ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರಿಕೆಟ್‌

"ಸೋಲು ಪರವಾಗಿಲ್ಲ, ವಂಚನೆ ಸಲ್ಲದು": ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಚಿನ್ ತೆಂಡೂಲ್ಕರ್ ಮುಕ್ತ ಮಾತು

ಶ್ರಮಕ್ಕೆ ತಕ್ಕ ಫಲ ಸಿಗಲಿ: ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ಸಚಿನ್

Sachin Tendulkar: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಡಿರುವ ಮಾತು ಗಮನ ಸೆಳೆದಿದೆ. ಶ್ರಮಕ್ಕೆ ತಕ್ಕ ನ್ಯಾಯ ಸಿಗುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಅವರು ಹೇಳಿದ್ದಾರೆ. ಪ್ರಾಮಾಣಿಕತೆ ಮತ್ತು ಪ್ರತಿಭೆಗೆ ಆದ್ಯತೆ ನೀಡಬೇಕು, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಕ್ರಮಗಳು ಶೀಘ್ರದಲ್ಲೇ ಜಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

IND vs ZIM: ಸತತ ಎಂಟನೇ ಬಾರಿ ಟಾಸ್‌ ಗೆದ್ದು 87 ವರ್ಷಗಳ ದಾಖಲೆಯನ್ನು ಸರಿಗಟ್ಟಿದ ಶ್ರೇಯಸ್‌ ಅಯ್ಯರ್‌!

87 ವರ್ಷಗಳ ದಾಖಲೆಯನ್ನು ಸರಿಗಟ್ಟಿದ ಶ್ರೇಯಸ್‌ ಅಯ್ಯರ್‌!

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಶ್ರೇಯಸ್‌ ಅಯ್ಯರ್ ಟಿ20ಐ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಮೊದಲ ಗೆಲುವು ದಾಖಲಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅವರು, ಸತತ ಎಂಟನೇ ಬಾರಿ ಟಾಸ್ ಗೆದ್ದ ನಾಯಕ ಎಂಬ ಅಪರೂಪದ ಸಾಧನೆಗೆ ಭಾಜನರಾಗಿದ್ದಾರೆ. ಇದರೊಂದಿಗೆ ಅವರು 87 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

NEET Protests: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ವಿಶೇಷ ಸಂದೇಶ ರವಾನಿಸಿದ ಶುಭಮನ್‌ ಗಿಲ್!

‌ ವಿದ್ಯಾರ್ಥಿಗಳ ನೀಟ್‌ ಪ್ರತಿಭಟನೆ ಬಗ್ಗೆ ಶುಭಮನ್‌ ಗಿಲ್‌ ಪ್ರತಿಕ್ರಿಯೆ!

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಪ್ರತಿಕ್ರಿಯಿಸಿದ್ದಾರೆ. ಯುವಜನರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಕರೆ ನೀಡಿದ ಅವರು, ಸಹಾನುಭೂತಿ, ಪರಸ್ಪರ ಗೌರವ, ಶಿಕ್ಷಣ ಹಾಗೂ ಶಾಂತಿಯುತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.

IND vs ZIM: 15ನೇ ವಯಸ್ಸಿನ ಚೊಚ್ಚಲ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಚೊಚ್ಚಲ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರಿಂದ ಕೊನೆಗೂ ಚೊಚ್ಚಲ ಅರ್ಧಶತಕ ಮೂಡಿಬಂದಿದೆ. ಜಿಂಬಾಬ್ವೆ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ ಮಾಡಿದ ವೈಭವ್‌18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

IND vs ZIM: ವೈಭವ್‌ ಚೊಚ್ಚಲ ಅರ್ಧಶತಕ, ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯ!

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯದ ನಗೆ!

IND vs ZIM 1st T20I Highlights: ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ಚೊಚ್ಚಲ ಅರ್ಧಶತಕದ ಬಲದಿಂದ ಭಾರತ ತಂಡ, ಜಿಂಬಾಬ್ವೆ ಎದುರು ಮೊದಲನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಮೊದಲ ಗೆಲುವು ದಾಖಲಿಸಿತು.

2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ದಿನಾಂಕ, ಸ್ಥಳ ಪ್ರಕಟಿಸಿದ ಐಸಿಸಿ!

4ನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ದಿನಾಂಕ, ಸ್ಥಳ ಪ್ರಕಟ!

2025-27ರ ಸಾಲಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಜೆಟ್‌ ಕೌನ್ಸಿಲ್‌ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೈನಲ್‌ ಪಂದ್ಯವನ್ನು 2027ರ ಜೂನ್‌ 9 ರಿಂದ 13 ವರೆಗೆ ಲಂಡನ್‌ ದಿ ಓವಲ್‌ನಲ್ಲಿ ನಡೆಯಲಿದೆ. ಆ ಮೂಲಕ ಈ ಬಾರಿಯೂ ಇಂಗ್ಲೆಂಡ್‌ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

IND vs ZIM: ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶೋಕ್‌ ಶರ್ಮಾ ಯಾರು?

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶೋಕ್‌ ಶರ್ಮಾ ಯಾರು?

ಭಾರತ ಹಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲನೇ ಪಂದ್ಯ ಇದೀಗ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿದೆ. ಮೊದಲನೇ ಪಂದ್ಯದ ಮೂಲಕ ಭಾರತ ತಂಡದ ಅಶೋಕ್‌ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಂದ ಹಾಗೆ ಅಶೋಕ್‌ ಶರ್ಮಾ ಅವರ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಯನ್ನು ವಿವರಿಸಲಾಗಿದೆ.

ಜಿಂಬಾಬ್ವೆ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ

ಜಿಂಬಾಬ್ವೆ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ

Zimbabwe vs India 1st T20I: ಕಳೆದ ಐರ್ಲೆಂಡ್ ವಿರುದ್ಧ ಭಾರತ (2-0) ಅಂತರದ ಸೋಲು ಕಂಡಿತ್ತು. ನಂತರ ಇಂಗ್ಲೆಂಡ್ ವಿರುದ್ಧ (0-4) ವೈಟ್‌ವಾಶ್ ಆಗಿತ್ತು, ಆರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾಗಿತ್ತು. ಹೀಗಾಗಿ ಈ ಸರಣಿ ಭಾರತದ ಪಾಲಿಗೆ ಮತ್ತು ನೂತನ ನಾಯಕ ಅಯ್ಯರ್‌ಗೆ ನಿಜವಾದ ಅಗ್ನಿಪರೀಕ್ಷೆ ಎಂದರೂ ತಪ್ಪಾಗಲಾರದು.

5 ವರ್ಷಗಳ ಬಳಿಕ ಏಕದಿನ ಸರಣಿಗೆ ಪಾಕ್‌ ತಂಡದ ಇಂಗ್ಲೆಂಡ್ ಪ್ರವಾಸ

ಐದು ಪಂದ್ಯಗಳ ಏಕದಿನ ಸರಣಿಗೆ ಪಾಕ್‌ ತಂಡದ ಇಂಗ್ಲೆಂಡ್ ಪ್ರವಾಸ

England Men's ODI series vs Pakistan: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2027 ರಲ್ಲಿ ತವರು ನೆಲದಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳಾ ಆಶಸ್ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡೂ ತಂಡಗಳು ಮುಂದಿನ ವರ್ಷ ತಮ್ಮ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾದಿಂದ ಐತಿಹಾಸಿಕ ಟ್ರೋಫಿಗಳನ್ನು ಮರಳಿ ಪಡೆಯಲು ಎದುರು ನೋಡುತ್ತಿವೆ.

ರವಿ ಶಾಸ್ತ್ರಿ-ಇಯಾನ್‌ ಮಾರ್ಗನ್‌ ಆಯ್ಕೆಯ ಭಾರತ-ಇಂಗ್ಲೆಂಡ್‌ ಸಂಯೋಜನೆಯ ಒಡಿಐ ಪ್ಲೇಯಿಂಗ್‌ XI

ಶಾಸ್ತ್ರಿ, ಮಾರ್ಗನ್‌ ಆಯ್ಕೆಯ ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ XI

ಮಾಜಿ ಕ್ರಿಕೆಟಿಗರಾದ ರವಿ ಶಾಸ್ತ್ರಿ ಹಾಗೂ ಇಯಾನ್‌ ಮಾರ್ಗನ್‌ ಅವರು, ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ Xi ಅನ್ನು ಆರಿಸಿದ್ದಾರೆ. ಈ ತಂಡದ ನಾಯಕತ್ವವನ್ನು ಎಂಎಸ್‌ ಧೋನಿಗೆ ನೀಡಲಾಗಿದೆ. ಇದರಲ್ಲಿ 9 ಮಂದಿ ಭಾರತದ ಆಟಗಾರರು ಹಾಗೂ ಮೂವರು ಆಂಗ್ಲರನ್ನು ಆರಿಸಲಾಗಿದೆ.

'ಶಿಕ್ಷಣ ಎಲ್ಲರಿಗೂ ಸೇರಿದ್ದು'; ಸಿಜೆಪಿ ಪ್ರತಿಭಟನೆಗಳಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಪ್ರತಿಕ್ರಿಯೆ

'ಸರ್ಕಾರದ ಮೇಲೆ ನಂಬಿಕೆ ಇಡಿ'; ಪ್ರತಿಭಟನಾ ವಿದ್ಯಾರ್ಥಿಗಳಿಗೆ ಧವನ್ ಮನವಿ

CJP protests: ವಿದ್ಯಾರ್ಥಿಗಳು ತಾಳ್ಮೆಯಿಂದಿರಬೇಕು ಮತ್ತು ಸರ್ಕಾರದ ಮೇಲೆ ನಂಬಿಕೆ ಇಡಬೇಕು ಎಂದು ಕ್ರಿಕೆಟಿಗ ಶಿಖರ್ ಧವನ್ ಒತ್ತಾಯಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿರುವ ಧವನ್, ಪ್ರತಿಭಟನೆ ನಡೆಸುತ್ತಿರುವ ಯುವಕರನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾದರೂ, ದೇಶದ ಸಂಸ್ಥೆಗಳು ಮತ್ತು ಆಡಳಿತ ಸರ್ಕಾರವನ್ನು ನಂಬುವುದು ಸಹ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

'ಭಾರತದ ಭವಿಷ್ಯದ ಹಿತದೃಷ್ಟಿಯಿಂದ'; ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಂ ಪೋಸ್ಟ್‌ ವೈರಲ್‌

ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಯುವರಾಜ್‌; ಇನ್‌ಸ್ಟಾ ಪೋಸ್ಟ್‌ ವೈರಲ್‌

Jantar Mantar protest LIVE: ಜುಲೈ 20 ರಂದು ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ತನ್ನ 'ಸಂಸದ್ ಚಲೋ' ಪ್ರತಿಭಟನೆಯನ್ನು ಆಯೋಜಿಸಿದ ನಂತರ ವಿವಾದವು ಉಲ್ಬಣಗೊಂಡಿತು, ಅಲ್ಲಿ ಪ್ರತಿಭಟನಾಕಾರರು ಪೊಲೀಸ್ ಕ್ರಮವನ್ನು ಎದುರಿಸಿದರು. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ ಕುಲ್‌ದೀಪ್‌

ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿ ಆಡಲು ಮುಂದಾದ ಕುಲ್‌ದೀಪ್‌

Kuldeep Yadav: ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್‌ ಅವರ ಅನುಭವ ಮತ್ತು ಎಡಗೈ ಮಾಣಿಕನ ಸ್ಪಿನ್ ತಂಡವನ್ನು ಬಲಪಡಿಸುತ್ತದೆ ಎಂದು ಕ್ಲಬ್ ನಿರೀಕ್ಷಿಸುತ್ತದೆ ಎಂಬುದಾಗಿ ಯಾರ್ಕ್‌ಷೈರ್‌ನ ಕ್ರಿಕೆಟ್‌ನ ಜನರಲ್ ಮ್ಯಾನೇಜರ್ ಗ್ಯಾವಿನ್ ಹ್ಯಾಮಿಲ್ಟನ್ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ vs ಜಿಂಬಾಬ್ವೆ ಟಿ20 ಸರಣಿಯ ದಾಖಲೆಯ ಅಂಕಿಅಂಶಗಳು ಹೀಗಿದೆ

ಭಾರತ-ಜಿಂಬಾಬ್ವೆ ಟಿ20 ಸರಣಿಯ ದಾಖಲೆಯ ಅಂಕಿಅಂಶಗಳು ಹೀಗಿದೆ

India Vs Zimbabwe T20Is: ಫೆಬ್ರವರಿ 2026 ರಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಸಂದರ್ಭದಲ್ಲಿ ಭಾರತ ಕೊನೆಯ ಬಾರಿಗೆ ಜಿಂಬಾಬ್ವೆಯನ್ನು ಟಿ20ಐನಲ್ಲಿ ಎದುರಿಸಿತು, ಆದರೆ ಅವರ ಹಿಂದಿನ ಜಿಂಬಾಬ್ವೆ ಪ್ರವಾಸವು ಜುಲೈ 2024 ರಲ್ಲಿ ನಡೆಯಿತು.

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟುವ ಸನಿಹ ಅಭಿಷೇಕ್ ಶರ್ಮಾ; 16 ರನ್ ಅಗತ್ಯ

ಕೊಹ್ಲಿ ದಾಖಲೆ ಸರಿಗಟ್ಟುವ ಸನಿಹ ಅಭಿಷೇಕ್ ಶರ್ಮಾ; 16 ರನ್ ಅಗತ್ಯ

6,000 ಟಿ20 ರನ್‌ಗಳನ್ನು ಗಳಿಸಿದ ಅತ್ಯಂತ ವೇಗದ ಭಾರತೀಯ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಹೊಂದಿದ್ದಾರೆ. ಅವರು ಈ ಮೈಲಿಗಲ್ಲನ್ನು ತಲುಪಲು ಕೇವಲ 166 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು. ಅವರ ನಂತರ ವಿರಾಟ್ ಕೊಹ್ಲಿ (184 ಇನ್ನಿಂಗ್ಸ್‌ಗಳು) ಮತ್ತು ಶುಭಮನ್ ಗಿಲ್ (185 ಇನ್ನಿಂಗ್ಸ್‌ಗಳು) ಇದ್ದಾರೆ.

IND vs ZIM: ʻಹೊರಗಡೆ ಟೀಕೆಗಳನ್ನು ಮರೆತು ಭಯಮುಕ್ತವಾಗಿ ಆಡಿʼ: ಸಹ ಆಟಗಾರರಿಗೆ ಶ್ರೇಯಸ್‌ ಅಯ್ಯರ್‌ ಸಲಹೆ!

ಜಿಂಬಾಬ್ವೆ ಟಿ20ಐ ಸರಣಿಗೂ ಮುನ್ನ ಸಹ ಆಟಗಾರರಿಗೆ ಶ್ರೇಯಸ್‌ ವಾರ್ನಿಂಗ್‌!

ನಿರಾಶದಾಯಕ ಇಂಗ್ಲೆಂಡ್‌ ಪ್ರವಾಸದ ಬಳಿಕ ಹೊರಗಿನ ಟೀಕೆಗಳನ್ನು ಮರೆತು, ಜಿಂಬಾಬ್ವೆ ವಿರುದ್ಧ ಭಯಮುಕ್ತವಾಗಿ ಆಟವಾಡಿ ಎಂದು ಭಾರತ ತಂಡದ ಆಟಗಾರರಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಸಲಹೆ ನೀಡಿದ್ದಾರೆ. ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ನಲ್ಲಿ ಟಿ20ಐ ಸರಣಿಗಳನ್ನು ಸೋತಿದ್ದ ಶ್ರೇಯಸ್‌ ಅಯ್ಯರ್‌ ತಮ್ಮ ನಾಯಕತ್ವದಲ್ಲಿ ಮೊದಲ ಟಿ20ಐ ಸರಣಿ ಗೆಲ್ಲಲು ಎದುರು ನೋಡುತ್ತಿದ್ದಾರೆ.

ʼಹರಾರೆಯಲ್ಲಿ 175 ರನ್‌ ಸಿಡಿಸಿದ್ದೇನೆ: ಜಿಂಬಾಬ್ವೆ ತಂಡಕ್ಕೆ ವಾರ್ನಿಂಗ್‌ ಕೊಟ್ಟ ವೈಭವ್‌ ಸೂರ್ಯವಂಶಿ!

ʻಹರಾರೆ ಅಂಗಣ ನನಗೆ ಚೆನ್ನಾಗಿ ಗೊತ್ತುʼ: ಜಿಂಬಾಬ್ವೆಗೆ ವೈಭವ್ ವಾರ್ನಿಂಗ್‌!

ವೈಭವ್ ಸೂರ್ಯವಂಶಿ ಫೆಬ್ರವರಿಯಲ್ಲಿ ನಡೆದಿದ್ದ ಭಾರತದ ಐತಿಹಾಸಿಕ ಅಂಡರ್-19 ವಿಶ್ವಕಪ್ ಗೆಲುವಿನ ಅಭಿಯಾನದ ಪ್ರಮುಖ ಆಟಗಾರರಾಗಿದ್ದರು. ಇದೇ ಹರಾರೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಸ್ಫೋಟಕ ಇನಿಂಗ್ಸ್‌ ಆಡಿದ್ದು, ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅಫ್ಘಾನಿಸ್ತಾನ ಏಕದಿನ, ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ರಹ್ಮತ್‌ ಶಾ ನೂತನ ನಾಯಕ!

ಅಫ್ಘಾನಿಸ್ತಾನ ಟೆಸ್ಟ್‌, ಏಕದಿನ ತಂಡಕ್ಕೆ ರಹ್ಮತ್‌ ಶಾ ನೂತನ ನಾಯಕ!

ಅಫ್ಘಾನಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಹಷ್ಮತ್‌ವುಲ್ಲಾ ಶಾಹಿದಿ ಕೆಳಗೆ ಇಳಿದ ಬಳಿಕ ಇದೀಗ ನೂತನ ನಾಯಕನನ್ನು ಆಫ್ಘನ್‌ ಕ್ರಿಕೆಟ್‌ ಮಂಡಳಿ ನೇಮಿಸಿದೆ. ಅಫ್ಘಾನಿಸ್ತಾನ ಟೆಸ್ಟ್‌ ಹಾಗೂ ಏಕದಿನ ತಂಡಗಳಿಗೆ ರಹ್ಮತ್‌ ಶಾ ಅವರನ್ನು ನೂತನ ನಾಯಕನನ್ನಾಗಿ ಎಸಿಬಿ ನೇಮಿಸಿದೆ.

ಮೊದಲನೇ ಎಸೆತದಿಂದಲೂ ಹೊಡೆಯುವ ತಾಕತ್ತು ನನಗೂ ಇದೆ: ಯುಕೆ ವೈಫಲ್ಯದ ಬಗ್ಗೆ ತಿಲಕ್‌ ವರ್ಮಾ ಪ್ರತಿಕ್ರಿಯೆ!

ಮೊದಲನೇ ಎಸೆತದಿಂದ ಹೊಡೆಯುವ ತಾಕತ್ತು ನನಗೂ ಇದೆ: ತಿಲಕ್‌ ವರ್ಮಾ!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಗ್ಗೆ ಭಾರತ ಟಿ20 ತಂಡದ ಉಪ ನಾಯಕ ತಿಲಕ್‌ ವರ್ಮಾ ಪ್ರತಿಕ್ರಿಯಿಸಿದ್ದಾರೆ. ಅಲ್ಲಿನ ಕಂಡೀಷನ್ಸ್‌ನಲ್ಲಿ ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡುವುದು ಹೇಳಿದಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.

ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್‌ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ: ರೋಹಿತ್‌ ಬಗ್ಗೆ ಅಶ್ವಿನ್‌ ಹೇಳಿಕೆ!

ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರೆಂಬ ವದಂತಿಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದ ವದಂತಿಗಳಲ್ಲಿ ಸ್ವಲ್ಪ ಮಟ್ಟಿಗೆ ಸತ್ಯಾಂಶ ಇರಬಹುದೆಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನ ಒಡಿಐ ನಾಯಕತ್ವದಿಂದ ಕೆಳಗಿಳಿದು ಭಾವುಕ ಸಂದೇಶ ಹಂಚಿಕೊಂಡ ಹಷ್ಮತ್‌ವುಲ್ಲಾ ಶಾಹಿದಿ!!

ಆಫ್ಘನ್‌ ನಾಯಕತ್ವ ತ್ಯಜಿಸಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶಾಹಿದಿ!

ಹಷ್ಮತ್‌ವುಲ್ಲಾ ಶಾಹಿದಿ ಅವರು ನಾಲ್ಕು ವರ್ಷಗಳ ಬಳಿಕ ಅಫ್ಘಾನಿಸ್ತಾನ ಒಡಿಐ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಇವರ ನಾಯಕತ್ವದಲ್ಲಿ ಆಫ್ಘನ್‌ ತಂಡ, 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಸನಿಹ ಬಂದು ಹೊರ ನಡೆದಿತ್ತು. ಐರ್ಲೆಂಡ್‌ ವಿರುದ್ಧದ ಸರಣಿಗೂ ಮುನ್ನ ಆಫ್ಘನ್‌ ಕ್ರಿಕೆಟ್‌ನಲ್ಲಿ ಈ ಬೆಳವಣಿಗೆಗಳು ನಡೆದಿವೆ.

ಐಸಿಸಿ ಏಕದಿನ ಶ್ರೇಯಾಂಕ: ಕೊಹ್ಲಿ ಸನಿಹ ರೋಹಿತ್ ಶರ್ಮಾ

ಐಸಿಸಿ ಏಕದಿನ ಶ್ರೇಯಾಂಕ: ಕೊಹ್ಲಿ ಸನಿಹ ರೋಹಿತ್ ಶರ್ಮಾ

ICC ODI rankings: ಬೌಲಿಂಗ್ ವಿಭಾಗದಲ್ಲಿ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತ ವಿರುದ್ಧದ ಮೂರು ಪಂದ್ಯಗಳಲ್ಲಿ ನಿರ್ಣಾಯಕ ಐದು ವಿಕೆಟ್ ಗೊಂಚಲು ಪಡೆದ ನಂತರ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ; ತಪ್ಪೊಪ್ಪಿಕೊಂಡ ಡೇವಿಡ್ ವಾರ್ನರ್‌ಗೆ 9 ತಿಂಗಳ ಜೈಲು ಶಿಕ್ಷೆ ಸಾಧ್ಯತೆ

ಡ್ರಿಂಕ್ ಆ್ಯಂಡ್ ಡ್ರೈವ್; ವಾರ್ನರ್‌ಗೆ 9 ತಿಂಗಳ ಜೈಲು ಶಿಕ್ಷೆ ಸಾಧ್ಯತೆ

2018ರ ಕೇಪ್ ಟೌನ್ ಚೆಂಡು ವಿರೂಪ ಹಗರಣದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಅವರ ಮೇಲೆ ವಿಧಿಸಲಾದ ಜೀವಮಾನದ ನಿಷೇಧವನ್ನು ಪರಿಶೀಲಿಸಿ ರದ್ದುಗೊಳಿಸಿದ ನಂತರ, 2024 ರ ಕೊನೆಯಲ್ಲಿ ವಾರ್ನರ್ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅಧಿಕೃತ ನಾಯಕತ್ವದ ಸ್ಥಾನವನ್ನು ಹೊಂದುವ ಅರ್ಹತೆಯನ್ನು ಮರಳಿ ಪಡೆದರು.

ಜಿಂಬಾಬ್ವೆ ಸವಾಲಿಗೆ ಭಾರತ ಸಿದ್ಧ; ನಾಳೆ ಮೊದಲ ಟಿ20 ಪಂದ್ಯ

ಭಾರತ-ಜಿಂಬಾಬ್ವೆ ಮೊದಲ ಟಿ20 ಪಂದ್ಯದ ಪಿಚ್, ಹವಾಮಾನ ವರದಿ

ZIM vs IND 1st T20I: ಹರಾರೆ ಸ್ಪೋರ್ಟ್ಸ್ ಕ್ಲಬ್ ಇಲ್ಲಿಯವರೆಗೆ ಒಟ್ಟು 75 ಪಂದ್ಯಗಳನ್ನು ಆಯೋಜಿಸಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 39 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡಗಳು 34 ಪಂದ್ಯಗಳನ್ನು ಗೆದ್ದಿವೆ.

Loading...