ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಆರ್‌.ಟಿ. ವಿಠ್ಠಲಮೂರ್ತಿ‌

columnist

info71@vishwavani.news

ವಿಶ್ವವಾಣಿ ಪತ್ರಿಕೆಯ ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ ಅವರು 1985 ರಿಂದ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆಂದೋಲನ, ಹಾಯ್ ಬೆಂಗಳೂರ್, ತರಂಗ, ಸುದ್ದಿಸಂಗಾತಿ, ಅಭಿಮಾನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆಂದೋಲನ ಪತ್ರಿಕೆಯಲ್ಲಿ ಸತತ 30 ವರ್ಷಗಳಿಂದ ರಾಜಕೀಯ ಅಂಕಣ 'ಬೆಂಗಳೂರು ಡೈರಿ' ಬರೆಯುತ್ತಿರುವ ಆರ್.ಟಿ.ವಿಠ್ಠಲಮೂರ್ತಿ ಅವರು, ರಾಜಕೀಯ ವಿಶ್ಲೇಷಕರಾಗಿ ಗಮನ ಸೆಳೆದವರು. ಪ್ರಸ್ತುತ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ʼಅಂಕಣಗಳ ಪತ್ರಿಕೆʼ ಎಂದು ಹೆಸರುವಾಸಿಯಾದ ವಿಶ್ವವಾಣಿಯಲ್ಲಿ ಅವರು ಬರೆಯುತ್ತಿರುವ ಮೂರ್ತಿ ಪೂಜೆ ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದು, ರಾಜ್ಯ ರಾಜಕಾರಣದ ನೈಜ ಪ್ರತಿಬಿಂಬವಾಗಿದೆ

Articles
R T Vittalmurthy Column: ಅಷ್ಟಕ್ಕೂ, ದಿಲ್ಲಿಯಲ್ಲಿ ಸಿದ್ದು ಗುದ್ದಿದ್ದು ಯಾರಿಗೆ ?

ಅಷ್ಟಕ್ಕೂ, ದಿಲ್ಲಿಯಲ್ಲಿ ಸಿದ್ದು ಗುದ್ದಿದ್ದು ಯಾರಿಗೆ ?

“ನೋಡ್ರೀ. ನಾನು ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು ಮತ್ತು ರಮೇಶ್ ಬಾಬು ಅವರ ಹೆಸರು ಗಳನ್ನು ಅಂತಿಮಗೊಳಿಸುವಾಗ ಅವರನ್ನು ಕರೆಸಿ ಮಾತನಾಡಿದ್ದೇನೆ. ‌ಎಮ್ಮೆಲ್ಸಿಗಳಾಗಲು ರೆಡಿ ಇರಿ ಅಂತ ಹೇಳಿದ್ದೇನೆ. ಈಗ ಈ ಹೆಸರುಗಳಲ್ಲಿ ಒಂದು ಹೆಸರನ್ನು ತೆಗೆದು ಹಾಕಿದರೂ ನನಗೆ ಅವಮಾನ ವಾಗುತ್ತದೆ. ಪಟ್ಟಿಗೆ ಅನುಮತಿ ಕೊಟ್ಟ ಖರ್ಗೆಯವರಿಗೆ ಅವಮಾನವಾಗುತ್ತದೆ" ಎಂದಿದ್ದಾರೆ.

R T Vittalmurthy Column: ವಿಜಯೇಂದ್ರ ಅವರಿಗೆ ಲಾಸ್ಟ್‌ ಚಾನ್ಸು ?

ವಿಜಯೇಂದ್ರ ಅವರಿಗೆ ಲಾಸ್ಟ್‌ ಚಾನ್ಸು ?

ವಿಜಯೇಂದ್ರ ಅವರನ್ನು ಕೆಳಗಿಳಿಸದೆ ಪಕ್ಷಕ್ಕೆ ಭವಿಷ್ಯವಿಲ್ಲ, ಎರಡು ವರ್ಷಗಳಿಂದ ಪಕ್ಷ ಸಂಘಟನೆಯ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ’ ಅಂತ ಇವರೆಲ್ಲ ಪದೇ ಪದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ರವಾನಿಸುತ್ತಲೇ ಇದ್ದಾರೆ.

R T Vittalmurthy Column: ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ ?

ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ ?

ಆರತಿಕೃಷ್ಣ ಅವರಿಗೆ ನಿಗದಿ ಮಾಡಿದ್ದ ಒಂದು ವರ್ಷದ ಪರಿಷತ್ ಸ್ಥಾನ ರಮೇಶ್ ಬಾಬು ಅವರಿಗೆ ಫಿಕ್ಸ್ ಆಗಿ, ರಮೇಶ್ ಬಾಬು ಅವರಿಗೆ ಫಿಕ್ಸ್ ಆಗಿದ್ದ ಆರು ವರ್ಷದ ಪರಿಷತ್ ಸ್ಥಾನ ಆರತಿ ಕೃಷ್ಣ ಅವರಿಗೆ ಫಿಕ್ಸ್ ಆಗಿದೆ. ಈ ಬದಲಾವಣೆಯಿಂದ ಅಸಮಾಧಾನಗೊಂಡ ರಮೇಶ್ ಬಾಬು ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋದರೆ, “ಅದೇನು ಫಿಕ್ಸಾಗಿದೆಯೋ ಒಪ್ಕೊಳಿ ಬಾಬು. ‌ಒಂದು ವರ್ಷದ ನಂತರವೂ ನಾನೇ ಸಿಎಂ ಆಗಿರ್ತೀನಲ್ಲ? ನಿಮ್ಮನ್ನು ಮತ್ತೆ ಕಂಟಿನ್ಯೂ ಮಾಡಿಸ್ತೀನಿ" ಅಂತ ಪ್ರಾಮಿಸ್ಸು ಮಾಡಿದರಂತೆ.

R T Vittalmurthy Column: ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?

ಮಂತ್ರಿ ಮಂಡಲದಿಂದ ಯಾರನ್ನಾದರೂ ಕೈ ಬಿಡಲು ಭ್ರಷ್ಟಾಚಾರವೇ ಮಾನದಂಡವಾಗುವುದಾದರೆ ಟಾಪ್ ಲೆವೆಲ್ಲಿನಿಂದಲೇ ಇದನ್ನು ಜಾರಿ ಮಾಡಬೇಕು. ಸಣ್ಣ ಪುಟ್ಟ ಮೀನುಗಳನ್ನು ಬಲಿ ಪಡೆಯುವು ದರಲ್ಲಿ ಅರ್ಥವೇ ಇಲ್ಲ. ಸಂಪುಟ ಪುನರ್ರಚಿಸುವಾಗ ಅದಕ್ಷತೆಯನ್ನು ಮಾನದಂಡ ವಾಗಿಟ್ಟುಕೊಂಡರೆ 6 ರಿಂದ 8 ಮಂದಿಯನ್ನು ಸಚಿವ ಸಂಪುಟದಿಂದ ಕೈ ಬಿಡಬಹುದು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

R T Vittalmurthy Column: ಅಮಿತ್‌ ಶಾ ಆತುರಕ್ಕೆ ಏನು ಕಾರಣ ?

ಅಮಿತ್‌ ಶಾ ಆತುರಕ್ಕೆ ಏನು ಕಾರಣ ?

ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾಮೋಹನದಾಸ್ ಅಗರ್ವಾಲ್ ಕಳೆದ ವಾರ ಕರ್ನಾಟಕಕ್ಕೆ ಬಂದರು. ಹೀಗೆ ಬಂದವರು ಪಕ್ಷದ ರಾಜ್ಯ ನಾಯಕರ ವಿರುದ್ಧ ಕಂಪ್ಲೇಂಟುಗಳ ಪಟ್ಟಿ ಹಿಡಿದುಕೊಂಡು ಬಂದಿದ್ದರು. ಅಂದ ಹಾಗೆ ಇದಕ್ಕೂ ಮುಂಚೆ ತಿರಂಗಾ ಯಾತ್ರೆಗೆ ಅಂತ ಕರ್ನಾಟಕಕ್ಕೆ ಬಂದಿದ್ದ ರಾಧಾಮೋಹನದಾಸ್ ಅಗರ್ವಾಲ, ಪಕ್ಷದ ರಾಜ್ಯ ಘಟಕ ಫೋರ್ಸ್ ಫುಲ್ ಆಗಿ ಕೆಲಸ ಮಾಡುತ್ತಿಲ್ಲ ಅಂತ ಅವತ್ತೇ ಚುಚ್ಚಿ ಹೋಗಿದ್ದರು.

‌R T Vittalmurthy Column: ಗಡ್ಕರಿ-ಸಿಂಗ್, ಬಿಜೆಪಿಯ ಹೊಸ ವಿಂಗ್

ಗಡ್ಕರಿ-ಸಿಂಗ್, ಬಿಜೆಪಿಯ ಹೊಸ ವಿಂಗ್

ಹೀಗೆ ಸಾವಂತ್ ಮತ್ತು ಫಡ್ನವೀಸ್ ಅವರ ಆಪರೇಷನ್ನಿಗೆ ಬ್ರೇಕ್ ಬೀಳಬಹುದು ಎಂಬ ಕಾರಣಕ್ಕಾಗಿ ಯೇ ಮೋದಿ- ಅಮಿತ್ ಶಾ ಈಗ ಹೊಸ ವಿಂಗನ್ನು ಆಪರೇಷನ್ನಿಗೆ ಇಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಈ ವಿಂಗ್ ನಲ್ಲಿರುವವರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್.

R T VittalMurthy Column: ಶುರುವಾಗಲಿದೆ ನಿಖಿಲ್‌ ಪಟ್ಟಾಭಿಷೇಕ ಯಾತ್ರೆ

ಶುರುವಾಗಲಿದೆ ನಿಖಿಲ್‌ ಪಟ್ಟಾಭಿಷೇಕ ಯಾತ್ರೆ

ನಾವು ಕುಮಾರಣ್ಣನ ಹಿಂದೆ ನಿಲ್ಲುವುದು ಬೇರೆ, ನಿಖಿಲ್ ಕುಮಾರಸ್ವಾಮಿಯವರ ಹಿಂದೆ ನಿಲ್ಲುವುದು ಹೇಗೆ? ಅಂತ ಅವರು ಕಿರಿಕಿರಿ ಮಾಡಿಕೊಂಡಿದ್ದಾರೆ ಎಂಬಂಥ ಮಾತುಗಳು ಹರಿದಾಡತೊಡಗಿವೆ. ಯಾವಾಗ ಇಂಥ ಕಲಸುಮೇಲೋಗರ ಶುರುವಾಯಿತೋ, ಆಗ ದೊಡ್ಡ ಗೌಡರು ಕುಮಾರಸ್ವಾಮಿ ಯವರಿಗೆ ಸಿಗ್ನಲ್ಲು ಕೊಟ್ಟು, “ರಾಜ್ಯ ರಾಜಕಾರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದನ್ನು ಬಿಟ್ಟು ದಿಲ್ಲಿ ಯಲ್ಲಿ ಸೆಟ್ಲಾಗುವುದು ಒಳ್ಳೆಯದು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟು ಕೇಂದ್ರ ಸಂಪುಟದಲ್ಲಿ ದೊಡ್ಡ ಖಾತೆ ಕೊಟ್ಟಿದ್ದಾರೆ. ಅ ಕಡೆ ಗಮನ ಕೊಟ್ಟು ಕೆಲಸ ಮಾಡಿದರೆ ಒಳ್ಳೆಯದು" ಎಂದಿದ್ದಾರೆ.

R T Vittalmurthy Column: ದೇವೇಂದ್ರ ಫಡ್ನವೀಸ್‌ ಎಂಟ್ರಿ ಆಗಿದ್ದೇಕೆ ?

ದೇವೇಂದ್ರ ಫಡ್ನವೀಸ್‌ ಎಂಟ್ರಿ ಆಗಿದ್ದೇಕೆ ?

ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟಿತರಾದ ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮೌನಕ್ಕೆ ಜಾರಿದ್ದಾರೆ. ಹಾಗಂತ ಪರ್ಮನೆಂಟಾಗಿ ಮೌನ ಧರಿಸಲು ಸಾಧ್ಯವಿಲ್ಲವಲ್ಲ? ಹೀಗಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಅವರು, ‘ಪಕ್ಷ ನಿಷ್ಠರಾದ ಯತ್ನಾಳ್ ಪ್ರಾಮಾಣಿಕವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಗಿದೆ. ಹೀಗಾಗಿ ಉಚ್ಚಾಟಿತ ರಾಗಿರುವ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ವರಿಷ್ಠರಿಗೆ ಹೇಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

R T Vittalmurthy Column: ಯೋಗಿಯ ಯೋಗ ನೀರಿನಿಂದ ನೀರಾ ತನಕ

ಯೋಗಿಯ ಯೋಗ ನೀರಿನಿಂದ ನೀರಾ ತನಕ

ಒಬ್ಬ ಶಾಸಕ ಆಡಳಿತ ಕೇಂದ್ರದಲ್ಲಿ ಅಪರೂಪಕ್ಕೂ ಕಾಣುತ್ತಿಲ್ಲ ಎಂದರೆ ಏನರ್ಥ? ಎಂಬ ಅಚ್ಚರಿ ಶುರುವಾಗುವ ಕಾಲಕ್ಕೇ ಅವರು ಹೊಸ ಗೆಟಪ್ಪಿನಲ್ಲಿ ಕಾಣಿಸತೊಡಗಿದ್ದಾರೆ. ಅರ್ಥಾತ್, ಅವರೀಗ ಸರಕಾರದಿಂದ ಅನುದಾನ ತರಲು ಬಡಿದಾಡುವ ಶಾಸಕ ಎಂಬುದಕ್ಕಿಂತ ಮುಖ್ಯವಾಗಿ, ತಾವು ಪ್ರತಿ ನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರದ ಆರ್ಥಿಕ ನಕಾಶೆಯನ್ನು ಬದಲಿಸಲು, ಆ ಮೂಲಕ ಕ್ಷೇತ್ರದ ರೈತರಿಗೆ ಶಕ್ತಿ ತುಂಬಲು ಉದ್ಯಮಿಯ ಗೆಟಪ್ಪು ಧರಿಸುತ್ತಿದ್ದಾರೆ. ಇದಕ್ಕಾಗಿ ದೇಶದ ವಿಶಿಷ್ಟ ವಾದ ನೀರಾ ಫ್ಯಾಕ್ಟರಿಯನ್ನು ಸ್ಥಾಪಿಸುವುದು ಯೋಗೇಶ್ವರ್ ಅವರ ಲೇಟೆಸ್ಟು ಪ್ಲಾನ್

R T Vittalmurthy Column: ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ ?

ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ ?

ರಾಜ್ಯ ಬಿಜೆಪಿಯ ಗೊಂದಲ ಪರಿಹರಿಸಬೇಕಾದ ಮೋದಿ- ಅಮಿತ್ ಶಾ ಜೋಡಿಯೇ ಗೊಂದಲದಲ್ಲಿದೆ. ಅರ್ಥಾತ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬೇಕು? ಎಂಬ ವಿಷಯದಲ್ಲಿ ಮೋದಿ-ಅಮಿತ್ ಶಾ ಒಂದು ಹೇಳಿದರೆ ಆರೆಸ್ಸೆಸ್ ವರಿಷ್ಠರು ಮತ್ತೊಂದು ಹೇಳುತ್ತಾ ಆ ಸಂಬಂಧದ ಎಪಿ ಸೋಡೇ ಕಲಸು ಮೇಲೋಗರವಾಗಿ ಹೋಗಿದೆ. ಈಗ ಕರ್ನಾಟಕದ ಬಿಜೆಪಿ ಭಿನ್ನರಿಗೆ ಸಿಕ್ಕ ಮಾಹಿತಿಯ ಪ್ರಕಾರ, ಮೋದಿ-ಅಮಿತ್ ಶಾ ಜೋಡಿಗೆ ತಮ್ಮ ಆಪ್ತರಾದ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲಿ ಎಂಬ ಮನಸ್ಸಿದೆ

R T Vittalmurthy Column: ಇತಿಹಾಸ ಮರೆಯದ ಕೌತುಕದ ಕ್ಷಣಗಳು...

ಇತಿಹಾಸ ಮರೆಯದ ಕೌತುಕದ ಕ್ಷಣಗಳು...

ಒಮ್ಮೆ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ದೇವರಾಜ ಅರಸರು ಒಂದು ಸಲಹೆ ನೀಡಿದರು. “ಮೇಡಂ, ಇಲ್ಲೇ ಪಕ್ಕದ ಜಿಲ್ಲೆಯಲ್ಲಿ ಮರಿದೇವ ರೊಬ್ಬರಿದ್ದಾರೆ. ವಯಸ್ಸಿನಲ್ಲಿ ತುಂಬ ಚಿಕ್ಕವರು. ಅದರೆ ಜ್ಯೋತಿಷ್ಯ ಹೇಳುವುದರಲ್ಲಿ ಪ್ರಕಾಂಡ ಪಂಡಿತರು. ಹೀಗಾಗಿ ನೀವೊಮ್ಮೆ ಅವರನ್ನು ಭೇಟಿ ಮಾಡಿದರೆ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯಬಹುದು" ಎಂದರು.

R T Vittalmurthy Column: ವಿಜಯ ಯಾತ್ರೆ, ಇವರಿಗೆಲ್ಲ ಮಾತ್ರೆ !

ವಿಜಯ ಯಾತ್ರೆ, ಇವರಿಗೆಲ್ಲ ಮಾತ್ರೆ !

ಅಂದ ಹಾಗೆ ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿ ರುವ ‘ಜನಾಕ್ರೋಶ ಯಾತ್ರೆ’ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟ ಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ಟಾನಿಕ್ ನೀಡಿದೆ ಯಾದರೂ ರಾಜ್ಯ ಬಿಜೆಪಿಯ ಕೆಲ ಸಿಎಂ ಕ್ಯಾಂಡಿಡೇಟುಗಳಿಗೆ ಅದು ಇಷ್ಟವಾಗುತ್ತಿಲ್ಲ

R T Vittalmurthy Column: ಕೃಷ್ಣಭೈರೇಗೌಡ ಅಂದ್ರೆ ರಾಹುಲ್‌ʼಗೇಕೆ ಇಷ್ಟ?

ಕೃಷ್ಣಭೈರೇಗೌಡ ಅಂದ್ರೆ ರಾಹುಲ್‌ʼಗೇಕೆ ಇಷ್ಟ?

ಇಷ್ಟಾದರೂ ಈ ಬಾರಿ ದಿಲ್ಲಿಗೆ ಹೋಗುವಾಗ ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಿ ಬೇರೆಯೇ ಲೆಕ್ಕಾಚಾರ ಇತ್ತು. ಅದೆಂದರೆ, ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪ ಮಾಡಬಹುದು ಮತ್ತು ಅವರು ಮನವಿ ಮಾಡಿಕೊಂಡರೆ ಸಿದ್ದರಾಮಯ್ಯ ಇಲ್ಲ ಎನ್ನಲಾರರು ಎಂಬುದು.

R T Vittalmurthy Column: ಹನಿಟ್ರ್ಯಾಪ್‌ ಬಲೆಗೆ ಬಿದ್ದ ಆ ಸಚಿವರ ಮಕ್ಕಳು ?

ಹನಿಟ್ರ್ಯಾಪ್‌ ಬಲೆಗೆ ಬಿದ್ದ ಆ ಸಚಿವರ ಮಕ್ಕಳು ?

ಇದೇ ರೀತಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರ ಕಿರಿ ವಯಸ್ಸಿನ ಪುತ್ರನನ್ನೂ ಹನಿ ಟ್ರ್ಯಾಪ್ ಜಾಲ ತನ್ನ ತೆಕ್ಕೆಗೆ ಸಿಲುಕಿಸಿಕೊಂಡಿದೆ. ಹೀಗೆ ತಮ್ಮ ಪುತ್ರನನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ರುವ ಬಗ್ಗೆ ಸಿಟ್ಟಿಗೆದ್ದಿರುವ ಆ ಸಚಿವರು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ

R T Vittalmurthy Column: ಅಮಿತ್‌ ಶಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸು

ಅಮಿತ್‌ ಶಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸು

ಬಿಜೆಪಿ ಮೂಲಗಳ ಪ್ರಕಾರ, ‘ವಿಜಯೇಂದ್ರ ಅವರನ್ನಿಳಿಸಿ’ ಅಂತ ಯತ್ನಾಳ್ ಗ್ಯಾಂಗು, ‘ಬೇಡವೇ ಬೇಡ’ ಅಂತ ಯಡಿಯೂರಪ್ಪ ಗ್ಯಾಂಗು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾಗ ಅಮಿತ್ ಶಾ ಬೇಸ ತ್ತು ಹೋಗಿದ್ದರು. ಹೀಗಾಗಿ ಉಭಯ ಬಣಗಳ ಬೇಡಿಕೆಯನ್ನು ಪಕ್ಕಕ್ಕಿರಿಸಿ ತಮ್ಮದೇ ಮೂಲ ಗಳಿಂದ ಸರ್ವೇ ರಿಪೋರ್ಟು ತರಿಸಿಕೊಳ್ಳಲು ನಿರ್ಧರಿಸಿದ್ದರು. ಅದರ ಪ್ರಕಾರವೇ, ಕರ್ನಾಟಕ ಬಿಜೆಪಿಯಲ್ಲಿ ಯಾರಿಗೆ ಪವರ್ ಹೆಚ್ಚು? ಯಾರು ಅಧ್ಯಕ್ಷರಾಗಿದ್ದರೆ ಪಕ್ಷ ಸಂಘಟನೆಗೆ ಅನು ಕೂಲ? ಅಂತ ಅವರು ಸರ್ವೇ ಮಾಡಿಸಿದಾಗ 89 ಪರ್ಸೆಂಟು ಮಂದಿ ವಿಜಯೇಂದ್ರ ಅವರ ಪರವಾಗಿ ನಿಂತಿದ್ದಾರೆ

R T Vittalmurthy Column: ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು ?

ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು ?

ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಇಂಪ್ಲಿಮೆಂಟ್ ಮಾಡಲು ಹೋದರೆ ರಾಜಸ್ಥಾನದಲ್ಲಿ ಈ ಹಿಂದೆ ಅಶೋಕ್ ಗೆಹ್ಲೋಥ್-ಸಚಿನ್ ಪೈಲಟ್ ಮಧ್ಯೆ ಏನಾಯಿತು? ಛತ್ತೀಸ್‌ಘಡದಲ್ಲಿ ಭೂಪೇಶ್ ಸಿಂಗ್ ಭಗೇಲಾ ಮತ್ತು ಟಿ.ಎ.ಸಿಂಗ್ ದೇವ್ ನಡು ವಣ ಕದನ ಏನಾಯಿತು? ಅಂತ ಖರ್ಗೆಯವರಿಗೆ ಗೊತ್ತು.

R T Vittalmurthy Column: ಡಿಕೆಶಿ ಅಂದ್ರೆ ಅಮಿತ್‌ ಶಾ ಅವರಿಗಿಷ್ಟ

ಡಿಕೆಶಿ ಅಂದ್ರೆ ಅಮಿತ್‌ ಶಾ ಅವರಿಗಿಷ್ಟ

ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿದ್ದು-ಡಿಕೆಶಿ ಬಣದ ಮಧ್ಯೆ ನಡೆಯು ತ್ತಿರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಿಗಬೇಕಿರುವುದು ನವೆಂ ಬರ್ ಹೊತ್ತಿಗೇ ಹೊರತು ಈಗಲ್ಲ. ಹೀಗಿರುವಾಗ ಕೊಯಮತ್ತೂರಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾಂಗ್ರೆಸ್ ವರಿಷ್ಠ ರಿಗೆ ಬೆದರಿಕೆಯ ಸಂದೇಶ ಕಳುಹಿಸುವಷ್ಟು ತರಾತುರಿಯಲ್ಲಿ ಡಿಕೆಶಿ ಇಲ್ಲ

R T Vittalmurthy Column: ಕೈ ಪಾಳೆಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ

ಕೈ ಪಾಳೆಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ

ಸಿಎಂ ಹುದ್ದೆಯ ಸಮಸ್ಯೆಯನ್ನು ಬಗೆಹರಿಸಲು ಕಾಂಗ್ರೆಸ್ ವರಿಷ್ಠರು ಸಂಧಾನಸೂತ್ರ ರೂಪಿಸಿ ದ್ದಾರೆ. ಅದರ ಪ್ರಕಾರ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಮಾತು ಹರಡಿಕೊಂಡಿತು. ಆದರೆ ಸಿದ್ದರಾಮಯ್ಯ ಸಿಎಂ ಆದ ಕೆಲವೇ ದಿನಗಳಲ್ಲಿ ಸರಕಾ ರದ ಹಲವು ಸಚಿವರು ಉಲ್ಟಾ ಹೊಡೆ ಯತೊಡಗಿದರು

R T Vittalmurthy Column: ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

R T Vittalmurthy Column: ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೆ ಮಾಡುವ ಒಪ್ಪಂದವಾಗಿದೆಯೇ ಎಂಬುದು ಸ್ಪಷ್ಟವಾಗ ಬೇಕು. ಯಾಕೆಂದರೆ ಇವತ್ತು ಸಿದ್ದರಾಮಯ್ಯ ಮತ್ತು ನಿಮ್ಮ ಕಾರಣಕ್ಕಾಗಿ ಅಹಿಂದ ವರ್ಗಗಳ ಸಾಲಿಡ್ಡು ಶಕ್ತಿ ಕಾಂಗ್ರೆಸ್ ಜತೆಗಿದೆ. ಹೀಗಾಗಿ, ಒಂದೋ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕು

R T Vittalmurthy Column: ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು

ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು

ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಕಿವಿಗೆ ಹಿತಕರವಾಗಿ ಕೇಳುತ್ತಿಲ್ಲ. ಕಾರಣ? ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಹೊರತು ಪಡಿಸಿದರೆ ಸೂಟೆಬಲ್ ಆಗಿರುವ ಬೇರೆ ನಾಯಕರ ಬಗ್ಗೆ ಪಕ್ಷದ ವರಿಷ್ಠರು ಮಾಹಿತಿ ಪಡೆಯುತ್ತಿದ್ದಾರೆ

R T Vittalmurthy Column: ಬಿಜೆಪಿಯ ಚಾಣಾಕ್ಷ ಅಮಿತ್‌ ಶಾ ಆಟವನ್ನು ಬಲ್ಲವರಾರು ?

R T Vittalmurthy Column: ಬಿಜೆಪಿಯ ಚಾಣಾಕ್ಷ ಅಮಿತ್‌ ಶಾ ಆಟವನ್ನು ಬಲ್ಲವರಾರು ?

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಅಂತ ಯತ್ನಾಳ್ ಆಂಡ್ ಟೀಮು ಪಟ್ಟು ಹಿಡಿದಿದ್ದರೆ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲೇಬೇಕು. ಮುಂದಿನ ವಿಧಾನಸಭಾ ಚುನಾವಣೆಯನ್ನು ವಿಜಯೇಂದ್ರ ನೇತೃತ್ವದ ಎದುರಿಸಬೇಕು ಅಂತ ಮತ್ತೊಂದು ಟೀಮು ವರಿಷ್ಠರ ಮೇಲೆ ಒತ್ತಡ ಹೇರುತ್ತಿದೆ

R T Vittal Murthy Column: ನಿಖಿಲ್‌ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ

R T Vittal Murthy Column: ನಿಖಿಲ್‌ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ

ದೊಡ್ಡ ಗೌಡರು ಹೀಗೆ ಏಕಾಏಕಿಯಾಗಿ ಇಂಥ ಮಾತುಗಳನ್ನಾಡಿದಾಗ ಸಭೆಯಲ್ಲಿದ್ದ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಅವರೇಕೆ ಇಂಥ ಮಾತುಗಳನ್ನಾಡಿದರು ಎಂದು ತಿಳಿಯದೆ ಮೌನಕ್ಕೆ ಜಾರಿ ದ್ದಾರೆ. ತಾವಾಡಿದ ಮಾತಿಗೆ ಸಭೆ ಮೌನವಾಗಿದ್ದನ್ನು ಕಂಡ ದೇವೇಗೌಡರು ತಮ್ಮ ಮಾತಿನ ಅರ್ಥ ವೇನೆಂದು ಸಭೆಗೆ ವಿವರಿಸಿದ್ದಾರೆ

R T Vittalmurthy Column: ಸೋನಿಯಾ ಹೆಗಲಿಗೆ ಡಿಕೆಶಿ ಗಂಟು

R T Vittalmurthy Column: ಸೋನಿಯಾ ಹೆಗಲಿಗೆ ಡಿಕೆಶಿ ಗಂಟು

ಹೀಗೆ ಪಕ್ಷದಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟುಗಳ ಬಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕಾಲಕಾಲಕ್ಕೆ ಸಭೆ ಸೇರಿ ಚರ್ಚಿಸುವ ಈ ವಾರ್‌ಗ್ರೂಪು ಮೊನ್ನೆ ಕೂಡಾ ಫೀಲ್ಡಿಗಿಳಿದಿದೆ. ಸಿಎಂ ಹುದ್ದೆಯ ಅಧಿಕಾರ ಹಂಚಿಕೆಗೆ

R T Vittalmurthy Column: ಕೊತ ಕೊತ ಕುದಿಯುತ್ತಿದ್ದಾರೆ ಜಾರಕಿಹೊಳಿ

R T Vittalmurthy Column: ಕೊತ ಕೊತ ಕುದಿಯುತ್ತಿದ್ದಾರೆ ಜಾರಕಿಹೊಳಿ

ಸತೀಶ್ ಜಾರಕಿಹೊಳಿಯವರ ಲೇಟೆಸ್ಟು ಸಿಟ್ಟಿಗೆ ಅವರ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರಣ. ಈ ಸಮಾರಂಭ ನಡೆಸುವಾಗ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮನ್ನು ನಿರ್ಲಕ್ಷಿಸಿ ಅವಮಾನಿಸಿದ್ದಾರೆ