ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

TV Serials

Darshith Gowda: ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ನಟ ದರ್ಶಿತ್‌

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದರ್ಶಿತ್‌ ಗೌಡ

Darshith Gowda: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗ ಸಮರ್ಥ್ ಆಗಿ ಅಭಿನಯಿಸಿದ್ದ ದರ್ಶಿತ್ ಗೌಡ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡ ಸೇರಿದಂತೆ ನಟ ನಟಿಯರು ಬಂದು ನವದಂಪತಿಗೆ ಶುಭ ಹಾರೈಸಿದ್ದಾರೆ.

Actor Trivikram : ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ತಮ್ಮ ಲವ್‌ಸ್ಟೋರಿಯನ್ನ ನೆನೆದ‌ ತ್ರಿವಿಕ್ರಮ್‌

ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ಲವ್‌ಸ್ಟೋರಿಯನ್ನ ನೆನೆದ‌ ತ್ರಿವಿಕ್ರಮ್‌

Actor Trivikram : ತ್ರಿವಿಕ್ರಮ್ ಕನ್ನಡ ಕಿರುತರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೊದಲು ಕ್ರಿಕೆಟ್ ಆಟಗಾರರಾಗಿದ್ದ ಇವರು, ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದರು. ಪ್ರಸ್ತುತ ಕಲರ್ಸ್‌ ಕನ್ನಡ ವಾಹಿನಿಯ ʻಮುದ್ದು ಸೊಸೆʼ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತ್ರಿವಿಕ್ರಮ್‌ ತಮ್ಮ ಹಳೆಯ ಲವ್‌ಸ್ಟೋರಿ ಮತ್ತು ಬ್ರೇಕಪ್‌ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದಾರೆ.

Bhagyalakshmi Serial: ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ!

ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ!

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ಶ್ರೇಷ್ಠಾ ಕುತಂತ್ರವೂ ಮುಂದುವರಿಯುತ್ತಲೇ ಇದೆ. ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಭಾಗ್ಯಳನ್ನು ಕೊಲ್ಲಲು ನೋಡಿದ್ದಳು. ಆದರೆ ಅದೇ ಸಮಯಕ್ಕೆ ಆದಿ ಬಂದು ಭಾಗ್ಯಳನ್ನು ರಕ್ಷಣೆ ಮಾಡಿದ್ದಾನೆ. ಆದರೀಗ ಕಥೆಗೆ ಮತ್ತೊಂದು ತಿರುವು ಪಡೆದುಕೊಂಡಿದೆ.

Amruthadhaare Serial:  ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!

ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!

Amruthadhaare serial Kannada : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಕುತಂತ್ರ ಮಿತಿ ಮೀರುತ್ತಿದೆ. ಮಲ್ಲಿ ವಿಚಾರವನ್ನು ಬಳಸಿಕೊಂಡು ಗೌತಮ್‌ಗೆ ಸಖತ್‌ ತೊಂದರೆ ಕೊಡುತ್ತಿದ್ದಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಆನಂದ್ ಜೈದೇವ್ ಗೆ ಹೇಳಿದ್ದಾನೆ. ಆದರೆ ಜೈದೇವ್ ಹಣ ಅಂದರೆ ಬಾಯಿ ಬಿಡುವ ವ್ಯಕ್ತಿ. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿರುವ ಜೈದೇವ್ ಗೆ ಇನ್ನೂ ಸಮಾಧಾನ ಆಗಿಲ್ಲ. ಗೌತಮ್‌ ತಂದೆಯ ಸಮಾಧಿಯನ್ನೂ ಕೇಳುತ್ತಿದ್ದಾನೆ.

Puttakkana Makkalu Serial: ಪುಟ್ಟಕ್ಕನ ಮಕ್ಕಳು 'ಅಂತಿಮ ಅಧ್ಯಾಯ'; ಕಂಠಿ- ಸ್ನೇಹಾಗೆ ಇದೇನಾಯ್ತು?

ಪುಟ್ಟಕ್ಕನ ಮಕ್ಕಳು ಅಂತಿಮ ಅಧ್ಯಾಯ; ಕಂಠಿ- ಸ್ನೇಹಾಗೆ ಇದೇನಾಯ್ತು?

Puttakkana Makkalu Serial: ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿ, ನಟಿ ಉಮಾಶ್ರೀಯವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಇದೀಗ ಅಂತ್ಯ ಹಾಡುತ್ತಿದೆ. ಅಂತಿಮ ಅಧ್ಯಾಯದ ಪ್ರೋಮೋ ಔಟ್‌ ಆಗಿದೆ. ಪುಟ್ಟಕ್ಕನ‌ ಕನಸನ್ನ ಸಹನಾ- ಸುಮಾ ಈಡೆರಿಸಿದರೆ, ಕಂಠಿ- ಸ್ನೇಹಾ ಮನೆಗೆ ಜೂನಿಯರ್ ಬಂಗಾರಮ್ಮ ಬಂದಾಗಿದೆ.

Karna Serial Kannada: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ? ಕರ್ಣನ ಮುಂದಿನ ಹೆಜ್ಜೆ ಏನು?

Karna Serial: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?

Karna serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ನಾಯಕ ಕರ್ಣ ಜೈಲು ಸೇರಿದ್ದು ಆಗಿತ್ತು. ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿ ಅಂತೂ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ.

Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

Amruthadhaare : ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕಿಚ್ಚು ಹೆಚ್ಚಾಗುತ್ತಿದೆ. ಗೌತಮ್‌ ಮೇಲಿನ ಸೇಡು ದಿನೇ ದಿನೇ ಜೋರಾಗುತ್ತಿದೆ. ಆಸ್ತಿಯನ್ನು ಗೌತಮ್‌ ಬಿಟ್ಟುಕೊಟ್ಟರೂ ಇನ್ನೂ ಜೈದೇವ್‌ಗೆ ಸಾಲುತ್ತಿಲ್ಲ. ಗೌತಮ್‌ ತಂದೆಯ ಸಮಾಧಿ ಜಾಗವನ್ನೂ ಜೈದೇವ್‌ ಡಿಮ್ಯಾಂಡ್‌ ಇಟ್ಟಿದ್ದಾನೆ. ಇಲ್ಲವಾದರೆ ಮಲ್ಲಿಗೆ ಡಿವೋರ್ಸ್‌ ಕೊಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಜೈದೇವ್‌.

Amruthadhaare Serial:  ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿ ನಿಶ್ಚಿತಾರ್ಥವೂ ಆಗಿದೆ. ಸುನಿಯನ್ನು ಜೈದೇವ್‌ ತನ್ನ ಹಗೆತನಕ್ಕೆ ಬಳಸಿಕೊಂಡಿದ್ದಾನೆ. ಜೈದೇವ್‌ ಈ ಮಾಸ್ಟರ್‌ ಪ್ಲ್ಯಾನ್‌ ಸುನಿಗೆ ಗೊತ್ತಾಗಿಲ್ಲ. ಆದರೀಗ ಭೂಮಿಕಾ ಬಿಚ್ಚಿಟ್ಟ ಮಲ್ಲಿ (malli Bhoomika) ಬದುಕಿನ ಸತ್ಯ ಸುನಿ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ? ಅಥವಾ ಮಲ್ಲಿ ಮೇಲೆ ನಿಜವಾದ ಪ್ರೀತಿಯಿಂದ ಮಲ್ಲಿಗೆ ಸಾಥ್‌ ಕೊಡ್ತಾನಾ ಸುನಿ?

BhagyaLakshm Serial: ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

BhagyaLakshm Serial: ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಧಾರಾವಾಹಿ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಭಾಗ್ಯಾಳ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಇದುವರೆಗೆ ಅತ್ತೆ ಮನೆಯವರ ಜೊತೆ ನೆಮ್ಮದಿಯಾಗಿದ್ದ ಭಾಗ್ಯಾಳಿಗೆ ಈಗ ವಿಧಿಯೇ ದೊಡ್ಡ ಸವಾಲು ಹಾಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ.

Radha Bhagavati: ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌! ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌!

Ranav: ಜೀ ಕನ್ನಡದ 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ದಿವಾನ್‌ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್‌ ಹಾಗೂ ಮಲ್ಲಿ ಪಾತ್ರಧಾರಿ ಈಗ ರಿಯಲ್‌ ಲೈಫ್‌ನಲ್ಲಿಯೂ ಎಂಗೇಜ್‌ ಆಗಿದ್ದಾರೆ.

Amruthadhare Serial: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?

Amruthadhare: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?

Partha Sunil Amruthadhare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ನಿಶ್ಚಿತಾರ್ಥ ನೆರವೇರುತ್ತಿದೆ. ಪಾರ್ಥ, ಅಪ್ಪಿ ಜೊತೆಗೆ ಭೂಮಿಕಾ ತಂದೆ ತಾಯಿ ಕೂಡ ಬಂದಿದ್ದಾರೆ. ಲಕ್ಷ್ಮೀಕಾಂತ ಮಾವ ಈ ಮುಂಚೆ ಸುನಿ ಮೇಲೆ ಕಣ್ಣಿಟ್ಟಿರು ಅಂತ ಪಾರ್ಥಗೆ ಎಚ್ಚರಿಕೆಯನ್ನೂ ನೀಡಿದ್ದ. ಆದರೀಗ ಇದೇ ಸುನಿ, ಪಾರ್ಥನ ಮುಖಾಮುಖಿ ಆಗಲಿದ್ದಾನೆ. ಜೈದೇವ್‌ ಕುತಂತ್ರ ಗೌತಮ್‌ ಮುಂದೆ ರಿವೀಲ್‌ ಆಗತ್ತಾ?

Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ; ಸುನಿಲ್ ಮುಖವಾಡ ಕಳಚಿಬಿದ್ರೆ?

Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಬದುಕಲ್ಲಿ ಮತ್ತೆ ಅನುರಾಗ ಅರಳುತಿದೆ. ಜೈದೇವ್‌ನ ಪೈಲ್ವಾನ್‌ ಸಚಿನ್‌ ಹಾಗೂ ಮಲ್ಲಿಯ ನಿಶ್ಚಿರ್ತಾರ್ಥವನ್ನು ಹಮ್ಮಿಕೊಂಡಿದ್ದಾರೆ ಗೌತಮ್‌ ಹಾಗೂ ಭೂಮಿಕಾ. ಈ ಸಂಭ್ರಮಕ್ಕೆ ಗೌತಮ್‌ ಮನೆಯವರೆಲ್ಲರನ್ನೂ ಕರೆಸಿದ್ದಾನೆ. ಅಪ್ಪಿ ಹಾಗೂ ಪಾರ್ಥ ಕೂಡ ಬಂದಿದ್ದಾರೆ. ಹೀಗಾಗಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಸುನಿಲ್ ಮುಖವಾಡ ಕಳಚುತ್ತಾ? ಪಾರ್ಥ ಮಾವ ಹೇಳಿರೋ ವಿಚಾರ ಹೇಳಿಬಿಡ್ತಾನಾ?

Bhagyalakshmi Kannada Serial: ತಾಳಿ ಕಟ್ಟಿದ ಮಾತ್ರಕ್ಕೆ ಗಂಡ ಆಗೋದಿಲ್ಲ; ಅಮ್ಮನ ಎದುರೇ ಭಾಗ್ಯ ಗರಂ

Bhagyalakshmi Serial: ಅಮ್ಮನ ಎದುರೇ ತಾಂಡವ್‌ ವಿಚಾರಕ್ಕೆ ಭಾಗ್ಯ ಗರಂ

Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ' ಭಾಗ್ಯಲಕ್ಷ್ಮೀ ' . ಭಾಗ್ಯಾಳ ಜೀವನದಲ್ಲಿ ಬಂದ ಕಷ್ಟಗಳಿಗೆ ಆದಿ ಈಗ ಬೆನ್ನೆಲುಬಾಗಿ ನಿಂತಿದ್ದಾನೆ. ಅಮ್ಮನ ಎದುರು ಧೈರ್ಯವಾಗಿ ನಿಂತು ತನ್ನ ಪ್ರೀತಿಯನ್ನು ಸಾರಿದ್ದಾನೆ. ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ ಎಂದು ಹೇಳಿಯೂ ಆಗಿದೆ.ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ.

Annayya Serial: ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

Annayya Serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಶಾರದಮ್ಮಗೆ ಶಿಕ್ಷೆ ವಿಧಿಸಬೇಕು ಅಂತಿದ್ದ ವೀರಭದ್ರ ತಲೆ ತಗ್ಗಿಸುವಂತಾಗಿದೆ. ವೀರಭದ್ರನ ಹೆಡೆಮುರಿ ಕಟ್ಟೋಕೆ ಈಗ ಅತ್ತೆ ಸೊಸೆ ಒಂದಾಗಿದ್ದಾಗಿದೆ. ಇನ್ನು ಮುಂದೆ ಇವರಿಬ್ಬರನ್ನು ದಾಟಿಯೇ ವೀರಭಧ್ರ ಪ್ಲ್ಯಾನ್‌ ಮಾಡಬೇಕಿದೆ. ಇನ್ನೊಂದು ಕಡೆ ಸತ್ಯದ ಬೆಳಕಿನಲ್ಲಿರೋ ಗೋಡಂಬಿ ಪರಶು ಕೈಗೆ ಸಿಕ್ಕಿಬೀಳುತ್ತಾನಾ ಅನ್ನೋ ಕುತೂಹಲವೂ ಎದುರಾಗಿದೆ.

Amruthadhaare Serial: ಸಿಂಹದ ಗರ್ಜನೆಗೆ ನರಿಗಳು ತತ್ತರ; ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

Amruthadhaare: ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಹಾಗೂ ಶಕುಂತಲಾ ಕುಟುಂಬ ಅಂತೂ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್‌ ಕುಟುಂಬ ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್‌ ಕೂಡ ಜೈದೇವ್‌ ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ.

Deepika Das: ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

Deepika Das Birthday: ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

Annayya Serial: ಮಾರಿಗುಡಿ ಪಂಚಾಯ್ತಿ; ಪಾರು ಮಾತು ಕೇಳಿ ವೀರಭದ್ರ ಗಡಗಡ!

Annayya Serial: ಪಾರು ಮಾತು ಕೇಳಿ ವೀರಭದ್ರ ಗಡಗಡ!

Annayya Serial Kannada: . ರತ್ನ ಮದುವೆ ಜೊತೆ ವೀರಭದ್ರನ ಪ್ಲ್ಯಾನ್‌ ಕೂಡ ಜೋರಾಗುತ್ತಿದೆ. ಇನ್ನೇನು ಶಾರದಮ್ಮಗೆ ಶಿಕ್ಷೆಯನ್ನ ವೀರಭದ್ರ ವಿಧಿಸಬೇಕು ಅನ್ನೋಷ್ಟರಲ್ಲಿ ಪಾರು ಎಂಟ್ರಿ ಕೊಟ್ಟಿದ್ದಾಳೆ. ಅಮ್ಮ ಅಂದರೇನೆ ದ್ವೇಷದ ಕಿಡಿ ಕಾರುತ್ತಿದ್ದ ಶಿವು, ಇದುವರೆಗೂ ತಾಯಿಯನ್ನು ನಂಬುತ್ತಿಲ್ಲ. ಇಷ್ಟೂ ವರ್ಷವೂ ಶಾರದಮ್ಮನ ಮೇಲೆ ಕಳ್ಳತನ ಆರೋಪ ಹೊರಿಸಿ ವಿರಭದ್ರ ಅಮ್ಮ ಮಗನನ್ನು ದೂರ ಮಾಡಿ ಮಜಾ ತೆಗೆದುಕೊಂಡಿದ್ದ. ಆದರೀಗ ಪಾರು ಅವಕಾಶ ಕೊಡುತ್ತಿಲ್ಲ.

Lakshmi Nivasa Serial: ತೀರ್ಪು ಹೊರ ಬೀಳುವಾಗಲೇ ಅನಿರೀಕ್ಷಿತ ತಿರುವು ಕೊಟ್ಟಿದ್ದಾರೆ ಶ್ರೀಕಾಂತ!

Lakshmi Nivasa: ಅನಿರೀಕ್ಷಿತ ತಿರುವು! ರವಿಶಂಕರ್‌ಗೆ ಢವ ಢವ

Lakshmi Nivasa Kannada Serial: ಸಿದ್ದೇಗೌಡರಿಗೆ ಜೀವಾವಧಿ ಶಿಕ್ಷೆ ಕೊಡಬೇಕು ಅನ್ನೋಷ್ಟರಲ್ಲಿ ಮಾಸ್‌ ಎಂಟ್ರಿ ಕೊಟ್ಟಿದ್ದಾರೆ ಶ್ರೀಕಾಂತ್‌. ಇಷ್ಟು ದಿನಗಳ ಕಾಲ ಕಥೆಯಲ್ಲಿ ಅತಿ ದೊಡ್ಡ ನೋವಾಗಿದ್ದ ಶ್ರೀಕಾಂತ್ ಸಾವು ಈಗ ಸುಳ್ಳಾಗಿದ್ದು, ಆತ ಬದುಕಿ ಬಂದಿದ್ದಾನೆ. ಧಾರಾವಾಹಿ ಪ್ರಾರಂಭದಲ್ಲಿ ಶ್ರೀಕಾಂತ್‌ ಮತ್ತು ಭಾವನಾ ಜೋಡಿ ಇನ್ನೇನು ಮದುವೆಯಾಗುತ್ತಾರೆ ಅನ್ನುವಷ್ಟರಲ್ಲಿ ಶ್ರೀಕಾಂತ್‌ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು ಧಾರಾವಾಹಿಯನ್ನು ಹೊಸ ದಿಕ್ಕಿನತ್ತ ಸಾಗುವಂತೆ ಮಾಡಿತು.

Amruthadhaare Serial: ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯಾಯ್ತು; ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!

ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!

Amruthadhaare Kannada serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಅಂತೂ ಮಲ್ಲಿ ವಿವಾಹದ ಬಗ್ಗೆ ಗೌತಮ್‌ ಚರ್ಚೆ ಮಾಡಿದ್ದಾನೆ. ಪೈಲ್ವಾನ್‌ ಸುನಿಯನ್ನು ಮನೆಗೆ ಕರೆಸಿ ಗೌತಮ್‌ ಮಾತಾಡಿದ್ದೂ ಆಗಿದೆ. ಜೊತೆಗೆ ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯೂ ಆಗಿದೆ. ಇದರ ಜೊತೆಗೆ ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಗಿದೆ. ಅಪೇಕ್ಷಾ ಈ ಬಗ್ಗೆ ಭೂಮಿ ಜೊತೆಗೆ ಚರ್ಚೆ ಮಾಡ್ತಾಳಾ?

Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ? ವಿಧಿ ಆಟದ ಮುಂದೆ `ಮುದ್ದು ಸೊಸೆʼ ಸೋಲುತ್ತಾಳಾ?

Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ?

Muddu Sose kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ 'ಮುದ್ದುಸೊಸೆ' ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ.

Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ‌ಸಿಗುತ್ತಾ?

Annayya Kannada Serial: ಪರಶು ಮುಖವಾಡ ಬಯಲಾಗುತ್ತಾ?

Annayya Kannada Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ದೊಡ್ಡ ತಂಗಿ ರತ್ನ ಮದುವೆ ಸಂಭ್ರಮ ಜೋರಾಗಿದೆ. ಆದರೆ ಪರಶು ಹಾಗೂ ವೀರಭದ್ರ ಮಾಡುತ್ತಿರುವ ಮೋಸದ ಬಗ್ಗೆ ಇನ್ನೂ ಅಣ್ಣನಿಗೆ ಅರಿವಿಲ್ಲ.ಈಗ ಮತ್ತೊಂದು ಕುತೂಹಲ ಟ್ವಿಸ್ಟ್‌ ಎದುರಾಗಿದೆ. ರತ್ನ ಹಾಗೂ ಪರಶು ಮದುವೆ ದಿನವೇ ಪರಶುನನ್ನು ಓಡಿ ತಬ್ಬಿಕೊಂಡಿದ್ದಾನೆ ಚಿಕ್ಕ ಮಗು. ಹೀಗಾಗಿ ಪರಶುಗೆ ಈಗಾಗಲೇ ಮದುವೆ ಆಗಿದೆಯಾ? ಅನ್ನೋದೇ ಟ್ವಿಸ್ಟ್.‌

Krishna Rukku Serial: ಎಲ್ಲವನ್ನ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು? ಪ್ರೋಮೋಗೆ ವೀಕ್ಷಕರ ಮೆಚ್ಚುಗೆ

Krishna Rukku: ಕಷ್ಟ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು?

Krishna Rukku Kannada Serial: ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು. ಅಕ್ಷಯ್‌ ನಾಯಕ್‌ ಮತ್ತು ನಟಿ ಮೌನ ಗುಡ್ಡೆಮನೆ ಅಭಿನಯಿಸುತ್ತಿರುವ ‘ಕೃಷ್ಣ ರುಕ್ಕು’ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಮೊದಲು ಪ್ರೋಮೋದಲ್ಲಿ ಕೃಷ್ಣ(ಅಕ್ಷಯ್‌) ಒಂದ್‌ ಕೈಯಲ್ಲಿ ಅಮ್ಮನ ಫೋಟೋ, ಮತ್ತೊಂದ್ದು ಕೈಯಲ್ಲಿ ಡ್ರಿಂಕ್ಸ್‌ ಬಾಟಲ್‌ ಹಿಡಿದು ನಶೆಯಲ್ಲಿ ತೇಲಾಡುವ ದೃಶ್ಯ ಇದೆ. ಈಗ ಎರಡನೇ ಪ್ರೋಮೋದಲ್ಲಿ ಒಟ್ಟಾರೆ ಸೀರಿಯಲ್‌ ಕಥೆ ಏನು ಎಂಬುದು ರಿವೀಲ್‌ ಆಗಿದೆ.

Maryaade Ramanna serial: ಅಖಾಡದಲ್ಲಿ ಪಂದ್ಯ ಗೆಲ್ಲೋ ರಾಮಣ್ಣ, ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ?

Maryaade Ramanna: ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ ರಾಮಣ್ಣ?

Maryaade Ramanna serial: ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಯೊಂದು ಬರುತ್ತಿದೆ. ಅದುವೇ ‘ಮರ್ಯಾದೆ ರಾಮಣ್ಣ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಪೈಲ್ವಾನ್‌ ಕುರಿತ ಕಥೆ ಹೊಂದಿದ್ದು, ಎರಡನೇ ಪ್ರೋಮೋ ರಿಲೀಸ್‌ ಆಗಿದೆ. ಹಠಮಾರಿ ನಾಯಕ ಮತ್ತು ಮೃದು ಸ್ವಭಾವದ ನಾಯಕಿಯ ನಡುವಿನ ಜಟಾಪಟಿ ಇದೆ. ಈ ಧಾರಾವಾಹಿಯಲ್ಲಿ ನಾಯಕ ಚೇತನ್‌ ಚಂದ್ರ .

Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್‌

Amruthadhaare: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್!

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೇಡಿಯ ದರ್ಪಕ್ಕೆ ಗೌತಮ್ ದಿವಾನ್ ಸಿಡಿದ್ದೆದ್ದಿದ್ದಾನೆ. ಜೈದೇವ್‌ ಮಾಡಿರುವ , ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಮಲ್ಲಿ ವಿರುದ್ಧ ಸುನಿಯನ್ನು ಎತ್ತಿಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸಾಲದೇ ಗೌತಮ್‌ನಿಂದ ಆಸ್ತಿಯನ್ನ ಪೂರ್ತಿ ಕಬಳಿಸಿದರೂ ಇನ್ನೂ ತನ್ನ ಹಳೆ ಬುದ್ಧಿಯನ್ನು ಬಿಡುತ್ತಿಲ್ಲ. ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ.

Loading...