ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರಿಕೆಟ್‌

T20 World Cup: ನೆದರ್ಲೆಂಡ್ಸ್‌ ವಿರುದ್ಧ ಯುಎಸ್‌ಎ ತಂಡಕ್ಕೆ 93 ರನ್‌ ಭರ್ಜರಿ ಜಯ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಖಾತೆ ತೆರೆದ ಯುಎಸ್‌ಎ!

USA vs NED Match Highlights: ಸಾಯಿತೇಜಾ ಅರ್ಧಶತಕ ಹಾಗೂ ಹರ್ಮೀತ್‌ ಸಿಂಗ್‌ ಅವರ ಬೌಲಿಂಗ್‌ ಸಹಾಯದಿಂದ ಯುಎಸ್‌ಎ ತಂಡ, ನೆದರ್ಲೆಂಡ್ಸ್‌ ವಿರುದ್ಧ 93 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದು ಯುಎಸ್‌ಎ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಗೆಲುವಾಗಿದೆ. ಈ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತ ಹರ್ಮೀತ್‌ ಸಿಂಗ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಸೋಲಿಸಿದೆ, ಇದೀಗ ಪಾಕ್‌ನ ಸರದಿ; ಭಾರತಕ್ಕೆ ಮೊಹಮ್ಮದ್‌ ಯೂಸಫ್‌ ವಾರ್ನಿಂಗ್!

ಭಾರತವನ್ನು ಪಾಕ್‌ ತಂಡ ಸೋಲಿಸಲಿದೆ ಎಂದ ಮೊಹಮ್ಮದ್‌ ಯೂಸಫ್‌!

ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ತಂಡ 23 ರನ್‌ಗಳಿಂದ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ವಿರುದ್ಧದ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಪಾಕ್‌ ಮಾಜಿ ನಾಯಕ ಮೊಹಮ್ಮದ್‌ ಯೂಸಫ್‌, ಭಾರತ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಪಂದ್ಯದ ದಿನ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಆಸೀಸ್‌-ಜಿಂಬಾಬ್ವೆ ಪಂದ್ಯ ಉದಾಹರಣೆ ಎಂದಿದ್ದಾರೆ.

Marcus Stoinis: ಜಿಂಬಾಬ್ವೆ ವಿರುದ್ಧದ ಸೋಲಿನ ಬೆನ್ನಲ್ಲೆ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ!

ಮಾರ್ಕಸ್‌ ಸ್ಟೋಯ್ನಿಸ್‌ಗೆ ಗಾಯ, ಆಸ್ಟ್ರೇಲಿಯಾಗೆ ಮತ್ತೊಂದು ಶಾಕ್!

Marcus Stoinis injury: ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್‌, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅವರು ಬೌಲ್‌ ಮಾಡಿದ ಬಳಿಕ ಬಂದ ಚೆಂಡನ್ನು ತಡೆಯಲು ಕೈ ಹಾಕಿದಾಗ ಇದು ಸಂಭವಿಸಿತು. ಇದರ ಪರಿಣಾಮ ಅವರು ತಮ್ಮ ಮೂರನೇ ಓವರ್ ಅನ್ನು ಮುಗಿಸಲಾರದೆ ವಿರಾಮ ತೆಗೆದುಕೊಂಡರು.

AUS vs ZIM: ಜಿಂಬಾಬ್ವೆ ವಿರುದ್ಧದ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಮ್ಯಾಟ್‌ ರೆನ್‌ಶಾ!

ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಕಾರಣ ತಿಳಿಸಿದ ರೆನ್‌ಶಾ!

ಜಿಂಬಾಬ್ವೆ ವಿರುದ್ಧ ಶುಕ್ರವಾರ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 23 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿತು. ಈ ಪಂದ್ಯದ ಬಳಿಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಮ್ಯಾಟ್‌ ರೆನ್‌ಶಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಆಸೀಸ್‌ ಸೋಲಿಗೆ ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

IPL 2026:  ರಾಜಸ್ಥಾನ್‌ ರಾಯಲ್ಸ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ!

ರಾಜಸ್ಥಾನ್‌ ರಾಯಲ್ಸ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ!

ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಇದರ ನಡುವೆ ರಿಯಾನ್ ಪರಾಗ್ ಅವರನ್ನು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ನಾಯಕನ್ನನಾಗಿ ನೇಮಿಸಲಾಗಿದೆ. ಈ ಬಗ್ಗೆ ರಾಜಸ್ಥಾನ್‌ ಫ್ರಾಂಚೈಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

IND vs PAK: ಪಾಕ್‌ ಸ್ಪಿನ್ನರ್‌ ಉಸ್ಮಾನ್‌ ತಾರಿಖ್‌ಗೆ ಕೌಂಟರ್‌ ನೀಡುವುದೇಗೆಂದು ಸಲಹೆ ನೀಡಿದ ಆರ್‌ ಅಶ್ವಿನ್‌!

ಉಸ್ಮಾನ್‌ ತಾರಿಖ್‌ಗೆ ಕೌಂಟರ್‌ ನೀಡುವುದೇಗೆ? ಭಾರತಕ್ಕೆ ಅಶ್ವಿನ್‌ ಸಲಹೆ!

ಫೆಬ್ರವರಿ 15ರಂದು ನಡೆಯಲಿರುವ ಭಾರತ vs ಪಾಕಿಸ್ತಾನ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್, ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್‌ ಅವರನ್ನು ಎದುರಿಸಲು ದಿಟ್ಟ ತಂತ್ರವನ್ನು ಸೂಚಿಸಿದ್ದಾರೆ. ಪಾಕಿಸ್ತಾನ ತಂಡದ ಪ್ರಮುಖ ಸ್ಪಿನ್ ಅಸ್ತ್ರವೆಂದು ಪರಿಗಣಿಸಲಾಗುತ್ತಿರುವ ಉಸ್ಮಾನ್ ತಾರಿಖ್‌ರನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅಶ್ವಿನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

IND vs PAK: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ನಲ್ಲಿ ಮಾಡುತ್ತಿರುವ ತಪ್ಪನ್ನು ತಿಳಿಸಿದ ಸುನೀಲ್‌ ಗವಾಸ್ಕರ್‌!

ಸಂಜು ಸ್ಯಾಮ್ಸನ್‌ ಮಾಡುತ್ತಿರುವ ತಪ್ಪನ್ನು ತಿಳಿಸಿದ ಗವಾಸ್ಕರ್‌!

ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ ಇತ್ತೀಚಿನ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅವರ ಆಟದಲ್ಲಿ ತಾಂತ್ರಿಕ ದೋಷ ಕಾಣುತ್ತಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸಂಜು ಕೇವಲ ಎಂಟು ಬಾಲ್‌ಗಳಲ್ಲಿ 22 ರನ್ ಗಳಿಸಿ ಔಟ್‌ ಆಗಿದ್ದರು.

IND vs PAK: ʻಅಭಿಷೇಕ್‌ ಶರ್ಮಾ ತಾಂತ್ರಿಕವಾಗಿ ಉತ್ತಮ ಬ್ಯಾಟ್ಸ್‌ಮನ್‌ ಅಲ್ಲʼ-ಮೊಹಮ್ಮದ್‌ ಆಮಿರ್‌ ಅಚ್ಚರಿ ಹೇಳಿಕೆ!

ಅಭಿಷೇಕ್‌ ಶರ್ಮಾರನ್ನು ಔಟ್‌ ಮಾಡುವುದು ಸುಲಭ: ಮೊಹಮ್ಮದ್‌ ಆಮಿರ್!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಅಭಿಷೇಕ್‌ ಶರ್ಮಾ ಕೇವಲ ಸ್ಲಾಗರ್‌ ಅಷ್ಟೇ, ಅದು ಬಿಟ್ಟು ಅವರು ತಾಂತ್ರಿಕವಾಗಿ ಅಷ್ಟೊಂದು ಉತ್ತಮವಾಗಿಲ್ಲ. ಅವರನ್ನು ಸರಳ ಯೋಜನೆಯ ಮೂಲಕ ಔಟ್‌ ಮಾಡಬಹುದು ಎಂದು ಪಾಕ್‌ ಮಾಜಿ ವೇಗಿ ಹೇಳಿದ್ದಾರೆ.

ಆಸೀಸ್‌ ಗರ್ವಭಂಗ; ಜಿಂಬಾಬ್ವೆಗೆ ಭರ್ಜರಿ ಗೆಲುವು

ಆಸೀಸ್‌ ಗರ್ವಭಂಗ; ಜಿಂಬಾಬ್ವೆಗೆ ಭರ್ಜರಿ ಗೆಲುವು

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಜಿಂಬಾಬ್ವೆ 2 ವಿಕೆಟ್‌ಗೆ 169 ರನ್‌ ಬಾರಿಸಿತು. ಜವಾಬಿತ್ತ ಆಸ್ಟ್ರೇಲಿಯಾ ತಂಡ ವೇಗಿ ಮುಜರಬಾನಿ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 146 ರನ್‌ಗೆ ಸರ್ವಪತನ ಕಂಡಿತು. 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತ ಮುಜರಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

10 ಲಕ್ಷ ಪಾವತಿಸುವಂತೆ ಧೋನಿಗೆ ಮದ್ರಾಸ್‌ ಹೈಕೋರ್ಟ್ ಸೂಚನೆ

10 ಲಕ್ಷ ಪಾವತಿಸುವಂತೆ ಧೋನಿಗೆ ಮದ್ರಾಸ್‌ ಹೈಕೋರ್ಟ್ ಸೂಚನೆ

MS Dhoni: ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಅಕ್ರಮಗಳೊಂದಿಗೆ ಧೋನಿಗೆ ನಂಟಿದೆ ಎಂದು ಸಂಪತ್‌ ಕುಮಾರ್‌ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಧೋನಿ ಅವರು, ಎರಡು ಮಾಧ್ಯಮ ಸಂಸ್ಥೆಗಳು, ಪತ್ರಕರ್ತ ಹಾಗೂ ಸಂಪತ್‌ ಕುಮಾರ್‌ ವಿರುದ್ಧ ಮೊಕದ್ದಮೆ ಹೂಡಿದ್ದರು.

ರಾಜಸ್ಥಾನ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ?

ರಾಜಸ್ಥಾನ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ?

IPL 2026: 24 ವರ್ಷದವರಾಗಿರುವ ಪರಾಗ್, ಈ ಹಿಂದೆ RR ಅನ್ನು ಮುನ್ನಡೆಸಿದ್ದರು. ಕಳೆದ ಋತುವಿನಲ್ಲಿ ಸ್ಯಾಮ್ಸನ್ ಗಾಯದಿಂದಾಗಿ ಎಂಟು ಪಂದ್ಯಗಳನ್ನು ತಪ್ಪಿಸಿಕೊಂಡಾಗ ಅವರು ತಂಡಕ್ಕೆ ಸೇರ್ಪಡೆಯಾದರು. ಆದಾಗ್ಯೂ, ನಾಯಕನಾಗಿ ಪರಾಗ್ ಅವರ ಅವಧಿ ಸವಾಲಿನದ್ದಾಗಿತ್ತು - ತಂಡವು ಆ ಎಂಟು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಪಾಕ್‌ ವಿರುದ್ಧದ ಪಂದ್ಯಕ್ಕೆ ಭಾರತ ಪರ 3 ಬದಲಾವಣೆ ಸಾಧ್ಯತೆ

ಪಾಕ್‌ ವಿರುದ್ಧದ ಪಂದ್ಯಕ್ಕೆ ಭಾರತ ಪರ 3 ಬದಲಾವಣೆ ಸಾಧ್ಯತೆ

ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿದ್ದ ಸುಂದರ್ ಕೂಡ ಆಯ್ಕೆಗೆ ಲಭ್ಯವಿದೆ. ಸುಂದರ್ ಅವರನ್ನು ಆಡುವ XI ನಲ್ಲಿ ಸೇರಿಸಿಕೊಳ್ಳುವುದರಿಂದ ಭಾರತಕ್ಕೆ ಮತ್ತೊಂದು ಸ್ಪಿನ್ ಬೌಲಿಂಗ್ ಆಯ್ಕೆ ಜತೆಗೆ ಬ್ಯಾಟಿಂಗ್ ಕೂಡ ಸಿಕ್ಕಂತಾಗುತ್ತದೆ.

ಪಾಕ್‌ ವಿರುದ್ಧ ಆಡುತ್ತಾರಾ ಅಭಿಷೇಕ್ ಶರ್ಮಾ?; ಸೂರ್ಯಕುಮಾರ್ ಹೇಳಿದ್ದೇನು?

ಪಾಕ್‌ ವಿರುದ್ಧ ಆಡುತ್ತಾರಾ ಅಭಿಷೇಕ್?; ಸೂರ್ಯಕುಮಾರ್ ಹೇಳಿದ್ದೇನು?

Abhishek Sharma: ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಆಘಾತಗಳ ನಡುವೆಯೂ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ತಂಡವು ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿತು.

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಕರ್ನಾಟಕ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

IPL return to Chinnaswamy stadium: ಅಗ್ನಿ ಸುರಕ್ಷತೆ ಕ್ರಮಗಳನ್ನು ಫೆಬ್ರುವರಿ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ಐಪಿಎಲ್‌ ಟಿಕೆಟ್‌ ಹೊಂದಿರುವ ವೀಕ್ಷಕರಿಗೆ ಮೆಟ್ರೋ, ಬಿಎಂಟಿಸಿಯಲ್ಲಿ ಉಚಿತ ಟಿಕೆಟ್‌ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.

IND vs NAM: ಹಾರ್ದಿಕ್‌ ಪಾಂಡ್ಯ ಆಲ್‌ರೌಂಡ್‌ ಆಟದಿಂದ ನಮೀಬಿಯಾ ಎದುರು ಗೆದ್ದ ಭಾರತ!

ನಮೀಬಿಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಗೆಲುವು!

India vs Namibia Match Highlights: ಹಾರ್ದಿಕ್‌ ಪಾಂಡ್ಯ ಆಲ್‌ರೌಂಡ್‌ ಪ್ರದರ್ಶನದ ಸಹಾಯದಿಂದ ಭಾರತ ತಂಡ, ನಮೀಬಿಯಾ ಎದುರು 93 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.

T20 World Cup: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ!

ನಮೀಬಿಯಾ ವಿರುದ್ಧ ವಿಶ್ವ ದಾಖಲೆ ಬರೆದ ಭಾರತ ತಂಡ!

ನಮೀಬಿಯಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ 41 ಎಸೆತಗಳಲ್ಲಿ 100 ರನ್‌ ಗಳನ್ನು ಕಲೆ ಹಾಕಿತು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಮಯ ಇತಿಹಾಸದಲ್ಲಿ ವೇಗವಾಗಿ 100 ರನ್‌ ಗಳಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಟೀಮ್‌ ಇಂಡಿಯಾ ಬರೆದಿದೆ. ಆ ಮೂಲಕ ನೆದರ್ಲೆಂಡ್ಸ್‌ ತಂಡದ ದಾಖಲೆಯನ್ನು ಮುರಿದಿದೆ.

IND vs NAM: 8 ಎಸೆತಗಳಲ್ಲಿ 22 ರನ್‌ ಸಿಡಿಸಿದರೂ ಗೋಲ್ಡನ್‌ ಚಾನ್ಸ್‌ ಕಳೆದುಕೊಂಡು ಸಂಜು ಸ್ಯಾಮ್ಸನ್!‌

ನಮೀಬಿಯಾ ವಿರುದ್ಧವೂ ಗೋಲ್ಡನ್‌ ಚಾನ್ಸ್‌ ಕಳೆದುಕೊಂಡ ಸಂಜು!

ಅಭಿಷೇಕ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ನಮೀಬಿಯಾ ವಿರುದ್ಧ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಲು ಸಿಕ್ಕ ಅದ್ಭುತ ಅವಕಾಶವನ್ನು ಸಂಜು ಸ್ಯಾಮ್ಸನ್‌ ಕಳೆದುಕೊಂಡರು. ಅವರು 8 ಎಸೆತಗಳಲ್ಲಿ 22 ರನ್‌ ಗಳಿಸಿ ಸ್ಪೋಟಕ ಆರಂಭ ಪಡೆದರೂ ನಂತರ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಫ್ಯಾನ್ಸ್‌ಗೆ ಮತ್ತೊಮ್ಮೆ ನಿರಾಶೆ ಮೂಡಿಸಿದರು.

IND vs NAM: 4 ಎಸೆತಗಳಲ್ಲಿ 4 ಸಿಕ್ಸರ್‌, 20 ಎಸೆತಗಳಲ್ಲಿಅರ್ಧಶತಕ ಬಾರಿಸಿದ ಇಶಾನ್‌ ಕಿಶನ್‌!

ಕೇವಲ 20‌ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಶಾನ್‌ ಕಿಶನ್!

ನಮೀಬಿಯಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಶಾನ್ ಕಿಶನ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಅವರು ಕೇವಲ 20 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ, ಅವರು 24 ಎಸೆತಗಳಲ್ಲಿ 61 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

IND vs NAM: ನಮೀಬಿಯಾ ಎದುರು ಟಾಸ್‌ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್‌!

ನಮೀಬಿಯಾ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

IND vs NAM Match: ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ನಮೀಬಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ನಮೀಬಿಯಾ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಭಾರತ ತಂಡ ಮೊದಲು ಬ್ಯಾಟ್‌ ಮಾಡಲಿದೆ.

NEP vs ITA: ನೇಪಾಳ ತಂಡಕ್ಕೆ ಸೋಲು, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಟಲಿಗೆ ಮೊದಲ ಜಯ!

ನೇಪಾಳ ವಿರುದ್ಧ ಇಟಲಿ ತಂಡಕ್ಕೆ 10 ವಿಕೆಟ್‌ ಭರ್ಜರಿ ಜಯ!

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಟಲಿ ತಂಡ ತನ್ನ ಮೊಟ್ಟ ಮೊದಲ ಪಂದ್ಯವನ್ನು ಗೆದ್ದಿದೆ. ಗುರುವಾರ ನೇಪಾಳ ವಿರುದ್ಧದ ಪಂದ್ಯದಲ್ಲಿ ಇಟಲಿ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ್ದ ನೇಪಾಳ 123 ರನ್‌ ಗಳಿಸಿತ್ತು. ಬಳಿಕ ಇಟಲಿ ವಿಕೆಟ್‌ ನಷ್ಟವಿಲ್ಲದೆ ಗೆದ್ದು ಬೀಗಿತು.

IND vs NAM: ಅಭಿಷೇಕ್‌ ಶರ್ಮಾ ಅನುಪಸ್ಥಿತಿಯಲ್ಲಿ ಓಪನಿಂಗ್‌ಗೆ ಸೂಕ್ತ ಆಟಗಾರನನ್ನು ಆರಿಸಿದ ಪಾರ್ಥಿವ್‌ ಪಟೇಲ್‌!

ಇಶಾನ್‌ ಜತೆ ವಾಷಿಂಗ್ಟನ್‌ ಇನಿಂಗ್ಸ್‌ ಆರಂಭಿಸಬೇಕು: ಪಾರ್ಥಿವ್‌ ಪಟೇಲ್‌!

ನಮೀಬಿಯಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಇಶಾನ್‌ ಕಿಶನ್‌ ಜೊತೆ ವಾಷಿಂಗ್ಟನ್‌ ಸುಂದರ್‌ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ವಿಕೆಟ್‌ ಕೀಪರ್‌ ಹಾಗೂ ಕ್ರಿಕೆಟ್‌ ವಿಶ್ಲೇಷಕ ಪಾರ್ಥಿವ್‌ ಪಟೇಲ್‌ ಸಲಹೆ ನೀಡಿದ್ದಾರೆ. ಅಭಿಷೇಕ್‌ ಶರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಹಾಗಾಗಿ ಅವರು ನಮೀಬಿಯಾ ವಿರುದ್ಧ ಆಡುವುದಿಲ್ಲ.

ಭಾರತ-ಪಾಕ್‌ ಪಂದ್ಯದ ವೇಳೆ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಹಾಜರ್‌

ಭಾರತ-ಪಾಕ್‌ ಪಂದ್ಯದ ವೇಳೆ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಹಾಜರ್‌

T20 World Cup 2026: ಬಾಂಗ್ಲಾದಲ್ಲಿ ನಡೆದ ಸರಣಿ ಹಿಂದೂಗಳ ಹತ್ಯೆಯ ಬಳಿಕ ಬಿಸಿಸಿಐ ವಿರುದ್ಧ ಬೆದರಿಕೆ ಕರೆಗಳು ಬಂದ ಕಾರಣ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಜತೆಗಿನ ಐಪಿಎಲ್ ಒಪ್ಪಂದದಿಂದ ಬಿಡುಗಡೆ ಮಾಡಲು ಬಿಸಿಸಿಐ ಆದೇಶಿಸಿತು. ಇದಾದ ನಂತರ ಎರಡು ಮಂಡಳಿಗಳ ನಡುವಿನ ಸಂಬಂಧಗಳು ಹದಗೆಟ್ಟವು.

T20 World Cup 2026: ಒಮನ್‌ ವಿರುದ್ಧ 105 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಶ್ರೀಲಂಕಾ!

SL vs OMN: ಒಮನ್‌ ವಿರುದ್ಧ ಅಧಿಕಾರಯುತ ಜಯ ದಾಖಲಿಸಿದ ಶ್ರೀಲಂಕಾ!

SL vs OMN Match Highlights: ದಸೂನ್‌ ಶಾನಕ, ಪವನ್‌ ರತ್ನನಾಯಕೆ ಹಾಗೂ ಕುಸಾಲ್‌ ಮೆಂಡಿಸ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ,ಒಮಾನ್‌ ವಿರುದ್ಧ 105 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದು ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಅಂಪೈರ್‌ ಜತೆ ವಾಗ್ವಾದ; ಆಲ್‌ರೌಂಡರ್‌ ನಬಿಗೆ ಭಾರೀ ದಂಡ

ಅಂಪೈರ್‌ ಜತೆ ವಾಗ್ವಾದ; ಮೊಹಮ್ಮದ್‌ ನಬಿಗೆ ಭಾರೀ ದಂಡ

Mohammad Nabi: 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಅಪರಾಧವಾಗಿರುವುದರಿಂದ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ. ಎರಡೂ ತಂಡಗಳ ನಡುವಿನ ತೀವ್ರ ಪೈಪೋಟಿಯ ಪಂದ್ಯವು ಟೈನಲ್ಲಿ ಕೊನೆಗೊಂಡಿತು. ಅಂತಿಮವಾಗಿ ಎರಡು ಸೂಪರ್ ಓವರ್‌ಗಳ ಕಾದಾಟದಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತು.

Loading...