ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು ; ಒಂದಾದ್ರು ದೇವರೇ ಮಾಡಿದ ಜೋಡಿ!
Karna Serial: ರಮೇಶ್ ಹೀರೊ ಹೀರೋಯಿನ್ ವಿರುದ್ಧ ಆಗಾಗ್ಗ ರಣತಂತ್ರ ರೂಪಿಸುತ್ತಿರುತ್ತಾನೆ. ಅರ್ಜುನ್ ಎಂಬ ಹೊಸ ಬಾಣ ಬಿಟ್ಟಿದ್ದ. ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ರಮೇಶ್ ನಿಧಿಗಾಗಿ ಹುಡುಗನ ಕರೆಸಿದ್ದ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದ. ಇದೀಗ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿದೆ. ದೇವರೇ ಮಾಡಿದ ಜೋಡಿ ಒಂದಾಗಿದೆ. ತ್ಯಾಗ ಮಾಡಿದ ನಿಧಿಗೆ ಅಕ್ಕ ನಿತ್ಯಾ ಕರ್ಣನನ್ನು ಬಿಟ್ಟುಕೊಟ್ಟು ಒಂದಾಗುವಂತೆ ಮಾಡಿದ್ದಾಳೆ.