ಭೂ ಒತ್ತುವರಿ ತೆರವು, ಬದ್ಧತೆ ಮೆರೆದ ಡಾ.ಪ್ರತಿಭಾ
ಜಮೀನು ಒತ್ತುವರಿ ತೆರವು ಸಂಬಂಧ ಪ್ರಕರಣ ದಾಖಲಿಸುವುದು ಕೇವಲ ನಾಲ್ಕು ದಿನ ಮಾತ್ರ. ನಂತರ ಎಲ್ಲವೂ ಮೌನ ವಾಗಲಿದೆ ಎಂದು ಲಘುವಾಗಿ ಮಾತನಾಡಿದವರೇ ಹೆಚ್ಚು. ಆದರೆ ಈಗ ಹಾಗೆ ಮಾತನಾಡಿದವರೆಲ್ಲರೂ ಅಚ್ಚರಿಪಡುವ ರೀತಿ ಸರಕಾರಿ ಜಮೀನು ಅತಿಕ್ರಮಣ ಮಾಡುವವರಲ್ಲಿ ನಡುಕ ಹುಟ್ಟಿಸಿ ಯಾರ ಟೀಕೆಗೂ ಅಥವಾ ಹೊಗಳಿಕೆಗೂ ಲಕ್ಷ್ಯ ನೀಡದೆ ಒತ್ತುವರಿ ತೆರವನ್ನು ಅತ್ಯಂತ ಧೈರ್ಯದಿಂದ ನಡೆಸುತ್ತಿದ್ದಾರೆ