ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Ranbir Kapoor : ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್

ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್

Ranbir: ನಟ ರಣಬೀರ್ ಕಪೂರ್ ತಮ್ಮ ಬ್ರ್ಯಾಂಡ್ ಆರ್ಕ್ಸ್‌ನ ವಾರ್ಷಿಕೋತ್ಸವ ಅಗವಾಗಿ ಇನ್‌ಸ್ಟಾ ಲೈವ್‌ ಬಂದಿದ್ದರು, , ಅಲ್ಲಿ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಮುಂಬರುವ ಚಿತ್ರಗಳ ಕುರಿತು ಪ್ರಮುಖ ಅಪ್‌ಡೇಟ್‌ಗಳನ್ನು ಹಂಚಿಕೊಂಡರು. ಖ್ಯಾತ ನಿರ್ಮಾಪಕ-ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಅಂಡ್ ವಾರ್' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿದೆ. ಇದರಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Rekha Vedavyas: ಆ ಕಾರಣಗಳಿಂದ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ; ನಟಿ ಚಿತ್ರ ರೇಖಾ

ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯ ಹೇಳಿದ ನಟಿ ರೇಖಾ

Rekha actress: ಈ ಹಿಂದೆ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ಸುಂದರ ನಟಿ ಅಂದರೆ ಅದುವೇ ಕನ್ನಡತಿ ‘ಚಿತ್ರʼ ರೇಖಾ. ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ (Kannada) ಸಿನಿಮಾ ಮಾಡಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ (Cinema) ದೂರವಿದ್ದ ಈ ಸುಂದರ ನಟಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Hombale Films : ಹೊಂಬಾಳೆಯ ʻಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್; ನಾಳೆ ಹಾಡು ಬಿಡುಗಡೆ

ಹೊಂಬಾಳೆಯ ʻಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್

Shiva Shambho Swayambho: ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'ಶಿವ ಶಂಭೋ ಸ್ವಯಂಭೋ' ಹಾಡಿನ ಪ್ರೊಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. 'ಭಕ್ತಿಯ ಅಲೆ ಆರಂಭವಾಗಿದೆ' ಎಂಬ ಅಡಿಬರಹ ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ನಿಮ್ಮನ್ನು ಭಕ್ತಿ ಸಾಗರದಲ್ಲಿ ಮುಳುಗಿಸಲು ಸಿದ್ಧವಾಗಿದೆ. ಕೆಜಿಎಫ್ ಮತ್ತು ಕಾಂತಾರದಂತಹ ದೊಡ್ಡ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಈಗ ಸಂಗೀತ ಕ್ಷೇತ್ರದಲ್ಲಿ (Music) ತನ್ನ ಛಾಪು ಮೂಡಿಸುತ್ತಿದೆ.

Yash: ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ; ವ್ಯಾಲೆಂಟೈನ್‌ ಡೇಗೆ ಯಶ್‌ಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ರಾಧಿಕಾ

ಯಶ್‌ಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ರಾಧಿಕಾ

Radhika: ರಾಧಿಕಾ ಪಂಡಿತ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಯಾವುದೇ ಶುಭ ಸಮಾರಂಭಗಳಿರಲಿ, ವಿಶೇಷ ದಿನಗಳಿರಲಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಹುಟ್ಟುಹಬ್ಬ, ಮ್ಯಾರೇಜ್‌ ಆನಿವರ್ಸರಿ ಇತ್ಯಾದಿಗಳಿಗೆ ಹಾಕಿಕೊಳ್ಳೋ ಪೋಸ್ಟ್‌ಗಳು ವೈರಲ್‌ ಆಗುತ್ತವೆ. ಇದೀಗ ವ್ಯಾಲೆಂಟೈನ್‌ ಡೇ ಸಂದರ್ಭದಲ್ಲಿ ರಾಧಿಕಾ ಪಂಡಿತ್‌ ಯಶ್‌ಗೆ ಹಾರೈಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಾಧಿಕಾ ಪಂಡಿತ್ ಅವರು ಯಶ್​ಗೆ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ.

Dhanush: ಕಾನೂನು ಸಂಕಷ್ಟದಲ್ಲಿ ಧನುಷ್; ಏನಿದು ಪ್ರಕರಣ?

ಕಾನೂನು ಸಂಕಷ್ಟದಲ್ಲಿ ಧನುಷ್; ಏನಿದು ಪ್ರಕರಣ?

Dhanush production: ಬಹಳ ದಿನಗಳಿಂದ ವಿಳಂಬವಾಗಿದ್ದ ಚಿತ್ರ ನಿರ್ಮಾಣ ಸಂಸ್ಥೆ ತೆನಾಂಡಲ್ ಫಿಲ್ಮ್ಸ್, ನಟ ಧನುಷ್ಅ ವರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಆರ್ಥಿಕ ಹಿನ್ನಡೆಯನ್ನು ಉಲ್ಲೇಖಿಸಿ ಬ್ಯಾನರ್ ₹ 20 ಕೋಟಿ ಪರಿಹಾರವನ್ನು ಕೋರಿದೆ ಎಂದು ವರದಿಯಾಗಿದೆ. 2016ರಲ್ಲಿ ಒಪ್ಪಿಕೊಂಡ 'ನಾನ್ ರುದ್ರನ್' ಸಿನಿಮಾ ಯೋಜನೆಯ ವಿಳಂಬಕ್ಕೆ ಧನುಶ್ ಅವರೇ ಕಾರಣ ಎಂದು ಸಂಸ್ಥೆ ಆರೋಪಿಸಿದೆ. ಚಿತ್ರಕಥೆ ನೀಡದೆ ಯೋಜನೆ ಸ್ಥಗಿತಗೊಂಡಿದೆ.

Namit Malhotra: ರಾಮಾಯಣ ನಮ್ಮ ಸಂಸ್ಕೃತಿ ,ಹಿಂದೆಂದೂ ನೋಡಿರದ ರೀತಿಯಲ್ಲಿ ಸಿನಿಮಾ ಬರತ್ತೆ; ನಮಿತ್ ಮಲ್ಹೋತ್ರಾ

ಯಶ್ ಚಿತ್ರದ ನಿರ್ಮಾಪಕನ ಹೊಸ ಹೇಳಿಕೆ, ಸಿನಿಮಾ ಹೇಗೆ ಇರಲಿದೆ?

Yash: ನಮಿತ್ ಮಲ್ಹೋತ್ರಾ (Namit Malhotra) ಅವರ ರಾಮಾಯಣವು (Ramayana Movie) ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಒಳ್ಳೆಯ ಸಂಗೀತ ಮತ್ತು ಅದ್ಭುತ ತಾರಾಗಣವಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಇತ್ತೀಚೆಗೆ ರಾಮಾಯಣ ಸಿನಿಮಾ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ರಾಮಾಯಣ ನಮ್ಮ ಸಂಸ್ಕೃತಿ, ನಮ್ಮ ಕಥೆಗಳು ಮತ್ತು ನಮ್ಮ ಇತಿಹಾಸದ ಅಡಿಪಾಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?

ಅಲ್ಲು ಸಿರೀಶ್ ಹಳದಿ ಶಾಸ್ತ್ರ; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?

allu arjun: ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಶುಕ್ರವಾರ ತಮ್ಮ ಸಹೋದರ ಅಲ್ಲು ಸಿರೀಶ್ ಅವರ ಹಳದಿ ಶಾಸ್ತ್ರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಶೂಟಿಂಗ್ ವೇಳಾಪಟ್ಟಿ ಇದಿದ್ದರಿಂದ ಹಾಜರಾಗಲು ಸಾಧ್ಯವಾಗದ ಕಾರಣ ಅವರು ಅದನ್ನು ಎಷ್ಟು ಮಿಸ್ ಮಾಡಿಕೊಂಡರು ಎಂಬುದನ್ನು ಪೋಸ್ಟ್‌ ಮೂಲಕ ವ್ಯಕ್ತ ಪಡಿಸಿದರು.

Joe simon Passes Away: ಚಿತ್ರ ನಿರ್ದೇಶಕ ಜೋಸೈಮನ್‌ ಅಂತಿಮ ದರ್ಶನಕ್ಕೆ ಇಂದು ಕಲಾಕ್ಷೇತ್ರದಲ್ಲಿ ಅವಕಾಶ

ಇಂದು ಕಲಾಕ್ಷೇತ್ರದಲ್ಲಿ ನಿರ್ದೇಶಕ ಜೋಸೈಮನ್‌ ಅಂತಿಮ ದರ್ಶನ ಏರ್ಪಾಡು

ಫಿಲ್ಮ್ ಚೇಂಬರ್ ಸಭೆಯಲ್ಲಿ ಭಾಗಿಯಾಗಿದ್ದ ನಿರ್ದೇಶಕ ಜೋ ಸೈಮನ್ ಅವರಿಗೆ ಸಭೆಯಲ್ಲಿದ್ದಾಗಲೇ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆಯೇ ಅಂತ್ಯ ಸಂಸ್ಕಾರ ನಡೆಯಲಿದೆ.

Rakhi Sawant: ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್; ಕಾರಣ ಇದು

ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್; ಕಾರಣ ಇದು

rakhi sawant: ಇತ್ತೀಚೆಗೆ, ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯಲ್ಲಿ ವಿಚಿತ್ರವಾದ ಡ್ರೆಸ್‌ ಧರಿಸಿ ವಿವಾದಕ್ಕೆ ಸಿಲುಕಿದ್ದರು ರಾಖಿ ಸಾವಂತ್ . ಈಗ, ಐಟಂ ಗರ್ಲ್ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ ರಾಖಿ ಸಾವಂತ್‌. ಜ್ಯೋತಿಷಿಯ ಸೂಚನೆಯ ಮೇರೆಗೆ ಒಂದು ವರ್ಷದವರೆಗೆ ತಾನು ಬ್ರಾ ಅಥವಾ ಪ್ಯಾಂಟಿ ಧರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್.

Lahari Velu Son Marriage: ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್‌

ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್‌

Lahari Velu: ಲಹರಿ ವೇಲು ಅವರ ಪುತ್ರ ಸಾಯಿ ಅವರ ವಿವಾಹ ದಿಯಾ ಅವರೊಂದಿಗೆ ಇತ್ತೀಚೆಗೆ ಬೆಂಗಳೂರು ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಾಸಕ ಮುನಿರತ್ನ ಸೇರಿದಂತೆ ಚಿತ್ರರಂಗ, ರಾಜಕೀಯ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.

Valentine's Day: ಪ್ರೇಮಿಗಳ ದಿನದಂದು ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

Romantic Movies: ಯಾವುದೇ ಜೋಡಿಗೂ ಪ್ರೇಮಿಗಳ ದಿನವು ತುಂಬಾ ವಿಶೇಷವಾದ ದಿನ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವವರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಹಿಟ್‌ಗಳನ್ನು ಒಳಗೊಂಡಿರುವ ಈ ಚಲನಚಿತ್ರಗಳನ್ನು ನಿಮ್ಮ ಪ್ರೇಮಿ ಜೊತೆ ಕುಳಿತು ಮನೆಯಲ್ಲಿಯೇ ಸಿನಿಮಾ ನೋಡಬಹುದು. ಧನುಷ್ , ನಿತ್ಯಾ ಮೆನನ್, ವಿಜಯ್ ದೇವರಕೊಂಡ (Vijay), ಗಣೇಶ್ ಮತ್ತು ದುಲ್ಕರ್ ಸಲ್ಮಾನ್‌ರಂತಹ ತಾರೆಯರ ಸಿನಿಮಾಗಳಿವು. ಯಾವುದೆಲ್ಲ ಅವು?

ʻನಿಮ್ ಹುಡುಗಿ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆʼ; ಎಂಬಿಬಿಎಸ್‌ ಪದವಿ ಪಡೆದ ಖುಷಿಯಲ್ಲಿ ಡಾ. ಶ್ರೀಲೀಲಾ; ಇಲ್ಲಿವೆ ಘಟಿಕೋತ್ಸವದ ಫೋಟೋಗಳು

Photos: ಎಂಬಿಬಿಎಸ್‌ ಪದವಿ ಪಡೆದ ಖುಷಿಯಲ್ಲಿ ಭಾವುಕರಾದ ಡಾ. ಶ್ರೀಲೀಲಾ

ನಟಿ ಶ್ರೀಲೀಲಾ ಅವರು ತಮ್ಮ ಎಂಬಿಬಿಎಸ್‌ ಕೋರ್ಸ್‌ ಮುಗಿಸಿ, ಪದವಿಯನ್ನು ಪಡೆದುಕೊಂಡಿದ್ದಾರೆ. ಅವರೀಗ ಡಾ. ಶ್ರೀಲೀಲಾ ಆಗಿದ್ದಾರೆ. ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅವರು, ಅದರ ನಡುವೆಯೂ ವೈದ್ಯಕೀಯ ಪದವಿ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಸದ್ಯ ತಮ್ಮ ಘಟಿಕೋತ್ಸವದ ಪೋಟೋಗಳನ್ನು ಹಂಚಿಕೊಂಡಿರುವ ಶ್ರೀಲೀಲಾ, ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ. ತಾವು ವೈದ್ಯಕೀಯ ಪದವಿ ಪಡೆದುಕೊಂಡಿದ್ದನ್ನು ಒಂದು ಮೈಲಿಗಲ್ಲು, ಒಂದು ಪಯಣ ಎಂದು ಕರೆದುಕೊಂಡಿರುವ ಅವರು, "ತಿಳಿದೋ ಅಥವಾ ತಿಳಿಯದೆಯೋ ನೀವೆಲ್ಲರೂ ಇದರ ಭಾಗವಾಗಿದ್ದಿರಿ" ಎಂದು ಹೇಳಿದ್ದಾರೆ. ಅವರ ಮನದಾಳದ ಮಾತುಗಳು ಮತ್ತು ಘಟಿಕೋತ್ಸವದ ಸುಂದರ ಪೋಟೋಗಳು ಇಲ್ಲಿವೆ ನೋಡಿ.

Gilli Nata: ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

Jhanvi: ನಿರೂಪಕಿ ಜಾಹ್ನವಿ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಮೂಲಕ ಸಿಕ್ಕಾಪಟ್ಟೆ ಫೇಮಸ್‌ ಆದರು. ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನವೇ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿಯಾಗಿದ್ದರು. ಜಾಹ್ನವಿ ನಟಿಸಿದ ಸಿನಿಮಾಗಳು ಇದೀಗ ರಿಲೀಸ್‌ಗೆ ಸಜ್ಜಾಗಿವೆ. ಯುವ ಸರ್ಕಾರ್ ಈ ಸಿನಿಮಾದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶ್ರುತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಇದೀಗ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಜಾಹ್ನವಿ ಹಂಚಿಕೊಂಡರು.

Golden Star Ganesh Brother: ಅಣ್ಣ ಹಾಕಿಕೊಟ್ಟ 4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

Golden Star Ganesh: 'ಗೋಲ್ಡನ್ ಸ್ಟಾರ್' ಗಣೇಶ್' ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಗಣೇಶ್ ಅವರ ಸಹೋದರ ಮಹೇಶ್‌ ಕೂಡ ಚಂದನವನಕ್ಕೆ ನಟರಾಗಿ ಎಂಟ್ರಿ ನೀಡಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ನಮಕ್‌ಹರಾಮ್' ಎಂಬ ಸಿನಿಮಾ ಮೂಲಕ ಮಹೇಶ್ ಬಣ್ಣದಲೋಕಕ್ಕೆ ಬಂದರು. ಬಳಿಕ ಎರಡ್ಮೂರು ಸಿನಿಮಾ ಮಾಡಿದ್ರು ಪ್ರಯೋಜನ ಆಗಲಿಲ್ಲ. 'ಮಗ್ಗಿ ಪುಸ್ತಕ' ಎಂಬ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ.

ʻಧುರಂಧರ್‌ 2ʼ ಚಿತ್ರಕ್ಕಿಂತಲೂ ʻಟಾಕ್ಸಿಕ್‌ʼ ಮೇಲೆ ಡಬಲ್‌ ನಿರೀಕ್ಷೆ; ಯಶ್‌ ಸಿನಿಮಾದ ಮುಂದೆ ಎಲ್ಲರೂ ಡಲ್ಲೋ ಡಲ್ಲು!

IMDb ಲಿಸ್ಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್‌ಗೆ ನಂ.1 ಪಟ್ಟ

Toxic Movie: ಭಾರತೀಯ ಚಿತ್ರರಂಗದ ಅತ್ಯಂತ ಬಹುನಿರೀಕ್ಷಿತ ಸಿನಿಮಾವಾಗಿ ಟಾಕ್ಸಿಕ್‌ ಹೊರಹೊಮ್ಮಿದೆ. ಐಎಂಡಿಬಿ ಬಿಡುಗಡೆ ಮಾಡಿದ ಹೊಸ ಪಟ್ಟಿಯಲ್ಲಿ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಶೇ. 42.3 ರಷ್ಟು ಮತಗಳೊಂದಿಗೆ ಅಗ್ರಸ್ಥಾನ ಪಡೆದಿದೆ.

ʻಸಾಹಸ ಸಿಂಹʼ ಖ್ಯಾತಿಯ ಹಿರಿಯ ನಿರ್ದೇಶಕ ಜೋ ಸೈಮನ್‌ ಇನ್ನಿಲ್ಲ; ಫಿಲ್ಮ್‌ ಚೇಂಬರ್‌ನಲ್ಲಿ ಹೃದಯಾಘಾತದಿಂದ ನಿಧನ

ನಿರ್ದೇಶಕ ಜೋ ಸೈಮನ್‌ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ನಿರ್ದೇಶಕ ಜೋ ಸೈಮನ್ ಅವರು ಇಂದು (ಫೆ.13) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದಾಗ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾನ್ನಪ್ಪಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್‌ ತಂಗಿ ಮಗನ 'ಯುವ ಸರ್ಕಾರ್' ಚಿತ್ರದಲ್ಲಿ ʻಬಿಗ್‌ ಬಾಸ್ʼ ಜಾಹ್ನವಿ; ಈ ಚಿತ್ರಕ್ಕೆ ಸಿಕ್ಕಿದೆ ಶಿವಣ್ಣನ ಆಶೀರ್ವಾದ

ಪಾರ್ವತಮ್ಮ ರಾಜ್‌ಕುಮಾರ್‌ ತಂಗಿ ಮಗನ 'ಯುವ ಸರ್ಕಾರ್' ಚಿತ್ರದಲ್ಲಿ ಜಾಹ್ನವಿ

Yuva Sarkar Movie News: ಪಾರ್ವತಮ್ಮ ರಾಜ್‌ಕುಮಾರ್ ಅವರ ತಂಗಿ ಮಗ ಸಂತೋಷ್ ಕುಮಾರ್ ನಿರ್ದೇಶಿಸಿರುವ ಯುವ ಸರ್ಕಾರ್ ಚಿತ್ರಕ್ಕೆ ನಟ ಶಿವರಾಜ್‌ಕುಮಾರ್ ಶುಭ ಹಾರೈಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ತಾಯಿ-ಮಗನ ಎಮೋಷನಲ್ ಕಥೆಯನ್ನು ಹೊಂದಿದೆ.

ʻಥಿಯೇಟರ್‌ನಲ್ಲಿ ಮಿಸ್‌ ಮಾಡ್ಕೊಂಡೆ ಅಂತ ಮಾತ್ರ ಹೇಳ್ಬೇಡಿ, ಕರುಳು ಕಿವುಚಿದಂತಾಗುತ್ತೆʼ; ʻವಲವಾರʼ ನಿರ್ದೇಶಕನ ಭಾವುಕ ಪತ್ರ

'ವಲವಾರ' ಚಿತ್ರಕ್ಕೆ ಪ್ರೇಕ್ಷಕರ ಕೊರತೆ; ನಿರ್ದೇಶಕ ಸುತನ್ ಗೌಡ ಭಾವುಕ ಪತ್ರ

Valavara Movie: ನಿರ್ದೇಶಕ ಸುತನ್ ಗೌಡ ಅವರು ತಮ್ಮ‌ ವಲವಾರ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅತ್ಯಂತ ಭಾವುಕರಾಗಿ ಪತ್ರ ಬರೆದಿದ್ದಾರೆ. ವಿಮರ್ಶಕರಿಂದ ಉತ್ತಮ ರೇಟಿಂಗ್ ಪಡೆದಿದ್ದರೂ, ಪ್ರೇಕ್ಷಕರು ಬರದೇ ಇರುವುದರಿಂದ ಸಿನಿಮಾ ಪ್ರದರ್ಶನಗಳು ಕಡಿಮೆಯಾಗುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಮ್‌ ಚರಣ್‌ ಮಕ್ಕಳಿಗೆ ʻಶಿವ ರಾಮ್‌ʼ ಮತ್ತು ʻಅನ್ವೀರಾʼ ಎಂದು ನಾಮಕರಣ ಮಾಡಿದ್ದೇಕೆ? ಹೆಸರಿನ ಅರ್ಥ ತಿಳಿಸಿದ ಪತ್ನಿ ಉಪಾಸನಾ

‘ಶಿವ ರಾಮ್’-‘ಅನ್ವೀರಾ’ ಹೆಸರಿನ ಅರ್ಥ ತಿಳಿಸಿದ ರಾಮ್ ಚರಣ್ ಪತ್ನಿ ಉಪಾಸನಾ

Ram Charan Twins Names: ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಅವಳಿ ಮಕ್ಕಳಿಗೆ ಅನ್ವೀರಾ ದೇವಿ ಕೊನಿಡೆಲ ಮತ್ತು ಶಿವ ರಾಮ್ ಕೊನಿಡೆಲ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರುಗಳು ಕೇವಲ ಹೆಸರಲ್ಲ, ಅವುಗಳಲ್ಲಿ ಹಿರಿಯರ ಮೇಲಿನ ಗೌರವ ಹಾಗೂ ದೈವಿಕ ಶಕ್ತಿ ಅಡಗಿದೆ ಎಂದು ಉಪಾಸನಾ ತಿಳಿಸಿದ್ದಾರೆ.

'ಲೈಫ್ ಟುಡೇ' ಚಿತ್ರದ ಬ್ರೇಕಪ್ ಸಾಂಗ್ ಲಾಂಚ್: ʻಜೋಗಿʼ ಪ್ರೇಮ್ ದನಿಯಲ್ಲಿ ಮೂಡಿಬಂತು 'ಸಿಕ್ಕರೆ ಸಿಕ್ಕರೆ..' ಹಾಡು, ಚಿತ್ರತಂಡಕ್ಕೆ ಮಾನ್ವಿತಾ‌ ಸಾಥ್

'ಲೈಫ್ ಟುಡೇ' ಚಿತ್ರದ ಸಾಥ್ ನೀಡಿದ ಮಾನ್ವಿತಾ -‌ ʻಬಿಗ್‌ ಬಾಸ್‌ʼ ರಿಷಾ ಗೌಡ

Life Today Movie Song Launch: ಕಾಂತ ಕನ್ನಲ್ಲಿ ನಿರ್ದೇಶನದ ʻಲೈಫ್‌ ಟುಡೇʼ ಚಿತ್ರದ 'ಸಿಕ್ಕರೆ ಸಿಕ್ಕರೆ..' ಹಾಡಿಗೆ ಜೋಗಿ ಪ್ರೇಮ್ ಧ್ವನಿಯಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಕಾಲೇಜು ಯುವಕರನ್ನು ಸೆಳೆಯಲು ಸಿದ್ಧವಾಗಿರುವ ಈ ಹಾಡಿನ ಬಿಡುಗಡೆಗೆ ನಟಿ ಮಾನ್ವಿತಾ ಹರೀಶ್ ಮತ್ತು ನಿರ್ದೇಶಕ ಮಹೇಶ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ʻಲೂಸ್ ಮಾದʼ ಯೋಗಿ ಈಗ ʻಕರುನಾಡ ಸುಲ್ತಾನʼ; 50ನೇ ಸಿನಿಮಾಕ್ಕೆ ʻಕಿಂಗ್‌ʼ ಟೈಟಲ್, ಹಾರೈಸಿದ ಶಿವರಾಜ್‌ಕುಮಾರ್!‌

King: ʻಲೂಸ್‌ ಮಾದʼ ಯೋಗಿಗೆ ‘ಕರುನಾಡ ಸುಲ್ತಾನ’ ಬಿರುದು ನೀಡಿದ‌ ಫ್ಯಾನ್ಸ್

Loose Mada Yogi 50th Movie: ‘ದುನಿಯಾ’ ಮೂಲಕ ಚಿತ್ರರಂಗಕ್ಕೆ ಬಂದ ಯೋಗಿ ಈಗ ತಮ್ಮ 50ನೇ ಸಿನಿಮಾ ‘ಕಿಂಗ್’ (King) ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಶೀರ್ಷಿಕೆಯನ್ನು ನಟ ಶಿವರಾಜ್‌ಕುಮಾರ್ ಅನಾವರಣಗೊಳಿಸಿದ್ದು, ಯೋಗಿಗೆ ಅಭಿಮಾನಿಗಳು ‘ಕರುನಾಡ ಸುಲ್ತಾನ’ ಎಂಬ ಹೊಸ ಬಿರುದು ನೀಡಿದ್ದಾರೆ.

ಬೆಂಗಳೂರಿನಲ್ಲಿ ಜೈಲು ಮಾದರಿಯ ರೆಸ್ಟೋರೆಂಟ್ ಆರಂಭಿಸಿದ ತೆಲುಗು ನಟ; ಇದರ ಏನ್‌ ಸ್ಪೆಷಾಲಿಟಿ ಗೊತ್ತಾ?

ಮಹೇಶ್‌ ಬಾಬು ಬಳಿಕ ಬಿಸಿನೆಸ್‌ಗಾಗಿ ಬೆಂಗಳೂರಿಗೆ ಬಂದ ಮತ್ತೊಬ್ಬ ತೆಲುಗು ನಟ

ತೆಲುಗು ನಟ ಮಹೇಶ್‌ ಬಾಬು ಅವರು ಈಚೆಗಷ್ಟೇ ತಮ್ಮ ಎಎಂಬಿ ಸಿನಿಮಾಸ್‌ ಮಲ್ಟಿಪ್ಲೆಕ್ಸ್‌ಗಳನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ. ಗಾಂಧಿನಗರದ ಕಪಾಲಿ ಮಾಲ್‌ನಲ್ಲಿ ಎಎಂಬಿ ಸಿನಿಮಾಸ್‌ನ 9 ಸ್ಕ್ರೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ತೆಲುಗಿನ ಮತ್ತೋರ್ವ ನಟ ಧರ್ಮ ಮಹೇಶ್ ಕೂಡ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ ಆರಂಭಿಸಿದ್ದಾರೆ.

Shahid Kapoor: ಶಾಹಿದ್ ಕಪೂರ್ ನಟನೆಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌; ʻಓ ರೋಮಿಯೋʼ ಸಿನಿಮಾ ಹೇಗಿದೆ?

ಶಾಹಿದ್ ಕಪೂರ್ ನಟನೆಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌!

Homi Adajania: ಮಕ್ಬೂಲ್‌', 'ಓಂಕಾರ'ದಂತಹ ಜನಪ್ರಿಯ ಚಿತ್ರಗಳ ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ನಿರ್ದೇಶಿಸಿರುವ ಹಾಗೂ ಶಾಹಿದ್‌ ಕಪೂರ್‌ ಅಭಿನಯದ ಹೊಸ ಸಿನಿಮಾ ಓʼ ರೋಮಿಯೊ ಬಿಡುಗಡೆ ಆಗಿದೆ. ಫೆಬ್ರವರಿ 13 ರಂದು ಅಂತಿಮವಾಗಿ ಚಿತ್ರಮಂದಿರಗಳಿಗೆ ತಲುಪಿದೆ ಮತ್ತು ಮೊದಲ ಪ್ರತಿಕ್ರಿಯೆಗಳು ಈಗಾಗಲೇ ಹರಿದು ಬರುತ್ತಿವೆ. ಶಾಹಿದ್ ಕಪೂರ್ , ತೃಪ್ತಿ ಡಿಮ್ರಿ , ನಾನಾ ಪಾಟೇಕರ್ ಮತ್ತು ಅವಿನಾಶ್ ತಿವಾರಿ ನಟಿಸಿರುವ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

Kumbh Mela Beauty Monalisa: ಮೊದಲ ಚಿತ್ರದ ಸಂಭಾವನೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಲು ಮುಂದಾದ ʻಕುಂಭಮೇಳʼ ಸುಂದರಿ

ಶಾಲೆಯನ್ನು ಆರಂಭಿಸಲು ಮುಂದಾದ ʻಕುಂಭಮೇಳʼ ಸುಂದರಿ

Kumbh Mela Viral Monalisa: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಣಿಗಳನ್ನು ಮಾರಲು ಬಂದು ಅನಿರೀಕ್ಷಿತವಾಗಿ ಪ್ರಸಿದ್ಧಳಾದ ಮೊನಾಲಿಸಾ ಭೋಂಸ್ಲೆ ನಟಿಯಾಗಿ ಮಿಂಚುತ್ತಿದ್ದಾರೆ. 'ದಿ ಡೈರಿ ಆಫ್ ಮಣಿಪುರ' ಅವರ ಮೊದಲ ಚಿತ್ರ . " ಕುಂಭಮೇಳ ಸುಂದರಿ" ಎಂದು ಜನಪ್ರಿಯವಾಗಿರುವ ಮೊನಾಲಿಸಾ, ಬಾಲಕಿಯರಿಗಾಗಿ ಶಾಲೆಯನ್ನು ನಿರ್ಮಿಸಲು ಯೋಜಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ನಿರ್ಧಾರಕ್ಕಾಗಿ ಫ್ಯಾನ್ಸ್‌ ಮೊನಾಲಿಸಾಳನ್ನು ಹೊಗಳುತ್ತಿದ್ದಾರೆ.

Loading...