ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
Health Tips: ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!

ಒಂದೇ ಕಡೆ ಕೂರುತ್ತೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು

ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. 30ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?

SSLC Result 2026: ಟೈಲರ್‌ ಮಗಳಿಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನ; ಮುಂದೆ ವೈದ್ಯೆಯಾಗುವ ಕನಸು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟೈಲರ್ ಮಗಳು ಟಾಪರ್‌

Karnataka SSLC Results 2026: ಟೈಲರ್ ಮಹಮ್ಮದ್ ಜಪ್ರುದ್ದೀನ್ ಅವರ ಪುತ್ರಿ ಸಾದಿಯಾ ಬಾನು ತುಮಕೂರು ಶೈಕ್ಷಣಿಕ ಜಿಲ್ಲೆಗೆ ಸೇರಿದ ನಗರದ ಶ್ರೀದೇವಿ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

Karnataka SSLC Result: ಪೆಟ್ರೋಲ್ ಬಂಕ್ ಕಾರ್ಮಿಕನ ಮಗಳಿಗೆ 623 ಅಂಕ; ಬಡತನದ ಮಧ್ಯೆಯೂ ಅರಳಿದ ಪ್ರತಿಭೆ

ಬಡತನದ ನಡುವೆಯೂ 623 ಅಂಕ ಗಳಿಸಿದ ವಿದ್ಯಾರ್ಥಿನಿ

Karnataka SSLC Result 2026: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ದೇವೇಂದರ್ ಎಂಬುವರ ಪುತ್ರಿ ಹಿತಾಶ್ರೀ ಡಿ. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಸರ್ಕಾರಿ ಶಾಲಾ ಶಿಕ್ಷಕನ ಮಗಳು ರಾಜ್ಯಕ್ಕೆ ಪ್ರಥಮ: ಎಲ್ಲ ಪೋಷಕರಿಗೆ ಮಾದರಿ ತಂದೆಯ ಈ ನಡೆ

ಮಗಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿ ಟಾಪರ್ ಮಾಡಿದ ಶಿಕ್ಷಕ ತಂದೆ

Karnataka SSLC Result: ಈ ವರ್ಷ ರಾಜ್ಯದ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದರಲ್ಲಿ ಬೆಳಗಾವಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಕೂಡ ಸೇರಿದ್ದಾಳೆ. ಈಕೆ 625ಕ್ಕೆ 625 ಅಂಕ ಪಡೆದು ಸರ್ಕಾರಿ ಶಾಲೆಯಲ್ಲಿ ಓದಿಯೂ ಟಾಪರ್‌ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಮಗಳನ್ನು ಅದೇ ಶಾಲೆಯಲ್ಲಿ ಓದಿಸಿ ಮಾದರಿ ಎನಿಸಿಕೊಂಡಿದ್ದಾರೆ.

SSLC Results 2026: 625 ಅಂಕ ಪಡೆದ ದಾವಣಗೆರೆಯ ಭರತ್‌ನ ಫಸ್ಟ್ ರಿಯಾಕ್ಷನ್ ಹೇಗಿತ್ತು?

625 ಅಂಕ ಪಡೆಯಲು ಶಿಕ್ಷಕರೇ ಪ್ರಮುಖ ಕಾರಣ ಎಂದ ಟಾಪರ್ ಭರತ್

SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ

ಹೃದಯಸ್ಪರ್ಶಿ ವಿಡಿಯೋ: ಕುಸಿದು ಬಿದ್ದ ಓಟಗಾರನಿಗೆ ಸಹಾಯ ಮಾಡಿದ ಸ್ಪರ್ಧಿಗಳು

Viral Video: ಇಲ್ಲೊಂದು ಮ್ಯಾರಾಥಾನ್ ನಲ್ಲಿ ಸೋಲು- ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಯುವ ಕ್ರೀಡಾ ಪಟುಗಳಿಬ್ಬರು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ಪ್ರಯತ್ನ ಬದಿಗೆ ತಳ್ಳಿ ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

"ನಾನು ಪತ್ರಕರ್ತೆ, ಹಣ ನೀಡುವುದಿಲ್ಲ'': 200 ರೂಪಾಯಿ ಕ್ಯಾಬ್ ದರ ಪಾವತಿಸಲು ನಿರಾಕರಿಸಿದ ಯುವತಿ!

ಕ್ಯಾಬ್ ದರ ಪಾವತಿಸಲು ನಿರಾಕರಣೆ ಮಾಡಿದ ಪತ್ರಕರ್ತೆ: ವಿಡಿಯೊ ವೈರಲ್

Viral Video: ಪತ್ರಕರ್ತೆ ಹಾಗೂ ಕ್ಯಾಬ್ ಚಾಲಕನ ನಡುವೆ ಜಗಳ ಉಂಟಾಗಿದ್ದು ಈ ವಿಡಿಯೊ ಭಾರೀ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು 200 ರೂಪಾಯಿ ಬಾಡಿಗೆ ವಿವಾದ ತಾರಕಕ್ಕೆ ಹೋಗಿದೆ. ತಾನು ಪತ್ರಕರ್ತೆ ಎಂದು ಹೇಳಿಕೊಂಡಿರುವ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ.

ಶಾಲಾ ಶೌಚಾಲಯದಲ್ಲೇ ವಿದ್ಯಾರ್ಥಿನಿಯರ ಕಿತ್ತಾಟ: ಕಪಾಳ ಮೋಕ್ಷ ಮಾಡಿದ ವಿಡಿಯೊ ವೈರಲ್!

ಶಾಲಾ ಶೌಚಾಲಯದಲ್ಲೇ ಜಗಳ: ವಿದ್ಯಾರ್ಥಿನಿಯರ ನಡೆ ಬಗ್ಗೆ ನೆಟ್ಟಿಗರು ಕಿಡಿ!

Viral Video: ಇತ್ತೀಚಿನ ದಿನದಲ್ಲಿ ಮಕ್ಕಳ ವರ್ತನೆಗಳು ದಾರಿ ತಪ್ಪುತ್ತಿವೆ. ಶಿಕ್ಷಕರ ಮೇಲೆ ಹಲ್ಲೆ ನಡೆಸುವ ವಿದ್ಯಾರ್ಥಿಗಳು, ಪೋಷಕರ ಮಾತು ಕೇಳದ ಮಕ್ಕಳು ಹೀಗೆ ಅನೇಕ ಘಟನೆಗಳು ಸುತ್ತ ಮುತ್ತಲು ನಡೆಯುತ್ತಿರುತ್ತವೆ. ಇದೀಗ ಶಾಲೆಯ ಶೌಚಾಲಯದೊಳಗೆ ಇಬ್ಬರು ಬಾಲಕಿಯರ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು ಪರಸ್ಪರ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

Kitchen Tips: ದ್ರಾಕ್ಷಿಯನ್ನು ಸ್ವಚ್ಛ ಮಾಡುವುದು ಕಷ್ಟವೇ? ಇಲ್ಲಿದೆ ಸಿಂಪಲ್‌ ಟಿಪ್ಸ್‌

ದ್ರಾಕ್ಷಿಯನ್ನು ಸ್ವಚ್ಛಗೊಳಿಸುವುದು ಹೇಗೆ?

How to Clean Grapes: ದ್ರಾಕ್ಷಿಯಂಥ ಹಣ್ಣುಗಳನ್ನು ತಂದರೆ, ʻಗುಳುಂʼ ಮಾಡುವುದು ಎಷ್ಟು ಇಷ್ಟವೋ, ಅದನ್ನು ತೊಳೆದು ಸ್ವಚ್ಛ ಮಾಡುವುದು ಅಷ್ಟೇ ಕಷ್ಟ. ಅದರಲ್ಲೂ ಅತಿಯಾಗಿ ಕೀಟನಾಶಕ ಸಿಂಪಡಿಸಿಕೊಳ್ಳುವ ಮತ್ತು ಗೊಂಚಲಾಗಿ ತೂಗುವ ದ್ರಾಕ್ಷಿಯಂಥ ಹಣ್ಣುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರ ಕಶ್ಮಲಗಳೆಲ್ಲ ಸೇರುವುದು ನಮ್ಮದೇ ಹೊಟ್ಟೆಗೆ. ಹಾಗಾದರೆ ದ್ರಾಕ್ಷಿಯನ್ನು ತೊಳೆದು ಸ್ವಚ್ಛಗೊಳಿಸುವುದು ಹೇಗೆ?

ದಿನ ಭವಿಷ್ಯ, ಏಪ್ರಿಲ್ 23, 2026: ಇಂದು ಯಾವುದೇ ಕೆಲಸದಲ್ಲಿ ಯಶಸ್ಸು ದೊರೆಯುವುದಿಲ್ಲ

ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ

Horoscope April 23: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರದ ಏಪ್ರಿಲ್ 23ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ

ಶೇಕಡಾ 48.8 ಅಂಕ ಪಡೆದ ವಿದ್ಯಾರ್ಥಿಯ ಫೋಟೊ ವೈರಲ್‌

SSLC ಮತ್ತು PUC ಪರೀಕ್ಷೆಯ ಫಲಿತಾಂಶ ಹೊರ ಬಂದಾಗ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದವರ ಫೋಟೊ ವೈರಲ್ ಆಗುತ್ತದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ‌ಕಡಾ 48.8 ಅಂಕ ಗಳಿಸಿದ್ದು, ಆತನ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ- ವಿರೋಧದ ಚರ್ಚೆ ನಡೆಸಿದ್ದಾರೆ.

ಹೋಟೆಲ್‌ಗೆ ನುಗ್ಗಿದ ಹಸಿದ ಮೊಸಳೆ: ಇಲ್ಲಿ ಆಹಾರ ಸಿಗುತ್ತೆ ಅಂತ ಇದಕ್ಕೆ ಗೊತ್ತಾಗಿದ್ದೇಗೆ?

ಆಹಾರ ಹುಡುಕುತ್ತ ಹೋಟೆಲ್ ಒಳಗೆ ನುಗ್ಗಿದ ಮೊಸಳೆ: ವಿಡಿಯೊ ನೋಡಿ

Viral Video: ಪ್ರವಾಸಿಗರು ಕುಳಿತು ತಿಂಡಿ ಸವಿಯುತ್ತಿದ್ದಂತೆ ಐಷಾರಾಮಿ ಹೋಟೆಲ್‌ಗೆ 12 ಅಡಿ ಉದ್ದದ ಬೃಹತ್‌ ಮೊಸಳೆಯೊಂದು ನುಗ್ಗಿದೆ. ಈ ದೃಶ್ಯ ಕಂಡ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ‌. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ ಶೆಫ್‌: ನೀವು ಎಂದಾದರೂ ರುಚಿ ನೋಡಿದ್ರಾ?

ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ ಶೆಫ್‌: ಇದೆಂಥಾ ಪ್ರಯೋಗ ಎಂದ ನೆಟ್ಟಿಗರು

Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಕೆಲವರು ವಿಚಿತ್ರ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಾರೆ‌. ಚಲಿಸುವ ವಾಹನಗಳ ಮೇಲೆ ರೀಲ್ಸ್ ಮಾಡುವುದು, ರೈಲು ಹಳಿಗಳ ನಿಂತು ವಿಡಿಯೊ ಶೂಟ್ ಮಾಡುವುದು ಹೀಗೆ...ಇದೀಗ ವೈರಲ್ ಆಗುವ ಉದ್ದೇಶದಿಂದ ಶೆಫ್‌ ಒಬ್ಬ ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ್ದಾನೆ. ಬಾಣಸಿಗನೊಬ್ಬ ಕೆಂಪು ಇಟ್ಟಿಗೆಯನ್ನು ಬಿಸಿ ಮಾಡಿ ಒಗ್ಗರಣೆ ಹಾಕಿದ್ದಾನೆ.

ಸೀರೆ ಬದಲು ಶಾರ್ಟ್ಸ್- ಟಿ ಶರ್ಟ್‌ ಧರಿಸಿದ ಪತ್ನಿಯ ವಿರುದ್ಧ ಪತಿಯ ಅಸಮಾಧಾನ: ವಿಡಿಯೊ ಇಲ್ಲಿದೆ

ಪತ್ನಿಯ ಡ್ರೆಸ್ ಬಗ್ಗೆ ಪತಿಯ ಅಸಮಾಧಾನ: ನೆಟ್ಟಿಗರು ಹೇಳೋದೇನು?

Viral Video: ಮನೆಯಲ್ಲಿ ಪತ್ನಿ ಸರಿಯಾದ ಡ್ರೆಸ್ ಧರಿಸುವುದಿಲ್ಲ ಎಂದು ಪತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆಕೆ ಸಾಂಪ್ರದಾಯಿಕ ಉಡುಪು ಧರಿಸಿ, ಸಿಂದೂರ ಇಟ್ಟುಕೊಳ್ಳದ ಕಾರಣ ಮನೆಗೆ ಹೋಗಲು ಉತ್ಸಾಹ ಇಲ್ಲ ಎಂದು ಪತಿ ದೂರಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಪುರುಷ ಪೃದಾನ ಸಮಾಜದ ಮನಸ್ಥಿತಿ ಎಂದಿದ್ದಾರೆ.

ಬಾಲಿಯ ರೆಸಾರ್ಟ್‌ನಲ್ಲಿ ಕದ್ದು ಮಾಡಿ ಸಿಕ್ಕಿಬಿದ್ದ ಭಾರತೀಯ ಪ್ರವಾಸಿಗರು: ವಿದೇಶದಲ್ಲಿ ನಮ್ಮ ದೇಶದ ಮಾನ ಹರಾಜು ಹಾಕಿದವರ ವಿರುದ್ಧ ನೆಟ್ಟಿಗರು ಕಿಡಿ

ಬಾಲಿ ರೆಸಾರ್ಟ್‌ನಿಂದ ಭಾರತೀಯ ಪ್ರವಾಸಿಗರಿಂದ ಕಳ್ಳತನ: ನೆಟ್ಟಿಗರು ಕಿಡಿಕಿಡಿ

Viral Video: ಭಾರತವು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದರೂ ಕೆಲವೊಂದು ವ್ಯಕ್ತಿಗಳ ಸಾರ್ವಜನಿಕ ಸ್ಥಳದ ಅಸಭ್ಯ ವರ್ತನೆ ಭಾರತದ ಹೆಸರನ್ನೇ ಹಾಳುಗೆಡುವುವಂತೆ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿ ರೆಸಾರ್ಟ್‌ನಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ಕಳವು ಮಾಡಿರುವ ಘಟನೆ ನಡೆದಿದೆ. ರೆಸಾರ್ಟ್‌ ಸಿಬ್ಬಂದಿ ನಡೆಸಿದ ಪರಿಶೀಲನೆ ನಡೆಸಿದ ವೇಳೆ ಈ ವೇಳೆ ಇದು ಬೆಳಕಿಗೆ ಬಂದಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

Lenskart Tilak-Bindi Row: ಲೆನ್ಸ್‌ಕಾರ್ಟ್‌ನ 12 ಸಾವಿರ ರುಪಾಯಿ ಮೌಲ್ಯದ ಕನ್ನಡಕ ಒಡೆದು ಆಕ್ರೋಶ ಹೊರಹಾಕಿದ ವ್ಯಕ್ತಿ

ಲೆನ್ಸ್‌ಕಾರ್ಟ್‌ನಿಂದ ಕನ್ನಡಕ ಖರೀದಿಸಿ ಒಡೆದು ಹಾಕಿದ ವ್ಯಕ್ತಿ; ಕಾರಣವೇನು?

Viral Video: ಲೆನ್ಸ್‌ಕಾರ್ಟ್ ಸಂಸ್ಥೆ ಬಿಂದಿ ಮತ್ತು ತಿಲಕ ಧರಿಸಲು ನಿರ್ಬಂಧ ಹೇರಿರುವ ವಿಚಾರ ವಿವಾದಕ್ಕೆ ತಿರುಗಿದ್ದು ಪ್ರತಿಭಟನೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಲೆನ್ಸ್‌ಕಾರ್ಟ್‌ನಿಂದ ಕನ್ನಡಕ ಖರೀದಿಸಿ ನಂತರ ಅದನ್ನು ಪುಡಿ ಪುಡಿ ಮಾಡಿದ್ದಾನೆ‌. ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರಿಂದ ಹಲವು ಪ್ರತಿಕ್ರಿಯೆ ಪಡೆದುಕೊಂಡಿದೆ.

ದಿನವೂ ಹಲ್ಲುಜ್ಜಿದರೂ ಹಲ್ಲುಗಳು ಹಳದಿಯಾಗಲು ಕಾರಣವೇನು? ಇಲ್ಲಿದೆ ದಂತ ತಜ್ಞರ ಮಹತ್ವದ ಸಲಹೆ

ನಿಮ್ಮ ಹಲ್ಲುಗಳು ಹಳದಿಯಾಗಲು ಕಾರಣವೇನು?

Health Tips: ಬಾಯಿಯನ್ನು ದೇಹದ ಆರೋಗ್ಯದ ಕೈಗನ್ನಡಿ ಎಂದು ಕರೆಯಲಾಗುತ್ತದೆ. ಹಲ್ಲುಗಳ ಬಣ್ಣ ಬದಲಾಗುವುದರ ಹಿಂದೆ ಕೇವಲ ಸ್ವಚ್ಛತೆಯ ಕೊರತೆ ಮಾತ್ರವಲ್ಲ, ಇನ್ನೂ ಹಲವು ಆಂತರಿಕ ಹಾಗೂ ಬಾಹ್ಯ ಕಾರಣಗಳಿರಬಹುದು ಎನ್ನುತ್ತಾರೆ ಬೆಂಗಳೂರಿನ ಹ್ಯಾಪಿಯೆಸ್ಟ್ ಪರ್ಲ್ಸ್‌ನ ಯುನಿಟ್ ಹೆಡ್ ಆಗಿರುವ ದಂತ ತಜ್ಞೆ ಡಾ. ಶ್ರದ್ಧಾ ಬಹಿರ್ವಾನಿ

ದಿನ ಭವಿಷ್ಯ, ಎಪ್ರಿಲ್ 22, 2026: ಇಂದು ಚಂದ್ರ, ಗುರು ಹಾಗೂ ರಾಹುವಿನ ಸಮ್ಮಿಲನದಿಂದ ಈ ರಾಶಿಗೆ ಪ್ರಮುಖ ಬದಲಾವಣೆ

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ಮುಖ್ಯ ಬದಲಾವಣೆ ಸಾಧ್ಯತೆ

Horoscope Today April 22: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ ಆರಿದ್ರಾ ನಕ್ಷತ್ರದ ಎಪ್ರಿಲ್ 22 ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Russian Circus: ಸರ್ಕಸ್‌ ಪ್ರದರ್ಶನದ ವೇಳೆ ಭಯಾನಕ ಘಟನೆ: ಪ್ರೇಕ್ಷಕರತ್ತ ಜಿಗಿದ ಹುಲಿ

ಸರ್ಕಸ್‌ ಪ್ರದರ್ಶನದ ವೇಳೆ ಪ್ರೇಕ್ಷಕರತ್ತ ಜಿಗಿದ ಹುಲಿ: ವಿಡಿಯೊ ವೈರಲ್‌

Viral Video: ರಷ್ಯಾದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಹುಲಿಯೊಂದು ಪ್ರೇಕ್ಷಕರತ್ತ ಜಿಗಿದ್ದಿದ್ದು ಜನರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ‌. ಸದ್ಯ ಈ ಘಟನೆಯು ಸರ್ಕಸ್ ಸುರಕ್ಷತಾ ಮಾನದಂಡ ಮತ್ತು ಮನರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ರಸ್ತೆಯ ಗುಂಡಿ ಮುಚ್ಚಲು ಕೋಟ್ಯಂತರ ರುಪಾಯಿಯ ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಬೆರೆಸಿದ ಬೆಂಗಳೂರು ಉದ್ಯಮಿ: ವಿಡಿಯೊ ನೋಡಿ

ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಮಿಶ್ರಣ ಮಾಡಿ ರಸ್ತೆ ಗುಂಡಿ ಮುಚ್ಚಿದ ಉದ್ಯಮಿ

Viral Video: ವಾಹನಗಳ ಸಂಖ್ಯೆ ಮಿತಿ ಮೀರಿದರೂ ಅಲ್ಲಲ್ಲಿ ರಸ್ತೆ ಮಧ್ಯೆ ಸಿಗುವ ಗುಂಡಿಗಳು ಪ್ರಯಾಣಿಕರನ್ನು ಆತಂಕಕ್ಕೆ ತಳ್ಳುತ್ತವೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಖ್ಯಾತ ಉದ್ಯಮಿಯೊಬ್ಬರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಅವರು ತಮ್ಮ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್‌ನಲ್ಲಿ ಸಿಮೆಂಟ್‌ ಕಲೆಸಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಈ ವಿಡಿಯೊ ಇದೀಗ ವೈರಲ್‌ ಆಗಿದೆ.

ʼಟ್ವಿಂಕಲ್- ಟ್ವಿಂಕಲ್ʼ ಕಲಿಕೆಗೆ 2.5 ಲಕ್ಷ ರುಪಾಯಿ ಶುಲ್ಕ: ದುಬಾರಿ ಮೊತ್ತ ಪಡೆಯುವ ಖಾಸಗಿ ಶಾಲೆಗಳ ವಿರುದ್ಧಆಕ್ರೋಶ

ಕಿಂಡರ್‌ಗಾರ್ಟನ್ ಶುಲ್ಕ 2.5 ಲಕ್ಷ ರುಪಾಯಿ! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

Viral News: ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಕೂಡ ಕೇಳಿ ಬರುತ್ತಿವೆ. ಈ ನಡುವೆ ಪೋಷಕರು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಿಂಡರ್‌ಗಾರ್ಟನ್‌ಗೆ 2.5 ಲಕ್ಷ ರುಪಾಯಿಗಿಂತ ಹೆಚ್ಚು ಶುಲ್ಕವನ್ನು ವಿಧಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ವೈರಲ್ ಆಗಿದೆ.

ಟಿಕೆಟ್ ಇದ್ದರೂ ವಿಮಾನದೊಳಗೆ ಪ್ರಯಾಣಿಕನಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ; ಭುಗಿಲೆದ್ದ ವಿವಾದ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ, ಸಿಬ್ಬಂದಿ ನಡುವೆ ಜಗಳ

Viral Video: ಇತ್ತೀಚೆಗೆ ಇಂಡಿಗೋ ವಿಮಾನದ ಬಗ್ಗೆ ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಇಂಡಿಗೋ ವಿಮಾನ ಬಿಕ್ಕಟ್ಟು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದೀಗ ಟಿಕೆಟ್‌ ಇದ್ದರೂ ಪ್ರಯಾಣಿಕರೊಬ್ಬರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ.

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ Video

ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್ ಬಳಸಿ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

ಗೂಗಲ್ ಅರ್ಥ್ ಮೂಲಕ 25 ವರ್ಷದ ನಂತರ ತಾಯಿಯನ್ನು ಪತ್ತೆ ಹಚ್ಚಿದ ವ್ಯಕ್ತಿ: ಸಾರೂ ಬ್ರಿರ್ಲಿಯ ಭಾವುಕ ಕ್ಷಣ ಹೀಗಿತ್ತು

25 ವರ್ಷದ ನಂತರ ತಾಯಿ-ಮಗನನ್ನು ಒಂದು ಮಾಡಿದ ಗೂಗಲ್ ಅರ್ಥ್

Viral News: ಸಾರೂ ಬ್ರಿರ್ಲಿ ಎಂಬ ವ್ಯಕ್ತಿಯ ಜೀವನ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. 25 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಎರಡು ದಶಕಗಳ ನಂತರ ತಾಯಿಯೊಂದಿಗೆ ಮತ್ತೆ ಒಂದಾದ ಸುದ್ದಿ ಎಲ್ಲರನ್ನು ಭಾವುಕಗೊಳಿಸಿದೆ. ಸಾರೂ ಬ್ರಿರ್ಲಿ ತನ್ನ ತಾಯಿಯನ್ನು ಪತ್ತೆ ಹಚ್ಚಿದ ಈ ಸಾಹಸಗಾಥೆ ಸದ್ಯ ವೈರಲ್‌ ಆಗಿದೆ.

Loading...