫ್ಟ್ ಕೇಳುವ ನೆಪದಲ್ಲಿ ಮೊಬೈಲ್‌ ಎಗರಿಸಿ ಸಿಕ್ಕಿಬಿದ್ದ ಕಳ್ಳಿ

Viral News: ಸಹಾಯ ಕೇಳುವ ನೆಪದಲ್ಲೂ ಮೋಸ ಮಾಡುವ ಅನೇಕ‌ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಲಿಫ್ಟ್‌ ಕೇಳುವ ನೆಪದಲ್ಲಿ ಯುವತಿಯೊಬ್ಬಳು ಹೈಡ್ರಾಮ ಮಾಡಿದ್ದಾಳೆ. ಸವಾರೊಬ್ಬನ ಬಳಿ ಲಿಫ್ಟ್ ಕೇಳಿ ಬಳಿಕ ಆತನ ಮೊಬೈಲ್ ಅನ್ನೇ ಕದಿಯಲು ಮುಂದಾಗಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ತಾಜ್ ಮಹಲ್ ಎದುರಿನ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಾನರ ಸೇನೆ; ಬಿಸಿಲ ಬೇಗೆಯಿಂದ ಪಾರಾಗಲು ಕೂಲ್‌ ಐಡಿಯ

ತಾಜ್ ಮಹಲ್ ಬಳಿಯ ಕಾರಂಜಿಯಲ್ಲಿ ಎಂಜಾಯ್ ಮಾಡಿದ ವಾನರ ಸೇನೆ

Viral Video: ನೀರಿನ ಅಭಾವದಿಂದಾಗಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಕೂಡ ತತ್ತರಿಸಿ ಹೋಗಿವೆ.‌ ಸರಿಯಾಗಿ ಆಹಾರವಿಲ್ಲದೆ, ದಣಿವು ನಿವಾರಿಸಿಕೊಳ್ಳಲು ನೀರಿಲ್ಲದೆ ನರಳಾಡುತ್ತಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಬಿಸಿಲಿನ ತಾಪಕ್ಕೆ ಸುಸ್ತಾದ ಮಂಗಗಳು, ನೀರನ್ನು ಹುಡುಕಿಕೊಂಡು ಬಸ್ಸನ್ನು ತಡೆದು ನಿಲ್ಲಿಸಿದ್ದವು. ಇದೀಗ ವಾನರ ಸೇನೆಯೊಂದು ತಾಜ್ ಮಹಲ್‌ ಬಳಿಯ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಿಡಿಯೊ ವೈರಲ್ ಆಗಿದೆ.

ಮಗನ ಆರೈಕೆಗಾಗಿ ಕೆಲಸ ಬಿಡಲು ಮುಂದಾದ ಉದ್ಯೋಗಿ: ಮಾಲೀಕನ ಮಾನವೀಯತೆಗೆ ನೆಟ್ಟಿಗರು ಫಿದಾ!

ಮಗನ ಆರೈಕೆಗಾಗಿ ಕೆಲಸ ತ್ಯಜಿಸಿದ ವ್ಯಕ್ತಿ: ಮಾಲೀಕನ ಸ್ಪಂದನೆಗೆ ಮೆಚ್ಚುಗೆ

Viral News: ಕೆಲವೊಮ್ಮೆ ಉತ್ತಮ ಕಂಪನಿಯಲ್ಲಿ ಕೆಲಸ ದೊರೆತರೂ ವೈಯಕ್ತಿಕ ಕಾರಣದಿಂದ ಕೆಲಸ ಬೀಡುವ ಸನ್ನಿವೇಶಗಳು ಬರುತ್ತವೆ. ಇದೀಗ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಯೊಬ್ಬರು ಮಗನ ಅನಾರೋಗ್ಯದ ವಿಚಾರವಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇದನ್ನು ಅರಿತ ಮಾಲೀಕರು ಮಾನವೀಯತೆ ಮೆರೆಯುವ ಮೂಲಕ ಉದ್ಯೋಗಿಯ ರಾಜೀನಾಮೆಯನ್ನೇ ಸ್ವೀಕರಿಸಲು ನಿರಾಕರಿಸಿದ್ದಾರೆ.

Health Tips: ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವುದು ಆರೋಗ್ಯಕರವೇ?

ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಏನು ಲಾಭ?

ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ದೇಹದಿಂದ ಮಾಯವಾಗುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ತರಕಾರಿ ಹಾಗೂ ಹಣ್ಣುಗಳ ಸೇವನೆ ಅಗತ್ಯವಾಗಿ ಬೇಕು. ಇನ್ನು ರಸ್ತೆ ಬದಿಯಲ್ಲಿ ಸಿಗುವ ಒಂದು ಗ್ಲಾಸ್ ತಣ್ಣನೆಯ ಕಬ್ಬಿನ ಹಾಲಂತು ಬಾಯಾರಿಕೆ ಮಾತ್ರವಲ್ಲ ನಮ್ಮ ದಣಿವನ್ನು ಕೂಡ ನಿವಾರಣೆ ಮಾಡುತ್ತದೆ. ದೇಹವನ್ನು ತಂಪಾಗಿಸುವ ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ.. ಹಾಗಿದ್ರೆ ಕಬ್ಬಿನ ಹಾಲು ದೇಹಕ್ಕೆ ಹಿತವೇ?

ದಿನ ಭವಿಷ್ಯ, ಜೂನ್ 5, 2026: ಎಚ್ಚರ! ಇಂದು ಭಾರಿ ಅಪಾಯ ಎದುರಾಗಲಿದೆ

ಇಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು

Horoscope Today June 5th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಪಂಚಮಿ ತಿಥಿ, ಶ್ರವಣ ನಕ್ಷತ್ರದ, ಜೂನ್ 5ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

'ʼಇದು ಹಿಂದೂ ಸಂಸ್ಕೃತಿಯೇ?": ಪವಿತ್ರ ಸರಸ್ವತಿ ನದಿಗೆ ಕಸ ಎಸೆದ ಪ್ರವಾಸಿಗರು

ಪವಿತ್ರ ಸರಸ್ವತಿ ನದಿ ಮಾಲಿನ್ಯ ಮಾಡಿದ ಪ್ರವಾಸಿಗರು

Viral Video: ನದಿ, ಕೆರೆ ಹಾಗೂ ಸಮುದ್ರದಂತಹ ಜಲಮೂಲಗಳಿಗೆ ಹಾನಿಯಾಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅದಕ್ಕೆ ಸೇರ್ಪಡೆ ಎಂಬಂತೆ ಉತ್ತರಾಖಂಡದ ಬದರಿನಾಥದ ಸಮೀಪವಿರುವ ಪವಿತ್ರ ಸರಸ್ವತಿ ನದಿಗೆ ಪ್ರವಾಸಿಗರು ತ್ಯಾಜ್ಯ ಎಸೆದಿದ್ದಾರೆ. ಅನೇಕರು ಈ ವಿಡಿಯೊ ನೋಡಿ ಇದೇನಾ ಹಿಂದೂ ಸಂಸ್ಕೃತಿ? ಎಂದು ಕಿಡಿಕಾರಿದ್ದಾರೆ.

ಕುಡಿತದ ಮತ್ತಿನಲ್ಲಿ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ವಿಡಿಯೊ ವೈರಲ್

ಕುಡಿದು ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಯುವಕ: ನೆಟ್ಟಿಗರು ಕಿಡಿ

Viral News: ವೈದ್ಯಕೀಯ ತಪಾಸಣೆ ವೇಳೆ ಪೊಲೀಸರಿಗೆ ಕುಡುಕ ಯುವಕನೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಒಡಿಶಾದ ಖುರ್ದಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ನೀಡುತ್ತಿದ್ದರು. ಅವರ ವರ್ತನೆಯಿಂದ ಕಿರಿಕಿರಿಗೆ ಒಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಈ ಪೈಕಿ ಓರ್ವ ಯುವಕ ಕುಡಿತದ ಮತ್ತಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿದ್ದಾನೆ.

ಟ್ರಾಫಿಕ್‌ನಲ್ಲಿ ಮುರಿದು ಬಿದ್ದ ಪುಟ್ಟ ಬಾಲಕನ ‘ಲವ್ ಸ್ಟೋರಿ’: ಕ್ಯೂಟ್ ಎಕ್ಸ್‌ಪ್ರೆಶನ್‌ ಇಲ್ಲಿದೆ ನೋಡಿ

ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕ-ಬಾಲಕಿಯ ಕ್ಯೂಟ್ ಲವ್: ವಿಡಿಯೊ ನೋಡಿ

Viral Video: ವಾಹನ ದಟ್ಟಣೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಆಗಿರುವ ವಿಡಿಯೊವೊಂದು ಗಮನ ಸೆಳೆಯುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ಕ್ಯೂಟ್ ಎಕ್ಸ್‌ಪ್ರೆಶನ್‌ಗಳ ಮೂಲಕ ಗಮನ ಸೆಳೆದಿದ್ದು ಪುಟ್ಟ ಬಾಲಕನ ಪ್ರೀತಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಜತೆಗೆ ಇದು ಎಐ ರಚಿತ ವಿಡಿಯೊ ಎನ್ನುವ ವಾದವೂ ಕೇಳಿ ಬಂದಿದೆ.

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಗೆ ಪಿಸ್ತೂಲ್ ತೋರಿಸಿ  ಬೆದರಿಕೆ ಹಾಕಿದ ವ್ಯಕ್ತಿ!

ಸೆಂಟ್ರಲ್ ಜೈಲ್ ನೋಡುವ ಆಸೆಗೆ ಹೆಂಡತಿಯನ್ನೇ ಸಾಯಿಸಲು ಮುಂದಾದ ದುಷ್ಕರ್ಮಿ

Viral News: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಇಡೀ ಜಗತ್ತೆ ತಲೆಕೆಡಿಸಿಕೊಳ್ಳುವಂತಹ ಘಟನೆ ಯೊಂದು ನಡೆದಿದೆ. ಕೇವಲ ಸೆಂಟ್ರಲ್ ಜೈಲು ಹೇಗಿರುತ್ತೆ ಎನ್ನುವ ಕುತೂಹಲದಿಂದ ವ್ಯಕ್ತಿಯೊಬ್ಬ ಹೆಂಡತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಜೈಲಿನೊಳಗೆ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದಲೇ ಈ ಅಪರಾಧ ಮಾಡಿದ್ದೇನೆ ಎಂದು ಈ ಕಿಲಾಡಿ ಹೇಳಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

1BHK ಮನೆಗೆ ಬೆಂಗಳೂರಿನಲ್ಲಿ 45,000 ರೂ ಬಾಡಿಗೆ!  ಟೆಕ್ಕಿ ಹಂಚಿಕೊಂಡ ವಿಶೇಷತೆ ಏನು?

ದುಡಿಯುವ ಅರ್ಧದಷ್ಟು ಭಾಗ ಬಾಡಿಗೆ ಕಟ್ಟುತ್ತಿರುವ ಬೆಂಗಳೂರಿನ ಟೆಕ್ಕಿ!

Viral News: ಸಿಲಿಕಾನ್ ಸಿಟಿಯ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಬಗ್ಗೆ ಹೆಚ್ಚಿನ ಜನರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಇಲ್ಲಿ ಬಾಡಿಗೆ ಹಣ ಪಾವತಿಸುವುದೇ ಒಂದು ತಲೆ ನೋವಾಗಿ ಬಿಟ್ಟಿದೆ. ಉದ್ಯೋಗಿಗಳ ನೆಚ್ಚಿನ ತಾಣ ಹಾಗೂ ಕಚೇರಿಗಳಿಗೆ ಸುಲಭ ಮಾರ್ಗವಾದ ಎಚ್‌ಎಸ್‌ಆರ್ ಲೇಔಟ್ ನಲ್ಲೂ ಬಾಡಿಗೆ ದರ ದುಪ್ಪಟ್ಟು ಆಗಿದೆ ಎಂದು ಕೆಲವರು ದೂರಿದ್ದಾರೆ...

ಮೊಬೈಲ್ ನೀಡಿಲ್ಲ ಎಂದು ಬ್ಯಾಟ್‌ನಿಂದ ಹೊಡೆದ ಬಾಲಕ;  ಮುಂದೆ ಆಗಿದ್ದೇನು?

ಮೊಬೈಲ್ ಹಠಕ್ಕೆ ಬಿದ್ದು ತಾಯಿಗೆ ಬ್ಯಾಟ್ ನಿಂದ ಹೊಡೆದ ಬಾಲಕ: ವಿಡಿಯೊ ವೈರಲ್

Viral News: ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರಿಗಂತೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ. ಇಂದು ಮೊಬೈಲ್ ನೀಡಿಲ್ಲ ಅನ್ನೋ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು, ಊಟ- ತಿಂಡಿ ತಿನ್ನದೆ ಇರುವುದು ಹೀಗೆ ಇಂತಹ ಅಭ್ಯಾಸಗಳು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್ ಫೋನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಣ್ಣ ವಯಸ್ಸಿನ ಬಾಲಕನೊಬ್ಬ ತನ್ನ ತಾಯಿಗೆ ಬ್ಯಾಟ್ ನಿಂದ ಹೊಡೆದ ಘಟನೆಯೊಂದು ನಡೆದಿದೆ. ಸದ್ಯ ಈ ಆಘಾತಕಾರಿ ವೀಡಿಯೊ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ.

Loading...