ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ನಗರ

ಟಿಕೆಟ್ ರಹಿತ ಪ್ರಯಾಣ: 6.43 ಲಕ್ಷ ರು. ದಂಡ ವಸೂಲಿ

ಟಿಕೆಟ್ ರಹಿತ ಪ್ರಯಾಣ: 6.43 ಲಕ್ಷ ರು. ದಂಡ ವಸೂಲಿ

ಜುಲೈ 2026ರ ಅವಧಿಯಲ್ಲಿ ನಗರದಾದ್ಯಂತ 19380 ಬಸ್ ಟ್ರಿಪ್‌ಗಳನ್ನು ತಪಾಸಣೆ ನಡೆಸಲಾಗಿದ್ದು, ಈ ವೇಳೆ 2748 ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದಾರೆ. ಇವರಿಂದ ಒಟ್ಟು 6,23,435 ದಂಡ ವಸೂಲಿ ಮಾಡಲಾಗಿದೆ. ಇದೇ ವೇಳೆ, ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿ ಸುತ್ತಿದ್ದ 205 ಪುರುಷ ಪ್ರಯಾಣಿಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮೋಟಾರು ವಾಹನ ಕಾಯ್ದೆ, 1988ರ ಕಲಂ 177 ಮತ್ತು 94ರ ಅಡಿಯಲ್ಲಿ ಇವರಿಗೆ ಒಟ್ಟು 20,500 ರು. ದಂಡ ವಿಧಿಸಲಾಗಿದೆ.

Vande Mataram: ವಂದೇ ಮಾತರಂ 2 ಚರಣ ಹಾಡುವ ಕಾಂಗ್ರೆಸ್ ನಿರ್ಧಾರ ರಾಜ್ಯದಲ್ಲೂ ಜಾರಿ: ಖಾಸಗಿ ಸುದ್ದಿ ವಾಹಿನಿ ಚರ್ಚೆಯಲ್ಲಿ ಡಿಕೆಶಿ

ವಂದೇ ಮಾತರಂ 2 ಚರಣ ಹಾಡುವ ಕಾಂಗ್ರೆಸ್ ನಿರ್ಧಾರ ರಾಜ್ಯದಲ್ಲೂ ಜಾರಿ

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ 1937ರ ನಿರ್ಣಯದ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿ ದರು. ನಮ್ಮ ಪಕ್ಷದ ಸಿದ್ಧಾಂತದಲ್ಲಿ ನನಗೆ ನಂಬಿಕೆ ಇದೆ. ನಾವು ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಭವಿಷ್ಯದಲ್ಲಿ ಹಾಗೂ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲೂ ಈ ಹಿಂದೆ ನಿರ್ಧರಿಸಿರುವ ವಂದೇ ಮಾತರಂನ ಎರಡು ಚರಣಗಳಿಗೆ ಮಾತ್ರ ಬದ್ಧರಾಗಿರುತ್ತೇವೆ

One Lakh Rent for Freedom Park: ಫ್ರೀಡಂಪಾರ್ಕ್ ಪ್ರತಿಭಟನೆಗೆ ದಿನಕ್ಕೆ 1 ಲಕ್ಷ ರು.ಬಾಡಿಗೆ ನಿಗದಿ: 10 ಸಾವಿರ ರು.ಠೇವಣಿ ಇಡಲು ನಿಯಮ, ಹೋರಾಟಗಾರರಿಂದ ತೀವ್ರ ಆಕ್ಷೇಪ

ಫ್ರೀಡಂಪಾರ್ಕ್ ಪ್ರತಿಭಟನೆಗೆ ದಿನಕ್ಕೆ 1 ಲಕ್ಷ ರು.ಬಾಡಿಗೆ ನಿಗದಿ

ಮಳೆ ಮತ್ತು ಬಿಸಿಲಿನ ನಡುವೆಯೂ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಲು ಅನುಕೂಲ ವಾಗಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ಸೌಲಭ್ಯ ಈಗ ದುಬಾರಿ ಬಾಡಿಗೆಯಿಂದ ಸಾಮಾನ್ಯ ಹೋರಾಟಗಾರರ ಕೈಗೆಟುಕದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಸ್ಥಳ ಹಲವು ತಿಂಗಳುಗಳ ಕಾಲ ಬೀಗ ಹಾಕಿದ ಸ್ಥಿತಿಯ ಇರುತ್ತಿದ್ದು, ದುಬಾರಿ ಶುಲ್ಕ ಪಾವತಿ ಸುವ ಸಂಘಟನೆಗಳು ಕಾರ್ಯಕ್ರಮ ನಡೆಸುವ ಸಂದರ್ಭ ಗಳಲ್ಲಿ ಮಾತ್ರ ಸ್ವಚ್ಛಗೊಳಿಸಿ ತೆರೆಯಲಾಗು ತ್ತಿದೆ ಎಂಬ ಆರೋಪವೂ ಇದೆ.

KPSC: ಮತ್ತೊಮ್ಮೆ ಕೆಪಿಎಸ್‌ಸಿ ಕರ್ಮಕಾಂಡ ಬಯಲು: ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕರ್ತವ್ಯ

ಮತ್ತೊಮ್ಮೆ ಕೆಪಿಎಸ್‌ಸಿ ಕರ್ಮಕಾಂಡ ಬಯಲು

ಪರಿಷ್ಕೃತ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗದ 07 ಅಧಿಕಾರಿಗಳು ಸರಕಾರದ ಕಾರ್ಯದರ್ಶಿ ಮಟ್ಟದ ಉನ್ನತ ಇಲಾಖೆಗಳ ಐಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಇಲ್ಲದ 24 ಮಂದಿ ಕೆಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಅಲ್ಲದೆ, ಇತರ ಇಲಾಖೆಗಳಲ್ಲಿ ಯೂ ಸಹ ಆಯ್ಕೆ ಪಟ್ಟಿಯಲ್ಲಿ ಇಲ್ಲದ ಅಧಿಕಾರಿಗಳಿಗೆ ರಾಜ್ಯ ಸರಕಾರವು ಆಯಾ ಇಲಾಖೆಗಳ ಉನ್ನತ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯಾಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳನ್ನಾಗಿ ನೇಮಸಲಾಗಿರುತ್ತದೆ.

KPSC: ಒಎಂಆರ್ ಶೀಟ್ ಸ್ಕ್ಯಾನ್ ಮಾಡಿದ್ದ ಡಿಸ್ಕೇ ಇಲ್ಲ, ಕೇಂದ್ರ ಕಚೇರಿಯಲ್ಲೇ ಭಾನಗಡಿ ಪತ್ತೆ

ಕೆಪಿಎಸ್‌ಸಿ ಹಗರಣ: ಈಗ ಹಾರ್ಡ್ ಡಿಸ್ಕೇ ನಾಪತ್ತೆ

ಇದೀಗ ಕೆಪಿಎಸ್‌ಸಿಯಲ್ಲಿ ಮತ್ತೊಂದು ಅಕ್ರಮ ಬಯಲಾಗಿದ್ದು, ಒಎಂಆರ್ ಶೀಟ್‌ಗಳ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್‌ ನಾಪತ್ತೆಯಾಗಿದೆ ಪರೀಕ್ಷೆ ಮುಗಿದ ಮೇಲೆ ಎಲ್ಲಾ ಒಎಂಆರ್ ಶೀಟ್ ಸ್ಕ್ಯಾನ್ ಮಾಡಲಾಗುತ್ತದೆ. ಆದರೆ ಪಶು ವೈದ್ಯಾಧಿಕಾರಿ ನೇಮಕಾತಿಯ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಇದರಿಂದ ಅತೀ ದೊಡ್ಡ ಅಕ್ರಮ ಕೇಂದ್ರ ಕಚೇರಿಯಲ್ಲಿಯೇ ನಡೆದಿರುವುದು ಸಾಬೀತಾಗಿದೆ.

ಶಿವಕುಮಾರ್‌ ದಿಲ್ಲಿಗೆ: ನಾಗೇಂದ್ರ ಮನೆಗೆ ?

ಸಚಿವ ಸ್ಥಾನಕ್ಕೆ ರಾಜೀನಾಮೆ: ನಾಗೇಂದ್ರ ಇಂಗಿತ

ಎಸ್‌ಐಟಿ ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ನೀಡಿದ್ದರೂ, ಪಕ್ಷಕ್ಕೆ ಮುಜುಗರ ಉಂಟು ಮಾಡಲು ತಾನು ಬಯಸುವುದಿಲ್ಲ ಎಂದು ನಾಗೇಂದ್ರ ಅವರು ಮುಖ್ಯಮಂತ್ರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ದಲಿತರು ಸಚಿವರಾ ಗಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯ ವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿzರೆ ಎನ್ನಲಾಗುತ್ತಿದೆ.

ಎಥೆನಾಲ್ ನೀತಿಯಿಂದ ಸಕ್ಕರೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ: ಹಬ್ಬಗಳ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಬರೆ: ಡಾ.ಆನಂದ್ ಕುಮಾರ್

ಹಬ್ಬಗಳ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಬರೆ: ಡಾ.ಆನಂದ್ ಕುಮಾರ್

ತೈಲ ಕಂಪೆನಿಗಳು, ತೈಲ ಉದ್ಯಮಿಗಳ ಜೋಳಿಗೆ ತುಂಬಿಸಲು ಕೇಂದ್ರ ಸರ್ಕಾರ ಪೆಟ್ರೋಲಿಯಂನಲ್ಲಿ ಶೇ 20 ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿ, ಆಹಾರೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ

SIR ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್: ಸೆಪ್ಟೆಂಬರ್‌ 1ರಂದು ಚುನಾವಣಾ ಆಯೋಗ ಚಲೋ

ಪ್ರಕಾಶ್ ರಾಜ್ ನೇತೃತ್ವದಲ್ಲಿ ಚುನಾವಣಾ ಆಯೋಗ ಚಲೋ

SIR: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಕಿಡಿಕಾರಿರುವ ನಟ ಪ್ರಕಾಶ್ ರಾಜ್ ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಗೆ ಕರೆ ನೀಡಿದ್ದಾರೆ. SIR ಪ್ರಕ್ರಿಯೆಗೆ ತಡೆ ನೀಡುವಂತೆ ನಾಗರಿಕ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಇದೇ ವೇಳೆ, 1.08 ಕೋಟಿಗೂ ಅಧಿಕ ಮತದಾರರನ್ನು ASDDO ವರ್ಗಕ್ಕೆ ಗುರುತಿಸಿರುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದು, ಹಕ್ಕು-ಆಕ್ಷೇಪಣೆ ಸಲ್ಲಿಸಲು ಗಡುವು ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

ಬಿಎಂಟಿಸಿ ಬಿಡಿ ಭಾಗಗಳ ಖರೀದಿ ಅಕ್ರಮ: ಉನ್ನತ ಮಟ್ಟದ ತನಿಖೆ: 8 ಮಂದಿ ಸಸ್ಪೆಂಡ್: ಬೈರತಿ ಸುರೇಶ್

ಬಿಎಂಟಿಸಿ ಬಿಡಿ ಭಾಗಗಳ ಖರೀದಿ ಅಕ್ರಮ: 8 ಮಂದಿ ಸಸ್ಪೆಂಡ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿರುವ ನ್ಯೂನತೆಗಳ ಬಗ್ಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದ್ದು, ಮುಂದಿನ ಅಕ್ಟೋ ಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್(Transport Minister Byrathi Suresh) ತಿಳಿಸಿದ್ದಾರೆ.

Toxic Movie: ʼಟಾಕ್ಸಿಕ್‌ʼ ಹೊಸ ದಾಖಲೆಗಳನ್ನು ಸೃಷ್ಟಿಸಲಿ: ಯಶ್‌ಗೆ ಶುಭ ಹಾರೈಸಿದ ಕರವೇ ಅಧ್ಯಕ್ಷ ನಾರಾಯಣಗೌಡ

ʼಟಾಕ್ಸಿಕ್‌ʼ ಚಿತ್ರ ಹೊಸ ದಾಖಲೆಗಳನ್ನು ಸೃಷ್ಟಿಸಲಿ: ಕರವೇ ನಾರಾಯಣಗೌಡ

ಯಶ್‌ ವಿಷಯದಲ್ಲಿ ನನಗೆ ತುಂಬ ಇಷ್ಟವಾಗುವುದು ಅವರ ಕನಸುಗಾರಿಕೆ ಮತ್ತು ಸಾಹಸ ಮನೋಭಾವ. ಕನಸು ಕಟ್ಟುವುದು ಅವರಿಗೆ ಗೊತ್ತಿದೆ, ಅದನ್ನು ನನಸು ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳುವ ಮನೋಸ್ಥೈರ್ಯ, ಸಂಕಲ್ಪವೂ ಅವರಿಗೆ ಇದೆ. ಅವರ ಚಿತ್ರ ಟಾಕ್ಸಿಕ್ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಎಂದು ತಿಳಿಸಿದ್ದಾರೆ.

Gold smuggling: ಬಾಯಲ್ಲಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್ ಕಳ್ಳ ಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕ ಅರೆಸ್ಟ್

ಬಾಯಲ್ಲಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್: ಪ್ರಯಾಣಿಕ ಅರೆಸ್ಟ್

Bengaluru airport: ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ಆರೋಪಿ, ಇಲ್ಲಿಂದ ಬೇರೆ ವಿಮಾನದ ಮೂಲಕ ಗಾಜಿಯಾಬಾದ್‌ಗೆ ತೆರಳಲು ಮುಂದಾಗಿದ್ದ. ಭದ್ರತಾ ತಪಾಸಣೆ ವೇಳೆ ಅನುಮಾನ ಮೂಡಿದ್ದರಿಂದ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಬಾಯಿಯಲ್ಲಿ ಚಿನ್ನದ ಕ್ಯಾಪ್ಸುಲ್‌ ಇಟ್ಟುಕೊಂಡು ಸಾಗಿಸುತ್ತಿರುವುದು ಕಂಡುಬಂದಿದೆ.

Bomb threat: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ; ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್

ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ!

Bengaluru airport: ಅನಾಮಧೇಯ ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ್ದು, ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್-1ರ ತೀವ್ರ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಕೆಲ ದಿನಗಳ ಹಿಂದೆಯೂ ಇಂಥಹದ್ದೇ ಘಟನೆ ನಡೆದಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಹ್ಮದಾಬಾದ್​ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ ಪತ್ರ ಬಂದಿತ್ತು. ಇದೀಗ ಮತ್ತೊಮ್ಮೆ ಬಾಂಬ್‌ ಬೆದರಿಕೆ ಬಂದಿರುವುದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ: ಬಿ.ವೈ. ವಿಜಯೇಂದ್ರ

ನಾಗೇಂದ್ರ ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ: ಬಿವೈವಿ

BY Vijayendra: ನಮ್ಮ ಉದ್ದೇಶ ನಾಗೇಂದ್ರ ಅವರ ತೇಜೋವಧೆ ಮಾಡುವುದಲ್ಲ. ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವುದೇ ನಮ್ಮ ಉದ್ದೇಶ. ನಾಗೇಂದ್ರ ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಹೋಟೆಲ್ ಮಾಲೀಕರಿಗೆ ಮತ್ತೊಂದು ಮಹತ್ವದ ಸೇವೆ ಆರಂಭ

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಮಹತ್ವದ ಸೇವೆ ಆರಂಭ

ಭಾರತದ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಜೊತೆ ಕೈಜೋಡಿಸಿರುವ ರೆಸ್ಟೋರೆಂಟ್ ಪಾಲುದಾರರ ಅನುಕೂಲಕ್ಕಾಗಿ ಹೊಸದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಹೋಟೆಲ್ ಮಾಲೀಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಬಹುಭಾಷಾ ಐವಿಆರ್ ಕರೆ ಸೌಲಭ್ಯ ಹಾಗೂ ಪ್ರತ್ಯೇಕ ಹೆಲ್ಪ್‌ಡೆಸ್ಕ್ ಅನ್ನು ಆರಂಭಿಸಿದೆ.

ABVP: ಸಿಎಂ ಮನೆಗೇ ನುಗ್ಗಿದ ಎಬಿವಿಪಿ: ಪೊಲೀಸರಿಗೆ ಗೊತ್ತಿಲ್ಲದೇ ಮುತ್ತಿಗೆ, ಗುಪ್ತಚರ ವೈಫಲ್ಯ?, ಲಾಠಿಚಾರ್ಜ್

ABVP: ಸಿಎಂ ಮನೆಗೇ ನುಗ್ಗಿದ ಎಬಿವಿಪಿ

ಇನ್ನು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿ ಭಟನಾಕಾರರು ಮೆಜೆಸ್ಟಿಕ್ ಹಾಗೂ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳತ್ತ ತೆರಳಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು. ಪ್ರತಿಭಟನಾಕಾರರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪರಿಣಾಮ ಕೆಲವೆಡೆ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸೆ.1ರಿಂದ 10ರ ತನಕ ರಾಯಚೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ

ಸೆ.1ರಿಂದ 10ರ ತನಕ ರಾಯಚೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿ ಇದೀಗ ಸದನದ ಹೊರಗೂ ಈ ಹೋರಾಟದ ಬಿಸಿಯನ್ನು ಉಳಿಸುವ ಲೆಕ್ಕಾಚಾರ ದಲ್ಲಿದ್ದು, ಇದರ ಭಾಗವಾಗಿ ಪಾದಯಾತ್ರೆಯನ್ನು ಘೋಷಿಸಿದೆ. ಸೆ.1ರಿಂದ 10ರ ವರೆಗೆ ರಾಯಚೂ ರಿನ ಗುರಗುಂಟಾದಿಂದ ಬಳ್ಳಾರಿವರೆಗೆ ಸುಮಾರು 170 ಕಿಮೀ ಪಾದಯಾತ್ರೆ ಮಾಡುವುದಾಗಿ ಮಂಗಳವಾರ ಬಿಜೆಪಿ ಘೋಷಿಸಿದ್ದು, ಈ ಪಾದಯಾತ್ರೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಸಹ ಭಾಗವಹಿಸಲಿದೆ ಎಂದು ಹೇಳಿದೆ

ಜು.13ರ ಅಮಾನತು ಆದೇಶ ರದ್ದು ಮಾಡಿದ ʼಹೈʼ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

ಮೊದಲ ಬಾರಿ ಅಮಾನತಾದಾಗ, ಸಚಿವ ಸಂಪುಟ ಅಮಾನತಿಗೆ ಶಿಫಾರಸು ಮಾಡಿಲ್ಲ. ಹಾಗಾಗಿ ರಾಜ್ಯ ಪಾಲರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಶಿವಶಂಕರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣಕ್ಕೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿ ಸಚಿವ ಸಂಪುಟ ಸಭೆಯು ಘಟನೋತ್ತರ ತೀರ್ಮಾನ ಮಾಡಿತ್ತು.

ಮಹಿಳಾ ಅಭ್ಯರ್ಥಿ ಜತೆ ಹೊಸ ಮುಖ ಸೇರ್ಪಡೆ ಸಂಭವ: ಮತ್ತೆ ʼಸಂಪುಟ್ಟʼ ಸರ್ಜರಿ ?

ಮತ್ತೆ ʼಸಂಪುಟ್ಟʼ ಸರ್ಜರಿ ?

ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಅವರ ತಲೆದಂಡವಾಗಬಹುದೆಂದು ಹೇಳಲಾಗಿದೆ. ಶಿವಕುಮಾರ್ ಅವರು ಒಂದು ಸ್ಥಾನವನ್ನು ಖಾಲಿ ಉಳಿಸಿಕೊಂಡು ಸಂಪುಟ ಭರ್ತಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಹತ್ತಾರು ಶಾಸಕರು ಅಸಮಾಧಾನಗೊಂಡಿದ್ದು, ಪಕ್ಷ ಮತ್ತು ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.

ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿಯ ಪರ: ಮಾಜಿ ಸಿಎಂ ಸಿದ್ದರಾಮಯ್ಯ

ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿಯ ಪರ: ಮಾಜಿ ಸಿಎಂ ಸಿದ್ದರಾಮಯ್ಯ

Former CM Siddaramaiah: ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು, ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅನ್ವೇಷಣಾ 2026ರಲ್ಲಿ 61 ಯುವ ಸಂಶೋಧಕರು 20 ಸ್ವತಂತ್ರ ಸಂಶೋಧನಾ ಯೋಜನೆಗಳ ಪ್ರದರ್ಶನ

ಅನ್ವೇಷಣಾ 2026ರಲ್ಲಿ ಸಂಶೋಧನಾ ಯೋಜನೆಗಳ ಪ್ರದರ್ಶನ

ಪ್ರಯೋಗದ ವಿದ್ಯಾರ್ಥಿ ಸಂಶೋಧನಾ ಕಾರ್ಯಕ್ರಮದ ಎರಡು ದಿನಗಳ ಸಮಾರೋಪವು ಕುತೂಹಲ, ವೈಜ್ಞಾನಿಕ ಅನ್ವೇಷಣೆ ಮತ್ತು ಮುಂದಿನ ಪೀಳಿಗೆಯ ಸಂಶೋಧಕರನ್ನು ಸಂಭ್ರಮಿಸಿತು. ಅನ್ವೇಷಣಾ 2026ರಲ್ಲಿ ಪ್ರಸ್ತುತಪಡಿಸಲಾದ 20 ಸಂಶೋಧನಾ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅತ್ಯುತ್ತಮ ಪ್ರದರ್ಶನ ನೀಡಿದ ಯೋಜನೆಗಳಾಗಿ ಹೊರಹೊಮ್ಮಿದವು.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

ಕೌಶಲ್ಯಾಭಿವೃದ್ಧಿ, ನೆಟ್‌ ವರ್ಕಿಂಗ್ ಮತ್ತು ಅನ್ವೇಷಣೆ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯ ಕ್ರಮವು, ಕೇವಲ ಸಾಂಪ್ರದಾಯಿಕ ಉಪನ್ಯಾಸಗಳಿಗೆ ಸೀಮಿತವಾಗಿರದೆ ಸ್ಟಾರ್ಟ್‌ ಅಪ್ ಸಂಸ್ಥಾಪಕರು ಎದುರಿಸುತ್ತಿರುವ ಬಂಡವಾಳ ಹೂಡಿಕೆ, ಗ್ರಾಹಕರ ಸಂಪಾದನೆ, ನಾಯಕತ್ವ ನಿರ್ವಹಣೆ ಮತ್ತು ಜಾಗತಿಕ ವಿಸ್ತರಣೆಯಂತಹ ನೈಜ ಸವಾಲುಗಳ ಪರಿಹಾರದ ಕುರಿತು ಪ್ರಮುಖವಾಗಿ ಗಮನಹರಿಸಿತು.

ನೀವೂ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸ್ ಆಗಬೇಕೆ? ಪರೀಕ್ಷೆ ಇಲ್ಲ, ಸಂದರ್ಶನ ಇಲ್ಲ, ಜಸ್ಟ್‌ ಹೆಸರು ನೋಂದಾಯಿಸಿದರೆ ಸಾಕು; ಏನಿದು ಹೊಸ ಅಭಿಯಾನ?

ಸಂಚಾರಿ ಪೊಲೀಸ್ ಆಗಬೇಕೆ? ಇನ್ಯಾಕೆ ತಡ ಈಗಲೇ ನೋಂದಾಯಿಸಿ!

Bengaluru Police Launch Cop for the Day: ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ತಮ್ಮ ಕಾಪ್ ಫಾರ್ ದಿ ಡೇ (ಒಂದು ದಿನದ ಪೊಲೀಸ್) ಉಪಕ್ರಮವನ್ನು ಮರಳಿ ತಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಎಕ್ಸ್‌ನಲ್ಲಿ ಈ ಉಪಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಗರದ ಸಂಚಾರವನ್ನು ನಿರ್ವಹಿಸುವಲ್ಲಿ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ.

ರಾಜ್ಯ ಸರ್ಕಾರದ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಬರೆದ ಪತ್ರದಲ್ಲಿ ಏನಿದೆ?

ಪಾರ್ಕಿಂಗ್ ಶುಲ್ಕ ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ

CM DKS Proposes Parking Fee: ತಮ್ಮದೇ ಸರ್ಕಾರದ ಪ್ರಸ್ತಾವಿತ ಪಾರ್ಕಿಂಗ್ ನೀತಿಯ ಬಗ್ಗೆ, ವಿಶೇಷವಾಗಿ ವಾರ್ಷಿಕ ರಸ್ತೆಬದಿಯ ಪಾರ್ಕಿಂಗ್ ಶುಲ್ಕವನ್ನು ವಿಧಿಸುವ ಯೋಜನೆಯ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತಾವಿತ ವಾರ್ಷಿಕ ಶುಲ್ಕದಿಂದ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ಶೇಕಡಾ 40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತಿದ್ಯಾ ಕೇಂದ್ರ? ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದೇಕೆ?

ಭಾರತದ ಎಥನಾಲ್‌ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ: ಪ್ರಿಯಾಂಕ್‌ ಖರ್ಗೆ

Priyank Kharge: ಆಹಾರ ಭದ್ರತೆಗಾಗಿ ಮೀಸಲಿಟ್ಟಿರುವ ಧಾನ್ಯವನ್ನು ಎಥನಾಲ್‌ ಉತ್ಪಾದನೆಗೆ ಬಳಸುವ ನೀತಿಯ ಆರ್ಥಿಕ, ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

Loading...