ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
20 ರೂಪಾಯಿ ವಡಾಪಾವ್‌ಗೆ 15,000 ಖರ್ಚು ಮಾಡಿ ದೆಹಲಿಯಿಂದ ಮುಂಬೈಗೆ ತೆರಳಿದ ಯುವತಿ! ಟೇಸ್ಟ್‌ ಹೇಗಿತ್ತು?

20 ರೂ. ವಡಾಪಾವ್ ಖರೀದಿಗೆ ಫ್ಲೈಟ್ ಬುಕ್ ಮಾಡಿ ಮುಂಬೈಗೆ ಹೊರಟ ಯುವತಿ

Viral News: ಇಲ್ಲೊಬ್ಬರು ಕೇವಲ 20 ರೂಪಾಯಿ ವಡಪಾವ್ ತಿನ್ನಲು ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಮುಂಬೈ ಶೈಲಿಯ ವಡಾಪಾವ್ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು 15,000 ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಗ್ಗೆ ಯುವತಿ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ತಾನು ಸವಿದಿರುವ ಬೆಸ್ಟ್ ವಡಾಪಾವ್ ಎಂದು ಬರೆದುಕೊಂಡಿದ್ದಾರೆ.

Belly Fat: ಹೊಟ್ಟೆಯ ಬೊಜ್ಜು ನಿಯಂತ್ರಣ ಮಾಡಲು ಆಹಾರಕ್ರಮದಲ್ಲಿ ಏನು ಬದಲಾವಣೆ ಅಗತ್ಯ?

ಹೊಟ್ಟೆಯ ಬೊಜ್ಜು ನಿಯಂತ್ರಣ ಹೇಗೆ?

Health Tips: ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜಿಗೆ ಕಾರಣ ವಾಗುತ್ತಿದೆ. ಅತೀಯಾದ ಹೊರಗಿನ ಆಹಾರ, ಕರಿದ ಆಹಾರ ತಿನ್ನುವುದರಿಂದ ಪೌಷ್ಟಿಕಾಂಶದ ಸಮ ತೋಲನವನ್ನು ಹಾಳುಮಾಡುತ್ತದೆ. ಇದರಿಂದ ಕರುಳಿನ ಆರೋಗ್ಯ ಕೆಟ್ಟು ಹೊಟ್ಟೆಯ ಭಾಗದ ಸ್ನಾಯುಗಳ ಸುತ್ತಲೂ 'ವಿಸರಲ್ ಫ್ಯಾಟ್' ಸಂಗ್ರಹ ವಾಗುತ್ತದೆ.

ದಿನ ಭವಿಷ್ಯ, ಸೆಪ್ಟೆಂಬರ್ 7, 2026: ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜೋಪಾನವಾಗಿರಿ!

ಈ ರಾಶಿಗೆ ವೈಯಕ್ತಿಕ ಸಮಸ್ಯೆ ಇಂದು ಹೆಚ್ಚಳ

Horoscope Today September 7th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ಏಕಾದಶಿ ತಿಥಿಯ ಸೆಪ್ಟೆಂಬರ್‌ 7ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಸಿಲಿಕಾನ್‌ ಸಿಟಿಯ ರಸ್ತೆಯ ಸ್ಥಿತಿ ನೋಡಿ: ವಿಡಿಯೊ ಮೂಲಕ ಬೆಂಗಳೂರಿಗರ ಸಂಕಷ್ಟ ತಿಳಿಸಿದ ಮಹಿಳೆ

ಬೆಂಗಳೂರಿನ ಗುಂಡಿ ಬಿದ್ದ ರಸ್ತೆ ಸ್ಥಿತಿಯನ್ನು ಟೀಕಿಸಿದ ಮಹಿಳೆ

Viral News: ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಹಾಗೂ ಗುಂಡಿ ಬಿದ್ದ ರಸ್ತೆಗಳ ಸಮಸ್ಯೆ ಹೊಸತಲ್ಲ. ಈ ಬಗ್ಗೆ ಹಲವರು ಧ್ವನಿ ಎತ್ತಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ಇಲ್ಲಿನ ರಸ್ತೆಗಳ ದುಸ್ಥಿತಿ ಹಾಗೂ ಸಂಚಾರ ದಟ್ಟಣೆಗೆ ರೋಸಿಹೋದ ಮಹಿಳೆ ವಿಡಿಯೊ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಪ್ಲೇಟ್‌ಲೆಟ್ ಕೌಂಟ್ ಆಧರಿಸಿ ಇನ್ಶೂರೆನ್ಸ್ ಕ್ಲೇಮ್ ತಿರಸ್ಕರಿಸಿದ ವಿಮೆ ಸಂಸ್ಥೆ

ರೋಗಿಯ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡಿದ ವಿಮೆ ಸಂಸ್ಥೆ: ಕಾರಣವೇನು?

Viral News: ಇಲ್ಲೊಬ್ಬರು ​ಡೆಂಗ್ಯೂ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು ಬಹಳ ದಿನದವರೆಗೆ ಆಡ್ಮಿಟ್ ಆಗಿದ್ದರು. ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಆಗಬಹುದು ಎನ್ನುವ ನಂಬಿಕೆಯೂ ಇವರಲ್ಲಿತ್ತು. ಆದರೆ ಡಿಸ್‌ಚಾರ್ಚ್‌ ಆಗುವ ಕೊನೆಯ ಕ್ಷಣದಲ್ಲಿ, ಅವರ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಅನ್ನು ವಿಮೆ ಕಂಪನಿ ತಿರಸ್ಕರಿಸಿದೆ. ಈ ಘಟನೆ ಆರೋಗ್ಯ ವಿಮಾ ರಕ್ಷಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಳಗೆ ಸೇರಿದರೆ ಗುಂಡು...: ಮದ್ಯಪಾನ ಮಾಡಿ ಕಾರ್‌ನ ಬಾನೆಟ್ ಮೇಲೆ ಕುಳಿತು ಮಹಿಳೆಯ ಕಿರಿಕ್‌; ಟ್ರಾಫಿಕ್‌ ಜಾಮ್‌

ಕುಡಿದು ಕಾರ್‌ನ ಮೇಲೇರಿ ಕುಳಿತು ಸಂಚಾರಕ್ಕೆ ಅಡ್ಡಿ ಪಡಿಸಿದ ಮಹಿಳೆ

Viral Video: ಹರಿಯಾಣದ ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯೊಬ್ಬಳು ಗಲಾಟೆ ಮಾಡಿದ ದೃಶ್ಯ ಕಂಡು ಬಂದಿದೆ. ಮಹಿಳೆ ಮದ್ಯದ ಬಾಟಲಿ ಹಿಡಿದು ಕಾರಿನ ಬಾನೆಟ್ ಮೇಲೆ ಕುಳಿತಿದ್ದಾಳೆ. ಈ ದೃಶ್ಯ ವೈರಲ್ ಆಗಿದ್ದು, ಘಟನೆಯ ಸುತ್ತಲಿನ ಸಂದರ್ಭ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾದ ನಡವಳಿಕೆಯ ಬಗ್ಗೆ ವೀಕ್ಷಕರು ಚರ್ಚೆ ನಡೆಸಿದ್ದಾರೆ.

18 ವರ್ಷಗಳ ಸೇವೆಯ ನಂತರ ಬಸ್‌ಗೆ ಮುತ್ತಿಕ್ಕಿ ವಿದಾಯ ಹೇಳಿದ KSRTC ಚಾಲಕ; ಹೃದಯಸ್ಪರ್ಶಿ ವಿಡಿಯೊ!

ಬಸ್ ಗೆ ಮುತ್ತಿಕ್ಕಿ ಭಾವನಾತ್ಮಕ ವಿದಾಯ ಹೇಳಿದ KSRTC ಚಾಲಕ!

Viral Video:ಸರಕಾರಿ ಸಾರಿಗೆ ಸಂಸ್ಥೆಯ ಚಾಲಕ 18 ವರ್ಷದ ಸೇವೆಯ ನಂತರ ಬಸ್ ಗೆ ಮುತ್ತಿ ಟ್ಟು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡುವ ವಿಡಿಯೊ ವೈರಲ್ ಆಗಿದೆ. ಇಡುಕ್ಕಿಯ ಕಟ್ಟಪ್ಪನ ಮೂಲದ ಪೌಲ್ ಕುರಿಯನ್ ಎಂಬವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೊಂದಿಗೆ 18 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ, ಅವರು ಇಡುಕ್ಕಿ ಮತ್ತು ಕುಮಿಲಿಯನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ತಮ್ಮ ಕೊನೆಯ ಕೆಲಸದ ದಿನದಂದು ಬಸ್‌ನ ಮುಂದೆ ನಿಂತಿರುವ ಭಾವನಾತ್ಮಕ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಶ್ವಾನ ಪ್ರಿಯರು ಓದಲೇ ಬೇಕಾದ ಸ್ಟೋರಿ; ನಾಯಿಗಳಿಗಾಗಿಯೇ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ರಸ್ತೆಬದಿ ವ್ಯಾಪಾರಿ!

ನಾಯಿಗಳ ಆರೈಕೆಗಾಗಿ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ವ್ಯಾಪಾರಿ!

Viral News: ಸಾಮಾನ್ಯವಾಗಿ ಐಸ್ ಕ್ಯಾಂಡಿ, ಪೆಪ್ಸಿ ಇತ್ಯಾದಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಯನ್ನು ನೀವು ನೋಡಿರಬಹುದು. ಇದೀಗ ವ್ಯಾಪಾರಿಯೊಬ್ಬರು ಸಾಕು ನಾಯಿಗಳಿಗಾಗಿಯೇ ಶುಗರ್ ಫ್ರೀ ಕುಲ್ಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶ್ವಾನ ಪ್ರಿಯರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ನೀಡುತ್ತಿದ್ದು ಕ್ಯೂಟ್ ಅಂಕಲ್ ಎಂದು ಕರೆಯುತ್ತಿದ್ದಾರೆ.

ಬರಿಗೈಯಲ್ಲೇ ಒಬ್ಬಂಟಿಯಾಗಿ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ:ನಿಸ್ವಾರ್ಥ ಸೇವೆಗೆ ಶ್ಲಾಘಿಸಿ ಕೆಲಸದ ಆಫರ್ ನೀಡಿದ ಓಷನ್ ಕ್ಲೀನ್‌ಅಪ್ CEO

ನದಿ ನೀರು ಸ್ವಚ್ಚಗೊಳಿಸಿದ ಯುವಕನಿಗೆ ಜಾಬ್ ಆಫರ್ ನೀಡಿದ ವಿದೇಶಿ ಸಂಸ್ಥಾಪಕ

Viral News: ಮಧ್ಯಪ್ರದೇಶದ ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಬಿಟ್ಟು ತಬಾಹಿ ಎನ್ನುವ ಯುವಕ ಒಬ್ಬಂಟಿಯಾಗಿ ತೆರವು ಗೊಳಿಸಿದ್ದ.ಇದೀಗ ಯುವಕನ ಈ ನಿಸ್ವಾರ್ಥ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಪರಿಸರ ಕಾಳಜಿಗೆ ಶ್ಲಾಘನೆ ವ್ಯಕ್ತ ಪಡಿಸಿದ ನೆದರ್ಲ್ಯಾಂಡ್ಸ್ ಮೂಲದ 'ದಿ ಓಷನ್ ಕ್ಲೀನ್‌ಅಪ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುವಂತೆ ಈ ಯುವಕನಿಗೆ ಆಫರ್ ನೀಡಿದ್ದಾರೆ.

ದಿನ ಭವಿಷ್ಯ, ಸೆಪ್ಟೆಂಬರ್ 6, 2026: ಈ ರಾಶಿಗೆ ಇಂದು ಶ್ರೀಮಂತರಾಗುವ ಯೋಗ!

ಈ ರಾಶಿಗೆ ಇಂದು ವೃತ್ತಿಯಲ್ಲಿ ಪ್ರಗತಿ!

Horoscope Today September 6th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ದಶಮಿ ತಿಥಿ, ಆರಿದ್ರಾ ನಕ್ಷತ್ರದ, ಸೆಪ್ಟೆಂಬರ್‌ 6ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಪಾಮ್ ಆಯಿಲ್ ಬಳಕೆ ಬಗ್ಗೆ ಆರೋಗ್ಯ ತಜ್ಞರ ಸಲಹೆ ಏನು?

ಪಾಮ್ ಆಯಿಲ್ ಸೇವನೆ ಆರೋಗ್ಯಕ್ಕೆ ಒಳಿತೇ?

Health Tips: ತಾಳೆ ಎಣ್ಣೆಯೂ ಅಡುಗೆ ಎಣ್ಣೆ ಚಾಕೊಲೇಟ್ ಮತ್ತು ವಿವಿಧ ಸಂಸ್ಕರಿಸಿದ ಆಹಾರ ಗಳಂತಹ ಉತ್ಪನ್ನಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ದೇಹಕ್ಕೆ ಪೋಷಕಾಂಶ ಒದಗಿಸುತ್ತವೆ. ತಾಳೆ ಎಣ್ಣೆಯಲ್ಲಿ ಸಹಜವಾಗಿ ಕೊಲೆ ಸ್ಟ್ರಾಲ್ ಮಟ್ಟ ಇರುವುದಿಲ್ಲ ಆದರೆ, ಒಂದೇ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು‌.

ದಿನ ಭವಿಷ್ಯ, ಸೆಪ್ಟೆಂಬರ್ 5, 2026: ಬಿಸಿನೆಸ್ ವ್ಯವಹಾರ ಆರಂಭಿಸಲು ಇಂದು ಸೂಕ್ತ ಕಾಲ!

ಈ ರಾಶಿಗೆ ಇಂದು ಹಣಕಾಸು ವ್ಯವಹಾರದಲ್ಲಿ ಲಾಭ

Horoscope Today September 5th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ನವಮಿ ತಿಥಿ, ಮೃಗಶಿರ ನಕ್ಷತ್ರದ, ಸೆಪ್ಟೆಂಬರ್‌ 5ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಕೋಮು ಸೌಹಾರ್ದತೆ ಸಾರುವ ದೃಶ್ಯ: ಹಿಂದೂ ಕುಟುಂಬಕ್ಕಾಗಿ ಗಣಪತಿ ವಿಗ್ರಹ ತಯಾರಿಸಿದ ಪಾಕಿಸ್ತಾನದ ಮುಸ್ಲಿಂ ಕಲಾವಿದ!

ಮರಾಠಿ ಕುಟುಂಬಕ್ಕಾಗಿ ಗಣಪತಿ ವಿಗ್ರಹ ರಚಿಸಿದ ಮುಸ್ಲಿಂ ಕಲಾವಿದ

Viral Video: ಕರಾಚಿಯಲ್ಲಿರುವ ಮರಾಠಿ ಕುಟುಂಬವು ಗಣೇಶ ಚತುರ್ಥಿಯ ಹಬ್ಬಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಇಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ವಿಗ್ರಹಕ್ಕೆ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಬಣ್ಣ ಬಳಿಯುತ್ತಿದ್ದು ಕೋಮು ಸೌಹಾರ್ದತೆಯ ಹೃದಯಸ್ಪರ್ಶಿ ಪ್ರದರ್ಶನ ಇದಾಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಸದ್ದು ಮಾಡುತ್ತಿರುವ ವಿಚಿತ್ರ ಉದ್ಯಮ: ಕೇವಲ ಬೆನ್ನು ಕೆರೆದು ಲಕ್ಷ -ಲಕ್ಷ ಗಳಿಸುತ್ತಿರುವ ಯುವಕ!

ಬೆನ್ನು ಕೆರೆಯುವ ಕೆಲಸ ಆರಂಭಿಸಿ ಗಂಟೆಗೆ 4,200 ರೂಪಾಯಿ ಗಳಿಸುವ ಯುವಕ

Viral News: ಇಲ್ಲೊಬ್ಬ ವ್ಯಕ್ತಿ ಕೇವಲ ಬೆನ್ನು ಕೆರೆಯುವ ಕೆಲಸವನ್ನು ಉದ್ಯಮವನ್ನಾಗಿ ಮಾಡಿ ಗಂಟೆಗೆ 4,200 ರೂಪಾಯಿ ಗಳಿಸುತ್ತಾನೆ. 'ಸುಮಾ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಜ್ಯಾಂಗ್ ಎಂಬ ವ್ಯಕ್ತಿ ಈ ಉದ್ಯಮ ಆರಂಭಿಸಿ ಸಕ್ಸಸ್ ಕಂಡಿದ್ದಾನೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀಗೂ ಹಣ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿದೇಶಕ್ಕೆ ತೆರಳುವ ಮುನ್ನ ಸ್ಕಾರ್ಪಿಯೋ ಗೆ ಹೈ ಸೆಕ್ಯುರಿಟಿ: ಟೆರೇಸ್ ಮೇಲೆಯೇ ಕಾರ್ ಪಾರ್ಕ್ ಮಾಡಿದ ಮಾಲೀಕ!

ಕಳ್ಳರ ಭಯಕ್ಕೆ ಕ್ರೇನ್ ಮೂಲಕ ಕಾರನ್ನು ಮನೆಯ ಟೆರೇಸ್ ಮೇಲೆ ಇರಿಸಿದ ಮಾಲೀಕ

Viral Video: ಇಲ್ಲೊಬ್ಬ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಎಸ್ ಯುವಿ ಕಾರನ್ನು ಕಳ್ಳರಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಕಾರನ್ನು ಹೊರಗೆ ನಿಲ್ಲಿಸುವ ಬದಲು, ಮಾಲೀಕರು ಸ್ಕಾರ್ಪಿಯೋ ವನ್ನು ಕ್ರೇನ್ ಮೂಲಕ ಎತ್ತಿ ತಮ್ಮ ಮನೆಯ ಛಾವಣಿಯ ಮೇಲೆ ಇರಿಸಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಟೆರೇಸ್ ಮೇಲೆ ಕಾರನ್ನು ಪಾರ್ಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

"ಭಾರತದಲ್ಲೇ ನೆಮ್ಮದಿ": ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಕೆಲಸ ತೊರೆದು ತಾಯ್ನಾಡಿಗೆ ಮರಳಿದ ಟೆಕ್ಕಿ ಹೇಳಿದ್ದೇನು?

ಮೈಕ್ರೋಸಾಫ್ಟ್ ಕೆಲಸ ತೊರೆದು ಭಾರತಕ್ಕೆ ಮರಳಿದ ಟೆಕ್ಕಿ: ಕಾರಣವೇನು?

Viral News: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರು ಲಕ್ಷ ಲಕ್ಷ ಸಂಬಳ ತೊರೆದು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರವು ಸಂಬಳಕ್ಕಿಂತ ಹೆಚ್ಚಿನದನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಈಗ ಕಡಿಮೆ ಸಂಪಾದಿಸಬಹುದಾದರೂ, ಹೆಚ್ಚಿನ ಸ್ವಾತಂತ್ರ್ಯ, ಕುಟುಂಬದೊಂದಿಗೆ ಸಮಯ ಮತ್ತು ಹಲವರ ಜೊತೆ ವೈಯಕ್ತಿಕ ಸಂಪರ್ಕಗಳನ್ನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು ಹಂಚಿಕೊಂಡಿದ್ದಾರೆ.

"ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಲಿವೆ": ನೇಪಾಳದ ಪ್ರಕೃತಿ ವಿಕೋಪದ ಭೀಕರತೆ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದ ಪಾದ್ರಿ!

ನೇಪಾಳ ಪ್ರವಾಹದ ಬಗ್ಗೆ ಮೊದಲೇ ಭವಿಷ್ಯವಾಣಿ ನುಡಿದಿದ್ದ ಪಾದ್ರಿ!

Viral Video: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ. ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳು,ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇಲ್ಲಿನ ಜನ ಜೀವನವೇ ಅಸ್ತವಸ್ತ್ಯವಾಗಿದ್ದು ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ಈ ನಡುವೆ ನೇಪಾಳದ ಭೀಕರ ಜಲಪ್ರಳಯದ ಬಗ್ಗೆ ಪಾದ್ರಿಯೊಬ್ಬರು ಈ ಮೊದಲೇ ಎಚ್ಚರಿಕೆ ನೀಡಿದ್ದ ಭವಿಷ್ಯವಾಣಿಯ ವಿಡಿಯೊವೊಂದು ವೈರಲ್ ಆಗುತ್ತಿದೆ.

ತೂಕ ನಿಯಂತ್ರಣದಿಂದ ಚರ್ಮದ ಆರೈಕೆವರೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನ ಒಂದೆರಡಲ್ಲ!

ಕೊಬ್ಬರಿ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

Health Tips: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ತಾಜಾ ತೆಂಗಿನ ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.​

ದಿನ ಭವಿಷ್ಯ, ಸೆಪ್ಟೆಂಬರ್ 4, 2026: ಕೃಷ್ಣ ಜನ್ಮಾಷ್ಟಮಿಯಂದು ನಿಮ್ಮ ಸಮೃದ್ಧಿ ಹೆಚ್ಚಲಿದೆ

ಕೃಷ್ಣನ ಅನುಗ್ರಹದಿಂದ ಈ ರಾಶಿಯವರ ಕಷ್ಟಗಳೆಲ್ಲ ದೂರ

Horoscope Today September 4th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರದ, ಸೆಪ್ಟೆಂಬರ್‌ 4ನೇ ತಾರೀಕಿನ ಈ ದಿನ ಕೃಷ್ಣ ಜನ್ಮಾಷ್ಟಮಿ.‌ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಕೆಸರಿನಲ್ಲಿ ಹೂತುಹೋದ ಲಾರಿ, ಜೆಸಿಬಿ; ಮಣ್ಣಿನೊಳಗೆ ಕೊಳೆತ ಮಾನವ ಮೃತದೇಹಗಳು: ನೇಪಾಳ ಪ್ರವಾಹದ ಭೀಕರತೆ ಬಿಚ್ಚಿಟ್ಟ ಯುಟ್ಯೂಬರ್

ನೇಪಾಳ ದುರಂತದ ನೈಜ ದೃಶ್ಯ ಬಿಚ್ಚಿಟ್ಟ ಯುಟ್ಯೂಬರ್

Nepal Floods Aftermath: ನೇಪಾಳ ಪ್ರವಾಹದ ಭೀಕರತೆಗೆ ಜಗತ್ತೇ ಮರುಗಿದೆ. ಹಿಮನದಿ ಕುಸಿತ ಮತ್ತು ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹವು ಹಲವು ಜನರ ಬದುಕನ್ನೇ ನುಂಗಿ ಹಾಕಿದೆ. ಈ ದುರಂತವನ್ನು ಬಿಚ್ಚಿಡುವ ಅಘಾತಕಾರಿ‌ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

"ಗೃಹಿಣಿಯರ ಶ್ರಮಕ್ಕೆ ಬೆಲೆ ಕಟ್ಟಲಾಗದು": ಮನೆ ಕೆಲಸ ವಹಿಸಿಕೊಂಡ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸರ್ಕಾರಿ ಅಧಿಕಾರಿ

ಮನೆ ಕೆಲಸ ಮಾಡುವ ಗೃಹಿಣಿಗೆ ಮಾಸಿಕ ಸಂಬಳ ನೀಡುವ ಸರ್ಕಾರಿ ಅಧಿಕಾರಿ

Viral News: ಇಲ್ಲೊಬ್ಬ ಸರ್ಕಾರಿ ಉದ್ಯೋಗಿ ತನ್ನ ಮನೆಯನ್ನು ಮುನ್ನಡೆಸುವ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸುದ್ದಿಯೊಂದು ಭಾರಿ ವೈರಲ್ ಆಗಿದೆ. ಇವರು ತನ್ನ ಗೃಹಿಣಿ ಪತ್ನಿಗೆ ಏನಾದರೂ ಅಗತ್ಯವಿದ್ದಾಗ ಮಾತ್ರ ಹಣವನ್ನು ನೀಡುವ ಬದಲು, ಮನೆಯಲ್ಲಿ ಮಾಡುವ ಕೆಲಸಕ್ಕೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುತ್ತಾರೆ‌.

ಕಳೆದುಹೋದ 2 ಲಕ್ಷ ಮೌಲ್ಯದ ಮ್ಯಾಕ್‌ಬುಕ್ ಮರಳಿಸಿದ ರಿಕ್ಷಾ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

ಕಳೆದು ಹೋದ ಮ್ಯಾಕ್ ಬುಕ್ ಮರಳಿಸಿ ಮಾನವೀಯತೆ ಮೆರೆದ ರಿಕ್ಷಾ ಚಾಲಕ!

Viral News: ದೆಹಲಿಯಲ್ಲಿ ನಡೆದ ಘಟನೆಯೊಂದು ಇಂದಿಗೂ ಪ್ರಾಮಾಣಿಕ ವ್ಯಕ್ತಿತ್ವ ಕೆಲವರಲ್ಲಿ ಜೀವಂತವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ‌ಅದರಲ್ಲೂ ಕಳೆದುಹೋದ ದುಬಾರಿ ವಸ್ತುಗಳನ್ನು ಮರಳಿ ಪಡೆಯುವ ಎಲ್ಲಾ ಭರವಸೆಯನ್ನು ಕಳೆದುಕೊಳ್ಳುವ ಈ ಜಗತ್ತಿನಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳೆದ ಹೋದ ಮ್ಯಾಕ್ ಬುಕ್ ಅನ್ನು ರಿಕ್ಷಾ ಚಾಲಕರೊಬ್ಬರು ಮಾಲೀಕರಿಗೆ ತಲುಪಿಸಿದ್ದಾರೆ. ಚಾಲಕನ ಮಾನವೀಯ ಗುಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌..

ಬರಿಗೈಯಲ್ಲೇ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ: ಆಡಳಿತ ವಿಫಲತೆಯ ವಿರುದ್ಧ ತೀವ್ರ ಟೀಕೆ!

ಅಧಿಕಾರಿಗಳಿಗೆ ಕಾಯದೆ ಕಲುಷಿತ ನದಿಯ ನೈರ್ಮಲ್ಯಕ್ಕಿಳಿದ ಯುವಕ!

Viral Video: ಮಧ್ಯಪ್ರದೇಶದಲ್ಲಿ​ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು 20 ವರ್ಷದ ಯುವಕನೊಬ್ಬ ಸ್ವತಃ ತಾನೇ ಮುಂದೆ ನಿಂತು ಮಾಡಿದ್ದಾನೆ. ಕಲುಷಿತಗೊಂಡ ನದಿಯ ನೀರನ್ನು ಸ್ವಚ್ಛ ಗೊಳಿಸಲು ಪುರಸಭೆಯ ಸ್ವಚ್ಛತಾ ಅಭಿಯಾನ ಕ್ಕಾಗಿ ಕಾಯದೆ ತಾನೇ ವೈಯಕ್ತಿಕವಾಗಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾನೆ.

IT ಉದ್ಯೋಗಿಗಳನ್ನೇ ಮೀರಿಸುವಂತೆ ಈತನ ಗಳಿಕೆ; ಬೆಂಗಳೂರಿನ ಉಬರ್‌ ಚಾಲಕನ ಆದಾಯ ಕೇಳಿದ್ರೆ ಶಾಕ್‌ ಆಗ್ತೀರಾ!

ಬೆಂಗಳೂರಿನಲ್ಲಿ ಉಬರ್ ಚಾಲಕನ ಗಳಿಕೆ ಕಂಡು ಐಟಿ ಉದ್ಯೋಗಿಗಳು ಶಾಕ್!

Viral News: ಕೇವಲ ಟ್ಯಾಕ್ಸಿ ಚಾಲನೆ ಮಾಡುವ ಮೂಲಕ ವಾರಕ್ಕೆ ಬರೋಬ್ಬರಿ 46,000 ರೂಪಾಯಿ ಗಳಿಸುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಉಬರ್ ಚಾಲಕ ಹ್ಯಾಮ್ಟರ್ ಡೆಬ್ಬರ್ಮ ಎಂಬುವವರು ತಮ್ಮ ದಿನನಿತ್ಯದ ಕೆಲಸದ ಶೈಲಿ ಮತ್ತು ಗಳಿಕೆಯ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಹೆಚ್ಚು ಹಣ ಸಂಪಾದನೆ ಮಾಡಲು ನಾವು ತೋರುವ ಆಸಕ್ತಿ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

Loading...