ಬೆಂಗಳೂರು: ಖ್ಯಾತ ಆಂಕರ್ ಅನುಶ್ರೀ ಅವರು ಇಂದು ದಾಂಪತ್ಯ ಜೀವನಕ್ಕೆ(Anchor Anushree Marriage) ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ರೆಸಾರ್ಟ್ವೊಂದರಲ್ಲಿ ಅನುಶ್ರೀ ತಮ್ಮ ದೀರ್ಘ ಕಾಲದ ಗೆಳೆಯನೊಂದಿಗೆ ಹಸೆಮಣೆ ಏರಿದ್ದಾರೆ. ಇನ್ನು ಈ ವಿವಾಹ ಸಂಭ್ರಮದಲ್ಲಿ, ನಟ ಶಿವರಾಜ್ ಕುಮಾರ್, ಡಾಲಿ ಧನಂಜಯ್, ನಟಿಯರಾದ ತಾರಾ, ಪ್ರೇಮ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ನಟ ಶರಣ್, ವಿಜಯರಾಘವೇಂದ್ರ ಸೇರಿದಂತೆ ಅನೇಕರು ಸಾಕ್ಷಿಯಾದರು. ಇನ್ನು ಇದೇ ವೇಳೆ ಮಾತನಾಡಿದ ನಟ ನೆನಪಿರಲಿ ಪ್ರೇಮ್, ಅನುಶ್ರೀ ಮತ್ತು ರೋಷನ್ ಅವರಿಗೆ ಸುಖ, ಸಮೃದ್ಧಿ, ನೆಮ್ಮದಿ ಹಾಗೂ ಆದಷ್ಟು ಬೇಗ ಸಂತಾನ ಭಾಗ್ಯ ಕಲ್ಪಿಸಲಿ ಎಂದು ಹಾರೈಸುತ್ತೇನೆ ಎಂದರು.
ಇನ್ನು ಅನುಶ್ರೀಯವರ ವೃತ್ತಿ ಬದುಕಿನ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ಅವರ ವೃತ್ತಿ ಬದುಕಿನ ಸುದೀರ್ಘ ಜರ್ನಿಯಲ್ಲಿ ಅವರ ಪರಿಶ್ರಮ ಬಹಳ ದೊಡ್ಡ ಮಟ್ಟದಿದೆ. ಇವರು ಆಂಕರಿಂಗ್ಗೆ ಎಲ್ಲರಿಗೂ ಅನುಶ್ರೀಯೇ ಬೇಕು. ಅವರ ಯಶಸ್ಸು ಕಂಡಾಗ ಖುಷಿ ಅನಿಸುತ್ತದೆ ಎಂದರು. ಇನ್ನು ಈ ವೇಳೆ ಅವರ ಜೊತೆ ನಿರೂಪಕಿ, ನಟಿ ಶ್ವೇತ ಚಂಗಪ್ಪ ಇದ್ದರು.
ನಟ ಶರಣ್ ಕೂಡ ಅನುಶ್ರೀ ಮದುವೆಯಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ. ಅನುಶ್ರೀ ನಮ್ಮ ಜೊತೆ ಜೊತೆಗೆ ಬೆಳೆದು ಬಂದ ಹುಡುಗಿ. ಅವರ ಬದುಕು ಬಹಳ ಸ್ಫೂರ್ತಿದಾಯಕ. ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿ. ನಾವಿವತ್ತು ಅವರ ಸಹೋದರನಾಗಿ ಸೋದ್ಯೋಗಿಯಾಗಿ, ಗೆಳೆಯನಾಗಿ ಬಂದಿದ್ದೇನೆ. ಅವರಿಬ್ಬರು ಬದುಕು ಸದಾನ ಹಸನಾಗಿರಲಿ ಎಂದು ಬಯಸುತ್ತೇನೆ.
ಈ ಸುದ್ದಿಯನ್ನೂ ಓದಿ: Anushree Marriage: ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?: ಅನುಮಾನ ಮೂಡಿಸಿದ ಇನ್ಸ್ಟಾಗ್ರಾಮ್ ವಿಡಿಯೋ
ನಿರೂಪಕಿ ಬದು ಅಷ್ಟು ಸುಲಭವಲ್ಲ. ಅವರ ಶ್ರಮ ಎಲ್ಲರಿಗೂ ಸ್ಫೂರ್ತಿದಾಯಕ. ಬೆಳಗ್ಗಿನ ಜಾವ, ತಡರಾತ್ರಿ ಶೂಟಿಂಗ್ ಇದ್ದರೂ ಒಬ್ಬ ನಿರೂಪಕಿ ಮಾತ್ರ ಇಡೀ ಶೋ ಮುಗಿಯುವವರೆಗೆ ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅನುಶ್ರೀ ಯವರ ಪರಿಶ್ರಮ ಎಷ್ಟರಮಟ್ಟಿಗೆ ಇದೆ ಎಂಬುದು ನಾಡಿನ ಜನತೆಗೆ ಇದೆ. ಅದಕ್ಕಿಂತ ಹೆಚ್ಚು ನನಗಿದೆ. ಅದೆಷ್ಟೋ ಬಾರಿ ನಾನೇ ಅಚ್ಚರಿ ಪಟ್ಟುಕೊಂಡು ಅವರನ್ನೂ ಕೇಳಿದುಂಟು. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಇಂದು ಅವರು ನಮಗೆಲ್ಲರಿಗೂ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಶರಣ್ ಸಂಸತ ವ್ಯಕ್ತಪಡಿಸಿದ್ದಾರೆ.